[ಇಪ್ಪತ್ತೆರಡನೆಯ ಅಧ್ಯಾಯ]
ಭಾಗಸೂಚನಾ
ದೇವಹೂತಿ-ಕರ್ದಮರ ವಿವಾಹ
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
(ಶ್ಲೋಕ - 1)
ಮೂಲಮ್
ಏವಮಾವಿಷ್ಕೃತಾಶೇಷಗುಣಕರ್ಮೋದಯೋ ಮುನಿಮ್ ।
ಸವ್ರೀಡ ಇವ ತಂ ಸಮ್ರಾಡುಪಾರತಮುವಾಚ ಹ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ - ಎಲೈ ವಿದುರನೇ ! ಹೀಗೆ ಕರ್ದಮರು ಮನುವಿನ ಸಮಸ್ತ ಗುಣ-ಕರ್ಮಗಳನ್ನು ವರ್ಣಿಸಿದಾಗ ಸಾಮ್ರಾಟನಾದ ಸ್ವಾಯಂಭುವಮನುವು ಆ ನಿವೃತ್ತಿ ಪರಾಯಣ ಮುನಿಯ ಬಳಿ ಸಂಕೋಚದಿಂದಲೇ ಹೀಗೆಂದನು.॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ಮನುರುವಾಚ
ಮೂಲಮ್
ಬ್ರಹ್ಮಾಸೃಜತ್ಸ್ವಮುಖತೋ ಯುಷ್ಮಾನಾತ್ಮಪರೀಪ್ಸಯಾ ।
ಛಂದೋಮಯಸ್ತಪೋವಿದ್ಯಾಯೋಗಯುಕ್ತಾನಲಂಪಟಾನ್ ॥
(ಶ್ಲೋಕ - 3)
ಮೂಲಮ್
ತತಾಣಾಯಾಸೃಜಚ್ಚಾಸ್ಮಾನ್ದೋಃಸಹಸ್ರಾತ್ಸಹಸ್ರಪಾತ್ ।
ಹೃದಯಂ ತಸ್ಯ ಹಿ ಬ್ರಹ್ಮ ಕ್ಷತ್ರಮಂಗಂ ಪ್ರಚಕ್ಷತೇ ॥
ಅನುವಾದ
ಮನುವು ಹೇಳುತ್ತಾನೆ ಮುನಿವರ್ಯರೇ ! ವೇದ ಮೂರ್ತಿಗಳಾದ ಬ್ರಹ್ಮದೇವರು ತಮ್ಮ ವೇದಮಯವಾದ ದಿವ್ಯ ವಿಗ್ರಹದ ರಕ್ಷಣೆಗಾಗಿ ತಪಸ್ಸು, ವಿದ್ಯೆ, ಯೋಗಗಳಿಂದ ಸಂಪನ್ನ ರಾದ, ವಿಷಯಲಂಪಟತೆಯಿಲ್ಲದ ಬ್ರಾಹ್ಮಣರಾದ ನಿಮ್ಮನ್ನು ತಮ್ಮ ಮುಖದಿಂದ ಪ್ರಕಟಿಸಿದರು. ಮತ್ತೆ ಸಹಸ್ರಪಾದನಾದ ವಿರಾಟ್ ಪುರುಷನು ನಿಮ್ಮ ರಕ್ಷಣೆಗಾಗಿಯೇ ತನ್ನ ಸಹಸ್ರಭುಜಗಳಿಂದ ಕ್ಷತ್ರಿಯರಾದ ನಮ್ಮನ್ನು ಸೃಷ್ಟಿಮಾಡಿದನು. ಹೀಗೆ ಅವನಿಗೆ ಬ್ರಾಹ್ಮಣರು ಹೃದಯವೆಂದೂ, ಕ್ಷತ್ರಿಯರು ಶರೀರವೆಂದೂ ಕರೆಯಲ್ಪಡುತ್ತಾರೆ.॥2-3॥
(ಶ್ಲೋಕ - 4)
ಮೂಲಮ್
ಅತೋ ಹ್ಯನ್ಯೋನ್ಯಮಾತ್ಮಾನಂ ಬ್ರಹ್ಮ ಕ್ಷತ್ರಂ ಚ ರಕ್ಷತಃ ।
ರಕ್ಷತಿ ಸ್ಮಾವ್ಯಯೋ ದೇವಃ ಸ ಯಃ ಸದಸದಾತ್ಮಕಃ ॥
ಅನುವಾದ
ಆದ್ದರಿಂದ ಒಂದೇ ಶರೀರಕ್ಕೆ ಸಂಬಂಧ ಪಟ್ಟಿರುವುದರಿಂದ ತಮ್ಮ-ತಮ್ಮನ್ನು ಮತ್ತು ಒಬ್ಬರು ಮತ್ತೊಬ್ಬರನ್ನು ರಕ್ಷಿಸುತ್ತಿರುವ ಆ ಬ್ರಾಹ್ಮಣ ಮತ್ತು ಕ್ಷತ್ರಿಯರನ್ನು ಸಮಸ್ತ ಕಾರಣ ರೂಪನಾಗಿದ್ದರೂ ವಾಸ್ತವದಲ್ಲಿ ನಿರ್ವಿಕಾರನಾಗಿರುವ ಶ್ರೀಹರಿಯೇ ರಕ್ಷಿಸುತ್ತಾನೆ.॥4॥
(ಶ್ಲೋಕ - 5)
ಮೂಲಮ್
ತವ ಸಂದರ್ಶನಾದೇವಚ್ಛಿನ್ನಾ ಮೇ ಸರ್ವಸಂಶಯಾಃ ।
ಯತ್ಸ್ವಯಂ ಭಗವಾನ್ಪ್ರೀತ್ಯಾ ಧರ್ಮಮಾಹ ರಿರಕ್ಷಿಷೋಃ ॥
ಅನುವಾದ
ತಮ್ಮ ದರ್ಶನದಿಂದಲೇ ನನ್ನ ಎಲ್ಲ ಸಂದೇಹಗಳೂ ದೂರವಾದುವು. ಏಕೆಂದರೆ, ತಾವು ನನ್ನ ಪ್ರಶಂಸೆಯ ನೆಪದಲ್ಲಿ ಪ್ರಜಾಪಾಲನೆಯ ಇಚ್ಛೆಯುಳ್ಳ ರಾಜನ ಧರ್ಮಗಳನ್ನು ತುಂಬು ಪ್ರೇಮದಿಂದ ನಿರೂಪಿಸಿದಿರಿ.॥5॥
(ಶ್ಲೋಕ - 6)
ಮೂಲಮ್
ದಿಷ್ಟ್ಯಾ ಮೇ ಭಗವಾನ್ ದೃಷ್ಟೋ ದುರ್ದರ್ಶೋ ಯೋಕೃತಾತ್ಮನಾಮ್ ।
ದಿಷ್ಟ್ಯಾ ಪಾದರಜಃ ಸ್ಪೃಷ್ಟಂ ಶೀರ್ಷ್ಣಾ ಮೇ ಭವತಃ ಶಿವಮ್ ॥
ಅನುವಾದ
ಜೀತೇಂದ್ರಿಯನಲ್ಲ ದವರಿಗೆ ತಮ್ಮ ದರ್ಶನವು ಬಹು ದುರ್ಲಭವಾಗಿದೆ. ತಮ್ಮ ದರ್ಶನವನ್ನು ಪಡೆದು, ನಿಮ್ಮ ಚರಣಗಳ ಮಂಗಳಮಯ ಧೂಳಿ ಯನ್ನು ತಲೆಯಲ್ಲಿ ಮುಡಿದುಕೊಂಡಿರುವ ನಾನು ದೊಡ್ಡ ಭಾಗ್ಯ ವಂತನೇ ಸರಿ ! ॥6॥
(ಶ್ಲೋಕ - 7)
ಮೂಲಮ್
ದಿಷ್ಟ್ಯಾ ತ್ವಯಾನುಶಿಷ್ಟೋಹಂ ಕೃತಶ್ಚಾನುಗ್ರಹೋ ಮಹಾನ್ ।
ಅಪಾವೃತೈಃ ಕರ್ಣರಂಧ್ರೈರ್ಜುಷ್ಟಾ ದಿಷ್ಟ್ಯೋಶತೀರ್ಗಿರಃ ॥
ಅನುವಾದ
ನನ್ನ ಸೌಭಾಗ್ಯದಿಂದಲೇ ನೀವು ನನಗೆ ರಾಜ ಧರ್ಮಗಳನ್ನು ಉಪದೇಶಿಸಿ ಮಹದನುಗ್ರಹವನ್ನು ಮಾಡಿ ರುವಿರಿ. ತಮ್ಮ ಪವಿತ್ರವಾದ ವಾಣಿಯನ್ನು ನಾನು ಕಿವಿಯಾರೆ ಕೇಳಿರುವುದಕ್ಕೂ ನನ್ನ ಶುಭ ಪ್ರಾರಬ್ಧದ ಉದಯವೆಂದೇ ತಿಳಿಯುತ್ತೇನೆ.॥7॥
(ಶ್ಲೋಕ - 8)
ಮೂಲಮ್
ಸ ಭವಾಂದುಹಿತೃಸ್ನೇಹಪರಿಕ್ಲಿಷ್ಟಾತ್ಮನೋ ಮಮ ।
ಶ್ರೋತುಮರ್ಹಸಿ ದೀನಸ್ಯ ಶ್ರಾವಿತಂ ಕೃಪಯಾ ಮುನೇ ॥
ಅನುವಾದ
ಮುನಿಗಳೇ ! ಈ ಕನ್ಯೆಯ ಮೇಲಿರುವ ಪ್ರೇಮದಿಂದ ನನ್ನ ಮನಸ್ಸು ತುಂಬಾ ಚಿಂತಾಗ್ರಸ್ತವಾಗಿದೆ. ಆದುದರಿಂದ ದೀನನಾದ ನನ್ನ ಈ ಪ್ರಾರ್ಥನೆಯನ್ನು ತಾವು ಕೃಪಾಪೂರ್ವಕವಾಗಿ ಕೇಳಬೇಕು.॥8॥
(ಶ್ಲೋಕ - 9)
ಮೂಲಮ್
ಪ್ರಿಯವ್ರತೋತ್ತಾನಪದೋಃ ಸ್ವಸೇಯಂ ದುಹಿತಾ ಮಮ ।
ಅನ್ವಿಚ್ಛತಿ ಪತಿಂ ಯುಕ್ತಂ ವಯಃಶೀಲಗುಣಾದಿಭಿಃ ॥
ಅನುವಾದ
ಪ್ರಿಯವ್ರತ ಮತ್ತು ಉತ್ತಾನಪಾದ ಇವರ ತಂಗಿಯಾಗಿ ರುವ ಈ ನನ್ನ ಮಗಳು ವಯಸ್ಸು, ಶೀಲ-ಗುಣಗಳಿಂದ ತನಗೆ ಅನುರೂಪನಾದ ಪತಿಯನ್ನು ಪಡೆಯಲು ಬಯಸುತ್ತಾಳೆ.॥9॥
(ಶ್ಲೋಕ - 10)
ಮೂಲಮ್
ಯದಾ ತು ಭವತಃ ಶೀಲಶ್ರುತರೂಪವಯೋಗುಣಾನ್ ।
ಅಶೃಣೋನ್ನಾರದಾದೇಷಾ ತ್ವಯ್ಯಾಸೀತ್ಕೃತನಿಶ್ಚಯಾ ॥
ಅನುವಾದ
ಈಕೆಯು ಶ್ರೀನಾರದಮಹರ್ಷಿಗಳ ಬಾಯಿಯಿಂದ ತಮ್ಮ ಶೀಲ, ವಿದ್ಯೆ, ರೂಪ, ಆಯುಸ್ಸು, ಗುಣಗಳ ವರ್ಣನೆಯನ್ನು ಕೇಳಿದಂದಿನಿಂದಲೇ ತಮ್ಮನ್ನು ತನ್ನ ಪತಿಯನ್ನಾಗಿ ಮಾಡಿಕೊಳ್ಳಲು ನಿಶ್ಚಯಿಸಿ ಬಿಟ್ಟಿದ್ದಾಳೆ.॥10॥
(ಶ್ಲೋಕ - 11)
ಮೂಲಮ್
ತತ್ಪ್ರತೀಚ್ಛ ದ್ವಿಜಾಗ್ರ್ಯೇಮಾಂ ಶ್ರದ್ಧಯೋಪಹೃತಾಂ ಮಯಾ ।
ಸರ್ವಾತ್ಮನಾನುರೂಪಾಂ ತೇ ಗೃಹಮೇಧಿಷು ಕರ್ಮಸು ॥
ಅನುವಾದ
ಬ್ರಾಹ್ಮಣಶ್ರೇಷ್ಠರೇ! ನಾನು ಅತ್ಯಂತ ಶ್ರದ್ಧೆ ಯಿಂದ ಈ ಕನ್ಯೆಯನ್ನು ತಮಗೆ ಸಮರ್ಪಣೆ ಮಾಡುತ್ತಿದ್ದೇನೆ. ತಾವು ಈಕೆಯನ್ನು ಸ್ವೀಕರಿಸಬೇಕು. ಇವಳು ಗೃಹಸ್ಥೋಚಿತ ಎಲ್ಲ ರೀತಿಯ ಕಾರ್ಯಗಳಲ್ಲಿ ತಮಗೆ ಯೋಗ್ಯಳಾಗಿದ್ದಾಳೆ.॥11॥
(ಶ್ಲೋಕ - 12)
ಮೂಲಮ್
ಉದ್ಯತಸ್ಯ ಹಿ ಕಾಮಸ್ಯ ಪ್ರತಿವಾದೋ ನ ಶಸ್ಯತೇ ।
ಅಪಿ ನಿರ್ಮುಕ್ತಸಂಗಸ್ಯ ಕಾಮರಕ್ತಸ್ಯ ಕಿಂ ಪುನಃ ॥
ಅನುವಾದ
ತಾನಾಗಿಯೇ ಬಂದೊದಗಿದ ಭೋಗವನ್ನು ತಿರಸ್ಕರಿಸುವುದು ವಿರಕ್ತನಿಗೂ ಉಚಿತವಲ್ಲ. ಹಾಗಿರುವಾಗ ವಿಷಯಾಸಕ್ತನಾದವನ ವಿಷಯದಲ್ಲಿ ಹೇಳುವ ಮಾತೇನಿದೆ? ॥12॥
(ಶ್ಲೋಕ - 13)
ಮೂಲಮ್
ಯ ಉದ್ಯತಮನಾದೃತ್ಯ ಕೀನಾಶಮಭಿಯಾಚತೇ ।
ಕ್ಷೀಯತೇ ತದ್ಯಶಃ ಸ್ಫೀತಂ ಮಾನಶ್ಚಾವಜ್ಞಯಾ ಹತಃ ॥
ಅನುವಾದ
ತಾನಾಗಿಯೇ ಒದಗಿಬಂದ ಭೋಗವನ್ನು ಕಡೆಗಣಿಸಿ ಮತ್ತೆ ಬೇರೆ ಯಾರೋ ಕೃಪಣನ ಮುಂದೆ ಕೈಚಾಚುವವನು ವಿಸ್ತಾರವಾಗಿ ಹರಡಿಕೊಂಡಿರುವ ತನ್ನ ಕೀರ್ತಿಯನ್ನು ಕಳೆದುಕೊಳ್ಳುವನು ಹಾಗೂ ಮತ್ತೊಬ್ಬರ ತಿರಸ್ಕಾರದಿಂದ ಆತನಿಗೆ ಮಾನಭಂಗವೂ ಆಗುವುದು.॥13॥
(ಶ್ಲೋಕ - 14)
ಮೂಲಮ್
ಅಹಂ ತ್ವಾಶೃಣವಂ ವಿದ್ವನ್ವಿವಾಹಾರ್ಥಂ ಸಮುದ್ಯತಮ್ ।
ಅತಸ್ತ್ವಮುಪಕುರ್ವಾಣಃ ಪ್ರತ್ತಾಂ ಪ್ರತಿಗೃಹಾಣ ಮೇ ॥
ಅನುವಾದ
ಜ್ಞಾನಿಶ್ರೇಷ್ಠರೇ ! ತಾವು ವಿವಾಹಮಾಡಿಕೊಳ್ಳಲು ಸಿದ್ಧರಾಗಿದ್ದೀ ರೆಂದು ನಾನು ಕೇಳಿದ್ದೇನೆ. ತಮ್ಮ ಬ್ರಹ್ಮಚರ್ಯಕ್ಕೆ ಒಂದು ಎಲ್ಲೆ ಇದೆ. ತಾವು ನೈಷ್ಠಿಕ ಬ್ರಹ್ಮಚಾರಿಗಳಲ್ಲವಲ್ಲ ! ಆದ್ದರಿಂದ ತಾವು ಈ ಕನ್ಯೆಯನ್ನು ಸ್ವೀಕರಿಸಿರಿ. ನಾನು ಈಕೆಯನ್ನು ತಮಗೆ ಸಮರ್ಪಿ ಸುತ್ತಿದ್ದೇನೆ. ॥14॥
(ಶ್ಲೋಕ - 15)
ಮೂಲಮ್ (ವಾಚನಮ್)
ಋಷಿರುವಾಚ
ಮೂಲಮ್
ಬಾಢಮುದ್ವೋಢುಕಾಮೋಹಮಪ್ರತ್ತಾ ಚ ತವಾತ್ಮಜಾ ।
ಆವಯೋರನುರೂಪೋಸಾವಾದ್ಯೋ ವೈವಾಹಿಕೋ ವಿಧಿಃ ॥
ಅನುವಾದ
ಶ್ರೀಕರ್ದಮ ಮುನಿಗಳು ಹೇಳಿದರು ಮಹಾರಾಜನೇ ! ಸರಿ. ನಾನು ವಿವಾಹವಾಗಲು ಬಯಸುತ್ತಿದ್ದೇನೆ. ನಿಮ್ಮ ಕನ್ಯೆಯ ವಾಗ್ದಾನವು ಯಾರೊಂದಿಗೂ ಆಗಲಿಲ್ಲವಲ್ಲ ! ಆದ್ದರಿಂದ ನಮ್ಮಿಬ್ಬರ ವಿವಾಹವು ಸರ್ವಶ್ರೇಷ್ಠ ಬ್ರಾಹ್ಮವಿಧಿಯಿಂದ* ಆಗುವುದು ಉಚಿತವೇ ಆಗಿದೆ. ॥ 15 ॥
ಟಿಪ್ಪನೀ
- ಮನುಸ್ಮೃತಿಯಲ್ಲಿ ಎಂಟು ಬಗೆಯ ವಿವಾಹಗಳನ್ನು ಉಲ್ಲೇಖಿಸಿದೆ (1) ಬ್ರಾಹ್ಮ, (2) ದೈವ, (3) ಆರ್ಷ, (4) ಪ್ರಾಜಾಪತ್ಯ, (5) ಆಸುರ, (6) ಗಾಂಧರ್ವ, (7) ರಾಕ್ಷಸ, (8) ಪೈಶಾಚ. ಇವುಗಳಲ್ಲಿ ಮೊದಲನೆಯದಾದ ‘ಬ್ರಾಹ್ಮ’ ವಿವಾಹವು ಶ್ರೇಷ್ಠತಮವೆನಿಸುತ್ತದೆ. ಇದರಲ್ಲಿ ತಂದೆಯೇ ಯೋಗ್ಯನಾದ ವರನನ್ನು ಆರಿಸಿ ಆತನಿಗೆ ತನ್ನ ಕನ್ಯೆಯನ್ನು ದಾನಮಾಡುತ್ತಾನೆ.
(ಶ್ಲೋಕ - 16)
ಮೂಲಮ್
ಕಾಮಃ ಸ ಭೂಯಾನ್ನರದೇವ ತೇಸ್ಯಾಃ
ಪುತ್ರ್ಯಾಃ ಸಮಾಮ್ನಾಯವಿಧೌ ಪ್ರತೀತಃ ।
ಕ ಏವ ತೇ ತನಯಾಂ ನಾದ್ರಿಯೇತ
ಸ್ವಯೈವ ಕಾಂತ್ಯಾ ಕ್ಷಿಪತೀಮಿವ ಶ್ರಿಯಮ್ ॥
ಅನುವಾದ
ಎಲೈ ರಾಜನೇ ! ವೇದೋಕ್ತ ವಿವಾಹ-ವಿಧಿಯಲ್ಲಿ ‘ಗೃಭ್ಣಾಮಿ ತೇ’ ಮುಂತಾದ ಮಂತ್ರಗಳಲ್ಲಿ ಹೇಳಿರುವ ಸಂತಾನಕಾಮನೆಯು ನಿಮ್ಮ ಈ ಕನ್ಯೆಯೊಂದಿಗೆ ನಮ್ಮ ಸಂಬಂಧ ಬೆಳೆಯುವುದರಿಂದ ಸಲವಾಗುವುದು. ತನ್ನ ಅಂಗಕಾಂತಿಯಿಂದ ಆಭೂಷಣಗಳ ಶೋಭೆಯನ್ನೂ ತಿರಸ್ಕರಿಸುತ್ತಿರುವ ನಿಮ್ಮ ಕನ್ಯೆಯನ್ನು ಯಾರು ತಾನೇ ಅನಾದರಿಸುವನು? ॥16॥
(ಶ್ಲೋಕ - 17)
ಮೂಲಮ್
ಯಾಂ ಹರ್ಮ್ಯಪೃಷ್ಠೇ ಕ್ವಣದಂಘ್ರಿಶೋಭಾಂ
ವಿಕ್ರೀಡತೀಂ ಕಂದುಕವಿಹ್ವಲಾಕ್ಷೀಮ್ ।
ವಿಶ್ವಾವಸುರ್ನ್ಯಪತತ್ಸ್ವಾದ್ವಿಮಾನಾದ್
ವಿಲೋಕ್ಯ ಸಮ್ಮೋಹವಿಮೂಢಚೇತಾಃ ॥
ಅನುವಾದ
ಒಮ್ಮೆ ಈಕೆಯು ತನ್ನ ಅರಮನೆಯ ಮೇಲ್ಮಹಡಿಯಲ್ಲಿ ಚೆಂಡಾಟವನ್ನು ಆಡುತ್ತಿದ್ದಳು. ಚೆಂಡಿನ ಹಿಂದೆ-ಹಿಂದೆ ಅತ್ತ-ಇತ್ತ ಓಡುತ್ತಿರುವುದರಿಂದ ಆಕೆಯ ಕಣ್ಣುಗಳು ಚಂಚಲವಾಗಿದ್ದುವು. ಕಾಲಿನ ಕಾಲಂದು ಗೆಗಳು ಝಣ-ಝಣ ಶಬ್ದಮಾಡುತ್ತಿದ್ದವು. ಆಗ ಈಕೆಯನ್ನು ಕಂಡು ಮೋಹಗೊಂಡ ವಿಶ್ವಾವಸು ಗಂಧರ್ವನು ಪ್ರಜ್ಞೆಯಿಲ್ಲದೆ ವಿಮಾನದಿಂದ ಕೆಳಗೆ ಉರುಳಿದ್ದನು. ॥17॥
(ಶ್ಲೋಕ - 18)
ಮೂಲಮ್
ತಾಂ ಪ್ರಾರ್ಥಯಂತೀಂ ಲಲನಾಲಲಾಮ-
ಮಸೇವಿತಶ್ರೀಚರಣೈರದೃಷ್ಟಾಮ್ ।
ವತ್ಸಾಂ ಮನೋರುಚ್ಚಪದಃ ಸ್ವಸಾರಂ
ಕೋ ನಾನುಮನ್ಯೇತ ಬುಧೋಭಿಯಾತಾಮ್ ॥
ಅನುವಾದ
ಅಂತಹ ಸೌಂದರ್ಯ ರಾಶಿಯಾದ ಈಕೆಯು ತಾನಾಗಿ ಬಂದು ಪ್ರಾರ್ಥಿಸಿದಾಗ ಯಾವ ವಿವೇಕಿಯು ತಾನೇ ಇವಳನ್ನು ಸ್ವೀಕರಿಸದೆ ಹೋದಾನು? ಇವಳಾದರೋ ಸಾರ್ವಭೌಮ ಸ್ವಾಯಂಭುವ ಮನುವಿನ ಕಣ್ಮಣಿ ಯಾದ ಸುಪುತ್ರಿಯು. ಉತ್ತಾನಪಾದನ ಪ್ರೀತಿಯ ತಂಗಿ ಹಾಗೂ ರಮಣೀಯ ರತ್ನವಾಗಿದ್ದಾಳೆ. ಶ್ರೀಲಕ್ಷ್ಮೀದೇವಿಯ ಚರಣಗಳನ್ನು ಎಂದಿಗೂ ಉಪಾಸನೆ ಮಾಡದವರಿಗೆ ಈಕೆಯ ದರ್ಶನವೂ ಆಗಲಾರದು.॥18॥
(ಶ್ಲೋಕ - 19)
ಮೂಲಮ್
ಅತೋ ಭಜಿಷ್ಯೇ ಸಮಯೇನ ಸಾಧ್ವೀಂ
ಯಾವತ್ತೇಜೋ ಬಿಭೃಯಾದಾತ್ಮನೋ ಮೇ ।
ಅತೋ ಧರ್ಮಾನ್ಪಾರಮಹಂಸ್ಯಮುಖ್ಯಾನ್
ಶುಕ್ಲಪ್ರೋಕ್ತಾನ್ ಬಹು ಮನ್ಯೇವಿಹಿಂಸ್ರಾನ್ ॥
ಅನುವಾದ
ಆದ್ದರಿಂದ ನಾನು ನಿನ್ನ ಈ ಸಾಧ್ವಿಯಾದ ಕನ್ಯೆಯನ್ನು ಅವಶ್ಯವಾಗಿ ಸ್ವೀಕರಿಸುವೆನು. ಆದರೆ ಒಂದು ನಿಬಂಧನೆ ಇದೆ. ಈಕೆಯಲ್ಲಿ ಸಂತಾನ ಉಂಟಾಗುವವರೆಗೆ ನಾನು ಗೃಹಸ್ಥ ಧರ್ಮಾನುಸಾರವಾಗಿ ಇವಳೊಂದಿಗೆ ಇರುವೆನು. ಅನಂತರ ಭಗವಂತನು ಹೇಳಿರುವ ಸಂನ್ಯಾಸಪ್ರಧಾನವಾದ ಹಿಂಸಾರಹಿತ ವಾದ ಶಮ-ದಮಾದಿ ಧರ್ಮಗಳಿಗೆ ಹೆಚ್ಚು ಪ್ರಾಶಸ್ತ್ಯನೀಡುವೆನು.॥19॥
(ಶ್ಲೋಕ - 20)
ಮೂಲಮ್
ಯತೋಭವದ್ವಿಶ್ವಮಿದಂ ವಿಚಿತ್ರಂ
ಸಂಸ್ಥಾಸ್ಯತೇ ಯತ್ರ ಚ ವಾವತಿಷ್ಠತೇ ।
ಪ್ರಜಾಪತೀನಾಂ ಪತಿರೇಷ ಮಹ್ಯಂ
ಪರಂ ಪ್ರಮಾಣಂ ಭಗವಾನನಂತಃ ॥
ಅನುವಾದ
ಈ ವಿಚಿತ್ರವಾದ ಜಗತ್ತು ಯಾರಿಂದ ಉಂಟಾಗಿದೆಯೋ, ಯಾರಲ್ಲಿ ಲೀನವಾಗಿ ಹೋಗುತ್ತದೋ, ಯಾರ ಆಶ್ರಯದಿಂದ ಇದು ಸ್ಥಿರವಾಗಿ ಇದೆಯೋ ಆ ಪ್ರಜಾಪತಿಗಳಿಗೂ ಪತಿಯಾದ ಭಗವಾನ್ ಶ್ರೀಅನಂತನೇ ನನಗೆ ಅತ್ಯಂತ ಅಧಿಕವಾಗಿ ಮಾನ್ಯನಾಗಿದ್ದಾನೆ.॥20॥
(ಶ್ಲೋಕ - 21)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಸ ಉಗ್ರಧನ್ವನ್ನಿಯದೇವಾಬಭಾಷೇ
ಆಸೀಚ್ಚ ತೂಷ್ಣೀಮರವಿಂದನಾಭಮ್ ।
ಧಿಯೋಪಗೃಹ್ಣನ್ ಸ್ಮಿತಶೋಭಿತೇನ
ಮುಖೇನ ಚೇತೋ ಲುಲುಭೇ ದೇವಹೂತ್ಯಾಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ - ಪ್ರಚಂಡ ಧನುರ್ಧಾರಿ ಯಾದ ವಿದುರನೇ ! ಕರ್ದಮರು ಇಷ್ಟನ್ನು ಮಾತ್ರಹೇಳಿ ಹೃದಯ ದಲ್ಲಿ ಭಗವಾನ್ ಪದ್ಮನಾಭನನ್ನು ಧ್ಯಾನಿಸುತ್ತಾ ಮೌನವಾದರು. ಆಗ ಅವರ ಮಂದಹಾಸಯುಕ್ತ ಮುಖಕಮಲವನ್ನು ನೋಡಿ ದೇವಹೂತಿಯ ಚಿತ್ತವು ಸೂರೆಗೊಂಡಿತು.॥21॥
(ಶ್ಲೋಕ - 22)
ಮೂಲಮ್
ಸೋನುಜ್ಞಾತ್ವಾ ವ್ಯವಸಿತಂ ಮಹಿಷ್ಯಾ ದುಹಿತುಃ ಸ್ಫುಟಮ್ ।
ತಸ್ಮೈ ಗುಣಗಣಾಢ್ಯಾಯ ದದೌ ತುಲ್ಯಾಂ ಪ್ರಹರ್ಷಿತಃ ॥ 22 ॥
ಅನುವಾದ
ಈ ಸಂಬಂಧದಲ್ಲಿ ಮಹಾರಾಣಿ ಶತರೂಪಾ ಮತ್ತು ರಾಜ ಕುಮಾರಿಯ ಸ್ಪಷ್ಟ ಅನುಮತಿಯಿದೆ ಎಂದು ಗಮನಿಸಿ ಮನುವು ಅನೇಕಗುಣಸಂಪನ್ನರಾದ ಕರ್ದಮರಿಗೆ ಅವರಷ್ಟೇ ಗುಣಸಂಪನ್ನಳಾದ ತನ್ನ ಕನ್ಯೆಯನ್ನು ಸಂತೋಷವಾಗಿ ದಾನಮಾಡಿದನು.॥22॥
(ಶ್ಲೋಕ - 23)
ಮೂಲಮ್
ಶತರೂಪಾ ಮಹಾರಾಜ್ಞೀ ಪಾರಿಬರ್ಹಾನ್ಮಹಾಧನಾನ್ ।
ದಂಪತ್ಯೋಃ ಪರ್ಯದಾತ್ಪ್ರೀತ್ಯಾ ಭೂಷಾವಾಸಃ ಪರಿಚ್ಛದಾನ್ ॥
ಅನುವಾದ
ಮಹಾರಾಣಿ ಶತರೂಪೆಯೂ ಕೂಡ ಮಗಳಿಗೂ ಅಳಿಯನಿಗೂ ಅತ್ಯಂತ ಪ್ರೇಮದಿಂದ ಬಹುಮೂಲ್ಯವಾದ ಅನೇಕ ವಸಾಭೂಷಣಗಳನ್ನೂ, ಗೃಹಸ್ಥ ಜೀವನಕ್ಕೆ ಬೇಕಾದ ಪಾತ್ರೆ ಮುಂತಾದುವುಗಳನ್ನು ಬಳುವಳಿಯನ್ನಾಗಿ ಕೊಟ್ಟಳು.॥23॥
(ಶ್ಲೋಕ - 24)
ಮೂಲಮ್
ಪ್ರತ್ತಾಂ ದುಹಿತರಂ ಸಮ್ರಾಟ್ಸದೃಕ್ಷಾಯ ಗತವ್ಯಥಃ ।
ಉಪಗುಹ್ಯ ಚ ಬಾಹುಭ್ಯಾವೌತ್ಕಂಠ್ಯೋನ್ಮಥಿತಾಶಯಃ ॥
(ಶ್ಲೋಕ - 25)
ಮೂಲಮ್
ಅಶಕ್ನುವಂಸ್ತದ್ವಿರಹಂ ಮುಂಚನ್ ಬಾಷ್ಪಕಲಾಂ ಮುಹುಃ ।
ಆಸಿಂಚದಂಬ ವತ್ಸೇತಿ ನೇತ್ರೋದೈರ್ದುಹಿತುಃ ಶಿಖಾಃ ॥
ಅನುವಾದ
ಹೀಗೆ ಸುಯೋಗ್ಯನಾದ ವರನಿಗೆ ಕನ್ಯೆಯನ್ನು ಕೊಟ್ಟು ಮನು ಮಹಾರಾಜನು ನಿಶ್ಚಿಂತನಾದನು. ಹೊರಡುವಾಗ ಮಗಳ ಅಗಲಿಕೆ ಯನ್ನು ಸಹಿಸಲಾರದೆ ದುಃಖದಿಂದ ಆಕೆಯನ್ನು ಎದೆಗೊತ್ತಿ ಕೊಂಡು ಮಗಳೇ ! ಮಗೂ ! ಎಂದು ಹೇಳಿ ಅಳತೊಡಗಿದರು. ಕಣ್ಣುಗಳಿಂದ ಹರಿಯುತ್ತಿದ್ದ ಕಣ್ಣೀರಿನ ಪ್ರವಾಹದಿಂದ ಆತನು ದೇವಹೂತಿಯ ತಲೆಗೂದಲನ್ನು ನೆನೆಸಿಬಿಟ್ಟನು. ॥24-25॥
(ಶ್ಲೋಕ - 26)
ಮೂಲಮ್
ಆಮಂತ್ರ್ಯ ತಂ ಮುನಿವರಮನುಜ್ಞಾತಃ ಸಹಾನುಗಃ ।
ಪ್ರತಸ್ಥೇ ರಥಮಾರುಹ್ಯ ಸಭಾರ್ಯಃ ಸ್ವಪುರಂ ನೃಪಃ ॥
(ಶ್ಲೋಕ - 27)
ಮೂಲಮ್
ಉಭಯೋರ್ಋಷಿಕುಲ್ಯಾಯಾಃ ಸರಸ್ವತ್ಯಾಃ ಸುರೋಧಸೋಃ ।
ಋಷೀಣಾಮುಪಶಾಂತಾನಾಂ ಪಶ್ಯನ್ನಾಶ್ರಮಸಂಪದಃ ॥
ಅನುವಾದ
ಅನಂತರ ಮನುವು ಮುನಿವರ್ಯ ಕರ್ದಮರಲ್ಲಿ ಹೋಗಿ ಬರುವೆ ನೆಂದು ಹೇಳಿ, ಅವರಿಂದ ಅನುಮತಿಯನ್ನು ಪಡೆದು ಮಹಾರಾಣಿ ಯೊಂದಿಗೆ ರಥದಲ್ಲಿ ಕುಳಿತು, ತನ್ನ ಸೇವಕರೊಡನೆ ಋಷಿಗಣ ಗಳಿಂದ ಸೇವಿತನಾದ ಸರಸ್ವತೀನದಿಯ ಎರಡೂ ದಡಗಳಲ್ಲಿದ್ದ ಋಷ್ಯಾಶ್ರಮಗಳ ಸೊಬಗನ್ನು ನೋಡುತ್ತಾ ತನ್ನ ರಾಜಧಾನಿಗೆ ಹೊರಟು ಹೋದನು. ॥26-27॥
(ಶ್ಲೋಕ - 28)
ಮೂಲಮ್
ತಮಾಯಾಂತಮಭಿಪ್ರೇತ್ಯ ಬ್ರಹ್ಮಾವರ್ತಾತ್ಪ್ರಜಾಃ ಪತಿಮ್ ।
ಗೀತಸಂಸ್ತುತಿವಾದಿತ್ರೈಃ ಪ್ರತ್ಯುದೀಯುಃ ಪ್ರಹರ್ಷಿತಾಃ ॥
ಅನುವಾದ
ತಮ್ಮ ಪ್ರಭುಗಳು ಬರುತ್ತಿರುವ ಸಮಾಚಾರವನ್ನು ತಿಳಿದೊಡನೆ ಬ್ರಹ್ಮಾವರ್ತದ ಪ್ರಜೆಗಳು ಪರಮಾನಂದ ಪುಳಕಿತರಾಗಿ ಸ್ತೋತ್ರ- ಗೀತ ಹಾಗೂ ವಾದ್ಯಧ್ವನಿಗಳೊಡನೆ ಆತನನ್ನು ಸ್ವಾಗತಿಸಲು ರಾಜಧಾನಿ ಯಿಂದ ಹೊರಗೆ ಬಂದರು.॥28॥
(ಶ್ಲೋಕ - 29)
ಮೂಲಮ್
ಬರ್ಹಿಷ್ಮತೀ ನಾಮ ಪುರೀ ಸರ್ವಸಂಪತ್ಸಮನ್ವಿತಾ ।
ನ್ಯಪತನ್ ಯತ್ರ ರೋಮಾಣಿ ಯಜ್ಞಸ್ಯಾಂಗಂ ವಿಧುನ್ವತಃ ॥
ಅನುವಾದ
ಸಮಸ್ತ ಸಂಪತ್ತುಗಳಿಂದ ಸಂಪನ್ನವಾಗಿದ್ದ ‘ಬರ್ಹಿಷ್ಮತಿನಗರ’ವು ಸ್ವಾಯಂಭುವ ಮನುವಿನ ರಾಜಧಾನಿಯಾಗಿತ್ತು. ಭಗವಂತನಾದ ಶ್ರೀವರಾಹಸ್ವಾಮಿಯು ರಸಾತಳದಿಂದ ಭೂಮಿಯನ್ನು ಮೇಲಕ್ಕೆತ್ತಿ ತಂದಾಗ ತನ್ನ ದೇಹ ವನ್ನು ಕೊಡಹಲು ಅದರಿಂದ ರೋಮಗಳು ಉದುರಿದ ಜಾಗವದು.॥29॥
(ಶ್ಲೋಕ - 30)
ಮೂಲಮ್
ಕುಶಾಃ ಕಾಶಾಸ್ತ ಏವಾಸನ್ ಶಶ್ವದ್ಧರಿತವರ್ಚಸಃ ।
ಋಷಯೋ ಯೈಃ ಪರಾಭಾವ್ಯ ಯಜ್ಞಘ್ನಾನ್ಯಜ್ಞಮೀಜಿರೇ ॥
ಅನುವಾದ
ಆ ರೋಮಗಳೇ ಸದಾ ಹಸಿರು-ಪಚ್ಚೆಯಿಂದ ಶೋಭಿಸುವ ‘ಕುಶ’ ಮತ್ತು ‘ಕಾಶ’ಗಳೆಂಬ ಹುಲ್ಲುಗಳಾದವು. ಅವುಗಳ ಮೂಲಕ ಮುನಿಗಳು ಯಜ್ಞದಲ್ಲಿ ವಿಘ್ನವನ್ನುಂಟು ಮಾಡುತ್ತಿದ್ದ ದೈತ್ಯರನ್ನು ತಿರಸ್ಕರಿಸಿ ಭಗವಾನ್ ಯಜ್ಞಪುರುಷನನ್ನು ಯಜ್ಞಗಳ ಮೂಲಕ ಆರಾಧಿಸಿದ್ದರು.॥30॥
(ಶ್ಲೋಕ - 31)
ಮೂಲಮ್
ಕುಶಕಾಶಮಯಂ ಬರ್ಹಿರಾಸ್ತೀರ್ಯ ಭಗವಾನ್ಮನುಃ ।
ಅಯಜದ್ಯಜ್ಞ ಪುರುಷಂ ಲಬ್ಧಾ ಸ್ಥಾನಂ ಯತೋ ಭುವಮ್ ॥
ಅನುವಾದ
ಮನುಸಾರ್ವ ಭೌಮನೂ ಕೂಡ ಶ್ರೀವರಾಹದೇವರ ಅನುಗ್ರಹದಿಂದ ಭೂಮಿಯೆಂಬ ನಿವಾಸಸ್ಥಾನವು ದೊರೆತ ಬಳಿಕ, ಅದೇ ಜಾಗದಲ್ಲಿ ಕುಶ ಮತ್ತು ಕಾಶಗಳ ಆಸನವನ್ನು ಹರಡಿ ಯಜ್ಞಪುರುಷನನ್ನು ಪೂಜಿಸಿದ್ದನು.॥31॥
(ಶ್ಲೋಕ - 32)
ಮೂಲಮ್
ಬರ್ಹಿಷ್ಮತೀಂ ನಾಮ ವಿಭುರ್ಯಾಂ ನಿರ್ವಿಶ್ಯ ಸಮಾವಸತ್ ।
ತಸ್ಯಾಂ ಪ್ರವಿಷ್ಟೋ ಭವನಂ ತಾಪತ್ರಯವಿನಾಶನಮ್ ॥
ಅನುವಾದ
ಮನುವು ತನ್ನ ನಿವಾಸಸ್ಥಾನವಾದ ಬರ್ಹಿಷ್ಮತಿನಗರಿಯನ್ನು ತಲುಪಿ, ತಾಪತ್ರಯಗಳನ್ನು ಹೋಗಲಾಡಿಸುವ ತನ್ನ ಅರಮನೆ ಯನ್ನು ಪ್ರವೇಶಮಾಡಿದನು.॥32॥
(ಶ್ಲೋಕ - 33)
ಮೂಲಮ್
ಸಭಾರ್ಯಃ ಸಪ್ರಜಃ ಕಾಮಾನ್ಬುಭುಜೇನ್ಯಾವಿರೋಧತಃ ।
ಸಂಗೀಯಮಾನಸತ್ಕೀರ್ತಿಃ ಸಸೀಭಿಃ ಸುರಗಾಯಕೈಃ ।
ಪ್ರತ್ಯೂಷೇಷ್ವನುಬದ್ಧೇನ ಹೃದಾ ಶೃಣ್ವನ್ ಹರೇಃ ಕಥಾಃ ॥
ಅನುವಾದ
ಅಲ್ಲಿ ಅವನು ತನ್ನ ಭಾರ್ಯೆ ಹಾಗೂ ಸಂತಾನಗಳೊಡನೆ ಧರ್ಮ, ಅರ್ಥ ಮತ್ತು ಮೋಕ್ಷಗಳಿಗೆ ಅನುಕೂಲವಾಗಿರುವ ಭೋಗಗಳನ್ನು ಅನುಭವಿಸತೊಡಗಿದನು. ಪ್ರಾತಃಕಾಲವಾದೊಡನೆ ಗಂಧರ್ವರು ತಮ್ಮ ಹೆಂಡಿರೊಡನೆ ಆತನ ಕೀರ್ತಿಯನ್ನು ಕೊಂಡಾಡುತ್ತಿದ್ದರು. ಆದರೆ ಆತನು ಅದರಲ್ಲಿ ಆಸಕ್ತಿ ತೋರದೆ ಪ್ರೇಮಪೂರ್ಣವಾದ ಹೃದಯದಿಂದ ಶ್ರೀಹರಿಯ ಕಥೆ ಗಳನ್ನೇ ಕೇಳುತ್ತಿದ್ದನು.॥33॥
(ಶ್ಲೋಕ - 34)
ಮೂಲಮ್
ನಿಷ್ಣಾತಂ ಯೋಗಮಾಯಾಸು ಮುನಿಂ ಸ್ವಾಯಂಭುವಂ ಮನುಮ್ ।
ಯದಾ ಭ್ರಂಶಯಿತುಂ ಭೋಗಾ ನ ಶೇಕುರ್ಭಗವತ್ಪರಮ್ ॥
ಅನುವಾದ
ಆ ಮನುವು ಇಷ್ಟಬಂದ ಭೋಗ ಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿದ್ದನು. ಆದರೆ ಮನನಶೀಲನೂ, ಭಗವತ್ಪರಾಯಣನೂ ಆದ ಆ ಯೋಗಿ ಯನ್ನು ಭೋಗಗಳು ಕಿಂಚಿತ್ತಾದರೂ ಕದಲಿಸದೆ ಹೋದುವು.॥34॥
(ಶ್ಲೋಕ - 35)
ಮೂಲಮ್
ಅಯಾತಯಾಮಾಸ್ತಸ್ಯಾಸನ್ ಯಾಮಾಃ ಸ್ವಾಂತರಯಾಪನಾಃ ।
ಶೃಣ್ವತೋ ಧ್ಯಾಯತೋ ವಿಷ್ಣೋಃ ಕುರ್ವತೋ ಬ್ರುವತಃ ಕಥಾಃ ॥
ಅನುವಾದ
ತನ್ನ ಮನ್ವಂತರವೆಂಬ ಕಾಲದಲ್ಲಿ ಒಂದು ಕ್ಷಣಕಾಲವನ್ನು ಅವನು ವ್ಯರ್ಥಮಾಡುತ್ತಿರಲಿಲ್ಲ. ಶ್ರೀಮಹಾವಿಷ್ಣುವಿನ ಕಥೆಗಳನ್ನು ಕೇಳುವುದರಲ್ಲಿಯೂ, ಧ್ಯಾನಿಸುವುದರಲ್ಲಿಯೂ, ರಚಿಸುವುದ ರಲ್ಲಿಯೂ, ನಿರೂಪಿಸುವುದರಲ್ಲಿಯೂ, ಎಲ್ಲ ಕಾಲವನ್ನು ಸದುಪ ಯೋಗ ಪಡಿಸುತ್ತಿದ್ದನು.॥35॥
(ಶ್ಲೋಕ - 36)
ಮೂಲಮ್
ಸ ಏವಂ ಸ್ವಾಂತರಂ ನಿನ್ಯೇ ಯುಗಾನಾಮೇಕಸಪ್ತತಿಮ್ ।
ವಾಸುದೇವಪ್ರಸಂಗೇನ ಪರಿಭೂತಗತಿತ್ರಯಃ ॥
ಅನುವಾದ
ಹೀಗೆ ಅವನು ತನ್ನ ಜಾಗ್ರತ್, ಸ್ವಪ್ನ, ಸುಷುಪ್ತಿಗಳೆಂಬ ಮೂರು ಅವಸ್ಥೆಗಳನ್ನೂ, ಸತ್ತ್ವ, ರಜ, ತಮ ಗಳೆಂಬ ತ್ರಿಗುಣಗಳನ್ನು ತಿರಸ್ಕರಿಸಿ ತ್ರಿಗುಣಾತೀತನಾಗಿ ಶ್ರೀವಾಸು ದೇವನ ಕಥಾಪ್ರಸಂಗದಲ್ಲೇ ಇರುತ್ತಾ ತನ್ನ ಮನ್ವಂತರದ ಎಪ್ಪ ತ್ತೊಂದು ಚತುರ್ಯುಗಗಳನ್ನು ಸಲವಾಗಿ ಕಳೆದನು.॥36॥
(ಶ್ಲೋಕ - 37)
ಮೂಲಮ್
ಶಾರೀರಾ ಮಾನಸಾ ದಿವ್ಯಾ ವೈಯಾಸೇ ಯೇ ಚ ಮಾನುಷಾಃ ।
ಭೌತಿಕಾಶ್ಚ ಕಥಂ ಕ್ಲೇಶಾ ಬಾಧಂತೇ ಹರಿಸಂಶ್ರಯಮ್ ॥
ಅನುವಾದ
ವ್ಯಾಸಪುತ್ರನಾದ ವಿದುರನೇ ! ಶ್ರೀಹರಿಯನ್ನು ಆಶ್ರಯಿಸಿರುವ ಸುಕೃತಿಯನ್ನು ಶಾರೀರಿಕ, ಮಾನಸಿಕ, ದೈವಿಕ, ಮಾನುಷಿಕ ಅಥವಾ ಭೌತಿಕ ದುಃಖಗಳು ಹೇಗೆ ತಾನೇ ಕಾಡಿಸಿಯಾವು.॥37॥
(ಶ್ಲೋಕ - 38)
ಮೂಲಮ್
ಯಃ ಪೃಷ್ಟೋ ಮುನಿಭಿಃ ಪ್ರಾಹ ಧರ್ಮಾನ್ನಾನಾವಿಧಾನ್ ಶುಭಾನ್ ।
ನೃಣಾಂ ವರ್ಣಾಶ್ರಮಾಣಾಂ ಚ ಸರ್ವಭೂತಹಿತಃ ಸದಾ ॥
ಅನುವಾದ
ಮಹಾಪುರುಷನಾದ ಮನುವು ಸಮಸ್ತ ಪ್ರಾಣಿಗಳ ಹಿತದಲ್ಲೇ ತೊಡಗಿರುತ್ತಿದ್ದನು. ಮುನಿಗಳು ಆತನನ್ನು ಪ್ರಶ್ನಿಸಿದಾಗ ಆ ಧರ್ಮಜ್ಞ ಪ್ರಭುವು ಮನುಷ್ಯರಿಗೂ ಹಾಗೂ ಎಲ್ಲ ವರ್ಣ ಗಳಿಗೂ, ಆಶ್ರಮಗಳಿಗೂ ಸಂಬಂಧಪಟ್ಟ ಅನೇಕ ಮಂಗಲಮಯ ಧರ್ಮಗಳನ್ನೂ ವರ್ಣಿಸಿದನು. (ಅದು ‘ಮನುಸಂಹಿತಾ’ ಎಂಬ ಗ್ರಂಥದ ರೂಪದಲ್ಲಿ ಈಗಲೂ ಉಪಲಬ್ಧವಾಗಿದೆ.)॥38॥
(ಶ್ಲೋಕ - 39)
ಮೂಲಮ್
ಏತತ್ತ ಆದಿರಾಜಸ್ಯ ಮನೋಶ್ಚರಿತಮದ್ಭುತಮ್ ।
ವರ್ಣಿತಂ ವರ್ಣನೀಯಸ್ಯ ತದಪತ್ಯೋದಯಂ ಶೃಣು ॥
ಅನುವಾದ
ಜಗತ್ತಿನ ಮೊಟ್ಟಮೊದಲನೆಯ ಚಕ್ರವರ್ತಿಯೂ, ಪುರುಷ ಶ್ರೇಷ್ಠನೂ ಪುಣ್ಯಶ್ಲೋಕನೂ ಆದ ಸ್ವಾಯಂಭುವ ಮನುವಿನ ಅದ್ಭುತ ಚರಿತ್ರೆಯನ್ನು ನಾನು ನಿನಗೆ ವರ್ಣಿಸಿರುವೆನು. ಈಗ ಆತನ ಕನ್ಯಾರತ್ನ ವಾದ ದೇವಹೂತಿಯ ಮಹಿಮೆಯನ್ನು ಕೇಳುವವನಾಗು. ॥39॥