[ಹದಿನೈದನೆಯ ಅಧ್ಯಾಯ]
ಭಾಗಸೂಚನಾ
ಬೇರೆ-ಬೇರೆ ಸಿದ್ಧಿಗಳ ಹೆಸರುಗಳು ಮತ್ತು ಅವುಗಳ ಲಕ್ಷಣ
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
(ಶ್ಲೋಕ - 1)
ಮೂಲಮ್
ಜಿತೇಂದ್ರಿಯಸ್ಯ ಯುಕ್ತಸ್ಯ ಜಿತಶ್ವಾಸಸ್ಯ ಯೋಗಿನಃ ।
ಮಯಿ ಧಾರಯತಶ್ಚೇತ ಉಪತಿಷ್ಠಂತಿ ಸಿದ್ಧಯಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಪ್ರಿಯ ಉದ್ಧವನೇ! ಸಾಧಕನು ಇಂದ್ರಿಯ, ಪ್ರಾಣ, ಮನಸ್ಸನ್ನು ತನ್ನ ವಶ ಪಡಿಸಿಕೊಂಡು ತನ್ನ ಚಿತ್ತವನ್ನು ನನ್ನಲ್ಲಿ ತೊಡಗಿಸಿ, ನನ್ನ ಧಾರಣೆಯನ್ನು ಮಾಡತೊಡಗಿದಾಗ ಅವನ ಎದುರಿಗೆ ಅನೇಕ ಸಿದ್ಧಿಗಳು ಉಪಸ್ಥಿತವಾಗುತ್ತವೆ. ॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ಕಯಾ ಧಾರಣಯಾ ಕಾಸ್ವಿತ್ ಕಥಂಸ್ವಿತ್ ಸಿದ್ಧಿರಚ್ಯುತ ।
ಕತಿ ವಾ ಸಿದ್ಧಯೋ ಬ್ರೂಹಿ ಯೋಗಿನಾಂ ಸಿದ್ಧಿದೋ ಭವಾನ್ ॥
ಅನುವಾದ
ಉದ್ಧವನು ಕೇಳಿದನು — ಓ ಅಚ್ಯುತಾ! ಯಾವ ಧಾರಣೆಯಿಂದ ಯಾವ ವಿಧವಾದ ಸಿದ್ಧಿಯು ಪ್ರಾಪ್ತವಾಗುತ್ತದೆ ಮತ್ತು ಅವುಗಳ ಸಂಖ್ಯೆ ಎಷ್ಟು? ನೀನೇ ಯೋಗಿಗಳಿಗೆ ಸಿದ್ಧಿಗಳನ್ನು ಕೊಡುವವನು. ಆದ್ದರಿಂದ ಇವುಗಳನ್ನು ವರ್ಣಿಸುವವನಾಗು.॥2॥
(ಶ್ಲೋಕ - 3)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಸಿದ್ಧಯೋಷ್ಟಾದಶ ಪ್ರೋಕ್ತಾ ಧಾರಣಾಯೋಗಪಾರಗೈಃ ।
ತಾಸಾಮಷ್ಟೌ ಮತ್ಪ್ರಧಾನಾ ದಶೈವ ಗುಣಹೇತವಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಪ್ರಿಯ ಉದ್ಧವಾ! ಧಾರಣಾಯೋಗದ ಪಾರಂಗತ ಯೋಗಿಗಳು ಹದಿನೆಂಟು ಪ್ರಕಾರದ ಸಿದ್ಧಿಗಳನ್ನು ತಿಳಿಸಿರುತ್ತಾರೆ. ಅವುಗಳಲ್ಲಿ ಎಂಟು ಸಿದ್ಧಿಗಳಾದರೋ ಪ್ರಧಾನವಾಗಿ ನನ್ನಲ್ಲೇ ಇರುತ್ತವೆ ಹಾಗೂ ಹತ್ತು ಸತ್ತ್ವಗುಣದ ವಿಕಾಸದಿಂದಲೂ ದೊರೆಯುತ್ತವೆ. ॥3॥
(ಶ್ಲೋಕ - 4)
ಮೂಲಮ್
ಅಣಿಮಾ ಮಹಿಮಾ ಮೂರ್ತೇರ್ಲಘಿಮಾ ಪ್ರಾಪ್ತಿರಿಂದ್ರಿಯೈಃ ।
ಪ್ರಾಕಾಮ್ಯಂ ಶ್ರುತದೃಷ್ಟೇಷು ಶಕ್ತಿಪ್ರೇರಣಮೀಶಿತಾ ॥
ಅನುವಾದ
ಅವುಗಳಲ್ಲಿ ‘ಅಣಿಮಾ’, ‘ಮಹಿಮಾ’, ‘ಲಘಿಮಾ’ ಈ ಮೂರು ಸಿದ್ಧಿಗಳಾದರೋ ಶರೀರದ್ದಾಗಿವೆ. ಬಯಸಿದೆಲ್ಲವೂ ದೊರೆಯುವುದು ಇದು ‘ಪ್ರಾಪ್ತಿ’ ಎಂಬ ಇಂದ್ರಿಯಗಳ ಒಂದು ಸಿದ್ಧಿಯಾಗಿದೆ. ಲೌಕಿಕ ಮತ್ತು ಪಾರಲೌಕಿಕ ಪದಾರ್ಥಗಳನ್ನು ಇಚ್ಛಾನುಸಾರ ಅನು ಭವಿಸುವ ಸಿದ್ಧಿಯು ‘ಪ್ರಾಕಾಮ್ಯ’ವಾಗಿದೆ. ಮಾಯೆ ಹಾಗೂ ಅದರ ಕಾರ್ಯಗಳನ್ನು ಇಚ್ಛಾನುಸಾರ ಸಂಚಾಲಿತ ಗೊಳಿಸುವುದು ‘ಈಶಿತಾ’ ಹೆಸರಿನ ಸಿದ್ಧಿಯಾಗಿದೆ. ॥4॥
(ಶ್ಲೋಕ - 5)
ಮೂಲಮ್
ಗುಣೇಷ್ವಸಂಗೋ ವಶಿತಾ ಯತ್ಕಾಮಸ್ತದವಸ್ಯತಿ ।
ಏತಾ ಮೇ ಸಿದ್ಧಯಃ ಸೌಮ್ಯ ಅಷ್ಟಾವೌತ್ಪತ್ತಿಕಾ ಮತಾಃ ॥
ಅನುವಾದ
ವಿಷಯಗಳಲ್ಲಿದ್ದರೂ ಅವುಗಳಲ್ಲಿ ಆಸಕ್ತನಾಗದಿರುವುದು ‘ವಶಿತಾ’ ಆಗಿದೆ ಮತ್ತು ಯಾವು-ಯಾವುದನ್ನು ಕಾಮಿಸುವನೋ ಅದರ ಸೀಮೆಯತನಕ ಮುಟ್ಟುವುದೇ ‘ಕಾಮಾವ ಸಾಯಿತಾ’ ಎಂಬ ಎಂಟನೆಯ ಸಿದ್ಧಿಯಾಗಿದೆ. ಈ ಎಂಟೂ ಸಿದ್ಧಿಗಳು ನನ್ನಲ್ಲಿ ಸ್ವಭಾವತಃ ಇರುತ್ತವೆ. (ಇವನ್ನು ನಾನು ಯಾರಿಗೆ ಕೊಡುವೆನೋ ಅವನಿಗೆ ಅಂಶತಃ ಪ್ರಾಪ್ತವಾಗುತ್ತವೆ.) ॥5॥
(ಶ್ಲೋಕ - 6)
ಮೂಲಮ್
ಅನೂರ್ಮಿಮತ್ತ್ವಂ ದೇಹೇಸ್ಮಿನ್ ದೂರಶ್ರವಣದರ್ಶನಮ್ ।
ಮನೋಜವಃ ಕಾಮರೂಪಂ ಪರಕಾಯಪ್ರವೇಶನಮ್ ॥
(ಶ್ಲೋಕ - 7)
ಮೂಲಮ್
ಸ್ವಚ್ಛಂದಮೃತ್ಯುರ್ದೇವಾನಾಂ ಸಹಕ್ರೀಡಾನುದರ್ಶನಮ್ ।
ಯಥಾಸಂಕಲ್ಪಸಂಸಿದ್ಧಿರಾಜ್ಞಾಪ್ರತಿಹತಾಗತಿಃ ॥
ಅನುವಾದ
ಇವಲ್ಲದೆ ಬೇರೆ ಕೆಲವು ಸಿದ್ಧಿಗಳು ಇವೆ. ಶರೀರದಲ್ಲಿ ಹಸಿವು-ಬಾಯಾರಿಕೆ, ಕಾಮ-ಕ್ರೋಧ ಮುಂತಾದ ವೇಗಗಳು ಉಂಟಾಗದಿರುವುದು, ಬಹಳ ದೂರದ ವಸ್ತುವನ್ನು ನೋಡುವುದು, ತುಂಬಾ ದೂರದ ಮಾತನ್ನು ಕೇಳುವುದು, ಮನಸ್ಸಿ ನೊಂದಿಗೇ ಶರೀರದಿಂದ ಆ ಜಾಗಕ್ಕೆ ತಲುಪುವುದು, ಇಚ್ಛಿಸಿದ ರೂಪವನ್ನು ಧರಿಸುವುದು, ಬೇರೆಯವರ ಶರೀರದಲ್ಲಿ ಪ್ರವೇಶಿಸುವುದು, ಇಚ್ಛಿಸಿದಾಗ ಶರೀರವನ್ನು ಬಿಡುವುದು, ಅಪ್ಸರೆಯರೊಂದಿಗೆ ನಡೆಯುವ ದೇವತೆಗಳ ಕ್ರೀಡೆಗಳನ್ನು ದರ್ಶಿಸುವುದು, ಎಣಿಸಿದ ಸಂಕಲ್ಪದ ಸಿದ್ಧಿ, ಎಲ್ಲ ಕಡೆಗಳಲ್ಲಿ ಎಲ್ಲರ ಮೂಲಕ ವಿರೋಧವಿಲ್ಲದೆ ಆಜ್ಞಾಪಾಲನೆ ಈ ಹತ್ತು ಸಿದ್ಧಿಗಳು ಸತ್ತ್ವ ಗುಣದ ವಿಶೇಷ ವಿಕಾಸದಿಂದ ಉಂಟಾಗುತ್ತವೆ. ॥6-7॥
(ಶ್ಲೋಕ - 8)
ಮೂಲಮ್
ತ್ರಿಕಾಲಜ್ಞತ್ವಮದ್ವಂದ್ವಂ ಪರಚಿತ್ತಾದ್ಯಭಿಜ್ಞತಾ ।
ಆಗ್ನ್ಯರ್ಕಾಂಬುವಿಷಾದೀನಾಂ ಪ್ರತಿಷ್ಟಂಭೋಪರಾಜಯಃ ॥
ಅನುವಾದ
ಭೂತ, ಭವಿಷ್ಯ, ವರ್ತಮಾನದ ಮಾತನ್ನು ತಿಳಿದುಕೊಳ್ಳುವುದು, ಶೀತ-ಉಷ್ಣ, ಸುಖ-ದುಃಖ, ರಾಗ-ದ್ವೇಷ ಮುಂತಾದ ದ್ವಂದ್ವಗಳಿಗೆ ವಶನಾಗದಿರುವುದು, ಬೇರೆಯವರ ಮನಸ್ಸಿನ ಮಾತನ್ನು ಅರಿತುಕೊಳ್ಳುವುದು, ಅಗ್ನಿ, ಸೂರ್ಯ, ಜಲ, ವಿಷ ಮುಂತಾದವುಗಳ ಶಕ್ತಿಯನ್ನು ಸ್ತಂಭಿತಗೊಳಿಸುವುದು, ಯಾರಿಂದಲೂ ಸೋಲದಿರುವುದು ಈ ಐದು ಸಿದ್ಧಿಗಳೂ ಕೂಡ ಯೋಗಿಗಳಿಗೆ ದೊರೆಯುತ್ತವೆ. ॥8॥
(ಶ್ಲೋಕ - 9)
ಮೂಲಮ್
ಏತಾಶ್ಚೋದ್ಧೇಶತಃ ಪ್ರೋಕ್ತಾ ಯೋಗಧಾರಣಸಿದ್ಧಯಃ ।
ಯಯಾ ಧಾರಣಯಾ ಯಾ ಸ್ಯಾದ್ಯಥಾ ವಾ ಸ್ಯಾನ್ನಿಬೋಧ ಮೇ ॥
ಅನುವಾದ
ಪ್ರಿಯ ಉದ್ಧವನೇ! ಯೋಗ-ಧಾರಣೆ ಮಾಡುವುದರಿಂದ ಪ್ರಾಪ್ತವಾಗುವ ಸಿದ್ಧಿಗಳನ್ನು ನಾನು ನಾಮ ನಿರ್ದೇಶದೊಂದಿಗೆ ವರ್ಣಿಸಿದೆ. ಈಗ ಯಾವ ಧಾರಣೆಯಿಂದ ಯಾವ ಸಿದ್ಧಿಯು ಪ್ರಾಪ್ತವಾಗುತ್ತದೆ ಎಂಬುದನ್ನು ಹೇಳುತ್ತೇನೆ, ಕೇಳು.॥9॥*
ಟಿಪ್ಪನೀ
- ಈ ಸಮಸ್ತ ವಿಶ್ವದಲ್ಲಿರುವುದೆಲ್ಲವೂ ಪರಮಾತ್ಮನ ಯಾವುದೋ ಒಂದು ಅಂಶದ ಅಭಿವ್ಯಕ್ತಿಯೇ ಆಗಿದೆ. ಇದರ ಹೊರಗೆ-ಒಳಗೆ ಎಲ್ಲೆಡೆ ಅವನೇ ವ್ಯಾಪ್ತನಾಗಿದ್ದಾನೆ. ಅವನು ಯಾವ ತತ್ತ್ವದ ಮೂಲಕ ಈ ವಿಶ್ವವನ್ನು ನಿರ್ಮಿಸಿರುವನೋ, ಆಯಾಯಾ ಸಮಷ್ಟಿ ತತ್ತ್ವದಲ್ಲಿ ಸಾಧಕನು ತನ್ನನ್ನು ಏಕಾಕಾರ ಮಾಡಿಕೊಂಡಾಗ, ಅದಕ್ಕನುಸಾರ ಆ ಶಕ್ತಿಯನ್ನು ಪಡೆದುಕೊಳ್ಳುವನು. ಇದಕ್ಕೆ ಸಿದ್ಧಿಗಳು ಎಂದು ಹೇಳುತ್ತಾರೆ. ಪರಮಾತ್ಮತತ್ತ್ವವನ್ನು ಪಡೆದ ಮಹಾಪುರುಷನಿಗಾಗಿ ಈ ಸಿದ್ಧಿಗಳ ಯಾವ ಮಹತ್ವವೂ ಇರುವುದಿಲ್ಲ.
(ಶ್ಲೋಕ - 10)
ಮೂಲಮ್
ಭೂತಸೂಕ್ಷ್ಮಾತ್ಮನಿ ಮಯಿ ತನ್ಮಾತ್ರಂ ಧಾರಯೇನ್ಮನಃ ।
ಅಣಿಮಾನಮವಾಪ್ನೋತಿ ತನ್ಮಾತ್ರೋಪಾಸಕೋ ಮಮ ॥
ಅನುವಾದ
ಪ್ರಿಯ ಉದ್ಧವಾ! ಪಂಚಮಹಾಭೂತಗಳ ಸೂಕ್ಷ್ಮರೂಪವನ್ನು ತನ್ಮಾತ್ರೆ ಎಂದು ಹೇಳುತ್ತಾರೆ. ಅದು ನನ್ನದೇ ಶರೀರವಾಗಿದೆ. ನನ್ನ ಈ ಪಂಚತನ್ಮಾತ್ರೆಗಳಲ್ಲಿ ತನ್ನ ಮನಸ್ಸನ್ನು ಧಾರಣೆ ಮಾಡಿಕೊಂಡ ಸಾಧಕನಿಗೆ ‘ಅಣಿಮಾ’ ಎಂಬ ಸಿದ್ಧಿಯು ಪ್ರಾಪ್ತವಾಗುತ್ತದೆ. ॥10॥
(ಶ್ಲೋಕ - 11)
ಮೂಲಮ್
ಮಹತ್ಯಾತ್ಮನ್ಮಯಿ ಪರೇ ಯಥಾಸಂಸ್ಥಂ ಮನೋ ದಧತ್ ।
ಮಹಿಮಾನಮವಾಪ್ನೋತಿ ಭೂತಾನಾಂ ಚ ಪೃಥಕ್ ಪೃಥಕ್ ॥
ಅನುವಾದ
ಈ ಮಹತ್ತತ್ತ್ವದ ರೂಪದಲ್ಲಿ ನಾನೇ ಪ್ರಕಾಶಿತನಾಗಿದ್ದೇನೆ. ಹೇಗೆ ಸಾಧ್ಯವೋ ಹಾಗೆ ತನ್ನ ಮನಸ್ಸನ್ನು ನನ್ನ ಈ ಮಹತ್ತತ್ತ್ವರೂಪೀ ಪರಮಾತ್ಮನಲ್ಲಿ ಧಾರಣೆ ಮಾಡುವವನಿಗೆ ‘ಮಹಿಮಾ’ ಎಂಬ ಸಿದ್ಧಿಯು ಪ್ರಾಪ್ತವಾಗುತ್ತದೆ. ಹಾಗೆಯೇ ಒಂದೊಂದು ಮಹಾಭೂತದ ತನ್ಮಾತ್ರೆಯಲ್ಲಿ ಮನಸ್ಸನ್ನು ಧಾರಣೆ ಗೈದರೂ ಕೂಡ ಅವನಿಗೆ ಮಹಿಮೆ ಎಂಬ ಸಿದ್ಧಿಯು ಪ್ರಾಪ್ತವಾಗುತ್ತದೆ. ॥11॥
(ಶ್ಲೋಕ - 12)
ಮೂಲಮ್
ಪರಮಾಣುಮಯೇ ಚಿತ್ತಂ ಭೂತಾನಾಂ ಮಯಿ ರಂಜಯನ್ ।
ಕಾಲಸೂಕ್ಷ್ಮಾರ್ಥತಾಂ ಯೋಗೀ ಲಘಿಮಾನಮವಾಪ್ನುಯಾತ್ ॥
ಅನುವಾದ
ವಾಯುವೇ ಮುಂತಾದ ನಾಲ್ಕೂ ಭೂತಗಳೊಳಗೆ ಪರಮಾಣುರೂಪದಿಂದ ಆಕಾಶವು ಎಲ್ಲೆಡೆ ತುಂಬಿದೆ. ಹಾಗೆಯೇ ನಾನು ಸರ್ವತ್ರ ಪರಿಪೂರ್ಣನಾಗಿದ್ದೇನೆ. ಯೋಗಿಯು ತನ್ನ ಚಿತ್ತವನ್ನು ನನ್ನಲ್ಲಿ ತೊಡಗಿಸುತ್ತಾ ನನ್ನಲ್ಲಿ ಏಕತೆಯನ್ನು ಪಡೆದುಕೊಳ್ಳುವವನಿಗೆ ‘ಲಘಿಮಾ’ ಎಂಬ ಸಿದ್ಧಿಯು ಪ್ರಾಪ್ತವಾಗುತ್ತದೆ. ಕಾಲದ ಸೂಕ್ಷ್ಮಕ್ಕಿಂತ ಸೂಕ್ಷ್ಮಪರಮಾಣು ಆಗುವ ಸಾಮರ್ಥ್ಯವು ದೊರೆಯುತ್ತದೆ. ॥12॥
(ಶ್ಲೋಕ - 13)
ಮೂಲಮ್
ಧಾರಯನ್ ಮಯ್ಯಹಂತತ್ತ್ವೇ ಮನೋ ವೈಕಾರಿಕೇಖಿಲಮ್ ।
ಸರ್ವೇಂದ್ರಿಯಾಣಾಮಾತ್ಮತ್ವಂ ಪ್ರಾಪ್ತಿಂ ಪ್ರಾಪ್ನೋತಿ ಮನ್ಮನಾಃ ॥
ಅನುವಾದ
ಮನಸ್ಸು ಎಲ್ಲ ಇಂದ್ರಿಯಗಳ ಒಡೆಯವಾಗಿದೆ. ಇದು ಅಹಂತತ್ತ್ವದ ಸತ್ತ್ವಗುಣ ರೂಪೀ ವಿಕಾರದಿಂದ ಉಂಟಾಗಿದೆ. ಯೋಗಿಯು ನನ್ನ ಸ್ವರೂಪಭೂತ ಸಾತ್ತ್ವಿಕ ಅಹಂಕಾರದಲ್ಲಿ ತನ್ನ ಮನಸ್ಸನ್ನು ಏಕಾಗ್ರಗೊಳಿಸಿದರೆ, ಅವನು ಎಲ್ಲ ಇಂದ್ರಿಯಗಳ ಒಡೆತನವನ್ನು ಪಡೆಯುತ್ತಾನೆ. ಹೀಗೆ ಮನಸ್ಸನ್ನು ನನ್ನಲ್ಲಿ ತೊಡಗಿಸುವ ಭಕ್ತನು ‘ಪ್ರಾಪ್ತಿ’ ಎಂಬ ಸಿದ್ಧಿಯನ್ನು ಪಡೆಯುತ್ತಾನೆ. ॥13॥
ಮೂಲಮ್
(ಶ್ಲೋಕ - 14)
ಮಹತ್ಯಾತ್ಮನಿ ಯಃ ಸೂತ್ರೇ ಧಾರಯೇನ್ಮಯಿ ಮಾನಸಮ್ ।
ಪ್ರಾಕಾಮ್ಯಂ ಪಾರಮೇಷ್ಠ್ಯಂ ಮೇ ವಿಂದತೇವ್ಯಕ್ತಜನ್ಮನಃ ॥
ಅನುವಾದ
ಅವ್ಯಕ್ತಜನ್ಮಾ ನನ್ನಿಂದಲೇ ಬ್ರಹ್ಮಾಂಡದ ನಿರ್ಮಾಣವಾಗಿದೆ. ಮಹತತ್ತ್ವದ ಅಭಿಮಾನಿಯಾದ ಸೂತ್ರಾತ್ಮಾ ಹಿರಣ್ಯಗರ್ಭದಲ್ಲಿ ಮನಸ್ಸನ್ನು ಧಾರಣೆಗೈದರೆ ಅವನಿಗೆ ‘ಪ್ರಾಕಾಮ್ಯ’ ಸಿದ್ಧಿಯು ಪ್ರಾಪ್ತವಾಗುತ್ತದೆ. ಅವನು ಇಡೀ ಬ್ರಹ್ಮಾಂಡದ ಒಡೆಯನಾಗುತ್ತಾನೆ. ಪಾರಮೇಷ್ಠ್ಯತ್ವವನ್ನು ಪಡೆದುಕೊಳ್ಳುತ್ತಾನೆ. ॥14॥
(ಶ್ಲೋಕ - 15)
ಮೂಲಮ್
ವಿಷ್ಣೌ ತ್ರ್ಯಧೀಶ್ವರೇ ಚಿತ್ತಂ ಧಾರಯೇತ್ಕಾಲವಿಗ್ರಹೇ ।
ಸ ಈಶಿತ್ವಮವಾಪ್ನೋತಿ ಕ್ಷೇತ್ರಕ್ಷೇತ್ರಜ್ಞಚೋದನಾಮ್ ॥
ಅನುವಾದ
ತ್ರಿಲೋಕಗಳ ಆಧಾರನು ನಾನೇ ಆಗಿರುವೆನು. ತ್ರಿಗುಣಮಯ ಮಾಯೆಯ ಒಡೆಯ ನಾನೇ ಆಗಿದ್ದೇನೆ. ಸಮಸ್ತ ಬ್ರಹ್ಮಾಂಡವನ್ನು ನಾಶಗೊಳಿಸುವ ಸಮರ್ಥಕಾಲವೂ ನನ್ನದೇ ವಿಗ್ರಹವಾಗಿದೆ. ಕ್ಷೇತ್ರ (ಶರೀರ) ಮತ್ತು ಕ್ಷೇತ್ರಜ್ಞ (ಜೀವಾತ್ಮಾ) ಇವೆರಡರ ಪ್ರೇರಕ ಪುರುಷೋತ್ತಮನು ನಾನೇ ಆಗಿದ್ದೇನೆ. ನನ್ನ ಈ ವಿಷ್ಣುಸ್ವರೂಪದಲ್ಲಿ ಚಿತ್ತವನ್ನು ಧಾರಣೆಮಾಡಿದರೆ ಅವನಿಗೆ ‘ಈಶಿತ್ವ’ ಎಂಬ ಸಿದ್ಧಿಯು ಪ್ರಾಪ್ತವಾಗಿ ಹೋಗುತ್ತದೆ. ಅವನಿಗೂ ಕೂಡ ಮತ್ತೆ ನನ್ನಂತೆಯೇ ಜೀವಿಗಳನ್ನು ಇಚ್ಛಾನುಸಾರ ಪ್ರೇರಿತಗೊಳಿಸುವ ಸಾಮರ್ಥ್ಯ ದೊರೆಯುತ್ತದೆ. ॥15॥
(ಶ್ಲೋಕ - 16)
ಮೂಲಮ್
ನಾರಾಯಣೇ ತುರೀಯಾಖ್ಯೇ ಭಗವಚ್ಛಬ್ದಶಬ್ದಿತೇ ।
ಮನೋ ಮಯ್ಯಾದಧದ್ಯೋಗೀ ಮದ್ಧರ್ಮಾ ವಶಿತಾಮಿಯಾತ್ ॥
ಅನುವಾದ
‘‘ಐಶ್ವರ್ಯಸ್ಯ ಸಮಗ್ರಸ್ಯ ಧರ್ಮಸ್ಯ ಯಶಸಃ ಶ್ರಿಯಃ ಜ್ಞಾನವೈರಾಗ್ಯಯೋಶ್ಚೈವ ಷಣ್ಣಾಂ ಭಗ ಇಟೇ ರಣಾ ॥’’ ಈ ಆರು ಐಶ್ವರ್ಯಗಳಿಂದ ಭಗವಂತನು ಕೂಡಿರುವನು. ಈ ಭಗವಂತನೇ ನಾರಾಯಣನಾಗಿರುವನು. ತುರೀಯ ಸ್ಥಿತಿಯಲ್ಲಿರುವ ನನ್ನ ಈ ನಾರಾಯಣ ಸ್ವರೂಪದಲ್ಲಿ ಮನಸ್ಸನ್ನು ಧಾರಣೆಗೈದು ಸ್ಥಿತನಾದ ಯೋಗಿಯು ಮದ್ಧರ್ಮಾ ಆಗಿಬಿಡುತ್ತಾನೆ. ಅರ್ಥಾತ್ ನನ್ನ ಗುಣಗಳು ಅವನಲ್ಲಿ ಬಂದುಬಿಡುತ್ತವೆ. ಇಂತಹ ಯೋಗಿಯು ‘ವಶಿತಾ’ ಎಂಬ ಸಿದ್ಧಿಯನ್ನು ಪಡೆದುಕೊಳ್ಳುತ್ತಾನೆ. ॥16॥
(ಶ್ಲೋಕ - 17)
ಮೂಲಮ್
ನಿರ್ಗುಣೇ ಬ್ರಹ್ಮಣಿ ಮಯಿ ಧಾರಯನ್ ವಿಶದಂ ಮನಃ ।
ಪರಮಾನಂದಮಾಪ್ನೋತಿ ಯತ್ರ ಕಾಮೋವಸೀಯತೇ ॥
ಅನುವಾದ
ಸ್ವಚ್ಛವಾದ ಮನಸ್ಸಿನಿಂದ ನಿರ್ಗುಣ ಬ್ರಹ್ಮವಾದ ನನ್ನಲ್ಲಿ ತೊಡಗಿರುವ ಯೋಗಿಯು ನನ್ನ ಆ ನಿರ್ಗುಣ ನಿರಾಕಾರ ರೂಪವನ್ನು ಉಪಾಸನೆಗೈದು ಪರಮಾನಂದವನ್ನು ಪಡೆಯುತ್ತಾನೆ. ಅವನಿಗೆ ಯಾವ ರೀತಿಯ ಕಾಮನೆಯೂ ಇರುವುದಿಲ್ಲ. ಇದನ್ನು ‘ಕಾಮಾವಸಾಯಿತಾ’ ಸಿದ್ಧಿ ಎಂದು ಹೇಳುತ್ತಾರೆ. ॥17॥
(ಶ್ಲೋಕ - 18)
ಮೂಲಮ್
ಶ್ವೇತದ್ವೀಪಪತೌ ಚಿತ್ತಂ ಶುದ್ಧೇ ಧರ್ಮಮಯೇ ಮಯಿ ।
ಧಾರಯನ್ಶ್ವೇತತಾಂ ಯಾತಿ ಷಡೂರ್ಮಿರಹಿತೋ ನರಃ ॥
ಅನುವಾದ
ಶ್ವೇತದ್ವೀಪದ ಸ್ವಾಮಿ ನಾನೇ ಆಗಿದ್ದೇನೆ. ಧರ್ಮವು ನನ್ನದೇ ಸ್ವರೂಪವಾಗಿದೆ. ಇಂತಹ ನನ್ನ ವಿಶುದ್ಧ ಸ್ವರೂಪದಲ್ಲಿ ತನ್ನ ಮನಸ್ಸನ್ನು ಸ್ಥಿರಗೊಳಿಸುವವನು ಹಸಿವು, ತೃಷೆ, ಕಾಮ, ಕ್ರೋಧ, ಶೋಕ, ಮೋಹ ಇವುಗಳಿಂದ ಪೀಡಿತನಾಗುವುದಿಲ್ಲ. ಅವನಿಗೆ ಶುದ್ಧ ಸ್ವರೂಪ ಪರಮಾತ್ಮನಾದ ನನ್ನ ಪ್ರಾಪ್ತಿಯು ಉಂಟಾಗುತ್ತದೆ. ॥18॥
(ಶ್ಲೋಕ - 19)
ಮೂಲಮ್
ಮಯ್ಯಾಕಾಶಾತ್ಮನಿ ಪ್ರಾಣೇ ಮನಸಾ ಘೋಷಮುದ್ವಹನ್ ।
ತತ್ರೋಪಲಬ್ಧಾಭೂತಾನಾಂ ಹಂಸೋ ವಾಚಃ ಶೃಣೋತ್ಯಸೌ ॥
ಅನುವಾದ
ನಾನೇ ಸಮಷ್ಟಿ-ಪ್ರಾಣಸ್ವರೂಪೀ ಆಕಾಶಾತ್ಮಾ ಆಗಿದ್ದೇನೆ. ನನ್ನ ಈ ಸ್ವರೂಪದಲ್ಲಿ ಮನಸ್ಸಿನ ಮೂಲಕ ಅನಾಹತನಾದವನ್ನು ಚಿಂತಿಸುವವನು ‘ದೂರಶ್ರವಣ’ ಎಂಬ ಸಿದ್ಧಿಯಿಂದ ಸಂಪನ್ನನಾಗಿರುತ್ತಾನೆ. ಈ ಧಾರಣೆಯಿಂದ ಯೋಗಿಯು ಆಕಾಶದಲ್ಲಿ ಉಪಲಬ್ಧವಾಗುವ ವಿವಿಧ ಪ್ರಾಣಿಗಳ ಮಾತುಗಳನ್ನು ಕೇಳಿ-ತಿಳಿಯಬಲ್ಲನು. ॥19॥
(ಶ್ಲೋಕ - 20)
ಮೂಲಮ್
ಚಕ್ಷುಸ್ತ್ವಷ್ಟರಿ ಸಂಯೋಜ್ಯ ತ್ವಷ್ಟಾರಮಪಿ ಚಕ್ಷುಷಿ ।
ಮಾಂ ತತ್ರ ಮನಸಾ ಧ್ಯಾಯನ್ವಿಶ್ವಂ ಪಶ್ಯತಿ ಸೂಕ್ಷ್ಮದೃಕ್ ॥
ಅನುವಾದ
ಯಾವ ಯೋಗಿಯು ಕಣ್ಣುಗಳನ್ನು ಸೂರ್ಯನಲ್ಲಿ ಹಾಗೂ ಸೂರ್ಯನನ್ನು ಕಣ್ಣುಗಳಲ್ಲಿ ಸಂಯುಕ್ತಗೊಳಿಸುವನೋ ಮತ್ತು ಎರಡರ ಸಂಯೋಗದಲ್ಲಿ ಮನಸ್ಸಿನಲ್ಲೇ ನನ್ನನ್ನು ಧ್ಯಾನಿಸುವನೋ, ಅವನ ದೃಷ್ಟಿ ಸೂಕ್ಷ್ಮವಾಗಿ ಹೋಗುತ್ತದೆ. ಅವನಿಗೆ ‘ದೂರದರ್ಶನ’ ಎಂಬ ಸಿದ್ಧಿಯು ಪ್ರಾಪ್ತವಾಗುತ್ತದೆ. ಅವನು ಇಡೀ ಪ್ರಪಂಚವನ್ನು ನೋಡಬಲ್ಲನು. ॥20॥
(ಶ್ಲೋಕ - 21)
ಮೂಲಮ್
ಮನೋ ಮಯಿ ಸುಸಂಯೋಜ್ಯ ದೇಹಂ ತದನು ವಾಯುನಾ ।
ಮದ್ಧಾರಣಾನುಭಾವೇನ ತತ್ರಾತ್ಮಾ ಯತ್ರ ವೈ ಮನಃ ॥
ಅನುವಾದ
ಮನಸ್ಸು ಮತ್ತು ಶರೀರವನ್ನು ಪ್ರಾಣವಾಯು ಸಹಿತ ನನ್ನೊಡನೆ ಸಂಯುಕ್ತಗೊಳಿಸಿ, ನನ್ನ ಧಾರಣೆ ಮಾಡಿದರೆ ಇದರಿಂದ ‘ಮನೋಜವ’ ಎಂಬ ಸಿದ್ಧಿಯು ಪ್ರಾಪ್ತವಾಗುತ್ತದೆ. ಇದರ ಪ್ರಭಾವದಿಂದ ಆ ಯೋಗಿಯು ಎಲ್ಲಿಗಾದರೂ ಹೋಗುವ ಸಂಕಲ್ಪಮಾಡಿದರೆ, ಅಲ್ಲಿಗೆ ಅವನ ಶರೀರವು ಆಗಲೇ ತಲುಪುತ್ತದೆ. ॥21॥
(ಶ್ಲೋಕ - 22)
ಮೂಲಮ್
ಯದಾ ಮನ ಉಪಾದಾಯ ಯದ್ಯದ್ರೂಪಂ ಬುಭೂಷತಿ ।
ತತ್ತದ್ಭವೇನ್ಮನೋರೂಪಂ ಮದ್ಯೋಗಬಲಮಾಶ್ರಯಃ ॥
ಅನುವಾದ
ಯಾವಾಗ ಯೋಗಿಯು ಮನಸ್ಸನ್ನು ಉಪಾದಾನ ಕಾರಣವನ್ನಾಗಿಸಿ ಯಾರದಾದರೂ ರೂಪವನ್ನು ಧರಿಸಲು ಬಯಸಿದರೆ ತನ್ನ ಮನಸ್ಸಿಗನುಕೂಲವಾಗಿ ಅಂತಹುದೇ ರೂಪವನ್ನು ಧರಿಸಿ ಕೊಳ್ಳುವನು. ಇದರ ಕಾರಣ ಅವನು ತನ್ನ ಚಿತ್ತವನ್ನು ನನ್ನೊಂದಿಗೆ ಸೇರಿಸಿರುವನು. ॥22॥
(ಶ್ಲೋಕ - 23)
ಮೂಲಮ್
ಪರಕಾಯಂ ವಿಶನ್ ಸಿದ್ಧ ಆತ್ಮಾನಂ ತತ್ರ ಭಾವಯೇತ್ ।
ಪಿಂಡಂ ಹಿತ್ವಾ ವಿಶೇತ್ಪ್ರಾಣೋ ವಾಯುಭೂತಃ ಷಡಂಘ್ರಿವತ್ ॥
ಅನುವಾದ
ಇನ್ನೊಂದು ಶರೀರದಲ್ಲಿ ಪ್ರವೇಶಿಸಲು ಬಯಸುವ ಯೋಗಿಯು ನಾನು ಅದೇ ಶರೀರದಲ್ಲಿದ್ದೇನೆ ಹೀಗೆ ಭಾವಿಸಬೇಕು. ಹೀಗೆ ಮಾಡುವುದರಿಂದ ಅವನ ಪ್ರಾಣವು ವಾಯುರೂಪವನ್ನು ಧರಿಸಿ ಒಂದು ಹೂವಿನಿಂದ ಇನ್ನೊಂದು ಹೂವಿಗೆ ಹಾರುವ ದುಂಬಿಯಂತೆ ಅವನು ತನ್ನ ಶರೀರವನ್ನು ಬಿಟ್ಟು ಇನ್ನೊಂದು ಶರೀರದಲ್ಲಿ ಪ್ರವೇಶಿಸುತ್ತಾನೆ. ॥23॥
(ಶ್ಲೋಕ - 24)
ಮೂಲಮ್
ಪಾರ್ಷ್ಣ್ಯಾಪೀಡ್ಯ ಗುದಂ ಪ್ರಾಣಂ ಹೃದುರಃಕಂಠಮೂರ್ಧಸು ।
ಆರೋಪ್ಯ ಬ್ರಹ್ಮರಂಧ್ರೇಣ ಬ್ರಹ್ಮ ನೀತ್ವೋತ್ಸೃಜೇತ್ತನುಮ್ ॥
ಅನುವಾದ
ಯೋಗಿಗೆ ಶರೀರವನ್ನು ಪರಿತ್ಯಾಗ ಮಾಡಬೇಕೆಂದಾಗ ಹಿಮ್ಮಡಿಯಿಂದ ಗುದದ್ವಾರವನ್ನು ಒತ್ತಿ ಪ್ರಾಣವಾಯುವನ್ನು ಕ್ರಮವಾಗಿ ಹೃದಯ, ವಕ್ಷಃಸ್ಥಲ, ಕಂಠ, ಮಸ್ತಕಕ್ಕೆ ಕೊಂಡುಹೋಗ ಬೇಕು. ಮತ್ತೆ ಬ್ರಹ್ಮ ರಂಧ್ರದ ಮೂಲಕ ಅದನ್ನು ಬ್ರಹ್ಮನಲ್ಲಿ ಲೀನಗೊಳಿಸಿ ಶರೀರವನ್ನು ತ್ಯಜಿಸಿ ಬಿಡುತ್ತಾನೆ. ॥24॥
(ಶ್ಲೋಕ - 25)
ಮೂಲಮ್
ವಿಹರಿಷ್ಯನ್ಸುರಾಕ್ರೀಡೇ ಮತ್ಸ್ಥಂ ಸತ್ತ್ವಂ ವಿಭಾವಯೇತ್ ।
ವಿಮಾನೇನೋಪತಿಷ್ಠಂತಿ ಸತ್ತ್ವವೃತ್ತೀಃ ಸುರಸಿಯಃ ॥
ಅನುವಾದ
ಅವನಿಗೆ ದೇವತೆಗಳ ವಿಹಾರಸ್ಥಳಗಳಲ್ಲಿ ಕ್ರೀಡಿಸಲು ಇಚ್ಛೆ ಉಂಟಾದರೆ, ನನ್ನ ಶುದ್ಧ ಸತ್ತ್ವಗುಣಮಯ ಸ್ವರೂಪವನ್ನು ಭಾವಿಸಬೇಕು ಹೀಗೆ ಮಾಡುವುದರಿಂದ ನನ್ನ ಸತ್ತ್ವರ್ಗುಣ ಅಂಶರೂಪೀ ಸುರ-ಸುಂದರಿಯರು ವಿಮಾನವನ್ನು ಹತ್ತಿ ಅವನ ಬಳಿಗೆ ಬಂದು ತಲುಪುತ್ತಾರೆ. ॥25॥
(ಶ್ಲೋಕ - 26)
ಮೂಲಮ್
ಯಥಾ ಸಂಕಲ್ಪಯೇದ್ಬುದ್ಧ್ಯಾ ಯದಾ ವಾ ಮತ್ಪರಃ ಪುಮಾನ್ ।
ಮಯಿ ಸತ್ಯೇ ಮನೋ ಯುಂಜನ್ ತಥಾ ತತ್ಸಮುಪಾಶ್ನುತೇ ॥
ಅನುವಾದ
ನನ್ನ ಪರಾಯಣನಾದ ಯೋಗಿಯು ಸತ್ಯಸಂಕಲ್ಪ ರೂಪೀ ನನ್ನಲ್ಲಿ ತನ್ನ ಚಿತ್ತವನ್ನು ಸ್ಥಿರಗೊಳಿಸಿದರೆ ಅವನಿಗೆ ಸಂಕಲ್ಪ ಸಿದ್ಧಿ ಉಂಟಾಗುತ್ತದೆ. ಮನಸ್ಸಲ್ಲಿ ಯಾವಾಗ ಎಂತಹ ಸಂಕಲ್ಪ ಮಾಡುವನೋ, ಆಗಲೇ ಅವನ ಆ ಸಂಕಲ್ಪವು ಸಿದ್ಧವಾಗಿ ಹೋಗುತ್ತದೆ. ॥26॥
(ಶ್ಲೋಕ - 27)
ಮೂಲಮ್
ಯೋ ವೈ ಮದ್ಭಾವಮಾಪನ್ನ ಈಶಿತುರ್ವಶಿತುಃ ಪುಮಾನ್ ।
ಕುತಶ್ಚಿನ್ನ ವಿಹನ್ಯೇತ ತಸ್ಯ ಚಾಜ್ಞಾ ಯಥಾ ಮಮ ॥
ಅನುವಾದ
ನಾನು ‘ಈಶಿತ್ವ’ ಮತ್ತು ‘ವಶಿತ್ವ’ ಎಂಬ ಎರಡೂ ಸಿದ್ಧಿಗಳ ಒಡೆಯನಾಗಿದ್ದೇನೆ. ಅದಕ್ಕಾಗಿ ಎಂದೂ ಯಾರೂ ನನ್ನ ಆಜ್ಞೆಯನ್ನು ಉಲ್ಲಂಘಿಸಲಾರರು ಹಾಗೂ ಎಲ್ಲರೂ ನನ್ನ ಶಾಸನವನ್ನೇ ಒಪ್ಪಿಕೊಳ್ಳುವರು. ನನ್ನ ಆ ರೂಪವನ್ನು ಚಿಂತಿಸುತ್ತಾ ಅದೇ ಭಾವನೆಯಿಂದ ಯುಕ್ತನಾದವನು ನನ್ನಂತೆಯೇ ಅವನ ಆಜ್ಞೆಯನ್ನು ಯಾರೂ ಉಲ್ಲಂಘಿಸಲಾರರು. ॥27॥
(ಶ್ಲೋಕ - 28)
ಮೂಲಮ್
ಮದ್ಭಕ್ತ್ಯಾ ಶುದ್ಧಸತ್ತ್ವಸ್ಯ ಯೋಗಿನೋ ಧಾರಣಾವಿದಃ ।
ತಸ್ಯ ತ್ರೈಕಾಲಿಕೀ ಬುದ್ಧಿರ್ಜನ್ಮಮೃತ್ಯೂಪಬೃಂಹಿತಾ ॥
ಅನುವಾದ
ನನ್ನ ಧಾರಣೆಯನ್ನು ಮಾಡುತ್ತಾ-ಮಾಡುತ್ತಾ, ನನ್ನ ಭಕ್ತಿಯ ಪ್ರಭಾವದಿಂದ ಶುದ್ಧವಾದ ಯೋಗಿಯ ಬುದ್ಧಿಯು ಜನ್ಮ-ಮೃತ್ಯು ಮುಂತಾದ ಅದೃಷ್ಟ ವಿಷಯಗಳನ್ನು ತಿಳಿದುಕೊಳ್ಳುತ್ತದೆ. ಇನ್ನೇನು ಭೂತ, ಭವಿಷ್ಯತ್ತು, ವರ್ತಮಾನ ಇವುಗಳ ಎಲ್ಲ ಮಾತುಗಳು ಅವನ ಅರಿವಿಗೆ ಬರುತ್ತವೆ. ॥28॥
(ಶ್ಲೋಕ - 29)
ಮೂಲಮ್
ಅಗ್ನ್ಯಾದಿಭಿರ್ನ ಹನ್ಯೇತ ಮುನೇರ್ಯೋಗಮಯಂ ವಪುಃ ।
ಮದ್ಯೋಗಶ್ರಾಂತಚಿತ್ತಸ್ಯ ಯಾದಸಾಮುದಕಂ ಯಥಾ ॥
ಅನುವಾದ
ನೀರಿನಲ್ಲಿರುವ ಪ್ರಾಣಿಗಳು ನೀರಿನಿಂದಾಗಿ ನಾಶವಾಗುವುದಿಲ್ಲವೋ ಹಾಗೆಯೇ ನನ್ನಲ್ಲೇ ಏಕೀ ಭಾವದಿಂದ ಸ್ಥಿರವಾದ ಚಿತ್ತವುಳ್ಳ ಯೋಗಿಯ ಯೋಗಮಯ ಶರೀರವನ್ನು ಅಗ್ನಿ, ಜಲ ಮುಂತಾದ ಯಾವ ವಸ್ತುಗಳೂ ನಾಶಮಾಡಲಾರವು. ॥29॥
(ಶ್ಲೋಕ - 30)
ಮೂಲಮ್
ಮದ್ವಿಭೂತೀರಭಿಧ್ಯಾಯನ್ ಶ್ರೀವತ್ಸಾಸವಿಭೂಷಿತಾಃ ।
ಧ್ವಜಾತಪತ್ರವ್ಯಜನೈಃ ಸ ಭವೇದಪರಾಜಿತಃ ॥
ಅನುವಾದ
ಶ್ರೀವತ್ಸ ಮುಂತಾದ ಚಿಹ್ನೆಗಳಿಂದ ಕೂಡಿದ, ಶಂಖ, ಚಕ್ರ, ಗದಾ, ಪದ್ಮ ಮುಂತಾದ ಆಯುಧಗಳಿಂದ ವಿಭೂಷಿತವಾದ, ಧ್ವಜ, ಛತ್ರ, ಚಾಮರ ಮುಂತಾದವುಗಳಿಂದ ಸಂಪನ್ನವಾದ ನನ್ನ ಅವತಾರಗಳನ್ನು ಧ್ಯಾನಿಸುವ ಪುರುಷನು ಅಜೇಯನಾಗುತ್ತಾನೆ. ॥30॥
(ಶ್ಲೋಕ - 31)
ಮೂಲಮ್
ಉಪಾಸಕಸ್ಯ ಮಾಮೇವಂ ಯೋಗಧಾರಣಯಾ ಮುನೇಃ ।
ಸಿದ್ಧಯಃ ಪೂರ್ವಕಥಿತಾ ಉಪತಿಷ್ಠಂತ್ಯಶೇಷತಃ ॥
ಅನುವಾದ
ನನ್ನ ಉಪಾಸನೆಯನ್ನು ಮಾಡುತ್ತಾ, ಯೋಗಧಾರಣೆಯ ಮೂಲಕ ನನ್ನನ್ನೇ ಚಿಂತಿಸುವ ವಿಚಾರಶೀಲ ಪುರುಷನ ಮುಂದೆ ಈ ಸಿದ್ಧಿಗಳು ಎಲ್ಲ ರೀತಿಯಿಂದ ಬಂದು ಅಣಿಯಾಗುತ್ತವೆ. ಇದನ್ನು ನಾನು ನಿನಗೆ ವರ್ಣಿಸಿರುವೆನು. ॥31॥
(ಶ್ಲೋಕ - 32)
ಮೂಲಮ್
ಜಿತೇಂದ್ರಿಯಸ್ಯ ದಾಂತಸ್ಯ ಜಿತಶ್ವಾಸಾತ್ಮನೋ ಮುನೇಃ ।
ಮದ್ಧಾರಣಾಂ ಧಾರಯತಃ ಕಾ ಸಾ ಸಿದ್ಧಿಃ ಸುದುರ್ಲಭಾ ॥
ಅನುವಾದ
ಪ್ರಿಯ ಉದ್ಧವನೇ! ಯಾರು ತನ್ನ ಪ್ರಾಣ, ಮನಸ್ಸು, ಇಂದ್ರಿಯಗಳ ಮೇಲೆ ವಿಜಯ ಸಾಧಿಸಿರುವನೋ ಯಾರು ಸಂಯಮಿಯಾಗಿರುವನೋ, ನನ್ನದೇ ಸ್ವರೂಪ ವನ್ನು ಧರಿಸಿರುವನೋ ಅವನಿಗಾಗಿ ಇಂತಹ ಯಾವ ಸಿದ್ಧಿಗಳು ದುರ್ಲಭವಲ್ಲ. ಅವನಿಗಾದರೋ ಎಲ್ಲ ಸಿದ್ಧಿಗಳು ಪ್ರಾಪ್ತವೇ ಇರುತ್ತವೆ. ॥32॥
(ಶ್ಲೋಕ - 33)
ಮೂಲಮ್
ಅಂತರಾಯಾನ್ ವದಂತ್ಯೇತಾ ಯುಂಜತೋ ಯೋಗಮುತ್ತಮಮ್ ।
ಮಯಾ ಸಂಪದ್ಯ ಮಾನಸ್ಯ ಕಾಲಕ್ಷಪಣಹೇತವಃ ॥
ಅನುವಾದ
ಭಕ್ತಿಯೋಗ ಅಥವಾ ಜ್ಞಾನ ಯೋಗಾದಿ ಉತ್ತಮ ಯೋಗಗಳ ಅಭ್ಯಾಸ ಮಾಡುತ್ತಿರುವ ಜನರಿಗೆ, ನನ್ನಲ್ಲಿ ಒಂದಾಗಿರುವವರಿಗೆ ಈ ಸಿದ್ಧಿಗಳು ಪ್ರಾಪ್ತವಾಗುವುದು ಒಂದು ವಿಘ್ನವೇ ಆಗಿದೆ. ಏಕೆಂದರೆ, ಇವೆಲ್ಲವೂ ಭಗವಂತನ ಬಳಿಗೆ ಹೋಗಲು ವಿಳಂಬಮಾಡುತ್ತವೆ ಎಂದು ಶ್ರೇಷ್ಠ ಪುರುಷರು ಹೇಳುತ್ತಾರೆ. ॥33॥
(ಶ್ಲೋಕ - 34)
ಮೂಲಮ್
ಜನ್ಮೌಷಧಿತಪೋಮಂತ್ರೈರ್ಯಾವತೀರಿಹ ಸಿದ್ಧಯಃ ।
ಯೋಗೇನಾಪ್ನೋತಿ ತಾಃ ಸರ್ವಾ ನಾನ್ಯೈರ್ಯೋಗಗತಿಂ ವ್ರಜೇತ್ ॥
ಅನುವಾದ
ಜನ್ಮ, ಔಷಧಿ, ತಪಸ್ಸು, ಮಂತ್ರಾದಿಗಳ ಮೂಲಕ ಪ್ರಾಪ್ತವಾಗುವ ಸಿದ್ಧಿಗಳೆಲ್ಲವೂ ಯೋಗದ ಮೂಲಕ ದೊರೆಯುವವು. ಆದರೆ ಭಗವಂತನ ಪ್ರಾಪ್ತಿಯು ಏಕಮಾತ್ರ ಭಗವಂತನಲ್ಲಿ ಚಿತ್ತವನ್ನು ತೊಡಗಿಸುವುದರಿಂದಲೇ ಪ್ರಾಪ್ತಿಯಾಗುತ್ತದೆ. ॥34॥
(ಶ್ಲೋಕ - 35)
ಮೂಲಮ್
ಸರ್ವಾಸಾಮಪಿ ಸಿದ್ಧೀನಾಂ ಹೇತುಃ ಪತಿರಹಂ ಪ್ರಭುಃ ।
ಅಹಂ ಯೋಗಸ್ಯ ಸಾಂಖ್ಯಸ್ಯ ಧರ್ಮಸ್ಯ ಬ್ರಹ್ಮವಾದಿನಾಮ್ ॥
ಅನುವಾದ
ಬ್ರಹ್ಮವಾದಿಗಳು ಯೋಗ, ಸಾಂಖ್ಯ, ಧರ್ಮ ಮುಂತಾದ ಅನೇಕ ಸಾಧನೆಗಳನ್ನು ಹೇಳಿರುವರು. ಅವುಗಳ ಹಾಗೂ ಸಮಸ್ತಸಿದ್ಧಿಗಳ ಏಕಮಾತ್ರ ಹೇತು ಸ್ವಾಮಿ ಮತ್ತು ಒಡೆಯ ನಾನೇ ಆಗಿದ್ದೇನೆ. ॥35॥
(ಶ್ಲೋಕ - 36)
ಮೂಲಮ್
ಅಹಮಾತ್ಮಾಂತರೋ ಬಾಹ್ಯೋನಾವೃತಃ ಸರ್ವದೇಹಿನಾಮ್ ।
ಯಥಾ ಭೂತಾನಿ ಭೂತೇಷು ಬಹಿರಂತಃ ಸ್ವಯಂ ತಥಾ ॥
ಅನುವಾದ
ಎಲ್ಲ ಪ್ರಾಣಿಗಳ ಒಳ-ಹೊರಗೆ, ಸರ್ವತ್ರ ಸೂಕ್ಷ್ಮ ಪಂಚ-ಮಹಾಭೂತಗಳು ಇರುವಂತೆಯೇ, ನಾನು ಸಮಸ್ತ ಪ್ರಾಣಿಗಳ ಒಳಗೆ ದೃಷ್ಟಾರೂಪದಿಂದ ಮತ್ತು ಹೊರಗೆ ದೃಶ್ಯರೂಪದಿಂದ ಸ್ಥಿತನಾಗಿದ್ದೇನೆ. ನನ್ನಲ್ಲಿ ಒಳ-ಹೊರಗೆ ಭೇದವೇ ಇಲ್ಲ. ಏಕೆಂದರೆ, ನಾನು ನಿರಾವರಣ, ಒಂದೇ ಅದ್ವಿತೀಯ ಆತ್ಮಾ ಸರ್ವವ್ಯಾಪಕನಾಗಿದ್ದೇನೆ. ॥36॥
ಅನುವಾದ (ಸಮಾಪ್ತಿಃ)
ಹದಿನೈದನೆಯ ಅಧ್ಯಾಯವು ಮುಗಿಯಿತು. ॥15॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಪಂಚದಶೋಽಧ್ಯಾಯಃ ॥15॥