[ಹದಿನೇಳನೆಯ ಅಧ್ಯಾಯ]
ಭಾಗಸೂಚನಾ
ಕ್ಷತ್ರವೃದ್ಧ , ರಜಿ ಮೊದಲಾದ ರಾಜರ ವಂಶದ ವರ್ಣನೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಯಃ ಪುರೂರವಸಃ ಪುತ್ರ ಆಯುಸ್ತಸ್ಯಾಭವನ್ಸುತಾಃ ।
ನಹುಷಃ ಕ್ಷತ್ರವೃದ್ಧಶ್ಚ ರಜೀ ರಂಭಶ್ಚ ವೀರ್ಯವಾನ್ ॥
(ಶ್ಲೋಕ-2)
ಮೂಲಮ್
ಅನೇನಾ ಇತಿ ರಾಜೇಂದ್ರ ಶೃಣು ಕ್ಷತ್ರವೃಧೋಽನ್ವಯಮ್ ।
ಕ್ಷತ್ರವೃದ್ಧಸುತಸ್ಯಾಸನ್ಸುಹೋತ್ರಸ್ಯಾತ್ಮಜಾಸಯಃ ॥
(ಶ್ಲೋಕ-3)
ಮೂಲಮ್
ಕಾಶ್ಯಃ ಕುಶೋ ಗೃತ್ಸಮದ ಇತಿ ಗೃತ್ಸಮದಾದಭೂತ್ ।
ಶುನಕಃ ಶೌನಕೋ ಯಸ್ಯ ಬಹ್ವ ಚಪ್ರವರೋ ಮುನಿಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಪುರೂರವನಿಗೆ ಆಯುವೆಂಬ ಓರ್ವ ಮಗನಿದ್ದನು. ಅವನಿಗೆ ನಹುಷ, ಕ್ಷತ್ರವೃದ್ಧ, ರಜಿ, ಶಕ್ತಿಶಾಲಿರಂಭ ಮತ್ತು ಅನೇನಾ ಎಂಬ ಐದು ಮಕ್ಕಳಿದ್ದರು. ಈಗ ಕ್ಷತ್ರವೃದ್ಧನ ವಂಶವನ್ನು ವಿವರಿಸುತ್ತೇನೆ, ಕೇಳು. ಕ್ಷತ್ರವೃದ್ಧನಿಗೆ ಸುಹೋತ್ರನೆಂಬ ಪುತ್ರನಿದ್ದನು. ಸುಹೋತ್ರನಿಗೆ ಕಾಶ್ಯ, ಕುಶ, ಗೃತ್ಸಮದರೆಂಬ ಮೂವರು ಪುತ್ರರಾದರು. ಗೃತ್ಸಮದನಿಗೆ ಶುನಕ ಹುಟ್ಟಿದನು. ಈ ಶುನಕನ ಪುತ್ರನೇ ಋಗ್ವೇದಿಗಳಲ್ಲಿ ಶ್ರೇಷ್ಠ ಮುನಿವರ ಶೌನಕನು. ॥1-3॥
(ಶ್ಲೋಕ-4)
ಮೂಲಮ್
ಕಾಶ್ಯಸ್ಯ ಕಾಶಿಸ್ತತ್ಪುತ್ರೋ ರಾಷ್ಟ್ರೋ ದೀರ್ಘತಮಃಪಿತಾ ।
ಧನ್ವಂತರಿರ್ದೈರ್ಘತಮ ಆಯುರ್ವೇದಪ್ರವರ್ತಕಃ ॥
ಅನುವಾದ
ಕಾಶ್ಯನ ಪುತ್ರ ಕಾಶಿ, ಕಾಶಿಗೆ ರಾಷ್ಟ್ರ, ರಾಷ್ಟ್ರನಿಗೆ ದೀರ್ಘತಮಾ ಮತ್ತು ದೀರ್ಘತಮನಿಗೆ ಧನ್ವಂತರಿ ಎಂಬ ಪುತ್ರ ಹುಟ್ಟಿದನು. ಇವನೇ ಆಯುರ್ವೇದದ ಪ್ರವರ್ತಕನಾಗಿದ್ದಾನೆ. ॥4॥
(ಶ್ಲೋಕ-5)
ಮೂಲಮ್
ಯಜ್ಞಭುಗ್ವಾಸುದೇವಾಂಶಃ ಸ್ಮೃತಮಾತ್ರಾರ್ತಿನಾಶನಃ ।
ತತ್ಪುತ್ರಃ ಕೇತುಮಾನಸ್ಯ ಜಜ್ಞೇ ಭೀಮರಥಸ್ತತಃ ॥
ಅನುವಾದ
ಇವನು ಯಜ್ಞಭಾಗದ ಭೋಕ್ತೃವೂ ಭಗವಾನ್ ವಾಸುದೇವನ ಅಂಶನಾಗಿರುವನು. ಇವನ ಸ್ಮರಣಮಾತ್ರದಿಂದಲೇ ಎಲ್ಲ ಪ್ರಕಾರದ ರೋಗಗಳು ದೂರವಾಗುತ್ತವೆ. ಧನ್ವಂತರಿಗೆ ಕೇತುಮಂತ ಪುತ್ರನಾದನು. ಕೇತುಮಂತನಿಗೆ ಭೀಮರಥನು ಪುತ್ರನಾದನು. ॥5॥
(ಶ್ಲೋಕ-6)
ಮೂಲಮ್
ದಿವೋದಾಸೋ ದ್ಯುಮಾಂಸ್ತಸ್ಮಾತ್ಪ್ರತರ್ದನ ಇತಿ ಸ್ಮೃತಃ ।
ಸ ಏವ ಶತ್ರುಜಿದ್ವತ್ಸ ಋತಧ್ವಜ ಇತೀರಿತಃ ।
ತಥಾ ಕುವಲಯಾಶ್ವೇತಿ ಪ್ರೋಕ್ತೋಽಲರ್ಕಾದಯಸ್ತತಃ ॥
ಅನುವಾದ
ಭೀಮರಥನಿಗೆ ದಿವೋದಾಸನು, ದಿವೋದಾಸನಿಗೆ ದ್ಯುಮಾನ್ ಆದನು. ಇವನಿಗೆ ಪ್ರತರ್ದನ ಎಂಬ ಇನ್ನೊಂದು ಹೆಸರೂ ಇದೆ. ಈ ದ್ಯುಮಂತನೇ ಶತ್ರುಜಿತ್, ವತ್ಸ, ಋತಧ್ವಜ ಮತ್ತು ಕುವಲಯಾಶ್ವ ಎಂಬ ಹೆಸರುಗಳಿಂದಲೂ ಪ್ರಸಿದ್ಧನಾಗಿದ್ದಾನೆ. ದ್ಯುಮಂತನಿಗೆ ಅಲರ್ಕನೇ ಮೊದಲಾದ ಪುತ್ರರಾದರು. ॥6॥
(ಶ್ಲೋಕ-7)
ಮೂಲಮ್
ಷಷ್ಟಿವರ್ಷಸಹಸ್ರಾಣಿ ಷಷ್ಟಿವರ್ಷಶತಾನಿ ಚ ।
ನಾಲರ್ಕಾದಪರೋ ರಾಜನ್ಮೇದಿನೀಂ ಬುಭುಜೇ ಯುವಾ ॥
ಅನುವಾದ
ಪರೀಕ್ಷಿತನೇ! ಅಲರ್ಕನಲ್ಲದೆ ಬೇರೆ ಯಾವ ರಾಜನೂ ಅರವತ್ತಾರು ಸಾವಿರ ವರ್ಷಗಳವರೆಗೆ ಯುವಕನಾಗಿದ್ದು ರಾಜ್ಯವನ್ನು ಆಳಲಿಲ್ಲ.॥7॥
(ಶ್ಲೋಕ-8)
ಮೂಲಮ್
ಅಲರ್ಕಾತ್ಸಂತತಿಸ್ತಸ್ಮಾತ್ಸುನೀತೋಽಥ ಸುಕೇತನಃ ।
ಧರ್ಮಕೇತುಃ ಸುತಸ್ತಸ್ಮಾತ್ ಸತ್ಯಕೇತುರಜಾಯತ ॥
ಅನುವಾದ
ಅಲರ್ಕನ ಪುತ್ರನು ಸಂತತಿ. ಸಂತತಿಗೆ ಸುನೀಥ, ಸುನೀಥನಿಗೆ ಸುಕೇತನ, ಸುಕೇತನನಿಗೆ ಧರ್ಮಕೇತು, ಧರ್ಮಕೇತುವಿಗೆ ಸತ್ಯಕೇತು ಹುಟ್ಟಿದನು.॥8॥
(ಶ್ಲೋಕ-9)
ಮೂಲಮ್
ಧೃಷ್ಟಕೇತುಃ ಸುತಸ್ತಸ್ಮಾತ್ಸುಕುಮಾರಃ ಕ್ಷಿತೀಶ್ವರಃ ।
ವೀತಿಹೋತ್ರಸ್ಯ ಭರ್ಗೋಽತೋ ಭಾರ್ಗಭೂಮಿರಭೂನ್ನೃಪಃ ॥
ಅನುವಾದ
ಸತ್ಯಕೇತುವಿಗೆ ಧೃಷ್ಟಕೇತು, ಧೃಷ್ಟಕೇತು ವಿನಿಂದ ರಾಜಾಸುಕುಮಾರನು, ಸುಕುಮಾರನಿಂದ ವೀತಿ ಹೋತ್ರ, ವೀತಿಹೋತ್ರನಿಂದ ಭರ್ಗ ಮತ್ತು ಭರ್ಗನಿಂದ ರಾಜಾ ಭಾರ್ಗಭೂಮಿಯ ಜನ್ಮವಾಯಿತು.॥9॥
(ಶ್ಲೋಕ-10)
ಮೂಲಮ್
ಇತೀಮೇ ಕಾಶಯೋ ಭೂಪಾಃ ಕ್ಷತ್ರವೃದ್ಧಾನ್ವಯಾಯಿನಃ ।
ರಂಭಸ್ಯ ರಭಸಃ ಪುತ್ರೋ ಗಂಭೀರಶ್ಚಾಕ್ರಿಯಸ್ತತಃ ॥
ಅನುವಾದ
ಇವರೆಲ್ಲರೂ ಕ್ಷತ್ರವೃದ್ಧನ ವಂಶದಲ್ಲಿ ಕಾಶಿಯಿಂದ ಉತ್ಪನ್ನರಾದ ರಾಜರು. ರಂಭನಿಗೆ ರಭಸನೆಂಬ ಪುತ್ರನಿದ್ದನು. ಅವನಿಂದ ಗಂಭೀರ, ಗಂಭೀರನಿಂದ ಅಕ್ರಿಯನ ಜನ್ಮವಾಯಿತು.॥10॥
(ಶ್ಲೋಕ-11)
ಮೂಲಮ್
ತಸ್ಯ ಕ್ಷೇತ್ರೇ ಬ್ರಹ್ಮ ಜಜ್ಞೇ ಶೃಣು ವಂಶಮನೇನಸಃ ।
ಶುದ್ಧಸ್ತತಃ ಶುಚಿಸ್ತಸ್ಮಾತಿಕಕುದ್ಧರ್ಮಸಾರಥಿಃ ॥
ಅನುವಾದ
ಅಕ್ರಿಯನ ಪತ್ನಿಯಿಂದ ಬ್ರಾಹ್ಮಣವಂಶವು ನಡೆಯಿತು. ಈಗ ಅನೇನಾ ಇವನ ವಂಶವನ್ನು ಕೇಳು. ಅನೇನನಿಗೆ ಶುದ್ಧನೆಂಬ ಪುತ್ರನಿದ್ದನು. ಶುದ್ಧನಿಗೆ ಶುಚಿ, ಶುಚಿಗೆ ತ್ರಿಕಕುದ್, ತ್ರಿಕಕುದನಿಗೆ ಧರ್ಮಸಾರಥಿ ಹುಟ್ಟಿದನು.॥11॥
(ಶ್ಲೋಕ-12)
ಮೂಲಮ್
ತತಃ ಶಾಂತರಯೋ ಜಜ್ಞೇ ಕೃತಕೃತ್ಯಃ ಸ ಆತ್ಮವಾನ್ ।
ರಜೇಃ ಪಂಚಶತಾನ್ಯಾಸನ್ಪುತ್ರಾಣಾಮಮಿತೌಜಸಾಮ್ ॥
ಅನುವಾದ
ಧರ್ಮಸಾರಥಿಗೆ ಶಾಂತರಯನೆಂಬ ಪುತ್ರನಿದ್ದನು. ಅವನು ಆತ್ಮಜ್ಞಾನಿಯಾದ್ದರಿಂದ ಕೃತಕೃತ್ಯನಾಗಿದ್ದನು. ಆದ್ದರಿಂದ ಅವನಿಗೆ ಸಂತಾನದ ಇಚ್ಛೆಯಿರಲಿಲ್ಲ. ಪರೀಕ್ಷಿತನೇ! ಆಯುವಿನ ಪುತ್ರ ರಜಿಗೆ ಅತ್ಯಂತ ತೇಜಸ್ವೀ ಐದು ನೂರು ಪುತ್ರರಿದ್ದರು. ॥12॥
(ಶ್ಲೋಕ-13)
ಮೂಲಮ್
ದೇವೈರಭ್ಯರ್ಥಿತೋ ದೈತ್ಯಾನ್ಹತ್ವೇಂದ್ರಾಯಾದದಾದ್ದಿವಮ್ ।
ಇಂದ್ರಸ್ತಸ್ಮೈ ಪುನರ್ದತ್ತ್ವಾ ಗೃಹೀತ್ವಾ ಚರಣೌ ರಜೇಃ ॥
(ಶ್ಲೋಕ-14)
ಮೂಲಮ್
ಆತ್ಮಾನಮರ್ಪಯಾಮಾಸ ಪ್ರಹ್ಲಾದಾದ್ಯರಿಶಂಕಿತಃ ।
ಪಿತರ್ಯುಪರತೇ ಪುತ್ರಾ ಯಾಚಮಾನಾಯ ನೋ ದದುಃ ॥
(ಶ್ಲೋಕ-15)
ಮೂಲಮ್
ತ್ರಿವಿಷ್ಟಪಂ ಮಹೇಂದ್ರಾಯ ಯಜ್ಞಭಾಗಾನ್ಸಮಾದದುಃ ।
ಗುರುಣಾ ಹೂಯಮಾನೇಽಗ್ನೌ ಬಲಭಿತ್ತನಯಾನ್ರಜೇಃ ॥
(ಶ್ಲೋಕ-16)
ಮೂಲಮ್
ಅವಧೀದ್ಭ್ರಂಶಿತಾನ್ಮಾರ್ಗಾನ್ನ ಕಶ್ಚಿದವಶೇಷಿತಃ ।
ಕುಶಾತ್ಪ್ರತಿಃ ಕ್ಷಾತ್ರವೃದ್ಧಾತ್ಸಂಜಯಸ್ತತ್ಸುತೋ ಜಯಃ ॥
ಅನುವಾದ
ದೇವತೆಗಳ ಪ್ರಾರ್ಥನೆಯಿಂದ ರಜಿಯು ದೈತ್ಯರನ್ನು ವಧಿಸಿ ಇಂದ್ರನಿಗೆ ಸ್ವರ್ಗರಾಜ್ಯವನ್ನು ಕೊಟ್ಟನು. ಆದರೆ ಅವನು ಪ್ರಹ್ಲಾದಾದಿ ತನ್ನ ಶತ್ರುಗಳಿಂದ ಭಯ ಗೊಂಡಿದ್ದನು. ಅದಕ್ಕಾಗಿ ಅವನು ಸ್ವರ್ಗವನ್ನು ಪುನಃ ರಜಿಗೇ ಮರಳಿಸಿದನು. ಅವನ ಕಾಲುಹಿಡಿದು ಅವನಿಗೆ ತನ್ನ ರಕ್ಷಣೆಯ ಹೊಣೆಯನ್ನು ಒಪ್ಪಿಸಿದನು. ರಜಿಯ ಮೃತ್ಯುವಾದಾಗ ಇಂದ್ರನು ಬೇಡಿದರೂ ರಜಿಯ ಪುತ್ರರು ಸ್ವರ್ಗವನ್ನು ಮರಳಿಕೊಡಲಿಲ್ಲ. ಅವರು ಸ್ವತಃ ಯಜ್ಞಗಳ ಭಾಗವನ್ನೂ ಪಡೆಯುತ್ತಿದ್ದರು. ಆಗ ಗುರುಗಳಾದ ಬೃಹಸ್ಪತ್ಯಾಚಾರ್ಯರು ಇಂದ್ರನ ಪ್ರಾರ್ಥನೆಯಂತೆ ಅಭಿಚಾರಿಕ ವಿಧಿಯಿಂದ ಹೋಮವನ್ನು ಮಾಡಿದರು. ಇದರಿಂದ ಅವರು ಧರ್ಮಭ್ರಷ್ಟರಾಗಿ ಹೋದರು. ಆಗ ಇಂದ್ರನು ಅನಾಯಾಸವಾಗಿ ಆ ಎಲ್ಲ ರಜಿಯ ಪುತ್ರರನ್ನು ಕೊಂದುಹಾಕಿದನು. ಅವರಲ್ಲಿ ಯಾರೂ ಉಳಿಯಲಿಲ್ಲ. ಕ್ಷತ್ರವೃದ್ಧನ ಮೊಮ್ಮಗ ಕುಶನಿಂದ ಪ್ರತಿ, ಪ್ರತಿಯಿಂದ ಸಂಜಯ, ಸಂಜಯನಿಂದ ಜಯ ಎಂಬ ಮಗನು ಹುಟ್ಟಿದನು. ॥13-16॥
(ಶ್ಲೋಕ-17)
ಮೂಲಮ್
ತತಃ ಕೃತಃ ಕೃತಸ್ಯಾಪಿ ಜಜ್ಞೇ ಹರ್ಯವನೋ ನೃಪಃ ।
ಸಹದೇವಸ್ತತೋ ಹೀನೋ ಜಯಸೇನಸ್ತು ತತ್ಸುತಃ ॥
ಅನುವಾದ
ಜಯನಿಂದ ಕೃತ, ಕೃತನಿಂದ ಹರ್ಯವನ, ಹರ್ಯವನನಿಂದ ಸಹದೇಹ, ಸಹದೇವನಿಂದ ಹೀನ, ಹೀನನಿಂದ ಜಯಸೇನನೆಂಬ ಪುತ್ರನು ಹುಟ್ಟಿದನು. ॥17॥
(ಶ್ಲೋಕ-18)
ಮೂಲಮ್
ಸಂಕೃತಿಸ್ತಸ್ಯ ಚ ಜಯಃ ಕ್ಷತ್ರಧರ್ಮಾ ಮಹಾರಥಃ ।
ಕ್ಷತ್ರವೃದ್ಧಾನ್ವಯಾ ಭೂಪಾಃ ಶೃಣು ವಂಶಂ ಚ ನಾಹುಷಾತ್ ॥
ಅನುವಾದ
ಜಯಸೇನನಿಂದ ಸಂಕೃತಿ, ಸಂಕೃತಿಗೆ ಮಹಾರಥಿ ವೀರ ಶಿರೋಮಣಿ ಜಯನೆಂಬ ಪುತ್ರನಾದನು. ಕ್ಷತ್ರವೃದ್ಧನ ವಂಶ ಪರಂಪರೆಯಲ್ಲಿ ಇಷ್ಟೇ ರಾಜರಾದರು. ಈಗ ನಹುಷನ ವಂಶದ ವರ್ಣನೆಯನ್ನು ಕೇಳು. ॥18॥
ಅನುವಾದ (ಸಮಾಪ್ತಿಃ)
ಹದಿನೇಳನೆಯ ಅಧ್ಯಾಯವು ಮುಗಿಯಿತು. ॥17॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ಚಂದ್ರವಂಶಾನುವರ್ಣನೇ ಸಪ್ತದಶೋಽಧ್ಯಾಯಃ ॥17॥