೧೦

[ಹತ್ತನೆಯ ಅಧ್ಯಾಯ]

ಭಾಗಸೂಚನಾ

ಹತ್ತುಬಗೆಯ ಸೃಷ್ಟಿಯ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ವಿದುರ ಉವಾಚ

ಮೂಲಮ್

ಅಂತರ್ಹಿತೇ ಭಗವತಿ ಬ್ರಹ್ಮಾ ಲೋಕಪಿತಾಮಹಃ ।
ಪ್ರಜಾಃ ಸಸರ್ಜ ಕತಿಧಾ ದೈಹಿಕೀರ್ಮಾನಸೀರ್ವಿಭುಃ ॥

ಅನುವಾದ

ವಿದುರನು ಕೇಳಿದನು ಮುನಿವರ್ಯರಾದ ಮೈತ್ರೇಯರೇ ! ಭಗವಾನ್ ನಾರಾಯಣನು ಅಂತರ್ಧಾನನಾದ ಮೇಲೆ ಸರ್ವ ಲೋಕಪಿತಾಮಹರಾದ ಬ್ರಹ್ಮದೇವರು ತಮ್ಮ ದೇಹದಿಂದ ಮತ್ತು ಮನಸ್ಸಿನಿಂದ ಎಷ್ಟು ಬಗೆಯ ಸೃಷ್ಟಿಗಳನ್ನು ಉತ್ಪನ್ನಮಾಡಿದರು ? ॥ 1 ॥

(ಶ್ಲೋಕ - 2)

ಮೂಲಮ್

ಯೇ ಚ ಮೇ ಭಗವನ್ಪೃಷ್ಟಾಸ್ತ್ವಯ್ಯರ್ಥಾ ಬಹುವಿತ್ತಮ ।
ತಾನ್ವದಸ್ವಾನುಪೂರ್ವ್ಯೇಣ ಛಿಂಧಿ ನಃ ಸರ್ವಸಂಶಯಾನ್ ॥

ಅನುವಾದ

ಪೂಜ್ಯರೇ ! ಇದಲ್ಲದೆ ನಾನು ತಮ್ಮಲ್ಲಿ ಕೇಳಿಕೊಂಡ ಎಲ್ಲ ಪ್ರಶ್ನೆಗಳಿಗೆ ಕ್ರಮವಾಗಿ ಉತ್ತರ ದಯಪಾಲಿಸಿ ನನ್ನ ಎಲ್ಲ ಸಂಶಯಗಳನ್ನು ಪರಿಹರಿಸಿರಿ. ತಾವು ಜ್ಞಾನಿಗಳಲ್ಲೇ ಅತ್ಯಂತ ಶ್ರೇಷ್ಠರಾಗಿರುವಿರಿ. ॥ 2 ॥

(ಶ್ಲೋಕ - 3)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಏವಂ ಸಂಚೋದಿತಸ್ತೇನ ಕ್ಷತಾ ಕೌಷಾರವೋ ಮುನಿಃ ।
ಪ್ರೀತಃ ಪ್ರತ್ಯಾಹ ತಾನ್ಪ್ರಶ್ನಾನ್ ಹೃದಿಸ್ಥಾನಥ ಭಾರ್ಗವ ॥

ಅನುವಾದ

ಸೂತಪುರಾಣಿಕರು ಹೇಳಿದರು ಶೌನಕಾದಿ ಋಷಿಗಳೇ ! ವಿದುರನು ಹೀಗೆ ಕೇಳಿದಾಗ ಮುನಿವರ್ಯ ಮೈತ್ರೇಯರು ಬಹಳ ಪ್ರಸನ್ನರಾಗಿ ತಮ್ಮ ಹೃದಯದಲ್ಲಿದ್ದ ಆ ಪ್ರಶ್ನೆಗಳಿಗೆ ಹೀಗೆ ಉತ್ತರಿಸ ತೊಡಗಿದರು. ॥ 3 ॥

(ಶ್ಲೋಕ - 4)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ವಿರಿಂಚೋಪಿ ತಥಾ ಚಕ್ರೇ ದಿವ್ಯಂ ವರ್ಷಶತಂ ತಪಃ ।
ಆತ್ಮನ್ಯಾತ್ಮಾನಮಾವೇಶ್ಯ ಯದಾಹ ಭಗವಾನಜಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ಅಯ್ಯಾ ವಿದುರನೇ ! ಜನ್ಮ ರಹಿತನಾದ ಭಗವಾನ್ ಶ್ರೀಹರಿಯು ಹೇಳಿದಂತೆಯೇ ಬ್ರಹ್ಮ ದೇವರು ತಮ್ಮ ಚಿತ್ತವನ್ನು ಆತ್ಮಭೂತನಾದ ಶ್ರೀನಾರಾಯಣನಲ್ಲಿ ತೊಡಗಿಸಿ ನೂರು ದಿವ್ಯವರ್ಷಗಳವರೆಗೆ ತಪಸ್ಸನ್ನಾಚರಿಸಿದರು. ॥ 4 ॥

(ಶ್ಲೋಕ - 5)

ಮೂಲಮ್

ತದ್ವಿಲೋಕ್ಯಾಬ್ಜ ಸಂಭೂತೋ ವಾಯುನಾ ಯದಧಿಷ್ಠಿತಃ ।
ಪದ್ಮಮಂಭಶ್ಚ ತತ್ಕಾಲಕೃತವೀರ್ಯೇಣ ಕಂಪಿತಮ್ ॥

ಅನುವಾದ

ಆಗ ಪ್ರಳಯಕಾಲದ ಮಹಾವಾಯುವಿನ ಬಡಿತಗಳಿಂದ ಅವರು ಕುಳಿತಿದ್ದ ಕಮಲವು ಹಾಗೂ ಸುತ್ತಲೂ ಇದ್ದ ಜಲರಾಶಿಯೂ ಅಲ್ಲಾಡುತ್ತಿರುವುದು ಅವರಿಗೆ ಗೋಚರಿಸಿತು. ॥ 5 ॥

(ಶ್ಲೋಕ - 6)

ಮೂಲಮ್

ತಪಸಾ ಹ್ಯೇಧಮಾನೇನ ವಿದ್ಯಯಾ ಚಾತ್ಮಸಂಸ್ಥಯಾ ।
ವಿವೃದ್ಧವಿಜ್ಞಾನಬಲೋ ನ್ಯಪಾದ್ವಾಯುಂ ಸಹಾಂಭಸಾ ॥

ಅನುವಾದ

ಪ್ರಬಲವಾದ ತಪಸ್ಸಿನಿಂದ ಮತ್ತು ಹೃದಯದಲ್ಲಿ ಸ್ಥಿತವಾದ ಆತ್ಮಜ್ಞಾನದಿಂದ ಅವರ ವಿಜ್ಞಾನ-ಬಲವು ವೃದ್ಧಿಸಿತು. ಅವುಗಳ ಬಲದಿಂದ ಅವರು ಆ ಜಲರಾಶಿಯನ್ನೂ, ವಾಯುವನ್ನೂ ಕುಡಿದುಬಿಟ್ಟರು. ॥ 6 ॥

(ಶ್ಲೋಕ - 7)

ಮೂಲಮ್

ತದ್ವಿಲೋಕ್ಯ ವಿಯದ್ವ್ಯಾಪಿ ಪುಷ್ಕರಂ ಯದಧಿಷ್ಠಿತಮ್ ।
ಅನೇನ ಲೋಕಾನ್ಪ್ರಾಗ್ಲೀನಾನ್ಕಲ್ಪಿತಾಸ್ಮೀತ್ಯಚಿಂತಯತ್ ॥

ಅನುವಾದ

ಮತ್ತೆ ತಾನು ಕುಳಿತಿದ್ದ ಆಕಾಶವ್ಯಾಪಿ ಮಹಾ ಕಮಲವನ್ನು ನೋಡಿ ಅವರು ‘ಹಿಂದಿನ ಕಲ್ಪದಲ್ಲಿ ಲೀನವಾದ ಲೋಕಗಳನ್ನು ನಾನು ಈ ಕಮಲದಿಂದಲೇ ಸೃಷ್ಟಿಸುವೆನು’ ಎಂದು ಯೋಚಿಸಿದರು. ॥ 7 ॥

(ಶ್ಲೋಕ - 8)

ಮೂಲಮ್

ಪದ್ಮಕೋಶಂ ತದಾವಿಶ್ಯ ಭಗವತ್ಕರ್ಮಚೋದಿತಃ ।
ಏಕಂ ವ್ಯಭಾಂಕ್ಷೀದುರುಧಾ ತ್ರಿಧಾ ಭಾವ್ಯಂ ದ್ವಿಸಪ್ತಧಾ ॥

ಅನುವಾದ

ಶ್ರೀಭಗವಂತನಿಂದ ಸೃಷ್ಟಿಕಾರ್ಯವನ್ನು ಮಾಡಲು ನೇಮಕಗೊಂಡಿದ್ದ ಆ ಬ್ರಹ್ಮದೇವರು ಆ ಕಮಲ ಕೋಶದಲ್ಲಿ ಪ್ರವೇಶಿಸಿ ಒಂದೊಂದನ್ನೇ ಭೂಃ, ಭುವಃ, ಸುವಃ ಎಂಬ ಮೂರು ಭಾಗಗಳನ್ನಾಗಿ ವಿಂಗಡಿಸಿದರು. ಆ ಕಮಲವು ಅತ್ಯಂತ ದೊಡ್ಡದಾಗಿದ್ದು ಅದನ್ನು ಹದಿನಾಲ್ಕು ಲೋಕಗಳನ್ನಾಗಿ ಅಥವಾ ಅದಕ್ಕಿಂತಲೂ ಹೆಚ್ಚು ಲೋಕಗಳನ್ನಾಗಿ ವಿಭಾಗಮಾಡ ಬಹುದಾಗಿತ್ತು.॥8॥

(ಶ್ಲೋಕ - 9)

ಮೂಲಮ್

ಏತಾವಾನ್ಜೀವಲೋಕಸ್ಯ ಸಂಸ್ಥಾಭೇದಃ ಸಮಾಹೃತಃ ।
ಧರ್ಮಸ್ಯ ಹ್ಯನಿಮಿತ್ತಸ್ಯ ವಿಪಾಕಃ ಪರಮೇಷ್ಠ್ಯಸೌ ॥

ಅನುವಾದ

ಜೀವಿಗಳ ಭೋಗಸ್ಥಾನವಾಗಿ ಇವೇ ಮೂರು ಲೋಕಗಳು ಶಾಸಗಳಲ್ಲಿ ವರ್ಣಿತವಾಗಿವೆ. ನಿಷ್ಕಾಮಕರ್ಮ ಮಾಡುವವರಿಗಾದರೋ ಮಹಃ, ತಪಃ, ಜನಃ ಮತ್ತು ಸತ್ಯಲೋಕ ರೂಪವಾದ ಬ್ರಹ್ಮಲೋಕ ಇವುಗಳು ದೊರೆಯುತ್ತವೆ.॥9॥

(ಶ್ಲೋಕ - 10)

ಮೂಲಮ್ (ವಾಚನಮ್)

ವಿದುರ ಉವಾಚ

ಮೂಲಮ್

ಯದಾತ್ಥ ಬಹುರೂಪಸ್ಯ ಹರೇರದ್ಭುತಕರ್ಮಣಃ ।
ಕಾಲಾಖ್ಯಂ ಲಕ್ಷಣಂ ಬ್ರಹ್ಮನ್ಯಥಾ ವರ್ಣಯ ನಃ ಪ್ರಭೋ ॥

ಅನುವಾದ

ವಿದುರನು ಕೇಳಿದನು ಬ್ರಾಹ್ಮಣೋತ್ತಮರೇ ! ತಾವು ಅದ್ಭುತಕರ್ಮನಾದ ಶ್ರೀಹರಿಯ ಕಾಲವೆಂಬ ಶಕ್ತಿಯ ಮಾತನ್ನು ಹೇಳಿದಿರಿ, ಸ್ವಾಮಿ ! ದಯವಿಟ್ಟು ಅದನ್ನು ನನಗೆ ವಿಸ್ತಾರವಾಗಿ ವರ್ಣಿಸಬೇಕು.॥10॥

(ಶ್ಲೋಕ - 11)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಗುಣವ್ಯತಿಕರಾಕಾರೋ ನಿರ್ವಿಶೇಷೋಪ್ರತಿಷ್ಠಿತಃ ।
ಪುರುಷಸ್ತದುಪಾದಾನಮಾತ್ಮಾನಂ ಲೀಲಯಾಸೃಜತ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ಎಲೈ ವಿದುರಾ! ವಿಷಯಗಳು ರೂಪಾಂತರ ಹೊಂದುವುದೇ ಕಾಲದ ಆಕಾರವು. ಅದು ಸ್ವತಃ ನಿರ್ವಿಶೇಷವೂ, ಅನಾದಿಯೂ, ಅನಂತವೂ ಆಗಿದೆ. ಅದನ್ನೇ ನಿಮಿತ್ತವಾಗಿಸಿಕೊಂಡು ಶ್ರೀಭಗವಂತನು ಲೀಲಾಜಾಲವಾಗಿ ತನ್ನನ್ನೇ ಸೃಷ್ಟಿಯರೂಪದಲ್ಲಿ ಪ್ರಕಟಪಡಿಸಿಕೊಳ್ಳುವನು.॥11॥

(ಶ್ಲೋಕ - 12)

ಮೂಲಮ್

ವಿಶ್ವಂ ವೈ ಬ್ರಹ್ಮತನ್ಮಾತ್ರಂ ಸಂಸ್ಥಿತಂ ವಿಷ್ಣುಮಾಯಯಾ ।
ಈಶ್ವರೇಣ ಪರಿಚ್ಛಿನ್ನಂ ಕಾಲೇನಾವ್ಯಕ್ತಮೂರ್ತಿನಾ ॥

ಅನುವಾದ

ಮೊದಲು ಈ ವಿಶ್ವವೆಲ್ಲವೂ ಭಗವಂತನ ಮಾಯೆಯಲ್ಲಿ ಲೀನವಾಗಿ ಬ್ರಹ್ಮರೂಪದಲ್ಲೇ ಇತ್ತು. ಅದನ್ನೇ ಅವ್ಯಕ್ತಮೂರ್ತಿಯಾದ ಕಾಲದ ಮೂಲಕ ಭಗವಂತನು ಪುನಃ ಪ್ರತ್ಯೇಕವಾಗಿ ಪ್ರಕಟಪಡಿಸಿದನು.॥12॥

(ಶ್ಲೋಕ - 13)

ಮೂಲಮ್

ಯಥೇದಾನೀಂ ತಥಾಗ್ರೇ ಚ ಪಶ್ಚಾದಪ್ಯೇತದೀದೃಶಮ್ ।
ಸರ್ಗೋ ನವವಿಧಸ್ತಸ್ಯ ಪ್ರಾಕೃತೋ ವೈಕೃತಸ್ತು ಯಃ ॥

ಅನುವಾದ

ಈ ಜಗತ್ತು ಈಗಿರುವಂತೆ ಹಿಂದೆಯೂ ಇತ್ತು ಮತ್ತು ಮುಂದೆಯೂ ಹೀಗೇ ಇರುವುದು. ಇದರ ಸೃಷ್ಟಿಯು ಒಂಭತ್ತು ಪ್ರಕಾರದಿಂದಿರುವುದು ಮತ್ತು ಪ್ರಾಕೃತ-ವೈಕೃತ ಭೇದದಿಂದ ಹತ್ತನೆಯದಾದ ಒಂದು ಸೃಷ್ಟಿಯೂ ಇದೆ.॥13॥

(ಶ್ಲೋಕ - 14)

ಮೂಲಮ್

ಕಾಲದ್ರವ್ಯಗುಣೈರಸ್ಯ ತ್ರಿವಿಧಃ ಪ್ರತಿಸಂಕ್ರಮಃ ।
ಆದ್ಯಸ್ತು ಮಹತಃ ಸರ್ಗೋ ಗುಣವೈಷಮ್ಯಮಾತ್ಮನಃ ॥

ಅನುವಾದ

ಇದರ ಪ್ರಳಯವು, ಕಾಲ, ದ್ರವ್ಯ, ಗುಣ ಇವುಗಳ ಮೂಲಕ ಮೂರು ಪ್ರಕಾರದಿಂದ ಆಗುತ್ತದೆ. ಈಗ ಇವುಗಳಲ್ಲಿ ಮೊದಲಿಗೆ ಹತ್ತು ಪ್ರಕಾರದ ಸೃಷ್ಟಿಯನ್ನು ವರ್ಣಿಸುತ್ತೇನೆ ; ಕೇಳು ಮೊದಲನೆ ಯದು ಮಹತ್ತತ್ತ್ವದ ಸೃಷ್ಟಿ. ಭಗವಂತನ ಪ್ರೇರಣೆಯಿಂದ ಸತ್ತ್ವಾದಿ ಗುಣಗಳಲ್ಲಿ ವಿಷಮತೆ ಉಂಟಾಗುವುದೇ ಇದರ ಸ್ವರೂಪವಾಗಿದೆ.॥14॥

(ಶ್ಲೋಕ - 15)

ಮೂಲಮ್

ದ್ವಿತೀಯಸ್ತ್ವಹಮೋ ಯತ್ರ ದ್ರವ್ಯಜ್ಞಾನಕ್ರಿಯೋದಯಃ ।
ಭೂತಸರ್ಗಸ್ತೃತೀಯಸ್ತು ತನ್ಮಾತ್ರೋ ದ್ರವ್ಯಶಕ್ತಿಮಾನ್ ॥

ಅನುವಾದ

ಎರಡನೆಯ ಸೃಷ್ಟಿ ಅಹಂಕಾರದ್ದು. ಇದರಿಂದ ಪೃಥ್ವಿಯೇ ಮುಂತಾದ ಪಂಚಭೂತಗಳು, ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳ ಉತ್ಪತ್ತಿ ಆಗುತ್ತದೆ. ಭೂತ ಸೃಷ್ಟಿಯೇ ಮೂರನೆಯದು. ಇದರಲ್ಲಿ ಪಂಚಮಹಾಭೂತಗಳನ್ನು ಉಂಟುಮಾಡುವ ತನ್ಮಾತ್ರವರ್ಗ ಇರುವುದು.॥15॥

(ಶ್ಲೋಕ - 16)

ಮೂಲಮ್

ಚತುರ್ಥ ಐಂದ್ರಿಯಃ ಸರ್ಗೋ ಯಸ್ತು ಜ್ಞಾನಕ್ರಿಯಾತ್ಮಕಃ ।
ವೈಕಾರಿಕೋ ದೇವಸರ್ಗಃ ಪಂಚಮೋ ಯನ್ಮಯಂ ಮನಃ ॥

ಅನುವಾದ

ನಾಲ್ಕನೆ ಯದು ಇಂದ್ರಿಯಗಳ ಸೃಷ್ಟಿಯು. ಇದು ಜ್ಞಾನ ಮತ್ತು ಕ್ರಿಯಾಶಕ್ತಿ ಯಿಂದ ಸಂಪನ್ನವಾಗುವುದು. ಐದನೆಯದಾದ ಸೃಷ್ಟಿಯು ಸಾತ್ವಿಕಾ ಹಂಕಾರದಿಂದ ಉತ್ಪನ್ನವಾಗಿ ಇಂದ್ರಿಯಗಳಿಗೆ ಅಧಿಷ್ಠಾತೃ ದೇವತೆಗಳದ್ದಾಗಿದೆ. ಮನಸ್ಸು ಇದೇ ಸೃಷ್ಟಿಯಲ್ಲಿ ಅಂತರ್ಗತವಾಗಿದೆ.॥16॥

(ಶ್ಲೋಕ - 17)

ಮೂಲಮ್

ಷಷ್ಠಸ್ತು ತಮಸಃ ಸರ್ಗೋ ಯಸ್ತ್ವಬುದ್ಧಿಕೃತಃ ಪ್ರಭೋ ।
ಷಡಿಮೇ ಪ್ರಾಕೃತಾಃ ಸರ್ಗಾ ವೈಕೃತಾನಪೀ ಮೇ ಶೃಣು ॥

ಅನುವಾದ

ಅವಿದ್ಯೆಯ ಸೃಷ್ಟಿಯು ಆರನೆಯದು. ಇದರಲ್ಲಿ ತಾಮಿಸ್ರ, ಅಂಧತಾಮಿಸ್ರ, ತಮ, ಮೋಹ ಮತ್ತು ಮಹಾಮೋಹ ಎಂಬ ಐದು ಗಂಟುಗಳು ಇರುವುವು. ಇದು ಜೀವಿಗಳ ಬುದ್ಧಿಯನ್ನು ಆವರಣ ಮತ್ತು ವಿಕ್ಷೇಪಗೊಳಿಸುವಂತಹುದು. ಇವು ಆರು ಪ್ರಾಕೃತ ಸೃಷ್ಟಿಗಳು ಇನ್ನು ವೈಕೃತ ಸೃಷ್ಟಿಗಳನ್ನು ವರ್ಣಿಸುವೆನು, ಕೇಳು.॥17॥

(ಶ್ಲೋಕ - 18)

ಮೂಲಮ್

ರಜೋಭಾಜೋ ಭಗವತೋ ಲೀಲೇಯಂ ಹರಿಮೇಧಸಃ ।
ಸಪ್ತಮೋ ಮುಖ್ಯಸರ್ಗಸ್ತು ಷಡ್ವಿಧಸ್ತಸ್ಥುಷಾಂ ಚ ಯಃ ॥

ಅನುವಾದ

ಚಿಂತನೆ ಮಾಡುವವರ ಸಮಸ್ತ ದುಃಖಗಳನ್ನು ಪರಿಹರಿಸುವ ಭಗವಾನ್ ಶ್ರೀಹರಿಯದೇ ಇವೆಲ್ಲಾ ಲೀಲೆಗಳು. ಅವನೇ ಬ್ರಹ್ಮ ದೇವರ ರೂಪದಲ್ಲಿ ರಜೋಗುಣವನ್ನು ಸ್ವೀಕರಿಸಿ ಜಗತ್ತನ್ನು ರಚಿಸುವನು. ಆರು ಪ್ರಕಾರದ ಪ್ರಾಕೃತ ಸೃಷ್ಟಿಯ ಬಳಿಕ, ವೈಕೃತಿಕ ಸೃಷ್ಟಿಯಲ್ಲಿ ಪ್ರಧಾನವಾದ ಸ್ಥಾವರ ಸೃಷ್ಟಿಯೇ ಏಳನೇಯದು. ಅದು ಆರು ವಿಭಾಗವಾಗಿರುವುದು.॥18॥

(ಶ್ಲೋಕ - 19)

ಮೂಲಮ್

ವನಸ್ಪತ್ಯೋಷಧಿಲತಾತ್ವಕ್ಸಾರಾ ವೀರುಧೋ ದ್ರುಮಾಃ ।
ಉತ್ಸ್ರೋತಸಸ್ತಮಃ ಪ್ರಾಯಾ ಅಂತಃಸ್ಪರ್ಶಾ ವಿಶೇಷಿಣಃ ॥

ಅನುವಾದ

ವನಸ್ಪತಿಗಳು, ಔಷಧಿಗಳು, ಲತೆಗಳು, ಬಿದಿರು ಮುಂತಾದ ತ್ವಕ್ಸಾರಗಳು, ವೀರುಧಗಳು ಮತ್ತು ದ್ರುಮಗಳೇ ಆ ಆರು ಬಗೆಗಳು.* ಇವು ಕೆಳಭಾಗದಿಂದ (ಬೇರಿನಿಂದ) ಮೇಲ್ಗಡೆಗೆ ಆಹಾರಸಂಚಾರ ಹೊಂದಿರುತ್ತವೆ. ಸಾಮಾನ್ಯವಾಗಿ ಇವುಗಳಲ್ಲಿ ಜ್ಞಾನಶಕ್ತಿಯು ಪ್ರಕಟವಾಗಿರುವುದಿಲ್ಲ. ಇವು ಒಳಗಿಂದೊಳಗೆ ಕೇವಲ ಸ್ಪರ್ಶದ ಅನುಭವ ಮಾಡುತ್ತವೆ. ಇವುಗಳ ಪ್ರತಿಯೊಂದರಲ್ಲಿಯೂ ಯಾವುದೋ ವಿಶೇಷಗುಣವಿರುತ್ತದೆ.॥19॥

ಟಿಪ್ಪನೀ
  • ಹೂವಿಲ್ಲದೆ ಲಿಸುವ ಅರಳಿ, ಅತ್ತಿ, ಹಲಸು, ಆಲ ಮುಂತಾದವುಗಳು ವನಸ್ಪತಿಗಳು. ಹೂಬಿಟ್ಟು ಲಕೊಡುವ ಜವೆ, ಭತ್ತ, ಹೆಸರು ಮುಂತಾದವುಗಳು ಔಷಧಿಗಳು. ಇವುಗಳು ಲಪಕ್ವವಾದ ಮೇಲೆ ನಾಶಹೊಂದುತ್ತವೆ. ಆಶ್ರಯ ವೃಕ್ಷಾದಿಗಳಿಗೆ ಹಬ್ಬಿ ಮೇಲಕ್ಕೆ ಬೆಳೆಯುವ ಮಲ್ಲಿಗೆ ಮುಂತಾದ ಬಳ್ಳಿಗಳೇ ಲತೆಗಳು. ಕಠೋರವಾದ ಸಿಪ್ಪೆಯನ್ನು ಹೊಂದಿರುವ ಬಿದಿರು ಮುಂತಾದವುಗಳು ತ್ವಕ್ಸಾರಗಳು. ಗಟ್ಟಿಯಾಗಿ ಕುರುಚಲಾಗಿರುವುದರಿಂದ ಮೇಲಕ್ಕೆ ಹತ್ತದೆ ನೆಲದ ಮೇಲೆಯೇ ಹರಡಿಕೊಳ್ಳುವ ಬಳ್ಳಿಗಳು ವೀರುಧಗಳೆನಿಸುತ್ತವೆ. ಉದಾ : ಕರ್ಬೂಜ, ಕಲ್ಲಂಗಡಿ ಮುಂತಾದವುಗಳು. ಮೊದಲು ಹೂವುಬಿಟ್ಟು ನಂತರ ಹೂವಿನ ಜಾಗದಲ್ಲೇ ಹಣ್ಣುಗಳು ಬಿಡುವ ಮಾವು ನೇರಳೆ, ತೆಂಗು ಮುಂತಾದವುಗಳೇ ದ್ರುಮಗಳು.

(ಶ್ಲೋಕ - 20)

ಮೂಲಮ್

ತಿರಶ್ಚಾಮಷ್ಟಮಃ ಸರ್ಗಃ ಸೋಷ್ಟಾವಿಂಶದ್ವಿಧೋ ಮತಃ ।
ಅವಿದೋ ಭೂರಿತಮಸೋ ಘ್ರಾಣಜ್ಞಾ ಹೃದ್ಯವೇದಿನಃ ॥

ಅನುವಾದ

ಎಂಟನೆಯ ಸೃಷ್ಟಿಯು ತಿರ್ಯಕ್ (ಪಶು-ಪಕ್ಷಿ) ಯೋನಿಗಳದ್ದಾಗಿದೆ. ಆ ಸೃಷ್ಟಿಯಲ್ಲಿ ಇಪ್ಪತ್ತೆಂಟು ಜಾತಿಯ ಪ್ರಾಣಿಗಳು ಜನಿಸಿದವು. ಇವುಗಳಿಗೆ ಇಂದು-ನಾಳೆ ಎಂಬ ಕಾಲಜ್ಞಾನವಿರುವುದಿಲ್ಲ. ತಮೋಗುಣದ ಹೆಚ್ಚಳದಿಂದ ಇವು ಕೇವಲ ತಿಂದು-ಕುಡಿಯುವುದು, ಮೈಥುನ, ಮಲಗುವುದು ಇಷ್ಟನ್ನೇ ತಿಳಿಯುವುವು. ಇವುಗಳಿಗೆ ಮೂಸಿ ನೋಡಿಯೇ ವಸ್ತುವಿನ ಜ್ಞಾನವಾಗುತ್ತದೆ. ಇವುಗಳ ಹೃದಯದಲ್ಲಿ ವಿಚಾರಶಕ್ತಿ ಅಥವಾ ದೂರದರ್ಶಿತ್ವ ಇರುವುದಿಲ್ಲ.॥20॥

(ಶ್ಲೋಕ - 21)

ಮೂಲಮ್

ಗೌರಜೋ ಮಹಿಷಃ ಕೃಷ್ಣಃ ಸೂಕರೋ ಗವಯೋ ರುರುಃ ।
ದ್ವಿಶಾಃ ಪಶವಶ್ಚೇಮೇ ಅವಿರುಷ್ಟ್ರಶ್ಚ ಸತ್ತಮ ॥

ಅನುವಾದ

ಸಾಧುಶ್ರೇಷ್ಠನೇ ! ಈ ತಿರ್ಯಕ್ ಪ್ರಾಣಿಗಳಲ್ಲಿ ಹಸು, ಆಡು, ಕೋಣ, ಜಿಂಕೆ, ಹಂದಿ ಗವಯ (ನೀಲಗೋವು) ರುರು ಎಂಬ ಮೃಗ, ಟಗರು, ಒಂಟೆ ಇವುಗಳನ್ನು ‘ದ್ವಿಶ’ (ಎರಡು ಗೊರಸುಗಳುಳ್ಳವುಗಳು) ಎಂದು ಕರೆಯುತ್ತಾರೆ.॥21॥

(ಶ್ಲೋಕ - 22)

ಮೂಲಮ್

ಖರೋಶ್ವೋಶ್ವತರೋ ಗೌರಃ ಶರಭಶ್ಚಮರೀ ತಥಾ ।
ಏತೇ ಚೈಕಶಾಃ ಕ್ಷತ್ತಃ ಶೃಣು ಪಂಚನಖಾನ್ಪಶೂನ್ ॥ 22 ॥

ಅನುವಾದ

ಕತ್ತೆ, ಕುದುರೆ, ಹೆಸರುಗತ್ತೆ, ಗೌರಮೃಗ, ಶರಭ ಮತ್ತು ಚಮರೀಮೃಗ ಈ ಆರು ಜಾತಿಯ ಪ್ರಾಣಿಗಳು ‘ಏಕ ಶ’ (ಒಂದು ಗೊರಸು ಉಳ್ಳವುಗಳು) ಎನಿಸುತ್ತವೆ. ಇನ್ನು ಐದು ಉಗುರುಗಳುಳ್ಳ ಪಶು-ಪಕ್ಷಿಗಳ ಹೆಸರನ್ನು ಹೇಳುವೆನು; ಕೇಳು.॥22॥

(ಶ್ಲೋಕ - 23)

ಮೂಲಮ್

ಶ್ವಾ ಸೃಗಾಲೋ ವೃಕೋ ವ್ಯಾಘ್ರೋ ಮಾರ್ಜಾರಃ ಶಶಶಲ್ಲಕೌ ।
ಸಿಂಹಃ ಕಪಿರ್ಗಜಃ ಕೂರ್ಮೋ ಗೋಧಾ ಚ ಮಕರಾದಯಃ ॥

ಅನುವಾದ

ನಾಯಿ, ನರಿ, ತೋಳ, ಹುಲಿ, ಬೆಕ್ಕು, ಮೊಲ, ಮುಳ್ಳು ಹಂದಿ, ಸಿಂಹ, ಕಪಿ, ಆನೆ, ಆಮೆ, ಉಡ, ಮೊಸಳೆ ಮುಂತಾದ ಪ್ರಾಣಿಗಳು ‘ಪಂಚನಖ’ಗಳಾಗಿವೆ.॥23॥

(ಶ್ಲೋಕ - 24)

ಮೂಲಮ್

ಕಂಕಗೃಧ್ರವಟಶ್ಯೇನಭಾಸಭಲ್ಲೂಕಬರ್ಹಿಣಃ ।
ಹಂಸಸಾರಸಚಕ್ರಾಹ್ವಕಾಕೋಲೂಕಾದಯಃ ಖಗಾಃ ॥

ಅನುವಾದ

ಕಂಕ, ಗೃಧ್ರ, ಬಕ, ಗಿಡುಗ, ಭಾಸ, ನವಿಲು, ಹಂಸ, ಸಾರಸ, ಚಕ್ರವಾಕ, ಕಾಗೆ, ಗೂಬೆ ಮುಂತಾದವುಗಳು ಹಾರುವ ಪಕ್ಷಿಗಳೆಂದು ಕರೆಸಿಕೊಳ್ಳುವುವು.॥24॥

(ಶ್ಲೋಕ - 25)

ಮೂಲಮ್

ಅರ್ವಾಕ್ಸ್ರೋತಸ್ತು ನವಮಃ ಕ್ಷತ್ತರೇಕವಿಧೋ ನೃಣಾಮ್ ।
ರಜೋಧಿಕಾಃ ಕರ್ಮಪರಾ ದುಃಖೇ ಚ ಸುಖಮಾನಿನಃ ॥

ಅನುವಾದ

ವಿದುರನೇ! ಒಂಭತ್ತನೆಯ ಸೃಷ್ಟಿಯು ಮನುಷ್ಯರದ್ದು. ಇದು ಒಂದೇ ಪ್ರಕಾರದ್ದಾಗಿದೆ. ಇವರಲ್ಲಿ ಆಹಾರದ ಸ್ರೋತವು ಮೇಲಿನಿಂದ (ಬಾಯಿಯಿಂದ) ಕೆಳಕ್ಕೆ ಹರಿಯುತ್ತದೆ. ಮನುಷ್ಯರು ರಜೋಗುಣ ಪ್ರಧಾನವಾಗಿದ್ದು ಕರ್ಮಪರಾಯಣ ಮತ್ತು ದುಃಖರೂಪೀ ವಿಷಯಗಳಲ್ಲೇ ಸುಖವನ್ನು ಭಾವಿಸುವರು.॥25॥

(ಶ್ಲೋಕ - 26)

ಮೂಲಮ್

ವೈಕೃತಾಸಯ ಏವೈತೇ ದೇವಸರ್ಗಶ್ಚ ಸತ್ತಮ ।
ವೈಕಾರಿಕಸ್ತು ಯಃ ಪ್ರೋಕ್ತಃ ಕೌಮಾರಸ್ತೂಭಯಾತ್ಮಕಃ ॥

ಅನುವಾದ

ಸ್ಥಾವರ, ಪಶು-ಪಕ್ಷಿ, ಮನುಷ್ಯ ಈ ಮೂರು ಬಗೆಯ ಸೃಷ್ಟಿಗಳೂ ಮತ್ತು ಮುಂದೆ ಹೇಳಲಾಗುವ ದೇವಸೃಷ್ಟಿಯೂ ವೈಕೃತ ಸೃಷ್ಟಿಯೇ ಆಗಿದೆ. ಮಹತ್ತತ್ತ್ವಾ ದಿರೂಪವಾದ ವೈಕಾರಿಕ ದೇವ ಸರ್ಗದ ಗಣನೆಯನ್ನು ಮೊದಲು ಪ್ರಾಕೃತ ಸೃಷ್ಟಿಯಲ್ಲಿ ಮಾಡಲಾಗಿದೆ. ಇವಲ್ಲದೆ ಸನತ್ಕುಮಾರಾದಿ ಋಷಿಗಳ ಕೌಮಾರ ಸರ್ಗವು ಪ್ರಾಕೃತ-ವೈಕಾರಿಕ ಎರಡೂ ಪ್ರಕಾರಗಳಿಂದ ಇದೆ.॥26॥

(ಶ್ಲೋಕ - 27)

ಮೂಲಮ್

ದೇವಸರ್ಗಶ್ಚಾಷ್ಟವಿಧೋ ವಿಬುಧಾಃ ಪಿತರೋಸುರಾಃ ।
ಗಂಧರ್ವಾಪ್ಸರಸಃ ಸಿದ್ಧಾ ಯಕ್ಷರಕ್ಷಾಂಸಿ ಚಾರಣಾಃ ॥

(ಶ್ಲೋಕ - 28)

ಮೂಲಮ್

ಭೂತಪ್ರೇತಪಿಶಾಚಾಶ್ಚ ವಿದ್ಯಾಧ್ರಾಃ ಕಿನ್ನರಾದಯಃ ।
ದಶೈತೇ ವಿದುರಾಖ್ಯಾತಾಃ ಸರ್ಗಾಸ್ತೇ ವಿಶ್ವಸೃಕ್ಕೃತಾಃ ॥

ಅನುವಾದ

ದೇವತೆಗಳು, ಪಿತೃಗಳು, ಅಸುರರು, ಗಂಧರ್ವರು, ಅಪ್ಸರೆಯರು, ಯಕ್ಷ-ರಾಕ್ಷಸರು, ಸಿದ್ಧರು, ಚಾರಣ - ವಿದ್ಯಾಧರರು, ಭೂತ-ಪ್ರೇತ-ಪಿಶಾಚಗಳು, ಕಿನ್ನರ-ಕಿಂಪುರುಷ-ಅಶ್ವಮುಖ ಮುಂತಾದ ಭೇದಗಳಿಂದ ದೇವಸೃಷ್ಟಿಯು ಎಂಟು ಪ್ರಕಾರದ್ದಾಗಿದೆ. ವಿದುರನೇ! ಹೀಗೆ ಜಗತ್ಕರ್ತಾ ಶ್ರೀಬ್ರಹ್ಮ ದೇವರಿಂದ ರಚಿತವಾದ ಈ ಹತ್ತು ಬಗೆಯ ಸೃಷ್ಟಿಯನ್ನು ನಾನು ನಿನಗೆ ಹೇಳಿದೆನು.॥27-28॥

(ಶ್ಲೋಕ - 29)

ಮೂಲಮ್

ಅತಃ ಪರಂ ಪ್ರವಕ್ಷ್ಯಾಮಿ ವಂಶಾನ್ಮನ್ವಂತರಾಣಿ ಚ ।
ಏವಂ ರಜಃಪ್ಲುತಃ ಸ್ರಷ್ಟಾ ಕಲ್ಪಾದಿಷ್ವಾತ್ಮಭೂರ್ಹರಿಃ ।
ಸೃಜತ್ಯಮೋಘಸಂಕಲ್ಪ ಆತ್ಮೈವಾತ್ಮಾನಮಾತ್ಮನಾ ॥

ಅನುವಾದ

ಇನ್ನು ಮುಂದೆ ನಾನು ವಂಶ ಮತ್ತು ಮನ್ವಂತರಾದಿಗಳನ್ನು ವರ್ಣಿಸುವೆನು. ಹೀಗೆ ಸೃಷ್ಟಿಕರ್ತನಾದ ಸತ್ಯಸಂಕಲ್ಪನಾದ ಶ್ರೀಹರಿಯೇ ಬ್ರಹ್ಮದೇವರ ರೂಪದಲ್ಲಿ ಪ್ರತಿಕಲ್ಪದ ಪ್ರಾರಂಭದಲ್ಲಿಯೂ ರಜೋಗುಣದಿಂದ ವ್ಯಾಪಿಸಲ್ಪಟ್ಟು ತಾನೇ ಜಗದ್ರೂಪದಲ್ಲಿ ತನ್ನನ್ನೇ ಸೃಷ್ಟಿಸಿಕೊಳ್ಳುವನು.॥29॥

ಅನುವಾದ (ಸಮಾಪ್ತಿಃ)

ಹತ್ತನೆಯ ಅಧ್ಯಾಯವು ಮುಗಿಯಿತು. ॥10॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ದಶಮೋಽಧ್ಯಾಯಃ. ॥10॥