೧೩

[ಹದಿಮೂರನೆಯ ಅಧ್ಯಾಯ]

ಭಾಗಸೂಚನಾ

ನಿಮಿರಾಜನ ವಂಶದ ವರ್ಣನೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ನಿಮಿರಿಕ್ಷ್ವಾಕುತನಯೋ ವಸಿಷ್ಠಮವೃತರ್ತ್ವಿಜಮ್ ।
ಆರಭ್ಯ ಸತ್ರಂ ಸೋಽಪ್ಯಾಹ ಶಕ್ರೇಣ ಪ್ರಾಗ್ವ ತೋಽಸ್ಮಿ ಭೋಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಇಕ್ಷ್ವಾಕುವಿಗೆ ನಿಮಿ ಎಂಬ ಪುತ್ರನಿದ್ದನು. ಅವನು ಯಜ್ಞವನ್ನು ಪ್ರಾರಂಭಿಸಿ ಮಹರ್ಷಿ ವಸಿಷ್ಠರನ್ನು ಋತ್ವಿಜರನ್ನಾಗಿ ವರಣ ಮಾಡಿದನು. ವಸಿಷ್ಠರು ಹೇಳಿದರು ರಾಜನೇ! ಇಂದ್ರನು ತನ್ನ ಯಜ್ಞಕ್ಕಾಗಿ ನನ್ನನ್ನು ಮೊದಲೇ ವರಣಮಾಡಿರುವನು. ॥1॥

(ಶ್ಲೋಕ-2)

ಮೂಲಮ್

ತಂ ನಿರ್ವರ್ತ್ಯಾಗಮಿಷ್ಯಾಮಿ ತಾವನ್ಮಾಂ ಪ್ರತಿಪಾಲಯ ।
ತೂಷ್ಣಿಮಾಸೀದ್ಗೃಹಪತಿಃ ಸೋಽಪೀಂದ್ರಸ್ಯಾಕರೋನ್ಮಖಮ್ ॥

ಅನುವಾದ

ಅವನ ಯಜ್ಞವನ್ನು ಪೂರೈಸಿ ನಾನು ನಿನ್ನ ಬಳಿಗೆ ಬರುವೆನು. ಅಲ್ಲಿಯವರೆಗೆ ನನ್ನ ಪ್ರತೀಕ್ಷೆ ಮಾಡು. ಈ ಮಾತನ್ನು ಕೇಳಿ ನಿಮಿರಾಜನು ಮೌನವಾಗಿದ್ದನು. ವಸಿಷ್ಠರು ಇಂದ್ರನಿಂದ ಯಜ್ಞವನ್ನು ಮಾಡಿಸಲು ಹೊರಟು ಹೋದರು. ॥2॥

(ಶ್ಲೋಕ-3)

ಮೂಲಮ್

ನಿಮಿಶ್ಚಲಮಿದಂ ವಿದ್ವಾನ್ಸತ್ರಮಾರಭತಾತ್ಮವಾನ್ ।
ಋತ್ವಿಗ್ಭಿರಪರೈಸ್ತಾವನ್ನಾಗಮದ್ಯಾವತಾ ಗುರುಃ ॥

ಅನುವಾದ

ಜೀವನವು ಕ್ಷಣಭಂಗುರವಾದುದರಿಂದ ವಸಿಷ್ಠರಿಗಾಗಿ ಕಾಯುವುದು ಉಚಿತವಲ್ಲವೆಂದು ಭಾವಿಸಿದ ನಿಮಿಯು ವಸಿಷ್ಠರು ಬರುವ ಮೊದಲೇ ಬೇರೆ ಋತ್ವಿಜರನ್ನು ಆಹ್ವಾನಿಸಿ ಯಜ್ಞವನ್ನು ಪ್ರಾರಂಭಿಸಿದನು. ॥3॥

(ಶ್ಲೋಕ-4)

ಮೂಲಮ್

ಶಿಷ್ಯವ್ಯತಿಕ್ರಮಂ ವೀಕ್ಷ್ಯ ನಿರ್ವರ್ತ್ಯ ಗುರುರಾಗತಃ ।
ಅಶಪತ್ಪತತಾದ್ದೇಹೋ ನಿಮೇಃ ಪಂಡಿತಮಾನಿನಃ ॥

ಅನುವಾದ

ಗುರು ವಸಿಷ್ಠರು ಇಂದ್ರನ ಯಜ್ಞವನ್ನು ಮುಗಿಸಿ ಮರಳಿದಾಗ ತನ್ನ ಶಿಷ್ಯನಾದ ನಿಮಿಯು ನನ್ನ ಮಾತನ್ನು ಮನ್ನಿಸದೆ ಯಜ್ಞವನ್ನು ಪ್ರಾರಂಭಿಸಿರುವುದನ್ನು ನೋಡಿದರು. ಅದರಿಂದ ಅವರು ಕೋಪಗೊಂಡು ‘ತನ್ನನ್ನೇ ಮಹಾಪಂಡಿತನೆಂದು ಭಾವಿಸಿಕೊಂಡಿರುವ ನಿನ್ನ ಶರೀರವು ಬಿದ್ದುಹೋಗಲಿ’ ಎಂದು ಶಾಪವನ್ನಿತ್ತರು.॥4॥

(ಶ್ಲೋಕ-5)

ಮೂಲಮ್

ನಿಮಿಃ ಪ್ರತಿದದೌ ಶಾಪಂ ಗುರವೇಽಧರ್ಮವರ್ತಿನೇ ।
ತವಾಪಿ ಪತತಾದ್ದೇಹೋ ಲೋಭಾದ್ಧರ್ಮಮಜಾನತಃ ॥

ಅನುವಾದ

ನಿಮಿಯ ದೃಷ್ಟಿಯಿಂದ ವಸಿಷ್ಠರಿತ್ತ ಶಾಪವು ಧರ್ಮಕ್ಕೆ ವಿರೋಧವಾಗಿತ್ತು. ಈ ಕಾರಣದಿಂದ ಅವನೂ ವಸಿಷ್ಠರಿಗೆ ಶಾಪವನ್ನಿತ್ತನು ‘ಲೋಭಪರವಶನಾಗಿ ಧರ್ಮವನ್ನು ಆದರಿಸದೇ ಇರುವುದರಿಂದ ನಿನ್ನ ಶರೀರವೂ ಬಿದ್ದುಹೋಗಲಿ.’ ॥5॥

(ಶ್ಲೋಕ-6)

ಮೂಲಮ್

ಇತ್ಯುತ್ಸಸರ್ಜ ಸ್ವಂ ದೇಹಂ ನಿಮಿರಧ್ಯಾತ್ಮಕೋವಿದಃ ।
ಮಿತ್ರಾವರುಣರ್ಯೋರ್ಜಜ್ಞೇ ಉರ್ವಶ್ಯಾಂ ಪ್ರಪಿತಾಮಹಃ ॥

ಅನುವಾದ

ಹೀಗೆ ಶಾಪವನ್ನಿತ್ತು ಆತ್ಮವಿದ್ಯಾನಿಪುಣ ನಾದ ನಿಮಿಯು ದೇಹತ್ಯಾಗಮಾಡಿದನು. ಪರೀಕ್ಷಿತನೇ! ಇತ್ತ ನನ್ನ ವೃದ್ಧ ಪ್ರಪಿತಾಮಹರಾದ ವಸಿಷ್ಠರೂ ಕೂಡ ತನ್ನ ಶರೀರವನ್ನು ತ್ಯಜಿಸಿ, ಮಿತ್ರಾವರುಣರ ಪುತ್ರರಾಗಿ ಊರ್ವಶಿಯ ಗರ್ಭದಲ್ಲಿ ಜನ್ಮತಾಳಿದರು. ॥6॥

(ಶ್ಲೋಕ-7)

ಮೂಲಮ್

ಗಂಧವಸ್ತುಷು ತದ್ದೇಹಂ ನಿಧಾಯ ಮುನಿಸತ್ತಮಾಃ ।
ಸಮಾಪ್ತೇ ಸತ್ರಯಾಗೇಽಥ ದೇವಾನೂಚುಃ ಸಮಾಗತಾನ್ ॥

ಅನುವಾದ

ನಿಮಿರಾಜನ ಯಜ್ಞಕ್ಕೆ ಬಂದಿರುವ ಶ್ರೇಷ್ಠಮುನಿಗಳು ರಾಜನ ಶರೀರವನ್ನು ಸುಗಂಧಿತ ವಸ್ತುಗಳಲ್ಲಿ ಇರಿಸಿದರು. ಸತ್ರಯಾಗವು ಮುಗಿದು ದೇವತೆಗಳು ಆಗಮಿಸಿದಾಗ ಋತ್ವಿಜರೆಲ್ಲರೂ ಸೇರಿ ದೇವತೆಗಳನ್ನು ಪ್ರಾರ್ಥಿಸಿದರು. ॥7॥

(ಶ್ಲೋಕ-8)

ಮೂಲಮ್

ರಾಜ್ಞೋ ಜೀವತು ದೇಹೋಽಯಂ ಪ್ರಸನ್ನಾಃ ಪ್ರಭವೋ ಯದಿ ।
ತಥೇತ್ಯುಕ್ತೇ ನಿಮಿಃ ಪ್ರಾಹ ಮಾ ಭೂನ್ಮೇ ದೇಹಬಂಧನಮ್ ॥

ಅನುವಾದ

ಮಹಾನುಭಾವರೇ! ನೀವೆಲ್ಲ ಸಮರ್ಥರಾಗಿದ್ದೀರಿ. ನೀವು ಈ ಯಾಗದಿಂದ ಪ್ರಸನ್ನರಾಗಿರುವಿರಾದರೆ ನಿಮಿರಾಜನ ಶರೀರವು ಪುನಃ ಜೀವಿತವಾಗಲಿ. ‘ಹಾಗೆಯೇ ಆಗಲಿ’ ಎಂದು ದೇವತೆಗಳು ಹೇಳಿದಾಗ ನಿಮಿಯು ಹೇಳಿದನು ‘ನನಗೆ ಪುನಃ ದೇಹದ ಬಂಧನಬೇಕಾಗಿಲ್ಲ. ॥8॥

(ಶ್ಲೋಕ-9)

ಮೂಲಮ್

ಯಸ್ಯ ಯೋಗಂ ನ ವಾಂಛಂತಿ ವಿಯೋಗಭಯಕಾತರಾಃ ।
ಭಜಂತಿ ಚರಣಾಂಭೋಜಂ ಮುನಯೋ ಹರಿಮೇಧಸಃ ॥

ಅನುವಾದ

ವಿಚಾರಶೀಲರಾದ ಮುನಿಗಳು ತಮ್ಮ ಬುದ್ಧಿಯನ್ನು ಪೂರ್ಣವಾಗಿ ಭಗವಂತನಲ್ಲೇ ತೊಡಗಿಸುವರು. ಅವನ ಚರಣಕಮಲಗಳನ್ನೇ ಭಜಿಸುತ್ತಾರೆ. ಒಂದಲ್ಲ ಒಂದುದಿನ ಈ ಶರೀರವು ಖಂಡಿತವಾಗಿ ಬಿದ್ದುಹೋಗುವುದು. ಈ ಭಯದಿಂದಾಗಿ ಅವರು ಈ ಶರೀರದ ಸಂಯೋಗವನ್ನು ಎಂದಿಗೂ ಬಯಸುವುದಿಲ್ಲ. ಅವರಾದರೋ ಮುಕ್ತರಾಗಲು ಬಯಸುತ್ತಿರುವರು. ॥9॥

(ಶ್ಲೋಕ-10)

ಮೂಲಮ್

ದೇಹಂ ನಾವರುರುತ್ಸೇಽಹಂ ದುಃಖಶೋಕ ಭಯಾವಹಮ್ ।
ಸರ್ವತ್ರಾಸ್ಯ ಯತೋ ಮೃತ್ಯುರ್ಮತ್ಸ್ಯಾನಾಮುದಕೇ ಯಥಾ ॥

ಅನುವಾದ

ಆದ್ದರಿಂದ ನಾನು ಈಗ ದುಃಖ, ಶೋಕ, ಭಯಕ್ಕೆ ಮೂಲಕಾರಣವಾದ ಈ ಶರೀರವನ್ನು ಧರಿಸಲು ಬಯಸುವುದಿಲ್ಲ. ನೀರಿನಲ್ಲಿರುವ ಮೀನಿಗೆ ಎಲ್ಲೆಡೆ ಮೃತ್ಯು ಭಯವೇ ಇರುವಂತೆ ಈ ಶರೀರಕ್ಕೂ ಎಲ್ಲೆಡೆ ಮೃತ್ಯುವೇ ಮೃತ್ಯುವಿದೆ.’ ॥10॥

(ಶ್ಲೋಕ-11)

ಮೂಲಮ್ (ವಾಚನಮ್)

ದೇವಾ ಊಚುಃ

ಮೂಲಮ್

ವಿದೇಹ ಉಷ್ಯತಾಂ ಕಾಮಂ ಲೋಚನೇಷು ಶರೀರಿಣಾಮ್ ।
ಉನ್ಮೇಷಣನಿಮೇಷಾಭ್ಯಾಂ ಲಕ್ಷಿತೋಽಧ್ಯಾತ್ಮಸಂಸ್ಥಿತಃ ॥

ಅನುವಾದ

ದೇವತೆಗಳು ಹೇಳಿದರು — ಮುನಿಗಳೇ! ನಿಮಿರಾಜನು ತನ್ನ ಇಚ್ಛೆಯಂತೆ ಶರೀರರಹಿತನಾಗಿ ಪ್ರಾಣಿಗಳ ಕಣ್ಣುಗಳಲ್ಲಿ ನೆಲಸಲಿ. ಅವನು ಅಲ್ಲಿದ್ದುಕೊಂಡು ಸೂಕ್ಷ್ಮಶರೀರದಿಂದ ಭಗವಂತನನ್ನು ಧ್ಯಾನಮಾಡಲಿ. ರೆಪ್ಪೆಗಳು ಮುಚ್ಚಿ ತೆರೆಯುವುದರಿಂದ ಅವನ ಅಸ್ತಿತ್ವದ ಅರಿವು ಉಂಟಾಗುವುದು. ॥11॥

(ಶ್ಲೋಕ-12)

ಮೂಲಮ್

ಅರಾಜಕಭಯಂ ನೃಣಾಂ ಮನ್ಯಮಾನಾ ಮಹರ್ಷಯಃ ।
ದೇಹಂ ಮಮಂಥುಃ ಸ್ಮ ನಿಮೇಃ ಕುಮಾರಃ ಸಮಜಾಯತ ॥

ಅನುವಾದ

ಇದಾದ ಬಳಿಕ ರಾಜನು ಇಲ್ಲದಿದ್ದಾಗ ಜನರಲ್ಲಿ ಅರಾಜಕತೆ ಹರಡಿಕೊಂಡೀತು ಎಂದು ಯೋಚಿಸಿದ ಮಹರ್ಷಿಗಳು ನಿಮಿ ರಾಜನ ಶರೀರವನ್ನು ಕಡೆದರು. ಅದರಿಂದ ಓರ್ವ ಕುಮಾರನು ಹುಟ್ಟಿದನು. ॥12॥

(ಶ್ಲೋಕ-13)

ಮೂಲಮ್

ಜನ್ಮನಾ ಜನಕಃ ಸೋಽಭೂದ್ವೈದೇಹಸ್ತು ವಿದೇಹಜಃ ।
ಮಿಥಿಲೋ ಮಥನಾಜ್ಜಾತೋ ಮಿಥಿಲಾ ಯೇನ ನಿರ್ಮಿತಾ ॥

ಅನುವಾದ

ಅಸಾಧಾರಣವಾದ ರೀತಿಯಲ್ಲಿ ಹುಟ್ಟಿದ ಕಾರಣ ಜನಕನೆಂದೂ, ಪ್ರಾಣವಿಲ್ಲದ ದೇಹದಿಂದ ಹುಟ್ಟಿದ್ದರಿಂದ ವಿದೇಹನೆಂದೂ, ಶರೀರ ಮಂಥನದಿಂದ ಹುಟ್ಟಿದನಾದ್ದರಿಂದ ಮಿಥಿಲನೆಂದೂ ಆ ಕುಮಾರನನ್ನು ಜನರು ಕರೆದರು. ಇವನೇ ಮಿಥಿಲಾಪುರಿಯನ್ನು ನಿರ್ಮಿಸಿದನು. ॥13॥

(ಶ್ಲೋಕ-14)

ಮೂಲಮ್

ತಸ್ಮಾದುದಾವಸುಸ್ತಸ್ಯ ಪುತ್ರೋಽಭೂನ್ನಂದಿವರ್ಧನಃ ।
ತತಃ ಸುಕೇತುಸ್ತಸ್ಯಾಪಿ ದೇವರಾತೋ ಮಹೀಪತೇ ॥

(ಶ್ಲೋಕ-15)

ಮೂಲಮ್

ತಸ್ಮಾದ್ಬೃಹದ್ರಥಸ್ತಸ್ಯ ಮಹಾವೀರ್ಯಃ ಸುಧೃತ್ಪಿತಾ ।
ಸುಧೃತೇರ್ಧೃಷ್ಟಕೇತುರ್ವೈ ಹರ್ಯಶ್ವೋಽಥ ಮರುಸ್ತತಃ ॥

ಅನುವಾದ

ಪರೀಕ್ಷಿತನೇ! ಜನಕನಿಗೆ ಉದಾವಸುವೆಂಬ ಪುತ್ರನು ಹುಟ್ಟಿದನು. ಅವನಿಗೆ ನಂದಿವರ್ಧನನು ಹುಟ್ಟಿದನು. ನಂದಿವರ್ಧನನಿಂದ ಸುಕೇತು, ಅವನಿಗೆ ದೇವರಾತ, ದೇವರಾತನಿಗೆ ಬೃಹದ್ರಥ, ಬೃಹದ್ರಥನಿಗೆ ಮಹಾವೀರ್ಯ, ಮಹಾವೀರ್ಯನಿಗೆ ಸುಧೃತಿ, ಸುಧೃತಿಯಿಂದ ಧೃಷ್ಟಕೇತು, ಧೃಷ್ಟಕೇತುವಿನಿಂದ ಹರ್ಯಶ್ವ, ಅವನಿಗೆ ಮರು ಎಂಬ ಪುತ್ರನು ಹುಟ್ಟಿದನು. ॥14-15॥

(ಶ್ಲೋಕ-16)

ಮೂಲಮ್

ಮರೋಃ ಪ್ರತೀಪಕಸ್ತಸ್ಮಾಜ್ಜಾತಃ ಕೃತಿರಥೋ ಯತಃ ।
ದೇವಮೀಢಸ್ತಸ್ಯ ಸುತೋ ವಿಶ್ರುತೋಽಥ ಮಹಾಧೃತಿಃ ॥

ಅನುವಾದ

ಮರುವಿನಿಂದ ಪ್ರತೀಪಕ, ಪ್ರತೀಪಕನಿಂದ ಕೃತಿರಥ, ಕೃತಿರಥನಿಂದ ದೇವಮೀಢ, ದೇವಮೀಢನಿಂದ ವಿಶ್ರುತ, ವಿಶ್ರುತನಿಂದ ಮಹಾಧೃತಿಯ ಜನ್ಮವಾಯಿತು. ॥16॥

(ಶ್ಲೋಕ-17)

ಮೂಲಮ್

ಕೃತಿರಾತಸ್ತತಸ್ತಸ್ಮಾನ್ಮಹಾರೋಮಾಥ ತತ್ಸುತಃ ।
ಸ್ವರ್ಣರೋಮಾ ಸುತಸ್ತಸ್ಯ ಹ್ರಸ್ವರೋಮಾ ವ್ಯಜಾಯತ ॥

ಅನುವಾದ

ಮಹಾಧೃತಿಗೆ ಕೃತಿರಾತ, ಕೃತಿರಾತನಿಗೆ ಮಹಾರೋಮಾ, ಮಹಾರೋಮನಿಗೆ ಸ್ವರ್ಣರೋಮಾ, ಸ್ವರ್ಣರೋಮನಿಗೆ ಹ್ರಸ್ವರೋಮನು ಮಗನಾದನು. ॥17॥

(ಶ್ಲೋಕ-18)

ಮೂಲಮ್

ತತಃ ಸೀರಧ್ವಜೋ ಜಜ್ಞೇ ಯಜ್ಞಾರ್ಥಂ ಕರ್ಷತೋ ಮಹೀಮ್ ।
ಸೀತಾ ಸೀರಾಗ್ರತೋ ಜಾತಾ ತಸ್ಮಾತ್ಸೀರಧ್ವಜಃ ಸ್ಮೃತಃ ॥

ಅನುವಾದ

ಇದೇ ಹ್ರಸ್ವರೋಮನ ಪುತ್ರ ಸೀರಧ್ವಜ ಮಹಾರಾಜನಾಗಿದ್ದನು. ಅವನು ಯಜ್ಞಕ್ಕಾಗಿ ನೆಲವನ್ನು ಊಳುತ್ತಿರುವಾಗ ನೇಗಿಲಿನ ತುದಿಯಿಂದಾಗಿ ಭೂಮಿಯಿಂದ ಸೀತೆಯು ಜನ್ಮತಾಳಿದಳು. ಇದರಿಂದ ಇವನ ಹೆಸರು ಸೀರಧ್ವಜನೆಂದಾಯಿತು. ॥18॥

(ಶ್ಲೋಕ-19)

ಮೂಲಮ್

ಕುಶಧ್ವಜಸ್ತಸ್ಯ ಪುತ್ರಸ್ತತೋ ಧರ್ಮಧ್ವಜೋ ನೃಪಃ ।
ಧರ್ಮಧ್ವಜಸ್ಯ ದ್ವೌ ಪುತ್ರೌ ಕೃತಧ್ವಜಮಿತಧ್ವಜೌ ॥

ಅನುವಾದ

ಸೀರಧ್ವಜನಿಗೆ ಕುಶಧ್ವಜ, ಕುಶಧ್ವಜನಿಗೆ ಧರ್ಮಧ್ವಜ, ಧರ್ಮಧ್ವಜನಿಗೆ ಕೃತಧ್ವಜ ಮತ್ತು ಮಿತಧ್ವಜರೆಂಬ ಇಬ್ಬರು ಪುತ್ರರಾದರು. ॥19॥

(ಶ್ಲೋಕ-20)

ಮೂಲಮ್

ಕೃತಧ್ವಜಾತ್ಕೇಶಿಧ್ವಜಃ ಖಾಂಡಿಕ್ಯಸ್ತು ಮಿತಧ್ವಜಾತ್ ।
ಕೃತಧ್ವಜಸುತೋ ರಾಜನ್ನಾತ್ಮವಿದ್ಯಾವಿಶಾರದಃ ॥

ಅನುವಾದ

ಕೃತಧ್ವಜನಿಗೆ ಕೇಶಿಧ್ವಜ ಮತ್ತು ಮಿತಧ್ವಜನಿಗೆ ಖಾಂಡಿಕ್ಯ ಹುಟ್ಟಿದ್ದನು. ಕೇಶಿಧ್ವಜನು ಆತ್ಮವಿದ್ಯೆಯಲ್ಲಿ ಮಹಾಪ್ರವೀಣನಾಗಿದ್ದನು. ॥20॥

(ಶ್ಲೋಕ-21)

ಮೂಲಮ್

ಖಾಂಡಿಕ್ಯಃ ಕರ್ಮತತ್ತ್ವಜ್ಞೋ ಭೀತಃ ಕೇಶಿಧ್ವಜಾದ್ದ್ರುತಃ ।
ಭಾನುಮಾಂಸ್ತಸ್ಯ ಪುತ್ರೋಽಭೂಚ್ಛತದ್ಯುಮ್ನಸ್ತು ತತ್ಸುತಃ ॥

ಅನುವಾದ

ಖಾಂಡಿಕ್ಯನು ಕರ್ಮಕಾಂಡದ ಮರ್ಮಜ್ಞನಾಗಿದ್ದನು. ಅವನು ಕೇಶಿಧ್ವಜನಿಂದ ಭಯಗೊಂಡು ಓಡಿಹೋದನು. ಕೇಶಿಧ್ವಜನ ಪುತ್ರ ಭಾನುಮಾನ್, ಭಾನುಮಂತನಿಗೆ ಶತದ್ಯುಮ್ನ ಮಗ ಹುಟ್ಟಿದನು. ॥21॥

(ಶ್ಲೋಕ-22)

ಮೂಲಮ್

ಶುಚಿಸ್ತತ್ತನಯಸ್ತಸ್ಮಾತ್ಸನದ್ವಾಜಸ್ತತೋಽಭವತ್ ।
ಊರ್ಧ್ವಕೇತುಃ ಸನದ್ವಾಜಾದಜೋಽಥ ಪುರುಜಿತ್ಸುತಃ ॥

(ಶ್ಲೋಕ-23)

ಮೂಲಮ್

ಅರಿಷ್ಟನೇಮಿಸ್ತಸ್ಯಾಪಿ ಶ್ರುತಾಯುಸ್ತತ್ಸುಪಾರ್ಶ್ವಕಃ ।
ತತಶ್ಚಿತ್ರರಥೋ ಯಸ್ಯ ಕ್ಷೇಮಧಿರ್ಮಿಥಿಲಾಧಿಪಃ ॥

ಅನುವಾದ

ಶತದ್ಯುಮ್ನನಿಂದ ಶುಚಿ, ಶುಚಿಯಿಂದ ಸನದ್ವಾಜ, ಸನದ್ವಾಜನಿಂದ ಊರ್ಧ್ವಕೇತು, ಊರ್ಧ್ವಕೇತುವಿನಿಂದ ಅಜ, ಅಜನಿಂದ ಪುರುಜಿತ್, ಪುರುಜಿತ್ತುವಿನಿಂದ ಅರಿಷ್ಟನೇಮಿ, ಅರಿಷ್ಟನೇಮಿಯಿಂದ ಶ್ರುತಾಯು, ಶ್ರುತಾಯುವಿನಿಂದ ಸುಪಾರ್ಶ್ವಕ, ಸುಪಾರ್ಶ್ವಕನಿಂದ ಚಿತ್ರರಥ, ಚಿತ್ರರಥನಿಂದ ಮಿಥಿಲಾಪತಿ ಕ್ಷೇಮಧಿಯ ಜನ್ಮವಾಯಿತು. ॥22-23॥

(ಶ್ಲೋಕ-24)

ಮೂಲಮ್

ತಸ್ಮಾತ್ಸಮರಥಸ್ತಸ್ಯ ಸುತಃ ಸತ್ಯರಥಸ್ತತಃ ।
ಆಸೀದುಪಗುರುಸ್ತಸ್ಮಾದುಪಗುಪ್ತೋಽಗ್ನಿಸಂಭವಃ ॥

ಅನುವಾದ

ಕ್ಷೇಮಧಿಯಿಂದ ಸಮರಥ, ಸಮರಥನಿಂದ ಸತ್ಯರಥ, ಸತ್ಯರಥನಿಂದ ಉಪಗುರು, ಉಪಗುರುವಿನಿಂದ ಉಪಗುಪ್ತನೆಂಬ ಪುತ್ರನಾದನು. ಇವನು ಅಗ್ನಿಯ ಅಂಶನಾಗಿದ್ದನು. ॥24॥

(ಶ್ಲೋಕ-25)

ಮೂಲಮ್

ವಸ್ವನಂತೋಽಥ ತತ್ಪುತ್ರೋ ಯುಯುಧೋ ಯತ್ಸುಭಾಷಣಃ ।
ಶ್ರುತಸ್ತತೋ ಜಯಸ್ತಸ್ಮಾದ್ವಿಜಯೋಽಸ್ಮಾದೃತಃ ಸುತಃ ॥

ಅನುವಾದ

ಉಪಗುಪ್ತನಿಂದ ವಸ್ವನಂತ, ವಸ್ವನಂತನಿಂದ ಯುಯುಧ, ಯುಯುಧನಿಂದ ಸುಭಾಷಣ, ಸುಭಾಷಣನಿಂದ ಶ್ರುತ, ಶ್ರುತನಿಂದ ಜಯ, ಜಯನಿಂದ ವಿಜಯ, ವಿಜಯನಿಂದ ಋತನೆಂಬ ಪುತ್ರನು ಹುಟ್ಟಿದನು. ॥25॥

(ಶ್ಲೋಕ-26)

ಮೂಲಮ್

ಶುನಕಸ್ತತ್ಸುತೋ ಜಜ್ಞೇ ವೀತಹವ್ಯೋ ಧೃತಿಸ್ತತಃ ।
ಬಹುಲಾಶ್ವೋ ಧೃತೇಸ್ತಸ್ಯ ಕೃತಿರಸ್ಯ ಮಹಾವಶೀ ॥

ಅನುವಾದ

ಋತನಿಗೆ ಶುನಕ, ಶುನಕನಿಗೆ ವೀತಹವ್ಯ, ವೀತಹವ್ಯ ನಿಂದ ಧೃತಿ, ಧೃತಿಯಿಂದ ಬಹುಲಾಶ್ವ, ಬಹುಲಾಶ್ವನಿಂದ ಕೃತಿ, ಕೃತಿಗೆ ಮಹಾವಶೀ ಎಂಬ ಪುತ್ರನು ಜನಿಸಿದನು. ॥26॥

(ಶ್ಲೋಕ-27)

ಮೂಲಮ್

ಏತೇ ವೈ ಮೈಥಿಲಾ ರಾಜನ್ನಾತ್ಮವಿದ್ಯಾವಿಶಾರದಾಃ ।
ಯೋಗೇಶ್ವರಪ್ರಸಾದೇನ ದ್ವಂದ್ವೈರ್ಮುಕ್ತಾ ಗೃಹೇಷ್ವಪಿ ॥

ಅನುವಾದ

ಪರೀಕ್ಷಿತನೇ! ಇವರೆಲ್ಲರೂ ಮಿಥಿಲನ ವಂಶದಲ್ಲಿ ಹುಟ್ಟಿದ್ದರಿಂದ ಮೈಥಿಲರೆಂದು ಕರೆಸಿಕೊಂಡರು. ಇವರೆಲ್ಲರೂ ಆತ್ಮಜ್ಞಾನದಿಂದ ಸಂಪನ್ನರಾಗಿದ್ದು, ಗೃಹಸ್ಥಾಶ್ರಮದಲ್ಲೇ ಇದ್ದು ಸುಖ-ದುಃಖಾದಿ ದ್ವಂದ್ವಗಳಿಂದ ಮುಕ್ತರಾಗಿದ್ದರು. ಯಾಜ್ಞವಲ್ಕ್ಯಾದಿ ಮಹಾ-ಮಹಾ ಯೋಗೇಶ್ವರರ ಮಹಾನ್ ಕೃಪೆಯು ಇವರ ಮೇಲೆ ಇತ್ತು. ॥27॥

ಅನುವಾದ (ಸಮಾಪ್ತಿಃ)

ಹದಿಮೂರನೆಯ ಅಧ್ಯಾಯವು ಮುಗಿಯಿತು. ॥13॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ನಿಮಿವಂಶಾನುವರ್ಣನಂ ನಾಮ ತ್ರಯೋದಶೋಽಧ್ಯಾಯಃ ॥13॥