೦೫

[ಐದನೆಯ ಅಧ್ಯಾಯ]

ಭಾಗಸೂಚನಾ

ಸೃಷ್ಟಿಯ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ದೇವದೇವ ನಮಸ್ತೇಸ್ತು ಭೂತಭಾವನ ಪೂರ್ವಜ ।
ತದ್ವಿಜಾನೀಹಿ ಯಜ್ಜ್ಞಾನಮಾತ್ಮತತ್ತ್ವನಿದರ್ಶನಮ್ ॥

ಅನುವಾದ

ನಾರದರು ಕೇಳುತ್ತಾರೆ ದೇವ ದೇವನೇ ! ಚತು ರ್ಮುಖನೇ! ನಿನಗೆ ನಮಸ್ಕಾರವು. ನೀನು ಎಲ್ಲ ಭೂತಗಳನ್ನೂ ಸೃಷ್ಟಿಸಿದವನು. ಎಲ್ಲರಿಗೂ ಮೊದಲಿಗನು. ಆತ್ಮತತ್ತ್ವದ ಸಾಕ್ಷಾ ತ್ಕಾರವು ಆಗುವಂತಹ ಆ ಜ್ಞಾನವನ್ನು ನನಗೆ ಅನುಗ್ರಹಿಸು. ॥ 1 ॥

(ಶ್ಲೋಕ - 2)

ಮೂಲಮ್

ಯದ್ರೂಪಂ ಯದಷ್ಠಾನಂ ಯತಃ ಸೃಷ್ಟಮಿದಂ ಪ್ರಭೋ ।
ಯತ್ಸಂಸ್ಥಂ ಯತ್ಪರಂ ಯಚ್ಚ ತತ್ತತ್ತ್ವಂ ವದ ತತ್ತ್ವತಃ ॥

ಅನುವಾದ

ಪ್ರಭೋ ! ಈ ಜಗತ್ತಿನ ಸ್ವರೂಪವೇನು ? ಲಕ್ಷಣವೇನು ? ಇದರ ಆಧಾರ ಯಾವುದು ? ಇದನ್ನು ಯಾರು ಸೃಷ್ಟಿಸಿದರು ? ಯಾವು ದರಲ್ಲಿ ಇದು ಲಯ ಹೊಂದುತ್ತದೆ ? ಇದು ಯಾರಿಗೆ ಈ ನವಾಗಿದೆ ? ವಾಸ್ತವವಾಗಿ ಈ ಜಗತ್ತು ಅಂದರೇನು ? ಇದರ ತತ್ತ್ವ ವನ್ನು ನನಗೆ ತಿಳಿಸು. ॥ 2 ॥

(ಶ್ಲೋಕ - 3)

ಮೂಲಮ್

ಸರ್ವಂ ಹ್ಯೇತದ್ಭವಾನ್ವೇದ ಭೂತಭವ್ಯಭವತ್ಪ್ರಭುಃ ।
ಕರಾಮಲಕವದ್ ವಿಶ್ವಂ ವಿಜ್ಞಾನಾವಸಿತಂ ತವ ॥

ಅನುವಾದ

ನಿನಗೆ ಇದೆಲ್ಲವೂ ತಿಳಿದಿದೆ, ಏಕೆಂದರೆ, ನೀನು ಭೂತ, ಭವಿಷ್ಯ, ವರ್ತಮಾನ ಇವುಗಳಿಗೆ ಅಪತಿ ಯಾಗಿರುವೆ. ನೀನು ಸರ್ವಜ್ಞನು. ವಿಶ್ವವೆಲ್ಲವೂ ಅಂಗೈನೆಲ್ಲಿಯಂತೆ ಸ್ಪಷ್ಟವಾಗಿ ನಿನ್ನ ಅರಿವಿಗೆ ಗೋಚರವಾಗಿದೆ. ॥ 3 ॥

(ಶ್ಲೋಕ - 4)

ಮೂಲಮ್

ಯದ್ವಿಜ್ಞಾನೋ ಯದಾಧಾರೋ ಯತ್ಪರಸ್ತ್ವಂ ಯದಾತ್ಮಕಃ ।
ಏಕಃ ಸೃಜಸಿ ಭೂತಾನಿ ಭೂತೈರೇವಾತ್ಮ ಮಾಯಯಾ ॥

ಅನುವಾದ

ನಿನಗೆ ಈ ಜ್ಞಾನವು ಎಲ್ಲಿಂದ ಬಂದಿತು ? ನೀನು ಯಾರ ಆಧಾರದಲ್ಲಿ ಇದ್ದಿಯೇ ? ನಿನ್ನ ಸ್ವಾಮಿ ಯಾರು ? ಸ್ವರೂಪವೇನು ? ಮಾಯಾ ಶಕ್ತಿಯಿಂದ ನೀನೊಬ್ಬನೇ ಪಂಚಭೂತಗಳಿಂದ ಪ್ರಾಣಿಗಳನ್ನು ಸೃಷ್ಟಿ ಸುತ್ತಿರುವೆಯಲ್ಲ ! ಇದೆಂತಹ ಆಶ್ಚರ್ಯದ ಸಂಗತಿಯಾಗಿದೆ ! ॥ 4 ॥

(ಶ್ಲೋಕ - 5)

ಮೂಲಮ್

ಆತ್ಮನ್ ಭಾವಯಸೇ ತಾನಿ ನ ಪರಾಭಾವಯನ್ಸ್ವಯಮ್ ।
ಆತ್ಮಶಕ್ತಿಮವಷ್ಟಭ್ಯ ಊರ್ಣನಾಭಿರಿವಾಕ್ಲಮಃ ॥

ಅನುವಾದ

ಜೇಡರಹುಳವು ಅನಾಯಾಸವಾಗಿ ತನ್ನ ಮುಖದಿಂದಲೇ ಬಲೆಯನ್ನು ಹೊರಪಡಿಸಿ ಅದರಲ್ಲಿ ಆಡುತ್ತಿರುವಂತೆ, ನೀನು ನಿನ್ನ ಶಕ್ತಿಯನ್ನೇ ಆಶ್ರಯಿಸಿ ನಿರಾಯಾಸವಾಗಿ ಪ್ರಾಣಿಗಳನ್ನೂ ನಿನ್ನ ಲ್ಲಿಯೇ ಸೃಷ್ಟಿಸಿಕೊಂಡರೂ ನಿನ್ನಲ್ಲಿ ಯಾವುದೇ ವಿಕಾರಗಳಾಗುವುದಿಲ್ಲ. ॥ 5 ॥

(ಶ್ಲೋಕ - 6)

ಮೂಲಮ್

ನಾಹಂ ವೇದ ಪರಂ ಹ್ಯಸ್ಮಿನ್ನಾಪರಂ ನ ಸಮಂ ವಿಭೋ ।
ನಾಮರೂಪಗುಣೈರ್ಭಾವ್ಯಂ ಸದಸತ್ಕಿಂಚಿದನ್ಯತಃ ॥

ಅನುವಾದ

ಜಗತ್ತಿನಲ್ಲಿ ನಾಮ, ರೂಪ, ಗುಣಗಳಿಂದ ತಿಳಿಯ ಲಾಗುವ ಎಲ್ಲದರಲ್ಲಿಯೂ ನೀನಲ್ಲದೆ ಬೇರೆಯವರಿಂದ ಉತ್ಪನ್ನ ವಾದಂತಹ ಸತ್, ಅಸತ್, ಉತ್ತಮ, ಮಧ್ಯಮ, ಅಧಮ ಮುಂತಾದ ಯಾವ ವಸ್ತುವೂ ಕಂಡುಬರುವುದಿಲ್ಲ. ಅಂದರೆ ಎಲ್ಲವು ನಿನ್ನಿಂದಲೇ ಸೃಷ್ಟಿಸಲ್ಪಟ್ಟಿದೆ. ॥ 6 ॥

(ಶ್ಲೋಕ - 7)

ಮೂಲಮ್

ಸ ಭವಾನಚರದ್ಘೋರಂ ಯತ್ತಪಃ ಸುಸಮಾಹಿತಃ ।
ತೇನ ಖೇದಯಸೇ ನಸ್ತ್ವಂ ಪರಾಶಂಕಾಂ ಪ್ರಯಚ್ಛಸಿ ॥

ಅನುವಾದ

ಹೀಗೆ ಎಲ್ಲರ ಒಡೆಯ ನಾಗಿಯೂ ನೀನು ಏಕಾಗ್ರಚಿತ್ತದಿಂದ ಮಾಡಿದ ಘೋರ ತಪಸ್ಸಿ ನಿಂದ ನನಗೆ ಮೋಹದೊಂದಿಗೆ ‘ನಿನ್ನಿಂದಲೂ ದೊಡ್ಡವನು ಯಾರಾದರೂ ಇರಬಹುದೇ ?’ ಎಂಬ ಶಂಕೆಯೂ ಆಗುತ್ತಿದೆ. ॥ 7 ॥

(ಶ್ಲೋಕ - 8)

ಮೂಲಮ್

ಏತನ್ಮೇ ಪೃಚ್ಛತಃ ಸರ್ವಂ ಸರ್ವಜ್ಞ ಸಕಲೇಶ್ವರ ।
ವಿಜಾನೀಹಿ ಯಥೈವೇದಮಹಂ ಬುದ್ಧ್ಯೇನುಶಾಸಿತಃ ॥

ಅನುವಾದ

ತಂದೆಯೇ ! ನೀನು ಸರ್ವಜ್ಞನೂ ಸರ್ವೇಶ್ವರನೂ ಆಗಿರುವೆ. ನಾನು ಕೇಳುತ್ತಿರುವುದನ್ನು ನನಗೆ ಚೆನ್ನಾಗಿ ಮನವರಿಕೆಯಾಗುವಂತೆ ದಯಮಾಡಿ ತಿಳಿಸುವವರಾಗಿರಿ. ॥ 8 ॥

(ಶ್ಲೋಕ - 9)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಸಮ್ಯಕ್ಕಾರುಣಿಕಸ್ಯೇದಂ ವತ್ಸ ತೇ ವಿಚಿಕಿತ್ಸಿತಮ್ ।
ಯದಹಂ ಚೋದಿತಃ ಸೌಮ್ಯ ಭಗವದ್ವೀರ್ಯದರ್ಶನೇ ॥

ಅನುವಾದ

ಬ್ರಹ್ಮದೇವರು ಹೇಳಿದರು ಮಗು ನಾರದಾ ! ನೀನು ಜೀವಿ ಗಳ ಮೇಲೆ ಕರುಣೆಯಿಟ್ಟು ಈ ಒಳ್ಳೆಯ ಪ್ರಶ್ನೆಯನ್ನು ಕೇಳಿರುವೆ. ಏಕೆಂದರೆ, ಇದರಿಂದ ಭಗವಂತನ ಗುಣಗಳನ್ನು ವರ್ಣಿಸುವ ಪ್ರೇರಣೆಯು ನನಗುಂಟಾಗಿದೆ. ॥ 9 ॥

(ಶ್ಲೋಕ - 10)

ಮೂಲಮ್

ನಾನೃತಂ ತವ ತಚ್ಚಾಪಿ ಯಥಾ ಮಾಂ ಪ್ರಬ್ರವೀಷಿ ಭೋಃ ।
ಅವಿಜ್ಞಾಯ ಪರಂ ಮತ್ತ ಏತಾವತ್ತ್ವಂ ಯತೋ ಹಿ ಮೇ ॥

ಅನುವಾದ

ನೀನು ನನ್ನ ಕುರಿತು ಹೇಳಿದು ದೆಲ್ಲವೂ ಸತ್ಯವೇ. ಏಕೆಂದರೆ, ನನಗಿಂತಲೂ ಶ್ರೇಷ್ಠವಾಗಿರುವ ಪರತತ್ತ್ವದ ಅರಿವು ಉಂಟಾಗುವವರೆಗೂ ನೀನು ಹೇಳಿದ ಎಲ್ಲ ಪ್ರಭಾವಗಳೂ ನನ್ನಲ್ಲಿ ಇರುವಂತೆ ಕಂಡುಬರುತ್ತದೆ. ವಾಸ್ತವವಾಗಿ ಸಮಗ್ರಶಕ್ತಿಯು ಪರಮಪಿತಾ ಪರಮಾತ್ಮನದ್ದೇ ಆಗಿದೆ. ಅವನ ಪ್ರಭಾವದಿಂದಲೇ ಈ ಸೃಷ್ಟಿಕ್ರಮವು ನಡೆಯುತ್ತಾ ಇದೆ. ॥ 10 ॥

(ಶ್ಲೋಕ - 11)

ಮೂಲಮ್

ಯೇನ ಸ್ವರೋಚಿಷಾ ವಿಶ್ವಂ ರೋಚಿತಂ ರೋಚಯಾಮ್ಯಹಮ್ ।
ಯಥಾರ್ಕೋಗ್ನಿರ್ಯಥಾ ಸೋಮೋ ಯಥರ್ಕ್ಷಗ್ರಹತಾರಕಾಃ ॥

ಅನುವಾದ

ಸೂರ್ಯ, ಚಂದ್ರ, ಅಗ್ನಿ, ಗ್ರಹ, ನಕ್ಷತ್ರ, ತಾರೆಗಳು ಆ ಪರಮಾತ್ಮನ ಪ್ರಕಾಶದಿಂದಲೇ ಜಗತ್ತಿನಲ್ಲಿ ಪ್ರಕಾಶಿತವಾಗುವಂತೆಯೇ, ನಾನೂ ಕೂಡ ಅದೇ ಸ್ವಯಂಪ್ರಕಾಶ ಭಗವಂತನ ಚಿನ್ಮಯ ಪ್ರಕಾಶದಿಂದ ಪ್ರಕಾಶಿತನಾಗಿ ಪ್ರಪಂಚವನ್ನು ಬೆಳಗುತ್ತಿರುವೆನು. ಅರ್ಥಾತ್ ಜಗತ್ತನ್ನು ರಚಿಸುತ್ತಿರುವೆನು. ॥ 11 ॥

(ಶ್ಲೋಕ - 12)

ಮೂಲಮ್

ತಸ್ಮೈ ನಮೋ ಭಗವತೇ ವಾಸುದೇವಾಯ ಧೀಮಹಿ ।
ಯನ್ಮಾಯಯಾ ದುರ್ಜಯಯಾ ಮಾಂ ಬ್ರುವಂತಿ ಜಗದ್ಗುರುಮ್ ॥

ಅನುವಾದ

ಯಾರ ದುರ್ಜಯ ಮಾಯೆ ಯಿಂದ ಮೋಹಿತರಾಗಿ ಜನರು ನನ್ನನ್ನೇ ಜಗದ್ಗುರು ಎಂದು ಹೇಳುತ್ತಾರೋ, ಆ ಮಾಯಾೀಶನಾದ ಭಗವಾನ್ ವಾಸುದೇವನನ್ನು ನಾನು ಧ್ಯಾನಿಸುತ್ತಾ, ವಂದಿಸುತ್ತೇನೆ. ವಾಸ್ತವವಾಗಿ ಜಗದ್ಗುರು ಭಗವಾನ್ ಶ್ರೀಕೃಷ್ಣನೇ ಆಗಿರುವನು (ಕೃಷ್ಣಂ ವಂದೇ ಜಗದ್ಗುರುಮ್). ॥ 12 ॥

(ಶ್ಲೋಕ - 13)

ಮೂಲಮ್

ವಿಲಜ್ಜಮಾನಯಾ ಯಸ್ಯ ಸ್ಥಾತುಮೀಕ್ಷಾಪಥೇಮುಯಾ ।
ವಿಮೋಹಿತಾ ವಿಕತ್ಥಂತೇ ಮಮಾಹಮಿತಿ ರ್ದುಯಃ ॥

ಅನುವಾದ

ಆ ಮಾಯೆಯಾದರೋ ಅವನ ಕಣ್ಣುಮುಂದೆ ನಿಲ್ಲ ಲಾರದೆ ನಾಚಿ ದೂರದಿಂದಲೇ ಓಡಿಹೋಗುತ್ತದೆ. ಆದರೆ ಜಗತ್ತಿನಲ್ಲಿರುವ ಅಜ್ಞಾನಿಗಳು ಆ ಮಾಯೆಯಿಂದ ಮೋಹಿತರಾಗಿ ‘ನಾನು, ನನ್ನದು’ ಹೀಗೆ ಹರಟುತ್ತಾ ಇರುತ್ತಾರೆ. ॥ 13 ॥

(ಶ್ಲೋಕ - 14)

ಮೂಲಮ್

ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ ।
ವಾಸುದೇವಾತ್ಪರೋ ಬ್ರಹ್ಮನ್ನ ಚಾನ್ಯೋರ್ಥೋಸ್ತಿ ತತ್ತ್ವತಃ ॥

ಅನುವಾದ

ನಾರದಾ! ದ್ರವ್ಯವಾಗಲೀ, ಕರ್ಮವಾಗಲೀ, ಕಾಲವಾಗಲೀ, ಸ್ವಭಾವವಾಗಲೀ, ಜೀವವೇ ಆಗಲಿ ಯಾವುದೂ ವಾಸ್ತವವಾಗಿ ಆ ವಾಸುದೇವನಿಂದ ಬೇರೆಯಾದ ಯಾವ ಪದಾರ್ಥವೂ ಇಲ್ಲ. ॥ 14 ॥

(ಶ್ಲೋಕ - 15)

ಮೂಲಮ್

ನಾರಾಯಣಪರಾ ವೇದಾ ದೇವಾ ನಾರಾಯಣಾಂಗಜಾಃ ।
ನಾರಾಯಣಪರಾ ಲೋಕಾ ನಾರಾಯಣಪರಾ ಮಖಾಃ ॥

ಅನುವಾದ

ನಾರಾಯಣನೇ ವೇದಗಳಿಗೆ ತಾತ್ಪರ್ಯವು. ಆ ವೇದಗಳಲ್ಲಿ ಸ್ತುತಿಸಲ್ಪಡುವ ದೇವತೆಗಲೂ ನಾರಾಯಣನ ಅಂಗದಿಂದ ಹುಟ್ಟಿದವರೇ. ಎಲ್ಲ ಯಜ್ಞಗಳಿಂದ ಆರಾಸಲ್ಪಡುವ ವನೂ ನಾರಾಯಣನೇ. ಆ ಯಜ್ಞಗಳಿಂದ ಹೊಂದುವ ಲೋಕ ಗಳೂ ನಾರಾಯಣನನ್ನೇ ಆಶ್ರಯಿಸಿವೆ. ॥ 15 ॥

(ಶ್ಲೋಕ - 16)

ಮೂಲಮ್

ನಾರಾಯಣಪರೋ ಯೋಗೋ ನಾರಾಯಣಪರಂ ತಪಃ ।
ನಾರಾಯಣಪರಂ ಜ್ಞಾನಂ ನಾರಾಯಣಪರಾ ಗತಿಃ ॥

ಅನುವಾದ

ಎಲ್ಲ ಯೋಗ ಗಳಿಗೆ ಲಕ್ಷ್ಯನಾಗಿರುವವನು ನಾರಾಯಣನೇ. ಎಲ್ಲ ತಪಸ್ಸುಗಳು ನಾರಾಯಣನಿಗಾಗಿಯೇ ಮಾಡಲಾಗುತ್ತವೆ. ಜ್ಞಾನಗಮ್ಯನೂ ನಾರಾಯಣನೇ. ಎಲ್ಲಕ್ಕೂ ಪರಮಗತಿಯು ಆ ನಾರಾಯಣನೇ. ॥ 16 ॥

(ಶ್ಲೋಕ - 17)

ಮೂಲಮ್

ತಸ್ಯಾಪಿ ದ್ರಷ್ಟುರೀಶಸ್ಯ ಕೂಟಸ್ಥಸ್ಯಾಖಿಲಾತ್ಮನಃ ।
ಸೃಜ್ಯಂ ಸೃಜಾಮಿ ಸೃಷ್ಟೋಹಮೀಕ್ಷಯೈವಾಭಿಚೋದಿತಃ ॥

ಅನುವಾದ

ಅವನು ದೃಷ್ಟಾ ಆಗಿದ್ದರೂ ಈಶ್ವರನಾಗಿದ್ದಾನೆ, ಒಡೆಯ ನಾಗಿದ್ದಾನೆ. ಕೂಟಸ್ಥ ನಿರ್ವಿಕಾರನಾಗಿದ್ದರೂ ಸರ್ವಸ್ವರೂಪ ನಾಗಿದ್ದಾನೆ. ಅವನೇ ನನ್ನನ್ನು ಸೃಷ್ಟಿಸಿದವನು. ಅವನ ದೃಷ್ಟಿ ಯಿಂದಲೇ ಪ್ರೇರಿತನಾಗಿ, ನಾನು ಅವನ ಇಚ್ಛೆಗನುಗುಣವಾಗಿ ಸೃಷ್ಟಿಯನ್ನು ರಚಿಸುತ್ತೇನೆ. ॥ 17 ॥

(ಶ್ಲೋಕ - 18)

ಮೂಲಮ್

ಸತ್ತ್ವಂ ರಜಸ್ತಮ ಇತಿ ನಿರ್ಗುಣಸ್ಯ ಗುಣಾಸಯಃ ।
ಸ್ಥಿತಿಸರ್ಗನಿರೋಧೇಷು ಗೃಹೀತಾ ಮಾಯಯಾ ವಿಭೋಃ ॥

ಅನುವಾದ

ಆ ಪರಮಾತ್ಮನು ಗುಣಾ ತೀತನು. ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳನ್ನು ಮಾಡಲಿಕ್ಕಾಗಿ ಸತ್ತ್ವ, ರಜ, ತಮೋಗುಣಗಳೆಂಬ ಮೂರು ಗುಣಗಳನ್ನು ತನ್ನ ಮಾಯಾ ಶಕ್ತಿಯಿಂದ ಸ್ವೀಕರಿಸುತ್ತಾನೆ. ॥ 18 ॥

(ಶ್ಲೋಕ - 19)

ಮೂಲಮ್

ಕಾರ್ಯಕಾರಣಕರ್ತೃತ್ವೇ ದ್ರವ್ಯಜ್ಞಾನಕ್ರಿಯಾಶ್ರಯಾಃ ।
ಬಧ್ನಂತಿ ನಿತ್ಯದಾ ಮುಕ್ತಂ ಮಾಯಿನಂ ಪುರುಷಂ ಗುಣಾಃ ॥

ಅನುವಾದ

ಆ ಮೂರು ಗುಣಗಳೇ ದ್ರವ್ಯ, ಜ್ಞಾನ, ಕ್ರಿಯೆ ಇವುಗಳ ಆಶ್ರಯಪಡೆದು, ಸ್ವರೂಪತಃ ನಿತ್ಯ ಮುಕ್ತನೂ, ಮಾಯಾತೀತನೂ ಆದ ಪುರುಷನು ಮಾಯೆಯಲ್ಲಿ ಸ್ಥಿತನಾದಾಗ ಕಾರ್ಯ, ಕಾರಣ, ಕರ್ತೃತ್ವ ಇವುಗಳ ಅಭಿಮಾನ ದಿಂದ ಬಂತನಾಗುತ್ತಾನೆ. ॥ 19 ॥

(ಶ್ಲೋಕ - 20)

ಮೂಲಮ್

ಸ ಏಷ ಭಗವಾಂಲ್ಲಿಂಗೈಸಿಭಿರೇಭಿರಧೋಕ್ಷಜಃ ।
ಸ್ವಲಕ್ಷಿತಗತಿರ್ಬ್ರಹ್ಮನ್ ಸರ್ವೇಷಾಂ ಮಮ ಚೇಶ್ವರಃ ॥

ಅನುವಾದ

ನಾರದಾ ! ಇಂದ್ರಿಯಾತೀತ ಆ ಭಗವಂತನೇ ತ್ರಿಗುಣಗಳ ಆವರಣಗಳಿಂದ ತನ್ನ ಸ್ವರೂಪವನ್ನು ಚೆನ್ನಾಗಿ ಮರೆಮಾಡಿ ಕೊಳ್ಳುವನು. ಇದರಿಂದ ಜನರು ಅವನನ್ನು ತಿಳಿಯಲಾರರು. ಇಡೀ ಜಗತ್ತಿಗೂ ಮತ್ತು ನನಗೂ ಅವನೇ ಏಕ ಮಾತ್ರ ಸ್ವಾಮಿಯಾಗಿದ್ದಾನೆ. ॥ 20 ॥

(ಶ್ಲೋಕ - 21)

ಮೂಲಮ್

ಕಾಲಂ ಕರ್ಮ ಸ್ವಭಾವಂ ಚ ಮಾಯೇಶೋ ಮಾಯಯಾ ಸ್ವಯಾ ।
ಆತ್ಮನ್ಯದೃಚ್ಛಯಾ ಪ್ರಾಪ್ತಂ ವಿಬುಭೂಷುರುಪಾದದೇ ॥

ಅನುವಾದ

ಮಾಯಾೀಶನಾದ ಆ ಭಗವಂತನಿಗೆ ‘ಬಹು ಸ್ಯಾಂ ಪ್ರಜಾ ಯೇಯ’ (ತಾನೇ ಅನೇಕನಾಗಬೇಕು) ಎಂಬ ಇಚ್ಛೆಯು ಉಂಟಾ ದಾಗ ತನ್ನ ಮಾಯೆಯಿಂದ ತನ್ನ ಸ್ವರೂಪದಲ್ಲಿ ಬಂದು ಸೇರಿದ ಕಾಲ, ಕರ್ಮ, ಸ್ವಭಾವ ಇವುಗಳನ್ನು ಸ್ವೀಕರಿಸಿದನು. ॥ 21 ॥

(ಶ್ಲೋಕ - 22)

ಮೂಲಮ್

ಕಾಲಾದ್ಗುಣವ್ಯತಿಕರಃ ಪರಿಣಾಮಃ ಸ್ವಭಾವತಃ ।
ಕರ್ಮಣೋ ಜನ್ಮ ಮಹತಃ ಪುರುಷಾಷ್ಠಿ ತಾದಭೂತ್ ॥

ಅನುವಾದ

ಭಗವಂತನ ಶಕ್ತಿಯಿಂದಲೇ ಕಾಲವು ತ್ರಿಗುಣಗಳಲ್ಲಿ ಕ್ಷೋಭೆಯ ನ್ನುಂಟುಮಾಡಿತು. ಸ್ವಭಾವವು ಅವುಗಳನ್ನು ರೂಪಾಂತರ ಮಾಡಿತು. ಕರ್ಮವು ಮಹತ್ತತ್ತ್ವಕ್ಕೆ ಜನ್ಮನೀಡಿತು. ॥ 22 ॥

(ಶ್ಲೋಕ - 23)

ಮೂಲಮ್

ಮಹತಸ್ತು ವಿಕುರ್ವಾಣಾದ್ರಜಃ ಸತ್ತ್ವೋಪಬೃಂಹಿತಾತ್ ।
ತಮಃಪ್ರಧಾನಸ್ತ್ವಭವದ್ ದ್ರವ್ಯಜ್ಞಾನಕ್ರಿಯಾತ್ಮಕಃ ॥

ಅನುವಾದ

ರಜೋಗುಣ ಮತ್ತು ಸತ್ತ್ವಗುಣಗಳು ವೃದ್ಧಿಗೊಂಡಾಗ ಮಹತ್ತತ್ತ್ವದಲ್ಲಿ ಯಾವ ಯಾವ ವಿಕಾರ ಉಂಟಾಯಿತೋ, ಅದರಿಂದ ಜ್ಞಾನ, ಕ್ರಿಯೆ, ದ್ರವ್ಯರೂಪವಾಗಿ ತಮಃಪ್ರಧಾನವಾದ ವಿಕಾರವುಂಟಾಯಿತು. ॥ 23 ॥

(ಶ್ಲೋಕ - 24)

ಮೂಲಮ್

ಸೋಹಂಕಾರ ಇತಿ ಪ್ರೋಕ್ತೋ ವಿಕುರ್ವನ್ಸಮಭೂತಿಧಾ ।
ವೈಕಾರಿಕಸ್ತೈಜಸಶ್ಚ ತಾಮಸಶ್ಚೇತಿ ಯದ್ಭಿದಾ ।
ದ್ರವ್ಯಶಕ್ತಿಃ ಕ್ರಿಯಾಶಕ್ತಿರ್ಜ್ಞಾನಶಕ್ತಿರಿತಿ ಪ್ರಭೋ ॥

ಅನುವಾದ

ಆ ವಿಕಾರವೇ ಅಹಂಕಾರವು. ಅದು ವಿಕಾರಗೊಂಡು ವೈಕಾರಿಕಾಹಂಕಾರ, ತೈಜಸಾಹಂಕಾರ, ತಾಮಸಾ ಹಂಕಾರ ಎಂಬ ಮೂರು ಬಗೆಯಾಯಿತು. ನಾರದಾ ! ಅವು ಕ್ರಮವಾಗಿ ಜ್ಞಾನಶಕ್ತಿ, ಕ್ರಿಯಾಶಕ್ತಿ, ದ್ರವ್ಯಶಕ್ತಿ ಪ್ರಧಾನವಾಗಿವೆ. ॥ 24 ॥

(ಶ್ಲೋಕ - 25)

ಮೂಲಮ್

ತಾಮಸಾದಪಿ ಭೂತಾದೇರ್ವಿಕುರ್ವಾಣಾದಭೂನ್ನಭಃ ।
ತಸ್ಯ ಮಾತ್ರಾಗುಣಃ ಶಬ್ದೋ ಲಿಂಗಂ ಯದ್ದ್ರಷ್ಟೃ ದೃಶ್ಯಯೋಃ ॥

ಅನುವಾದ

ಪಂಚಭೂತಗಳಿಗೆ ಕಾರಣರೂಪವಾದ ತಾಮಸಾ ಹಂಕಾರದಲ್ಲಿ ವಿಕಾರ ಉಂಟಾದಾಗ ಅದರಿಂದ ಆಕಾಶವು ಉತ್ಪನ್ನವಾಯಿತು. ಆಕಾಶದ ತನ್ಮಾತ್ರೆ ಮತ್ತು ಗುಣ ಶಬ್ದವಾಗಿದೆ. ಈ ಶಬ್ದದ ಮೂಲಕವೇ ದೃಷ್ಟಾ, ದೃಶ್ಯದ ಬೋಧ ಉಂಟಾಗುವುದು. ॥ 25 ॥

(ಶ್ಲೋಕ - 26)

ಮೂಲಮ್

ನಭಸೋಥ ವಿಕುರ್ವಾಣಾದಭೂತ್ ಸ್ಪರ್ಶಗುಣೋನಿಲಃ ।
ಪರಾನ್ವಯಾಚ್ಛಬ್ಧವಾಂಶ್ಚ ಪ್ರಾಣ ಓಜಃ ಸಹೋ ಬಲಮ್ ॥

ಅನುವಾದ

ಆಕಾಶದಲ್ಲಿ ವಿಕಾರ ಉಂಟಾದಾಗ ಅದರಿಂದ ವಾಯು ವಿನ ಉತ್ಪತ್ತಿಯಾಯಿತು. ಅದರ ಗುಣ ಸ್ಪರ್ಶ. ಇದಲ್ಲದೆ ತನ್ನ ಕಾರಣದ ಗುಣವಾದ ಶಬ್ದವೂ ವಾಯುವಿನಲ್ಲಿರುತ್ತದೆ. ಇಂದ್ರಿಯ ಗಳಲ್ಲಿರುವ ಸೂರ್ತಿ, ಶರೀರದಲ್ಲಿರುವ ಜೀವನಶಕ್ತಿ, ಓಜಸ್ಸು, ಬಲಗಳೂ ಇದರ ರೂಪವೇ ಆಗಿದೆ. ॥ 26 ॥

(ಶ್ಲೋಕ - 27)

ಮೂಲಮ್

ವಾಯೋರಪಿ ವಿಕುರ್ವಾಣಾತ್ಕಾಲಕರ್ಮಸ್ವಭಾವತಃ ।
ಉದಪದ್ಯತ ತೇಜೋ ವೈ ರೂಪವತ್ ಸ್ಪರ್ಶಶಬ್ದವತ್ ॥

ಅನುವಾದ

ಕಾಲ, ಕರ್ಮ, ಸ್ವಭಾವಗಳಿಂದ ವಾಯುವಿನಲ್ಲೂ ವಿಕಾರ ಉಂಟಾಯಿತು. ಅದರಿಂದ ತೇಜಸ್ಸಿನ ಉತ್ಪತ್ತಿಯಾಯಿತು. ಇದರ ಪ್ರಧಾನಗುಣ ರೂಪವು. ಇದರ ಜೊತೆಯಲ್ಲಿ ತನ್ನ ಕಾರಣಗಳಾದ ಆಕಾಶ, ವಾಯುಗಳ ಗುಣಗಳಾದ ಶಬ್ದ, ಸ್ಪರ್ಶಗಳೂ ತೇಜಸ್ಸಿನಲ್ಲಿರುತ್ತವೆ. ॥ 27 ॥

(ಶ್ಲೋಕ - 28)

ಮೂಲಮ್

ತೇಜಸಸ್ತು ವಿಕುರ್ವಾಣಾದಾಸೀದಂಭೋ ರಸಾತ್ಮಕಮ್ ।
ರೂಪವತ್ ಸ್ಪರ್ಶವಚ್ಚಾಂಭೋ ಘೋಷವಚ್ಚ ಪರಾನ್ವಯಾತ್ ॥

ಅನುವಾದ

ತೇಜಸ್ಸಿನ ವಿಕಾರದಿಂದ ಜಲದ ಉತ್ಪತ್ತಿಯಾಯಿತು. ಇದರ ಗುಣ ರಸ. ತನ್ನ ಕಾರಣ ತತ್ತ್ವಗಳ ಗುಣ ಶಬ್ದ, ಸ್ಪರ್ಶ, ರೂಪ ಇವುಗಳೂ ಜಲದಲ್ಲಿರುತ್ತವೆ. ॥ 28 ॥

(ಶ್ಲೋಕ - 29)

ಮೂಲಮ್

ವಿಶೇಷಸ್ತು ವಿಕುರ್ವಾಣಾದಂಭಸೋ ಗಂಧವಾನಭೂತ್ ।
ಪರಾನ್ವಯಾದ್ ರಸಸ್ಪರ್ಶಶಬ್ದರೂಪಗುಣಾನ್ವಿತಃ ॥

ಅನುವಾದ

ಜಲದ ವಿಕಾರದಿಂದ ಪೃಥ್ವಿಯ ಉತ್ಪತ್ತಿ ಯಾಯಿತು. ಇದರ ಗುಣ ಗಂಧ. ‘ಕಾರಣದ ಗುಣಗಳು ಕಾರ್ಯ ದಲ್ಲಿ ಬರುತ್ತವೆ.’ ಈ ನ್ಯಾಯದಿಂದ ಶಬ್ದ, ಸ್ಪರ್ಶ, ರೂಪ, ರಸ ಈ ನಾಲ್ಕೂ ಗುಣಗಳನ್ನು ಪೃಥ್ವಿಯು ಹೊಂದಿರುತ್ತದೆ. ॥ 29 ॥

(ಶ್ಲೋಕ - 30)

ಮೂಲಮ್

ವೈಕಾರಿಕಾನ್ಮನೋ ಜಜ್ಞೇ ದೇವಾ ವೈಕಾರಿಕಾ ದಶ ।
ದಿಗ್ವಾತಾರ್ಕಪ್ರಚೇತೋಶ್ವಿ ವಹ್ನೀಂದ್ರೋಪೇಂದ್ರಮಿತ್ರಕಾಃ ॥

ಅನುವಾದ

ವೈಕಾರಿಕ ಅಹಂಕಾರದಿಂದ ಮನಸ್ಸು ಮತ್ತು ಇಂದ್ರಿಯಗಳ ಅಷ್ಠಾತೃಗಳಾದ ಹತ್ತು ದೇವತೆಗಳ ಉತ್ಪತ್ತಿಯಾಯಿತು. ದಿಕ್ಕು ಗಳು, ವಾಯು, ಸೂರ್ಯ, ವರುಣ, ಅಶ್ವಿನೀದೇವತೆಗಳು, ಅಗ್ನಿ, ಇಂದ್ರ, ಉಪೇಂದ್ರ, ಮಿತ್ರ, ಪ್ರಜಾಪತಿ ಇವರೆ ಆ ಹತ್ತು ದೇವತೆಗಳು. ॥ 30 ॥

(ಶ್ಲೋಕ - 31)

ಮೂಲಮ್

ತೈಜಸಾತ್ತು ವಿಕುರ್ವಾಣಾದಿಂದ್ರಿಯಾಣಿ ದಶಾಭವನ್ ।
ಜ್ಞಾನಶಕ್ತಿಃ ಕ್ರಿಯಾಶಕ್ತಿರ್ಬುದ್ಧಿಃ ಪ್ರಾಣಶ್ಚ ತೈಜಸೌ ।
ಶ್ರೋತ್ರಂ ತ್ವಗ್ಘ್ರಾಣ ದೃಗ್ಜಿಹ್ವಾವಾಗ್ದೋರ್ಮೇಢ್ರಾಂಘ್ರಿಪಾಯವಃ ॥

ಅನುವಾದ

ತೈಜಸ ಅರ್ಥಾತ್ ರಾಜಸ ಅಹಂಕಾರದಿಂದ ಶ್ರೋತೃ, ತ್ವಕ್, ನೇತ್ರ, ಜಿಹ್ವೆ ಮತ್ತು ಘ್ರಾಣ ಈ ಐದು ಜ್ಞಾನೇಂದ್ರಿಯಗಳೂ ಹಾಗೂ ವಾಣಿ, ಹಸ್ತ, ಪಾದ, ಗುದ, ಜನನೇಂದ್ರಿಯ ಐದು ಕರ್ಮೇಂದ್ರಿಯಗಳೂ ಉತ್ಪನ್ನವಾದುವು. ಜೊತೆಗೆ ಜ್ಞಾನಶಕ್ತಿರೂಪವಾದ ಬುದ್ಧಿಯೂ, ಕ್ರಿಯಾಶಕ್ತಿ ರೂಪ ವಾದ ಪ್ರಾಣವೂ ತೈಜಸಾಹಂಕಾರದಿಂದಲೇ ಉಂಟಾದುವು. ॥ 31 ॥

(ಶ್ಲೋಕ - 32)

ಮೂಲಮ್

ಯದೈತೇಸಂಗತಾ ಭಾವಾ ಭೂತೇಂದ್ರಿಯಮನೋಗುಣಾಃ ।
ಯದಾಯತನನಿರ್ಮಾಣೇ ನ ಶೇಕುರ್ಬ್ರಹ್ಮವಿತ್ತಮ ॥

ಅನುವಾದ

ಬ್ರಾಹ್ಮಣಶ್ರೇಷ್ಠ ನಾರದಾ ! ಈ ಪಂಚಭೂತಗಳೂ, ಇಂದ್ರಿಯ ಗಳೂ, ಮನಸ್ಸೂ, ತ್ರಿಗುಣಗಳೂ ಪರಸ್ಪರ ಸೇರದೆ ಪ್ರತ್ಯೇಕ ವಾಗಿದ್ದಾಗ ಅವುಗಳಿಗೆ ತಮ್ಮ ವಾಸಕ್ಕಾಗಿ ಭೋಗಗಳ ಸಾಧನರೂಪಿ ಶರೀರದ ರಚನೆಯನ್ನು ಮಾಡದಾದವು. ॥ 32 ॥

(ಶ್ಲೋಕ - 33)

ಮೂಲಮ್

ತದಾ ಸಂಹತ್ಯ ಚಾನ್ಯೋನ್ಯಂ ಭಗವಚ್ಛಕ್ತಿ ಚೋದಿತಾಃ ।
ಸದಸತ್ತ್ವ ಮುಪಾದಾಯ ಚೋಭಯಂ ಸಸೃಜುರ್ಹ್ಯದಃ ॥

ಅನುವಾದ

ಭಗವಂತನು ತನ್ನ ಶಕ್ತಿಯಿಂದ ಇವನ್ನು ಪ್ರೇರೇಪಿಸಿದಾಗ ಇವು ಪರಸ್ಪರ ಒಂದರೊಡನೆ ಒಂದು ಬೆರೆತು ಕಾರ್ಯಕಾರಣ ಭಾವವನ್ನು ಪಡೆದು ಕ್ರಮವಾಗಿ ವ್ಯಷ್ಟಿ ಮತ್ತು ಸಮಷ್ಟಿರೂಪವಾದ ಪಿಂಡಾಂಡ ಹಾಗೂ ಬ್ರಹ್ಮಾಂಡ ಎರಡನ್ನೂ ರಚಿಸಿದವು. ॥ 33 ॥

(ಶ್ಲೋಕ - 34)

ಮೂಲಮ್

ವರ್ಷಪೂಗಸಹಸ್ರಾಂತೇ ತದಂಡಮುದಕೇಶಯಮ್ ।
ಕಾಲಕರ್ಮಸ್ವಭಾವಸ್ಥೋ ಜೀವೋಜೀವಮಜೀವಯತ್ ॥

ಅನುವಾದ

ಆ ಬ್ರಹ್ಮಾಂಡ ರೂಪವಾದ ಅಂಡವು ಒಂದು ಸಾವಿರ ವರ್ಷಕಾಲ ನಿರ್ಜೀವವಾಗಿ ನೀರಿನಲ್ಲಿ ಬಿದ್ದಿತ್ತು. ಮತ್ತೆ ಕಾಲ, ಕರ್ಮ, ಸ್ವಭಾವಗಳನ್ನು ಸ್ವೀಕರಿಸಿದ ಭಗವಂತನು ಅದನ್ನು ಜೀವಂತಗೊಳಿಸಿದನು, ಅರ್ಥಾತ್ ಜೀವರೂಪದಿಂದ ಅದರಲ್ಲಿ ಪ್ರವೇಶಿಸಿದನು. ॥ 34 ॥

(ಶ್ಲೋಕ - 35)

ಮೂಲಮ್

ಸ ಏವ ಪುರುಷಸ್ತಸ್ಮಾದಂಡಂ ನಿರ್ಭಿದ್ಯ ನಿರ್ಗತಃ ।
ಸಹಸ್ರೋರ್ವಂಘ್ರಿಬಾಹ್ವಕ್ಷಃ ಸಹಸ್ರಾನನಶೀರ್ಷವಾನ್ ॥

ಅನುವಾದ

ಆ ಅಂಡವನ್ನು ಒಡೆದುಕೊಂಡು ಅದರಿಂದ ಹೊರಟು ಬಂದವನೇ ಸಾವಿರತೊಡೆ, ಸಾವಿರಪಾದ, ಸಾವಿರಭುಜ, ಸಾವಿರ ನೇತ್ರ, ಸಾವಿರಮುಖ, ಸಾವಿರ ತಲೆಗಳುಳ್ಳ ವಿರಾಟ್ಪುರುಷನು. ॥ 35 ॥

(ಶ್ಲೋಕ - 36)

ಮೂಲಮ್

ಯಸ್ಯೇಹಾವಯವೈರ್ಲೋಕಾನ್ಕಲ್ಪಯಂತಿ ಮನೀಷಿಣಃ ।
ಕಟ್ಯಾದಿಭಿರಧಃ ಸಪ್ತ ಸಪ್ತೋರ್ಧ್ವಂ ಜಘನಾದಿಭಿಃ ॥

ಅನುವಾದ

ವಿದ್ವಾಂಸರು ಉಪಾಸನೆಗೋಸ್ಕರ ಆ ವಿರಾಟ್ ಪುರುಷನ ಅಂಗಗಳಲ್ಲೇ ಸಮಸ್ತ ಲೋಕಗಳನ್ನೂ, ಅವುಗಳಲ್ಲಿರುವ ವಸ್ತು ಗಳನ್ನೂ ಕಲ್ಪಿಸಿಕೊಳ್ಳುತ್ತಾರೆ. ಆತನ ನಡುವಿನಿಂದ ಕೆಳಗಿನ ಅಂಗ ಗಳಲ್ಲಿ ಏಳು ಪಾತಾಳಗಳನ್ನೂ, ಸೊಂಟದ ಮೇಲಿರುವ ಅಂಗ ಗಳಲ್ಲಿ ಏಳು ಸ್ವರ್ಗಗಳನ್ನೂ, ಕಲ್ಪಿಸಿಕೊಳ್ಳುತ್ತಾರೆ. ॥ 36 ॥

(ಶ್ಲೋಕ - 37)

ಮೂಲಮ್

ಪುರುಷಸ್ಯ ಮುಖಂ ಬ್ರಹ್ಮ ಕ್ಷತ್ರಮೇತಸ್ಯ ಬಾಹವಃ ।
ಊರ್ವೋರ್ವೈಶ್ಯೋ ಭಗವತಃ ಪದ್ಭ್ಯಾಂ ಶೂದ್ರೋಭ್ಯಜಾಯತ ॥

ಅನುವಾದ

ಬ್ರಾಹ್ಮಣರು ಈ ವಿರಾಟ್ಪುರುಷನ ಬಾಯಿಯಿಂದಲೂ, ಭುಜಗಳಿಂದ ಕ್ಷತ್ರಿ ಯರೂ, ವೈಶ್ಯರು ಆ ಭಗವಂತನ ತೊಡೆಗಳಿಂದಲೂ, ಶೂದ್ರರು ಪಾದಗಳಿಂದಲೂ ಜನಿಸಿದರು. ॥ 37 ॥

(ಶ್ಲೋಕ - 38)

ಮೂಲಮ್

ಭೂರ್ಲೋಕಃ ಕಲ್ಪಿತಃ ಪದ್ಭ್ಯಾಂ ಭುವರ್ಲೋಕೋಸ್ಯ ನಾಭಿತಃ ।
ಹೃದಾ ಸ್ವರ್ಲೋಕ ಉರಸಾ ಮಹರ್ಲೋಕೋ ಮಹಾತ್ಮನಃ ॥

ಅನುವಾದ

ಕಾಲಿನಿಂದ ಹಿಡಿದು ಕಟಿಯವರೆಗೆ ಏಳೂ ಪಾತಾಳಗಳೂ ಮತ್ತು ಭೂಲೋಕವು ಕಲ್ಪಿತ ವಾಗುತ್ತದೆ. ಆತನ ನಾಭಿಯಲ್ಲಿ ಭುವರ್ಲೋಕವನ್ನೂ, ಹೃದಯದಲ್ಲಿ ಸ್ವರ್ಲೋಕವನ್ನೂ, ವಕ್ಷಃಸ್ಥಳದಲ್ಲಿ ಮಹರ್ಲೋಕವನ್ನೂ ಕಲ್ಪಿಸ ಲಾಗಿದೆ. ॥ 38 ॥

(ಶ್ಲೋಕ - 39)

ಮೂಲಮ್

ಗ್ರೀವಾಯಾಂ ಜನಲೋಕಶ್ಚ ತಪೋಲೋಕಃ ಸ್ತನದ್ವಯಾತ್ ।
ಮೂರ್ಧಭಿಃ ಸತ್ಯಲೋಕಸ್ತು ಬ್ರಹ್ಮಲೋಕಃ ಸನಾತನಃ ॥

ಅನುವಾದ

ಕತ್ತಿನಲ್ಲಿ ಜನೋಲೋಕವೂ, ಎರಡು ಸ್ತನಗಳಲ್ಲಿ ತಪೋಲೋಕವೂ, ಮಸ್ತಕದಲ್ಲಿ ನನ್ನ ನಿತ್ಯನಿವಾಸಸ್ಥಾನವಾದ ಸತ್ಯಲೋಕವೂ ಭಾವಿತವಾಗಿದೆ. ॥ 39 ॥

(ಶ್ಲೋಕ - 40)

ಮೂಲಮ್

ತತ್ಕಟ್ಯಾಂ ಚಾತಲಂ ಕ್ಲೃಪ್ತಮೂರುಭ್ಯಾಂ ವಿತಲಂ ವಿಭೋಃ ।
ಜಾನುಭ್ಯಾಂ ಸುತಲಂ ಶುದ್ಧಂ ಜಂಘಾಭ್ಯಾಂ ತು ತಲಾತಲಮ್ ॥

ಅನುವಾದ

ಆ ವಿರಾಟ್ಪುರುಷನ ನಡುವಿನಲ್ಲಿ ಅತಲ ಲೋಕವೂ, ತೊಡೆಯಲ್ಲಿ ವಿತಲವೂ, ಮಂಡಿಗಳಲ್ಲಿ ಪವಿತ್ರವಾದ ಸುತಲಲೋಕವೂ, ಮೊಣಕಾಲುಗಳಲ್ಲಿ ತಲಾತಲಲೋಕವೂ ಕಲ್ಪಿತವಾಗಿದೆ. ॥ 40 ॥

(ಶ್ಲೋಕ - 41)

ಮೂಲಮ್

ಮಹಾತಲಂ ತು ಗುಲಾಭ್ಯಾಂ ಪ್ರಪದಾಭ್ಯಾಂ ರಸಾತಲಮ್ ।
ಪಾತಾಲಂ ಪಾದತಲತ ಇತಿ ಲೋಕಮಯಃ ಪುಮಾನ್ ॥

ಅನುವಾದ

ಕಾಲಿನ ಹರಡು ಗಳಲ್ಲಿ ಮಹಾತಲವೂ, ಪಾದಾಗ್ರದಲ್ಲಿ ರಸಾತಲವೂ, ಅಂಗಾಲಿ ನಲ್ಲಿ ಪಾತಾಳವನ್ನೂ ಭಾವಿಸುತ್ತಾರೆ. ಹೀಗೆ ವಿರಾಟ್ಪುರುಷನು ಸರ್ವಲೋಕಮಯನಾಗಿದ್ದಾನೆ. ॥ 41 ॥

(ಶ್ಲೋಕ - 42)

ಮೂಲಮ್

ಭೂರ್ಲೋಕಃ ಕಲ್ಪಿತಃ ಪದ್ಭ್ಯಾಂ ಭುವರ್ಲೋಕೋಸ್ಯ ನಾಭಿತಃ ।
ಸ್ವರ್ಲೋಕಃ ಕಲ್ಪಿತೋ ಮೂರ್ಧ್ನಾ ಇತಿ ವಾ ಲೋಕಕಲ್ಪನಾ ॥

ಅನುವಾದ

ಅಥವಾ ಆ ವಿರಾಟ್ ಪುರುಷನ ಅಂಗಗಳಲ್ಲಿ, ಪಾದಗಳಲ್ಲಿ ಭೂಲೋಕ, ನಾಭಿಯಲ್ಲಿ ಭುವರ್ಲೋಕ, ಶಿರಸ್ಸಿನಲ್ಲಿ ಸ್ವರ್ಲೋಕಗಳನ್ನೂ ಕಲ್ಪಿಸಬಹುದು.॥42॥

ಅನುವಾದ (ಸಮಾಪ್ತಿಃ)

ಐದನೆಯ ಅಧ್ಯಾಯವು ಮುಗಿಯಿತು.॥5॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಿತೀಯಸ್ಕಂಧೇ ಪಂಚಮೋಽಧ್ಯಾಯಃ ॥5॥