೦೭

[ಏಳನೆಯ ಅಧ್ಯಾಯ]

ಭಾಗಸೂಚನಾ

ಭಗವಂತನ ಲೀಲಾವತಾರಗಳ ಕಥೆ

(ಶ್ಲೋಕ - 1)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಯತ್ರೋದ್ಯತಃ ಕ್ಷಿತಿತಲೋದ್ಧರಣಾಯ ಬಿಭ್ರತ್
ಕ್ರೌಡೀಂ ತನುಂ ಸಕಲಯಜ್ಞ ಮಯೀ ಮನಂತಃ ।
ಅಂತರ್ಮಹಾರ್ಣವ ಉಪಾಗತ ಮಾದಿದೈತ್ಯಂ
ತಂ ದಂಷ್ಟ್ರ ಯಾದ್ರಿಮಿವ ವಜ್ರಧರೋ ದದಾರ ॥

ಅನುವಾದ

ಬ್ರಹ್ಮದೇವರು ಹೇಳುತ್ತಾರೆ ಎಲೈ ನಾರದನೇ! ‘‘ಪ್ರಳಯ ಜಲದಲ್ಲಿ ಮುಳುಗಿಹೋಗಿದ್ದ ಭೂಮಿಯನ್ನು ಉದ್ಧರಿಸಲು ಅನಂತನಾದ ಶ್ರೀಭಗವಂತನು ಸಮಸ್ತ ಯಜ್ಞಮಯವಾದ ವರಾಹ ದೇಹವನ್ನು ಕೈಗೊಂಡನು. ಆ ಅವತಾರದಲ್ಲಿ ಅವನು ಸಮುದ್ರ ದೊಳಗೆಯೇ ತನ್ನನ್ನು ಎದುರಿಸಲು ಬಂದ ಆದಿದೈತ್ಯ ಹಿರಣ್ಯಾಕ್ಷ ನನ್ನು ಇಂದ್ರನು ವಜ್ರಾಯುಧದಿಂದ ಪರ್ವತವನ್ನು ಭೇದಿಸಿದಂತೆ, ತನ್ನ ಕೋರೆದಾಡೆಗಳಿಂದ ಸೀಳಿಹಾಕಿದನು. ॥ 1 ॥

(ಶ್ಲೋಕ - 2)

ಮೂಲಮ್

ಜಾತೋ ರುಚೇರಜನಯತ್ ಸುಯಮಾನ್ ಸುಯಜ್ಞ
ಆಕೂತಿಸೂನುರಮರಾನಥ ದಕ್ಷಿಣಾಯಾಮ್ ।
ಲೋಕತ್ರಯಸ್ಯ ಮಹತೀಮಹರದ್ಯದಾರ್ತಿಂ
ಸ್ವಾಯಂಭುವೇನ ಮನುನಾ ಹರಿರಿತ್ಯನೂಕ್ತಃ ॥

ಅನುವಾದ

ಅನಂತರ ಅದೇ ಪ್ರಭುವು ರುಚಿಯೆಂಬ ಪ್ರಜಾಪತಿಯ ಪತ್ನಿಯಾದ ಆಕೂತಿಯ ಗರ್ಭದಲ್ಲಿ ‘ಸುಯಜ್ಞ’ ರೂಪದಲ್ಲಿ ಅವತರಿಸಿದನು. ಆ ಅವತಾರದಲ್ಲಿ ಅವನು ‘ದಕ್ಷಿಣಾ’ ಎಂಬ ತನ್ನ ಧರ್ಮಪತ್ನಿಯಲ್ಲಿ ‘ಸುಯಮ’ರೆಂಬ ದೇವತೆಗಳನ್ನು ಪುತ್ರರನ್ನಾಗಿ ಪಡೆದು, ಮೂರು ಲೋಕಗಳಿಗೂ ಒದಗಿದ್ದ ಮಹಾಪೀಡೆಯನ್ನು ಪರಿಹರಿಸಿದ್ದರಿಂದ ಸ್ವಾಯಂಭುವ ಮನುವು ಈತನನ್ನು ‘ಹರಿಃ’ ಎಂಬ ನಾಮದಿಂದ ಕರೆದನು. ॥ 2 ॥

(ಶ್ಲೋಕ - 3)

ಮೂಲಮ್

ಜಜ್ಞೇ ಚ ಕರ್ದಮಗೃಹೇ ದ್ವಿಜ ದೇವಹೂತ್ಯಾಂ
ಸೀಭಿಃ ಸಮಂ ನವಭಿರಾತ್ಮ ಗತಿಂ ಸ್ವಮಾತ್ರೇ ।
ಊಚೇ ಯಯಾತ್ಮ ಶಮಲಂ ಗುಣಸಂಗ ಪಂಕ-
ಮಸ್ಮಿನ್ ವಿಧೂಯ ಕಪಿಲಸ್ಯ ಗತಿಂ ಪ್ರಪೇದೇ ॥

ಅನುವಾದ

ನಾರದಾ ! ಕರ್ದಮ ಪ್ರಜಾಪತಿಯ ಮನೆಯಲ್ಲಿ ದೇವಹೂತಿ ದೇವಿಯ ಗರ್ಭದಲ್ಲಿ ಒಂಭತ್ತು ಮಂದಿ ಸೋದರಿಯರೊಡನೆ ಭಗವಂತನು ‘ಕಪಿಲ’ನೆಂಬ ಹೆಸರಿನಿಂದ ಅವತರಿಸಿದನು. ಅವನು ತನ್ನ ತಾಯಿ ದೇವಹೂತಿಗೆ ಆತ್ಮಜ್ಞಾನವನ್ನು ಉಪದೇಶಮಾಡಿದನು. ಅದರಿಂದ ಆಕೆಯು ತನ್ನಲ್ಲಿ ತ್ರಿಗುಣಗಳ ಆಸಕ್ತಿಯಿಂದ ಉಂಟಾ ಗಿದ್ದ ಹೃದಯದ ಎಲ್ಲ ಕಲ್ಮಷವನ್ನು ಅದೇ ಜನ್ಮದಲ್ಲಿ ತೊಳೆದು ಕೊಂಡು ಕಪಿಲನ ನಿಜಸ್ವರೂಪವಾದ ಮುಕ್ತಿಯನ್ನು ಪಡೆದು ಕೊಂಡಳು. ॥ 3 ॥

(ಶ್ಲೋಕ - 4)

ಮೂಲಮ್

ಅತ್ರೇರಪತ್ಯಮಭಿಕಾಂಕ್ಷತ ಆಹ ತುಷ್ಟೋ
ದತ್ತೋ ಮಯಾಹಮಿತಿ ಯದ್ಭಗವಾನ್ಸ ದತ್ತಃ ।
ಯತ್ಪಾದಪಂಕಜಪರಾಗಪವಿತ್ರದೇಹಾ
ಯೋಗರ್ದ್ಧಿಮಾಪುರುಭಯೀಂ ಯದುಹೈಹಯಾದ್ಯಾಃ ॥

ಅನುವಾದ

ಅತ್ರಿಮಹರ್ಷಿಯು ಪುತ್ರಾರ್ಥಿಯಾಗಿ ತಪಸ್ಸುಮಾಡಿದಾಗ ಆತನಲ್ಲಿ ಪ್ರಸನ್ನನಾದ ಭಗವಂತನು ‘ನಾನು ನನ್ನನ್ನೇ ನಿನಗೆ ಪುತ್ರ ನಾಗಿ ಕೊಟ್ಟುಕೊಂಡಿದ್ದೇನೆ ; ನಿನಗೆ ಪುತ್ರರೂಪದಲ್ಲಿ ದತ್ತನಾಗಿದ್ದೇನೆ’ ಎಂದು ವರಕೊಟ್ಟಿದ್ದರಿಂದ ಅವರಲ್ಲಿ ಅವತರಿಸಿದ ಭಗವಂತನು ‘ದತ್ತ’ (ದತ್ತಾತ್ರೇಯ) ಎಂಬ ನಾಮದಿಂದಲೇ ಖ್ಯಾತನಾದನು. ಅವನ ಚರಣಕಮಲಗಳ ಪರಾಗದಿಂದ ತಮ್ಮ ಶರೀರವನ್ನು ಪವಿತ್ರ ಗೊಳಿಸಿಕೊಂಡು ಯದುರಾಜನು ಮತ್ತು ಸಹಸ್ರಾರ್ಜುನರೇ ಮುಂತಾದವರು ಭೋಗ ಮತ್ತು ಯೋಗಗಳೆಂಬ ಎರಡೂ ಯೋಗಸಿದ್ಧಿಗಳನ್ನು ಪಡೆದು ಕೃತಾರ್ಥರಾದರು. ॥ 4 ॥

(ಶ್ಲೋಕ - 5)

ಮೂಲಮ್

ತಪ್ತಂ ತಪೋ ವಿವಿಧಲೋಕಸಿಸೃಕ್ಷಯಾ ಮೇ
ಆದೌ ಸನಾತ್ಸ್ವ ತಪಸಃ ಸ ಚತುಃಸನೋಭೂತ್ ।
ಪ್ರಾಕ್ಕಲ್ಪಸಂಪ್ಲವವಿನಷ್ಟಮಿಹಾತ್ಮತತ್ತ್ವಂ
ಸಮ್ಯಗ್ಜಗಾದ ಮುನಯೋ ಯದಚಕ್ಷತಾತ್ಮನ್ ॥

ಅನುವಾದ

ನಾರದನೇ ! ಸೃಷ್ಟಿಯ ಪ್ರಾರಂಭದಲ್ಲಿ ನಾನು ಬಗೆ-ಬಗೆಯ ಲೋಕಗಳನ್ನು ಸೃಷ್ಟಿಸಬೇಕೆಂಬ ಬಯಕೆಯಿಂದ ತಪಸ್ಸುಮಾಡಿ ದೆನು. ನನ್ನ ಆ ಅಖಂಡ ತಪಸ್ಸಿನಿಂದ ಪ್ರಸನ್ನನಾದ ಸ್ವಾಮಿಯು ‘ತಪಸ್ಸು’ ಎಂಬ ಅರ್ಥವನ್ನು ಹೇಳುವ ‘ಸನ’ ಎಂಬ ಹೆಸರಿನಿಂದ ಕೂಡಿ ಸನಕ, ಸನಂದನ, ಸನಾತನ, ಸನತ್ಕುಮಾರ ಎಂಬ ನಾಲ್ಕು ರೂಪಗಳಲ್ಲಿ ಅವತರಿಸಿದನು. ಈ ಅವತಾರದಲ್ಲಿ ಅವನು ಪ್ರಳಯ ದಿಂದಾಗಿ ಹಿಂದಿನ ಕಲ್ಪದಲ್ಲಿ ಮರೆತುಹೋಗಿದ್ದ ಆತ್ಮತತ್ತ್ವವನ್ನು ಮುನಿಗಳಿಗೆ ಚೆನ್ನಾಗಿ ಉಪದೇಶಮಾಡಿದನು. ಅದರಿಂದ ಅವರು ಆಗಲೇ ಪರಮತತ್ತ್ವವನು ತಮ್ಮ ಹೃದಯದಲ್ಲಿ ಸಾಕ್ಷಾತ್ಕರಿಸಿ ಕೊಂಡರು. ॥ 5 ॥

(ಶ್ಲೋಕ - 6)

ಮೂಲಮ್

ಧರ್ಮಸ್ಯ ದಕ್ಷದುಹಿತರ್ಯಜನಿಷ್ಟ ಮೂರ್ತ್ಯಾಂ
ನಾರಾಯಣೋ ನರ ಇತಿ ಸ್ವತಪಃಪ್ರಭಾವಃ ।
ದೃಷ್ಟ್ವಾತ್ಮನೋ ಭಗವತೋ ನಿಯಮಾವಲೋಪಂ
ದೇವ್ಯಸ್ತ್ವನಂಗಪೃತನಾ ಘಟಿತುಂ ನ ಶೇಕುಃ ॥

ಅನುವಾದ

ಧರ್ಮನ ಪತ್ನೀ ದಕ್ಷಕನ್ಯೆಯಾದ ‘ಮೂರ್ತಿ’ ಎಂಬಾಕೆಯ ಗರ್ಭದಲ್ಲಿ ಅವನು ನರ-ನಾರಾಯಣರೂಪದಲ್ಲಿ ಅವತರಿಸಿ ದನು. ಪರಮಾದ್ಭುತವಾದ ತಪಃಪ್ರಭಾವವನ್ನು ಪ್ರಕಟಿಸಿದ ಅವ ತಾರವಿದು. ಇಂದ್ರನ ಪ್ರೇರಣೆಯಿಂದ ಆತನ ತಪೋಭಂಗ ಮಾಡ ಬೇಕೆಂದು ಬಂದ ಮನ್ಮಥನ ಸೇನೆಯಾದ ಅಪ್ಸರಸೀಯರು ತಾವೇ ಅಶಾಭಂಗಹೊಂದಿ, ಅವರ ಉದ್ದೇಶವು ಈಡೇರಲಿಲ್ಲ. ಕೊನೆಗೆ ಅವರು ಭಗವಂತನಲ್ಲಿ ಕ್ಷಮೆಯನ್ನು ಯಾಚಿಸಿದರು. ॥ 6 ॥

(ಶ್ಲೋಕ - 7)

ಮೂಲಮ್

ಕಾಮಂ ದಹಂತಿ ಕೃತಿನೋ ನನು ರೋಷದೃಷ್ಟ್ಯಾ
ರೋಷಂ ದಹಂತಮುತ ತೇ ನ ದಹಂತ್ಯಸಹ್ಯಮ್ ।
ಸೋಯಂ ಯದಂತರಮಲಂ ಪ್ರವಿಶನ್ಬಿಭೇತಿ
ಕಾಮಃ ಕಥಂ ನು ಪುನರಸ್ಯ ಮನಃ ಶ್ರಯೇತ ॥

ಅನುವಾದ

ನಾರದಾ ! ಶಂಕರನೇ ಮೊದಲಾದ ಮಹಾನುಭಾವರು ಮನ್ಮಥನು ತಮ್ಮ ತಪಸ್ಸನ್ನು ಕೆಡಿಸಲು ಬಂದಾಗ ರೋಷದೃಷ್ಟಿಯಿಂದ ಆತನನ್ನು ಸುಟ್ಟುಬಿಡುತ್ತಾರೆ. ಆದರೆ ಅವರು ತಮ್ಮನ್ನೇ ಸುಡುತ್ತಿರುವ, ಸಹಿಸಲು ಅಸಾಧ್ಯವಾದ ಕ್ರೋಧವನ್ನು ಸುಟ್ಟುಹಾಕಲು ಅಶಕ್ತ ರಾಗುತ್ತಾರೆ. ಆದರೆ ಅದೇ ಕ್ರೋಧವು ನರ-ನಾರಾಯಣರ ನಿರ್ಮಲವಾದ ಮನಸ್ಸನ್ನು ಪ್ರವೇಶಿಸಲು ಅಂಜುತ್ತದೆ. ಹೀಗಿರು ವಾಗ ಕಾಮವು ಅಲ್ಲಿಗೆ ಹೇಗೆ ತಾನೇ ಪ್ರವೇಶಮಾಡೀತು ? ಆ ನರ-ನಾರಾಯಣರೂಪೀ ಭಗವಂತನು ಕಲ್ಪದ ಪ್ರಾರಂಭದಿಂದಲೇ ಲೋಕಕಲ್ಯಾಣಕ್ಕಾಗಿ ಕಠಿಣ ತಪಸ್ಸನ್ನು ಮಾಡುತ್ತಿದ್ದಾನೆ. ॥ 7 ॥

(ಶ್ಲೋಕ - 8)

ಮೂಲಮ್

ವಿದ್ಧಃ ಸಪತ್ನ್ಯುದಿತಪತ್ರಿಭಿರಂತಿ ರಾಜ್ಞೋ
ಬಾಲೋಪಿ ಸನ್ನುಪಗತಸ್ತಪಸೇ ವನಾನಿ ।
ತಸ್ಮಾ ಅದಾದ್ಧ್ರುವಗತಿಂ ಗೃಣತೇ ಪ್ರಸನ್ನೋ
ದಿವ್ಯಾಃ ಸ್ತುವಂತಿ ಮುನಯೋ ಯದುಪರ್ಯಧಸ್ತಾತ್ ॥

ಅನುವಾದ

ತಂದೆಯಾದ ಉತ್ತಾನಪಾದ ರಾಜನಬಳಿಯಲ್ಲಿ ಕುಳಿತಿದ್ದ ಐದುವರ್ಷದ ಬಾಲಕ ಧ್ರುವನನ್ನು ಆತನ ಮಲತಾಯಿ ಸುರುಚಿಯು ವಾಗ್ಬಾಣಗಳಿಂದ ಘಾಸಿಪಡಿಸಿದಳು. ಇಷ್ಟು ಸಣ್ಣ ವಯಸ್ಸಿನವ ನಾದರೂ, ಅದನ್ನು ಸಹಿಸದೆ ಅರಮನೆಯನ್ನು ಬಿಟ್ಟು ತಪಸ್ಸನ್ನಾ ಚರಿಸಲು ಕಾಡಿಗೆ ಹೋದನು. ದೃಢಭಕ್ತಿಯಿಂದ ತನ್ನನ್ನು ಪ್ರಾರ್ಥಿಸಿದ ಅವನಿಗೆ ಒಲಿದು, ಭಗವಂತನು ಪ್ರಕಟನಾಗಿ ಧ್ರುವನಿಗೆ ದಿವ್ಯ ಸಪ್ತರ್ಷಿಗಳು ಮೇಲೂ ಕೆಳಗೂ ಪ್ರದಕ್ಷಿಣೆಮಾಡುತ್ತಾ ಸ್ತುತಿಸು ತ್ತಿರುವ ಅತ್ಯುನ್ನತವಾದ ಧ್ರುವಪದವನ್ನೇ ಕರುಣಿಸಿದನು. ॥ 8 ॥

(ಶ್ಲೋಕ - 9)

ಮೂಲಮ್

ಯದ್ವೇನಮುತ್ಪಥಗತಂ ದ್ವಿಜವಾಕ್ಯವಜ್ರ-
ವಿಪ್ಲುಷ್ಟ ಪೌರುಷಭಗಂ ನಿರಯೇ ಪತಂತಮ್ ।
ತ್ರಾತ್ವಾರ್ಥಿತೋ ಜಗತಿ ಪುತ್ರಪದಂ ಚ ಲೇಭೇ
ದುಗ್ಧಾ ವಸೂನಿ ವಸುಧಾ ಸಕಲಾನಿ ಯೇನ ॥

ಅನುವಾದ

ವೇನರಾಜನು ಅತ್ಯಂತ ದುರ್ಮಾರ್ಗವನ್ನು ಹಿಡಿದಾಗ ಬ್ರಾಹ್ಮಣರ ಹುಂಕಾರರೂಪೀ ವಜ್ರದಿಂದ ಆತನ ಐಶ್ವರ್ಯ, ಪೌರುಷ ಸುಟ್ಟು ಹೋಯಿತು. ಅವನು ನರಕಕ್ಕೆ ಬೀಳತೊಡಗಿದನು. ಮಹಾತ್ಮರು ಶ್ರೀಭಗವಂತನನ್ನು ಪ್ರಾರ್ಥಿಸಿ ಆತನ ಶರೀರವನ್ನು ಕಡೆದರು. ಆಗ ಅಲ್ಲಿ ಪೃಥುಮಹಾರಾಜನ ರೂಪದಲ್ಲಿ ಆತನಿಗೆ ಪುತ್ರನಾಗಿ ಭಗವಂತನು ಅವತರಿಸಿ ವೇನನನ್ನು ನರಕದಿಂದ ಉದ್ಧರಿಸಿದನು. ಹೀಗೆ ‘ಪುತ್ರ’ ಶಬ್ದವನ್ನು ಸಾರ್ಥಕಪಡಿಸಿದನು. ಅದೇ ಅವತಾರ ದಲ್ಲಿ ಪೃಥ್ವಿಯನ್ನು ಹಸುವಾಗಿಸಿ ಅವಳಿಂದ ಜಗತ್ತಿಗಾಗಿ ಸಮಸ್ತ ಔಷಧ-ಅನ್ನವನ್ನು ಕರೆದುಕೊಳ್ಳುವಂತೆ ಮಾಡಿ ಕರುಣಿಸಿದನು. ಎಲ್ಲ ವಸುಸಂಪತ್ತನ್ನೂ ಧರಿಸಿದ್ದರಿಂದ ‘ವಸುಂಧರಾ’ ಎಂಬ ಹೆಸರೂ ಭೂಮಿಗೆ ಆಗ ಅನ್ವರ್ಥವಾಯಿತು. ॥ 9 ॥

(ಶ್ಲೋಕ - 10)

ಮೂಲಮ್

ನಾಭೇರಸಾವೃಷಭ ಆಸ ಸುದೇವಿಸೂನುಃ
ಯೋ ವೈ ಚಚಾರ ಸಮದೃಗ್ಜಡಯೋಗಚರ್ಯಾಮ್ ।
ಯತ್ಪಾರಮಹಂಸ್ಯಮೃಷಯಃ ಪದಮಾಮನಂತಿ
ಸ್ವಸ್ಥಃ ಪ್ರಶಾಂತ ಕರಣಃ ಪರಿಮುಕ್ತಸಂಗಃ ॥

ಅನುವಾದ

ನಾಭಿರಾಜನ ಪತ್ನಿಯಾದ ಸುದೇವಿಯ ಗರ್ಭದಲ್ಲಿ ಭಗವಂತನು ಋಷಭದೇವನ ರೂಪದಲ್ಲಿ ಅವತರಿಸಿದನು. ಈ ಋಷಭಾವತಾರ ದಲ್ಲಿ ಸ್ವಾಮಿಯು ಸರ್ವಸಂಗಪರಿತ್ಯಾಗಮಾಡಿ, ಇಂದ್ರಿಯ- ಮನಸ್ಸುಗಳನ್ನು ಪ್ರಶಾಂತಗೊಳಿಸಿಕೊಂಡು, ಸ್ವಸ್ವರೂಪದಲ್ಲಿ ನೆಲೆ ಗೊಂಡು, ಸಮದರ್ಶಿಯಾಗಿ ಯೋಗದ ಪರಾಕಾಷ್ಠೆಯಲ್ಲಿದ್ದು ಜಡನಂತೆ ಲೋಕಕ್ಕೆ ಕಾಣಿಸಿಕೊಂಡನು. ಈ ಸ್ಥಿತಿ ಮತ್ತು ಆಚರಣೆ ಗಳನ್ನೇ ಮಹರ್ಷಿಗಳು ಪರಮಹಂಸಪದ, ಅವಧೂತಚರ್ಯೆ ಎಂದು ಕರೆಯುತ್ತಾರೆ. ॥ 10 ॥

(ಶ್ಲೋಕ - 11)

ಮೂಲಮ್

ಸತ್ರೇ ಮಮಾಸ ಭಗವಾನ್ ಹಯಶೀರಷಾಥೋ
ಸಾಕ್ಷಾತ್ ಸ ಯಜ್ಞಪುರುಷಸ್ತಪನೀಯವರ್ಣಃ ।
ಛಂದೋಮಯೋ ಮಖಮಯೋಖಿಲದೇವತಾತ್ಮಾ
ವಾಚೋ ಬಭೂವುರುಶತೀಃ ಶ್ವಸತೋಸ್ಯ ನಸ್ತಃ ॥

ಅನುವಾದ

ಆ ಯಜ್ಞಪುರುಷನಾದ ವಿಷ್ಣುವೇ ನಾನು ಮಾಡಿದ ಯಜ್ಞದಲ್ಲಿ ಚಿನ್ನದಂತೆ ಹೊಳೆಯುವ ದೇಹಕಾಂತಿಯಿಂದ ಬೆಳಗು ತ್ತಿದ್ದ ಕುದುರೆಯ ಮುಖವುಳ್ಳ ‘ಹಯಗ್ರೀವ’ ರೂಪದಲ್ಲಿ ಅವತರಿ ಸಿದನು. ಭಗವಂತನ ಆ ದಿವ್ಯಮಂಗಳ ವಿಗ್ರಹವು ವೇದಮಯ, ಯಜ್ಞಮಯ ಮತ್ತು ಸರ್ವ ದೇವಮಯವಾದುದು. ಆತನ ನಿಃಶ್ವಾಸ ರೂಪದಲ್ಲಿ ವೇದವಾಣಿಯು ಪ್ರಕಟಗೊಂಡಿತು. ॥ 11 ॥

(ಶ್ಲೋಕ - 12)

ಮೂಲಮ್

ಮತ್ಸ್ಯೋ ಯುಗಾಂತ ಸಮಯೇ ಮನುನೋಪಲಬ್ಧಃ
ಕ್ಷೋಣೀಮಯೋ ನಿಖಿಲಜೀವನಿಕಾಯಕೇತಃ ।
ವಿಸ್ರಂಸಿತಾನುರುಭಯೇ ಸಲಿಲೇ ಮುಖಾನ್ಮೇ
ಆದಾಯ ತತ್ರ ವಿಜಹಾರ ಹ ವೇದಮಾರ್ಗಾನ್ ॥

ಅನುವಾದ

ಚಾಕ್ಷುಷ ಮನ್ವಂತರದ ಕೊನೆಯ ಪ್ರಳಯಕಾಲದಲ್ಲಿ ಭಗ ವಂತನು ಮತ್ಸ್ಯರೂಪದಿಂದ ಸತ್ಯವ್ರತ ಮನುವಿಗೆ ಪ್ರತ್ಯಕ್ಷನಾದನು. ಆ ಸಮಯದಲ್ಲಿ ಪೃಥ್ವಿರೂಪೀ ನೌಕೆಗೆ ಈತನ ದೇಹವು ಆಶ್ರಯ ವಾಗಲು ತನ್ಮೂಲಕ ಅವನು ಸಮಸ್ತ ಜೀವಿಗಳಿಗೂ ಆಶ್ರಯ ನಾದನು. ಭಯಂಕರವಾದ ಆ ಪ್ರಳಯಜಲದಲ್ಲಿ ನನ್ನ ಮುಖ ದಿಂದ ಜಾರಿಬಿದ್ದ ವೇದಗಳನ್ನು ಎತ್ತಿಕೊಂಡು, ಅದರಲ್ಲೇ ವಿಹರಿಸುತ್ತಿದ್ದನು. ॥ 12 ॥

(ಶ್ಲೋಕ - 13)

ಮೂಲಮ್

ಕ್ಷೀರೋದಧಾವಮರದಾನವಯೂಥಪಾನಾ-
ಮುನ್ಮಥ್ನತಾಮಮೃತಲಬ್ಧಯ ಆದಿದೇವಃ ।
ಪೃಷ್ಠೇನ ಕಚ್ಛಪವಪುರ್ವಿದಧಾರ ಗೋತ್ರಂ
ನಿದ್ರಾಕ್ಷಣೋದ್ರಿಪರಿವರ್ತಕಷಾಣಕಂಡೂಃ ॥

ಅನುವಾದ

ದೇವಮುಖ್ಯರೂ ಮತ್ತು ದಾನವಮುಖ್ಯರೂ ಸೇರಿಕೊಂಡು ಅಮೃತವನ್ನು ಪಡೆಯುವುದಕ್ಕಾಗಿ ಕ್ಷೀರಸಮುದ್ರವನ್ನು ಕಡೆಯುತ್ತಿ ದ್ದಾಗ ಆ ಆದಿದೇವನು ಲಕ್ಷಯೋಜನ ವಿಸ್ತಾರವುಳ್ಳ ಕಚ್ಛಪ (ಆಮೆ) ರೂಪವನ್ನು ತಾಳಿ ತನ್ನ ಬೆನ್ನಮೇಲೆ ಮಂದರಾಚಲವನ್ನು ಹೊತ್ತುಕೊಂಡನು. ಆಗ ಸುತ್ತುತ್ತಿದ್ದ ಪರ್ವತದ ಉಜ್ಜುವಿಕೆಯಿಂದ ಬೆನ್ನನವೆಯು ಸ್ವಲ್ಪ ಕಡಿಮೆಯಾಗಿ ಸ್ವಾಮಿಗೆ ಕ್ಷಣಕಾಲ ಸುಖನಿದ್ದೆಗೆ ಅವಕಾಶವಾಯಿತು. ॥ 13 ॥

(ಶ್ಲೋಕ - 14)

ಮೂಲಮ್

ತ್ರೈವಿಷ್ಟಪೋರುಭಯಹಾ ಸ ನೃಸಿಂಹರೂಪಂ
ಕೃತ್ವಾ ಭ್ರಮದ್ಭ್ರುಕುಟಿದಂಷ್ಟ್ರ ಕರಾಲವಕಮ್ ।
ದೈತ್ಯೇಂದ್ರಮಾಶು ಗದಯಾಭಿಪತಂತಮಾರಾತ್
ಊರೌ ನಿಪಾತ್ಯ ವಿದದಾರ ನಖೈಃ ಸುರಂತಮ್ ॥

ಅನುವಾದ

ದೇವತೆಗಳ ಹಾಗೂ ಮೂರುಲೋಕಗಳ ಮಹಾಭಯವನ್ನು ಹೋಗಲಾಡಿಸಲು ಆ ದೇವದೇವನು ಅದುರುತ್ತಿರುವ ಹುಬ್ಬು ಗಳಿಂದಲೂ, ತೀಕ್ಷ್ಣವಾದ ಕೋರೆದಾಡೆಗಳಿಂದಲೂ, ಗಂಟುಹಾಕಿ ಕೊಂಡ ಮುಖದಿಂದ ಕೂಡಿ ಕಡುಭಯಂಕರವಾದ ನರಸಿಂಹ ರೂಪವನ್ನು ಧರಿಸಿದನು. ಆಗ ಗದೆಯನ್ನು ಎತ್ತಿಕೊಂಡು ತನ್ನ ಮೇಲೆ ಎರಗಿ ಬಂದ ದೈತ್ಯೇಂದ್ರನಾದ ಹಿರಣ್ಯಕಶಿಪುವನ್ನು ಬರಸೆಳೆದು ಕೊಂಡು ತನ್ನ ತೊಡೆಯಮೇಲೆ ಮಲಗಿಸಿಕೊಂಡು ಆತನನ್ನು ತನ್ನ ಹರಿತವಾದ ಉಗುರುಗಳಿಂದ ಸೀಳಿಹಾಕಿದನು. ॥ 14 ॥

(ಶ್ಲೋಕ - 15)

ಮೂಲಮ್

ಅಂತಃ ಸರಸ್ಯುರುಬಲೇನ ಪದೇ ಗೃಹೀತೋ
ಗ್ರಾಹೇಣ ಯೂಥಪತಿರಂಬುಜಹಸ್ತ ಆರ್ತಃ ।
ಆಹೇದಮಾದಿಪುರುಷಾಖಿಲಲೋಕನಾಥ
ತೀರ್ಥಶ್ರವಃ ಶ್ರವಣಮಂಗಲನಾಮಧೇಯ ॥

(ಶ್ಲೋಕ - 16)

ಮೂಲಮ್

ಶ್ರುತ್ವಾ ಹರಿಸ್ತಮರಣಾರ್ಥಿನಮಪ್ರಮೇಯ-
ಶ್ಚಕ್ರಾಯುಧಃ ಪತಗರಾಜಭುಜಾರೂಢಃ ।
ಚಕ್ರೇಣ ನಕ್ರವದನಂ ವಿನಿಪಾಟ್ಯ ತಸ್ಮಾ-
ದ್ಧಸ್ತೇ ಪ್ರಗೃಹ್ಯ ಭಗವಾನ್ಕೃಪಯೋಜ್ಜಹಾರ ॥

ಅನುವಾದ

ಒಂದು ಭಾರೀ ದೊಡ್ಡ ಸರೋವರದಲ್ಲಿ ಮಹಾಬಲಶಾಲಿ ಯಾದ ಗಜರಾಜನ ಕಾಲನ್ನು ಒಂದು ಮೊಸಳೆಯು ಬಲವಾಗಿ ಹಿಡಿದುಕೊಂಡಿತು. ಗಜರಾಜನು ಅದರೊಡನೆ ಸೆಣಸಾಡುತ್ತಾ ಸೋತು ಆಯಾಸಗೊಂಡು, ಗಾಬರಿಯಾದಾಗ, ಆ ಗಜರಾಜನು ಸೊಂಡಿಲಿನಲ್ಲಿ ಕಮಲವೊಂದನ್ನು ಮೇಲೆತ್ತಿ ಹಿಡಿದುಕೊಂಡು ‘ಓ ಆದಿಪುರುಷನೇ! ಸಕಲ ಲೋಕಗಳ ಸ್ವಾಮಿಯೇ ! ಪುಣ್ಯ ಕೀರ್ತಿಯೇ! ಶ್ರವಣಮಂಗಳವಾದ ನಾಮಧೇಯವುಳ್ಳ ನಾರಾಯಣನೇ! ಎಂದು ಕೂಗಿಡಲು ಒಡನೆಯೇ ಆ ಕೂಗನ್ನು ಕೇಳಿದ ಅನಂತಶಕ್ತಿಯಾದ ಶ್ರೀಹರಿಯು ಅಲ್ಲಿಗೆ ಚಕ್ರಪಾಣಿಯಾಗಿ, ಪಕ್ಷಿರಾಜ ಗರುಡನ ಬೆನ್ನೇರಿ ಬಂದು ತನ್ನ ಚಕ್ರದಿಂದ ನಕ್ರದ ಬಾಯನ್ನು ಸೀಳಿಹಾಕಿ ಆ ಗಜೇಂದ್ರನನ್ನು ಕರುಣೆಯಿಂದ ಕೈ ಹಿಡಿದು ಕಾಪಾಡಿದನು ಮತ್ತು ಅದಕ್ಕೆ ಮುಕ್ತಿಯನ್ನು ಕರುಣಿಸಿದನು.॥15-16॥

(ಶ್ಲೋಕ - 17)

ಮೂಲಮ್

ಜ್ಯಾಯಾನ್ಗುಣೈರವರಜೋಪ್ಯದಿತೇಃ ಸುತಾನಾಂ
ಲೋಕಾನ್ವಿಚಕ್ರಮ ಇಮಾನ್ಯದಥಾಯಜ್ಞಃ ।
ಕ್ಷ್ಮಾಂ ವಾಮನೇನ ಜಗೃಹೇ ತ್ರಿಪದಚ್ಛಲೇನ
ಯಾಂಚಾಮೃತೇ ಪಥಿ ಚರನ್ಪ್ರಭುಭಿರ್ನ ಚಾಲ್ಯಃ ॥

(ಶ್ಲೋಕ - 18)

ಮೂಲಮ್

ನಾರ್ಥೋ ಬಲೇರಯಮುರುಕ್ರಮಪಾದಶೌಚ-
ಮಾಪಃ ಶಿಖಾಧೃತವತೋ ವಿಬುಧಾಪತ್ಯಮ್ ।
ಯೋ ವೈಪ್ರತಿಶ್ರುತಮೃತೇ ನ ಚಿಕೀರ್ಷದನ್ಯ-
ದಾತ್ಮಾನಮಂಗ ಶಿರಸಾ ಹರಯೇಭಿಮೇನೇ ॥

ಅನುವಾದ

ಅದಿತಿಯ ಪುತ್ರರಲ್ಲಿ ಅತ್ಯಂತ ಕಿರಿಯವನಾದರೂ ಗುಣಗಳಲ್ಲಿ ಎಲ್ಲರಿಗಿಂತಲೂ ಹಿರಿಯನಾದ ದೇವದೇವನವನು. ವಾಮನ ಮೂರ್ತಿಯಾಗಿ ಬಲಿಚಕ್ರವರ್ತಿಯಿಂದ ತನ್ನ ಮೂರು ಹೆಜ್ಜೆಗಳ ಅಳತೆಯಷ್ಟು ಭೂಮಿಯನ್ನು ಬೇಡಿ ತೆಗೆದುಕೊಳ್ಳುವ ನೆಪಹೂಡಿ ತ್ರಿವಿಕ್ರಮನಾಗಿ ಬೆಳೆದು, ಮೂರು ಹೆಜ್ಜೆಗಳಿಂದ ತ್ರಿಲೋಕಗಳನ್ನು ಅಳೆದು ಆಕ್ರಮಿಸಿಬಿಟ್ಟನು. ಭಗವಂತನು ಆತನಿಂದ ಭೂಮಿಯನ್ನು ಬೇಡಿಯೇ ಪಡೆದನೇಕೆಂದರೆ ಬಲಿಯು ಎಂದಿಗೂ ಸನ್ಮಾರ್ಗ ವನ್ನು ಬಿಟ್ಟವನಲ್ಲ. ಅಂತಹ ಸಜ್ಜನ ಶಿರೋಮಣಿಗಳನ್ನು ಅವರ ಸ್ಥಾನದಿಂದ, ಐಶ್ವರ್ಯದಿಂದ ಕದಲಿಸಬೇಕಾದರೆ ಎಂತಹ ಸಮರ್ಥರಿಗಾದರೂ ಯಾಚನೆಯೊಂದೇ ಉಪಾಯ. ಬೇರಾವ ಉಪಾಯವೂ ಇಲ್ಲ ಎಂಬ ತತ್ತ್ವವನ್ನು ಆ ಮೂಲಕ ಸ್ವಾಮಿಯು ತೋರಿಸಿದನು. ವಾಸ್ತವವಾಗಿ ಬಲೀಂದ್ರನಿಗೆ ಇಂದ್ರಪದವಿಯಿಂದ ಯಾವ ಪುರುಷಾರ್ಥವೂ ಆಗಬೇಕಾಗಿರಲಿಲ್ಲ. ಏಕೆಂದರೆ, ಅವನು ಸಾಕ್ಷಾತ್ ತ್ರಿವಿಕ್ರಮಸ್ವಾಮಿಯ ಶ್ರೀಪಾದಪದ್ಮತೀರ್ಥವನ್ನೇ ಶಿರಸ್ಸಿ ನಲ್ಲಿ ಧರಿಸಿ ಧನ್ಯನಾಗಿದ್ದನು.* ಅವನ ಸತ್ಯನಿಷ್ಠೆ ಎಂತಹುದು ! ವಟು ವಾಮನನಿಗೆ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಕೊಡು ವುದಾಗಿ ತಾನು ಮಾಡಿದ್ದ ವಾಗ್ದಾನವನ್ನು ಗುರುಗಳಾದ ಶುಕ್ರಾ ಚಾರ್ಯರು ತಡೆದರೂ ತನ್ನ ಮಾತಿಗೆ ವಿರುದ್ಧವಾಗಿ ನಡೆಯಲಿಲ್ಲ. ಭಗವಂತನಿಗೆ ಮೂರನೆಯ ಹೆಜ್ಜೆಯ ಜಾಗವನ್ನು ಕೊಡುವುದಕ್ಕಾಗಿ ಆತನ ಪಾದವನ್ನು ತನ್ನ ಶಿರಸ್ಸಿನಲ್ಲಿರಿಸಿಕೊಂಡು ತನ್ನನ್ನೇ ಪೂರ್ಣ ವಾಗಿ ಆತ್ಮಸಮರ್ಪಣೆ ಮಾಡಿದ ಮಹಾತ್ಮನವನು.** ॥ 17-18 ॥

ಟಿಪ್ಪನೀ
  • ಬಲಿಚಕ್ರವರ್ತಿಯ ಮಹಾರಾಣಿ ವಿಂಧ್ಯಾವಳಿಯು ಸ್ವರ್ಣಕಲಶದಲ್ಲಿ ಕುಂಕುಮ-ಚಂದನಮಿಶ್ರಿತ ಜಲವನ್ನು ತೆಗೆದುಕೊಂಡು ಬಂದಳು. ಚಕ್ರವರ್ತಿ ಬಲಿಯು ಬಹಳ ಭಕ್ತಿ-ಶ್ರದ್ಧೆಯಿಂದ ಭಗವಂತನ ಪುಟ್ಟದಾದ ಸುಕೋಮಲ ಚರಣಕಮಲಗಳನ್ನು ಹರ್ಷಾತಿರೇಕದಿಂದ ಅಶ್ರುಪೂರಿತ ನಯನಗಳಿಂದ ಭಾವವಿಹ್ವಲನಾಗಿ ತೊಳೆದನು. ಆ ಚರಣೋದಕವನ್ನು ಪತ್ನಿಯೊಂದಿಗೆ ತಾನು ಪಾನಮಾಡಿ, ಅರಮನೆಯಲ್ಲೆಲ್ಲ ಸಿಂಪಡಿಸಿದನು.
    ** ಬಲಿ ಚಕ್ರವರ್ತಿಯು ಆತ್ಮನಿವೇದನೆ ಮಾಡಿದರೆ, ಭಕ್ತರ-ಭಕ್ತನಾದ ಭಗವಂತನೂ ಕೂಡ ತನ್ನನ್ನೇ ಆತನಿಗೆ ಕೊಟ್ಟುಕೊಂಡು, ಅವನ ಬಾಗಿಲನ್ನು ಕಾದನು. ಭಗವದ್ಗೀತೆಯಲ್ಲಿ ಭಗವಂತನು ಹೇಳಿರುವನು
    ಯೇ ಯಥಾಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥
    (ಭಗವದ್ಗೀತೆ 4/11)
    ಹೇ ಅರ್ಜುನನೇ ! ಯಾವ ಭಕ್ತರು ನನ್ನನ್ನು ಯಾವ ಭಾವದಿಂದ ಭಜಿಸುತ್ತಾರೋ ಅವರನ್ನು ನಾನು ಕೂಡ ಅದೇ ಭಾವದಿಂದ ಭಜಿಸುತ್ತೇನೆ; ಏಕೆಂದರೆ ಮನುಷ್ಯರೆಲ್ಲರೂ ಎಲ್ಲ ಪ್ರಕಾರದಿಂದ ನನ್ನ ಮಾರ್ಗವನ್ನೇ ಅನುಸರಿಸುತ್ತಾರೆ.
    ಇದೊಂದು ಉಪಾಖ್ಯಾನವನ್ನು ಮಹಾತ್ಮರು ಹೇಳುತ್ತಾರೆ ಭಗವಂತನು ಬಲಿಯ ಮನೆಯಲ್ಲಿ ದ್ವಾರಪಾಲಕನಾದನು. ಅತ್ತ ಲಕ್ಷ್ಮಿಯು ನೋಡುತ್ತಾಳೆ ನನ್ನ ಸ್ವಾಮಿಯು ಬಲಿಯ ಬಳಿಗೆ ವಾಮನನಾಗಿ ಹೋಗಿ ಭೂಮಿಯನ್ನು ಬೇಡಿದನು. ಅದರಿಂದ ಈಗ ಅವನಿಗೆ ಸೇವಕನಾಗಬೇಕಾಯಿತು. ಹೀಗಿರುವಾಗ ಲಕ್ಷ್ಮೀದೇವಿಯೂ ಬಲಿಯಬಳಿಗೆ ಬಂದಳು. ಆಕೆಯ ಪತಿಯು ಮೂರು ಅಡಿ ಭೂಮಿಯನ್ನು ಬೇಡಿದ್ದನು. ಆದರೆ ಈಕೆಯು ಇನ್ನೊಂದು ರೀತಿಯಿಂದ ಅದ್ಭುತವಾಗಿರುವಂತಹುದನ್ನು ಯಾಚಿಸಿದಳು. ಲಕ್ಷ್ಮಿಯು ಬಲಿಯ ಬಳಿ ಹೇಳಿದಳು ‘ನನಗೆ ಯಾರೂ ಅಣ್ಣ-ತಮ್ಮಂದಿರು ಇಲ್ಲ. ನೀನು ನನಗೆ ಅಣ್ಣನಾಗು. ಬಲಿಯು ಒಪ್ಪಿ, ಲಕ್ಷ್ಮಿಗೆ ಅಣ್ಣನಾದನು; ಲಕ್ಷ್ಮಿಯು ತಂಗಿಯಾದಳು. ಆಕೆಯು ಬಲಿಯ ಅರಮನೆಯಲ್ಲೇ ವಾಸಿಸಿದಳು. ರಕ್ಷಾಬಂಧನದ ದಿನ ಬಂತು. ತಂಗಿ ಹೇಳಿದಳು ಅಣ್ಣಾ ! ಇಂದು ನಾನು ನಿನಗೆ ರಾಖಿ ಕಟ್ಟುವೆನು. ಇದರಿಂದ ತಂಗಿಯು ಅಣ್ಣನ ಕ್ಷೇಮವನ್ನು ಬಯಸುತ್ತಾಳೆ. ಬಲಿ ಹೇಳಿದ ಸರಿ, ಹಾಗಾದರೆ ರಾಖಿಕಟ್ಟು. ಲಕ್ಷ್ಮಿಯು ಪ್ರೇಮದಿಂದ ಅಣ್ಣನಿಗೆ ರಾಖಿಯನ್ನು ಕಟ್ಟಿದಳು ಹಾಗೂ ಉಡುಗೊರೆಯನ್ನು ಕೇಳಿದಳು. ಏನು ಕೊಡಲಿ ? ಲಕ್ಷ್ಮೀ ಹೇಳಿದಳು ನನ್ನ ಸ್ವಾಮಿಯು ನಿನ್ನಲ್ಲಿ ದ್ವಾರಪಾಲಕನಾಗಿದ್ದಾರೆ. ನಾನು ಅವರನ್ನು ಕರಕೊಂಡು ಹೋಗಲೆಂದೇ ಬಂದಿರುವೆನು. ಭಗವಂತನು ಸರ್ವವ್ಯಾಪಕನು. ಅವನು ಬಲಿಚಕ್ರವರ್ತಿಯ ಬಳಿಯೂ ಇದ್ದಾನೆ.
    ಬಲಿರಾಜನ ಹೆಸರು ಮತ್ತು ಕೀರ್ತಿ ಮೂರು ಲೋಕಗಳಲ್ಲಿಯೂ ವ್ಯಾಪಿಸಿದೆ. ಅವನ ಹೆಸರು ಪುಣ್ಯಶ್ಲೋಕರಲ್ಲಿ ಹಾಗೂ ಚಿರಂಜೀವಿಗಳಲ್ಲಿ ಹೇಳುತ್ತಾರೆ. ಇವನು ಅತ್ಯಂತ ಉದಾರನೂ, ಭಕ್ತಿಯಲ್ಲಿ ಅಗ್ರೇಸರನಾಗಿದ್ದಾನೆ. ಪ್ರಹ್ಲಾದನ ಮೊಮ್ಮಗನಾಗಿದ್ದು ಭಗವಂತನ ಕೃಪೆಗೆ ಪಾತ್ರನಾಗಿದ್ದಾನೆ. ಅವನ ಕುರಿತು ಹೇಳಿದಷ್ಟು ಕಡಿಮೆಯೇ. ಇಲ್ಲಿ ಭಕ್ತ ಮತ್ತು ಭಗವಂತನ ಪ್ರೇಮವನ್ನು ಬಹಳ ಸಂಕ್ಷೇಪವಾಗಿ ಆನಂದಸಾಗರದಲ್ಲಿ ಒಂದು ಮುಳುಗುಹಾಕಿದಂತೆ ಬರೆಯಲಾಗಿದೆ. ಬಲಿಚಕ್ರವರ್ತಿಯ ಪ್ರಸಂಗಬಂದಾಗ ಶ್ರೀಶುಕಮಹಾಮುನಿಗಳ ಹೃದಯ ತುಂಬಿಬರುತ್ತದೆ. ಇದೇ ಕಾರಣದಿಂದ ಬಲಿಯು ಆತ್ಮನಿವೇದನೆ ಮಾಡಿರುವನು ಎಂದು ಅವರು ಹೇಳಿರುವರು. ಇದೇ ಅವನಿಗಾಗಿ ದೊಡ್ಡ ಗೌರವ ಮತ್ತು ಪುರುಷಾರ್ಥದ ಮಾತಾಗಿದೆ ಎಂದು ವಿಶೇಷವಾಗಿ ಗಮನಕೊಡಬೇಕು.

(ಶ್ಲೋಕ - 19)

ಮೂಲಮ್

ತುಭ್ಯಂ ಚ ನಾರದ ಭೃಶಂ ಭಗವಾನ್ವಿವೃದ್ಧ-
ಭಾವೇನ ಸಾಧುಪರಿತುಷ್ಟ ಉವಾಚ ಯೋಗಮ್ ।
ಜ್ಞಾನಂ ಚ ಭಾಗವತಮಾತ್ಮಸತತ್ತ್ವದೀಪಂ
ಯದ್ವಾಸುದೇವಶರಣಾ ವಿದುರಂಜಸೈವ ॥19॥

ಅನುವಾದ

ನಾರದನೇ! ನಿನ್ನ ಭಕ್ತಿ-ಭಾವಕ್ಕೆ ಒಲಿದ ಆ ಭಗವಂತನು ಹಂಸ ರೂಪಿಯಾಗಿ ನಿನಗೆ ಯೋಗಜ್ಞಾನ ಮತ್ತು ಆತ್ಮತತ್ತ್ವವನ್ನು ಪ್ರಕಾಶ ಪಡಿಸುವ ಭಾಗವತ ಧರ್ಮವನ್ನು ಉಪದೇಶಮಾಡಿದ್ದನಷ್ಟೆ! ಆ ಧರ್ಮವು ಶ್ರೀವಾಸುದೇವನಲ್ಲಿ ಶರಣಾಗತರಾದ ಭಕ್ತರಿಗೆ ಮಾತ್ರ ಸುಲಭವಾಗಿ ದೊರೆಯುವಂತಹುದು. ॥ 19 ॥

(ಶ್ಲೋಕ - 20)

ಮೂಲಮ್

ಚಕ್ರಂ ಚ ದಿಕ್ಷ್ವವಿಹತಂ ದಶಸು ಸ್ವತೇಜೋ
ಮನ್ವಂತರೇಷು ಮನುವಂಶಧರೋ ಬಿಭರ್ತಿ ।
ದುಷ್ಟೇಷು ರಾಜಸು ದಮಂ ವ್ಯದಧಾತ್ಸ್ವಕೀರ್ತಿಂ
ಸತ್ಯೇ ತ್ರಿಪೃಷ್ಠ ಉಶತೀಂ ಪ್ರಥಯಂಶ್ಚರಿತ್ರೈಃ ॥

ಅನುವಾದ

ಅದೇ ಭಗವಂತನು ಸ್ವಾಯಂಭುವ ಮುಂತಾದ ಮನ್ವಂತರ ಗಳಲ್ಲಿ ಮನುವಿನ ರೂಪದಲ್ಲಿ ಅವತರಿಸಿ ಹತ್ತು ದಿಕ್ಕುಗಳಲ್ಲಿಯೂ ಸುದರ್ಶನಚಕ್ರಕ್ಕೆ ಸಮಾನವಾದ ತನ್ನ ತೇಜಸ್ವಿನಿಂದ ಯಾವ ಅಡೆ-ತಡೆ ಇಲ್ಲದೆ ನಿಷ್ಕಂಟಕ ರಾಜ್ಯಭಾರ ಮಾಡುತ್ತಾನೆ. ಆತನ ಪುಣ್ಯಚರಿತ್ರೆಯ ಕೀರ್ತಿಯು ಮೂರು ಲೋಕಗಳ ಮೇಲಿರುವ ಸತ್ಯಲೋಕದವರೆಗೂ ಹರಡುತ್ತದೆ. ತನ್ನ ಆ ರೂಪದಲ್ಲಿ ಅವನು ಕಾಲ-ಕಾಲಗಳಲ್ಲಿ ಭೂಮಿಗೆ ಭಾರವಾಗುವ ದುಷ್ಟರಾಜರ ನಿಗ್ರಹ ವನ್ನೂ ಮಾಡುವನು. ॥ 20 ॥

(ಶ್ಲೋಕ - 21)

ಮೂಲಮ್

ಧನ್ವಂತರಿಶ್ಚ ಭಗವಾನ್ ಸ್ವಯಮೇವ ಕೀರ್ತಿ-
ರ್ನಾಮ್ನಾ ನೃಣಾಂ ಪುರುರುಜಾಂ ರುಜ ಆಶು ಹಂತಿ ।
ಯಜ್ಞೇ ಚ ಭಾಗಮಮೃತಾಯುರವಾವರುಂಧ
ಆಯುಶ್ಚ ವೇದಮನುಶಾಸ್ತ್ಯವತೀರ್ಯ ಲೋಕೇ ॥

ಅನುವಾದ

ಧನ್ಯಕೀರ್ತಿಯಾದ ಭಗವಾನ್ ಧನ್ವಂತರಿಯೂ ಅವನ ಅವ ತಾರವೇ. ಆತನು ತನ್ನ ನಾಮದಿಂದಲೇ ದೊಡ್ಡ-ದೊಡ್ಡ ರೋಗಿಗಳ ರೋಗಗಳನ್ನು ಶೀಘ್ರದಲ್ಲೇ ನಾಶಪಡಿಸುವನು. ದೇವತೆಗಳಿಗೆ ಅಮೃತ ವನ್ನು ಪಾನಮಾಡಿಸಿ ಅವರನ್ನು ಅಮರರನ್ನಾಗಿಸಿದನು. ದೈತ್ಯರು ಅಪಹರಿಸಿದ ಅವರ ಯಜ್ಞಭಾಗವನ್ನು ಮರಳಿಕೊಡಿಸಿದನು. ಈ ಲೋಕದಲ್ಲಿ ಅವತಾರಮಾಡಿ ಆಯುರ್ವೇದವನ್ನು ಪ್ರವರ್ತನೆ ಮಾಡಿದನು. ॥ 21 ॥

(ಶ್ಲೋಕ - 22)

ಮೂಲಮ್

ಕ್ಷತ್ರಂ ಕ್ಷಯಾಯ ವಿನೋಪಭೃತಂ ಮಹಾತ್ಮಾ
ಬ್ರಹ್ಮಧ್ರುಗುಜ್ಝಿತಪಥಂ ನರಕಾರ್ತಿಲಿಪ್ಸು ।
ಉದ್ಧಂತ್ಯ ಸಾವವನಿಕಂಟಕಮುಗ್ರವೀರ್ಯ-
ತ್ರಿಃಸಪ್ತಕೃತ್ವ ಉರುಧಾರಪರಶ್ವಧೇನ ॥

ಅನುವಾದ

ಬ್ರಹ್ಮದ್ರೋಹಿಗಳಾಗಿ, ಆರ್ಯ ಮರ್ಯಾದೆಯನ್ನು ಉಲ್ಲಂಘಿ ಸುವ, ನರಕಕ್ಕೆ ಯೋಗ್ಯರಾದ ದುಷ್ಟಕ್ಷತ್ರಿಯರು ಪ್ರಪಂಚದಲ್ಲಿ ಹೆಚ್ಚಾದಾಗ, ಭಗವಂತನು ಮಹಾಪರಾಕ್ರಮಿ ಪರಶುರಾಮನ ರೂಪದಲ್ಲಿ ಅವತಾರಮಾಡಿ ಹರಿತವಾದ ತನ್ನ ಗಂಡುಗೊಡಲಿ ಯಿಂದ ಇಪ್ಪತ್ತೊಂದು ಬಾರಿ ಅವರನ್ನು ಸಂಹರಿಸುತ್ತಾನೆ. ॥ 22 ॥

(ಶ್ಲೋಕ - 23)

ಮೂಲಮ್

ಅಸ್ಮತ್ಪ್ರಸಾದಸುಮುಖಃ ಕಲಯಾ ಕಲೇಶ
ಇಕ್ಷ್ವಾಕುವಂಶ ಅವತೀರ್ಯ ಗುರೋರ್ನಿದೇಶೇ ।
ತಿಷ್ಠನ್ವನಂ ಸದಯಿತಾನುಜ ಆವಿವೇಶ
ಯಸ್ಮಿನ್ವಿರುಧ್ಯ ದಶಕಂಧರ ಆರ್ತಿಮಾರ್ಚ್ಛತ್ ॥

ಅನುವಾದ

ಪರಿಪೂರ್ಣನಾದ ಭಗವಂತನು ನಮ್ಮನ್ನು ಅನುಗ್ರಹಿಸು ವುದಕ್ಕಾಗಿ ತನ್ನ ಅಂಶಕಲೆಗಳಾದ ಭರತ-ಲಕ್ಷಣ- ಶತ್ರುಘ್ನರೊಡನೆ ಶ್ರೀರಾಮಚಂದ್ರನ ರೂಪದಲ್ಲಿ ಇಕ್ಷ್ವಾಕುವಂಶದಲ್ಲಿ ಅವತರಿಸಿ ದನು. ಈ ಅವತಾರದಲ್ಲಿ ಅವನು ತನ್ನ ತಂದೆಯ ಆಜ್ಞೆಯನ್ನು ಪಾಲಿಸಲಿಕ್ಕಾಗಿ ತನ್ನ ಪತ್ನೀ ಮತ್ತು ತಮ್ಮನೊಡನೆ ಅರಣ್ಯದಲ್ಲಿ ವಾಸಿಸಿದನು. ಆಗಲೇ ಅವನಲ್ಲಿ ವಿರೋಧ ಬೆಳೆಸಿಕೊಂಡ ದುಷ್ಟ ದಶಾನನನು ಅವನ ಕೈಯಿಂದ ಹತನಾದನು. ॥ 23 ॥

(ಶ್ಲೋಕ - 24)

ಮೂಲಮ್

ಯಸ್ಮಾ ಅದಾದುದರೂಢಭಯಾಂಗವೇಪೋ
ಮಾರ್ಗಂ ಸಪದ್ಯರಿಪುರಂ ಹರವದ್ ದಿಧಕ್ಷೋಃ ।
ದೂರೇಸುಹೃನ್ಮಥಿತರೋಷಸುಶೋಣದೃಷ್ಟ್ಯಾ
ತಾತಪ್ಯಮಾನಮಕರೋರಗನಕ್ರಚಕ್ರಃ ॥

ಅನುವಾದ

ತ್ರಿಪುರಾ ಸುರರ ವಿಮಾನವನ್ನು ಸುಟ್ಟುಹಾಕಲು ಬಯಸಿದ ರುದ್ರನಂತೆ ಕ್ರುದ್ಧನಾಗಿ ಶ್ರೀರಾಮನು ಶತ್ರುನಗರಿಯನ್ನು ಧ್ವಂಸಮಾಡುವು ದಕ್ಕಾಗಿ ಸಮುದ್ರತೀರಕ್ಕೆ ಬಂದಾಗ ಸೀತಾವಿಯೋಗದಿಂದ ವೃದ್ಧಿ ಗೊಂಡ ಕ್ರೋಧಾಗ್ನಿಯಿಂದ ಕೆಂಪೇರಿದ ಆತನ ದೃಷ್ಟಿಮಾತ್ರ ದಿಂದಲೇ ಸಮುದ್ರದಲ್ಲಿರುವ ಮೀನು, ಮೊಸಳೆ, ಸರ್ಪಗಳೇ ಮುಂತಾದ ಜಲಚರಗಳು ಉರಿದುಹೋಗಲು ತೊಡಗುತ್ತವೆ. ಆಗ ಸಮುದ್ರರಾಜನು ಗಡ-ಗಡನೆ ನಡುಗುತ್ತಾ, ಒಡನೆಯೇ ಒಡೆಯನಿಗೆ ದಾರಿಮಾಡಿಕೊಡುತ್ತಾನೆ. ॥ 24 ॥

(ಶ್ಲೋಕ - 25)

ಮೂಲಮ್

ವಕ್ಷಃಸ್ಥಲಸ್ಪರ್ಶರುಗ್ಣಮಹೇಂದ್ರವಾಹ-
ದಂತೈರ್ವಿಡಂಬಿತಕಕುಬ್ಜುಷ ಊಢಹಾಸಮ್ ।
ಸದ್ಯೋಸುಭಿಃ ಸಹ ವಿನೇಷ್ಯತಿ ದಾರಹರ್ತು-
ರ್ವಿಸೂರ್ಜಿತೈರ್ಧನುಷ ಉಚ್ಚರತೋಸೈನ್ಯೇ ॥

ಅನುವಾದ

ರಾವಣನು ಅತಿಪರಾಕ್ರಮಿ ಯಾಗಿ ದುರಹಂಕಾರದಿಂದ ಬೀಗಿ ಮೆರೆಯುತ್ತಿ ದ್ದನು. ಆತನು ಇಂದ್ರನೊಡನೆ ಯುದ್ಧಮಾಡುತ್ತಿದ್ದಾಗ ಇಂದ್ರನ ವಾಹನ ಐರಾವತದ ದಂತಗಳು ಅವನ ಕಠೋರವಾದ ಎದೆಗೆ ತಗುಲಿ ಚೂರು-ಚೂರಾಗಿ ನಾಲ್ಕೂ ದಿಕ್ಕುಗಳಲ್ಲಿ ಹರಡಿಕೊಂಡು ದಿಕ್ಕುಗಳೆಲ್ಲ ಬೆಳ್ಳಗಾಗಿದ್ದವು. ದಿಗ್ವಿಜಯೀ ರಾವಣನು ದುರ ಹಂಕಾರದಿಂದ ಉಬ್ಬಿ ನಗುತ್ತಿದ್ದನು. ಆದರೆ ಆ ರಾವಣನೇ ಶ್ರೀರಾಮ ದೇವರ ಪತ್ನಿಯಾದ ಸೀತಾದೇವಿಯನ್ನು ಅಪಹರಿಸಿ ರಣ ರಂಗದಲ್ಲಿ ಗರ್ವದಿಂದ ಅವನನ್ನು ಎದುರಿಸಲು ಬಂದಾಗ ಶ್ರೀರಾಮನ ಧನುಷ್ಟಂಕಾರದಿಂದಲೇ ಅವನ ಅಹಂಕಾರವು ಪ್ರಾಣ ಗಳೊಡನೆ ವಿಲೀನವಾಗಿತ್ತು. ॥ 25 ॥

(ಶ್ಲೋಕ - 26)

ಮೂಲಮ್

ಭೂಮೇಃ ಸುರೇತರವರೂಥವಿಮರ್ದಿತಾಯಾಃ
ಕ್ಲೇಶವ್ಯಯಾಯ ಕಲಯಾ ಸಿತಕೃಷ್ಣಕೇಶಃ ।
ಜಾತಃ ಕರಿಷ್ಯತಿ ಜನಾನುಪಲಕ್ಷ್ಯಮಾರ್ಗಃ
ಕರ್ಮಾಣಿ ಚಾತ್ಮಮಹಿಮೋಪನಿಬಂಧನಾನಿ ॥

ಅನುವಾದ

ದೈತ್ಯರ ದಂಡುಗಳು ಭೂದೇವಿಯನ್ನು ಮೆಟ್ಟಿ ತುಳಿದುಹಾಕ ತೊಡಗಿದಾಗ ಆಕೆಯ ಭಾರವನ್ನು ಇಳಿಸುವುದಕ್ಕಾಗಿ ಭಗವಂತನು ತನ್ನ ಬಿಳಿಯ ಮತ್ತು ಕಪ್ಪು ಕೇಶಗಳಿಂದ ಬಲರಾಮ ಹಾಗೂ ಶ್ರೀಕೃಷ್ಣರ ರೂಪಗಳಲ್ಲಿ ಕಲಾವತಾರವನ್ನು ಸ್ವೀಕರಿಸುವನು.* ಇವರಿಬ್ಬರೂ ಆನಂದದ ನಿಗಳಾಗಿದ್ದಾರೆ. ಆ ಅವತಾರದಲ್ಲಿ ತನ್ನ ಮಹಿಮೆಯನ್ನು ಪ್ರಕಟಪಡಿಸುವಂತಹ ಅನೇಕ ಅದ್ಭುತವಾದ ಕರ್ಮಗಳನ್ನು ಮಾಡುವನು. ಲೋಕದ ಜನರು ಆ ಲೀಲೆಗಳ ರಹಸ್ಯವನ್ನು ಸ್ವಲ್ಪವೂ ತಿಳಿದುಕೊಳ್ಳಲಾರರು. ಅವನ ಅದ್ಭುತ ಚರಿತ್ರವೇ ಅವನ ಮಹಿಮೆಯನ್ನು ಮತ್ತು ಅವನ ಭಗವತ್ತತೆಯನ್ನು ಪ್ರಕಟಪಡಿಸೀತು. ॥ 26 ॥

ಟಿಪ್ಪನೀ
  • ‘ಸಿತಕೃಷ್ಣಕೇಶಃ’ ‘ಸಿತ’ ಅಂದರೆ ಗೌರವರ್ಣ, ‘ಕೃಷ್ಣ’ ಅರ್ಥಾತ್ ಶ್ಯಾಮವರ್ಣ ಮತ್ತು ಕೇಶ, ಅರ್ಥಾತ್ ಕಂ-ಸುಖಮ್, ಈಶಃ = ನಿಃ ಅರ್ಥಾತ್ ಈ ಬಲರಾಮಕೃಷ್ಣರು ಇಬ್ಬರೂ ಆನಂದದ ನಿಗಳಾಗಿದ್ದಾರೆ. ಇವರನ್ನು ನೋಡಿದವನು ಆನಂದದಲ್ಲಿ ಮುಳುಗಿ ಇವರನ್ನೇ ನೋಡುತ್ತಾ ಇರುತ್ತಾನೆ. ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣನು ಶತ್ರುಗಳನ್ನು ನೋಡಿಯೇ ಅವರ ಆಯುಸ್ಸನ್ನು ಅಪಹರಿಸಿದನು. ಭಗವಾನ್ ಶ್ರೀರಾಮ ಮತ್ತು ಶ್ರೀಕೃಷ್ಣ ಎರಡೂ ಅವತಾರಗಳೂ ಸೌಂದರ್ಯ-ಮಾಧುರ್ಯಗಳ ನಿಯಾಗಿವೆ. ಪಶು-ಪಕ್ಷಿ, ಮನುಷ್ಯ, ದೇವತೆ, ಅಸುರರು ಮುಂತಾದವರು ಯಾರೇ ಇವರ ರೂಪವನ್ನು ನೋಡಿದಾಗ, ಅವರ ಚಿತ್ತವನ್ನು ಇವರು ಕಸಿದುಕೊಳ್ಳುವರು. ಮತ್ತೆ ಅವರ ಚಿತ್ತ ಅವರಬಳಿ ಇರುವುದಿಲ್ಲ.
    ಭಗವಾನ್ ಶ್ರೀಕೃಷ್ಣನು ಮುರಳಿಯನ್ನು ನುಡಿಸಿದಾಗ ಹಸುಗಳು ತಮ್ಮ ಕಿವಿಗಳನ್ನು ನಿಮಿರಿಕೊಂಡು ಅದನ್ನು ಆಸ್ವಾದಿಸುತ್ತವೆ. ನವಿಲುಗಳು ಕುಣಿಯತೊಡಗುತ್ತವೆ. ಸಾರಸ-ಹಂಸಗಳೇ ಮುಂತಾದ ಪಕ್ಷಿಗಳು ಸರೋವರದಲ್ಲಿ ರೆಪ್ಪೆ ಮಿಟುಕಿಸದೆ ಇವನನ್ನೇ ನೋಡುತ್ತವೆ. ಗೋಪಿಯರ ಕೆಲಸ-ಕಾರ್ಯಗಳು ನಿಂತುಹೋದುವು. ಅವರೆಲ್ಲರೂ ಇವನ ಚಿಂತನದಲ್ಲೇ ಮುಳುಗಿರುತ್ತಿದ್ದರು. ಭಗವಾನ್ ಶ್ರೀರಾಮನಿಗಾಗಿಯೂ ಮಹಾರಾಜ ಜನಕನ ದೂತನು ದಶರಥನಲ್ಲಿ ಹೇಳುತ್ತಾನೆ ‘‘ದೇವ ದೇಖಿ ತವ ಬಾಲಕ ದೋಊ, ಅಬ ನ ಆಂಖಿ ತರ ಆವತ ಕೋಊ ॥’’ (ರಾ.ಚ.ಮಾ.) ಅರ್ಥಾತ್ ಈಗ ಬೇರೆ ಏನೂ ಕಾಣಿಸದಷ್ಟು ಅವನು ಕಣ್ಣುಗಳಲ್ಲಿ ತುಂಬಿಹೋದನು. ಚಿಂತನೆಯಲ್ಲಿ ಅವನೇ ನೆಲೆಸಿದನು. ಭಗವಂತನ ಸೌಂದರ್ಯದ ಒಂದು ಬಿಂದುವಿನಿಂದ ಇಡೀ ವಿಶ್ವವು ತೃಪ್ತವಾಗುತ್ತಾ ಇದೆ. ಅವನಾದರೋ ಸೌಂದರ್ಯ-ಮಾಧುರ್ಯದ ಆಳವಾದ ಸಾಗರನಾಗಿದ್ದಾನೆ. ಭಗವಂತನಿಗೆ ಬೆಣ್ಣೆಕಳ್ಳ ಎಂಬುದೊಂದು ಹೆಸರಿದೆ. ಇದಾದರೋ ಬೆಣ್ಣೆಯ ಕುರಿತು ಲೋಕಪ್ರಸಿದ್ಧಿಯಲ್ಲಿ ಅನೇಕ ಅರ್ಥಗಳಿವೆ. ಆದರೆ ಸಂತರು ಇದೂ ಒಂದು ಅರ್ಥವನ್ನು ಹೇಳುತ್ತಾರೆ ಬೆಣ್ಣೆ ಅಂದರೆ ಹೃದಯ ಅಂದರೆ ಚಿತ್ತ-ಚಿತ್ತವನ್ನು ಅಪಹರಿಸುವುದರಲ್ಲಿ ಅಗ್ರಗಣ್ಯನಾಗಿದ್ದಾನೆ. ಚಿತ್ತವನ್ನು ಕದ್ದು ಅವನ ಜನ್ಮ-ಮೃತ್ಯುಗಳನ್ನೇ ನಾಶಮಾಡಿಬಿಡುತ್ತಾನೆ.

(ಶ್ಲೋಕ - 27)

ಮೂಲಮ್

ತೋಕೇನ ಜೀವಹರಣಂ ಯದುಲೂಕಿಕಾಯಾ-
ಸೈಮಾಸಿಕಸ್ಯ ಚ ಪದಾ ಶಕಟೋಪವೃತ್ತಃ ।
ಯದ್ ರಿಂಗತಾಂತರಗತೇನ ದಿವಿಸ್ಪೃ ಶೋರ್ವಾ
ಉನ್ಮೂಲನಂ ತ್ವಿತರಥಾರ್ಜುನಯೋರ್ನ ಭಾವ್ಯಮ್ ॥

ಅನುವಾದ

ಪುಟ್ಟ ಮಗುವಿರುವಾಗಲೇ ಪೂತನಾ ರಾಕ್ಷಸಿಯ ಪ್ರಾಣಗಳನ್ನಪಹರಿಸಿದ್ದು, ಹುಟ್ಟಿದ ಮೂರನೇ ತಿಂಗಳಲ್ಲೇ ತನ್ನ ಕಾಲಿನಿಂದ ದೊಡ್ಡ ಗಾಡಿಯನ್ನು ತಲೆಕೆಳಗು ಮಾಡಿದ್ದು, ಅಂಬೆ ಗಾಲು ಹಾಕುತ್ತಿದ್ದಾಗ ಆಕಾಶಕ್ಕೆ ಬೆಳೆದ ಯಮಳಾರ್ಜುನ ವೃಕ್ಷಗಳ ನಡುವೆ ಪ್ರವೇಶಿಸಿ, ಅದನ್ನು ಬೇರುಸಹಿತ ಕಿತ್ತುಹಾಕಿದ್ದು ಇಂತಹ ಪರಮಾದ್ಭುತಕಾರ್ಯಗಳನ್ನು ಭಗವಂತನಲ್ಲದೆ ಬೇರೆ ಯಾರೂ ಮಾಡಲಾರರು. ॥ 27 ॥

(ಶ್ಲೋಕ - 28)

ಮೂಲಮ್

ಯದ್ವೈ ವ್ರಜೇ ವ್ರಜಪಶೂನ್ವಿಷತೋಯಪೀಥಾನ್
ಪಾಲಾಂಸ್ತ್ವಜೀವಯದನುಗ್ರಹದೃಷ್ಟಿವೃಷ್ಟ್ಯಾ ।
ತಚ್ಛುದ್ಧಯೇತಿವಿಷವೀರ್ಯವಿಲೋಲಜಿಹ್ವ-
ಮುಚ್ಚಾಟಯಿಷ್ಯದುರಗಂ ವಿಹರನ್ ಹ್ರದಿನ್ಯಾಮ್ ॥

ಅನುವಾದ

ನಂದಗೋಕುಲದಲ್ಲಿ ಕಾಳಿಯ ನಾಗನ ವಿಷದಿಂದ ದೂಷಿತವಾಗಿದ್ದ ಯಮುನಾನದಿಯ ನೀರನ್ನು ಕುಡಿದು ಹಸು-ಕರುಗಳೂ ಗೋಪಾಲಕರೂ ಸತ್ತುಹೋಗುವರು. ಆಗ ಅವನು ತನ್ನ ಅಮೃತಮಯ ಅನುಗ್ರಹದೃಷ್ಟಿಯಿಂದಲೇ ಅವರೆ ಲ್ಲರನ್ನು ಬದುಕಿಸುವನು ಮತ್ತು ಯಮುನಾಜಲವನ್ನು ಶುದ್ಧ ಪಡಿಸುವುದಕ್ಕಾಗಿ ಆ ಮಡುವಿನಲ್ಲಿ ಧುಮುಕಿ ಅಲ್ಲಿ ವಿಹರಿಸಿ, ವಿಷದ ಶಕ್ತಿಯಿಂದ ನಾಲಿಗೆಗಳನ್ನು ಅಲ್ಲಾಡಿಸುತ್ತಿದ್ದ ಕಾಳಿಯ ನಾಗನನ್ನು ಅಲ್ಲಿಂದ ಓಡಿಸಿದ್ದು, ಇದು ಮನುಷ್ಯಕೃತ್ಯವೇ ? ॥ 28 ॥

(ಶ್ಲೋಕ - 29)

ಮೂಲಮ್

ತತ್ಕರ್ಮ ದಿವ್ಯಮಿವ ಯನ್ನಿಶಿ ನಿಃಶಯಾನಂ
ದಾವಾಗ್ನಿನಾ ಶುಚಿವನೇ ಪರಿದಹ್ಯಮಾನೇ ।
ಉನ್ನೆಷ್ಯತಿ ವ್ರಜಮತೋವಸಿತಾಂತಕಾಲಂ
ನೇತ್ರೇ ಪಿಧಾಯ್ಯ ಸಬಲೋನಗಮ್ಯವೀರ್ಯಃ ॥

ಅನುವಾದ

ಅಂದೇ ರಾತ್ರಿ ಎಲ್ಲರೂ ಯಮುನಾನದಿಯ ತೀರದಲ್ಲಿ ಮಲಗಿ ನಿದ್ರಿಸುತ್ತಿರುವಾಗ ಬೇಸಗೆಯ ಕಾಲವಾದ್ದರಿಂದ ಹತ್ತಿರದ ಕಾಡಿನ ಕಾಡ್ಗಿಚ್ಚಿನಿಂದ ಉರಿದುಹೋಗತೊಡಗಿದಾಗ ಬಲರಾಮ ದೇವ ರೊಡನೆ ಶ್ರೀಕೃಷ್ಣನು ಅಲ್ಲಿಗೆ ಹೋಗಿ ಪ್ರಾಣಾಪಾಯಕ್ಕೆ ಸಿಕ್ಕಿದ ಗೋವಳರನ್ನು ‘ಎಲ್ಲರೂ ಕಣ್ಣುಮುಚ್ಚಿಕೊಳ್ಳಿ’ ಎಂದು ಹೇಳಿ ಅವರನ್ನು ಕಿಚ್ಚಿನಿಂದ ಪಾರಾಗಿಸಿದನು. ಎಂತಹ ಅಲೌಕಿಕ ಲೀಲೆ ಇದು! ಅವನ ಶಕ್ತಿಯನ್ನು ವಾಸ್ತವವಾಗಿ ಚಿಂತಿಸುವುದಕ್ಕಾದರೂ ಸಾಧ್ಯವೇ ? ॥ 29॥

(ಶ್ಲೋಕ - 30)

ಮೂಲಮ್

ಗೃಹ್ಣೀತ ಯದ್ಯದುಪಬಂಧಮಮುಷ್ಯ ಮಾತಾ
ಶುಲ್ಬಂ ಸುತಸ್ಯ ನ ತು ತತ್ತದಮುಷ್ಯ ಮಾತಿ ।
ಯಜ್ಜೃಂಭತೋಸ್ಯ ವದನೇ ಭುವನಾನಿ ಗೋಪೀ
ಸಂವೀಕ್ಷ್ಯ ಶಂಕಿತಮನಾಃ ಪ್ರತಿಬೋತಾಸೀತ್ ॥

ಅನುವಾದ

ತಾಯಿ ಯಶೋದೆಯು ಶ್ರೀಕೃಷ್ಣನನ್ನು ಕಟ್ಟಿ ಹಾಕಲು ಯಾವ-ಯಾವುದೋ ಹಗ್ಗವನ್ನು ತಂದರೂ ಅದು ಆತನ ಹೊಟ್ಟೆಗೆ ಸುತ್ತಲು ಸಾಕಾಗದೆ ಎರಡು ಅಂಗುಲಗಳು ಕಡಿಮೆಯೇ ಆಗುವುದು. ಅವಳು ಕಟ್ಟಲಾಗದೆ ಇದ್ದಾಗ, ಅವನು ಆಕೆಯ ಮೇಲೆ ಕೃಪೆದೋರಿ ಸ್ವತಃ ಬಂಧನಕ್ಕೆ ಒಳಗಾದನು. ಇದರಿಂದ ಅವನಿಗೆ ‘ದಾಮೋದರ’ ಎಂಬ ಹೆಸರಾಯಿತು. ಅವನು ಆಕಳಿಸು ವಾಗ ಆತನ ಬಾಯೊಳಗೆ ಹದಿನಾಲ್ಕು ಲೋಕಗಳನ್ನೂ ಕಂಡು ಆಕೆಯು ಅತ್ಯಂತ ಭಯಗ್ರಸ್ತಳಾದಾಗ ಭಗವಂತನೇ ತನ್ನ ಸಂಕಲ್ಪದಿಂದ ತನ್ನ ಜ್ಞಾನವನ್ನು ಕರುಣಿಸಿದಾಗ, ತಾಯಿಯು ಅವನ ಪ್ರಭಾವವನ್ನು ಅರಿತು ಸಮಾಧಾನಗೊಳ್ಳುವಳು. ॥ 30 ॥

(ಶ್ಲೋಕ - 31)

ಮೂಲಮ್

ನಂದಂ ಚ ಮೋಕ್ಷ್ಯತಿ ಭಯಾದ್ವರುಣಸ್ಯ ಪಾಶಾ-
ದ್ಗೋಪಾನ್ಬಿಲೇಷು ಪಿಹಿ ತಾನ್ಮಯಸೂನುನಾ ಚ ।
ಅಹ್ನ್ಯಾಪೃತಂ ನಿಶಿ ಶಯಾನಮತಿಶ್ರಮೇಣ
ಲೋಕಂ ವಿಕುಂಠಮುಪನೇಷ್ಯತಿ ಗೋಕುಲಂ ಸ್ಮ ॥

ಅನುವಾದ

ಅವನು ತಂದೆ ನಂದಗೋಪನನ್ನು ಹೆಬ್ಬಾವಿನ ಭಯದಿಂದಲೂ, ವರುಣ ದೇವರ ಪಾಶದಿಂದಲೂ ಬಿಡಿಸುವನು. ಮಯಾಸುರನ ಪುತ್ರ ವ್ಯೋಮಾಸುರನು ಗೋಪಬಾಲಕರನ್ನು ಪರ್ವತದ ಗುಹೆಯಲ್ಲಿ ಬಚ್ಚಿಟ್ಟು ಸೆರೆಯಲ್ಲಿಟ್ಟಾಗ, ಅವರನ್ನು ಬಿಡುಗಡೆ ಮಾಡಿ ಕಾಪಾಡು ವನು. ಗೋಕುಲದ ಜನರು ಹಗಲು ದುಡಿಯುತ್ತಾ, ರಾತ್ರೆ ನಿದ್ರಿಸುತ್ತಾ ಯಾವ ಸಾಧನೆಯನ್ನೂ ಮಾಡದಿದ್ದರೂ ಅವರನ್ನು ತನ್ನ ಪರಮಧಾಮವಾದ ವೈಕುಂಠಕ್ಕೆ ಕೊಂಡುಹೋಗುವನು. ॥ 31 ॥

(ಶ್ಲೋಕ - 32)

ಮೂಲಮ್

ಗೋಪೈರ್ಮಖೇ ಪ್ರತಿಹತೇ ವ್ರಜವಿಪ್ಲವಾಯ
ದೇವೇಭಿವರ್ಷತಿ ಪಶೂನ್ ಕೃಪಯಾ ರಿರಕ್ಷುಃ ।
ಧರ್ತೋಚ್ಛಿಲೀಂಧ್ರಮಿವ ಸಪ್ತ ದಿನಾನಿ ಸಪ್ತ-
ವರ್ಷೋ ಮಹೀಧ್ರಮನಘೈಕಕರೇ ಸಲೀಲಮ್ ॥

ಅನುವಾದ

ಪುಣ್ಯಾತ್ಮನಾದ ನಾರದನೇ ! ಶ್ರೀಕೃಷ್ಣನ ಸಲಹೆಯಂತೆ ಗೋಪಾಲ ಕರು ಇಂದ್ರಯಜ್ಞವನ್ನು ನಿಲ್ಲಿಸಿದಾಗ, ಕ್ರುದ್ಧನಾದ ಇಂದ್ರನು ಇಡೀ ಗೋಕುಲವನ್ನು ಧ್ವಂಸಮಾಡಲಿಕ್ಕಾಗಿ ಭಯಂಕರ ಮಳೆಗರೆ ಯಲು, ಆ ಗೋವುಗಳನ್ನೂ, ಗೋವಳರನ್ನೂ ಕರುಣೆಯಿಂದ ರಕ್ಷಿಸಲು ಇನ್ನೂ ಏಳು ವರ್ಷವಯಸ್ಸಿನಲ್ಲಿ ಅವನು ಏಳು ದಿವಸ ಗಳ ಕಾಲ ಗೋವರ್ಧನ ಪರ್ವತವನ್ನು ನಾಯಿಕೊಡೆಯಂತೆ ಲೀಲಾಜಾಲವಾಗಿ ಒಂದೇ ಬೆರಳಿಂದ ಎತ್ತಿ ಹಿಡಿದುಕೊಂಡಿದ್ದು ಅದರ ಆಸರೆಯಲ್ಲಿ ಅವರನ್ನೆಲ್ಲಾ ಕಾಪಾಡುವನು. ॥ 32 ॥

(ಶ್ಲೋಕ - 33)

ಮೂಲಮ್

ಕ್ರೀಡನ್ವನೇ ನಿಶಿ ನಿಶಾಕರರಶ್ಮಿಗೌರ್ಯಾಂ
ರಾಸೋನ್ಮುಖಃ ಕಲಪದಾಯತಮೂರ್ಚ್ಛಿತೇನ ।
ಉದ್ಧೀಪಿತಸ್ಮರರುಜಾಂ ವ್ರಜಭೃದ್ವಧೂನಾಂ
ಹರ್ತುರ್ಹರಿಷ್ಯತಿ ಶಿರೋ ಧನದಾನುಗಸ್ಯ ॥

ಅನುವಾದ

ವೃಂದಾವನದ ಸುತ್ತಲೂ ಶುಭ್ರವಾದ ಬೆಳದಿಂಗಳು ಹರಡಿ ರುವ ರಮಣೀಯವಾದ ರಾತ್ರಿಯಲ್ಲಿ ರಾಸಕ್ರೀಡೆ ಯನ್ನಾಡುವ ಇಚ್ಛೆಯಿಂದ ಸ್ವಾಮಿಯು ಕೊಳಲಿನಿಂದ ಸಂಗೀತಸುಧೆಯನ್ನು ವರ್ಷಿಸತೊಡಗುವಾಗ ಪ್ರೇಮಪರವಶರಾಗಿ ಅಲ್ಲಿಗೆ ಬರುವ ಗೋಪಿಕೆಯರನ್ನು ಕುಬೇರನ ಸೇವಕನಾದ ಶಂಖಚೂಡನು ಅಪಹರಿಸುವಾಗ ಶ್ರೀಕೃಷ್ಣನು ಅವನ ಶಿರಚ್ಛೇದನಮಾಡಿ ಅವರನ್ನು ರಕ್ಷಿಸುವನು. ॥ 33 ॥

(ಶ್ಲೋಕ - 34)

ಮೂಲಮ್

ಯೇ ಚ ಪ್ರಲಂಬಖರದರ್ದುರಕೇಶ್ಯರಿಷ್ಟ-
ಮಲ್ಲೇಭಕಂಸಯವನಾಃ ಕುಜಪೌಂಡ್ರಕಾದ್ಯಾಃ ।
ಅನ್ಯೇ ಚ ಶಾಲ್ವಕಪಿಬಲ್ವಲದಂತವಕ-
ಸಪ್ತೋಕ್ಷಶಂಬರವಿದೂರಥರುಕ್ಮಿಮುಖ್ಯಾಃ ॥

(ಶ್ಲೋಕ - 35)

ಮೂಲಮ್

ಯೇ ವಾ ಮೃಧೇ ಸಮಿತಿಶಾಲಿನ ಆತ್ತಚಾಪಾಃ
ಕಾಂಬೋಜಮತ್ಸ್ಯಕುರುಕೈಕಯಸೃಂಜಯಾದ್ಯಾಃ ।
ಯಾಸ್ಯಂತ್ಯದರ್ಶನಮಲಂ ಬಲಪಾರ್ಥಭೀಮ-
ವ್ಯಾಜಾಹ್ವಯೇನ ಹರಿಣಾ ನಿಲಯಂ ತದೀಯಮ್ ॥

ಅನುವಾದ

ಇನ್ನೂ ಪ್ರಲಂಬಾಸುರ, ಧೇನುಕಾಸುರ, ಬಕಾಸುರ, ಕೇಶೀ, ಅರಿಷ್ಟಾಸುರ ಮುಂತಾದ ಅನೇಕ ದೈತ್ಯರನ್ನೂ, ಚಾಣೂರ ಮುಂತಾದ ಮಲ್ಲರನ್ನೂ, ಕುವಲಯಾ ಪೀಡವೆಂಬ ಆನೆಯನ್ನೂ, ಕಂಸ, ಕಾಲಯವನ, ನರಕಾಸುರ, ಪೌಂಡ್ರಕದೇಶದ ಮಿಥ್ಯಾವಾಸುದೇವ, ಶಾಲ್ವ, ದ್ವಿವಿದನೆಂಬ ವಾನರ, ಬಲ್ವಲ, ದಂತವಕ, ನಗ್ನಜಿತರಾಜನ ಏಳು ಕೊಬ್ಬಿದ ಗೂಳಿಗಳನ್ನೂ, ಶಂಬರಾಸುರ, ವಿದೂರಥ, ರುಕ್ಮಿ ಮುಂತಾದವರನ್ನೂ, ಬಿಲ್ಲು- ಬಾಣಗಳನ್ನು ಧರಿಸಿ ಯುದ್ಧರಂಗಕ್ಕೆ ಬರುವ ಕಾಂಭೋಜ, ಮತ್ಸ್ಯ, ಕುರು, ಕೈಕಯ, ಸೃಂಜಯ ಮೊದಲಾದ ದೇಶಗಳ ರಾಜರನ್ನೂ ಆತನು ಸಂಹರಿಸುವನು. ಕೆಲವರನ್ನು ತಾನೇ ಕೊಂದು, ಕೆಲವರನ್ನು ಬಲರಾಮ, ಭೀಮಸೇನ, ಅರ್ಜುನನೇ ಮುಂತಾದವರಿಂದ ಸಂಹಾರಮಾಡಿಸುವನು. ಇವರೆಲ್ಲರೂ ಭಗವಂತನ ಧಾಮವನ್ನೇ ಸೇರಿಕೊಳ್ಳುವರು. ॥ 34-35 ॥

(ಶ್ಲೋಕ - 36)

ಮೂಲಮ್

ಕಾಲೇನ ಮೀಲಿತಯಾಮವಮೃಶ್ಯ ನೃಣಾಂ
ಸ್ತೋಕಾಯುಷಾಂ ಸ್ವನಿಗಮೋ ಬತ ದೂರಪಾರಃ ।
ಆವಿರ್ಹಿತಸ್ತ್ವನುಯುಗಂ ಸ ಹಿ ಸತ್ಯವತ್ಯಾಂ
ವೇದದ್ರುಮಂ ವಿಟಪಶೋ ವಿಭಜಿಷ್ಯತಿ ಸ್ಮ ॥

ಅನುವಾದ

ಕಾಲದ ಪ್ರಭಾವದಿಂದ ಮನುಷ್ಯರ ಬುದ್ಧಿಶಕ್ತಿಯು, ಆಯುಸ್ಸೂ ಕಡಿಮೆಯಾದಾಗ, ಇವರಿಗೆ ತತ್ತ್ವವನ್ನು ಹೇಳುವ ಇಡೀ ನನ್ನ ವೇದವಾಣಿಯನ್ನು ತಿಳಿಯುವ ಸಾಮರ್ಥ್ಯ ಇರದಿದ್ದಾಗ, ಕರು ಣಾಳುವಾದ ಪ್ರಭುವು ಪ್ರತಿಯೊಂದು ಕಲ್ಪದಲ್ಲಿಯೂ ಸತ್ಯವತಿಯ ಗರ್ಭದಿಂದ ಭಗವಾನ್ ವೇದವ್ಯಾಸರ ರೂಪದಲ್ಲಿ ಪ್ರಗಟ ಗೊಂಡು, ವೇದ ವೃಕ್ಷವನ್ನು ನಾನಾ ಶಾಖೆಗಳ ರೂಪದಲ್ಲಿ ವಿಭಾಗ ಮಾಡುವನು. ॥ 36 ॥

(ಶ್ಲೋಕ - 37)

ಮೂಲಮ್

ದೇವದ್ವಿಷಾಂ ನಿಗಮವರ್ತ್ಮನಿ ನಿಷ್ಠಿತಾನಾಂ
ಪೂರ್ಭಿರ್ಮಯೇನ ವಿಹಿತಾಭಿರದೃಶ್ಯತೂರ್ಭಿಃ ।
ಲೋಕಾನ್ ಘ್ನತಾಂ ಮತಿವಿಮೋಹಮತಿಪ್ರಲೋಭಂ
ವೇಷಂ ವಿಧಾಯ ಬಹು ಭಾಷ್ಯತ ಔಪಧರ್ಮ್ಯಮ್ ॥

ಅನುವಾದ

ದೇವಶತ್ರುಗಳಾದ ದೈತ್ಯರು ವೇದಮಾರ್ಗದ ಆಸರೆಯನ್ನು ಪಡೆದು ಮಯಾಸುರನು ರಚಿಸಿದ ಅದೃಶ್ಯವಾದ ವೇಗವುಳ್ಳ ಪುರ ಗಳಲ್ಲಿ ವಾಸಿಸುತ್ತಾ ಮನುಷ್ಯರನ್ನು ಹಿಂಸಿಸತೊಡಗಿದಾಗ, ಈ ಭಗ ವಂತನು ಜನರ ಮನಸ್ಸಿನಲ್ಲಿ ಮೋಹವನ್ನೂ, ಪ್ರಲೋಭನೆಯನ್ನು ಉಂಟು ಮಾಡುವ ವೇಷವನ್ನು ಧರಿಸಿ ಬುದ್ಧದೇವರ ರೂಪದಲ್ಲಿ ಬಹಳಷ್ಟು ಉಪಧರ್ಮಗಳನ್ನು ಉಪದೇಶ ಮಾಡುವನು. ಏಕೆಂದರೆ, ಜನರ ಕಲ್ಯಾಣಮಾಡುವುದೇ ಭಗವಂತನ ಕಾರ್ಯವಲ್ಲವೇ ! ॥37॥

(ಶ್ಲೋಕ - 38)

ಮೂಲಮ್

ಯರ್ಹ್ಯಾಲಯೇಷ್ವಪಿ ಸತಾಂ ನ ಹರೇಃ ಕಥಾಃ ಸ್ಯುಃ
ಪಾಖಂಡಿನೋ ದ್ವಿಜಜನಾ ವೃಷಲಾ ನೃದೇವಾಃ ।
ಸ್ವಾಹಾ ಸ್ವಧಾ ವಷಡಿತಿ ಸ್ಮ ಗಿರೋ ನ ಯತ್ರ
ಶಾಸ್ತಾ ಭವಿಷ್ಯತಿ ಕಲೇರ್ಭಗವಾನ್ಯುಗಾಂತೇ ॥

ಅನುವಾದ

ಕಲಿಯುಗದ ಕೊನೆಯಲ್ಲಿ ಸತ್ಪುರುಷರ ಮನೆಗಳಲ್ಲಿಯೂ ಶ್ರೀಹರಿಕಥೆಯ ಶ್ರವಣ-ಕೀರ್ತನ-ಉತ್ಸವಾದಿಗಳು ನಡೆಸಲು ಅವಕಾಶ ವಿಲ್ಲದಂತಾದೀತು. ಪಾಷಂಡಿಗಳೂ, ಧರ್ಮಘಾತುಕರು, ಶೂದ್ರರು ರಾಜರಾಗಿ ಬಿಡುವರು. ದೇವತೆಗಳನ್ನೂ, ಪಿತೃಗಳನ್ನೂ ಕುರಿತು ಮಾಡುವ ಯಜ್ಞ ಮತ್ತು ಶ್ರಾದ್ಧಗಳ ಸದ್ದೂ ಇರುವುದಿಲ್ಲ. ಸ್ವಾಹಾ, ಸ್ವಧಾ, ವಷಟ್ಕಾರಗಳು ಕಿವಿಗೆ ಬೀಳುವುದಿಲ್ಲ. ಇಂತಹ ಸಮಯ ದಲ್ಲಿ ಕಲಿಯುಗವನ್ನು ಶಿಕ್ಷಿಸಲಿಕ್ಕಾಗಿ ಭಗವಂತನು ಕಲ್ಕಿರೂಪದಲ್ಲಿ ಅವತರಿಸುವನು. ॥38॥

(ಶ್ಲೋಕ - 39)

ಮೂಲಮ್

ಸರ್ಗೇ ತಪೋಹಮೃಷಯೋ ನವ ಯೇ ಪ್ರಜೇಶಾಃ
ಸ್ಥಾನೇ ಚ ಧರ್ಮಮಖಮನ್ವಮರಾವನೀಶಾಃ ।
ಅಂತೇ ತ್ವಧರ್ಮಹರಮನ್ಯುವಶಾಸುರಾದ್ಯಾ
ಮಾಯಾವಿಭೂತಯ ಇಮಾಃ ಪುರುಶಕ್ತಿಭಾಜಃ ॥

ಅನುವಾದ

ಪ್ರಪಂಚದ ಸೃಷ್ಟಿಯ ಸಮಯಬಂದಾಗ ತಪಸ್ಸಿನ ರೂಪ ದಲ್ಲೂ, ನನ್ನ ರೂಪದಲ್ಲೂ, ಮರೀಚಿಯೇ ಮುಂತಾದ ಮಹರ್ಷಿಗಳ ಮತ್ತು ಒಂಭತ್ತು ಪ್ರಜಾಪತಿಗಳ ರೂಪದಲ್ಲಿಯೂ, ಹಾಗೆಯೇ ರಕ್ಷಣೆಯ ಸಮಯ ಬಂದಾಗ ಧರ್ಮ, ವಿಷ್ಣು, ಮನು, ದೇವತೆಗಳೂ ಮತ್ತು ರಾಜರುಗಳೂ ಇವರ ರೂಪದಲ್ಲೂ, ವಿನಾಶಕಾಲ ಬಂದಾಗ ಅಧರ್ಮ, ರುದ್ರದೇವರು, ಕ್ರೋಧವಶವೆಂಬ ಸರ್ಪಗಳೂ, ದೈತ್ಯರೂ ಮುಂತಾದ ರೂಪದಲ್ಲೂ ಸರ್ವಶಕ್ತಿ ಸಂಪನ್ನ ನಾದ ಶ್ರೀಭಗವಂತನ ವಿಚಿತ್ರವಾದ ಮಾಯಾವಿಭೂತಿಗಳು ಪ್ರಕಟಗೊಳ್ಳುವವು. ॥ 39 ॥

(ಶ್ಲೋಕ - 40)

ಮೂಲಮ್

ವಿಷ್ಣೋರ್ನು ವೀರ್ಯಗಣನಾಂ ಕತಮೋರ್ಹತೀಹ
ಯಃ ಪಾರ್ಥಿವಾನ್ಯಪಿ ಕವಿರ್ವಿಮಮೇ ರಜಾಂಸಿ ।
ಚಸ್ಕಂಭ ಯಃ ಸ್ವರಂಹಸಾಸ್ಖಲತಾ ತ್ರಿಪೃಷ್ಠಂ
ಯಸ್ಮಾತಿಸಾಮ್ಯಸದನಾದುರುಕಂಪಯಾನಮ್ ॥

ಅನುವಾದ

ಭಗವಂತನ ಶಕ್ತಿಗಳು ಅನಂತವಾದುವು. ತನ್ನ ಪ್ರತಿಭೆಯಿಂದ ಭೂಮಿಯಲ್ಲಿರುವ ಒಂದೊಂದು ಧೂಳಿನ ಕಣಗಳನ್ನು ಎಣಿಸಿಬಿಟ್ಟರೂ, ಮಹಾವಿಷ್ಣುವಿನ ಶಕ್ತಿಗಳನ್ನು ಯಾವಾ ತನು ಎಣಿಸಿ ಮುಗಿಸಿಯಾನು ? ಯಾರಿಗೆ ತಾನೇ ಅಂತಹ ಶಕ್ತಿ ಇದ್ದೀತು ? ಈ ಅನಂತ ಶಕ್ತಿಸಂಪನ್ನನಾದ ಪ್ರಭುವು ತ್ರಿವಿಕ್ರಮಾವ ತಾರದಲ್ಲಿ ತ್ರಿಲೋಕಗಳನ್ನೂ ಅಳೆಯುತ್ತಿದ್ದಾಗ ಈತನ ಚರಣಗಳ ಅದ್ಭುತವಾದ ವೇಗದಿಂದ ಪ್ರಕೃತಿಯಿಂದ ಪ್ರಾರಂಭವಾಗಿ ಸತ್ಯ ಲೋಕದವರೆಗೆ ಇಡೀ ಬ್ರಹ್ಮಾಂಡವೇ ನಡುಗತೊಡಗಿದಾಗ ಈತನೇ ತನ್ನ ಶಕ್ತಿಯಿಂದ ಅದನ್ನು ಸ್ಥಿರಗೊಳಿಸಿದನು. ॥ 40 ॥

(ಶ್ಲೋಕ - 41)

ಮೂಲಮ್

ನಾಂತಂ ವಿದಾಮ್ಯಹಮಮೀ ಮುನಯೋಗ್ರಜಾಸ್ತೇ
ಮಾಯಾಬಲಸ್ಯ ಪುರುಷಸ್ಯ ಕುತೋಪರೇ ಯೇ ।
ಗಾಯನ್ ಗುಣಾನ್ದಶಶತಾನನ ಆದಿದೇವಃ
ಶೇಷೋಧುನಾಪಿ ಸಮವಸ್ಯತಿ ನಾಸ್ಯ ಪಾರಮ್ ॥

ಅನುವಾದ

ಸಮಸ್ತ ಸೃಷ್ಟಿಯ ರಚನೆಯನ್ನೂ, ಸಂಹಾರವನ್ನೂ ಮಾಡುವ ಮಾಯೆಯು ಈತನ ಒಂದು ಶಕ್ತಿಯು. ಇಂತಹ ಅನಂತ ಶಕ್ತಿಗಳಿಗೆ ಆಶ್ರಯ ನಾಗಿರುವ ಈತನ ಸ್ವರೂಪವನ್ನು ನಾನು ಅರಿಯೆನು. ನಿನ್ನ ಅಣ್ಣಂದಿರಾದ ಸನಕಾದಿಗಳೂ ಅರಿಯರು. ಇನ್ನು ಇತರರ ವಿಷಯದಲ್ಲಿ ಹೇಳುವುದೇನಿದೆ ? ಆದಿದೇವನಾದ ಆದಿಶೇಷ ಸ್ವಾಮಿಯು ತನ್ನ ಸಾವಿರ ಬಾಯಿಗಳಿಂದ ಇವನ ಗುಣಗಳನ್ನು ಹಿಂದಿನಿಂದಲೂ ಹಾಡುತ್ತಾ ಬಂದರೂ, ಇಂದಿಗೂ ಅವುಗಳ ದಡಕಾಣಲಾಗಲಿಲ್ಲ. ॥ 41 ॥

(ಶ್ಲೋಕ - 42)

ಮೂಲಮ್

ಯೇಷಾಂ ಸ ಏವ ಭಗವಾಂದಯಯೇದನಂತಃ
ಸರ್ವಾತ್ಮನಾಶ್ರಿತಪದೋ ಯದಿ ನಿರ್ವ್ಯಲೀಕಮ್ ।
ತೇ ದುಸ್ತರಾಮತಿತರಂತಿ ಚ ದೇವಮಾಯಾಂ
ನೈಷಾಂ ಮಮಾಹಮಿತಿ ೀಃ ಶ್ವಶೃಗಾಲಭಕ್ಷ್ಯೇ ॥

ಅನುವಾದ

ನಿಷ್ಕಪಟಭಾವದಿಂದ ತಮ್ಮ ಸರ್ವ ಸ್ವವನ್ನೂ ಮತ್ತು ತಮ್ಮನ್ನೂ ಅವನ ಚರಣಕಮಲಗಳಲ್ಲಿ ಸಮರ್ಪಿಸಿ ಕೊಳ್ಳುವವರ ಮೇಲೆಯೇ ಆ ಅನಂತ ಭಗವಂತನು ದಯೆಯನ್ನು ಹರಿಸುತ್ತಾನೆ. ಅವನ ದಯೆಗೆ ಪಾತ್ರರಾದರೇ ಅವನ ದುಸ್ತರವಾದ ಮಾಯೆಯ ಸ್ವರೂಪವನ್ನು ಅರಿತು ಅದನ್ನು ದಾಟಿ ಹೋಗುತ್ತಾರೆ. ಇಂತಹ ಸುಕೃತಿಗಳಿಗೆ ನರಿ-ನಾಯಿಗಳಿಗೆ ಆಹಾರವಾಗುವ ತಮ್ಮ ಹಾಗೂ ತಮ್ಮ ಪುತ್ರಾದಿಗಳ ಶರೀರದಲ್ಲಿ ‘ನಾನು-ನನ್ನದು‘ ಎಂಬ ಅಹಂಭಾವವಿರುವುದಿಲ್ಲ. ॥ 42 ॥

(ಶ್ಲೋಕ - 43)

ಮೂಲಮ್

ವೇದಾಹಮಂಗ ಪರಮಸ್ಯ ಹಿ ಯೋಗಮಾಯಾಂ
ಯೂಯಂ ಭವಶ್ಚ ಭಗವಾನಥ ದೈತ್ಯವರ್ಯಃ ।
ಪತ್ನೀ ಮನೋಃ ಸ ಚ ಮನುಶ್ಚ ತದಾತ್ಮಜಾಶ್ಚ
ಪ್ರಾಚೀನಬರ್ಹಿರ್ಋಭುರಂಗ ಉತ ಧ್ರುವಶ್ಚ ॥

ಅನುವಾದ

ಪ್ರಿಯ ನಾರದನೇ ! ಈ ಪರಮಪುರುಷನ ಯೋಗಮಾಯೆಯನ್ನು ನಾನು ಬಲ್ಲೆನು. ಹಾಗೆಯೇ ನೀನೂ, ನಿನ್ನ ಅಣ್ಣಂದಿರಾದ ಸನಕಾದಿಗಳೂ, ಭಗವಾನ್ ಶಂಕರನೂ, ದೈತ್ಯಕುಲಭೂಷಣನಾದ ಪ್ರಹ್ಲಾದನೂ, ಶತರೂಪಾ, ಮನು, ಮನುಪುತ್ರ ಪ್ರಿಯವ್ರತ ಮುಂತಾದವರೂ, ಪ್ರಾಚೀನ ಬರ್ಹಿ, ಋಭು, ಅಂಗ ಮತ್ತು ಧ್ರುವ ಇವರೆಲ್ಲ ಬಲ್ಲರು. ॥ 43 ॥

(ಶ್ಲೋಕ - 44)

ಮೂಲಮ್

ಇಕ್ಷ್ವಾಕುರೈಲಮುಚುಕುಂದವಿದೇಹಗಾ-
ರಘ್ವಂಬರೀಷಸಗರಾ ಗಯನಾಹುಷಾದ್ಯಾಃ ।
ಮಾಂಧಾತ್ರಲರ್ಕಶತಧನ್ವನುರಂತಿದೇವಾ
ದೇವವ್ರತೋ ಬಲಿರಮೂರ್ತರಯೋ ದಿಲೀಪಃ ॥

(ಶ್ಲೋಕ - 45)

ಮೂಲಮ್

ಸೌಭರ್ಯುತಂಕ ಶಿಬಿದೇವಲಪಿಪ್ಪಲಾದ-
ಸಾರಸ್ವತೋದ್ಧವಪರಾಶರಭೂರಿಷೇಣಾಃ ।
ಯೇನ್ಯೇ ವಿಭೀಷಣಹನೂಮದುಪೇಂದ್ರದತ್ತ-
ಪಾರ್ಥಾರ್ಷ್ಟಿಷೇಣವಿದುರಶ್ರುತದೇವವರ್ಯಾಃ ॥

ಅನುವಾದ

ಇವರಲ್ಲದೆ ಇಕ್ಷ್ವಾಕು, ಪುರೂರವ, ಮುಚುಕುಂದ, ಜನಕ, ಗಾ, ರಘು, ಅಂಬರೀಷ, ಸಗರ, ಗಯ, ಯಯಾತಿ ಮುಂತಾದ ವರೂ, ಮಾಂಧಾತಾ, ಅಲರ್ಕ, ಶತಧನ್ವಾ, ಅನು, ರಂತಿದೇವ, ಭೀಷ್ಮ, ಬಲಿ, ಅಮೂರ್ತ್ತರಯ, ದಿಲೀಪ, ಸೌಭರಿ, ಉತ್ತಂಕ, ಶಿಬಿ, ದೇವಲ, ಪಿಪ್ಪಲಾದ, ಸಾರಸ್ವತ, ಉದ್ಧವ, ಪರಾಶರ, ಭೂರಿ ಷೇಣ, ಹಾಗೂ ವಿಭೀಷಣ, ಹನುಮಂತ, ಶುಕಮುನಿ, ಅರ್ಜುನ, ಆರ್ಷ್ಟಿಷೇಣ, ವಿದುರ, ಶ್ರುತದೇವ ಮುಂತಾದ ಮಹಾತ್ಮರೂ ತಿಳಿದಿದ್ದಾರೆ. ॥ 44-45 ॥

(ಶ್ಲೋಕ - 46)

ಮೂಲಮ್

ತೇ ವೈ ವಿದಂತ್ಯತಿತರಂತಿ ಚ ದೇವಮಾಯಾಂ
ಸೀಶೂದ್ರಹೂಣಶಬರಾ ಅಪಿ ಪಾಪಜೀವಾಃ ।
ಯದ್ಯದ್ಭುತಕ್ರಮಪರಾಯಣಶೀಲಶಿಕ್ಷಾ-
ಸ್ತಿರ್ಯಗ್ಜನಾ ಅಪಿ ಕಿಮು ಶ್ರುತಧಾರಣಾ ಯೇ ॥

ಅನುವಾದ

ಭಗವಂತನ ಪರಾಕ್ರಮವು ಅತ್ಯಂತ ಅದ್ಭುತವಾದುದು. ಆ ಪ್ರಭುವಿಗೆ ಶರಣಾದವರು ಅವನ ಭಕ್ತರೇ ಆಗಿಹೋಗುವರು. ಅವರ ಶೀಲ-ಸ್ವಭಾವಗಳು, ಆಚರಣೆಗಳೂ ಸತ್ಪುರುಷರಂತೆ ಆಗಿ ಹೋಗುವವು. ಅವರು ಬೇಕಾದರೆ, ಸೀ, ಶೂದ್ರ, ಹೂಣ ಭಿಲ್ಲರು ಜಾತಿಯ ಮನುಷ್ಯರೇ ಆಗಿರಲಿ, ಬೇಕಾದರೆ ಪಶು-ಪಕ್ಷಿ ಮುಂತಾದ ಯಾವುದೇ ಯೋನಿಯವ ರಾಗಲೀ, ಅವರೆಲ್ಲರೂ ಭಗವಂತನ ಶರಣಾಗತಿಯ ಬಲದಲ್ಲಿ ದಾಟಲಶಕ್ಯವಾದ ಆ ದೇವಮಾಯೆಯನ್ನು ದಾಟಿಹೋಗುತ್ತಾರೆ. ಎಂದಾಗ ವೈದಿಕ ಸದಾಚಾರಿಗಳು ದಾಟಿಹೋಗುವರು ಎಂದು ಹೇಳಬೇಕಾದುದೇ ಇಲ್ಲ. ॥ 46 ॥

(ಶ್ಲೋಕ - 47)

ಮೂಲಮ್

ಶಶ್ವತ್ಪ್ರಶಾಂತಮಭಯಂ ಪ್ರತಿಬೋಧಮಾತ್ರಂ
ಶುದ್ಧಂ ಸಮಂ ಸದಸತಃ ಪರಮಾತ್ಮತತ್ತ್ವಮ್ ।
ಶಬ್ದೋ ನ ಯತ್ರ ಪುರುಕಾರಕವಾನ್ಕ್ರಿಯಾರ್ಥೋ
ಮಾಯಾ ಪರೈತ್ಯಭಿಮುಖೇ ಚ ವಿಲಜ್ಜಮಾನಾ ॥

ಅನುವಾದ

ನಾರದನೇ ! ಪರಮಾತ್ಮತತ್ತ್ವವು ಶಾಶ್ವತವೂ, ಪ್ರಶಾಂತವೂ, ಅಭಯವೂ, ಜ್ಞಾನೈಕಸ್ವರೂಪವೂ ಆಗಿರುವುದು. ಅವನಲ್ಲಿ ಮಾಯೆಯ ಮಲವಾಗಲೀ, ಅದರಿಂದ ರಚಿತವಾದ ವಿಷಮತೆ ಗಳಾಗಲೀ ಇಲ್ಲ. ಅವನು ಸತ್-ಅಸತ್ ಎರಡನ್ನೂ ಮೀರಿದವನು. ಯಾವುದೇ ವೈದಿಕ ಅಥವಾ ಲೌಕಿಕ ಶಬ್ದಗಳು ಅವನವರೆಗೆ ತಲುಪ ಲಾರವು. ನಾನಾ ಸಾಧನಗಳಿಂದ ಸಂಪನ್ನವಾಗುವ ಕರ್ಮಗಳ ಲಗಳೂ ಅವನವರೆಗೆ ತಲುಪಲಾರವು. ಹೆಚ್ಚೇನು, ಸ್ವಯಂ ಮಾಯೆಯೂ ಕೂಡ ಅವನ ಎದುರು ನಿಲ್ಲಲಾರಳು. ನಾಚಿ ಓಡಿಹೋಗುತ್ತಾಳೆ. ॥ 47 ॥

(ಶ್ಲೋಕ - 48)

ಮೂಲಮ್

ತದ್ವೈ ಪದಂ ಭಗವತಃ ಪರಮಸ್ಯ ಪುಂಸೋ
ಬ್ರಹ್ಮೇತಿ ಯದ್ವಿದುರಜಸ್ರಸುಖಂ ವಿಶೋಕಮ್ ।
ಸಧ್ರ್ಯಙ್ನೆಯಮ್ಯ ಯತಯೋ ಯಮಕರ್ತಹೇತಿಂ
ಜಹ್ಯುಃ ಸ್ವರಾಡಿವ ನಿಪಾನಖನಿತ್ರಮಿಂದ್ರಃ ॥

ಅನುವಾದ

ಮಹಾತ್ಮರು-ಶೋಕರಹಿತ ಆನಂದ ಸ್ವರೂಪ ಬ್ರಹ್ಮನ ರೂಪದಲ್ಲಿ ಸಾಕ್ಷಾತ್ಕಾರ ಮಾಡಿಕೊಳ್ಳುವರೋ ಅದೇ ಪರಮಪುರುಷ ಭಗವಂತನ ಪರಮಪದವಾಗಿದೆ. ಸಂಯ ಮಿಗಳು ಅದರಲ್ಲೇ ತಮ್ಮ ಮನಸ್ಸನ್ನು ಸೇರಿಸಿ ಸ್ಥಿತರಾಗುತ್ತಾರೆ. ಜ್ಞಾನ-ಆನಂದಗಳ ಅಕ್ಷಯನಿಯಾಗಿರುವ ಆತನಲ್ಲೇ ನೆಲೆಸಿರು ವಂತಹವರಿಗೆ ಸುಖಪ್ರಾಪ್ತಿಗಾಗಿ ಬೇರೆ ಜ್ಞಾನಸಾಧನಗಳೇಕೇ ? ಜಲಕ್ಕೆ ಆಧಾರನಾಗಿರುವ ಮೇಘರೂಪಿಯಾದ ಇಂದ್ರನಿಗೆ ನೀರಿಗೋಸ್ಕರ ಬಾವಿಯನ್ನು ತೋಡುವ ಗುದ್ದಲಿಯ ಆವಶ್ಯಕತೆ ಇಲ್ಲವಷ್ಟೆ ! ನೀರು ಬೇಕಾದಾಗ ಸ್ವತಃ ಅವನು ಇತರರಿಗೂ ಮಳೆ ಸುರಿಸಿ ನೀರು ಕೊಡಬಲ್ಲನು. ಹಾಗೆಯೇ ಭಗವಂತನನ್ನು ಪ್ರಾಪ್ತ ಮಾಡಿಕೊಂಡ ಮಹಾಪುರುಷರೂ ಕೂಡ ತಮ್ಮ ಪ್ರಭಾವದಿಂದ ಬೇರೆಯವರಿಗೂ ಭಗವತ್ಪ್ರಾಪ್ತಿಯ ಮಾರ್ಗವನ್ನು ಸುಗಮಗೊಳಿಸುತ್ತಾರೆ. ॥ 48 ॥

(ಶ್ಲೋಕ - 49)

ಮೂಲಮ್

ಸ ಶ್ರೇಯಸಾಮಪಿ ವಿಭುರ್ಭಗವಾನ್ಯತೋಸ್ಯ
ಭಾವಸ್ವಭಾವವಿಹಿತಸ್ಯ ಸತಃ ಪ್ರಸಿದ್ಧಿಃ ।
ದೇಹೇ ಸ್ವಧಾತುವಿಗಮೇನುವಿಶೀರ್ಯಮಾಣೇ
ವ್ಯೋಮೇವ ತತ್ರ ಪುರುಷೋ ನ ವಿಶೀರ್ಯತೇಜಃ ॥

ಅನುವಾದ

ಜಗತ್ತಿನಲ್ಲಿರುವ ಶ್ರೇಯಸ್ಕರ ಸಾಧನೆಗಳೆಲ್ಲಕ್ಕೂ ಪ್ರಭುವೇ ಒಡೆಯನಾಗಿದ್ದಾನೆ. ಅವನೇ ಈ ಜೀವಿಯ ಭಾವ ಮತ್ತು ಸ್ವಭಾವಕ್ಕನುಸಾರವಾಗಿ ಶಾಸಗಳ ಮೂಲಕ ಅವನ ಕರ್ಮಗಳನ್ನು ವಿಸುತ್ತಾನೆ. ಸತ್ಕರ್ಮಗಳ ಪ್ರಸಿದ್ಧಿಯೂ ಭಗವಂತನಿಂದಲೇ ಆಗುತ್ತದೆ. ವಾಸ್ತವವಾಗಿ ಜೀವನೂ ಅಜನ್ಮಾ, ಶಾಶ್ವತನಾಗಿದ್ದಾನೆ. ಶರೀರ ನಾಶವಾದರೂ ಜೀವಿಯ ನಾಶವಾಗುವುದಿಲ್ಲ.* ಈ ಸ್ಥೂಲ ದೇಹವಾದರೋ ಪಂಚಭೂತಗಳಿಂದ ಉಂಟಾಗಿದೆ. ಈ ಶರೀರವು ತಮ್ಮ-ತಮ್ಮ ಐದು ಭೂತಗಳಲ್ಲಿ ಸೇರಿಹೋದಾಗ ದೇಹರೂಪ ದಿಂದ ಇರುವ ಉಪಾಯು ತಮ್ಮ-ತಮ್ಮ ತತ್ತ್ವಗಳಲ್ಲಿ ಸೇರಿ ಹೋಗುತ್ತದೆ. ಆದರೆ ಘಟಾಕಾಶವು ಮಹಾಕಾಶದಲ್ಲಿ ಅಖಂಡ ರೂಪವಾಗಿ ಇರುತ್ತದೆ. ಘಟಕ್ಕೆ ಇದ್ದ ಉಪಾಯು ಕೇವಲ ನಾಶವಾಯಿತು. ಇದರಿಂದ ಮಹಾಕಾಶದಲ್ಲಿ ಯಾವುದೇ ಅಂತರ ಬೀಳುವುದಿಲ್ಲ. ಹಾಗೆಯೇ ದೇಹದ ಉಪಾಯು ಇಲ್ಲವಾದಾಗಲೂ ಆತ್ಮನು ಪರಮಾತ್ಮನಲ್ಲಿ ಒಂದಾಗಿ ಹೋಗುತ್ತಾನೆ. ॥ 49 ॥

ಟಿಪ್ಪನೀ
  • ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ ಅನಾಶಿನೋಪ್ರಮೇಯಸ್ಯ ತಸ್ಮಾದ್ಯುಧ್ವಸ್ವ ಭಾರತ ॥ (ಶ್ರೀಮದ್ಭಗವದ್ಗೀತೆ 2/18)

(ಶ್ಲೋಕ - 50)

ಮೂಲಮ್

ಸೋಯಂ ತೇಭಿಹಿತಸ್ತಾತ ಭಗವಾನ್ವಿಶ್ವಭಾವನಃ ।
ಸಮಾಸೇನ ಹರೇರ್ನಾನ್ಯದನ್ಯಸ್ಮಾತ್ ಸದಸಚ್ಚ ಯತ್ ॥

ಅನುವಾದ

ಮಗೂ ನಾರದನೇ ! ಸಂಕಲ್ಪ ಮಾತ್ರದಿಂದಲೇ ವಿಶ್ವವನ್ನು ರಚಿಸುವ ಭಗವಂತನಾದ ಶ್ರೀಹರಿಯನ್ನು ಕುರಿತು ಹೀಗೆ ಸಂಕ್ಷೇಪ ವಾಗಿ ನಾನು ವರ್ಣಿಸಿರುವೆನು. ಒಟ್ಟಿನಲ್ಲಿ ಹೇಳುವುದಾದರೆ ಸತ್ ಆಗಲೀ, ಅಸತ್ ಆಗಲೀ, ಕಾರ್ಯ-ಕಾರಣವಾಗಿರಲೀ ಯಾವುದೂ ಆತನಿಂದ ಭಿನ್ನವಾಗಿಲ್ಲ. ಆದರೂ ಅವನು ಅವುಗಳಿಂದ ಪ್ರತ್ಯೇಕ ವಾಗಿಯೇ ಇದ್ದಾನೆ. ॥ 50 ॥

(ಶ್ಲೋಕ - 51)

ಮೂಲಮ್

ಇದಂ ಭಾಗವತಂ ನಾಮ ಯನ್ಮೇ ಭಗವತೋದಿತಮ್ ।
ಸಂಗ್ರಹೋಯಂ ವಿಭೂತೀನಾಂ ತ್ವಮೇತದ್ವಿಪುಲೀಕುರು ॥

ಅನುವಾದ

ಭಗವಂತನು ನನಗೆ ಉಪದೇಶಿಸಿದ ಆ ಭಾಗವತವು ಇದೇ ಆಗಿದೆ. ಇದರಲ್ಲಿ ಭಗವಂತನ ವಿಭೂತಿಗಳ ಸಂಕ್ಷಿಪ್ತ ವರ್ಣನೆಯಿದೆ. ನೀನು ಇದನ್ನು ವಿಸ್ತಾರಗೊಳಿಸು. ॥ 51 ॥

(ಶ್ಲೋಕ - 52)

ಮೂಲಮ್

ಯಥಾ ಹರೌ ಭಗವತಿ ನೃಣಾಂ ಭಕ್ತಿರ್ಭವಿಷ್ಯತಿ ।
ಸರ್ವಾತ್ಮನ್ಯಖಿಲಾಧಾರೇ ಇತಿ ಸಂಕಲ್ಪ್ಯ ವರ್ಣಯ ॥

ಅನುವಾದ

ಸರ್ವಾತ್ಮಕನೂ, ಸರ್ವಕ್ಕೂ ಆಧಾರನೂ ಆಗಿರುವ ಭಗ ವಂತನಾದ ಶ್ರೀಹರಿಯಲ್ಲಿ ಮನುಷ್ಯರಿಗೆ ಭಕ್ತಿಯುಂಟಾಗುವಂತೆ ಸಂಕಲ್ಪಮಾಡಿ ಅದನ್ನು ವರ್ಣಿಸು. ॥ 52 ॥

(ಶ್ಲೋಕ - 53)

ಮೂಲಮ್

ಮಾಯಾಂ ವರ್ಣಯತೋಮುಷ್ಯ ಈಶ್ವರಸ್ಯಾನುಮೋದತಃ ।
ಶೃಣ್ವತಃ ಶ್ರದ್ಧಯಾ ನಿತ್ಯಂ ಮಾಯಯಾತ್ಮಾ ನ ಮುಹ್ಯತಿ ॥

ಅನುವಾದ

ಭಗವಂತನ ಅಚಿಂತ್ಯ ವಾದ ಈ ಮಾಯಾಶಕ್ತಿಯನ್ನು ವರ್ಣಿಸುವವನೂ, ಇತರರು ವರ್ಣಿಸುವಾಗ ಅದನ್ನು ಶ್ರವಣಿಸಿ, ಅನುಮೋದನ ಮಾಡುವವನೂ ಆದ ಪುರುಷನ ಚಿತ್ತವು ಎಂದಿಗೂ ಮಾಯೆಯಿಂದ ಮೋಹ ಗೊಳ್ಳುವುದಿಲ್ಲ. ॥ 53 ॥

ಅನುವಾದ (ಸಮಾಪ್ತಿಃ)

ಏಳನೆಯ ಅಧ್ಯಾಯವು ಮುಗಿಯಿತು. ॥7॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಿತೀಯಸ್ಕಂಧೇ ಬ್ರಹ್ಮನಾರದಸಂವಾದೇ ಸಪ್ತಮೋಽಧ್ಯಾಯಃ ॥7॥