೦೦೦ ಸೂ ರಾಯ ...{Loading}...
ಸೂ. ರಾಯ ಭಾರತ ವೀರರಾಯನು
ರಾಯ ವನದಾವಾನಳನು ಕಲಿ
ವಾಯುತನುಜನ ಹಳಚಿ ಮಡಿದನು ಕೌರವರ ರಾಯ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ: ಭಾರತವೀರನಾದ ರಾಜನೂ, ರಾಜವಂಶದ ವನಕ್ಕೆ ಪ್ರಳಯಾಗ್ನಿಯಂತಿರುವವನೂ ಆದ ದುರ್ಯೋಧನನು ವೀರಭೀಮನನ್ನು ಹೊಡೆದು, ತಾನು ಯುದ್ಧದಲ್ಲಿ ಮಡಿದನು.
ಪದಾರ್ಥ (ಕ.ಗ.ಪ)
ರಾಯವನದಾವಾನಳ-ರಾಜರವಂಶವೆಂಬ ವನಕ್ಕೆ ಪ್ರಳಯಾಗ್ನಿಯಂತಿರುವವನು, ದುರ್ಯೋಧನ, ಹಳಚು-ಹಣಚು, ಕೆಣಕು, ಎದುರಿಸು,
ಮೂಲ ...{Loading}...
ಸೂ. ರಾಯ ಭಾರತ ವೀರರಾಯನು
ರಾಯ ವನದಾವಾನಳನು ಕಲಿ
ವಾಯುತನುಜನ ಹಳಚಿ ಮಡಿದನು ಕೌರವರ ರಾಯ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ಕೈ
ಮೇಳವಿಸಿದರು ವಿಷಮ ಸಮರಕ
ರಾಳರೋಷಶ್ವ್ವಾಸಧೂಮಳಮುಖಭಯಂಕರರು
ಚಾಳನದ ಚೌಪಟರು ಶಸ್ತ್ರಾ
ಸ್ಫಾಳನದ ವಜ್ರಾಭಿಘಾತಾ
ಭೀಳನಿಷ್ಠುರರೊದಗಿದರು ಕೌರವ ವೃಕೋದರರು ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, ಕಠಿಣವಾದ ಕದನದಲ್ಲಿ ಕರಾಳ ರೋಷದಿಂದ ಬಿಸಿಯುಸಿರನ್ನು ಬಿಡುತ್ತಿದ್ದ , ವೇಗದ ಚಲನೆಯನ್ನು ಹೊಂದಿದ್ದ ನಾಲ್ಕು ದಿಕ್ಕುಗಳಿಂದಲೂ ಯುದ್ಧ ಮಾಡಬಲ್ಲ ವೀರರು, ಶಸ್ತ್ರಗಳನ್ನು ಆಸ್ಫೋಟಿಸುತ್ತಾ ವಜ್ರಾಘಾತವನ್ನುಂಟುಮಾಡುವ ಭೀಕರರು, ಕೌರವ ವೃಕೋದರರು ಯುದ್ಧಕ್ಕೆ ಸೇರಿದರು.
ಪದಾರ್ಥ (ಕ.ಗ.ಪ)
ಕೈಮೇಳವಿಸು-ಜೊತೆಯಾಗು, ಒಂದು ಗೂಡು, ವಿಷಮ-ಕಠಿಣ, ಬಿರುಸು, ಅಸಮ, ಕರಾಳ-ಭೀಕರ, ಕಪ್ಪುವರ್ಣದ, ಭಯಂಕರ, ರೋಷಶ್ವಾಸ-ಕೋಪದಿಂದ ಹೊರಬರುವ ಬಿಸಿಯುಸಿರು, ಚಾಳನ - ಚಲನಶಕ್ತಿ, ಚಂಚಲ, ಚಪಲತೆ, ಚೌಪಟರು-ನಾಲ್ಕೂದಿಕ್ಕುಗಳಿಂದ ಯುದ್ಧ, ಮಾಡಬಲ್ಲವರು (ಚೌಪಟ-ನಾಲ್ಕು ದಿಕ್ಕು) ಶಸ್ತ್ರಾಸ್ಫಾಳನ-ಶಸ್ತ್ರವನ್ನು ಸಿಡಿಸುವುದು, ಶಸ್ತ್ರವನ್ನು ಆಸ್ಫೋಟಿಸುವಂತೆ ಶಬ್ದಮಾಡುವುದು, ಆಭೀಳರು-ಭಯಂಕರರು, ನಿಷ್ಠುರರು-ಧೃಢ ಮನಸ್ಸಿನವರು, ಕಠಿಣಸ್ವ್ಪಭಾವದವರು,
ಟಿಪ್ಪನೀ (ಕ.ಗ.ಪ)
- ವಜ್ರಾಭಿಘಾತ- ಹಿಂದೆ ಬೆಟ್ಟಗಳಿಗೆ ರೆಕ್ಕೆಗಳಿದ್ದುವು. ಋಷಿಗಳು ಯಜ್ಞ - ಯಾಗಗಳನ್ನು ಮಾಡುತ್ತಿದ್ದಾಗ ಹಾರಿ ಹೋಗಿ ಹೋಮಕುಂಡಗಳ ಮೇಲೆ ಕುಳಿತು ಯಜ್ಞನಾಶ ಮಾಡುತ್ತಿದ್ದುವು. ಇಂದ್ರ, ದಧೀಚಿ ಮುನಿಯ ಮೂಳೆಗಳಿಂದ ವಜ್ರಾಯುಧವನ್ನು ಮಾಡಿಕೊಂಡು ಬೆಟ್ಟಗಳ ರೆಕ್ಕೆಗಳನ್ನು ಕಡಿದು ಹಾಕಿದ. ವಜ್ರಾಘಾತವೆಂದರೆ ಇಂತಹ ಭಯಂಕರವಾದ ಹೊಡೆತ.
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ಕೈ
ಮೇಳವಿಸಿದರು ವಿಷಮ ಸಮರಕ
ರಾಳರೋಷಶ್ವ್ವಾಸಧೂಮಳಮುಖಭಯಂಕರರು
ಚಾಳನದ ಚೌಪಟರು ಶಸ್ತ್ರಾ
ಸ್ಫಾಳನದ ವಜ್ರಾಭಿಘಾತಾ
ಭೀಳನಿಷ್ಠುರರೊದಗಿದರು ಕೌರವ ವೃಕೋದರರು ॥1॥
೦೦೨ ಹಳಚಿದರು ಸುಳಿ ...{Loading}...
ಹಳಚಿದರು ಸುಳಿ ಗಾಳಿಯಂತಿರೆ
ಸುಳಿದು ಖಗಪತಿಯಂತೆ ಹೊಯ್ಲಲಿ
ಬಳಸಿ ಬಿಗಿದೆರಗಿದರು ಬಿಡೆಯದ ಮತ್ತಗಜದಂತೆ
ಅಳುವಿದರು ಶಿಖಿಯಂತೆ ಚೂರಿಸಿ
ನಿಲುಕಿದರು ಫಣಿಯಂತೆ ಪಯಮೈ
ಲುಳಿಯಲೊಲೆದರು ಪಾದರಸದಂದದಲಿ ಪಟುಭಟರು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಳಿಗಾಳಿಯ ರೀತಿಯಲ್ಲಿ ಹೊಯ್ದರು. ಗರುಡ ಮೇಲಿನಿಂದ ಹಾರಿ ಬೀಳುವಂತೆ ಹೊಡೆದು ಓಡಾಡಿದರು. ಬಳಸಿ ಬಿಗಿದುಕೊಂಡು ಅಟ್ಟಹಾಸದಿಂದ ಮದಿಸಿದ ಆನೆಯಂತೆ ಒಬ್ಬರ ಮೇಲೊಬ್ಬರು ಬಿದ್ದರು. ಅಗ್ನಿಯಂತೆ ಒಳಗೊಳಗೇ ಕನಲುವಂತೆ ಮಾಡಿದರು. ಸರ್ಪದಂತೆ ಮೈಯ್ಯನ್ನು ನೀಳವಾಗಿಸಿಕೊಂಡು ಒಬ್ಬರನ್ನೊಬ್ಬರು ಹಿಡಿದರು, ಈ ವೀರ ಭಟರುಗಳು ಕಾಲುಗಳ ಚಾತುರ್ಯದ ಚಲನೆಯಿಂದ ದೇಹವನ್ನು ಪಾದರಸದಂತೆ ನಿಂತಲ್ಲಿ ನಿಲ್ಲದೆ ಓಡಾಡಿಸಿದರು.
ಪದಾರ್ಥ (ಕ.ಗ.ಪ)
ಹಳಚು-ಹಣಚು, ಹೊಯ್,ಹೊಡೆ, ಖಗಪತಿ-ಗರುಡ, ಹೊಯ್ಲು-ಹೊಡೆತ, ಬಿಡೆಯ-ಅಟ್ಟಹಾಸ, ಅಳುವು-ಒಳಗೇ ಕನಲುವುದು, ಶಿಖಿ-ಅಗ್ನಿ, ಚೂರಿಸು-ಚುಚ್ಚು ನಿಗುರು, ಉದ್ದಮಾಡು, ನಿಲುಕು-ಕಷ್ಟದಿಂದ ನಿಗುರಿ ಮುಟ್ಟುವುದು, ಪಯಮೈ-ಕಾಲು ಮೈ, ಲುಳಿ-ಚುರುಕಿನ ಚಲನೆ, ವೇಗ, ಚಾತುರ್ಯ.
ಮೂಲ ...{Loading}...
ಹಳಚಿದರು ಸುಳಿ ಗಾಳಿಯಂತಿರೆ
ಸುಳಿದು ಖಗಪತಿಯಂತೆ ಹೊಯ್ಲಲಿ
ಬಳಸಿ ಬಿಗಿದೆರಗಿದರು ಬಿಡೆಯದ ಮತ್ತಗಜದಂತೆ
ಅಳುವಿದರು ಶಿಖಿಯಂತೆ ಚೂರಿಸಿ
ನಿಲುಕಿದರು ಫಣಿಯಂತೆ ಪಯಮೈ
ಲುಳಿಯಲೊಲೆದರು ಪಾದರಸದಂದದಲಿ ಪಟುಭಟರು ॥2॥
೦೦೩ ಎರಗಿದರು ಸಿಡಿಲನ್ತೆ ...{Loading}...
ಎರಗಿದರು ಸಿಡಿಲಂತೆ ಮಿಂಚಿನ
ಮಿರುಗಿನಂತಿರೆ ಹೊಳೆದು ಹಜ್ಜೆಯ
ಹೆರದೆಗೆದು ಹಾಯಿದರು ತಗರಂದದಲಿ ತವಕದಲಿ
ಇರುಕಿದರು ಗ್ರಹದಂತೆ ಮಿಗೆ ಮು
ಕ್ಕುರುಕಿದರು ಮುಗಿಲಂತೆ ರೋಷಕೆ
ನೆರೆಯದಿಬ್ಬರ ಮನವೆನಲು ಹೊಯ್ದಾಡಿದರು ಭಟರು ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಡಿಲಿನಂತೆ ಎರಗಿದರು. ಮಿಂಚಿನ ಪ್ರಕಾಶದಂತೆ ಹೊಳೆದು, ಹೆಜ್ಜೆಯನ್ನು ಹೊರತೆಗೆದು ಚಾತುರ್ಯದಿಂದ ತಗರಿನಂತೆ ಮೇಲೆ ಬಿದ್ದರು. ಗ್ರಹಗಳಂತೆ ಇರುಕಿದರು. ಮೋಡಗಳಂತೆ ಶಕ್ತಿಯನ್ನೆಲ್ಲ ಬಳಸಿ ಮುತ್ತಿದರು. ಇಬ್ಬರ ಮನಸ್ಸುಗಳಲ್ಲಿಯೂ ತುಂಬಿ ತುಳುಕುತ್ತಿದ್ದ ರೋಷದಿಂದ ಇಬ್ಬರೂ ಭಟರು ಹೊಡೆದಾಡಿದರು.
ಪದಾರ್ಥ (ಕ.ಗ.ಪ)
ಮಿರುಗು-ಹೊಳೆ, ಪ್ರಕಾಶಿಸು, ಹೆರದೆಗೆ-ಹಿಂದೆಗೆ, ಹಿಂದಿಡು, ಇರುಕು-ಬಲವಂತವಾಗಿ ಸೇರುವುದು, ಮುಕ್ಕುರುಕು-ಶಕ್ತಿಯನ್ನೆಲ್ಲಾ ಬಳಸು, ಮುತ್ತಿಕೊಳ್ಳು, ನೆರೆ-ಭರ್ತಿಯಾಗು, ತುಂಬು, ಸಾಕಾಗು.
ಮೂಲ ...{Loading}...
ಎರಗಿದರು ಸಿಡಿಲಂತೆ ಮಿಂಚಿನ
ಮಿರುಗಿನಂತಿರೆ ಹೊಳೆದು ಹಜ್ಜೆಯ
ಹೆರದೆಗೆದು ಹಾಯಿದರು ತಗರಂದದಲಿ ತವಕದಲಿ
ಇರುಕಿದರು ಗ್ರಹದಂತೆ ಮಿಗೆ ಮು
ಕ್ಕುರುಕಿದರು ಮುಗಿಲಂತೆ ರೋಷಕೆ
ನೆರೆಯದಿಬ್ಬರ ಮನವೆನಲು ಹೊಯ್ದಾಡಿದರು ಭಟರು ॥3॥
೦೦೪ ಗದೆಗದೆಯ ಹೊಯ್ಲುಗಳ ...{Loading}...
ಗದೆಗದೆಯ ಹೊಯ್ಲುಗಳ ಖಣಿಖಟಿ
ಲೊದಗಿತಿಬ್ಬರ ಬೊಬ್ಬೆ ಭುವನವ
ಬೆದರಿಸಿತು ಪದಥಟ್ಟಣೆಯ ಘಟ್ಟಣೆಯ ಘಾತಿಯಲಿ
ಅದಿರಿತಿಳೆ ಮಝ ಭಾಪು ಭಟರೆಂ
ದೊದರಿತಾ ಪರಿವಾರದಬ್ಬರ
ತ್ರಿದಶನಿಕರದ ಸಾಧುರವವಂಜಿಸಿತು ಮೂಜಗವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗದೆ - ಗದೆಯ ಹೊಡೆತಗಳಿಂದ ಖಣಿಖಟಿಲುಗಳೆಂದ ಶಬ್ದ ಹೊಮ್ಮಿತು. ಇವರಿಬ್ಬರ ಬೊಬ್ಬೆಯು ಭೂಮಿಯನ್ನೇ ಹೆದರಿಸಿತು. ಪಾದಗಳಿಂದ ನೆಲವನ್ನು ಮೆಟ್ಟಿದ ಘಾತದಿಂದ ಭೂಮಿ ಅದುರಿತು. ಮಝ ಭಾಪು ಶ್ರೇಷ್ಠಭಟರು - ಎಂದು ಪರಿವಾರದವರು ಉದ್ಗಾರದ ಧ್ವನಿ ತೆಗೆದರು. ದೇವತೆಗಳ ಸಮೂಹದ ‘ಸಾಧು’ವೆಂಬ ಶಬ್ದ ಮೂರು ಲೋಕಗಳನ್ನು ಹೆದರಿಸಿತು.
ಪದಾರ್ಥ (ಕ.ಗ.ಪ)
ಭುವನ-ಭೂಮಿ, ಲೋಕ, ಪದಥಟ್ಟಣೆ-ಪಾದಗಳಿಂದ ನೆಲವನ್ನು ಅಪ್ಪಳಿಸುವುದು, ಘಾತಿ-ಹೊಡೆತ, ತ್ರಿದಶರು-ದೇವತೆಗಳು, ಬಾಲ್ಯ, ಕೌಮಾರ್ಯ-ಯೌವನವೆಂಬ ಮೂರುಸ್ಥಿತಿಗಳಿಲ್ಲದವರು, ಮುಪ್ಪಿಲ್ಲದವರು, ಸಾಧುರವ-ಸಾಧು ಎಂಬ ಶಬ್ದ.
ಮೂಲ ...{Loading}...
ಗದೆಗದೆಯ ಹೊಯ್ಲುಗಳ ಖಣಿಖಟಿ
ಲೊದಗಿತಿಬ್ಬರ ಬೊಬ್ಬೆ ಭುವನವ
ಬೆದರಿಸಿತು ಪದಥಟ್ಟಣೆಯ ಘಟ್ಟಣೆಯ ಘಾತಿಯಲಿ
ಅದಿರಿತಿಳೆ ಮಝ ಭಾಪು ಭಟರೆಂ
ದೊದರಿತಾ ಪರಿವಾರದಬ್ಬರ
ತ್ರಿದಶನಿಕರದ ಸಾಧುರವವಂಜಿಸಿತು ಮೂಜಗವ ॥4॥
೦೦೫ ಬೆರಳ ತೂಗಿದನಡಿಗಡಿಗೆ ...{Loading}...
ಬೆರಳ ತೂಗಿದನಡಿಗಡಿಗೆ ಹಲ
ಧರನುದಗ್ರಗದಾ ವಿಧಾನಕೆ
ಶಿರವನೊಲೆದನು ಶೌರಿ ಮಿಗೆ ಮೆಚ್ಚಿದನು ಯಮಸೂನು
ವರ ಗದಾಯುಧ ವಿವಿಧ ಸತ್ವಕೆ
ಪರಮಜೀವವಿದೆಂದನರ್ಜುನ
ನರರೆ ಮಝರೇ ರಾವು ಜಾಗೆಂದುದು ಭಟವ್ರಾತ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠವಾದ ಗದಾಯುದ್ಧದ ಕ್ರಮಕ್ಕೆ ಬಲರಾಮನು ಬೆರಳನ್ನು ಆಡಿಸಿ ಆಶ್ವರ್ಯಪಟ್ಟ, ಕೃಷ್ಣ ತಲೆದೂಗಿದ, ಧರ್ಮರಾಯ ಮೆಚ್ಚಿಗೆ ಸೂಚಿಸಿದ. ಗದಾಯುದ್ಧದ ಬಗೆಬಗೆಯ ಸತ್ವಕ್ಕೆ ಇದೇ ಪರಮಸಾಧನೆಯೆಂದು ಅರ್ಜುನ ಹೊಗಳಿದ. ಅರರೆ, ಮಝರೇ, ರಾವು, ಜಾಗು, ಎಂದು ವೀರರುಗಳು ಹೊಗಳುತ್ತಿದ್ದರು.
ಪದಾರ್ಥ (ಕ.ಗ.ಪ)
ಉದಗ್ರ-ಭಯಂಕರ, ಶ್ರೇಷ್ಠ, ಎತ್ತರ, ಪರಮಜೀವವಿದು-ಅತಿಶ್ರೇಷ್ಠ ಸಾಧನೆ,
ಜೀವಾಳ, ಅರರೆ, ಮಝರೇ, ರಾವು, ಜಾಗು - ಹೊಗಳಿಕೆಯ, ಆಶ್ಚರ್ಯದ ಉದ್ಗಾರಗಳು.
ಮೂಲ ...{Loading}...
ಬೆರಳ ತೂಗಿದನಡಿಗಡಿಗೆ ಹಲ
ಧರನುದಗ್ರಗದಾ ವಿಧಾನಕೆ
ಶಿರವನೊಲೆದನು ಶೌರಿ ಮಿಗೆ ಮೆಚ್ಚಿದನು ಯಮಸೂನು
ವರ ಗದಾಯುಧ ವಿವಿಧ ಸತ್ವಕೆ
ಪರಮಜೀವವಿದೆಂದನರ್ಜುನ
ನರರೆ ಮಝರೇ ರಾವು ಜಾಗೆಂದುದು ಭಟವ್ರಾತ ॥5॥
೦೦೬ ತಿವಿದನವನಿಪನನಿಲತನುಜನ ಕವಚ ...{Loading}...
ತಿವಿದನವನಿಪನನಿಲತನುಜನ
ಕವಚ ಬಿರಿದುದು ಕಯ್ಯೊಡನೆ ರಣ
ದವಕಿ ಕೈದೋರಿದನು ಕೌರವನೃಪನ ವಕ್ಷದಲಿ
ಸವಗ ಸೀಳಿತು ಮರಳಿ ಹೊಯ್ದನು
ಪವನಜನ ಸೀಸಕದ ವರಮಣಿ
ನಿವಹ ಸಿಡಿದವು ಸಿಡಿಲು ಮೆಟ್ಟಿದ ಮೇರುಗಿರಿಯಂತೆ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಗದೆಯಿಂದ ತಿವಿಯಲು ಭೀಮನ ಕವಚ ಸೀಳಿತು. ಕೂಡಲೇ ರಣಾಕಾಂಕ್ಷಿಯಾದ ಭೀಮ ಕೌರವನ ಎದೆಗೆ ಹೊಡೆದ, ಅವನ ಕವಚ ಸೀಳಿತು. ಪುನಃ ದುರ್ಯೋಧನ ಹೊಡೆದ. ಸಿಡಿಲು ಹೊಡೆದ ಮೇರು ಪರ್ವತದಂತೆ, ಭೀಮನ ಶಿರಸ್ತ್ರಾಣದ ಮಣಿಗಳು ಚಲ್ಲಾಡಿದವು.
ಪದಾರ್ಥ (ಕ.ಗ.ಪ)
ರಣದವಕಿ-ಯುದ್ಧದ ಉತ್ಸಾಹದಲ್ಲಿರುವವನು, ರಣಾಕಾಂಕ್ಷಿ, ಸವಗ-ಕವಚ, ಸೀಸಕ-ತಲೆಯ ರಕ್ಷಾಕವಚ, ಶಿರಸ್ತ್ರಾಣ.
ಮೂಲ ...{Loading}...
ತಿವಿದನವನಿಪನನಿಲತನುಜನ
ಕವಚ ಬಿರಿದುದು ಕಯ್ಯೊಡನೆ ರಣ
ದವಕಿ ಕೈದೋರಿದನು ಕೌರವನೃಪನ ವಕ್ಷದಲಿ
ಸವಗ ಸೀಳಿತು ಮರಳಿ ಹೊಯ್ದನು
ಪವನಜನ ಸೀಸಕದ ವರಮಣಿ
ನಿವಹ ಸಿಡಿದವು ಸಿಡಿಲು ಮೆಟ್ಟಿದ ಮೇರುಗಿರಿಯಂತೆ ॥6॥
೦೦೭ ಅಡಿಗಡಿಗೆ ಕರ್ಪುರದ ...{Loading}...
ಅಡಿಗಡಿಗೆ ಕರ್ಪುರದ ಕವಳವ
ನಡಸಿದರು ತಾಳಿಗೆಗೆ ಬಳಿಕಡಿ
ಗಡಿಗೆ ಹೆರಸಾರಿದರು ಸಮರಶ್ರಮನಿವಾರಣಕೆ
ಕಡುಹು ತಳಿತುದು ಪೂತು ಫಲವಾ
ಯ್ತಡಿಗಡಿಗೆ ಮಚ್ಚರದ ಮಸಕದ
ತಡಿಕೆವಲೆ ನುಗ್ಗಾಯ್ತು ಮನ ಕುರುಪತಿಯ ಪವನಜನ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಜ್ಜೆಹೆಜ್ಜೆಗೆ ಕರ್ಪೂರಮಿಶ್ರಿತ ತಾಂಬೂಲವನ್ನು ನಾಲಗೆಯ ಮೇಲಿಟ್ಟುಕೊಂಡರು. ಯುದ್ಧ ಶ್ರಮವನ್ನು ನಿವಾರಣೆ ಮಾಡಿಕೊಳ್ಳಲು ವಿಶ್ರಾಂತಿಗಾಗಿ ದೂರ ಸರಿದರು. ಅಡಿಗಡಿಗೆ ಪರಾಕ್ರಮ ಪುನಃ ಚಿಗುರಿ, ಹೂವಾಗಿ ಫಲವಾಯಿತು. ಭೀಮದುರ್ಯೋಧನರ ನಡುವಿನ ಮನದ ಮತ್ಸರದ ವಿಜೃಂಭಣೆಯ ತಡಿಕೆಯ ಗೋಡೆಯು ನುಗ್ಗಾಯಿತು (ಇಬ್ಬರ ಮತ್ಸರಗಳೂ ಪರಸ್ಪರ ಸ್ಪರ್ಧಿಸಿದುವು.)
ಪದಾರ್ಥ (ಕ.ಗ.ಪ)
ಕವಳ-ತಾಂಬೂಲ, ಎಲೆಯಡಿಕೆ, ಅಡಸು-ತಿನ್ನುವುದು, ತಾಳಿಗೆ-ನಾಲಗೆ, ಗಂಟಲು, ಹೆರಸಾರು-ಪಕ್ಕಕ್ಕೆ ಸರಿ, ದೂರಕ್ಕೆ ಸರಿ, ಕಡುಹು-ಪರಾಕ್ರಮ, ತಳಿ-ಚುಮುಕಿಸು, ಪೂತು-ಹೂತು, ಹೂವಾಗಿ, ಮಚ್ಚರ-ಮತ್ಸರ, ಹೊಟ್ಟೆ ಕಿಚ್ಚು, ಮಸಕ-ವಿಜೃಂಭಣೆ, ವೇಗ, ಗಾಢ.
ಮೂಲ ...{Loading}...
ಅಡಿಗಡಿಗೆ ಕರ್ಪುರದ ಕವಳವ
ನಡಸಿದರು ತಾಳಿಗೆಗೆ ಬಳಿಕಡಿ
ಗಡಿಗೆ ಹೆರಸಾರಿದರು ಸಮರಶ್ರಮನಿವಾರಣಕೆ
ಕಡುಹು ತಳಿತುದು ಪೂತು ಫಲವಾ
ಯ್ತಡಿಗಡಿಗೆ ಮಚ್ಚರದ ಮಸಕದ
ತಡಿಕೆವಲೆ ನುಗ್ಗಾಯ್ತು ಮನ ಕುರುಪತಿಯ ಪವನಜನ ॥7॥
೦೦೮ ಶ್ವಾಸದಲಿ ಕಿಡಿಸಹಿತ ...{Loading}...
ಶ್ವಾಸದಲಿ ಕಿಡಿಸಹಿತ ಕರ್ಬೊಗೆ
ಸೂಸಿದವು ಕಣ್ಣಾಲಿಗಳು ಕ
ಟ್ಟಾಸುರದಿ ಕೆಂಪೇರಿದವು ಬಿಗುಹೇರಿ ಹುಬ್ಬುಗಳು
ರೋಷ ಮಿಗಲೌಡೊತ್ತಿ ಬಹಳಾ
ಭ್ಯಾಸಿಗಳು ಡಾವರಿಸಿದರು ಡೊ
ಳ್ಳಾಸವೋ ರಿಪುಸೇನೆ ಕಾಣದು ಚಿತ್ರಪಯಗತಿಯ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಸಿರಿನಲ್ಲಿ ಕರಿಯ ಹೊಗೆಯೊಂದಿಗೆ ಕಿಡಿಗಳು ಚಲ್ಲಿದುವು. ಕಣ್ಣಿನ ಗುಡ್ಡೆಗಳು ಆವೇಶದಿಂದ ಕೆಂಪಾದುವು. ಹುಬ್ಬುಗಳು ಬಿಗಿಯಾದುವು. ರೋಷ ಹೆಚ್ಚಾಗಲು ಔಡುಗಳನ್ನು ಒತ್ತಿ, ಕದನದಲ್ಲಿ ವಿಶೇಷ ಪರಿಣತಿಯನ್ನುಳ್ಳ ಈ ಇಬ್ಬರು ಹೋರಾಟ ಮಾಡಿದರು. ಇದೇನು ಕಪಟ ಯುದ್ಧವೋ ಎಂಬಂತೆ ಶತ್ರುಸೈನ್ಯವು (ಪಾಂಡವ ಸೈನ್ಯವು) ಅವರ ಚಿತ್ರಗತಿಯ ಪಾದಚಲನೆಗಳನ್ನು ಕಾಣದಾಯಿತು.
ಪದಾರ್ಥ (ಕ.ಗ.ಪ)
ಶ್ವಾಸ-ಉಸಿರಾಟದ ಗಾಳಿ, ಕಣ್ಣಾಲಿ-ಕಣ್ಣುಗುಡ್ಡೆಗಳು, ಕಟ್ಟಾಸುರ-ಆವೇಶ, ಅತಿಶಯ, ಕಠಿಣ, ರಭಸ, ಡಾವರಿಸು-ಹೋರಾಡು,
ಡೊಳ್ಳಾಸ-ಮೋಸ, ಕಪಟ, ಚಿತ್ರಪಯಗತಿ-ವಿಶೇಷವಾದ ಪಾದಗಳ ಚಲನೆ.
ಮೂಲ ...{Loading}...
ಶ್ವಾಸದಲಿ ಕಿಡಿಸಹಿತ ಕರ್ಬೊಗೆ
ಸೂಸಿದವು ಕಣ್ಣಾಲಿಗಳು ಕ
ಟ್ಟಾಸುರದಿ ಕೆಂಪೇರಿದವು ಬಿಗುಹೇರಿ ಹುಬ್ಬುಗಳು
ರೋಷ ಮಿಗಲೌಡೊತ್ತಿ ಬಹಳಾ
ಭ್ಯಾಸಿಗಳು ಡಾವರಿಸಿದರು ಡೊ
ಳ್ಳಾಸವೋ ರಿಪುಸೇನೆ ಕಾಣದು ಚಿತ್ರಪಯಗತಿಯ ॥8॥
೦೦೯ ಹೊಕ್ಕು ಕುರುಪತಿ ...{Loading}...
ಹೊಕ್ಕು ಕುರುಪತಿ ಭೀಮಸೇನನ
ನಿಕ್ಕಿದನು ಕಂದದಲಿ ಗದೆಯನು
ಸೆಕ್ಕಿದನು ವಾಮಾಂಗದಲಿ ಪವಮಾನನಂದನನ
ಜಕ್ಕುಲಿಸಿದವೊಲಾಯ್ತು ಜರೆದು ನ
ಭಕ್ಕೆ ಪುಟನೆಗೆದನಿಲಜನ ಸೀ
ಸಕ್ಕೆ ಹೊಯ್ದಾರಿದನು ಕೌರವನೃಪತಿ ಖಾತಿಯಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ, ಭೀಮನ ಸಮೀಪಕ್ಕೆ ಬಂದು ಅವನ ಹೆಗಲಿಗೆ ಗದೆಯನ್ನು ಹೊಡೆದ. ಭೀಮನ ಎಡಭಾಗವನ್ನು ಗದೆಯಿಂದ ಘಾತಿಸಿದನು. ದುರ್ಯೋಧನನ ಸಂತೋಷ ಹೆಚ್ಚಿದಂತಾಯ್ತು. ಆಕಾಶಕ್ಕೆ ಪುಟನೆಗೆದು ಮೂದಲಿಸಿ ಭೀಮನ ಶಿರಸ್ತ್ರಾಣಕ್ಕೆ ಹೊಡೆದು ದುರ್ಯೋಧನ ಕೋಪದಿಂದ ಆರ್ಭಟಿಸಿದ.
ಪದಾರ್ಥ (ಕ.ಗ.ಪ)
ಕಂದ-ಹೆಗಲು, ಭ್ರೂಮಧ್ಯ, ಸೆಕ್ಕು-ನಾಟಿಸು, ಸಿಕ್ಕಿಸು, ವಾಮಾಂಗ-ದೇಹದ ಎಡಭಾಗ, ಜಕ್ಕುಲಿಸು-ಸಂತೋಷಿಸು, ಜರೆದು- ನಿಂದಿಸಿ, ನಭ-ಆಕಾಶ, ಪುಟನೆಗೆ-ಚಿಮ್ಮು, ಹಾರು, ಸೀಸ-ಶಿರಸ್ತ್ರಾಣ, ಸೀಸಕ, ಖಾತಿ-ಕೋಪ.
ಮೂಲ ...{Loading}...
ಹೊಕ್ಕು ಕುರುಪತಿ ಭೀಮಸೇನನ
ನಿಕ್ಕಿದನು ಕಂದದಲಿ ಗದೆಯನು
ಸೆಕ್ಕಿದನು ವಾಮಾಂಗದಲಿ ಪವಮಾನನಂದನನ
ಜಕ್ಕುಲಿಸಿದವೊಲಾಯ್ತು ಜರೆದು ನ
ಭಕ್ಕೆ ಪುಟನೆಗೆದನಿಲಜನ ಸೀ
ಸಕ್ಕೆ ಹೊಯ್ದಾರಿದನು ಕೌರವನೃಪತಿ ಖಾತಿಯಲಿ ॥9॥
೦೧೦ ಬಾಯೊಳೊಕ್ಕುದು ರುಧಿರ ...{Loading}...
ಬಾಯೊಳೊಕ್ಕುದು ರುಧಿರ ಕಂಗಳ
ದಾಯ ತಪ್ಪಿತು ಡೆಂಢಣಿಸಿ ಕಲಿ
ವಾಯುಸುತನಪ್ಪಳಿಸಿ ಬಿದ್ದನು ಕಯ್ಯ ಗದೆ ಕಳಚಿ
ಹಾಯೆನುತ ತನ್ನವರು ಭಯದಲಿ
ಬಾಯ ಬಿಡೆ ನಿಮಿಷಾರ್ಧದಲಿ ನಿರ
ಪಾಯನೆದ್ದನು ನೋಡಿದನು ಚೇತರಿಸಿ ಕೆಲಬಲನ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಬಾಯಿಂದ ರಕ್ತ ಚಿಮ್ಮಿತು, ಕಣ್ಣುಗಳ ಚೈತನ್ಯ ತಪ್ಪಿತು. ತತ್ತರಿಸಿದ ಭೀಮನ ಕೈಯ ಗದೆ ಕಳಚಿ ಬಿದ್ದು ಅಪ್ಪಳಿಸಿ ನೆಲಕ್ಕೆ ಬಿದ್ದ. ತನ್ನ ಪಕ್ಷದವರು ‘ಅಯ್ಯೋ’ ಎನ್ನುತ್ತ ಭಯದಲ್ಲಿ ಬಾಯಿ ಬಿಡುತ್ತಿರಲು ಅರೆನಿಮಿಷದಲ್ಲಿ ಯಾವುದೇ ಅಪಾಯವೂ ಆಗಿರದ ಭೀಮನು ಎದ್ದು ಚೇತರಿಸಿಕೊಂಡು ಅಕ್ಕ ಪಕ್ಕಗಳಲ್ಲಿ ದೃಷ್ಟಿಹಾಯಿಸಿ ನೋಡಿದ.
ಪದಾರ್ಥ (ಕ.ಗ.ಪ)
ಒಕ್ಕುದು-ಚೆಲ್ಲಿತು, ದಾಯ-ಚೈತನ್ಯ, ಡೆಂಢಣಿಸು-ತತ್ತರಿಸು, ಕಂಗೆಡು, ಬೆಚ್ಚು, ಶಕ್ತಿಗುಂದು.
ಮೂಲ ...{Loading}...
ಬಾಯೊಳೊಕ್ಕುದು ರುಧಿರ ಕಂಗಳ
ದಾಯ ತಪ್ಪಿತು ಡೆಂಢಣಿಸಿ ಕಲಿ
ವಾಯುಸುತನಪ್ಪಳಿಸಿ ಬಿದ್ದನು ಕಯ್ಯ ಗದೆ ಕಳಚಿ
ಹಾಯೆನುತ ತನ್ನವರು ಭಯದಲಿ
ಬಾಯ ಬಿಡೆ ನಿಮಿಷಾರ್ಧದಲಿ ನಿರ
ಪಾಯನೆದ್ದನು ನೋಡಿದನು ಚೇತರಿಸಿ ಕೆಲಬಲನ ॥10॥
೦೧೧ ಹೆದರು ಹಿಙ್ಗಿತು ...{Loading}...
ಹೆದರು ಹಿಂಗಿತು ನೆಲಕೆ ಮಾರು
ದ್ದಿದನು ಕರವನು ಸೂಸಿ ಹಾರಿದ
ಗದೆಯ ಕೊಂಡನು ಸೆರಗಿನಲಿ ಸಂತೈಸಿ ಶೋಣಿತವ
ಅದಿರೆ ನೆಲನವ್ವಳಿಸಿ ಮೇಲ್ವಾ
ಯಿದನು ಹೊಳಹಿನ ಹೊಯ್ಲ ಹೊದ
ರೆದ್ದುದು ವಿಭಾಡಿಸಿ ಭೀಮ ಹೊಯ್ದನು ನೃಪನ ಮಸ್ತಕವ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಹೆದರಿಕೆ ಹೋಯಿತು. ಎರಡೂ ಕೈಗಳನ್ನು ನೆಲಕ್ಕೆ ಉಜ್ಜಿದ. ದೂರಕ್ಕೆ ಹಾರಿಬಿದ್ದಿದ್ದ ತನ್ನ ಗದೆಯನ್ನು ತೆಗೆದುಕೊಂಡ. ರಕ್ತವನ್ನು ಧೋತ್ರದ ಸೆರಗಿನಿಂದ ಒರೆಸಿದ. ನೆಲವು ಅದಿರುವಂತೆ ವೇಗವಾಗಿ ಮೇಲೆ ಹಾರಿದ. ಎದ್ದ ದೂಳನ್ನು ನಿವಾರಿಸಿಕೊಂಡು ಹೊಳೆಯುವ ಗದೆಯ ಹೊಡೆತದಿಂದ ಕಿಡಿಗಳು ಚದುರುವಂತೆ ಭೀಮ ದುರ್ಯೋಧನನ ತಲೆಗೆ ಹೊಡೆದ.
ಪದಾರ್ಥ (ಕ.ಗ.ಪ)
ಹೆದರು-ಹೆದರಿಕೆ, ಹಿಂಗಿತು-ನಾಶವಾಯಿತು, ಮಾರುದ್ದು- ಉಜ್ಜುವುದು, ಶೋಣಿತ-ರಕ್ತ, ಅವ್ವಳಿಸು-ಅಪ್ಪಳಿಸು, ಮೇಲೆನೆಗೆ, ವೇಗವಾಗಿ ನೆಗೆ, ಕುಸಿದು ಬೀಳು, ವಿಭಾಡಿಸು-ನಿವಾರಿಸು
ಟಿಪ್ಪನೀ (ಕ.ಗ.ಪ)
- ‘ಮಾರುದ್ದಿ …….’ ಈ ಶಬ್ದವನ್ನು ರನ್ನಕವಿಯು ಗದಾಯುದ್ಧದ ಇದೇ ಸಂದರ್ಭದಲ್ಲಿ ಇದೇ ಅರ್ಥದಲ್ಲಿ ಉಪಯೋಗಿಸಿದ್ದಾನೆ.
“ತಿಳಿದಾಗಳ್ ನೆಱನಿಂತುಟೆಂದು ನೆಲನಂ ಮಾಱುದ್ದಿ ಕಯ್ಯಿಂ ಧರಾ -
ತಳದೊಳ್ ಸೂಸಿದ ತನ್ನ ತೀವ್ರಗದೆಯಂ ………………
ಗದಾಯುದ್ಧ ಸಂಗ್ರಹಂ: ತೀನಂಶ್ರೀ. 8-24.
ಈ ವೃತ್ತದಲ್ಲಿನ ‘ಮಾಱುದ್ದಿ ನೆಲನಂ’ ಮತ್ತು ‘ಸೂಸಿದ’ ಎಂಬೆರಡು ಶಬ್ಧಗಳೂ ಕುಮಾರವ್ಯಾಸನಲ್ಲಿಯೂ ಪ್ರಯೋಗವಾಗಿರುವುದನ್ನು ಗಮನಿಸಬಹುದು.
ಮೂಲ ...{Loading}...
ಹೆದರು ಹಿಂಗಿತು ನೆಲಕೆ ಮಾರು
ದ್ದಿದನು ಕರವನು ಸೂಸಿ ಹಾರಿದ
ಗದೆಯ ಕೊಂಡನು ಸೆರಗಿನಲಿ ಸಂತೈಸಿ ಶೋಣಿತವ
ಅದಿರೆ ನೆಲನವ್ವಳಿಸಿ ಮೇಲ್ವಾ
ಯಿದನು ಹೊಳಹಿನ ಹೊಯ್ಲ ಹೊದ
ರೆದ್ದುದು ವಿಭಾಡಿಸಿ ಭೀಮ ಹೊಯ್ದನು ನೃಪನ ಮಸ್ತಕವ ॥11॥
೦೧೨ ದೂಟಿ ಬಿದ್ದವು ...{Loading}...
ದೂಟಿ ಬಿದ್ದವು ಸೀಸಕವು ಶತ
ಕೋಟಿ ಘಾಯದ ಘಟನೆಯೊಳು ಶತ
ಕೋಟಿ ಘಾಯಕೆ ಸಿಡಿದ ಹೇಮಾಚಳದ ತುದಿಯಂತೆ
ತಾಟಿತಸು ಕಂಠದಲುಸುರ ಪರಿ
ಪಾಟಿ ತಪ್ಪಿತು ಮೃತ್ಯುವಿನ ದರ
ಚೀಟಿ ಹಿಡಿದನೊ ಹೇಳೆನಲು ಮಲಗಿದನು ಮೈಮರೆದು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೂರು ಕೋಟಿ ಬಾರಿ ಹೊಡೆತ ಬಿದ್ದಾಗ ನೂರು ಕೋಟಿ ಗಾಯಗಳಾಗಿ ಸಿಡಿದು ಬಿದ್ದ ಹೇಮಾಚಳದ ಶಿಖರದಂತೆ ದುರ್ಯೋಧನನ ಶಿರಸ್ತ್ರಾಣವು ನೆಗೆದು ಬಿದ್ದಿತು. ಅವನ ಪ್ರಾಣವು ಗಂಟಲಿಗೆ ತಾಗಿತು. ಗಂಟಲಿನಲ್ಲಿ ಉಸುರಿನ ಕ್ರಮ ತಪ್ಪಿತು. ಮೃತ್ಯುವಿನ ರಹದಾರಿ ಪತ್ರವನ್ನು ಹಿಡಿದನೋ ಎಂಬಂತೆ ದುರ್ಯೋಧನ ಮೈಮರೆದು ಬಿದ್ದ.
ಪದಾರ್ಥ (ಕ.ಗ.ಪ)
ದೂಟಿ-ನೆಗೆದು, ಹಾರಿ, ಕುಪ್ಪಳಿಸಿ, ತಾಟಿತು-ತಾಗಿತು, ಹೊಡೆಯಿತು, ಪರಿಪಾಠಿ-ನಡೆದುಬಂದ ಕ್ರಮ, ದರಚೀಟಿ-ರಹದಾರಿ ಪತ್ರ
ಟಿಪ್ಪನೀ (ಕ.ಗ.ಪ)
- ‘ಮೃತ್ಯುವಿನ ದರ ಚೇಟಿ ಹಿಡಿದನೋ…..’
ಯಮಲೋಕಕ್ಕೆ ಪ್ರವೇಶಿಸಲು ಮೃತ್ಯುವಿನ ಆಜ್ಞಾಪತ್ರವನ್ನು ಹಿಡಿದನೋ ಎಂಬಂತೆ ಮೈಮರೆದು ಬಿದ್ದ. ಸಾಯಲು ಯಮನ ಅನುಮತಿ ಪಡೆದನೆಂಬಂತೆ.
ಮೂಲ ...{Loading}...
ದೂಟಿ ಬಿದ್ದವು ಸೀಸಕವು ಶತ
ಕೋಟಿ ಘಾಯದ ಘಟನೆಯೊಳು ಶತ
ಕೋಟಿ ಘಾಯಕೆ ಸಿಡಿದ ಹೇಮಾಚಳದ ತುದಿಯಂತೆ
ತಾಟಿತಸು ಕಂಠದಲುಸುರ ಪರಿ
ಪಾಟಿ ತಪ್ಪಿತು ಮೃತ್ಯುವಿನ ದರ
ಚೀಟಿ ಹಿಡಿದನೊ ಹೇಳೆನಲು ಮಲಗಿದನು ಮೈಮರೆದು ॥12॥
೦೧೩ ಹಾರಿತೊನ್ದೆಸೆಗಾಗಿ ಗದೆ ...{Loading}...
ಹಾರಿತೊಂದೆಸೆಗಾಗಿ ಗದೆ ಮುರಿ
ದೇರಿದವು ಕಣ್ಣಾಲಿ ನೆತ್ತಿಯ
ಜೋರು ಮುಸುಕಿತು ಮುಖವನೊಂದು ವಿಘಳಿಗೆ ಮಾತ್ರದಲಿ
ಜಾರಿತಂತಸ್ತಿಮಿತ ಭಯ ಹುರಿ
ಯೇರಿತಧಿಕಕ್ರೋಧ ಕರಣದ
ತಾರುಥಟ್ಟಡಗಿದುದುಪಸರಿಸಿತಸು ನಿಜಾಂಗದಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
13 ಗದೆ ಒಂದು ದಿಕ್ಕಿಗೆ ಹಾರಿಬಿದ್ದಿತು. ಕಣ್ಣಿನ ಗುಡ್ಡೆಗಳು ತಿರುಗಿ ಮೇಲಕ್ಕೆ ಸಿಕ್ಕಿಕೊಂಡವು. ನೆತ್ತಿಯಿಂದ ಒಸರುತ್ತಿದ್ದ ರಕ್ತ ಒಂದೇ ಕ್ಷಣದಲ್ಲಿ ಮುಖವನ್ನು ಮುಚ್ಚಿತು. ಮನದೊಳಗಿನ ದೃಢತೆ ಜಾರಿ ಹೋಯಿತು. ಹೆಚ್ಚಿನ ಕ್ರೋಧ ಹುರಿಗೊಂಡಿತು. ವಿವಿಧ ಕರಣೇಂದ್ರಿಯಗಳು ನಿಶ್ಚೇಶ್ಟಿತವಾದವು. ಪ್ರಾಣವಾಯುವು ಅವನ ದೇಹದಲ್ಲಿ ಅಪಸರಿಸಿತು.
ಪದಾರ್ಥ (ಕ.ಗ.ಪ)
ಮುರಿ-ತಿರುಗು, ಏರಿದವು-ಮೇಲಕ್ಕೆ ಸಿಕ್ಕಿಕೊಂಡವು, ಜೋರು-ಜಿನುಗುವರಕ್ತ, ಹುರಿಯೇರು-ಅಧಿಕವಾಗು, ತೀಕ್ಷಣವಾಗು, ತಾರು-ಆಯಾಸ, ಒಣಗು, ಥಟ್ಟು-ಗುಂಪು, ಸೈನ್ಯ, ಒಟ್ಟಾಗಿ.
ಮೂಲ ...{Loading}...
ಹಾರಿತೊಂದೆಸೆಗಾಗಿ ಗದೆ ಮುರಿ
ದೇರಿದವು ಕಣ್ಣಾಲಿ ನೆತ್ತಿಯ
ಜೋರು ಮುಸುಕಿತು ಮುಖವನೊಂದು ವಿಘಳಿಗೆ ಮಾತ್ರದಲಿ
ಜಾರಿತಂತಸ್ತಿಮಿತ ಭಯ ಹುರಿ
ಯೇರಿತಧಿಕಕ್ರೋಧ ಕರಣದ
ತಾರುಥಟ್ಟಡಗಿದುದುಪಸರಿಸಿತಸು ನಿಜಾಂಗದಲಿ ॥13॥
೦೧೪ ನಿಮಿಷದಲಿ ಕನ್ದೆರೆದನನ್ತಃ ...{Loading}...
ನಿಮಿಷದಲಿ ಕಂದೆರೆದನಂತಃ
ಶ್ರಮದ ಝಳವಡಗಿತು ವಿಪಕ್ಷ
ಭ್ರಮಣಚೇತೋಭಾವ ಭವನದ ಮುಖವಿಕಾಸದಲಿ
ತಮದ ತನಿಮಸಕದಲಿ ಭುಜವಿ
ಕ್ರಮ ಛಡಾಳಿಸಲೆದ್ದು ಭೂಪೋ
ತ್ತಮನು ಕೊಂಡನು ಗದೆಯನನುವಾಗೆಂದನನಿಲಜನ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮಿಷದಲ್ಲಿ ದುರ್ಯೋಧನ ಕಣ್ಣುತೆರೆದ. ಅಂತರಂಗದಲ್ಲಿನ ಆಯಾಸದ ಬಿಸಿಯು ಆರಿತು. ಶತ್ರು ಪಕ್ಷದವರ ಮುಖಗಳು ಭ್ರಮಿಸುವಂತಹ ಆಶ್ವರ್ಯಪಡುವಂತಹ ಚೇತೋಭಾವದಲ್ಲಿ, ಮುಖದ ಅರಳಿಕೆಯಿಂದ, ತಮೋಗುಣದ ಹೆಚ್ಚಳದಿಂದಾಗಿ ಭುಜಗಳ ಪ್ರತಾಪವು ಒಮ್ಮೆಗೆ ಹೆಚ್ಚಾಗಲು ಭೂಪೋತ್ತಮನಾದ ದುರ್ಯೋಧನನು ಗದೆಯನ್ನು ಕೈಗೆ ತೆಗೆದುಕೊಂಡು ‘ಸಿದ್ಧನಾಗು’ ಎಂದು ಭೀಮನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಅಂತಃಶ್ರಮ-ಮಾನಸಿಕವಾದ ಆಯಾಸ, ಝಳ-ಬಿಸಿಯಗಾಳಿ, ಬಿಸಿಯ ಹೊಡೆತ, ತಮ-ತಮೋಗುಣ, ವಿಕ್ರಮ-ಪ್ರತಾಪ, ಶಕ್ತಿ, ವೀರತ್ವ, ಛಡಾಳಿಸು-ಒಮ್ಮೆಗೇ ಪ್ರಕಟಗೊಳ್ಳು, ತೀವ್ರವಾಗಿ ಪ್ರಕಟಗೊಳ್ಳು.
ಮೂಲ ...{Loading}...
ನಿಮಿಷದಲಿ ಕಂದೆರೆದನಂತಃ
ಶ್ರಮದ ಝಳವಡಗಿತು ವಿಪಕ್ಷ
ಭ್ರಮಣಚೇತೋಭಾವ ಭವನದ ಮುಖವಿಕಾಸದಲಿ
ತಮದ ತನಿಮಸಕದಲಿ ಭುಜವಿ
ಕ್ರಮ ಛಡಾಳಿಸಲೆದ್ದು ಭೂಪೋ
ತ್ತಮನು ಕೊಂಡನು ಗದೆಯನನುವಾಗೆಂದನನಿಲಜನ ॥14॥
೦೧೫ ಈಗಳನುವಾದೆನೆ ಧರಿತ್ರಿಯ ...{Loading}...
ಈಗಳನುವಾದೆನೆ ಧರಿತ್ರಿಯ
ಭಾಗವನು ಬೇಡಿದಡೆ ನೀ ಮುರಿ
ದಾಗಳನುವಾದುದು ಕಣಾ ಗದೆ ನಿನ್ನ ಕಿರುದೊಡೆಗೆ
ತಾಗಿ ನೋಡಿನ್ನೊಮ್ಮೆನುತ ಮೈ
ಲಾಗಿನಲಿ ಹೊಳೆಹೊಳೆದು ಕೈದುವ
ತೂಗಿ ತುಡುಕಿದನರಸನನು ಬೊಬ್ಬಿರಿದು ಕಲಿ ಭೀಮ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಗ ಸಿದ್ಧನಾದೆನೇ! ಭೂಮಿಯ ಭಾಗವನ್ನು ನಾವು ಬೇಡಿದಾಗ ನೀನು ಸಂಧಿಯನ್ನು ಮುರಿದಾಗಲೇ (ನೀನು ಮುಖ ತಿರುಗಿಸಿದಾಗಲೇ) ನನ್ನ ಗದೆ, ನಿನ್ನ ಕಿರುದೊಡೆಗಾಗಿ ಸಿದ್ಧವಾಯಿತು. ಇನ್ನೊಮ್ಮೆ ನನ್ನ ಮೇಲೆ ಬಿದ್ದು ನೋಡು - ಎನ್ನುತ್ತಾ ಶರೀರದ ವಿಶಿಷ್ಟ ಚಲನೆಯಿಂದ ಗದೆಯನ್ನು ತೂಗಿ, ಜೋರಾಗಿ ಆರ್ಭಟಿಸಿ, ಕಲಿಭೀಮ ದುರ್ಯೋಧನನನ್ನು ಹೊಡೆದ.
ಪದಾರ್ಥ (ಕ.ಗ.ಪ)
ಅನುವಾಗು-ಸಿದ್ಧನಾಗು, ಧರಿತ್ರಿ-ಭೂಮಿ, ಧರಣಿ, ಮುರಿ-ತಿರಸ್ಕರಿಸು, ಕಿರುದೊಡೆ-ತೊಡೆಯ ಒಳಭಾಗ, ಕಿರಿದಾದ ತೊಡೆ, ಮೈಲಾಗಿನಲಿ-ಶರೀರದ ವಿಶೇಷ ಚಲನೆಯಿಂದ, ಕೈದು-ಆಯುಧ (ಇಲ್ಲಿ ಗದೆ) ತುಡುಕು-ಬೇಗಹಿಡಿ, ಮುಟ್ಟು-ಹೊಡೆ.
ಮೂಲ ...{Loading}...
ಈಗಳನುವಾದೆನೆ ಧರಿತ್ರಿಯ
ಭಾಗವನು ಬೇಡಿದಡೆ ನೀ ಮುರಿ
ದಾಗಳನುವಾದುದು ಕಣಾ ಗದೆ ನಿನ್ನ ಕಿರುದೊಡೆಗೆ
ತಾಗಿ ನೋಡಿನ್ನೊಮ್ಮೆನುತ ಮೈ
ಲಾಗಿನಲಿ ಹೊಳೆಹೊಳೆದು ಕೈದುವ
ತೂಗಿ ತುಡುಕಿದನರಸನನು ಬೊಬ್ಬಿರಿದು ಕಲಿ ಭೀಮ ॥15॥
೦೧೬ ಉಬ್ಬಬೇಡೆಲೆ ಭೀಮ ...{Loading}...
ಉಬ್ಬಬೇಡೆಲೆ ಭೀಮ ಗದೆಯೋ
ಬೊಬ್ಬೆಯೋ ಬಲುಗೈದು ನಿನ್ನಯ
ಗರ್ಭಗಿರಿಗಿದೆ ಸಿಡಿಲೆನುತ ಹೊಯ್ದನು ವೃಕೋದರನ
ತುಬ್ಬಿದನು ಗದೆಯಿಂದ ಘಾಡಿಸಿ
ಹಬ್ಬಿದನು ಕೆಲಬಲಕೆ ಖತಿಯಲಿ
ಕೊಬ್ಬಿದರೆವೊಯ್ಲುಗಳ ದನಿ ಕಿವಿಗೆಡಿಸೆ ಮೂಜಗವ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಭೀಮ! ಅಹಂಕಾರ ಪಡಬೇಡ. ನಿನ್ನ ದೊಡ್ಡ ಆಯುಧ ಗದೆಯೋ ಅಥವಾ ಬೊಬ್ಬೆಯೋ. ನಿನ್ನ ಬೆಟ್ಟದಂತಹ ಹೊಟ್ಟೆಗೆ ಸಿಡಿಲು ಇದೇ ಎಂದು ಭೀಮನನ್ನು ಹೊಡೆದು ಉತ್ಸಾಹದಿಂದ ಗದೆಯಿಂದ ತಿವಿದು ತೀವ್ರವಾಗಿ ಕೆಲಬಲಕ್ಕೆ ಓಡಾಡುತ್ತಾ ಮಾಡಿದ ಕೋಪದ ಘರ್ಜನೆಯ ಧ್ವನಿ ಮೂರು ಲೋಕಗಳ ಕಿವಿಗಳನ್ನು ಕೆಡಿಸಿತು.
ಪದಾರ್ಥ (ಕ.ಗ.ಪ)
ಉಬ್ಬು-ಉತ್ಸಾಹಪಡು, ಅಹಂಕಾರಪಡು, ತುಬ್ಬು-ಉತ್ಸಾಹಿಸು, ಘಾಡಿಸು-ಮೇಲೆಬೀಳು, ಖತಿ-ಕೋಪ, ಅರೆವೋಯ್ಲು-ಉತ್ಸಾಹದ ಕೂಗು, ಆರ್ಭಟ, ಘರ್ಜನೆ.
ಮೂಲ ...{Loading}...
ಉಬ್ಬಬೇಡೆಲೆ ಭೀಮ ಗದೆಯೋ
ಬೊಬ್ಬೆಯೋ ಬಲುಗೈದು ನಿನ್ನಯ
ಗರ್ಭಗಿರಿಗಿದೆ ಸಿಡಿಲೆನುತ ಹೊಯ್ದನು ವೃಕೋದರನ
ತುಬ್ಬಿದನು ಗದೆಯಿಂದ ಘಾಡಿಸಿ
ಹಬ್ಬಿದನು ಕೆಲಬಲಕೆ ಖತಿಯಲಿ
ಕೊಬ್ಬಿದರೆವೊಯ್ಲುಗಳ ದನಿ ಕಿವಿಗೆಡಿಸೆ ಮೂಜಗವ ॥16॥
೦೧೭ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಭೀಮಸೇನನ
ಧರಧುರದ ಹೊಯ್ಲುಗಳ ಗದೆಯಲಿ
ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ
ಅರಸನೆರಗಿದಡನಿಲಸುತ ಪೈ
ಸರಿಸಿ ಕಳಚಿದನಾ ಕ್ಷಣದೊಳ
ಬ್ಬರಿಸಿ ಹೊಯ್ದನು ಭೀಮ ಕೌರವನೃಪನ ಕಂಧರವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರರಾಜನೇ ಕೇಳು, ಭೀಮಸೇನನ ಭೀಕರವಾದ ಹೊಡೆತಗಳಿಂದ ಗದೆಯ ರಾಶಿರಾಶಿ ಕಿಡಿಗಳು ಸೂರ್ಯಮಂಡಲವನ್ನು ಮುತ್ತಿದುವು. ದುರ್ಯೋಧನ ಮೇಲೆ ಬಿದ್ದರೆ, ಭೀಮ ಹಿಂದೆ ಸರಿದು ತಪ್ಪಿಸಿಕೊಂಡ. ತಕ್ಷಣದಲ್ಲಿ ಭೀಮ ಅಬ್ಬರಿಸಿ ದುರ್ಯೋಧನನ ಹೆಗಲಿಗೆ ಹೊಡೆದ.
ಪದಾರ್ಥ (ಕ.ಗ.ಪ)
ಧರಧುರ-ಭೀಕರ, ಭಯಂಕರ, ಘೋರ,
ಹೊಯ್ಲು-ಹೊಡೆತ, ಹೊರಳಿಗಿಡಿ-ಕಿಡಿಗಳ ಸಮೂಹ,
ಝೋಂಪಿಸು-ನಡುಗು, ಮುತ್ತುವುದು,
ಖದ್ಯೋತ-ಸೂರ್ಯ, ಮಿಂಚುಹುಳು,
ಪೈಸರಿಸು-ಹಿಂದೆಸರಿ, ಹಿಮ್ಮೆಟ್ಟು,
ಕಂಧರ-ಹೆಗಲು.
ಮೂಲ ...{Loading}...
ಧರಣಿಪತಿ ಕೇಳ್ ಭೀಮಸೇನನ
ಧರಧುರದ ಹೊಯ್ಲುಗಳ ಗದೆಯಲಿ
ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ
ಅರಸನೆರಗಿದಡನಿಲಸುತ ಪೈ
ಸರಿಸಿ ಕಳಚಿದನಾ ಕ್ಷಣದೊಳ
ಬ್ಬರಿಸಿ ಹೊಯ್ದನು ಭೀಮ ಕೌರವನೃಪನ ಕಂಧರವ ॥17॥
೦೧೮ ನೋಡಿದನು ದಣ್ಡೆಯಲಿ ...{Loading}...
ನೋಡಿದನು ದಂಡೆಯಲಿ ಲಾಗಿಸಿ
ಹೂಡಿದನು ನೃಪ ಭೀಮನಲಿ ಪಯ
ಪಾಡಿನಲಿ ಪಲ್ಲಟಿಸಿದನು ಪಡಿತಳಕೆ ಕುರುರಾಯ
ಘಾಡಿಸಿದನುಪ್ಪರದ ಘಾಯಕೆ
ಕೂಡೆ ತಗ್ಗಿದನನಿಲಸುತ ಖಯ
ಖೋಡಿಯಿಲ್ಲದೆ ಭಟರು ಹೊಯ್ದಾಡಿದರು ಖಾತಿಯಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಅವಕಾಶವನ್ನು ನೋಡಿ ಮಂಡಿಯೂರಿ ಕುಳಿತು ಗದೆಯಿಂದ ಭೀಮನನ್ನು, ಹೊಡೆದ. ಭೀಮನ ಹೆಜ್ಜೆಗಳಿಗೆ ವಿರುದ್ಧವಾಗಿ ದುರ್ಯೋಧನ ಹೆಜ್ಜೆಯನ್ನು ಬದಲಾಯಿಸಿದ. ಭೀಮನ ದೇಹದ ಮೇಲ್ಭಾಗದಲ್ಲಿ ಗಾಯ ಮೂಡಲು ದುರ್ಯೋಧನ ಎತ್ತರಕ್ಕೆ ಚಿಮ್ಮಿದರೆ ಭೀಮ ತಪ್ಪಿಸಿಕೊಳ್ಳಲು ಕೆಳಕ್ಕೆ ತಗ್ಗಿದ. ಯಾವುದೇ ರೀತಿಯ ನಿಯಮಭಂಗವಾಗದಂತೆ , ಕೋಪದಿಂದ ಭಟರು ಹೊಡೆದಾಡಿದರು.
ಪದಾರ್ಥ (ಕ.ಗ.ಪ)
ದಂಡೆ-ಮಂಡಿಯೂರಿ ಕೂರುವುದು, ಲಾಗಿಸು-ತಾಗಿಸು, ಹೊಡೆ, ಸೇರಿಸು, ಪಯಪಾಡು-ನಡಿಗೆಯ ಕ್ರಮ, ಹೆಜ್ಜೆಹಾಕುವ ರೀತಿ, ಪಲ್ಲಟಿಸು-ಬದಲಾಯಿಸು, ಬೇರೆ ಸ್ಥಳಕ್ಕೆ ನಡೆ, ಪಡಿತಳ-ಎದುರಿಗೆ, ಉಪ್ಪರ-ಉಪವರಿ(ಸಂ), ಎತ್ತರ, ಖಯಖೋಡಿ- ಕೊರತೆ, ಖಾತಿ-ಕೋಪ.
ಮೂಲ ...{Loading}...
ನೋಡಿದನು ದಂಡೆಯಲಿ ಲಾಗಿಸಿ
ಹೂಡಿದನು ನೃಪ ಭೀಮನಲಿ ಪಯ
ಪಾಡಿನಲಿ ಪಲ್ಲಟಿಸಿದನು ಪಡಿತಳಕೆ ಕುರುರಾಯ
ಘಾಡಿಸಿದನುಪ್ಪರದ ಘಾಯಕೆ
ಕೂಡೆ ತಗ್ಗಿದನನಿಲಸುತ ಖಯ
ಖೋಡಿಯಿಲ್ಲದೆ ಭಟರು ಹೊಯ್ದಾಡಿದರು ಖಾತಿಯಲಿ ॥18॥
೦೧೯ ತೊಲಗಿ ನಿನ್ದರು ...{Loading}...
ತೊಲಗಿ ನಿಂದರು ಮತ್ತೆ ಭಾರಿಯ
ಬಳಲಿಕೆಯ ಬೇಳುವೆಯ ಚಿತ್ತ
ಸ್ಖಲಿತರಂಗೀಕರಿಸಿದರು ಕರ್ಪುರದ ವೀಳೆಯವ
ಘಳಿಲನೆದ್ದರು ನಿಮಿಷಮಾತ್ರಕೆ
ಮಲೆತು ನಿಂದರು ಘಾಯಘಾತಿಯ
ಸುಳಿವನವಧಾನಿಸುತ ತೂಗಿದರಾಯುಧದ್ವಯವ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಬ್ಬರೂ ದೂರ ಸರಿದು ನಿಂತರು ಭಾರಿಯಾದ ಬಳಲಿಕೆಯಿಂದ ಬೆಂದು ಹೋದ, ಅಳಿಮನದವರಾದ ಇವರಿಬ್ಬರೂ ಪುನಃ ಕರ್ಪೂರಮಿಶ್ರಿತವಾದ ತಾಂಬೂಲವನ್ನು ಹಾಕಿಕೊಂಡರು. ನಿಮಿಷ ಮಾತ್ರದಲ್ಲಿ ಆಯಾಸಪರಿಹಾರವಾಗಿ ಘಳಿಲ್ಲನೆ ಎದ್ದರು. ಮದಿಸಿ ಯುದ್ಧಕ್ಕೆ ನಿಂತರು. ಏಟು ಬಿದ್ದ ಜಾಗಗಳನ್ನು ನೋಡುತ್ತ ತಮ್ಮ ತಮ್ಮ ಗದಾಯುಧಗಳನ್ನು ತೂಗಿದರು.
ಪದಾರ್ಥ (ಕ.ಗ.ಪ)
ಬೇಳುವೆ-ಬೆಂದುಹೋದ, ಸುಟ್ಟುಹೋದ, ಚಿತ್ತಸ್ಖಲಿತರು-ಅಳಿಮನದವರು, ಧೈರ್ಯಗೆಟ್ಟವರು, ಘಳಿಲನೆ-ಅನುಕರಣ ಶಬ್ದ, ಕೂಡಲೇ, ದಡದಡಿಸಿ, ಮಲೆತುನಿಂದರು-ಎದುರಿಸಿ ನಿಂತರು, ಘಾಯಘಾತಿ-ಏಟುಬಿದ್ದು ಘಾಯವಾದ ಸ್ಥಳ.
ಮೂಲ ...{Loading}...
ತೊಲಗಿ ನಿಂದರು ಮತ್ತೆ ಭಾರಿಯ
ಬಳಲಿಕೆಯ ಬೇಳುವೆಯ ಚಿತ್ತ
ಸ್ಖಲಿತರಂಗೀಕರಿಸಿದರು ಕರ್ಪುರದ ವೀಳೆಯವ
ಘಳಿಲನೆದ್ದರು ನಿಮಿಷಮಾತ್ರಕೆ
ಮಲೆತು ನಿಂದರು ಘಾಯಘಾತಿಯ
ಸುಳಿವನವಧಾನಿಸುತ ತೂಗಿದರಾಯುಧದ್ವಯವ ॥19॥
೦೨೦ ಲಾಗಿಸುತ ಲಳಿಯೆದ್ದು ...{Loading}...
ಲಾಗಿಸುತ ಲಳಿಯೆದ್ದು ಭೀಮನ
ತಾಗಿಸಿದನವನೀಶನಾತನ
ಭಾಗಧೇಯವನೇನನೆಂಬೆನು ಹೊಯ್ಲು ಹೊರಗಾಯ್ತು
ಬೇಗುದಿಯಲುಬ್ಬೆದ್ದು ನೃಪತಿ ವಿ
ಭಾಗಿಸಿದನನಿಲಜನ ತನುವನು
ಬೇಗದಲಿ ಕಳಚಿದನು ಪವನಜ ಪಯದ ಬವರಿಯಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆಗೆಯುತ್ತಾ, ಉತ್ಸಾಹದಿಂದ ಭೀಮನನ್ನು ದುರ್ಯೋಧನ ಹೊಡೆದ. ಅವನ ಅದೃಷ್ಟವನ್ನು ಏನು ಹೇಳಲಿ. ಹೊಡೆತ ದೇಹದಿಂದ ಹೊರಕ್ಕೆ ಬೀಸಿತು. ಕೋಪದಿಂದ ಉಬ್ಬಿದ ದುರ್ಯೋಧನ ಭೀಮನ ದೇಹ ಭಾಗವಾಗುವಂತೆ ಹೊಡೆದ. ಭೀಮ ವೇಗವಾಗಿ, ದುಂಬಿಯಂತೆ ಹೆಜ್ಜೆಹಾಕಿ ಆ ಹೊಡೆತವನ್ನು ತಪ್ಪಿಸಿಕೊಂಡ.
ಪದಾರ್ಥ (ಕ.ಗ.ಪ)
ಲಾಗಿಸು-ಹಾರು , ತಾಗಿಸು, ಹೊಡೆ, ಸೇರಿಸು, ಲಳಿ-ತಡೆಯಿಲ್ಲದ, ಉತ್ಸಾಹ, ಭಾಗದೇಯ-ಅದೃಷ್ಟ, ಪುಣ್ಯ, ಬೇಗುದಿ-ಕೋಪ, ವಿಭಾಗಿಸು-ಇಬ್ಬಾಗವಾಗುವಂತೆ ಹೊಡೆ, ಬೇರ್ಪಡಿಸು, ಪಯದ-ಕಾಲಿನ, ಬವರಿ-ಭ್ರಮರಿ, ಹೆಣ್ಣುದುಂಬಿ,
ಮೂಲ ...{Loading}...
ಲಾಗಿಸುತ ಲಳಿಯೆದ್ದು ಭೀಮನ
ತಾಗಿಸಿದನವನೀಶನಾತನ
ಭಾಗಧೇಯವನೇನನೆಂಬೆನು ಹೊಯ್ಲು ಹೊರಗಾಯ್ತು
ಬೇಗುದಿಯಲುಬ್ಬೆದ್ದು ನೃಪತಿ ವಿ
ಭಾಗಿಸಿದನನಿಲಜನ ತನುವನು
ಬೇಗದಲಿ ಕಳಚಿದನು ಪವನಜ ಪಯದ ಬವರಿಯಲಿ ॥20॥
೦೨೧ ತಪ್ಪಿಸಿದನೇ ಘಾಯವನು ...{Loading}...
ತಪ್ಪಿಸಿದನೇ ಘಾಯವನು ಫಡ
ತಪ್ಪಿಸಿನ್ನಾದಡೆಯೆನುತ ಕಡು
ದರ್ಪದಲಿ ಹೊಯ್ದನು ಸಮೀರಾತ್ಮಜನನವನೀಶ
ತಪ್ಪಿತದು ಗದೆ ತನುವ ರಕುತದ
ದರ್ಪಣದ ರಹಿಯಾಯ್ತು ಗದೆ ಮಾ
ರಪ್ಪಿತರಸನನೆನಲು ಹೊಯ್ದನು ಭಾಳದಲಿ ಭೀಮ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನ್ನ ಹೊಡೆತವನ್ನು ತಪ್ಪಿಸಿಕೊಂಡೆಯಾ, ಆದರೆ ಈಗ ತಪ್ಪಿಸಿಕೋ - ಎನ್ನುತ್ತಾ ದರ್ಪದಿಂದ ರಾಜನು ಭೀಮನನ್ನು ಹೊಡೆದನು. ಗದೆಯ ಆ ಹೊಡೆತವೂ ತಪ್ಪಿತು. ರಾಜನನ್ನು ಗದೆಯು ಎದುರಿನಿಂದ ಅಪ್ಪಿತೋ ಎಂಬಂತೆ ಭೀಮ ಅವನ ಹಣೆಗೆ ಹೊಡೆಯಲು ರಕ್ತಸಿಕ್ತವಾದ ಅವನ ಗದೆ ಕನ್ನಡಿಯಂತೆ ಕಾಣುತ್ತಿತ್ತು.
ಪದಾರ್ಥ (ಕ.ಗ.ಪ)
ಘಾಯ-ಹೊಡೆತ, ಸಮೀರಾತ್ಮಜ-ವಾಯುಪತ್ರ, ಭೀಮ, ರಹಿ- ರೀತಿ, ಭಾಳ-ಹಣೆ.
ಮೂಲ ...{Loading}...
ತಪ್ಪಿಸಿದನೇ ಘಾಯವನು ಫಡ
ತಪ್ಪಿಸಿನ್ನಾದಡೆಯೆನುತ ಕಡು
ದರ್ಪದಲಿ ಹೊಯ್ದನು ಸಮೀರಾತ್ಮಜನನವನೀಶ
ತಪ್ಪಿತದು ಗದೆ ತನುವ ರಕುತದ
ದರ್ಪಣದ ರಹಿಯಾಯ್ತು ಗದೆ ಮಾ
ರಪ್ಪಿತರಸನನೆನಲು ಹೊಯ್ದನು ಭಾಳದಲಿ ಭೀಮ ॥21॥
೦೨೨ ವಟ್ಟಿ ಮುರಿದುದು ...{Loading}...
ವಟ್ಟಿ ಮುರಿದುದು ಸೀಸಕದ ಗದೆ
ನಟ್ಟುದರಸನ ನೊಸಲ ರುಧಿರದ
ಕಟ್ಟೆಯೊಡೆದಂದದಲಿ ಕವಿದುದು ನೃಪನ ತನು ನನೆಯೆ
ಕೊಟ್ಟ ಘಾಯಕೆ ಬಳಲಿ ಮರವೆಗೆ
ಬಿಟ್ಟು ಮನವನು ನಿಮಿಷದಲಿ ಜಗ
ಜಟ್ಟಿ ಕೌರವರಾಯ ಕೊಂಡನು ನಿಜಗದಾಯುಧವ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಸೀಸಕದ ಪಟ್ಟೆ ಮುರಿದು ಹೋಯಿತು. ಗದೆಯು ರಾಜನ ಹಣೆಗೆ ನಾಟಿಕೊಂಡಿತು. ರಕ್ತದ ಕಟ್ಟೆಯೊಡೆದಂತಾಗಿ, ಅವನ ದೇಹವೆಲ್ಲ ನೆನೆದು ರಕ್ತದಲ್ಲಿ ಮುಚ್ಚಿಹೋಯಿತು. ಭೀಮ ಕೊಟ್ಟ ಹೊಡೆತಕ್ಕೆ ಬಳಲಿ ಮನಸ್ಸನ್ನು ಮರವೆಗೆ ಕೊಟ್ಟನು. ಪುನಃ ಒಂದೇ ನಿಮಿಷದಲ್ಲಿ ಜಗಜಟ್ಟಿ ಕೌರವರಾಯನು ತನ್ನ ಗದಾಯುಧವನ್ನು ಕೈಗೆ ತೆಗೆದುಕೊಂಡ.
ಪದಾರ್ಥ (ಕ.ಗ.ಪ)
ವಟ್ಟಿ-ಪಟ್ಟಿ, ಸೀಸಕ-ಶಿರಸ್ತ್ರಾಣ, ನೊಸಲು-ಹಣೆ, ರುಧಿರ-ರಕ್ತ, ಕವಿದುದು-ಮುಚ್ಚಿತು, ಘಾಯ-ಹೊಡೆತ.
ಮೂಲ ...{Loading}...
ವಟ್ಟಿ ಮುರಿದುದು ಸೀಸಕದ ಗದೆ
ನಟ್ಟುದರಸನ ನೊಸಲ ರುಧಿರದ
ಕಟ್ಟೆಯೊಡೆದಂದದಲಿ ಕವಿದುದು ನೃಪನ ತನು ನನೆಯೆ
ಕೊಟ್ಟ ಘಾಯಕೆ ಬಳಲಿ ಮರವೆಗೆ
ಬಿಟ್ಟು ಮನವನು ನಿಮಿಷದಲಿ ಜಗ
ಜಟ್ಟಿ ಕೌರವರಾಯ ಕೊಂಡನು ನಿಜಗದಾಯುಧವ ॥22॥
೦೨೩ ಘಾಯಗತಿ ಲೇಸಾಯ್ತು ...{Loading}...
ಘಾಯಗತಿ ಲೇಸಾಯ್ತು ಪೂತುರೆ
ವಾಯುಸುತ ದಿಟ ಸೈರಿಸೆನ್ನಯ
ಘಾಯವನು ಘೋರಪ್ರಹಾರಸಹಿಷ್ಣು ಗಡ ನೀನು
ಕಾಯಲಾಪಡೆ ಫಲುಗುಣನನಬು
ಜಾಯತಾಕ್ಷನ ಕರೆಯೆನುತ ಕುರು
ರಾಯನೆರಗಿದನನಿಲಜನ ಕರ್ಣಪ್ರದೇಶದಲಿ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಹೊಡೆತದ ಕ್ರಮ ಚನ್ನಾಗಿದೆ, ಭಲೇ! ಭೀಮ ನನ್ನ ಹೊಡೆತವನ್ನು ಸೈರಿಸು, ನೀನು ಘೋರ ಪ್ರಹಾರವನ್ನು ಸಹಿಸುವವನಲ್ಲವೇ! ನಿನ್ನನ್ನು ರಕ್ಷಿಸಲು ಸಾಧ್ಯವಾಗುವುದಾದರೆ ಅರ್ಜುನನನ್ನು ಕೃಷ್ಣನನ್ನು ಕರೆಯೆನ್ನುತ್ತ, ದುರ್ಯೋಧನ ಭೀಮನ ಕಿವಿಯ ಪ್ರದೇಶ (ಕಪೋಲ)ದಲ್ಲಿ ಎರಗಿದ - (ಹೊಡೆದ).
ಮೂಲ ...{Loading}...
ಘಾಯಗತಿ ಲೇಸಾಯ್ತು ಪೂತುರೆ
ವಾಯುಸುತ ದಿಟ ಸೈರಿಸೆನ್ನಯ
ಘಾಯವನು ಘೋರಪ್ರಹಾರಸಹಿಷ್ಣು ಗಡ ನೀನು
ಕಾಯಲಾಪಡೆ ಫಲುಗುಣನನಬು
ಜಾಯತಾಕ್ಷನ ಕರೆಯೆನುತ ಕುರು
ರಾಯನೆರಗಿದನನಿಲಜನ ಕರ್ಣಪ್ರದೇಶದಲಿ ॥23॥
೦೨೪ ಎಡದ ದಣ್ಡೆಯೊಳೊತ್ತಿ ...{Loading}...
ಎಡದ ದಂಡೆಯೊಳೊತ್ತಿ ಹೊಯ್ಗುಳ
ಕಡುಹ ತಪ್ಪಿಸಿ ಕೌರವೇಂದ್ರನ
ಮುಡುಹ ಹೊಯ್ದನು ಭೀಮ ಮಝ ಭಾಪೆನೆ ಸುರಸ್ತೋಮ
ತಡೆದನಾ ಘಾಯವನು ಗದೆಯಲಿ
ನಡುವನಪ್ಪಳಿಸಿದನು ಭೀಮನ
ಮಿಡುಕು ನಿಂದುದು ನಗುವ ಪಾಂಡವ ಬಲದ ತಲೆ ಮಣಿಯೆ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಡಭಾಗಕ್ಕೆ ಒತ್ತಿ ಸರಿದು ಹೊಡೆತದ ಬಿರುಸನ್ನು ತಪ್ಪಿಸಿ, ಕೌರವೇಂದ್ರನ ಭುಜಕ್ಕೆ ಭೀಮ ಪ್ರಹಾರಮಾಡಿದ. ದೇವತೆಗಳ ಸಮೂಹವು ಮಝ, ಭಾಪು ಎಂದು ಹೊಗಳಿತು. ದುರ್ಯೋಧನ ಆ ಹೊಡೆತವನ್ನು ತನ್ನ ಗದೆಯಿಂದ ತಡೆದು ಭೀಮನ ಸೊಂಟಕ್ಕೆ ಅಪ್ಪಳಿಸಿದ. ಭೀಮನ ಶೌರ್ಯವೆಲ್ಲವೂ ನಿಂತು ಹೋಯಿತು. ನಗುತ್ತಿದ್ದ ಪಾಂಡವರ ಸೈನ್ಯದ ತಲೆ ಬಾಗಿದುವು.
ಪದಾರ್ಥ (ಕ.ಗ.ಪ)
ಕಡುಹು-ತೀವ್ರತೆ, ಭೀಕರತೆ, ಮುಡುಹು-ಹೆಗಲು, ನಡು-ಸೊಂಟ, ಮಿಡುಕು-ಶೌರ್ಯ, ಪರಾಕ್ರಮ
ಮೂಲ ...{Loading}...
ಎಡದ ದಂಡೆಯೊಳೊತ್ತಿ ಹೊಯ್ಗುಳ
ಕಡುಹ ತಪ್ಪಿಸಿ ಕೌರವೇಂದ್ರನ
ಮುಡುಹ ಹೊಯ್ದನು ಭೀಮ ಮಝ ಭಾಪೆನೆ ಸುರಸ್ತೋಮ
ತಡೆದನಾ ಘಾಯವನು ಗದೆಯಲಿ
ನಡುವನಪ್ಪಳಿಸಿದನು ಭೀಮನ
ಮಿಡುಕು ನಿಂದುದು ನಗುವ ಪಾಂಡವ ಬಲದ ತಲೆ ಮಣಿಯೆ ॥24॥
೦೨೫ ಒಲೆದು ಬಿದ್ದನು ...{Loading}...
ಒಲೆದು ಬಿದ್ದನು ಭೀಮ ಕುಲಗಿರಿ
ಮಲಗುವಂದದಲೇರಬಾಯಿಂ
ದಿಳಿವ ಶೋಣಿತಧಾರೆ ಮಗ್ಗುಲ ಮುಸುಕಿತವನಿಯಲಿ
ಎಲೆ ಮಹಾದೇವಾ ವೃಕೋದರ
ನಳಿದನೇ ಹಾ ಭೀಮ ಹಾಯೆಂ
ದಳಲಿದುದು ಪರಿವಾರ ಸಾತ್ಯಕಿ ಸೃಂಜಯಾದಿಗಳು ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಲಪರ್ವತವೇ ಬಿದ್ದು ಮಲಗುವಂತೆ ಭೀಮ ತಿರುತಿರುಗಿ ನೆಲಕ್ಕೆ ಬಿದ್ದ. ಪೆಟ್ಟಾದ ಸ್ಥಳದಿಂದ ಇಳಿಯುವ ರಕ್ತದಪ್ರವಾಹವು ನೆಲದ ಮೇಲೆ ಬಿದ್ದಿರುವ ಭೀಮನ ಮಗ್ಗುಲ ಭಾಗವನ್ನು ಆವರಿಸಿತು. ಎಲೆ ಮಹಾದೇವ! ಭೀಮ ಸತ್ತನೇ, ಹಾ ಭೀಮ, ಹಾ ವೃಕೋದರ - ಎಂದು ಸಾತ್ಯಕಿ, ಸೃಂಜಯರು ಮತ್ತು ಪರಿವಾರವು ಶೋಕಿಸಿತು.
ಪದಾರ್ಥ (ಕ.ಗ.ಪ)
ಒಲೆದು-ತಿರುಗಿ, ಸುತ್ತು ಹೊಡೆದು, ಏರಬಾಯಿಂದ-ಗಾಯದ ಬಾಯಿಂದ, ಗಾಯದ ತೆರೆದ ಭಾಗದಿಂದ, ಶೋಣಿತಧಾರೆ-ರಕ್ತದ ಪ್ರವಾಹ, ವೃಕೋದರ-ತೋಳದಂತೆ ಹಸಿವುನ್ನುಳ್ಳವನು, ಭೀಮ, ಅಳಲು-ದುಃಖಿಸು, ಶೋಕಿಸು
ಮೂಲ ...{Loading}...
ಒಲೆದು ಬಿದ್ದನು ಭೀಮ ಕುಲಗಿರಿ
ಮಲಗುವಂದದಲೇರಬಾಯಿಂ
ದಿಳಿವ ಶೋಣಿತಧಾರೆ ಮಗ್ಗುಲ ಮುಸುಕಿತವನಿಯಲಿ
ಎಲೆ ಮಹಾದೇವಾ ವೃಕೋದರ
ನಳಿದನೇ ಹಾ ಭೀಮ ಹಾಯೆಂ
ದಳಲಿದುದು ಪರಿವಾರ ಸಾತ್ಯಕಿ ಸೃಂಜಯಾದಿಗಳು ॥25॥
೦೨೬ ಮೈಮರೆದನರೆಗಳಿಗೆ ಮಾತ್ರಕೆ ...{Loading}...
ಮೈಮರೆದನರೆಗಳಿಗೆ ಮಾತ್ರಕೆ
ವೈಮನಸ್ಯದ ಜಾಡ್ಯರೇಖೆಯ
ಸುಯ್ ಮಹಾದ್ಭುತವಾಯ್ತು ಪರಿಣತ ಪಾರವಶ್ಯದಲಿ
ಹಾ ಮಹಾದೇವೆನುತ ಹಗೆವನ
ಕೈಮೆಯನು ಬಣ್ಣಿಸುತಲೆದ್ದನ
ಲೈ ಮರುತ್ಸುತ ಸೂಸಿ ಹಾರಿದ ಗದೆಯ ತಡವರಿಸಿ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಧಘಳಿಗೆ ಮಾತ್ರ ಮೈಮರೆದಿದ್ದವನು ಎಚ್ಚರಗೊಂಡ. ವೈಮನಸ್ಯವೆಂಬ ಜಾಡ್ಯದಿಂದ ಅದ್ಭುತವಾಗಿ ಉಸಿgು ಬಿಡುತ್ತ, ಕ್ರೋಧಪರವಶನಾದ. ಹಾ ಮಹಾದೇವಾ ಎನ್ನುತ್ತಾ ಭೀಮ ಶತ್ರುವಿನ ಕೈಚಳಕವನ್ನು ಹೊಗಳುತ್ತ, ಹಾರಿಬಿದ್ದಿದ್ದ ಗದೆಯನ್ನು ತಡವರಿಸುತ್ತ ಎದ್ದ.
ಪದಾರ್ಥ (ಕ.ಗ.ಪ)
ವೈಮನಸ್ಸು-ದ್ವೇಷ, ವಿರೋಧ, ಜಾಡ್ಯರೇಖೆ-ಗೀಳು, ಪಾರವಶ್ಯ-ಪರವಶನಾಗುವಿಕೆ, ಪ್ರಜ್ಞೆತಪ್ಪುವುದು, ಕೈಮೆ-ಕೆಲಸ, ಕೈಚಳಕ, ಶಕ್ತಿ.
ಮೂಲ ...{Loading}...
ಮೈಮರೆದನರೆಗಳಿಗೆ ಮಾತ್ರಕೆ
ವೈಮನಸ್ಯದ ಜಾಡ್ಯರೇಖೆಯ
ಸುಯ್ ಮಹಾದ್ಭುತವಾಯ್ತು ಪರಿಣತ ಪಾರವಶ್ಯದಲಿ
ಹಾ ಮಹಾದೇವೆನುತ ಹಗೆವನ
ಕೈಮೆಯನು ಬಣ್ಣಿಸುತಲೆದ್ದನ
ಲೈ ಮರುತ್ಸುತ ಸೂಸಿ ಹಾರಿದ ಗದೆಯ ತಡವರಿಸಿ ॥26॥
೦೨೭ ಕಾದುಕೊಳು ಕೌರವ ...{Loading}...
ಕಾದುಕೊಳು ಕೌರವ ಗದಾಸಂ
ಭೇದದಭ್ಯಾಸಿಗಳಿಗಿದೆ ದು
ರ್ಭೇದ ನೋಡಾ ಹೊಯ್ಲಿಗಿದು ಮರೆವೊಗು ಮಹೇಶ್ವರನ
ಹೋದೆ ಹೋಗಿನ್ನೆನುತ ಜಡಿದು ವಿ
ಷಾದಭರದಲಿ ಮುಂದುಗಾಣದೆ
ಕೈದಣಿಯಲಪ್ಪಳಿಸಿದನು ಕಲಿಭೀಮ ಕುರುಪತಿಯ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ! ನನ್ನ ಈ ಹೊಡೆತದಿಂದ ನಿನ್ನನ್ನು ರಕ್ಷಿಸಿಕೋ. ಗದಾಯುದ್ಧದ ಪ್ರಭೇದಗಳನ್ನು ಅಭ್ಯಾಸ ಮಾಡಿದವರಿಗೂ ಇದು ಭೇದಿಸಲಸಾಧ್ಯವಾಗಿದೆ. ಈ ಹೊಡೆತದಿಂದ ತಪ್ಪಿಸಿಕೊಳ್ಳಲು ಮಹೇಶ್ವರನ ಮರೆ ಹೋಗು. ನೀನು ವಿನಾಶವಾದೆ, ಹೋಗಿನ್ನು ಎನ್ನುತ್ತ ಗದೆಯನ್ನು ಜಳಪಿಸಿ, ಕೋಪದ ಭರದಲ್ಲಿ ಮುಂದುಗಾಣದೆ ಕೈದಣಿಯುವಂತೆ ಕಲಿಭೀಮ ಕುರುಪತಿಗೆ ಅಪ್ಪಳಿಸಿ ಹೊಡೆದ.
ಪದಾರ್ಥ (ಕ.ಗ.ಪ)
ಕಾದುಕೊಳು-ರಕ್ಷಿಸಿಕೋ, ಉಳಿಸಿಕೋ, ಗದಾಸಂಭೇದ-ಗದಾಯುದ್ಧದ ವಿವಿಧ ಪ್ರಭೇದಗಳು, ಹೊಯ್ಲು-ಹೊಡೆತ, ವಿಷಾದಭರ-ಕೋಪಾವೇಶ, ಮುಂದುಗಾಣದೆ-ಮುಂದಿನ ಪರಿಣಾಮವನ್ನು ಗಮನಿಸದೆ.
ಮೂಲ ...{Loading}...
ಕಾದುಕೊಳು ಕೌರವ ಗದಾಸಂ
ಭೇದದಭ್ಯಾಸಿಗಳಿಗಿದೆ ದು
ರ್ಭೇದ ನೋಡಾ ಹೊಯ್ಲಿಗಿದು ಮರೆವೊಗು ಮಹೇಶ್ವರನ
ಹೋದೆ ಹೋಗಿನ್ನೆನುತ ಜಡಿದು ವಿ
ಷಾದಭರದಲಿ ಮುಂದುಗಾಣದೆ
ಕೈದಣಿಯಲಪ್ಪಳಿಸಿದನು ಕಲಿಭೀಮ ಕುರುಪತಿಯ ॥27॥
೦೨೮ ಹಾರಿತೊನ್ದೆಸೆಗಾಗಿ ಗದೆ ...{Loading}...
ಹಾರಿತೊಂದೆಸೆಗಾಗಿ ಗದೆ ಮೈ
ಹೇರಿತುರು ಘಾಯವನು ಮೊಳಕಾ
ಲೂರಿ ಬಿದ್ದನು ವದನದಲಿ ವೆಂಠಣಿಸೆ ರಣಧೂಳಿ
ಕಾರಿದನು ರಕುತವನು ಕೌರವ
ನೇರು ಬಲುಹೋ ಹೋದನೆನುತವೆ
ಚೀರಿತಾ ಪರಿವಾರ ಸುಮ್ಮಾನದ ಸಘಾಡದಲಿ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಕೌರವನ) ಗದೆಯು ಒಂದು ಪಕ್ಕಕ್ಕೆ ಹಾರಿತು. ಮೈ ಗಾಯಗಳನ್ನು ಪಡೆಯಿತು. ಮೊಳಕಾಲೂರಿ ಕೆಳಕ್ಕೆ ಬಿದ್ದನು. ರಣಭೂಮಿಯ ಧೂಳು ಮುಖವನ್ನು ಮುತ್ತಿತು. ರಕ್ತವನ್ನು ಕಾರಿದನು. ಕೌರವನಿಗಾದ ಘಾಯ ಬಲುದೊಡ್ಡದು. ಕೌರವ ಸತ್ತ - ಎಂದು ಪಾಂಡವರ ಪರಿವಾರ ಸಂತೋಷಾತಿರೇಕದಿಂದ ಕೂಗಾಡಿತು.
ಪದಾರ್ಥ (ಕ.ಗ.ಪ)
ಹೇರಿತು-ತುಂಬಿತು, ಪಡೆಯಿತು, ಭರ್ತಿಯಾಯಿತು, ವದನ-ಮುಖ, ವೆಂಠಣಿಸು-ಮುತ್ತು, ವ್ಯಾಪಿಸು, ಆವರಿಸು, ಬಳಸು, ಏರು-ಗಾಯ, ಬಲಹು-ಬಲವಾದುದು, ದೊಡ್ಡದು, ಸುಮ್ಮಾನ-ಅತಿಯಾದ ಸಂತೋಷ, ಉತ್ಸಾಹ, ಸಗಾಢ-ರಭಸ, ವೇಗ.
ಮೂಲ ...{Loading}...
ಹಾರಿತೊಂದೆಸೆಗಾಗಿ ಗದೆ ಮೈ
ಹೇರಿತುರು ಘಾಯವನು ಮೊಳಕಾ
ಲೂರಿ ಬಿದ್ದನು ವದನದಲಿ ವೆಂಠಣಿಸೆ ರಣಧೂಳಿ
ಕಾರಿದನು ರಕುತವನು ಕೌರವ
ನೇರು ಬಲುಹೋ ಹೋದನೆನುತವೆ
ಚೀರಿತಾ ಪರಿವಾರ ಸುಮ್ಮಾನದ ಸಘಾಡದಲಿ ॥28॥
೦೨೯ ಭಾಪು ಮಝರೇ ...{Loading}...
ಭಾಪು ಮಝರೇ ಭೀಮ ಕೌರವ
ಭೂಪವಿಲಯಕೃತಾಂತ ಕುರುಕುಲ
ದೀಪಚಂಡಸಮೀರ ಕುರುನೃಪತಿಮಿರಮಾರ್ತಾಂಡ
ಕೋಪನಪ್ರತಿಪಕ್ಷಕುಲನಿ
ರ್ವಾಪಣೈಕಸಮರ್ಥ ಎನುತಭಿ
ರೂಪನನು ಹೊಗಳಿದರು ವಂದಿಗಳಬುಧಿ ಘೋಷದಲಿ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಾಪು, ಶಹಬ್ಬಾಸ್ ಭೀಮ, ಕೌರವರಾಜನಿಗೆ ಪ್ರಲಯ ಕಾಲದ ಯಮ, ಕುರುಕುಲವೆಂಬ ದೀಪಕ್ಕೆ ಚಂಡಮಾರುತ, ಕುರುರಾಜನೆಂಬ ಕತ್ತಲೆಗೆ ಸೂರ್ಯ, ಕುರುರಾಜ ಎಂಬ ಕತ್ತಲನ್ನು ನಾಶಮಾಡಿಬಿಡುವ ಸೂರ್ಯನಷ್ಟು ಕೋಪ ಇರುವವನು, ಎದುರು ಪಕ್ಷದ ಕುಲವನ್ನೇ ನಾಶಮಾಡುವುದರಲ್ಲಿ ಸಮರ್ಥ, ಎಂದು ಹೆಸರಿಗೆ ತಕ್ಕಂತಹ ರೂಪವನ್ನು ಹೊಂದಿರುವ ಭೀಮನನ್ನು ಹೊಗಳು ಭಟ್ಟರು ಸಮುದ್ರಘೋಷದ ಶಬ್ದದಲ್ಲಿ ಹೊಗಳಿದರು.
ಪದಾರ್ಥ (ಕ.ಗ.ಪ)
ವಿಲಯಕೃತಾಂತ-ಪ್ರಳಯಕಾಲದ ಯಮ, ಚಂಡಸಮೀರ-ಚಂಡಮಾರುತ, ತಿಮಿರ-ಕತ್ತಲು, ನಿರ್ವಾಪಣೈಕಸಮರ್ಥ-ನಿರ್ನಾಮ ಮಾಡಲು ಸಮರ್ಥನಾದವನು, ಅಭಿರೂಪ-ಹೆಸರಿಗೆ ತಕ್ಕ ರೂಪವಿರುವವನು, ವಂದಿ-ಹೊಗಳುಭಟ್ಟ, ಅಬುಧಿ-ಅಬ್ಧಿ (ಸಂ), ಸಮುದ್ರ.
ಮೂಲ ...{Loading}...
ಭಾಪು ಮಝರೇ ಭೀಮ ಕೌರವ
ಭೂಪವಿಲಯಕೃತಾಂತ ಕುರುಕುಲ
ದೀಪಚಂಡಸಮೀರ ಕುರುನೃಪತಿಮಿರಮಾರ್ತಾಂಡ
ಕೋಪನಪ್ರತಿಪಕ್ಷಕುಲನಿ
ರ್ವಾಪಣೈಕಸಮರ್ಥ ಎನುತಭಿ
ರೂಪನನು ಹೊಗಳಿದರು ವಂದಿಗಳಬುಧಿ ಘೋಷದಲಿ ॥29॥
೦೩೦ ಜಾಳಿಸಿದ ವೇದನೆಯ ...{Loading}...
ಜಾಳಿಸಿದ ವೇದನೆಯ ಝೊಮ್ಮಿನ
ಜಾಳಿಗೆಯ ಜವ ಹರಿದುದೆಚ್ಚರ
ಮೇಲುಮರವೆಯ ಮುಸುಕು ಜಾರಿತು ಹಾರಿತತಿಭೀತಿ
ಬೇಳುವೆಯ ಕರಣೇಂದ್ರಿಯದ ವೈ
ಹಾಳಿ ನಿಂದುದು ಬಿಗಿದ ಬಳಲಿಕೆ
ಯೂಳಿಗದ ಮೊನೆ ಮುರಿಯೆ ಸಂತೈಸಿದನು ಕುರುರಾಯ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಹದಲ್ಲೆಲ್ಲ ವ್ಯಾಪಿಸಿದ ನೋವಿನಿಂದಾಗಿ ಎಚ್ಚರತಪ್ಪಿದ್ದ ದೇಹದ ಅಂಗಾಂಗಗಳ ಚಲನೆಯ ವೇಗ ಹೆಚ್ಚಿತು. ಎಚ್ಚರವಾಗಲು, ಆವರಿಸಿಕೊಂಡಿದ್ದ ಮರವೆಯ ಮುಸುಕು ಜಾರಿ, ಅತಿಯಾದ ಭಯ ಹಾರಿಹೋಯಿತು. ಬೆಂದುಹೋಗಿದ್ದ ಕರಣೇಂದ್ರಿಯಗಳ ಹಾರಾಟ (ನೋವಿನಿಂದ) ನಿಂತಿತು. ಗಟ್ಟಿಯಾಗಿ ನೆಲೆನಿಂತ ಬಳಲಿಕೆಯ ತೀವ್ರತೆ ತಗ್ಗಿ ದುರ್ಯೋಧನ ಸಮಾಧಾನಗೊಂಡ.
ಪದಾರ್ಥ (ಕ.ಗ.ಪ)
ಜಾಳಿಸು-ವ್ಯಾಪಿಸು, ವಿಸ್ತರಿಸು, ಪ್ರಸರಿಸು, ವೇದನೆ-ನೋವು, ಯಾತನೆ, ಝೊಮ್ಮು-ಎಚ್ಚರತಪ್ಪು, ಮೋಹ, ವಿಸ್ಮೃತಿ, ಜವ-ವೇಗ, ಹರಿದುದು-ಕಾಣೆಯಾಯಿತು, ಹೊರಟುಹೋಯಿತು, ಮೇಲುಮರವೆ-ಆವರಿಸಿದ್ದ ಮರವು, ಬೇಳುವೆ-ಬೇಯುವುದು, ಬೆಂಡಾಗುವುದು, ನಲುಗುವುದು, ಕರಣೇಂದ್ರಿಯ-ಐದು ಬಾಹ್ಯ ಇಂದ್ರಿಯಗಳು, ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮಗಳೆಂಬ ಪಂಚೇಂದ್ರಿಯಗಳು, ವೈಹಾಳಿ-ಚಲನೆ, ಓಡಾಟ, ಕುದುರೆ ಸವಾರಿ, ಊಳಿಗ-ಕೆಲಸ, ಆಳುಗೆಲಸ, ಮೊನೆ-ತುದಿ, ಸಂತೈಸು-ಸಮಾಧಾನಹೊಂದು.
ಮೂಲ ...{Loading}...
ಜಾಳಿಸಿದ ವೇದನೆಯ ಝೊಮ್ಮಿನ
ಜಾಳಿಗೆಯ ಜವ ಹರಿದುದೆಚ್ಚರ
ಮೇಲುಮರವೆಯ ಮುಸುಕು ಜಾರಿತು ಹಾರಿತತಿಭೀತಿ
ಬೇಳುವೆಯ ಕರಣೇಂದ್ರಿಯದ ವೈ
ಹಾಳಿ ನಿಂದುದು ಬಿಗಿದ ಬಳಲಿಕೆ
ಯೂಳಿಗದ ಮೊನೆ ಮುರಿಯೆ ಸಂತೈಸಿದನು ಕುರುರಾಯ ॥30॥
೦೩೧ ಒರೆವ ರಕುತವ ...{Loading}...
ಒರೆವ ರಕುತವ ಧೂಳಿನಿಂದವೆ
ಹೊರಗ ತೊಡೆತೊಡೆದೌಕಿ ಕೋಪದ
ಹೊರಿಗೆ ಝಳಪಿಸೆ ಕಂಗಳಲಿ ಹುಬ್ಬಿನಲಿ ಸುಯ್ಲಿನಲಿ
ಮುರುಕಿಸುವ ರಿಪುಭಟನನೋರೆಯೊ
ಳೆರಗಿ ನೋಡುತ ಸಾರಸತ್ವದ
ನೆರವಣಿಗೆ ಕೈಗೂಡಲೆದ್ದನು ಗದೆಯ ಕೈನೀಡಿ ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಸರುತ್ತಿದ್ದ ರಕ್ತವನ್ನು ತೊಡೆದು ಹಾಕಿ, ಧೂಳಿನಿಂದ ಗಾಯದ ಹೊರಭಾಗವನ್ನು ಮೆತ್ತಿ, ಕೋಪದ ಝುಳ ಕಣ್ಣುಗಳಲ್ಲಿ, ಹುಬ್ಬಿನಲ್ಲಿ, ಉಸಿರಿನಲ್ಲಿ ಪ್ರಕಟವಾಗಲು ಅಪಹಾಸ್ಯಮಾಡುತ್ತಿದ್ದ ಶತ್ರುವನ್ನು ಓರೆಗಣ್ಣಿನಿಂದ ನೋಡುತ್ತ ತನ್ನ ಎಲ್ಲ ಸತ್ವವೂ ಒಟ್ಟುಗೂಡಿ ಕೈಗೂಡಲು ಗದೆಗೆ ಕೈನೀಡಿ ಎದ್ದ.
ಪದಾರ್ಥ (ಕ.ಗ.ಪ)
ಒರೆವ-ಸೋರುವ, ಹೊರಿಗೆ- ಪದರ, ಸುಯ್ಲು-ಉಸಿರು, ಮುರುಕಿಸು-ಮುಖ ವಿಕಾರಿಸು, ಸಾರಸತ್ವ-ಶಕ್ತಿಯ ಎಲ್ಲ ಸಾರ, ನೆರವಣಿಗೆ-ಸೇರ್ಪಡೆ, ಕೂಡುವುದು, ಒಟ್ಟಾಗುವುದು, ಕೈಗೂಡು-ಸಾಧ್ಯವಾಗು.
ಮೂಲ ...{Loading}...
ಒರೆವ ರಕುತವ ಧೂಳಿನಿಂದವೆ
ಹೊರಗ ತೊಡೆತೊಡೆದೌಕಿ ಕೋಪದ
ಹೊರಿಗೆ ಝಳಪಿಸೆ ಕಂಗಳಲಿ ಹುಬ್ಬಿನಲಿ ಸುಯ್ಲಿನಲಿ
ಮುರುಕಿಸುವ ರಿಪುಭಟನನೋರೆಯೊ
ಳೆರಗಿ ನೋಡುತ ಸಾರಸತ್ವದ
ನೆರವಣಿಗೆ ಕೈಗೂಡಲೆದ್ದನು ಗದೆಯ ಕೈನೀಡಿ ॥31॥
೦೩೨ ಹಾನಿಯೆಮಗಾಯ್ತೆನ್ದು ಕಡುಸು ...{Loading}...
ಹಾನಿಯೆಮಗಾಯ್ತೆಂದು ಕಡುಸು
ಮ್ಮಾನವುಕ್ಕಿತೆ ನಿಮಿಷದಲಿ ದು
ಮ್ಮಾನ ಶರಧಿಯೊಳದ್ದುವೆನು ತಿದ್ದುವೆನು ನಿನ್ನವರ
ಈ ನಗೆಯನೀ ಬಗೆಯನೀ ವಿಜ
ಯಾನುರಾಗವ ನಿಲಿಸುವೆನು ಯಮ
ಸೂನು ಸೈರಿಸೆನುತ್ತ ಜರೆದನು ವಾಮಹಸ್ತದಲಿ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನಗೆ ಹಾನಿಯುಂಟಾಯಿತೆಂದು ಹೆಚ್ಚಿನ ಸುಮ್ಮಾನ ನಿನ್ನಲ್ಲಿ ಮೂಡಿತೆ, ಒಂದು ನಿಮಿಷದಲ್ಲಿ ದುಮ್ಮಾನದ ಸಮುದ್ರದಲ್ಲಿ ಮುಳುಗಿಸುತ್ತೇನೆ, ನಿನ್ನವರನ್ನು ಸರಿದಾರಿಗೆ ತರುತ್ತೇನೆ. ಈ ನಗೆಯನ್ನು, ಈ ಮನಸ್ಸನ್ನು, ಈ ವಿಜಯದ ಸಂತೋಷವನ್ನು ನಿಲ್ಲಿಸುವೆನು. ಧರ್ಮರಾಯನೇ ಸ್ವಲ್ಪಸಮಯ ಸಮಾಧಾನದಿಂದಿರು ಎಂದು ದುರ್ಯೋಧನ ಎಡಗೈಯಿಂದ ತಿವಿದು, ಜರೆದು ನುಡಿದ.
ಪದಾರ್ಥ (ಕ.ಗ.ಪ)
ಸುಮ್ಮಾನ-ಸಂತೋಷಾತಿರೇಕ, ಉತ್ಸಾಹ, ದುಮ್ಮಾನ-ದುಃಖ, ತಿದ್ದು-ಸರಿಪಡಿಸು, ಸರಿದಾರಿಗೆ ತರುವುದು, ಬಗೆ-ಮನಸ್ಸು,, ವಾಮಹಸ್ತ-ಎಡಗೈ
ಮೂಲ ...{Loading}...
ಹಾನಿಯೆಮಗಾಯ್ತೆಂದು ಕಡುಸು
ಮ್ಮಾನವುಕ್ಕಿತೆ ನಿಮಿಷದಲಿ ದು
ಮ್ಮಾನ ಶರಧಿಯೊಳದ್ದುವೆನು ತಿದ್ದುವೆನು ನಿನ್ನವರ
ಈ ನಗೆಯನೀ ಬಗೆಯನೀ ವಿಜ
ಯಾನುರಾಗವ ನಿಲಿಸುವೆನು ಯಮ
ಸೂನು ಸೈರಿಸೆನುತ್ತ ಜರೆದನು ವಾಮಹಸ್ತದಲಿ ॥32॥
೦೩೩ ಎಲವೊ ಭೀಮ ...{Loading}...
ಎಲವೊ ಭೀಮ ವಿಘಾತಿಗಳ ಕೈ
ದೊಳಸಿನಲಿ ತೆರಹಾಯ್ತು ನೀನಿ
ಟ್ಟಳಿಸುವಡೆ ನಿನಗಾದುದಾಕಸ್ಮಿಕವದಭ್ಯುದಯ
ಛಲವ ಬಿಡಿಸುವಡೇಳು ನೀ ಮನ
ವಳಕುವಡೆ ನಿನ್ನವರ ಕರೆ ಹೊ
ಯ್ಲೊಳಗಿದೊಂದೇ ಹೊಯ್ಲೆನುತ ಹೊಕ್ಕನು ಮಹೀಪಾಲ ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲವೊ ಭೀಮ, ಹೊಡೆತಗಳ, ಜಗಳದ ವಿಷಯಗಳಲ್ಲಿದ್ದ ನನಗೆ ಈಗ ಬಿಡುವಾಯಿತು. ನೀನು ಹೊಡೆದರೆ ನಿನಗೆ ಆಕಸ್ಮಿಕವಾಗಿ ಜಯಸಿಕ್ಕಿತು. ಛಲವನ್ನು ಸಾಧಿಸುವಂತಿದ್ದರೆ ಯುದ್ಧಕ್ಕೆ ಏಳು. ಅಥವಾ ನೀನು ಹೆದರುವುದಾದರೆ ನಿನ್ನ ಅಣ್ಣತಮ್ಮಂದಿರನ್ನು ಕರೆ. ಹೊಡೆತಗಳಲ್ಲಿ ಇದೊಂದೇ ಹೊಡೆತ ಸಾಕು ಎಂದು ದುರ್ಯೋಧನ ಮುಂದುವರಿದ.
ಪದಾರ್ಥ (ಕ.ಗ.ಪ)
ವಿಘಾತಿ-ಹೊಡೆತ, ಪೆಟ್ಟು, ಕೈದೊಳಸು-ಜಗಳದ ವಿಷಯ, ತೆರಹು-ಬಿಡುವು, ಇಟ್ಟಳಿಸು-ಇಟ್ಟಣಿಸು,ಆಕ್ರಮಣ ಮಾಡು, ಮೇಲೆ ಬೀಳು, ಹೊಯ್ಲು-ಹೊಡೆತ, ಪೆಟ್ಟು.
ಮೂಲ ...{Loading}...
ಎಲವೊ ಭೀಮ ವಿಘಾತಿಗಳ ಕೈ
ದೊಳಸಿನಲಿ ತೆರಹಾಯ್ತು ನೀನಿ
ಟ್ಟಳಿಸುವಡೆ ನಿನಗಾದುದಾಕಸ್ಮಿಕವದಭ್ಯುದಯ
ಛಲವ ಬಿಡಿಸುವಡೇಳು ನೀ ಮನ
ವಳಕುವಡೆ ನಿನ್ನವರ ಕರೆ ಹೊ
ಯ್ಲೊಳಗಿದೊಂದೇ ಹೊಯ್ಲೆನುತ ಹೊಕ್ಕನು ಮಹೀಪಾಲ ॥33॥
೦೩೪ ಹೊಯ್ದು ತೋರಾ ...{Loading}...
ಹೊಯ್ದು ತೋರಾ ಬಂಜೆ ನುಡಿಯಲಿ
ಬಯ್ದಡಧಿಕನೆ ಬಾಹುವಿಂ ಹೊರ
ಹಾಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ
ಕಯ್ದು ನಿನಗಿದೆ ಲಕ್ಷ ್ಯಪಣ ನಮ
ಗೆಯ್ದುವಡೆ ಗುಪ್ತಪ್ರತಾಪವ
ನೆಯ್ದೆ ಪ್ರಕಟಿಸೆನುತ್ತ ತಿವಿದನು ಭೀಮ ಕುರುಪತಿಯ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಡೆದು ತೋರಿಸು. ಸತ್ವವಿಲ್ಲದ ನುಡಿಗಳಿಂದ ಬಯ್ದರೆ ನೀನು ಬಲಶಾಲಿಯೆ - ನೀನು ಬಾಹುಗಳಿಂದ ಹುಟ್ಟಿದವನೋ (ಹೊರಹೊಮ್ಮಿದವನೋ), (ಕ್ಷತ್ರಿಯನೋ) ಅಥವ ಮುಖದಲ್ಲೋ (ಬ್ರಾಹ್ಮಣನೋ) ಜಾತಿಯಲ್ಲಿ ನೀನು ಯಾರು? ಆಯುಧ ನಿನಗಿದೆ. ಗುರಿಯ ಪಣದ ವಸ್ತು ನನಗೆ ಸಿಕ್ಕಬೇಕಾದರೆ ನಿನ್ನ ಗುಪ್ತವಾದ ಪ್ರತಾಪವನ್ನು ಪ್ರಕಟಿಸು - ಎನ್ನುತ್ತಾ ಭೀಮ ಕುರುಪತಿಯನ್ನು ಗದೆಯಿಂದ ತಿವಿದ.
ಪದಾರ್ಥ (ಕ.ಗ.ಪ)
ಬಂಜೆನುಡಿ-ಸತ್ವವಿಲ್ಲದ ಮಾತು, ಪ್ರಯೋಜನವಿಲ್ಲದ ಮಾತು, ಲಕ್ಷ್ಯ- ಪಣ- ಪಂಥದ ವಸ್ತು, ಒತ್ತೆ, ನಿಯಮ, ಜೂಜು, ಎಯ್ದೆ-ವಿಶೇಷವಾಗಿ, ಹೆಚ್ಚಾಗಿ.
ಪಾಠಾನ್ತರ (ಕ.ಗ.ಪ)
ಬಾಹುವಿಂಹೊರಹೊಯ್ದವನೋ……. ಎಂಬಲ್ಲಿ ಹೊರಹೊಯ್ ಎಂಬುದು ಸರಿಯಾದ ಅರ್ಥವನ್ನು ನೀಡುತ್ತಿಲ್ಲವಾದ್ದರಿಂದ ಅದರ ಪಾಠಾಂತರ ‘ಹೊರಹಾಯ್ದವನೋ’ ಎಂಬ ಊಹಾಪಾಠವನ್ನು ಸ್ವೀಕರಿಸಿದೆ. ‘ಹೊರಹಾಯ್ದವನೋ’ ಎಂದರೆ ಹೊರಹೊಮ್ಮುವುದು ಹೊರಬರುವುದು, ಹುಟ್ಟುವುದು ಎಂಬ ಅರ್ಥಗಳಿವೆ.
ಮೂಲ ...{Loading}...
ಹೊಯ್ದು ತೋರಾ ಬಂಜೆ ನುಡಿಯಲಿ
ಬಯ್ದಡಧಿಕನೆ ಬಾಹುವಿಂ ಹೊರ
ಹಾಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ
ಕಯ್ದು ನಿನಗಿದೆ ಲಕ್ಷ ್ಯಪಣ ನಮ
ಗೆಯ್ದುವಡೆ ಗುಪ್ತಪ್ರತಾಪವ
ನೆಯ್ದೆ ಪ್ರಕಟಿಸೆನುತ್ತ ತಿವಿದನು ಭೀಮ ಕುರುಪತಿಯ ॥34॥
೦೩೫ ಅವನಿಪತಿ ಕೇಳ್ ...{Loading}...
ಅವನಿಪತಿ ಕೇಳ್ ಭೀಮಸೇನನ
ತಿವಿಗುಳನು ತಪ್ಪಿಸಿ ಸುಯೋಧನ
ಕವಿದು ನಾಭಿಗೆ ತೋರಿ ಜಂಘೆಗೆ ಹೂಡಿ ಝಳಪದಲಿ
ಲವಣಿಯಲಿ ಲಳಿಯೆದ್ದು ಹೊಯ್ದನು
ಪವನಜನ ಭುಜಶಿರವ ಸೀಸಕ
ಕವಚವಜಿಗಿಜಿಯಾಗೆ ಬೀಳೆನುತರಸ ಬೊಬ್ಬಿರಿದ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, ಭೀಮಸೇನನ ಗದೆಯ ತಿವಿತಗಳಿಂದ ತಪ್ಪಿಸಿಕೊಂಡು, ಸುಯೋಧನನು ಮೇಲೆ ಬಿದ್ದು ನಾಭಿಸ್ಥಳಕ್ಕೆ ಗದೆಯನ್ನು ತಾಗಿಸಿ ಕೆಳತೊಡೆಗೆ ಗುರಿತೋರಿಸಿ ಗದೆಯನ್ನು ಝಳಪಿಸಿದ. ಗದೆಯು ಪ್ರಕಾಶಿಸುತ್ತಿರಲು ರಭಸದಿಂದ, ‘ಬೀಳು’ ಎಂದು ಬೊಬ್ಬಿರಿದು ಭೀಮನ ಭುಜಕ್ಕೆ ಮತ್ತು ತಲೆಗೆ ಹೊಡೆದ. ಭೀಮನ ಕವಚ ಮತ್ತು ಶಿರಸ್ತ್ರಾಣಗಳು ನುಜ್ಜು ಗುಜ್ಜಾದವು.
ಪದಾರ್ಥ (ಕ.ಗ.ಪ)
ತಿವಿಗುಳು -ತಿವಿತ, ಕವಿದು-ಮೇಲೆ ಬಿದ್ದು, ನಾಭಿ-ಹೊಕ್ಕಳು, ಜಂಘೆ-ಕೆಳತೊಡೆ, ಕಿರುದೊಡೆ, ಝಳಪ-ಬೀಸುವಿಕೆ. ಲವಣಿ-ಯುದ್ಧದ ಒಂದು ವರಸೆ ಲಳಿ-ರಭಸ, ಆವೇಶ, ಅಜಿಗಿಜಿ-ನುಜ್ಜುಗುಜ್ಜು.
ಮೂಲ ...{Loading}...
ಅವನಿಪತಿ ಕೇಳ್ ಭೀಮಸೇನನ
ತಿವಿಗುಳನು ತಪ್ಪಿಸಿ ಸುಯೋಧನ
ಕವಿದು ನಾಭಿಗೆ ತೋರಿ ಜಂಘೆಗೆ ಹೂಡಿ ಝಳಪದಲಿ
ಲವಣಿಯಲಿ ಲಳಿಯೆದ್ದು ಹೊಯ್ದನು
ಪವನಜನ ಭುಜಶಿರವ ಸೀಸಕ
ಕವಚವಜಿಗಿಜಿಯಾಗೆ ಬೀಳೆನುತರಸ ಬೊಬ್ಬಿರಿದ ॥35॥
೦೩೬ ಮತ್ತೆ ಹೊಯ್ದನು ...{Loading}...
ಮತ್ತೆ ಹೊಯ್ದನು ಭೀಮಸೇನನ
ನೆತ್ತಿಯನು ನಿಪ್ಪಸರದಲಿ ಕಳೆ
ಹತ್ತಿ ಝೋಂಪಿಸಿ ತಿರುಗಿ ಬಿದ್ದನು ಬಿಗಿದ ಮೂರ್ಛೆಯಲಿ
ಕೆತ್ತ ಕಂಗಳ ಸುಯ್ಲ ಲಹರಿಯ
ಸುತ್ತಲೊಗುವರುಣಾಂಬುಗಳ ಕೆಲ
ದತ್ತ ಸಿಡಿದಿಹ ಗದೆಯ ಭಟನೊರಗಿದನು ಮರವೆಯಲಿ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ, ಭೀಮಸೇನನ ನೆತ್ತಿಗೆ ಪುನಃ ಬಲವಾಗಿ ಹೊಡೆದ. ಭೀಮ ನೋವು ಹೆಚ್ಚಾಗಿ ಬವಳಿ ಬಂದು ತಿರುಗುತ್ತಾ ನೆಲಕ್ಕೆ ಬಿದ್ದ. ಕಣ್ಣುಗಳು ಮಿಡುಕಿದವು. ಉಸಿರು ಜೋರಾಯಿತು. ರಕ್ತ ಸುತ್ತಲೂ ಸೋರಿತು. ಗದೆ ಪಕ್ಕಕ್ಕೆ ಸಿಡಿದು ಬಿದ್ದಿತು. ಭೀಮನ ಮೈಮರವೆಯಿಂದ ನೆಲದ ಮೇಲೆ ಮಲಗಿದ.
ಪದಾರ್ಥ (ಕ.ಗ.ಪ)
ನಿಪ್ಪಸರ-ನಿಷ್ಠುರತೆ, ಕ್ರೌರ್ಯ, ಉರವಣೆ, ಕಳೆ-ನೋವು, ಕೆತ್ತ-ನಡುಗುವ, ಮಿಡುಕು, ಕೆಚ್ಚು, ಕಡಿ, (ಈ ಯಾವ ಅರ್ಥಗಳೂ ಇಲ್ಲಿಗೆ ಸರಿಹೊಂದುವುದಿಲ್ಲ ‘ಮುಚ್ಚಿದ’ - ಎಂಬರ್ಥ ಸರಿಯಾಗಬಹುದು) ಸುಯ್ಲು-ಉಸಿರು, ಲಹರಿ-ಅಲೆ, ಒಗು-ಹರಿ, ಸುರಿ, ಅರಣಾಂಬು-ಕೆಂಪುನೀರು, ರಕ್ತ, ಮರವೆ-ಮೈಮರವೆ, ಪ್ರಜ್ಞಾಶೂನ್ಯತೆ.
ಮೂಲ ...{Loading}...
ಮತ್ತೆ ಹೊಯ್ದನು ಭೀಮಸೇನನ
ನೆತ್ತಿಯನು ನಿಪ್ಪಸರದಲಿ ಕಳೆ
ಹತ್ತಿ ಝೋಂಪಿಸಿ ತಿರುಗಿ ಬಿದ್ದನು ಬಿಗಿದ ಮೂರ್ಛೆಯಲಿ
ಕೆತ್ತ ಕಂಗಳ ಸುಯ್ಲ ಲಹರಿಯ
ಸುತ್ತಲೊಗುವರುಣಾಂಬುಗಳ ಕೆಲ
ದತ್ತ ಸಿಡಿದಿಹ ಗದೆಯ ಭಟನೊರಗಿದನು ಮರವೆಯಲಿ ॥36॥
೦೩೭ ಮಡಿದವನ ಹೊಯ್ಯೆನು ...{Loading}...
ಮಡಿದವನ ಹೊಯ್ಯೆನು ಧನಂಜಯ
ತೊಡು ಮಹಾಸ್ತ್ರವನವನಿಪತಿ ಬಿಲು
ದುಡುಕು ಯಮಳರು ಕೈದುಗೊಳಿ ಸಾತ್ಯಕಿ ಶರಾಸನವ
ಹಿಡಿ ಶಿಖಂಡಿ ದ್ರುಪದಸುತರವ
ಗಡಿಸಿರೈ ನಿಮ್ಮವನ ಹರಿಬಕೆ
ಮಿಡುಕುವಡೆ ಬಹುದೆನುತ ತೂಗಿದನವನಿಪತಿ ಗದೆಯ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿದ್ದವನನ್ನು ನಾನು ಹೊಡೆಯುವುದಿಲ್ಲ. ಅರ್ಜುನ! ಮಹಾಸ್ತ್ರವನ್ನು ಪ್ರಯೋಗಿಸುವುದಕ್ಕೆ ಸಿದ್ಧ ಮಾಡಿಕೋ. ಧರ್ಮರಾಯ! ಬಿಲ್ಲನ್ನು ಕೈಗೆ ತೆಗೆದುಕೋ, ನಕುಲ ಸಹದೇವರು ಆಯುಧಗಳನ್ನು ಹಿಡಿಯಿರಿ. ಸಾತ್ಯಕಿ! ಬಿಲ್ಲನ್ನು ಹಿಡಿ. ಶಿಖಂಡಿ ಮುಂತಾದ ದ್ರುಪದನ ಮಕ್ಕಳು ಪರಾಕ್ರಮವನ್ನು ತೋರಿಸಿ. ನಿಮ್ಮವನಾದ ಭೀಮನ ಸಂಕಷ್ಟಕ್ಕೆ ಪ್ರತಿಕ್ರಿಯೆ ತೋರಿಸುವುದಾದಲ್ಲಿ ಬರುವುದು ಎನ್ನುತ್ತ ದುರ್ಯೋಧನ ನೃಪತಿಯು ಗದೆಯನ್ನು ತೂಗಿದನು.
ಪದಾರ್ಥ (ಕ.ಗ.ಪ)
ಶರಾಸನ-ಬಾಣಕ್ಕೆ ಆಸನದಂತಿರುವುದು-ಬಿಲ್ಲು, ಅವಗಡಿಸು-ಮೇಲೆ ಬೀಳು, ಹರಿಬ- ಸಂಕಷ್ಟ, ಕರ್ತವ್ಯ, ಮಿಡುಕು-ಪ್ರತಿಕ್ರಿಯಿಸು, ಸ್ಪಂದಿಸು,
ಟಿಪ್ಪನೀ (ಕ.ಗ.ಪ)
ಇದಕ್ಕೆ ಸಮನಾದ, ರನ್ನ ಕವಿಯ ಗದಾಯುದ್ಧದಲ್ಲಿನ ಪದ್ಯದಲ್ಲಿ “ಇಱಯೆಂ ಬಿಳ್ದನಂ” ಎಂಬ ಮಾತುಗಳಿರುವುದನ್ನು ಗಮನಿಸಬಹುದು. (ಗದಾಯುದ್ಧ ಸಂಗ್ರಹಂ (ತೀನಂಶ್ರೀ) 8-22)
ಮೂಲ ...{Loading}...
ಮಡಿದವನ ಹೊಯ್ಯೆನು ಧನಂಜಯ
ತೊಡು ಮಹಾಸ್ತ್ರವನವನಿಪತಿ ಬಿಲು
ದುಡುಕು ಯಮಳರು ಕೈದುಗೊಳಿ ಸಾತ್ಯಕಿ ಶರಾಸನವ
ಹಿಡಿ ಶಿಖಂಡಿ ದ್ರುಪದಸುತರವ
ಗಡಿಸಿರೈ ನಿಮ್ಮವನ ಹರಿಬಕೆ
ಮಿಡುಕುವಡೆ ಬಹುದೆನುತ ತೂಗಿದನವನಿಪತಿ ಗದೆಯ ॥37॥
೦೩೮ ಮೇಲೆ ಕಳವಳವಾಯ್ತು ...{Loading}...
ಮೇಲೆ ಕಳವಳವಾಯ್ತು ದಿಕ್ಕಿನ
ಮೂಲೆ ಬಿರಿಯೆ ಪಿಶಾಚರಾಕ್ಷಸ
ಜಾಲ ವಿದ್ಯಾಧರ ಮಹೋರಗ ಯಕ್ಷ ಕಿನ್ನರರು
ಆಳು ನೀನಹೆ ನಳ ನಹುಷ ಭೂ
ಪಾಲಕುಲದಲಭಂಗನಾದೆ ಕ
ರಾಳಭುಜಬಲ ನೀನೆನುತ ಕೊಂಡಾಡಿತಮರಗಣ ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಕಾಶದಲ್ಲಿ ತಳಮಳವಾಯಿತು. ದಿಕ್ಕುಗಳ ಮೂಲೆಗಳು ಸೀಳುವಂತೆ ಪಿಶಾಚಿಗಳು, ರಾಕ್ಷಸರ ಸಮೂಹಗಳು, ವಿದ್ಯಾಧರರು, ಮಹೋರಗರು, ಯಕ್ಷರು, ಕಿನ್ನರರು ಮತ್ತು ದೇವತೆಗಳ ಸಮೂಹವು ದುರ್ಯೋಧನನನ್ನು ಕುರಿತು ನಿಜವಾದ ಧೈರ್ಯವಂತ ನೀನಾಗಿದ್ದೀಯೆ. ನಳ, ನಹುಷ ಭೂಪಾಲರ ಕುಲದಲ್ಲಿ ಸೋಲಿಲ್ಲದವನಾದೆ. ಭಯಂಕರ ಭುಜಬಲ ನೀನು ಎನ್ನುತ್ತ ಕೊಂಡಾಡಿದರು.
ಪದಾರ್ಥ (ಕ.ಗ.ಪ)
ಮೇಲೆ-ದೇವಲೋಕದಲ್ಲಿ, ಆಕಾಶದಲ್ಲಿ, ಕಳವಳ-ತಳಮಳ, ಕಸಿವಿಸಿ, ಗೊಂದಲ, ಭ್ರಾಂತಿ, ವಿದ್ಯಾಧರ-ಇವರು ಆಕಾಶ ಮಾರ್ಗದಲ್ಲಿ ಸಂಚರಿಸುವವರು, ಮಾಯಾವಿದ್ಯೆಯನ್ನು ಕಲಿತವರು, ಮಹೋರಗ-ದೊಡ್ಡ ಸರ್ಪ, ಆಳು-ವೀರ, ಅಭಂಗ-ಸೋಲಿಸಲಾಗದ, ಕರಾಳ-ಭಯಂಕರ, ಭೀಕರ.
ಮೂಲ ...{Loading}...
ಮೇಲೆ ಕಳವಳವಾಯ್ತು ದಿಕ್ಕಿನ
ಮೂಲೆ ಬಿರಿಯೆ ಪಿಶಾಚರಾಕ್ಷಸ
ಜಾಲ ವಿದ್ಯಾಧರ ಮಹೋರಗ ಯಕ್ಷ ಕಿನ್ನರರು
ಆಳು ನೀನಹೆ ನಳ ನಹುಷ ಭೂ
ಪಾಲಕುಲದಲಭಂಗನಾದೆ ಕ
ರಾಳಭುಜಬಲ ನೀನೆನುತ ಕೊಂಡಾಡಿತಮರಗಣ ॥38॥
೦೩೯ ಅರಸ ಕೇಳಾಶ್ಚರಿಯವನು ...{Loading}...
ಅರಸ ಕೇಳಾಶ್ಚರಿಯವನು ನಿ
ಮ್ಮರಸನಾಹವ ಸಫಲ ಸುರಕುಲ
ವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ
ಅರಿನೃಪರು ತಲೆಗುತ್ತಿದರು ಮುರ
ಹರ ಯುಧಿಷ್ಠಿರ ಪಾರ್ಥ ಯಮಳರು
ಬೆರಳ ಮೂಗಿನಲಿದ್ದು ಸುಯ್ದರು ಬಯ್ದು ದುಷ್ಕೃತವ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಆಶ್ಚರ್ಯವನ್ನು ಕೇಳು, ನಿಮ್ಮ ಅರಸನಾದ ದುರ್ಯೋಧನನ ಯುದ್ಧ ಸಫಲವಾಯಿತು. ದೇವಸಮೂಹವು ಕುರುಪತಿಯ ಶ್ರೀಮುಡಿಗೆ ಹೂಮಳೆಗಳನ್ನು ಕರೆಯಿತು. ಶತ್ರುರಾಜರು ತಲೆತಗ್ಗಿಸಿದರು. ಕೃಷ್ಣ, ಧರ್ಮರಾಯ, ಅರ್ಜುನ, ನಕುಲ ಸಹದೇವರುಗಳು ಬೆರಳನ್ನು ಮೂಗಿನಮೇಲಿಟ್ಟು (ಆಶ್ಚರ್ಯದಿಂದ) ತಮ್ಮ ಕರ್ಮವನ್ನು ಬಯ್ದು ನಿಟ್ಟುಸಿರುಬಿಟ್ಟರು.
ಪದಾರ್ಥ (ಕ.ಗ.ಪ)
ಆಹವ-ಯುದ್ಧ, ಅರಳಮಳೆ-ಹೂವಿನ ಮಳೆ, ಪುಷ್ಪವೃಷ್ಟಿ, ತಲೆಗುತ್ತು-ತಲೆಬಾಗಿಸು, ದುಷ್ಕೃತ-ದುರದೃಷ್ಟ, ಕೆಟ್ಟಕೆಲಸ, ದುಷ್ಕರ್ಮ.
ಮೂಲ ...{Loading}...
ಅರಸ ಕೇಳಾಶ್ಚರಿಯವನು ನಿ
ಮ್ಮರಸನಾಹವ ಸಫಲ ಸುರಕುಲ
ವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ
ಅರಿನೃಪರು ತಲೆಗುತ್ತಿದರು ಮುರ
ಹರ ಯುಧಿಷ್ಠಿರ ಪಾರ್ಥ ಯಮಳರು
ಬೆರಳ ಮೂಗಿನಲಿದ್ದು ಸುಯ್ದರು ಬಯ್ದು ದುಷ್ಕೃತವ ॥39॥
೦೪೦ ಮಿಡಿದನರ್ಜುನ ಧನುವ ...{Loading}...
ಮಿಡಿದನರ್ಜುನ ಧನುವ ಯಮಳರು
ತುಡುಕಿದರು ಕಯ್ದುಗಳ ಸಾತ್ಯಕಿ
ಮಿಡುಕಿದನು ಮರುಗಿದರು ಪಂಚದ್ರೌಪದೀಸುತರು
ಒಡೆಯನಳಿವಿನಲೆಲ್ಲಿಯದು ನೃಪ
ನುಡಿದ ನುಡಿಯೆನುತನಿಲತನುಜನ
ಪಡೆ ಗಜಾಶ್ವವ ಬಿಗಿಯೆ ಗಜಬಜಿಸಿತು ಭಟಸ್ತೋಮ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ತನ್ನ ಬಿಲ್ಲನ್ನು ಝೇಂಕರಿಸಿದ. ಅವಳಿಗಳಾದ ನಕುಲ ಸಹದೇವರು ಆಯುಧಗಳನ್ನು ಕೊಂಡರು. ಸಾತ್ಯಕಿ ಉತ್ಸಾಹಿಸಿದ. ದ್ರೌಪದಿಯ ಐದು ಜನ ಮಕ್ಕಳು ಮರುಗಿದರು. ತಮ್ಮ ಸ್ವಾಮಿಯ ಸಾವಿನ ಈ ಸಂದರ್ಭದಲ್ಲಿ ರಾಜನು ಆಡಿದ್ದ ಭಾಷೆಗಳಿಗೆ ಏನು ಬೆಲೆ - ಎನ್ನುತ್ತ ಭೀಮನ ಸೈನ್ಯವು ಆನೆ ಕುದುರೆಗಳನ್ನು ಯುದ್ಧಸಿದ್ಧತೆಗಾಗಿ ಕಟ್ಟಲು ಭಟಸಮೂಹವು ಕೋಲಾಹಲವನ್ನುಂಟು ಮಾಡಿತು.
ಪದಾರ್ಥ (ಕ.ಗ.ಪ)
ಮಿಡಿ-ಮೀಟು, ಝೇಂಕಾರ ಮಾಡು, ಯಮಳರು-ಅವಳಿಗಳು, ನಕುಲ-ಸಹದೇವರು, ತುಡುಕು-ವೇಗವಾಗಿ ಬಂದು ಹಿಡಿ, ಗಟ್ಟಿಯಾಗಿ ಹಿಡಿ, ಸೆಳೆದುಕೋ, ಮರುಗು-ಸಂಕಟಪಡು,
ಮೂಲ ...{Loading}...
ಮಿಡಿದನರ್ಜುನ ಧನುವ ಯಮಳರು
ತುಡುಕಿದರು ಕಯ್ದುಗಳ ಸಾತ್ಯಕಿ
ಮಿಡುಕಿದನು ಮರುಗಿದರು ಪಂಚದ್ರೌಪದೀಸುತರು
ಒಡೆಯನಳಿವಿನಲೆಲ್ಲಿಯದು ನೃಪ
ನುಡಿದ ನುಡಿಯೆನುತನಿಲತನುಜನ
ಪಡೆ ಗಜಾಶ್ವವ ಬಿಗಿಯೆ ಗಜಬಜಿಸಿತು ಭಟಸ್ತೋಮ ॥40॥
೦೪೧ ದುಗುಡದಲಿ ಹರಿ ...{Loading}...
ದುಗುಡದಲಿ ಹರಿ ರೌಹಿಣೇಯನ
ಮೊಗವ ನೋಡಿದಡಾತನಿದು ಕಾ
ಳೆಗವಲೇ ಕೃತಸಮಯರಾದಿರಿ ಪೂರ್ವಕಾಲದಲಿ
ಹಗೆಯ ಬಿಡಿ ಕುರುಪತಿಯ ಸಂಧಿಗೆ
ಸೊಗಸಿ ನಿಲಲಿ ಯುಧಿಷ್ಠಿರನ ಮಾ
ತುಗಳ ಕೆಡಿಸದಿರೆಂದನಾ ಕೃಷ್ಣಂಗೆ ಬಲರಾಮ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನದೊಳಗಿನ ದುಃಖದಿಂದ ಕೃಷ್ಣ ಬಲರಾಮನ ಮುಖವನ್ನು ನೋಡಿದರೆ, ಅವನು, ಇದು ಕಾಳಗವಲ್ಲವೇ, ಮೊದಲು ನೀವು ಪ್ರತಿಜ್ಞೆಮಾಡಿದ್ದವರಲ್ಲವೇ. ಅದರಂತೆ ಈಗ ದುರ್ಯೋಧನನಲ್ಲಿ ಶತ್ರುತ್ವವನ್ನು ಬಿಡಿ. ದುರ್ಯೋಧನ ಗದಾಯುದ್ಧಕ್ಕೆ ಮೊದಲು ಮಾಡಿಕೊಂಡಿದ್ದ ಸಂಧಾನವನ್ನು ಗೌರವಿಸಿ ನಿಲ್ಲಲಿ. ಧರ್ಮರಾಯನ ಸಂಧಿಯ ಮಾತುಗಳನ್ನು ಕೆಡಿಸಬೇಡ - ಎಂದು ಕೃಷ್ಣನಿಗೆ ಬಲರಾಮ ಹೇಳಿದ.
ಪದಾರ್ಥ (ಕ.ಗ.ಪ)
ದುಗುಡ-ದುಃಖ, ತಳಮಳ, ರೌಹಿಣೇಯ-ರೋಹಿಣಿಯ ಮಗ-ಬಲರಾಮ, ಕೃತಸಮಯ-ಪ್ರತಿಜ್ಞೆ ಮಾಡಿದವರು, ಪೂರ್ವಕಾಲದಲ್ಲಿ-ಮೊದಲು, ಸೊಗಸಿ-ಒಪ್ಪಿ,ಗೌರವಿಸಿ, ಸಂತೋಷದಿಂದ
ಮೂಲ ...{Loading}...
ದುಗುಡದಲಿ ಹರಿ ರೌಹಿಣೇಯನ
ಮೊಗವ ನೋಡಿದಡಾತನಿದು ಕಾ
ಳೆಗವಲೇ ಕೃತಸಮಯರಾದಿರಿ ಪೂರ್ವಕಾಲದಲಿ
ಹಗೆಯ ಬಿಡಿ ಕುರುಪತಿಯ ಸಂಧಿಗೆ
ಸೊಗಸಿ ನಿಲಲಿ ಯುಧಿಷ್ಠಿರನ ಮಾ
ತುಗಳ ಕೆಡಿಸದಿರೆಂದನಾ ಕೃಷ್ಣಂಗೆ ಬಲರಾಮ ॥41॥
೦೪೨ ಅರಸ ಕೇಳೈ ...{Loading}...
ಅರಸ ಕೇಳೈ ಬಿದ್ದ ಭೀಮನ
ಹೊರೆಗೆ ಬಂದರ್ಜುನನು ಮೋರೆಗೆ
ಬೆರಳನೊಡ್ಡಿ ಸಮೀರನಂದನನುಸುರನಾರೈದು
ಮರಳಿದನು ಮುರಹರನನೆಕ್ಕಟಿ
ಗರೆದು ಸಪ್ರಾಣನು ಗದಾನಿ
ರ್ಭರಪರಿಶ್ರಮ ಭೀಮ ಬಳಲಿದನೆಂದನಾ ಪಾರ್ಥ ॥42॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರರಾಜನೇ ಕೇಳು, ನೆಲಕ್ಕೆ ಬಿದ್ದಿರುವ ಭೀಮನ ಸಮೀಪಕ್ಕೆ ಬಂದ ಅರ್ಜುನನು, ಭೀಮನ ಮುಖಕ್ಕೆ (ಮೂಗಿಗೆ) ಬೆರಳನ್ನಿಟ್ಟು ಅವನ ಉಸಿರನ್ನು ಪರೀಕ್ಷಿಸಿ, ಹಿಂದಿರುಗಿದ. ಕೃಷ್ಣನನ್ನು ಪ್ರತ್ಯೇಕವಾಗಿ ಕರೆದು - ಭೀಮ ಬದುಕಿದ್ದಾನೆ. ಯುದ್ಧದ ಶ್ರಮದಿಂದಾಗಿ ಬಳಲಿದ್ದಾನೆ - ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಹೊರೆಗೆ-ಸಮೀಪಕ್ಕೆ, ಪಕ್ಕಕ್ಕೆ, ಆರೈದು-ನೋಡಿ, ಪರೀಕ್ಷಿಸಿ, ಎಕ್ಕಟಿಗರೆದು-ಪ್ರತ್ಯೇಕವಾಗಿ ಕರೆದು, ಸ್ವಲ್ಪದೂರಕ್ಕೆ ಕರೆದು, ಸಪ್ರಾಣ-ಪ್ರಾಣವುಳ್ಳವನು, ನಿರ್ಭರ-ಹೆಚ್ಚಾದ, ವೇಗವಾದ
ಮೂಲ ...{Loading}...
ಅರಸ ಕೇಳೈ ಬಿದ್ದ ಭೀಮನ
ಹೊರೆಗೆ ಬಂದರ್ಜುನನು ಮೋರೆಗೆ
ಬೆರಳನೊಡ್ಡಿ ಸಮೀರನಂದನನುಸುರನಾರೈದು
ಮರಳಿದನು ಮುರಹರನನೆಕ್ಕಟಿ
ಗರೆದು ಸಪ್ರಾಣನು ಗದಾನಿ
ರ್ಭರಪರಿಶ್ರಮ ಭೀಮ ಬಳಲಿದನೆಂದನಾ ಪಾರ್ಥ ॥42॥
೦೪೩ ದೇವ ಬೆಸಸಿನ್ನನಿಲಸೂನು ...{Loading}...
ದೇವ ಬೆಸಸಿನ್ನನಿಲಸೂನು ಸ
ಜೀವನಹಿತನಿಬರ್ಹಣ ಪ್ರ
ಸ್ತಾವವನು ಕರುಣಿಸುವುದಾತನ ಧರ್ಮವಿಕೃತಿಗಳ
ನೀವು ಕಂಡಿರೆ ನಾಭಿ ಜಂಘೆಗೆ
ಡಾವರಿಸಿದನು ಹಲವು ಬಾರಿ ಜ
ಯಾವಲಂಬನವೆಂತು ಕೃಪೆಮಾಡೆಂದನಾ ಪಾರ್ಥ ॥43॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ, ಇನ್ನು ಆಜ್ಞಾಪಿಸು. ಭೀಮ ಸಜೀವನಾಗಿದ್ದಾನೆ. ಶತ್ರುವನ್ನು ನಿವಾರಿಸುವ ಪ್ರಸ್ತಾಪವನ್ನು ಹೇಳಬೇಕು. ಅವನ ಧರ್ಮವಿಕೃತಿಗಳನ್ನು ನೀವು ಕಾಣಲಿಲ್ಲವೆ? ಭೀಮನ ನಾಭಿಪ್ರದೇಶಕ್ಕೆ ಮತ್ತು ತೊಡೆಯ ಪ್ರದೇಶಕ್ಕೆ ಅನೇಕಬಾರಿ ತಿವಿದನು. ಈಗ ನಮಗೆ ಜಯವನ್ನು ಸಂಪಾದಿಸುವ ಬಗೆ ಹೇಗೆಂಬುದನ್ನು ತಿಳಿಸುವ ಕೃಪೆ ಮಾಡಿ - ಎಂದು ಅರ್ಜುನ ಕೃಷ್ಣನನ್ನು ಪ್ರಾರ್ಥಿಸಿದ.
ಪದಾರ್ಥ (ಕ.ಗ.ಪ)
ಬೆಸಸು-ತಿಳಿಸಿ, ಆಜ್ಞಾಪಿಸು, ಅಹಿತ-ಶತ್ರು, ವಿರೋಧಿ, ನಿಬರ್ಹಣ-ಸಂಹಾರ, ಪ್ರಸ್ತಾವ-ಕ್ರಮ, ವಿವರ, ಧರ್ಮವಿಕೃತಿ-ಅಧರ್ಮ, ಧರ್ಮಕ್ಕೆ ಮಾಡಿದ ಅಪಚಾರ, ಡಾವರಿಸು-ತಿವಿ, ಜಯಾವಲಂಬನ-ಜಯವನ್ನು ಅವಲಂಬಿಸುವುದು, ಜಯ ಸಂಪಾದನೆ.
ಮೂಲ ...{Loading}...
ದೇವ ಬೆಸಸಿನ್ನನಿಲಸೂನು ಸ
ಜೀವನಹಿತನಿಬರ್ಹಣ ಪ್ರ
ಸ್ತಾವವನು ಕರುಣಿಸುವುದಾತನ ಧರ್ಮವಿಕೃತಿಗಳ
ನೀವು ಕಂಡಿರೆ ನಾಭಿ ಜಂಘೆಗೆ
ಡಾವರಿಸಿದನು ಹಲವು ಬಾರಿ ಜ
ಯಾವಲಂಬನವೆಂತು ಕೃಪೆಮಾಡೆಂದನಾ ಪಾರ್ಥ ॥43॥
೦೪೪ ನೀವು ಮೊದಲಲಿ ...{Loading}...
ನೀವು ಮೊದಲಲಿ ಬೆಸಸಿದಿರಿ ಮಾ
ಯಾವಿಗಳ ಮಾಯೆಯಲಿ ಗೆಲುವುದು
ದೈವಕೃತಿಯಿದು ರಾಜಮಂತ್ರದ ಸಾರತರವೆಂದು
ಈ ವಿರೋಧಿಯ ಧರ್ಮಗತಿ ಸಂ
ಭಾವವನು ಕರ್ತವ್ಯಭಾವವ
ನೀವು ಬಲ್ಲಿರಿಯೆಂದನರ್ಜುನದೇವ ವಿನಯದಲಿ ॥44॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾಯಾವಿಗಳನ್ನು ಮಾಯೆಯಿಂದಲೇ ಗೆಲ್ಲುವುದು ದೈವಕೃತಿ ಮತ್ತು ರಾಜಮಂತ್ರದ ಸಾರವೆಂದು ನೀವು (ಗದಾಯುದ್ಧದ) ಮೊದಲು ತಿಳಿಸಿದಿರಿ. ಈ ಶತ್ರುವಿನ ಧರ್ಮಮಾರ್ಗದ ಭಾವನೆಯನ್ನು, ಕರ್ತವ್ಯಭಾವಗಳನ್ನು ನೀವು ತಿಳಿದೇ ಇದ್ದೀರಿ - ಎಂದು ಅರ್ಜುನನು ಕೃಷ್ಣನಿಗೆ ವಿನಯದಿಂದ ಹೇಳಿದ.
ಪದಾರ್ಥ (ಕ.ಗ.ಪ)
ದೈವಕೃತಿ-ದೇವತೆಗಳು ಹೇಳಿರುವ ಕೆಲಸ, ದೇವತೆಗಳ ಕೆಲಸ, ಧರ್ಮಗತಿ-ಧರ್ಮಮಾರ್ಗ, ಧರ್ಮದ ನಡವಳಿಕೆ, ಸಂಭಾವ-ಭಾವನೆ, ಅಭಿಪ್ರಾಯ
ಮೂಲ ...{Loading}...
ನೀವು ಮೊದಲಲಿ ಬೆಸಸಿದಿರಿ ಮಾ
ಯಾವಿಗಳ ಮಾಯೆಯಲಿ ಗೆಲುವುದು
ದೈವಕೃತಿಯಿದು ರಾಜಮಂತ್ರದ ಸಾರತರವೆಂದು
ಈ ವಿರೋಧಿಯ ಧರ್ಮಗತಿ ಸಂ
ಭಾವವನು ಕರ್ತವ್ಯಭಾವವ
ನೀವು ಬಲ್ಲಿರಿಯೆಂದನರ್ಜುನದೇವ ವಿನಯದಲಿ ॥44॥
೦೪೫ ಧಾತುಗೆಟ್ಟನು ಭೀಮ ...{Loading}...
ಧಾತುಗೆಟ್ಟನು ಭೀಮ ಮುಸುಕಿತು
ಭೀತಿ ನಮ್ಮೆಲ್ಲರನು ದೈವ
ವ್ರಾತವಾತನ ಕೊಂಡು ಕೊನರಿತು ಹೊಯ್ದು ಹೂಮಳೆಯ
ಪಾತಕಕೆ ಪಡವಾಗದಮಳ
ಖ್ಯಾತಿ ನೋಯದೆ ವಿಜಯಸಿರಿ ರಾ
ಗಾತಿಶಯದಲಿ ನಮ್ಮ ರಮಿಸುವ ದೆಸೆಯ ಬೆಸಸೆಂದ ॥45॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ಶಕ್ತಿಗುಂದಿದ. ನಮ್ಮೆಲ್ಲರನ್ನು ಹೆದರಿಕೆ ಮುತ್ತಿಕೊಂಡಿತು. ದೇವಸಮೂಹವು ಹೂಮಳೆಯನ್ನು ಕರೆದು ದುರ್ಯೋಧನನನ್ನು ಹೊಗಳಿತು. ಪಾಪಕಾರ್ಯಕ್ಕೆ ನೆಲೆಯಾಗದೇ ಶ್ರೇಷ್ಠವಾದ ಖ್ಯಾತಿಗೆ ಕುಂದಾಗದೆ, ವಿಜಯಲಕ್ಷ್ಮಿಯು ಸಂತೋಷಾತಿಶಯದಿಂದ ನಮ್ಮೊಡನೆ ರಮಿಸುವ ದಾರಿಯನ್ನು ತೋರಿಸಿ ಎಂದು ಅರ್ಜುನ ಕೃಷ್ಣನನ್ನು ಕೇಳಿದ.
ಪದಾರ್ಥ (ಕ.ಗ.ಪ)
ಧಾತುಗುಂದು-ಶಕ್ತಿಗುಂದು, ಕೊಂಡುಕೊನರು-ಮೆಚ್ಚಿ ಹೊಗಳು ಪಾತಕ-ಪಾಪದ ಕೆಲಸ, ಪಡ-ನೆಲೆ,
ರಾಗಾತಿಶಯದಲಿ-ಅತಿಶಯವಾದ ಸಂತೋಷದಿಂದ, ಪ್ರೀತಿಯಿಂದ, ಮೆಚ್ಚುಗೆಯಿಂದ
ಮೂಲ ...{Loading}...
ಧಾತುಗೆಟ್ಟನು ಭೀಮ ಮುಸುಕಿತು
ಭೀತಿ ನಮ್ಮೆಲ್ಲರನು ದೈವ
ವ್ರಾತವಾತನ ಕೊಂಡು ಕೊನರಿತು ಹೊಯ್ದು ಹೂಮಳೆಯ
ಪಾತಕಕೆ ಪಡವಾಗದಮಳ
ಖ್ಯಾತಿ ನೋಯದೆ ವಿಜಯಸಿರಿ ರಾ
ಗಾತಿಶಯದಲಿ ನಮ್ಮ ರಮಿಸುವ ದೆಸೆಯ ಬೆಸಸೆಂದ ॥45॥
೦೪೬ ಅನಿಲಸುತ ಸಪ್ರಾಣಿಸಲಿ ...{Loading}...
ಅನಿಲಸುತ ಸಪ್ರಾಣಿಸಲಿ ರಿಪು
ಜನಪನೂರುವಿಭಂಗವೇ ಮು
ನ್ನಿನ ಪ್ರತಿಜ್ಞೆಯಲಾ ಸಭಾಮಧ್ಯದಲಿ ಕುರುಪತಿಯ
ನೆನಸಿಕೊಡಿ ಸಾಕಿನ್ನು ಬೇರೊಂ
ದನುನಯವು ತಾನೇನು ವಿಜಯಾಂ
ಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ ॥46॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ಪುನಃ ಚೇತನಗೊಳ್ಳಲಿ. ದುರ್ಯೋಧನನ ಸಭಾಮಧ್ಯದಲ್ಲಿ ಶತ್ರುರಾಜನ ಊರುಭಂಗ ಮಾಡುತ್ತೇನೆಂಬುದು ಅವನ ಪ್ರತಿಜ್ಞೆಯಲ್ಲವೆ. ಇದನ್ನು ಭೀಮನಿಗೆ ನೆನಪಿಸಿಕೊಡಿ. ಅಷ್ಟುಸಾಕು. ಅದು ಬಿಟ್ಟು ಬೇರೊಂದು ಕ್ರಮವೇನು. ಆಗ ವಿಜಯಲಕ್ಷ್ಮಿಗೆ ದ್ರೌಪದಿಯು ತಪ್ಪದೆ ಸವತಿಯಾಗುತ್ತಾಳೆ (ವಿಜಯಲಕ್ಷ್ಮಿಯು ಪಾಂಡವರನ್ನು ವರಿಸುತ್ತಾಳೆಂದು ಭಾವ) ಎಂದು ಅರ್ಜುನ ಕೃಷ್ಣನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಸಪ್ರಾಣಿಸಲಿ-ಚೇತನವನ್ನು ಪಡೆಯಲಿ, ಪುನಃ ಬದುಕಲಿ, ಅನುನಯ-ಕ್ರಮ, ದ್ರುಪದಕುಮಾರಿ-ದ್ರುಪದನ ಮಗಳು-ದ್ರೌಪದಿ.
ಮೂಲ ...{Loading}...
ಅನಿಲಸುತ ಸಪ್ರಾಣಿಸಲಿ ರಿಪು
ಜನಪನೂರುವಿಭಂಗವೇ ಮು
ನ್ನಿನ ಪ್ರತಿಜ್ಞೆಯಲಾ ಸಭಾಮಧ್ಯದಲಿ ಕುರುಪತಿಯ
ನೆನಸಿಕೊಡಿ ಸಾಕಿನ್ನು ಬೇರೊಂ
ದನುನಯವು ತಾನೇನು ವಿಜಯಾಂ
ಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ ॥46॥
೦೪೭ ಅರಸ ಕೇಳಾಕ್ಷಣದೊಳನಿಲ ...{Loading}...
ಅರಸ ಕೇಳಾಕ್ಷಣದೊಳನಿಲ
ಸ್ಮರಣೆಯನು ಹರಿ ಮಾಡಿದನು ಸಂ
ಚರಿಸಿದನು ತತ್ತನುಜನಂಗೋಪಾಂಗವೀಥಿಯಲಿ
ತರತರದ ನಾಡಿಗಳೊಳಗೆ ವಿ
ಸ್ತರಿಸಿ ಮೂಲಾಧಾರದಲಿ ಚೇ
ತರಿಸಿ ಸರ್ವಾಂಗದಲಿ ಜೀವಸಮೀರ ಪಸರಿಸಿದ ॥47॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು ಆ ಕ್ಷಣದಲ್ಲಿ ಕೃಷ್ಣ ವಾಯುವಿನ ಸ್ಮರಣೆ ಮಾಡಿದನು. ವಾಯುವು ತನ್ನ ಮಗನಾದ ಭೀಮನ ಅಂಗೋಪಾಂಗಗಳಲ್ಲಿ ಸಂಚರಿಸಿದ. ವಿಧವಿಧವಾದ ನಾಡಿಗಳೊಳಗೆ ಪ್ರಸರಿಸಿ, ಮೂಲಾಧಾರದಲ್ಲಿ ಚೇತರಿಸಿ, ಭೀಮನ ಸರ್ವಾವಯಗಳಲ್ಲೂ ಪ್ರಾಣವಾಯುವು ಪಸರಿಸಿದ.
ಪದಾರ್ಥ (ಕ.ಗ.ಪ)
ಅನಿಲಸ್ಮರಣೆ-ವಾಯುಸ್ಮರಣೆ, ವೀಥಿ-ಬೀದಿ, ನಾಡಿ-ಪ್ರಾಣವಾಯುಸಂಚರಿಸುವ ನಾಳ, ಚೇತರಿಸಿ-ಶಕ್ತಿಹೊಂದಿ, ಜೀವಸಮೀರ-ಪ್ರಾಣವಾಯು, ಪಸರಿಸು-ಹರಡು, ವ್ಯಾಪಿಸು.
ಟಿಪ್ಪನೀ (ಕ.ಗ.ಪ)
ಮೂಲಾಧಾರ-ಯೋಗ ಶಾಸ್ತ್ರದಲ್ಲಿ ಹೇಳುವ ಆರು ಚಕ್ರಗಳಲ್ಲಿ ಅತ್ಯಂತ ಕೆಳಗಿನದು-ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧ, ಆಜ್ಞಾ -ಇವು ಸುಷುಮ್ನಾ ನಾಡಿಯ ಷಟ್ಟಕ್ರಗಳು, ಮೋಕ್ಷಸ್ಥಾನವಾದ ಸಹಸ್ರಾರ ಚಕ್ರವೂ ಸೇರಿದರೆ ಚಕ್ರಸಪ್ತಕಗಳೆನ್ನಿಸಿಕೊಳ್ಳುವುದು. (ಕುಮಾರವ್ಯಾಸ ಭಾರತ ಸಂಗ್ರಹ - ಸಂ! ಪ್ರೊ.ಎಂ.ವಿ. ಸೀತಾರಾಮಯ್ಯ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ ಬೆಂಗಳೂರು. ಪುಟ 589)
ಮೂಲ ...{Loading}...
ಅರಸ ಕೇಳಾಕ್ಷಣದೊಳನಿಲ
ಸ್ಮರಣೆಯನು ಹರಿ ಮಾಡಿದನು ಸಂ
ಚರಿಸಿದನು ತತ್ತನುಜನಂಗೋಪಾಂಗವೀಥಿಯಲಿ
ತರತರದ ನಾಡಿಗಳೊಳಗೆ ವಿ
ಸ್ತರಿಸಿ ಮೂಲಾಧಾರದಲಿ ಚೇ
ತರಿಸಿ ಸರ್ವಾಂಗದಲಿ ಜೀವಸಮೀರ ಪಸರಿಸಿದ ॥47॥
೦೪೮ ತ್ರಾಣವಿಮ್ಮಡಿಯಾಯ್ತು ...{Loading}...
ತ್ರಾಣವಿಮ್ಮಡಿಯಾಯ್ತು ತಿರುಗಿದ
ಗೋಣು ಮರಳಿತು ರೋಷವಹ್ನಿಗೆ
ಸಾಣೆವಿಡಿದವೊಲಾಯ್ತು ಕಣ್ಣುಗುಳಿದುವು ಕೇಸುರಿಯ
ಠಾಣವೆಡಹಿದ ಗದೆಯ ರಣಬಿ
ನ್ನಾಣ ಮಸುಳಿದ ಮಾನಮರ್ದನ
ದೂಣೆಯದ ಸವ್ಯಥೆಯ ಭಟ ಸಂತೈಸಿದನು ತನುವ ॥48॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಹದ ಶಕ್ತಿಯು ಎರಡು ಮಡಿ ಹೆಚ್ಚಿತು. ತಿರುಗಿ ಬಿದ್ದಿದ್ದ ಕುತ್ತಿಗೆ ಸಹಜಸ್ಥಿತಿಗೆ ಬಂತು. ರೋಷವೆಂಬ ಅಗ್ನಿಗೆ ಸಾಣೆ ಹಿಡಿದಂತಾಗಿ ಕಣ್ಣುಗಳು ಕೆಂಪು ಉರಿಯನ್ನು ಉಗುಳಿದುವು. ಕೈಜಾರಿದ್ದ ಗದೆಯನ್ನು ಯುದ್ಧ ವಿದ್ಯೆಯನ್ನು ಮರೆತಿದ್ದ ಅಭಿಮಾನ ಭಂಗ ಹೊಂದಿದ್ದ , ವ್ಯಥೆಯಿಂದ ತುಂಬಿದ್ದ ವೀರನಾದ ಭೀಮ ತನ್ನ ಶರೀರವನ್ನು ಸುಸ್ಥಿತಿಗೆ ತಂದುಕೊಂಡ.
ಪದಾರ್ಥ (ಕ.ಗ.ಪ)
ತ್ರಾಣ-ಶಕ್ತಿ, ಇಮ್ಮಡಿ-ಎರಡುಪಟ್ಟು, ಗೋಣು-ಕತ್ತು, ಕುತ್ತಿಗೆ, ರೋಷವಹ್ನಿ-ರೋಷವೆಂಬ ಅಗ್ನಿ, ಸಾಣೆವಿಡಿ-ಸಾಣೆಹಿಡಿ, ಮಸೆ, ಕೇಸುರಿ- ಅಗ್ನಿಜ್ವಾಲೆ, ಬೆಂಕಿ, ಠಾಣವೆಡಹಿದ-ಸ್ಥಾನವನ್ನು ತಪ್ಪಿದ, ರಣಬಿನ್ನಾಣ-ಯುದ್ಧಕೌಶಲ, ಮಸುಳಿದ-ಮಾಸಿದ, ಮರೆತ, ಬಣ್ಣಗೆಟ್ಟ, ಸವ್ಯಥೆ-ವ್ಯಥೆಯಿಂದ ಕೂಡಿದ, ದುಃಖಭರಿತನಾದ, ತನು-ಶರೀರ, ದೇಹ, ಸಂತೈಸು-ಸಮಾಧಾನಿಸು.
ಮೂಲ ...{Loading}...
ತ್ರಾಣವಿಮ್ಮಡಿಯಾಯ್ತು ತಿರುಗಿದ
ಗೋಣು ಮರಳಿತು ರೋಷವಹ್ನಿಗೆ
ಸಾಣೆವಿಡಿದವೊಲಾಯ್ತು ಕಣ್ಣುಗುಳಿದುವು ಕೇಸುರಿಯ
ಠಾಣವೆಡಹಿದ ಗದೆಯ ರಣಬಿ
ನ್ನಾಣ ಮಸುಳಿದ ಮಾನಮರ್ದನ
ದೂಣೆಯದ ಸವ್ಯಥೆಯ ಭಟ ಸಂತೈಸಿದನು ತನುವ ॥48॥
೦೪೯ ಕೊಡಹಿದನು ತನುಧೂಳಿಯನು ...{Loading}...
ಕೊಡಹಿದನು ತನುಧೂಳಿಯನು ಧಾ
ರಿಡುವ ರುಧಿರವ ಸೆರಗಿನಲಿ ಸಲೆ
ತೊಡೆತೊಡೆದು ಕರ್ಪುರದ ಕವಳವನಣಲೊಳಳವಡಿಸಿ
ತೊಡೆಯ ಹೊಯ್ದಾರುವ ಮುರಾರಿಯ
ನೆಡೆಯುಡುಗದೀಕ್ಷಿಸುತ ದೂರಕೆ
ಸಿಡಿದ ಗದೆಯನು ತುಡುಕಿ ನೃಪತಿಯ ತೊಡೆಗೆ ಲಾಗಿಸಿದ ॥49॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ತನ್ನ ದೇಹಕ್ಕೆ ಅಂಟಿದ್ದ ಧೂಳನ್ನು ಕೂಡಹಿದ. ಧಾರೆಯಾಗಿ ಹರಿಯುತ್ತಿದ್ದ ರಕ್ತವನ್ನು ತನ್ನ ಧೋತ್ರದ ಸೆರಗಿನಿಂದ ಒರೆಸಿ, ಪಚ್ಚಕರ್ಪೂರದಿಂದ ಕೂಡಿದ ತಾಂಬೂಲವನ್ನು ಬಾಯಿಯೊಳಕ್ಕೆ ಇಟ್ಟುಕೊಂಡು, ತೊಡೆಯನ್ನು ತಟ್ಟಿಕೊಂಡು ಕೂಗುತ್ತಿರುವ ಕೃಷ್ಣನನ್ನು ಒಂದೇ ದೃಷ್ಟಿಯಿಂದ ನೋಡುತ್ತ ಗದೆಯನ್ನು ಕೈಗೆ ತೆಗೆದುಕೊಂಡು ದುರ್ಯೋಧನನ ತೊಡೆಗೆ ಗುರಿ ಇಟ್ಟ.
ಪದಾರ್ಥ (ಕ.ಗ.ಪ)
ಧಾರಿಡುವ-ಧಾರೆಯಾಗಿ ಹರಿಯುವ, ಕವಳ-ತಾಂಬೂಲ, ಅಣಲು-ಬಾಯಿನ ಒಳಭಾಗ, ಆರುವ-ಕೂಗುವ, ಆರ್ಭಟಿಸುವ, ಎಡೆಯುಡುಗದೆ-ನಿಟ್ಟಿಸಿ
ಮೂಲ ...{Loading}...
ಕೊಡಹಿದನು ತನುಧೂಳಿಯನು ಧಾ
ರಿಡುವ ರುಧಿರವ ಸೆರಗಿನಲಿ ಸಲೆ
ತೊಡೆತೊಡೆದು ಕರ್ಪುರದ ಕವಳವನಣಲೊಳಳವಡಿಸಿ
ತೊಡೆಯ ಹೊಯ್ದಾರುವ ಮುರಾರಿಯ
ನೆಡೆಯುಡುಗದೀಕ್ಷಿಸುತ ದೂರಕೆ
ಸಿಡಿದ ಗದೆಯನು ತುಡುಕಿ ನೃಪತಿಯ ತೊಡೆಗೆ ಲಾಗಿಸಿದ ॥49॥
೦೫೦ ಭಾಷೆಗಳುಪರು ಪಾಣ್ಡುಸುತರೆಂ ...{Loading}...
ಭಾಷೆಗಳುಪರು ಪಾಂಡುಸುತರೆಂ
ಬಾಸೆಯಲಿ ನಿನ್ನಾತ ಮೈಮರೆ
ದೋಸರಿಸದಿದಿರಾದನೂರುದ್ವಯವ ವಂಚಿಸದೆ
ಶ್ವಾಸ ಮರಳಿತೆ ನಿನಗೆ ಯೋಗಾ
ಭ್ಯಾಸಿಯಹೆಯೋ ಭೀಮ ಸೈರಣೆ
ಲೇಸು ಮೆಚ್ಚಿದೆನೆನುತ ನೃಪನೆರಗಿದನು ಪವನಜನ ॥50॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡುವಿನ ಮಕ್ಕಳು ಕೊಟ್ಟಭಾಷೆಗೆ ತಪ್ಪುವುದಿಲ್ಲವೆಂಬ ಆಸೆಯಿಂದ ನಿನ್ನ ಮಗನಾದ ದುರ್ಯೋಧನ ಮೈಮರೆತು ಹಿಂಜರಿಯದೆ, ತನ್ನ ತೊಡೆಗಳೆರಡನ್ನು ತಪ್ಪಿಸದೆ ಭೀಮನ ಇದಿರಿಗೆ ಬಂದ. ಭೀಮಾ, ನಿನಗೆ ಉಸಿರು ಹಿಂದಿರುಗಿತೆ, ನೀನು ಯೋಗಾಭ್ಯಾಸಿಯಾಗಿದ್ದೀಯೆ, ನಿನ್ನ ಸೈರಣೆ ಒಳ್ಳೆಯದು, ನಾನು ಮೆಚ್ಚಿದ್ದೇನೆ ಎಂದು ಹೇಳುತ್ತ ಅರಸನು ಭೀಮನ ಮೇಲೆ ಎರಗಿದ.
ಪದಾರ್ಥ (ಕ.ಗ.ಪ)
ಭಾಷೆಗಳುಪರು-ಕೊಟ್ಟ ಮಾತಿಗೆ ತಪ್ಪರು (ಅಳುಪು-ಹಿಮ್ಮೆಟ್ಟು), ಓಸರಿಸಿ-ಹಿಂಜರಿದು, ಓರೆಯಾಗಿ, ಅರುಗಾಗಿ,
ವಂಚಿಸು-ಮರೆಮಾಡು, ಶ್ವಾಸ-ಉಸಿರು, ಸೈರಣೆ- ಸಾಮಥ್ರ್ಯ.
ಮೂಲ ...{Loading}...
ಭಾಷೆಗಳುಪರು ಪಾಂಡುಸುತರೆಂ
ಬಾಸೆಯಲಿ ನಿನ್ನಾತ ಮೈಮರೆ
ದೋಸರಿಸದಿದಿರಾದನೂರುದ್ವಯವ ವಂಚಿಸದೆ
ಶ್ವಾಸ ಮರಳಿತೆ ನಿನಗೆ ಯೋಗಾ
ಭ್ಯಾಸಿಯಹೆಯೋ ಭೀಮ ಸೈರಣೆ
ಲೇಸು ಮೆಚ್ಚಿದೆನೆನುತ ನೃಪನೆರಗಿದನು ಪವನಜನ ॥50॥
೦೫೧ ಹೊಯ್ದು ಲಳಿಯಲಿ ...{Loading}...
ಹೊಯ್ದು ಲಳಿಯಲಿ ಕರಣಗತಿಯಲಿ
ಹಾಯ್ದು ನಭಕುಪ್ಪರಿಸಿ ಮರಳಿದು
ಹೊಯ್ದು ಹಿಂಗುವ ನೃಪನ ತೊಡೆಗಳನಿಟ್ಟನಾ ಭೀಮ
ಹಾಯ್ದು ಗದೆ ಹೆದ್ದೊಡೆಗಳನು ಮುರಿ
ದಯ್ದಿತವನಿಯನರುಣಜಲದಲಿ
ತೊಯ್ದು ಧೊಪ್ಪನೆ ಕೆಡೆದನಿಳೆಯಲಿ ಕೌರವರ ರಾಯ ॥51॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಭಸದಿಂದ ಹೊಡೆದು ಅಂಗಾಂಗಗಳ ಸಂಚಲನೆಯಿಂದ ಓಡಿ ಆಕಾಶಕ್ಕೆ ನೆಗೆದು ಕೆಳಕ್ಕೆ ಬರುವಾಗ ಹೊಡೆದು ತಪ್ಪಿಸಿಕೊಳ್ಳುತ್ತಿದ್ದ ಅರಸನ ತೊಡೆಗಳಿಗೆ ಗದೆಯಿಂದ ಭೀಮ ಹೊಡೆದ. ಗದೆಯು ಹಾರಿಹೋಗಿ ದುರ್ಯೋಧನನ ದೊಡ್ಡತೊಡೆಗಳನ್ನು ಮುರಿದು ಭೂಮಿಯ ಮೇಲೆ ಬಿತ್ತು. ಕೌರವರಾಯ ರಕ್ತದಲ್ಲಿ ನೆನೆದು ಧೊಪ್ಪನೆ ಭೂಮಿಯ ಮೇಲೆ ಬಿದ್ದ.
ಪದಾರ್ಥ (ಕ.ಗ.ಪ)
ಲಳಿ-ರಭಸ, ಆವೇಶ, ಚುರುಕು, ಚಾಕಚಕ್ಯತೆ, ಉತ್ಸಾಹ, ಕರಣಗತಿ-ಅಂಗಾಂಗಗಳ ಚಲನೆ, ಅಂಗಾಂಗಗಳ ವರಸೆ, ನಭ-ಆಕಾಶ, ಉಪ್ಪರಿಸು-ನೆಗೆ, ಹಾರು, ಹಿಂಗುವ-ತಪ್ಪಿಸಿಕೊಳ್ಳುವ, ಇಟ್ಟನು-ಹೊಡೆದನು.
ಮೂಲ ...{Loading}...
ಹೊಯ್ದು ಲಳಿಯಲಿ ಕರಣಗತಿಯಲಿ
ಹಾಯ್ದು ನಭಕುಪ್ಪರಿಸಿ ಮರಳಿದು
ಹೊಯ್ದು ಹಿಂಗುವ ನೃಪನ ತೊಡೆಗಳನಿಟ್ಟನಾ ಭೀಮ
ಹಾಯ್ದು ಗದೆ ಹೆದ್ದೊಡೆಗಳನು ಮುರಿ
ದಯ್ದಿತವನಿಯನರುಣಜಲದಲಿ
ತೊಯ್ದು ಧೊಪ್ಪನೆ ಕೆಡೆದನಿಳೆಯಲಿ ಕೌರವರ ರಾಯ ॥51॥
೦೫೨ ಹಾರ ಹರಿದುದು ...{Loading}...
ಹಾರ ಹರಿದುದು ಕರ್ಣಪೂರದ
ಚಾರು ಮೌಕ್ತಿಕನಿಕರ ಸಿಡಿದವು
ಧಾರಿಡುವ ರಕುತಾಂಬು ಮಡುಗಟ್ಟಿದುದು ಮಗ್ಗುಲಲಿ
ವೀರ ಭೀಮಾ ಮಝ ಎನುತ ಬಲ
ವಾರಿದುದು ನಿಸ್ಸಾಳ ಸೂಳಿನ
ವೀರಪಣಹದ ಲಗ್ಗೆ ಮಸಗಿತು ಪರರ ಥಟ್ಟಿನಲಿ ॥52॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಹಾರಗಳು ಹರಿದು ಹೋದವು. ಕರ್ಣಾಭರಣಗಳ ಸುಂದರವಾದ ಮುತ್ತುಗಳ ಸಮೂಹವು ಸಿಡಿದು ಚಲ್ಲಾಪಿಲ್ಲಿಯಾದವು. ಪ್ರವಾಹವಾಗಿ ಹರಿಯುತ್ತಿದ್ದ ರಕ್ತ ಪಕ್ಕದಲ್ಲಿ ಮಡುಗಟ್ಟಿತು. ವೀರ ಭೀಮಾ, ಮಝ ಎಂದು ಪಾಂಡವ ಸೈನ್ಯವು ಕೂಗಿದುವು. ಶತ್ರುಗಳಾದ ಪಾಂಡವರ ಸೈನ್ಯದಲ್ಲಿ ನಿಸ್ಸಾಳ, ಪಣಹ ಮುಂತಾದ ಹಲವು ವಾದ್ಯಗಳು ವಿಜಯ ಸೂಚಕವಾಗಿ ಶಬ್ದ ಮಾಡಿದವು.
ಪದಾರ್ಥ (ಕ.ಗ.ಪ)
ಕರ್ಣಪೂರ-ಕಿವಿಯ ಆಭರಣ, ಚಾರು-ಸುಂದರವಾದ, ಮನೋಹರವಾದ, ಮೌಕ್ತಿಕನಿಕರ-ಮುತ್ತುಗಳ ಸಮೂಹ, ಧಾರಿಸು-ಧಾರೆಯಾಗಿಹರಿ, ಪ್ರವಾಹದಂತೆ ನುಗ್ಗು, ಆರಿದುದು-ಶಬ್ದ ಮಾಡಿತು, ಕೂಗಿತು, ಗರ್ಜಿಸಿತು, ನಿಸ್ಸಾಳ-ಒಂದು ರಣವಾದ್ಯ, ಸೂಳು -ಸೂಚನೆ ವೀರಪಣಹ-ಗಟ್ಟಿಯಾಗಿ ಘೋಷಿಸುವ ಒಂದು ವಾದ್ಯ, ಲಗ್ಗೆ-ಹಲವು ವಾದ್ಯಗಳ ಮೇಳ, ಗದ್ದಲ, ಮುತ್ತಿಗೆ ಆಕ್ರಮಣ, ಮಸಗು-ಶಬ್ದಮಾಡು, ಪರರಥಟ್ಟು-ಶತ್ರುಸೈನ್ಯ (ಇಲ್ಲಿ ಪಾಂಡವರ ಸೈನ್ಯ)
ಮೂಲ ...{Loading}...
ಹಾರ ಹರಿದುದು ಕರ್ಣಪೂರದ
ಚಾರು ಮೌಕ್ತಿಕನಿಕರ ಸಿಡಿದವು
ಧಾರಿಡುವ ರಕುತಾಂಬು ಮಡುಗಟ್ಟಿದುದು ಮಗ್ಗುಲಲಿ
ವೀರ ಭೀಮಾ ಮಝ ಎನುತ ಬಲ
ವಾರಿದುದು ನಿಸ್ಸಾಳ ಸೂಳಿನ
ವೀರಪಣಹದ ಲಗ್ಗೆ ಮಸಗಿತು ಪರರ ಥಟ್ಟಿನಲಿ ॥52॥
೦೫೩ ಬಿದ್ದನೈ ನಿನ್ನಾತನಿನ್ನೇ ...{Loading}...
ಬಿದ್ದನೈ ನಿನ್ನಾತನಿನ್ನೇ
ನೆದ್ದರೈ ದಾಯಿಗರು ಜೂಜನು
ಗೆದ್ದುದಕೆ ಫಲ ಬಂದುದೇ ಸಂಧಾನದಲಿ ಛಲವ
ಹೊದ್ದಿತಕೆ ಹುಲಿಸಾಯ್ತೆ ಬಲುವಗೆ
ಬಿದ್ದನೆಂದುಳುಹಿದನೆ ಪವನಜ
ನುದ್ದುರುಟುತನಕೇನನೆಂಬೆನು ಭೂಪ ಕೇಳ್ ಎಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಮಗ ಬಿದ್ದ. ಇನ್ನೇನು ದಾಯಾದಿಗಳು ಎದ್ದರು. ಜೂಜಿನಲ್ಲಿ ಗೆದ್ದುದಕ್ಕೆ ಫಲಸಿಕ್ಕಿತೇ, ಸಂಧಾನ ಮಾಡುವ ಸಮಯದಲ್ಲಿ ಹಠವನ್ನು ಹಿಡಿದುದಕ್ಕೆ ಹುಲುಸಾದ ಬೆಳೆ ಸಿಕ್ಕಿತೇ, ಬಲುಹಗೆಯಾದ ದುರ್ಯೋಧನ ಕೆಳಕ್ಕೆ ಬಿದ್ದನೆಂದು ಭೀಮ ಅವನನ್ನು ಉಳಿಸಿದನೇ, ಅವನ ಒರಟುತನಕ್ಕೆ ಏನು ಹೇಳಲಿ ರಾಜನೇ ಕೇಳು - ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ದಾಯಿಗರು-ಆಸ್ತಿಯಲ್ಲಿ ಭಾಗ ಕೇಳುವವರು, ದಾಯಾದಿಗಳು, ಹೊದ್ದಿತಕೆ-ಹಿಡಿದುದಕ್ಕೆ, ಆಶ್ರಯಿಸಿದುದಕ್ಕೆ, ಹುಲುಸಾಯ್ತೆ-ಹುಲುಸಾದ ಬೆಳೆಬಂತೆ, ಉದ್ದುರುಟುತನ-ಒರಟುತನ, ಅಹಂಕಾರ
ಮೂಲ ...{Loading}...
ಬಿದ್ದನೈ ನಿನ್ನಾತನಿನ್ನೇ
ನೆದ್ದರೈ ದಾಯಿಗರು ಜೂಜನು
ಗೆದ್ದುದಕೆ ಫಲ ಬಂದುದೇ ಸಂಧಾನದಲಿ ಛಲವ
ಹೊದ್ದಿತಕೆ ಹುಲಿಸಾಯ್ತೆ ಬಲುವಗೆ
ಬಿದ್ದನೆಂದುಳುಹಿದನೆ ಪವನಜ
ನುದ್ದುರುಟುತನಕೇನನೆಂಬೆನು ಭೂಪ ಕೇಳೆಂದ ॥53॥
೦೫೪ ಏಕೆ ಸಞ್ಜಯ ...{Loading}...
ಏಕೆ ಸಂಜಯ ಕೌರವೇಂದ್ರನ
ಸಾಕಿತಕೆ ಫಲವಾಯ್ತು ನೀ ಬರಿ
ದೇಕೆ ಚುಚ್ಚುವೆ ಕಾಸಿ ಬಾದಣಗೊರೆದ ಘಾಯದಲಿ
ನೂಕಿದರೆ ಬಲಭದ್ರನನು ಮೇ
ಲೇಕೆ ಪವನಜ ಮುನಿದನವರ
ವ್ಯಾಕುಳರಲೇ ವೀರನಾರಾಯಣನ ಕರುಣದಲಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯ, ಕೌರವೇಂದ್ರನನ್ನು ಈವರೆಗೆ ಸಾಕಿದ್ದಕ್ಕೆ ಸರಿಯಾದ ಫಲವೇ ಸಿಕ್ಕಿತು. ಲೋಹದ ಮೊನೆಯನ್ನು ಬಿಸಿಮಾಡಿ ರಂಧ್ರ ಕೊರೆದ ಗಾಯಗಳಿಗೆ ನೀನು ಸುಮ್ಮನೆ ಏಕೆ ಚುಚ್ಚುತ್ತೀಯ. ಬಲರಾಮನನ್ನು ಪಾಂಡವರು ಹೊರಕ್ಕೆ ಕಳಿಸಿದರೆ? ದುರ್ಯೋಧನ ಸೋತುಬಿದ್ದ ನಂತರವೂ ಭೀಮನು ಏಕೆ ಕೋಪಗೊಂಡ? ಪಾಂಡವರು ವೀರನಾರಾಯಣನ ಕರುಣೆಯಿಂದ, ಚಿಂತಾರಹಿತರಲ್ಲವೇ - ಎಂದು ಧೃತರಾಷ್ಟ್ರ ಕೇಳಿದ.
ಪದಾರ್ಥ (ಕ.ಗ.ಪ)
ಕಾಸಿ-ಕಾಯಿಸಿ, ಬಿಸಿಮಾಡಿ, ಬಾದಣಗೊರೆದ-ತೂತುಮಾಡಿದ, ರಂಧ್ರಮಾಡಿದ, ತೂತಾಗುವಂತೆ ಕೊರೆದ, ಅವ್ಯಾಕುಳರು-ದುಃಖವಿಲ್ಲದವರು, ಚಿಂತೆಯಿಲ್ಲದವರು.
ಟಿಪ್ಪನೀ (ಕ.ಗ.ಪ)
- “ನೂಕಿದರೆ ಬಲಭದ್ರನನು” - ಭೀಮ ಅಧರ್ಮ ಯುದ್ಧದಿಂದ ದುರ್ಯೋಧನನ ತೊಡೆಗೆ ಹೊಡೆದರೂ ಬಲರಾಮನು ಏಕೆ ಸುಮ್ಮನಿದ್ದ? ಎಂಬ ಭಾವ.
ಮೂಲ ...{Loading}...
ಏಕೆ ಸಂಜಯ ಕೌರವೇಂದ್ರನ
ಸಾಕಿತಕೆ ಫಲವಾಯ್ತು ನೀ ಬರಿ
ದೇಕೆ ಚುಚ್ಚುವೆ ಕಾಸಿ ಬಾದಣಗೊರೆದ ಘಾಯದಲಿ
ನೂಕಿದರೆ ಬಲಭದ್ರನನು ಮೇ
ಲೇಕೆ ಪವನಜ ಮುನಿದನವರ
ವ್ಯಾಕುಳರಲೇ ವೀರನಾರಾಯಣನ ಕರುಣದಲಿ ॥54॥