[ಎರಡನೆಯ ಅಧ್ಯಾಯ]
ಭಾಗಸೂಚನಾ
ಉದ್ಧವನು ವಿದುರನಿಗೆ ಭಗವಂತನ ಬಾಲಲೀಲೆಗಳನ್ನು ವರ್ಣಿಸಿದುದು
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ಭಾಗವತಃ ಪೃಷ್ಟಃ ಕ್ಷತಾ ವಾರ್ತಾಂ ಪ್ರಿಯಾಶ್ರಯಾಮ್ ।
ಪ್ರತಿವಕ್ತುಂ ನ ಚೋತ್ಸೇಹ ಔತ್ಕಂಠ್ಯಾತ್ಸ್ಮಾರಿತೇಶ್ವರಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು ಮಹಾರಾಜನೇ! ಹೀಗೆ ವಿದುರನು ಪ್ರಿಯತಮನಾದ ಶ್ರೀಕೃಷ್ಣನಿಗೆ ಸಂಬಂಸಿದ ಮಾತು ಗಳನ್ನು ಕೇಳಿದಾಗ ಭಾಗವತಶ್ರೇಷ್ಠನಾದ ಉದ್ಧವನಿಗೆ ಭಗವಂತನ ಸ್ಮರಣೆಯಿಂದ ಹೃದಯವು ತುಂಬಿಬಂತು. ಭಗವಂತನ ವಿರಹ ವ್ಯಥೆ ಯಿಂದ ಕೊಂಚಕಾಲ ಯಾವ ಉತ್ತರವನ್ನೂ ಕೊಡದಾದನು.॥1॥
(ಶ್ಲೋಕ - 2)
ಮೂಲಮ್
ಯಃ ಪಂಚಹಾಯನೋ ಮಾತ್ರಾ ಪ್ರಾತರಾಶಾಯ ಯಾಚಿತಃ ।
ತನ್ನೈಚ್ಛದ್ರಚಯನ್ ಯಸ್ಯ ಸಪರ್ಯಾಂ ಬಾಲಲೀಲಯಾ ॥
ಅನುವಾದ
ಅವನು ಐದು ವರ್ಷದ ಬಾಲಕನಾಗಿದ್ದಾಗ ಆಟ-ಪಾಠಗಳಲ್ಲಿ ಇರುವಾಗಲೂ ಶ್ರೀಕೃಷ್ಣನಲ್ಲೇ ತನ್ಮಯನಾಗುತ್ತಿದ್ದನು. ಆಟವಾಡುತ್ತಾ ಅವನು ಶ್ರೀಕೃಷ್ಣನ ಪೂಜೆಯಲ್ಲಿ ನಿರತನಾಗಿದ್ದಾಗ ತಾಯಿಯು ಊಟಕ್ಕಾಗಿ ಕರೆದಾಗಲೂ ಅದನ್ನು ಬಿಟ್ಟು ಹೋಗಲು ಬಯಸು ತ್ತಿರಲಿಲ್ಲ.॥2॥
(ಶ್ಲೋಕ - 3)
ಮೂಲಮ್
ಸ ಕಥಂ ಸೇವಯಾ ತಸ್ಯ ಕಾಲೇನ ಜರಸಂ ಗತಃ ।
ಪೃಷ್ಟೋ ವಾರ್ತಾಂ ಪ್ರತಿಬ್ರೂಯಾದ್ಭರ್ತುಃ ಪಾದಾವನುಸ್ಮರನ್ ॥
ಅನುವಾದ
ಈಗಲಾದರೋ ಶ್ರೀಕೃಷ್ಣನ ಸೇವೆಯಲ್ಲೇ ದೀರ್ಘ ಕಾಲ ತೊಡಗಿ ಮುದುಕನಾಗಿದ್ದನು. ಆದ್ದರಿಂದ ವಿದುರನು ಕೇಳಿದ್ದ ರಿಂದ ಅವನಿಗೆ ತನ್ನ ಪ್ರಿಯಪ್ರಭುವಿನ ಚರಣಕಮಲಗಳ ಸ್ಮರಣೆ ಉಂಟಾಗಿ ಹೃದಯವು ಭಾರವಾಗುವುದು ಸಹಜವೇ ? ಆ ಸ್ಥಿತಿ ಯಲ್ಲಿ ಆತನಿಗೆ ಪ್ರತ್ಯುತ್ತರ ಕೊಡಲು ಹೇಗೆ ಸಾಧ್ಯವಾದೀತು?॥3॥
(ಶ್ಲೋಕ - 4)
ಮೂಲಮ್
ಸ ಮುಹೂರ್ತಮಭೂತ್ತೂಷ್ಣೀಂ ಕೃಷ್ಣಾಂಘ್ರಿಸುಧಯಾ ಭೃಶಮ್ ।
ತೀವ್ರೇಣ ಭಕ್ತಿಯೋಗೇನ ನಿಮಗ್ನಃ ಸಾಧು ನಿರ್ವೃತಃ ॥
ಅನುವಾದ
ಅವನು ಶ್ರೀಕೃಷ್ಣಪಾದಾರವಿಂದಗಳ ಧ್ಯಾನಾಮೃತಪಾನದಿಂದ ಆನಂದಭರಿತನಾಗಿ ಎರಡು ಘಳಿಗೆ ಕಾಲ ಏನೂ ಮಾತ ನಾಡಲಾರದೆ ಸುಮ್ಮನಿದ್ದುಬಿಟ್ಟನು. ಆತನು ತೀವ್ರವಾದ ಭಕ್ತಿ ಯೋಗದಲ್ಲಿ ಮುಳುಗಿ ಹೋಗಿದ್ದನು.॥4॥
(ಶ್ಲೋಕ - 5)
ಮೂಲಮ್
ಪುಲಕೋದ್ಭಿನ್ನ ಸರ್ವಾಂಗೋ ಮುಂಚನ್ಮೀಲದ್ದೃಶಾ ಶುಚಃ ।
ಪೂರ್ಣಾರ್ಥೋ ಲಕ್ಷಿತಸ್ತೇನ ಸ್ನೇಹಪ್ರಸರಸಂಪ್ಲುತಃ ॥
ಅನುವಾದ
ಅವನ ಶರೀರವೆಲ್ಲ ರೋಮಾಂಚವಾಯಿತು. ಮುಚ್ಚಿದ ಕಣ್ಣುಗಳಿಂದ ಆನಂದಾಶ್ರುಗಳು ಹರಿಯತೊಡಗಿದವು. ಹೀಗೆ ಭಕ್ತಿಪ್ರವಾಹದಲ್ಲಿ ಮಗ್ನನಾಗಿದ್ದ ಉದ್ಧವನನ್ನು ನೋಡಿ ಆತನು ಕೃತಕೃತ್ಯನಾದ ಸುಕೃತಿಯೆಂದು ವಿದುರನು ತಿಳಿದನು.॥5॥
(ಶ್ಲೋಕ - 6)
ಮೂಲಮ್
ಶನಕೈರ್ಭಗವಲ್ಲೋಕಾನ್ನೃಲೋಕಂ ಪುನರಾಗತಃ ।
ವಿಮೃಜ್ಯ ನೇತ್ರೇ ವಿದುರಂ ಪ್ರತ್ಯಾಹೋದ್ಧವ ಉತ್ಸ್ಮಯನ್ ॥
ಅನುವಾದ
ಕೊಂಚ ಕಾಲಾನಂತರ ಉದ್ಧವನು ಭಗವಂತನ ಪ್ರೇಮಧಾಮದಿಂದ ಕೆಳಗಿಳಿದು ಮನುಷ್ಯಲೋಕಕ್ಕೆ ಹಿಂದಿರುಗಿ ಕಣ್ಣುಗಳನ್ನು ಒರೆಸಿಕೊಂಡು ಭಗವಲ್ಲೀಲೆಗಳ ಸ್ಮರಣೆ ಉಂಟಾಗಿ ಮುಗುಳ್ನಗುತ್ತಾ ವಿದುರನಲ್ಲಿ ಹೀಗೆ ಹೇಳತೊಡಗಿದನು.॥6॥
(ಶ್ಲೋಕ - 7)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ಕೃಷ್ಣದ್ಯುಮಣಿನಿಮ್ಲೋಚೇ ಗೀರ್ಣೇಷ್ವಜಗರೇಣ ಹ ।
ಕಿಂ ನು ನಃ ಕುಶಲಂ ಬ್ರೂಯಾಂ ಗತಶ್ರೀಷು ಗೃಹೇಷ್ವಹಮ್ ॥
ಅನುವಾದ
ಉದ್ಧವನು ಹೇಳಿದನು ಎಲೈ ವಿದುರನೇ! ಶ್ರೀಕೃಷ್ಣನೆಂಬ ಸೂರ್ಯನು ಅಸ್ತಮಾನವಾದ್ದರಿಂದ ನಮ್ಮ ಮನೆಗಳನ್ನೂ ಕಾಲ ರೂಪೀ ಹೆಬ್ಬಾವು ನುಂಗಿಬಿಟ್ಟಿದೆ. ಅವು ಶ್ರೀಹೀನವಾಗಿವೆ. ಈಗ ನಾನು ಅವುಗಳ ಕುಶಲ ಸಮಾಚಾರ ಏನೆಂದು ಹೇಳಲಿ?॥7॥
(ಶ್ಲೋಕ - 8)
ಮೂಲಮ್
ದುರ್ಭಗೋ ಬತ ಲೋಕೋಯಂ ಯದವೋ ನಿತರಾಮಪಿ ।
ಯೇ ಸಂವಸಂತೋ ನ ವಿದುರ್ಹರಿಂ ಮೀನಾ ಇವೋಡುಪಮ್ ॥
ಅನುವಾದ
ಎಂತಹ ದುರದೃಷ್ಟ! ಈ ಲೋಕವೇ ಭಾಗ್ಯಹೀನವಾಗಿ ಬಿಟ್ಟಿತು. ಅದರಲ್ಲೂ ಯಾದವರು ವಿಶೇಷವಾಗಿ ನಿರ್ಭಾಗ್ಯರಾದರು. ಅವರು ನಿರಂತರ ಭಗವಂತನ ಜೊತೆಯಲ್ಲೇ ಇರುತ್ತಿದ್ದರೂ ಅಮೃತಮಯ ಚಂದ್ರಬಿಂಬವು ಸಮುದ್ರದಲ್ಲೇ ಇದ್ದರೂ ಅದನ್ನು ಮೀನುಗಳು ಗುರುತಿಸದಂತೆ ಯಾದವರು ಭಗವಂತನನ್ನು ಗುರು ತಿಸದೆ ಹೋದರು.॥8॥
(ಶ್ಲೋಕ - 9)
ಮೂಲಮ್
ಇಂಗಿತಜ್ಞಾಃ ಪುರುಪ್ರೌಢಾ ಏಕಾರಾಮಾಶ್ಚ ಸಾತ್ವತಾಃ ।
ಸಾತ್ವತಾಮೃಷಭಂ ಸರ್ವೇ ಭೂತಾವಾಸಮಮಂಸತ ॥
ಅನುವಾದ
ಯಾದವರು ಇಂಗಿತಜ್ಞರೂ, ಮಹಾ ಬುದ್ಧಿ ಶಾಲಿಗಳೂ ಆಗಿದ್ದರು. ಶ್ರೀಕೃಷ್ಣ ಪರಮಾತ್ಮನೊಂದಿಗೆ ಒಂದೇ ಜಾಗದಲ್ಲಿದ್ದು, ಅವನೊಡನೆ ವಾಸಿಸುತ್ತಿದ್ದರೂ ಅವರೆಲ್ಲರೂ ಸಮಸ್ತ ವಿಶ್ವದ ಆಶ್ರಯನೂ, ಸರ್ವಾಂತರ್ಯಾಮಿಯೂ ಆದ ಶ್ರೀಕೃಷ್ಣನನ್ನು ಓರ್ವ ಯಾದವ ಶ್ರೇಷ್ಠನೆಂದೇ ತಿಳಿದಿದ್ದರು.॥9॥
(ಶ್ಲೋಕ - 10)
ಮೂಲಮ್
ದೇವಸ್ಯ ಮಾಯಯಾ ಸ್ಪೃಷ್ಟಾ ಯೇ ಚಾನ್ಯದಸದಾಶ್ರಿತಾಃ ।
ಭ್ರಾಮ್ಯತೇ ೀರ್ನ ತದ್ವಾಕ್ಯೈರಾತ್ಮನ್ಯುಪ್ತಾತ್ಮನೋ ಹರೌ ॥
ಅನುವಾದ
ಆದರೆ ಭಗವಂತನ ಮಾಯೆಯಿಂದ ಮೋಹಿತರಾದ ಈ ಯಾದವರು ಮತ್ತು ಇವನಲ್ಲಿ ವ್ಯರ್ಥವಾಗಿ ವೈರವನ್ನು ಕಟ್ಟಿಕೊಂಡ ಶಿಶುಪಾಲಾದಿಗಳ ಅಮಂಗಳಕರ, ನಿಂದಾಸೂಚಕವಾಕ್ಯಗಳಿಂದ ಭಗ ವಂತನಲ್ಲಿ ಮನಸ್ಸಮಾಯನ್ನು ಹೊಂದಿದ ಮಹಾತ್ಮರ ಬುದ್ಧಿಯು ಭ್ರಮಿತವಾಗುತ್ತಿರಲಿಲ್ಲ.॥10॥
(ಶ್ಲೋಕ - 11)
ಮೂಲಮ್
ಪ್ರದರ್ಶ್ಯಾತಪ್ತತಪಸಾಮವಿತೃಪ್ತದೃಶಾಂ ನೃಣಾಮ್ ।
ಆದಾಯಾಂತರಧಾದ್ಯಸ್ತು ಸ್ವಬಿಂಬಂ ಲೋಕಲೋಚನಮ್ ॥
ಅನುವಾದ
ಎಂದೂ ತಪಸ್ಸನ್ನೇ ಮಾಡದ ಜನರಿಗೂ ಕೂಡ ಇಷ್ಟು ದಿನ ದರ್ಶನಕೊಟ್ಟು ಈಗ ಅವರ ದರ್ಶನ ಲಾಲಸೆಯನ್ನು ತೃಪ್ತಿಪಡಿಸದೆಯೇ ಆ ಭಗವಾನ್ ಶ್ರೀಕೃಷ್ಣನು ತನ್ನ ತ್ರಿಭುವನಮೋಹನ ದಿವ್ಯವಿಗ್ರಹವನ್ನು ಅಡಗಿಸಿ ಅಂತರ್ಧಾನ ನಾದನು. ಹೀಗೆ ಅವನು ಅವರ ಕಣ್ಣನ್ನೇ ಕಿತ್ತುಕೊಂಡು ಬಿಟ್ಟಿರುವನು.॥11॥
(ಶ್ಲೋಕ - 12)
ಮೂಲಮ್
ಯನ್ಮರ್ತ್ಯಲೀಲೌಪಯಿಕಂ ಸ್ವಯೋಗ-
ಮಾಯಾಬಲಂ ದರ್ಶಯತಾ ಗೃಹೀತಮ್ ।
ವಿಸ್ಮಾಪನಂ ಸ್ವಸ್ಯ ಚ ಸೌಭಗರ್ದ್ಧೇಃ
ಪರಂ ಪದಂ ಭೂಷಣಭೂಷಣಾಂಗಮ್ ॥
ಅನುವಾದ
ತನ್ನ ಯೋಗಮಾಯೆಯ ಪ್ರಭಾವವನ್ನು ತೋರ್ಪ ಡಿಸುತ್ತಾ ಮನುಷ್ಯಲೀಲೆಗ ತಕ್ಕಂತೆ ಆತನು ಸ್ವೀಕರಿಸಿದ್ದ ಆ ಶ್ರೀಮೂರ್ತಿಯ ಸೊಬಗನ್ನು ಹೇಗೆ ವರ್ಣಿಸೋಣ! ಅದು ಸೌಂದರ್ಯ-ಸೌಭಾಗ್ಯಗಳ ಪರಮ ನೆಲೆಯೇ ಆಗಿತ್ತು. ಅವ ನಿಂದ ಆಭೂಷಣಗಳೂ ವಿಭೂಷಿತವಾಗುತ್ತಿದ್ದವು. ಜಗತ್ತಿಗೆ ಮಾತ್ರ ವಲ್ಲದೆ ಸ್ವಯಂ ಭಗವಂತನಿಗೇ ಆಶ್ಚರ್ಯವನ್ನುಂಟು ಮಾಡುವು ದಾಗಿತ್ತು.॥12॥
(ಶ್ಲೋಕ - 13)
ಮೂಲಮ್
ಯದ್ಧರ್ಮಸೂನೋರ್ಬತ ರಾಜಸೂಯೇ
ನಿರೀಕ್ಷ್ಯ ದೃಕ್ಸ್ವಸ್ತ್ಯಯನಂ ತ್ರಿಲೋಕಃ ।
ಕಾರ್ತ್ಸ್ನ್ಯೇನ ಚಾದ್ಯೇಹ ಗತಂ ವಿಧಾತು-
ರರ್ವಾಕ್ಸೃತೌ ಕೌಶಲಮಿತ್ಯಮನ್ಯತ ॥
ಅನುವಾದ
ಧರ್ಮರಾಜನ ರಾಜಸೂಯಯಜ್ಞದ ಸಮಯದಲ್ಲಿ ಕಣ್ಣು ಗಳಿಗೆ ಹಬ್ಬವಾಗಿದ್ದ ಆ ಭಗವಂತನ ಶ್ರೀಮೂರ್ತಿಯನ್ನು ಕಂಡು ಮೂರು ಲೋಕದ ಜನರೂ ‘ಬ್ರಹ್ಮದೇವರು ಮನುಷ್ಯಸೃಷ್ಟಿಯ ರಚನೆಯಲ್ಲಿರುವ ಎಲ್ಲ ಜಾಣ್ಮೆಯನ್ನು ಈ ರೂಪದಲ್ಲೇ ಸೇರಿಸಿ ಬಿಟ್ಟಿರುವನು’ ಎಂದು ಭಾವಿಸಿದ್ದರು.॥13॥
(ಶ್ಲೋಕ - 14)
ಮೂಲಮ್
ಯಸ್ಯಾನುರಾಗಪ್ಲುತಹಾಸರಾಸ-
ಲೀಲಾವಲೋಕಪ್ರತಿಲಬ್ಧಮಾನಾಃ ।
ವ್ರಜಸಿಯೋ ದೃಗ್ಭಿರನುಪ್ರವೃತ್ತ-
ಯೋವತಸ್ಥುಃ ಕಿಲ ಕೃತ್ಯಶೇಷಾಃ ॥
ಅನುವಾದ
ಆ ಶ್ರೀಕೃಷ್ಣನ ಅನುರಾಗಪೂರ್ಣವಾದ ಹಾಸ್ಯ ಮತ್ತು ವಿನೋದಮಯವಾದ ಕಣ್ನೋಟಗಳಿಂದ ಸಮ್ಮಾನಿತರಾದ ಗೋಕುಲದ ಸೀಯರ ಕಣ್ಣು ಗಳು ಅವನಲ್ಲೇ ನೆಟ್ಟಿರುತ್ತಿದ್ದವು ಮತ್ತು ಮನೋಲಯವನ್ನು ಹೊಂದಿ ಮನೆಯ ಕೆಲಸಗಳನ್ನು ನಿಲ್ಲಿಸಿ ಬೊಂಬೆಗಳಂತೆ ಸ್ತಬ್ಧರಾಗಿ ನಿಂತುಬಿಡುತ್ತಿದ್ದರು.॥14॥
(ಶ್ಲೋಕ - 15)
ಮೂಲಮ್
ಸ್ವಶಾಂತರೂಪೇಷ್ವಿತರೈಃ ಸ್ವರೂಪೈ-
ರಭ್ಯರ್ದ್ಯಮಾನೇಷ್ವನುಕಂಪಿತಾತ್ಮಾ ।
ಪರಾವರೇಶೋ ಮಹದಂಶಯುಕ್ತೋ
ಹ್ಯಜೋಪಿ ಜಾತೋ ಭಗವಾನ್ಯಥಾಗ್ನಿಃ ॥
ಅನುವಾದ
ಚರಾಚರ ಜಗತ್ತಿನ ಮತ್ತು ಪ್ರಕೃತಿಯ ಒಡೆಯನಾದ ಭಗವಂತನು ಸೌಮ್ಯಸ್ವರೂಪಿಗಳಾದ ಮಹಾತ್ಮರೂ, ದೇವತೆಗಳೂ ಮುಂತಾದವರು ಘೋರರೂಪಿ ಗಳಾದ ಅಸುರರಿಂದ ಪೀಡಿಸಲ್ಪಡುತ್ತಿರುವುದನ್ನು ಕಂಡು ಕರುಣಾ ಪೂರಿತನಾಗಿ, ಜನ್ಮರಹಿತನಾಗಿದ್ದರೂ ತನ್ನ ಅಂಶವಾದ ಬಲರಾಮ ನೊಂದಿಗೆ ಕಟ್ಟಿಗೆಯಲ್ಲಿ ಬೆಂಕಿಯು ಆವಿರ್ಭವಿಸುವಂತೆ ಪ್ರಕಟನಾದನು.॥15॥
(ಶ್ಲೋಕ - 16)
ಮೂಲಮ್
ಮಾಂ ಖೇದಯತ್ಯೇತದಜಸ್ಯ ಜನ್ಮ-
ವಿಡಂಬನಂ ಯದ್ವಸುದೇವಗೇಹೇ ।
ವ್ರಜೇ ಚ ವಾಸೋರಿಭಯಾದಿವ ಸ್ವಯಂ
ಪುರಾದ್ವ್ಯವಾತ್ಸೀದ್ಯದನಂತವೀರ್ಯಃ ॥
ಅನುವಾದ
ಜನ್ಮರಹಿತನಾಗಿದ್ದರೂ ಆ ಮಹಾ ಪ್ರಭುವು ವಸುದೇವನ ಮನೆಯಲ್ಲಿ ಜನ್ಮತಳೆದು ಲೀಲೆಗಳನ್ನು ತೋರುವುದೂ, ಸಮಸ್ತ ಭೂತಗಳಿಗೂ ಅಭಯಪ್ರದನಾಗಿದ್ದರೂ ಕಂಸನಿಗೆ ಭಯಗೊಂಡವನಂತೆ ವೃಂದಾವನಕ್ಕೆ ಹೋಗಿ ಅಡಗಿರು ವುದು, ಅನಂತ ಪರಾಕ್ರಮಿಯಾಗಿದ್ದರೂ ಕಾಲಯವನನಿಗೆ ಭಯ ಗೊಂಡವನಂತೆ ಮಥುರಾನಗರಿಯನ್ನು ಬಿಟ್ಟು ಓಡಿಹೋಗು ವುದೂ ಇವೆಲ್ಲ ಭಗವಂತನ ಲೀಲೆಗಳು ನೆನಪಿಗೆ ಬಂದು ಮನಸ್ಸು ಕಳವಳಗೊಳ್ಳುತ್ತದೆ.॥16॥
(ಶ್ಲೋಕ - 17)
ಮೂಲಮ್
ದುನೋತಿ ಚೇತಃ ಸ್ಮರತೋ ಮಮೈತದ್
ಯದಾಹ ಪಾದಾವಭಿವಂದ್ಯ ಪಿತ್ರೋಃ ।
ತಾತಾಂಬ ಕಂಸಾದುರುಶಂಕಿತಾನಾಂ
ಪ್ರಸೀದತಂ ನೋಕೃತನಿಷ್ಕೃತೀನಾಮ್ ॥
ಅನುವಾದ
ಮೂರು ಲೋಕಗಳಿಗೂ ತಂದೆ ಯಾಗಿದ್ದರೂ ವಸುದೇವ-ದೇವಕಿಯರ ಚರಣಗಳಿಗೆ ಎರಗಿ ‘ಅಪ್ಪಾ! ಅಮ್ಮಾ ! ಕಂಸನ ಭಯಕ್ಕೆ ಒಳಗಾಗಿ ನಾವು ನಿಮಗೆ ಯಾವ ಸೇವೆಯನ್ನೂ ಮಾಡಲಾಗಲಿಲ್ಲ. ನಮ್ಮ ಅಪರಾಧವನ್ನು ಮನ್ನಿಸಿ ಪ್ರಸನ್ನರಾಗಬೇಕು’ ಎಂದು ಬೇಡಿಕೊಂಡನು. ಶ್ರೀಕೃಷ್ಣನ ಈ ಮಾತುಗಳು ನೆನಪಾದಾಗ ಇಂದೂ ಕೂಡ ನನ್ನ ಚಿತ್ತವು ಅತ್ಯಂತ ವ್ಯಥಿತವಾಗುತ್ತದೆ.॥17॥
(ಶ್ಲೋಕ - 18)
ಮೂಲಮ್
ಕೋ ವಾ ಅಮುಷ್ಯಾಂಘ್ರಿ ಸರೋಜರೇಣುಂ
ವಿಸ್ಮರ್ತುಮೀಶೀತ ಪುಮಾನ್ವಿಜಿಘ್ರನ್ ।
ಯೋ ವಿಸುರದ್ಭ್ರೂವಿಟಪೇನ ಭೂಮೇ-
ರ್ಭಾರಂ ಕೃತಾಂತೇನ ತಿರಶ್ಚಕಾರ ॥
ಅನುವಾದ
ಕಾಲಸ್ವರೂಪವಾದ ತನ್ನ ಭ್ರುಕುಟಿವಿಲಾಸ ದಿಂದಲೇ ಭೂಮಿಯ ಸಮಸ್ತ ಭಾರವನ್ನು ಇಳಿಸಿದ ಆ ಪರಮ ಪುರುಷ ಶ್ರೀಕೃಷ್ಣನ ಪಾದಪದ್ಮಗಳ ಪರಾಗವನ್ನು ಸೇವಿಸುವ ಯಾವನು ತಾನೇ ಆತನನ್ನು ಮರೆಯುವನು?॥18॥
(ಶ್ಲೋಕ - 19)
ಮೂಲಮ್
ದೃಷ್ಟಾ ಭವದ್ಭಿರ್ನನು ರಾಜಸೂಯೇ
ಚೈದ್ಯಸ್ಯ ಕೃಷ್ಣಂ ದ್ವಿಷತೋಪಿ ಸಿದ್ಧಿಃ ।
ಯಾಂ ಯೋಗಿನಃ ಸಂಸ್ಪೃಹಯಂತಿ ಸಮ್ಯಗ್
ಯೋಗೇನ ಕಸ್ತದ್ವಿರಹಂ ಸಹೇತ ॥
ಅನುವಾದ
ಶಿಶು ಪಾಲನಾದರೋ ಶ್ರೀಕೃಷ್ಣನಲ್ಲಿ ಬದ್ಧದ್ವೇಷ ಹೊಂದಿದ್ದರೂ, ಅವನು ಯೋಗಿಗಳು ಯೋಗಸಾಧನೆಯಿಂದ ಪಡೆಯಲು ಬಯಸುತ್ತಿ ರುವ ಪರಮ ಸಿದ್ಧಿಯನ್ನು ಪಡೆದುದನ್ನು ನೀವು ರಾಜಸೂಯ ಯಜ್ಞದಲ್ಲಿ ಪ್ರತ್ಯಕ್ಷವಾಗಿ ನೋಡಿರುವಿರಿ. ಅಂತಹವನ ವಿರಹವನ್ನು ಯಾರು ತಾನೇ ಸಹಿಸಬಲ್ಲರು?॥19॥
(ಶ್ಲೋಕ - 20)
ಮೂಲಮ್
ತಥೈವ ಚಾನ್ಯೇ ನರಲೋಕವೀರಾ
ಯ ಆಹವೇ ಕೃಷ್ಣ ಮುಖಾರವಿಂದಮ್ ।
ನೇತ್ರೈಃ ಪಿಬಂತೋ ನಯನಾಭಿರಾಮಂ
ಪಾರ್ಥಾಸ ಪೂತಾಃ ಪದಮಾಪುರಸ್ಯ ॥
ಅನುವಾದ
ಶಿಶುಪಾಲನಂತೆ ಮಹಾಭಾರತ ಯುದ್ಧದಲ್ಲಿ ಅರ್ಜುನನ ಬಾಣಗಳಿಗೆ ತುತ್ತಾಗಿ ಕಣ್ಣುಗಳಿಗೆ ಹಬ್ಬವಾಗಿದ್ದ ಶ್ರೀಕೃಷ್ಣನ ಮುಖಾರವಿಂದವನ್ನು ನೋಡುತ್ತಾ ಪ್ರಾಣತ್ಯಾಗಮಾಡಿದ ಎಲ್ಲರೂ ಪವಿತ್ರರಾಗಿ ಪರಂಧಾಮವನ್ನು ಪಡೆದುಕೊಂಡರು.॥20॥
(ಶ್ಲೋಕ - 21)
ಮೂಲಮ್
ಸ್ವಯಂ ತ್ವ ಸಾಮ್ಯಾತಿಶಯಸ್ಯೀಶಃ
ಸ್ವಾರಾಜ್ಯಲಕ್ಷ್ಮ್ಯಾಪ್ತಸಮಸ್ತಕಾಮಃ ।
ಬಲಿಂ ಹರದ್ಭಿಶ್ಚಿರಲೋಕಪಾಲೈಃ
ಕಿರೀಟಕೋಟ್ಯೇಡಿತಪಾದಪೀಠಃ ॥
ಅನುವಾದ
ಸಾಕ್ಷಾತ್ ಭಗವಾನ್ ಶ್ರೀಕೃಷ್ಣನು ಮೂರು ಲೋಕಗಳಿಗೆ ಒಡೆಯನು. ಅವನಿಗೆ ಸಮಾನರಾದವರು ಯಾರೂ ಇಲ್ಲ. ಹಾಗಿರುವಾಗ ಅವನಿಗಿಂತ ಮಿಗಿಲಾದವರು ಯಾರಿದ್ದಾರೆ ? ಇಂದ್ರಾದಿ ಅಸಂಖ್ಯ ಲೋಕಪಾಲರು ನಾನಾ ರೀತಿಯ ಕಾಣಿಕೆಗಳನ್ನು ತಂದು-ತಂದು ಒಪ್ಪಿಸಿ, ತಮ್ಮ ಕಿರೀಟಗಳ ತುದಿಯಿಂದ ಅವನು ಕಾಲನ್ನಿಡುವ ಪಾದಪೀಠಕ್ಕೆ ಮಣಿಯುತ್ತಿದ್ದರು.॥21॥
(ಶ್ಲೋಕ - 22)
ಮೂಲಮ್
ತತ್ತಸ್ಯ ಕೈಂಕರ್ಯಮಲಂ ಭೃತಾನ್ನೋ
ವಿಗ್ಲಾಪಯತ್ಯಂಗ ಯದುಗ್ರಸೇನಮ್ ।
ತಿಷ್ಠನ್ನಿಷಣ್ಣಂ ಪರಮೇಷ್ಠಿಷ್ಣ್ಯೇ
ನ್ಯಬೋಧಯದ್ದೇವ ನಿಧಾರಯೇತಿ ॥
ಅನುವಾದ
ವಿದುರನೇ! ಅದೇ ಭಗವಾನ್ ಶ್ರೀಕೃಷ್ಣನು ರಾಜಸಿಂಹಾಸನದ ಮೇಲೆ ಕುಳಿತಿರುವ ಉಗ್ರಸೇನನ ಮುಂದೆ ನಿಂತು ‘ಜೀಯಾ! ನಮ್ಮ ಅರಿಕೆಯನ್ನು ಲಾಲಿಸಬೇಕು’ ಎಂದು ಬಿನ್ನಪಮಾಡುತ್ತಿದ್ದನು. ಅವನ ಸೇವಾ ಭಾವವು ನೆನಪಾಗುತ್ತಲೇ ನಮ್ಮಂತಹ ಸೇವಕರ ಚಿತ್ತವು ಅತ್ಯಂತ ಕಳವಳಗೊಳ್ಳುತ್ತದೆ.॥22॥
(ಶ್ಲೋಕ - 23)
ಮೂಲಮ್
ಅಹೋ ಬಕೀ ಯಂ ಸ್ತನಕಾಲಕೂಟಂ
ಜಿಘಾಂಸಯಾಪಾಯಯದಪ್ಯಸ್ವಾೀ ।
ಲೇಭೇ ಗತಿಂ ಧಾತ್ರ್ಯುಚಿತಾಂ ತತೋನ್ಯಂ
ಕಂ ವಾ ದಯಾಲುಂ ಶರಣಂ ವ್ರಜೇಮ ॥
ಅನುವಾದ
ಪಾಪಿಷ್ಠೆಯಾದ ಪೂತನಿಯು ತನ್ನ ಸ್ತನಗಳಲ್ಲಿ ವಿಷವನ್ನು ತುಂಬಿಕೊಂಡು ಶ್ರೀಕೃಷ್ಣನನ್ನು ಕೊಲ್ಲಬೇಕೆಂಬ ಅಭಿಲಾಷೆಯಿಂದ ಅವನಿಗೆ ಸ್ತನ್ಯವನ್ನು ಕುಡಿಸಿದ್ದಳು. ಅವಳಿಗೂ ಕೂಡ ಭಗವಂತನು ನಿಜವಾದ ದಾದಿಗೆ ಸಿಕ್ಕಬೇಕಾದ ಸದ್ಗತಿಯನ್ನು ಕರುಣಿಸಿದನು. ಶರಣುಹೊಂದುವುದಕ್ಕೆ ಯೋಗ್ಯವಾದ ಕರು ಣಾಳುವು ಆತನಲ್ಲದೆ ಮತ್ತೆ ಯಾರಿದ್ದಾರೆ?॥23॥
(ಶ್ಲೋಕ - 24)
ಮೂಲಮ್
ಮನ್ಯೇಸುರಾನ್ಭಾಗವತಾಂಸ್ಯೀಶೇ
ಸಂರಂಭಮಾರ್ಗಾಭಿನಿವಿಷ್ಟಚಿತ್ತಾನ್ ।
ಯೇ ಸಂಯುಗೇಚಕ್ಷತ ತಾರ್ಕ್ಷ್ಯಪುತ್ರ-
ಮಂಸೇ ಸುನಾಭಾಯುಧಮಾಪತಂತಮ್ ॥
ಅನುವಾದ
ಈ ಅಸುರ ರನ್ನೂ ನಾನು ಭಗವದ್ಭಕ್ತರೆಂದೇ ಪರಿಗಣಿಸುತ್ತೇನೆ. ಏಕೆಂದರೆ, ವೈರಜನಿತ ಕ್ರೋಧದ ಕಾರಣ ಅವರ ಚಿತ್ತವು ಸದಾಕಾಲ ಶ್ರೀಕೃಷ್ಣ ನಲ್ಲೇ ತೊಡಗಿರುತ್ತಿತ್ತು ಮತ್ತು ರಣರಂಗದಲ್ಲಿ ಗರುಡನು ಹೆಗಲಲ್ಲಿ ಹೊತ್ತುಕೊಂಡಿದ್ದ ಸುದರ್ಶನ ಚಕ್ರಧಾರಿಯಾದ ಶತ್ರುಗಳ ಮೇಲೆ ಎರಗುತ್ತಿರುವ ಶ್ರೀ ಭಗವಂತನ ದರ್ಶನವೂ ಆಗುತ್ತಿತ್ತು.॥24॥
(ಶ್ಲೋಕ - 25)
ಮೂಲಮ್
ವಸುದೇವಸ್ಯ ದೇವಕ್ಯಾಂ ಜಾತೋ ಭೋಜೇಂದ್ರಬಂಧನೇ ।
ಚಿಕೀರ್ಷುರ್ಭಗವಾನಸ್ಯಾಃ ಶಮಜೇನಾಭಿಯಾಚಿತಃ ॥
ಅನುವಾದ
ಬ್ರಹ್ಮದೇವರ ಪ್ರಾರ್ಥನೆಯಂತೆ ಭೂಭಾರವನ್ನು ಇಳುಹಿ, ಅಕೆಯನ್ನು ಸುಖಿಯಾಗಿಸಲಿಕ್ಕಾಗಿ ಭಗವಂತನು ಕಂಸನ ಕಾರಾ ಗೃಹದಲ್ಲಿ ವಸುದೇವ-ದೇವಕಿಯರಲ್ಲಿ ಅವತರಿಸಿದ್ದನು.॥25॥
(ಶ್ಲೋಕ - 26)
ಮೂಲಮ್
ತತೋ ನಂದವ್ರಜಮಿತಃ ಪಿತ್ರಾ ಕಂಸಾದ್ವಿಬಿಭ್ಯತಾ ।
ಏಕಾದಶ ಸಮಾಸ್ತತ್ರ ಗೂಢಾರ್ಚಿಃ ಸಬಲೋವಸತ್ ॥
ಅನುವಾದ
ಆಗ ಕಂಸನಿಗೆ ಭಯಪಟ್ಟು ತಂದೆ ವಸುದೇವನು ಅತನನ್ನು ನಂದ ಗೋಕುಲಕ್ಕೆ ಕೊಂಡೊಯ್ದು ಇರಿಸಿದನು. ಅಲ್ಲಿ ಆತನು ಬಲರಾಮ ನೊಂದಿಗೆ ತನ್ನ ಪ್ರಭಾವವು ಹೊರಗೆ ಯಾರಿಗೂ ತಿಳಿಯದಂತೆ ಅಡಗಿಕೊಂಡು ಹನ್ನೊಂದು ವರ್ಷ ವಾಸವಾಗಿದ್ದನು.॥26॥
(ಶ್ಲೋಕ - 27)
ಮೂಲಮ್
ಪರೀತೋ ವತ್ಸಪೈರ್ವತ್ಸಾಂಶ್ಚಾರಯನ್ ವ್ಯಹರದ್ವಿಭುಃ ।
ಯಮುನೋಪವನೇ ಕೂಜದ್ವಜಸಂಕುಲಿತಾಂಘ್ರಿಪೇ ॥
ಅನುವಾದ
ಹಕ್ಕಿಗಳ ಹಿಂಡು ಕಲ-ಕಲ ನಿನಾದ ಮಾಡುತ್ತಾ ಸುಖವಾಗಿ ವಾಸಿಸುತ್ತಿದ್ದ ಯಮುನಾತೀರದ ಉದ್ಯಾನವನದಲ್ಲಿ ಕರುಗಳನ್ನು ಮೇಯಿಸುತ್ತಾ ಭಗವಾನ್ ಶ್ರೀಕೃಷ್ಣನು ಗೊಲ್ಲಬಾಲಕರೊಡನೆ ಕ್ರೀಡಿಸುತ್ತಿದ್ದನು.॥27॥
(ಶ್ಲೋಕ - 28)
ಮೂಲಮ್
ಕೌಮಾರೀಂ ದರ್ಶಯಂಶ್ಚೇಷ್ಟಾಂ ಪ್ರೇಕ್ಷಣೀಯಾಂ ವ್ರಜೌಕಸಾಮ್ ।
ರುದನ್ನಿವ ಹಸನ್ಮುಗ್ಧಬಾಲಸಿಂಹಾವಲೋಕನಃ ॥
ಅನುವಾದ
ಗೋಕುಲನಿವಾಸಿಗಳ ದೃಷ್ಟಿಯನ್ನು ಸೆಳೆಯು ವಂತಹ ನಾನಾ ಬಾಲಲೀಲೆಗಳನ್ನು ಅಲ್ಲಿ ಪ್ರಭುವು ಪ್ರಕಟಿಸಿದನು. ಕೆಲವೊಮ್ಮೆ ಅಳುವಂತೆಯೂ, ಕೆಲವು ವೇಳೆ ನಗುವಂತೆಯೂ ಕಾಣಿಸಿ ಕೊಂಡರೆ, ಕೆಲವೊಮ್ಮೆ ಸಿಂಹದ ಮರಿಯಂತೆ ಮುಗ್ಧದೃಷ್ಟಿ ಯಿಂದ ನೋಡುತ್ತಿದ್ದನು.॥28॥
(ಶ್ಲೋಕ - 29)
ಮೂಲಮ್
ಸ ಏವ ಗೋಧನಂ ಲಕ್ಷ್ಮ್ಯಾ ನಿಕೇತಂ ಸಿತಗೋವೃಷಮ್ ।
ಚಾರಯನ್ನನುಗಾನ್ ಗೋಪಾನ್ರಣದ್ವೇಣುರರೀರಮತ್ ॥
ಅನುವಾದ
ಸ್ವಲ್ಪ ದೊಡ್ಡವನಾದಾಗ ಬಿಳಿಯ ಎತ್ತುಗಳನ್ನೂ, ನಾನಾಬಣ್ಣದ ಹಸುಗಳನ್ನೂ ಮೇಯಿಸುತ್ತಾ ಕೊಳಲ ನ್ನೂದಿ ಅದರ ಇಂಚರದಿಂದ ಗೋವಳರನ್ನೂ ಸಂತೋಷ ಪಡಿಸು ತ್ತಿದ್ದನು.॥29॥
(ಶ್ಲೋಕ - 30)
ಮೂಲಮ್
ಪ್ರಯುಕ್ತಾನ್ಭೋಜರಾಜೇನ ಮಾಯಿನಃ ಕಾಮರೂಪಿಣಃ ।
ಲೀಲಯಾ ವ್ಯನುದತ್ತಾಂಸ್ತಾನ್ ಬಾಲಃ ಕ್ರೀಡನಕಾನಿವ ॥
ಅನುವಾದ
ಆ ಸಮಯದಲ್ಲಿ ಕಂಸನು ಆತನನ್ನು ಕೊಂದು ಬಿಡಬೇಕೆಂದು ಮಾಯಾವಿಗಳೂ, ಕಾಮರೂಪಿಗಳೂ ಆದ ಅನೇಕ ರಾಕ್ಷಸರನ್ನು ಕಳಿಸಿದಾಗ ಹುಡುಗರು ಆಟದ ಸಾಮಾನು ಮುರಿದು ಹಾಕುವಂತೆ ಭಗವಂತನು ಅವರನ್ನು ಕೊಂದುಬಿಟ್ಟನು.॥30॥
(ಶ್ಲೋಕ - 31)
ಮೂಲಮ್
ವಿಪನ್ನಾನ್ವಿಷಪಾನೇನ ನಿಗೃಹ್ಯ ಭುಜಗಾಪಮ್ ।
ಉತ್ಥಾಪ್ಯಾಪಾಯಯದ್ಗಾವಸ್ತತ್ತೋಯಂ ಪ್ರಕೃತಿಸ್ಥಿತಮ್ ॥
ಅನುವಾದ
ಕಾಳಿಂಗನಾಗನನ್ನು ಮರ್ದನಮಾಡಿ, ವಿಷಮಿಶ್ರಿತವಾದ ನೀರನ್ನು ಕುಡಿದು ವಿಪತ್ತಿಗೆ ಒಳಗಾಗಿದ್ದ ಗೋವುಗಳನ್ನೂ, ಗೋವಳರನ್ನೂ ಬದುಕಿಸಿ, ಆ ಮಡುವಿನ ನೀರನ್ನು ಶುದ್ಧಗೊಳಿಸಿ ಕುಡಿಯಲು ಯೋಗ್ಯವನ್ನಾಗಿ ಮಾಡಿದನು.॥31॥
(ಶ್ಲೋಕ - 32)
ಮೂಲಮ್
ಅಯಾಜಯದ್ಗೋಸವೇನ ಗೋಪರಾಜಂ ದ್ವಿಜೋತ್ತಮೈಃ ।
ವಿತ್ತಸ್ಯ ಚೋರುಭಾರಸ್ಯ ಚಿಕೀರ್ಷನ್ಸದ್ವ್ಯಯಂ ವಿಭುಃ ॥
ಅನುವಾದ
ಗೋಪರಾಜನಾದ ನಂದ ಗೋಪನಲ್ಲಿದ್ದ ಹೇರಳವಾದ ಹಣದ ಸದ್ವಿನಿಯೋಗವಾಗಲೆಂದು ಭಗವಾನ್ ಶ್ರೀಕೃಷ್ಣನು ಅವನಿಂದ ಶ್ರೇಷ್ಠ ಬ್ರಾಹ್ಮಣರ ಮೂಲಕ ಗೋವರ್ಧನ ಪೂಜಾರೂಪೀ ಗೋಯಜ್ಞವನ್ನು ಮಾಡಿಸಿದನು.॥32॥
(ಶ್ಲೋಕ - 33)
ಮೂಲಮ್
ವರ್ಷತೀಂದ್ರೇ ವ್ರಜಃ ಕೋಪಾದ್ಭಗ್ನಮಾನೇತಿವಿಹ್ವಲಃ ।
ಗೋತ್ರಲೀಲಾತಪತ್ರೇಣ ತ್ರಾತೋ ಭದ್ರಾನುಗೃಹ್ಣತಾ ॥
ಅನುವಾದ
ಅದರಿಂದ ತನಗೆ ಮಾನಭಂಗವಾಯಿತೆಂದು ಭಾವಿಸಿ ಕಡು ಕೋಪಗೊಂಡ ಇಂದ್ರನು ಗೋಕುಲವನ್ನು ಧ್ವಂಸಮಾಡಿ ಬಿಡಲು ಭಯಂಕರವಾದ ಜಡಿಮಳೆಯನ್ನು ಸುರಿಸತೊಡಗಲು ಭಗವಂತನು ಕರುಣಾಪೂರ್ಣನಾಗಿ ಗೋವರ್ಧನ ಪರ್ವತವನ್ನು ಲೀಲಾಜಾಲವಾಗಿ ಕೊಡೆಯಂತೆ ಎತ್ತಿಹಿಡಿದು ಅತ್ಯಂತ ಭಯಗೊಂಡ ಗೋವುಗಳನ್ನೂ, ಗೋಪಾಲಕರನ್ನೂ ಸಂರಕ್ಷಿಸಿದನು.॥33॥
(ಶ್ಲೋಕ - 34)
ಮೂಲಮ್
ಶರಚ್ಛಶಿಕರೈರ್ಮೃಷ್ಟಂ ಮಾನಯನ್ರಜನೀಮುಖಮ್ ।
ಗಾಯನ್ಕಲಪದಂ ರೇಮೇ ಸೀಣಾಂ ಮಂಡಲಮಂಡನಃ ॥
ಅನುವಾದ
ಸಾಯಂಕಾಲದಲ್ಲಿ ಇಡೀ ನಂದಗೋಕುಲದಲ್ಲಿ ಶರತ್ಕಾಲದ ಬೆಳದಿಂಗಳು ಚೆಲ್ಲುತ್ತಿರಲು ಆಗ ಶ್ರೀಕೃಷ್ಣನು ಅದನ್ನು ಸಂಭಾವಿಸುತ್ತಾ, ಮುರಳೀಗಾನ ಮಾಡುತ್ತಾ ಗೋಪಸೀ ಸಮೂಹದೊಡನೆ ರಾಸಕ್ರೀಡೆ ಯಾಡಿದನು.॥34॥
ಅನುವಾದ (ಸಮಾಪ್ತಿಃ)
ಎರಡನೆಯ ಅಧ್ಯಾಯವು ಮುಗಿಯಿತು.॥2॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ವಿದುರೋದ್ಧವಸಂವಾದೇ ದ್ವಿತೀಯೋಽಧ್ಯಾಯಃ॥2॥