೦೦೦ ಸೂ ರಞ್ಜಿಸಿತು ...{Loading}...
ಸೂ. ರಂಜಿಸಿತು ತ್ರೈಭುವನವನು ರಿಪು
ಭಂಜನದ ಭಾರವಣೆ ಸುಭಟರ
ನಂಜಿಸಿತು ಕಲಿಭೀಮದುರಿಯೋಧನರ ಸಂಗ್ರಾಮ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನಾ: ವೀರರಾದ ಭೀಮ ದುರ್ಯೋಧನರ ಶತ್ರುಸಂಹಾರದ ಘನತೆಯು ಮೂರು ಲೋಕಗಳನ್ನು ರಂಜಿಸಿತು; ಸುಭಟರನ್ನು ಅಂಜಿಸಿತು.
ಪದಾರ್ಥ (ಕ.ಗ.ಪ)
ತ್ರೈಭುವನ-ಸ್ವರ್ಗ-ಮರ್ತ್ಯ-ಪಾತಾಳಗಳೆಂಬ ಮೂರು ಲೋಕಗಳು, ರಿಪುಭಂಜನ- ಶತ್ರುಸಂಹಾರ, ಭಾರವಣೆ-ಘನತೆ, ಗೌರವ, ಹೊರೆ, ಭಾರ, ಹೆಚ್ಚಳ
ಮೂಲ ...{Loading}...
ಸೂ. ರಂಜಿಸಿತು ತ್ರೈಭುವನವನು ರಿಪು
ಭಂಜನದ ಭಾರವಣೆ ಸುಭಟರ
ನಂಜಿಸಿತು ಕಲಿಭೀಮದುರಿಯೋಧನರ ಸಂಗ್ರಾಮ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲ ಸಹಿತ ಯುಧಿಷ್ಠಿರಾದಿ ನೃ
ಪಾಲಕರು ಕಾಣಿಕೆಯನಿತ್ತರು ನಮಿಸಿ ಹಲಧರಗೆ
ಮೇಲುದುಗುಡದ ಮುಖದ ನೀರೊರೆ
ವಾಲಿಗಳ ಕಕ್ಷದ ಗದೆಯ ಭೂ
ಪಾಲ ಬಂದನು ನೊಸಲ ಚಾಚಿದನವರ ಚರಣದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರರಾಜನೇ ಕೇಳು, ಕೃಷ್ಣಸಹಿತ ಧರ್ಮರಾಯನೇ ಮೊದಲಾದ ರಾಜರುಗಳು ಬಲರಾಮನಿಗೆ ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿದರು. ಚಿಂತಾಕ್ರಾಂತ ಮುಖದ, ನೀರು ಒಸರುತ್ತಿರುವ ಕಣ್ಣುಗಳ, ಕಂಕುಳಲ್ಲಿನ ಗದೆಯ ದುರ್ಯೋಧನರಾಜನು ಬಂದು ಬಲರಾಮನ ಚರಣಗಳಲ್ಲಿ ತನ್ನ ಹಣೆಯನ್ನಿಟ್ಟನು. (ನಮಸ್ಕಾರ ಮಾಡಿದನು)
ಪದಾರ್ಥ (ಕ.ಗ.ಪ)
ಸಿರಿಲೋಲ-ಶ್ರೀಲೋಲ, ಕೃಷ್ಣ, ಹಲಧರ-ನೇಗಿಲನ್ನು ಹಿಡಿದಿರುವವನು, ನೇಗಿಲನ್ನು ಆಯುಧವನ್ನಾಗಿ ಉಳ್ಳವನು, ಬಲರಾಮ, ಮೇಲುದುಗುಡದ-ಎದ್ದುಕಾಣುವಂತೆ ಚಿಂತಾಕ್ರಾಂತನಾದವನು, ನೀರೊರೆವ-ನೀರು ಒಸರುತ್ತಿರುವ, ಆಲಿ-ಕಣ್ಣು, ಕಕ್ಷ-ತೋಳಿನ ಸಂದಿ, ಕಂಕುಳು, ನೊಸಲು-ಹಣೆ.
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲ ಸಹಿತ ಯುಧಿಷ್ಠಿರಾದಿ ನೃ
ಪಾಲಕರು ಕಾಣಿಕೆಯನಿತ್ತರು ನಮಿಸಿ ಹಲಧರಗೆ
ಮೇಲುದುಗುಡದ ಮುಖದ ನೀರೊರೆ
ವಾಲಿಗಳ ಕಕ್ಷದ ಗದೆಯ ಭೂ
ಪಾಲ ಬಂದನು ನೊಸಲ ಚಾಚಿದನವರ ಚರಣದಲಿ ॥1॥
೦೦೨ ಇಳಿದು ಗಜಹಯರಥವ ...{Loading}...
ಇಳಿದು ಗಜಹಯರಥವ ಸುಭಟಾ
ವಳಿ ಕೃತಾಂಜಲಿ ನೊಸಲೊಳಿರೆ ಕೆಲ
ಬಲಕೆ ಸಾರ್ದರು ನೋಡಿದನು ಪಾಂಡವ ಪತಾಕಿನಿಯ
ಉಳಿದುದೀಚೆಯಲೀಸು ಬಲವಿವ
ನುಳಿದನೊಬ್ಬನೆ ದೈವಗತಿಗಾ
ರಳಲಿ ಮಾಡುವುದೇನೆನುತ ನುಡಿಸಿದನು ಕುರುಪತಿಯ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರ ಸೈನಿಕರ ಸಮೂಹವು ಆನೆ, ಕುದುರೆ, ರಥಗಳನ್ನು ಇಳಿದು ಎರಡೂ ಕೈಗಳನ್ನು ಹಣೆಯ ಮೇಲಿಟ್ಟು ಬಲರಾಮನಿಗೆ ನಮಸ್ಕರಿಸುತ್ತಿರಲು, ಅಕ್ಕ ಪಕ್ಕಗಳಲ್ಲಿ ಬಂದು ನಿಂತ ಪಾಂಡವ ಸೈನ್ಯವನ್ನು ನೋಡಿದ. ಈಚೆಯ ಪಾಂಡವರ ಸೈನ್ಯದಲ್ಲಿ ಇಷ್ಟು ಸೈನ್ಯ ಉಳಿದಿದೆ. ಇವನು (ದುರ್ಯೋಧನ) ಉಳಿದವನು ಒಬ್ಬನೆ, ದೈವಗತಿಗೆ ಯಾರು ದುಃಖಿಸಿ ಏನು ಮಾಡಲು ಸಾಧ್ಯ ಎನ್ನುತ್ತ ದುರ್ಯೋಧನನನ್ನು ಮಾತನಾಡಿಸಿದ.
ಪದಾರ್ಥ (ಕ.ಗ.ಪ)
ಕೃತಾಂಜಲಿ-ಹಸ್ತವಿನ್ಯಾಸ ಮಾಡಿರುವ, ಕೈಗಳನ್ನು ಬೋಗಸೆಮಾಡಿರುವ (ಈ ಸಂದರ್ಭದಲ್ಲಿ - ಕೈಗಳನ್ನು ಮುಗಿದಿರುವ)
ನೊಸಲು-ಹಣೆ, ಪತಾಕಿನಿ-ಧ್ವಜವನ್ನುಳ್ಳದ್ದು, ಸೈನ್ಯ,
ದೈವಗತಿ-ದೈವದ ಇಚ್ಛೆ, ಹಣೆಯ ಬರಹ,
ಅಳಲು-ದುಃಖ.
ಮೂಲ ...{Loading}...
ಇಳಿದು ಗಜಹಯರಥವ ಸುಭಟಾ
ವಳಿ ಕೃತಾಂಜಲಿ ನೊಸಲೊಳಿರೆ ಕೆಲ
ಬಲಕೆ ಸಾರ್ದರು ನೋಡಿದನು ಪಾಂಡವ ಪತಾಕಿನಿಯ
ಉಳಿದುದೀಚೆಯಲೀಸು ಬಲವಿವ
ನುಳಿದನೊಬ್ಬನೆ ದೈವಗತಿಗಾ
ರಳಲಿ ಮಾಡುವುದೇನೆನುತ ನುಡಿಸಿದನು ಕುರುಪತಿಯ ॥2॥
೦೦೩ ಗುರುವೊ ಗಙ್ಗಾಸುತನೊ ...{Loading}...
ಗುರುವೊ ಗಂಗಾಸುತನೊ ಮಾದ್ರೇ
ಶ್ವರನೊ ಕರ್ಣನೊ ಸೈಂಧವನೊ ಸೋ
ದರರ ಶತಕವೊ ಪುತ್ರ ಮಿತ್ರ ಜ್ಞಾತಿ ಬಾಂಧವರೊ
ಹರಸಿ ಕುರಿಗಳನಿಕ್ಕಿದಡೆ ಗೋ
ಚರಿಸದೇ ರಣವಿಜಯನಿಧಿ ಹರ
ಹರ ಎನುತ ಕರಗಿದನು ಕಡು ಕರುಣದಲಿ ಬಲರಾಮ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಪರವಾಗಿದ್ದವರು ಎಷ್ಟುಮಂದಿ! ದ್ರೋಣನೋ, ಭೀಷ್ಮನೋ, ಶಲ್ಯನೋ, ಕರ್ಣನೋ, ಸೈಂಧವನೋ, ನೂರುಜನ ತಮ್ಮಂದಿರೋ, ಮಕ್ಕಳೋ, ಸ್ನೇಹಿತರೋ, ದಾಯಾದ ಬಂಧುಗಳೋ; ಇವರುಗಳ ಬದಲಿಗೆ ಹರಕೆ ಹೊತ್ತು ಕುರಿಗಳನ್ನು ಸಂಹಾರ ಮಾಡಿದ್ದರೆ ಯುದ್ಧದ ಗೆಲುವೆಂಬ ಐಶ್ವರ್ಯ ಕಾಣಿಸದೇ ಹೋಗುತ್ತಿತ್ತೆ (ಇಷ್ಟು ದೊಡ್ಡ ಸಂಖ್ಯೆಯ ವೀರಾಧಿವೀರರನ್ನು ಯುದ್ಧದಲ್ಲಿ ಬಲಿಕೊಡುವ ಬದಲು ಅಷ್ಟು ಸಂಖ್ಯೆಯ ಕುರಿಗಳನ್ನಾದರೂ ಹರಕೆ ಹೊತ್ತು ಬಲಿಕೊಟ್ಟಿದ್ದರೂ ಯುದ್ಧದಲ್ಲಿ ಜಯ ದೊರೆಯುತ್ತಿತ್ತು) - ಹರಹರಾ ಎನ್ನುತ್ತ ಹೆಚ್ಚಿನ ಕರುಣೆಯಿಂದ ಬಲರಾಮ ಕರಗಿಹೋದ!
ಪದಾರ್ಥ (ಕ.ಗ.ಪ)
ಜ್ಞಾತಿ-ದಾಯಾದಿ, ಹರಸಿ-ಹರಕೆ ಹೊತ್ತು, ರಣವಿಜಯನಿಧಿ-ಯುದ್ಧದಲ್ಲಿ ಜಯವೆಂಬ ಐಶ್ವರ್ಯ.
ಮೂಲ ...{Loading}...
ಗುರುವೊ ಗಂಗಾಸುತನೊ ಮಾದ್ರೇ
ಶ್ವರನೊ ಕರ್ಣನೊ ಸೈಂಧವನೊ ಸೋ
ದರರ ಶತಕವೊ ಪುತ್ರ ಮಿತ್ರ ಜ್ಞಾತಿ ಬಾಂಧವರೊ
ಹರಸಿ ಕುರಿಗಳನಿಕ್ಕಿದಡೆ ಗೋ
ಚರಿಸದೇ ರಣವಿಜಯನಿಧಿ ಹರ
ಹರ ಎನುತ ಕರಗಿದನು ಕಡು ಕರುಣದಲಿ ಬಲರಾಮ ॥3॥
೦೦೪ ಆಹವದಿ ಪಾಣ್ಡವ ...{Loading}...
ಆಹವದಿ ಪಾಂಡವ ಮಮ ಪ್ರಾ
ಣಾಹಿ ಎಂಬೀ ನುಡಿಯ ಸಲಿಸಿದೆ
ಬೇಹವರನುಳುಹಿದೆ ಕುಮಾರರ ನಿನ್ನ ಮೈದುನರ
ಗಾಹುಗತಕದಲೆಮ್ಮ ಶಿಷ್ಯಂ
ಗೀ ಹದನ ವಿರಚಿಸಿದೆ ನಿನ್ನಯ
ಮೋಹದವರೇ ಗೆಲಲಿಯೆಂದನು ಹರಿಗೆ ಬಲರಾಮ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ, ‘ಪಾಂಡವರು ನನ್ನ ಪ್ರಾಣ’ ಎಂಬ ನಿನ್ನ ಮಾತನ್ನು ಉಳಿಸಿಕೊಂಡೆ. ನಿನಗೆ ಬೇಕಾದವರಾದ ನಿನ್ನ ಮೈದುನರಾದ ಪಾಂಡವರನ್ನು ಉಳಿಸಿದೆ. ನಮ್ಮ ಶಿಷ್ಯನಾದ ದುರ್ಯೋಧನನಿಗೆ ಮೋಸದಿಂದ ಈ ಸ್ಥಿತಿಯನ್ನುಂಟುಮಾಡಿದೆ. ನಿನ್ನ ಮೋಹದವರೇ ಗೆಲ್ಲಲಿ - ಎಂದು ಕೃಷ್ಣನಿಗೆ ಬಲರಾಮ ಹೇಳಿದ.
ಪದಾರ್ಥ (ಕ.ಗ.ಪ)
ಬೇಹವರು-ಬೇಕಾದವರು, ಗಾಹುಗತಕ-ಮೋಸಗಾರಿಕೆ, ವಂಚನೆ, ಹದನ-ಸ್ಥಿತಿ, ಕಾರಣ, ಹೊಣೆ, ಕೆಲಸ.
ಮೂಲ ...{Loading}...
ಆಹವದಿ ಪಾಂಡವ ಮಮ ಪ್ರಾ
ಣಾಹಿ ಎಂಬೀ ನುಡಿಯ ಸಲಿಸಿದೆ
ಬೇಹವರನುಳುಹಿದೆ ಕುಮಾರರ ನಿನ್ನ ಮೈದುನರ
ಗಾಹುಗತಕದಲೆಮ್ಮ ಶಿಷ್ಯಂ
ಗೀ ಹದನ ವಿರಚಿಸಿದೆ ನಿನ್ನಯ
ಮೋಹದವರೇ ಗೆಲಲಿಯೆಂದನು ಹರಿಗೆ ಬಲರಾಮ ॥4॥
೦೦೫ ತಿಳಿದು ನೋಡಿರೆ ...{Loading}...
ತಿಳಿದು ನೋಡಿರೆ ರಾಮ ಧರ್ಮ
ಸ್ಥಳಕೆ ನೀವು ಸಹಾಯವಿನಿಬರ
ಗೆಲವು ನಿರ್ಮಳ ಧರ್ಮಮೂಲವೊ ಧರ್ಮವಿರಹಿತವೊ
ಛಲವ ಬಿಡಿರೇ ನಿಮ್ಮ ಶಿಷ್ಯನು
ಕಲಿವೃಕೋದರನಲ್ಲವೇ ತವೆ
ಬಳಸಬಹುದೇ ಪಕ್ಷಪಾತದೊಳೆಂದನಸುರಾರಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲರಾಮರೇ, ವಿಚಾರಿಸಿ ನೋಡಿ, ಧರ್ಮವಿರುವಲ್ಲಿಗೆ ನೀವು ಸಹಾಯ ಮಾಡುವವರು; ಪಾಂಡವರೆಲ್ಲರ ಗೆಲವು ಧರ್ಮದಿಂದ ಕೂಡಿದುದೋ, ಧರ್ಮವಿಲ್ಲದ್ದೋ? ಛಲವನ್ನು ಬಿಡಿ. ಕಲಿಭೀಮನೂ ನಿಮ್ಮ ಶಿಷ್ಯನಲ್ಲವೇ. ನೀವು ಪಕ್ಷಪಾತವನ್ನು ತೋರಬಹುದೇ - ಎಂದು ಕೃಷ್ಣ ಹೇಳಿದ.
ಪದಾರ್ಥ (ಕ.ಗ.ಪ)
ಧರ್ಮಸ್ಥಳ-ಧರ್ಮವಿರುವ ಜಾಗ, ಛಲ-ಚಲ, ಹಠ, ತವೆ-ವಿಶೇಷವಾಗಿ, ಬಳಸು-ಆಶ್ರಯಿಸು, ಉಪಯೋಗಿಸು, ಪಕ್ಷಪಾತ-ಒಂದು ಕಡೆಗೆ ವಿಶೇಷ ಒಲವು ತೋರುವುದು.
ಮೂಲ ...{Loading}...
ತಿಳಿದು ನೋಡಿರೆ ರಾಮ ಧರ್ಮ
ಸ್ಥಳಕೆ ನೀವು ಸಹಾಯವಿನಿಬರ
ಗೆಲವು ನಿರ್ಮಳ ಧರ್ಮಮೂಲವೊ ಧರ್ಮವಿರಹಿತವೊ
ಛಲವ ಬಿಡಿರೇ ನಿಮ್ಮ ಶಿಷ್ಯನು
ಕಲಿವೃಕೋದರನಲ್ಲವೇ ತವೆ
ಬಳಸಬಹುದೇ ಪಕ್ಷಪಾತದೊಳೆಂದನಸುರಾರಿ ॥5॥
೦೦೬ ನಿವಗೆ ಪಾಣ್ಡವ ...{Loading}...
ನಿವಗೆ ಪಾಂಡವ ಪಕ್ಷಪಾತ
ವ್ಯವಹರಣೆ ಹುಸಿ ನಾವಲೇ ಕೌ
ರವನ ಪಕ್ಷಾವೇಶಿಗಳು ಸಾಕಿನ್ನದಂತಿರಲಿ
ಎವಗೆ ಸರಿಯಿಬ್ಬರು ಗದಾಭ್ಯಾ
ಸವನು ನಮ್ಮಲಿ ಮಾಡಿದರು ತಾ
ವಿವರು ಕಾದಲಿ ನಾವು ನೋಡುವೆವೆಂದನಾ ರಾಮ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಪಾಂಡವಪಕ್ಷಪಾತಿಗಳಾಗಿ ವ್ಯವಹರಿಸುವುದೇ ಸುಳ್ಳು! ನಾವು ಕೌರವನ ಪಕ್ಷಪಾತಿಗಳಲ್ಲವೇ! ಸಾಕು ಇನ್ನು ಆ ಮಾತು ಹಾಗಿರಲಿ. ನಮಗೆ ಇಬ್ಬರೂ ಸರಿಸಮಾನ. ನಮ್ಮಲ್ಲಿ ಗದಾಯುದ್ಧದ ಅಭ್ಯಾಸವನ್ನು ಮಾಡಿದ ಇವರಿಬ್ಬರು ಯುದ್ಧ ಮಾಡಲಿ ನಾವು ನೋಡುವೆವು - ಎಂದು ಬಲರಾಮ ಕೃಷ್ಣನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ನಿವಗೆ-ನಿಮಗೆ (‘ವ’ಕಾರ ಪ್ರಾಸಕ್ಕಾಗಿ ‘ಮ’ ಬದಲಿಗೆ ‘ವ’ ಅಕ್ಷರವನ್ನು ಉಪಯೋಗಿಸಿದೆ).
ಮೂಲ ...{Loading}...
ನಿವಗೆ ಪಾಂಡವ ಪಕ್ಷಪಾತ
ವ್ಯವಹರಣೆ ಹುಸಿ ನಾವಲೇ ಕೌ
ರವನ ಪಕ್ಷಾವೇಶಿಗಳು ಸಾಕಿನ್ನದಂತಿರಲಿ
ಎವಗೆ ಸರಿಯಿಬ್ಬರು ಗದಾಭ್ಯಾ
ಸವನು ನಮ್ಮಲಿ ಮಾಡಿದರು ತಾ
ವಿವರು ಕಾದಲಿ ನಾವು ನೋಡುವೆವೆಂದನಾ ರಾಮ ॥6॥
೦೦೭ ಎಲೆ ಮುನೀಶ್ವರ ...{Loading}...
ಎಲೆ ಮುನೀಶ್ವರ ಪೂರ್ವದಲಿ ಯದು
ಬಲ ವಿಭಾಗದಲಿವರ ದೆಸೆಯಲಿ
ಹಲಧರನು ಕೃತವರ್ಮನಾ ಪಾಂಡವರಿಗಸುರಾರಿ
ಬಳಿಕ ಸಾತ್ಯಕಿಯೀ ಹಸುಗೆಯ
ಸ್ಖಲಿತವಿದರಲಿ ರಾಮನೀ ಕುರು
ಬಲವ ಬಿಟ್ಟನದೇಕೆನುತ ಜನಮೇಜಯನು ನುಡಿದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈಶಂಪಾಯನ ಮುನಿ ಶ್ರೇಷ್ಠರೇ, ಮೊದಲು ಯದುಬಲವನ್ನು ವಿಭಾಗ ಮಾಡಿದಾಗ ಕೌರವರ ಪಕ್ಷಕ್ಕೆ ಬಲರಾಮ, ಕೃತವರ್ಮರುಗಳು ಮತ್ತು ಪಾಂಡವರ ಪಕ್ಷಕ್ಕೆ ಕೃಷ್ಣ, ನಂತರ ಸಾತ್ಯಕಿ - ಎಂಬೀ ಪಾಲುಗಾರಿಕೆಯು ಸ್ವಷ್ಟವಾದ ವಿಚಾರ. ಹೀಗಿರುವಾಗ ಬಲರಾಮ ಕೌರವ ಸೈನ್ಯವನ್ನು ಏಕೆ ಬಿಟ್ಟು ಹೋದ - ಎಂದು ಜನಮೇಜಯ ಕೇಳಿದ.
ಪದಾರ್ಥ (ಕ.ಗ.ಪ)
ಪೂರ್ವದಲಿ-ಹಿಂದೆ, ಹಿಂದಿನ ಕಾಲದಲ್ಲಿ, ಹಸುಗೆ-ವಿಭಾಗ, ಪಾಲು, ಅಸ್ಖಲಿತ-ಗಟ್ಟಿಯಾದ, ಸ್ಥಿರವಾದ, ಜಾರದ.
ಟಿಪ್ಪನೀ (ಕ.ಗ.ಪ)
- “ಯದುಬಲವಿಭಾಗದಲಿ ………” ಉದ್ಯೋಗ ಪರ್ವದ ಒಂದನೆಯ ಸಂಧಿಯ ಪದ್ಯ 33ನ್ನು ನೋಡಿ. ಕಥಾಸಂದರ್ಭ, ‘ಶ್ರೀಕೃಷ್ಣ ಸಾರಥ್ಯ’.
ಮೂಲ ...{Loading}...
ಎಲೆ ಮುನೀಶ್ವರ ಪೂರ್ವದಲಿ ಯದು
ಬಲ ವಿಭಾಗದಲಿವರ ದೆಸೆಯಲಿ
ಹಲಧರನು ಕೃತವರ್ಮನಾ ಪಾಂಡವರಿಗಸುರಾರಿ
ಬಳಿಕ ಸಾತ್ಯಕಿಯೀ ಹಸುಗೆಯ
ಸ್ಖಲಿತವಿದರಲಿ ರಾಮನೀ ಕುರು
ಬಲವ ಬಿಟ್ಟನದೇಕೆನುತ ಜನಮೇಜಯನು ನುಡಿದ ॥7॥
೦೦೮ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಂಧಿಯ ಮುರಿದು ಲಕ್ಷ್ಮೀ
ಲೋಲ ಬಿಜಯಂಗೈಯನೇ ಕುರುಪತಿಯನವಗಡಿಸಿ
ತಾಳಹಳವಿಗೆಯವನು ಯಾದವ
ಜಾಲ ಸಹಿತೈತಂದು ಕಾರ್ಯದ
ಮೇಲುದಾಗಿನ ಹದನನರಿದನು ಕೃಷ್ಣನಭಿಮತವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಜನೇ ಕೇಳು, ಕೃಷ್ಣನು ಕುರುಪತಿಯನ್ನು ನಿಂದಿಸಿ, ಸಂಧಿಯನ್ನು ಮುರಿದು ಹೊರಟು ಹೋಗಲಿಲ್ಲವೇ! ತಾಳೆಯ ಮರವನ್ನು ತನ್ನ ಬಾವುಟದಲ್ಲಿ ಗುರುತಾಗಿ ಉಳ್ಳ ಬಲರಾಮನು ಯಾದವ ಸಮೂಹದೊಡನೆ ಬಂದು ಮುಂದೆ ಒದಗಲಿರುವ ಕಾರ್ಯದ ವಿವರಗಳ ಬಗ್ಗೆ ಕೃಷ್ಣನ ಅಭಿಪ್ರಾಯವನ್ನು ಕೇಳಿದನು.
ಪದಾರ್ಥ (ಕ.ಗ.ಪ)
ಅವಗಡಿಸು-ಅವಹೇಳನ ಮಾಡು, ನಿಂದಿಸು, ಬೆದರಿಸು, ವಿರೋಧಿಸು, ತಾಳಹಳವಿಗೆ-ತಾಳೆಯಮರದ ಧ್ವಜಚಿಹ್ನೆಯುಳ್ಳವನು, ಬಲರಾಮ, ಮೇಲುದಾಗಿನ- ಮುಂಬರುವ, ಮುಂದೊದಗಲಿರುವ.
ಟಿಪ್ಪನೀ (ಕ.ಗ.ಪ)
‘ತಾಳಹಳವಿಗೆ’ ತಾಳೆಯಮರದ ಚಿÉಹೆ್ನಯನ್ನು ಬಾವುಟದಲ್ಲಿ ಹೊಂದಿದವನು - ಎಂದರೆ ಬಲರಾಮ ಎಂಬುದು ಇಲ್ಲಿನ ಅರ್ಥ. ಭೀಷ್ಮನಿಗೂ ಇದೇ ಗುರುತಿನ ಬಾವುಟವಿದೆ. ಹಾಗಾಗಿ ಅವನು ಸಹ ತಾಳಹಳವಿಗೆಯವನೇ ಆಗುತ್ತಾನೆ.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಂಧಿಯ ಮುರಿದು ಲಕ್ಷ್ಮೀ
ಲೋಲ ಬಿಜಯಂಗೈಯನೇ ಕುರುಪತಿಯನವಗಡಿಸಿ
ತಾಳಹಳವಿಗೆಯವನು ಯಾದವ
ಜಾಲ ಸಹಿತೈತಂದು ಕಾರ್ಯದ
ಮೇಲುದಾಗಿನ ಹದನನರಿದನು ಕೃಷ್ಣನಭಿಮತವ ॥8॥
೦೦೯ ಎವಗೆ ಸರಿಯಿತ್ತಣ್ಡ ...{Loading}...
ಎವಗೆ ಸರಿಯಿತ್ತಂಡ ನೀ ಕೌ
ರವನ ಮುರಿವೆ ಯುಧಿಷ್ಠಿರನನಾ
ಹವವ ಗೆಲಿಸುವೆ ಸಾಕು ನೃಪರಿಬ್ಬರಲಿ ಸಂವಾದ
ಎವಗೆ ತೀರ್ಥಕ್ಷೇತ್ರ ಯಾತ್ರಾ
ವ್ಯವಸಿತಕೆ ಮನವಾದುದೆಂದು
ತ್ಸವದಿನಸುರಾರಿಯನುಪಪ್ಲವ್ಯದಲಿ ಬೀಳ್ಕೊಂಡ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮಗೆ ಎರಡೂ ತಂಡಗಳು ಸರಿಸಮಾನ. ನೀನು ಕೌರವನನ್ನು ನಾಶಮಾಡುತ್ತೀಯೆ; ಧರ್ಮಜನನ್ನು ಯುದ್ಧದಲ್ಲಿ ಗೆಲ್ಲಿಸುತ್ತೀ. ಈ ರಾಜರಿಬ್ಬರ ವ್ಯವಹಾರ ನನಗೆ ಸಾಕು. ನಮಗೆ ತೀರ್ಥಕ್ಷೇತ್ರಗಳ ಯಾತ್ರೆಗೆ ಮನಸ್ಸಾಗಿದೆ - ಎಂದು ಹೇಳಿ ಬಲರಾಮ ಉತ್ಸಾಹದಿಂದ ಉಪಪ್ಲಾವ್ಯನಗರದಲ್ಲಿ ಕೃಷ್ಣನನ್ನು ಬೀಳುಕೊಂಡ.
ಪದಾರ್ಥ (ಕ.ಗ.ಪ)
ಇತ್ತಂಡ-ಎರಡೂ ತಂಡ, ಸಂವಾದ-ಮಾತುಕತೆ, ವಿವಾದ, ವ್ಯವಹರಣೆ,
ಎವಗೆ-ಎಮಗೆ ಪ್ರಾಸ ಸ್ಥಳದಲ್ಲಿ ‘ವ’ಕಾರಬಂದಿರುವುದರಿಂದ ‘ಎಮಗೆ’ ‘ಎವಗೆ’ಯಾಗಿದೆ, ವ್ಯವಸಿತ-ವ್ಯವಸ್ಥೆ, ಏರ್ಪಾಟು.
ಟಿಪ್ಪನೀ (ಕ.ಗ.ಪ)
ಉಪಪ್ಲವ್ಯದಲಿ ಬೀಳ್ಕೊಂಡ ……. ಪಾಂಡವರ ಅಜ್ಞಾತವಾಸದ ನಂತರ ಅಭಿಮನ್ಯು - ಉತ್ತರೆಯರ ವಿವಾಹಕ್ಕಾಗಿ ಪಾಂಡವರಿಗೆ ಬೀಡಾರ ಮಾಡಲು ವಿರಾಟರಾಯ ತನ್ನ ರಾಜಧಾನಿಯ ಸಮೀಪ (ಮತ್ಸ್ಯನಗರ)ದಲ್ಲಿ ಉಪಪ್ಲಾವ್ಯವೆಂಬ ನಗರವನ್ನು ನಿರ್ಮಿಸಿಕೊಟ್ಟಿದ್ದ. (ವಿರಾಟಪರ್ವದ 10ನೆಯ ಸಂಧಿಯ 44ನೆಯ ಪದ್ಯವನ್ನು ನೋಡಿ)
ಮೂಲ ...{Loading}...
ಎವಗೆ ಸರಿಯಿತ್ತಂಡ ನೀ ಕೌ
ರವನ ಮುರಿವೆ ಯುಧಿಷ್ಠಿರನನಾ
ಹವವ ಗೆಲಿಸುವೆ ಸಾಕು ನೃಪರಿಬ್ಬರಲಿ ಸಂವಾದ
ಎವಗೆ ತೀರ್ಥಕ್ಷೇತ್ರ ಯಾತ್ರಾ
ವ್ಯವಸಿತಕೆ ಮನವಾದುದೆಂದು
ತ್ಸವದಿನಸುರಾರಿಯನುಪಪ್ಲವ್ಯದಲಿ ಬೀಳ್ಕೊಂಡ ॥9॥
೦೧೦ ರಾಮ ಕಳುಹಿಸಿಕೊಣ್ಡು ...{Loading}...
ರಾಮ ಕಳುಹಿಸಿಕೊಂಡು ವಿಪ್ರ
ಸ್ತೋಮಸಹಿತ ಸಮಸ್ತ ಋಷಿಗಳು
ರಾಮಣೀಯಕವಸ್ತು ದಾನವ್ಯಯದ ವೈಭವಕೆ
ಸೌಮನಸ್ಯನು ರಾಗಹರದ ಮ
ಹಾಮಹಿಮ ತೀರ್ಥಾಭಿರತಿಯಲಿ
ಗೋ ಮಹಿಷ ಧನ ವಸ್ತ್ರದಿಂ ದ್ವಿಜವರರನರ್ಚಿಸಿದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲರಾಮನು ಬೀಳ್ಕೊಂಡು, ಬ್ರಾಹ್ಮಣ ಸಮೂಹದ ಸಹಿತ ಎಲ್ಲ ಋಷಿಗಳೊಂದಿಗೆ ಸುಂದರವಾದ, ವಸ್ತುಗಳನ್ನು ದಾನ ನೀಡುವ ವೈಭವಕ್ಕಾಗಿ ಸಿದ್ಧನಾದ. ಶುದ್ಧ ಮನಸ್ಸಿನ ಬಲರಾಮನು ಐಹಿಕಸುಖಭೋಗಗಳನ್ನು ನಾಶಮಾಡುವ ಮಹಾಮಹಿಮೆಯುಳ್ಳ ತೀರ್ಥಕ್ಷೇತ್ರಗಳಲ್ಲಿನ ಶ್ರದ್ಧಾಸಕ್ತಿಗಳಿಂದ, ಗೋವು, ಎಮ್ಮೆ, ಧನ, ವಸ್ತ್ರಗಳಿಂದ ಬ್ರಾಹ್ಮಣರನ್ನು ಪೂಜಿಸಿದ.
ಪದಾರ್ಥ (ಕ.ಗ.ಪ)
ರಾಮಣೀಯಕ-ಸುಂದರವಾದ, ಮನೋಹರವಾದ, ದಾನವ್ಯಯ-ದಾನನೀಡುವ ಮೂಲಕ ಖರ್ಚು ಮಾಡುವುದು, ಸೌಮನಸ್ಯ-ಒಳ್ಳೆಯ ಮನಸ್ಸುಳ್ಳವನು, ಶುದ್ಧಮನಸ್ಸಿನವನು, ರಾಗಹರ-ರಾಗ-ದ್ವೇಷವನ್ನು ನಾಶಮಾಡುವ, ಐಹಿಕಸುಖಭೋಗಗಳನ್ನು ನಾಶಮಾಡುವ, ತೀರ್ಥಾಭಿರತಿ-ತೀರ್ಥಕ್ಷೇತ್ರಗಳಲ್ಲಿನ ಶ್ರದ್ಧಾಸಕ್ತಿಗಳಿಂದ, ದ್ವಿಜ- ಬ್ರಾಹ್ಮಣ, (ದ್ವಿ-ಎರಡು ಬಾರಿ, ಜ-ಜನಿಸಿದವ ಎಂದರೆ ಸಹಜ ಜನನ ಮತ್ತು ಉಪನಯನಸಂಸ್ಕಾರದಿಂದ ಬ್ರಾಹ್ಮಣನಾಗಿ ಜನನ)
ಮೂಲ ...{Loading}...
ರಾಮ ಕಳುಹಿಸಿಕೊಂಡು ವಿಪ್ರ
ಸ್ತೋಮಸಹಿತ ಸಮಸ್ತ ಋಷಿಗಳು
ರಾಮಣೀಯಕವಸ್ತು ದಾನವ್ಯಯದ ವೈಭವಕೆ
ಸೌಮನಸ್ಯನು ರಾಗಹರದ ಮ
ಹಾಮಹಿಮ ತೀರ್ಥಾಭಿರತಿಯಲಿ
ಗೋ ಮಹಿಷ ಧನ ವಸ್ತ್ರದಿಂ ದ್ವಿಜವರರನರ್ಚಿಸಿದ ॥10॥
೦೧೧ ಗಙ್ಗೆ ಮೊದಲಾದಮಳತರ ...{Loading}...
ಗಂಗೆ ಮೊದಲಾದಮಳತರ ತೀ
ರ್ಥಂಗಳಲಿ ತದ್ವಾರಣಾಖ್ಯಾ
ನಂಗಳಲಿ ತತ್ತದ್ವಿಶೇಷವಿಧಾನ ದಾನದಲಿ
ತುಂಗವಿಕ್ರಮನೀ ಸಮಸ್ತ ಜ
ನಂಗಳೊಡನೆ ಸುತೀರ್ಥಯಾತ್ರಾ
ಸಂಗತಿಯಲೇ ಬಳಸಿದನು ಭೂಮಿಪ್ರದಕ್ಷಿಣವ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಗಾನದಿಯೇ ಮೊದಲಾದ ಪುಣ್ಯತರವಾದ ತೀರ್ಥಗಳಲ್ಲಿ ಆ ವಾರಣಾಸಿಯೇ ಮೊದಲಾದ ಪುಣ್ಯ ಕ್ಷೇತ್ರಗಳಲ್ಲಿ, ಆಯಾ ಕ್ಷೇತ್ರಕ್ಕೆ ವಿಶೇಷವಾದ ದಾನಗಳನ್ನು ಮಾಡುತ್ತಾ, ಅತಿ ಪರಾಕ್ರಮಿಯಾದ ಬಲರಾಮನು ಸಮಸ್ತ ಜನರೊಡನೆ ಉತ್ತಮ ತೀರ್ಥಕ್ಷೇತ್ರಯಾತ್ರೆ ಮಾಡುತ್ತಲೇ ಭೂಪ್ರದಕ್ಷಿಣೆಯನ್ನು ಮಾಡಿದನು.
ಪದಾರ್ಥ (ಕ.ಗ.ಪ)
ಅಮಳತರ-ಪುಣ್ಯತರವಾದ, ವಾರಣಾಖ್ಯಾನ-ವಾರಣಾಸಿಯೆಂಬ ಪ್ರಸಿದ್ಧ ಕ್ಷೇತ್ರ, ತುಂಗವಿಕ್ರಮ-ಅತಿಬಲಶಾಲಿ, ಅತಿಪರಾಕ್ರಮಿ.
ಮೂಲ ...{Loading}...
ಗಂಗೆ ಮೊದಲಾದಮಳತರ ತೀ
ರ್ಥಂಗಳಲಿ ತದ್ವಾರಣಾಖ್ಯಾ
ನಂಗಳಲಿ ತತ್ತದ್ವಿಶೇಷವಿಧಾನ ದಾನದಲಿ
ತುಂಗವಿಕ್ರಮನೀ ಸಮಸ್ತ ಜ
ನಂಗಳೊಡನೆ ಸುತೀರ್ಥಯಾತ್ರಾ
ಸಂಗತಿಯಲೇ ಬಳಸಿದನು ಭೂಮಿಪ್ರದಕ್ಷಿಣವ ॥11॥
೦೧೨ ಅವನಿಪತಿ ಕೇಳ್ ...{Loading}...
ಅವನಿಪತಿ ಕೇಳ್ ಪುಷ್ಯದಲಿ ಸಂ
ಭವಿಸಿದುದು ನಿರ್ಗಮನ ಬಳಿಕಾ
ಶ್ರವಣನಕ್ಷತ್ರದಲಿ ಕಂಡನು ಕೃಷ್ಣಪಾಂಡವರ
ಅವರು ನೋಟಕರಾದರೀ ಕೌ
ರವ ವೃಕೋದರರಂಕ ಮಸೆದು
ತ್ಸವದಿ ಕಳನೇರಿದರು ಹಾಯಿಕಿ ಹಿಡಿದು ನಿಜಗದೆಯ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನೇ ಕೇಳು, ಪುಷ್ಯ ನಕ್ಷತ್ರದಲ್ಲಿ ಬಲರಾಮನ ನಿರ್ಗಮನವಾಯಿತು ನಂತರ ಶ್ರವಣ ನಕ್ಷತ್ರದಲ್ಲಿ ಬಂದು ಕೃಷ್ಣಪಾಂಡವರನ್ನು ಕಂಡ ಬಲರಾಮಾದಿಗಳು ಯುದ್ಧದ ಪ್ರೇಕ್ಷಕರಾದರು. ಈ ಕೌರವ-ಭೀಮಸೇನರ ಯುದ್ಧದ ಆಸಕ್ತಿ ಮಸೆದು, ಉತ್ಸಾಹದಿಂದ ತಮ್ಮ ತಮ್ಮ ಗದೆಗಳನ್ನು ಹಿಡಿದುಕೊಂಡು ಯುದ್ಧರಂಗವನ್ನು ಹತ್ತಿದರು.
ಪದಾರ್ಥ (ಕ.ಗ.ಪ)
ಅಂಕ-ಯುದ್ಧ, ಯುದ್ಧೊತ್ಸಾಹ, ಮಸೆದುದು-ಹರಿತವಾಗು ಹೆಚ್ಚಾಗು, ಕಳನ-ಯುದ್ಧರಂಗವನ್ನು.
ಮೂಲ ...{Loading}...
ಅವನಿಪತಿ ಕೇಳ್ ಪುಷ್ಯದಲಿ ಸಂ
ಭವಿಸಿದುದು ನಿರ್ಗಮನ ಬಳಿಕಾ
ಶ್ರವಣನಕ್ಷತ್ರದಲಿ ಕಂಡನು ಕೃಷ್ಣಪಾಂಡವರ
ಅವರು ನೋಟಕರಾದರೀ ಕೌ
ರವ ವೃಕೋದರರಂಕ ಮಸೆದು
ತ್ಸವದಿ ಕಳನೇರಿದರು ಹಾಯಿಕಿ ಹಿಡಿದು ನಿಜಗದೆಯ ॥12॥
೦೧೩ ಧಾರುಣೀಪತಿ ಕುಳ್ಳಿರೈ ...{Loading}...
ಧಾರುಣೀಪತಿ ಕುಳ್ಳಿರೈ ಪರಿ
ವಾರ ಕುಳ್ಳಿರಿ ಪಾರ್ಥ ಸಾತ್ಯಕಿ
ವೀರ ಧೃಷ್ಟದ್ಯುಮ್ನ ಯಮಳ ಶಿಖಂಡಿ ಸೃಂಜಯರು
ವೀರ ಭಟರೆಮ್ಮಾಹವದ ವಿ
ಸ್ತಾರವನು ಸಮ ವಿಷಮ ಪಯಗತಿ
ಯೋರೆಪೋರೆಯನರಿವುದೆಂದನು ನಗುತ ಕುರುರಾಯ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನೇ ಕುಳಿತುಕೋ, ಪರಿವಾರದವರೆಲ್ಲರೂ ಕುಳಿತುಕೊಳ್ಳಿ, ಅರ್ಜುನ, ಸಾತ್ಯಕಿ, ವೀರಧೃಷ್ಟದ್ಯುಮ್ನ, ನಕುಲ-ಸಹದೇವರು, ಶಿಖಂಡಿ, ಸೃಂಜಯರು, ವೀರಭಟರುಗಳಾದ ನೀವು ನಮ್ಮ ಯುದ್ಧದ ವಿಸ್ತಾರವನ್ನು, ಸಮ, ವಿಷಮ, ಕಾಲುಗಳನ್ನು ಹಾಕುವ ಕ್ರಮ, ಓರೆ - ಕೋರೆಗಳನ್ನು ತಿಳಿದುಕೊಳ್ಳಿ - ಎಂದು ದುರ್ಯೋಧನ ನಗುತ್ತ ಹೇಳಿದ.
ಪದಾರ್ಥ (ಕ.ಗ.ಪ)
ವಿಸ್ತಾರವನ್ನು-ದೀರ್ಘಕಾಲ ನಡೆಯುವುದನ್ನು, ವೈವಿಧ್ಯವನ್ನು, ಸಮ, ವಿಷಮ- ಯುದ್ಧದಲ್ಲಿನ ವಿವಿಧ ಭಂಗಿಗಳು, ಪಯಗತಿ-ಕಾಲುಹಾಕುವ ಕ್ರಮ, ಓರೆಪೋರೆ-ಕುಂದು ಕೊರತೆಗಳು.
ಮೂಲ ...{Loading}...
ಧಾರುಣೀಪತಿ ಕುಳ್ಳಿರೈ ಪರಿ
ವಾರ ಕುಳ್ಳಿರಿ ಪಾರ್ಥ ಸಾತ್ಯಕಿ
ವೀರ ಧೃಷ್ಟದ್ಯುಮ್ನ ಯಮಳ ಶಿಖಂಡಿ ಸೃಂಜಯರು
ವೀರ ಭಟರೆಮ್ಮಾಹವದ ವಿ
ಸ್ತಾರವನು ಸಮ ವಿಷಮ ಪಯಗತಿ
ಯೋರೆಪೋರೆಯನರಿವುದೆಂದನು ನಗುತ ಕುರುರಾಯ ॥13॥
೦೧೪ ಚಿತ್ತವಿಸು ಬಲರಾಮ ...{Loading}...
ಚಿತ್ತವಿಸು ಬಲರಾಮ ರಿಪುಗಳ
ತೆತ್ತಿಗನೆ ಲೇಸಾಗಿ ನೋಡು ನೃ
ಪೋತ್ತಮರು ಪಾಂಚಾಲ ಸೃಂಜಯ ಸೋಮಕಾದಿಗಳು
ಇತ್ತಲಭಿಮುಖವಾಗಿ ರಥಿಕರು
ಮತ್ತಗಜದಾರೋಹಕರು ರಾ
ವುತ್ತರೀಕ್ಷಿಸಿ ನಮ್ಮ ಸಮರವನೆಂದನವನೀಶ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲರಾಮ ಕೇಳು, ಶತ್ರುಗಳಾದ ಪಾಂಡವರಿಗೆ ನಿನ್ನನ್ನು ತೆತ್ತುಕೊಂಡಿರುವ ಕೃಷ್ಣನೇ ಸರಿಯಾಗಿ ನೋಡು. ರಾಜೋತ್ತಮರಾದ ಪಾಂಚಾಲ, ಸೃಂಜಯ, ಸೋಮಕಾದಿಗಳು ಇತ್ತ ಮುಖ ತಿರುಗಿಸಿ. ರಥದಲ್ಲಿರುವವರು, ಮದಿಸಿದ ಆನೆಗಳ ಮೇಲೆ ಕುಳಿತಿರುವವರು, ಕುದುರೆ ಸವಾರರುಗಳು ನಮ್ಮ ಯುದ್ಧವನ್ನು ನೋಡಿ - ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ತೆತ್ತಿಗ-ತನ್ನನ್ನೇ ಕೊಟ್ಟುಕೊಂಡಿರುವವನು, ಸಹಾಯಕ,
ಮೂಲ ...{Loading}...
ಚಿತ್ತವಿಸು ಬಲರಾಮ ರಿಪುಗಳ
ತೆತ್ತಿಗನೆ ಲೇಸಾಗಿ ನೋಡು ನೃ
ಪೋತ್ತಮರು ಪಾಂಚಾಲ ಸೃಂಜಯ ಸೋಮಕಾದಿಗಳು
ಇತ್ತಲಭಿಮುಖವಾಗಿ ರಥಿಕರು
ಮತ್ತಗಜದಾರೋಹಕರು ರಾ
ವುತ್ತರೀಕ್ಷಿಸಿ ನಮ್ಮ ಸಮರವನೆಂದನವನೀಶ ॥14॥
೦೧೫ ಓಡಿ ಜಲದಲಿ ...{Loading}...
ಓಡಿ ಜಲದಲಿ ಮುಳುಗಿದವರಿಗೆ
ಖೋಡಿಯುಂಟೇ ರಥವಿಳಿದ ರಣ
ಖೇಡ ಕಾಲಾಳಿಂಗೆ ಪಯಗತಿಯೋರೆಪೋರೆಗಳೆ
ನೋಡುತಿದೆ ಪರಿವಾರ ನೀ ಕೈ
ಮಾಡಿ ತೋರಾ ಬರಿಯ ಕಂಠದ
ಮೂಡಿಗೆಯ ಡಾವರದ ಲೇಸಹುದೆಂದನಾ ಭೀಮ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಓಡಿಹೋಗಿ ನೀರಿನಲ್ಲಿ ಮುಳುಗಿದವರಿಗೆ ಕೊರತೆಯುಂಟೇ ? ರಥದಿಂದ ಜಿಗಿದು ಗಾಬರಿಗೊಂಡ ಕಾಲಾಳಿಗೆ, ಯುದ್ಧದಲ್ಲಿ ಕಾಲುಗಳನ್ನು ಹಾಕುವ ಕ್ರಮಗಳ ಓರೆ ಕೋರೆಗಳನ್ನು ಹೇಳುವಷ್ಟೂ ಸಾಮರ್ಥ್ಯವುಂಟೆ, ಪರಿವಾರವೆಲ್ಲವೂ ನೋಡುತ್ತಿದೆ. ನೀನು ಕೈಮಾಡಿತೋರಿಸು (ಯುದ್ಧ ಪ್ರಾರಂಭಿಸಿ ತೋರಿಸು) ಇಲ್ಲದಿದ್ದಲ್ಲಿ ನಿನ್ನ ಮಾತುಗಳು ಶುಷ್ಕವಾದ ಗಂಟಲಿಗೆ ಮತ್ತು ಬಾಣವಿಲ್ಲದ ಬತ್ತಳಿಕೆಗೆ ಸಮನಾಗುತ್ತದೆ ಎಂದು ಭೀಮ ನುಡಿದ.
ಪದಾರ್ಥ (ಕ.ಗ.ಪ)
ಖೋಡಿ- ಕೊರತೆ, ಖೇದ-ದಿಗಿಲು, ಗಾಬರಿ, ಪಯಗತಿ-ಕಾಲುಗಳ ಚಲನೆ, ಕಂಠ-ಗಂಟಲು, ಮೂಡಿಗೆ-ಬತ್ತಳಿಕೆ, ಡಾವರ-ಶುಷ್ಕತೆ,
ಮೂಲ ...{Loading}...
ಓಡಿ ಜಲದಲಿ ಮುಳುಗಿದವರಿಗೆ
ಖೋಡಿಯುಂಟೇ ರಥವಿಳಿದ ರಣ
ಖೇಡ ಕಾಲಾಳಿಂಗೆ ಪಯಗತಿಯೋರೆಪೋರೆಗಳೆ
ನೋಡುತಿದೆ ಪರಿವಾರ ನೀ ಕೈ
ಮಾಡಿ ತೋರಾ ಬರಿಯ ಕಂಠದ
ಮೂಡಿಗೆಯ ಡಾವರದ ಲೇಸಹುದೆಂದನಾ ಭೀಮ ॥15॥
೦೧೬ ಆಟವಿಕ ಸಙ್ಗದಲಿ ...{Loading}...
ಆಟವಿಕ ಸಂಗದಲಿ ಬಹುವಾ
ಚಾಟ ನೀನಹೆ ನಿನ್ನ ಪುಣ್ಯದ
ತೋಟವನು ತರಿದೊಟ್ಟಿ ನಿಮ್ಮೈವರನು ಯಮಪುರದ
ಗೋಟಿನಲಿ ಗುರಿಮಾಡುವೆನು ಜೂ
ಜಾಟದಲಿ ನೀವರಿಯಿರೇ ಬೊ
ಬ್ಬಾಟವಂದೇನಾಯಿತೆಂದನು ಜರೆದು ಕುರುರಾಯ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವನವಾಸಿಗಳ (ಋಷಿ ಮುನಿಗಳ, ಬ್ರಾಹ್ಮಣರ) ಸಂಗದಿಂದ ನೀನು ಬಹು ವಾಚಾಳಿಯಾಗಿದ್ದೀಯ. ನಿನ್ನ ಪುಣ್ಯದ ತೋಟವನ್ನು ಕತ್ತರಿಸಿ ರಾಶಿಹಾಕಿ, ನಿಮ್ಮೈವರನ್ನು ಯಮಪುರದ ಮೂಲೆಗೆ ತಳ್ಳುವೆನು. ಜೂಜಾಟದಲ್ಲಿ ನೀವು ಮಾಡಿದ ಬೊಬ್ಬಾಟಗಳು (ಪ್ರತಿಜ್ಞೆಗಳು) ಏನಾಯಿತು ಎಂದು ನಿಮಗೆ ಗೊತ್ತಿಲ್ಲವೇ - ಎಂದು ದುರ್ಯೋಧನ ಜರೆದು ಹೇಳಿದ.
ಪದಾರ್ಥ (ಕ.ಗ.ಪ)
ಆಟವಿಕ-ವನವಾಸಿ, (ಋಷಿಮುನಿಗಳು) ಜೂಜುಗಾರ, ಮೋಸಗಾರ, ನಟ, ವಾಚಾಟ-ವಾಚಾಳಿ, ಮಾತುಗಾರ, ಗೋಟು-ಮೂಲೆ, ಗೋಂಟು, ಬೊಬ್ಬಾಟ-ಕೂಗಾಟ (ಈ ಸಂದರ್ಭದಲ್ಲಿ ಪ್ರತಿಜ್ಞೆಗಳು)
ಮೂಲ ...{Loading}...
ಆಟವಿಕ ಸಂಗದಲಿ ಬಹುವಾ
ಚಾಟ ನೀನಹೆ ನಿನ್ನ ಪುಣ್ಯದ
ತೋಟವನು ತರಿದೊಟ್ಟಿ ನಿಮ್ಮೈವರನು ಯಮಪುರದ
ಗೋಟಿನಲಿ ಗುರಿಮಾಡುವೆನು ಜೂ
ಜಾಟದಲಿ ನೀವರಿಯಿರೇ ಬೊ
ಬ್ಬಾಟವಂದೇನಾಯಿತೆಂದನು ಜರೆದು ಕುರುರಾಯ ॥16॥
೦೧೭ ಶಕುನಿ ಕಲಿಸಿದ ...{Loading}...
ಶಕುನಿ ಕಲಿಸಿದ ಕಪಟದಲಿ ಕೌ
ಳಿಕದಲುಬ್ಬಿದಿರಿದರ ವಿಸ್ತಾ
ರಕರಲೇ ನಾವಿಂದಿನಲಿ ದುಶ್ಯಾಸನಾದಿಗಳ
ರಕುತಪಾನ ಭವತ್ಸಹೋದರ
ನಿಕರನಾಶನವರುಹದೇ ಸು
ಪ್ರಕಟವಿದು ಜಗಕೆಂದು ಗದೆಯನು ತೂಗಿದನು ಭೀಮ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿ ಕಲಿಸಿದ ಕಪಟಬುದ್ಧಿಯಿಂದ, ಮೋಸದಿಂದ ಅಂದು ಉಬ್ಬಿಹೋದಿರಿ. ನೀವು ನಮಗೆ ನೀಡಿದ ಉಪಟಳಗಳನ್ನು ನಿಮಗೆ ಇಂದು ನಾವು ವಿಸ್ತರಿಸುವವರಲ್ಲವೇ, ದುಶ್ಶಾಸನಾದಿಗಳ ರಕ್ತಪಾನ, ನಿನ್ನ ಸಹೋದರ ಸಮೂಹದ ನಾಶವು ಇದನ್ನು ತಿಳಿಸುವುದಿಲ್ಲವೇ. ಇದು ಪ್ರಪಂಚಕ್ಕೇ ತಿಳಿದಿದೆ - ಎಂದು ಭೀಮ ಗದೆಯನ್ನು ತೂಗಿದ.
ಪದಾರ್ಥ (ಕ.ಗ.ಪ)
ಕಪಟ-ಮೋಸ, ತಂತ್ರಗಾರಿಕೆ, ಕೌಳಿಕ-ಮೋಸ, ವಂಚನೆ, ವಿಸ್ತಾರಕ-ಹೆಚ್ಚಿಸುವವ, ವಿಸ್ತರಿಸುವವ, ನಿಕರ-ಸಮೂಹ
ಮೂಲ ...{Loading}...
ಶಕುನಿ ಕಲಿಸಿದ ಕಪಟದಲಿ ಕೌ
ಳಿಕದಲುಬ್ಬಿದಿರಿದರ ವಿಸ್ತಾ
ರಕರಲೇ ನಾವಿಂದಿನಲಿ ದುಶ್ಯಾಸನಾದಿಗಳ
ರಕುತಪಾನ ಭವತ್ಸಹೋದರ
ನಿಕರನಾಶನವರುಹದೇ ಸು
ಪ್ರಕಟವಿದು ಜಗಕೆಂದು ಗದೆಯನು ತೂಗಿದನು ಭೀಮ ॥17॥
೦೧೮ ಸಾಯಲಾಗದೆ ಸುಭಟರಾಚಂ ...{Loading}...
ಸಾಯಲಾಗದೆ ಸುಭಟರಾಚಂ
ದ್ರಾಯತವೆ ತನು ವಿಧಿಯ ಟಿಪ್ಪಣ
ದಾಯುಷವು ತೀರಿದಡೆ ಸಾವರು ನಿನ್ನಲೇನಹುದು
ಕಾಯಲಳವೇ ನಿನಗೆ ಮುನಿದಡೆ
ನೋಯಿಸುವಡಳವಲ್ಲ ಫಡ ದೈ
ವಾಯತಕೆ ನೀನೇಕೆ ಬೆರೆತಿಹೆಯೆಂದನಾ ಭೂಪ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಭಟರಾದ ಮಾತ್ರಕ್ಕೆ ಸಾಯುವುದಿಲ್ಲವೆ? ಈ ದೇಹ ಚಂದ್ರನಿರುವವರೆಗೂ ಇರುವಂತಹುದೆ. ವಿಧಿಯು ಬರೆದ ಬರಹದಲ್ಲಿನ ಆಯುಷ್ಯವು ಮುಗಿದರೆ ಜನ ಸಾಯುತ್ತಾರೆ. ನಿನ್ನಿಂದ ಏನಾಗುತ್ತದೆ. ಸಾಯುವವರನ್ನು ಬದುಕಿಸಲು ನಿನಗೆ ಸಾಧ್ಯವೆ? ಕೋಪಗೊಂಡರೆ ನೋಯಿಸಲೂ ನಿನಗೆ ಸಾಧ್ಯವಿಲ್ಲ. ದೈವದ ಆಳ್ವಿಕೆಗೆ ಒಳಗಾದ ಈ ವಿಚಾರಗಳಲ್ಲಿ ನೀನೇಕೆ ಸೇರಿಕೊಂಡಿದ್ದೀ - ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಆಚಂದ್ರಾಯತ-ಚಂದ್ರನಿರುವವರೆಗೂ, ಟಿಪ್ಪಣ-ಸಣ್ಣ ಬರಹ, ಟಿಪ್ಪಣಿ, ದೈವಾಯತ-ದೈವದ ಅಧೀನಕ್ಕೊಳಗಾದ.
ಮೂಲ ...{Loading}...
ಸಾಯಲಾಗದೆ ಸುಭಟರಾಚಂ
ದ್ರಾಯತವೆ ತನು ವಿಧಿಯ ಟಿಪ್ಪಣ
ದಾಯುಷವು ತೀರಿದಡೆ ಸಾವರು ನಿನ್ನಲೇನಹುದು
ಕಾಯಲಳವೇ ನಿನಗೆ ಮುನಿದಡೆ
ನೋಯಿಸುವಡಳವಲ್ಲ ಫಡ ದೈ
ವಾಯತಕೆ ನೀನೇಕೆ ಬೆರೆತಿಹೆಯೆಂದನಾ ಭೂಪ ॥18॥
೦೧೯ ಎಲವೊ ದುರ್ಮತಿ ...{Loading}...
ಎಲವೊ ದುರ್ಮತಿ ನಿನ್ನ ಕೌರವ
ಕುಲದ ಶಿಕ್ಷಾರಕ್ಷೆಗಿನ್ನಾ
ರೊಳರು ಹೊರಬಿಗ ದೈವವುಂಟೇ ತಾನೆ ದೈವ ಕಣಾ
ಕಳಚಿದೆನಲಾ ಕೊಂದು ನೂರ್ವರ
ತಲೆಯನಿನ್ನರೆಘಳಿಗೆಯಲಿ ಹೆಡ
ತಲೆಯನೊದೆವೆನು ಹೋಗೆನುತ ಹೊಯ್ದನು ಸುಯೋಧನನ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲವೋ ದುರ್ಬುದ್ಧಿಯವನೇ, ನಿನ್ನ ಕೌರವವಂಶದ ಶಿಕ್ಷೆಗೆ ಮತ್ತು ರಕ್ಷೆಗೆ ಇನ್ನಾರಿದ್ದಾರೆ. ಹೊರಗಡೆಯ ದೈವವುಂಟೆ. ನಾನೇ ಆ ದೈವವಲ್ಲವೇ. ನಿನ್ನ ನೂರು ಜನರನ್ನು ಕೊಂದು ಅವರ ತಲೆಗಳನ್ನು ಕಳಚಿದೆವಲ್ಲವೇ. ಇನ್ನು ಅರೆಘಳಿಗೆಯಲ್ಲಿ ನಿನ್ನ ಹಿಂದಲೆಯನ್ನು ಒದೆಯುತ್ತೇನೆ ಎಂದು ಭೀಮ, ಸುಯೋಧನನನ್ನು ಹೊಡೆದ.
ಪದಾರ್ಥ (ಕ.ಗ.ಪ)
ಒಳರು-ಇದ್ದಾರೆ, ಹೊರಬಿಗ-ಹೊರಗಡೆಯವನು, ಆಚೆಯ, ಹೆಡತಲೆ-ಹಿಂದಲೆ, ತಲೆಯ ಹಿಂಭಾಗ.
ಮೂಲ ...{Loading}...
ಎಲವೊ ದುರ್ಮತಿ ನಿನ್ನ ಕೌರವ
ಕುಲದ ಶಿಕ್ಷಾರಕ್ಷೆಗಿನ್ನಾ
ರೊಳರು ಹೊರಬಿಗ ದೈವವುಂಟೇ ತಾನೆ ದೈವ ಕಣಾ
ಕಳಚಿದೆನಲಾ ಕೊಂದು ನೂರ್ವರ
ತಲೆಯನಿನ್ನರೆಘಳಿಗೆಯಲಿ ಹೆಡ
ತಲೆಯನೊದೆವೆನು ಹೋಗೆನುತ ಹೊಯ್ದನು ಸುಯೋಧನನ ॥19॥
೦೨೦ ಬಿಡಸಿದಡೆ ಗದೆಯಿನ್ದ ...{Loading}...
ಬಿಡಸಿದಡೆ ಗದೆಯಿಂದ ಹೊಯ್ಗುಳ
ತಡೆದು ತಿವಿದನು ನಿನ್ನ ಮಗನವ
ಗಡದ ಘಾಯಕೆ ಗದೆಯನೊಡ್ಡಿ ಸಗಾಢ ಕೋಪದಲಿ
ತುಡುಕಿದನು ಕಲಿಭೀಮ ಹಜ್ಜೆಯೊ
ಳೆಡೆಮುರಿದು ನಿನ್ನಾತನೌಕಿದ
ರೊಡನೊಡನೆ ಗಾಹಿಸಿದರುಚಿತದ ಗತಿಯ ಗಮಕದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ಗದೆಯಿಂದ (ಹೊಡೆಯಲು) ತನ್ನ ಗದೆಯಿಂದ ಆ ಹೊಡೆತವನ್ನು ತಡೆದು ನಿನ್ನ ಮಗನು ಭೀಮನನ್ನು ತಿವಿದನು. ಅದರಿಂದಾದ ಭಯಂಕರವಾದ ಗಾಯದಿಂದ ಕೋಪಗೊಂಡ ಭೀಮ ಗದೆಯನ್ನೊಡ್ಡಿ, ಹೆಚ್ಚಿದ ಕೋಪದಿಂದ ನಿನ್ನ ಮಗನನ್ನು ವೇಗದಿಂದ ಹಿಡಿದ. ಹೆಜ್ಜೆಯ ಕ್ರಮವನ್ನು ಮುರಿದು ನಿನ್ನ ಮಗ ಭೀಮನನ್ನು ಔಕಿ ಹಿಡಿದರೆ, ಒಬ್ಬರನ್ನೊಬ್ಬರು ನ್ಯಾಯಬದ್ಧವಾದ ನಡಿಗೆಗಳ ಸೊಗಸಿನಿಂದ ತಬ್ಬಿಹಿಡಿದರು.
ಪದಾರ್ಥ (ಕ.ಗ.ಪ)
ಹೊಯ್ಗಳು-ಹೊಡೆತಗಳು, ಅವಗಡ-ಭಯಂಕರ ತೊಂದರೆ, ಸಗಾಢ-ಗಾಢವಾದ, ತೀವ್ರವಾದ, ತುಡುಕು-ವೇಗವಾಗಿ ಹಿಡಿ, ಎಡೆಮುರಿ-ಕ್ರಮತಪ್ಪಿಸು, ಗಾಹಿಸು-ವಂಚಿಸು, ಗಮಕ-ಸೊಗಸು, ಬೆಡಗು, ಠೀವಿ, ಗಾಂಭೀರ್ಯ.
ಪಾಠಾನ್ತರ (ಕ.ಗ.ಪ)
ಇಲ್ಲಿ ‘ಬಿಡಿಸಿದಡೆ’ ಎಂಬ ಶಬ್ದಕ್ಕೆ ಅರ್ಥ ಸರಿಹೊಂದುವುದಿಲ್ಲ. ಮೈಸೂರು ವಿ.ವಿ.ಯು ಪ್ರಕಟಿಸಿರುವ ‘ಶಲ್ಯ-ಗದಾಪರ್ವಗಳು, ಪುಸ್ತಕದಲ್ಲಿ ‘ಹೊಡೆದಡಾ’ ಎಂಬ ಪಾಠಾಂತರವನ್ನು ಸೂಚಿಸಿದೆ. ಅದು ಈ ಸಂದರ್ಭಕ್ಕೆ ಹೊಂದುವುದರಿಂದ ಆ ಪಾಠವನ್ನು ಸ್ವೀಕರಿ¸ಬಹುದು.
ಮೂಲ ...{Loading}...
ಬಿಡಸಿದಡೆ ಗದೆಯಿಂದ ಹೊಯ್ಗುಳ
ತಡೆದು ತಿವಿದನು ನಿನ್ನ ಮಗನವ
ಗಡದ ಘಾಯಕೆ ಗದೆಯನೊಡ್ಡಿ ಸಗಾಢ ಕೋಪದಲಿ
ತುಡುಕಿದನು ಕಲಿಭೀಮ ಹಜ್ಜೆಯೊ
ಳೆಡೆಮುರಿದು ನಿನ್ನಾತನೌಕಿದ
ರೊಡನೊಡನೆ ಗಾಹಿಸಿದರುಚಿತದ ಗತಿಯ ಗಮಕದಲಿ ॥20॥
೦೨೧ ಹೊಯ್ದು ಬಿಡಿಸಿದಡನಿಲಜನ ...{Loading}...
ಹೊಯ್ದು ಬಿಡಿಸಿದಡನಿಲಜನ ಮೇ
ಲ್ವಾಯ್ದನವನಿಪನೊಡ್ಡಿ ಗದೆಯಲಿ
ಕಾಯ್ದು ತಿವಿದನು ಭೀಮಸೇನನ ನೃಪತಿ ವಂಚಿಸಿದ
ಮೆಯ್ದೆಗೆದಡಿಟ್ಟಣಿಸಿ ಪವನಜ
ಹೊಯ್ದಡೊಲೆದನು ಭೂಪನಿಬ್ಬರ
ಕಯ್ದುಕಾರತನಕ್ಕೆ ಬೆರಗಾದುದು ಸುರಸ್ತೋಮ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ದುರ್ಯೋಧನನಿಗೆ ಹೊಡೆದು ಅವನ ತಬ್ಬುಗೆಯಿಂದ ಬಿಡಿಸಿಕೊಂಡರೆ, ದುರ್ಯೋಧನ ಭೀಮನ ಮೇಲೆ ಬಿದ್ದು, ಸಮಯ ನೋಡಿ ಭೀಮನನ್ನು ವಂಚಿಸಿ ಗದೆಯಲ್ಲಿ ತಿವಿದ. ದುರ್ಯೋಧನ ಹಿಮ್ಮೆಟ್ಟಿದರೆ, ಭೀಮ ಆಕ್ರಮಿಸಿ ಹೊಡೆದ. ದುರ್ಯೋಧನ ಪಕ್ಕಕ್ಕೆ ಸರಿದ. ಈ ಇಬ್ಬರ ಆಯುಧ ಪರಿಣತಿಗೆ ದೇವಸಮೂಹ ಬೆರಗಾಯಿತು.
ಪದಾರ್ಥ (ಕ.ಗ.ಪ)
ಕಾಯ್ದು-ಸಮಯನೋಡಿ, ವಂಚಿಸು-ಮೋಸಗೊಳಿಸು, ಇಟ್ಟಣಿಸು-ಆಕ್ರಮಿಸು, ಗುಂಪಾಗು, ಹಿಗ್ಗು, ಮೀರು, ಒಲೆದ-ಪಕ್ಕಕ್ಕೆ ಸರಿದ, ಅಕ್ಕಪಕ್ಕಕ್ಕೆ ಓಲಾಡಿದ, ಕಯ್ದುಕಾರತನ-ಆಯುಧದದ ಪ್ರಯೋಗದಲ್ಲಿ ಪರಿಣಿತಿ
ಮೂಲ ...{Loading}...
ಹೊಯ್ದು ಬಿಡಿಸಿದಡನಿಲಜನ ಮೇ
ಲ್ವಾಯ್ದನವನಿಪನೊಡ್ಡಿ ಗದೆಯಲಿ
ಕಾಯ್ದು ತಿವಿದನು ಭೀಮಸೇನನ ನೃಪತಿ ವಂಚಿಸಿದ
ಮೆಯ್ದೆಗೆದಡಿಟ್ಟಣಿಸಿ ಪವನಜ
ಹೊಯ್ದಡೊಲೆದನು ಭೂಪನಿಬ್ಬರ
ಕಯ್ದುಕಾರತನಕ್ಕೆ ಬೆರಗಾದುದು ಸುರಸ್ತೋಮ ॥21॥
೦೨೨ ಸುಳಿದರೆಡಬಲ ಚಾರಿಯಲಿ ...{Loading}...
ಸುಳಿದರೆಡಬಲ ಚಾರಿಯಲಿ ಚಾ
ಪಳದ ಪಯಪಾಡಿನಲಿ ಚಿತ್ರದ
ಚಳಗತಿಯ ಚೇತನದ ಚಡ್ಡಣೆಗಳ ಚಡಾಳದಲಿ
ಹೊಳೆದರಾವರ್ತದಲಿ ಪರಿಮಂ
ಡಳಿಸಿದರು ಠಾಣದಲಿ ಜಂಘೆಯ
ಲುಳಿಯಲವಠಾಣದಲಿ ಮೆರೆದರು ಭೀಮ ಕೌರವರು ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಡಬಲಗಳ ಸಂಚಾರದಲ್ಲಿ ಸುಳಿದರು. ಚಪಲತೆಯುಳ್ಳ ಕಾಲುನಡೆಯಲ್ಲಿ, ವಿಚಿತ್ರವಾದ ವೇಗದ ಮನಃಸ್ಥಿತಿಯಲ್ಲಿ ಬೆಂಕಿಯನ್ನುಗುಳಿಸಿ ಪುನರಾರ್ವತನೆಯಲ್ಲಿ ಪ್ರಕಾಶಿಸಿ, ತಮ್ಮ ತಮ್ಮ ಸ್ಥಾನಗಳಲ್ಲಿ ವೃತ್ತಾಕಾರವಾಗಿ ತಿರುಗಿ ಪಟ್ಟು ಹಾಕಿದರು. ತೊಡೆಗಳ ಚಲನೆಯ ಸೊಗಸಿನ ಒಂದು ಪಟ್ಟಿನಲ್ಲಿ ಭೀಮ ದುರ್ಯೋಧನರು ಮೆರೆದರು.
ಪದಾರ್ಥ (ಕ.ಗ.ಪ)
ಚಾರಿ- ಒಂದು ಸಂಚಾರ, ತಂತ್ರ,
ಚಾವಳ-ಚಪಲಗತಿ, ವೇಗವಾಗಿ, ನಿಂತಲ್ಲಿ ನಿಲ್ಲದೆ,
ಪಯಪಾಡು-ಕಾಲುಗಳ ಸ್ಥಿತಿ,
ಚಿತ್ರದ-ವಿಚಿತ್ರವಾದ,
ಚಳಗತಿ-ವೇಗವಾಗಿ,
ಚಡ್ಡಣೆ-ಬೆಂಕಿಯನ್ನು ಹಾರಿಸುವುದು, ಗುಂಡು ಹೊಡೆಯುವುದು,
ಚಡಾಳ-ಅತಿಶಯ, ಹೆಚ್ಚು, ತೀವ್ರ,
ಆವರ್ತ-ಒಂದು ಸುತ್ತು ಪುನರಾವರ್ತನೆ,
ಪರಿಮಂಡಳಿಸು-ವೃತ್ತಾಕಾರವಾಗಿ ಸುತ್ತುವಿಕೆ, ಗದಾಯುದ್ಧ ಮಲ್ಲಯುದ್ಧಗಳ ಒಂದು ಪಟ್ಟು,
ಠಾಣ-ಸ್ಥಾನ, ಸ್ಥಳ, ಜಾಗ,
ಜಂಘೆ-ತೊಡೆ, ಲುಳಿ-ಚಾತುರ್ಯ, ಚುರುಕಿನ ಚಲನೆ, ವೇಗ, ಅವಠಾಣ-ಮಲ್ಲಯುದ್ಧದ ಒಂದು ರೀತಿ.
ಮೂಲ ...{Loading}...
ಸುಳಿದರೆಡಬಲ ಚಾರಿಯಲಿ ಚಾ
ಪಳದ ಪಯಪಾಡಿನಲಿ ಚಿತ್ರದ
ಚಳಗತಿಯ ಚೇತನದ ಚಡ್ಡಣೆಗಳ ಚಡಾಳದಲಿ
ಹೊಳೆದರಾವರ್ತದಲಿ ಪರಿಮಂ
ಡಳಿಸಿದರು ಠಾಣದಲಿ ಜಂಘೆಯ
ಲುಳಿಯಲವಠಾಣದಲಿ ಮೆರೆದರು ಭೀಮ ಕೌರವರು ॥22॥
೦೨೩ ಒಳಹೊಗುವ ಹೆರತೆಗೆವ ...{Loading}...
ಒಳಹೊಗುವ ಹೆರತೆಗೆವ ಘಾಯವ
ಕಳಚುವವಧಾನದಲಿ ದೃಷ್ಟಿಯ
ಬಳಿಗೆ ಕೈಮಾಡುವ ವಿಘಾತಿಗೆ ಜಗುಳ್ವ ಝಾಡಿಸುವ
ಸುಳಿವ ಸಂತೈಸುವ ಸುಸಂಚದೊ
ಳಳವರಿವ ವಂಚಿಸುವ ಗಮನಿಕೆ
ಯಳಬಳವನಾರೈವ ಭಟರೊದಗಿದರು ಸಮರದಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳಕ್ಕೆ ಪ್ರವೇಶಿಸುವ, ಹೊರಕ್ಕೆ ಬರುವ, ಶತ್ರುವಿನ ಮೇಲೆ ಹೊಡೆತವನ್ನು ಕೊಡುವ ಸಮಯದಲ್ಲಿ, ಕಣ್ಣಿನ ಬಳಿಗೆ ಹೊಡೆಯುವ, ಬಿದ್ದ ಏಟಿಗೆ ಜಾರುವ, ಜಾಡಿಸುವ, ಸುಳಿದು ತೋರುವ, ಪೆಟ್ಟುಗಳ ನೋವನ್ನು ಸಂತೈಸಿಕೊಳ್ಳುವ, ರಹಸ್ಯವಾಗಿ ಶತ್ರುವಿನ ಸಾಮಥ್ರ್ಯವನ್ನು ತಿಳಿಯುವ, ಮೋಸದಿಂದ ಹೊಡೆಯುವ - ತಪ್ಪಿಸಿಕೊಳ್ಳುವ, ಲಕ್ಷ್ಯಕೊಟ್ಟು ಶತ್ರುವಿನ ಶಕ್ತಿಯನ್ನು ತಿಳಿಯುವ ಭಟರು ಯುದ್ಧದಲ್ಲಿ ತೊಡಗಿದರು.
ಪದಾರ್ಥ (ಕ.ಗ.ಪ)
ಹೆರತೆಗೆ-ಹೊರಬರುವುದು, ಘಾಯ-ಹೊಡೆತ, ಕಳಚುವ-ಆಯುಧದಿಂದ ಹೊಡೆಯುವ, ಅವಧಾನ-ಮನಸ್ಸನ್ನು ಒಂದು ವಿಷಯದತ್ತ ಕೇಂದ್ರೀಕರಿಸುವ ಕಲೆ, ವಿಘಾತಿ-ಪೆಟ್ಟು, ಏಟು, ಜಗುಳ್ವ-ಜಾರುವ, ಝಾಡಿಸು-ಒದೆ, ಸುಸಂಚ-ರಹಸ್ಯ, ಸಂಬಂಧ, ಅಳವು-ಶಕ್ತಿ ಸಾಮಥ್ರ್ಯ, ಗಮನಿಕೆ-ಲಕ್ಷ್ಯಕೊಡುವ, ಅಳಬಳ-ಶಕ್ತಿ.
ಮೂಲ ...{Loading}...
ಒಳಹೊಗುವ ಹೆರತೆಗೆವ ಘಾಯವ
ಕಳಚುವವಧಾನದಲಿ ದೃಷ್ಟಿಯ
ಬಳಿಗೆ ಕೈಮಾಡುವ ವಿಘಾತಿಗೆ ಜಗುಳ್ವ ಝಾಡಿಸುವ
ಸುಳಿವ ಸಂತೈಸುವ ಸುಸಂಚದೊ
ಳಳವರಿವ ವಂಚಿಸುವ ಗಮನಿಕೆ
ಯಳಬಳವನಾರೈವ ಭಟರೊದಗಿದರು ಸಮರದಲಿ ॥23॥
೦೨೪ ಬಿಡುವ ಬಿಡಿಸುವ ...{Loading}...
ಬಿಡುವ ಬಿಡಿಸುವ ಪರರ ಘಾಯವ
ತಡೆವ ಗೋಮೂತ್ರಕದ ಚಿತ್ರದ
ಝಡಪದವಧಾನದ ವಿಧಾನದ ಘಾಯಖಂಡಿಗಳ
ತುಡುಕುವವ್ವಳಿಸುವ ವಿಸಂಧಿಯ
ಹಿಡಿವ ಬಿಚ್ಚುವ ಬಿಗಿವ ಸೆಳೆವವ
ಗಡಿಸುವೌಕುವ ಕುಶಲದಲಿ ಕಾದಿದರು ಸಮರದಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುವನ್ನು ಹಿಡಿತದಿಂದ ಬಿಡುವ ಮತ್ತು ಅವನಿಂದ ಬಿಡಿಸಿಕೊಳ್ಳುವ, ಮತ್ತೊಬ್ಬನ ಹೊಡೆತವನ್ನು ತಡೆಯುವ, ಗೋಮೂತ್ರಕವೆಂಬ ಚಿತ್ರದಂತೆ ಸಂಚರಿಸುವ, ಶತ್ರುವಿನ ಮೇಲೆ ಎರಗುವ ಎಚ್ಚರಿಕೆಯ ವಿಧಾನದ, ಘಾಯವನ್ನುಂಟುಮಾಡುವ, ವೇಗವಾಗಿ ಅಪ್ಪಳಿಸುವ, ಮೇಲೆ ಬೀಳುವ, ಒಂದಕ್ಕೊಂದು ಸೇರದಂತೆ ಇರುವ ಅಂಗಾಂಗಗಳನ್ನು ಹಿಡಿಯುವ, ಬಿಡಿಸುವ, ಸೆಳೆಯುವ, ವಿರೋಧಿಸುವ ಒತ್ತಿಹಿಡಿಯುವ, ಕೌಶಲ್ಯದಿಂದ ಯುದ್ಧದಲ್ಲಿ ಕಾದಿದರು.
ಪದಾರ್ಥ (ಕ.ಗ.ಪ)
ಗೋಮೂತ್ರಕದ ಚಿತ್ರ-ಎತ್ತುಗಳು ನಡೆಯುತ್ತಿರುವಾಗಲೇ ಮೂತ್ರಮಾಡುವಾಗ ಉಂಟಾಗುವ ಅಂಕುಡೊಂಕಾದ ಚಿತ್ರ, ಇದು ‘ಚಿತ್ರಕಾವ್ಯದ’ ಒಂದು ರಚನೆಯ ಹೆಸರೂ ಹೌದು,
ಝಡಪ-ಹೆಚ್ಚಾದ ವೇಗ, ಎರಗುವುದು,
ಅವ್ವಳಿಸು-ಮೇಲೆ ಬೀಳು, ಆತುರ,
ವಿಸಂಧಿ-ಸೇರದಿರುವ, ಹೊಂದಿಕೆಯಾಗದ,
ಅವಗಡಿಸು-ವಿರೋಧಿಸು, ತೊಂದರೆಕೊಡು, ಆಘಾತವಾಗು, ಸಾಹಸತೋರು,
ಔಕುವ-ಒತ್ತುವ, ಮೇಲೆ ಬೀಳುವ.
ಮೂಲ ...{Loading}...
ಬಿಡುವ ಬಿಡಿಸುವ ಪರರ ಘಾಯವ
ತಡೆವ ಗೋಮೂತ್ರಕದ ಚಿತ್ರದ
ಝಡಪದವಧಾನದ ವಿಧಾನದ ಘಾಯಖಂಡಿಗಳ
ತುಡುಕುವವ್ವಳಿಸುವ ವಿಸಂಧಿಯ
ಹಿಡಿವ ಬಿಚ್ಚುವ ಬಿಗಿವ ಸೆಳೆವವ
ಗಡಿಸುವೌಕುವ ಕುಶಲದಲಿ ಕಾದಿದರು ಸಮರದಲಿ ॥24॥
೦೨೫ ಬವರಿ ಮತ್ಸ್ಯೋದ್ಗತಿ ...{Loading}...
ಬವರಿ ಮತ್ಸ್ಯೋದ್ಗತಿ ವಿಲಂಘನ
ವಿವಳಿತಾಂಗ ವರಾಹಮತ ಸಂ
ಪ್ಲವನ ಪಾರಿಷ್ಟವ ಗದಾಪರಿರಂಭ ವಿಕ್ಷೇಪ
ಲವಣಿ ಲಹರಿಯುದಂಚ ನವ ವಿ
ದ್ರವಣ ಲಘುವಿನ್ಯಸ್ತವೆಂಬೀ
ವಿವರದಲಿ ಕಾದಿದರು ಕೌತುಕವೆನಲು ಸುರನಿಕರ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಣ್ಣುದುಂಬಿಗಳಂತೆ (ವೃತ್ತಾಕಾರವಾಗಿ) ಸುತ್ತುತ್ತಾ ಮೀನಿನ ರೀತಿಯಲ್ಲಿ ಈಜುವಂತೆ ಮುಂದುವರಿಯುತ್ತಾ ಸುತ್ತುವರಿಯುತ್ತಾ, ಕಾಡು ಹಂದಿಯಂತೆ ಮೇಲೆ ಬೀಳುತ್ತಾ, ಕಪ್ಪೆಗಳ ರೀತಿಯಲ್ಲಿ ಕುಪ್ಪಳಿಸುತ್ತಾ, ಚಂಚಲವರ್ತನೆಯಿಂದ, ಪರಸ್ಪರ ಅಪ್ಪಿಕೊಳ್ಳುತ್ತಾ, ಬಿಡಿಸಿಕೊಂಡು ದೂರತಳ್ಳುತ್ತಾ, ನೃತ್ಯದ ಭಂಗಿಗಳಲ್ಲಿ ಚಲಿಸುತ್ತಾ, ಒಬ್ಬರನ್ನು ಮತ್ತೊಬ್ಬರು ಮೇಲಕ್ಕೆ ಎತ್ತಿಹಿಡಿಯುತ್ತಾ, ಬೆನ್ನಟ್ಟಿ ಹಿಡಿಯುತ್ತಾ, ಕೆಳಕ್ಕೆ ಹಾಕುತ್ತಾ -ವಿವಿಧ ಭಂಗಿಗಳಲ್ಲಿ, ದೇವತೆಗಳೇ ಆಶ್ಚರ್ಯವೆನ್ನುತ್ತಿರಲು ಕಾದಿದರು.
ಪದಾರ್ಥ (ಕ.ಗ.ಪ)
ಬವರಿ-ಭ್ರಮರಿ, ಹೆಣ್ಣುದುಂಬಿ, ಭ್ರಮರದಂತೆ ಸುತ್ತುವುದು,
ಮತ್ಸ್ಯೊದ್ಗತಿ-ಮೀನಿನ ಸಂಚಾರದಂತೆ,
ವಿವಳಿತಾಂಗ- ಸುತ್ತುವರಿದ, ಸುಕ್ಕುಗಟ್ಟಿದ, ವಿಭಾಗ, ಪ್ರದೇಶ,
ವರಾಹಮತ-ಕಾಡುಹಂದಿಯ ರೀತಿ, ಸಂಪ್ಲವನ-ಕಪ್ಪೆಯಂತೆ ಕುಪ್ಪಳಿಸು, ಜಿಗಿತ, ಈಜು, ತೇಲು, ನೆಗೆತ,
ಪಾರಿಷ್ಟವ-ಚಂಚಲ, ವಿವಿಧಗತಿಗಳಲ್ಲಿ ಶೀಘ್ರ ಚಲನೆ, ಪರಿರಂಭ-ಅಪ್ಪುಗೆ, ಆಲಿಂಗನ, ವಿಕ್ಷೇಪ-ಬಿಡುವಿಕೆ, ದೂರಕ್ಕೆ ತಳ್ಳುವುದು ತಿರಸ್ಕರಿಸು, ಎಸೆ, ಚಲ್ಲು, ಲವಣಿ-ನೃತ್ಯಭಂಗಿ, ಕಾಂತಿ, ಲಹರಿ ಉದಂಚ-ಅಲೆಗಳಂತೆ ಮೇಲೆದ್ದು ಸಾಗುವುದು, ವಿದ್ರವಣ-ಬೆನ್ನಟ್ಟು, ಓಡಿಸು, ಕರಗಿಸು,
ಲಘುವಿನ್ಯಸ್ತ- ಗದಾಯುದ್ಧದ ಒಂದು ಪಟ್ಟು,
ವಿನ್ಯಸ್ತ-ಕೆಳಗಿಟ್ಟ, ಕುಂದಣಿಸಿದ, ನೀಡಿದ.
ಟಿಪ್ಪನೀ (ಕ.ಗ.ಪ)
ಗದಾಯುದ್ಧದ ವಿವಿಧ ಭಂಗಿ, ನಡೆ, ಪಟ್ಟುಗಳು, ಹೊಡೆತ, ಹಿಡಿತ, ಬಿಡಿಸಿಕೊಳ್ಳವುದು, ನೂಕುವುದು, ಮೇಲೆ ಬೀಳುವುದು ಮುಂತಾದುವನ್ನು, ಯುದ್ಧದ ಪಾರಿಭಾಷಿಕಗಳನ್ನುಪಯೋಗಿಸಿ ವಿವರಿಸಿರುವುದು, ಕುಮಾರವ್ಯಾಸನ ಅಪಾರ ಶಬ್ದ ಭಾಂಡಾರದ ಬಗ್ಗೆ ತಿಳಿಸುತ್ತದೆ.
ಮೂಲ ...{Loading}...
ಬವರಿ ಮತ್ಸ್ಯೋದ್ಗತಿ ವಿಲಂಘನ
ವಿವಳಿತಾಂಗ ವರಾಹಮತ ಸಂ
ಪ್ಲವನ ಪಾರಿಷ್ಟವ ಗದಾಪರಿರಂಭ ವಿಕ್ಷೇಪ
ಲವಣಿ ಲಹರಿಯುದಂಚ ನವ ವಿ
ದ್ರವಣ ಲಘುವಿನ್ಯಸ್ತವೆಂಬೀ
ವಿವರದಲಿ ಕಾದಿದರು ಕೌತುಕವೆನಲು ಸುರನಿಕರ ॥25॥
೦೨೬ ನೂಕಿದರೆ ಹೆರತೆಗೆವ ...{Loading}...
ನೂಕಿದರೆ ಹೆರತೆಗೆವ ಹೆರತೆಗೆ
ದೌಕುವೌಕಿದಡೊತ್ತು ವೊತ್ತಿದ
ಡಾಕೆಯಲಿ ಪಂಠಿಸುವ ಪಂಠಿಸೆ ಕೂಡೆ ಸಂಧಿಸುವ
ಆ ಕಠೋರದ ಕಯ್ದು ಕಿಡಿಗಳ
ನೋಕರಿಸೆ ಖಣಿಖಟಿಲ ಝಾಡಿಯ
ಜೋಕೆಯಲಿ ಕಾದಿದರು ಸಮಬಲರಾಹವಾಗ್ರದಲಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೂಕಿದರೆ ಹಿಮ್ಮೆಟ್ಟುವ, ಹಿಮ್ಮೆಟ್ಟಿ ಪುನಃ ಮೇಲೆ ಬೀಳುವ, ಮೇಲೆ ಬಿದ್ದರೆ ಬಿಗಿಯಾಗಿ ಒತ್ತಿ ಹಿಡಿಯುವ, ಒತ್ತಿ ಹಿಡಿದರೆ ಶೌರ್ಯದಿಂದ ಸಿಡಿದುಹಾರುವ, ಹಾರಿದರೆ ಕೂಡಲೇ ಸೇರುವ, ಆ ಕಠೋರವಾದ ಆಯುಧಗಳು ಕಿಡಿಗಳನ್ನು ಸುರಿಸುತ್ತಿರಲು, ಖಣಿಖಟಿಲು ಶಬ್ದದಲ್ಲಿ ಎಚ್ಚರಿಕೆಯಿಂದ ಸಮಬಲರಾದ ಭೀಮ ದುರ್ಯೋಧನರು ಯುದ್ಧರಂಗದ ಮುಂಚೂಣಿಯಲ್ಲಿ ಕಾದಿದರು.
ಪದಾರ್ಥ (ಕ.ಗ.ಪ)
ಹೆರೆತೆಗೆ-ಹಿಮ್ಮೆಟ್ಟು, ಪಕ್ಕಕ್ಕೆಸರಿ, ಔಕುವ-ಮೇಲೆ ಬೀಳುವ, ಒತ್ತು-ಒತ್ತಿಹಿಡಿ, ಆಕೆಯಲಿ-ಶೌರ್ಯದಿಂದ (ಆಕೆವಾಳ-ಶೌರ್ಯವಂತ) ಪಂಠಿಸು-ನೆಗೆ, ಹಾರು, ಓಕರಿಸು-ಸುರಿಸು, ಚೆಲ್ಲು, ಬಾಯಿನಿಂದ ಹೊರಕ್ಕೆ ಹಾರಿಸು, ಝಾಡಿ-ಝುಡಿತೆ, ಶಬ್ಧ, ಜೋಕೆ-ಎಚ್ಚರಿಕೆ, ಜಾಗ್ರತೆ, ಚಮತ್ಕಾರ, ಬುದ್ಧವಂತಿಕೆ, ಪ್ರೌಢಿಮೆ.
ಮೂಲ ...{Loading}...
ನೂಕಿದರೆ ಹೆರತೆಗೆವ ಹೆರತೆಗೆ
ದೌಕುವೌಕಿದಡೊತ್ತು ವೊತ್ತಿದ
ಡಾಕೆಯಲಿ ಪಂಠಿಸುವ ಪಂಠಿಸೆ ಕೂಡೆ ಸಂಧಿಸುವ
ಆ ಕಠೋರದ ಕಯ್ದು ಕಿಡಿಗಳ
ನೋಕರಿಸೆ ಖಣಿಖಟಿಲ ಝಾಡಿಯ
ಜೋಕೆಯಲಿ ಕಾದಿದರು ಸಮಬಲರಾಹವಾಗ್ರದಲಿ ॥26॥
೦೨೭ ಮರಹ ಪಡೆಯರು ...{Loading}...
ಮರಹ ಪಡೆಯರು ಘಾಯ ಖಂಡಿಗೆ
ತೆರಹುಗಾಣರು ಹೊಯ್ಲಹೋರಟೆ
ಹೊರಗೆ ಬಿದ್ದವು ಕದ್ದವಿಬ್ಬರ ದೃಷ್ಟಿ ಮನಮನವ
ಇರಿವ ಗದೆ ನೆಗ್ಗಿದವು ರೋಷದಿ
ಜರೆವ ನುಡಿ ತಾಗಿದವು ಹೊಗಳುವ
ಡರಿಯೆನಗ್ಗದ ಭೀಮ ದುರಿಯೋಧನರ ರಣರಸವ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
27 ಅವರು ಮೈಮರವೆಯನ್ನು ಪಡೆಯಲಿಲ್ಲ, ಖಂಡಿಸಿ (ಕತ್ತರಿಸಿ) ಘಾಯವುಂಟುಮಾಡಲು ದೇಹದಲ್ಲಿ ಜಾಗವನ್ನೇ ಕಾಣರು. ಹೊಡೆತದ ಹೋರಾಟಗಳು ಕಾಣೆಯಾದವು. ಇವರಿಬ್ಬರ ದೃಷ್ಟಿಯುದ್ಧವು ನೆರೆದವರ ಮನಸ್ಸುಗಳನ್ನು ಕದ್ದವು (ಗೆದ್ದವು). ಇರಿಯುತ್ತಿದ್ದ ಗದೆಗಳು ನುಜ್ಜುಗುಜ್ಜಾದವು. ರೋಷದಿಂದ ಅವಹೇಳನ ಮಾಡುವ ಮಾತುಗಳು ತಾಗಿದವು. ಭೀಮ ದುರ್ಯೋಧನರಿಬ್ಬರ ಶ್ರೇಷ್ಠವಾದ ಕಾಳಗವನ್ನು ಹೊಗಳಲು ನನಗೆ ತಿಳಿಯದು - ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಮರಹು-ಮರೆವು, ಮೈಮರೆಯುವುದು, ಅಜ್ಞಾನ, ನೆನಪು ಮಾಸುವುದು, ಖಂಡಿಗೆ-ತುಂಡರಿಸಿದುದು, ಕತ್ತರಿಸಿದುದು, ವಿರೋಧಿಸು, ಸೋಲಿಸು, ತೆರಹು-ತೆರವು, ಖಾಲಿಸ್ಥಳ, ಹೊಯ್ಲು-ಹೊಡೆತ, ಹೋರಟೆ-ಹೋರಾಟ,
ನೆಗ್ಗು-ನುಜ್ಜುಗುಜ್ಜಾಗು, ತಗ್ಗಿಹೋಗು,
ಅಗ್ಗದ-ಶ್ರೇಷ್ಠವಾದ.
ಮೂಲ ...{Loading}...
ಮರಹ ಪಡೆಯರು ಘಾಯ ಖಂಡಿಗೆ
ತೆರಹುಗಾಣರು ಹೊಯ್ಲಹೋರಟೆ
ಹೊರಗೆ ಬಿದ್ದವು ಕದ್ದವಿಬ್ಬರ ದೃಷ್ಟಿ ಮನಮನವ
ಇರಿವ ಗದೆ ನೆಗ್ಗಿದವು ರೋಷದಿ
ಜರೆವ ನುಡಿ ತಾಗಿದವು ಹೊಗಳುವ
ಡರಿಯೆನಗ್ಗದ ಭೀಮ ದುರಿಯೋಧನರ ರಣರಸವ ॥27॥
೦೨೮ ಗಾಹಿನಲಿ ಗಾಢಿಸಿದ ...{Loading}...
ಗಾಹಿನಲಿ ಗಾಢಿಸಿದ ಗದೆ ಹೊರ
ಬಾಹೆಯಲಿ ಹಿಂಗಿದವು ಠಾಣದ
ಲೂಹಿಸಿದ ಮನ ಮುಗ್ಗಿದುದು ಕಂದೊಳಲ ತೋಹಿನಲಿ
ಕಾಹುರದ ಹೊಯ್ಲುಗಳು ನೋಟದ
ಕಾಹಿನಲಿ ಕಿಡಿಗೆದರೆ ಘಾಯದ
ಸೋಹೆಯರಿವ ಸುಜಾಣರೊದಗಿದರರಸ ಕೇಳ್ ಎಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುರಿಯಿಟ್ಟು ಅತಿವೇಗದಿಂದ ಹೊಡೆದ ಗದೆ ಗುರಿತಪ್ಪಿ ಹೊರಭಾಗದಲ್ಲಿ ಬೀಸಿತು. ನಿರ್ದಿಷ್ಟ ಜಾಗಕ್ಕೆ ಹೊಡೆಯಲು ಮನಸ್ಸು ಊಹಿಸಿದರೆ ಕಣ್ಣುಗಳು ಬವಳಿ ಬಂದು ಮೋಸಗೊಳಿಸಿದವು, ಕೋಪದಿಂದ ಹೊಡೆದ ಹೊಡೆತಗಳು, ಕ್ರೋಧದೃಷ್ಟಿಯ ಕಾರಣದಿಂದಾಗಿ ಕಿಡಿಗಳು ಹರಡಲು ಅದರ ಬೆಳಕಿನಲ್ಲಿ ಗಾಯಗಳ ಗುರುತುಗಳನ್ನು ನೋಡುವ ಜಾಣರುಗಳು ಯುದ್ಧದಲ್ಲಿ ತೊಡಗಿದರು.
ಪದಾರ್ಥ (ಕ.ಗ.ಪ)
ಗಾಹು-ಗುರಿ, ಆಳ, ಹಿಡಿತ, ಪ್ರಭಾವ, ಮೋಸ, ಗಾಢಿಸು-ವೇಗಗೊಳಿಸು, ಹೊರಬಾಹೆ-ಆಚಿನ, ಹೊರಗಿನ, ಹಿಂಗಿದವು-ಕಾಣದಾದವು, ನಾಶವಾದವು, ಠಾಣ-ಸ್ಥಾನ, ನೆಲೆ, ಬೀಡು, ಸ್ಥಳ, ಮುಗ್ಗು-ಮುದುಡು, ಕುಗ್ಗು, ಕಾಣದಾಗು, ಕಂದೊಳಲು-(ಕಣ್+ತೊಳಲ್) ಕಣ್ಣುತೊಳಸು, ಬವಳಿ, ತೋಹು-ಮೋಸ, ವಂಚನೆ, ಬೇಟೆಗಾಗಿ ಅಡಗುವ ಸ್ಥಳ, ಕಾಹುರ-ಕಾವರ, ಸೊಕ್ಕು, ಮದ, ಕೋಪ, ಕ್ರೋಧ, ರಭಸ, ಸಂಭ್ರಮ, ಕಾಹು-ಕಾಪು, ಕಾಯುವಿಕೆ, ಕಾವಲು, ಸೋಹೆ-ಬೇಟೆಯ ಗುರುತು.
ಮೂಲ ...{Loading}...
ಗಾಹಿನಲಿ ಗಾಢಿಸಿದ ಗದೆ ಹೊರ
ಬಾಹೆಯಲಿ ಹಿಂಗಿದವು ಠಾಣದ
ಲೂಹಿಸಿದ ಮನ ಮುಗ್ಗಿದುದು ಕಂದೊಳಲ ತೋಹಿನಲಿ
ಕಾಹುರದ ಹೊಯ್ಲುಗಳು ನೋಟದ
ಕಾಹಿನಲಿ ಕಿಡಿಗೆದರೆ ಘಾಯದ
ಸೋಹೆಯರಿವ ಸುಜಾಣರೊದಗಿದರರಸ ಕೇಳೆಂದ ॥28॥
೦೨೯ ನೆನಹು ನೆಗ್ಗಿದುದುಪ್ಪರದ ...{Loading}...
ನೆನಹು ನೆಗ್ಗಿದುದುಪ್ಪರದ ಕೈ
ಮನವ ಕಬಳಿಸಿ ತೆರಹು ಬಿರುಬಿ
ಮ್ಮಿನಲಿ ಬಿಗಿದುದು ತೆಗೆದವಿಬ್ಬರ ಘಾಯಘಾತಿಗಳು
ಕೊನರ್ವ ಕೋಪದ ಕುದಿವ ಕರಣದ
ತನುವಿಗುಪ್ತಿಯ ಜಯದ ತವಕದ
ತನಿಮನದ ಕಡುತೋಟಿಕಾರರು ಕಾದಿದರು ಕಡುಗಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆನಪು ಮಾಸಿತು, ಅತಿಶಯದ ಕೈ ಮತ್ತು ಮನಸ್ಸನ್ನು ನುಂಗಿಹಾಕಿ, ತೆರವಿನ ಜಾಗವನ್ನು ಬಿರುಸಾಗಿ ಬಿಗಿದು ಹಾಕಿತು. ಈ ಇಬ್ಬರ ಗಾಯವನ್ನುಂಟು ಮಾಡುವ ಹೊಡೆತಗಳು ನಿಂತು ಹೋದವು. ಚಿಗುರೊಡೆದ ಕೋಪದ, ಕುದಿಯುತ್ತಿರುವ ಅಂಗಾಂಗಗಳ, ಕುಗ್ಗಿದ ಶರೀರದ, ಜಯವನ್ನು ಅರಸುತ್ತಿರುವ, ಏಕಚಿತ್ತದ ಗಟ್ಟಿಗರಾದ ಹೋರಾಟಗಾರರು ಪರಾಕ್ರಮದಿಂದ ಕಾದಿದರು.
ಪದಾರ್ಥ (ಕ.ಗ.ಪ)
ಉಪ್ಪರ-ಅತಿಶಯ, ಉನ್ನತಿ, ಹೆಚ್ಚು, ಎತ್ತರ, ಕಬಳಿಸಿ-ತಿಂದುಹಾಕಿ, ನುಂಗಿ, ಬಿರುಬಿಮ್ಮಿನಲಿ-ಗಡಸುತನದಲ್ಲಿ, ಘಾಯಘಾತಿ-ಗಾಯವುಂಟುಮಾಡುವ ಹೊಡೆತ, ಕೊನರ್ವ-ಚಿಗುರುವ, ಬೆಳೆಯುತ್ತಿರುವ, ಕರಣ-ಅಂಗಾಂಗಳು, ವಿಗುಪ್ತಿ-ಕುಗ್ಗು, ಅಡಗು, ರಕ್ಷಣೆ, ಬಲ, ಒರೆಯಲ್ಲಿರುವ ಖಡ್ಗ, ತನಿಮನ-ಏಕಾಗ್ರಚಿತ್ತತೆ.
ಕಡುತೋಟಿಕಾರ-ಗಟ್ಟಿಗರಾದ ಹೋರಾಟಗಾರರು, ವೀರರು, ಕಡುಗಿ-ಪರಾಕ್ರಮದಿಂದ, ಪೌರುಷದಿಂದ,
ಮೂಲ ...{Loading}...
ನೆನಹು ನೆಗ್ಗಿದುದುಪ್ಪರದ ಕೈ
ಮನವ ಕಬಳಿಸಿ ತೆರಹು ಬಿರುಬಿ
ಮ್ಮಿನಲಿ ಬಿಗಿದುದು ತೆಗೆದವಿಬ್ಬರ ಘಾಯಘಾತಿಗಳು
ಕೊನರ್ವ ಕೋಪದ ಕುದಿವ ಕರಣದ
ತನುವಿಗುಪ್ತಿಯ ಜಯದ ತವಕದ
ತನಿಮನದ ಕಡುತೋಟಿಕಾರರು ಕಾದಿದರು ಕಡುಗಿ ॥29॥
೦೩೦ ಜಾಣು ಜಗುಳಿತು ...{Loading}...
ಜಾಣು ಜಗುಳಿತು ಹೊಯ್ಲ ಮೊನೆ ಮುಂ
ಗಾಣಿಕೆಗೆ ಲಟಕಟಿಸಿದುದು ಬರಿ
ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
ತ್ರಾಣ ತಳವೆಳಗಾಯ್ತು ಶ್ರವ ಬಿ
ನ್ನಾಣ ಮೇಲಾಯಿತ್ತು ಕುಶಲದ
ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜ್ಞಾನವು ಜಾರಿತು ಹೊಡೆತದ ಮೊದಲೆ ಪಕ್ಕೆಲಬುಗಳು ಲಟಕಟಿಸಿದವು. ಪಾದಗಳ ಚಲನೆಗೆ, ಧೂಳಿನ ಉತ್ಪತ್ತಿಯೊಂದೇ ಲಾಭವಾಯಿತು. ದೇಹದಲ್ಲಿನ ಶಕ್ತಿ ತಲೆಕೆಳಗಾಯಿತು ಕೇವಲ ಶ್ರಮದ ವಿನ್ಯಾಸಗಳೇ ಹೆಚ್ಚಾದವು, ಕೌಶಲ್ಯದಿಂದ, ಮತ್ಸರದಿಂದ, ಗದೆಗಳಿಂದ ಹೊರಟ ಕಿಡಿಗಳನ್ನು ಕೋಪದ ಕಣ್ಣಿನ ಕಿಡಿಗಳು ತಿವಿಯುವ ರೀತಿಯಲ್ಲಿ ಕಾದಿದರು.
ಪದಾರ್ಥ (ಕ.ಗ.ಪ)
ಜಾಣು-ಜ್ಞಾನ (ಸಂ). ತಿಳುವಳಿಕೆ, ಹೊಯ್ಲ-ಹೊಡೆತದ, ಮೊನೆ-ತುದಿ, ಚೂಪಾದ ಅಗ್ರಭಾಗ, ಬರಿ-ಸೊಂಟ, ಸೊಂಟದ ಎಲುಬು, ರೇಣು ಜನನ-ಧೂಳಿನ ಉತ್ಪತ್ತಿ, ಪಡಪು-ಲಾಭ, ಹೆಮ್ಮೆ, ದೊಡ್ಡಸ್ತಿಕೆ, ತ್ರಾಣ-ಶಕ್ತಿ, ತಳವೆಳಗು-ತಲೆಕೆಳಗು, ಶ್ರವ-ಶ್ರಮ, ಕೆಲಸ, ಗರಡಿಮನೆ, ಬಿನ್ನಾಣ-ಬೆಡಗು, ವಿನ್ಯಾಸ, ಕೇಣ-ಕೋಪ ,ಮತ್ಸರ,
ಮೂಲ ...{Loading}...
ಜಾಣು ಜಗುಳಿತು ಹೊಯ್ಲ ಮೊನೆ ಮುಂ
ಗಾಣಿಕೆಗೆ ಲಟಕಟಿಸಿದುದು ಬರಿ
ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
ತ್ರಾಣ ತಳವೆಳಗಾಯ್ತು ಶ್ರವ ಬಿ
ನ್ನಾಣ ಮೇಲಾಯಿತ್ತು ಕುಶಲದ
ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ ॥30॥
೦೩೧ ವಿಲಸದಪಸವ್ಯದಲಿ ರಿಪು ...{Loading}...
ವಿಲಸದಪಸವ್ಯದಲಿ ರಿಪು ಮಂ
ಡಳಿಸಿ ಹೊಯ್ದನು ಸವ್ಯಮಂಡಲ
ವಲಯದಿಂದಾ ಭೀಮಸೇನನ ಹೊಯ್ಲ ಹೊರಬೀಸಿ
ಒಳಬಗಿದು ಕಿಬ್ಬರಿಯ ಕಂಡ
ಪ್ಪಳಿಸಿದನು ನಿನ್ನಾತನಾಚೆಯ
ದಳದ ಭಟತತಿ ಹಾಯೆನಲು ಝೋಂಪಿಸಿದನಾ ಭೀಮ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ಸಾಹದಿಂದ ಶತ್ರುವಾದ ಭೀಮ ಬಲಭಾಗದಿಂದ ಸುತ್ತಿಬಂದು ಪ್ರಹಾರ ಮಾಡಿದ. ಎಡಭಾಗದಿಂದ ಸುತ್ತಿಬಂದು, ದುರ್ಯೋಧನನು, ಭೀಮಸೇನನ ಹೊಡೆತವನ್ನು ಹೊರಕ್ಕೆ ಬೀಳುವಂತೆ ಮಾಡಿ, (ತಾನು ತಪ್ಪಿಸಿಕೊಂಡು) ಒಳಹೊಕ್ಕು ಭೀಮನ ಕಿಬ್ಬದಿಯನ್ನು ನಿನ್ನಾತ ದುರ್ಯೋಧನ ಕಂಡು ಗದೆಯಿಂದ ಅಪ್ಪಳಿಸಿದ. ಆಚೆಯ ಪಾಂಡವರ ಸೈನ್ಯದ ಭಟರುಗಳು ಹಾ! ಎನ್ನತ್ತಿರಲು ಭೀಮ ಬೆಚ್ಚಿದ.
ಪದಾರ್ಥ (ಕ.ಗ.ಪ)
ಅಪಸವ್ಯ-ಬಲ (ಎಡವಲ್ಲದ್ದು) ಮಂಡಳಿಸಿ-ಸುತ್ತತಿರುಗಿ, ತಿರುಗಿಬಂದು, ಸವ್ಯ-ಎಡ, ಹೊರಬೀಸಿ-ತನ್ನ ದೇಹದ ಹೊರಕ್ಕೆ ಬೀಸುವಂತೆ ಮಾಡಿ, ಒಳಬಗಿದು-ಒಳಕ್ಕೆ ಪ್ರವೇಶಿಸಿ, ಕಿಬ್ಬರಿ-ಸೊಂಟ, ಝೋಂಪಿಸು-ಗಾಬರಿಯಾಗು, ನಡುಗು.
ಮೂಲ ...{Loading}...
ವಿಲಸದಪಸವ್ಯದಲಿ ರಿಪು ಮಂ
ಡಳಿಸಿ ಹೊಯ್ದನು ಸವ್ಯಮಂಡಲ
ವಲಯದಿಂದಾ ಭೀಮಸೇನನ ಹೊಯ್ಲ ಹೊರಬೀಸಿ
ಒಳಬಗಿದು ಕಿಬ್ಬರಿಯ ಕಂಡ
ಪ್ಪಳಿಸಿದನು ನಿನ್ನಾತನಾಚೆಯ
ದಳದ ಭಟತತಿ ಹಾಯೆನಲು ಝೋಂಪಿಸಿದನಾ ಭೀಮ ॥31॥
೦೩೨ ಆಗಳೇ ಸನ್ತೈಸಿ ...{Loading}...
ಆಗಳೇ ಸಂತೈಸಿ ರಿಪು ಕೈ
ದಾಗಿಸಿದನರಸನನು ಘಾಯದ
ಬೇಗಡೆಯಲುಚ್ಚಳಿಸಿದುದು ಬಿಸಿರಕುತ ಹುಡಿ ನನೆಯೆ
ಆ ಗರುವನದ ಬಗೆವನೇ ಸರಿ
ಭಾಗರಕುತವನನಿಲಸುತನಲಿ
ತೂಗಿ ತೆಗೆದವೊಲಾಯ್ತು ಹೊಯ್ದನು ಪವನನಂದನನ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕೂಡಲೇ ಸಮಾಧಾನ ಪಟ್ಟುಕೊಂಡು ಭೀಮ, ದುರ್ಯೋಧನನ ಮೇಲೆ ಗದೆಯಿಂದ ಹೊಡೆದ. ಗಾಯದ ಸಂದಿನಿಂದ ಬಿಸಿರಕ್ತವು, ನೆಲದ ಮೇಲಿನ ಧೂಳು ನೆನೆಯುವಂತೆ ಚಿಮ್ಮಿತು. ವೀರನಾದ ದುರ್ಯೋಧನ ಅದನ್ನು ಲೆಕ್ಕಿಸುತ್ತಾನೆಯೆ! ಸಮಭಾಗದ ರಕ್ತವನ್ನು ಭೀಮನ ದೇಹದಿಂದ ತೂಕ ಮಾಡಿ ತೆಗೆಯುವಂತೆ ಭೀಮನನ್ನು ದುರ್ಯೋಧನ ಹೊಡೆದ.
ಪದಾರ್ಥ (ಕ.ಗ.ಪ)
ಸಂತೈಸಿ-ಸಮಾಧಾನಿಸಿ, ಕೈದಾಗಿಸು-ಹೊಡೆ, ಬೇಗಡೆ-ತೂತು, ಸಂದು, ಉಚ್ಚಳಿಸು-ಚಿಮ್ಮು, ಹಾರು, ವೇಗವಾಗಿ ಹೊರಕ್ಕೆ ಬರುವುದು, ಹುಡಿ-ಧೂಳು, ಮಣ್ಣಿನ ಪುಡಿ, ಗರುವ-ವೀರ, ದೊಡ್ಡವ.
ಮೂಲ ...{Loading}...
ಆಗಳೇ ಸಂತೈಸಿ ರಿಪು ಕೈ
ದಾಗಿಸಿದನರಸನನು ಘಾಯದ
ಬೇಗಡೆಯಲುಚ್ಚಳಿಸಿದುದು ಬಿಸಿರಕುತ ಹುಡಿ ನನೆಯೆ
ಆ ಗರುವನದ ಬಗೆವನೇ ಸರಿ
ಭಾಗರಕುತವನನಿಲಸುತನಲಿ
ತೂಗಿ ತೆಗೆದವೊಲಾಯ್ತು ಹೊಯ್ದನು ಪವನನಂದನನ ॥32॥
೦೩೩ ಸೈರಿಸಿದವೆರಡಙ್ಕ ತೆಗೆದವು ...{Loading}...
ಸೈರಿಸಿದವೆರಡಂಕ ತೆಗೆದವು
ದೂರದಲಿ ದುರುದುರಿಪ ರಕುತದ
ಧಾರೆಗಳ ತೊಳೆದೊರಸಿದರು ಸಿರಿಖಂಡ ಕರ್ದಮವ
ವೀರಕೇಳೀಶ್ರಮವಡಗೆ ಕ
ರ್ಪೂರ ವೀಳೆಯಗೊಂಡು ಮತ್ತೆ ಮ
ಹಾರುಭಟೆಯಲಿ ಸುಭಟರೆದ್ದರು ತೂಗಿ ನಿಜಗದೆಯ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದ ಎರಡೂ ಪಕ್ಷಗಳಾದ ಭೀಮ ದುರ್ಯೋಧನರು ಸ್ವಲ್ಪಕಾಲ ವಿಶ್ರಾಂತಿ ಪಡೆದು ಸಮಾಧಾನಗೊಳ್ಳಲು ಸ್ವಲ್ಪದೂರಕ್ಕೆ ಹೋದರು. ದುರುದುರನೆ ಸುರಿಯುತ್ತಿರುವ ರಕ್ತದ ಪ್ರವಾಹವನ್ನು ತೊಳೆದು ಒರೆಸಿ, ಶ್ರೀಗಂಧದ ಲೇಪನವನ್ನು ಹಚ್ಚಿದರು. ವೀರರ ಆಯಾಸವು ಹೋಗಲು, ಕರ್ಪೂರ ವೀಳೆಯಗಳನ್ನು ಹಾಕಿಕೊಂಡು ಪುನಃ ಮಹಾ ಆರ್ಭಟದ ನಾದದಿಂದ ಸುಭಟರಿಬ್ಬರೂ ಗದೆಯನ್ನು ತೂಗುತ್ತಾ ಎದ್ದರು. (ಯುದ್ಧಕ್ಕೆ ಸಿದ್ಧರಾದರು)
ಪದಾರ್ಥ (ಕ.ಗ.ಪ)
ಸೈರಿಸು-ಸಮಾಧಾನಿಸು, ಯುದ್ಧವನ್ನು ನಿಲ್ಲಿಸು, ತೆಗೆದವು-ಹಿಂದೆಗೆದವು, ದೂರಕ್ಕೆ ಹೋದರು, ದುರುದುರಿಪ-ಸುರಿಯುತ್ತಿರುವ, ಸಿರಿಖಂಡ-ಶ್ರೀಗಂಧ, ಕರ್ದಮ-ಲೇಪನ, ಕೆಸರು, ಧೂಪ.
ಮೂಲ ...{Loading}...
ಸೈರಿಸಿದವೆರಡಂಕ ತೆಗೆದವು
ದೂರದಲಿ ದುರುದುರಿಪ ರಕುತದ
ಧಾರೆಗಳ ತೊಳೆದೊರಸಿದರು ಸಿರಿಖಂಡ ಕರ್ದಮವ
ವೀರಕೇಳೀಶ್ರಮವಡಗೆ ಕ
ರ್ಪೂರ ವೀಳೆಯಗೊಂಡು ಮತ್ತೆ ಮ
ಹಾರುಭಟೆಯಲಿ ಸುಭಟರೆದ್ದರು ತೂಗಿ ನಿಜಗದೆಯ ॥33॥
೦೩೪ ಮತ್ತೆ ಹೊಕ್ಕರು ...{Loading}...
ಮತ್ತೆ ಹೊಕ್ಕರು ದಿಗ್ಗಜಕೆ ಮದ
ಮತ್ತದಿಗ್ಗಜ ಮಲೆತವೊಲು ಮಿಗೆ
ಹತ್ತಿದರು ಶತಮನ್ಯು ಜಂಭನ ಜೋಡಿಯಂದದಲಿ
ತತ್ತರಿಬ್ಬರು ಮೂಕದನುಜನ
ಕೃತ್ತಿವಾಸನವೋಲು ರಣಧೀ
ರೋತ್ತಮರು ಕಯ್ಯಿಕ್ಕಿದರು ಕೌರವ ವೃಕೋದರರು ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮದಿಸಿದ ಆನೆಯು ದಿಗ್ಗಜಕ್ಕೆ ಮಲೆತು ನಿಂತಂತೆ, ಈ ಇಬ್ಬರೂ ಮತ್ತೆ ಕದನಕ್ಕೆ ನಿಂತರು. ಇಂದ್ರ ಮತ್ತು ಜಂಭಾಸುರನ ರೀತಿಯಲ್ಲಿ ಒಬ್ಬರ ಮೇಲೆ ಒಬ್ಬರು ಬಿದ್ದರು. ಮೂಕಾಸುರ ಮತ್ತು ಶಿವನ ರೀತಿಯಲ್ಲಿ ರಣಧೀರೋತ್ತಮರಾದ ಭೀಮ-ದುರ್ಯೋಧನರು ಯುದ್ಧಕ್ಕೆ ತೊಡಗಿದರು.
ಪದಾರ್ಥ (ಕ.ಗ.ಪ)
ಮಲೆತು-ಕೊಬ್ಬಿ, ಕೈಯ್ಯಿಕ್ಕು-ಪ್ರಾರಂಭಿಸು, ಶತಮನ್ಯು-ಇಂದ್ರ , ಜಂಭ-ಜಂಭನೆಂಬ ಒಬ್ಬ ರಾಕ್ಷಸ, ಮೂಕದನುಜ-‘ಮುಕ’ನೆಂಬ ರಾಕ್ಷಸ, ಕೃತ್ತಿವಾಸ-ಜಿಂಕೆಯ ಚರ್ಮವನ್ನು ಉಟ್ಟವ, ಶಿವ.
ಟಿಪ್ಪನೀ (ಕ.ಗ.ಪ)
- ಮದಮತ್ತಗಜ-ಮದಗಜವೆಂದರೂ, ಮತ್ತಗಜವೆಂದರೂ ‘ಮದಿಸಿದ ಆನೆ’ಯೆಂಬ ಒಂದೇ ಅರ್ಥ. ಇದು ದ್ವಿರುಕ್ತಿ
- “ಶತಮನ್ಯು ಜಂಭನ ಜೋಡಿಯಂದದಲಿ-” ‘ಜಂಭ’ ನೆಂಬುವನೊಬ್ಬ ರಾಕ್ಷಸ, ಹಿರಣ್ಯಕಶಿಪುವಿನ ಹೆಂಡತಿ ಕಯಾದುವಿನ ತಂದೆ. ತಾರಕಾಸುರ ಸಂಹಾರದ ಸಂದರ್ಭದಲ್ಲಿ ಜಂಭನನ್ನು ಇಂದ್ರನು ಸಂಹರಿಸಿದ.
3)“ಮೂಕದನುಜನ ಕೃತ್ತಿವಾಸನ ವೋಲು…….” ಮೂಕಾಸುರನೆಂಬ ಒಬ್ಬರಾಕ್ಷಸ ಇಂದ್ರಕೀಲ ಪರ್ವತದಲ್ಲಿ ವಾಸವಾಗಿದ್ದ. ಅರ್ಜುನನ ತಪಸ್ಸಿಗೆ ಮೆಚ್ಚಿ ಶಿವ ಕಿರಾತನ ರೂಪದಲ್ಲಿ ಬಂದಾಗ ಮೂಕದಾನವನು ಕಾಡುಹಂದಿಯ ರೂಪತಾಳಿದ. ಶಿವ ಇವನನ್ನು ಸಂಹಾರ ಮಾಡಿದ (ಅರಣ್ಯಪರ್ವದ 5ನೆಯ ಸಂಧಿಯ 1ರಿಂದ 47ರವರೆಗಿನ ಪದ್ಯಗಳನ್ನು ನೋಡಿ) - ‘ಕಿರಾತಾರ್ಜುನೀಯ ಪ್ರಸಂಗ’.
ಮೂಲ ...{Loading}...
ಮತ್ತೆ ಹೊಕ್ಕರು ದಿಗ್ಗಜಕೆ ಮದ
ಮತ್ತದಿಗ್ಗಜ ಮಲೆತವೊಲು ಮಿಗೆ
ಹತ್ತಿದರು ಶತಮನ್ಯು ಜಂಭನ ಜೋಡಿಯಂದದಲಿ
ತತ್ತರಿಬ್ಬರು ಮೂಕದನುಜನ
ಕೃತ್ತಿವಾಸನವೋಲು ರಣಧೀ
ರೋತ್ತಮರು ಕಯ್ಯಿಕ್ಕಿದರು ಕೌರವ ವೃಕೋದರರು ॥34॥
೦೩೫ ಏನನೆಮ್ಬೆನು ಜೀಯ ...{Loading}...
ಏನನೆಂಬೆನು ಜೀಯ ಕುರುಪತಿ
ಯಾನುವನು ಕಲಿಭೀಮನುಬ್ಬೆಯ
ನಾನುವನು ದುರಿಯೋಧನನ ಥಟ್ಟಣೆಯನಾ ಭೀಮ
ದಾನವರು ಮಾನವರೊಳಿನ್ನು ಸ
ಘಾನರಾರಿವರಂತೆ ಪಾಂಡವ
ರ್ಗೇನಸಾಧ್ಯವು ವೀರನಾರಾಯಣನ ಕರುಣದಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನು ಹೇಳಲಿ ಸ್ವಾಮೀ, ಕಲಿಭೀಮನ ಉಬ್ಬಟೆಯನ್ನು ಕುರುಪತಿಯು ಅಹ್ವಾನಿಸಿ ಎದುರಿಸುತ್ತಾನೆ, ದುರ್ಯೋಧನ ಮೇಲೆ ಬಿದ್ದರೆ ಭೀಮ ಅದನ್ನು ಎದುರಿಸುತ್ತಾನೆ. ರಾಕ್ಷಸರು, ಮನುಷ್ಯರಲ್ಲಿ ಇವರಂತೆ ಶ್ರೇಷ್ಠಯೋಧರು ಯಾರಿದ್ದಾರೆ, ಆದರೂ ವೀರನಾರಾಯಣನ ಕರುಣೆಯಿಂದ, ಪಾಂಡವರಿಗೆ ಯಾವುದು ಅಸಾಧ್ಯವಾಗುತ್ತದೆ - ಎಂದು ಸಂಜಯ ಧೃತರಾಷ್ಟ್ರನಲ್ಲಿ ಹೇಳಿದ.
ಪದಾರ್ಥ (ಕ.ಗ.ಪ)
ಆನುವನು-ಎದುರಿಸುವನು, ಉಬ್ಬೆ-ಉಬ್ಬಟೆ, ಗರ್ವ, ಶಕ್ತಿ, ಬೊಬ್ಬೆ, ಅಧಿಕ, ಥಟ್ಟಣೆ-ಮೇಲೆ ಬೀಳುವುದು, ಸಘಾನರು-ಸಘನರು, ಶ್ರೇಷ್ಠರು
ಮೂಲ ...{Loading}...
ಏನನೆಂಬೆನು ಜೀಯ ಕುರುಪತಿ
ಯಾನುವನು ಕಲಿಭೀಮನುಬ್ಬೆಯ
ನಾನುವನು ದುರಿಯೋಧನನ ಥಟ್ಟಣೆಯನಾ ಭೀಮ
ದಾನವರು ಮಾನವರೊಳಿನ್ನು ಸ
ಘಾನರಾರಿವರಂತೆ ಪಾಂಡವ
ರ್ಗೇನಸಾಧ್ಯವು ವೀರನಾರಾಯಣನ ಕರುಣದಲಿ ॥35॥