೦೦೦ ಸೂ ಕೆಡೆದ ...{Loading}...
ಸೂ. ಕೆಡೆದ ಕೌರವನೃಪನ ನೇಮವ
ಪಡೆದು ಕೃಪ ಕೃತವರ್ಮ ಗುರುಸುತ
ರೊಡನೆ ಬಂದರು ಸಾರಿದರು ಪಾಂಡವರ ಪಾಳೆಯವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನಾ: ನೆಲಕ್ಕೆ ಬಿದ್ದ ಕೌರವನೃಪಾಲನ ಅನುಮತಿಯನ್ನು ಪಡೆದು ಕೃಪ, ಕೃತವರ್ಮ, ಅಶ್ವತ್ಥಾಮರು ಜೊತೆಯಾಗಿ ಪಾಂಡವರ ಪಾಳೆಯದತ್ತ ಬಂದರು.
ಮೂಲ ...{Loading}...
ಸೂ. ಕೆಡೆದ ಕೌರವನೃಪನ ನೇಮವ
ಪಡೆದು ಕೃಪ ಕೃತವರ್ಮ ಗುರುಸುತ
ರೊಡನೆ ಬಂದರು ಸಾರಿದರು ಪಾಂಡವರ ಪಾಳೆಯವ
೦೦೧ ಕೇಳು ಧೃತರಾಷ್ಟ್ರಾವನೀಶ ...{Loading}...
ಕೇಳು ಧೃತರಾಷ್ಟ್ರಾವನೀಶ ಕ
ರಾಳ ಲೋಹಗದಾಭಿಹತಿಗೆ ನೃ
ಪಾಲ ಬಿದ್ದನು ಭಾರತದ ದುಸ್ಸಂಗ ಭಂಗದಲಿ
ಮೇಲೆ ಚಾರಣ ಸೂತ ಮಾಗಧ
ಜಾಲ ಹೊಗಳಿತು ಗರುವ ಕುರುಭೂ
ಪಾಲ ಗಂಡಿಗನಕಟೆನುತ ಕೊಂಡಾಡಿತಮರಗಣ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರರಾಜನೇ ಕೇಳು, ಭರತ ವಂಶದ ದುಷ್ಟ ಸಂಗವು ಭಂಗವಾದಂತೆ ಭೀಕರವಾದ ಲೋಹದ ಗದೆಯ ಹೊಡೆತಕ್ಕೆ ದುರ್ಯೋಧನ ಬಿದ್ದನು. ಆಕಾಶದಲ್ಲಿ ಚಾರಣ, ಸೂತ, ಮಾಗಧರ ಸಮೂಹವು ದುರ್ಯೋಧನನ ಧೈರ್ಯವನ್ನು ಹೊಗಳಿತು. ದೇವತಾ ಸಮೂಹವು ‘ಕುರುಭೂಪಾಲ ಗಂಡಿಗ’ನೆಂದು ಕೊಂಡಾಡಿತು.
ಪದಾರ್ಥ (ಕ.ಗ.ಪ)
ಕರಾಳ-ಭೀಕರ, ಭಯಂಕರ, ಲೋಹ ಗದಾಭಿಹತಿಗೆ-ಲೋಹದ ಗದೆಯ ಹೊಡೆತಕ್ಕೆ, ದುಸ್ಸಂಗ-ಕೆಟ್ಟ ಸಹವಾಸ, ಭಂಗ-ನಾಶ, ಸೋಲು ಅವಮಾನ, ಚಾರಣ, ಸೂತ, ಮಾಗಧ-ಹೊಗಳುಭಟ್ಟರು, ವಂದಿಜನ, ಗರುವ-ಹೆಮ್ಮೆಯ, ಧೀರನಾದ, ಗಂಡಿಗ-ಕಲಿ, ವೀರ ಗಂಡಸು
ಟಿಪ್ಪನೀ (ಕ.ಗ.ಪ)
ಸೂತ, ಮಾಗಧ, ವಂದಿ ಇವರುಗಳ ಬಗ್ಗೆ ವಿವರಣೆಗಳಿಗೆ ಇದೇ ಸಂಧಿಯ 42ನೆಯ ಪದ್ಯದ ಟಿಪ್ಪಣಿಯನ್ನು ನೋಡಿ.
ಮೂಲ ...{Loading}...
ಕೇಳು ಧೃತರಾಷ್ಟ್ರಾವನೀಶ ಕ
ರಾಳ ಲೋಹಗದಾಭಿಹತಿಗೆ ನೃ
ಪಾಲ ಬಿದ್ದನು ಭಾರತದ ದುಸ್ಸಂಗ ಭಂಗದಲಿ
ಮೇಲೆ ಚಾರಣ ಸೂತ ಮಾಗಧ
ಜಾಲ ಹೊಗಳಿತು ಗರುವ ಕುರುಭೂ
ಪಾಲ ಗಂಡಿಗನಕಟೆನುತ ಕೊಂಡಾಡಿತಮರಗಣ ॥1॥
೦೦೨ ಏನನೆಮ್ಬೆನು ಜೀಯ ...{Loading}...
ಏನನೆಂಬೆನು ಜೀಯ ಮಹಿಯಲಿ
ಮಾನನಿಧಿ ಮಲಗಿದನಲೈ ತವ
ಸೂನು ರುಧಿರದ ತಿಲಕವಾದನಲೈ ಧರಾಂಗನೆಗೆ
ಭಾನುಮತಿ ವೈಧವ್ಯವಿಧಿಗಿ
ನ್ನೇನ ನೋಂತಳೊ ರಾಜರವಿಯವ
ಸಾನಸಮಯದೊಳಾದುದದ್ಭುತವರಸ ಕೇಳ್ ಎಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನು ಹೇಳಲಿ ಒಡೆಯಾ! ಮಾನನಿಧಿ ಭೂಮಿಯ ಮೇಲೆ ಮಲಗಿದ. ನಿನ್ನ ಮಗ ಭೂದೇವಿಗೆ ರಕ್ತದ ತಿಲಕವಾದ. (ರಕ್ತದಿಂದ ತೊಯ್ದು ಕೆಂಪುಬಣ್ಣವು ವ್ಯಾಪಿಸಿದ್ದ ಇಡೀ ದೇಹವೇ ರಕ್ತ ತಿಲಕದಂತಿತ್ತು) ಭಾನುಮತಿಯು ವೈಧವ್ಯವನ್ನು ಪಡೆಯಲು ಏನು ವ್ರತ ಮಾಡಿದ್ದಳೋ! ರಾಜ ಸಮೂಹದಲ್ಲಿ ಸೂರ್ಯನಂತಿದ್ದ ದುರ್ಯೋಧನನ ಅವಸಾನ ಸಮಯದಲ್ಲಿ ಅದ್ಭುತ ಘಟನೆಗಳು ನಡೆದುವು - ಕೇಳು ಧೃತರಾಷ್ಟ್ರ - ಎಂದು ಸಂಜಯ ಹೇಳತೊಡಗಿದ.
ಪದಾರ್ಥ (ಕ.ಗ.ಪ)
ಮಹಿ-ಭೂಮಿ, ನೆಲ, ಮಾನನಿಧಿ-ಮಾನವನ್ನೆ ಐಶ್ವರ್ಯವಾಗುಳ್ಳವನು, (ಇಲ್ಲಿ ದುರ್ಯೋಧನ), ಧರಾಂಗನೆ-ಭೂದೇವಿ, ಭೂಮಿಯೆಂಬ ಹೆಂಗಸು, ವೈಧವ್ಯವಿಧಿ-ವಿಧವೆಯಾಗುವ ದುರ್ದೈವ, ನೋಂತಳೋ-ವ್ರತ ಮಾಡಿದ್ದಳೋ, ರಾಜರವಿ-ರಾಜರಲ್ಲಿ ಸೂರ್ಯನಂತಿರುವವನು (ಇಲ್ಲಿ ದುರ್ಯೋಧನ)
ಟಿಪ್ಪನೀ (ಕ.ಗ.ಪ)
- ‘ರುಧಿರದ ತಿಲಕವಾದನಲೈ ಧರಾಂಗನೆಗೆ’ ಎಂಬಲ್ಲಿನ ವಿಶೇಷವನ್ನು ಗಮನಿಸಬಹುದು. ದುರ್ಯೋಧನ ಇನ್ನೇನು ಸಾಯುವುದರಲ್ಲಿದ್ದಾನೆ. ಸತ್ತರೆ ಭೂದೇವಿ ವಿಧವೆಯಾಗುತ್ತಾಳೆ ಏಕೆಂದರೆ ದುರ್ಯೋಧನ ಭೂಪತಿ. ಆದರೆ ತಾನು ಸತ್ತರೂ ಭೂದೇವಿ ವಿಧವೆಯಾಗಬಾರದೆಂಬುದಕ್ಕಾಗಿ ಅವನೇ ಅವಳ ಹಣೆಯ ತಿಲಕವಾದ - ಎಂಬ ರೂಪಕಧ್ವನಿ ಹೃದಯಂಗಮವಾಗಿದೆ.
ಮೂಲ ...{Loading}...
ಏನನೆಂಬೆನು ಜೀಯ ಮಹಿಯಲಿ
ಮಾನನಿಧಿ ಮಲಗಿದನಲೈ ತವ
ಸೂನು ರುಧಿರದ ತಿಲಕವಾದನಲೈ ಧರಾಂಗನೆಗೆ
ಭಾನುಮತಿ ವೈಧವ್ಯವಿಧಿಗಿ
ನ್ನೇನ ನೋಂತಳೊ ರಾಜರವಿಯವ
ಸಾನಸಮಯದೊಳಾದುದದ್ಭುತವರಸ ಕೇಳೆಂದ ॥2॥
೦೦೩ ನಡುಗಿತಿಳೆ ನಿರ್ಘಾತದಲಿ ...{Loading}...
ನಡುಗಿತಿಳೆ ನಿರ್ಘಾತದಲಿ ಬರ
ಸಿಡಿಲು ಸುಳಿದುದು ನೆಣನ ಬಸೆಸಹಿ
ತಡಗು ಸುರಿದವು ಕದಡಿ ಹರಿದುದು ರಕುತದರೆವೊನಲು
ಸಿಡಿದವರೆಗಳು ಕೆರೆಗಳುಕ್ಕಿದ
ವಡಿಗಡಿಗೆ ಹೆಮ್ಮರ ನಿವಾತದ
ಲುಡಿದು ಬಿದ್ದವು ಕೌರವೇಂದ್ರನ ಪತನ ಕಾಲದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವೇಂದ್ರನ ಪತನ ಕಾಲದಲ್ಲಿ ಭೂಮಿ ನಡುಗಿತು. ರಭಸವಾದ ಪೆಟ್ಟು ನೀಡಿ ಬರಸಿಡಿಲು ಸುಳಿಯಿತು. ಕೊಬ್ಬಿನ ಮೇದಸ್ಸು ಸಹಿತವಾಗಿ ಮಾಂಸಗಳು ಮೇಲಿನಿಂದ ಸುರಿದವು. ರಕ್ತದ ಅರೆಪ್ರವಾಹ ಕದಡಿ ಹರಿಯಿತು. ಬಂಡೆಗಳು ಸಿಡಿದವು, ಕÉರೆಗಳು ಉಕ್ಕಿದವು. ಹೆಜ್ಜೆ ಹೆಜ್ಜೆಗೆ ಹೆಮ್ಮರಗಳು ಬಿರುಗಾಳಿಯಲ್ಲಿ ಮುರಿದು ಬಿದ್ದವು.
ಪದಾರ್ಥ (ಕ.ಗ.ಪ)
ನಿರ್ಘಾತ-ಪೆಟ್ಟು, ಕೊಲೆ, ನೆಣ-ಕೊಬ್ಬು, ಮಿದುಳು, ಹೆಪ್ಪುಗಟ್ಟಿದ ರಕ್ತ, ಬಸೆ-ಮೇದಸ್ಸು, ಕೊಬ್ಬು, ಅಡಗು-ಮಾಂಸ, ಅರೆವೊನಲು-ಸಣ್ಣಪ್ರವಾಹ, ಅರ್ಧಪ್ರವಾಹ, ಅರೆ-ಬಂಡೆ, ಹೆಮ್ಮರ-ಹಿರಿದಾದ ಮರ, ದೊಡ್ಡಮರ, ನಿವಾತ-ಗಾಳಿ, ಬಿರುಗಾಳಿ, ಉಡಿದು-ಮುರಿದು, ಪತನ-ಕೆಳಗೆ ಬೀಳುವುದು, ವಿನಾಶ ಹೊಂದುವುದು, ಅವನತಿ ಹೊಂದುವುದು.
ಮೂಲ ...{Loading}...
ನಡುಗಿತಿಳೆ ನಿರ್ಘಾತದಲಿ ಬರ
ಸಿಡಿಲು ಸುಳಿದುದು ನೆಣನ ಬಸೆಸಹಿ
ತಡಗು ಸುರಿದವು ಕದಡಿ ಹರಿದುದು ರಕುತದರೆವೊನಲು
ಸಿಡಿದವರೆಗಳು ಕೆರೆಗಳುಕ್ಕಿದ
ವಡಿಗಡಿಗೆ ಹೆಮ್ಮರ ನಿವಾತದ
ಲುಡಿದು ಬಿದ್ದವು ಕೌರವೇಂದ್ರನ ಪತನ ಕಾಲದಲಿ ॥3॥
೦೦೪ ಬೀಸಿದುದು ಬಿರುಗಾಳಿ ...{Loading}...
ಬೀಸಿದುದು ಬಿರುಗಾಳಿ ಕತ್ತಲೆ
ಸೂಸಿದುದು ದಿಗುವಳಯದಲಿ ಪರಿ
ವೇಷದಲಿ ಗ್ರಹ ನೆರೆದವೈದಾರೇಳು ರವಿಯೊಡನೆ
ಸೂಸಿದವು ಹಗಲುಳುಕು ಮೃಗಗಣ
ವಾಸುರದಲೊದರಿದವು ಕಂದಿತು
ವಾಸರಪ್ರಭೆ ಕೌರವೇಂದ್ರನ ಪತನ ಕಾಲದಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಪತನ ಕಾಲದಲ್ಲಿ, ಬಿರುಗಾಳಿ ಬೀಸಿತು. ದಿಕ್ಕುದಿಕ್ಕುಗಳಲ್ಲಿ ಕತ್ತಲೆ ತುಂಬಿತು. ಉತ್ಸಾಹದಿಂದ ಐದಾರೇಳು ಗ್ರಹಗಳು ಸೂರ್ಯನೊಡನೆ ಸೇರಿದವು. ಹಗಲು ಹೊತ್ತಿನಲ್ಲಿ ಕಂಪನ ಪ್ರಾರಂಭವಾಯಿತು. ಮೃಗಸಮೂಹವು ಘೋರವಾಗಿ ಕೂಗಾಟ ಮಾಡಿದವು. ಹಗಲಿನಲ್ಲಿ ಪ್ರಭೆ ಕುಂದಿತು.
ಪದಾರ್ಥ (ಕ.ಗ.ಪ)
ಸೂಸು-ತುಂಬು, ಹರಡು, ವ್ಯಾಪಿಸು, ದಿಗುವಳಯ-ಎಲ್ಲ ದಿಕ್ಕುಗಳಲ್ಲಿಯೂ, ದಿಕ್ಕಿನ ಮೂಲೆಯವರೆಗೆ, ಪರಿವೇಷ-ಉತ್ಸಾಹ, ರೋಮಾಂಚನ, ಹಗಲುಳುಕು-ಹಗಲಿನಲ್ಲಿ ನಡುಕ, ಮೃಗಗಣ-ಪ್ರಾಣಿಸಮೂಹ, ಆಸುರ-ಘೋರ, ಮದ, ರಾಕ್ಷಸೀವೃತ್ತಿ, ಕಂದು-ಕಡಿಮೆಯಾಗು, ನಶಿಸು, ಕತ್ತಲಾಗು, ವಾಸರ-ದಿವಸ, ಹಗಲು
ಮೂಲ ...{Loading}...
ಬೀಸಿದುದು ಬಿರುಗಾಳಿ ಕತ್ತಲೆ
ಸೂಸಿದುದು ದಿಗುವಳಯದಲಿ ಪರಿ
ವೇಷದಲಿ ಗ್ರಹ ನೆರೆದವೈದಾರೇಳು ರವಿಯೊಡನೆ
ಸೂಸಿದವು ಹಗಲುಳುಕು ಮೃಗಗಣ
ವಾಸುರದಲೊದರಿದವು ಕಂದಿತು
ವಾಸರಪ್ರಭೆ ಕೌರವೇಂದ್ರನ ಪತನ ಕಾಲದಲಿ ॥4॥
೦೦೫ ಒರೆ ಸಹಿತ ...{Loading}...
ಒರೆ ಸಹಿತ ಕಯ್ದುಗಳು ಕರದಿಂ
ಮುರಿದು ಬಿದ್ದವು ಗಜಹಯದ ಕ
ಣ್ಣೊರತೆಯೆದ್ದವು ಕಡಿದು ಬಿದ್ದವು ಧ್ವಜಪತಾಕೆಗಳು
ತುರುಗಿದಂತಸ್ತಾಪದಲಿ ಮನ
ಮರುಗಿತಾ ಪರಿವಾರ ಸುಭಟರಿ
ಗರುಹಿತಾಕಸ್ಮಿಕದ ಭಯವವನೀಶ ಕೇಳ್ ಎಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಯುಧಗಳನ್ನಿಡುವ ಚರ್ಮದ ಚೀಲಗಳ ಸಹಿತವಾಗಿ ಆಯುಧಗಳು ಕೈಯಿಂದ ಮುರಿದು ಬಿದ್ದುವು. ಆನೆ ಕುದುರೆಗಳ ಕಣ್ಣುಗಳಲ್ಲಿ ನೀರು ತುಂಬಿತು. ರಥಕ್ಕೆ ಕಟ್ಟಿದ್ದ ಧ್ವಜಗಳು ಮತ್ತು ವಿವಿಧ ಬಾವುಟಗಳು ಕಡಿದು ಬಿದ್ದವು. ತುಂಬಿದ ಮನಸ್ಸಿನ ತಾಪದಲ್ಲಿ ಮನಸ್ಸು ಮರುಗಿ ಆ ವೀರಾಧಿವೀರರಿಗೆ ಆಕಸ್ಮಿಕದ ಭಯವನ್ನು ತಿಳಿಸುವಂತಿತ್ತು - ಧೃತರಾಷ್ಟ್ರ ಕೇಳು ಎಂದು ಸಂಜಯ ಹೇಳಿದ.
ಪದಾರ್ಥ (ಕ.ಗ.ಪ)
ಒರೆ-ಆಯುಧಗಳನ್ನು ಇಡುವ ಚೀಲ, ಒರತೆ-ನೀರಿನ ಸೆಲೆ, ನೀರುಜಿನುಗುವುದು, ಧ್ವಜ-ಬಾವುಟ, ನಿಶಾನೆ (ಓಂದು ನಿರ್ದಿಷ್ಟ ಗುರುತನ್ನು ಉಳ್ಳ ಬಾವುಟ) ಪತಾಕೆ-ಬಾವುಟ. ತುರುಗಿದ-ತುರುಕಿದ, ಒತ್ತಾಗಿ ಸೇರಿದ, ಅತಿಹೆಚ್ಚಾದ,
ಮೂಲ ...{Loading}...
ಒರೆ ಸಹಿತ ಕಯ್ದುಗಳು ಕರದಿಂ
ಮುರಿದು ಬಿದ್ದವು ಗಜಹಯದ ಕ
ಣ್ಣೊರತೆಯೆದ್ದವು ಕಡಿದು ಬಿದ್ದವು ಧ್ವಜಪತಾಕೆಗಳು
ತುರುಗಿದಂತಸ್ತಾಪದಲಿ ಮನ
ಮರುಗಿತಾ ಪರಿವಾರ ಸುಭಟರಿ
ಗರುಹಿತಾಕಸ್ಮಿಕದ ಭಯವವನೀಶ ಕೇಳೆಂದ ॥5॥
೦೦೬ ದ್ರುಪದತನುಜ ಶಿಖಣ್ಡಿ ...{Loading}...
ದ್ರುಪದತನುಜ ಶಿಖಂಡಿ ಸೃಂಜಯ
ನೃಪ ಯುಧಾಮನ್ಯೂತ್ತಮೌಂಜಸ
ಚಪಳಪಂಚದ್ರೌಪದೀಸುತ ಸೋಮಕಾದಿಗಳು
ಅಪದಶಾವಿರ್ಭೂತಚೇತಃ
ಕೃಪಣರತಿಚಿಂತಿಸಿದರಂದಿರು
ಳುಪಹತಿಯ ಸೂಚಿಸುವ ವಾಮಭುಜಾಕ್ಷಿಕಂಪದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃಷ್ಟದ್ಯುಮ್ನ, ಶಿಖಂಡಿ, ಸೃಂಜಯರಾಜ, ಯುಧಾಮನ್ಯು, ಉತ್ತಮೌಂಜಸ, ಪಂಚದ್ರೌಪದೀಸುತರು, ಸೋಮಕ ಮುಂತಾದವರು ಎಡಭುಜ ಮತ್ತು ಎಡಗಣ್ಣು ಕಂಪಿಸುವ ಅಪಶಕುನದಲ್ಲಿ, ಮನಸ್ಸಿನಲ್ಲಿ ಅಪದೆಶೆಯ ಆಲೋಚನೆಯನ್ನು ತುಂಬಿಕೊಂಡರು -ಅಂದಿನ ರಾತ್ರಿ ಸಂಭವಿಸಬಹುದಾದ ದುರ್ಘಟನೆಯ ಸೂಚನೆಯನ್ನು ಕಂಡುಕೊಂಡರು.
ಪದಾರ್ಥ (ಕ.ಗ.ಪ)
ಅಪದಶೆ-ಸೋಲು, ಅಪಕೀರ್ತಿ, ದುರ್ದೆಸೆ, ಆವಿರ್ಭೂತ-ಆವರಿಸಿದ, ಬಂದು ಸೇರಿದ. ಪ್ರಾಪ್ತವಾದ, ಚೇತಃಕೃಪಣ-ಕುಗ್ಗಿದ ಮನಸ್ಸಿನ, ಉಪಹತಿ-ನಾಶ, ತೊಂದರೆ, ಆಘಾತ, ವಾಮಭುಜಾಕ್ಷಿ-ಎಡಭುಜ ಮತ್ತು ಎಡಕಣ್ಣು, ಕಂಪ-ಕಂಪನ, ನಡುಕ
ಮೂಲ ...{Loading}...
ದ್ರುಪದತನುಜ ಶಿಖಂಡಿ ಸೃಂಜಯ
ನೃಪ ಯುಧಾಮನ್ಯೂತ್ತಮೌಂಜಸ
ಚಪಳಪಂಚದ್ರೌಪದೀಸುತ ಸೋಮಕಾದಿಗಳು
ಅಪದಶಾವಿರ್ಭೂತಚೇತಃ
ಕೃಪಣರತಿಚಿಂತಿಸಿದರಂದಿರು
ಳುಪಹತಿಯ ಸೂಚಿಸುವ ವಾಮಭುಜಾಕ್ಷಿಕಂಪದಲಿ ॥6॥
೦೦೭ ಅವನಿಪತಿ ಕೇಳೀಚೆಯಲಿ ...{Loading}...
ಅವನಿಪತಿ ಕೇಳೀಚೆಯಲಿ ಕೌ
ರವನ ಹೊರೆಗೈತಂದು ನಿಂದನು
ಸವಡಿಗೈಗದೆಯಣಸುಗಲ್ಲದ ಗಾಢಗರ್ವದಲಿ
ಪವನಸುತ ನುಡಿಸಿದನಲೈ ನಿ
ನ್ನವನನೇನೈ ಭೂಪ ಕೊಡುವೈ
ನವಗೆ ನೆಲನರ್ಧವನು ನಾಚಿಕೆಯೇಕೆ ನುಡಿಯೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರರಾಜನೇ ಕೇಳು, ಈ ಕಡೆಯಲ್ಲಿ ಭೀಮ ಕೌರವನ ಸಮೀಪಕ್ಕೆ ಬಂದ. ಎರಡೂ ಕೈಗಳಲ್ಲಿ ಗದೆಯನ್ನು ಹಿಡಿದು ಲೋಹದ ಕಟ್ಟು ಇರುವ ತುದಿಯನ್ನು ಗಲ್ಲಕ್ಕೆ ಆಧಾರವಾಗಿಟ್ಟುಕೊಂಡು ಅತಿಗರ್ವದಿಂದ ನಿನ್ನ ಕೌರವನನ್ನು ಮಾತನಾಡಿಸಿದ - ಏನೈ ಭೂಪ, ನೆಲದ ಅರ್ಧಭಾಗವನ್ನು ನಮಗೆ ಕೊಡುತ್ತೀಯೋ, ನಾಚಿಕೆಯೇಕೆ, ಮಾತನಾಡು ಎಂದ.
ಪದಾರ್ಥ (ಕ.ಗ.ಪ)
ಹೊರೆಗೆ-ಸಮೀಪಕ್ಕೆ, ಪಕ್ಕಕ್ಕೆ, ಸವಡಿ-ಎರಡು, ಅವಳಿ, ಅಣಸು- ಆಯುಧಗಳ ತುದಿಗೆ ಹಾಕುವ ಲೋಹದ ಕಟ್ಟು,
ಮೂಲ ...{Loading}...
ಅವನಿಪತಿ ಕೇಳೀಚೆಯಲಿ ಕೌ
ರವನ ಹೊರೆಗೈತಂದು ನಿಂದನು
ಸವಡಿಗೈಗದೆಯಣಸುಗಲ್ಲದ ಗಾಢಗರ್ವದಲಿ
ಪವನಸುತ ನುಡಿಸಿದನಲೈ ನಿ
ನ್ನವನನೇನೈ ಭೂಪ ಕೊಡುವೈ
ನವಗೆ ನೆಲನರ್ಧವನು ನಾಚಿಕೆಯೇಕೆ ನುಡಿಯೆಂದ ॥7॥
೦೦೮ ಊರ ಬೇಡಿದಡೈದ ...{Loading}...
ಊರ ಬೇಡಿದಡೈದ ನಾವೆರ
ಡೂರುಗಳನೇ ಕೊಂಡೆವೈ ನಿಜ
ಧಾರುಣಿಯ ಕೊಡೆನೆಂದಲೈ ಸೂಚ್ಯಾಗ್ರ ಸಮ್ಮಿತವ
ನಾರಿ ಋತುಮತಿಯೆಂದಡೆಯು ಸುಲಿ
ಸೀರೆಗಳನೆಂಬಗ್ಗಳಿಕೆ ಕಾ
ಸಾರದಲಿ ಕರಗಿತೆ ಸುಯೋಧನ ಎಂದನಾ ಭೀಮ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾವು ಐದು ಊರುಗಳನ್ನು (ಗ್ರಾಮಗಳನ್ನು) ಬೇಡಿದರೆ, (ನೀನು ಕೊಡಲಿಲ್ಲ) ನಾವು ನಿನ್ನ ಎರಡು ಊರು (ತೊಡೆ)ಗಳನ್ನೇ ಪಡೆದೆವು. ನಿನ್ನ ಭೂಮಿಯಲ್ಲಿ ಸೂಜಿಯ ಮೊನೆಯಷ್ಟನ್ನೂ ಕೊಡುವುದಿಲ್ಲವೆಂದೆಯಲ್ಲವೆ. ದ್ರೌಪದಿಯು ಋತುಮತಿಯೆಂದರೂ ಬಿಡದೆ ಸೀರೆಗಳನ್ನು ಸುಲಿ ಎಂಬ ಹೆಚ್ಚುಗಾರಿಕೆ ಕೊಳದೊಳಗೆ ಕಳೆದು ಹೋಯಿತೇ, ದುರ್ಯೋಧನಾ - ಎಂದು ಭೀಮ ಹೇಳಿದ.
ಪದಾರ್ಥ (ಕ.ಗ.ಪ)
ಊರು-ಗ್ರಾಮ, ತೊಡೆ (ಇಲ್ಲಿ ಶ್ಲೇಷಾರ್ಥದಲ್ಲಿ ಈ ಪದವನ್ನು ಉಪಯೋಗಿಸಲಾಗಿದೆ, ಸೂಚ್ಯಾಗ್ರಸಮ್ಮಿತ-ಸೂಜಿಯ ತುದಿಯಷ್ಟು, ಕಾಸಾರ-ಸರೋವರ, ಕೊಳ
ಮೂಲ ...{Loading}...
ಊರ ಬೇಡಿದಡೈದ ನಾವೆರ
ಡೂರುಗಳನೇ ಕೊಂಡೆವೈ ನಿಜ
ಧಾರುಣಿಯ ಕೊಡೆನೆಂದಲೈ ಸೂಚ್ಯಾಗ್ರ ಸಮ್ಮಿತವ
ನಾರಿ ಋತುಮತಿಯೆಂದಡೆಯು ಸುಲಿ
ಸೀರೆಗಳನೆಂಬಗ್ಗಳಿಕೆ ಕಾ
ಸಾರದಲಿ ಕರಗಿತೆ ಸುಯೋಧನ ಎಂದನಾ ಭೀಮ ॥8॥
೦೦೯ ಎತ್ತಿ ಕಳೆದೈ ...{Loading}...
ಎತ್ತಿ ಕಳೆದೈ ಬನಕೆ ನಾವ್ ನಿ
ಮ್ಮೆತ್ತುಗಳಲೈ ಬೆರಳಲೇಡಿಸಿ
ದೆತ್ತುಗಳ ಕೂಡೇಕೆ ಸರಿನುಡಿ ಸಾರ್ವಭೌಮರಿಗೆ
ಇತ್ತಲೇತಕೆ ಬಿಜಯಮಾಡಿದಿ
ರೊತ್ತದೇ ಕಲುನೆಲನು ಪವಡಿಸಿ
ಮತ್ತೆ ತೊಡೆಗಳ ತಿವಿಯ ಬೇಕೇ ಎಂದನಾ ಭೀಮ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮನ್ನು ಕಾಡಿಗೆ ಎತ್ತಿಹಾಕಿದೆ. ನಾವು ನಿಮ್ಮ ಎತ್ತುಗಳಲ್ಲವೆ. ಬೆರಳಲ್ಲಿ ತೋರುತ್ತಾ ಅಪಹಾಸ್ಯ ಮಾಡಿದ ಎತ್ತುಗಳ ಜೊತೆಯಲ್ಲಿ ಸಾರ್ವಭೌಮರಿಗೆ ಉಚಿತವಾದ ಮಾತುಗಳೆ. ಈ ಕಡೆಗೇಕೆ ದಯಮಾಡಿಸಿದಿರಿ. ಕಲ್ಲು ನೆಲವು ಒತ್ತುವುದಿಲ್ಲವೇ. ನೀವು ಮಲಗಿ. ಪುನಃ ಗದೆಯಲ್ಲಿ ತೊಡೆಗಳನ್ನು ತಿವಿಯಬೇಕೆ ಎಂದು ಭೀಮ ಕಟಕಿಯಾಡಿದ.
ಪದಾರ್ಥ (ಕ.ಗ.ಪ)
ಎತ್ತಿಕಳೆದೆ-ನೂಕಿ ಕಳೆದೆ, ಏಡಿಸಿ-ಅಪಹಾಸ್ಯಮಾಡಿ, ವ್ಯಂಗ್ಯವಾಡಿ, ಸರಿನುಡಿ-ಸರಿಸಮನೆಂದು ಭಾವಿಸಿ ಆಡುವ ಮಾತು
ಟಿಪ್ಪನೀ (ಕ.ಗ.ಪ)
ಎತ್ತಿ ಕಳೆದೈ ವನಕೆ…. ಪಾಂಡವರನ್ನು ಮೋಸದಿಂದ ಜೂಜಿನಲ್ಲಿ ಸೋಲಿಸಿ, ಅವರನ್ನು ಅರಣ್ಯವಾಸಕ್ಕೆ ಕಳಿಸುವಾಗ ದುಶ್ಯಾಸನ ಹಿಂದಿನಿಂದ ಬರುತ್ತಾ ಭೀಮನನ್ನು ಅಪಹಾಸ್ಯಮಾಡಿ ಈ ಮಾತುಗಳನ್ನು ಹೇಳುತ್ತಾನೆ. ಆದರೆ ಇಲ್ಲಿ ದುರ್ಯೋಧನನೇ ಹೇಳಿದಂತಿದೆ. (ಸಭಾಪರ್ವ: 16-74)
ಮೂಲ ...{Loading}...
ಎತ್ತಿ ಕಳೆದೈ ಬನಕೆ ನಾವ್ ನಿ
ಮ್ಮೆತ್ತುಗಳಲೈ ಬೆರಳಲೇಡಿಸಿ
ದೆತ್ತುಗಳ ಕೂಡೇಕೆ ಸರಿನುಡಿ ಸಾರ್ವಭೌಮರಿಗೆ
ಇತ್ತಲೇತಕೆ ಬಿಜಯಮಾಡಿದಿ
ರೊತ್ತದೇ ಕಲುನೆಲನು ಪವಡಿಸಿ
ಮತ್ತೆ ತೊಡೆಗಳ ತಿವಿಯ ಬೇಕೇ ಎಂದನಾ ಭೀಮ ॥9॥
೦೧೦ ಕೃತ್ರಿಮವ ನಿರ್ಮಿಸಿದ ...{Loading}...
ಕೃತ್ರಿಮವ ನಿರ್ಮಿಸಿದ ಫಲ ಕೈ
ವರ್ತಿಸಿತೆ ನೀವರಗುಮನೆಯಲಿ
ಹೊತ್ತಿಸಿದ ಫಲ ಬಂದುದೇ ವ್ಯವಧಾನವಾದುದಲೆ
ಬಿತ್ತಿದಿರಿ ವಿಷಬೀಜವನು ನೆರೆ
ದತ್ತ ಫಲ ಕೈಸಾರ್ದುದಾದಡೆ
ಕೆತ್ತು ಕೊಂಡಿರಲೇಕೆ ನುಡಿ ತನ್ನಾಣೆ ನುಡಿಯೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೋಸ ಮಾಡಿದ್ದಕ್ಕೆ ಫಲ ನಿನ್ನ ಕೈಸೇರಿತೇ. ನೀವು ಅರಗಿನ ಮನೆಯಲ್ಲಿ ನಮ್ಮನ್ನು ಸುಡಲು ಬೆಂಕಿ ಹೊತ್ತಿಸಿದ ಫಲ ಬಂದಿತೇ. ಆದರೂ ಸ್ವಲ್ಪ ಸಮಯ ಹಿಡಿಯಿತಲ್ಲವೇ. ವಿಷಬೀಜವನ್ನು ಬಿತ್ತಿದಿರಿ. ಹಣ್ಣಾಗಿ ಫಲ ಕೈಗೆ ಬಂದರೆ ಕೋಪಿಸಿಕೊಳ್ಳುವುದೇಕೆ. ನನ್ನಾಣೆ ಹೇಳು - ಎಂದ.
ಪದಾರ್ಥ (ಕ.ಗ.ಪ)
ಕೃತ್ರಿಮ-ಮೋಸ, ಕೈವರ್ತಿಸು-ಕೈಸೇರು, ವ್ಯವಧಾನ-ಸಮಯಾವಕಾಶ, ವಿಳಂಬ, ಕೈಸಾರ್ದುದು-ಕೈಗೆ ಬಂದುದು, ಕೆತ್ತುಕೊಂಡಿರು-ಕೋಪಿಸಿಕೊಂಡಿರು.
ಮೂಲ ...{Loading}...
ಕೃತ್ರಿಮವ ನಿರ್ಮಿಸಿದ ಫಲ ಕೈ
ವರ್ತಿಸಿತೆ ನೀವರಗುಮನೆಯಲಿ
ಹೊತ್ತಿಸಿದ ಫಲ ಬಂದುದೇ ವ್ಯವಧಾನವಾದುದಲೆ
ಬಿತ್ತಿದಿರಿ ವಿಷಬೀಜವನು ನೆರೆ
ದತ್ತ ಫಲ ಕೈಸಾರ್ದುದಾದಡೆ
ಕೆತ್ತು ಕೊಂಡಿರಲೇಕೆ ನುಡಿ ತನ್ನಾಣೆ ನುಡಿಯೆಂದ ॥10॥
೦೧೧ ಸನ್ದುದೇ ನೀ ...{Loading}...
ಸಂದುದೇ ನೀ ಮೆಚ್ಚೆ ಸಭೆಯಲಿ
ಹಿಂದೆ ಮಾಡಿದ ಭಾಷೆ ಕುರುಡನ
ನಂದನರನಿಮ್ಮಡಿಸಿದೈವತ್ತನು ರಣಾಗ್ರದಲಿ
ಕೊಂದು ದುಶ್ಶಾಸನನ ಖಂಡವ
ತಿಂದು ರಕುತವ ಕುಡಿದು ಬಲುಗದೆ
ಯಿಂದ ನಿನ್ನಯ ತೊಡೆಯನುಡಿದೆನೆ ಭೂಪ ಹೇಳೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನೇ ಸಭೆಯಲ್ಲಿ ಮೆಚ್ಚುವಂತೆ ನಾನು ಮಾಡಿದ ಪ್ರತಿಜ್ಞೆ ಸಂಪೂರ್ಣವಾಯಿತೆ. ಕುರುಡನಾದ ಧೃತರಾಷ್ಟ್ರನ ನೂರು ಮಂದಿ ಮಕ್ಕಳನ್ನು ಯುದ್ಧದಲ್ಲಿ ಕೊಂದು, ದುಶ್ಯಾಸನನ ಮಾಂಸವನ್ನು ತಿಂದು ರಕ್ತವನ್ನು ಕುಡಿದು ಬಲುಗದೆಯಿಂದ ನಿನ್ನ ತೊಡೆಗಳನ್ನು ಮುರಿದೆನೇ - ಹೇಳು ದೊರೆಯೇ ಎಂದು ಭೀಮ ದುರ್ಯೋಧನನನ್ನು ಹಂಗಿಸಿದ.
ಪದಾರ್ಥ (ಕ.ಗ.ಪ)
ಸಂದುದು-ಸಂಪೂರ್ಣವಾದುದು, ಪೂರೈಸಿದುದು, ಇಮ್ಮಡಿಸಿದೈವತ್ತು-ಎರಡಾದ ಐವತ್ತು, ನೂರು, ಖಂಡ-ಮಾಂಸ, ಉಡಿ-ಮುರಿ
ಮೂಲ ...{Loading}...
ಸಂದುದೇ ನೀ ಮೆಚ್ಚೆ ಸಭೆಯಲಿ
ಹಿಂದೆ ಮಾಡಿದ ಭಾಷೆ ಕುರುಡನ
ನಂದನರನಿಮ್ಮಡಿಸಿದೈವತ್ತನು ರಣಾಗ್ರದಲಿ
ಕೊಂದು ದುಶ್ಶಾಸನನ ಖಂಡವ
ತಿಂದು ರಕುತವ ಕುಡಿದು ಬಲುಗದೆ
ಯಿಂದ ನಿನ್ನಯ ತೊಡೆಯನುಡಿದೆನೆ ಭೂಪ ಹೇಳೆಂದ ॥11॥
೦೧೨ ರಾಯನಾಸ್ಥಾನದಲಿ ಖೂಳರ ...{Loading}...
ರಾಯನಾಸ್ಥಾನದಲಿ ಖೂಳರ
ರಾಯ ನೀನೇ ಭಂಗಪಡಿಸಿ ನ
ವಾಯಿಯಲಿ ನಿಮ್ಮೂರಿಗೆಮ್ಮೈವರನು ನೀ ಕರಸಿ
ವಾಯದಲಿ ಜೂಜಾಡಿ ಕಪಟದ
ದಾಯದಲಿ ಸೋಲಿಸಿ ಯುಧಿಷ್ಠಿರ
ರಾಯನರಸಿಯ ಸುಲಿಸಿತಕೆ ಫಲವಾಯ್ತೆ ಹೇಳೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಆಸ್ಥಾನದಲ್ಲಿ ನೀನೇ ನಿನ್ನನ್ನು ಅಪಮಾನಕ್ಕೆ ಒಳಪಡಿಸಿಕೊಂಡು, ಠೀವಿಯಿಂದ ನಮ್ಮೈವರನ್ನೂ ನಿಮ್ಮೂರಿಗೆ ಕರೆಸಿಕೊಂಡು ಮೋಸದಲ್ಲಿ ಜೂಜಾಡಿ ಕಪಟ ದಾಳಗಳಿಂದ ಸೋಲಿಸಿ, ಯುಧಿಷ್ಠಿರನ ಅರಸಿಯ ಸೀರೆಯನ್ನು ಸುಲಿಸಿದುದಕ್ಕೆ ಈಗ ಫಲ ಸಿಕ್ಕಿತೆ ಹೇಳು ಎಂದ.
ಪದಾರ್ಥ (ಕ.ಗ.ಪ)
ಭಂಗ-ಅಪಮಾನ, ತೊಂದರೆ, ಕಷ್ಟ, ನವಾಯಿ-ಠೀವಿ, ಬೆಡಗು, ಬಿನ್ನಾಣ, ವಾಯ-ಮೋಸ, ನೆಪ, ವ್ಯರ್ಥ, ಹುಸಿ, ದಾಯ-ಪಗಡೆಯ ದಾಳದ ಗೆರೆ, ಸುಲಿಸು-ಬಿಚ್ಚಿಸು, ಸೆಳೆಸು,
ಟಿಪ್ಪನೀ (ಕ.ಗ.ಪ)
ಸಭಾಪರ್ವದಲ್ಲಿನ ಜೂಜಿನ ಪ್ರಸಂಗ: ಸಂಧಿ-12 ರಿಂದ 16 ರವರೆಗೆ ನೋಡಬಹುದು.
ಮೂಲ ...{Loading}...
ರಾಯನಾಸ್ಥಾನದಲಿ ಖೂಳರ
ರಾಯ ನೀನೇ ಭಂಗಪಡಿಸಿ ನ
ವಾಯಿಯಲಿ ನಿಮ್ಮೂರಿಗೆಮ್ಮೈವರನು ನೀ ಕರಸಿ
ವಾಯದಲಿ ಜೂಜಾಡಿ ಕಪಟದ
ದಾಯದಲಿ ಸೋಲಿಸಿ ಯುಧಿಷ್ಠಿರ
ರಾಯನರಸಿಯ ಸುಲಿಸಿತಕೆ ಫಲವಾಯ್ತೆ ಹೇಳೆಂದ ॥12॥
೦೧೩ ಹಳುವದಲಿ ನಾನಾ ...{Loading}...
ಹಳುವದಲಿ ನಾನಾ ಪ್ರಕಾರದ
ಲಳಲಿಸಿದ ಫಲಭೋಗವನು ನೀ
ತಲೆಯಲೇ ಧರಿಸೆನುತ ವಾಮಾಂಘ್ರಿಯನು ಮಕುಟದಲಿ
ಇಳುಹಿದನು ಗೌರ್ಗೌವೆನುತ ಬಿಡ
ದುಲಿದೆಲಾ ಎನುತೊದೆದು ಮಕುಟವ
ಕಳಚಿದನು ಕೀಲಣದ ಮಣಿಗಳು ಕೆದರೆ ದೆಸೆದೆಸೆಗೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಡಿನಲ್ಲಿ ವಿಧವಿಧವಾಗಿ ಪೀಡಿಸಿದ ಫಲಭೋಗವನ್ನು ಈಗ ನೀನು ತಲೆಯಲ್ಲಿ ಧರಿಸು ಎನ್ನುತ್ತಾ ಭೀಮ, ದುರ್ಯೋಧನನ ಕಿರೀಟವನ್ನು ಎಡಗಾಲಿನಿಂದ ಒದ್ದ. ಗೌರ್ಗೌವೆನ್ನುತ್ತ ಬಿಡದೆ ಶಬ್ದ ಮಾಡಿದೆಯಲ್ಲವೇ ಎನ್ನುತ್ತಾ ಒದ್ದು ಕಿರೀಟವನ್ನು ಕೆಳಗೆ ಬೀಳಿಸಲು ಅದಕ್ಕೆ ಮೆಟ್ಟಿದ್ದ ವಿವಿಧ ಮಣಿಗಳು ದಿಕ್ಕುದಿಕ್ಕಿಗೆ ಚಲ್ಲಾಡಿದುವು.
ಪದಾರ್ಥ (ಕ.ಗ.ಪ)
ಹಳುವ-ಕಾಡು, ಅಳಲಿಸು–ಪೀಡಿಸು, ತೊಂದರೆಕೊಡು, ಫಲಭೋಗ-ಪ್ರತಿಫಲವನ್ನು ಅನುಭವಿಸುವುದು, ವಾಮಾಂಗ-ಎಡಗಾಲು, ಎಡಗಾಲಿನ ಪಾದ, ಮಕುಟ-ಕಿರೀಟ, ತಲೆ, ಉಲಿದೆಲಾ-ಶಬ್ಧ ಮಾಡಿದೆಯಲ್ಲವೇ, ಕಳಚು-ತೆಗೆದು ಹಾಕು, ಬೀಳಿಸು, ಕೀಲಣ-ಜೋಡಿಸಿದ, ಕಟ್ಟಿದ್ದ, ಮೆಟ್ಟಿದ್ದ
ಟಿಪ್ಪನೀ (ಕ.ಗ.ಪ)
1)“ಹಳುವದಲಿ ನಾನಾಪ್ರಕಾರದಲಿ…….” ಅರಣ್ಯ ಪರ್ವದಲ್ಲಿ ಘೋಷಯಾತ್ರಾ ಪ್ರಸಂಗ, ದೂರ್ವಾಸಾತಿಥ್ಯದ ಪ್ರಸಂಗ, ಸೈಂಧವ ಮಾನಭಂಗ ಪ್ರಕರಣ 2)ಗೌರ್ಗೌವ್ವೆನುತ-ಅರಣ್ಯವಾಸಕ್ಕೆ ಹೊರಟ ಪಾಂಡವರ ಹಿಂದೆ ಬಂದ ದುಶ್ಶಾಸನ ಭೀಮನನ್ನು ಎತ್ತುಗಳು ಎಂದು ಕರೆದ ಪ್ರಸಂಗ. (ಸಭಾಪರ್ವ 16ನೆಯ ಸಂಧಿ)
ಮೂಲ ...{Loading}...
ಹಳುವದಲಿ ನಾನಾ ಪ್ರಕಾರದ
ಲಳಲಿಸಿದ ಫಲಭೋಗವನು ನೀ
ತಲೆಯಲೇ ಧರಿಸೆನುತ ವಾಮಾಂಘ್ರಿಯನು ಮಕುಟದಲಿ
ಇಳುಹಿದನು ಗೌರ್ಗೌವೆನುತ ಬಿಡ
ದುಲಿದೆಲಾ ಎನುತೊದೆದು ಮಕುಟವ
ಕಳಚಿದನು ಕೀಲಣದ ಮಣಿಗಳು ಕೆದರೆ ದೆಸೆದೆಸೆಗೆ ॥13॥
೦೧೪ ಹಿನ್ದಣಪರಾಧವನು ಲೆಕ್ಕಿಸು ...{Loading}...
ಹಿಂದಣಪರಾಧವನು ಲೆಕ್ಕಿಸು
ತೊಂದೆರಡು ಮೂರಾಯ್ತು ನಾಲ್ಕೈ
ದೆಂದು ಮೆಟ್ಟಿದನವನಿಪಾಲನ ಮಕುಟಮಸ್ತಕವ
ಇಂದುಮುಖಿಯನು ಬೂತುಗೆಡೆದುದ
ಕೊಂದು ಘಾಯವ ಕೊಳ್ಳೆನುತ ಮಡ
ದಿಂದ ವದನವನೊದೆದು ಹಲುಗಳ ಕಳಚಿದನು ಭೀಮ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಪಾಂಡವರಿಗೆ ಹಿಂದೆ ಮಾಡಿದ್ದ ಅಪರಾಧಗಳನ್ನು ಎಣಿಸಿ ಒಂದೊಂದಾಗಿ ಹೇಳುತ್ತ ಎರಡು, ಮೂರು, ನಾಲ್ಕು, ಐದು ಎಂದು ಅವನ ತಲೆ ಮತ್ತು ಹಣೆಯನ್ನು ಮೆಟ್ಟಿದ (ಒದೆದ) ಇಂದುಮುಖಿಯಾದ ದ್ರೌಪದಿಯನ್ನು ಅಂಗಲಾಚಿ ಬೇಡುವಂತೆ ಮಾಡಿದುದಕ್ಕೆ ಒಂದು ಹೊಡೆತವನ್ನು ಕೊಳ್ಳು -ಎನ್ನುತ್ತಾ ಪಾದದಿಂದ ಮುಖಕ್ಕೆ ಒದ್ದು ಹಲ್ಲುಗಳನ್ನು ಉದುರಿಸಿದ.
ಪದಾರ್ಥ (ಕ.ಗ.ಪ)
ಲೆಕ್ಕಿಸು-ಲೆಕ್ಕಹಾಕು, ಗಮನಿಸು, ಮೆಟ್ಟು-ತುಳಿ, ಒದೆ, ಮಕುಟ-ಕಿರೀಟ, ಮಸ್ತಕ-ನೆತ್ತಿ, ತಲೆ ಹಣೆ, ಇಂದುಮುಖಿ-ಚಂದ್ರನಂತೆ ಮುಖವುಳ್ಳವಳು (ಇಲ್ಲಿ ದ್ರೌಪದಿ) ಬೂತುಗೆಡೆ-ಹೀಯಾಳಿಸು, ಮಡ-ಪಾದ, ಹಿಮ್ಮಡಿ, ಕಳಚು-ಮುರಿ, ಬೀಳಿಸು, ಉದುರಿಸು
ಮೂಲ ...{Loading}...
ಹಿಂದಣಪರಾಧವನು ಲೆಕ್ಕಿಸು
ತೊಂದೆರಡು ಮೂರಾಯ್ತು ನಾಲ್ಕೈ
ದೆಂದು ಮೆಟ್ಟಿದನವನಿಪಾಲನ ಮಕುಟಮಸ್ತಕವ
ಇಂದುಮುಖಿಯನು ಬೂತುಗೆಡೆದುದ
ಕೊಂದು ಘಾಯವ ಕೊಳ್ಳೆನುತ ಮಡ
ದಿಂದ ವದನವನೊದೆದು ಹಲುಗಳ ಕಳಚಿದನು ಭೀಮ ॥14॥
೦೧೫ ಉಚಿತವೆನ್ದರು ಕೆಲರು ...{Loading}...
ಉಚಿತವೆಂದರು ಕೆಲರು ಕೆಲರಿದ
ನುಚಿತವೆಂದರು ಪೂರ್ವಜನ್ಮೋ
ಪಚಿತ ದುಷ್ಕೃತವೈಸಲೇ ಶಿವ ಎಂದು ಕೆಲಕೆಲರು
ಖಚರ ಕಿನ್ನರ ಯಕ್ಷ ನಿರ್ಜರ
ನಿಚಯ ಭೀಮನ ಬೈದು ಕುರುಪತಿ
ಯಚಳ ಬಲವನು ಬಣ್ಣಿಸುತ ಹೊಕ್ಕರು ನಿಜಾಲಯವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರು ಭೀಮ ಮಾಡಿದುದು ಉಚಿತವೆಂದರು. ಕೆಲವರು ಇದು ಅನುಚಿತವೆಂದರು, ಮತ್ತೆ ಕೆಲವರು ಪೂರ್ವಜನ್ಮದಲ್ಲಿ ಸಂಗ್ರಹಿಸಿಕೊಂಡ ದುಷ್ಕರ್ಮಗಳಲ್ಲವೇ, ಶಿವಶಿವಾ ಎಂದರು. ಖೇಚರರು, ಕಿನ್ನರರು, ಯಕ್ಷರು, ದೇವತೆಗಳು ಭೀಮನನ್ನು ಬೈದು ಕುರುಪತಿಯ ಕುಂದಿಲ್ಲದ ಶಕ್ತಿಯನ್ನು ಹೊಗಳುತ್ತ ತಮ್ಮ ಮನೆಗಳಿಗೆ ಹೊಕ್ಕರು.
ಪದಾರ್ಥ (ಕ.ಗ.ಪ)
ಉಚಿತ-ಸರಿಯಾದುದು, ನ್ಯಾಯವಾದುದು, ಅನುಚಿತ-ಸರಿಯಲ್ಲದ್ದು, ತಪ್ಪಾದುದು, ಅನ್ಯಾಯದ್ದು, ಪೂರ್ವಜನ್ಮೋಪಚಿತ-ಹಿಂದಿನ ಜನ್ಮದಲ್ಲಿ ಸಂಪಾದಿಸಿದ, ಪೂರ್ವಾರ್ಜಿತವಾದ, ದುಷ್ಕೃತ-ಕೆಟ್ಟಕೆಲಸ, ಖಚರ, ಕಿನ್ನರ ಯಕ್ಷ-ಆಕಾಶ ಸಂಚಾರಿಗಳಾದ ದೇವತೆಗಳ ಪರಿವಾರದವರು, ನಿರ್ಜರ-ದೇವತೆಗಳು (ಜರೆ-ಮುಪ್ಪು, ನಿರ್ಜರ-ಮುಪ್ಪಿಲ್ಲದವರು, ದೇವತೆಗಳು) ಅಚಳಬಲ-ಸ್ಥಿರವಾದ ಶಕ್ತಿಯುಳ್ಳವ, ಗಟ್ಟಿಗ, ಬಣ್ಣಿಸು-ವರ್ಣಿಸು(ಸಂ) ಹೊಗಳು
ಟಿಪ್ಪನೀ (ಕ.ಗ.ಪ)
ಮೇಲಿನ ಪದ್ಯ 13, 14 ಮತ್ತು 15ನೆಯ ಪದ್ಯಗಳನ್ನು ರನ್ನನ ಗದಾಯುದ್ದ ಸಂಗ್ರಹಂ (ತೀ.ನಂ.ಶ್ರೀ) ಕಾವ್ಯದಲ್ಲಿನ 8ನೆಯ ಆಶ್ವಾಸದ 26-27 ನೆಯ ಪದ್ಯಗಳೊಂದಿಗೆ ಹೋಲಿಸಬಹುದು.
ಮೂಲ ...{Loading}...
ಉಚಿತವೆಂದರು ಕೆಲರು ಕೆಲರಿದ
ನುಚಿತವೆಂದರು ಪೂರ್ವಜನ್ಮೋ
ಪಚಿತ ದುಷ್ಕೃತವೈಸಲೇ ಶಿವ ಎಂದು ಕೆಲಕೆಲರು
ಖಚರ ಕಿನ್ನರ ಯಕ್ಷ ನಿರ್ಜರ
ನಿಚಯ ಭೀಮನ ಬೈದು ಕುರುಪತಿ
ಯಚಳ ಬಲವನು ಬಣ್ಣಿಸುತ ಹೊಕ್ಕರು ನಿಜಾಲಯವ ॥15॥
೦೧೬ ಭೀಮ ಹಾ ...{Loading}...
ಭೀಮ ಹಾ ಹಾ ಕಷ್ಟವಿದು ಸಂ
ಗ್ರಾಮಜಯವೇ ಸಾಲದೇ ಕುರು
ಭೂಮಿಪತಿಯಶ್ಲಾಘ್ಯನೇ ಲೋಕೈಕಮಾನ್ಯನಲಾ
ನೀ ಮರುಳಲಾ ಸಾರೆನುತ ತ
ತ್ಸೀಮೆಗೈತಂದನಿಲತನುಜನ
ನಾ ಮಹೀಪತಿ ನೂಕಿ ಸಂತೈಸಿದನು ಕುರುಪತಿಯ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ, ಹಾ, ಹಾ, ಇದು ಸಲ್ಲದ ಕೆಲಸ. ಯುದ್ಧದಲ್ಲಿ ಗಳಿಸಿದ ಜಯ ಸಾಲದೇ? ಕುರುಭೂಪತಿಯು ಅವಹೇಳನಕ್ಕೆ ಯೋಗ್ಯನೇ? ಲೋಕೈಕ ಮಾನ್ಯನಲ್ಲವೇ. ನೀನೊಬ್ಬ ಮರುಳನಲ್ಲವೇ, ಹೋಗು - ಎನ್ನುತ್ತಾ ಧರ್ಮಜನು ಭೀಮ ದುರ್ಯೋಧನರಿದ್ದ ಸ್ಥಳಕ್ಕೆ ಬಂದು ಭೀಮನನ್ನು ನೂಕಿ, ಕುರುಪತಿಯನ್ನು ಸಮಾಧಾನಪಡಿಸಿದನು.
ಪದಾರ್ಥ (ಕ.ಗ.ಪ)
ಕಷ್ಟ-ಸಲ್ಲದ ಕೆಲಸ, ಬೇಡದ ಕೆಲಸ, ತೊಂದರೆ, ಕಠಿಣ, ಅಶ್ಲಾಘ್ಯ-ಹೊಗಳಿಕೆಗೆ ಯೋಗ್ಯನಲ್ಲದವನು, ಅವಹೇಳನಕ್ಕೆ ಯೋಗ್ಯನಾದವನು, ತತ್ಸೀಮೆಗೆ-ಆಸ್ಥಳಕ್ಕೆ
ಮೂಲ ...{Loading}...
ಭೀಮ ಹಾ ಹಾ ಕಷ್ಟವಿದು ಸಂ
ಗ್ರಾಮಜಯವೇ ಸಾಲದೇ ಕುರು
ಭೂಮಿಪತಿಯಶ್ಲಾಘ್ಯನೇ ಲೋಕೈಕಮಾನ್ಯನಲಾ
ನೀ ಮರುಳಲಾ ಸಾರೆನುತ ತ
ತ್ಸೀಮೆಗೈತಂದನಿಲತನುಜನ
ನಾ ಮಹೀಪತಿ ನೂಕಿ ಸಂತೈಸಿದನು ಕುರುಪತಿಯ ॥16॥
೦೧೭ ಗುಣನಿಧಿಯನೇಕಾದಶಾಕ್ಷೋ ...{Loading}...
ಗುಣನಿಧಿಯನೇಕಾದಶಾಕ್ಷೋ
ಹಿಣಿಯ ಪತಿಯನಶೇಷ ಪಾರ್ಥಿವ
ಮಣಿಮಕುಟ ಕಿರಣೋಪಲಾಲಿತ ಪಾದಪಲ್ಲವನ
ರಣದೊಳನ್ಯಾಯದಲಿ ತೊಡೆಗಳ
ಹಣಿದುದಲ್ಲದೆ ಪಾದದಲಿ ನೀ
ಕೆಣಕುವರೆ ಕುರುರಾಜಮೌಳಿಯನೆಂದನಾ ಭೂಪ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುಣನಿಧಿಯನ್ನು, ಹನ್ನೊಂದು ಅಕ್ಷೋಹಿಣೀಪತಿಯನು,್ನ ಅಗಣಿತ ಸಂಖ್ಯೆಯ ರಾಜಾಧಿರಾಜರುಗಳ ಮಣಿಖಚಿತ ಕಿರೀಟಗಳ ಮಣಿಗಳಿಂದ ಸೇವಿಸಲ್ಪಟ್ಟ ಪಾದಗಳನ್ನುಳ್ಳವನನ್ನು ಯುದ್ಧದಲ್ಲಿ ಅಧರ್ಮದಿಂದ ತೊಡೆಗಳನ್ನು ಮುರಿದಿದ್ದೂ ಅಲ್ಲದೆ, ಪಾದದಿಂದ ನೀನು ಕುರುರಾಜರ ಕುಲದಲ್ಲಿ ಶ್ರೇಷ್ಠನಾದ ದುರ್ಯೋಧನನನ್ನು ಕೆಣಕುವುದೇ, ಎಂದು ಧರ್ಮಜ ನುಡಿದ.
ಪದಾರ್ಥ (ಕ.ಗ.ಪ)
ಗುಣನಿಧಿ-ಗುಣಕ್ಕೆ ಆರಕನಾದವನು, ಶ್ರೇಷ್ಠ ಗುಣಗಳನ್ನುಳ್ಳವನು (ಇಲ್ಲಿ ದುರ್ಯೋಧನ) ಅಶೇಷ-ಅನಂತವಾದ, ಕಡೆಯಿಲ್ಲದ, ಅಸಂಖ್ಯಾತ, ಪಾರ್ಥಿವ-ಕ್ಷತ್ರಿಯ, ಮಣಿಮುಕುಟ-ವಿವಿಧಮಣಿ (ರತ್ನ, ಮುತ್ತು ಇತ್ಯಾದಿ) ರತ್ನಗಳಿಂದ ಕೂಡಿದ ಕಿರೀಟ, ಕಿರಣೋಪಲಾಲಿತ-ಕಿರಣಗಳಿಂದ ತುಂಬಿದ, ಪಾದಪಲ್ಲವನ-ಚಿಗುರಿನಂತಿರುವ ಪಾದಗಳನ್ನುಳ್ಳವನನ್ನು (ಇಲ್ಲಿ, ದುರ್ಯೋಧನನ್ನು) ಹಣಿ-ಹೊಡೆ, ಮುರಿ, ತುಂಡುಮಾಡು, ಕುರುರಾಜಮೌಳಿ-ಕುರುವಂಶದ ರಾಜರಿಗೆ ಕಿರೀಟದಂತಿರುವವನು, ದುರ್ಯೋಧನ
ಟಿಪ್ಪನೀ (ಕ.ಗ.ಪ)
- ಪಾರ್ಥಿವ-ಪೃಥ್ವಿಗೆ ಒಡೆಯ, ರಾಜ ಎಂಬದರ್ಥದಲ್ಲಿ ಇಲ್ಲಿ ಪ್ರಯೋಗವಾಗಿರುವ ಪದ. ‘ಪಾರ್ಥಿವ ಶರೀರ’ಎಂಬಲ್ಲಿ ಭೌತಿಕ ದೇಹ ಎಂಬರ್ಥದಲ್ಲಿ ಪ್ರಯೋಗವಾಗುತ್ತದೆ. ‘ಮಣ್ಣಿನಲ್ಲಿ ಸೇರಿಹೋಗುವ’ ಎಂಬರ್ಥದಲ್ಲಿ ಅದು ಪಾರ್ಥಿವ. ‘ಪೃಥ್’ ಎಂಬುದು ಮೂಲಶಬ್ದ. ಅದಕ್ಕೆ ‘ವಿಶಾಲವಾಗು’ ಎಂಬ ಅರ್ಥ, ಅದರಿಂದ ಪೃಥ್ವಿ ವಿಶಾಲವಾದುದು ಭೂಮಿ.
ಮೂಲ ...{Loading}...
ಗುಣನಿಧಿಯನೇಕಾದಶಾಕ್ಷೋ
ಹಿಣಿಯ ಪತಿಯನಶೇಷ ಪಾರ್ಥಿವ
ಮಣಿಮಕುಟ ಕಿರಣೋಪಲಾಲಿತ ಪಾದಪಲ್ಲವನ
ರಣದೊಳನ್ಯಾಯದಲಿ ತೊಡೆಗಳ
ಹಣಿದುದಲ್ಲದೆ ಪಾದದಲಿ ನೀ
ಕೆಣಕುವರೆ ಕುರುರಾಜಮೌಳಿಯನೆಂದನಾ ಭೂಪ ॥17॥
೦೧೮ ಅನುಜರಳಿದುದು ನೂರು ...{Loading}...
ಅನುಜರಳಿದುದು ನೂರು ರಣದಲಿ
ತನುಜರಳಿದುದು ಮಾವ ಗುರು ಮೈ
ದುನ ಪಿತಾಮಹ ಪುತ್ರ ಮಿತ್ರ ಜ್ಞಾತಿ ಬಾಂಧವರು
ಅನಿಬರವನೀಶ್ವರರು ಸಮರಾ
ವನಿಯೊಳಡಗಿದುದೇಕದೇಶದ
ಜನಪತಿಯ ಮುರಿದುದುವೆ ಸಾಲದೆ ಭೀಮ ನಮಗೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಅವನ ನೂರು ಜನ ತಮ್ಮಂದಿರು ಮಡಿದಿದ್ದಾರೆ. ಮಕ್ಕಳು ಸತ್ತಿದ್ದಾರೆ. ಮಾವ(ಶಕುನಿ), ಗುರು(ದ್ರೋಣ), ಮೈದುನ(ಸೈಂಧವ-ತಂಗಿಯ ಗಂಡ), ಅಜ್ಜ(ಭೀಷ್ಮ), ಪುತ್ರ(ಲಕ್ಷಣಕುಮಾರ), ಮಿತ್ರ(ಕರ್ಣ), ದಾಯಾದಿಗಳು, ಬಾಂಧವರು, ಅಷ್ಟುಜನ ರಾಜರುಗಳು, ಯುದ್ಧಭೂಮಿಯಲ್ಲಿ ಮಡಿದರು, ಏಕಚಕ್ರಾಧಿಪತಿಯಾದ ದುರ್ಯೋಧನನನ್ನು ಸಂಹರಿಸಿದುದು ನಮಗೆ ಸಾಲದೇ ಭೀಮಾ, ಎಂದು ಧರ್ಮಜ ನುಡಿದ.
ಪದಾರ್ಥ (ಕ.ಗ.ಪ)
ಅನುಜರು-ತಮ್ಮಂದಿರು, ಅಳಿದುದು-ನಾಶವಾಯಿತು, ಮರಣಹೊಂದಿತು, ತನುಜರು-ಮಕ್ಕಳು, ಪಿತಾಮಹ-ಅಜ್ಜ, ಜ್ಞಾತಿ-ದಾಯಾದಿ, ಏಕದೇಶದ ಜನಪತಿ-ಏಕಚಕ್ರಾಧಿಪತಿ, ಮುರಿ-ಸಂಹರಿಸು
ಮೂಲ ...{Loading}...
ಅನುಜರಳಿದುದು ನೂರು ರಣದಲಿ
ತನುಜರಳಿದುದು ಮಾವ ಗುರು ಮೈ
ದುನ ಪಿತಾಮಹ ಪುತ್ರ ಮಿತ್ರ ಜ್ಞಾತಿ ಬಾಂಧವರು
ಅನಿಬರವನೀಶ್ವರರು ಸಮರಾ
ವನಿಯೊಳಡಗಿದುದೇಕದೇಶದ
ಜನಪತಿಯ ಮುರಿದುದುವೆ ಸಾಲದೆ ಭೀಮ ನಮಗೆಂದ ॥18॥
೦೧೯ ಆವ ಮೋರೆಯೊಳಪ್ಪದೇವರ ...{Loading}...
ಆವ ಮೋರೆಯೊಳಪ್ಪದೇವರ
ನಾವು ನೋಡುವೆವವ್ವೆಯರ ಸಂ
ಭಾವಿಸುವೆವಾವಂಗದಲಿ ಗಾಂಧಾರಿ ಕಡುಗೋಪಿ
ದೇವಿಯರುಗಳ ಶೋಕವಹ್ನಿಯ
ನಾವ ವಿಧದಲಿ ನಿಲಿಸುವೆವು ಕಾಂ
ತಾವಳಿಗಳೇನೆಂದು ಬಯ್ಯರು ಭೀಮ ಹೇಳೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವ ಮುಖದಲ್ಲಿ ಅಪ್ಪದೇವರಾದ ಧೃತರಾಷ್ಟ್ರನನ್ನು ನಾವು ನೋಡೋಣ. ಯಾವ ರೀತಿಯಲ್ಲಿ ತಾಯಿಯಾದ ಗಾಂಧಾರಿಯನ್ನು ಸಮಾಧಾನ ಪಡಿಸೋಣ - ಆಕೆ ಬಹು ಕೋಪಿಷ್ಠೆ. ದುರ್ಯೋಧನಾದಿಗಳ ಮಡದಿಯರುಗಳ ಶೋಕಾಗ್ನಿಯನ್ನು ಯಾವ ರೀತಿ ನಿಲ್ಲಿಸೋಣ, ಮಹಿಳೆಯರು ನಮ್ಮನ್ನು ಏನೆಂದು ಬಯ್ಯುವುದಿಲ್ಲ (ಎಲ್ಲ ವಿಧದಲ್ಲಿಯೂ ¨ಯ್ಯುತ್ತಾರೆ) - ಎಂದು ಧರ್ಮಜ ಭೀಮನನ್ನು ಕುರಿತು ಹೇಳಿದ.
ಪದಾರ್ಥ (ಕ.ಗ.ಪ)
ಮೋರೆ-ಮುಖ, ಸಂಭಾವಿಸು-ಸಂತೈಸು. ಶೋಕವಹ್ನಿ-ಶೋಕವೆಂಬ ಬೆಂಕಿ, ಕಾಂತಾವಳಿ-ಮಹಿಳಾ ಸಮೂಹ
ಮೂಲ ...{Loading}...
ಆವ ಮೋರೆಯೊಳಪ್ಪದೇವರ
ನಾವು ನೋಡುವೆವವ್ವೆಯರ ಸಂ
ಭಾವಿಸುವೆವಾವಂಗದಲಿ ಗಾಂಧಾರಿ ಕಡುಗೋಪಿ
ದೇವಿಯರುಗಳ ಶೋಕವಹ್ನಿಯ
ನಾವ ವಿಧದಲಿ ನಿಲಿಸುವೆವು ಕಾಂ
ತಾವಳಿಗಳೇನೆಂದು ಬಯ್ಯರು ಭೀಮ ಹೇಳೆಂದ ॥19॥
೦೨೦ ಅಳಲಿದತಿಭಙ್ಗಿಸಲು ಪರಮಂ ...{Loading}...
ಅಳಲಿದತಿಭಂಗಿಸಲು ಪರಮಂ
ಡಳಿಕರೇ ನಾವ್ ಪಾಂಡುವಿನ ಮ
ಕ್ಕಳುಗಳಾ ಧೃತರಾಷ್ಟ್ರ ತನುಸಂಭವರು ಕೌರವರು
ನೆಲನ ಹುದುವಿನ ದಾಯಭಾಗದ
ಕಳವಳದೊಳಾಯ್ತಲ್ಲದುಳಿದಂ
ತೊಳಗು ಭಿನ್ನವೆ ಭೀಮ ಬಿಡು ಭಂಗಿಸದೆ ಸಾರೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನನ್ನು ನೋಯಿಸಿ, ಅತಿಯಾಗಿ ಭಂಗಕ್ಕೆ ಒಳಪಡಿಸಲು ನಾವೇನು ಬೇರೆ ರಾಜ್ಯದವರೇ, ನಾವು ಪಾಂಡುವಿನ ಮಕ್ಕಳು, ಕೌರವರು ಧೃತರಾಷ್ಟ್ರನ ಮಕ್ಕಳು (ನಾವಿಬ್ಬರೂ ಅಣ್ಣತಮ್ಮಂದಿರ ಮಕ್ಕಳು). ನೆಲದ ಸಂಬಂಧದಲ್ಲಿ ನಮ್ಮ ಭಾಗವನ್ನು ಪಡೆಯುವ ಆತುರದಲ್ಲಿ ಈ ಯುದ್ಧದ ಘಟನೆಗಳು ಸಂಭವಿಸಿದುವಲ್ಲವೇ, ಅದನ್ನು ಮಿಕ್ಕಂತೆ ನಮ್ಮ ಒಳಗೆ (ಮನಸ್ಸು) ಬೇರೆಯೇ? ಭೀಮ ಬಿಡು, ದುರ್ಯೋಧನನ್ನು ಭಂಗಿಸದೇ ಹೋಗು - ಎಂದು ಧರ್ಮಜ ಹೇಳಿದ.
ಪದಾರ್ಥ (ಕ.ಗ.ಪ)
ಅಳಲು-ದುಃಖ, ಶೋಕ, ಪರಮಂಡಳಿಕ-ಬೇರೆ ರಾಜರು, ಶತ್ರುಗಳು, ಹುದು-ನಂಟು, ಸಂಬಂಧ, ಸ್ನೇಹ, ಹೊಂದಿಕೆ, ದಾಯಭಾಗ-ಆಸ್ತಿಯಭಾಗ, ಕಳವಳ- ಮನಸ್ತಾಪ , ಒಳಗು-ಆಂತರ್ಯ, ಮನಸ್ಸು, ಭಿನ್ನ-ಬೇರೆ,
ಟಿಪ್ಪನೀ (ಕ.ಗ.ಪ)
ಈ ಪದ್ಯದಲ್ಲಿ ‘ಮಕ್ಕಳುಗಳು’ ಎಂಬ ಶಬ್ದ ದ್ವಿರುಕ್ತಿ ದೋಷದಿಂದ ಕೂಡಿದೆ. ‘ಮಗು’ಎಂಬುದರ ಬಹುವಚನ ‘ಮಕ್ಕಳು’
ಅದಕ್ಕೆ ಪುನಃ ‘ಗಳು’ ಸೇರಿಸಿ ‘ಮಕ್ಕಳುಗಳು’ ಎಂದು ಇಲ್ಲಿ ಬಳಸಲಾಗಿದೆ. ಆಡುಮಾತಿನಲ್ಲಿ ಈ ರೀತಿ ಬಳಸುವುದು ಸಾಮಾನ್ಯ.
ಮೂಲ ...{Loading}...
ಅಳಲಿದತಿಭಂಗಿಸಲು ಪರಮಂ
ಡಳಿಕರೇ ನಾವ್ ಪಾಂಡುವಿನ ಮ
ಕ್ಕಳುಗಳಾ ಧೃತರಾಷ್ಟ್ರ ತನುಸಂಭವರು ಕೌರವರು
ನೆಲನ ಹುದುವಿನ ದಾಯಭಾಗದ
ಕಳವಳದೊಳಾಯ್ತಲ್ಲದುಳಿದಂ
ತೊಳಗು ಭಿನ್ನವೆ ಭೀಮ ಬಿಡು ಭಂಗಿಸದೆ ಸಾರೆಂದ ॥20॥
೦೨೧ ಸೈರಿಸೆಮ್ಮಪರಾಧವನು ಕುರು ...{Loading}...
ಸೈರಿಸೆಮ್ಮಪರಾಧವನು ಕುರು
ವೀರ ಸಂಚಿತಪಾಪಕರ್ಮವಿ
ಕಾರವಿದು ಭೋಗಾದಿ ನಿನಗೆಂದರಸ ದುಗುಡದಲಿ
ನೀರೊರೆವ ಕಣ್ಣುಗಳನೊರಸುತ
ಸೀರೆಯಲಿ ಗದಗದಿತ ಗಳದಲಿ
ಸಾರಹೃದಯ ಮಹೀಶನದ್ದನು ಖೇದಪಂಕದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುವೀರ ನಮ್ಮ ಅಪರಾಧವನ್ನು ಸಹಿಸಿಕೋ. ಹಿಂದೆ ಮಾಡಿದ ಪಾಪಗಳ ಫಲಗಳನ್ನು ನೀನು ಅನುಭವಿಸಬೇಕಾಗಿದೆ ಎಂದು ದುಃಖದಿಂದ ನೀರು ಜಿನುಗುತ್ತಿದ್ದ ಕಣ್ಣುಗಳನ್ನು ಧೋತ್ರದಿಂದ ಒರಸುತ್ತ ಗದ್ಗದ ಕಂಠನಾಗಿ ಆದ್ರರ್ಹೃದಯನಾದ ಧರ್ಮಜನು ದುಃಖದಲ್ಲಿ ಮುಳುಗಿದ.
ಪದಾರ್ಥ (ಕ.ಗ.ಪ)
ಸೈರಿಸು-ಸಹಿಸಿಕೊ, ಸಮಾಧಾನ ಮಾಡಿಕೋ, ಸಂಚಿತ- ಸಂಗ್ರಹಿತವಾದ, ಪಾಪಕರ್ಮವಿಕಾರ-ಪಾಪದ ಕೆಲಸಗಳಿಂದ ಬಂದ ದುಃಸ್ಥಿತಿ, ದುಗುಡ-ದುಃಖ, ಕಳವಳ, ನೀರೊರೆವ-ನೀರು ಒಸರುವ, ನೀರು ತೊಟ್ಟಿಕ್ಕುವ, ಸೀರೆ-ಧೋತ್ರ, ಗಳ-ಗಂಟಲು, ಸಾರಹೃದಯ-ಉತ್ತಮ ಹೃದಯವನ್ನುಳ್ಳವನು, ಆದ್ರ್ರಹೃದಯವುಳ್ಳವನು, ಅದ್ದನು-ಮುಳುಗಿದನು, ಖೇದಪಂಕ-ದುಃಖವೆಂಬ ಕೆಸರು.
ಟಿಪ್ಪನೀ (ಕ.ಗ.ಪ)
É
ಮೂಲ ...{Loading}...
ಸೈರಿಸೆಮ್ಮಪರಾಧವನು ಕುರು
ವೀರ ಸಂಚಿತಪಾಪಕರ್ಮವಿ
ಕಾರವಿದು ಭೋಗಾದಿ ನಿನಗೆಂದರಸ ದುಗುಡದಲಿ
ನೀರೊರೆವ ಕಣ್ಣುಗಳನೊರಸುತ
ಸೀರೆಯಲಿ ಗದಗದಿತ ಗಳದಲಿ
ಸಾರಹೃದಯ ಮಹೀಶನದ್ದನು ಖೇದಪಂಕದಲಿ ॥21॥
೦೨೨ ಕಣ್ಡನೀವ್ಯತಿಕರವನರಸನ ...{Loading}...
ಕಂಡನೀವ್ಯತಿಕರವನರಸನ
ಮಂಡೆಯಂಘ್ರಿಯ ಭೀಮಸೇನನ
ದಂಡಿಯನು ದಟ್ಟಯಿಸೆ ಸುಯಿ ದಳ್ಳುರಿಯ ಚೂಣಿಯಲಿ
ಗಂಡುಗೆದರಿದ ರೋಷಶಿಖಿ ಹುರಿ
ಗೊಂಡುದಕ್ಷಿಗಳಲಿ ವೃಕೋದರ
ಕೊಂಡನೇ ತಪ್ಪೇನೆನುತ ನಿಂದಿದ್ದನಾ ರಾಮ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ತಲೆಯಮೇಲೆ ಭೀಮ ಪಾದಗಳನ್ನು ಇಟ್ಟಿರುವ ದುರ್ಘಟನೆಯ ವೈಪರೀತ್ಯವನ್ನು ಬಲರಾಮ ನೋಡಿದ. ಉಸಿರಿನ ದಳ್ಳುರಿಯ ಜೊತೆಯಲ್ಲಿ ತೀವ್ರವಾಗಿ ಕೆದರಿದ ರೋಷಾಗ್ನಿಯು ಕಣ್ಣುಗಳಲ್ಲಿ ಪ್ರಖರವಾಗಿ ಕಾಣಿಸಿಕೊಂಡು ‘ಭೀಮ ಹೀಗೆ ಮಾಡಿದನೇ’ ತಪ್ಪೇನು ಎನ್ನುತ್ತ ಬಲರಾಮನು ಎದ್ದು ನಿಂvನು.
ಪದಾರ್ಥ (ಕ.ಗ.ಪ)
ವ್ಯತಿಕರ-ದುರ್ಘಟನೆ, ಮಂಡೆ-ತಲೆ, ಅಂಘ್ರಿ-ಪಾದ, ದಂಡಿ-ವೈಪರೀತ್ಯ, ದಟ್ಟಯಿಸು-ಒತ್ತಾಗಿಸೇರು, ಒಟ್ಟಾಗಿ ಸೇರು, ಗಂಡುಗೆದರು-ತೀವ್ರವಾಗಿ ಹರಡು, ವಿಸ್ತರಿಸು, ಪ್ರಕಾಶಿಸು, ಹುರಿಗೊಂಡುದು-ಪ್ರಖರವಾಗಿ ಕಾಣಿಸಿತು, ತೀವ್ರತೆಯನ್ನು ಪಡೆಯಿತು, ಅಕ್ಷಿ-ಕಣ್ಣು, ಕೊಂಡನೇ-ಗೆದ್ದುಕೊಂಡನೇ, ಹೀಗೆ ಮಾಡಿದನೇ.
ಮೂಲ ...{Loading}...
ಕಂಡನೀವ್ಯತಿಕರವನರಸನ
ಮಂಡೆಯಂಘ್ರಿಯ ಭೀಮಸೇನನ
ದಂಡಿಯನು ದಟ್ಟಯಿಸೆ ಸುಯಿ ದಳ್ಳುರಿಯ ಚೂಣಿಯಲಿ
ಗಂಡುಗೆದರಿದ ರೋಷಶಿಖಿ ಹುರಿ
ಗೊಂಡುದಕ್ಷಿಗಳಲಿ ವೃಕೋದರ
ಕೊಂಡನೇ ತಪ್ಪೇನೆನುತ ನಿಂದಿದ್ದನಾ ರಾಮ ॥22॥
೦೨೩ ಎಲವೆಲವೊ ಪಾಣ್ಡವರಿರಾ ...{Loading}...
ಎಲವೆಲವೊ ಪಾಂಡವರಿರಾ ನೀ
ವಳುಪಿದಿರಲಾ ನಾಭಿಯಿಂದವೆ
ಕೆಳಗೆ ಕೈ ಮಾಡುವುದು ಸಲ್ಲದು ಗದೆಯ ಕದನದಲಿ
ಚಲಿಸಲಾಗದು ಧರ್ಮನಿರ್ಣಯ
ದೊಳಗಿದೊಂದೇ ಭಾಷೆ ಮಾಡಿದಿ
ರಳಿದಿರನ್ಯಾಯದಲಿ ಕೊಂದಿರಿ ಕೌರವೇಶ್ವರನ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲವೆಲವೋ ಪಾಂಡವರುಗಳಾ, ನೀವು ರಾಜ್ಯವನ್ನು ಪಡೆಯುವ ದುರಾಶೆಪಟ್ಟರಲ್ಲಾ. ಗದಾಯುದ್ಧದಲ್ಲಿ ನಾಭೀಪ್ರದೇಶದಿಂದ ಕೆಳಭಾಗಕ್ಕೆ ಹೊಡೆಯುವುದು ಅನ್ಯಾಯ. ಇದರಿಂದ ಆಚೀಚೆ ಹೋಗಬಾರದು. ಧರ್ಮನಿರ್ಣಯದೊಳಗೆ ಭಾಷೆ (ನ್ಯಾಯಮಾರ್ಗದಿಂದ ಚಲಿಸಬಾರದೆಂಬುದು)ಯನ್ನು ಮಾಡಿದಿರಿ. ಆದರೆ ಅದನ್ನು ಮುರಿದಿರಿ. ಕೌರವೇಶ್ವರನನ್ನು ಅನ್ಯಾಯದಿಂದ ಕೊಂದಿರಿ.
ಪದಾರ್ಥ (ಕ.ಗ.ಪ)
ಅಳುಪು-ಆಶೆ, ದುರಾಶೆ, ಇಚ್ಛ್ಚೆಪಡು, ಕೈಮಾಡು-ಹೊಡೆ, ಚಲಿಸು-ಮಾತಿಗೆ ತಪ್ಪುವುದು, ದೃಢತೆಯನ್ನು ಕಳೆದುಕೊಳ್ಳುವುದು, ಅಳಿದಿರಿ-ಭಾಷೆಯನ್ನು ಹಾಳು ಮಾಡಿದಿರಿ, ನಾಶಮಾಡಿದಿರಿ, ತಪ್ಪಿದಿರಿ.
ಮೂಲ ...{Loading}...
ಎಲವೆಲವೊ ಪಾಂಡವರಿರಾ ನೀ
ವಳುಪಿದಿರಲಾ ನಾಭಿಯಿಂದವೆ
ಕೆಳಗೆ ಕೈ ಮಾಡುವುದು ಸಲ್ಲದು ಗದೆಯ ಕದನದಲಿ
ಚಲಿಸಲಾಗದು ಧರ್ಮನಿರ್ಣಯ
ದೊಳಗಿದೊಂದೇ ಭಾಷೆ ಮಾಡಿದಿ
ರಳಿದಿರನ್ಯಾಯದಲಿ ಕೊಂದಿರಿ ಕೌರವೇಶ್ವರನ ॥23॥
೦೨೪ ನೀವು ಮಾಡಿದ ...{Loading}...
ನೀವು ಮಾಡಿದ ಸತ್ಯಭಾಷೆಗೆ
ನೀವಲಾ ತಪ್ಪಿದಿರಿ ನೋಟಕ
ರಾವು ಮಧ್ಯಸ್ಥಿತರಲೇ ಧರ್ಮೈಕರಕ್ಷಕರು
ನಾವು ಸಾಕ್ಷಿಗಳಬಳರೆಂದೇ
ನೀವು ನೃಪತಿಯ ತೊಡೆಯನುಡಿದಿರಿ
ಡಾವರವೆ ಸಾಕೈಸೆ ಕಾಲಿಕ್ಕಿದಿರಿ ಸಿರಿಮುಡಿಗೆ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವೇ ಮಾಡಿದ ಸತ್ಯಭಾಷೆಗೆ ನೀವೆ ತಪ್ಪಿದಿರಲ್ಲವೇ. ನಾವು ಕೇವಲ ನೋಟಕರು, ಎರಡೂ ಪಕ್ಷಗಳ ಮಧ್ಯದಲ್ಲಿರುವವರು ಧರ್ಮದ ಏಕಮಾತ್ರ ರಕ್ಷಕರಲ್ಲವೆ. ನಾವು ಯುದ್ಧಕ್ಕೆ ಸಾಕ್ಷಿಗಳು ಮಾತ್ರ ಆದ್ದರಿಂದ ಅಬಲರು ಎಂಬ ಕಾರಣಕ್ಕಾಗಿಯೇ ನೀವು ರಾಜನ ತೊಡೆಯನ್ನು ಮುರಿದಿರಿ. ಇದು ಹೋರಾಟವೇ? ಸಾಕು. ರಾಜನ ತಲೆಯಮೇಲೆ ಕಾಲಿಟ್ಟಿರಿ.
ಪದಾರ್ಥ (ಕ.ಗ.ಪ)
ನೋಟಕರು-ನೋಡುವವರು, ಪ್ರೇಕ್ಷಕರು, ಮಧ್ಯಸ್ಥಿತರು-ಮಧ್ಯದಲ್ಲಿರುವವರು, ಯಾವ ಪಕ್ಷಕ್ಕೂ ಸೇರದವರು, ಧರ್ಮೈಕರಕ್ಷಕರು-ಧರ್ಮವನ್ನು ರಕ್ಷಿಸುವವರು, ಧರ್ಮವನ್ನು ಮಾತ್ರ ರಕ್ಷಿಸುವವರು, ಧರ್ಮದ ಏಕಮಾತ್ರ ರಕ್ಷಕರು, ಅಬಳರು-ಅಬಲರು, ಶಕ್ತಿಯಿಲ್ಲದವರು, ಡಾವರ-ಹೋರಾಟ, ದಾಹ, ಸಾಕೈಸೆ-ಸಾಕಲ್ಲವೆ, ಸಾಕು ಬಿಡಿ, ಸಿರಿಮುಡಿ-ಶ್ರೇಷ್ಠವಾದ ತಲೆ, ಶ್ರೀಮುಡಿ
ಮೂಲ ...{Loading}...
ನೀವು ಮಾಡಿದ ಸತ್ಯಭಾಷೆಗೆ
ನೀವಲಾ ತಪ್ಪಿದಿರಿ ನೋಟಕ
ರಾವು ಮಧ್ಯಸ್ಥಿತರಲೇ ಧರ್ಮೈಕರಕ್ಷಕರು
ನಾವು ಸಾಕ್ಷಿಗಳಬಳರೆಂದೇ
ನೀವು ನೃಪತಿಯ ತೊಡೆಯನುಡಿದಿರಿ
ಡಾವರವೆ ಸಾಕೈಸೆ ಕಾಲಿಕ್ಕಿದಿರಿ ಸಿರಿಮುಡಿಗೆ ॥24॥
೦೨೫ ಎನ್ದು ನೇಗಿಲ ...{Loading}...
ಎಂದು ನೇಗಿಲ ತುಡುಕಿಯೆಡಗೈ
ಯಿಂದ ನೆಗಹಿ ಮಹೋಗ್ರ ಮುಸಲವ
ನೊಂದು ಕಯ್ಯಲಿ ತಿರುಹಿ ಕೊಬ್ಬಿದ ಖತಿಯ ಭಾರದಲಿ
ಮುಂದೆ ನಡೆತರೆ ಸಕಲಸೇನಾ
ವೃಂದ ನಡುಗಿತು ಬಹಳ ಭೀತಿಯ
ಬಂದಿಯಲಿ ಜರುಗಿದವು ಜವಳಿಯ ಜಗದ ಜೋಡಿಗಳು ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ಹೇಳುತ್ತಾ ಬಲರಾಮನು ನೇಗಿಲನ್ನು ಸೆಳೆದುಕೊಂಡು, ಎಡಗೈಯಿಂದ ಅದನ್ನು ಮೇಲೆತ್ತಿ, ಮಹೋಗ್ರವಾದ ಮುಸಲಾಯುಧವನ್ನು ಒಂದು ಕೈಯಿಂದ ತಿರುಗಿಸಿ ಹೆಚ್ಚಾದ ಕೋಪದ ಭಾರದಿಂದ ಮುಂದೆ ಬರಲು, ಪಾಂಡವರ ಸಕಲ ಸೈನ್ಯವೆಲ್ಲವೂ ಬಹಳವಾದ ಭಯದಿಂದ ಕಟ್ಟಿಹಾಕಿದವರಂತೆ ನಡುಗಿತು. ಜಗತ್ತನ್ನು ಜೋಡಿಸಿರುವ ಕೀಲುಗಳು ಜರುಗಿದವು.
ಪದಾರ್ಥ (ಕ.ಗ.ಪ)
ಮುಸಲ-ಬಲರಾಮನ ಆಯುಧ, ಖತಿ-ಕೋಪ, ಸಿಟ್ಟು, ಜರುಗು-ಜಾರು, ಅಲ್ಲಾಡು, ಪಕ್ಕಕ್ಕೆ ಸರಿ, ಜವಳಿ-ಜೋಡಿ, ಜೊತೆ (ಇಲ್ಲಿ ಕೀಲುಗಳು ಎಂಬರ್ಥದಲ್ಲಿ ಪ್ರಯೋಗವಾಗಿದೆ).
ಮೂಲ ...{Loading}...
ಎಂದು ನೇಗಿಲ ತುಡುಕಿಯೆಡಗೈ
ಯಿಂದ ನೆಗಹಿ ಮಹೋಗ್ರ ಮುಸಲವ
ನೊಂದು ಕಯ್ಯಲಿ ತಿರುಹಿ ಕೊಬ್ಬಿದ ಖತಿಯ ಭಾರದಲಿ
ಮುಂದೆ ನಡೆತರೆ ಸಕಲಸೇನಾ
ವೃಂದ ನಡುಗಿತು ಬಹಳ ಭೀತಿಯ
ಬಂದಿಯಲಿ ಜರುಗಿದವು ಜವಳಿಯ ಜಗದ ಜೋಡಿಗಳು ॥25॥
೦೨೬ ಬಿಲ್ಲ ಮಿಡಿದನು ...{Loading}...
ಬಿಲ್ಲ ಮಿಡಿದನು ಪಾರ್ಥ ಭಾರತ
ಮಲ್ಲ ಕೊಂಡನು ಗದೆಯ ನೃಪ ನಿಂ
ದಲ್ಲಿ ಬೆರಗಾದನು ರಣೋತ್ಸವವಾಯ್ತು ಯಮಳರಿಗೆ
ತಲ್ಲಣಿಸಿತುಳಿದರಸುಮಕ್ಕಳು
ಚಲ್ಲಿತಾ ಸುಭಟೌಘ ವಿಜಯದ
ಭುಲ್ಲವಣೆ ಪಲ್ಲಟಿಸಿತವರಿಗೆ ಖೇಡತನದೊಡನೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ತನ್ನ ಬಿಲ್ಲನ್ನು ಝೇಂಕರಿಸಿದ, ಭಾರತ ಮಲ್ಲನಾದ ಭೀಮ ಗದೆಯನ್ನು ಕೈಗೆ ತೆಗೆದುಕೊಂಡ. ಧರ್ಮರಾಯ ನಿಂತಕಡೆಯೇ ಬೆರಗಾದ. ನಕುಲ ಸಹದೇವರಿಗೆ ಯುದ್ಧದ ಉತ್ಸಾಹವಾಯಿತು. ಉಳಿದ ರಾಜಕುಮಾರರು ತಲ್ಲಣಿಸಿದರು. ಸುಭಟರ ಸಮೂಹವು ಚಲ್ಲಾಪಿಲ್ಲಿಯಾಯಿತು. ಪಾಂಡವರಲ್ಲಿ ವಿಜಯದ ಉತ್ಸಾಹವು ಭಯಕ್ಕೆ ತಿರುಗಿತು.
ಪದಾರ್ಥ (ಕ.ಗ.ಪ)
ಯಮಳರು-ಅವಳಿ ಜವಳಿಗಳು, ನಕುಲಸಹದೇವರು, ತಲ್ಲಣ-ತಳಮಳ, ಗಾಬರಿ, ಆತಂಕ, ಚಲ್ಲಿತು-ಚಲ್ಲಾಪಿಲ್ಲಿಯಾಯಿತು, ಓಡಿಹೋಯಿತು, ಸುಭಟೌಘ-ಸುಭಟರ ಸಮೂಹ, ಭುಲ್ಲವಣೆ-ಉತ್ಸಾಹ, ಪಲ್ಲಟಿಸು-ಬದಲಾಗು, ಖೇಡತನ-ಹೆದರಿಕೆ, ಭಯ
ಮೂಲ ...{Loading}...
ಬಿಲ್ಲ ಮಿಡಿದನು ಪಾರ್ಥ ಭಾರತ
ಮಲ್ಲ ಕೊಂಡನು ಗದೆಯ ನೃಪ ನಿಂ
ದಲ್ಲಿ ಬೆರಗಾದನು ರಣೋತ್ಸವವಾಯ್ತು ಯಮಳರಿಗೆ
ತಲ್ಲಣಿಸಿತುಳಿದರಸುಮಕ್ಕಳು
ಚಲ್ಲಿತಾ ಸುಭಟೌಘ ವಿಜಯದ
ಭುಲ್ಲವಣೆ ಪಲ್ಲಟಿಸಿತವರಿಗೆ ಖೇಡತನದೊಡನೆ ॥26॥
೦೨೭ ಹಲಧರನ ಖತಿ ...{Loading}...
ಹಲಧರನ ಖತಿ ಬಲುಹು ಕದನಕೆ
ಮಲೆತನಾದಡೆ ಹಾನಿ ತಪ್ಪದು
ಗೆಲವಿನಲಿ ಸೋಲದಲಿ ತಾನೌಚಿತ್ಯವೇನಿದಕೆ
ಒಳಗೆ ಬಿದ್ದ ವಿಘಾತಿ ಮುರರಿಪು
ತಿಳಿವನೋ ತವಕಿಸುವನೋ ನಾ
ವಳಿದೆವಿನ್ನೇನೆನುತ ನಡುಗಿದನಂದು ಯಮಸೂನು ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಲಧರನಾದ ಬಲರಾಮನ ಕೋಪ ಬಲುದೊಡ್ಡದು. ಯುದ್ಧಕ್ಕೆ ಎದುರುನಿಂತನಾದರೆ, ಗೆದ್ದರೂ, ಸೋತರೂ ಹಾನಿತಪ್ಪಿದ್ದಲ್ಲ. ಇದಕ್ಕೆ ಔಚಿತ್ಯವನ್ನು ನೋಡುವಂತಿಲ್ಲ. ಒಳಗಿನಿಂದಲೇ ಬಂದಿರುವ ಈ ವಿರೋಧವನ್ನು ಕೃಷ್ಣ ತಿಳಿದಿದ್ದಾನೋ, ಗಾಬರಿಪಡುತ್ತಾನೋ ತಿಳಿಯದು. ಇನ್ನೇನು ನಾವು ನಾಶಹೊಂದಿದೆವು ಎಂದು ಧರ್ಮರಾಯ ನಡುಗಿದ.
ಪದಾರ್ಥ (ಕ.ಗ.ಪ)
ಮಲೆತನಾದೊಡೆ-ಎದುರಿಸಿ ನಿಂತರೆ, ವಿಘಾತಿ-ವಿರೋಧ, ಅಡ್ಡಿ, ಹೊಡೆತ, ಪೆಟ್ಟು, ನಾಶ, ತವಕಿಸು-ತಲ್ಲಣಗೊಳ್ಳು, ಗಾಬರಿಗೊಳ್ಳು,
ಮೂಲ ...{Loading}...
ಹಲಧರನ ಖತಿ ಬಲುಹು ಕದನಕೆ
ಮಲೆತನಾದಡೆ ಹಾನಿ ತಪ್ಪದು
ಗೆಲವಿನಲಿ ಸೋಲದಲಿ ತಾನೌಚಿತ್ಯವೇನಿದಕೆ
ಒಳಗೆ ಬಿದ್ದ ವಿಘಾತಿ ಮುರರಿಪು
ತಿಳಿವನೋ ತವಕಿಸುವನೋ ನಾ
ವಳಿದೆವಿನ್ನೇನೆನುತ ನಡುಗಿದನಂದು ಯಮಸೂನು ॥27॥
೦೨೮ ಹಲಧರನ ಮಸಕವನು ...{Loading}...
ಹಲಧರನ ಮಸಕವನು ಪಾಂಡವ
ಬಲದ ದುಶ್ಚೇಷ್ಟೆಯನು ಭೀಮನ
ಫಲುಗುಣನ ಧರ್ಮಜರ ಯಮಳರ ಚಿತ್ತವಿಭ್ರಮವ
ಬಲಿಮಥನನೀಕ್ಷಿಸುತ ರಜತಾ
ಚಲವ ತರುಬುವ ನೀಲ ಗಿರಿಯವೊ
ಲಳುಕದಿದಿರಲಿ ನಿಂದು ಹಿಡಿದನು ಬಲನ ಬಲಗಯ್ಯ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲರಾಮನ ಹವಣಿಕೆಯನ್ನು, ಪಾಂಡವ ಸೈನ್ಯದ ಕೆಟ್ಟ ಚೇಷ್ಟೆಯನ್ನು, ಭೀಮ, ಅರ್ಜುನ, ಧರ್ಮರಾಯ, ನಕುಲ, ಸಹದೇವ ಇವರುಗಳ ಮನೋವಿಕಾರವನ್ನು ಕೃಷ್ಣ ನೋಡುತ್ತಾ, ರಜತ ಪರ್ವತವನ್ನು ತಡೆದುನಿಲ್ಲಿಸುವ ನೀಲಗಿರಿಯಂತೆ, ಹೆದರದೆ ಇದಿರು ಬಂದು ನಿಂತು ಬಲರಾಮನ ಬಲಗೈಯನ್ನು ಹಿಡಿದ.
ಪದಾರ್ಥ (ಕ.ಗ.ಪ)
ಮಸಕ-ಹವಣಿಕೆ, ಮನದಲ್ಲಿ ಲೆಕ್ಕಾಚಾರ ಹಾಕುವುದು, ದುಶ್ಚೇಷ್ಟೆ-ಕೆಟ್ಟ ನಡವಳಿಕೆ, ಕೆಟ್ಟ ಆಟಗಳು, ಚಿತ್ತವಿಭ್ರಮ-ಮನೋವಿಕಾರ, ಭ್ರಾಂತಿ, ಬಲಿಮಥನ-ಬಲಿಯನ್ನು ಸಂಹರಿಸಿದವ, ಶ್ರೀಕೃಷ್ಣ, ತರುಬು-ತಡೆ, ಅಡ್ಡಗಟ್ಟು, ಬಲನ-ಬಲರಾಮನ
ಟಿಪ್ಪನೀ (ಕ.ಗ.ಪ)
ರಜತಾಚಲವ ತರುಬುವ ನೀಲಗಿರಿಯವೋಲ್ ಎಂಬಲ್ಲಿ ಬೆಳ್ಳಿಯ ಬೆಟ್ಟವನ್ನು ಬಲರಾಮನಿಗೂ ನೀಲಿಯ ಬೆಟ್ಟವನ್ನು ಕೃಷ್ಣನಿಗೂ ಹೋಲಿಸಿರುವುದು ಅವರವರ ಮೈಬಣ್ಣಗಳಿಗೆ ಬಹು ಉಚಿತವಾಗಿ ಒಪ್ಪುತ್ತದೆಂಬುದನ್ನು ಗಮನಿಸಬಹುದು.
ಮೂಲ ...{Loading}...
ಹಲಧರನ ಮಸಕವನು ಪಾಂಡವ
ಬಲದ ದುಶ್ಚೇಷ್ಟೆಯನು ಭೀಮನ
ಫಲುಗುಣನ ಧರ್ಮಜರ ಯಮಳರ ಚಿತ್ತವಿಭ್ರಮವ
ಬಲಿಮಥನನೀಕ್ಷಿಸುತ ರಜತಾ
ಚಲವ ತರುಬುವ ನೀಲ ಗಿರಿಯವೊ
ಲಳುಕದಿದಿರಲಿ ನಿಂದು ಹಿಡಿದನು ಬಲನ ಬಲಗಯ್ಯ ॥28॥
೦೨೯ ಚಿತ್ತವಿಸಿರೇ ಬರಿಯ ...{Loading}...
ಚಿತ್ತವಿಸಿರೇ ಬರಿಯ ರೋಷಕೆ
ತೆತ್ತಡೇನಹುದಂತರಂಗವ
ನುತ್ತಮರ ಪದ್ಧತಿಗಳಲಿ ಶಾಸ್ತ್ರಾರ್ಥನಿಶ್ಚಯವ
ಬಿತ್ತರಿಸುವುದು ಕೌರವೇಂದ್ರನ
ಕಿತ್ತಡವ ನೀವರಿಯಿರೇ ನಿಮ
ಗೆತ್ತಿದಾಗ್ರಹ ನಿಲಲಿ ತಿಳುಹುವೆನೆಂದನಸುರಾರಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲರಾಮ ಕೇಳಿ, ಬರಿಯ ರೋಷಕ್ಕೆ ಮನಸ್ಸನ್ನು ಕೊಟ್ಟರೆ ಏನು ಪ್ರಯೋಜನ? ಉತ್ತಮರು ಅನುಸರಿಸುವ ರೀತಿಯಲ್ಲಿ ಶಾಸ್ತ್ರಗಳ ಅರ್ಥವನ್ನು ನಿಶ್ಚಯಿಸಿ ವಿವರಿಸಬೇಕು. ಕೌರವೇಂದ್ರನ ಮೋಸ ನಿಮಗೆ ತಿಳಿದಿಲ್ಲವೇ. ನಿಮ್ಮನ್ನು ಆವರಿಸಿರುವ ಕೋಪ ನಿಲ್ಲಲಿ, ಆ ನಂತರ ಅದರ ವಿವರಗಳನ್ನು ತಿಳಿಸುತ್ತೇನೆ ಎಂದು ಕೃಷ್ಣ, ಬಲರಾಮನಿಗೆ ತಿಳಿಸಿದ.
ಪದಾರ್ಥ (ಕ.ಗ.ಪ)
ಚಿತ್ತವಿಸು-ಕೇಳು, ಮನಸ್ಸಿಟ್ಟುಕೇಳು, ಆಲಿಸು, ಅಂತರಂಗ-ಮನಸ್ಸು, ಒಳಗಿನದು, ಬಿತ್ತರಿಸು-ವಿಸ್ತರಿಸು(ಸಂ.), ವಿವರಿಸು, ಕಿತ್ತಡ-ಮೋಸ, ವಂಚನೆ, ಆಗ್ರಹ-ಕೋಪ, ಸಿಟ್ಟು.
ಮೂಲ ...{Loading}...
ಚಿತ್ತವಿಸಿರೇ ಬರಿಯ ರೋಷಕೆ
ತೆತ್ತಡೇನಹುದಂತರಂಗವ
ನುತ್ತಮರ ಪದ್ಧತಿಗಳಲಿ ಶಾಸ್ತ್ರಾರ್ಥನಿಶ್ಚಯವ
ಬಿತ್ತರಿಸುವುದು ಕೌರವೇಂದ್ರನ
ಕಿತ್ತಡವ ನೀವರಿಯಿರೇ ನಿಮ
ಗೆತ್ತಿದಾಗ್ರಹ ನಿಲಲಿ ತಿಳುಹುವೆನೆಂದನಸುರಾರಿ ॥29॥
೦೩೦ ಏನ ತಿಳುಹುವೆ ...{Loading}...
ಏನ ತಿಳುಹುವೆ ನೀನು ಶಾಸ್ತ್ರದೊ
ಳೇನ ನಡೆದರು ನಿನ್ನವರು ಯಮ
ಸೂನು ನುಡಿಯನೆ ಸಮಯವನು ಶಾಸ್ತ್ರೌಘಸಂಗತಿಯ
ಹೀನಗತಿ ಪಡಿತಳದ ಹೊಯ್ಲು
ತ್ತಾನ ಘಾಯದಲೊದಗಬೇಕೆಂ
ಬೀ ನಿಬಂಧನವಾರಲಳಿದುದು ಕೃಷ್ಣ ಹೇಳೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಏನು ಹೇಳಬಲ್ಲೆ? ನಿನ್ನವರು (ಪಾಂಡವರು) ಶಾಸ್ತ್ರರೀತಿಯಲ್ಲಿ ಹೇಗೆ ನಡೆದುಕೊಂಡರು. ಧರ್ಮರಾಯನೇ ಶಾಸ್ತ್ರ ಧರ್ಮವನ್ನು ಹೇಳಲಿಲ್ಲವೆ. ನಾಭಿಯ ಕೆಳಗೆ ಹೊಡೆಯುವುದು ಹೀನಗತಿ, ನಾಭಿಯಿಂದ ಮೇಲೆ ಹೊಡೆತದಲ್ಲಿ ತೊಡಗಬೇಕು ಎಂಬೀ ನಿಬಂಧನೆಯು ಯಾರಿಂದ ನಾಶವಾಯಿತು - ಕೃಷ್ಣ ಹೇಳು, ಎಂದು ಬಲರಾಮ ನುಡಿದ.
ಪದಾರ್ಥ (ಕ.ಗ.ಪ)
ಶಾಸ್ತ್ರೌಘ ಸಂಗತಿ-ಶಾಸ್ತ್ರಸಮೂಹಗಳಲ್ಲಿ ಹೇಳಿರುವ ವಿಷಯಗಳು, ಹೀನಗತಿ-ದುರ್ಗತಿ, ಪಡಿತಳ-ಕೆಳಮಟ್ಟ (ಸೇರಿಕೆ, ಸಮಸ್ಥಳ, ಇದಿರು, ಒಟ್ಟು - ಎಂಬರ್ಥಗಳಿವೆ. ಸಂದರ್ಭೊಚಿತವಾಗಿ ‘ಕೆಳಮಟ್ಟ’ ಎಂಬರ್ಥವನ್ನು ಹೇಳಬಹುದು) ಹೊಯ್ಲು-ಹೊಡೆತ, ಉತ್ಥಾನ-ಮೇಲಿನ, ಘಾಯ-ಹೊಡೆತ.
ಮೂಲ ...{Loading}...
ಏನ ತಿಳುಹುವೆ ನೀನು ಶಾಸ್ತ್ರದೊ
ಳೇನ ನಡೆದರು ನಿನ್ನವರು ಯಮ
ಸೂನು ನುಡಿಯನೆ ಸಮಯವನು ಶಾಸ್ತ್ರೌಘಸಂಗತಿಯ
ಹೀನಗತಿ ಪಡಿತಳದ ಹೊಯ್ಲು
ತ್ತಾನ ಘಾಯದಲೊದಗಬೇಕೆಂ
ಬೀ ನಿಬಂಧನವಾರಲಳಿದುದು ಕೃಷ್ಣ ಹೇಳೆಂದ ॥30॥
೦೩೧ ಅದರಿನೀ ಕೌರವನ ...{Loading}...
ಅದರಿನೀ ಕೌರವನ ತೊಡೆಗಳ
ಸದೆದನನ್ಯಾಯದಲಿ ನಿನ್ನವ
ನಿದಕೆ ಸೈರಿಸಬಹುದೆ ಹೇಳೈ ಧರ್ಮನಿರ್ಣಯವ
ಮದಮುಖನ ಭುಜಬಲವ ನೋಡುವೆ
ವಿದು ವಿಕಾರವಲಾ ಎನುತ ಮುರು
ಚಿದನು ಬಲ ಬಲಗಯ್ಯನುರವಣಿಸಿದನು ಖಾತಿಯಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದ್ದರಿಂದ, ಈ ಕೌರವನ ತೊಡೆಗಳನ್ನು ನಿನ್ನ ಭೀಮ ಅನ್ಯಾಯದಿಂದ ಹೊಡೆದಿದ್ದಾನೆ. ಇದನ್ನು ಸೈರಿಸಬಹುದೆ. ಧರ್ಮನಿರ್ಣಯವನ್ನು ಹೇಳು. ಮದದಿಂದ ಗರ್ವಿಷ್ಟನಾದ ಭೀಮನ ಭುಜಬಲವನ್ನು ನೋಡುವೆವು. ಇದು ಅಸಹ್ಯದ ಕೆಲಸವಲ್ಲವೇ, ಎನ್ನುತ್ತಾ ಬಲರಾಮನು ಬಲಗಯ್ಯನ್ನು ಬಲವಂತವಾಗಿ ಕೃಷ್ಣನಿಂದ ಬಿಡಿಸಿಕೊಂಡು ಕೋಪದಿಂದ ಮುಂದುವರಿದ.
ಪದಾರ್ಥ (ಕ.ಗ.ಪ)
ಸದೆ-ಹೊಡೆ, ಮದಮುಖ-ಮದದಿಂದ ಗರ್ವಿತನಾದವನು ವಿಕಾರ-ಅಸಹ್ಯದ ಕೆಲಸ, ಮರುಚು-ಮಡಿಸು, ಕೈಯನ್ನು ಮುಷ್ಟಿಕಟ್ಟು, ಬಲ-ಬಲರಾಮ, ಉರವಣಿಸು-ಆತುರದಿಂದ ಮೇಲೆ ಬೀಳು, ಖಾತಿ-ಕೋಪ.
ಮೂಲ ...{Loading}...
ಅದರಿನೀ ಕೌರವನ ತೊಡೆಗಳ
ಸದೆದನನ್ಯಾಯದಲಿ ನಿನ್ನವ
ನಿದಕೆ ಸೈರಿಸಬಹುದೆ ಹೇಳೈ ಧರ್ಮನಿರ್ಣಯವ
ಮದಮುಖನ ಭುಜಬಲವ ನೋಡುವೆ
ವಿದು ವಿಕಾರವಲಾ ಎನುತ ಮುರು
ಚಿದನು ಬಲ ಬಲಗಯ್ಯನುರವಣಿಸಿದನು ಖಾತಿಯಲಿ ॥31॥
೦೩೨ ಹರಿದು ಹಿಡಿದನು ...{Loading}...
ಹರಿದು ಹಿಡಿದನು ಮತ್ತೆ ನೀಲಾಂ
ಬರನ ಸೆರಗನು ನಿಮ್ಮ ಕುರುಪತಿ
ಚರಿಸಿದನಲಾ ಧರ್ಮವಿಸ್ತರವನು ವಿಭಾಡಿಸದೆ
ಕರಸಿ ಕಪಟದ್ಯೂತದಲಿ ನೃಪ
ವರನ ಸೋಲಿಸಿ ಪಟ್ಟದರಸಿಯ
ಕರಸಿ ಸುಲಿಸುವುದಾವ ಋಷಿಮತವೆಂದನಸುರಾರಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ವೇಗವಾಗಿ ಪುನಃ ಬಲರಾಮನ ಸೆರಗನ್ನು ಹಿಡಿದು ನಿಮ್ಮ ದುರ್ಯೋಧನ ಧರ್ಮವಿಸ್ತರವನ್ನು ಭಂಗಿಸದೇ ಆಚರಿಸಿದನಲ್ಲವೇ. ತನ್ನಲ್ಲಿಗೆ ಕರಸಿಕೊಂಡು, ಕಪಟದ್ಯೂತದಲ್ಲಿ ರಾಜಶ್ರೇಷ್ಠನನ್ನು ಸೋಲಿಸಿ, ಪಟ್ಟದರಸಿಯಾದ ದ್ರೌಪದಿಯನ್ನು ಸಭೆಗೆ ಕರಸಿ, ಅವಳ ಸೀರೆಯನ್ನು ಸುಲಿಸುವುದು ಯಾವ ಋಷಿಗಳ ಮತ - ಎಂದು ಕೃಷ್ಣ ಕೇಳಿದ.
ಪದಾರ್ಥ (ಕ.ಗ.ಪ)
ಹರಿದು-ವೇಗವಾಗಿ, ನಿಲಾಂಬರ-ನೀಲಿಯ ಬಟ್ಟೆಗಳನ್ನುಟ್ಟವನು, ಬಲರಾಮ, ಚರಿಸು-ಆಚರಿಸು, ನಡೆದುಕೋ, ಧರ್ಮವಿಸ್ತರ-ವಿಶಾಲವಾದ ಧರ್ಮ, ವಿಭಾಡಿಸು-ಭಂಗಿಸು, ಋಷಿಮತ-ಋಷಿಗಳ ಅಭಿಪ್ರಾಯ, ಧರ್ಮವಾಕ್ಕು
ಮೂಲ ...{Loading}...
ಹರಿದು ಹಿಡಿದನು ಮತ್ತೆ ನೀಲಾಂ
ಬರನ ಸೆರಗನು ನಿಮ್ಮ ಕುರುಪತಿ
ಚರಿಸಿದನಲಾ ಧರ್ಮವಿಸ್ತರವನು ವಿಭಾಡಿಸದೆ
ಕರಸಿ ಕಪಟದ್ಯೂತದಲಿ ನೃಪ
ವರನ ಸೋಲಿಸಿ ಪಟ್ಟದರಸಿಯ
ಕರಸಿ ಸುಲಿಸುವುದಾವ ಋಷಿಮತವೆಂದನಸುರಾರಿ ॥32॥
೦೩೩ ಎಣಿಸಬಹುದೇ ನಿಮ್ಮ ...{Loading}...
ಎಣಿಸಬಹುದೇ ನಿಮ್ಮ ನೃಪನವ
ಗುಣವನನ್ಯಾಯ ಪ್ರಪಂಚಕೆ
ಗಣನೆಯುಂಟೇ ಭೀಮಗಡ ಖಂಡಿಸಿದ ತೊಡೆಗಳನು
ಕೆಣಕಿದನು ಮೈತ್ರೇಯನನು ನೃಪ
ನಣಕಿಸಲು ಶಪಿಸಿದನು ತೊಡೆಗಳ
ಹಣಿದವಾಡಲಿಯೆಂದನದು ತಪ್ಪುವುದೆ ಋಷಿವಚನ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ರಾಜನ ಕೆಟ್ಟಗುಣಗಳನ್ನು ಲೆಕ್ಕಹಾಕಬಹುದೇ, ಅವನ ಅನ್ಯಾಯಗಳಿಗೆ ಲೆಕ್ಕವುಂಟೇ, ಅವನ ತೊಡೆಗಳನ್ನು ಭೀಮ ಖಂಡಿಸಿದನೇ! ಮೈತ್ರೇಯ ಋಷಿಯನ್ನು ದುರ್ಯೋಧನ ಕೆಣಕಿದ. ಅವನನ್ನು ಅಣಕಿಸಲು, ನಿನ್ನ ತೊಡೆಗಳನ್ನು ಭೀಮ ಕತ್ತರಿಸಿ ಹಾಕಲಿಯೆಂದು ಶಾಪಕೊಟ್ಟ. ಋಷಿವಚನ ತಪ್ಪುವುದೆ ಎಂದು ಕೃಷ್ಣ ಹೇಳಿದ.
ಪದಾರ್ಥ (ಕ.ಗ.ಪ)
ಅವಗುಣ-ಕೆಟ್ಟಗುಣ, ಕೆಟ್ಟಸ್ವಭಾವ, ಹಣಿದವಾಡಲಿ-ಕತ್ತರಿಸಿಹಾಕಲಿ, ಋಷಿವಚನ-ಋಷಿಗಳ ಮಾತು (ಇಲ್ಲಿ ‘ಶಾಪ’)
ಪಾಠಾನ್ತರ (ಕ.ಗ.ಪ)
- ‘ಅನ್ಯಾಯ ಪ್ರಬಂಧಕೆ’ ಎಂಬಲ್ಲಿ ಪ್ರಬಂಧವೆಂದರೆ ‘ರಚನೆ’ ಎಂಬರ್ಥದಲ್ಲಿ, ಅನ್ಯಾಯಗಳನ್ನು ರಚಿಸಿದುದು - ಎಂದು ಅರ್ಥಮಾಡಬಹುದು. ಇದಕ್ಕಿರುವ ಒಂದು ಪಾಠಾಂತರ ‘ಅನ್ಯಾಯಪ್ರಪಂಚ’ವೆಂದಿದೆ. (ಶಲ್ಯಗದಾಪರ್ವಗಳು ಮೈಸೂರು ವಿ.ವಿ.ಯ. ಓರಿಯಂಟಲ್ ಲೈಬ್ರರಿಯ ಪ್ರಕಟಣೆ) ‘ಅನ್ಯಾಯಪ್ರಪಂಚವೆಂದರೆ ಮಾಡಿದ ಎಲ್ಲ ಅನ್ಯಾಯಗಳಿಗೂ ಎಂದು ಅರ್ಥ. ಇದೇ ರೀತಿ ‘ದ್ರೌಪದೀಪ್ರಪಂಚ’ ‘ಪಾಂಚಾಲೀಪ್ರಪಂಚ’ ಎಂಬ ಪ್ರಯೋಗಗಳನ್ನು ನೋಡಬಹುದು. ಈ ಹಿನ್ನಲೆಯಲ್ಲಿ ‘ಅನ್ಯಾಯ ಪ್ರಪಂಚವೇ’ ಸರಿಯಾದ ಪಾಠವೆಂದು ಅದನ್ನು ಅಂಗೀಕರಿಸಿದೆ.
ಟಿಪ್ಪನೀ (ಕ.ಗ.ಪ)
- ‘ಕೆಣಕಿದನು ಮೈತ್ರೇಯನನು’ ದುರ್ಯೋಧನನ ಆಸ್ಥಾನಕ್ಕೆ ಬಂದ ಮೈತ್ರೇಯರೆಂಬ ಋಷಿಗಳನ್ನು ದುರ್ಯೋಧನ ಸತ್ಕರಿಸಿದ. ಅವರು ಅವನಿಗೆ ಬುದ್ದಿ ಹೇಳುತ್ತ, ‘ಪಾಂಡವರನ್ನು ಅರಣ್ಯದಿಂದ ಕರೆಸಿ, ಅವರ ಅರ್ಧರಾಜ್ಯವನ್ನು ಅವರಿಗೆ ಬಿಡು’ ಎಂದು ಹೇಳಲು ದುರ್ಯೋಧನ ಅದನ್ನು ಅಲ್ಲಗಳೆದು, ಅಹಂಕಾರದಿಂದ ತೊಡೆತಟ್ಟಿದ. ಕೋಪಗೊಂಡ ಮೈತ್ರೇಯರು ನಿನಗೆ ತೊಡೆಯಲ್ಲಿ ಸಾವು ಬರಲಿ, ಭೀಮ ನಿನ್ನ ತೊಡೆಗಳನ್ನುಡಿಯಲಿಯೆಂದು ಶಾಪಕೊಟ್ಟರು. (ಅರಣ್ಯ ಪರ್ವದ 1ನೇ ಸಂಧಿಯ, 11 ರಿಂದ 14 ರವರೆಗಿನ ಪದ್ಯಗಳನ್ನು ನೋಡಿ)
ಮೂಲ ...{Loading}...
ಎಣಿಸಬಹುದೇ ನಿಮ್ಮ ನೃಪನವ
ಗುಣವನನ್ಯಾಯ ಪ್ರಪಂಚಕೆ
ಗಣನೆಯುಂಟೇ ಭೀಮಗಡ ಖಂಡಿಸಿದ ತೊಡೆಗಳನು
ಕೆಣಕಿದನು ಮೈತ್ರೇಯನನು ನೃಪ
ನಣಕಿಸಲು ಶಪಿಸಿದನು ತೊಡೆಗಳ
ಹಣಿದವಾಡಲಿಯೆಂದನದು ತಪ್ಪುವುದೆ ಋಷಿವಚನ ॥33॥
೦೩೪ ಆ ಪತಿವ್ರತೆ ...{Loading}...
ಆ ಪತಿವ್ರತೆ ಬಯ್ದಳೀ ಕುರು
ಭೂಪ ತೊಡೆಗಳ ತೋರಿ ಜರೆಯಲು
ದ್ರೌಪದಿಯ ನುಡಿ ತಪ್ಪುವುದೆ ಋಷಿವಚನದನುಗತಿಗೆ
ಕೋಪ ಕುಡಿಯಿಡಲೀ ವೃಕೋದರ
ನಾಪನಿತುಡಿದನು ಪ್ರತಿಜ್ಞಾ
ಸ್ಥಾಪನಕೆ ಬಳಿಕೇನ ಮಾಡುವುದೆಂದನಸುರಾರಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕುರುಭೂಪ ಸಭೆಯಲ್ಲಿ ದ್ರೌಪದಿಗೆ ತನ್ನ ತೊಡೆಗಳನ್ನು ತೋರಿಸಲು ಆ ಪತಿವ್ರತೆ (ನಿನ್ನ ತೊಡೆಯಲ್ಲಿಯೇ ನಿನ್ನ ಪ್ರಾಣ ಹೋಗಲಿ, ಭೀಮ ನಿನ್ನ ತೊಡೆಗಳನ್ನು ಮುರಿಯಲಿಯೆಂದು) ಬಯ್ದಳು. ಮೈತ್ರೇಯ ಋಷಿಗಳ ಶಾಪದ ಜೊತೆಯಲ್ಲಿ ದ್ರೌಪದಿಯ ಮಾತುಗಳು ತಪ್ಪುತ್ತವೆಯೆ? ಕೋಪ ಹೆಚ್ಚಾಗಲು, ಭೀಮ ಆದಷ್ಟು ಸಾಹಸದಿಂದ ತೊಡೆಗಳನ್ನು ಮುರಿದ. ಪ್ರತಿಜ್ಞೆಯನ್ನು ಪಾಲಿಸಲು ಬೇರೇನು ಮಾಡಲು ಸಾಧ್ಯವಿತ್ತು - ಎಂದು ಕೃಷ್ಣ ನುಡಿದ.
ಪದಾರ್ಥ (ಕ.ಗ.ಪ)
ಜರೆ-ಭಂಗಿಸು, ಬಯ್ಯು, ಅವಹೇಳನ ಮಾಡು, ಅನುಗತಿ-ಜೊತೆಯಲ್ಲಿ ನಡೆಯುವುದು, ವೃಕೋದರ-ಭೀಮ, (ವೃಕ-ತೋಳ, ತೋಳದಂತೆ ಮತ್ತು ತೋಳದಂತಹ ಅಪಾರ ಹಸಿವನ್ನುಳ್ಳವನು ಎಂದು ಅರ್ಥ) ಆಪನಿತ-ಸಾಧ್ಯವಾದಷ್ಟನ್ನು, ಪ್ರತಿಜ್ಞಾಸ್ಥಾಪನೆ-ಪ್ರತಿಜ್ಞೆಯನ್ನು ಈಡೇರಿಸುವುದು, ಪ್ರತಿಜ್ಞೆಯನ್ನು ಸ್ಥಾಪಿಸುವುದು, ಹಣಿದವಾಡು-ಕತ್ತರಿಸಿಹಾಕು.
ಟಿಪ್ಪನೀ (ಕ.ಗ.ಪ)
‘ಕುರುಭೂಪ ತೊಡೆಗಳ ತೋರಿ ಜರೆಯಲು’ ಸಭಾಪರ್ವದ 15ನೆಯ ಸಂಧಿಯ 14ನೆಯ ಪದ್ಯ ಮತ್ತು 30 ರಿಂದ 39ರವರೆಗೆನ ಪದ್ಯಗಳಲ್ಲಿ ಈ ಬಗ್ಗೆ ವಿವರಗಳಿವೆ.
ಮೂಲ ...{Loading}...
ಆ ಪತಿವ್ರತೆ ಬಯ್ದಳೀ ಕುರು
ಭೂಪ ತೊಡೆಗಳ ತೋರಿ ಜರೆಯಲು
ದ್ರೌಪದಿಯ ನುಡಿ ತಪ್ಪುವುದೆ ಋಷಿವಚನದನುಗತಿಗೆ
ಕೋಪ ಕುಡಿಯಿಡಲೀ ವೃಕೋದರ
ನಾಪನಿತುಡಿದನು ಪ್ರತಿಜ್ಞಾ
ಸ್ಥಾಪನಕೆ ಬಳಿಕೇನ ಮಾಡುವುದೆಂದನಸುರಾರಿ ॥34॥
೦೩೫ ಎನ್ದು ರಾಮನ ...{Loading}...
ಎಂದು ರಾಮನ ಮನವ ನಯನುಡಿ
ಯಿಂದ ತಿಳುಹಿದನೈಸಲೇ ಬಳಿ
ಕಂದು ದುಗುಡದಲವರು ನಡೆದರು ದ್ವಾರಕಾಪುರಿಗೆ
ಬಂದ ಕಂಟಕ ಬಳಿಚಿತೇ ಸಾ
ಕೆಂದು ಹರಿ ಕುರುಪತಿಯ ಹೊರೆಗೈ
ತಂದು ಬೋಳೈಸಿದನು ಭೀಮಾರ್ಜುನ ಯುಧಿಷ್ಠಿರರ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ಹೇಳಿ, ಬಲರಾಮನ ಮನಸ್ಸನ್ನು ನಯವಾದ ನುಡಿಗಳಿಂದ ತಿದ್ದಿದನಷ್ಟೆ! ಆ ನಂತರ ಅವರು (ಬಲರಾಮ) ದುಃಖದಿಂದ ದ್ವಾರಾವತಿಗೆ ಹಿಂದಿರುಗಿದರು. ಬಂದ ಕಂಟಕ ತಪ್ಪಿ ಹೋಯಿತೇ ಸಾಕು - ಎಂದು ಕೃಷ್ಣ ದುರ್ಯೋಧನನ ಸಮೀಪಕ್ಕೆ ಬಂದು, ಭೀಮಾರ್ಜುನ ಯುಧಿಷ್ಠಿರರನ್ನು ಸಮಾಧಾನಗೊಳಿಸಿದ.
ಪದಾರ್ಥ (ಕ.ಗ.ಪ)
ರಾಮ-ಬಲರಾಮ, ತಿಳುಹಿ-ತಿದ್ದಿ, ಬುದ್ಧಿ ಹೇಳಿ, ದುಗುಡ-ದುಃಖ, ಕಂಟಕ-ತೊಂದರೆ, ಬಳಚು-ಕತ್ತರಿಸಿ ಹೋಗು, ಹೊರೆಗೆ-ಸಮೀಪಕ್ಕೆ, ಬೋಳೈಸು-ಸಮಾಧಾನ ಮಾಡು.
ಮೂಲ ...{Loading}...
ಎಂದು ರಾಮನ ಮನವ ನಯನುಡಿ
ಯಿಂದ ತಿಳುಹಿದನೈಸಲೇ ಬಳಿ
ಕಂದು ದುಗುಡದಲವರು ನಡೆದರು ದ್ವಾರಕಾಪುರಿಗೆ
ಬಂದ ಕಂಟಕ ಬಳಿಚಿತೇ ಸಾ
ಕೆಂದು ಹರಿ ಕುರುಪತಿಯ ಹೊರೆಗೈ
ತಂದು ಬೋಳೈಸಿದನು ಭೀಮಾರ್ಜುನ ಯುಧಿಷ್ಠಿರರ ॥35॥
೦೩೬ ಈಸುದಿನ ಪರಿಯನ್ತ ...{Loading}...
ಈಸುದಿನ ಪರಿಯಂತ ಧರ್ಮದ
ಮೀಸಲಳಿಯದೆ ಬಳಸಿ ಬಹಳಾ
ಯಾಸವನು ಸೈರಿಸಿದಿರಿಂದಿನ ಯುದ್ಧಕೇಳಿಯಲಿ
ಘಾಸಿಯಾದುದು ಧರ್ಮಗತಿ ಬುಧ
ರೇಸು ಮನಗಾಣರು ವೃಥಾಭಿನಿ
ವೇಶವಾದುದು ಮಕುಟಭಂಗದೊಳೆಂದನಾ ಭೂಪ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟುದಿನದವರೆಗೂ ಧರ್ಮದ ಮೀಸಲು ಹಾಳಾಗದಂತೆ ನಡೆದುಕೊಂಡು ಬಹಳ ಆಯಾಸವನ್ನು ಸೈರಿಸಿದಿರಿ. ಇಂದಿನ ಯುದ್ಧದಲ್ಲಿ ಧರ್ಮಗತಿಗೆ ಆಘಾತವಾಯಿತು. ಜ್ಞಾನಿಗಳು ಇದನ್ನು ತಿಳಿಯುವುದಿಲ್ಲವೇ ?. ಮಕುಟ ಭಂಗ ಮಾಡಿದ್ದರಿಂದ ವಿನಾಕಾರಣವಾಗಿ ನಿಮ್ಮ ಧರ್ಮನಿಷ್ಠೆ ವಿಫಲವಾಯಿತು. - ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಬಳಸಿ-ಉಪಯೋಗಿಸಿ, ನಡೆದುಕೊಂಡು, ಬುಧರು-ಜ್ಞಾನಿಗಳು, ವೃಥಾ-ಕಾರಣವಿಲ್ಲದೆ, ಅಭಿನಿವೇಶ-ನಿಷ್ಠೆ
ಮೂಲ ...{Loading}...
ಈಸುದಿನ ಪರಿಯಂತ ಧರ್ಮದ
ಮೀಸಲಳಿಯದೆ ಬಳಸಿ ಬಹಳಾ
ಯಾಸವನು ಸೈರಿಸಿದಿರಿಂದಿನ ಯುದ್ಧಕೇಳಿಯಲಿ
ಘಾಸಿಯಾದುದು ಧರ್ಮಗತಿ ಬುಧ
ರೇಸು ಮನಗಾಣರು ವೃಥಾಭಿನಿ
ವೇಶವಾದುದು ಮಕುಟಭಂಗದೊಳೆಂದನಾ ಭೂಪ ॥36॥
೦೩೭ ಅರಸ ತಲೆಗುತ್ತಿದನು ...{Loading}...
ಅರಸ ತಲೆಗುತ್ತಿದನು ದೃಗು ಜಲ
ವುರವಣಿಸಿ ಮೌನದಲಿ ಫಲುಗುಣ
ನಿರೆ ಮುರಾರಿ ಸುಯೋಧನನ ಸರ್ವಾವಗುಣ ಗಣವ
ಪರಿಪರಿಯಲೆಚ್ಚರಿಸಿ ದುಗುಡವ
ಪರಿಹರಿಸಿ ಸಂತೈಸಿದಡೆ ಮುರ
ಹರನ ಬೈದನು ನಿನ್ನ ಮಗ ನಾನಾ ವಿಡಂಬದಲಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ತಲೆಬಗ್ಗಿಸಿದ. ಅರ್ಜುನನಿಗೆ ಕಣ್ಣೀರು ಉಕ್ಕಿಬಂದು ಮೌನದಿಂದಿದ್ದ. ಕೃಷ್ಣನು ದುರ್ಯೋಧನನ ಎಲ್ಲ ಅವಗುಣಗಳನ್ನು ನೆನಪಿಸಿಕೊಟ್ಟು ದುಃಖವನ್ನು ಪರಿಹರಿಸಿ ಅವರನ್ನು ಸಮಾಧಾನಗೊಳಿಸಿದ. ನಿನ್ನ ಮಗನಾದ ದುರ್ಯೋಧನ ಕೃಷ್ಣನನ್ನು ಅನೇಕ ರೀತಿಯಲ್ಲಿ ಅಪಹಾಸ್ಯಮಾಡಿ ಬೈದ - ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ತಲೆಗುತ್ತು-ತಲೆತಗ್ಗಿಸು, ದೃಗುಜಲ-ಕಣ್ಣೀರು, ಉರವಣಿಸು-ಉಕ್ಕಿಬರು, ಎಚ್ಚರಿಸಿ-ನೆನಪಿಸಿಕೊಟ್ಟು, ವಿಡಂಬದಲಿ-ವಿಡಂಬನೆಯಿಂದ.
ಮೂಲ ...{Loading}...
ಅರಸ ತಲೆಗುತ್ತಿದನು ದೃಗು ಜಲ
ವುರವಣಿಸಿ ಮೌನದಲಿ ಫಲುಗುಣ
ನಿರೆ ಮುರಾರಿ ಸುಯೋಧನನ ಸರ್ವಾವಗುಣ ಗಣವ
ಪರಿಪರಿಯಲೆಚ್ಚರಿಸಿ ದುಗುಡವ
ಪರಿಹರಿಸಿ ಸಂತೈಸಿದಡೆ ಮುರ
ಹರನ ಬೈದನು ನಿನ್ನ ಮಗ ನಾನಾ ವಿಡಂಬದಲಿ ॥37॥
೦೩೮ ಆರ ಬಸುರಲಿ ...{Loading}...
ಆರ ಬಸುರಲಿ ಬಂದು ಮೊಲೆಯುಂ
ಡಾರ ಮಡಲಲಿ ಬೆಳೆದು ಬಳಿಕಿನೊ
ಳಾರ ಹೆಂಡಿರ ಕೊಂಡು ಕರು ತುರುಗಾದು ಕಳವಿನಲಿ
ವೀರ ದೈತ್ಯನ ಸದೆಬಡಿದು ಕುರು
ವೀರವಂಶದ ರಾಯರೆಮ್ಮೊಳು
ವೈರಬಂಧವ ಬಿತ್ತಿ ಕೊಂದವ ಕೃಷ್ಣ ನೀನೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾರದೋ ಹೊಟ್ಟೆಯಲ್ಲಿ ಹುಟ್ಟಿ ಮೊಲೆಯುಂಡು, ಯಾರದೋ ಉಡಿಯಲ್ಲಿ ಬೆಳೆದು, ನಂತರ ಯಾರದೋ ಹೆಂಡಿರನ್ನು ಕೂಡಿಕೊಂಡು, ದನಕರುಗಳನ್ನು ಕಾದು, ಮೋಸದಿಂದ ವೀರ ರಾಕ್ಷಸನನ್ನು ಸಂಹರಿಸಿ, ಕುರುವೀರರ ವಂಶಕ್ಕೆ ಸೇರಿದ ರಾಜರಾದ ನಮ್ಮೊಳಗೆ ವೈರವನ್ನು ಬಿತ್ತಿ ಕೊಂದ ಕೃಷ್ಣ ನೀನು ಎಂದು ದುರ್ಯೋಧನ ಕೃಷ್ಣನನ್ನು ವಿಡಂಬಿಸಿದ.
ಪದಾರ್ಥ (ಕ.ಗ.ಪ)
ಮಡಲು-ಉಡಿ, ತುರು-ದನ, ಕಳವಿನಲಿ-ಯುದ್ಧರಂಗದಲ್ಲಿ (ಕಳ್ಳತನದಿಂದ?) ಸದೆಬಡಿದು-ಚೆನ್ನಾಗಿ ಹೊಡೆದು, ವೈರಬಂಧ-ದ್ವೇಷದ ಸಂಬಂಧ.
ಟಿಪ್ಪನೀ (ಕ.ಗ.ಪ)
‘ಕಳವಿನಲಿ’ ಎಂಬ ಶಬ್ದಕ್ಕೆ ಯುದ್ಧರಂಗದಲ್ಲಿ ಎಂದು ಅಥರ್ಮಾಡಿದೆ. ಆದರೆ ‘ಕಳ್ಳತನದಿಂದ’ ಎಂಬರ್ಥ ಮಾಡಿದರೆ ‘ಕಳ್ಳತನದಿಂದ ವೀರದೈತ್ಯನ ಸದೆಬಡೆದು’ ಎಂದು ಅನ್ವಯ ಮಾಡಿಕೊಂಡರೆ, ಹಿಂಬಾಗಿಲಿನಿಂದ ಬ್ರಾಹ್ಮಣರ ವೇಷದಲ್ಲಿ ಜರಾಸಂಧನ ಅರಮನೆಗೆ ಪ್ರವೇಶಿಸಿ, ಮೋಸದಿಂದ ಕೊಂದ - ಎಂಬರ್ಥ ಬರುತ್ತದೆ.
ಮೂಲ ...{Loading}...
ಆರ ಬಸುರಲಿ ಬಂದು ಮೊಲೆಯುಂ
ಡಾರ ಮಡಲಲಿ ಬೆಳೆದು ಬಳಿಕಿನೊ
ಳಾರ ಹೆಂಡಿರ ಕೊಂಡು ಕರು ತುರುಗಾದು ಕಳವಿನಲಿ
ವೀರ ದೈತ್ಯನ ಸದೆಬಡಿದು ಕುರು
ವೀರವಂಶದ ರಾಯರೆಮ್ಮೊಳು
ವೈರಬಂಧವ ಬಿತ್ತಿ ಕೊಂದವ ಕೃಷ್ಣ ನೀನೆಂದ ॥38॥
೦೩೯ ಬಣಗುಗಳು ಭೀಮಾರ್ಜುನರು ...{Loading}...
ಬಣಗುಗಳು ಭೀಮಾರ್ಜುನರು ಕಾ
ರಣಿಕ ನೀ ನಡುವಾಯಿ ಧರ್ಮದ
ಕಣಿ ಯುಧಿಷ್ಠಿರನೆತ್ತಬಲ್ಲನು ನಿನ್ನ ಮಾಯೆಗಳ
ಸೆಣಸನಿಕ್ಕಿದೆ ನಮ್ಮೊಳಗೆ ಧಾ
ರುಣಿಯ ಭಾರವ ಬಿಡಿಸಲೋಸುಗ
ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆಯೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಾರ್ಜುನರು ಕ್ಷುದ್ರರು. ನೀನು ಕಾರಣಕರ್ತ. ನಡುವೆ ಪ್ರವೇಶಿಸುವವನು. ಧರ್ಮದ ಗಣಿಯಾದ ಯುಧಿಷ್ಠಿರ ನಿನ್ನ ಮಾಯೆಗಳನ್ನು ಎಲ್ಲಿ ತಿಳಿದಿದ್ದಾನೆ. ನಮ್ಮನಮ್ಮೊಳಗೆ ಹೋರಾಟವನ್ನುಂಟುಮಾಡಿದೆ. ಭೂಮಿಯ ಭಾರವನ್ನು ಕಳೆಯಲೋಸ್ಕರ ಯುದ್ಧವನ್ನು ಹೊತ್ತಿಸಿ ನಮ್ಮನ್ನು ಬೇಟೆಯಾಡಿಸಿದೆ - ಎಂದು ದುರ್ಯೋಧನ ಕೃಷ್ಣನನ್ನು ಹೀಯಾಳಿಸಿದ.
ಪದಾರ್ಥ (ಕ.ಗ.ಪ)
ಬಣಗು-ಕ್ಷುದ್ರ, ಅಲ್ಪ, ಕಾರಣಿಕ-ಕಾರಣಕರ್ತ, ನಡುವಾಯಿ-ನಡುವೆ ಪ್ರವೇಶಿಸುವವನು, ಕಣಿ-ಗಣಿ, ಸೆಣಸು-ಹೋರಾಟ
ಮೂಲ ...{Loading}...
ಬಣಗುಗಳು ಭೀಮಾರ್ಜುನರು ಕಾ
ರಣಿಕ ನೀ ನಡುವಾಯಿ ಧರ್ಮದ
ಕಣಿ ಯುಧಿಷ್ಠಿರನೆತ್ತಬಲ್ಲನು ನಿನ್ನ ಮಾಯೆಗಳ
ಸೆಣಸನಿಕ್ಕಿದೆ ನಮ್ಮೊಳಗೆ ಧಾ
ರುಣಿಯ ಭಾರವ ಬಿಡಿಸಲೋಸುಗ
ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆಯೆಂದ ॥39॥
೦೪೦ ಪಾಪ ನಿನಗೀ ...{Loading}...
ಪಾಪ ನಿನಗೀ ಗೋತ್ರವಧೆಯ ವಿ
ಳಾಪ ನಿನ್ನನು ತಾಗಲೀ ಸ
ರ್ವಾಪರಾಧವು ನಿನ್ನದೀ ಕೌರವರ ಪಾಂಡವರ
ಕೋಪವನು ಕೊನರಿಸುವ ನೃಪರನು
ತಾಪವನು ತೂಳುವ ಕುಬುದ್ಧಿ
ವ್ಯಾಪಕನು ನೀ ವೈರಿಯಲ್ಲದೆ ಭೀಮನಲ್ಲೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಪಾಪ ನಿನಗೆ ಅಂಟುತ್ತದೆ. ವಂಶನಾಶದ ಶೋಕವು ನಿನ್ನನ್ನು ತಾಗಲಿ. ಈ ಸರ್ವಾಪರಾಧಗಳೂ ನಿನ್ನದೇ. ಕೌರವ ಪಾಂಡವರ ನಡುವೆ ಕೋಪವನ್ನು ಚಿಗುರಿಸಿ ಬೆಳೆಸುವ, ರಾಜರ ಶೋಕವನ್ನು ಮುಂದುವರಿಯುವಂತೆ ಮಾಡುವ ಕುಬುದ್ಧಿಯನ್ನು ಪ್ರಸಾರ ಮಾಡುವ ನೀನು ವ್ಶೆರಿಯಲ್ಲದೆ ಭೀಮನಲ್ಲ.
ಪದಾರ್ಥ (ಕ.ಗ.ಪ)
ಗೋತ್ರ-ವಂಶ, ಕುಲ, ವಿಳಾಪ-ಶೋಕ, ಕೊನರಿಸು-ಚಿಗುರಿಸು, ಬೆಳೆಸು, ತೂಳುವ-ಮುಂದುವರಿಸುವ, ಬೆಳೆಸುವ, ಕುಬುದ್ಧಿ-ಕೆಟ್ಟಬುದ್ಧಿ, ವ್ಯಾಪಕ-ಪ್ರಸಾರಕ.
ಮೂಲ ...{Loading}...
ಪಾಪ ನಿನಗೀ ಗೋತ್ರವಧೆಯ ವಿ
ಳಾಪ ನಿನ್ನನು ತಾಗಲೀ ಸ
ರ್ವಾಪರಾಧವು ನಿನ್ನದೀ ಕೌರವರ ಪಾಂಡವರ
ಕೋಪವನು ಕೊನರಿಸುವ ನೃಪರನು
ತಾಪವನು ತೂಳುವ ಕುಬುದ್ಧಿ
ವ್ಯಾಪಕನು ನೀ ವೈರಿಯಲ್ಲದೆ ಭೀಮನಲ್ಲೆಂದ ॥40॥
೦೪೧ ರಣಮುಖದೊಳೀ ಕ್ಷತ್ರಧರ್ಮದ ...{Loading}...
ರಣಮುಖದೊಳೀ ಕ್ಷತ್ರಧರ್ಮದ
ಕುಣಿಕೆ ತಪ್ಪದೆ ವೇದಶಾಸ್ತ್ರದ
ಭಣಿತೆ ನೋಯದೆ ವೀರವೃತ್ತಿಯ ಪದದ ಪಾಡರಿದು
ಸೆಣಸು ಸೋಂಕಿದ ಛಲದ ವಾಸಿಯೊ
ಳಣುವ ಹಿಂಗದೆ ಜೀವದಾಸೆಗೆ
ಮಣಿಯದಳಿದುದನೆಲ್ಲ ಬಲ್ಲರು ಕೃಷ್ಣ ಕೇಳ್ ಎಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಯುದ್ಧದಲ್ಲಿ ಕ್ಷತ್ರಿಯಧರ್ಮದ ಬಿಗಿ ತಪ್ಪದೆ, ವೇದ ಶಾಸ್ತ್ರಗಳ ಹೇಳಿಕೆಗಳಿಗೆ ನೋವುಂಟುಮಾಡದಂತೆ, ವೀರರ ನಡವಳಿಕೆಗಳ ಕ್ರಮಗಳನ್ನು ತಿಳಿದ, ಹೋರಾಟದ ಸ್ವಭಾವವುಳ್ಳ, ಛಲದ ಮೇಲ್ಮೆಯಲ್ಲಿ ಸ್ವಲ್ಪವೂ ಹಿಂದೆ ಸರಿಯದೆ, ಪ್ರಾಣದ ಮೇಲಿನ ಆಸೆಗಾಗಿ ಮಣಿಯದೆ, ಕಡೆಯವರೆಗೂ ನಾನು ಬದುಕಿದುದನ್ನು ಎಲ್ಲರೂ ತಿಳಿದಿದ್ದಾರೆ, ಕೃಷ್ಣ ಕೇಳು ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ರಣಮುಖ-ಯುದ್ಧ, ಕುಣಿಕೆ-ಬಿಗಿ, ನಿಯಂತ್ರಣ, ಭಣಿತೆ-ಹೇಳಿಕೆ, ಪದದ-ನಡವಳಿಕೆಗಳ, ಪಾಡರಿದ-ಕ್ರಮವನ್ನು ಬಲ್ಲ, ಸೆಣಸು-ಹೋರಾಟ, ವಾಸಿ-ಮೇಲ್ಮೆ, ಅಣುವ-ಸ್ವಲ್ಪವಾದರೂ, ಹಿಂಗದೆ-ಹಿಂಜರಿಯದೆ, ಹಿಂದೆಸರಿಯದೆ, ಮಣಿಯದೆ-ತಲೆಬಾಗಿಸದೆ.
ಮೂಲ ...{Loading}...
ರಣಮುಖದೊಳೀ ಕ್ಷತ್ರಧರ್ಮದ
ಕುಣಿಕೆ ತಪ್ಪದೆ ವೇದಶಾಸ್ತ್ರದ
ಭಣಿತೆ ನೋಯದೆ ವೀರವೃತ್ತಿಯ ಪದದ ಪಾಡರಿದು
ಸೆಣಸು ಸೋಂಕಿದ ಛಲದ ವಾಸಿಯೊ
ಳಣುವ ಹಿಂಗದೆ ಜೀವದಾಸೆಗೆ
ಮಣಿಯದಳಿದುದನೆಲ್ಲ ಬಲ್ಲರು ಕೃಷ್ಣ ಕೇಳೆಂದ ॥41॥
೦೪೨ ಮತ್ತೆ ಹೂವಿನ ...{Loading}...
ಮತ್ತೆ ಹೂವಿನ ಮಳೆಗಳಾತನ
ನೆತ್ತಿಯಲಿ ಸುರಿದವು ಮುರಾಂತಕ
ನತ್ತ ತಿರುಗಿದನವನಿಪತಿ ಕರತಳವ ತಳುಕಿಕ್ಕಿ
ಮುತ್ತಿದರು ಮಾಗಧರು ವಂದಿಗ
ಳೆತ್ತಣದು ನಾನರಿಯೆನರಸ ವಿ
ಯತ್ತಳವನಳ್ಳಿರಿದುದಾ ಸ್ತುತಿಪಾಠಕರ ರಭಸ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುನಃ ಹೂವಿನ ಮಳೆಗಳು ದುರ್ಯೋಧನನ ತಲೆಯ ಮೇಲೆ ಸುರಿದುವು. ಧರ್ಮರಾಯ ಕೃಷ್ಣನತ್ತ ತಿರುಗಿ ಅವನ ಕೈಗಳನ್ನು ಸೇರಿಸಿ ಹಿಡಿದುಕೊಂಡ. ಹೊಗಳುಭಟ್ಟರುಗಳು ಅವರನ್ನು ಸುತ್ತುವರಿದರು. ಹೊಗಳು ಭಟ್ಟರ ಘೋಷಣೆಗಳ ರಭಸವು ಆಕಾಶವನ್ನು ತಿವಿದವು. ಇದು ಯಾವ ಕಡೆಯಿಂದ ಬಂತೆಂದು ನಾನು ತಿಳಿಯೆನೆಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ತಳುಕಿಕ್ಕಿ-ತಳುಕು ಹಾಕಿಕೊಂಡು, ಒಂದುಕ್ಕೊಂದು ಸೇರಿಕೊಂಡು,
ಮಾಗಧರು-ಸುತ್ತಿಪಾಠಕರು, ಹೊಗಳುಭಟ್ಟರು,
ವಂದಿಗಳು-ಸುತ್ತಿಪಾಠಕರು, ಹೊಗಳುಭಟ್ಟರು,
ವಿಯತ್ತಳ-ಆಕಾಶ,
ಅಳ್ಳಿರಿ-ತಿವಿ, ಚುಚ್ಚು, ವೇಗವಾಗಿ ಪ್ರವೇಶಿಸು.
ಟಿಪ್ಪನೀ (ಕ.ಗ.ಪ)
- ವಂದಿಗಳು-ಇವರು ರಾಜನ ಸಾಹಸ, ಶೌರ್ಯ, ವಿದ್ವತ್ತು ಇತ್ಯಾದಿ ಗುಣಗಳ ಬಗ್ಗೆ ಪದ್ಯಗಳನ್ನು ರಚಿಸಿ ವರ್ಣಿಸುವವರು.
- ಮಾಗಧರು-ಇವರು ರಾಜವಂಶ ಪರಂಪರೆಯ ಬಿರುದಾವಳಿಗಳನ್ನು ಬಾಯಿಪಾಠ ಮಾಡಿಕೊಂಡು ರಾಜನಿಗೆ ಸಂಬಂಧಪಟ್ಟ ಉತ್ಸವ, ದರ್ಬಾರುಗಳಲ್ಲಿ ರಾಜನನ್ನು ಹಾಡಿಹೊಗಳಬೇಕು. ಇದೇ ಪರಾಕು ಹೇಳುವುದು.
- ಸೂತರು-ದೇವತಾ ಸ್ತೋತ್ರಗಳನ್ನು ಬಾಯಿಪಾಠ ಮಾಡಿ ಸಮಯಕ್ಕೆ ತಕ್ಕಂತೆ ಆಯಾ ದೇವತೆಯ ಪೂಜಾ ಸಂದರ್ಭದಲ್ಲಿ ಪಠಿಸುವವರು. - ಪ್ರೊ.ಜಿ. ವೆಂಕಟಸುಬ್ಬಯ್ಯನವರ “ಇಗೋ ಕನ್ನಡ” ಅಂಕಣ, ‘ಪ್ರಜಾವಾಣಿ’ ಪತ್ರಿಕೆಯ 12-8-2007ರ ಸಾಪ್ತಾಹಿಕ ಪುರವಣಿಯಿಂದ ಈ ವಿವರಗಳನ್ನು ಪಡೆಯಲಾಗಿದೆ.
ಮೂಲ ...{Loading}...
ಮತ್ತೆ ಹೂವಿನ ಮಳೆಗಳಾತನ
ನೆತ್ತಿಯಲಿ ಸುರಿದವು ಮುರಾಂತಕ
ನತ್ತ ತಿರುಗಿದನವನಿಪತಿ ಕರತಳವ ತಳುಕಿಕ್ಕಿ
ಮುತ್ತಿದರು ಮಾಗಧರು ವಂದಿಗ
ಳೆತ್ತಣದು ನಾನರಿಯೆನರಸ ವಿ
ಯತ್ತಳವನಳ್ಳಿರಿದುದಾ ಸ್ತುತಿಪಾಠಕರ ರಭಸ ॥42॥
೦೪೩ ಗರುವ ಸುಭಟರು ...{Loading}...
ಗರುವ ಸುಭಟರು ಘಾಸಿಯಾದಿರಿ
ತುರಗ ಗಜ ಬಳಲಿದವು ಸೂರ್ಯನ
ತುರಗ ಬಿಡುತದೆ ಪಶ್ಚಿಮಾದ್ರಿಯ ತಡಿಯ ತಪ್ಪಲಲಿ
ತ್ವರಿತದಲಿ ಪಾಂಚಾಲ ಸೃಂಜಯ
ಧರಣಿಪರು ನೀವ್ ಹೋಗಿ ನಿದ್ರೆಯೊ
ಳಿರುಳ ನೂಕುವುದೆಂದು ನುಡಿದನು ದೈತ್ಯರಿಪು ನಗುತ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಮ್ಮೆಯ ಸುಭಟರುಗಳು ನೊಂದಿದ್ದೀರಿ. ಕುದುರೆ ಆನೆಗಳು ಬಳಲಿವೆ. ಸೂರ್ಯನ ರಥದ ಕುದುರೆಗಳು ಪಶ್ಚಿಮ ಬೆಟ್ಟಗಳ ತಪ್ಪಲಿನಲ್ಲಿ ಬೀಡು ಬಿಡುತ್ತಿವೆ (ಸೂರ್ಯಾಸ್ತವಾಗುತ್ತಿದೆ) ಪಾಂಚಾಲರು, ಸೃಂಜಯ ರಾಜರುಗಳು ಬೇಗ ಹೋಗಿ ನಿದ್ರೆಯಲ್ಲಿ ರಾತ್ರಿಯನ್ನು ಕಳೆಯುವುದೆಂದು ಕೃಷ್ಣ ನಗುತ್ತ ನುಡಿದ.
ಪದಾರ್ಥ (ಕ.ಗ.ಪ)
ಗರುವ-ಹೆಮ್ಮೆಯ, ಶ್ರೇಷ್ಠರಾದ, ಸೂರ್ಯನ ತುರಗ-ಸೂರ್ಯನ ರಥದ ಏಳು ಕುದುರೆಗಳು, ತಡಿ-ದಡ, ತ್ವರಿತದಲ್ಲಿ-ಬೇಗದಿಂದ, ಇರುಳ ನೂಕುವುದು-ರಾತ್ರಿಯನ್ನು ಕಳೆಯುವುದು, ದೈತ್ಯರಿಪು-ರಾಕ್ಷಸರ ಶತ್ರು, ಕೃಷ್ಣ.
ಟಿಪ್ಪನೀ (ಕ.ಗ.ಪ)
- ಪಾಂಚಾಲರು-ಪಾಂಚಾಲ ದೇಶದ ಅರಸುಗಳು, ದ್ರುಪದನ ಮಕ್ಕಳು,
ಮೂಲ ...{Loading}...
ಗರುವ ಸುಭಟರು ಘಾಸಿಯಾದಿರಿ
ತುರಗ ಗಜ ಬಳಲಿದವು ಸೂರ್ಯನ
ತುರಗ ಬಿಡುತದೆ ಪಶ್ಚಿಮಾದ್ರಿಯ ತಡಿಯ ತಪ್ಪಲಲಿ
ತ್ವರಿತದಲಿ ಪಾಂಚಾಲ ಸೃಂಜಯ
ಧರಣಿಪರು ನೀವ್ ಹೋಗಿ ನಿದ್ರೆಯೊ
ಳಿರುಳ ನೂಕುವುದೆಂದು ನುಡಿದನು ದೈತ್ಯರಿಪು ನಗುತ ॥43॥
೦೪೪ ನಡೆಯಿ ಪಞ್ಚದ್ರೌಪದೇಯರ ...{Loading}...
ನಡೆಯಿ ಪಂಚದ್ರೌಪದೇಯರ
ಗಡಣ ಧೃಷ್ಟದ್ಯುಮ್ನ ನಿಳಯಕೆ
ನಡೆ ಯುಧಾಮನ್ಯೂತ್ತಮೌಂಜಸ ಕಲಿ ಶಿಖಂಡಿಗಳು
ತಡೆಯಿದಿರಿ ಭಟರೇಳಿ ವಾದ್ಯದ
ಗಡೆಬಡಿಗರೀ ಸಕಲಜನ ನೀವ್
ಕಡು ಬಳಲಿದಿರಿ ಹೋಗಿ ಪಾಳೆಯಕೆಂದು ನೃಪ ನುಡಿದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಂಚದ್ರೌಪದೇಯರೆಂಬ, ದ್ರೌಪದಿಯ ಐದು ಜನ ಮಕ್ಕಳ ಸಮೂಹವು ನಡೆಯಲಿ. ಧೃಷ್ಟದ್ಯುಮ್ನ ಬಿಡಾರಕ್ಕೆ ಹೋಗಲಿ. ಯುಧಾಮನ್ಯು, ಉತ್ತಮೌಂಜಸ ವೀರ ಶಿಖಂಡಿ ಮುಂತಾದವರು, ತಡಮಾಡದಿರಿ. ಭಟರುಗಳು ಏಳಿ ವಾದ್ಯವನ್ನು ಬಾಜಿಸುವವರು, ಮುಂತಾದ ಎಲ್ಲ ಜನರೂ ತುಂಬ ಬಳಲಿದ್ದೀರಿ. ಪಾಳೆಯಕ್ಕೆ ಹೋಗಿ ಎಂದು ಧರ್ಮರಾಯ ಹೇಳಿದ.
ಪದಾರ್ಥ (ಕ.ಗ.ಪ)
ಪಂಚದ್ರೌಪದೇಯರು-ದ್ರೌಪದಿಗೆ ಪಾಂಡವರೈವರಿಂದ ಹುಟ್ಟಿದ ಐದು ಜನ ಮಕ್ಕಳು-ಪ್ರತಿವಿಂದ್ಯ, ಶ್ರುತಸೋಮ ಶ್ರುತಕೀರ್ತಿ, ಶತಾನೀಕ, ಶ್ರುತಸೇನ ಎಂಬುವರು ಕ್ರಮವಾಗಿ ಧರ್ಮರಾಯ ಭೀಮ, ಅರ್ಜುನ, ನಕುಲ, ಸಹದೇವನಿಂದ ಹುಟ್ಟಿದವರು, ಧೃಷ್ಟದ್ಯುಮ್ನ ಯುಧಾಮನ್ಯು, ಉತ್ತಮೌಂಜಸ, ಶಿಖಂಡಿ-ದ್ರೌಪದಿಯ ಅಣ್ಣತಮ್ಮಂದಿರು.
ಮೂಲ ...{Loading}...
ನಡೆಯಿ ಪಂಚದ್ರೌಪದೇಯರ
ಗಡಣ ಧೃಷ್ಟದ್ಯುಮ್ನ ನಿಳಯಕೆ
ನಡೆ ಯುಧಾಮನ್ಯೂತ್ತಮೌಂಜಸ ಕಲಿ ಶಿಖಂಡಿಗಳು
ತಡೆಯಿದಿರಿ ಭಟರೇಳಿ ವಾದ್ಯದ
ಗಡೆಬಡಿಗರೀ ಸಕಲಜನ ನೀವ್
ಕಡು ಬಳಲಿದಿರಿ ಹೋಗಿ ಪಾಳೆಯಕೆಂದು ನೃಪ ನುಡಿದ ॥44॥
೦೪೫ ಬೀಳುಕೊಣ್ಡುದು ಸಕಲಬಲ ...{Loading}...
ಬೀಳುಕೊಂಡುದು ಸಕಲಬಲ ಪಾಂ
ಚಾಲ ಪಂಚದ್ರೌಪದೇಯರು
ಪಾಳೆಯವ ಹೊಕ್ಕರು ಯುಧಿಷ್ಠಿರನೃಪನ ನೇಮದಲಿ
ಏಳಿ ನಾವೀ ಕೌರವೇಂದ್ರನ
ಪಾಳೆಯವ ನೋಡುವೆವೆನುತ ವನ
ಮಾಲಿ ರಥವೇರಿದನಿವರು ತಂತಮ್ಮ ರಥವೇರೆ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲ ಸೈನ್ಯವೂ ಬೀಳುಕೊಂಡು ಅಲ್ಲಿಂದ ಹೊರಟಿತು. ಪಾಂಚಾಲರು, ದ್ರೌಪದಿಯ ಐದು ಜನ ಮಕ್ಕಳು ಯುಧಿಷ್ಠಿರನ ಆಣತಿಯಂತೆ ಪಾಳೆಯವನ್ನು ಪ್ರವೇಶಿಸಿದರು. ಏಳಿ, ನಾವು ಈ ಕೌರವೇಂದ್ರನ ಪಾಳೆಯವನ್ನು ನೋಡೋಣವೆನ್ನುತ್ತ ಕೃಷ್ಣ ತನ್ನ ರಥವನ್ನು ಹತ್ತಿದ. ಪಾಂಡವರು ತಮ್ಮ ತಮ್ಮ ರಥಗಳನ್ನು ಹತ್ತಿದರು.
ಪದಾರ್ಥ (ಕ.ಗ.ಪ)
ವನಮಾಲಿ-ವನಮಾಲೆಯನ್ನು ಧರಿಸಿದವ, ಕೃಷ್ಣ.
ಮೂಲ ...{Loading}...
ಬೀಳುಕೊಂಡುದು ಸಕಲಬಲ ಪಾಂ
ಚಾಲ ಪಂಚದ್ರೌಪದೇಯರು
ಪಾಳೆಯವ ಹೊಕ್ಕರು ಯುಧಿಷ್ಠಿರನೃಪನ ನೇಮದಲಿ
ಏಳಿ ನಾವೀ ಕೌರವೇಂದ್ರನ
ಪಾಳೆಯವ ನೋಡುವೆವೆನುತ ವನ
ಮಾಲಿ ರಥವೇರಿದನಿವರು ತಂತಮ್ಮ ರಥವೇರೆ ॥45॥
೦೪೬ ನರ ಯುಧಿಷ್ಠರ ...{Loading}...
ನರ ಯುಧಿಷ್ಠರ ಭೀಮ ಸಹದೇ
ವರು ನಕುಲ ಸಾತ್ಯಕಿಸಹಿತ ಮುರ
ಹರನು ಹೊಕ್ಕನು ಕೌರವೇಂದ್ರನ ಶೂನ್ಯ ಶಿಬಿರವನು
ಅರಸ ಕರ್ಣ ದ್ರೋಣ ಮಾದ್ರೇ
ಶ್ವರನ ಭಗದತ್ತನ ನದೀಜಾ
ದ್ಯರ ನಿವಾಸಂಗಳನು ಕಂಡಳಲಿದನು ಯಮಸೂನು ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ, ಧರ್ಮರಾಯ, ಭೀಮ, ಸಹದೇವ, ನಕುಲ, ಸಾತ್ಯಕಿಯರ ಸಮೇತ, ಕೃಷ್ಣ ದುರ್ಯೋಧನನ ಶೂನ್ಯ ಶಿಬಿರವನ್ನು ಪ್ರವೇಶಿಸಿದ. ದುರ್ಯೋಧನ, ಕರ್ಣ, ದ್ರೋಣ, ಶಲ್ಯ, ಭಗದತ್ತ, ಭೀಷ್ಮ ಮುಂತಾದವರ ಮನೆಗಳನ್ನು (ಶಿಬಿರದಲ್ಲಿ) ಕಂಡು ಧರ್ಮರಾಯ ದುಃಖಿಸಿದ.
ಪದಾರ್ಥ (ಕ.ಗ.ಪ)
ಶೂನ್ಯ ಶಿಬಿರ-ಖಾಲಿಯಾಗಿರುವ ಶಿಬಿರ
ಮೂಲ ...{Loading}...
ನರ ಯುಧಿಷ್ಠರ ಭೀಮ ಸಹದೇ
ವರು ನಕುಲ ಸಾತ್ಯಕಿಸಹಿತ ಮುರ
ಹರನು ಹೊಕ್ಕನು ಕೌರವೇಂದ್ರನ ಶೂನ್ಯ ಶಿಬಿರವನು
ಅರಸ ಕರ್ಣ ದ್ರೋಣ ಮಾದ್ರೇ
ಶ್ವರನ ಭಗದತ್ತನ ನದೀಜಾ
ದ್ಯರ ನಿವಾಸಂಗಳನು ಕಂಡಳಲಿದನು ಯಮಸೂನು ॥46॥
೦೪೭ ಸೂತನಿಳಿದನು ಮುನ್ನ ...{Loading}...
ಸೂತನಿಳಿದನು ಮುನ್ನ ರಥವನು
ಭೂತಳಾಧಿಪನಿಳಿದನಶ್ವ
ವ್ರಾತವನು ಕಡಿಯಣದ ನೇಣಲಿ ತೆಗೆದು ಬಂಧಿಸಿದ
ವಾತಜನ ಸಾತ್ಯಕಿಯ ಯಮಳರ
ಸೂತರಿಳಿದರು ಮುನ್ನ ತುರಗವ
ನಾತಗಳು ಸಂತೈಸಿದರು ಸಂಗರಪರಿಶ್ರಮವ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾರಥಿಯು ಮೊದಲು ರಥದಿಂದ ಇಳಿದನು ನಂತರ ಧರ್ಮರಾಯನು ಇಳಿದನು. ರಥದ ಕುದುರೆಗಳನ್ನು ಕಡಿವಾಣದ ಹಗ್ಗಗಳಿಂದ ಕಟ್ಟಿಹಾಕಿದ. ಭೀಮ ಸಾತ್ಯಕಿ, ನಕುಲ ಸಹದೇವರ ಸಾರಥಿಗಳು ಮೊದಲು ರಥದಿಂದಿಳಿದರು. ಅವರುಗಳು ಕುದುರೆಗಳ ಯುದ್ಧ ಶ್ರಮವನ್ನು ಪರಿಹರಿಸಿ ಸಮಾಧಾನ ಮಾಡಿದರು.
ಪದಾರ್ಥ (ಕ.ಗ.ಪ)
ಸೂತ-ಸಾರಥಿ, ಕಡಿಯಣ-ಕಡಿವಾಣ, ನೇಣು-ಹಗ್ಗ, ವಾತಜ-ವಾಯುವಿನಮಗ, ಭೀಮ, ಸಂಗರ-ಸಂಗ್ರಾಮ(ಸಂ), ಯುದ್ಧ.
ಮೂಲ ...{Loading}...
ಸೂತನಿಳಿದನು ಮುನ್ನ ರಥವನು
ಭೂತಳಾಧಿಪನಿಳಿದನಶ್ವ
ವ್ರಾತವನು ಕಡಿಯಣದ ನೇಣಲಿ ತೆಗೆದು ಬಂಧಿಸಿದ
ವಾತಜನ ಸಾತ್ಯಕಿಯ ಯಮಳರ
ಸೂತರಿಳಿದರು ಮುನ್ನ ತುರಗವ
ನಾತಗಳು ಸಂತೈಸಿದರು ಸಂಗರಪರಿಶ್ರಮವ ॥47॥
೦೪೮ ಇಳಿ ರಥವನೆಲೆ ...{Loading}...
ಇಳಿ ರಥವನೆಲೆ ಪಾರ್ಥ ಬಳಿಕಾ
ನಿಳಿವೆನೆಂದನು ಶೌರಿ ನೀವ್ ಮು
ನ್ನಿಳಿವುದೆಂದನು ಪಾರ್ಥನಾಯ್ತು ವಿವಾದವಿಬ್ಬರಿಗೆ
ಎಲೆ ಮರುಳೆ ನಾ ಮುನ್ನಿಳಿಯೆ ನೀ
ನುಳಿವೆಲಾ ಸಾಕಿನ್ನು ಗರ್ವದ
ಗಳಹತನವನು ಬಳಿಕ ತೋರುವೆ ರಥವನಿಳಿಯೆಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ರಥದಿಂದ ಇಳಿ, ನಂತರ ನಾನು ಇಳಿಯುತ್ತೇನೆಂದು ಕೃಷ್ಣ ಅರ್ಜುನನಿಗೆ ಹೇಳಿದ. ಕೃಷ್ಣ ನೀವು ಮೊದಲು ಇಳಿಯುವುದು - ಎಂದು ಅರ್ಜುನ ಹೇಳಲು, ಅವರಿಬ್ಬರಿಗೆ ವಿವಾದ ಪ್ರಾರಂಭವಾಯಿತು. ಎಲೆ ಮರುಳೆ, ನಾನು ಮೊದಲು ಇಳಿದರೆ ನೀನು ಬದುಕಿ ಉಳಿಯುತ್ತೀಯಾ, ಅಹಂಕಾರದ ಮಾತುಗಳು ಸಾಕು, ನಂತರ ತೋರಿಸುತ್ತೇನೆ, ರಥವನ್ನು ಇಳಿ - ಎಂದು ಕೃಷ್ಣ ಅರ್ಜುನನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಗಳಹತನ-ಅನವಶ್ಯಕ ಮಾತುಗಾರಿಕೆ, ಹರಟೆ (ಗಳಹು-ಗಂಟಲು)
ಟಿಪ್ಪನೀ (ಕ.ಗ.ಪ)
ಸಾಮಾನ್ಯವಾಗಿ ರಥದ ಮೂಕಿಯಲ್ಲಿರುವ ಸಾರಥಿ ಮೊದಲು ರಥದಿಂದಿಳಿಯಬೇಕು. ಆನಂತರ ರಥದೊಳಗಿರುವ ರಥಿಕ ಇಳಿಯಬೇಕು. ಆದ್ದರಿಂದ ಅರ್ಜುನ, ಕೃಷ್ಣನನ್ನು ಮೊದಲು ಇಳಿಯಲು ಹೇಳುತ್ತಾನೆ. ಈ ಕಾರಣದಿಂದಲೇ ಇದರ ಹಿಂದಿನ ಪದ್ಯದಲ್ಲಿ ಸೂತರು ಮೊದಲು ರಥಗಳನ್ನು ಇಳಿಯುವುದನ್ನು ಕವಿ ಹೇಳಿದ್ದಾನೆ. ಕೃಷ್ಣನ ಈ ಸೂಚನೆಗೆ ಕಾರಣ ಮುಂದೆ ತಿಳಿಯುತ್ತದೆ.
ಮೂಲ ...{Loading}...
ಇಳಿ ರಥವನೆಲೆ ಪಾರ್ಥ ಬಳಿಕಾ
ನಿಳಿವೆನೆಂದನು ಶೌರಿ ನೀವ್ ಮು
ನ್ನಿಳಿವುದೆಂದನು ಪಾರ್ಥನಾಯ್ತು ವಿವಾದವಿಬ್ಬರಿಗೆ
ಎಲೆ ಮರುಳೆ ನಾ ಮುನ್ನಿಳಿಯೆ ನೀ
ನುಳಿವೆಲಾ ಸಾಕಿನ್ನು ಗರ್ವದ
ಗಳಹತನವನು ಬಳಿಕ ತೋರುವೆ ರಥವನಿಳಿಯೆಂದ ॥48॥
೦೪೯ ಬಳಿಕ ಫಲುಗುಣ ...{Loading}...
ಬಳಿಕ ಫಲುಗುಣ ರಥದ ಮೇಲಿಂ
ದಿಳೆಗೆ ಹಾಯ್ದನು ಕೃಷ್ಣ ನೀನಿ
ನ್ನಿಳಿಯೆನಲು ಚಮ್ಮಟಿಗೆ ವಾಘೆಯ ನೇಣ ರಥದೊಳಗೆ
ಇಳುಹಿ ನಗುತ ಮುಕುಂದ ರಥದಿಂ
ದಿಳಿಯೆ ಛಟಛಟಿಲೆಂದು ಕಿಡಿಯು
ಚ್ಚಳಿಸಲುರಿದುದು ತೇರು ಕೇಸುರಿ ನಭವನಪ್ಪಳಿಸೆ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂತರ ಅರ್ಜುನ ರಥದ ಮೇಲಿನಿಂದ ನೆಲಕ್ಕೆ ಧುಮುಕಿದ ‘ಕೃಷ್ಣ ಇನ್ನು ನೀನು ಇಳಿ’ ಎನ್ನಲು ಚಾವಟಿ ಮತ್ತು ಕುದುರೆಗಳ ಕಡಿವಾಣದ ಹಗ್ಗಗಳನ್ನು ರಥದೊಳಗೆ ಇಟ್ಟು ಕೃಷ್ಣ ನಗುತ್ತಾ ರಥದಿಂದ ಇಳಿಯಲು ಛಟಿಛಟಿಲೆಂದು ಬೆಂಕಿಯ ಕಿಡಿಗಳು ಹಾರುತ್ತಿರಲು ರಥ ಉರಿಯಿತು. ಕೆಂಪಾದ ಉರಿಯ ಜ್ವಾಲೆ ಆಕಾಶವನ್ನು ಆವರಿಸಿತು.
ಪದಾರ್ಥ (ಕ.ಗ.ಪ)
ಚಮ್ಮಟಿಗೆ-ಚರ್ಮಪಟ್ಟಿಕಾ(ಸಂ), ಚಾವಟಿ, ವಾಘೆ-ಲಗಾಮು. ನೇಣು-ಹಗ್ಗ, ಉಚ್ಚಳಿಸು-ಹಾರು, ಕೆದರು, ಕೇಸುರಿ-ಕೆಂಪು ಅಗ್ನಿಜ್ವಾಲೆ, ನಭ-ಆಕಾಶ, ಅಪ್ಪಳಿಸು-ಮೇಲೆ ಬೀಳು, ತಾಗಿಸು.
ಮೂಲ ...{Loading}...
ಬಳಿಕ ಫಲುಗುಣ ರಥದ ಮೇಲಿಂ
ದಿಳೆಗೆ ಹಾಯ್ದನು ಕೃಷ್ಣ ನೀನಿ
ನ್ನಿಳಿಯೆನಲು ಚಮ್ಮಟಿಗೆ ವಾಘೆಯ ನೇಣ ರಥದೊಳಗೆ
ಇಳುಹಿ ನಗುತ ಮುಕುಂದ ರಥದಿಂ
ದಿಳಿಯೆ ಛಟಛಟಿಲೆಂದು ಕಿಡಿಯು
ಚ್ಚಳಿಸಲುರಿದುದು ತೇರು ಕೇಸುರಿ ನಭವನಪ್ಪಳಿಸೆ ॥49॥
೦೫೦ ಧ್ವಜದ ಹಲಗೆಯನೊದೆದು ...{Loading}...
ಧ್ವಜದ ಹಲಗೆಯನೊದೆದು ಹಾಯ್ದನು
ನಿಜನಿವಾಸಕೆ ಹನುಮ ಧೂಮ
ಧ್ವಜನಮಯವಾದುದು ರಥಾಶ್ವ ರಥಾಂಗ ರಾಜಿಯಲಿ
ವಿಜಯ ಭೀಮಾದಿಗಳು ಕಂಡ
ಕ್ಕಜದೊಳಾಕಸ್ಮಿಕದ ಕಿಚ್ಚಿನ
ಗಜಬಜವಿದೇನೆನುತ ನೆರೆ ಬೆಚ್ಚಿದರು ಭೀತಿಯಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥದ ಬಾವುಟದ ಮೇಲಿದ್ದ ಆಂಜನೇಯ, ಬಾವುಟದ ಹಲಗೆಯನ್ನು ಒದೆದು ಹಾರಿ ತನ್ನ ವಾಸಸ್ಥಾನಕ್ಕೆ ಹೋದ. ರಥದ ಕುದುರೆಗಳು, ಮತ್ತು ರಥವನ್ನೆಲ್ಲಾ ಹೊಗೆ ಆವರಿಸಿಕೊಂಡಿತು. ಅರ್ಜುನ, ಭೀಮ ಮುಂತಾದವರು ಇದನ್ನು ಕಂಡು ಆಶ್ಚರ್ಯದಿಂದ ಆಕಸ್ಮಿಕವಾಗಿ ಹೊತ್ತಿದ ಈ ಉರಿಯ ಗಜಬಜವಿದೇನು ಎನ್ನುತ್ತ ಹೆದರಿಕೆಯಿಂದ ಬೆಚ್ಚಿದರು.
ಪದಾರ್ಥ (ಕ.ಗ.ಪ)
ಧ್ವಜದ ಹಲಗೆ-ರಥದ ಮೇಲೆ ಬಾವುಟವನ್ನು ಕಟ್ಟಿರುವ ಮರದ ಹಲಗೆ, ಒದೆದು-ನೂಕಿ, ಹಾಯ್ದನು-ಹಾರಿದನು, ವೇಗವಾಗಿ ಹೋದನು, ಧೂಮಧ್ವಜನ-ಹೊಗೆಯಹಾರಾಟ, ಹೊಗೆತುಂಬುವುದು, ಅಕ್ಕಜ-ಆಶ್ಚರ್ಯ(ಸಂ) ಕಿಚ್ಚು-ಅಗ್ನಿಜ್ವಾಲೆ.
ಟಿಪ್ಪನೀ (ಕ.ಗ.ಪ)
- “ಧ್ವಜದ ಹಲಗೆಯನೊದೆದು ಹಾಯ್ದನು ನಿಜನಿವಾಸಕೆ ಹನುಮ’ - ಆಂಜನೇಯ ಅರ್ಜುನನ ಬಾವುಟಕ್ಕೆ ಬಂದು ನೆಲಸಬೇಕೆಂಬುದು ಭೀಮನ ಬೇಡಿಕೆ. ಅದರಂತೆ ಅವನು ಅರ್ಜುನನ ಬಾವುಟದಲ್ಲಿದ್ದ. ಅರಣ್ಯ ಪರ್ವದ 10ನೆಯ ಸಂಧಿಯ 40ನೆಯ ಪದ್ಯವನ್ನು ನೋಡಿ.
ಮೂಲ ...{Loading}...
ಧ್ವಜದ ಹಲಗೆಯನೊದೆದು ಹಾಯ್ದನು
ನಿಜನಿವಾಸಕೆ ಹನುಮ ಧೂಮ
ಧ್ವಜನಮಯವಾದುದು ರಥಾಶ್ವ ರಥಾಂಗ ರಾಜಿಯಲಿ
ವಿಜಯ ಭೀಮಾದಿಗಳು ಕಂಡ
ಕ್ಕಜದೊಳಾಕಸ್ಮಿಕದ ಕಿಚ್ಚಿನ
ಗಜಬಜವಿದೇನೆನುತ ನೆರೆ ಬೆಚ್ಚಿದರು ಭೀತಿಯಲಿ ॥50॥
೦೫೧ ಹರಿಯಿದೇನಾಕಸ್ಮಿಕದ ದ ...{Loading}...
ಹರಿಯಿದೇನಾಕಸ್ಮಿಕದ ದ
ಳ್ಳುರಿಯೊಳದ್ದುದು ತೇರು ನಮಗೀ
ಯುರಿಯ ಭಯ ಭಾರಿಸಿತಿದೇನು ನಿಮಿತ್ತವಿದಕೆನಲು
ಉರಿವುದಂದೇ ತೇರು ಕರ್ಣನ
ಗುರು ನದೀನಂದನನ ದೈವಿಕ
ಶರಹತಿಯೊಳೆಮ್ಮಿಂದ ನಿಂದುದು ಪಾರ್ಥ ಕೇಳ್ ಎಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ, ಇದೇನು ರಥ ಆಕಸ್ಮಿಕದ ದಳ್ಳುರಿಯಲ್ಲಿ ಮುಚ್ಚಿಹೋಗಿದೆ. ನಮಗೆ ಈ ಉರಿಯ ಭಯ ಉಂಟುಮಾಡುತ್ತಿದೆ. ಇದಕ್ಕೆ ಏನು ಕಾರಣವೆನ್ನಲು, ಕರ್ಣನ, ದ್ರೋಣನ, ಭೀಷ್ಮನ ದೈವಿಕವಾದ ಬಾಣದ ಹೊಡೆತಗಳಿಂದಾಗಿ ಅಂದೇ ಉರಿದುಹೋಗುತ್ತಿತ್ತು. ಆದರೆ ನಮ್ಮಿಂದ ಅದು ನಿಂತಿತು - ಕೇಳು ಅರ್ಜನ , ಎಂದು ಕೃಷ್ಣ ಹೇಳಿದ.
ಪದಾರ್ಥ (ಕ.ಗ.ಪ)
ಅದ್ದುದು-ಮುಚ್ಚಿದುದು, ಮುಳುಗಿದುದು, ಭಾರಿಸಿತು-ಹೊಡೆಯಿತು, ತಾಗಿತು, ನಿಮಿತ್ತ-ಕಾರಣ, ದೈವಿಕಶರಹತಿ-ದೇವಾನುದೇವತೆಗಳಿಂದ ಬಂದ ಬಾಣಗಳ ಹೊಡೆತ.
ಮೂಲ ...{Loading}...
ಹರಿಯಿದೇನಾಕಸ್ಮಿಕದ ದ
ಳ್ಳುರಿಯೊಳದ್ದುದು ತೇರು ನಮಗೀ
ಯುರಿಯ ಭಯ ಭಾರಿಸಿತಿದೇನು ನಿಮಿತ್ತವಿದಕೆನಲು
ಉರಿವುದಂದೇ ತೇರು ಕರ್ಣನ
ಗುರು ನದೀನಂದನನ ದೈವಿಕ
ಶರಹತಿಯೊಳೆಮ್ಮಿಂದ ನಿಂದುದು ಪಾರ್ಥ ಕೇಳೆಂದ ॥51॥
೦೫೨ ನಾವಿಳಿದ ಬಳಿಕೀ ...{Loading}...
ನಾವಿಳಿದ ಬಳಿಕೀ ರಥದೊಳಿರ
ಲಾವ ಹದನೋ ನಿನಗೆ ಕಂಡೈ
ದೈವಿಕಾಸ್ತ್ರದ ಮಹಿಮೆಗಳನೆನೆ ಪಾರ್ಥ ತಲೆವಾಗಿ
ನೀವು ಬಲ್ಲಿರಿ ದೇವ ನೀ ಮಾ
ಯಾವಿ ಮಾಯಾಪಾಶಬದ್ಧರು
ನಾವು ಬಲ್ಲೆವೆ ನಿಮ್ಮನೆಂದೆರಗಿದನು ಚರಣದಲಿ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾವು ರಥದಿಂದಿಳಿದ ಬಳಿಕ ಈ ರಥದಲ್ಲಿರಲು ನಿನಗೆ ಯಾವ ಕಾರಣವಿತ್ತು. ದೈವಿಕಾಸ್ತ್ರಗಳ ಮಹಿಮೆಗಳನ್ನು ಕಂಡೆಯಾ - ಎನ್ನಲು ಪಾರ್ಥ ತಲೆಬಾಗಿ ನೀವು ಬಲ್ಲಿರಿ ದೇವ, ನೀವು ಮಾಯಾವಿಗಳು ಆದರೆ ನಾವು ಮಾಯೆಯೆಂಬ ಪಾಶದಿಂದ ಬಂಧಿತರಾಗಿರುವವರು. ನಾವು ನಿಮ್ಮನ್ನು ಬಲ್ಲೆವೆ - ಎಂದು ಅರ್ಜುನ ಕೃಷ್ಣನ ಚರಣಗಳಲ್ಲಿ ಬಿದ್ದ.
ಪದಾರ್ಥ (ಕ.ಗ.ಪ)
ಹದನು-ಕಾರಣ, ಮಾಯಾವಿ-ಬೇರೆಬೇರೆ ರೂಪಗಳನ್ನು ತಾಳುವವನು, ತೋರಿಕೆಗೆ ಒಂದು ರೂಪವಾದರೆ ನಿಜಸ್ವರೂಪವೇ ಬೇರೆ ಇರುವವನು, ಮಾಯಾಪಾಶಬದ್ಧರು-ಮಾಯೆಯೆಂಬ ಪಾಶದಲ್ಲಿ ಬಂಧಿತರಾದವರು. ಪ್ರಪಂಚವನ್ನು ನಿಜವೆಂದೇ ತಿಳಿದು ನಡೆದುಕೊಳ್ಳವವರು.
ಮೂಲ ...{Loading}...
ನಾವಿಳಿದ ಬಳಿಕೀ ರಥದೊಳಿರ
ಲಾವ ಹದನೋ ನಿನಗೆ ಕಂಡೈ
ದೈವಿಕಾಸ್ತ್ರದ ಮಹಿಮೆಗಳನೆನೆ ಪಾರ್ಥ ತಲೆವಾಗಿ
ನೀವು ಬಲ್ಲಿರಿ ದೇವ ನೀ ಮಾ
ಯಾವಿ ಮಾಯಾಪಾಶಬದ್ಧರು
ನಾವು ಬಲ್ಲೆವೆ ನಿಮ್ಮನೆಂದೆರಗಿದನು ಚರಣದಲಿ ॥52॥
೦೫೩ ಧರಣಿಪತಿ ಕೇಳೀಚೆಯಲಿ ...{Loading}...
ಧರಣಿಪತಿ ಕೇಳೀಚೆಯಲಿ ಕೃಪ
ಗುರುತನುಜ ಕೃತವರ್ಮಕರು ನ
ಮ್ಮರಸನೇನಾದನೊ ವಿರೋಧಿಯ ದಳದ ವೇಢೆಯಲಿ
ತರಣಿ ತಿಮಿರಕೆ ತೆರಹುಗೊಟ್ಟನು
ಭರತಖಂಡವನಿನ್ನು ರಾಯನ
ಪರಿಗತಿಯನಾರೈವೆವೆನುತೇರಿದರು ನಿಜರಥವ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, ಈಚೆಯಲ್ಲಿ (ನಮ್ಮಕಡೆ) ಕೃಪ, ಅಶ್ವತ್ಥಾಮ, ಕೃತವರ್ಮರು, ಶತ್ರುಗಳ ಆಕ್ರಮಣದಿಂದ ನಮ್ಮ ಅರಸನಾದ ದುರ್ಯೋಧನನು ಏನಾದನೋ, ಸೂರ್ಯ ಭರತಖಂಡವನ್ನು ಕತ್ತಲೆಗೆ ಬಿಟ್ಟುಕೊಟ್ಟ (ಕತ್ತಲಾಗುತ್ತಿದೆ), ಇನ್ನು ರಾಯನ ಸ್ಥಿತಿಗತಿಗಳನ್ನು ನೋಡೋಣವೆಂದು ತಮ್ಮ ತಮ್ಮ ರಥಗಳನ್ನು ಹತ್ತಿದರು.
ಪದಾರ್ಥ (ಕ.ಗ.ಪ)
ವೇಢೆ-ಆಕ್ರಮಣ, ತರಣಿ-ಸೂರ್ಯ, ತಿಮಿರ-ಕತ್ತಲು, ತೆರಹುಗೊಡು-ಜಾಗಬಿಟ್ಟುಕೊಡು, ಪರಿಗತಿ-ಸ್ಥಿತಿಗತಿ, ಇರುವ ಸ್ಥಿತಿ, ಆರೈವೆವು-ನೋಡೋಣ, ನಿಜರಥ-ತನ್ನ ರಥ.
ಮೂಲ ...{Loading}...
ಧರಣಿಪತಿ ಕೇಳೀಚೆಯಲಿ ಕೃಪ
ಗುರುತನುಜ ಕೃತವರ್ಮಕರು ನ
ಮ್ಮರಸನೇನಾದನೊ ವಿರೋಧಿಯ ದಳದ ವೇಢೆಯಲಿ
ತರಣಿ ತಿಮಿರಕೆ ತೆರಹುಗೊಟ್ಟನು
ಭರತಖಂಡವನಿನ್ನು ರಾಯನ
ಪರಿಗತಿಯನಾರೈವೆವೆನುತೇರಿದರು ನಿಜರಥವ ॥53॥
೦೫೪ ಭರದಲಿವರು ನೃಪಾಲನಡಗಿದ ...{Loading}...
ಭರದಲಿವರು ನೃಪಾಲನಡಗಿದ
ಸರಸಿಗೈತಂದಿಳಿದು ತಡಿಯಲಿ
ತುರಗವನು ಬಿಡಿಸಿದರು ಸಾರಥಿ ಹೊಗಿಸಿದನು ಕೊಳನ
ತ್ವರಿತದಲಿ ಶೌಚಾಚಮನ ವಿ
ಸ್ತರಣ ಸಂಧ್ಯಾವಂದನಾದಿಯ
ವಿರಚಿಸಿದರರಸಿದರು ಕೊಳನಲಿ ಕೌರವೇಶ್ವರನ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರುಗಳು ವೇಗವಾಗಿ ದುರ್ಯೋಧನನು ಅವಿತು ಕುಳಿತಿದ್ದ ಸರೋವರಕ್ಕೆ ಬಂದು ರಥದಿಂದಿಳಿದು ದಡದಲ್ಲಿ ರಥದ ಕುದುರೆಗಳನ್ನು ಬಿಚ್ಚಿದರು. ಸಾರಥಿ ಕುದುರೆಗಳನ್ನು ಸರೋವರದೊಳಕ್ಕೆ ಪ್ರವೇಶಮಾಡಿಸಿದ. ಬೇಗಬೇಗ ಶೌಚ, ಆಚಮನ, ಸಂಧ್ಯಾವಂದನಾದಿ ಕ್ರಿಯೆಗಳನ್ನು ಮಾಡಿ, ಕೊಳದಲ್ಲಿ ಕೌರವೇಂದ್ರನನ್ನು ಹುಡುಕಿದರು.
ಪದಾರ್ಥ (ಕ.ಗ.ಪ)
ಭರದಲಿ-ವೇಗವಾಗಿ, ಬೇಗ, ತಡಿ-ದಡ, ತ್ವರಿತದಲಿ-ಆತುರವಾಗಿ, ಬೇಗಬೇಗ, ಶೌಚಾಚಮನ-ಶುದ್ಧಿಗಾಗಿ ಮಾಡುವ ವೈದಿಕ ಕ್ರಿಯೆ, ಸಂಧ್ಯಾವಂದನೆ-ತ್ರಿಕಾಲಗಳಲ್ಲಿ ಮಾಡುವ ಸಂಧ್ಯಾ ದೇವಿಯ ವಂದನೆಯ ಕ್ರಿಯೆ, ವಿರಚಿಸು-ರಚಿಸು, ಮಾಡು, ಅರಸು-ಹುಡುಕು.
ಮೂಲ ...{Loading}...
ಭರದಲಿವರು ನೃಪಾಲನಡಗಿದ
ಸರಸಿಗೈತಂದಿಳಿದು ತಡಿಯಲಿ
ತುರಗವನು ಬಿಡಿಸಿದರು ಸಾರಥಿ ಹೊಗಿಸಿದನು ಕೊಳನ
ತ್ವರಿತದಲಿ ಶೌಚಾಚಮನ ವಿ
ಸ್ತರಣ ಸಂಧ್ಯಾವಂದನಾದಿಯ
ವಿರಚಿಸಿದರರಸಿದರು ಕೊಳನಲಿ ಕೌರವೇಶ್ವರನ ॥54॥
೦೫೫ ಬಳಸಿ ಜಮ್ಬುಕ ...{Loading}...
ಬಳಸಿ ಜಂಬುಕ ಘೂಕ ಕಾಕಾ
ವಳಿಗಳೆದ್ದವು ಮೇಲುವಾಯ್ದ
ವ್ವಳಿಸಲಮ್ಮದೆ ಗಾಢತರ ಗರ್ಜನೆಗೆ ಕುರುಪತಿಯ
ಕಳಕಳವಿದೆತ್ತಣದೆನುತ ಕಳ
ವಳಿಸಿ ಬಂದು ಮಹಾರಥರು ನೃಪ
ತಿಲಕನಿರವನು ಕಂಡು ಧೊಪ್ಪನೆ ಕೆಡದರವನಿಯಲಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುಪತಿಯ ಗಾಢವಾದ ಗರ್ಜನೆಗೆ ಹೆದರಿ, ಅವನ ಮೇಲೆ ಬಿದ್ದು ಆಕ್ರಮಿಸಲಾಗದೆ ಸುತ್ತುವರಿದಿದ್ದ ನರಿ, ಗೂಬೆ, ಕಾಗೆಗಳು ಎದ್ದವು. ಈ ಕಳಕಳ ಶಬ್ಧವಿದೆಲ್ಲಿಯದೆಂದು ಆತಂಕದಿಂದ ಬಂದ ಮಹಾರಥರಾದ ಕೃಪಾಶ್ವತ್ಥಾಮ ಕೃತವರ್ಮರು, ನೃಪತಿಲಕನಾದ ದುರ್ಯೋಧನನ ಸ್ಥಿತಿಯನ್ನು ಕಂಡು ನೆಲದ ಮೇಲಕ್ಕೆ ಧೊಪ್ಪನೆ ಬಿದ್ದರು.
ಪದಾರ್ಥ (ಕ.ಗ.ಪ)
ಬಳಸಿ-ಸುತ್ತುವರಿದು, ಜಂಬುಕ-ನರಿ, ಕಾಕ-ಕಾಗೆ, ಮೇಲುವಾಯ್ದು-ಮೇಲೆ ಬಿದ್ದು, ಅವ್ವಳಿಸು-ಆಕ್ರಮಿಸು, ಅವನಿ-ಭೂಮಿ.
ಮೂಲ ...{Loading}...
ಬಳಸಿ ಜಂಬುಕ ಘೂಕ ಕಾಕಾ
ವಳಿಗಳೆದ್ದವು ಮೇಲುವಾಯ್ದ
ವ್ವಳಿಸಲಮ್ಮದೆ ಗಾಢತರ ಗರ್ಜನೆಗೆ ಕುರುಪತಿಯ
ಕಳಕಳವಿದೆತ್ತಣದೆನುತ ಕಳ
ವಳಿಸಿ ಬಂದು ಮಹಾರಥರು ನೃಪ
ತಿಲಕನಿರವನು ಕಂಡು ಧೊಪ್ಪನೆ ಕೆಡದರವನಿಯಲಿ ॥55॥
೦೫೬ ಉಡಿದ ತೊಡೆಗಳ ...{Loading}...
ಉಡಿದ ತೊಡೆಗಳ ಮಗ್ಗುಲಲಿ ಹೊನ
ಲಿಡುವ ರಕುತದ ಭೀಮಸೇನನ
ಮಡದ ಹೊಯ್ಲಲಿ ಕೆಲಕೆ ಸೂಸಿದ ಮಕುಟಮಣಿಮಯದ
ಕೆಡೆದು ಮೈವೇದನೆಗೆ ನರಳುವ
ನಿಡುಸರದ ಖಗ ಜಂಬುಕೌಘವ
ನಿಡುವ ಕೈಗಲ್ಲುಗಳ ನೃಪತಿಯ ಕಂಡರಿವರಂದು ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುರಿದ ತೊಡೆಗಳ ಪಕ್ಕದಲ್ಲಿ ಹರಿಯುತ್ತಿರುವ ರಕ್ತವನ್ನು, ಭೀಮಸೇನನ ಬೀಸುಗಾಲಿನ ಹೊಡೆತದಿಂದ ಕೆಲಬಲಕ್ಕೆ ಚೆಲ್ಲಿದ ಮಣಿಮಯ ಕಿರೀಟದ ರತ್ನಗಳನ್ನು, ನೆಲದ ಮೇಲೆ ಬಿದ್ದು ಮೈಯ ನೋವಿನಿಂದಾಗಿ ನರಳುವ ದೊಡ್ಡ ಸ್ವರದ, ಪಕ್ಷಿಗಳು ಮತ್ತು ನರಿಗಳನ್ನು ಹೊಡೆಯಲು ಕೈಯಲ್ಲಿ ಕಲ್ಲುಗಳನ್ನು ಹಿಡಿದಿದ್ದ ರಾಜನನ್ನು ಅಂದು ಇವರು ಕಂಡರು.
ಪದಾರ್ಥ (ಕ.ಗ.ಪ)
ಉಡಿದ-ಮುರಿದ, ಮಗ್ಗುಲು-ಪಕ್ಕ, ಹೊನಲು-ಪ್ರವಾಹ, ಮಡ-ಕಾಲು, ಕೆಲಕೆ-ಪಕ್ಕಕ್ಕೆ, ಸಮೀಪಕ್ಕೆ, ಕೆಡೆದು-ಬಿದ್ದು, ವೇದನೆ-ನೋವು, ನಿಡುಸರ-ಗಟ್ಟಿಸ್ವರ, ಖಗ-ಪಕ್ಷಿ, ಜಂಬುಕೌಘ-ನರಿಗಳ ಸಮೂಹ.
ಮೂಲ ...{Loading}...
ಉಡಿದ ತೊಡೆಗಳ ಮಗ್ಗುಲಲಿ ಹೊನ
ಲಿಡುವ ರಕುತದ ಭೀಮಸೇನನ
ಮಡದ ಹೊಯ್ಲಲಿ ಕೆಲಕೆ ಸೂಸಿದ ಮಕುಟಮಣಿಮಯದ
ಕೆಡೆದು ಮೈವೇದನೆಗೆ ನರಳುವ
ನಿಡುಸರದ ಖಗ ಜಂಬುಕೌಘವ
ನಿಡುವ ಕೈಗಲ್ಲುಗಳ ನೃಪತಿಯ ಕಂಡರಿವರಂದು ॥56॥
೦೫೭ ಒರಲಿದರು ಧರೆ ...{Loading}...
ಒರಲಿದರು ಧರೆ ಬಿರಿಯೆ ಹುಡಿಯಲಿ
ಹೊರಳಿದರು ಬಾಯ್ಗಳನು ಹೊಯ್ ಹೊ
ಯ್ದರಿಚಿ ಕೆಡೆದರು ಕುಂದಿದರು ಕಾತರಿಸಿ ಕಳವಳಿಸಿ
ಮರುಗಿದರು ಮನಗುಂದಿದರು ಮೈ
ಮರೆದರದ್ದರು ಶೋಕಜಲಧಿಯೊ
ಳರಲುಗೊಂಡರು ತಳ್ಳಬಾರಿದರವರು ನಿಮಿಷದಲಿ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಪಾಶ್ವತ್ಥಾಮ ಕೃತವರ್ಮರು ಒಂದು ನಿಮಿಷದಲ್ಲಿ ಭೂಮಿ ಬಿರಿಯುವಂತೆ ದುಃಖದಿಂದ ಕೂಗಿದರು. ಧೂಳಿನಲ್ಲಿ ಹೊರಳಿದರು. ಬಾಯಿಗಳನ್ನು ಬಡಿದುಕೊಂಡು ಕಿರಿಚುತ್ತಾ ಕೆಳಗೆಬಿದ್ದರು. ಕುಗ್ಗಿದರು, ಕಾತರಪಟ್ಟರು, ಕಳವಳಿಸಿದರು, ದುಃಖಿಸಿದರು, ಮನಸ್ಸುಗಳನ್ನು ಕುಗ್ಗಿಸಿಕೊಂಡರು, ಎಚ್ಚರತಪ್ಪಿದರು, ಶೋಕಸಮುದ್ರದಲ್ಲಿ ಮುಳುಗಿದರು, ಬಾಯಾರಿದರು, ನಡುಗಿದರು.
ಪದಾರ್ಥ (ಕ.ಗ.ಪ)
ಒರಲು-ಕಿರುಚು, ಕೂಗು, ಹುಡಿ-ಧೂಳು, ಕೆಡೆ-ಬೀಳು, ಕುಂದು-ಕುಗ್ಗು, ಮರುಗು-ದುಃಖಿಸು, ಅದ್ದರು-ಮುಳುಗಿದರು, ಶೋಕಜಲಧಿ-ದುಃಖದ ಸಮುದ್ರ, ಅರಲುಗೊಳ್-ಬಾಯಾರು, ತಳ್ಳಬಾರು-ನಡುಗು, ಭಯಪಡು.
ಮೂಲ ...{Loading}...
ಒರಲಿದರು ಧರೆ ಬಿರಿಯೆ ಹುಡಿಯಲಿ
ಹೊರಳಿದರು ಬಾಯ್ಗಳನು ಹೊಯ್ ಹೊ
ಯ್ದರಿಚಿ ಕೆಡೆದರು ಕುಂದಿದರು ಕಾತರಿಸಿ ಕಳವಳಿಸಿ
ಮರುಗಿದರು ಮನಗುಂದಿದರು ಮೈ
ಮರೆದರದ್ದರು ಶೋಕಜಲಧಿಯೊ
ಳರಲುಗೊಂಡರು ತಳ್ಳಬಾರಿದರವರು ನಿಮಿಷದಲಿ ॥57॥
೦೫೮ ಹದುಳಿಸಿರೆ ಸಾಕೇಳಿ ...{Loading}...
ಹದುಳಿಸಿರೆ ಸಾಕೇಳಿ ಸಾಕಿ
ನ್ನಿದರಲಿನ್ನೇನಹುದು ದೈವದ
ಕದಡು ಮನಗಾಣಿಸಿತು ನಮಗೀ ಕಂಟಕವ್ಯಥೆಯ
ಉದಯದಲಿ ನಾವೀ ಶರೀರವ
ನೊದೆದು ಹಾಯ್ವೆವು ನೀವು ನಿಜಮಾ
ರ್ಗದಲಿ ಬಿಜಯಂಗೈವುದೆಂದನು ನಗುತ ಕುರುರಾಯ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಾಧಾನ ಮಾಡಿಕೊಳ್ಳಿ ಸಾಕು. ಏಳಿ. ಇನ್ನಿದರಲ್ಲಿ (ಈ ದೇಹದಲ್ಲಿ - ಈ ಬದುಕಿನಲ್ಲಿ) ಏನಿದೆ. ವಿಧಿಯ ಕ್ರೌರ್ಯ ನಮಗೆ ಈ ಕಂಟಕದ ದುಃಖವನ್ನು ಮನಸ್ಸಿಗೆ ತಂದುಕೊಟ್ಟಿತು. ಬೆಳಿಗ್ಗೆ ನಾವು ನಮ್ಮ ಈ ದೇಹವನ್ನು ಬಿಟ್ಟು ಹೋಗುತ್ತೇವೆ. (ಪ್ರಾಣ ಬಿಡುತ್ತೇವೆ) ನೀವು ನಿಮ್ಮ ನಿಮ್ಮ ಮಾರ್ಗದಲ್ಲಿ ನಡೆಯುವುದು - ಎಂದು ದುರ್ಯೋಧನ ನಗುತ್ತಾ ಹೇಳಿದ.
ಪದಾರ್ಥ (ಕ.ಗ.ಪ)
ಹದುಳಿಸು-ಸಮಾಧಾನದಿಂದಿರು, ಕದಡು-ಕ್ರೌರ್ಯ, ಕಂಟಕ-ತೊಂದರೆ, ಕಷ್ಟ, ವ್ಯಥೆ-ದುಃಖ, ಒದೆದು-ನೂಕಿ, ಹಾಯ್ವೆವು-ಹೋಗುತ್ತೇವೆ, ನಿಜಮಾರ್ಗ-ನಿಮ್ಮದಾರಿ.
ಮೂಲ ...{Loading}...
ಹದುಳಿಸಿರೆ ಸಾಕೇಳಿ ಸಾಕಿ
ನ್ನಿದರಲಿನ್ನೇನಹುದು ದೈವದ
ಕದಡು ಮನಗಾಣಿಸಿತು ನಮಗೀ ಕಂಟಕವ್ಯಥೆಯ
ಉದಯದಲಿ ನಾವೀ ಶರೀರವ
ನೊದೆದು ಹಾಯ್ವೆವು ನೀವು ನಿಜಮಾ
ರ್ಗದಲಿ ಬಿಜಯಂಗೈವುದೆಂದನು ನಗುತ ಕುರುರಾಯ ॥58॥
೦೫೯ ಶೋಕವಡಗಿದುದವರಿಗನ್ತ ...{Loading}...
ಶೋಕವಡಗಿದುದವರಿಗಂತ
ವ್ರ್ಯಾಕುಳತೆ ಬೀಳ್ಕೊಂಡುದಹುದಿ
ನ್ನೇಕೆ ಸಂವೇಶಾನುಭೂತಾನುಭವದುರ್ವ್ಯಸನ
ಸಾಕದಂತಿರಲಿನ್ನು ಬಿಡು ನೀ
ಸಾಕಿತಕೆ ಫಲವೆನಿಸಿ ರಜನಿಯೊ
ಳಾ ಕುಠಾರರ ತಲೆಗಳನು ತಹೆನೆಂದನಾ ದ್ರೌಣಿ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಪಾಶ್ವತ್ಥಾಮ ಕೃತವರ್ಮರಿಗೆ ಶೋಕ ನಿಂತಿತು, ಮನಸ್ಸಿನ ವ್ಯಾಕುಲತೆ ಹೋಯಿತು. ಇನ್ನು, ನೀನು ಅನುಭವಿಸಿ ನಿನ್ನಲ್ಲಿ ನಾಟಿಕೊಂಡಿರುವ ದುರ್ಬುದ್ಧಿಯನ್ನು ಇನ್ನಾದರೂ ಬಿಡು. ಸಾಕು ಅದು ಹಾಗಿರಲಿ ಬಿಡು. ನೀನು ನನ್ನನ್ನು ಸಾಕಿದ್ದಕ್ಕೆ ಪ್ರತಿಫಲ ಎನ್ನುವಂತೆ, ರಾತ್ರಿಯಲ್ಲಿ ಆ ಕುಲನಾಶಕರ ತಲೆಗಳನ್ನು ತರುತ್ತೇನೆಂದು ಅಶ್ವತ್ಥಾಮ ನುಡಿದ.
ಪದಾರ್ಥ (ಕ.ಗ.ಪ)
ಅಂತವ್ರ್ಯಾಕುಳತೆ-ಮನದೊಳಗಿನ ವ್ಯಾಕುಲ, ರಜನಿ-ರಾತ್ರಿ, ಕುಠಾರ-ಕುಲನಾಶಕ (ಕೊಡಲಿ)
ಮೂಲ ...{Loading}...
ಶೋಕವಡಗಿದುದವರಿಗಂತ
ವ್ರ್ಯಾಕುಳತೆ ಬೀಳ್ಕೊಂಡುದಹುದಿ
ನ್ನೇಕೆ ಸಂವೇಶಾನುಭೂತಾನುಭವದುರ್ವ್ಯಸನ
ಸಾಕದಂತಿರಲಿನ್ನು ಬಿಡು ನೀ
ಸಾಕಿತಕೆ ಫಲವೆನಿಸಿ ರಜನಿಯೊ
ಳಾ ಕುಠಾರರ ತಲೆಗಳನು ತಹೆನೆಂದನಾ ದ್ರೌಣಿ ॥59॥
೦೬೦ ಅಕಟ ಮರುಳೇ ...{Loading}...
ಅಕಟ ಮರುಳೇ ಗುರುಸುತನ ಮತಿ
ವಿಕಳತನವನು ಕೃಪನು ಕೃತವ
ರ್ಮಕರು ಕಂಡಿರೆ ಪಾಂಡವರ ತಲೆ ತನಗೆ ಗೋಚರವೆ
ಬಕನ ಧರ್ಮಸ್ಥಿತಿಯವೊಲು ದೇ
ವಕಿಯ ಮಗ ಕಾದಿಹನಲೇ ಕೌ
ಳಿಕದ ಸಿದ್ಧನ ಕೃತಿಯನಾರಿಗೆ ಮೀರಬಹುದೆಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯೋ ಮರುಳೆ! ಅಶ್ವತ್ಥಾಮನ ವಿಕಳ ಬುದ್ಧಿಯನ್ನು ಕೃಪ - ಕೃತವರ್ಮರು ನೋಡಿದಿರೇ. ಪಾಂಡವರ ತಲೆಗಳು ತನಗೆ (ಅಶ್ವತ್ಥಾಮನಿಗೆ) ಕಾಣುತ್ತವೆಯೇ. ಬಕನ ಧರ್ಮದ ಸ್ಥಿತಿಯಂತೆ ದೇವಕಿಯ ಮಗನಾದ ಕೃಷ್ಣ ಪಾಂಡವರನ್ನು ಕಾದಿರುತ್ತಾನಲ್ಲವೇ. ಮೋಸದ ಸಿದ್ಧ ಪುರುಷನಾದ ಕೃಷ್ಣನ ಕೆಲಸವನ್ನು ಯಾರಿಂದ ಮೀರಲು ಸಾಧ್ಯ ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಮತಿವಿಕಳತನ-ಬುದ್ಧಿ ಭ್ರಮಣೆಯಾದವನ ಸ್ವಭಾವ, ಗೋಚರ-ಕಾಣುವುದು, ಕೌಳಿಕ-ಮೋಸ, ಸಿದ್ಧ-ಸಿದ್ಧಿಯನ್ನು ಪಡೆದವ, ಕೃತಿ-ಕೆಲಸ.
ಮೂಲ ...{Loading}...
ಅಕಟ ಮರುಳೇ ಗುರುಸುತನ ಮತಿ
ವಿಕಳತನವನು ಕೃಪನು ಕೃತವ
ರ್ಮಕರು ಕಂಡಿರೆ ಪಾಂಡವರ ತಲೆ ತನಗೆ ಗೋಚರವೆ
ಬಕನ ಧರ್ಮಸ್ಥಿತಿಯವೊಲು ದೇ
ವಕಿಯ ಮಗ ಕಾದಿಹನಲೇ ಕೌ
ಳಿಕದ ಸಿದ್ಧನ ಕೃತಿಯನಾರಿಗೆ ಮೀರಬಹುದೆಂದ ॥60॥
೦೬೧ ಹರಿಹರಬ್ರಹ್ಮಾದಿದೇವರು ...{Loading}...
ಹರಿಹರಬ್ರಹ್ಮಾದಿದೇವರು
ವೆರಸಿ ಕಾಯಲಿ ರಾತ್ರಿಯಲಿ ರಿಪು
ಶಿರವ ತಹೆನಿದಕೇಕೆ ಸಂಶಯವೆನ್ನ ಕಳುಹುವುದು
ಇರಲಿ ಕೃಪಕೃತವರ್ಮಕರು ಹ
ತ್ತಿರೆ ರಣಾಧ್ಯಕ್ಷದಲಿ ಭಾಷಾ
ಚರಣ ಪೈಸರಿಸಿದಡೆ ದ್ರೋಣನ ತನಯನಲ್ಲೆಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಿಹರಬ್ರಹ್ಮರೇ ಮೊದಲಾದ ದೇವರುಗಳು ಕೂಡಿ ಪಾಂಡವರನ್ನು ಕಾದರೂ ರಾತ್ರಿಯಲ್ಲಿ ಶತ್ರುಗಳ ತಲೆಗಳನ್ನು ತರುವೆನು. ಇದಕ್ಕೆ ಸಂಶಯವೇಕೆ. ನನ್ನನ್ನು ಕಳಿಸುವುದು. ಕೃಪಕೃತವರ್ಮರು ಹತ್ತಿರವಿರಲಿ. ಈ ಯುದ್ಧದ ಅಧ್ಯಕ್ಷನ ಪಟ್ಟದಲ್ಲಿ (ನಾಯಕನ ಸ್ಥಾನದಲ್ಲಿ) ನನ್ನ ಭಾಷೆಯಂತೆ ನಡೆಯುವುದರಲ್ಲಿ ಹಿಂಜರಿಕೆಯುಂಟಾದರೆ, ನಾನು ದ್ರೋಣನ ಮಗನೇ ಅಲ್ಲ.
ಪದಾರ್ಥ (ಕ.ಗ.ಪ)
ರಣಾಧ್ಯಕ್ಷದಲಿ-ಯುದ್ಧದ ನಾಯಕತ್ವದಲ್ಲಿ, ಭಾಷಾಚರಣ-ನುಡಿದಂತೆ ನಡೆಯುವುದು, ಪೈಸರಿಸು-ಹಿಮ್ಮೆಟ್ಟು, ಹಿಂದೆ ಸರಿ.
ಮೂಲ ...{Loading}...
ಹರಿಹರಬ್ರಹ್ಮಾದಿದೇವರು
ವೆರಸಿ ಕಾಯಲಿ ರಾತ್ರಿಯಲಿ ರಿಪು
ಶಿರವ ತಹೆನಿದಕೇಕೆ ಸಂಶಯವೆನ್ನ ಕಳುಹುವುದು
ಇರಲಿ ಕೃಪಕೃತವರ್ಮಕರು ಹ
ತ್ತಿರೆ ರಣಾಧ್ಯಕ್ಷದಲಿ ಭಾಷಾ
ಚರಣ ಪೈಸರಿಸಿದಡೆ ದ್ರೋಣನ ತನಯನಲ್ಲೆಂದ ॥61॥
೦೬೨ ಆಗಲಾ ಪಾಣ್ಡವರ ...{Loading}...
ಆಗಲಾ ಪಾಂಡವರ ವಧೇ ನಿನ
ಗಾಗಲರಿಯದು ನಿನ್ನ ಭುಜಬಲ
ವಾಗುರಿಯ ವೇಢೆಯಲಿ ಬೀಳದು ಕೃಷ್ಣ ಬುದ್ಧಿಮೃಗ
ಈಗಳೀ ನಿರ್ಬಂಧವಚನವಿ
ರಾಗಮೆವಗೇಕಾರಿಗಾವುದು
ಭಾಗಧೇಯವದಾಗಲೆಂದನು ಕೌರವರರಾಯ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗಲಿ ಆದರೂ ಆ ಪಾಂಡವರ ವಧೆಯನ್ನು ನಿನಗೆ ಮಾಡಲು ಸಾಧ್ಯವಾಗದು. ನಿನ್ನ ಭುಜಗಳೆಂಬ ಬಲೆಯಲ್ಲಿ ಕೃಷ್ಣನ ಬುದ್ಧಿಯೆಂಬ ಮೃಗ ಸಿಲುಕುವುದಿಲ್ಲ. ಈ ಸಮಯದಲ್ಲಿ ಈ ರೀತಿಯ ನಿರ್ಬಂಧದ ಮಾತುಗಳ ಮೂಲಕ ನಮಗೆ ವೈರಾಗ್ಯವೇಕೆ. ಯಾರಿಗೆ ಯಾವುದು ವಿಧಿ ಬರಹವೋ ಅದು ಆಗಲಿ - ಎಂದು ದುರ್ಯೋಧನ ನುಡಿದ.
ಪದಾರ್ಥ (ಕ.ಗ.ಪ)
ವಾಗುರಿ-ಬಲೆ, ವೇಢೆ-ಆಕ್ರಮಣ, ನಿರ್ಬಂಧ-ಒತ್ತಾಯ, ವಚನವಿರಾಗ-ಮಾತಿನ ವೈರಾಗ್ಯ, ಭಾಗದೇಯ-ವಿಧಿಬರಹ
ಮೂಲ ...{Loading}...
ಆಗಲಾ ಪಾಂಡವರ ವಧೇ ನಿನ
ಗಾಗಲರಿಯದು ನಿನ್ನ ಭುಜಬಲ
ವಾಗುರಿಯ ವೇಢೆಯಲಿ ಬೀಳದು ಕೃಷ್ಣ ಬುದ್ಧಿಮೃಗ
ಈಗಳೀ ನಿರ್ಬಂಧವಚನವಿ
ರಾಗಮೆವಗೇಕಾರಿಗಾವುದು
ಭಾಗಧೇಯವದಾಗಲೆಂದನು ಕೌರವರರಾಯ ॥62॥
೦೬೩ ವರ ಚಮೂಪತಿ ...{Loading}...
ವರ ಚಮೂಪತಿ ನೀನು ಬಳಿಕಿ
ಬ್ಬರು ಚಮೂವಿಸ್ತಾರವೆನೆ ವಿ
ಸ್ತರಿಸಿ ರಚಿಸುವುದೆಂದು ರಥಿಕತ್ರಯಕೆ ನೇಮಿಸಿದ
ಗುರುಜ ಕೃಪ ಕೃತವರ್ಮರೀ ಮೂ
ವರು ನರೇಂದ್ರನ ಬೀಳುಕೊಂಡರು
ಕರೆದು ಸೂತರ ಸನ್ನೆಯಲಿ ಬಂದೇರಿದರು ರಥವ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಸೇನಾಧಿಪತಿ ಉಳಿದಿಬ್ಬರು (ಕೃಪ-ಕೃತವರ್ಮ) ವಿಸ್ತಾರವಾದ ಸೈನ್ಯವೆಂಬಂತೆ ಸೇನೆಯನ್ನು ರಚಿಸುವುದು ಎಂದು ಮೂರು ಜನ ರಥಕರಿಗೂ ನೇಮಿಸಿದ. ಅಶ್ವತ್ಥಾಮ, ಕೃಪ, ಕೃತವರ್ಮ ಈ ಮೂವರೂ ರಾಜನನ್ನು ಬೀಳ್ಕೊಂಡು, ಸನ್ನೆಮಾಡಿ ಸೂತರನ್ನು ಕರೆದು, ಬಂದು ರಥವನ್ನು ಹತ್ತಿದರು.
ಪದಾರ್ಥ (ಕ.ಗ.ಪ)
ಚಮೂಪತಿ-ಸೈನ್ಯಾಧಿಪತಿ, ಚಮುವಿಸ್ತಾರ-ಸೈನ್ಯದ ವಿಸ್ತಾರ, ಅಳತೆ, ರಥಿಕತ್ರಯ-ಮೂರು ಜನ ರಥಿಕರು, ಸೂತ-ಸಾರಥಿ, ಸನ್ನೆಯಲಿ-ಸೌಂಜ್ಞೆಯಲ್ಲಿ, ಕೈ-ಕಣ್ಣುಗಳ ಚಲನೆಯಲ್ಲಿ.
ಮೂಲ ...{Loading}...
ವರ ಚಮೂಪತಿ ನೀನು ಬಳಿಕಿ
ಬ್ಬರು ಚಮೂವಿಸ್ತಾರವೆನೆ ವಿ
ಸ್ತರಿಸಿ ರಚಿಸುವುದೆಂದು ರಥಿಕತ್ರಯಕೆ ನೇಮಿಸಿದ
ಗುರುಜ ಕೃಪ ಕೃತವರ್ಮರೀ ಮೂ
ವರು ನರೇಂದ್ರನ ಬೀಳುಕೊಂಡರು
ಕರೆದು ಸೂತರ ಸನ್ನೆಯಲಿ ಬಂದೇರಿದರು ರಥವ ॥63॥
೦೬೪ ಇವರು ಬನ್ದರು ...{Loading}...
ಇವರು ಬಂದರು ದಕ್ಷಿಣದ ದೆಸೆ
ಗವರ ಪಾಳೆಯಕಾಗಿ ಸುತ್ತಲು
ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ
ಇವರು ಮನದಲಿ ಕುಡಿದರಹಿತಾ
ರ್ಣವವನಿವರಿಗೆ ಗೋಚರವೆ ಪಾಂ
ಡವರು ಗದುಗಿನ ವೀರನಾರಾಯಣನ ಕರುಣದಲಿ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮೂವರೂ ದಕ್ಷಿಣ ದಿಕ್ಕಿನಲ್ಲಿನ ಅವರ (ಪಾಂಡವರ) ಪಾಳೆಯದ ಕಡೆಗೆ ಬಂದರು. ಎರಡು ರೀತಿಯ ಕತ್ತಲು ಸುತ್ತಲು ಆವರಿಸಿತು - ರಾತ್ರಿಯ ಕತ್ತಲೆ ಮತ್ತು ರೋಷದಿಂದ ಉಂಟಾದ ಕಣ್ಗತ್ತಲು. ಇವರು ಮನಸ್ಸಿನಲ್ಲಿಯೇ ಶತ್ರುಗಳೆಂಬ ಸಮುದ್ರವನ್ನು ಕುಡಿದರು. ಗದುಗಿನ ವೀರನಾರಾಯಣನ ಕರುಣೆಯನ್ನು ಹೊಂದಿರುವ ಪಾಂಡವರು ಇವರ ದೃಷ್ಟಿಗೆ ಬೀಳುತ್ತಾರೆಯೇ.
ಪದಾರ್ಥ (ಕ.ಗ.ಪ)
ದೆಸೆ-ದಿಕ್ಕು, ಪಾಳೆಯ-ಸೇನೆ ಬೀಡು ಬಿಟ್ಟಿರುವ ಸ್ಥಳ, ಸವಡಿಗತ್ತಲೆ-ಎರಡು ವಿಧದ ಕತ್ತಲೆ (ಸವಡಿ-ಜೋಡಿ) ರೋಷ-ಕೋಪ, ಅಂಧಕಾರ-ಕತ್ತಲು, ಅಹಿತಾರ್ಣವ-ಶತ್ರುಗಳೆಂಬ ಸಮುದ್ರ, ಗೋಚರ-ಕಾಣಿಸುವುದು.
ಪಾಠಾನ್ತರ (ಕ.ಗ.ಪ)
ಕುಡಿದವರಹಿತಾರ್ಣವವರಿವರಿಗೆ - ಕುಡಿದವರಹಿತಾರ್ಣವವನಿವರಿಗೆ
ಊಹಾಪಾಠ
ಮೂಲ ...{Loading}...
ಇವರು ಬಂದರು ದಕ್ಷಿಣದ ದೆಸೆ
ಗವರ ಪಾಳೆಯಕಾಗಿ ಸುತ್ತಲು
ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ
ಇವರು ಮನದಲಿ ಕುಡಿದರಹಿತಾ
ರ್ಣವವನಿವರಿಗೆ ಗೋಚರವೆ ಪಾಂ
ಡವರು ಗದುಗಿನ ವೀರನಾರಾಯಣನ ಕರುಣದಲಿ ॥64॥