[ಎರಡನೆಯ ಅಧ್ಯಾಯ]
ಭಾಗಸೂಚನಾ
ಪೃಷಧ್ರ ಮುಂತಾದ ಮನುವಿನ ಐವರು ಪುತ್ರರ ವಂಶ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಗತೇಽಥ ಸುದ್ಯುಮ್ನೇ ಮನುರ್ವೈವಸ್ವತಃ ಸುತೇ ।
ಪುತ್ರಕಾಮಸ್ತಪಸ್ತೇಪೇ ಯುಮುನಾಯಾಂ ಶತಂ ಸಮಾಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಹೀಗೆ ಸುದ್ಯುಮ್ನನು ತಪಸ್ಸಿಗಾಗಿ ಕಾಡಿಗೆ ಹೊರಟುಹೋದ ಬಳಿಕ ವೈವಸ್ವತಮನುವು ಪುತ್ರಕಾಮನಾಗಿ ಯಮುನಾ ನದಿಯ ತೀರದಲ್ಲಿ ನೂರು ವರ್ಷಗಳ ಕಾಲ ತಪಸ್ಸು ಮಾಡಿದನು. ॥1॥
(ಶ್ಲೋಕ-2)
ಮೂಲಮ್
ತತೋಽಯಜನ್ಮನುರ್ದೇವಮಪತ್ಯಾರ್ಥಂ ಹರಿಂ ಪ್ರಭುಮ್ ।
ಇಕ್ಷ್ವಾಕುಪೂರ್ವಜಾನ್ಪುತ್ರಾಲ್ಲೇಭೇ ಸ್ವಸದೃಶಾನ್ ದಶ ॥
ಅನುವಾದ
ಇದಾದ ಬಳಿಕ ಅವನು ಸಂತಾನವನ್ನು ಪಡೆಯಲು ಸರ್ವಶಕ್ತನಾದ ಭಗವಾನ್ ಶ್ರೀಹರಿಯನ್ನು ಆರಾಧಿಸಿದನು ಹಾಗೂ ತನಗೆ ಸಮಾನರಾದ ಇಕ್ಷ್ವಾಕುವೇ ಮೊದಲಾದ ಹತ್ತು ಪುತ್ರರನ್ನು ಪಡೆದನು.॥2॥
(ಶ್ಲೋಕ-3)
ಮೂಲಮ್
ಪೃಷಧ್ರಸ್ತು ಮನೋಃ ಪುತ್ರೋ ಗೋಪಾಲೋ ಗುರುಣಾ ಕೃತಃ ।
ಪಾಲಯಾಮಾಸ ಗಾ ಯತ್ತೋ ರಾತ್ರ್ಯಾಂ ವೀರಾಸನವ್ರತಃ ॥
ಅನುವಾದ
ಮನುವಿನ ಹತ್ತುಪುತ್ರರಲ್ಲಿ ಒಬ್ಬನ ಹೆಸರು ಪೃಷಧ್ರ ಎಂದಿತ್ತು. ಗುರುಗಳಾದ ವಸಿಷ್ಠರು ಅವನನ್ನು ಗೋವುಗಳ ರಕ್ಷಣೆಗಾಗಿ ನೇಮಿಸಿದರು. ಆದ್ದರಿಂದ ಅವನು ರಾತ್ರಿಯಲ್ಲಿ ತುಂಬಾ ಎಚ್ಚರಿಕೆಯಿಂದ ವೀರಾಸನದಲ್ಲಿ ಕುಳಿತುಕೊಂಡು ಹಸುಗಳನ್ನು ಕಾಯುತ್ತಿದ್ದನು. ॥3॥
(ಶ್ಲೋಕ-4)
ಮೂಲಮ್
ಏಕದಾ ಪ್ರಾವಿಶದ್ಗೋಷ್ಠಂ ಶಾರ್ದೂಲೋ ನಿಶಿ ವರ್ಷತಿ ।
ಶಯಾನಾ ಗಾವ ಉತ್ಥಾಯ ಭೀತಾಸ್ತಾ ಬಭ್ರಮುರ್ವ್ರಜೇ ॥
ಅನುವಾದ
ಒಂದು ರಾತ್ರಿಯಲ್ಲಿ ಮಳೆ ಬೀಳುತ್ತಿತ್ತು. ಆಗ ಆ ಹಸುಗಳ ಮಂದೆಯಲ್ಲಿ ಒಂದು ಹುಲಿಯು ನುಗ್ಗಿತು. ಇದರಿಂದ ಹೆದರಿದ ಹಸುಗಳು ಎದ್ದು ಗೋಶಾಲೆಯಲ್ಲಿ ಅತ್ತ-ಇತ್ತ ಓಡಲು ತೊಡಗಿದವು.॥4॥
(ಶ್ಲೋಕ-5)
ಮೂಲಮ್
ಏಕಾಂ ಜಗ್ರಾಹ ಬಲವಾನ್ ಸಾ ಚುಕ್ರೋಶ ಭಯಾತುರಾ ।
ತಸ್ಯಾಸ್ತತ್ಕ್ರಂದಿತಂ ಶ್ರುತ್ವಾ ಪೃಷಧ್ರೋಽಭಿಸಸಾರ ಹ ॥
ಅನುವಾದ
ಬಲಶಾಲಿಯಾಗಿದ್ದ ಆ ಹುಲಿಯು ಒಂದು ಹಸುವನ್ನು ಹಿಡಿದುಕೊಂಡಿತು. ಅದು ಅತ್ಯಂತ ಭಯಗೊಂಡು ‘ಅಂಬಾ’ ಎಂದು ಕೂಗತೊಡಗಿತು. ಅದರ ಆ ಕರುಣಾ ಕ್ರಂದನವನ್ನು ಕೇಳಿದ ಪೃಷಧ್ರನು ಹಸುವಿನ ಬಳಿಗೆ ಓಡಿ ಬಂದನು.॥5॥
(ಶ್ಲೋಕ-6)
ಮೂಲಮ್
ಖಡ್ಗಮಾದಾಯ ತರಸಾ ಪ್ರಲೀನೋಡುಗಣೇ ನಿಶಿ ।
ಅಜಾನನ್ನಹನದ್ಬಭ್ರೋಃ ಶಿರಃ ಶಾರ್ದೂಲಶಂಕಯಾ ॥
ಅನುವಾದ
ಒಂದುಕಡೆ ರಾತ್ರಿಯ ಘೋರ ಅಂಧಕಾರ, ಮತ್ತೊಂದೆಡೆ ದಟ್ಟವಾದ ಮೋಡಗಳು ಕವಿದುದರಿಂದ ನಕ್ಷತ್ರಗಳೂ ಕಾಣುತ್ತಿರಲಿಲ್ಲ. ಅವನು ಕೈಯಲ್ಲಿ ಖಡ್ಗವನ್ನೆತ್ತಿಕೊಂಡು ಬಂದವನೇ ಹುಲಿಯನ್ನು ಕೊಲ್ಲಬೇಕೆಂದು ಖಡ್ಗಬೀಸಿದಾಗ ಹಸುವಿನ ಕತ್ತು ಕತ್ತರಿಸಿಹೋಯಿತು.॥6॥
(ಶ್ಲೋಕ-7)
ಮೂಲಮ್
ವ್ಯಾಘ್ರೋಽಪಿ ವೃಕ್ಣಶ್ರವಣೋ ನಿಸ್ತ್ರಿಂಶಾಗ್ರಾಹತಸ್ತತಃ ।
ನಿಶ್ಚಕ್ರಾಮ ಭೃಶಂ ಭೀತೋ ರಕ್ತಂ ಪಥಿ ಸಮುತ್ಸೃಜನ್ ॥
ಅನುವಾದ
ಹಸುವಿನ ತಲೆಯ ಜೊತೆಯಲ್ಲೇ ಖಡ್ಗದ ತುದಿಯಿಂದ ಹುಲಿಯ ಕಿವಿಯು ಕತ್ತರಿಸಿ ಹೋಯಿತು. ಅದು ಹೆದರಿ ದಾರಿಯಲ್ಲಿ ರಕ್ತವನ್ನು ಸುರಿಸುತ್ತಾ ಅಲ್ಲಿಂದ ಓಡಿ ಹೋಯಿತು. ॥7॥
(ಶ್ಲೋಕ-8)
ಮೂಲಮ್
ಮನ್ಯಮಾನೋ ಹತಂ ವ್ಯಾಘ್ರಂ ಪೃಷಧ್ರಃ ಪರವೀರಹಾ ।
ಅದ್ರಾಕ್ಷೀತ್ ಸ್ವಹತಾಂ ಬಭ್ರುಂ ವ್ಯಷ್ಟಾಯಾಂ ನಿಶಿ ದುಃಖಿತಃ ॥
ಅನುವಾದ
ಹುಲಿಯನ್ನೇ ಕೊಂದೆನೆಂದು ಶತ್ರುದಮನ ಪೃಷಧ್ರನು ತಿಳಿದನು. ಆದರೆ ರಾತ್ರಿಯು ಕಳೆಯುತ್ತಲೇ ನಾನು ಹಸುವನ್ನೇ ಕೊಂದಿದ್ದೇನೆ ಎಂದು ನೋಡಿದನು. ಇದರಿಂದ ಅವನಿಗೆ ಬಹಳ ದುಃಖವಾಯಿತು. ॥8॥
(ಶ್ಲೋಕ-9)
ಮೂಲಮ್
ತಂ ಶಶಾಪ ಕುಲಾಚಾರ್ಯಃ ಕೃತಾಗಸಮಕಾಮತಃ ।
ನ ಕ್ಷತ್ರಬಂಧುಃ ಶೂದ್ರಸ್ತ್ವಂ ಕರ್ಮಣಾ ಭವಿತಾಮುನಾ ॥
ಅನುವಾದ
ಪೃಷಧ್ರನು ತಿಳಿದು-ತಿಳಿದು ತಪ್ಪುಮಾಡದಿದ್ದರೂ ಕುಲಪುರೋಹಿತರಾದ ವಸಿಷ್ಠರು ‘ನೀನು ಈ ಗೋವಧೆಯಿಂದ ಕ್ಷತ್ರಿಯನಾಗಿ ಉಳಿಯಲಾರೆ; ಶೂದ್ರನಾಗಿ ಹೋಗು’ ಎಂದು ಶಾಪವನ್ನಿತ್ತರು. ॥9॥
(ಶ್ಲೋಕ-10)
ಮೂಲಮ್
ಏವಂ ಶಪ್ತಸ್ತು ಗುರುಣಾ ಪ್ರತ್ಯಗೃಹ್ಣಾತ್ಕೃತಾಂಜಲಿಃ ।
ಅಧಾರಯದ್ವ್ರತಂ ವೀರ ಊರ್ಧ್ವರೇತಾ ಮುನಿಪ್ರಿಯಮ್ ॥
ಅನುವಾದ
ಪೃಷಧ್ರನು ಗುರುಗಳ ಶಾಪವನ್ನು ಅಂಜಲಿ ಬದ್ಧನಾಗಿ ಸ್ವೀಕರಿಸಿದನು. ಬಳಿಕ ಅವನು ಎಂದೆಂದಿಗೂ ಮುನಿಗಳಿಗೆ ಪ್ರಿಯವಾದ ನೈಷ್ಠಿಕ ಬ್ರಹ್ಮಚರ್ಯವನ್ನು ಕೈಗೊಂಡನು. ॥10॥
ಮೂಲಮ್
(ಶ್ಲೋಕ-11)
ವಾಸುದೇವೇ ಭಗವತಿ ಸರ್ವಾತ್ಮನಿ ಪರೇಽಮಲೇ ।
ಏಕಾಂತಿತ್ವಂ ಗತೋ ಭಕ್ತ್ಯಾ ಸರ್ವಭೂತಸುಹೃತ್ಸಮಃ ॥
ಅನುವಾದ
ಅವನು ಸಮಸ್ತ ಪ್ರಾಣಿಗಳ ಅಹೈತುಕ ಹಿತೈಷಿಯಾಗಿ, ಎಲ್ಲರ ಕುರಿತು ಸಮಭಾವದಿಂದ ಕೂಡಿಕೊಂಡು ಭಕ್ತಿಯ ಮೂಲಕ ಪರಮ ವಿಶುದ್ಧನೂ, ಸರ್ವಾತ್ಮನೂ ಆದ ಭಗವಾನ್ ವಾಸುದೇವನ ಅನನ್ಯ ಪ್ರೇಮಿಯಾದನು.॥11॥
(ಶ್ಲೋಕ-12)
ಮೂಲಮ್
ವಿಮುಕ್ತಸಂಗಃ ಶಾಂತಾತ್ಮಾ ಸಂಯತಾಕ್ಷೋಽಪರಿಗ್ರಹಃ ।
ಯದೃಚ್ಛಯೋಪಪನ್ನೇನ ಕಲ್ಪಯನ್ ವೃತ್ತಿಮಾತ್ಮನಃ ॥
ಅನುವಾದ
ಅವನ ಎಲ್ಲ ಆಸಕ್ತಿಗಳು ಇಂಗಿಹೋದುವು. ವೃತ್ತಿಗಳು ಶಾಂತವಾದುವು. ಇಂದ್ರಿಯಗಳು ವಶವಾದುವು. ಅವನು ಎಂದೂ ಯಾವುದೇ ಸಂಗ್ರಹ-ಪರಿಗ್ರಹವನ್ನು ಇರಿಸಿ ಕೊಳ್ಳುತ್ತಿರಲಿಲ್ಲ. ದೈವವಶದಿಂದ ದೊರೆತುದರಲ್ಲೇ ತನ್ನ ಜೀವನ ನಿರ್ವಾಹ ನಡೆಸುತ್ತಿದ್ದನು. ॥12॥
(ಶ್ಲೋಕ-13)
ಮೂಲಮ್
ಆತ್ಮನ್ಯಾತ್ಮಾನಮಾಧಾಯ ಜ್ಞಾನತೃಪ್ತಃ ಸಮಾಹಿತಃ ।
ವಿಚಚಾರ ಮಹೀಮೇತಾಂ ಜಡಾಂಧಬಧಿರಾಕೃತಿಃ ॥
ಅನುವಾದ
ಅವನು ಆತ್ಮಜ್ಞಾನದಿಂದ ತೃಪ್ತನಾಗಿ ತನ್ನ ಚಿತ್ತವನ್ನು ಪರಮಾತ್ಮನಲ್ಲಿ ನೆಲೆಗೊಳಿಸಿ ಸಾಧಾರಣವಾಗಿ ಸಮಾಧಿಸ್ಥಿತಿಯಲ್ಲೇ ಇರು ತ್ತಿದ್ದನು. ಕೆಲವೊಮ್ಮೆ ಜಡನಂತೆಯೂ, ಕುರುಡನಂತೆಯೂ, ಕಿವುಡನಂತೆಯೂ ಇದ್ದು ಜಗತ್ತಿನಲ್ಲಿ ಸಂಚರಿಸುತ್ತಿದ್ದನು. ॥13॥
(ಶ್ಲೋಕ-14)
ಮೂಲಮ್
ಏವಂವೃತ್ತೋ ವನಂ ಗತ್ವಾ ದೃಷ್ಟ್ವಾ ದಾವಾಗ್ನಿಮುತ್ಥಿತಮ್ ।
ತೇನೋಪಯುಕ್ತ ಕರಣೋ ಬ್ರಹ್ಮ ಪ್ರಾಪ ಪರಂ ಮುನಿಃ ॥
ಅನುವಾದ
ಹೀಗೆ ಜೀವನ ನಡೆಸುತ್ತಾ ಅವನು ಒಂದುದಿನ ಕಾಡಿಗೆ ಹೋದನು. ಅಲ್ಲಿ ಕಾಡ್ಗಿಚ್ಚು ಧಗ-ಧಗನೆ ಉರಿಯು ತ್ತಿರುವುದನ್ನು ಕಂಡು, ಮನನಶೀಲನಾದ ಪೃಷಧ್ರನು ತನ್ನ ಶರೀರವನ್ನು ಅದೇ ಅಗ್ನಿಯಲ್ಲಿ ಭಸ್ಮಗೈಯ್ದು ಪರಬ್ರಹ್ಮ ಪರಮಾತ್ಮನನ್ನು ಹೊಂದಿದನು. ॥14॥
(ಶ್ಲೋಕ-15)
ಮೂಲಮ್
ಕವಿಃ ಕನೀಯಾನ್ವಿಷಯೇಷು ನಿಃಸ್ಪೃಹೋ
ವಿಸೃಜ್ಯ ರಾಜ್ಯಂ ಸಹ ಬಂಧುಭಿರ್ವನಮ್ ।
ನಿವೇಶ್ಯ ಚಿತ್ತೇ ಪುರುಷಂ ಸ್ವರೋಚಿಷಂ
ವಿವೇಶ ಕೈಶೋರವಯಾಃ ಪರಂ ಗತಃ ॥
ಅನುವಾದ
ಮನುವಿನ ಎಲ್ಲಕ್ಕಿಂತ ಕಿರಿಯ ಮಗನಾದ ಕವಿಯು ವಿಷಯಗಳಿಂದ ಅತ್ಯಂತ ನಿಃಸೃಹನಾಗಿದ್ದನು. ಅವನು ರಾಜ್ಯವನ್ನು ತ್ಯಜಿಸಿ ತನ್ನ ಬಂಧುಗಳೊಡನೆ ಕಾಡಿಗೆ ಹೊರಟು ಹೋದನು ಮತ್ತು ಹೃದಯದಲ್ಲಿ ಸ್ವಯಂ ಪ್ರಕಾಶನಾದ ಪರಮಾತ್ಮನನ್ನು ಧ್ಯಾನದ ಮೂಲಕ ಕಂಡುಕೊಂಡು ಬಾಲ್ಯ ದಲ್ಲೇ ಪರಮಪದವನ್ನು ಪಡೆದನು. ॥15॥
(ಶ್ಲೋಕ-16)
ಮೂಲಮ್
ಕರೂಷಾನ್ಮಾನವಾದಾಸನ್ ಕಾರೂಷಾಃ ಕ್ಷತ್ರಜಾತಯಃ ।
ಉತ್ತರಾಪಥಗೋಪ್ತಾರೋ ಬ್ರಹ್ಮಣ್ಯಾ ಧರ್ಮವತ್ಸಲಾಃ ॥
ಅನುವಾದ
ಮನುವಿನ ಮತ್ತೊಬ್ಬ ಪುತ್ರ ಕರೂಷನಿಂದ ಕರೂಷರೆಂಬ ಕ್ಷತ್ರಿಯರು ಉತ್ಪನ್ನರಾದರು. ಅವರೆಲ್ಲರೂ ಬ್ರಾಹ್ಮಣ ಭಕ್ತರೂ, ಧರ್ಮ ಪ್ರೇಮಿಗಳೂ ಆಗಿದ್ದು, ಉತ್ತರ ದಿಕ್ಕಿನ ರಕ್ಷಕರಾದರು. ॥16॥
(ಶ್ಲೋಕ-17)
ಮೂಲಮ್
ಧೃಷ್ಟಾದ್ಧಾರ್ಷ್ಟಮಭೂತ್ ಕ್ಷತ್ರಂ ಬ್ರಹ್ಮಭೂಯಂ ಗತಂ ಕ್ಷಿತೌ ।
ನೃಗಸ್ಯ ವಂಶಃ ಸುಮತಿರ್ಭೂತಜ್ಯೋತಿಸ್ತತೋ ವಸುಃ ॥
ಅನುವಾದ
ಮತ್ತೊಬ್ಬ ಮಗನಾದ ಧೃಷ್ಟನಿಂದ ಧಾರ್ಷ್ಟರೆಂಬ ಕ್ಷತ್ರಿಯರಾದರು. ಕೊನೆಗೆ ಅವನು ಈ ಶರೀರದಿಂದಲೇ (ಕ್ಷತ್ರಿಯ ಶರೀರದಿಂದಲೇ) ಬ್ರಾಹ್ಮಣರಾದರು. ನೃಗನಿಗೆ ಸುಮತಿ ಎಂಬ ಪುತ್ರನಾದನು. ಅವನ ಪುತ್ರ ಭೂತಜ್ಯೋತಿ ಮತು ಭೂತಜ್ಯೋತಿಯ ಪುತ್ರ ವಸು ಎಂಬುವವನಿದ್ದನು. ॥17॥
(ಶ್ಲೋಕ-18)
ಮೂಲಮ್
ವಸೋಃ ಪ್ರತೀಕಸ್ತತ್ಪುತ್ರ ಓಘವಾನೋಘವತ್ಪಿತಾ ।
ಕನ್ಯಾ ಚೌಘವತೀ ನಾಮ ಸುದರ್ಶನ ಉವಾಹ ತಾಮ್ ॥
ಅನುವಾದ
ವಸುವಿನ ಪುತ್ರ ಪ್ರತೀಕ ಹಾಗೂ ಪ್ರತೀಕನ ಮಗ ಓಘವಾನ್. ಓಘವಂತನ ಮಗನ ಹೆಸರೂ ಓಘವಂತ ಎಂದೇ ಇತ್ತು. ಅವನಿಗೆ ಓಘವತಿ ಎಂಬ ಓರ್ವ ಕನ್ಯೆಯೂ ಇದ್ದಳು. ಅವಳ ವಿವಾಹವು ಸುದರ್ಶನನೊಂದಿಗೆ ಆಯಿತು. ॥18॥
(ಶ್ಲೋಕ-19)
ಮೂಲಮ್
ಚಿತ್ರಸೇನೋ ನರಿಷ್ಯಂತಾದೃಕ್ಷಸ್ತಸ್ಯ ಸುತೋಽಭವತ್ ।
ತಸ್ಯ ಮೀಢ್ವಾಂಸ್ತತಃ ಕೂರ್ಚ ಇಂದ್ರಸೇನಸ್ತು ತತ್ಸುತಃ ॥
ಅನುವಾದ
ಮನು ಪುತ್ರ ನರಿಷ್ಯಂತ ನಿಂದ ಚಿತ್ರಸೇನ, ಅವನಿಂದ ಋಕ್ಷ,ಋಕ್ಷನಿಂದ ಮೀಢ ವಾನ್, ಮೀಢ್ವಂತನಿಂದ ಕೂರ್ಚ ಮತ್ತು ಅವನಿಂದ ಇಂದ್ರಸೇನ ಉತ್ಪತ್ತಿಯಾದರು. ॥19॥
(ಶ್ಲೋಕ-20)
ಮೂಲಮ್
ವೀತಿಹೋತ್ರಸ್ತ್ವಿಂದ್ರಸೇನಾತ್ತಸ್ಯ ಸತ್ಯಶ್ರವಾ ಅಭೂತ್ ।
ಉರುಶ್ರವಾಃ ಸುತಸ್ತಸ್ಯ ದೇವದತ್ತಸ್ತತೋಽಭವತ್ ॥
ಅನುವಾದ
ಇಂದ್ರಸೇನನಿಂದ ವೀತಿಹೋತ್ರ, ಅವನಿಂದ ಸತ್ಯಶ್ರವಾ, ಸತ್ಯಶ್ರವಸ್ಸಿನಿಂದ ಉರುಶ್ರವಾ ಮತ್ತು ಅವನಿಂದ ದೇವದತ್ತನ ಉತ್ಪತ್ತಿಯಾಯಿತು. ॥20॥
(ಶ್ಲೋಕ-21)
ಮೂಲಮ್
ತತೋಽಗ್ನಿವೇಶ್ಯೋ ಭಗವಾನಗ್ನಿಃ ಸ್ವಯಮಭೂತ್ಸುತಃ ।
ಕಾನೀನ ಇತಿ ವಿಖ್ಯಾತೋ ಜಾತೂಕರ್ಣ್ಯೋ ಮಹಾನೃಷಿಃ ॥
ಅನುವಾದ
ದೇವದತ್ತನಿಗೆ ಅಗ್ನಿವೇಶ್ಯನೆಂಬ ಪುತ್ರನು ಜನಿಸಿದನು. ಅವನು ಸಾಕ್ಷಾತ್ ಅಗ್ನಿದೇವನೇ ಆಗಿದ್ದನು. ಮುಂದೆ ಅವನೇ ಕಾನೀನ ಮತ್ತು ಮಹರ್ಷಿ ಜಾತೂಕರ್ಣ್ಯ ಎಂಬ ಹೆಸರಿನಿಂದ ವಿಖ್ಯಾತನಾದನು. ॥21॥
(ಶ್ಲೋಕ-22)
ಮೂಲಮ್
ತತೋ ಬ್ರಹ್ಮಕುಲಂ ಜಾತಮಾಗ್ನಿವೇಶ್ಯಾಯನಂ ನೃಪ ।
ನರಿಷ್ಯಂತಾನ್ವಯಃ ಪ್ರೋಕ್ತೋ ದಿಷ್ಟವಂಶಮತಃ ಶೃಣು ॥
ಅನುವಾದ
ಪರೀಕ್ಷಿತನೇ! ಬ್ರಾಹ್ಮಣರ ‘ಅಗ್ನಿವೇಶ್ಯಾಯನ’ ಎಂಬ ಗೋತ್ರ ಇವನಿಂದಲೇ ಪ್ರವರ್ತಿತವಾಯಿತು. ಹೀಗೆ ನರಿಷ್ಯಂತನ ವಂಶವನ್ನು ನಾನು ವರ್ಣಿಸಿದೆ. ಈಗ ದಿಷ್ಟಿಯ ವಂಶವನ್ನು ಕೇಳು. ॥22॥
(ಶ್ಲೋಕ-23)
ಮೂಲಮ್
ನಾಭಾಗೋ ದಿಷ್ಟಪುತ್ರೋಽನ್ಯಃ ಕರ್ಮಣಾ ವೈಶ್ಯತಾಂ ಗತಃ ।
ಭಲಂದನಃ ಸುತಸ್ತಸ್ಯ ವತ್ಸಪ್ರೀತಿರ್ಭಲಂದನಾತ್ ॥
ಅನುವಾದ
ದಿಷ್ಟಿಯ ಮಗನ ಹೆಸರು ನಾಭಾಗ ಎಂದಿತ್ತು. ನಾನು ಮುಂದೆ ವರ್ಣಿಸುವ ನಾಭಾಗನಿಂದ ಇವನು ಬೇರೆಯಾಗಿದ್ದನು. ಅವನು ತನ್ನ ಕರ್ಮದ ಕಾರಣದಿಂದಾಗಿ ವೈಶ್ಯನಾದನು. ಅವನ ಪುತ್ರ ಭಲಂದನ ಮತ್ತು ಅವನಿಗೆ ವತ್ಸಪ್ರೀತಿ ಹುಟ್ಟಿದನು.॥23॥
(ಶ್ಲೋಕ-24)
ಮೂಲಮ್
ವತ್ಸಪ್ರೀತೇಃ ಸುತಃ ಪ್ರಾಂಶುಸ್ತತ್ಸುತಂ ಪ್ರಮತಿಂ ವಿದುಃ ।
ಖನಿತ್ರಃ ಪ್ರಮತೇಸ್ತಸ್ಮಾಚ್ಚಾಕ್ಷುಷೋಽಥ ವಿವಿಂಶತಿಃ ॥
ಅನುವಾದ
ವತ್ಸ ಪ್ರೀತಿಯ ಪ್ರಾಂಶು, ಪ್ರಾಂಶುವಿನ ಪುತ್ರ ಪ್ರಮತಿಯಾದನು. ಪ್ರಮತಿಯಿಂದ ಖನಿತ್ರ, ಖನಿತ್ರನಿಂದ ಚಾಕ್ಷುಷ, ಅವನಿಗೆ ವಿವಿಂಶತಿ ಪುತ್ರನಾದನು. ॥24॥
(ಶ್ಲೋಕ-25)
ಮೂಲಮ್
ವಿವಿಂಶತಿಸುತೋ ರಂಭಃ ಖನಿನೇತ್ರೋಽಸ್ಯ ಧಾರ್ಮಿಕಃ ।
ಕರಂಧಮೋ ಮಹಾರಾಜ ತಸ್ಯಾಸೀದಾತ್ಮಜೋ ನೃಪ ॥
(ಶ್ಲೋಕ-26)
ಮೂಲಮ್
ತಸ್ಯಾವೀಕ್ಷಿತ್ಸುತೋ ಯಸ್ಯ ಮರುತ್ತಶ್ಚಕ್ರವರ್ತ್ಯಭೂತ್ ।
ಸಂವರ್ತೋಽಯಾಜಯದ್ ಯಂ ವೈ ಮಹಾಯೋಗ್ಯಂಗಿರಃಸುತಃ ॥
ಅನುವಾದ
ವಿವಿಂಶತಿಯ ಪುತ್ರರಂಭ, ರಂಭನ ಪುತ್ರ ಖನಿನೇತ್ರ. ಇವರಿಬ್ಬರೂ ಪರಮ ಧಾರ್ಮಿಕರಾಗಿದ್ದರು. ಅವನ ಪುತ್ರ ಕರಂಧಮ, ಕರಂಧಮನ ಮಗ ಅವೀಕ್ಷಿತ್, ಪರೀಕ್ಷಿದ್ರಾಜನೇ! ಅವೀಕ್ಷಿವಂತನ ಪುತ್ರ ಮರುತ್ತಮ ಚಕ್ರವರ್ತಿ ರಾಜನಾದನು. ಅವನಿಂದ ಅಂಗಿರಸ್ಸುವಿನ ಪುತ್ರ ಮಹಾ ಯೋಗಿ ಸಂವರ್ತಕ ಋಷಿಯು ಯಜ್ಞವನ್ನು ಮಾಡಿಸಿದ್ದನು. ॥25-26॥
(ಶ್ಲೋಕ-27)
ಮೂಲಮ್
ಮರುತ್ತಸ್ಯ ಯಥಾ ಯಜ್ಞೋ ನ ತಥಾನ್ಯಸ್ಯ ಕಶ್ಚನ ।
ಸರ್ವಂ ಹಿರಣ್ಮಯಂ ತ್ವಾಸೀದ್ಯತ್ಕಿಂಚಿಚ್ಚಾಸ್ಯ ಶೋಭನಮ್ ॥
ಅನುವಾದ
ಮರುತ್ತ ಚಕ್ರವರ್ತಿಯ ಯಜ್ಞದಂತೆ ಬೇರೆಯಾವ ಯಜ್ಞವೂ ಆಗಲಿಲ್ಲ. ಆ ಯಜ್ಞದಲ್ಲಿ ಉಪಯೋಗಿಸುತ್ತಿದ್ದ ಸಮಸ್ತ ಪಾತ್ರೆಗಳು ಸುಂದರ ವಾಗಿಯೂ, ಸುವರ್ಣಮಯವಾಗಿಯೂ ಆಗಿದ್ದವು. ॥27॥
(ಶ್ಲೋಕ-28)
ಮೂಲಮ್
ಅಮಾದ್ಯದಿಂದ್ರಃ ಸೋಮೇನ ದಕ್ಷಿಣಾಭಿರ್ದ್ವಿಜಾತಯಃ ।
ಮರುತಃ ಪರಿವೇಷ್ಟಾರೋ ವಿಶ್ವೇದೇವಾಃ ಸಭಾಸದಃ ॥
ಅನುವಾದ
ಆ ಯಜ್ಞದಲ್ಲಿ ಸೋಮಪಾನ ಮಾಡಿದ ಇಂದ್ರನು ಮತ್ತನಾಗಿದ್ದನು. ದಕ್ಷಿಣೆಗಳಿಂದ ಬ್ರಾಹ್ಮಣರು ತೃಪ್ತರಾಗಿದ್ದರು. ಅಲ್ಲಿ ಬಡಿಸುವವರು ಮರುದ್ಗಣರಾಗಿದ್ದು, ಸಭಾಸದರು ವಿಶ್ವೇದೇವತೆಗಳಾಗಿದ್ದರು. ॥28॥
(ಶ್ಲೋಕ-29)
ಮೂಲಮ್
ಮರುತ್ತಸ್ಯ ದಮಃ ಪುತ್ರಸ್ತಸ್ಯಾಸೀದ್ರಾಜ್ಯವರ್ಧನಃ ।
ಸುಧೃತಿಸ್ತತ್ಸುತೋ ಜಜ್ಞೇ ಸೌಧೃತೇಯೋ ನರಃ ಸುತಃ ॥
ಅನುವಾದ
ಮರುತ್ತನಿಗೆ ದಮ ನೆಂಬ ಪುತ್ರನಿದ್ದನು. ದಮನಿಂದ ರಾಜವರ್ಧನ, ಅವನಿಂದ ಸುಧೃತಿ ಮತ್ತು ಸುಧೃತಿಯಿಂದ ನರನೆಂಬ ಪುತ್ರನು ಹುಟ್ಟಿದನು. ॥29॥
(ಶ್ಲೋಕ-30)
ಮೂಲಮ್
ತತ್ಸುತಃ ಕೇವಲಸ್ತಸ್ಮಾದ್ಬಂಧುಮಾನ್ವೇಗವಾಂಸ್ತತಃ ।
ಬಂಧುಸ್ತಸ್ಯಾಭವದ್ಯಸ್ಯ ತೃಣಬಿಂದುರ್ಮಹೀಪತಿಃ ॥
ಅನುವಾದ
ನರನಿಂದ ಕೇವಲ, ಕೇವಲನಿಂದ ಬಂಧುಮಾನ್, ಬಂಧುಮಂತನಿಂದ ವೇಗವಾನ್, ವೇಗವಂತನಿಂದ ಬಂಧು ಹಾಗೂ ಬಂಧುವಿನಿಂದ ತೃಣಬಿಂದು ರಾಜನ ಜನ್ಮವಾಯಿತು. ॥30॥
(ಶ್ಲೋಕ-31)
ಮೂಲಮ್
ತಂ ಭೇಜೇಽಲಂಬುಷಾ ದೇವೀ ಭಜನೀಯಗುಣಾಲಯಮ್ ।
ವರಾಪ್ಸರಾ ಯತಃ ಪುತ್ರಾಃ ಕನ್ಯಾ ಚೇಡವಿಡಾಭವತ್ ॥
ಅನುವಾದ
ತೃಣಬಿಂದುವು ಆದರ್ಶ ಗುಣಗಳ ಭಂಡಾರನಾಗಿದ್ದನು. ಅಪ್ಸರೆಯರಲ್ಲಿ ಶ್ರೇಷ್ಠಳಾದ ಅಲಂಬುಷಾದೇವಿಯು ಇವನನ್ನು ವರಿಸಿದಳು. ಅವಳಿಂದ ಅವನಿಗೆ ಕೆಲವು ಪುತ್ರರೂ ಮತ್ತು ಇಡವಿಡಾ ಎಂಬ ಒಂದು ಕನ್ಯೆಯೂ ಹುಟ್ಟಿದಳು. ॥31॥
(ಶ್ಲೋಕ-32)
ಮೂಲಮ್
ತಸ್ಯಾಮುತ್ಪಾದಯಾಮಾಸ ವಿಶ್ರವಾ ಧನದಂ ಸುತಮ್ ।
ಪ್ರಾದಾಯ ವಿದ್ಯಾಂ ಪರಮಾಮೃಷಿರ್ಯೋಗೇಶ್ವರಾತ್ಪಿತುಃ ॥
ಅನುವಾದ
ಮುನಿ ಶ್ರೇಷ್ಠರಾದ ವಿಶ್ರವಸುವು ತನ್ನ ಯೋಗೇಶ್ವರ ತಂದೆಯಾದ ಪುಲಸ್ತ್ಯರಿಂದ ಉತ್ತಮ ವಿದ್ಯೆಯನ್ನು ಪಡೆದು, ಇಡವಿಡಾ ಗರ್ಭದಿಂದ ಲೋಕಪಾಲ ಕುಬೇರನನ್ನು ಪುತ್ರನನ್ನಾಗಿ ಪಡೆದನು. ॥32॥
(ಶ್ಲೋಕ-33)
ಮೂಲಮ್
ವಿಶಾಲಃ ಶೂನ್ಯಬಂಧುಶ್ಚ ಧೂಮ್ರಕೇತುಶ್ಚ ತತ್ಸುತಾಃ ।
ವಿಶಾಲೋ ವಂಶಕೃದ್ರಾಜಾ ವೈಶಾಲೀಂ ನಿರ್ಮಮೇ ಪುರೀಮ್ ॥
ಅನುವಾದ
ತೃಣಬಿಂದು ಮಹಾರಾಜನು ತನ್ನ ಧರ್ಮಪತ್ನಿಯಿಂದ ವಿಶಾಲ, ಶೂನ್ಯ ಬಂಧು ಮತ್ತು ಧೂಮ್ರಕೇತು ಎಂಬ ಮೂವರು ಪುತ್ರರನ್ನು ಪಡೆದನು. ಅವರಲ್ಲಿ ವಿಶಾಲರಾಜನು ವಂಶಧರನಾದನು. ಅವನು ವೈಶಾಲಿ ಎಂಬ ನಗರವನ್ನು ಸ್ಥಾಪಿಸಿದನು. ॥33॥
(ಶ್ಲೋಕ-34)
ಮೂಲಮ್
ಹೇಮಚಂದ್ರಃ ಸುತಸ್ತಸ್ಯ ಧೂಮ್ರಾಕ್ಷಸ್ತಸ್ಯ ಚಾತ್ಮಜಃ ।
ತತ್ಪುತ್ರಾತ್ಸಂಯಮಾದಾಸೀತ್ಕೃಶಾಶ್ವಃ ಸಹದೇವಜಃ ॥
ಅನುವಾದ
ವಿಶಾಲನಿಂದ ಹೇಮಚಂದ್ರ, ಹೇಮ ಚಂದ್ರನಿಂದ ಧೂಮ್ರಾಕ್ಷ, ಧೂಮ್ರಾಕ್ಷನಿಂದ ಸಂಯಮ ಮತ್ತು ಸಂಯಮನಿಂದ ಕೃಶಾಶ್ವ ಮತ್ತು ದೇವಜರೆಂಬ ಈರ್ವರು ಪುತ್ರರು ಉದಿಸಿದರು. ॥34॥
(ಶ್ಲೋಕ-35)
ಮೂಲಮ್
ಕೃಶಾಶ್ವಾತ್ಸೋಮದತ್ತೋಽಭೂದ್ಯೋಶ್ವಮೇಧೈರಿಡಸ್ಪತಿಮ್ ।
ಇಷ್ಟ್ವಾ ಪುರುಷಮಾಪಾಗ್ರ್ಯಾಂ ಗತಿಂ ಯೋಗೇಶ್ವರಾಶ್ರಿತಃ ॥
ಅನುವಾದ
ಕೃಶಾಶ್ವನಿಗೆ ಸೋಮದತ್ತನೆಂಬ ಪುತ್ರನಿದ್ದನು. ಅವನು ಅಶ್ವಮೇಧದ ಮೂಲಕ ಯಜ್ಞಪತಿ ಭಗವಂತನನ್ನು ಆರಾಧಿಸಿ, ಯೋಗೇಶ್ವರ ಮಹಾತ್ಮರ ಆಶ್ರಯ ಪಡೆದು ಉತ್ತಮಗತಿಯನ್ನು ಪಡೆದುಕೊಂಡನು. ॥35॥
(ಶ್ಲೋಕ-36)
ಮೂಲಮ್
ಸೌಮದತ್ತಿಸ್ತು ಸುಮತಿಸ್ತತ್ಸುತೋ ಜನಮೇಜಯಃ ।
ಏತೇ ವೈಶಾಲಭೂಪಾಲಾಸ್ತೃಣಬಿಂದೋರ್ಯಶೋಧರಾಃ ॥
ಅನುವಾದ
ಸೋಮದತ್ತನ ಮಗ ಸುಮತಿಯಾದನು ಮತ್ತು ಸುಮತಿಯಿಂದ ಜನಮೇಜಯ ನಾದನು. ಇವರೆಲ್ಲರೂ ತೃಣಬಿಂದುವಿನ ಕೀರ್ತಿಯನ್ನು ಬೆಳೆಸುವ ವಿಶಾಲ ವಂಶದ ರಾಜರಾಗಿದ್ದರು. ॥36॥
ಅನುವಾದ (ಸಮಾಪ್ತಿಃ)
ಎರಡನೆಯ ಅಧ್ಯಾಯವು ಮುಗಿಯಿತು. ॥2॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮ ಸ್ಕಂಧೇ ದ್ವಿತೀಯೋಽಧ್ಯಾಯಃ ॥2॥