[ಐದನೆಯ ಅಧ್ಯಾಯ]
ಭಾಗಸೂಚನಾ
ವಿದುರನ ಪ್ರಶ್ನೆ ಮೈತ್ರೇಯರಿಂದ ಸೃಷ್ಟಿ ಕ್ರಮದ ವರ್ಣನೆ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ದ್ವಾರಿ ದ್ಯುನದ್ಯಾ ಋಷಭಃ ಕುರೂಣಾಂ
ಮೈತ್ರೇಯಮಾಸೀನಮಗಾಧಬೋಧಮ್ ।
ಕ್ಷತ್ತೋಪಸೃತ್ಯಾಚ್ಯುತಭಾವಶುದ್ಧಃ
ಪಪ್ರಚ್ಛ ಸೌಶೀಲ್ಯಗುಣಾಭಿತೃಪ್ತಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ ಮಹರಾಜನೇ! ಶ್ರೀಕೃಷ್ಣನ ಧ್ಯಾನದಿಂದ ನಿರ್ಮಲಚಿತ್ತನಾದ ಕುರುಶ್ರೇಷ್ಠ ವಿದುರನು ಶ್ರೀಹರಿದ್ವಾರ ಕ್ಷೇತ್ರದಲ್ಲಿ ಇರುವ ಅಗಾಧ ಜ್ಞಾನಿಗಳಾದ ಮೈತ್ರೇಯ ಮಹರ್ಷಿಗಳ ಬಳಿಗೆ ಹೋದನು. ಆ ಮಹಾತ್ಮರ ಸೌಶೀಲ್ಯಾದಿ ಗುಣಗಳಿಂದ ಸಂತೃಪ್ತನಾಗಿ ಅವರಲ್ಲಿ ಹೀಗೆ ಅರಿಕೆಮಾಡಿ ಕೊಂಡನು.॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ವಿದುರ ಉವಾಚ
ಮೂಲಮ್
ಸುಖಾಯ ಕರ್ಮಾಣಿ ಕರೋತಿ ಲೋಕೋ
ನ ತೈಃ ಸುಖಂ ವಾನ್ಯದುಪಾರಮಂ ವಾ ।
ವಿಂದೇತ ಭೂಯಸ್ತತ ಏವ ದುಃಖಂ
ಯದತ್ರ ಯುಕ್ತಂ ಭಗವಾನ್ ವದೇನ್ನಃ ॥
ಅನುವಾದ
ವಿದುರನು ಹೇಳಿದನು ಓ ಮಹಾತ್ಮರೇ! ಪ್ರಪಂಚದಲ್ಲಿ ಎಲ್ಲ ಜನರೂ ಸುಖವನ್ನು ಪಡೆಯಬೇಕೆಂಬ ಆಸೆಯಿಂದ ಕರ್ಮ ಮಾಡುತ್ತಾರೆ. ಆದರೆ ಅದರಿಂದ ಅವರಿಗೆ ಸುಖಸಿಗುವುದಿಲ್ಲ. ದುಃಖ ದೂರವಾಗುವುದಿಲ್ಲ. ಅಷ್ಟೇ ಅಲ್ಲ, ಅದರಿಂದ ಅವರಿಗೆ ದುಃಖವೇ ಹೆಚ್ಚುತ್ತದೆ. ಆದ್ದರಿಂದ ಇದರ ಬಗೆಗೆ ಜನರು ಏನು ಮಾಡಬೇಕು? ಸುಖವನ್ನೇ ಪಡೆಯುವ ದಾರಿ ಯಾವುದು? ಎಂಬುದನ್ನು ದಯವಿಟ್ಟು ತಿಳಿಸಿರಿ.॥2॥
(ಶ್ಲೋಕ - 3)
ಮೂಲಮ್
ಜನಸ್ಯ ಕೃಷ್ಣಾದ್ವಿಮುಖಸ್ಯ ದೈವಾ-
ದಧರ್ಮಶೀಲಸ್ಯ ಸುದುಃಖಿತಸ್ಯ ।
ಅನುಗ್ರಹಾಯೇಹ ಚರಂತಿ ನೂನಂ
ಭೂತಾನಿ ಭವ್ಯಾನಿ ಜನಾರ್ದನಸ್ಯ ॥
ಅನುವಾದ
ದುರದೃಷ್ಟವಶದಿಂದ ಭಗವಾನ್ ಶ್ರೀಕೃಷ್ಣನಿಂದ ವಿಮುಖರಾಗಿ, ಅಧರ್ಮದಲ್ಲಿ ಆಸಕ್ತ ರಾಗಿ, ಅತಿ ದುಃಖಪಡುತ್ತಿರುವವರ ಮೇಲೆ ಕೃಪೆಯನ್ನು ತೋರ ಲೆಂದೇ ನಿಮ್ಮಂತಹ ಭಾಗ್ಯಶಾಲಿ ಭಗವದ್ಭಕ್ತರು ಪ್ರಪಂಚದಲ್ಲಿ ಸಂಚಾರಮಾಡುತ್ತಿರುವುದು.॥3॥
(ಶ್ಲೋಕ - 4)
ಮೂಲಮ್
ತತ್ಸಾಧುವರ್ಯಾದಿಶ ವರ್ತ್ಮ ಶಂ ನಃ
ಸಂರಾತೋ ಭಗವಾನ್ಯೇನ ಪುಂಸಾಮ್ ।
ಹೃದಿ ಸ್ಥಿತೋ ಯಚ್ಛತಿ ಭಕ್ತಿಪೂತೇ
ಜ್ಞಾನಂ ಸತತ್ತ್ವಾಗಮಂ ಪುರಾಣಮ್ ॥
ಅನುವಾದ
ಸಾಧುಶ್ರೇಷ್ಠರೇ! ಭಗವಂತನನ್ನು ಹೇಗೆ ಆರಾಸಿದರೆ ಅವನು ಭಕ್ತರ ಭಕ್ತಿಶುದ್ಧವಾದ ಹೃದಯದಲ್ಲಿ ಬಂದು ನೆಲೆಸಿ, ತನ್ನ ಸ್ವರೂಪದ ಅಪರೋಕ್ಷಾನುಭವವನ್ನು ಮಾಡುವ ಸನಾತನ ಜ್ಞಾನವನ್ನು ಅನುಗ್ರಹಿಸುತ್ತಾನೋ ಅಂತಹ ಶಾಂತಿ ಪ್ರದವಾದ ಸನಾತನವಾದ ಜ್ಞಾನವನ್ನು ತಾವು ನನಗೆ ಉಪದೇಶಿಸಿರಿ.॥4॥
(ಶ್ಲೋಕ - 5)
ಮೂಲಮ್
ಕರೋತಿ ಕರ್ಮಾಣಿ ಕೃತಾವತಾರೋ
ಯಾನ್ಯಾತ್ಮತಂತ್ರೋ ಭಗವಾಂಸ್ಯೀಶಃ ।
ಯಥಾ ಸಸರ್ಜಾಗ್ರ ಇದಂ ನಿರೀಹಃ
ಸಂಸ್ಥಾಪ್ಯ ವೃತ್ತಿಂ ಜಗತೋ ವಿಧತ್ತೇ ॥
(ಶ್ಲೋಕ - 6)
ಮೂಲಮ್
ಯಥಾ ಪುನಃ ಸ್ವೇ ಖ ಇದಂ ನಿವೇಶ್ಯ
ಶೇತೇ ಗುಹಾಯಾಂ ಸ ನಿವೃತ್ತವೃತ್ತಿಃ ।
ಯೋಗೇಶ್ವರಾೀಶ್ವರ ಏಕ ಏತ-
ದನುಪ್ರವಿಷ್ಟೋ ಬಹುಧಾ ಯಥಾಸೀತ್ ॥
ಅನುವಾದ
ತ್ರಿಲೋಕಗಳಿಗೆ ಒಡೆಯನಾಗಿ ಪರಮಸ್ವತಂತ್ರನಾಗಿ ರುವ ಶ್ರೀಹರಿಯು ಅವತಾರಮಾಡಿ ಯಾವ-ಯಾವ ಲೀಲೆಗಳನ್ನು ಮಾಡುವನು? ಪೂರ್ಣಕಾಮನಾಗಿ ಕರ್ತೃತ್ವಲೇಪವಿಲ್ಲದ ಆ ಸ್ವಾಮಿಯು ಕಲ್ಪದ ಪ್ರಾರಂಭದಲ್ಲಿ ಈ ಜಗತ್ತನ್ನು ಹೇಗೆ ನಿರ್ಮಿಸಿದನು? ತಾನು ಸೃಷ್ಟಿಸಿದ ಜೀವಿಗಳನ್ನು ನೆಲೆಗೊಳಿಸಿ ಅವುಗಳಿಗೆ ಜೀವನೋಪಾಯವನ್ನು ಹೇಗೆ ಕಲ್ಪಿಸಿದನು? ಮತ್ತೆ ಅವನು ತನ್ನ ಈ ಕಾರ್ಯವನ್ನು ತೊರೆದು ಜಗತ್ತೆಲ್ಲವನ್ನು ತನ್ನ ಹೃದಯಾಕಾಶದಲ್ಲಿ ವಿಲೀನಗೊಳಿಸಿಕೊಂಡು ಯೋಗಮಾಯೆಯನ್ನು ಆಶ್ರಯಿಸಿ ಹೇಗೆ ಶಯನಿಸುತ್ತಾನೆ. ಆ ಯೋಗೇಶ್ವರ ಪ್ರಭುವು ಒಬ್ಬನೇ ಆಗಿದ್ದರೂ ಈ ಬ್ರಹ್ಮಾಂಡದಲ್ಲಿ ಅಂತರ್ಯಾಮಿಯಾಗಿ ಒಳ ಹೊಕ್ಕು ಅನೇಕ ರೂಪಗಳಲ್ಲಿ, ಹೇಗೆ ಪ್ರಕಟಗೊಳ್ಳುತ್ತಾನೆ? ಈ ಎಲ್ಲ ರಹಸ್ಯವನ್ನು ನನಗೆ ತಿಳಿಸಿರಿ.॥5-6॥
(ಶ್ಲೋಕ - 7)
ಮೂಲಮ್
ಕ್ರೀಡನ್ವಿಧತ್ತೇ ದ್ವಿಜಗೋಸುರಾಣಾಂ
ಕ್ಷೇಮಾಯಾ ಕರ್ಮಾಣ್ಯವತಾರಭೇದೈಃ ।
ಮನೋ ನ ತೃಪ್ಯತ್ಯಪಿ ಶ್ವಣ್ವ ತಾಂ ನಃ
ಸುಶ್ಲೋಕವೌಲೇಶ್ಚರಿತಾಮೃತಾನಿ ॥
ಅನುವಾದ
ಬ್ರಾಹ್ಮಣರು, ಗೋವು ಗಳು, ದೇವತೆಗಳು ಇವರೆಲ್ಲರಿಗೆ ಕ್ಷೇಮವನ್ನುಂಟು ಮಾಡುವುದಕ್ಕಾಗಿ ಅನೇಕ ಅವತಾರಗಳನ್ನು ಧರಿಸಿಕೊಂಡು ಲೀಲೆಯಿಂದಲೇ ಮಾಡುವ ನಾನಾ ಪ್ರಕಾರದ ದಿವ್ಯ ಕರ್ಮಗಳನ್ನು ನಮಗೆ ತಿಳಿಸೋಣವಾಗಲಿ. ಪುಣ್ಯಕೀರ್ತಿಶಾಲಿಗಳ ಚೂಡಾಮಣಿಯಾಗಿರುವ ಶ್ರೀಹರಿಯ ಲೀಲಾಕಥಾಮೃತವನ್ನು ಎಷ್ಟು ಪಾನಮಾಡಿದರೂ ನಮ್ಮ ಮನಸ್ಸಿಗೆ ತೃಪ್ತಿ ಯಾಗುವುದಿಲ್ಲ.॥7॥
(ಶ್ಲೋಕ - 8)
ಮೂಲಮ್
ಯೈಸ್ತತ್ತ್ವಭೇದೈರಲೋಕನಾಥೋ
ಲೋಕಾನಲೋಕಾನ್ಸಹಲೋಕಪಾಲಾನ್ ।
ಅಚೀಕ್ಲ್ೃಪದ್ಯತ್ರ ಹಿ ಸರ್ವಸತ್ತ್ವ-
ನಿಕಾಯಭೇದೋಕೃತಃ ಪ್ರತೀತಃ ॥
ಅನುವಾದ
ಸಮಸ್ತ ಲೋಕಾಪತಿಗಳ ಒಡೆಯ ನಾದ ಶ್ರೀಹರಿಯು ಈ ಲೋಕಗಳನ್ನು, ಲೋಕಪಾಲರನ್ನು ಮತ್ತು ಲೋಕಗಳ ಹೊರಗಿನ ಭಾಗಗಳನ್ನೂ, ಅದರಲ್ಲಿ ಈ ಎಲ್ಲ ರೀತಿಯ ಪ್ರಾಣಿಗಳ ಅಕಾರಾನುಸಾರ ಬೇರೆ-ಬೇರೆಯಾಗಿ ಕಂಡುಬರುವ ಭೇದಗಳು ಯಾವ ತತ್ತ್ವದಿಂದ ರಚಿಸಿರುವನು? ಇದನ್ನೂ ನನಗೆ ಹೇಳಿರಿ.॥8॥
(ಶ್ಲೋಕ - 9)
ಮೂಲಮ್
ಯೇನ ಪ್ರಜಾನಾಮುತ ಆತ್ಮಕರ್ಮ-
ರೂಪಾಭಿಧಾನಾಂ ಚ ಭಿದಾಂ ವ್ಯಧತ್ತ ।
ನಾರಾಯಣೋ ವಿಶ್ವಸೃಡಾತ್ಮಯೋನಿ-
ರೇತಚ್ಚ ನೋ ವರ್ಣಯ ವಿಪ್ರವರ್ಯ ॥
(ಶ್ಲೋಕ - 10)
ಮೂಲಮ್
ಪರಾವರೇಷಾಂ ಭಗವನ್ ವ್ರತಾನಿ
ಶ್ರುತಾನಿ ಮೇ ವ್ಯಾಸಮುಖಾದಭೀಕ್ಷ್ಣಮ್ ।
ಅತೃಪ್ನುಮ ಕ್ಷುಲ್ಲಸುಖಾವಹಾನಾಂ
ತೇಷಾಮೃತೇ ಕೃಷ್ಣ ಕಥಾಮೃತೌಘಾತ್ ॥
ಅನುವಾದ
ಮುನಿ ಶ್ರೇಷ್ಠರೇ! ಸ್ವಯಂಭುವೂ, ಸರ್ವ ಕಾರಣನೂ ಆದ ಶ್ರೀಮನ್ನಾರಾಯಣನು ತನ್ನ ಪ್ರಜೆಗಳ ಸ್ವಭಾವ, ಕರ್ಮ, ರೂಪ ಮತ್ತು ನಾಮಭೇದಗಳನ್ನು ಹೇಗೆ ರಚನೆ ಮಾಡುವನು? ಪೂಜ್ಯರೇ! ವ್ಯಾಸಮಹರ್ಷಿಗಳಿಂದ ನಾನು ಎಲ್ಲ ವರ್ಣಾಶ್ರಮಧರ್ಮಗಳನ್ನು ಹಲವು ಬಾರಿ ಕೇಳಿರುವೆನು. ಆದರೆ ಈಗ ಶ್ರೀಕೃಷ್ಣಕಥಾಮೃತ ಪ್ರವಾಹವನ್ನು ಬಿಟ್ಟು ಕ್ಷಣಿಕ ಸುಖವನ್ನು ಉಂಟುಮಾಡುವ ಬೇರಾವ ಧರ್ಮಗಳನ್ನು ಕೇಳಿದರೂ ಮನಸ್ಸಿಗೆ ತೃಪ್ತಿಯಾಗುವುದಿಲ್ಲ.॥9-10॥
(ಶ್ಲೋಕ - 11)
ಮೂಲಮ್
ಕಸ್ತೃಪ್ನುಯಾತ್ತೀರ್ಥಪದೋಭಿಧಾನಾತ್
ಸತ್ರೇಷು ವಃ ಸೂರಿಭಿರೀಡ್ಯಮಾನಾತ್ ।
ಯಃ ಕರ್ಣನಾಡೀಂ ಪುರುಷಸ್ಯ ಯಾತೋ
ಭವಪ್ರದಾಂ ಗೇಹರತಿಂ ಛಿನತ್ತಿ ॥
ಅನುವಾದ
ಆದರೆ ಆ ಭಗವತ್ಕಥಾಮೃ ತವು ಮನುಷ್ಯರ ಕಿವಿಗಳ ರಂಧ್ರಗಳ ಮೂಲಕ ಪ್ರವೇಶಿಸುತ್ತಲೇ ಸಂಸಾರದ ಬಂಧನಕ್ಕೆ ಕಾರಣವಾದ ವಿಷಯಾಸಕ್ತಿಯನ್ನು ತೊಡೆದು ಹಾಕುವುದು. ನಾರದಾದಿ ಮಹಾತ್ಮರೂ ಕೂಡ ನಿಮ್ಮಂತಹ ಸಾಧುಗಳ ಸಮಾಜದಲ್ಲಿ ಕೀರ್ತಿಸುತ್ತಿರುತ್ತಾರೆ. ತೀರ್ಥ ಪಾದನಾದ ಶ್ರೀಹರಿಯ ಅಂತಹ ಕಥಾಮೃತವನ್ನಾದರೋ, ಎಷ್ಟು ಕೇಳಿದರೂ ಸಾಕೆನಿಸುವುದಿಲ್ಲ.॥11॥
(ಶ್ಲೋಕ - 12)
ಮೂಲಮ್
ಮುನಿರ್ವಿವಕ್ಷುರ್ಭಗವದ್ಗುಣಾನಾಂ
ಸಖಾಪಿ ತೇ ಭಾರತಮಾಹ ಕೃಷ್ಣಃ ।
ಯಸ್ಮಿನ್ನೃಣಾಂ ಗ್ರಾಮ್ಯ ಸುಖಾನುವಾದೈ-
ರ್ಮತಿರ್ಗೃಹೀತಾ ನು ಹರೇಃ ಕಥಾಯಾಮ್ ॥
ಅನುವಾದ
ಪೂಜ್ಯರೇ! ನಿಮ್ಮ ಗೆಳೆಯರಾದ ಮುನಿಶ್ರೇಷ್ಠ ಕೃಷ್ಣದ್ವೈಪಾಯನರು ಶ್ರೀಭಗವಂತನ ಗುಣಗಳನ್ನು ವರ್ಣಿಸುವುದಕ್ಕಾಗಿಯೇ ಮಹಾಭಾರತವನ್ನು ರಚಿಸಿರುವರು. ಅದರಲ್ಲಿ ಅವರು ವಿಷಯಸುಖಗಳ ಉಲ್ಲೇಖ ಮಾಡುತ್ತಾ, ಅವುಗಳ ಮೂಲಕ ಮನುಷ್ಯರ ಬುದ್ಧಿಯು ಶ್ರೀಕೃಷ್ಣನಲ್ಲಿ ತೊಡಗಿಸಲು ಪ್ರಯತ್ನಿಸಿರುವರು.॥12॥
(ಶ್ಲೋಕ - 13)
ಮೂಲಮ್
ಸಾ ಶ್ರದ್ದಧಾನಸ್ಯ ವಿವರ್ಧಮಾನಾ
ವಿರಕ್ತಿಮನ್ಯತ್ರ ಕರೋತಿ ಪುಂಸಃ ।
ಹರೇಃ ಪದಾನುಸ್ಮೃತಿನಿರ್ವೃತಸ್ಯ
ಸಮಸ್ತದುಃಖಾತ್ಯಯಮಾಶು ಧತ್ತೇ ॥
ಅನುವಾದ
ಈ ಭಗವತ್ಕಥೆಯ ರುಚಿಯು ಶ್ರದ್ಧೆಯುಳ್ಳ ಮನುಷ್ಯನ ಹೃದಯದಲ್ಲಿ ಬೆಳೆಯತೊಡಗಿದಾಗ ಬೇರೆ ವಿಷಯಗಳಿಂದ ಅವನನ್ನು ವಿರಕ್ತನನ್ನಾಗಿ ಸುತ್ತದೆ. ಅವನು ಭಗವಚ್ಚರಣಗಳ ನಿರಂತರ ಚಿಂತನೆಯಿಂದ ಆನಂದಮಗ್ನನಾಗಿ, ಅವನ ಎಲ್ಲ ದುಃಖಗಳು ಆಗಲೇ ಕೊನೆಗೊಳ್ಳುತ್ತವೆ.॥13॥
(ಶ್ಲೋಕ - 14)
ಮೂಲಮ್
ತಾಂಛೋಚ್ಯಶೋಚ್ಯಾ ನವಿದೋನುಶೋಚೇ
ಹರೇಃ ಕಥಾಯಾಂ ವಿಮಾಖಾನಘೇನ ।
ಕ್ಷಿಣೋತಿ ದೇವೋನಿಮಿಷಸ್ತು ಯೇಷಾ-
ಮಾಯುರ್ವೃಥಾವಾದಗತಿಸ್ಮೃತೀನಾಮ್ ॥
ಅನುವಾದ
ಆದರೆ ಅಜ್ಞಾನಿಗಳು ತಮ್ಮ ಪೂರ್ವ ಪಾಪಗಳಿಂದ ಶ್ರೀಹರಿಯ ಕಥೆಗೆ ವಿಮುಖರಾದ ಆ ಬಡಪಾಯಿ ಜೀವಿಗಳ ಕುರಿತು ಕರುಣೇಯೇ ಉಂಟಾಗುತ್ತದೆ. ಅಯ್ಯೋ! ಭಗವತ್ಸ್ವರೂಪೀ ಕಾಲಪುರುಷನು ಅವರ ಅಮೂಲ್ಯ ಜೀವನವನ್ನು ಕತ್ತರಿಸುತ್ತಿದ್ದರೂ ಅವರು ತಮ್ಮ ಮಾತು, ಮನಸ್ಸು, ದೇಹಗಳನ್ನು ವ್ಯರ್ಥವಾದ ವಾದವಿವಾದದಲ್ಲಿ, ವ್ಯರ್ಥಚೇಷ್ಟೆಗಳಲ್ಲಿ, ವ್ಯರ್ಥ ಚಿಂತನೆಯಲ್ಲಿ ತೊಡಗಿಸಿರುತ್ತಾರೆ.॥14॥
(ಶ್ಲೋಕ - 15)
ಮೂಲಮ್
ತದಸ್ಯ ಕೌಷಾರವ ಶರ್ಮದಾತು-
ರ್ಹರೇಃ ಕಥಾಮೇವ ಕಥಾಸು ಸಾರಮ್ ।
ಉದ್ಧೃತ್ಯ ಪುಷ್ಪೇಭ್ಯ ಇವಾರ್ತಬಂಧೋ
ಶಿವಾಯ ನಃ ಕೀರ್ತಯ ತೀರ್ಥಕೀರ್ತೇಃ ॥
ಅನುವಾದ
ಮುನಿವರೇಣ್ಯರೇ! ತಾವು ದೀನಬಂಧುಗಳೂ, ದಯಾಳುಗಳೂ ಆಗಿರುವಿರಿ. ದುಂಬಿಯು ನಾನಾಪುಷ್ಪಗಳಿಂದ ರಸವನ್ನು ಶೋಸಿ ತೆಗೆಯು ವಂತೆ ತಾವು ಈ ಲೌಕಿಕ ಕಥೆಗಳಿಂದ ಅವುಗಳ ಸಾರಭೂತವಾಗಿ ರುವ ಪರಮ ಪವಿತ್ರವೂ, ಮಂಗಳಕರವೂ ಆದ ಕಥೆಗಳನ್ನು ನಮ್ಮ ಶ್ರೇಯಸ್ಸಿಗಾಗಿ ಸಂಗ್ರಹಿಸಿ ಹೇಳಿರಿ.॥15॥
(ಶ್ಲೋಕ - 16)
ಮೂಲಮ್
ಸ ವಿಶ್ವಜನ್ಮಸ್ಥಿತಿಸಂಯಮಾರ್ಥೇ
ಕೃತಾವತಾರಃ ಪ್ರಗೃಹೀತಶಕ್ತಿಃ ।
ಚಕಾರ ಕರ್ಮಾಣ್ಯತಿಪೂರುಷಾಣಿ
ಯಾನೀಶ್ವರಃ ಕೀರ್ತಯ ತಾನಿ ಮಹ್ಯಮ್ ॥
ಅನುವಾದ
ಸರ್ವೇಶ್ವರನಾದ ಭಗವಂತನು ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗಾಗಿ ತನ್ನ ಮಾಯಾಶಕ್ತಿ ಯನ್ನು ಸ್ವೀಕರಿಸಿ ರಾಮ-ಕೃಷ್ಣಾದಿ ಅನೇಕ ಅವತಾರಗಳ ಮೂಲಕ ಮಾಡಿದ ಅಲೌಕಿಕ ಲೀಲೆಗಳೆಲ್ಲವನ್ನು ನನಗೆ ಹೇಳಿರಿ.॥16॥
(ಶ್ಲೋಕ - 17)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸ ಏವಂ ಭಗವಾನ್ಪ್ರಷ್ಟಃ ಕ್ಷತಾ ಕೌಷಾರವಿರ್ಮುನಿಃ ।
ಪುಂಸಾಂ ನಿಃಶ್ರೇಯಸಾರ್ಥೇನ ತಮಾಹ ಬಹು ಮಾನಯನ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ ಮಹಾತ್ಮನಾದ ವಿದುರನು ಸಮಸ್ತ ಜೀವಿಗಳ ಶ್ರೇಯಸ್ಸಿಗಾಗಿ ಮೈತ್ರೇಯರಲ್ಲಿ ಹೀಗೆ ಪ್ರಶ್ನಿಸಿದಾಗ, ಅವನ ಸದಾಶಯವನ್ನೂ, ಸೌಜನ್ಯವನ್ನೂ, ಭಕ್ತಿ- ಜ್ಞಾನ-ವೈರಾಗ್ಯ ಮಹಿಮೆಯನ್ನೂ ಅಭಿನಂದಿಸುತ್ತಾ ಮಹರ್ಷಿ ಮೈತ್ರೇಯರು ಹೀಗೆ ಉತ್ತರಿಸಿದರು.॥17॥
(ಶ್ಲೋಕ - 18)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಸಾಧು ಪೃಷ್ಟಂ ತ್ವಯಾ ಸಾಧೋ ಲೋಕಾನ್ಸಾಧ್ವನುಗೃಹ್ಣತಾ ।
ಕೀರ್ತಿಂ ವಿತನ್ವತಾ ಲೋಕೇ ಆತ್ಮನೋಧೋಕ್ಷಜಾತ್ಮನಃ ॥
ಅನುವಾದ
ಶ್ರೀಮೈತ್ರೇಯರು ಹೇಳತೊಡಗಿದರು ಓ ಸಾಧು ಶ್ರೇಷ್ಠನೇ! ಲೋಕಾನುಗ್ರಹಕ್ಕಾಗಿ ನೀನು ತುಂಬಾ ಒಳ್ಳೆಯ ಪ್ರಶ್ನೆಯನ್ನೇ ಕೇಳಿರುವೆ. ನಿನ್ನ ಮನಸ್ಸು ಸದಾ ಶ್ರೀಭಗವಂತನಲ್ಲೇ ತೊಡಗಿದೆ. ಆದರೂ ನೀನು ಹೀಗೆ ಪ್ರಶ್ನಿಸಿದ್ದರಿಂದ ನಿನ್ನ ಕೀರ್ತಿಯು ಜಗತ್ತಿನಲ್ಲಿ ಹರಡುವುದು.॥18॥
(ಶ್ಲೋಕ - 19)
ಮೂಲಮ್
ನೈತಚ್ಚಿತ್ರಂ ತ್ವಯಿ ಕ್ಷತ್ತರ್ಬಾದರಾಯಣವೀರ್ಯಜೇ ।
ಗೃಹೀತೋನನ್ಯಭಾವೇನ ಯತ್ತ್ವ ಯಾ ಹರಿರೀಶ್ವರಃ ॥
ಅನುವಾದ
ಅನನ್ಯ ಭಾವದಿಂದ ಸರ್ವೇ ಶ್ವರನಾದ ಶ್ರೀಹರಿಯನ್ನು ಹಿಡಿದಿಟ್ಟುಕೊಂಡಿರುವ ಭಕ್ತಶ್ರೇಷ್ಠನು ನೀನು. ಬಾದರಾಯಣರ ಔರಸಪುತ್ರರಾಗಿರುವ ನಿನ್ನಲ್ಲಿ ಇಂತಹ ಮಹಿಮೆ ಇರುವುದು ಆಶ್ಚಯವೇನೂ ಅಲ್ಲ.॥19॥
(ಶ್ಲೋಕ - 20)
ಮೂಲಮ್
ಮಾಂಡವ್ಯಶಾಪಾದ್ಭಗವಾನ್ಪ್ರಜಾಸಂಯಮನೋ ಯಮಃ ।
ಭ್ರಾತುಃ ಕ್ಷೇತ್ರೇ ಭುಜಿಷ್ಯಾಯಾಂ ಜಾತಃ ಸತ್ಯವತೀಸುತಾತ್ ॥
ಅನುವಾದ
ನೀನು ದುಷ್ಟ ಜೀವಿಗಳಿಗೆ ದಂಡನೆಯನ್ನು ಕೊಡುವ ಪೂಜ್ಯನಾದ ಯಮ ಧರ್ಮನೇ ಆಗಿರುವೆ. ಮಾಂಡವ್ಯ ಋಷಿಗಳ ಶಾಪದಿಂದ ಶ್ರೀವೇದ ವ್ಯಾಸರಿಂದ ಅವರ ತಮ್ಮನಾದ ವಿಚಿತ್ರವೀರ್ಯನ ದಾಸಿಯ ಗರ್ಭದಲ್ಲಿ ಜನ್ಮ ತಳೆದಿರುವೆ.॥20॥
(ಶ್ಲೋಕ - 21)
ಮೂಲಮ್
ಭವಾನ್ಭಗವತೋ ನಿತ್ಯಂ ಸಮ್ಮತಃ ಸಾನುಗಸ್ಯ ಚ ।
ಯಸ್ಯ ಜ್ಞಾನೋಪದೇಶಾಯ ಮಾದಿಶದ್ಭಗವಾನ್ ವ್ರಜನ್ ॥
ಅನುವಾದ
ನೀನು ಸದಾ ಭಗವಂತನಿಗೂ ಆತನ ಭಕ್ತರಿಗೂ ಅತ್ಯಂತ ಪ್ರಿಯನಾದವನು. ಅದಕ್ಕಾಗಿ ಭಗವಂತನು ಪರಂಧಾಮಕ್ಕೆ ತೆರಳುವಾಗ ನಿನಗೆ ಜ್ಞಾನೋಪದೇಶ ಮಾಡಬೇಕೆಂದು ನನಗೆ ಅಪ್ಪಣೆ ಮಾಡಿದನು.॥21॥
(ಶ್ಲೋಕ - 22)
ಮೂಲಮ್
ಅಥ ತೇ ಭಗವಲ್ಲೀಲಾ ಯೋಗಮಾಯೋಪಬೃಂಹಿತಾಃ ।
ವಿಶ್ವಸ್ಥಿತ್ಯುದ್ಭವಾಂತಾರ್ಥಾ ವರ್ಣಯಾಮ್ಯನುಪೂರ್ವಶಃ ॥
ಅನುವಾದ
ಅದರಂತೆ ಈಗ ನಾನು ನಿನಗೆ ಭಗವಂತನು ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳ ಕಾರ್ಯಕ್ಕಾಗಿ ತನ್ನ ಯೋಗಮಾಯೆಯ ಮೂಲಕ ವಿಸ್ತಾರಗೊಂಡ ಅವನ ವಿವಿಧವಾದ ಲೀಲೆಗಳನ್ನು ಕ್ರಮವಾಗಿ ವರ್ಣಿಸುತ್ತೇನೆ.॥22॥
(ಶ್ಲೋಕ - 23)
ಮೂಲಮ್
ಭಗವಾನೇಕ ಆಸೇದಮಗ್ರ ಆತ್ಮಾತ್ಮನಾಂ ವಿಭುಃ ।
ಆತ್ಮೇಚ್ಛಾನುಗತಾವಾತ್ಮಾ ನಾನಾಮತ್ಯುಪಲಕ್ಷಣಃ ॥
ಅನುವಾದ
ಈ ಜಗತ್ತಿನ ಸೃಷ್ಟಿಗೆ ಮೊದಲು ಎಲ್ಲ ಆತ್ಮಗಳಿಗೂ ಆತ್ಮ ನಾಗಿರುವ ಪೂರ್ಣಪರಮಾತ್ಮನೊಬ್ಬನೇ ಇದ್ದನು. ದೃಷ್ಟಾನೂ ಇರಲಿಲ್ಲ, ದೃಶ್ಯವೂ ಇರಲಿಲ್ಲ. ಸೃಷ್ಟಿಕಾಲದಲ್ಲಿ ಕಂಡುಬರುವ ವೃತ್ತಿಗಳ ಅನೇಕ ಭೇದಗಳೂ, ಅನೇಕತೆಗಳೂ ಅಲ್ಲಿರಲಿಲ್ಲ. ಆತನು ತನ್ನ ಇಚ್ಛೆಯಿಂದ ತಾನೊಬ್ಬನೇ ತಾನೇ-ತಾನಾಗಿದ್ದನು.॥23॥
(ಶ್ಲೋಕ - 24)
ಮೂಲಮ್
ಸ ವಾ ಏಷ ತದಾ ದ್ರಷ್ಟಾ ನಾಪಶ್ಯದ್ದೃಶ್ಯಮೇಕರಾಟ್ ।
ಮೇನೇಸಂತಮಿವಾತ್ಮಾನಂ ಸುಪ್ತಶಕ್ತಿರಸುಪ್ತದೃಕ್ ॥
ಅನುವಾದ
ಅವನೇ ದೃಷ್ಟಾ ಆಗಿ ನೋಡತೊಡಗಿದರೆ ಅವನಿಗೆ ದೃಶ್ಯವಾವುದೂ ಕಂಡುಬರಲಿಲ್ಲ. ಏಕೆಂದರೆ ಆಗ ಅವನೇ ಅದ್ವಿತೀಯ ರೂಪ ದಲ್ಲಿದ್ದನು. ಇಂತಹ ಸ್ಥಿತಿಯಲ್ಲಿ ಅಪೂರ್ಣನಂತೆ ಎಂದು ಅವನಿಗ ನಿಸಿತು. ಆದರೆ ವಾಸ್ತವವಾಗಿ ಅವನು ಅಸತ್ತಾಗಿರಲಿಲ್ಲ. ಏಕೆಂದರೆ ಅವನ ಶಕ್ತಿಗಳು ಸುಪ್ತವಾಗಿದ್ದವು. ಆತನ ಜ್ಞಾನವೇನೂ ಲುಪ್ತವಾಗಿ ಇರಲಿಲ್ಲ.॥24॥
(ಶ್ಲೋಕ - 25)
ಮೂಲಮ್
ಸಾ ವಾ ಏತಸ್ಯ ಸಂದ್ರಷ್ಟುಃ ಶಕ್ತಿಃ ಸದಸದಾತ್ಮಿಕಾ ।
ಮಾಯಾ ನಾಮ ಮಹಾಭಾಗ ಯಯೇದಂ ನಿರ್ಮಮೇ ವಿಭುಃ ॥
ಅನುವಾದ
ಈ ದ್ರಷ್ಟಾ ಮತ್ತು ದೃಶ್ಯದ ಅನುಸಂಧಾನ ಮಾಡುವಂತಹ ಶಕ್ತಿಯೇ ಕಾರ್ಯಕಾರಣರೂಪೀ ಮಾಯೆಯು. ಓ ಮಹಾತ್ಮಾ ! ಈ ಭಾವಾಭಾವರೂಪೀ ಅನಿರ್ವಚನೀಯ ಮಾಯೆಯ ಮೂಲಕವೇ ಭಗವಂತನು ಈ ವಿಶ್ವವನ್ನು ಸೃಷ್ಟಿಸಿದನು.॥25॥
(ಶ್ಲೋಕ - 26)
ಮೂಲಮ್
ಕಾಲವೃತ್ತ್ಯಾ ತು ಮಾಯಾಯಾಂ ಗುಣಮಯ್ಯಾಮಧೋಕ್ಷಜಃ ।
ಪುರುಷೇಣಾತ್ಮಭೂತೇನ ವೀರ್ಯಮಾಧತ್ತ ವೀರ್ಯವಾನ್ ॥
ಅನುವಾದ
ಕಾಲಶಕ್ತಿಯಿಂದ ಈ ತ್ರಿಗುಣಮಯ ಮಾಯೆಯಲ್ಲಿ ಕ್ಷೋಭೆಯುಂಟಾದಾಗ ಆ ಇಂದ್ರಿಯಾತೀತನಾದ ಚಿನ್ಮಯ ಪರಮಾತ್ಮನು ತನ್ನ ಅಂಶ ಪುರುಷರೂಪದಿಂದ ಅದರಲ್ಲಿ ಚಿದಾಭಾಸರೂಪೀ ಬೀಜವನ್ನು ಸ್ಥಾಪಿಸಿದನು.॥26॥
(ಶ್ಲೋಕ - 27)
ಮೂಲಮ್
ತತೋಭವನ್ಮಹತ್ತತ್ತ್ವಮವ್ಯಕ್ತಾತ್ಕಾಲಚೋದಿತಾತ್ ।
ವಿಜ್ಞಾನಾತ್ಮಾತ್ಮದೇಹಸ್ಥಂ ವಿಶ್ವಂ ವ್ಯಂಜಂಸ್ತಮೋನುದಃ ॥
ಅನುವಾದ
ಆಗ ಕಾಲದ ಪ್ರೇರಣೆಯಿಂದ ಆ ಅವ್ಯಕ್ತಮಾಯೆಯಿಂದ ಮಹತ್ತತ್ತ್ವ ಪ್ರಕಟವಾಯಿತು. ಅದು ತನ್ನಲ್ಲಿ ಸೂಕ್ಷ್ಮವಾಗಿ ಅಡಗಿದ್ದ ಪ್ರಪಂಚ ವನ್ನು ಪ್ರಕಾಶಗೊಳಿಸುವ ತತ್ತ್ವವು. ಅಜ್ಞಾನವನ್ನು ನಾಶಪಡಿಸುವು ದರಿಂದ ಅದು ‘ವಿಜ್ಞಾನಾತ್ಮಾ’ ಎಂದೂ ಕರೆಯಲ್ಪಡುತ್ತದೆ.॥27॥
(ಶ್ಲೋಕ - 28)
ಮೂಲಮ್
ಸೋಪ್ಯಂಶಗುಣಕಾಲಾತ್ಮಾ ಭಗವದ್ದೃಷ್ಟಿಗೋಚರಃ ।
ಆತ್ಮಾನಂ ವ್ಯಕರೋದಾತ್ಮಾ ವಿಶ್ವಸ್ಯಾಸ್ಯ ಸಿಸೃಕ್ಷಯಾ ॥
ಅನುವಾದ
ಅನಂತರ ಭಗವಂತನ ಅಂಶ, ಗುಣ ಮತ್ತು ಕಾಲದ ಈನ ಆ ಮಹತ್ತತ್ತ್ವ ಭಗವಂತನ ದೃಷ್ಟಿಗೆ ಬಿದ್ದು, ಈ ವಿಶ್ವವನ್ನು ರಚಿಸುವುದಕ್ಕಾಗಿ ರೂಪಾಂತರಗೊಳಿಸಿಕೊಂಡಿತು.॥28॥
(ಶ್ಲೋಕ - 29)
ಮೂಲಮ್
ಮಹತ್ತತ್ತ್ವಾದ್ವಿಕುರ್ವಾಣಾದಹಂತತ್ತ್ವಂ ವ್ಯಜಾಯತ ।
ಕಾರ್ಯಕಾರಣಕರ್ತ್ರಾತ್ಮಾ ಭೂತೇಂದ್ರಿಯಮನೋಮಯಃ ॥
ಅನುವಾದ
ಮಹತ್ತತ್ತ್ವವು ವಿಕಾರಗೊಂಡಾಗ ಅಹಂಕಾರ ತತ್ತ್ವವು ಉತ್ಪನ್ನ ಗೊಂಡಿತು. ಅದು ಕಾರ್ಯ (ಅಭೂತ), ಕಾರಣ (ಅಧ್ಯಾತ್ಮ), ಕರ್ತೃ (ಅದೈವ) ಎಂಬ ಮೂರು ರೂಪಗಳಿಂದ ಕ್ರಮವಾಗಿ ಭೂತ, ಇಂದ್ರಿಯ ಮತ್ತು ಮನಸ್ಸಿನ ಕಾರಣವಾಗಿದೆ.॥29॥
(ಶ್ಲೋಕ - 30)
ಮೂಲಮ್
ವೈಕಾರಿಕಸ್ತೈಜಸಶ್ಚ ತಾಮಸಶ್ಚೇತ್ಯಹಂ ತ್ರಿಧಾ ।
ಅಹಂತತ್ತ್ವಾದ್ವಿಕುರ್ವಾಣಾನ್ಮನೋ ವೈಕಾರಿಕಾದಭೂತ್ ।
ವೈಕಾರಿಕಾಶ್ಚ ಯೇ ದೇವಾ ಅರ್ಥಾಭಿವ್ಯಂಜನಂ ಯತಃ ॥
ಅನುವಾದ
ಆ ಅಹಂಕಾರವು ವೈಕಾರಿಕ (ಸಾತ್ತ್ವಿಕ) ತೈಜಸ (ರಾಜಸ) ಮತ್ತು ತಾಮಸ ಎಂಬ ಭೇದದಿಂದ ಮೂರು ಪ್ರಕಾರದ್ದಾಗಿದೆ. ಅವು ಗಳಲ್ಲಿ ಸಾತ್ತ್ವಿಕ ಅಹಂಕಾರದಿಂದ ಮನಸ್ಸು ಮತ್ತು ಯಾವುದರಿಂದ ವಿಷಯಗಳ ಜ್ಞಾನ ಉಂಟಾಗುತ್ತದೋ ಆ ಇಂದ್ರಿಯಗಳ ಅಷ್ಠಾನ ದೇವತೆಗಳು ಉಂಟಾದವು.॥30॥
(ಶ್ಲೋಕ - 31)
ಮೂಲಮ್
ತೈಜಸಾನೀಂದ್ರಿಯಾಣ್ಯೇವ ಜ್ಞಾನಕರ್ಮಮಯಾನಿ ಚ ।
ತಾಮಸೋ ಭೂತಸೂಕ್ಷ್ಮಾದಿರ್ಯತಃ ಖಂ ಲಿಂಗಮಾತ್ಮನಃ ॥
ಅನುವಾದ
ತೈಜಸ ಅಹಂಕಾರ ದಿಂದ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳಾದುವು. ತಾಮಸಾಹಂಕಾರದಿಂದ ಸೂಕ್ಷ್ಮ ಭೂತಗಳ ಕಾರಣ ಶಬ್ದ ತನ್ಮಾತ್ರೆಯು ಉಂಟಾಯಿತು. ಅದರಿಂದ (ಪರಮಾತ್ಮನಿಗೆ ದೃಷ್ಟಾಂತ ವಾಗಿ ಹೇಳಲ್ಪಟ್ಟಿರುವ) ಆಕಾಶದ ತತ್ತ್ವವು ಹುಟ್ಟಿತು.॥31॥
(ಶ್ಲೋಕ - 32)
ಮೂಲಮ್
ಕಾಲಮಾಯಾಂಶಯೋಗೇನ ಭಗವದ್ವೀಕ್ಷಿತಂ ನಭಃ ।
ನಭಸೋನುಸೃತಂ ಸ್ಪರ್ಶಂ ವಿಕುರ್ವನ್ನಿರ್ಮಮೇನಿಲಮ್ ॥
ಅನುವಾದ
ಭಗವಂತನ ದೃಷ್ಟಿಯು ಆಕಾಶದ ಮೇಲೆ ಬೀಳಲು ಅದರಿಂದ ಮತ್ತೆ ಕಾಲ, ಮಾಯೆ, ಚಿದಂಶಗಳ ಯೋಗದಿಂದ ಸ್ಪರ್ಶತನ್ಮಾತ್ರೆಯು ಉಂಟಾಯಿತು. ಅದು ವಿಕಾರಗೊಂಡಾಗ ವಾಯುವು ಉತ್ಪನ್ನ ವಾಯಿತು.॥32॥
(ಶ್ಲೋಕ - 33)
ಮೂಲಮ್
ಅನಿಲೋಪಿ ವಿಕುರ್ವಾಣೋ ನಭಸೋರುಬಲಾನ್ವಿತಃ ।
ಸಸರ್ಜ ರೂಪತನ್ಮಾತ್ರಂ ಜ್ಯೋತಿರ್ಲೋಕಸ್ಯ ಲೋಚನಮ್ ॥
ಅನುವಾದ
ಮಹಾಬಲಶಾಲಿಯಾದ ವಾಯುವು ಆಕಾಶ ದೊಡನೆ ವಿಕಾರಗೊಂಡಾಗ ರೂಪತನ್ಮಾತ್ರೆಯು ಉಂಟಾಯಿತು. ಅದರಿಂದ ಜಗತ್ತಿಗೆ ಪ್ರಕಾಶವನ್ನು ನೀಡುವ ತೇಜಸ್ಸು ಉತ್ಪನ್ನವಾಯಿತು.॥33॥
(ಶ್ಲೋಕ - 34)
ಮೂಲಮ್
ಅನಿಲೇನಾನ್ವಿತಂ ಜ್ಯೋತಿರ್ವಿಕುರ್ವತ್ಪರವೀಕ್ಷಿತಮ್ ।
ಆಧತ್ತಾಂಭೋ ರಸಮಯಂ ಕಾಲಮಾಯಾಂಶಯೋಗತಃ ॥
ಅನುವಾದ
ಮತ್ತೆ ಪರಮಾತ್ಮನ ದೃಷ್ಟಿಗೆ ಪಾತ್ರವಾಗಿ ವಾಯುಸಹಿತ ತೇಜಸ್ಸು, ಕಾಲ, ಮಾಯೆ, ಮತ್ತು ಚಿದಂಶಗಳ ಯೋಗದಿಂದ ವಿಕಾರಗೊಂಡು ರಸತನ್ಮಾತ್ರೆಯ ಕಾರ್ಯವಾದ ಜಲತತ್ತ್ವವನ್ನು ನಿರ್ಮಾಣಮಾಡಿತು.॥34॥
(ಶ್ಲೋಕ - 35)
ಮೂಲಮ್
ಜ್ಯೋತಿಷಾಂಭೋನುಸಂಸೃಷ್ಟಂ ವಿಕುರ್ವದ್ಬ್ರಹ್ಮವೀಕ್ಷಿತಮ್ ।
ಮಹೀಂ ಗಂಧಗುಣಾಮಾಧಾತ್ಕಾಲಮಾಯಾಂಶಯೋಗತಃ ॥
ಅನುವಾದ
ಅನಂತರ ಜಲವು ತೇಜಸ್ಸಿನೊಡನೆ ಸೇರಿ ಬ್ರಹ್ಮನ ದೃಷ್ಟಿಪಾತದಿಂದ ಕಾಲ, ಮಾಯೆ ಮತ್ತು ಚಿದಂಶಗಳ ಯೋಗದಿಂದ ಗಂಧಗುಣವುಳ್ಳ ಪೃಥ್ವಿಯನ್ನು ಉಂಟುಮಾಡಿತು.॥35॥
(ಶ್ಲೋಕ - 36)
ಮೂಲಮ್
ಭೂತಾನಾಂ ನಭಆದೀನಾಂ ಯದ್ಯದ್ಭವ್ಯಾವರಾವರಮ್ ।
ತೇಷಾಂ ಪರಾನುಸಂಸರ್ಗಾದ್ಯಥಾಸಂಖ್ಯಂ ಗುಣಾನ್ವಿದುಃ ॥
ಅನುವಾದ
ವಿದುರನೇ ! ಆಕಾಶವೇ ಮುಂತಾದ ಪಂಚಭೂತಗಳಲ್ಲಿ ಉತ್ತರೋತ್ತರ ಭೂತಗಳಲ್ಲಿ ಕ್ರಮವಾಗಿ ಅವುಗಳ ಹಿಂದು-ಹಿಂದಿನ ಭೂತಗಳ ಗುಣಗಳೂ ಅನುವರ್ತಿಸು ತ್ತವೆಯೆಂದು ತಿಳಿಯಬೇಕು.॥36॥
(ಶ್ಲೋಕ - 37)
ಮೂಲಮ್
ಏತೇ ದೇವಾಃ ಕಲಾ ವಿಷ್ಣೋಃ ಕಾಲಮಾಯಾಂಶಲಿಂಗಿನಃ ।
ನಾನಾತ್ವಾತ್ಸ್ವಕ್ರಿಯಾನೀಶಾಃ ಪ್ರೋಚುಃ ಪ್ರಾಂಜಲಯೋ ವಿಭುಮ್ ॥
ಅನುವಾದ
ಆ ಮಹತ್ತತ್ತ್ವಾದಿಗಳಿಗೆ ಅಭಿಮಾನಿಗಳಾಗಿ ವಿಕಾರ, ವಿಕ್ಷೇಪ, ಮತ್ತು ಚೇತನಾಂಶ ವಿಶಿಷ್ಟ ರಾದ ದೇವಗಣಗಳೆಲ್ಲ ಶ್ರೀಭಗವಂತನ ಅಂಶಗಳೇ ಆಗಿದ್ದಾರೆ. ಆದರೆ ಬೇರೆ-ಬೇರೆಯಾಗಿ ಇರುವ ಕಾರಣ ವಿಶ್ವರಚನೆಯೆಂಬ ತಮ್ಮ ಕಾರ್ಯಗಳನ್ನು ಮಾಡಲು ವಿಲರಾದಾಗ ಅವರು ಕೈ ಮುಗಿದು ಭಗವಂತನನ್ನು ಹೀಗೆ ಪ್ರಾರ್ಥಿಸಿದರು.॥37॥
(ಶ್ಲೋಕ - 38)
ಮೂಲಮ್ (ವಾಚನಮ್)
ದೇವಾ ಊಚುಃ
ಮೂಲಮ್
ನಮಾಮ ತೇ ದೇವ ಪದಾರವಿಂದಂ
ಪ್ರಪನ್ನ ತಾಪೋಪಶಮಾತಪತ್ರಮ್ ।
ಯನ್ಮೂಲಕೇತಾ ಯತಯೋಂಜಸೋರು
ಸಂಸಾರದುಃಖಂ ಬಹಿರುತ್ಕ್ಷಿಪಂತಿ ॥
ಅನುವಾದ
ದೇವತೆಗಳು ಹೇಳುತ್ತಾರೆ ಓ ದೇವದೇವಾ! ನಿನ್ನ ಪಾದಾ ರವಿಂದಗಳಿಗೆ ವಂದಿಸುತ್ತಿದ್ದೇವೆ. ಅವು ಶರಣುಬಂದ ಜೀವಿಗಳ ತಾಪವನ್ನು ಹೋಗಲಾಡಿಸುವುದಕ್ಕೆ ಕೊಡೆಗಳಂತಿವೆ. ಅವುಗಳ ಆಸರೆ ಪಡೆದರೆ ಯತಿಗಳು ಅನಂತ ಸಂಸಾರದುಃಖವನ್ನು ಸುಲಭ ವಾಗಿ ದೂರಕ್ಕೆ ಎಸೆದುಬಿಡುತ್ತಾರೆ.॥38॥
(ಶ್ಲೋಕ - 39)
ಮೂಲಮ್
ಧಾತರ್ಯದಸ್ಮಿನ್ಭವ ಈಶ ಜೀವಾ-
ಸ್ತಾಪತ್ರಯೇಣೋಪಹತಾ ನ ಶರ್ಮ ।
ಆತ್ಮನ್ಲ್ಲಭಂತೇ ಭಗವಂಸ್ತವಾಂಘ್ರಿ-
ಚ್ಛಾಯಾಂ ಸವಿದ್ಯಾಮತ ಆಶ್ರಯೇಮ ॥
ಅನುವಾದ
ಓ ಸೃಷ್ಟಿಕರ್ತಾ ಜಗದೀಶ್ವರನೇ! ಈ ಸಂಸಾರದಲ್ಲಿ ತಾಪತ್ರಯದಿಂದ ದುಃಖಿತ ರಾಗಿರುವ ಕಾರಣ ಜೀವಿಗಳಿಗೆ ಸ್ವಲ್ಪವೂ ಶಾಂತಿ ಸಿಗುತ್ತಿಲ್ಲ. ಆದ್ದರಿಂದ ನಾವು ನಿನ್ನ ಚರಣಗಳ ಜ್ಞಾನಮಯ ಛಾಯೆಯ ಆಶ್ರಯವನ್ನು ಪಡೆಯುತ್ತೇವೆ.॥39॥
(ಶ್ಲೋಕ - 40)
ಮೂಲಮ್
ಮಾರ್ಗಂತಿ ಯತ್ತೇ ಮುಖಪದ್ಮನೀಡೈಃ
ಛಂದಃ ಸುಪರ್ಣೈರ್ಋಷಯೋ ವಿವಿಕ್ತೇ ।
ಯಸ್ಯಾಘಮರ್ಷೋದಸರಿದ್ವರಾಯಾಃ
ಪದಂ ಪದಂ ತೀರ್ಥಪದಃ ಪ್ರಪನ್ನಾಃ ॥
ಅನುವಾದ
ಮುನಿಗಳು ಏಕಾಂತದಲ್ಲಿ ಕುಳಿತು ನಿನ್ನ ಮುಖಕಮಲದ ಆಶ್ರಯದಲ್ಲಿರುವ ವೇದಮಂತ್ರ ಗಳೆಂಬ ಪಕ್ಷಿಗಳ ಸಹಾಯದಿಂದ ಯಾವುದನ್ನು ಅರಸುತ್ತಿರು ವರೋ ಮತ್ತು ಯಾವುದು ಸಮಸ್ತ ಪಾಪಗಳನ್ನೂ ನಾಶಗೊಳಿಸುವ ದೇವನದಿಯಾದ ಗಂಗೆಯ ಉತ್ಪತ್ತಿಸ್ಥಾನವಾಗಿದೆಯೋ ಅಂತಹ ನಿನ್ನ ಪರಮಪಾವನವಾದ ಪಾದಪದ್ಮಗಳನ್ನು ನಾವು ಆಶ್ರಯಿಸುತ್ತೇವೆ.॥40॥
(ಶ್ಲೋಕ - 41)
ಮೂಲಮ್
ಯಚ್ಛ್ರದ್ಧಯಾ ಶ್ರುತವತ್ಯಾ ಚ ಭಕ್ತ್ಯಾ
ಸಂಮೃಜ್ಯಮಾನೇ ಹೃದಯೇವಧಾಯ ।
ಜ್ಞಾನೇನ ವೈರಾಗ್ಯಬಲೇನ ೀರಾ
ವ್ರಜೇಮ ತತ್ತೇಂಘ್ರಿಸರೋಜಪೀಠಮ್ ॥
ಅನುವಾದ
ಧೀರರಾದ ಯೋಗೀಶ್ವರರು ಯಾವುದನ್ನು ಶ್ರದ್ಧೆ ಮತ್ತು ಶ್ರವಣ-ಕೀರ್ತನರೂಪವಾದ ಭಕ್ತಿಯಿಂದ ಶುದ್ಧವಾದ ತಮ್ಮ ಅಂತಃಕರಣದಲ್ಲಿ ಧರಿಸಿಕೊಂಡು ಜ್ಞಾನವೈರಾಗ್ಯಗಳ ಬಲದಿಂದ ಮುಕ್ತಿಯನ್ನು ಪಡೆಯುತ್ತಾರೋ ಅಂತಹ ನಿನ್ನ ಪಾದಗಳ ಪೀಠವನ್ನು ನಾವು ಆಶ್ರಯಿಸುತ್ತೇವೆ.॥41॥
(ಶ್ಲೋಕ - 42)
ಮೂಲಮ್
ವಿಶ್ವಸ್ಯ ಜನ್ಮಸ್ಥಿತಿಸಂಯಮಾರ್ಥೇ
ಕೃತಾವತಾರಸ್ಯ ಪದಾಂಬುಜಂ ತೇ ।
ವ್ರಜೇಮ ಸರ್ವೇ ಶರಣಂ ಯದೀಶ
ಸ್ಮೃತಂ ಪ್ರಯಚ್ಛತ್ಯಭಯಂ ಸ್ವಪುಂಸಾಮ್ ॥
ಅನುವಾದ
ಪ್ರಭೋ ! ನೀನು ಪ್ರಪಂಚದ ಸೃಷ್ಟಿ, ಸ್ಥಿತಿ, ಲಯಗಳಿಗಾಗಿಯೇ ಅವತರಿಸುತ್ತೀಯೆ. ಆದುದ ರಿಂದ ನಾವೆಲ್ಲರೂ ಸ್ಮರಿಸುವ ಭಕ್ತರಿಗೆ ಅಭಯವನ್ನೀಯುವ ನಿನ್ನ ಆ ಅಡಿದಾವರೆಗಳನ್ನು ಶರಣುಹೊಂದುತ್ತೇವೆ.॥42॥
(ಶ್ಲೋಕ - 43)
ಮೂಲಮ್
ಯತ್ಸಾನುಬಂಧೇಸತಿ ದೇಹಗೇಹೇ
ಮಮಾಹಮಿತ್ಯೂಢದುರಾಗ್ರಹಾಣಾಮ್ ।
ಪುಂಸಾಂ ಸುದೂರಂ ವಸತೋಪಿ ಪುರ್ಯಾಂ
ಭಜೇಮ ತತ್ತೇ ಭಗವನ್ಪದಾಬ್ಜಮ್ ॥
ಅನುವಾದ
ನೀನು ಸಮಸ್ತ ಮನುಷ್ಯರ ಹೃದಯಗಳಲ್ಲಿ ಅಂತರ್ಯಾಮಿಯಾಗಿ ವಾಸ ಮಾಡುತ್ತಿದ್ದರೂ ಯಾರು ಮನೆ-ಮಡದಿ-ಮಕ್ಕಳು-ದೇಹ ಮುಂತಾದವುಗಳಲ್ಲಿ ಹಾಗೂ ಅವುಗಳೊಂದಿಗೆ ಸಂಬಂಧ ವಿರಿಸುವ ಬೇರೆ ತುಚ್ಛ ಪದಾರ್ಥಗಳಲ್ಲಿ ‘ನಾನು, ನನ್ನದು’ ಎಂಬ ದುರಾಗ್ರಹವಿರಿಸಿಕೊಂಡವರಿಗೆ ಅತ್ಯಂತದೂರವಾದ ನಿನ್ನ ಚರಣಾರ ವಿಂದಗಳನ್ನು ನಾವು ಭಜಿಸುತ್ತೇವೆ.॥43॥
(ಶ್ಲೋಕ - 44)
ಮೂಲಮ್
ತಾನ್ ವೈಹ್ಯಸದ್ವ ತ್ತಿಭಿರಕ್ಷಿಭಿರ್ಯೇ
ಪರಾಹೃತಾಂತರ್ಮನಸಃ ಪರೇಶ ।
ಅಥೋ ನ ಪಶ್ಯಂತ್ಯುರುಗಾಯ ನೂನಂ
ಯೇ ತೇ ಪದನ್ಯಾಸವಿಲಾಸಲಕ್ಷ್ಮ್ಯಾಃ ॥
ಅನುವಾದ
ಪರಮ ಯಶಸ್ವೀ ಪರಮೇಶ್ವರನೇ! ಇಂದ್ರಿಯಗಳ ವಿಷಯಗಳಿಗೆ ಅಭಿಮುಖವಾಗಿ ರುವುದರಿಂದ ಯಾರ ಮನಸ್ಸು ಸದಾ ಹೊರಗಡೆಯೇ ಅಲೆ ಯುತ್ತಿರುವುದೋ, ಅಂತಹ ಪಾಮರ ಜನರು ನಿನ್ನ ಶ್ರೀಪಾದ ವಿನ್ಯಾಸದ ಕಾಂತಿಯನ್ನು ವಿಶೇಷವಾಗಿ ಅರಿತಿರುವ ಭಕ್ತಜನರ ದರ್ಶನವನ್ನು ಪಡೆಯುವುದಿಲ್ಲ. ಅದರಿಂದ ಅವರು ನಿನ್ನ ಚರಣಾರವಿಂದಗಳಿಂದ ದೂರವಾಗಿದ್ದಾರೆ.॥44॥
(ಶ್ಲೋಕ - 45)
ಮೂಲಮ್
ಪಾನೇನ ತೇ ದೇವ ಕಥಾಸುಧಾಯಾಃ
ಪ್ರವೃದ್ಧಭಕ್ತ್ಯಾ ವಿಶದಾಶಯಾ ಯೇ ।
ವೈರಾಗ್ಯಸಾರಂ ಪ್ರತಿಲಭ್ಯ ಬೋಧಂ
ಯಥಾಂಜಸಾನ್ವೀಯುರಕುಂಠಷ್ಣ್ಯಮ್ ॥
ಅನುವಾದ
ಪ್ರಭೋ! ನಿನ್ನ ಕಥಾಮೃತಪಾನದಿಂದ ಉಕ್ಕಿಬರುವ ಭಕ್ತಿಯಿಂದ ಯಾರ ಅಂತಃಕರಣವು ನಿರ್ಮಲವಾಗಿ ಬಿಟ್ಟಿದೆಯೋ, ಅಂತಹವರು ವೈರಾಗ್ಯಸಾರವಾದ ಆತ್ಮಜ್ಞಾನವನ್ನು ಪಡೆದು ಆಯಾಸ ವಿಲ್ಲದೆಯೇ ವೈಕುಂಠಧಾಮವನ್ನು ಹೊಂದಿಬಿಡುವರು.॥45॥
(ಶ್ಲೋಕ - 46)
ಮೂಲಮ್
ತಥಾಪರೇ ಚಾತ್ಮಸಮಾಯೋಗ-
ಬಲೇನ ಜಿತ್ವಾ ಪ್ರಕೃತಿಂ ಬಲಿಷ್ಠಾಮ್ ।
ತ್ವಾಮೇವ ೀರಾಃ ಪುರುಷಂ ವಿಶಂತಿ
ತೇಷಾಂ ಶ್ರಮಃ ಸ್ಯಾನ್ನ ತು ಸೇವಯಾ ತೇ ॥
ಅನುವಾದ
ಅಂತೆಯೇ ಕೆಲವು ೀರರು ಚಿತ್ತವೃತ್ತಿ ನಿರೋಧರೂಪವಾದ ಸಮಾಯ ಬಲದಿಂದ ನಿನ್ನ ಪ್ರಬಲ ಮಾಯೆಯನ್ನು ದಾಟಿ ನಿನ್ನಲ್ಲಿ ಲೀನರಾಗುತ್ತಾರೆ. ಆದರೆ ಅವರಿಗೆ ತುಂಬಾ ಶ್ರಮವಿರುತ್ತದೆ. ನಿನ್ನ ಭಕ್ತಿಮಾರ್ಗದಲ್ಲಾದರೋ ಯಾವ ಕಷ್ಟವೂ ಇಲ್ಲ.॥46॥
(ಶ್ಲೋಕ - 47)
ಮೂಲಮ್
ತತ್ತೇ ವಯಂ ಲೋಕಸಿಸೃಕ್ಷಯಾದ್ಯ
ತ್ವಯಾನುಸೃಷ್ಟಾಸಿಭಿರಾತ್ಮಭಿಃ ಸ್ಮ ।
ಸರ್ವೇ ವಿಯುಕ್ತಾಃ ಸ್ವವಿಹಾರತಂತ್ರಂ
ನ ಶಕ್ನುಮಸ್ತತ್ಪ್ರತಿಹರ್ತವೇ ತೇ ॥
ಅನುವಾದ
ಓ ಆದಿದೇವನೇ! ಪ್ರಪಂಚದ ಸೃಷ್ಟಿಗಾಗಿ ನೀನು ನಮ್ಮನ್ನು ತ್ರಿಗುಣಮಯರನ್ನಾಗಿ ಸೃಷ್ಟಿಸಿರುವೆ. ಆದರೆ ನಮ್ಮೆಲ್ಲರ ಸ್ವಭಾವವು ಬೇರೆ-ಬೇರೆಯಾದ್ದರಿಂದ ಪರಸ್ಪರ ಸಾಮ್ಯವಿಲ್ಲ. ಆದ್ದರಿಂದ ನಾವು ಒಟ್ಟಿಗೆ ಸೇರಿ ನಿನ್ನ ಕ್ರೀಡೆಗಾಗಿ ಲೋಕಸೃಷ್ಟಿಯನ್ನು ಮಾಡಿ ನಿನಗೆ ಸಮರ್ಪಿಸಲು ಅಸಮರ್ಥರಾಗಿದ್ದೇವೆ.॥47॥
(ಶ್ಲೋಕ - 48)
ಮೂಲಮ್
ಯಾವದ್ಬಲಿಂ ತೇಜ ಹರಾಮ ಕಾಲೇ
ಯಥಾ ವಯಂ ಚಾನ್ನಮದಾಮ ಯತ್ರ ।
ಯಥೋಭಯೇಷಾಂ ತ ಇಮೇ ಹಿ ಲೋಕಾ
ಬಲಿಂ ಹರಂತೋನ್ನ ಮದಂತ್ಯನೂಹಾಃ ॥
ಅನುವಾದ
ಆದ್ದರಿಂದ ಜನ್ಮ ರಹಿತನಾದ ಭಗವಂತನೇ! ಯಾವುದರಿಂದ ನಾವು ಬ್ರಹ್ಮಾಂಡ ವನ್ನು ರಚಿಸಿ ನಿನಗೆ ಸಮಸ್ತ ಪೂಜೆಗಳನ್ನು ಸಮರ್ಪಿಸಲು ಸಮರ್ಥ ರಾಗುವೆವು? ಅನ್ನವನ್ನೂ ಪಡೆದು ಜೀವಿಸುವೆವು? ಮತ್ತು ಈ ಸಮಸ್ತ ಜೀವಿಗಳೂ ಕೂಡ ಎಲ್ಲ ವಿಘ್ನಗಳಿಂದಲೂ ದೂರವಾಗಿದ್ದು ನಮಗೂ ಹಾಗೂ ನಿನಗೂ ಸೇವೆಗಳನ್ನೂ ಸಮರ್ಪಿಸುತ್ತಾ ತಮ್ಮ-ತಮ್ಮ ಆಹಾರಗಳನ್ನು ಸೇವಿಸಲು ಸಮರ್ಥವಾದಾವು? ಅಂತಹ ಯಾವುದಾದರೂ ಉಪಾಯವನ್ನು ಮಾಡು.॥48॥
(ಶ್ಲೋಕ - 49)
ಮೂಲಮ್
ತ್ವಂ ನಃ ಸುರಾಣಾಮಸಿ ಸಾನ್ವಯಾನಾಂ
ಕೂಟಸ್ಥ ಆದ್ಯಃ ಪುರುಷಃ ಪುರಾಣಃ ।
ತ್ವಂ ದೇವ ಶಕ್ತ್ಯಾಂ ಗುಣಕರ್ಮಯೋನೌ
ರೇತಸ್ತ್ವಜಾಯಾಂ ಕವಿಮಾದಧೇಜಃ ॥
ಅನುವಾದ
ಓ ಭಗವಂತಾ! ವಿಕಾರರಹಿತನಾದ ಪುರಾಣಪುರುಷನಾದ ನೀನೇ ಇತರ ಕಾರ್ಯವರ್ಗಗಳಿಂದೊಡಗೂಡಿದ ದೇವತೆಗಳಾದ ನಮಗೆ ಲ್ಲರಿಗೂ ಆದಿಕಾರಣನಾಗಿರುವೆ. ಜನ್ಮರಹಿತನಾದ ನೀನು ಹೀಗೆ ಸತ್ತ್ವಾದಿಗುಣ ಮತ್ತು ಜನ್ಮಾದಿಕರ್ಮಗಳ ಕಾರಣರೂಪೀ ಮಾಯಾ ಶಕ್ತಿಯಲ್ಲಿ ಚಿದಂಶರೂಪವಾದ ವೀರ್ಯವನ್ನು ಸ್ಥಾಪಿಸಿದ್ದೆ.॥49॥
(ಶ್ಲೋಕ - 50)
ಮೂಲಮ್
ತತೋ ವಯಂ ಸತ್ಪ್ರಮುಖಾ ಯದರ್ಥೇ
ಬಭೂವಿಮಾತ್ಮನ್ಕರವಾಮ ಕಿಂ ತೇ ।
ತ್ವಂ ನಃ ಸ್ವಚಕ್ಷುಃ ಪರಿದೇಹಿ ಶಕ್ತ್ಯಾ
ದೇವ ಕ್ರಿಯಾರ್ಥೇ ಯದನುಗ್ರಹಾಣಾಮ್ ॥
ಅನುವಾದ
ಓ ಪರಮಾತ್ಮಾ! ಮಹತ್ತತ್ತ್ವಾದಿರೂಪೀ ದೇವಗಣ ಗಳಿಂದ ನಾವು ಯಾವ ಕಾರ್ಯಕ್ಕಾಗಿ ಸೃಷ್ಟಿಸಲ್ಪಟ್ಟಿರುವೆವೋ, ಇದರ ಸಂಬಂಧ ವಾಗಿ ನಾವು ಏನು ಮಾಡಬೇಕು? ದೇವಾ! ನಮ್ಮ ಮೇಲೆ ನೀನೇ ಅನುಗ್ರಹ ಬೀರುವಂತಹವನು. ಅದಕ್ಕಾಗಿ ಬ್ರಹ್ಮಾಂಡ ರಚನೆಗಾಗಿ ನೀನು ನಮಗೆ ನಿನ್ನ ಅದ್ಭುತವಾದ ಕ್ರಿಯಾ ಶಕ್ತಿಗಳೊಡನೆ ನಿನ್ನ ದಿವ್ಯವಾದ ಜ್ಞಾನಶಕ್ತಿಯನ್ನು ಕರುಣಿಸು.॥50॥
ಅನುವಾದ (ಸಮಾಪ್ತಿಃ)
ಐದನೆಯ ಅಧ್ಯಾಯವು ಮುಗಿಯಿತು.॥5॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಪಂಚಮೋಽಧ್ಯಾಯಃ॥5॥