[ಹದಿನೇಳನೆಯ ಅಧ್ಯಾಯ]
ಭಾಗಸೂಚನಾ
ಕಾಲಿಯನು ಯಮುನೆಯ ಮಡುವಿಗೆ ಬರಲು ಕಾರಣ, ದಾವಾನಲದಿಂದ ವ್ರಜವಾಸಿಗಳನ್ನು ಬದುಕಿಸಿದುದು
(ಶ್ಲೋಕ-1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ನಾಗಾಲಯಂ ರಮಣಕಂ ಕಸ್ಮಾತ್ತತ್ಯಾಜ ಕಾಲಿಯಃ ।
ಕೃತಂ ಕಿಂ ವಾ ಸುಪರ್ಣಸ್ಯ ತೇನೈಕೇನಾಸಮಂಜಸಮ್ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಪೂಜ್ಯರೇ! ಕಾಲಿಯ ನಾಗನು ನಾಗಗಳ ನಿವಾಸ ಸ್ಥಾನವಾದ ರಮಣಕ ದ್ವೀಪವನ್ನು ಏಕೆ ಬಿಟ್ಟು ಬಂದನು? ಅವನೊಬ್ಬನೇ ಗರುಡನ ಕುರಿತು ಯಾವ ಅಪರಾಧವನ್ನೆಸಗಿದ್ದನು? ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಉಪಹಾರ್ಯೈಃ ಸರ್ಪಜನೈರ್ಮಾಸಿ ಮಾಸೀಹ ಯೋ ಬಲಿಃ ।
ವಾನಸ್ಪತ್ಯೋ ಮಹಾಬಾಹೋ ನಾಗಾನಾಂ ಪ್ರಾಙ್ನೆರೂಪಿತಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿತನೇ! ಹಿಂದಿನ ಕಾಲದಲ್ಲಿ ಗರುಡನೂ ಸರ್ಪಗಳೂ ಸೇರಿ ಗರುಡನ ಸರ್ಪಾಹಾರದ ವಿಷಯದಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದವು. ಆ ಒಪ್ಪಂದದಂತೆ ಪ್ರತಿ ತಿಂಗಳು ನಿರ್ದಿಷ್ಟವಾದ ಒಂದು ವೃಕ್ಷದಡಿಯಲ್ಲಿ ಗರುಡನ ಆಹಾರಕ್ಕಾಗಿ ಹಾವನ್ನು ಒಪ್ಪಿಸಬೇಕಾಗಿತ್ತು. ॥2॥
(ಶ್ಲೋಕ-3)
ಮೂಲಮ್
ಸ್ವಂ ಸ್ವಂ ಭಾಗಂ ಪ್ರಯಚ್ಛಂತಿ ನಾಗಾಃ ಪರ್ವಣಿ ಪರ್ವಣಿ ।
ಗೋಪೀಥಾಯಾತ್ಮನಃ ಸರ್ವೇ ಸುಪರ್ಣಾಯ ಮಹಾತ್ಮನೇ ॥
ಅನುವಾದ
ಈ ನಿಯಮಕ್ಕನುಸಾರವಾಗಿ ಪ್ರತಿ ಅಮಾವಾಸ್ಯೆ ದಿನ ಸಕಲ ಸರ್ಪಗಳು ತಮ್ಮ ರಕ್ಷಣೆಗಾಗಿ ಮಹಾತ್ಮ ಗರುಡನಿಗೆ ತಮ್ಮ-ತಮ್ಮ ಭಾಗವನ್ನು ಕೊಡುತ್ತಾ ಇದ್ದರು.* ॥3॥
ಟಿಪ್ಪನೀ
- ಇದಕ್ಕೆ ಸಂಬಂಧಪಟ್ಟ ಒಂದು ಕಥೆ ಹೀಗಿದೆ - ಗರುಡನ ತಾಯಿ ವಿನತಾ ಮತ್ತು ಸರ್ಪಗಳ ತಾಯಿ ಕದ್ರುವಿಗೆ ಪರಸ್ಪರ ವೈರವಿತ್ತು. ತಾಯಿಯ ವೈರವನ್ನು ನೆನೆದುಕೊಂಡು ಗರುಡನು ಸಿಕ್ಕಿದ ಸರ್ಪಗಳನ್ನು ತಿನ್ನುತ್ತಾ ಹೋದನು. ಇದರಿಂದ ದುಃಖಿತರಾಗಿ ಎಲ್ಲ ಸರ್ಪಗಳು ಬ್ರಹ್ಮದೇವರಿಗೆ ಶರಣಾದವು. ಆಗ ಬ್ರಹ್ಮದೇವರು - ಪ್ರತಿಯೊಂದು ಅಮಾವಾಸ್ಯೆಗೆ ಪ್ರತಿಯೊಂದು ಸರ್ಪಪರಿವಾರದವರು ಗರುಡನಿಗೆ ಒಂದು ಸರ್ಪವನ್ನು ಬಲಿಕೊಡುತ್ತಾ ಬರಬೇಕೆಂಬ ನಿಯಮವನ್ನು ಮಾಡಿದರು.
(ಶ್ಲೋಕ-4)
ಮೂಲಮ್
ವಿಷವೀರ್ಯಮದಾವಿಷ್ಟಃ ಕಾದ್ರವೇಯಸ್ತು ಕಾಲಿಯಃ ।
ಕದರ್ಥೀಕೃತ್ಯ ಗರುಡಂ ಸ್ವಯಂ ತಂ ಬುಭುಜೇ ಬಲಿಮ್ ॥
ಅನುವಾದ
ಆ ಸರ್ಪಗಳಲ್ಲಿ ಕದ್ರುವಿನ ಪುತ್ರನಾದ ಕಾಲಿಯನಾಗನು ತನ್ನ ವಿಷಬಲದ ಗರ್ವದಿಂದ ಉನ್ಮತ್ತನಾಗಿದ್ದನು. ಅವನು ಗರುಡನನ್ನು ತಿರಸ್ಕರಿಸಿ ಸ್ವತಃ ಬಲಿಕೊಡುವುದಿರಲಿ, ಬೇರೆ ಸರ್ಪಗಳು ಗರುಡನಿಗಾಗಿ ಕೊಟ್ಟ ಬಲಿಯನ್ನು ತಿಂದುಬಿಡುತ್ತಿದ್ದನು. ॥4॥
(ಶ್ಲೋಕ-5)
ಮೂಲಮ್
ತಚ್ಛ್ರುತ್ವಾ ಕುಪಿತೋ ರಾಜನ್ಭಗವಾನ್ಭಗವತ್ಪ್ರಿಯಃ ।
ವಿಜಿಘಾಂಸುರ್ಮಹಾವೇಗಃ ಕಾಲಿಯಂ ಸಮುಪಾದ್ರವತ್ ॥
ಅನುವಾದ
ಪರೀಕ್ಷಿತನೇ! ಇದನ್ನು ತಿಳಿದ ಭಗವಂತನ ಪ್ರಿಯಪಾರ್ಷದನಾದ ಶಕ್ತಿಶಾಲಿ ಗರುಡನಿಗೆ ಭಾರೀ ಸಿಟ್ಟು ಬಂತು. ಅದಕ್ಕಾಗಿ ಅವನು ಕಾಲಿಯನಾಗವನ್ನು ಕೊಂದು ಹಾಕುವ ವಿಚಾರದಿಂದ ಅತಿವೇಗದಿಂದ ಅವನ ಮೇಲೆ ಆಕ್ರಮಣ ಮಾಡಿದನು. ॥5॥
(ಶ್ಲೋಕ-6)
ಮೂಲಮ್
ತಮಾಪತಂತಂ ತರಸಾ ವಿಷಾಯುಧಃ
ಪ್ರತ್ಯಭ್ಯಯಾದುಚ್ಛ್ರಿತನೈಕಮಸ್ತಕಃ ।
ದದ್ಭಿಃ ಸುಪರ್ಣಂ ವ್ಯದಶದ್ದದಾಯುಧಃ
ಕರಾಲಜಿಹ್ವೋಚ್ಛ್ವಸಿತೋಗ್ರಲೋಚನಃ ॥
ಅನುವಾದ
ವಿಷಧರನಾದ ಕಾಲಿಯನು-ಗರುಡನು ತನ್ನ ಮೇಲೆ ಆಕ್ರಮಿಸುತ್ತಿರುವುದನ್ನು ನೋಡಿದಾಗ ಅವನು ತನ್ನ ನೂರೊಂದು ಹೆಡೆಗಳಿಂದ ಕಚ್ಚಲು ಅವನ ಮೇಲೆ ಎರಗಿದನು. ವಿಷವಿರುವ ಹಲ್ಲುಗಳೇ ಕಾಲಿಯನ ಶಸ್ತ್ರವಾಗಿತ್ತು. ಅದಕ್ಕಾಗಿ ಆ ಹಲ್ಲುಗಳಿಂದಲೇ ಗರುಡನನ್ನು ಕಚ್ಚತೊಡಗಿದನು. ಆಗ ಅವನು ತನ್ನ ಭಯಂಕರವಾದ ನಾಲಿಗೆಗಳಿಂದ ಕಟವಾಯಿಯನ್ನು ನೆಕ್ಕಿಕೊಳ್ಳುತ್ತಿದ್ದನು. ದೀರ್ಘವಾಗಿ ನಿಟ್ಟಿಸುರುಬಿಡುತ್ತಾ ಭಯಂಕರವಾದ ಕಣ್ಣುಗಳಿಂದ ಗರುಡನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದನು. ॥6॥
(ಶ್ಲೋಕ-7)
ಮೂಲಮ್
ತಂ ತಾರ್ಕ್ಷ್ಯಪುತ್ರಃ ಸ ನಿರಸ್ಯ ಮನ್ಯುಮಾನ್
ಪ್ರಚಂಡವೇಗೋ ಮಧುಸೂದನಾಸನಃ ।
ಪಕ್ಷೇಣ ಸವ್ಯೇನ ಹಿರಣ್ಯರೋಚಿಷಾ
ಜಘಾನ ಕದ್ರೂಸುತಮುಗ್ರವಿಕ್ರಮಃ ॥
ಅನುವಾದ
ತಾರ್ಕ್ಷ್ಯನಂದನ ಗರುಡನು ಭಗವಾನ್ ವಿಷ್ಣುವಿನ ವಾಹನನಾಗಿದ್ದು, ಅವನ ವೇಗ ಪರಾಕ್ರಮಗಳು ಅತುಲನೀಯವಾಗಿತ್ತು. ಕಾಲಿಯ ನಾಗನ ಈ ಉದ್ಧಟತನವನ್ನು ಕಂಡು ಅತ್ಯಂತ ಕುಪಿತನಾಗಿ ಸುವರ್ಣಮಯವಾದ ತನ್ನ ಎಡರೆಕ್ಕೆಯಿಂದ ಜೋರಾಗಿ ನಾಗನನ್ನು ಅಪ್ಪಳಿದನು. ॥7॥
(ಶ್ಲೋಕ-8)
ಮೂಲಮ್
ಸುಪರ್ಣಪಕ್ಷಾಭಿಹತಃ ಕಾಲಿಯೋತೀವ ವಿಹ್ವಲಃ ।
ಹ್ರದಂ ವಿವೇಶ ಕಾಲಿಂದ್ಯಾಸ್ತದಗಮ್ಯಂ ದುರಾಸದಮ್ ॥
ಅನುವಾದ
ಅವನ ಪಕ್ಷಾಘಾತದಿಂದ ಕಾಳಿಯ ನಾಗನು ಗಾಯಗೊಂಡನು. ಅವನು ಗಾಬರಿಗೊಂಡು ಅಲ್ಲಿಂದ ಓಡಿಹೋಗಿ ಯಮುನೆಯ ಮಡುವಿಗೆ ಬಂದು ನೆಲೆಸಿದನು. ಯಮುನೆಯ ಈ ಕುಂಡವು ಗರುಡನಿಗೆ ಅಗಮ್ಯವಾಗಿತ್ತು. ಮೇಲಾಗಿ ಆ ಕುಂಡವು ಬೇರೆಯವರು ಪ್ರವೇಶಿಸಲಾಗದಷ್ಟು ಆಳವಾಗಿತ್ತು. ॥8॥
(ಶ್ಲೋಕ-9)
ಮೂಲಮ್
ತತ್ರೈಕದಾ ಜಲಚರಂ ಗರುಡೋ ಭಕ್ಷ್ಯಮೀಪ್ಸಿತಮ್ ।
ನಿವಾರಿತಃ ಸೌಭರಿಣಾ ಪ್ರಸಹ್ಯ ಕ್ಷುಧಿತೋಹರತ್ ॥
ಅನುವಾದ
ಪರೀಕ್ಷಿತನೇ! ಇದೇ ಸ್ಥಳದಲ್ಲಿ ಒಂದುದಿನ ಹಸಿದಿರುವ ಗರುಡನು ತಪಸ್ವೀ ಸೌಭರಿಋಷಿಗಳು ತಡೆದರೂ ತನಗೆ ಪ್ರಿಯಭಕ್ಷ್ಯವಾದ ಮೀನುಗಳನ್ನು ಬಲವಂತವಾಗಿ ಸೆಳೆದುಹಿಡಿದು ತಿಂದುಬಿಟ್ಟನು. ॥9॥
(ಶ್ಲೋಕ-10)
ಮೂಲಮ್
ಮೀನಾನ್ಸುದುಃಖಿತಾನ್ ದೃಷ್ಟ್ವಾ ದೀನಾನ್ಮೀನಪತೌ ಹತೇ ।
ಕೃಪಯಾ ಸೌಭರಿಃ ಪ್ರಾಹ ತತ್ರತ್ಯಕ್ಷೇಮಮಾಚರನ್ ॥
ಅನುವಾದ
ತಮಗೆ ಮುಖಂಡನಾಗಿದ್ದ ಮಹಾಮತ್ಸ್ಯವು ಹೀಗೆ ವಿನಾಶವಾಗಲು ಅಲ್ಲಿದ್ದ ಮೀನುಗಳಿಗೆ ಬಹಳ ದುಃಖವುಂಟಾಯಿತು. ಬಹಳ ದೈನ್ಯಂದಿನ ದುಃಖಿಸುತ್ತಿದ್ದ ಆ ಮೀನುಗಳನ್ನು ನೋಡಿ ಪರಮ ದಯಾಳುವಾದ ಸೌಭರಿಮುನಿಯು ಅವುಗಳ ಒಳಿತಿಗಾಗಿ ಗರುಡನಿಗೆ ಶಾಪವಿತ್ತರು. ॥10॥
(ಶ್ಲೋಕ-11)
ಮೂಲಮ್
ಅತ್ರ ಪ್ರವಿಶ್ಯ ಗರುಡೋ ಯದಿ ಮತ್ಸ್ಯಾನ್ಸಖಾದತಿ ।
ಸದ್ಯಃ ಪ್ರಾಣೈರ್ವಿಯುಜ್ಯೇತ ಸತ್ಯಮೇತದ್ಬ್ರವೀಮ್ಯಹಮ್ ॥
ಅನುವಾದ
ಮುಂದೆ ಗರುಡ ನೇನಾದರು ಈ ಮಡುವನ್ನು ಪ್ರವೇಶಿಸಿ ಮೀನುಗಳನ್ನು ತಿಂದನಾದರೆ ಅವನು ಒಡನೆಯೇ ಪ್ರಾಣಕಳೆದುಕೊಳ್ಳುತ್ತಾನೆ. ಈ ಮಾತನ್ನು ನಾನು ಸತ್ಯವಾಗಿ ಹೇಳುತ್ತಿದ್ದೇನೆ. ॥11॥
(ಶ್ಲೋಕ-12)
ಮೂಲಮ್
ತಂ ಕಾಲಿಯಃ ಪರಂ ವೇದ ನಾನ್ಯಃ ಕಶ್ಚನ ಲೇಲಿಹಃ ।
ಅವಾತ್ಸೀದ್ಗರುಡಾದ್ಭೀತಃ ಕೃಷ್ಣೇನ ಚ ವಿವಾಸಿತಃ ॥
ಅನುವಾದ
ಪರೀಕ್ಷಿತನೇ! ಮಹರ್ಷಿ ಸೌಭರಿಯ ಈ ಶಾಪ ವೃತ್ತಾಂತವು ಕಾಲಿಯನಾಗನಲ್ಲದೆ ಬೇರೆ ಯಾವ ಸರ್ಪವೂ ತಿಳಿದಿರಲಿಲ್ಲ. ಅದಕ್ಕಾಗಿ ಅವನು ಗರುಡನ ಭಯದಿಂದ ಅಲ್ಲಿ ನೆಲೆಸಿದ್ದನು. ಈಗ ಭಗವಾನ್ ಶ್ರೀಕೃಷ್ಣನು ಅವನನ್ನು ನಿರ್ಭಯನನ್ನಾಗಿಸಿ ಅಲ್ಲಿಂದ ರಮಣಕ ದ್ವೀಪಕ್ಕೆ ಕಳಿಸಿ ಬಿಟ್ಟನು. ॥12॥
(ಶ್ಲೋಕ-13)
ಮೂಲಮ್
ಕೃಷ್ಣಂ ಹ್ರದಾದ್ವಿನಿಷ್ಕ್ರಾಂತಂ ದಿವ್ಯಸ್ರಗ್ಗಂಧವಾಸಸಮ್ ।
ಮಹಾಮಣಿಗಣಾಕೀರ್ಣಂ ಜಾಂಬೂನದಪರಿಷ್ಕೃತಮ್ ॥
ಅನುವಾದ
ಪರೀಕ್ಷಿತನೇ! ಇತ್ತಲಾಗಿ ಶ್ರೀಕೃಷ್ಣನು ನಾಗಪತ್ನಿಯರಿಂದ ಕೊಡಲ್ಪಟ್ಟ ದಿವ್ಯವಾದ ಮಾಲೆ-ಗಂಧ-ವಸ್ತ್ರ ಬಹುಮೂಲ್ಯವಾದ ಮಣಿಗಳು-ಸುವರ್ಣಮಯ ಆಭರಣಗಳು-ಇವುಗಳಿಂದ ಅಲಂಕೃತನಾಗಿ ಆ ಮಡುವಿನಿಂದ ಹೊರಕ್ಕೆ ಬಂದನು. ॥13॥
(ಶ್ಲೋಕ-14)
ಮೂಲಮ್
ಉಪಲಭ್ಯೋತ್ಥಿತಾಃ ಸರ್ವೇ ಲಬ್ಧಪ್ರಾಣಾ ಇವಾಸವಃ ।
ಪ್ರಮೋದನಿಭೃತಾತ್ಮಾನೋ ಗೋಪಾಃ ಪ್ರೀತ್ಯಾಭಿರೇಭಿರೇ ॥
ಅನುವಾದ
ಅವನನ್ನು ನೋಡಿದೊಡನೆಯೇ-ಪ್ರಾಣಗಳನ್ನು ಪಡೆದ ಇಂದ್ರಿಯಗಳು ಚೇತನವಾಗುವಂತೆ ಎಲ್ಲ ವ್ರಜವಾಸಿಗಳು ಎದ್ದುನಿಂತರು. ಸಮಸ್ತ ಗೋಪರ ಹೃದಯ ಆನಂದದಿಂದ ತುಂಬಿಹೋಯಿತು. ಅವರು ಅತ್ಯಂತ ಪ್ರೇಮ ಮತ್ತು ಆನಂದದಿಂದ ಬಾಲಕೃಷ್ಣನನ್ನು ಬಾಚಿ ತಬ್ಬಿಕೊಂಡರು. ॥14॥
(ಶ್ಲೋಕ-15)
ಮೂಲಮ್
ಯಶೋದಾ ರೋಹಿಣೀ ನಂದೋ ಗೋಪ್ಯೋ ಗೋಪಾಶ್ಚ ಕೌರವ ।
ಕೃಷ್ಣಂ ಸಮೇತ್ಯ ಲಬ್ಧೇಹಾ ಆಸಲ್ಲಬ್ಧಮನೋರಥಾಃ ॥
ಅನುವಾದ
ಪರೀಕ್ಷಿತನೇ! ಯಶೋದೆ, ರೋಹಿಣಿ, ನಂದಗೋಪ, ಗೋಪ-ಗೋಪಿಯರು ಎಲ್ಲರೂ ಶ್ರೀಕೃಷ್ಣನನ್ನು ಪಡೆದುಕೊಂಡು ನವಚೈತನ್ಯವನ್ನು ಹೊಂದಿದರು. ಅವರ ಮನೋರಥ ಸಫಲವಾಯಿತು. ॥15॥
(ಶ್ಲೋಕ-16)
ಮೂಲಮ್
ರಾಮಶ್ಚಾಚ್ಯುತಮಾಲಿಂಗ್ಯ ಜಹಾಸಾಸ್ಯಾನುಭಾವವಿತ್ ।
ನಗಾ ಗಾವೋ ವೃಷಾ ವತ್ಸಾ ಲೇಭಿರೇ ಪರಮಾಂ ಮುದಮ್ ॥
ಅನುವಾದ
ಬಲರಾಮನಿಗಾದರೋ ಭಗವಂತನ ಪ್ರಭಾವವು ತಿಳಿದೇ ಇತ್ತು. ಅವನು ಶ್ರೀಕೃಷ್ಣನನ್ನು ಗಾಢವಾಗಿ ಆಲಿಂಗಿಸಿಕೊಂಡು ನಗತೊಡಗಿದನು. ಶ್ರೀಕೃಷ್ಣನ ಪುನರಾಗಮನದಿಂದ ಪರ್ವತ, ವೃಕ್ಷಗಳು, ಹಸುಗಳು, ಎತ್ತುಗಳು, ಕರುಗಳುಆನಂದಿಸಿದವು. ॥16॥
(ಶ್ಲೋಕ-17)
ಮೂಲಮ್
ನಂದಂ ವಿಪ್ರಾಃ ಸಮಾಗತ್ಯ ಗುರವಃ ಸಕಲತ್ರಕಾಃ ।
ಊಚುಸ್ತೇ ಕಾಲಿಯಗ್ರಸ್ತೋ ದಿಷ್ಟ್ಯಾ ಮುಕ್ತಸ್ತವಾತ್ಮಜಃ ॥
ಅನುವಾದ
ಗೋಪರ ಕುಲಗುರು ಬ್ರಾಹ್ಮಣರು ತಮ್ಮ ಪತ್ನಿಯರೊಂದಿಗೆ ನಂದಗೋಪನ ಬಳಿಗೆ ಬಂದು - ನಂದಮಹಾರಾಜ! ನಿನ್ನ ಬಾಲಕನನ್ನು ಕಾಳಿಯ ನಾಗನು ಹಿಡಿದಿದ್ದನು. ಅವನು ಸೌಭಾಗ್ಯ ವಶದಿಂದ ಬಿಡುಗಡೆ ಹೊಂದಿಬಂದನು. ॥17॥
(ಶ್ಲೋಕ-18)
ಮೂಲಮ್
ದೇಹಿ ದಾನಂ ದ್ವಿಜಾತೀನಾಂ ಕೃಷ್ಣನಿರ್ಮುಕ್ತಿಹೇತವೇ ।
ನಂದಃ ಪ್ರೀತಮನಾ ರಾಜನ್ಗಾಃ ಸುವರ್ಣಂ ತದಾದಿಶತ್ ॥
ಅನುವಾದ
ಶ್ರೀಕೃಷ್ಣನು ಮೃತ್ಯು ಮುಖದಿಂದ ಬದುಕಿಬಂದ ಕಾರಣ ನೀನು ಬ್ರಾಹ್ಮಣರಿಗೆ ಯಥೇಚ್ಛವಾಗಿ ದಾನಮಾಡು. ಪರೀಕ್ಷಿತನೇ! ಬ್ರಾಹ್ಮಣರ ಮಾತನ್ನು ಕೇಳಿ ನಂದಗೋಪನಿಗೆ ಪರಮಾನಂದವಾಯಿತು. ಅವನು ಬಹಳಷ್ಟು ಚಿನ್ನ, ಹಸುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದನು. ॥18॥
(ಶ್ಲೋಕ-19)
ಮೂಲಮ್
ಯಶೋದಾಪಿ ಮಹಾಭಾಗಾ ನಷ್ಟಲಬ್ಧಪ್ರಜಾ ಸತೀ ।
ಪರಿಷ್ವಜ್ಯಾಂಕಮಾರೋಪ್ಯ ಮುಮೋಚಾಶ್ರುಕಲಾಂ ಮುಹುಃ ॥
ಅನುವಾದ
ಪರಮ ಸೌಭಾಗ್ಯವತಿಯಾದ ಯಶೋದಾದೇವಿಯು ಕಾಲನ ದವಡೆಯಿಂದ ಬದುಕಿ ಬಂದ ತನ್ನ ಮುದ್ದುಕಂದನಾದ ಕೃಷ್ಣನನ್ನು ತೊಡೆಯಲ್ಲೆತ್ತಿಕೊಂಡು, ಬಾಚಿ ತಬ್ಬಿಕೊಂಡಳು. ಆಕೆಯ ಕಣ್ಣುಗಳಿಂದ ಸುರಿದ ಆನಂದಾಶ್ರುಗಳು ಕೃಷ್ಣನನ್ನು ತೋಯಿಸಿದವು. ॥19॥
(ಶ್ಲೋಕ-20)
ಮೂಲಮ್
ತಾಂ ರಾತ್ರಿಂ ತತ್ರ ರಾಜೇಂದ್ರ ಕ್ಷುತ್ತೃಡ್ಭ್ಯಾಂ ಶ್ರಮಕರ್ಶಿತಾಃ ।
ಊಷುರ್ವ್ರಜೌಕಸೋ ಗಾವಃ ಕಾಲಿಂದ್ಯಾ ಉಪಕೂಲತಃ ॥
ಅನುವಾದ
ರಾಜೇಂದ್ರನೇ! ವ್ರಜವಾಸಿಗಳು ಮತ್ತು ಗೋವುಗಳು ಬಹಳ ಆಯಾಸಗೊಂಡಿದ್ದರು. ಮೇಲಾಗಿ ಹಸಿವು-ಬಾಯಾರಿಕೆಯಿಂದ ಬಳಲಿದ್ದರು. ಆದುದರಿಂದ ಅಂದಿನ ರಾತ್ರಿಯಲ್ಲಿ ಅವರು ವ್ರಜಕ್ಕೆ ಹೋಗದೆ, ಅಲ್ಲೇ ಯಮುನಾ ತೀರದಲ್ಲಿ ಮಲಗಿದ್ದರು. ॥20॥
(ಶ್ಲೋಕ-21)
ಮೂಲಮ್
ತದಾ ಶುಚಿನವನೋದ್ಭೂತೋ ದಾವಾಗ್ನಿಃ ಸರ್ವತೋ ವ್ರಜಮ್ ।
ಸುಪ್ತಂ ನಿಶೀಥ ಆವೃತ್ಯ ಪ್ರದಗ್ಧುಮುಪಚಕ್ರಮೇ ॥
ಅನುವಾದ
ಅದು ಬೇಸಿಗೆಯ ಕಾಲವಾಗಿತ್ತು. ಮರ-ಗಿಡಗಳೆಲ್ಲವೂ ಒಣಗಿ ಹೋಗಿದ್ದವು. ಅರ್ಧ ರಾತ್ರಿಯ ಸಮಯದಲ್ಲಿ ಅವಕ್ಕೆ ಬೆಂಕಿ ಹತ್ತಿಕೊಂಡಿತು. ಆ ಬೆಂಕಿಯು ಮಲಗಿರುವ ವ್ರಜವಾಸಿಗಳನ್ನು ಸುತ್ತುವರೆದು ಅವರನ್ನು ಸುಡತೊಡಗಿತು. ॥21॥
(ಶ್ಲೋಕ-22)
ಮೂಲಮ್
ತತ ಉತ್ಥಾಯ ಸಂಭ್ರಾಂತಾ ದಹ್ಯಮಾನಾ ವ್ರಜೌಕಸಃ ।
ಕೃಷ್ಣಂ ಯಯುಸ್ತೇ ಶರಣಂ ಮಾಯಾಮನುಜಮೀಶ್ವರಮ್ ॥
ಅನುವಾದ
ಬೆಂಕಿಯ ಶಾಖ ತಗಲುತ್ತಲೇ ವ್ರಜವಾಸಿಗಳು ಗಾಬರಿಯಿಂದ ಎದ್ದು ನಿಂತು ಲೀಲಾಮಾನುಷವಿಗ್ರಹನಾದ ಭಗವಾನ್ ಶ್ರೀಕೃಷ್ಣನಿಗೆ ಶರಣು ಹೋದರು. ॥22॥
(ಶ್ಲೋಕ-23)
ಮೂಲಮ್
ಕೃಷ್ಣ ಕೃಷ್ಣ ಮಹಾಭಾಗ ಹೇ ರಾಮಾಮಿತವಿಕ್ರಮ ।
ಏಷ ಘೋರತಮೋ ವಹ್ನಿಸ್ತಾವಕಾನ್ ಗ್ರಸತೇ ಹಿ ನಃ ॥
ಅನುವಾದ
‘‘ಕೃಷ್ಣ! ಮುಕುಂದ! ಮಹಾಭಾಗ್ಯಶಾಲಿಯೇ! ಅಮಿತ ವಿಕ್ರಮನಾದ ಬಲರಾಮನೇ! ನಿಮ್ಮಿಬ್ಬರ ಬಲಪರಾಕ್ರಮಗಳು ಅಮಿತವಾಗಿವೆ. ನೋಡಿ! ನೋಡಿ! ಈ ಭಯಂಕರ ಕಾಡ್ಗಿಚ್ಚು ನಿಮ್ಮ ಸ್ವಜನ ಸಂಬಂಧಿಗಳಾದ ನಮ್ಮನ್ನು ಸುಡಲು ಬಯಸುತ್ತಿದೆ. ॥23॥
(ಶ್ಲೋಕ-24)
ಮೂಲಮ್
ಸುದುಸ್ತರಾನ್ನಃ ಸ್ವಾನ್ಪಾಹಿ ಕಾಲಾಗ್ನೇಃ ಸುಹೃದಃ ಪ್ರಭೋ ।
ನ ಶಕ್ನುಮಸ್ತ್ವಚ್ಚರಣಂ ಸಂತ್ಯಕ್ತುಮಕುತೋಭಯಮ್ ॥
ಅನುವಾದ
ನೀವು ಸರ್ವಸಮರ್ಥರಾಗಿರುವಿರಿ. ನಾವು ನಿಮ್ಮ ಸುಹೃದರಾಗಿದ್ದೇವೆ. ಅದರಿಂದ ಈ ಪ್ರಳಯಾಗ್ನಿಯಿಂದ ರಕ್ಷಿಸಿರಿ. ಪ್ರಭೋ! ನಾವು ಮೃತ್ಯುವಿಗೆ ಹೆದರುವುದಿಲ್ಲ. ಆದರೆ ಅಪಾಯ ರಹಿತವಾದ ನಿನ್ನ ದಿವ್ಯ ಚರಣಕಮಲಗಳನ್ನು ಬಿಟ್ಟು ಹೋಗಲು ನಾವು ಸಮರ್ಥರಾಗಿಲ್ಲ.’’ ॥24॥
(ಶ್ಲೋಕ-25)
ಮೂಲಮ್
ಇತ್ಥಂ ಸ್ವಜನವೈಕ್ಲವ್ಯಂ ನಿರೀಕ್ಷ್ಯ ಜಗದೀಶ್ವರಃ ।
ತಮಗ್ನಿಮಪಿಬತ್ತೀವ್ರಮನಂತೋನಂತ ಶಕ್ತಿಧೃಕ್ ॥
ಅನುವಾದ
ಭಗವಂತನು ಅನಂತನಾಗಿದ್ದಾನೆ. ಅವನು ಅನಂತ ಶಕ್ತಿಗಳನ್ನು ಧರಿಸಿರುವನು. ಆ ಜಗದೀಶ್ವರ ಭಗವಾನ್ ಶ್ರೀಕೃಷ್ಣನು ತನ್ನ ಸ್ವಜನರು ಹೀಗೆ ದುಃಖಿತರಾಗಿರುವುದನ್ನು ನೋಡಿದಾಗ ಅವನು ಆ ಭಯಂಕರ ಕಾಡುಗಿಚ್ಚನ್ನು ಕುಡಿದುಬಿಟ್ಟನು. ॥25॥
ಅನುವಾದ (ಸಮಾಪ್ತಿಃ)
ಹದಿನೇಳನೆಯ ಅಧ್ಯಾಯವು ಮುಗಿಯಿತು. ॥17॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ದಾವಾಗ್ನಿಮೋಚನಂ ನಾಮ ಸಪ್ತದಶೋಽಧ್ಯಾಯಃ ॥17॥