[ಹದಿನೆಂಟನೆಯ ಅಧ್ಯಾಯ]
ಭಾಗಸೂಚನಾ
ವಾನಪ್ರಸ್ಥ ಮತ್ತು ಸಂನ್ಯಾಸಿಯ ಧರ್ಮ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ವನಂ ವಿವಿಕ್ಷುಃ ಪುತ್ರೇಷು ಭಾರ್ಯಾಂ ನ್ಯಸ್ಯ ಸಹೈವ ವಾ ।
ವನ ಏವ ವಸೇಚ್ಛಾಂತಸ್ತೃತೀಯಂ ಭಾಗಮಾಯುಷಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಪ್ರಿಯ ಉದ್ಧವನೇ! ಗೃಹಸ್ಥನಾದ ಮನುಷ್ಯನು ವಾನಪ್ರಸ್ಥ ಆಶ್ರಮವನ್ನು ಕೈಗೊಳ್ಳಲು ಬಯಸಿದರೆ, ತನ್ನ ಪತ್ನಿಯನ್ನು ಪುತ್ರರಿಗೆ ಒಪ್ಪಿಸಬೇಕು, ಅಥವಾ ತನ್ನೊಂದಿಗೆ ಕರೆದುಕೊಳ್ಳಲಿ. ಮತ್ತೆ ಶಾಂತಚಿತ್ತದಿಂದ ತನ್ನ ಆಯುಸ್ಸಿನ ಮೂರನೆಯ ಭಾಗವನ್ನು ಕಾಡಿನಲ್ಲೇ ಇದ್ದು ಕಳೆಯಲಿ. ॥1॥
(ಶ್ಲೋಕ - 2)
ಮೂಲಮ್
ಕಂದಮೂಲಲೈರ್ವನ್ಯೈರ್ಮೇಧ್ಯೈರ್ವೃತ್ತಿಂ ಪ್ರಕಲ್ಪಯೇತ್ ।
ವಸೀತ ವಲ್ಕಲಂ ವಾಸಸ್ತೃಣಪರ್ಣಾಜಿನಾನಿ ಚ ॥
ಅನುವಾದ
ಅವನು ಕಾಡಿನ ಪವಿತ್ರಕಂದ-ಮೂಲ, ಫಲಗಳಿಂದಲೇ ಶರೀರ ನಿರ್ವಾಹ ಮಾಡಬೇಕು. ಬಟ್ಟೆಯ ಬದಲಿಗೆ ಮರದ ತೊಗಟೆ (ವಲ್ಕಲ)ಗಳನ್ನು ಧರಿಸಬೇಕು. ಹುಲ್ಲು, ಎಲೆ, ಮರದ ತೊಗಟೆಗಳನ್ನೇ ಉಪಯೋಗಿಸಬೇಕು.॥2॥
(ಶ್ಲೋಕ - 3)
ಮೂಲಮ್
ಕೇಶರೋಮನಖಶ್ಮಶ್ರುಮಲಾನಿ ಬಿಭೃಯಾದ್ದತಃ ।
ನ ಧಾವೇದಪ್ಸು ಮಜ್ಜೇತ ತ್ರಿಕಾಲಂ ಸ್ಥಂಡಿಲೇಶಯಃ ॥
ಅನುವಾದ
ಕೂದಲು, ರೋಮ, ಉಗುರು, ಗಡ್ಡ-ಮೀಸೆ ಮುಂತಾದ ಶರೀರದ ಮಲವನ್ನು ತೆಗೆಯಬಾರದು. ಹಲ್ಲು ಉಜ್ಜಬಾರದು. ನೀರಿನಲ್ಲಿ ಮುಳುಗಿ ತ್ರಿಕಾಲ ಸ್ನಾನ ಮಾಡಬೇಕು. ನೆಲದಲ್ಲೇ ಮಲಗಬೇಕು.॥3॥
(ಶ್ಲೋಕ - 4)
ಮೂಲಮ್
ಗ್ರೀಷ್ಮೇ ತಪ್ಯೇತ ಪಂಚಾಗ್ನೀನ್ ವರ್ಷಾಸ್ವಾಸಾರಷಾಡ್ಜಲೇ ।
ಆಕಂಠಮಗ್ನಃ ಶಿಶಿರೇ ಏವಂವೃತ್ತಸ್ತಪಶ್ಚರೇತ್ ॥
ಅನುವಾದ
ಗ್ರೀಷ್ಮ ಋತು (ಬೇಸಿಗೆ)ವಿನಲ್ಲಿ ಪಂಚಾಗ್ನಿಯ ನಡುವೆ ಇದ್ದು, ವರ್ಷಾಋತು (ಮಳೆಗಾಲ)ವಿನಲ್ಲಿ ತೆರೆದ ಬಯಲಲ್ಲಿ ನಿಂತು ಮಳೆಯನ್ನು ಸಹಿಸಬೇಕು. ಚಳಿಗಾಲದಲ್ಲಿ ಕತ್ತಿನವರೆಗೆ ನೀರಿನಲ್ಲಿ ಮುಳುಗಿರಬೇಕು. ಈ ಪ್ರಕಾರ ಘೋರ ತಪಸ್ಯಾಮಯ ಜೀವನ ನಡೆಸಬೇಕು.॥4॥
(ಶ್ಲೋಕ - 5)
ಮೂಲಮ್
ಅಗ್ನಿಪಕ್ವಂ ಸಮಶ್ನೀಯಾತ್ಕಾಲಪಕ್ವಮಥಾಪಿ ವಾ ।
ಉಲೂಖಲಾಶ್ಮಕುಟ್ಟೋ ವಾ ದಂತೋಲೂಖಲ ಏವ ವಾ ॥
ಅನುವಾದ
ಬೆಂಕಿಯಲ್ಲಿ ಬೆಂದ ಅನ್ನವನ್ನು ಅಥವಾ ಹಣ್ಣಾದ, ಬೆಳೆದ ಕಂದ ಮೂಲ, ಫಲಗಳಿಂದ ತನ್ನ ನಿರ್ವಾಹಮಾಡಿಕೊಳ್ಳಬೇಕು. ಅದನ್ನು ಕುಟ್ಟಬೇಕಾದ ಆವಶ್ಯಕತೆ ಕಂಡರೆ ಒರಳಲ್ಲಿ ಅಥವಾ ಕಲ್ಲಿನ ಮೇಲೆ ಕುಟ್ಟಿಕೊಳ್ಳಬೇಕು. ಇಲ್ಲವೇ ಹಲ್ಲಿನಿಂದ ಅಗಿದೇ ತಿಂದು ಬಿಡಬೇಕು. ॥5॥
(ಶ್ಲೋಕ - 6)
ಮೂಲಮ್
ಸ್ವಯಂ ಸಂಚಿನುಯಾತ್ಸರ್ವಮಾತ್ಮನೋ ವೃತ್ತಿಕಾರಣಮ್ ।
ದೇಶಕಾಲಬಲಾಭಿಜ್ಞೋ ನಾದದೀತಾನ್ಯದಾಹೃತಮ್ ॥
ಅನುವಾದ
ತನ್ನ ಉದರಪೂರ್ತಿಗಾಗಿ ಉಪಯೋಗೀ ಎಲ್ಲ ಸಾಮಗ್ರಿಗಳನ್ನು ಸ್ವತಃ ತಂದುಕೊಳ್ಳಬೇಕು. ದೇಶ-ಕಾಲ ಮತ್ತು ತನ್ನ ಶಾರೀರಿಕ ಸಾಮರ್ಥ್ಯವನ್ನು ನೋಡಿಕೊಂಡು ಬೇರೆಯವರು ತಂದಿರುವುದನ್ನು ಉಪಯೋಗಿಸಬಾರದು.* ॥6॥
ಟಿಪ್ಪನೀ
- ಅರ್ಥಾತ್ - ಇಂತಹ ಪದಾರ್ಥ ಎಲ್ಲಿಂದ ತರಬೇಕು, ಯಾವಾಗ ತರಬೇಕು, ಯಾವು-ಯಾವುದು ತನಗೆ ಅನುಕೂಲವಾಗಿದೆ ಎಂದು ಮುನಿಯು ಅರಿತುಕೊಂಡು ಸ್ವತಃ ಹೊಸ-ಹೊಸ ಕಂದ-ಮೂಲ-ಲಗಳನ್ನು ಸಂಗ್ರಹಿಸಬೇಕು. ದೇಶ-ಕಾಲವನ್ನು ತಿಳಿಯದ ಬೇರೆ ಜನರಿಂದ ತಂದಿರುವ ಅಥವಾ ಕಾಲಾಂತರದಲ್ಲಿ ಸಂಗ್ರಹಿಸಿದ ಪದಾರ್ಥಗಳ ಸೇವನೆಯಿಂದ ವ್ಯಾಧಿಯಿಂದಾಗಿ ತಪಸ್ಸಿನಲ್ಲಿ ವಿಘ್ನ ಉಂಟಾಗುವ ಆಶಂಕೆ ಇದೆ.
(ಶ್ಲೋಕ - 7)
ಮೂಲಮ್
ವನ್ಯೈಶ್ಚರುಪುರೋಡಾಶೈರ್ನಿರ್ವಪೇತ್ಕಾಲಚೋದಿತಾನ್ ।
ನ ತು ಶ್ರೌತೇನ ಪಶುನಾ ಮಾಂ ಯಜೇತ ವನಾಶ್ರಮೀ ॥
ಅನುವಾದ
ವಾನಪ್ರಸ್ಥಿಯು ವನ್ಯವಸ್ತುಗಳಿಂದಲೇ ಪುರೋಡಾಶ ಮುಂತಾದ ಹವಿಷ್ಯಾನ್ನವನ್ನು ಸಿದ್ಧಗೊಳಿಸಬೇಕು. ಅದರಿಂದಲೇ ಸಮಯಾನುಸಾರ ಯಾವ ಸಮಯಕ್ಕೆ ಯಾವುದನ್ನು ಹೇಳಲಾಗಿದೆಯೋ ಆ ಆಗ್ರಾಯಣ ಇಷ್ಟಿ ಮುಂತಾದ ವೈದಿಕ ಯಜ್ಞಗಳನ್ನು ಮಾಡಬೇಕು. ಪಶುಬಲಿಯಿಂದ ನನ್ನ ಯಜನವನ್ನು ಎಂದೂ ಮಾಡಬಾರದು. ॥7॥
(ಶ್ಲೋಕ - 8)
ಮೂಲಮ್
ಅಗ್ನಿಹೋತ್ರಂ ಚ ದರ್ಶಶ್ಚ ಪೂರ್ಣಮಾಸಶ್ಚ ಪೂರ್ವವತ್ ।
ಚಾತುರ್ಮಾಸ್ಯಾನಿ ಚ ಮುನೇರಾಮ್ನಾತಾನಿ ಚ ನೈಗಮೈಃ ॥
ಅನುವಾದ
ವಾನಪ್ರಸ್ಥಾಶ್ರಮಿಯು ವೇದವಿಹಿತ ಅಗ್ನಿಹೋತ್ರ, ಅಮಾವಾಸ್ಯಾ, ಪೌರ್ಣಮಿ ಹಾಗೂ ಚಾತುರ್ಮಾಸ್ಯ ಮೊದಲಾದವುಗಳಲ್ಲಿ ಶಾಸ್ತ್ರವಿಧಿಯಂತೆ ಯಜ್ಞ-ಯಾಗಾದಿಗಳನ್ನು ಗೃಹಸ್ಥಾಶ್ರಮದಲ್ಲಿ ಮಾಡಿದಂತೆ ವಾನ ಪ್ರಸ್ಥಿಯೂ ಮಾಡಬೇಕು. ಅವೆಲ್ಲವುಗಳ ಮೂಲಕ ನನ್ನನ್ನೇ ಪೂಜಿಸಬೇಕು. ॥8॥
(ಶ್ಲೋಕ - 9)
ಮೂಲಮ್
ಏವಂ ಚೀರ್ಣೇನ ತಪಸಾ ಮುನಿರ್ಧಮನಿಸಂತತಃ ।
ಮಾಂ ತಪೋಮಯಮಾರಾಧ್ಯ ಋಷಿಲೋಕಾದುಪೈತಿ ಮಾಮ್ ॥
ಅನುವಾದ
ಈ ಪ್ರಕಾರ ತಪಸ್ಸನ್ನು ಆಚರಿಸುತ್ತಾ ಶರೀರವು ಶುಷ್ಕಪ್ರಾಯ ವಾದಾಗ ಆ ಮುನಿಯು ತಪೋಮೂರ್ತಿಸ್ವರೂಪೀ ಪರಮಾತ್ಮನಾದ ನನ್ನ ಆರಾಧನೆಯ ಫಲಸ್ವರೂಪ ಋಷಿಗಳಿಗೆ ಪ್ರಾಪ್ತವಾಗುವ ಲೋಕಕ್ಕೆ ಹೋಗುತ್ತಾನೆ. ಅರ್ಥಾತ್ ಮಹರ್ಲೋಕಕ್ಕೆ ಹೋಗಿ ಮತ್ತೆ ನನ್ನ ಲೋಕಕ್ಕೆ ಬರುತ್ತಾನೆ. ॥9॥
(ಶ್ಲೋಕ - 10)
ಮೂಲಮ್
ಯಸ್ತ್ವೇತತ್ಕೃಚ್ಛ್ರತಶ್ಚೀರ್ಣಂ ತಪೋ ನಿಃಶ್ರೇಯಸಂ ಮಹತ್ ।
ಕಾಮಾಯಾಲ್ಪೀಯಸೇ ಯುಂಜ್ಯಾದ್ಬಾಲಿಶಃ ಕೋಪರಸ್ತತಃ ॥
ಅನುವಾದ
ಪ್ರಿಯ ಉದ್ಧವಾ! ಬಹಳ ಕಷ್ಟದಿಂದ ಮಾಡಿರುವ ಮತ್ತು ಮೋಕ್ಷವನ್ನು ಕೊಡುವಂತಹ ಮಹಾನ್ ತಪಸ್ಸನ್ನು ಸ್ವರ್ಗ, ಬ್ರಹ್ಮಲೋಕ ಮುಂತಾದ ಸಣ್ಣ-ಪುಟ್ಟ ಫಲಗಳ ಪ್ರಾಪ್ತಿಗಾಗಿ ಮಾಡುವ ಮನುಷ್ಯನಿಗಿಂತ ಮಿಗಿಲಾದ ಮೂರ್ಖನು ಯಾರಿರಬಹುದು? ಅದಕ್ಕಾಗಿ ತಪಸ್ಸಿನ ಅನುಷ್ಠಾನವನ್ನು ನಿಷ್ಕಾಮ ಭಾವದಿಂದಲೇ ಮಾಡಬೇಕು. ॥10॥
(ಶ್ಲೋಕ - 11)
ಮೂಲಮ್
ಯದಾಸೌ ನಿಯಮೇಕಲ್ಪೋ ಜರಯಾ ಜಾತವೇಪಥುಃ ।
ಆತ್ಮನ್ಯಗ್ನೀನ್ಸಮಾರೋಪ್ಯ ಮಚ್ಚಿತ್ತೋಗ್ನಿಂ ಸಮಾವಿಶೇತ್ ॥
ಅನುವಾದ
ಪ್ರೀತಿಯ ಉದ್ಧವನೇ! ವಾನಪ್ರಸ್ಥಿಯು ತನ್ನ ಆಶ್ರ ಮೋಚಿತ ನಿಯಮಗಳನ್ನು ಪಾಲಿಸಲು ಅಸಮರ್ಥನಾದರೆ, ವೃದ್ಧಾಪ್ಯದ ಕಾರಣ ಶರೀರವು ನಡುಗಲು ತೊಡಗಿದರೆ, ಯಜ್ಞಾಗ್ನಿಗಳನ್ನು ಭಾವನೆಯಿಂದ ತನ್ನ ಅಂತಃಕರಣದಲ್ಲಿ ಆರೋಪಿಸಿಕೊಂಡು, ತನ್ನ ಮನಸ್ಸನ್ನು ನನ್ನಲ್ಲಿ ತೊಡಗಿಸಿ ಅಗ್ನಿಪ್ರವೇಶಮಾಡಲಿ. (ವಿರಕ್ತನಲ್ಲದವನಿಗೆ ಮಾತ್ರ ಈ ವಿಧಾನವಿದೆ.) ॥11॥
(ಶ್ಲೋಕ - 12)
ಮೂಲಮ್
ಯದಾ ಕರ್ಮವಿಪಾಕೇಷು ಲೋಕೇಷು ನಿರಯಾತ್ಮಸು ।
ವಿರಾಗೋ ಜಾಯತೇ ಸಮ್ಯಙ್ನ್ಯಸ್ತಾಗ್ನಿಃ ಪ್ರವ್ರಜೇತ್ತತಃ ॥
ಅನುವಾದ
ಕರ್ಮಗಳ ಫಲಸ್ವರೂಪ ಪ್ರಾಪ್ತವಾಗುವ ಲೋಕಗಳೆಲ್ಲ ನರಕದಂತೆ ದುಃಖಪೂರ್ಣವಾಗಿವೆ. ಇಂತಹ ಪೂರ್ಣವೈರಾಗ್ಯ ಉಂಟಾದರೆ ವಿಧಿಪೂರ್ವಕ ಅಗ್ನಿಗಳನ್ನು ತ್ಯಜಿಸಿ ಸಂನ್ಯಾಸ ಸ್ವೀಕರಿಸಲಿ. ॥12॥
(ಶ್ಲೋಕ - 13)
ಮೂಲಮ್
ಇಷ್ಟ್ವಾ ಯಥೋಪದೇಶಂ ಮಾಂ ದತ್ತ್ವಾ ಸರ್ವಸ್ವಮೃತ್ವಿಜೇ ।
ಅಗ್ನೀನ್ಸ್ವಪ್ರಾಣ ಆವೇಶ್ಯ ನಿರಪೇಕ್ಷಃ ಪರಿವ್ರಜೇತ್ ॥
ಅನುವಾದ
ವಾನಪ್ರಸ್ಥಿಯು ಸಂನ್ಯಾಸಿಯಾಗಲು ಬಯಸಿದರೆ ಮೊದಲಿಗೆ ಅವನು ವೈದಿಕವಿಧಾನಕ್ಕನುಸಾರ ಎಂಟೂ ಪ್ರಕಾರದ ಶ್ರಾದ್ಧಗಳನ್ನು ಮತ್ತು ಪ್ರಾಜಾಪತ್ಯ ಯಜ್ಞದಿಂದ ನನ್ನನ್ನು ಆರಾಧಿಸಲಿ. ಇದಾದ ಬಳಿಕ ತನ್ನ ಸರ್ವಸ್ವವನ್ನು ಋತ್ವಿಜರಿಗೆ ಕೊಡಲಿ. ಯಜ್ಞಾಗ್ನಿಗಳನ್ನು ತನ್ನ ಪ್ರಾಣಗಳಲ್ಲಿ ಲೀನಗೊಳಿಸಿಕೊಳ್ಳಲಿ. ಮತ್ತೆ ಯಾವುದೇ ಸ್ಥಾನ, ವಸ್ತು, ವ್ಯಕ್ತಿಗಳ ಅಪೇಕ್ಷೆಯನ್ನಿಡದೆ ಸಂನ್ಯಾಸಿಯಾಗಲಿ. ॥13॥
(ಶ್ಲೋಕ - 14)
ಮೂಲಮ್
ವಿಪ್ರಸ್ಯ ವೈ ಸಂನ್ಯಸತೋ ದೇವಾ ದಾರಾದಿರೂಪಿಣಃ ।
ವಿಘ್ನಾನ್ ಕುರ್ವಂತ್ಯಯಂ ಹ್ಯಸ್ಮಾನಾಕ್ರಮ್ಯ ಸಮಿಯಾತ್ಪರಮ್ ॥
ಅನುವಾದ
ಉದ್ಧವನೇ! ಬ್ರಾಹ್ಮಣನು ಸಂನ್ಯಾಸವನ್ನು ಕೈಗೊಳ್ಳಲು ತೊಡಗಿದಾಗ ದೇವತೆಗಳು ಪತ್ನೀ, ಪುತ್ರಾದಿ ನೆಂಟರಿಷ್ಟರ ರೂಪವನ್ನು ಧರಿಸಿ ಅವನ ಸಂನ್ಯಾಸಗ್ರಹಣದಲ್ಲಿ ವಿಘ್ನವನ್ನು ತಂದೊಡ್ಡುವರು. ಅವರೆಲ್ಲರೂ ಅರೇ! ಇವನಾದರೋ ನಮ್ಮಗಳ ಅವಹೇಳ ನಗೈದು, ನಮ್ಮನ್ನು ಮೀರಿ ಪರಮಾತ್ಮನನ್ನು ಪಡೆಯಲು ಹೋಗುತ್ತಿರುವನಲ್ಲ! ಎಂದು ಯೋಚಿಸುತ್ತಾರೆ. ॥14॥
(ಶ್ಲೋಕ - 15)
ಮೂಲಮ್
ಬಿಭೃಯಾಚ್ಚೇನ್ಮುನಿರ್ವಾಸಃ ಕೌಪೀನಾಚ್ಛಾದನಂ ಪರಮ್ ।
ತ್ಯಕ್ತಂ ನ ದಂಡಪಾತ್ರಾಭ್ಯಾಮನ್ಯತ್ಕಿಂಚಿದನಾಪದಿ ॥
ಅನುವಾದ
ಸಂನ್ಯಾಸಿಯು ವಸ್ತ್ರವನ್ನು ತೊಟ್ಟುಕೊಳ್ಳಬೇಕೆಂದರೆ ಕೇವಲ ಲಂಗೋಟಿಯನ್ನು ಉಡಬೇಕು ಮತ್ತು ಹೆಚ್ಚೆಂದರೆ ಲಂಗೋಟಿಯನ್ನು ಮುಚ್ಚುವಷ್ಟು ಸಣ್ಣ ತುಂಡುಬಟ್ಟೆಯನ್ನು ಸುತ್ತಿಕೊಳ್ಳಲಿ. ಅವನು ಎಲ್ಲವನ್ನು ತ್ಯಜಿಸಿರುವನು; ಆದ್ದರಿಂದ ಯಾವುದೇ ಆಪತ್ತು ಬರದಿದ್ದರೆ ಅವನು ಆಶ್ರಮೋಚಿತ ದಂಡ, ಕಮಂಡಲು ಬಿಟ್ಟು ಬೇರೆ ಯಾವ ವಸ್ತುವನ್ನೂ ತನ್ನ ಬಳಿ ಇರಿಸಿಕೊಳ್ಳಬಾರದು. ॥15॥
(ಶ್ಲೋಕ - 16)
ಮೂಲಮ್
ದೃಷ್ಟಿಪೂತಂ ನ್ಯಸೇತ್ಪಾದಂ ವಸಪೂತಂ ಪಿಬೇಜ್ಜಲಮ್ ।
ಸತ್ಯಪೂತಾಂ ವದೇದ್ವಾಚಂ ಮನಃಪೂತಂ ಸಮಾಚರೇತ್ ॥
ಅನುವಾದ
ನಡೆಯುವಾಗ ಕಾಲ ಕೆಳಗೆ ಯಾವ ಜೀವಿಯು ಸಿಕ್ಕಿಕೊಳ್ಳದಿರುವಂತೆ ನೋಡಿಕೊಂಡು ನಡೆಯಬೇಕು. ನೀರನ್ನು ಗಾಳಿಸಿ ಕುಡಿಯಬೇಕು. ಸತ್ಯದಿಂದ ಪವಿತ್ರವಾದ ವಾಣಿಯನ್ನೇ ಮಾತನಾಡಬೇಕು. ಮನಸ್ಸಿಗೆ ಪವಿತ್ರವೆನಿಸಿದಂತೆ ಆಚರಿಸಬೇಕು. ॥16॥
(ಶ್ಲೋಕ - 17)
ಮೂಲಮ್
ವೌನಾನೀಹಾನಿಲಾಯಾಮಾ ದಂಡಾ ವಾಗ್ದೇಹಚೇತಸಾಮ್ ।
ನ ಹ್ಯೇತೇ ಯಸ್ಯ ಸಂತ್ಯಂಗ ವೇಣುಭಿರ್ನ ಭವೇದ್ಯತಿಃ ॥
ಅನುವಾದ
ವಾಣಿಗಾಗಿ ಮೌನ, ಶರೀರಕ್ಕಾಗಿ ನಿಶ್ಚೇಷ್ಟಸ್ಥಿತಿ, ಮನಸ್ಸಿಗಾಗಿ ಪ್ರಾಣಾಯಾಮ ಇವು ದಂಡಗಳಾಗಿವೆ. ಈ ಮೂರು ದಂಡಗಳು ಇಲ್ಲದವನು ಕೇವಲ ಬಿದಿರಿನ ದಂಡದಿಂದ ದಂಡೀ ಸ್ವಾಮಿ ಆಗುವುದಿಲ್ಲ. ॥17॥
(ಶ್ಲೋಕ - 18)
ಮೂಲಮ್
ಭಿಕ್ಷಾಂ ಚತುರ್ಷು ವರ್ಣೇಷು ವಿಗರ್ಹ್ಯಾನ್ವರ್ಜಯಂಶ್ಚರೇತ್ ।
ಸಪ್ತಾಗಾರಾನ್ಅಸಂಕ್ಲೃಪ್ತಾಂಸ್ತುಷ್ಯೇಲ್ಲಬ್ಧೇನ ತಾವತಾ ॥
ಅನುವಾದ
ಸಂನ್ಯಾಸಿಯು ನಿಂದಿತ ಅಥವಾ ಪತಿತರನ್ನು ಬಿಟ್ಟು ನಾಲ್ಕೂ ವರ್ಣದವರಿಂದ ಭಿಕ್ಷೆ ಪಡೆಯಬೇಕು. ಮೊದಲು ನಿಶ್ಚಿತಪಡಿಸಿದ ಕೇವಲ ಏಳು ಮನೆಗಳಿಂದ ಭಿಕ್ಷೆ ಪಡೆಯಬೇಕು. ಭಿಕ್ಷೆಯಲ್ಲಿ ಸಿಕ್ಕಿದಷ್ಟರಲ್ಲೇ ಸಂತೋಷ ಪಡಬೇಕು. ॥18॥
(ಶ್ಲೋಕ - 19)
ಮೂಲಮ್
ಬಹಿರ್ಜಲಾಶಯಂ ಗತ್ವಾ ತತ್ರೋಪಸ್ಪೃಶ್ಯ ವಾಗ್ಯತಃ ।
ವಿಭಜ್ಯ ಪಾವಿತಂ ಶೇಷಂ ಭುಂಜೀತಾಶೇಷಮಾಹೃತಮ್ ॥
ಅನುವಾದ
ಈ ಪ್ರಕಾರ ಭಿಕ್ಷೆಯನ್ನು ಎತ್ತಿ ಗ್ರಾಮದಿಂದ ಹೊರಗೆ ಜಲಾಶಯದ ಬಳಿಗೆ ಹೋಗಿ, ಅಲ್ಲಿ ಕೈ, ಕಾಲು ತೊಳೆದು ನೀರಿನಿಂದ ಭಿಕ್ಷೆಯನ್ನು ಪವಿತ್ರಗೊಳಿಸಿಕೊಳ್ಳಬೇಕು. ಮತ್ತೆ ಶಾಸ್ತ್ರೋಕ್ತಪದ್ಧತಿಯಿಂದ ಯಾರಿಗೆ ಭಿಕ್ಷೆಯ ಭಾಗವನ್ನು ಕೊಡಬೇಕೋ ಅವರಿಗೆ ಸಲ್ಲಿಸಿ, ಉಳಿದಿರುವುದನ್ನು ಮೌನವಾಗಿ ತಿನ್ನಬೇಕು ಮತ್ತೊಂದು ಸಮಯಕ್ಕೆ ಉಳಿಸಿಡಬಾರದು, ಎಸೆಯಲೂ ಬಾರದು. ಹಾಗೂ ಹೆಚ್ಚಿಗೆ ಬೇಡಿಕೊಂಡು ತರಬಾರದು. ॥19॥
(ಶ್ಲೋಕ - 20)
ಮೂಲಮ್
ಏಕಶ್ಚರೇನ್ಮಹೀಮೇತಾಂ ನಿಸ್ಸಂಗಃ ಸಂಯತೇಂದ್ರಿಯಃ ।
ಆತ್ಮಕ್ರೀಡ ಆತ್ಮರತ ಆತ್ಮವಾನ್ ಸಮದರ್ಶನಃ ॥
ಅನುವಾದ
ಸಂನ್ಯಾಸಿಯು ಪೃಥಿವಿಯಲ್ಲಿ ಒಬ್ಬಂಟಿಗನಾಗಿಯೇ ಸಂಚರಿಸಬೇಕು. ಎಂದೂ ಯಾವುದರ ಮೇಲೂ ಆಸಕ್ತಿ ಇಡಬಾರದು. ಇಂದ್ರಿಯಗಳನ್ನು ವಶದಲ್ಲಿರಿಸಿಕೊಳ್ಳಬೇಕು. ತಾನೇ-ತನ್ನಲ್ಲಿ ಸಂತೋಷವಾಗಿರಬೇಕು. ಆತ್ಮ-ಪ್ರೇಮದಲ್ಲಿ ತನ್ಮಯನಾಗಿದ್ದು, ಅತಿ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಧೈರ್ಯಗೆಡಬಾರದು ಮತ್ತು ಸರ್ವತ್ರ ಸಮಾನರೂಪದಿಂದ ಸ್ಥಿತನಾದ ಪರಮಾತ್ಮನನ್ನು ಅನುಭವಿಸುತ್ತಾ ಇರಬೇಕು. ॥20॥
(ಶ್ಲೋಕ - 21)
ಮೂಲಮ್
ವಿವಿಕ್ತಕ್ಷೇಮಶರಣೋ ಮದ್ಭಾವವಿಮಲಾಶಯಃ ।
ಆತ್ಮಾನಂ ಚಿಂತಯೇದೇಕಮಭೇದೇನ ಮಯಾ ಮುನಿಃ ॥
ಅನುವಾದ
ಸಂನ್ಯಾಸಿಯು ನಿರ್ಜನ ಮತ್ತು ನಿರ್ಭಯ ಪವಿತ್ರ ಏಕಾಂತಸ್ಥಾನದಲ್ಲಿ ಇರಬೇಕು. ಅವನ ಹೃದಯ ನಿರಂತರ ನನ್ನ ಭಾವನೆಯಿಂದ ವಿಶುದ್ಧವಾಗಿರಬೇಕು. ಅವನು ತನ್ನನ್ನು ನನ್ನಿಂದ ಅಭಿನ್ನ ಹಾಗೂ ಅದ್ವಿತೀಯ, ಅಖಂಡರೂಪದಲ್ಲಿ ಚಿಂತಿಸುತ್ತಿರಬೇಕು. ॥21॥
(ಶ್ಲೋಕ - 22)
ಮೂಲಮ್
ಅನ್ವೀಕ್ಷೇತಾತ್ಮನೋ ಬಂಧಂ ಮೋಕ್ಷಂ ಚ ಜ್ಞಾನನಿಷ್ಠಯಾ ।
ಬಂಧ ಇಂದ್ರಿಯವಿಕ್ಷೇಪೋ ಮೋಕ್ಷ ಏಷಾಂ ಚ ಸಂಯಮಃ ॥
ಅನುವಾದ
ಅವನು ತನ್ನ ಜ್ಞಾನನಿಷ್ಠೆಯಿಂದ ಚಿತ್ತದ ಬಂಧನ ಹಾಗೂ ಮೋಕ್ಷವನ್ನು ಕುರಿತು ವಿಚಾರಮಾಡಬೇಕು. ಇಂದ್ರಿಯಗಳು ವಿಷಯಗಳಿಗಾಗಿ ವಿಕ್ಷಿಪ್ತವಾಗುವುದು ಚಂಚಲವಾಗುವುದು, ಬಂಧನವಾಗಿದೆ. ಅವುಗಳನ್ನು ಸಂಯಮದಲ್ಲಿರಿಸುವುದೇ ಮೋಕ್ಷವಾಗಿದೆ ಎಂದು ನಿಶ್ಚಯಿಸಿಕೊಳ್ಳಬೇಕು. ॥22॥
(ಶ್ಲೋಕ - 23)
ಮೂಲಮ್
ತಸ್ಮಾನ್ನಿಯಮ್ಯ ಷಡ್ವರ್ಗಂ ಮದ್ಭಾವೇನ ಚರೇನ್ಮುನಿಃ ।
ವಿರಕ್ತಃ ಕ್ಷುಲ್ಲಕಾಮೇಭ್ಯೋ ಲಬ್ಧ್ವಾತ್ಮನಿ ಸುಖಂ ಮಹತ್ ॥
ಅನುವಾದ
ಅದಕ್ಕಾಗಿ ಸಂನ್ಯಾಸಿಯು ಮನ ಹಾಗೂ ಐದೂ ಜ್ಞಾನೇಂದ್ರಿಯಗಳನ್ನು ಗೆದ್ದುಕೊಳ್ಳಬೇಕು. ಭೋಗಗಳ ಕ್ಷುದ್ರತೆಯನ್ನು ಅರಿತುಕೊಂಡು, ಅವುಗಳಿಂದ ಸರ್ವಥಾ ವಿಮುಖನಾಗಬೇಕು. ತಾನೇ-ತನ್ನಲ್ಲಿ ಆನಂದವನ್ನು ಅನುಭವಿಸಬೇಕು. ಹೀಗೆ ಅವನು ನನ್ನ ಭಾವನೆಯಿಂದ ತುಂಬಿಕೊಂಡು ಪೃಥಿವಿಯಲ್ಲಿ ವಿಚರಿಸುತ್ತಿರಬೇಕು. ॥23॥
(ಶ್ಲೋಕ - 24)
ಮೂಲಮ್
ಪುರಗ್ರಾಮವ್ರಜಾನ್ ಸಾರ್ಥಾನ್ಭಿಕ್ಷಾರ್ಥಂ ಪ್ರವಿಶಂಶ್ಚರೇತ್ ।
ಪುಣ್ಯದೇಶಸರಿಚ್ಛೈಲವನಾಶ್ರಮವತೀಂ ಮಹೀಮ್ ॥
ಅನುವಾದ
ಪವಿತ್ರದೇಶ, ನದೀ, ಪರ್ವತ, ವನ, ಆಶ್ರಮಗಳಿಂದ ಪೂರ್ಣವಾದ ಪೃಥ್ವಿಯಲ್ಲಿ ಎಲ್ಲಿಯೂ ಮಮತೆಯನ್ನಿಡದೆ ತಿರುಗಾಡುತ್ತಾ ಇರಬೇಕು. ನಗರ, ಗ್ರಾಮ, ಗೋವಳರ ಹಟ್ಟಿ ಮೊದಲಾದವುಗಳಿಗೆ ಕೇವಲ ಭಿಕ್ಷೆಗಾಗಿ ಮಾತ್ರ ಹೋಗಬೇಕು. ॥24॥
(ಶ್ಲೋಕ - 25)
ಮೂಲಮ್
ವಾನಪ್ರಸ್ಥಾಶ್ರಮಪದೇಷ್ವಭೀಕ್ಷ್ಣಂ ಭೈಕ್ಷ್ಯಮಾಚರೇತ್ ।
ಸಂಸಿಧ್ಯತ್ಯಾಶ್ವಸಂಮೋಹಃ ಶುದ್ಧಸತ್ತ್ವಃ ಶಿಲಾಂಧಸಾ ॥
ಅನುವಾದ
ಭಿಕ್ಷೆಯೂ ಹೆಚ್ಚಾಗಿ ವಾನಪ್ರಸ್ಥಿಗಳ ಆಶ್ರಮಗಳಿಂದಲೇ ಸ್ವೀಕರಿಸಬೇಕು; ಏಕೆಂದರೆ, ವಾನಪ್ರಸ್ಥಿಯಲ್ಲಿ ಶಿಲಾಂಧವಾಗಿರುವುದರಿಂದ ಪವಿತ್ರವಾಗುತ್ತದೆ. ಅದನ್ನು ತಿನ್ನುವುದರಿಂದ ಬೇಗನೇ ಮೋಹ ನಷ್ಟವಾಗುತ್ತದೆ. ಅದರಿಂದ ಚಿತ್ತಶುದ್ಧಿಯು ಶೀಘ್ರವಾಗಿ ಆಗುತ್ತದೆ. ॥25॥
(ಶ್ಲೋಕ - 26)
ಮೂಲಮ್
ನೈತದ್ವಸ್ತುತಯಾ ಪಶ್ಯೇದ್ದೃಶ್ಯಮಾನಂ ವಿನಶ್ಯತಿ ।
ಅಸಕ್ತಚಿತ್ತೋ ವಿರಮೇದಿಹಾಮುತ್ರ ಚಿಕೀರ್ಷಿತಾತ್ ॥
ಅನುವಾದ
ವಿಚಾರವಂತ ಸಂನ್ಯಾಸಿಯು ದೃಶ್ಯಮಾನ ಜಗತ್ತನ್ನು ಎಂದಿಗೂ ಸತ್ಯವಾಗಿ ತಿಳಿಯಬಾರದು. ಏಕೆಂದರೆ, ಇದಾದರೋ ಪ್ರತ್ಯಕ್ಷವಾಗಿ ನಾಶವುಳ್ಳದ್ದಾಗಿದೆ. ಎಲ್ಲಿಯೂ ಆಸಕ್ತಿ ಇಡಬಾರದು. ಏನಾದರೂ ಮಾಡುವ ಇಚ್ಛೆ ಉಂಟಾದರೆ ಅದನ್ನೂ ಬಿಟ್ಟು ಬಿಡಬೇಕು. ॥26॥
(ಶ್ಲೋಕ - 27)
ಮೂಲಮ್
ಯದೇತದಾತ್ಮನಿ ಜಗನ್ಮನೋವಾಕ್ ಪ್ರಾಣಸಂಹತಮ್ ।
ಸರ್ವಂ ಮಾಯೇತಿ ತರ್ಕೇಣ ಸ್ವಸ್ಥಸ್ತ್ಯಕ್ತ್ವಾ ನ ತತ್ಸ್ಮರೇತ್ ॥
ಅನುವಾದ
ಆತ್ಮನಲ್ಲಿರುವ ಮನ, ವಾಣೀ ಮತ್ತು ಪ್ರಾಣಗಳ ಸಂಘಾತರೂಪೀ ಈ ಜಗತ್ತೆಲ್ಲವೂ ಪೂರ್ಣವಾಗಿ ಮಾಯಾಮಯವಾಗಿದೆ ಎಂದು ಸಂನ್ಯಾಸಿಯು ವಿಚಾರಮಾಡಬೇಕು. ಈ ತರ್ಕದಿಂದ ಇದನ್ನು ನಿರಾಕರಣಮಾಡಿ ಅರ್ಥಾತ್ ಇದನ್ನು ತ್ಯಜಿಸಿ, ಆತ್ಮಸ್ವರೂಪದಲ್ಲಿ ಸ್ಥಿತನಾಗಿ, ಮತ್ತೆ ಎಂದಿಗೂ ಅದನ್ನು ಸ್ಮರಿಸಬಾರದು. ॥27॥
(ಶ್ಲೋಕ - 28)
ಮೂಲಮ್
ಜ್ಞಾನನಿಷ್ಠೋ ವಿರಕ್ತೋ ವಾ ಮದ್ಭಕ್ತೋ ವಾನಪೇಕ್ಷಕಃ ।
ಸಲಿಂಗಾನಾಶ್ರಮಾಂಸ್ತ್ಯಕ್ತ್ವಾ ಚರೇದವಿಧಿಗೋಚರಃ ॥
ಅನುವಾದ
ಜ್ಞಾನನಿಷ್ಠ ವಿರಕ್ತ ಸಂನ್ಯಾಸಿ ಮತ್ತು ಯಾವ ಅಪೇಕ್ಷೆಯೂ ಇಲ್ಲದಿರುವ, ನನ್ನನ್ನೇ ಆಶ್ರಯಿಸಿದ ನನ್ನ ಭಕ್ತನಿಗಾಗಿ ಚಿಹ್ನೆ ಅಥವಾ ಆಶ್ರಮದ ಯಾವ ಆವಶ್ಯಕತೆಯೂ ಇಲ್ಲ. ಇವರು ವೇದಶಾಸಗಳ ವಿಧಿ-ನಿಷೇಧಗಳಿಂದ ಅತೀತರಾಗಿ ಸ್ವಚ್ಛಂದವಾಗಿ ವಿಚರಿಸಬೇಕು. ॥28॥
(ಶ್ಲೋಕ - 29)
ಮೂಲಮ್
ಬುಧೋ ಬಾಲಕವತ್ಕ್ರೀಡೇತ್ಕುಶಲೋ ಜಡವಚ್ಚರೇತ್ ।
ವದೇದುನ್ಮತ್ತವದ್ವಿದ್ವಾನ್ ಗೋಚರ್ಯಾಂ ನೈಗಮಶ್ಚರೇತ್ ॥
ಅನುವಾದ
ನನ್ನ ಅವಧೂತ ಭಕ್ತನು ಬುದ್ಧಿವಂತನಾಗಿದ್ದರೂ ಬಾಲಕರಂತೆ ಆಟವಾಡಲಿ. ನಿಪುಣನಾಗಿದ್ದರೂ ಜಡನಂತೆಯೇ ವರ್ತಿಸಲಿ. ವಿದ್ವಾಂಸನಾಗಿದ್ದರೂ ಹುಚ್ಚನಂತೆ ಮಾತು-ಕತೆಯಾಡಲಿ. ಸಮಸ್ತ ವೇದ-ವಿಧಿಗಳನ್ನು ಅರಿತಿದ್ದರೂ ಪಶುವೃತ್ತಿಯಿಂದ, ಅರ್ಥಾತ್ ಅನಿಯತ ಆಚಾರ ಮಾಡುವವನಂತೆ ಇರಬೇಕು. ॥29॥
(ಶ್ಲೋಕ - 30)
ಮೂಲಮ್
ವೇದವಾದರತೋ ನ ಸ್ಯಾನ್ನ ಪಾಖಂಡೀ ನ ಹೈತುಕಃ ।
ಶುಷ್ಕವಾದವಿವಾದೇ ನ ಕಂಚಿತ್ಪಕ್ಷಂ ಸಮಾಶ್ರಯೇತ್ ॥
ಅನುವಾದ
ಅವನು ವೇದಗಳ ಕರ್ಮಕಾಂಡ ಭಾಗದ ವ್ಯಾಖ್ಯೆಯಲ್ಲಿ ತೊಡಗಬಾರದು. ವೇದವನ್ನು ನಿಂದಿಸುವ ಪಾಖಂಡ (ನಾಸ್ತಿಕ)ನೂ ಆಗಿರಬಾರದು. ತರ್ಕ-ವಿತರ್ಕದಿಂದ ದೂರ ವುಳಿಯಬೇಕು. ನಿಷ್ಪ್ರಯೋಜಕವಾದ ವಿವಾದಗಳಲ್ಲಿ ಯಾವುದೇ ಪಕ್ಷವನ್ನು ವಹಿಸಿಕೊಳ್ಳಬಾರದು. ॥30॥
(ಶ್ಲೋಕ - 31)
ಮೂಲಮ್
ನೋದ್ವಿಜೇತ ಜನಾದ್ಧೀರೋ ಜನಂ ಚೋದ್ವೇಜಯೇನ್ನ ತು ।
ಅತಿವಾದಾಂಸ್ತಿತಿಕ್ಷೇತ ನಾವಮನ್ಯೇತ ಕಂಚನ ।
ದೇಹಮುದ್ದಿಶ್ಯ ಪಶುವದ್ ವೈರಂ ಕುರ್ಯಾನ್ನ ಕೇನಚಿತ್ ॥
ಅನುವಾದ
ಧೀರನಾದ ನನ್ನ ಪರಮಹಂಸ ಭಕ್ತನು ಜನರ ಆಚರಣೆಗಳಿಂದ ಉದ್ವಿಗ್ನನಾಗುವುದಿಲ್ಲ. ತನ್ನ ಆಚರಣೆಯಿಂದ ಯಾವ ಪ್ರಾಣಿಯನ್ನು ಉದ್ವಿಗ್ನಗೊಳಿಸುವುದಿಲ್ಲ. ತನ್ನ ಕುರಿತು ಯಾರಾದರೂ ನಿಂದಿಸಿದರೆ ಸಂತೋಷವಾಗಿ ಸಹಿಸುತ್ತಾನೆ. ಯಾರ ಅಪಮಾನವನ್ನೂ ಮಾಡುವುದಿಲ್ಲ. ದೇಹದ ಸಲುವಾಗಿ ಪಶುಗಳಂತೆ ಯಾರೊಡನೆಯೂ ದ್ವೇಷಕಟ್ಟಿಕೊಳ್ಳುವುದಿಲ್ಲ. ॥31॥
(ಶ್ಲೋಕ - 32)
ಮೂಲಮ್
ಏಕ ಏವ ಪರೋ ಹ್ಯಾತ್ಮಾ ಭೂತೇಷ್ವಾತ್ಮನ್ಯವಸ್ಥಿತಃ ।
ಯಥೇನ್ದುರುದಪಾತ್ರೇಷು ಭೂತಾನ್ಯೇಕಾತ್ಮಕಾನಿ ಚ ॥
ಅನುವಾದ
ನೀರು ತುಂಬಿಟ್ಟ ವಿಭಿನ್ನ ಪಾತ್ರೆಗಳಲ್ಲಿ ಚಂದ್ರನು ಬೇರೆ-ಬೇರೆಯಾಗಿ ಪ್ರತಿ ಬಿಂಬಿಸುವಂತೆ, ಒಬ್ಬನೇ ಪರಮಾತ್ಮನು ಸಮಸ್ತ ಪ್ರಾಣಿಗಳಲ್ಲಿ ಮತ್ತು ತನ್ನಲ್ಲಿಯೂ ಸ್ಥಿತನಾಗಿದ್ದಾನೆ. ಎಲ್ಲರ ಆತ್ಮನಾದರೋ ಒಂದೇ ಆಗಿದೆ. ಎಲ್ಲ ಪ್ರಾಣಿಗಳ ಶರೀರವೂ ಕೂಡ ಒಂದೇ ರೀತಿಯ ಪಂಚಭೂತಗಳಿಂದ ಉಂಟಾಗಿದೆ. ಆದ್ದರಿಂದ ಅವುಗಳಲ್ಲಿರುವ ಪ್ರಾಣವೂ ಒಂದೇ ಆಗಿದೆ ಎಂಬ ತತ್ತ್ವ ವನ್ನು ನನ್ನ ಪರಮಹಂಸಭಕ್ತನು ಚೆನ್ನಾಗಿ ತಿಳಿದಿರುತ್ತಾನೆ. (ಇಂತಹ ಅವಸ್ಥೆಯಲ್ಲಿ ಯಾರೊಂದಿಗಾದರೂ ವೈರ-ವಿರೋಧ ಮಾಡಿದರೆ ತನ್ನೊಂದಿಗೆ ವೈರ-ವಿರೋಧ ಮಾಡಿದಂತೆ.) ॥32॥
(ಶ್ಲೋಕ - 33)
ಮೂಲಮ್
ಅಲಬ್ಧ್ವಾ ನ ವಿಷೀದೇತ ಕಾಲೇ ಕಾಲೇಶನಂ ಕ್ವಚಿತ್ ।
ಲಬ್ಧ್ವಾ ನ ಹೃಷ್ಯೇದ್ಧೃತಿಮಾನುಭಯಂ ದೈವತಂತ್ರಿತಮ್ ॥
ಅನುವಾದ
ಪ್ರಿಯ ಉದ್ಧವಾ! ಧೈರ್ಯಶಾಲಿಯಾದ ಸಂನ್ಯಾಸಿಯು ಎಂದಾದರೂ ಒಂದುದಿನ ಭಿಕ್ಷೆಯು ದೊರೆಯದಿದ್ದರೆ ವಿಷಾದಿಸಬಾರದು. ಕಾಲ-ಕಾಲಕ್ಕೆ ಸರಿಯಾಗಿ ಸಿಗುತ್ತಿದ್ದರೆ ಹರ್ಷಿತನಾಗಬಾರದು. ಭಿಕ್ಷೆ ದೊರೆಯುವುದು ದೊರಕದಿರುವುದು ಎರಡೂ ಪ್ರಾರಬ್ಧಕ್ಕಧೀನವೆಂದು ಭಾವಿಸಬೇಕು. ॥33॥
(ಶ್ಲೋಕ - 34)
ಮೂಲಮ್
ಆಹಾರಾರ್ಥಂ ಸಮೀಹೇತ ಯುಕ್ತಂ ತತ್ ಪ್ರಾಣಧಾರಣಮ್ ।
ತತ್ತ್ವಂ ವಿಮೃಶ್ಯತೇ ತೇನ ತದ್ವಿಜ್ಞಾಯ ವಿಮುಚ್ಯತೇ ॥
ಅನುವಾದ
ಸಂನ್ಯಾಸಿಯಾದವನು ಭಿಕ್ಷೆಯನ್ನು ಅವಶ್ಯವಾಗಿ ಬೇಡಲೇಬೇಕು. ಹೀಗೆ ಮಾಡುವುದು ಉಚಿತವೂ ಆಗಿದೆ. ಏಕೆಂದರೆ, ಭಿಕ್ಷೆಯಿಂದಲೇ ಪ್ರಾಣಗಳ ರಕ್ಷಣೆಯಾಗುತ್ತದೆ. ಪ್ರಾಣಗಳು ಉಳಿಯುವುದರಿಂದಲೇ ತತ್ತ್ವದ ವಿಚಾರವಾಗುತ್ತದೆ. ತತ್ತ್ವ ವಿಚಾರದಿಂದ ತತ್ತ್ವಜ್ಞಾನ ಉಂಟಾಗಿ ಮುಕ್ತಿದೊರೆಯುತ್ತದೆ. ॥34॥
(ಶ್ಲೋಕ - 35)
ಮೂಲಮ್
ಯದೃಚ್ಛಯೋಪಪನ್ನಾನ್ನಮದ್ಯಾಚ್ಛ್ರೇಷ್ಠ ಮುತಾಪರಮ್ ।
ತಥಾ ವಾಸಸ್ತಥಾ ಶಯ್ಯಾಂ ಪ್ರಾಪ್ತಂ ಪ್ರಾಪ್ತಂ ಭಜೇನ್ಮುನಿಃ ॥
ಅನುವಾದ
ಸಂನ್ಯಾಸಿಗೆ ಪ್ರಾರಬ್ಧಕ್ಕನುಸಾರ ದೊರೆಯುವ ಭಿಕ್ಷೆಯು ಒಳ್ಳೆದಾಗಲಿ-ಕೆಟ್ಟದಾಗಲೀ ಅದರಿಂದಲೇ ಹೊಟ್ಟೆತುಂಬಿಸಿಕೊಳ್ಳಬೇಕು. ವಸ ಮತ್ತು ಹಾಸಿಗೆಯೂ ಕೂಡ ಹೇಗೆ ದೊರೆಯುವುದೋ ಅದರಿಂದಲೇ ನಿರ್ವಾಹ ಮಾಡಬೇಕು. ಅದರಲ್ಲಿ ಒಳ್ಳೆಯದು ಕೆಟ್ಟದು ಎಂಬುದನ್ನು ಕಲ್ಪಿಸಬಾರದು. ॥35॥
(ಶ್ಲೋಕ - 36)
ಮೂಲಮ್
ಶೌಚಮಾಚಮನಂ ಸ್ನಾನಂ ನ ತು ಚೋದನಯಾ ಚರೇತ್ ।
ಅನ್ಯಾಂಶ್ಚ ನಿಯಮಾನ್ಜ್ಞಾನೀ ಯಥಾಹಂ ಲೀಲಯೇಶ್ವರಃ ॥
ಅನುವಾದ
ಪ್ರಪಂಚದಲ್ಲಿ ಈಶ್ವರನಾದ ನನಗೆ ಮಾಡಬೇಕಾದ ಯಾವ ಕರ್ತವ್ಯವೂ ಇಲ್ಲದಿದ್ದರೂ ಲೋಕಸಂಗ್ರಹಾರ್ಥ ಲೀಲೆಯಿಂದಲೇ ಶೌಚಾಚ ಮನ ಸ್ನಾನಗಳನ್ನು ಶಾಸೋಕ್ತವಾಗಿ ನಾನು ಮಾಡುವಂತೆ, ಜ್ಞಾನಿಯೂ ಶೌಚಾಚಮನ ಸ್ನಾನಾದಿ ನಿಯಮಗಳನ್ನು ಲೋಕ ಸಂಗ್ರಹಾರ್ಥವಾಗಿ ಪಾಲಿಸಬೇಕು. ಶಾಸ್ತ್ರವು ಹೇಳಿದೆ ಎಂಬ ಕಾರಣದಿಂದ ಅದಕ್ಕೆ ಅಂಟಿಕೊಂಡು ಕರ್ಮ ಮಾಡುವ ಅವಶ್ಯಕತೆ ನನ್ನಂತೆ ಜ್ಞಾನಿಗೂ ಇರುವುದಿಲ್ಲ. ॥36॥
(ಶ್ಲೋಕ - 37)
ಮೂಲಮ್
ನ ಹಿ ತಸ್ಯ ವಿಕಲ್ಪಾಖ್ಯಾ ಯಾ ಚ ಮದ್ವೀಕ್ಷಯಾ ಹತಾ ।
ಆದೇಹಾಂತಾತ್ ಕ್ವಚಿತ್ ಖ್ಯಾತಿಸ್ತತಃ ಸಂಪದ್ಯತೇ ಮಯಾ ॥
ಅನುವಾದ
ಜ್ಞಾನಿಯಾದವನು ಏಕಮಾತ್ರ ಭಗವಂತನನ್ನೇ ಎಲ್ಲೆಡೆ ನೋಡುತ್ತಾನೆ. ಆದ್ದರಿಂದ ಭಗವಂತನು ಇದ್ದಾನೆ ಅಥವಾ ಇಲ್ಲ ಎಂಬ ಭೇದದ ಪ್ರತೀತಿಯೂ ಅವನಿಗಿರುವುದಿಲ್ಲ. ಶರೀರ ಬಿದ್ದುಹೋಗುವ ಮೊದಲು ಎಂದಾದರೂ ಶಾರೀರಿಕ ಕಷ್ಟದಿಂದಾಗಿ ಕೆಲಸಮಯ ಭೇದದ ಪ್ರತೀತಿ ಉಂಟಾದರೂ ಮರಣಾನಂತರ ಅವನು ನನ್ನನ್ನೇ ಸೇರುತ್ತಾನೆ. ॥37॥
(ಶ್ಲೋಕ - 38)
ಮೂಲಮ್
ದುಃಖೋದರ್ಕೇಷು ಕಾಮೇಷು ಜಾತನಿರ್ವೇದ ಆತ್ಮವಾನ್ ।
ಅಜಿಜ್ಞಾಸಿತಮದ್ಧರ್ಮೋ ಗುರುಂ ಮುನಿಮುಪಾವ್ರಜೇತ್ ॥
ಅನುವಾದ
ಉದ್ಧವನೇ! ಜಿತೇಂದ್ರಿಯ ಪುರುಷನಿಗೆ ಸಾಂಸಾರಿಕ ವಿಷಯ ಭೋಗಗಳ ಫಲವು ದುಃಖವೇ ಆಗಿದೆ ಎಂಬ ನಿಶ್ಚಯವಾದಾಗ, ಅವನು ವಿರಕ್ತನಾಗುವನು. ಅವನು ನನ್ನ ಪ್ರಾಪ್ತಿಯ ಸಾಧನೆಗಳನ್ನು ತಿಳಿಯದಿದ್ದರೆ, ಭಗವಚ್ಚಿಂತನದಲ್ಲಿ ತನ್ಮಯನಾದ ಬ್ರಹ್ಮನಿಷ್ಠ ಸದ್ಗುರುವಿನಲ್ಲಿ ಶರಣು ಹೋಗಬೇಕು. ॥38॥
(ಶ್ಲೋಕ - 39)
ಮೂಲಮ್
ತಾವತ್ಪರಿಚರೇದ್ಭಕ್ತಃ ಶ್ರದ್ಧಾವಾನನಸೂಯಕಃ ।
ಯಾವದ್ಬ್ರಹ್ಮ ವಿಜಾನೀಯಾನ್ಮಾಮೇವ ಗುರುಮಾದೃತಃ ॥
ಅನುವಾದ
ಅವನು ಗುರುವಿನಲ್ಲಿ ದೃಢಭಕ್ತಿ ಗೈದು, ಶ್ರದ್ಧೆಯಿಡಬೇಕು ಮತ್ತು ಅವರಲ್ಲಿ ಎಂದೂ ದೋಷ ದೃಷ್ಟಿ ಇರಿಸಬಾರದು. ಬ್ರಹ್ಮಜ್ಞಾನ ಆಗುವವರೆಗೆ ತುಂಬಾ ಆದರದಿಂದ ನನ್ನನ್ನೇ ಗುರುವಿನ ರೂಪದಲ್ಲಿ ಅರಿತು ಕೊಂಡು ಅವರನ್ನು ಸೇವಿಸಬೇಕು. ॥39॥
(ಶ್ಲೋಕ - 40)
ಮೂಲಮ್
ಯಸ್ತ್ವಸಂಯತಷಡ್ವರ್ಗಃ ಪ್ರಚಂಡೇಂದ್ರಿಯಸಾರಥಿಃ ।
ಜ್ಞಾನವೈರಾಗ್ಯರಹಿತಸಿದಂಡಮುಪಜೀವತಿ ॥
(ಶ್ಲೋಕ - 41)
ಮೂಲಮ್
ಸುರಾನಾತ್ಮಾನಮಾತ್ಮಸ್ಥಂ ನಿಹ್ನುತೇ ಮಾಂ ಚ ಧರ್ಮಹಾ ।
ಅವಿಪಕ್ವಕಷಾಯೋಸ್ಮಾದಮುಷ್ಮಾಚ್ಚ ವಿಹೀಯತೇ ॥
ಅನುವಾದ
ಆದರೆ ಐದು ಇಂದ್ರಿಯಗಳು ಮತ್ತು ಮನಸ್ಸು ಈ ಆರರ ಮೇಲೆ ವಿಜಯವನ್ನು ಪಡೆಯದವನು, ಇಂದ್ರಿಯರೂಪೀ ಕುದುರೆಗಳು, ಬುದ್ಧಿರೂಪೀ ಸಾರಥಿಯೂ ಕೆಟ್ಟುಹೋಗಿರುವವನು, ಹೃದಯದಲ್ಲಿ ಜ್ಞಾನ-ವೈರಾಗ್ಯವಿಲ್ಲದವನು, ತ್ರಿದಂಡಿ ಸಂನ್ಯಾಸಿಯ ವೇಷ ತೊಟ್ಟುಕೊಂಡು ಹೊಟ್ಟೆಹೊರೆಯುತ್ತಿದ್ದರೆ, ಅವನು ಸಂನ್ಯಾಸ ಧರ್ಮವನ್ನು ನಾಶಮಾಡುತ್ತಿದ್ದಾನೆ ಹಾಗೂ ತನ್ನ ಹೃದಯದಲ್ಲಿದ್ದ ನನ್ನನ್ನು ಮೋಸಗೊಳಿಸುವ ಚೇಷ್ಟೆ ಮಾಡುತ್ತಾನಷ್ಟೆ. ಇನ್ನೂ ಆ ವೇಷಮಾತ್ರದ ಸಂನ್ಯಾಸಿಯ ವಾಸನೆಗಳು ಕ್ಷೀಣವಾಗಲಿಲ್ಲ; ಅದರಿಂದ ಅವನು ಈ ಲೋಕ ಮತ್ತು ಪರಲೋಕ ಎರಡರಿಂದಲೂ ವಂಚಿತನಾಗಿ ಭ್ರಷ್ಟನಾಗುತ್ತಾನೆ. ॥40-41॥
(ಶ್ಲೋಕ - 42)
ಮೂಲಮ್
ಭಿಕ್ಷೋರ್ಧರ್ಮಃ ಶಮೋಹಿಂಸಾ ತಪ ಈಕ್ಷಾ ವನೌಕಸಃ ।
ಗೃಹಿಣೋ ಭೂತರಕ್ಷೇಜ್ಯಾ ದ್ವಿಜಸ್ಯಾಚಾರ್ಯಸೇವನಮ್ ॥
ಅನುವಾದ
ಶಾಂತಿ ಮತ್ತು ಅಹಿಂಸೆ ಇವು ಸಂನ್ಯಾಸಿಯ ಮುಖ್ಯ ಧರ್ಮಗಳು. ತಪಸ್ಸು ಹಾಗೂ ಭಗವದ್ಭಾವ ವಾನಪ್ರಸ್ಥಿಯ ಮುಖ್ಯ ಧರ್ಮಗಳು. ಪ್ರಾಣಿಗಳ ರಕ್ಷಣೆ, ಯಜ್ಞ-ಯಾಗ ಮಾಡುವುದು, ಇವು ಗೃಹಸ್ಥನ ಮುಖ್ಯ ಧರ್ಮಗಳಾದರೆ, ಬ್ರಹ್ಮಚಾರಿಯ ಮುಖ್ಯ ಧರ್ಮ ಆಚಾರ್ಯರ ಸೇವೆ ಆಗಿದೆ. ॥42॥
(ಶ್ಲೋಕ - 43)
ಮೂಲಮ್
ಬ್ರಹ್ಮಚರ್ಯಂ ತಪಃ ಶೌಚಂ ಸಂತೋಷೋ ಭೂತಸೌಹೃದಮ್ ।
ಗೃಹಸ್ಥಸ್ಯಾಪ್ಯೃತೌ ಗಂತುಃ ಸರ್ವೇಷಾಂ ಮದುಪಾಸನಮ್ ॥
ಅನುವಾದ
ಗೃಹಸ್ಥನು ಋತುಕಾಲದಲ್ಲಿ ಮಾತ್ರವೇ ಭಾರ್ಯೆಯೊಡನೆ ಸಮಾಗಮಮಾಡಲಿ. ಅವನಿಗಾಗಿಯೂ ಬ್ರಹ್ಮಚರ್ಯ, ತಪಸ್ಸು, ಶೌಚ, ಸಂತೋಷ, ಸಮಸ್ತಪ್ರಾಣಿಗಳಲ್ಲಿ ಪ್ರೇಮಭಾವ ಇವು ಮುಖ್ಯ ಧರ್ಮಗಳಾಗಿವೆ. ನನ್ನ ಉಪಾಸನೆಯಾದರೋ ಎಲ್ಲರೂ ಮಾಡಬೇಕು. ॥43॥
(ಶ್ಲೋಕ - 44)
ಮೂಲಮ್
ಇತಿ ಮಾಂ ಯಃ ಸ್ವಧರ್ಮೇಣ ಭಜನ್ನಿತ್ಯಮನನ್ಯಭಾಕ್ ।
ಸರ್ವಭೂತೇಷು ಮದ್ಭಾವೋ ಮದ್ ಭಕ್ತಿಂ ವಿಂದಂತೇ ದೃಢಾಮ್ ॥
ಅನುವಾದ
ಈ ವಿಧವಾಗಿ ಅನನ್ಯ ಭಾವದಿಂದ ತನ್ನ ವರ್ಣಾಶ್ರಮದ ಮೂಲಕ ನನ್ನ ಸೇವೆಯಲ್ಲಿ ತೊಡಗಿದ್ದು, ಸಮಸ್ತ ಪ್ರಾಣಿಗಳಲ್ಲಿ ನನ್ನ ಭಾವನೆ ಇರಿಸುವ ಮನುಷ್ಯನಿಗೆ ನನ್ನ ಅವಿಚಲ ಭಕ್ತಿಯು ಪ್ರಾಪ್ತವಾಗುತ್ತದೆ. ॥44॥
(ಶ್ಲೋಕ - 45)
ಮೂಲಮ್
ಭಕ್ತ್ಯೋದ್ಧವಾನಪಾಯಿನ್ಯಾ ಸರ್ವಲೋಕಮಹೇಶ್ವರಮ್ ।
ಸರ್ವೋತ್ಪತ್ತ್ಯಪ್ಯಯಂ ಬ್ರಹ್ಮ ಕಾರಣಂ ಮೋಪಯಾತಿ ಸಃ ॥
ಅನುವಾದ
ಉದ್ಧವನೇ! ನಾನೇ ಸಮಸ್ತ ಲೋಕಗಳ ಏಕಮಾತ್ರ ಸ್ವಾಮಿಯೂ, ಎಲ್ಲರ ಉತ್ಪತ್ತಿ, ಪ್ರಳಯದ ಪರಮ ಕಾರಣ ಬ್ರಹ್ಮನೂ ಆಗಿರುವೆನು. ನಿತ್ಯ-ನಿರಂತರ ಅಖಂಡ ಭಕ್ತಿಯಿಂದ ಅವನು ನನ್ನನ್ನೇ ಪಡೆದುಕೊಳ್ಳುವನು. ॥45॥
(ಶ್ಲೋಕ - 46)
ಮೂಲಮ್
ಇತಿ ಸ್ವಧರ್ಮನಿರ್ಣಿಕ್ತಸತ್ತ್ವೋ ನಿರ್ಜ್ಞಾತಮದ್ಗತಿಃ ।
ಜ್ಞಾನವಿಜ್ಞಾನಸಂಪನ್ನೋ ನಚಿರಾತ್ಸಮುಪೈತಿ ಮಾಮ್ ॥
ಅನುವಾದ
ಈ ಪ್ರಕಾರ ಆ ಗೃಹಸ್ಥನು ತನ್ನ ಧರ್ಮಪಾಲನೆಯಿಂದ ಅಂತಃಕರಣವನ್ನು ಚೆನ್ನಾಗಿ ಶುದ್ಧಮಾಡಿಕೊಂಡು ನನ್ನ ಐಶ್ವರ್ಯ-ಸ್ವರೂಪವನ್ನು ತಿಳಿದು ಕೊಳ್ಳುವನು ಹಾಗೂ ಜ್ಞಾನ-ವಿಜ್ಞಾನದಿಂದ ಸಂಪನ್ನನಾಗಿ ಬೇಗನೇ ನನ್ನನ್ನು ಪಡೆದುಕೊಳ್ಳುತ್ತಾನೆ. ॥46॥
(ಶ್ಲೋಕ - 47)
ಮೂಲಮ್
ವರ್ಣಾಶ್ರಮವತಾಂ ಧರ್ಮ ಏಷ ಆಚಾರಲಕ್ಷಣಃ ।
ಸ ಏವ ಮದ್ಭಕ್ತಿಯುತೋ ನಿಃಶ್ರೇಯಸಕರಃ ಪರಃ ॥
ಅನುವಾದ
ನಾನು ನಿನಗೆ ಈ ಸದಾಚಾರರೂಪೀ ವರ್ಣಾಶ್ರಮಿಗಳ ಧರ್ಮವನ್ನು ಹೇಳಿರುವೆನು. ಈ ಧರ್ಮಾನುಷ್ಠಾನದಲ್ಲಿ ನನ್ನ ಭಕ್ತಿಯಿಂದಲೂ ಸಂಪನ್ನನಾದರೆ ಇದರಿಂದ ಆಯಾಸವಿಲ್ಲದೆಯೇ ಪರಮ ಶ್ರೇಯಸ್ಕರವಾದ ಮೋಕ್ಷದ ಪ್ರಾಪ್ತಿಯಾಗಿ ಹೋಗುತ್ತದೆ. ॥47॥
(ಶ್ಲೋಕ - 48)
ಮೂಲಮ್
ಏತತ್ತೇಭಿಹಿತಂ ಸಾಧೋ ಭವಾನ್ ಪೃಚ್ಛತಿ ಯಚ್ಚ ಮಾಮ್ ।
ಯಥಾ ಸ್ವಧರ್ಮಸಂಯುಕ್ತೋ ಭಕ್ತೋ ಮಾಂ ಸಮಿಯಾತ್ಪರಮ್ ॥
ಅನುವಾದ
ಸಾಧು ಶಿರೋಮಣಿ ಉದ್ಧವಾ! ನೀನು ನನ್ನಲ್ಲಿ ಪ್ರಶ್ನಿಸಿದುದರ ಉತ್ತರವನ್ನು ನಾನು ಕೊಟ್ಟಿರುವೆನು. ತನ್ನ ಧರ್ಮವನ್ನು ಪಾಲಿಸುವ ಭಕ್ತನು ಪರಬ್ರಹ್ಮಸ್ವರೂಪೀ ನನ್ನನ್ನು ಹೇಗೆ ಪಡೆದುಕೊಳ್ಳುತ್ತಾನೆ ಎಂಬುದನ್ನೂ ಹೇಳಿರುವೆನು. ॥48॥
ಅನುವಾದ (ಸಮಾಪ್ತಿಃ)
ಹದಿನೆಂಟನೆಯ ಅಧ್ಯಾಯವು ಮುಗಿಯಿತು. ॥18॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಅಷ್ಟಾದಶೋಽಧ್ಯಾಯಃ ॥18॥