ಮೂಲಮ್
ಅಹಮೇವಾಸಮೇವಾಗ್ರೇ ನಾನ್ಯದ್ ಯತ್ ಸದಸತ್ ಪರಮ್ ।
ಪಶ್ಚಾದಹಂ ಯದೇತಚ್ಚ ಯೋಽವಶಿಷ್ಯೇತ ಸೋಽಸ್ಮ್ಯಹಮ್ ॥1॥
ಋತೇಽರ್ಥಂ ಯತ್ ಪ್ರತಿಯೇತ ನ ಪ್ರತೀಯೇತ ಚಾತ್ಮನಿ ।
ತದ್ವಿದ್ಯಾದಾತ್ಮನೋ ಮಾಯಾಂ ಯಥಾಽಽಭಾಸೋ ಯಥಾ ತಮಃ ॥2॥
ಯಥಾ ಮಹಾಂತಿ ಭೂತಾನಿ ಭೂತೇಷೂಚ್ಚಾವಚೇಷ್ವನು ।
ಪ್ರವಿಷ್ಟಾನ್ಯಪ್ರವಿಷ್ಟಾನಿ ತಥಾ ತೇಷು ನ ತೇಷ್ವಹಮ್ ॥3॥
ಏತಾವದೇವ ಜಿಜ್ಞಾಸ್ಯಂ ತತ್ತ್ವಜಿಜ್ಞಾಸುನಾಽಽತ್ಮನಃ ।
ಅನ್ವಯವ್ಯತಿರೇಕಾಭ್ಯಾಂ ಯತ್ ಸ್ಯಾತ್ ಸರ್ವತ್ರ ಸರ್ವದಾ ॥4॥
ಅನುವಾದ
(ಶ್ರೀಮದ್ಭಾಗವತ 2/9/32-35)
ಸೃಷ್ಟಿಯ ಮೊದಲು ನಾನೇ ನಾನಾಗಿದ್ದೇನೆ. ನನ್ನನ್ನು ಬಿಟ್ಟು ಸ್ಥೂಲವಾಗಲೀ, ಸೂಕ್ಷ್ಮವಾಗಲೀ, ಎರಡರ ಕಾರಣವಾದ ಅಜ್ಞಾನ ವಾಗಲೀ ಇರಲಿಲ್ಲ. ಸೃಷ್ಟಿ ಇಲ್ಲದ ಕಡೆಯಲ್ಲೂ ನಾನೇ ನಾನಾಗಿದ್ದೇನೆ. ಮತ್ತು ಈ ಸೃಷ್ಟಿಯ ರೂಪದಲ್ಲಿ ಕಂಡು ಬರುವುದೆಲ್ಲವೂ ನಾನೇ ಆಗಿದ್ದೇನೆ. ಏನಾದರೂ ಉಳಿದರೂ ಅದೂ ನಾನೇ ಆಗಿದ್ದೇನೆ. ॥1॥ ವಾಸ್ತವವಾಗಿ ಇಲ್ಲದಿದ್ದರೂ ಏನೆಲ್ಲ ಅನಿರ್ವಚನೀಯ ವಸ್ತು ಗಳಿರುವೆಯೋ, ನಾನಲ್ಲದೆ ಪರಮಾತ್ಮನಾದ ನನ್ನ ಎರಡು ಚಂದ್ರರಂತೆ ಮುಥ್ಯೆಯಾಗಿಯೇ ಪ್ರತೀತವಾಗುತ್ತದೋ, ಅಥವಾ ಇದ್ದು ಕೊಂಡಿದ್ದರೂ ಆಕಾಶದ ನಕ್ಷತ್ರಗಳಲ್ಲಿ ರಾಹುವಿನಂತೆ ನನ್ನ ಪ್ರತೀತ ಆಗುವುದಿಲ್ಲವೋ ಇದನ್ನು ನನ್ನ ಮಾಯೆಯೆಂದು ತಿಳಿಯಬೇಕು. ॥2॥ ಪ್ರಾಣಿಗಳ ಪಂಚಭೂತ ರಚಿತ ಸಣ್ಣ - ದೊಡ್ಡ ಶರೀರಗಳಲ್ಲಿ ಆಕಾಶಾದಿ ಪಂಚ ಮಹಾಭೂತಗಳು ಈ ಶರೀರಗಳ ಕಾರ್ಯ ರೂಪದಿಂದ ನಿರ್ಮಿತವಾದ ಕಾರಣ ಪ್ರವೇಶಿಸುತ್ತವೆ ಮತ್ತು ಮೊದಲಿನಿಂದಲೂ ಆ ಸ್ಥಾನಗಳಲ್ಲಿ ಮತ್ತು ರೂಪಗಳಲ್ಲಿ ಕಾರಣರೂಪದಿಂದ ಇರುವುದರಿಂದ ಪ್ರವೇಶಿಸುವಿದಿಲ್ಲ. ಹಾಗೆಯೇ ಆ ಪ್ರಾಣಿಗಳ ಶರೀರ ದೃಷ್ಟಿಯಿಂದ ನಾನು ಅವುಗಳಲ್ಲಿ ಆತ್ಮನ ರೂಪದಿಂದ ಪ್ರವೇಶಿಸಿರುವೆನು ಹಾಗೂ ಆತ್ಮ ದೃಷ್ಟಿಯಿಂದ ನಾನಲ್ಲದೆ ಬೇರೆ ಯಾವ ವಸ್ತವೂ ಇಲ್ಲದಿರುವುದರಿಂದ ಅವುಗಳಲ್ಲಿ ಪ್ರವಿಷ್ಟನಾಗಿಯೂ ಇಲ್ಲ. ॥3॥ ಇದು ಬ್ರಹ್ಮವಲ್ಲ ಹೀಗೆ ನಿಷೇಧದ ಪದ್ಧತಿಯಿಂದ ಮತ್ತು ಇದು ಬ್ರಹ್ಮವಾಗಿದೆ, ಇದು ಬ್ರಹ್ಮವಾಗಿದೆ ಎಂಬ ಅನ್ವಯ ಪದ್ಧತಿಯಿಂದ ಸರ್ವಾತೀತ,ಸರ್ವಸ್ವರೂಪ ಭಗವಂತನೇ ಸರ್ವದಾ, ಸರ್ವತ್ರ ಸ್ಥಿತನಾಗಿದ್ದಾನೆ ಎಂಬುದು ಸಿದ್ಧವಾಗುತ್ತದೆ. ಅದೇ ವಾಸ್ತವಿಕ ತತ್ತ್ವವಾಗಿದೆ. ಯಾರು ಆತ್ಮಾ ಅಥವಾ ಪರಮಾತ್ಮನ ತತ್ತ್ವವನ್ನು ತಿಳಿಯಲು ಬಯಸುವನೋ, ಅವನಿಗೆ ಕೇವಲ ಇಷ್ಟೇ ತಿಳಿಯುವ ಅವಶ್ಯಕತೆಯಿದೆ. ॥4॥