[ಮೂವತ್ತನೆಯ ಅಧ್ಯಾಯ]
ಭಾಗಸೂಚನಾ
ಶರೀರದಲ್ಲಿ ಮನೆಯಲ್ಲಿ ಆಸಕ್ತರಾದ ಮನುಷ್ಯರು ಹೊಂದುವ ಅಧೋಗತಿಯ ವರ್ಣನೆ
(ಶ್ಲೋಕ - 1)
ಮೂಲಮ್ (ವಾಚನಮ್)
ಕಪಿಲ ಉವಾಚ
ಮೂಲಮ್
ತಸ್ಯೈತಸ್ಯ ಜನೋ ನೂನಂ ನಾಯಂ ವೇದೋರುವಿಕ್ರಮಮ್ ।
ಕಾಲ್ಯಮಾನೋಪಿ ಬಲಿನೋ ವಾಯೋರಿವ ಘನಾವಲಿಃ ॥
ಅನುವಾದ
ಶ್ರೀಕಪಿಲಭಗವಂತನು ಹೇಳುತ್ತಾನೆ ಅಮ್ಮಾ ! ಪ್ರಬಲವಾದ ಬಿರುಗಾಳಿಯು ಹೊಡೆದುಕೊಂಡು ಹೋಗುತ್ತಿರುವ ಮೇಘ ಸಮೂಹವು ಗಾಳಿಯ ಬಲವನ್ನು ಅರಿಯದಂತೆ, ಈ ಜೀವಿಯೂ ಕೂಡ ಬಲಶಾಲಿಯಾದ ಕಾಲನ ಪ್ರೇರಣೆಯಿಂದ ಬೇರೆ-ಬೇರೆ ಅವಸ್ಥೆಗಳಲ್ಲಿಯೂ ಹಾಗೂ ಯೋನಿಗಳಲ್ಲಿಯೂ ಅಲೆದಾಡು ತ್ತಿದ್ದರೂ ಕಾಲದ ಪ್ರಬಲ ಪರಾಕ್ರಮವನ್ನು ತಿಳಿಯುವುದಿಲ್ಲ.॥1॥
(ಶ್ಲೋಕ - 2)
ಮೂಲಮ್
ಯಂ ಯಮರ್ಥಮುಪಾದತ್ತೇ ದುಃಖೇನ ಸುಖಹೇತವೇ ।
ತಂ ತಂ ಧುನೋತಿ ಭಗವಾನ್ಪುಮಾನ್ ಶೋಚತಿ ಯತ್ಕೃತೇ ॥
ಅನುವಾದ
ಜೀವಿಯು ಸುಖದ ಬಯಕೆಯಿಂದ ಯಾವ-ಯಾವ ವಸ್ತುಗಳನ್ನು ತುಂಬಾ ಕಷ್ಟಪಟ್ಟು ಗಳಿಸುತ್ತಾನೆಯೋ, ಅವನ್ನೆಲ್ಲಾ ಕಾಲರೂಪಿ ಯಾದ ಭಗವಂತನು ನಾಶಪಡಿಸಿ, ಈ ಜೀವಿಗೆ ಮಹಾಶೋಕವನ್ನು ತರುತ್ತಾನೆ.॥2॥
(ಶ್ಲೋಕ - 3)
ಮೂಲಮ್
ಯದಧ್ರುವಸ್ಯ ದೇಹಸ್ಯ ಸಾನುಬಂಧಸ್ಯ ದುರ್ಮತಿಃ ।
ಧ್ರುವಾಣಿ ಮನ್ಯತೇ ಮೋಹಾದ್ಗೃಹಕ್ಷೇತ್ರವಸೂನಿ ಚ ॥
ಅನುವಾದ
ಮಂದಮತಿಯಾದ ಜೀವಿಯು ತನ್ನ ಈ ನಾಶವುಳ್ಳ ಶರೀರವನ್ನೂ ಹಾಗೂ ಇದರ ಸಂಬಂಧಿಗಳನ್ನೂ, ಮನೆ, ಹೊಲ, ಧನಾದಿಗಳನ್ನು ನಿತ್ಯವೆಂದು ತಿಳಿಯುವುದೇ ಇದರ ಕಾರಣವಾಗಿದೆ.॥3॥
(ಶ್ಲೋಕ - 4)
ಮೂಲಮ್
ಜಂತುರ್ವೈ ಭವ ಏತಸ್ಮಿನ್ಯಾಂ ಯಾಂ ಯೋನಿಮನುವ್ರಜೇತ್ ।
ತಸ್ಯಾಂ ತಸ್ಯಾಂ ಸ ಲಭತೇ ನಿರ್ವೃತಿಂ ನ ವಿರಜ್ಯತೇ ॥
ಅನುವಾದ
ಈ ಪ್ರಪಂಚದಲ್ಲಿ ಜೀವಿಯು ತಾನು ಹುಟ್ಟುವ ಯೋನಿಗಳಲ್ಲೇ ಆನಂದವನ್ನು ಅನುಭವಿಸತೊಡಗುತ್ತಾನೆ. ಅದ ರಿಂದ ಎಂದಿಗೂ ವಿರಕ್ತನಾಗುವುದೇ ಇಲ್ಲ.॥4॥
(ಶ್ಲೋಕ - 5)
ಮೂಲಮ್
ನರಕಸ್ಥೋಪಿ ದೇಹಂ ವೈ ನ ಪುಮಾಂಸ್ತ್ಯಕ್ತುಮಿಚ್ಛತಿ ।
ನಾರಕ್ಯಾಂ ನಿರ್ವೃತೌ ಸತ್ಯಾಂ ದೇವಮಾಯಾವಿಮೋಹಿತಃ ॥
ಅನುವಾದ
ಇವನು ಭಗ ವಂತನ ಮಾಯೆಯಿಂದ ಕರ್ಮವಶನಾಗಿ ನರಕಸಂಬಂಧವಾದ ಯೋನಿಗಳಲ್ಲಿ ಹುಟ್ಟಿದರೂ ಅಲ್ಲಿಯ ಅಸಹ್ಯ ಪದಾರ್ಥಗಳ ಭೋಗಗಳಲ್ಲೇ ಸುಖವನ್ನೂ ತಿಳಿಯುವ ಕಾರಣದಿಂದ ಅದನ್ನು ಬಿಡಲಾರದಷ್ಟು ಮೋಹಿತನಾಗುತ್ತಿದ್ದಾನೆ.॥5॥
(ಶ್ಲೋಕ - 6)
ಮೂಲಮ್
ಆತ್ಮಜಾಯಾಸುತಾಗಾರಪಶುದ್ರವಿಣಬಂಧುಷು ।
ನಿರೂಢಮೂಲಹೃದಯ ಆತ್ಮಾನಂ ಬಹು ಮನ್ಯತೇ ॥
ಅನುವಾದ
ಈ ಮೂರ್ಖನು ತನ್ನ ಶರೀರ, ಪತ್ನೀ, ಪುತ್ರರು, ಮನೆ, ಪಶು, ಧನ, ಬಂಧು-ಬಾಂಧ ವರು ಇವರಲ್ಲಿ ಅತ್ಯಂತ ಆಸಕ್ತನಾಗಿ ಅವರ ಸಂಬಂಧದಲ್ಲಿ ನಾನಾ ಬಗೆಯ ಮನೋರಥಗಳನ್ನು ಮಾಡುತ್ತಾ, ತನ್ನನ್ನು ಮಹಾಭಾಗ್ಯ ಶಾಲಿಯೆಂದು ತಿಳಿಯುತ್ತಿರುವನು.॥6॥
(ಶ್ಲೋಕ - 7)
ಮೂಲಮ್
ಸಂದಹ್ಯಮಾನಸರ್ವಾಂಗ ಏಷಾಮುದ್ವಹನಾಧಿನಾ ।
ಕರೋತ್ಯವಿರತಂ ಮೂಢೋ ದುರಿತಾನಿ ದುರಾಶಯಃ ॥
ಅನುವಾದ
ಅವರನ್ನು ಸಾಕಿ-ಸಲಹುವ ಚಿಂತೆಯಿಂದ ಈತನ ಅಂಗಾಂಗಗಳು ಉರಿಯುತ್ತಾ ಇರುತ್ತವೆ. ಆದರೂ ಹೃದಯವು ದುಷ್ಟವಾಸನೆಗಳಿಂದ ದೂಷಿತವಾಗಿರುವು ದರಿಂದ ಈ ತಿಳಿಗೇಡಿಯು ಅವರಿಗಾಗಿಯೇ ನಾನಾರೀತಿಯ ಪಾಪಗಳನ್ನು ಮಾಡುತ್ತಾ ಇರುತ್ತಾನೆ.॥7॥
(ಶ್ಲೋಕ - 8)
ಮೂಲಮ್
ಆಕ್ಷಿಪ್ತಾತ್ಮೇಂದ್ರಿಯಃ ಸೀಣಾಮಸತೀನಾಂ ಚ ಮಾಯಯಾ ।
ರಹೋರಚಿತಯಾಲಾಪೈಃ ಶಿಶೂನಾಂ ಕಲಭಾಷಿಣಾಮ್ ॥
(ಶ್ಲೋಕ - 9)
ಮೂಲಮ್
ಗೃಹೇಷು ಕೂಟಧರ್ಮೇಷು ದುಃಖತಂತ್ರೇಷ್ವತಂದ್ರಿತಃ ।
ಕುರ್ವನ್ದುಃಖಪ್ರತೀಕಾರಂ ಸುಖವನ್ಮನ್ಯತೇ ಗೃಹೀ ॥
ಅನುವಾದ
ಕುಲಟೆಯರು ಏಕಾಂತ ದಲ್ಲಿ ತೋರಿಸುವ ಕಪಟಪ್ರೇಮದಲ್ಲಿಯೂ, ಶಿಶುಗಳ ಮುದ್ದು ಮಾತುಗಳಲ್ಲಿಯೂ ಮನಸ್ಸು, ಇಂದ್ರಿಯಗಳು ಸಿಕ್ಕಿಹಾಕಿಕೊಳ್ಳುವು ದರಿಂದ ಗೃಹಸ್ಥನು ಮನೆಗೆ ಸಂಬಂಧಪಟ್ಟ ದುಃಖಪ್ರಧಾನವಾದ ಕಪಟಕರ್ಮಗಳಲ್ಲಿ ನಿರತನಾಗಿರುತ್ತಾನೆ. ಈ ನಡುವೆ ತನ್ನ ಯಾವು ದಾದರೂ ಒಂದು ದುಃಖದ ಪ್ರತೀಕಾರಮಾಡಲು ತನಗೆ ಸಾಧ್ಯ ವಾದರೆ ಅದನ್ನೇ ಸುಖವೆಂದು ಭ್ರಮಿಸುವನು.॥8-9॥
(ಶ್ಲೋಕ - 10)
ಮೂಲಮ್
ಅರ್ಥೈರಾಪಾದಿತೈರ್ಗುರ್ವ್ಯಾ ಹಿಂಸಯೇತಸ್ತತಶ್ಚ ತಾನ್ ।
ಪುಷ್ಣಾತಿ ಯೇಷಾಂ ಪೋಷೇಣ ಶೇಷಭುಗ್ಯಾತ್ಯಧಃ ಸ್ವಯಮ್ ॥
ಅನುವಾದ
ಭಯಂಕರವಾದ ಹಿಂಸಾವೃತ್ತಿಯ ಮೂಲಕ ಎಲ್ಲೆಲ್ಲಿಂದಲೂ ಹಣ ವನ್ನು ಸಂಗ್ರಹಿಸಿ ಯಾರನ್ನು ಸಾಕುವುದರಿಂದ ತಾನು ನರಕಕ್ಕೆ ಹೋಗಬೇಕಾಗುತ್ತದೋ ಅವರನ್ನೇ ಸಾಕುವನು. ಅವರು ತಿಂದು- ಕುಡಿದು ಮಿಕ್ಕಿದ್ದನ್ನು ತಾನು ಸೇವಿಸುವನು.॥10॥
(ಶ್ಲೋಕ - 11)
ಮೂಲಮ್
ವಾರ್ತಾಯಾಂ ಲುಪ್ಯಮಾನಾಯಾಮಾರಬ್ಧಾಯಾಂ ಪುನಃ ಪುನಃ ।
ಲೋಭಾಭಿಭೂತೋ ನಿಃಸತ್ತ್ವಃ ಪರಾರ್ಥೇ ಕುರುತೇ ಸ್ಪೃಹಾಮ್ ॥
ಅನುವಾದ
ಪದೇ-ಪದೇ ಪ್ರಯತ್ನಪಟ್ಟರೂ ಇವನ ಜೀವನವು ನಡೆಯ ದಿದ್ದರೆ ಅವನು ಲೋಭವಶದಿಂದ ಧೈರ್ಯಗೆಟ್ಟು ಮತ್ತೊಬ್ಬರ ಹಣವನ್ನು ಕಸಿದುಕೊಳ್ಳಲು ಆಸೆಪಡುವನು.॥11॥
(ಶ್ಲೋಕ - 12)
ಮೂಲಮ್
ಕುಟುಂಬಭರಣಾಕಲ್ಪೋ ಮಂದಭಾಗ್ಯೋ ವೃಥೋದ್ಯಮಃ ।
ಶ್ರಿಯಾ ವಿಹೀನಃ ಕೃಪಣೋ ಧ್ಯಾಯನ್ ಛ್ವಸಿತಿ ಮೂಢಧೀಃ ॥
ಅನುವಾದ
ದುರದೃಷ್ಟ ದಿಂದ ತನ್ನ ಯಾವ ಪ್ರಯತ್ನವೂ ಈಡೇರದಿದ್ದರೆ, ಆ ಮೂರ್ಖನು ಬಡತನದಿಂದ ಕುಟುಂಬವನ್ನು ಸಾಕಿ-ಸಲಹಲು ಅಸಮರ್ಥ ನಾದಾಗ ಅತಿದೈನ್ಯದಿಂದ ಚಿಂತಾತುರನಾಗಿ ನಿಟ್ಟುಸಿರುಬಿಡಲು ತೊಡಗುವನು.॥12॥
(ಶ್ಲೋಕ - 13)
ಮೂಲಮ್
ಏವಂ ಸ್ವಭರಣಾಕಲ್ಪಂ ತತ್ಕಲತ್ರಾದಯಸ್ತಥಾ ।
ನಾದ್ರಿಯಂತೇ ಯಥಾ ಪೂರ್ವಂ ಕೀನಾಶಾ ಇವ ಗೋಜರಮ್ ॥
ಅನುವಾದ
ಈತನು ತಮ್ಮನ್ನು ಸಾಕಿ-ಸಲಹಲು ಅಸಮರ್ಥನೆಂದು ತಿಳಿದು ಪತ್ನೀ-ಪುತ್ರಾದಿಗಳು ಲೋಭಿಯಾದ ರೈತನು ಮುದಿಯಾದ ಎತ್ತನ್ನು ಉಪೇಕ್ಷಿಸುವಂತೆ ಇವನನ್ನು ಮೊದಲಿನಂತೆ ಆದರಿಸದೆ ಉಪೇಕ್ಷಿಸುತ್ತಾರೆ.॥13॥
(ಶ್ಲೋಕ - 14)
ಮೂಲಮ್
ತತ್ರಾಪ್ಯಜಾತನಿರ್ವೇದೋ ಭ್ರಿಯಮಾಣಃ ಸ್ವಯಂಭೃತೈಃ ।
ಜರಯೋಪಾತ್ತವೈರೂಪ್ಯೋ ಮರಣಾಭಿಮುಖೋ ಗೃಹೇ ॥
(ಶ್ಲೋಕ - 15)
ಮೂಲಮ್
ಆಸ್ತೇವಮತ್ಯೋಪನ್ಯಸ್ತಂ ಗೃಹಪಾಲ ಇವಾಹರನ್ ।
ಆಮಯಾವ್ಯಪ್ರದೀಪ್ತಾಗ್ನಿರಲ್ಪಾಹಾರೋಲ್ಪಚೇಷ್ಟಿತಃ ॥
ಅನುವಾದ
ಆದರೂ ಇವನಿಗೆ ಸಂಸಾರದಲ್ಲಿ ವೈರಾಗ್ಯ ಉಂಟಾಗುವುದಿಲ್ಲ. ಈತನು ಹಿಂದೆ ಯಾರನ್ನು ಸಾಕಿ ದ್ದನೋ, ಅವರೇ ಈಗ ಈತನನ್ನು ಸಾಕುವರು. ಮುಪ್ಪಿನ ಕಾರಣ ದಿಂದ ಇವನ ರೂಪವು ವಿಕಾರಹೊಂದುವುದು. ಶರೀರವು ರೋಗ ಗ್ರಸ್ತವಾಗುವುದು. ಜಠರಾಗ್ನಿಯು ಮಂದವಾಗುತ್ತದೆ. ಆಹಾರ ಮತ್ತು ಪುರುಷಾರ್ಥವೆರಡೂ ಕಡಿಮೆಯಾಗುವುದು. ಅವನು ಮರಣೋನ್ಮುಖವಾಗಿ ಮನೆಯಲ್ಲಿ ಬಿದ್ದುಕೊಂಡಿದ್ದು, ಹೆಂಡಿರು ಮಕ್ಕಳೇ ಮುಂತಾದವರು ತಿರಸ್ಕಾರಪೂರ್ವಕವಾಗಿ ಕೊಡುವ ಚೂರು-ಪಾರನ್ನು ತಿನ್ನುತ್ತಾ ನಾಯಿಯಂತೆ ಜೀವನವನ್ನು ಕಳೆಯುವನು.॥14-15॥
(ಶ್ಲೋಕ - 16)
ಮೂಲಮ್
ವಾಯುನೋತ್ಕ್ರಮತೋತ್ತಾರಃ ಕಸಂರುದ್ಧನಾಡಿಕಃ ।
ಕಾಸಶ್ವಾಸಕೃತಾಯಾಸಃ ಕಂಠೇ ಘುರಘುರಾಯತೇ ॥
ಅನುವಾದ
ಸಾವಿನ ಸಮಯವು ಸಮೀಪಿಸಿದಾಗ ಮೇಲುಸಿರು ಬಂದದ್ದರಿಂದ ಈತನ ಕಣ್ಣಾಲಿಗಳು ಮೇಲೇಳುವವು. ಉಸಿರಾಟದ ಚೀಲಗಳು ಕದಿಂದ ಕಟ್ಟಿಹೋಗುವವು. ಕೆಮ್ಮುವುದಕ್ಕೂ, ಉಸಿರಾಟಕ್ಕೂ ತುಂಬಾ ಕಷ್ಟವಾಗುವುದು. ಕವು ಹೆಚ್ಚುವುದರಿಂದ ಗಂಟಲು ಗುರುಗುಟ್ಟತೊಡಗುವುದು.॥16॥
(ಶ್ಲೋಕ - 17)
ಮೂಲಮ್
ಶಯಾನಃ ಪರಿಶೋಚದ್ಭಿಃ ಪರಿವೀತಃ ಸ್ವಬಂಧುಭಿಃ ।
ವಾಚ್ಯಮಾನೋಪಿ ನ ಬ್ರೂತೇ ಕಾಲಪಾಶವಶಂ ಗತಃ॥
ಅನುವಾದ
ಹಾಗೆ ಬಿದ್ದುಕೊಂಡಿರುವ ಈತನ ಸುತ್ತಲೂ ದುಃಖಪೀಡಿತರಾದ ನೆಂಟರಿಷ್ಟರು ನೆರೆಯುವರು. ಆದರೆ ಮೃತ್ಯುಪಾಶಕ್ಕೆ ಸಿಲುಕಿ ಕೊಂಡಿರುವುದರಿಂದ ಅವರು ಕರೆದರೂ ಈತನು ಮಾತನಾಡಲಾರನು.॥17॥
(ಶ್ಲೋಕ - 18)
ಮೂಲಮ್
ಏವಂ ಕುಟುಂಬಭರಣೇ ವ್ಯಾಪೃತಾತ್ಮಾಜಿತೇಂದ್ರಿಯಃ ।
ಮ್ರಿಯತೇ ರುದತಾಂ ಸ್ವಾನಾಮುರುವೇದನಯಾಸ್ತಧೀಃ ॥
ಅನುವಾದ
ಹೀಗೆ ಇಂದ್ರಿಯಗಳನ್ನು ಜಯಿಸದೆ ನಿರಂತರವಾಗಿ ಕುಟುಂಬ ಪೋಷಣೆಯಲ್ಲೇ ಆಸಕ್ತನಾಗಿರುವ ಆ ಮೂಢನಾದ ಮನುಷ್ಯನು ಅಳುತ್ತಾ, ಗೋಳಾಡುವ ಸ್ವಜನರ ನಡುವೆ ಅತ್ಯಂತ ವೇದನೆಯಿಂದ ಪ್ರಜ್ಞೆತಪ್ಪಿ ಮರಣವನ್ನಪ್ಪುವನು.॥18॥
(ಶ್ಲೋಕ - 19)
ಮೂಲಮ್
ಯಮದೂತೌ ತದಾ ಪ್ರಾಪ್ತೌ ಭೀವೌ ಸರಭಸೇಕ್ಷಣೌ ।
ಸ ದೃಷ್ಟ್ವಾ ತ್ರಸ್ತಹೃದಯಃ ಶಕೃನ್ಮೂತ್ರಂ ವಿಮುಂಚತಿ ॥
ಅನುವಾದ
ಆ ಸಮಯದಲ್ಲಿ ತನ್ನನ್ನು ಎಳೆದೊಯ್ಯಲು ಬಂದ ಅತಿ ಭಯಂಕರರಾದ ಸಿಟ್ಟೇರಿದ ಕಣ್ಣುಗಳುಳ್ಳ ಇಬ್ಬರು ಯಮದೂತ ರನ್ನು ಕಂಡು ಭಯದಿಂದ ಮಲ-ಮೂತ್ರಗಳನ್ನು ವಿಸರ್ಜಿಸುವನು.॥19॥
(ಶ್ಲೋಕ - 20)
ಮೂಲಮ್
ಯಾತನಾದೇಹ ಆವೃತ್ಯ ಪಾಶೈರ್ಬದ್ಧ್ವಾ ಗಲೇ ಬಲಾತ್ ।
ನಯತೋ ದೀರ್ಘಮಧ್ವಾನಂ ದಂಡ್ಯಂ ರಾಜಭಟಾ ಯಥಾ ॥
ಅನುವಾದ
ಆ ಯಮದೂತರು ಅವನಿಗೆ ಯಾತನಾದೇಹ ದೊಳಕ್ಕೆ ಹಾಕಿ ರಾಜಭಟರು ಅಪರಾಧಿಯನ್ನು ಎಳೆದೊಯ್ಯುವಂತೆ ಕೊರಳಿಗೆ ಪಾಶವನ್ನು ಹಾಕಿ ಬಲವಂತವಾಗಿ ಯಮಲೋಕದ ದೂರಯಾತ್ರಿಕನನ್ನಾಗಿ ಎಳೆದುಕೊಂಡು ಹೋಗುವರು.॥20॥
(ಶ್ಲೋಕ - 21)
ಮೂಲಮ್
ತಯೋರ್ನಿರ್ಭಿನ್ನಹೃದಯಸ್ತರ್ಜನೈರ್ಜಾತವೇಪಥುಃ ।
ಪಥಿ ಶ್ವಭಿರ್ಭಕ್ಷ್ಯಮಾಣ ಆರ್ತೋಘಂ ಸ್ವಮನುಸ್ಮರನ್ ॥
ಅನುವಾದ
ಅವರ ಬೆದರಿಕೆಯಿಂದ ಆತನ ಹೃದಯವು ಒಡೆದು, ದೇಹವು ನಡುಗತೊಡಗುವುದು. ದಾರಿಯಲ್ಲಿ ನಾಯಿಗಳು ಆತನನ್ನು ಕಚ್ಚಿ ತಿನ್ನುವರು. ಆಗ ಆತನು ತನ್ನ ಪಾಪಗಳನ್ನು ನೆನೆಯುತ್ತಾ ಕಳವಳದಿಂದ ಬಸವಳಿಯುವನು.॥21॥
(ಶ್ಲೋಕ - 22)
ಮೂಲಮ್
ಕ್ಷುತ್ತೃಟ್ಪರೀತೋರ್ಕದವಾನಲಾನಿಲೈಃ
ಸಂತಪ್ಯಮಾನಃ ಪಥಿ ತಪ್ತವಾಲುಕೇ ।
ಕೃಚ್ಛ್ರೇಣ ಪೃಷ್ಠೇ ಕಶಯಾ ಚ ತಾಡಿತ-
ಶ್ಚಲತ್ಯಶಕ್ತೋಪಿ ನಿರಾಶ್ರಮೋದಕೇ ॥
ಅನುವಾದ
ಹಸಿವು-ಬಾಯಾರಿಕೆಗಳಿಂದ ಆತನು ಬಳಲಿ ಬೆಂಡಾಗಿ ಉರಿ ಯುತ್ತಿರುವ ಕಾಡ್ಗಿಚ್ಚಿನ ಜ್ವಾಲೆಗಳಿಂದ ಸುಟ್ಟುಹೋಗತೊಡಗು ವನು. ಇಂತಹ ಸ್ಥಿತಿಯಲ್ಲಿ ನೀರು-ನೆರಳಿಲ್ಲದ ಕಾದ ಮರಳಿನ ದಾರಿಯಲ್ಲಿ ಒಂದು ಹೆಜ್ಜೆಯೂ ಮುಂದಿಡಲು ಶಕ್ತಿಯೂ ಇಲ್ಲ ದಿದ್ದಾಗ ಯಮದೂತರು ಬೆನ್ನಿನ ಮೇಲೆ ಚಾವಟಿಗೆಯ ಏಟು ಗಳನ್ನು ಕೊಡುತ್ತಿರುತ್ತಾರೆ. ಆಗಲೂ ಅತಿಕಷ್ಟದಿಂದಲಾದರೂ ಮುಂದೆ ಹೋಗಲೇಬೇಕಾಗುತ್ತದೆ.॥22॥
(ಶ್ಲೋಕ - 23)
ಮೂಲಮ್
ತತ್ರ ತತ್ರ ಪತನ್ ಶ್ರಾಂತೋ ಮೂರ್ಚ್ಛಿತಃ ಪುನರುತ್ಥಿತಃ ।
ಪಥಾ ಪಾಪೀಯಸಾ ನೀತಸ್ತರಸಾ ಯಮಸಾದನಮ್ ॥
ಅನುವಾದ
ಅಲ್ಲಲ್ಲಿ ಬಳಲಿಕೆ ಯಿಂದ ಏಳುತ್ತಾ-ಬೀಳುತ್ತಾ ಮೂರ್ಛೆ ಬೀಳುತ್ತಿದ್ದರೂ, ಜ್ಞಾನ ಬಂದ ಮೇಲೆ ಮತ್ತೆ ಏಳುತ್ತಾನೆ. ಹೀಗೆ ಅತಿ ದುಃಖಮಯ ಮಾರ್ಗ ದಿಂದ ಅತ್ಯಂತ ಕ್ರೂರ ಯಮದೂತರು ಅವನನ್ನು ಶೀಘ್ರವಾಗಿ ಯಮಲೋಕಕ್ಕೆ ಒಯ್ಯುವರು.॥23॥
(ಶ್ಲೋಕ - 24)
ಮೂಲಮ್
ಯೋಜನಾನಾಂ ಸಹಸ್ರಾಣಿ ನವತಿಂ ನವ ಚಾಧ್ವನಃ ।
ತ್ರಿಭಿರ್ಮುಹೂರ್ತೈರ್ದ್ವಾಭ್ಯಾಂ ವಾ ನೀತಃ ಪ್ರಾಪ್ನೋತಿ ಯಾತನಾಃ ॥
ಅನುವಾದ
ಯಮಲೋಕದ ದಾರಿಯ ಉದ್ದ ತೊಂಬತ್ತೊಂಭತ್ತು ಸಾವಿರ ಯೋಜನಗಳು. ಅಷ್ಟು ದೂರದ ದಾರಿಯನ್ನು ಕೇವಲ ಎರಡು-ಮೂರು ಮುಹೂರ್ತಗಳಲ್ಲೇ ದಾಟಿ ಅವನು ನರಕದಲ್ಲಿ ಬಗೆ-ಬಗೆಯ ಯಾತನೆಗಳನ್ನು ಭೋಗಿಸುವನು.॥24॥
(ಶ್ಲೋಕ - 25)
ಮೂಲಮ್
ಆದೀಪನಂ ಸ್ವಗಾತ್ರಾಣಾಂ ವೇಷ್ಟಯಿತ್ವೋಲ್ಮುಕಾದಿಭಿಃ ।
ಆತ್ಮಮಾಂಸಾದನಂ ಕ್ವಾಪಿ ಸ್ವಕೃತ್ತಂ ಪರತೋಪಿ ವಾ ॥
ಅನುವಾದ
ಅಲ್ಲಿ ಆತನ ದೇಹವನ್ನು ಉರಿಯುತ್ತಿರುವ ಕಟ್ಟಿಗೆಗಳೇ ಮುಂತಾದವುಗಳ ನಡುವೆ ಹಾಕಿ ಸುಡಲಾಗುವುದು. ಕೆಲವು ಕಡೆ ತನ್ನ ದೇಹವನ್ನು ತಾನೇ ಕತ್ತರಿಸಿಕೊಂಡು ಅಥವಾ ಇತರರು ಕತ್ತರಿಸಿದ ತನ್ನ ಮಾಂಸವನ್ನೇ ತಿನ್ನಿಸಲಾಗುತ್ತದೆ.॥25॥
(ಶ್ಲೋಕ - 26)
ಮೂಲಮ್
ಜೀವತಶ್ಚಾಂತ್ರಾಭ್ಯುದ್ಧಾರಃ ಶ್ವಗೃಧ್ರೈರ್ಯಮಸಾದನೇ ।
ಸರ್ಪವೃಶ್ಚಿಕದಂಶಾದ್ಯೈರ್ದಶದ್ಭಿಶ್ಚಾತ್ಮವೈಶಸಮ್ ॥
ಅನುವಾದ
ಯಮಪುರಿಯ ನಾಯಿಗಳು ಅಥವಾ ಹದ್ದುಗಳು ಜೀವಂತವಾಗಿರುವಾಗಲೇ ಆತನ ಕರುಳುಗಳನ್ನೂ ಕಚ್ಚಿ ಕೀಳುತ್ತವೆ. ಹಾವು, ಚೇಳು, ಸೊಳ್ಳೆ, ಚಿಗುಟ ಮುಂತಾದವುಗಳಿಂದ ಕಚ್ಚಿಸಿ ಹಿಂಸಿಸಲಾಗುತ್ತದೆ.॥26॥
(ಶ್ಲೋಕ - 27)
ಮೂಲಮ್
ಕೃಂತನಂ ಚಾವಯವಶೋ ಗಜಾದಿಭ್ಯೋ ಭಿದಾಪನಮ್ ।
ಪಾತನಂ ಗಿರಿಶೃಂಗೇಭ್ಯೋ ರೋಧನಂ ಚಾಂಬುಗರ್ತಯೋಃ ॥
ಅನುವಾದ
ಆತನ ಶರೀರವನ್ನು ತುಂಡು-ತುಂಡಾಗಿ ಕತ್ತರಿಸಲಾಗುತ್ತದೆ. ಆನೆಯ ಕಾಲಿನಿಂದ ತುಳಿಸಲಾಗುವುದು. ಪರ್ವತಶಿಖರದಿಂದ ತಳ್ಳಲಾಗುತ್ತದೆ. ನೀರಿನಲ್ಲಿ ಅಥವಾ ಹೊಂಡ ದಲ್ಲಿ ಹಾಕಿ ಮುಚ್ಚಲಾಗುತ್ತದೆ.॥27॥
(ಶ್ಲೋಕ - 28)
ಮೂಲಮ್
ಯಾಸ್ತಾಮಿಸ್ರಾಂಧತಾಮಿಸ್ರಾ ರೌರವಾದ್ಯಾಶ್ಚ ಯಾತನಾಃ ।
ಭುಂಕ್ತೇ ನರೋ ವಾ ನಾರೀ ವಾ ಮಿಥಃ ಸಂಗೇನ ನಿರ್ಮಿತಾಃ ॥
ಅನುವಾದ
ಇವೆಲ್ಲ ಯಾತನೆಗಳನ್ನೂ ಹಾಗೂ ಇದೇ ರೀತಿಯಲ್ಲಿ ತಾಮಿಸ್ರ, ಅಂಧತಾಮಿಸ್ರ, ರೌರವ ಗಳೇ ಮುಂತಾದ ನರಕಗಳ ಇನ್ನೂ ಅನೇಕ ಯಾತನೆಗಳನ್ನು ಜೀವಿಯು ಹೆಂಗಸರಾಗಲೀ, ಗಂಡಸರಾಗಲಿ ಪರಸ್ಪರ ದುಷ್ಟವಾದ ಸಂಸರ್ಗದಿಂದ ಉಂಟಾದ ಪಾಪಗಳ ಲವಾಗಿ ಅನುಭವಿಸ ಬೇಕಾಗುತ್ತವೆ.॥28॥
(ಶ್ಲೋಕ - 29)
ಮೂಲಮ್
ಅತ್ರೈವ ನರಕಃ ಸ್ವರ್ಗ ಇತಿ ಮಾತಃ ಪ್ರಚಕ್ಷತೇ ।
ಯಾ ಯಾತನಾ ವೈ ನಾರಕ್ಯಸ್ತಾ ಇಹಾಪ್ಯುಪಲಕ್ಷಿತಾಃ ॥
ಅನುವಾದ
ತಾಯೇ ! ಸ್ವರ್ಗ ಮತ್ತು ನರಕಗಳಾದರೋ ಇದೇ ಭೂಲೋಕದಲ್ಲಿವೆ ಎಂದು ಕೆಲವರು ಹೇಳುತ್ತಾರೆ. ಏಕೆಂದರೆ, ನರಕದ ಯಾತನೆಗಳನ್ನು ಇಲ್ಲಿಯೂ ನೋಡಲಾಗುತ್ತದೆ.॥29॥
(ಶ್ಲೋಕ - 30)
ಮೂಲಮ್
ಏವಂ ಕುಟುಂಬಂ ಬಿಭ್ರಾಣ ಉದರಂಭರ ಏವ ವಾ ।
ವಿಸೃಜ್ಯೇಹೋಭಯಂ ಪ್ರೇತ್ಯ ಭುಂಕ್ತೇ ತತ್ಫಲಮೀದೃಶಮ್ ॥
ಅನುವಾದ
ಈ ವಿಧವಾಗಿ ಅನೇಕ ಕಷ್ಟಗಳನ್ನು ಭೋಗಿಸುತ್ತಾ ತಮ್ಮ ಕುಟುಂಬ ವನ್ನೇ ಸಾಕುತ್ತಾ ಅಥವಾ ಕೇವಲ ತನ್ನ ಹೊಟ್ಟೆಯನ್ನೇ ತುಂಬಿಸಿ ಕೊಳ್ಳುವ ಮನುಷ್ಯನು ಆ ಕುಟುಂಬವನ್ನು ಮತ್ತು ಶರೀರವನ್ನು ಎರಡನ್ನೂ ಇಲ್ಲಿಯೇ ಬಿಟ್ಟು ತಾನು ಮಾಡಿದ ಪಾಪಗಳ ಲವನ್ನು ಸತ್ತನಂತರ ಭೋಗಿಸಬೇಕಾಗುತ್ತದೆ.॥30॥
(ಶ್ಲೋಕ - 31)
ಮೂಲಮ್
ಏಕಃ ಪ್ರಪದ್ಯತೇ ಧ್ವಾಂತಂ ಹಿತ್ವೇದಂ ಸ್ವಕಲೇವರಮ್ ।
ಕುಶಲೇತರಪಾಥೇಯೋ ಭೂತದ್ರೋಹೇಣ ಯದ್ಭೃತಮ್ ॥
ಅನುವಾದ
ತನ್ನ ಶರೀರವನ್ನು ಇಲ್ಲಿಯೇ ಬಿಟ್ಟು ಪ್ರಾಣಿಗಳಿಗೆ ದ್ರೋಹವನ್ನೆಸಗಿ ಸಂಗ್ರಹಿಸಿದ ಪಾಪ ರೂಪವಾದ ಬುತ್ತಿಯನ್ನು ಮಾತ್ರ ತೆಗೆದುಕೊಂಡು ಒಬ್ಬಂಟಿಗನಾಗಿ ನರಕಕ್ಕೆ ಹೋಗುತ್ತಾನೆ.॥31॥
(ಶ್ಲೋಕ - 32)
ಮೂಲಮ್
ದೈವೇನಾಸಾದಿತಂ ತಸ್ಯ ಶಮಲಂ ನಿರಯೇ ಪುಮಾನ್ ।
ಭುಂಕ್ತೇ ಕುಟುಂಬಪೋಷಸ್ಯ ಹೃತವಿತ್ತ ಇವಾತುರಃ ॥
ಅನುವಾದ
ತನ್ನ ಕುಟುಂಬದ ಹೊಟ್ಟೆಹೊರೆ ಯಲು ತಾನು ಮಾಡಿದ ಅನ್ಯಾಯದ ಲವನ್ನು ಅವನು ತಾನೇ ಅನುಭವಿಸಬೇಕಾಗುವುದು. ದೈವದಿಂದ ನಿರ್ದಿಷ್ಟವಾದ ಆ ಪಾಪ ಗಳ ಲವನ್ನು ಆತನು ನರಕದಲ್ಲಿ ಭೋಗಿಸುತ್ತಾನೆ. ತನ್ನ ಸರ್ವಸ್ವವೂ ಕೊಳ್ಳೆಹೋಯಿತೋ ಎಂಬಂತೆ ಕಳವಳಕ್ಕೆ ಈಡಾಗುವನು.॥32॥
(ಶ್ಲೋಕ - 33)
ಮೂಲಮ್
ಕೇವಲೇನ ಹ್ಯಧರ್ಮೇಣ ಕುಟುಂಬಭರಣೋತ್ಸುಕಃ ।
ಯಾತಿ ಜೀವೋಂಧತಾಮಿಸ್ರಂ ಚರಮಂ ತಮಸಃ ಪದಮ್ ॥
ಅನುವಾದ
ಕೇವಲ ಅಧರ್ಮದಿಂದಲೇ ಕುಟುಂಬವನ್ನು ಸಾಕುವುದ ರಲ್ಲೇ ಆಸಕ್ತನಾಗಿರುವ ಜೀವಿಯು ಅಂಧತಾಮಿಸ್ರ ನರಕಕ್ಕೆ ಹೋಗುತ್ತಾನೆ. ಅದು ಎಲ್ಲ ನರಕಗಳಲ್ಲಿಯೂ ಚರಮಸೀಮೆಯ ಕಷ್ಟಪ್ರದಸ್ಥಾನವಾಗಿದೆ.॥33॥
(ಶ್ಲೋಕ - 34)
ಮೂಲಮ್
ಅಧಸ್ತಾನ್ನರಲೋಕಸ್ಯ ಯಾವತೀರ್ಯಾತನಾದಯಃ ।
ಕ್ರಮಶಃ ಸಮನುಕ್ರಮ್ಯ ಪುನರತ್ರಾವ್ರಜೇಚ್ಛುಚಿಃ ॥
ಅನುವಾದ
ಮನುಷ್ಯಜನ್ಮವನ್ನು ಪಡೆಯುವ ಮೊದಲು ನರಿ-ನಾಯಿಗಳೇ ಮುಂತಾದ ಯೋನಿಗಳಲ್ಲಿ ಇರುವ ಕಷ್ಟಗಳೆಲ್ಲವನ್ನು ಕ್ರಮವಾಗಿ ಅನುಭವಿಸಿ ಶುದ್ಧವಾಗಿ ಮತ್ತೆ ಮನುಷ್ಯ ಯೋನಿಯಲ್ಲಿ ಹುಟ್ಟುವನು.॥34॥
ಅನುವಾದ (ಸಮಾಪ್ತಿಃ)
ಮೂವತ್ತನೆಯ ಅಧ್ಯಾಯವು ಮುಗಿಯಿತು.॥30॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಕಾಪಿಲೇಯೋಪಾಖ್ಯಾನೇ ಕರ್ಮವಿಪಾಕೋ ನಾಮ ತ್ರಿಂಶೋಽಧ್ಯಾಯಃ ॥30॥