೧೨

[ಹನ್ನೆರಡನೆಯ ಅಧ್ಯಾಯ]

ಭಾಗಸೂಚನಾ

ಉಳಿದ ಇಕ್ಷ್ವಾಕು ವಂಶದ ಅರಸರ ವರ್ಣನೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಕುಶಸ್ಯ ಚಾತಿಥಿಸ್ತಸ್ಮಾನ್ನಿಷಧಸ್ತತ್ಸುತೋ ನಭಃ ।
ಪುಂಡರೀಕೋಽಥ ತತ್ಪುತ್ರಃ ಕ್ಷೇಮಧನ್ವಾ ಭವತ್ತತಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಶ್ರೀರಾಮನಿಗೆ ಕುಶ-ಲವರೆಂಬ ಯಮಳರು ಹುಟ್ಟಿದ್ದರೆಂದು ಹೇಳಿದ್ದೆನಲ್ಲವೇ? ಮುಂದೆ ಕುಶನ ಸಂತಾನವು ಬೆಳೆಯಿತು. ಕುಶನ ಮಗ ಅತಿಥಿ, ಅವನಿಗೆ ನಿಷಧ, ನಿಷಧನಿಂದ ನಭ, ನಭನಿಗೆ ಪುಂಡರೀಕ, ಪುಂಡರೀಕನಿಗೆ ಕ್ಷೇಮಧನ್ವಾ ಹುಟ್ಟಿದನು. ॥1॥

(ಶ್ಲೋಕ-2)

ಮೂಲಮ್

ದೇವಾನೀಕಸ್ತತೋಽನೀಹಃ ಪಾರಿಯಾತ್ರೋಽಥ ತತ್ಸುತಃ ।
ತತೋ ಬಲಸ್ಥಲಸ್ತಸ್ಮಾದ್ವಜ್ರನಾಭೋಽರ್ಕಸಂಭವಃ ॥

ಅನುವಾದ

ಕ್ಷೇಮಧನ್ವನಿಗೆ ದೇವಾನೀಕ ಪುತ್ರನಾದನು. ದೇವಾನೀಕನಿಂದ ಅನೀಹ, ಅನೀಹನಿಂದ ಪಾರಿಯಾತ್ರ, ಪಾರಿಯಾತ್ರನಿಂದ ಬಲಸ್ಥಲ, ಬಲಸ್ಥಲನಿಗೆ ವಜ್ರನಾಭನೆಂಬ ಪುತ್ರನಾದನು. ಇವನು ಸೂರ್ಯನ ಅಂಶನಾಗಿದ್ದನು. ॥2॥

(ಶ್ಲೋಕ-3)

ಮೂಲಮ್

ಖಗಣಸ್ತತ್ಸುತಸ್ತಸ್ಮಾದ್ವಿಧೃತಿಶ್ಚಾಭವತ್ ಸುತಃ ।
ತತೋ ಹಿರಣ್ಯನಾಭೋಭೂದ್ಯೋಗಾಚಾರ್ಯಸ್ತು ಜೈಮಿನೇಃ ॥

ಅನುವಾದ

ವಜ್ರನಾಭನಿಂದ ಖಗಣ, ಖಗಣನಿಂದ ವಿಧೃತಿ, ವಿಧೃತಿಯಿಂದ ಹಿರಣ್ಯನಾಭನ ಉತ್ಪತ್ತಿಯಾಯಿತು. ಅವನು ಜೈಮಿನಿಯ ಶಿಷ್ಯನಾಗಿದ್ದು ಯೋಗಾಚಾರ್ಯನಾಗಿದ್ದನು. ॥3॥

(ಶ್ಲೋಕ-4)

ಮೂಲಮ್

ಶಿಷ್ಯಃ ಕೌಸಲ್ಯ ಆಧ್ಯಾತ್ಮಂ ಯಾಜ್ಞವಲ್ಕ್ಯೋಽಧ್ಯಗಾದ್ಯತಃ ।
ಯೋಗಂ ಮಹೋದಯಮೃಷಿರ್ಹೃದಯಗ್ರಂಥಿಭೇದಕಮ್ ॥

ಅನುವಾದ

ಕೋಸಲದೇಶನಿವಾಸಿ ಯಾಜ್ಞವಲ್ಕ್ಯ ಋಷಿಯು ಅವನ ಶಿಷ್ಯನಾಗಿ ಅವನಿಂದ ಅಧ್ಯಾತ್ಮಯೋಗದ ಶಿಕ್ಷಣವನ್ನು ಪಡೆದಿದ್ದನು. ಆ ಯೋಗವು ಹೃದಯಗ್ರಂಥಿಯನ್ನು ಕತ್ತರಿಸುವಂತಹುದು ಮತ್ತು ಪರಮ ಸಿದ್ಧಿಪ್ರದವಾಗಿದೆ. ॥4॥

(ಶ್ಲೋಕ-5)

ಮೂಲಮ್

ಪುಷ್ಯೋ ಹಿರಣ್ಯನಾಭಸ್ಯ ಧ್ರುವಸಂಧಿಸ್ತತೋಽಭವತ್ ।
ಸುದರ್ಶನೋಽಥಾಗ್ನಿವರ್ಣಃ ಶೀಘ್ರಸ್ತಸ್ಯ ಮರುಃ ಸುತಃ ॥

ಅನುವಾದ

ಹಿರಣ್ಯನಾಭನಿಗೆ ಪುಷ್ಯ, ಪುಷ್ಯನಿಗೆ ಧ್ರುವಸಂಧಿ, ಧ್ರುವಸಂಧಿಗೆ ಸುದರ್ಶನ, ಸುದರ್ಶನನಿಗೆ ಅಗ್ನಿವರ್ಣ, ಅಗ್ನಿವರ್ಣನಿಗೆ ಶೀಘ್ರ, ಶೀಘ್ರನಿಗೆ ಮರು ಎಂಬ ಪುತ್ರ ಹುಟ್ಟಿದನು. ॥5॥

(ಶ್ಲೋಕ-6)

ಮೂಲಮ್

ಯೋಽಸಾವಾಸ್ತೇ ಯೋಗಸಿದ್ಧಃ ಕಲಾಪಗ್ರಾಮಮಾಶ್ರಿತಃ ।
ಕಲೇರಂತೇ ಸೂರ್ಯವಂಶಂ ನಷ್ಟಂ ಭಾವಯಿತಾ ಪುನಃ ॥

ಅನುವಾದ

ಮರುವು ಯೋಗಸಾಧನೆಯಿಂದ ಸಿದ್ಧಿಯನ್ನು ಪಡೆದುಕೊಂಡು ಅವನು ಈಗಲೂ ಕಲಾಪಗ್ರಾಮದಲ್ಲಿ ಇರುತ್ತಿರುವನು. ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಾಶವಾದಾಗ ಅವನು ಅದನ್ನು ಪುನಃ ಮುಂದುವರೆಸುವನು. ॥6॥

(ಶ್ಲೋಕ-7)

ಮೂಲಮ್

ತಸ್ಮಾತ್ಪ್ರಸುಶ್ರುತಸ್ತಸ್ಯ ಸಂಧಿಸ್ತಸ್ಯಾಪ್ಯಮರ್ಷಣಃ ।
ಮಹಸ್ವಾಂಸ್ತತ್ಸುತಸ್ತಸ್ಮಾದ್ವಿಶ್ವಸಾಹ್ವೋಽನ್ವಜಾಯತ ॥

ಅನುವಾದ

ಮರುವಿನಿಂದ ಪ್ರಸುಶ್ರುತ, ಅವನಿಂದ ಸಂಧಿ, ಸಂಧಿಯಿಂದ ಅಮರ್ಷಣನು ಹುಟ್ಟಿದನು. ಅಮರ್ಷಣನಿಂದ ಮಹಸ್ವಂತ, ಮಹಸ್ವಂತನಿಂದ ವಿಶ್ವಸಾಹ್ವನಾದನು. ॥7॥

(ಶ್ಲೋಕ-8)

ಮೂಲಮ್

ತತಃ ಪ್ರಸೇನಚಿತ್ತಸ್ಮಾತ್ತಕ್ಷಕೋ ಭವಿತಾ ಪುನಃ ।
ತತೋ ಬೃಹದ್ಬಲೋ ಯಸ್ತು ಪಿತ್ರಾ ತೇ ಸಮರೇ ಹತಃ ॥

ಅನುವಾದ

ವಿಶ್ವಸಾಹ್ವನ ಪುತ್ರ ಪ್ರಸೇನಜಿತ್, ಪ್ರಸೇನಜಿತ್ತುವಿನಿಂದ ತಕ್ಷಕ, ತಕ್ಷಕಪುತ್ರ ಬೃಹದ್ಬಲನಾದನು. ಪರೀಕ್ಷಿತನೇ! ಇದೇ ಬೃಹದ್ಬಲನನ್ನು ನಿನ್ನ ತಂದೆ ಅಭಿಮನ್ಯುವು ಯುದ್ಧದಲ್ಲಿ ಕೊಂದಿದ್ದನು. ॥8॥

(ಶ್ಲೋಕ-9)

ಮೂಲಮ್

ಏತೇ ಹೀಕ್ಷ್ವಾಕುಭೂಪಾಲಾ ಅತೀತಾಃ ಶೃಣ್ವನಾಗತಾನ್ ।
ಬೃಹದ್ಬಲಸ್ಯ ಭವಿತಾ ಪುತ್ರೋ ನಾಮ ಬೃಹದ್ರಣಃ ॥

ಅನುವಾದ

ಪರೀಕ್ಷಿದ್ರಾಜೇಂದ್ರನೇ! ಇಕ್ಷ್ವಾಕುವಂಶದಲ್ಲಿ ಇಂದಿನವರೆಗೆ ಇಷ್ಟು ಭೂಪಾಲರು ಆಗಿಹೋಗಿದ್ದಾರೆ. ಈಗ ಮುಂದೆ ಆಗುವವರ ವಿಷಯವನ್ನು ಕೇಳು. ಬೃಹದ್ಬಲನಿಗೆ ಬೃಹದ್ರಣ ಪುತ್ರನಾಗುವನು. ॥9॥

(ಶ್ಲೋಕ-10)

ಮೂಲಮ್

ಉರುಕ್ರಿಯಸ್ತತಸ್ತಸ್ಯ ವತ್ಸವೃದ್ಧೋ ಭವಿಷ್ಯತಿ ।
ಪ್ರತಿವ್ಯೋಮಸ್ತತೋ ಭಾನುರ್ದಿವಾಕೋ ವಾಹಿನೀಪತಿಃ ॥

ಅನುವಾದ

ಬೃಹದ್ರಣನಿಗೆ ಉರುಕ್ರಿಯ, ಅವನಿಗೆ ವತ್ಸವೃದ್ಧ, ವತ್ಸವೃದ್ಧನಿಗೆ ಪ್ರತಿವ್ಯೋಮ, ಪ್ರತಿವ್ಯೋಮನಿಗೆ ಭಾನು, ಭಾನುವಿಗೆ ಸೇನಾಪತಿ ದಿವಾಕನೆಂಬ ಪುತ್ರನಾಗುವನು. ॥10॥

(ಶ್ಲೋಕ-11)

ಮೂಲಮ್

ಸಹದೇವಸ್ತತೋ ವೀರೋ ಬೃಹದಶ್ವೋಽಥ ಭಾನುಮಾನ್ ।
ಪ್ರತೀಕಾಶ್ವೋ ಭಾನುಮತಃ ಸುಪ್ರತೀಕೋಽಥ ತತ್ಸುತಃ ॥

ಅನುವಾದ

ದಿವಾಕನಿಗೆ ವೀರಸಹದೇವ, ಸಹದೇವನಿಗೆ ಬೃಹದಶ್ವ, ಬೃಹದಶ್ವನಿಗೆ ಭಾನುಮಾನ್, ಭಾನುಮಂತನಿಗೆ ಪ್ರತೀಕಾಶ್ವ, ಪ್ರತೀಕಾಶ್ವನಿಗೆ ಸುಪ್ರತೀಕ ಪುತ್ರನಾಗುವನು. ॥11॥

(ಶ್ಲೋಕ-12)

ಮೂಲಮ್

ಭವಿತಾ ಮರುದೇವೋಥ ಸುನಕ್ಷತ್ರೋಽಥ ಪುಷ್ಕರಃ ।
ತಸ್ಯಾಂತರಿಕ್ಷಸ್ತತ್ಪುತ್ರಃ ಸುತಪಾಸ್ತದಮಿತ್ರಜಿತ್ ॥

ಅನುವಾದ

ಸುಪ್ರತೀಕನಿಗೆ ಮರುದೇವ, ಮರುದೇವನಿಗೆ ಸುನಕ್ಷತ್ರ, ಸುನಕ್ಷತ್ರನಿಗೆ ಪುಷ್ಕರ, ಪುಷ್ಕರನಿಗೆ ಅಂತರಿಕ್ಷ, ಅಂತರಿಕ್ಷನಿಗೆ ಸುತಪಾ, ಅವನಿಗೆ ಅಮಿತ್ರಜಿತ್ ಎಂಬ ಪುತ್ರನಾಗುವನು. ॥12॥

(ಶ್ಲೋಕ-13)

ಮೂಲಮ್

ಬೃಹದ್ರಾಜಸ್ತು ತಸ್ಯಾಪಿ ಬರ್ಹಿಸ್ತಸ್ಮಾತ್ಕೃತಂಜಯಃ ।
ರಣಂಜಯಸ್ತಸ್ಯ ಸುತಃ ಸಂಜಯೋ ಭವಿತಾ ತತಃ ॥

ಅನುವಾದ

ಅಮಿತ್ರಜಿತ್ತುವಿಗೆ ಬೃಹದ್ರಾಜ, ಬೃಹದ್ರಾಜನಿಗೆ ಬರ್ಹಿ, ಬರ್ಹಿಗೆ ಕೃತಂಜಯ, ಕೃತಂಜಯನಿಗೆ ರಣಂಜಯ, ಅವನಿಗೆ ಸಂಜಯನೆಂಬ ಪುತ್ರನಾಗುವನು.॥ 13 ॥

(ಶ್ಲೋಕ-14)

ಮೂಲಮ್

ತಸ್ಮಾಚ್ಛಾಕ್ಯೋಽಥ ಶುದ್ಧೋದೋ ಲಾಂಗಲಸ್ತತ್ಸುತಃ ಸ್ಮೃತಃ ।
ತತಃ ಪ್ರಸೇನಜಿತ್ತಸ್ಮಾತ್ ಕ್ಷುದ್ರಕೋ ಭವಿತಾ ತತಃ ॥

ಅನುವಾದ

ಸಂಜಯನಿಗೆ ಶಾಕ್ಯ, ಅವನಿಗೆ ಶುದ್ಧೋದ, ಶುದ್ಧೋದನಿಗೆ ಲಾಂಗಲ, ಲಾಂಗಲನಿಗೆ ಪ್ರಸೇನಜಿತ್, ಪ್ರಸೇನಜಿತ್ತುವಿಗೆ ಕ್ಷುದ್ರಕನೆಂಬ ಪುತ್ರನಾಗುವನು. ॥14॥

(ಶ್ಲೋಕ-15)

ಮೂಲಮ್

ರಣಕೋ ಭವಿತಾ ತಸ್ಮಾತ್ಸುರಥಸ್ತನಯಸ್ತತಃ ।
ಸುಮಿತ್ರೋ ನಾಮ ನಿಷ್ಠಾಂತ ಏತೇ ಬಾರ್ಹದ್ಬಲಾನ್ವಯಾಃ ॥

ಅನುವಾದ

ಕ್ಷುದ್ರಕನಿಗೆ ರಣಕ, ರಣಕನಿಗೆ ಸುರಥ, ಸುರಥನಿಗೆ ಈ ವಂಶದ ಕೊನೆಯ ರಾಜನಾದ ಸುಮಿತ್ರನು ಹುಟ್ಟುವನು. ಇವರೆಲ್ಲರೂ ಬೃಹದ್ಬಲನ ವಂಶಧರರಾಗುವರು. ॥15॥

(ಶ್ಲೋಕ-16)

ಮೂಲಮ್

ಇಕ್ಷ್ವಾಕೂಣಾಮಯಂ ವಂಶಃ ಸುಮಿತ್ರಾಂತೋ ಭವಿಷ್ಯತಿ ।
ಯತಸ್ತಂ ಪ್ರಾಪ್ಯ ರಾಜಾನಂ ಸಂಸ್ಥಾಂ ಪ್ರಾಪ್ಸ್ಯತಿ ವೈ ಕಲೌ ॥

ಅನುವಾದ

ಇಕ್ಷ್ವಾಕುವಿನ ಈ ವಂಶವು ಸುಮಿತ್ರನವರೆಗೆ ಉಳಿದೀತು. ಏಕೆಂದರೆ ಸುಮಿತ್ರನು ರಾಜನಾದಾಗ ಕಲಿಯುಗದಲ್ಲಿ ಈ ವಂಶವು ಮುಗಿದುಹೋದೀತು. ॥16॥

ಅನುವಾದ (ಸಮಾಪ್ತಿಃ)

ಹನ್ನೆರಡನೆಯ ಅಧ್ಯಾಯವು ಮುಗಿಯಿತು. ॥12॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ಇಕ್ಷ್ವಾಕುವಂಶವರ್ಣನಂ ನಾಮ ದ್ವಾದಶೋಽಧ್ಯಾಯಃ ॥12॥