[ಐದನೆಯ ಅಧ್ಯಾಯ]
ಭಾಗಸೂಚನಾ
ಶ್ರೀಶುಕಮುನಿಗಳ ಕಟ್ಟಕಡೆಯ ಉಪದೇಶ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅತ್ರಾನುವರ್ಣ್ಯತೇಭೀಕ್ಷ್ಣಂ ವಿಶ್ವಾತ್ಮಾ ಭಗವಾನ್ ಹರಿಃ ।
ಯಸ್ಯ ಪ್ರಸಾದಜೋ ಬ್ರಹ್ಮಾ ರುದ್ರಃ ಕ್ರೋಧಸಮುದ್ಭವಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಈ ಶ್ರೀಮದ್ಭಾಗವತ ಮಹಾಪುರಾಣದಲ್ಲಿ ಪದೋಪದಿಗೆ ಎಲ್ಲೆಡೆ ವಿಶ್ವಾತ್ಮನಾದ ಭಗವಾನ್ ಶ್ರೀಹರಿಯ ಸಂಕೀರ್ತನೆಯೇ ನಡೆದಿದೆ. ಬ್ರಹ್ಮ-ರುದ್ರಾದಿಗಳೂ ಶ್ರೀಹರಿಯಿಂದ ಬೇರೆಯಲ್ಲ. ಅವನದೇ ಪ್ರಸಾದಲೀಲೆಯ ಮತ್ತು ಕ್ರೋಧ ಲೀಲೆಯ ಅಭಿವ್ಯಕ್ತಿಯಾಗಿದೆ. ॥1॥
(ಶ್ಲೋಕ - 2)
ಮೂಲಮ್
ತ್ವಂ ತು ರಾಜನ್ಮರಿಷ್ಯೇತಿ ಪಶುಬುದ್ಧಿಮಿಮಾಂ ಜಹಿ ।
ನ ಜಾತಃ ಪ್ರಾಗಭೂತೋದ್ಯ ದೇಹವತ್ತ್ವಂ ನ ನಂಕ್ಷ್ಯಸಿ ॥
ಅನುವಾದ
ರಾಜೇಂದ್ರನೇ! ‘ನಾನು ಸಾಯುವೆ’ ಎಂಬ ಪಶುತುಲ್ಯ ಅವಿವೇಕ ಪೂರ್ಣವಾದ ಧಾರಣೆಯನ್ನು ನೀನು ಬಿಟ್ಟುಬಿಡು. ಶರೀರವು ಮೊದಲಿಗೆ ಇರಲಿಲ್ಲ ಹಾಗೂ ಈಗ ಹುಟ್ಟಿದೆ, ಮತ್ತೆ ಪುನಃ ನಾಶವಾದೀತು. ಹಾಗೆಯೇ ನೀನು ಮೊದಲು ಇರಲಿಲ್ಲ, ನೀನು ಹುಟ್ಟಿರುವೆ, ನೀನು ಸತ್ತುಹೋಗುವೆ ಎಂಬ ಮಾತೂ ಇಲ್ಲ. ॥2॥
(ಶ್ಲೋಕ - 3)
ಮೂಲಮ್
ನ ಭವಿಷ್ಯಸಿ ಭೂತ್ವಾ ತ್ವಂ ಪುತ್ರಪೌತ್ರಾದಿರೂಪವಾನ್ ।
ಬೀಜಾಂಕುರವದ್ದೇಹಾದೇರ್ವ್ಯತಿರಿಕ್ತೋ ಯಥಾನಲಃ ॥
ಅನುವಾದ
ಬೀಜದಿಂದ ವೃಕ್ಷ, ವೃಕ್ಷದಿಂದ ಬೀಜ ಉತ್ಪತ್ತಿಯಾಗುತ್ತಿರುವಂತೆಯೇ ಒಂದು ದೇಹದಿಂದ ಮತ್ತೊಂದು ದೇಹ, ಮತ್ತೊಂದು ದೇಹದಿಂದ ಇನ್ನೊಂದು ದೇಹ ಉತ್ಪತ್ತಿಯಾಗುತ್ತದೆ. ಆದರೆ ನೀನಾದರೋ ಯಾವುದರಿಂದಲೂ ಉತ್ಪನ್ನನಾದವನಲ್ಲ. ಮುಂದೆಯೂ ಪುತ್ರ-ಪೌತ್ರಗಳ ಶರೀರ ರೂಪದಿಂದ ಉತ್ಪನ್ನವಾಗಲಾರೆ. ಅಯ್ಯಾ! ಬೆಂಕಿಯು ಕಟ್ಟಿಗೆಯಿಂದ ಸರ್ವಥಾ ಬೇರೆಯಾಗಿರುವಂತೆ, ಕಟ್ಟಿಗೆಯ ಉತ್ಪತ್ತಿ-ವಿನಾಶದಿಂದ ಹೊರತಾಗಿರುವಂತೆಯೇ ನೀನೂ ಶರೀರಾದಿಗಳಿಂದ ಪೂರ್ಣವಾಗಿ ಬೇರೆಯಾಗಿರುವೆ. ॥3॥
(ಶ್ಲೋಕ - 4)
ಮೂಲಮ್
ಸ್ವಪ್ನೇ ಯಥಾ ಶಿರಶ್ಛೇದಂ ಪಂಚತ್ವಾದ್ಯಾತ್ಮನಃ ಸ್ವಯಮ್ ।
ಯಸ್ಮಾತ್ ಪಶ್ಯತಿ ದೇಹಸ್ಯ ತತ ಆತ್ಮಾ ಹ್ಯಜೋಮರಃ ॥
ಅನುವಾದ
ಸ್ವಪ್ನದಲ್ಲಿ ನನ್ನ ತಲೆಯು ತುಂಡಾಗಿ ನಾನು ಸತ್ತುಹೋಗಿ ನನ್ನನ್ನು ಜನರು ಸ್ಮಶಾನದಲ್ಲಿ ಸುಟ್ಟುಹಾಕಿದರು ಎಂದು ಕಾಣುತ್ತದೆ. ಆದರೆ ಇವೆಲ್ಲವೂ ಶರೀರದ ಅವಸ್ಥೆಗಳೇ ಕಂಡುಬರುತ್ತವೆ, ಆತ್ಮನದಲ್ಲ. ನೋಡುವವನು ಆ ಅವಸ್ಥೆಗಳಿಂದ ಪೂರ್ಣವಾಗಿ ಅತೀತನಾಗಿದ್ದು, ಜನ್ಮ-ಮೃತ್ಯು ರಹಿತ ಶುದ್ಧ-ಬುದ್ಧ ಪರಮತತ್ತ್ವ ಸ್ವರೂಪನಾಗಿ ಇರುವನು. ॥4॥
(ಶ್ಲೋಕ - 5)
ಮೂಲಮ್
ಘಟೇ ಭಿನ್ನೇ ಯಥಾಕಾಶ ಆಕಾಶಃ ಸ್ಯಾದ್ಯಥಾ ಪುರಾ ।
ಏವಂ ದೇಹೇ ಮೃತೇ ಜೀವೋ ಬ್ರಹ್ಮ ಸಂಪದ್ಯತೇ ಪುನಃ ॥
ಅನುವಾದ
ಘಟವು ಒಡೆದು ಹೋದಾಗ ಆಕಾಶವು ಮೊದಲಿದ್ದಂತೆ ಅಖಂಡವಾಗಿರುತ್ತದೆ. ಆದರೆ ಘಟಾಕಾಶದ ನಿವೃತ್ತಿ ಉಂಟಾದ್ದರಿಂದ ಅದು ಮಹಾಕಾಶದಲ್ಲಿ ಸೇರಿಹೋಯಿತು ಎಂದು ಜನರಿಗೆ ಕಂಡುಬರುತ್ತದೆ. ವಾಸ್ತವವಾಗಿ ಅದು ಸೇರಿಕೊಂಡೇ ಇತ್ತು. ಹಾಗೆಯೇ ದೇಹವು ಬಿದ್ದು ಹೋದಾಗ ಜೀವನು ಬ್ರಹ್ಮನಾಗಿಬಿಟ್ಟನು ಎಂದು ಕಂಡುಬರುತ್ತದೆ. ವಾಸ್ತವವಾಗಿ ಅವನು ಬ್ರಹ್ಮನಾಗಿಯೇ ಇದ್ದನು. ॥5॥
(ಶ್ಲೋಕ - 6)
ಮೂಲಮ್
ಮನಃ ಸೃಜತಿ ವೈ ದೇಹಾನ್ ಗುಣಾನ್ ಕರ್ಮಾಣಿ ಚಾತ್ಮನಃ ।
ತನ್ಮನಃ ಸೃಜತೇ ಮಾಯಾ ತತೋ ಜೀವಸ್ಯ ಸಂಸೃತಿಃ ॥
ಅನುವಾದ
ಮನಸ್ಸೇ ಆತ್ಮನಿಗಾಗಿ ಶರೀರ, ವಿಷಯ ಮತ್ತು ಕರ್ಮಗಳನ್ನು ಕಲ್ಪಿಸಿಕೊಳ್ಳುತ್ತದೆ. ಆ ಮನಸ್ಸನ್ನು ಮಾಯೆ (ಅವಿದ್ಯೆ) ಸೃಷ್ಟಿಸುತ್ತದೆ. ವಾಸ್ತವವಾಗಿ ಮಾಯೆಯೇ ಸಂಸಾರ ಚಕ್ರದಲ್ಲಿ ಬೀಳುವ ಕಾರಣವಾಗಿದೆ. ॥6॥
(ಶ್ಲೋಕ - 7)
ಮೂಲಮ್
ಸ್ನೇಹಾಧಿಷ್ಠಾನವರ್ತ್ಯಗ್ನಿ ಸಂಯೋಗೋ ಯಾವದೀಯತೇ ।
ತತೋ ದೀಪಸ್ಯ ದೀಪತ್ವಮೇವಂ ದೇಹಕೃತೋ ಭವಃ ।
ರಜಸ್ಸತ್ತ್ವತಮೋವೃತ್ತ್ಯಾ ಜಾಯತೇಥ ವಿನಶ್ಯತಿ ॥
ಅನುವಾದ
ಎಣ್ಣೆ, ಎಣ್ಣೆಯಿಡುವ ಪಾತ್ರೆ, ಬತ್ತಿ ಮತ್ತು ಬೆಂಕಿ ಇವುಗಳ ಸಂಯೋಗವಿರುವತನಕ ದೀಪವು ಉರಿಯುತ್ತಾ ಇರುತ್ತದೆ. ಹಾಗೆಯೇ ಅವನಂತಿರುವ ಆತ್ಮನ ಸಂಬಂಧವು ಕರ್ಮ, ಮನಸ್ಸು, ಶರೀರ ಮತ್ತು ಅದರಲ್ಲಿ ವಾಸಿಸುವ ಚೈತನ್ಯಾಧ್ಯಾಸದೊಂದಿಗೆ ಇರುವ ತನಕ ಅವನಿಗೆ ಜನ್ಮ-ಮೃತ್ಯುಗಳ ಸಂಸಾರಚಕ್ರದಲ್ಲಿ ಅಲೆಯುತ್ತಾ ಇರಬೇಕಾಗುತ್ತದೆ ಮತ್ತು ತ್ರಿಗುಣಗಳ ವೃತ್ತಿಗಳಿಂದ ಅವನಿಗೆ ಉತ್ಪತ್ತಿ, ಸ್ಥಿತಿ, ನಾಶ ಇವುಗಳಿಗೆ ತುತ್ತಾಗ ಬೇಕಾಗುತ್ತದೆ. ॥7॥
(ಶ್ಲೋಕ - 8)
ಮೂಲಮ್
ನ ತತ್ರಾತ್ಮಾ ಸ್ವಯಂಜ್ಯೋತಿರ್ಯೋ ವ್ಯಕ್ತಾವ್ಯಕ್ತಯೋಃ ಪರಃ ।
ಆಕಾಶ ಇವ ಚಾಧಾರೋ ಧ್ರುವೋನಂತೋಪಮಸ್ತತಃ ॥
ಅನುವಾದ
ಆದರೆ ದೀಪ ಆರಿಹೋದರೂ ತತ್ತ್ವ ರೂಪವಾದ ತೇಜಸ್ಸು ನಾಶವಾಗುವುದಿಲ್ಲ. ಹಾಗೆಯೇ ಪ್ರಪಂಚದ ನಾಶವಾದರೂ ಸ್ವಯಂ ಪ್ರಕಾಶ ಆತ್ಮನ ನಾಶವಾಗುವುದಿಲ್ಲ. ಏಕೆಂದರೆ, ಅದು ಕಾರ್ಯ ಕಾರಣಗಳಿಂದ, ವ್ಯಕ್ತ-ಅವ್ಯಕ್ತಗಳಿಂದ ಅತೀತವಾಗಿದೆ. ಅದು ಆಕಾಶದಂತೆ ಎಲ್ಲರ ಆಧಾರವೂ, ನಿತ್ಯವೂ, ನಿಶ್ಚಲವೂ, ಅನಂತವೂ ಆಗಿದೆ. ನಿಜವಾಗಿ ಆತ್ಮನ ಉಪಮೆ ಆತ್ಮನೇ ಆಗಿದ್ದಾನೆ. ॥8॥
(ಶ್ಲೋಕ - 9)
ಮೂಲಮ್
ಏವಮಾತ್ಮಾನಮಾತ್ಮಸ್ಥಮಾತ್ಮನೈವಾಮೃಶ ಪ್ರಭೋ ।
ಬುದ್ಧ್ಯಾನುಮಾನಗರ್ಭಿಣ್ಯಾ ವಾಸುದೇವಾನುಚಿಂತಯಾ ॥
ಅನುವಾದ
ಎಲೈ ರಾಜನೇ! ನೀನು ನಿನ್ನ ವಿಶುದ್ಧವೂ, ವಿವೇಕ ಪೂರ್ಣವೂ ಆದ ಬುದ್ಧಿಯನ್ನು ಪರಮಾತ್ಮನ ಚಿಂತನೆಯಿಂದ ತುಂಬಿಕೊಂಡು ತಾನೇ-ತನ್ನೊಳಗೆ ಸ್ಥಿತನಾಗಿ ಪರಮಾತ್ಮನ ಸಾಕ್ಷಾತ್ಕಾರವನ್ನು ಮಾಡಿಕೋ. ॥9॥
(ಶ್ಲೋಕ - 10)
ಮೂಲಮ್
ಚೋದಿತೋ ವಿಪ್ರವಾಕ್ಯೇನ ನ ತ್ವಾಂ ಧಕ್ಷ್ಯತಿ ತಕ್ಷಕಃ ।
ಮೃತ್ಯವೋ ನೋಪಧಕ್ಷ್ಯಂತಿ ಮೃತ್ಯೂನಾಂ ಮೃತ್ಯುಮೀಶ್ವರಮ್ ॥
ಅನುವಾದ
ನೋಡು! ನೀನು ಮೃತ್ಯುಗಳಿಗೂ ಮೃತ್ಯುವಾಗಿರುವೆ. ನೀನು ಸ್ವತಃ ಈಶ್ವರ ನಾಗಿರುವೆ. ಬ್ರಾಹ್ಮಣನ ಶಾಪದಿಂದ ಪ್ರೇರಿತನಾದ ತಕ್ಷಕನೂ ನಿನ್ನನ್ನು ಭಸ್ಮಮಾಡಲಾರನು. ಅಯ್ಯಾ! ತಕ್ಷಕನ ಮಾತೇನು, ಸಾಕ್ಷಾತ್ ಮೃತ್ಯುವೂ ಹಾಗೂ ಮೃತ್ಯುಗಳ ಸಮೂಹಗಳೂ ಕೂಡ ನಿನ್ನ ಬಳಿಯಲ್ಲಿ ಸುಳಿಯಲಾರವು. ॥10॥
(ಶ್ಲೋಕ - 11)
ಮೂಲಮ್
ಅಹಂ ಬ್ರಹ್ಮ ಪರಂ ಧಾಮ ಬ್ರಹ್ಮಾಹಂ ಪರಮಂ ಪದಮ್ ।
ಏವಂ ಸಮೀಕ್ಷನ್ನಾತ್ಮಾನಮಾತ್ಮನ್ಯಾಧಾಯ ನಿಷ್ಕಲೇ ॥
ಅನುವಾದ
‘ನಾನೇ ಸರ್ವಾಧಿಷ್ಠಾನ ಪರಬ್ರಹ್ಮನಾಗಿರುವೆ’ ಹೀಗೆ ನೀನು ಅನುಸಂಧಾನಮಾಡು. ಸರ್ವಾಧಿಷ್ಠಾನ ಬ್ರಹ್ಮನು ನಾನೇ ಆಗಿದ್ದೇನೆ ಹೀಗೆ ನೀನು ನಿನ್ನ ವಾಸ್ತವಿಕವಾದ ಏಕರಸ ಅಖಂಡ ಸ್ವರೂಪದಲ್ಲಿ ಸ್ಥಿತನಾಗಿಬಿಡು. ॥11॥
(ಶ್ಲೋಕ - 12)
ಮೂಲಮ್
ದಶಂತಂ ತಕ್ಷಕಂ ಪಾದೇ ಲೇಲಿಹಾನಂ ವಿಷಾನನೈಃ ।
ನ ದ್ರಕ್ಷ್ಯಸಿ ಶರೀರಂ ಚ ವಿಶ್ವಂ ಚ ಪೃಥಗಾತ್ಮನಃ ॥
ಅನುವಾದ
ಆ ಸಮಯದಲ್ಲಿ ತನ್ನ ವಿಷದ ನಾಲಗೆಯನ್ನು ಚಾಚುತ್ತಾ, ನಾಲಗೆಗಳಿಂದ ತುಟಿಯನ್ನು ಸವರುತ್ತಾ ತಕ್ಷಕನು ಬಂದು ನಿನ್ನ ಕಾಲಿಗೆ ಕಚ್ಚಿದರೂ ನಿನಗೆ ಅದಾವುದೂ ತಿಳಿಯದು. ನೀನು ನಿನ್ನ ಆತ್ಮಸ್ವರೂಪದಲ್ಲಿ ನೆಲೆಸಿ ಈ ಶರೀರವನ್ನು, ಹೆಚ್ಚೇನು ಈ ಇಡೀ ವಿಶ್ವವನ್ನೂ ಕೂಡ ನಿನ್ನಿಂದ ಬೇರೆಯಾಗಿ ನೋಡಲಾರೆ. ಅರ್ಥಾತ್ ನೀನು ಬ್ರಹ್ಮ ಸ್ವರೂಪನಾಗಿ ಬಿಡುವೆ. ॥12॥
(ಶ್ಲೋಕ - 13)
ಮೂಲಮ್
ಏತತ್ತೇ ಕಥಿತಂ ತಾತ ಯಥಾತ್ಮಾ ಪೃಷ್ಟವಾನ್ ನೃಪ ।
ಹರೇರ್ವಿಶ್ವಾತ್ಮನಶ್ಚೇಷ್ಟಾಂ ಕಿಂ ಭೂಯಃ ಶ್ರೋತುಮಿಚ್ಛಸಿ ॥
ಅನುವಾದ
ಆತ್ಮ ಸ್ವರೂಪನಾದ ರಾಜನೇ! ವಿಶ್ವಾತ್ಮನಾದ ಭಗವಂತನ ಲೀಲೆಗಳ ಕುರಿತು ನೀನು ಪ್ರಶ್ನಿಸಿದಂತೆ ನಾನು ಅದರ ಉತ್ತರವನ್ನು ಕೊಟ್ಟಿರುವೆನು. ಈಗ ಇನ್ನೇನು ಕೇಳಲು ಬಯಸುವೆ? ॥13॥
ಅನುವಾದ (ಸಮಾಪ್ತಿಃ)
ಐದನೆಯ ಅಧ್ಯಾಯವು ಮುಗಿಯಿತು. ॥5॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಾದಶ ಸ್ಕಂಧೇ ಬ್ರಹ್ಮೋಪದೇಶೋ ನಾಮ ಪಂಚಮೋಽಧ್ಯಾಯಃ ॥5॥