೦೦೦ ಸೂ ಸಮರ ...{Loading}...
ಸೂ. ಸಮರ ಸಾಹಸ ವೀರನನುಪಮ
ಕಮಲಸಖನ ಕುಮಾರನದಟಿಂ
ದಮರನಗರಿಗೆ ನಡೆಯೆ ಹಲುಬಿದ ಕೌರವರ ರಾಯ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಯುದ್ಧ ಸಾಹಸ ವೀರನಾದ ಉಪಮೆಗೆ ನಿಲುಕದ ಸೂರ್ಯನ ಮಗ ಕರ್ಣನು, ಶೌರ್ಯವನ್ನು ತೋರಿಸುತ್ತಾ, ದೇವತೆಗಳ ನಗರಕ್ಕೆ ನಡೆದಾಗ, ದುರ್ಯೋಧನನು ದುಃಖದಿಂದ ಹಲುಬಿದನು.
ಮೂಲ ...{Loading}...
ಸೂ. ಸಮರ ಸಾಹಸ ವೀರನನುಪಮ
ಕಮಲಸಖನ ಕುಮಾರನದಟಿಂ
ದಮರನಗರಿಗೆ ನಡೆಯೆ ಹಲುಬಿದ ಕೌರವರ ರಾಯ
೦೦೧ ಸಾಲದೇ ಕಥೆಯಿನ್ನು ...{Loading}...
ಸಾಲದೇ ಕಥೆಯಿನ್ನು ಮೇಲಣ
ಕಾಳೆಗದ ಮಾತುಗಳನಕಟಾ
ಕೇಳಿ ಜೀವವ ಹಿಡಿಯಲಾಪೈ ತಂದೆ ಧೃತರಾಷ್ಟ್ರ
ಹೇಳುವಡೆ ಕರ್ಣವ್ಯಥೆಯ ಸಂ
ಭಾಳಿಸುವಡೆನಗರಿದು ನುಡಿಗಳ
ಕಾಳಕೂಟವ ಬಡಿಸುವೆನು ಕಿವಿಯಾರೆ ಸವಿಯೆಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ, ಕಥೆಯನ್ನು ಕೇಳಿದುದರಿಂದ ಬೇಸರವಾಗಲಿಲ್ಲವೇ; ಯುದ್ಧದ ಮುಂದಿನ ಮಾತುಗಳನ್ನು ಕೇಳಿದರೆ ಅಯ್ಯೋ ನೀನು ಜೀವವನ್ನು ಹಿಡಿಯಲು ಸಾಧ್ಯವಾಗುವುದಿಲ್ಲ. ಹೇಳಿದರೆ ಕಿವಿಗೆ ಸಂಕಟವನ್ನುಂಟು ಮಾಡುವ ಇದನ್ನು ಸಹಿಸಲು ನನಗೇ ಸಾಧ್ಯವಾಗುತ್ತಿಲ್ಲ. ಆದರೂ ಕಾಳಕೂಟ ವಿಷದಂತಹ ಮಾತುಗಳನ್ನು ಬಡಿಸುತ್ತೇನೆ. ಕಿವಿಯಾರ ಕೇಳಿ ಅದರ ರುಚಿಯನ್ನು ಅನುಭವಿಸು ಎಂದ ಸಂಜಯ.
ಪದಾರ್ಥ (ಕ.ಗ.ಪ)
ಸಂಭಾಳಿಸು-ಸಹಿಸು
ಮೂಲ ...{Loading}...
ಸಾಲದೇ ಕಥೆಯಿನ್ನು ಮೇಲಣ
ಕಾಳೆಗದ ಮಾತುಗಳನಕಟಾ
ಕೇಳಿ ಜೀವವ ಹಿಡಿಯಲಾಪೈ ತಂದೆ ಧೃತರಾಷ್ಟ್ರ
ಹೇಳುವಡೆ ಕರ್ಣವ್ಯಥೆಯ ಸಂ
ಭಾಳಿಸುವಡೆನಗರಿದು ನುಡಿಗಳ
ಕಾಳಕೂಟವ ಬಡಿಸುವೆನು ಕಿವಿಯಾರೆ ಸವಿಯೆಂದ ॥1॥
೦೦೨ ತೂಳಿದನು ಕಲಿಪಾರ್ಥನೀತನ ...{Loading}...
ತೂಳಿದನು ಕಲಿಪಾರ್ಥನೀತನ
ಮೇಲೆ ಶಿವಶಿವ ಕಣೆಯ ಕಡೆವಳೆ
ಗಾಲ ತಪ್ಪಲ್ಲೆನುತ ಕಡಿದನು ಕರ್ಣನಂಬುಗಳ
ಮೇಲೆಮೇಲೆಚ್ಚಂಬುಗಳ ಸಲೆ
ಸೀಳಿ ಕರ್ಣಧ್ವಜದ ಕಂಭದ
ಕೂಲ ಮುರಿಯೆಸಲುಡಿದು ಬಿದ್ದುದು ವರ ರಥಾಗ್ರದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವಶಿವಾ ವೀರ ಪಾರ್ಥನು ಕರ್ಣನ ಮೇಲೆ, ಪ್ರಳಯಕಾಲದ ಮಳೆಗಾಲದಂತೆ, ಬಾಣಗಳನ್ನು ಪ್ರಯೋಗಿಸಿದನು. ಕರ್ಣನ ಬಾಣಗಳನ್ನು ಕತ್ತರಿಸಿದನು. ಮತ್ತೆ ಮತ್ತೆ ಕರ್ಣನು ಪ್ರಯೋಗಿಸಿದ ಬಾಣಗಳನ್ನು ಕತ್ತರಿಸಿ ಹಾಕಿ, ಕರ್ಣನ ಧ್ವಜದ ಕಂಭ ಮುರಿಯುವಂತೆ ಹೊಡೆದಾಗ ಅದು ರಥದ ಮುಂದೆ ಮುರಿದು ಬಿದ್ದು ಹೋಯಿತು.
ಪದಾರ್ಥ (ಕ.ಗ.ಪ)
ತೂಳಿದ-ಹೊಡೆದ
ಮೂಲ ...{Loading}...
ತೂಳಿದನು ಕಲಿಪಾರ್ಥನೀತನ
ಮೇಲೆ ಶಿವಶಿವ ಕಣೆಯ ಕಡೆವಳೆ
ಗಾಲ ತಪ್ಪಲ್ಲೆನುತ ಕಡಿದನು ಕರ್ಣನಂಬುಗಳ
ಮೇಲೆಮೇಲೆಚ್ಚಂಬುಗಳ ಸಲೆ
ಸೀಳಿ ಕರ್ಣಧ್ವಜದ ಕಂಭದ
ಕೂಲ ಮುರಿಯೆಸಲುಡಿದು ಬಿದ್ದುದು ವರ ರಥಾಗ್ರದಲಿ ॥2॥
೦೦೩ ಆ ಮಹಾಧ್ವಜ ...{Loading}...
ಆ ಮಹಾಧ್ವಜ ದಂಡಪಾತದ
ಡಾಮರದ ದಳವುಳಕೆ ಹೆದರಿತು
ಹಾ ಮಹಾದೇವೇನ ಹೇಳುವೆನೈ ಮಹೀಪತಿಯೆ
ಧೂಮಚುಂಬಿತ ಚಿತ್ರದಂತೆ ಸ
ನಾಮರಿದ್ದುದು ಸೌಬಲಾಶ್ವ
ತ್ಥಾಮ ಕೃಪ ಕೃತವರ್ಮಕಾದಿಗಳೊಂದು ನಿಮಿಷದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಆ ಮಹಾಧ್ವಜದ ಕೋಲು ಬಿದ್ದು ಹೋದದ್ದನ್ನು ಅದರಿಂದ ಉಂಟಾದ ಕ್ಷೋಭೆಯನ್ನು ಧೈರ್ಯದ ಸೂರೆಯನ್ನು ನೋಡಿ ಕೌರವನ ಸೈನ್ಯ ಹೆದರಿತು. ಏನೆಂದು ಹೇಳಲಿ ದೊರೆಯೇ, ಸೌಬಲ, ಅಶ್ವತ್ಥಾಮ, ಕೃಪ, ಕೃತವರ್ಮ ಮೊದಲಾದ ಹೆಸರುವಾಸಿ ವೀರರು, ಒಂದು ನಿಮಿಷದಲ್ಲಿ ಹೊಗೆ ಹತ್ತಿದ ಚಿತ್ರದಂತೆ ನಿಂತರು.
ಪದಾರ್ಥ (ಕ.ಗ.ಪ)
ಡಾಮರ-ಕ್ಷೋಭೆ, ದಳವುಳ-ಸೂರೆ,
ಮೂಲ ...{Loading}...
ಆ ಮಹಾಧ್ವಜ ದಂಡಪಾತದ
ಡಾಮರದ ದಳವುಳಕೆ ಹೆದರಿತು
ಹಾ ಮಹಾದೇವೇನ ಹೇಳುವೆನೈ ಮಹೀಪತಿಯೆ
ಧೂಮಚುಂಬಿತ ಚಿತ್ರದಂತೆ ಸ
ನಾಮರಿದ್ದುದು ಸೌಬಲಾಶ್ವ
ತ್ಥಾಮ ಕೃಪ ಕೃತವರ್ಮಕಾದಿಗಳೊಂದು ನಿಮಿಷದಲಿ ॥3॥
೦೦೪ ಮತ್ತೆ ಕೇಳರಿವಿಕ್ರಮವ ...{Loading}...
ಮತ್ತೆ ಕೇಳರಿವಿಕ್ರಮವ ನಭ
ಕೊತ್ತಿತೀತನ ಶೌರ್ಯವಾತನ
ನೆತ್ತರಲಿ ನಾದಿದನು ನಾನಾವಿಧ ಶರಾವಳಿಯ
ಹತ್ತು ಶರದಲಿ ಕರ್ಣಚಾಪವ
ಕತ್ತರಿಸಿದನು ಪಾರ್ಥನೀತನ
ಚಿತ್ತದಲಿ ಕರುಣಾರಸಕೆ ಕಾಲಾಟವಾಯ್ತೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ, ಶತ್ರುವಿನ ಸಾಹಸದ ವಿಚಾರವನ್ನು ಮತ್ತಷ್ಟು ಹೇಳುತ್ತೇನೆ. ಅರ್ಜುನನ ಶೌರ್ಯ ಆಕಾಶವನ್ನು ಮುಟ್ಟಿತು. ಅವನು ಕರ್ಣನ ರಕ್ತದಲ್ಲಿ ತನ್ನ ನಾನಾ ಬಗೆಯ ಬಾಣಗಳನ್ನು ನೆನೆಸಿದನು. ಹತ್ತು ಬಾಣಗಳಿಂದ ಕರ್ಣನ ಬಿಲ್ಲನ್ನು ಕತ್ತರಿಸಿದನು. ಆಗ ಕರ್ಣನ ಮನಸ್ಸಿನಲ್ಲಿ ಒಂದು ಬಗೆಯ ಕರುಣಾರಸ ಹರಿಯಿತು.
ಮೂಲ ...{Loading}...
ಮತ್ತೆ ಕೇಳರಿವಿಕ್ರಮವ ನಭ
ಕೊತ್ತಿತೀತನ ಶೌರ್ಯವಾತನ
ನೆತ್ತರಲಿ ನಾದಿದನು ನಾನಾವಿಧ ಶರಾವಳಿಯ
ಹತ್ತು ಶರದಲಿ ಕರ್ಣಚಾಪವ
ಕತ್ತರಿಸಿದನು ಪಾರ್ಥನೀತನ
ಚಿತ್ತದಲಿ ಕರುಣಾರಸಕೆ ಕಾಲಾಟವಾಯ್ತೆಂದ ॥4॥
೦೦೫ ದ್ರೋಣ ಭೀಷ್ಮರ ...{Loading}...
ದ್ರೋಣ ಭೀಷ್ಮರ ನಚ್ಚಿದರೆ ಮುಂ
ಗಾಣಿಕೆಯಲೇ ಮಡಿದರೆನ್ನಯ
ಗೋಣ ಕೊಯ್ದನು ಕೃಷ್ಣ ಮುನ್ನಿನ ಕುಲವನೆಚ್ಚರಿಸಿ
ಪ್ರಾಣ ಪಾಂಡವರೆಂಬ ನುಡಿಯನು
ಜಾಣಿನಲಿ ಹರಿ ಬಲಿದನೊಡೆಯಗೆ
ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಒಡೆಯನು ದ್ರೋಣ ಭೀಷ್ಮರನ್ನು ನಂಬಿದ್ದ. ಅವರು ಮೊದಲು ಮೊದಲಲ್ಲೇ ಅಳಿದರು. ತನ್ನ ಮೊದಲಿನ ಕುಲವನ್ನು ತಿಳಿಸಿ ಕೃಷ್ಣನು ನನ್ನ ಕುತ್ತಿಗೆಯನ್ನೇ ಕೊಯ್ದನು. ‘ಪಾಂಡವರಿಗೆ ತಾನು ಉಸಿರು’ ಎಂಬ ಮಾತನ್ನು ಕೃಷ್ಣನು ಜಾಣತನದಲ್ಲಿ ಉಳಿಸಿಕೊಂಡನು. ಈಗ ಒಡೆಯನಿಗೆ ಆಪ್ತರೇ ಕಾಣುತ್ತಿಲ್ಲ ಎಂದು ಕರ್ಣನು ಮನಸ್ಸಿನಲ್ಲೇ ಮರುಗಿದನು.
ಮೂಲ ...{Loading}...
ದ್ರೋಣ ಭೀಷ್ಮರ ನಚ್ಚಿದರೆ ಮುಂ
ಗಾಣಿಕೆಯಲೇ ಮಡಿದರೆನ್ನಯ
ಗೋಣ ಕೊಯ್ದನು ಕೃಷ್ಣ ಮುನ್ನಿನ ಕುಲವನೆಚ್ಚರಿಸಿ
ಪ್ರಾಣ ಪಾಂಡವರೆಂಬ ನುಡಿಯನು
ಜಾಣಿನಲಿ ಹರಿ ಬಲಿದನೊಡೆಯಗೆ
ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ ॥5॥
೦೦೬ ಕುಲಕೆ ಕೀಳಿವನೆನ್ದು ...{Loading}...
ಕುಲಕೆ ಕೀಳಿವನೆಂದು ಟಿಕ್ಕರಿ
ಗಳೆದಡಾ ಬಹುಬಂಧುವರ್ಗವ
ನುಳಿದು ಸಿಂಹಾಸನದಲೆನಗಭಿಷೇಕವನು ಮಾಡಿ
ಕುಲದ ಮಲಿನವ ತೊಳೆದು ಕೌರವ
ಕುಲದೊಳೊಡಬೆಚ್ಚವನಿಪಾಲಕ
ತಿಲಕ ಕುರುಪತಿಗಾಪ್ತರಿಲ್ಲೆಂದಳಲಿದನು ಕರ್ಣ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನು ಕುಲದಲ್ಲಿ ಕೀಳು ಎಂದು ತಿರಸ್ಕಾರದಿಂದ ನೋಡಿದಾಗ, ತನ್ನ ಬಂಧುಗಳನ್ನು ಬಿಟ್ಟು, ನನ್ನನ್ನು ಸಿಂಹಾಸನದಲ್ಲಿ ಕೂರಿಸಿ ಅಭಿಷೇಕ ಮಾಡಿದನು. ನನ್ನ ಕುಲದ ಕೊಳೆಯನ್ನು ತೊಳೆದು ಕೌರವ ಕುಲದ ಜೊತೆಯಲ್ಲಿ ಸೇರಿಸಿಕೊಂಡ ದೊರೆಗಳಲ್ಲಿ ಶ್ರೇಷ್ಠನಾದ ಕೌರವನಿಗೆ ಆಪ್ತರೇ ಇಲ್ಲವಾಯಿತಲ್ಲಾ ಎಂದು ಕರ್ಣನು ದುಃಖಿಸಿದನು.
ಪದಾರ್ಥ (ಕ.ಗ.ಪ)
ಟಿಕ್ಕರಿಗಳೆ-ತಿರಸ್ಕರಿಸು
ಮೂಲ ...{Loading}...
ಕುಲಕೆ ಕೀಳಿವನೆಂದು ಟಿಕ್ಕರಿ
ಗಳೆದಡಾ ಬಹುಬಂಧುವರ್ಗವ
ನುಳಿದು ಸಿಂಹಾಸನದಲೆನಗಭಿಷೇಕವನು ಮಾಡಿ
ಕುಲದ ಮಲಿನವ ತೊಳೆದು ಕೌರವ
ಕುಲದೊಳೊಡಬೆಚ್ಚವನಿಪಾಲಕ
ತಿಲಕ ಕುರುಪತಿಗಾಪ್ತರಿಲ್ಲೆಂದಳಲಿದನು ಕರ್ಣ ॥6॥
೦೦೭ ನೋಡಿ ದಣಿಯನು ...{Loading}...
ನೋಡಿ ದಣಿಯನು ನಿಚ್ಚಲುಚಿತವ
ಮಾಡಿ ದಣಿಯನು ಖೇಳ ಮೇಳದ
ಲಾಡಿ ದಣಿಯನು ಶಿವಶಿವಾ ತನ್ನೊಡನೆ ಕುರುರಾಯ
ಓಡಲರಿಯದೆ ದ್ರೋಣ ಭೀಷ್ಮರು
ಗೂಡ ತಲೆಗೊಟ್ಟೈಸರಲಿ ತಾ
ಮಾಡಿತೇನರಸಂಗೆನುತ ಮರುಗಿದನು ಕಲಿಕರ್ಣ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನ್ನನ್ನು ಎಷ್ಟು ನೋಡಿದರೂ, ಕೌರವನು ತೃಪ್ತಿ ಹೊಂದುತ್ತಿರಲಿಲ್ಲ. ನಿತ್ಯವೂ ಗೌರವವನ್ನು ಕೊಟ್ಟೂ ದಣಿಯುತ್ತಿರಲಿಲ್ಲ. ನನ್ನ ಜೊತೆ ಎಷ್ಟು ಆಡಿದರೂ ದಣಿಯುತ್ತಿರಲಿಲ್ಲ. ಕೌರವನ ಜೊತೆಯಲ್ಲಿ ನಡೆಯಲು ದ್ರೋಣ ಭೀಷ್ಮರಂತಹವರಿಗೆ ಸಾಧ್ಯವಾಗದೇ ಹೋದಾಗ, ತಾನು ದೊರೆಗೆ ಏನು ಉಪಕಾರ ಮಾಡಿದೆ ಎಂದು ಕಲಿ ಕರ್ಣನು ಮರುಗಿದನು.
ಪದಾರ್ಥ (ಕ.ಗ.ಪ)
ಖೇಳ ಮೇಳ-ಜೊತೆ
ಮೂಲ ...{Loading}...
ನೋಡಿ ದಣಿಯನು ನಿಚ್ಚಲುಚಿತವ
ಮಾಡಿ ದಣಿಯನು ಖೇಳ ಮೇಳದ
ಲಾಡಿ ದಣಿಯನು ಶಿವಶಿವಾ ತನ್ನೊಡನೆ ಕುರುರಾಯ
ಓಡಲರಿಯದೆ ದ್ರೋಣ ಭೀಷ್ಮರು
ಗೂಡ ತಲೆಗೊಟ್ಟೈಸರಲಿ ತಾ
ಮಾಡಿತೇನರಸಂಗೆನುತ ಮರುಗಿದನು ಕಲಿಕರ್ಣ ॥7॥
೦೦೮ ಮೊದಲಲಾತ್ಮಜರಳಿವನೊಡವು ...{Loading}...
ಮೊದಲಲಾತ್ಮಜರಳಿವನೊಡವು
ಟ್ಟಿದರ ಮೆಯ್ಯಲಿ ಮರೆದನೊಡವು
ಟ್ಟಿದರು ನೂರ್ವರು ಮಡಿಯೆ ಮರೆದನು ತನ್ನ ಸುಳಿವಿನಲಿ
ಕದನವೆನ್ನಯ ಸುಳಿವನೊಳಕೊಂ
ಡುದು ಸುಯೋಧನನೃಪತಿಗಿನ್ನಾ
ಸ್ಪದರ ಕಾಣೆನು ಶಿವಶಿವಾ ಎಂದಳಲಿದನು ಕರ್ಣ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊದಲು ಮಕ್ಕಳು ಸತ್ತಾಗ, ಅವರ ಸಾವನ್ನು ಸಹೋದರರನ್ನು ನೋಡಿಕೊಂಡು ಮರೆತಿದ್ದ. ನೂರು ಜನ ಸಹೋದರರೂ ಸತ್ತಾಗ, ನನ್ನನ್ನು ನೋಡಿ ದುಃಖವನ್ನು ಮರೆತಿದ್ದ. ಈಗ ಯುದ್ಧದ ಸುಳಿಯಲ್ಲಿ ನಾನು ಸಿಲುಕಿದ್ದೇನೆ. ದುರ್ಯೋಧನನಿಗೆ ಇನ್ನು ಸಹಾಯಕರು ಯಾರೂ ಇಲ್ಲ, ಅಯ್ಯೋ ಶಿವನೇ ಎಂದು ದುಃಖಿಸಿದನು ಕರ್ಣ.
ಮೂಲ ...{Loading}...
ಮೊದಲಲಾತ್ಮಜರಳಿವನೊಡವು
ಟ್ಟಿದರ ಮೆಯ್ಯಲಿ ಮರೆದನೊಡವು
ಟ್ಟಿದರು ನೂರ್ವರು ಮಡಿಯೆ ಮರೆದನು ತನ್ನ ಸುಳಿವಿನಲಿ
ಕದನವೆನ್ನಯ ಸುಳಿವನೊಳಕೊಂ
ಡುದು ಸುಯೋಧನನೃಪತಿಗಿನ್ನಾ
ಸ್ಪದರ ಕಾಣೆನು ಶಿವಶಿವಾ ಎಂದಳಲಿದನು ಕರ್ಣ ॥8॥
೦೦೯ ಸಲಹಿದೊಡೆಯನ ಜೋಳವಾಳಿಗೆ ...{Loading}...
ಸಲಹಿದೊಡೆಯನ ಜೋಳವಾಳಿಗೆ
ತಲೆಯ ಮಾರುವುದೊಂದು ಪುಣ್ಯದ
ಫಲವು ಮರಣದ ಹೊತ್ತು ಕೃಷ್ಣನ ಕಾಬ ಸುಕೃತಫಲ
ಇಳೆಯ ಮೇಲೆನಗಲ್ಲದಾರಿಗೆ
ಫಲಿಸುವುದು ತಾ ಧನ್ಯನೆನುತೆವೆ
ಹಳಚದಸುರಾಂತಕನನೀಕ್ಷಿಸುತಿರ್ದನಾ ಕರ್ಣ ॥9॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸಲಹಿದ ಸ್ವಾಮಿಯ ಅನ್ನದ ಹಂಗಿಗೆ ತಲೆಯನ್ನು ಕೊಡುವ ಕೆಲಸ ಒಂದು ಪುಣ್ಯದ ಕಾರ್ಯ. ಜೊತೆಗೆ ಮರಣದ ಸಮಯದಲ್ಲಿ ಕೃಷ್ಣನ ದರ್ಶನವನ್ನು ಮಾಡುವ ಪುಣ್ಯದ ಫಲ ಈ ಭೂಮಿಯ ಮೇಲೆ ನನಗೆ ಅಲ್ಲದೆ ಬೇರೆ ಯಾರಿಗೆ ದೊರೆಯುತ್ತದೆ. ನಾನು ಧನ್ಯ’ ಎನ್ನುತ್ತಾ ರೆಪ್ಪೆ ಮಿಟುಕಿಸದೆ ಕೃಷ್ಣನನ್ನು ನೋಡುತ್ತಿದ್ದ ಕರ್ಣ.
ಪದಾರ್ಥ (ಕ.ಗ.ಪ)
ಜೋಳದ ಪಾಳಿಗೆ - ಅನ್ನದ ಹಂಗಿಗೆ
ಹಳಚು-ರೆಪ್ಪೆ ಹೊಡೆ
ಮೂಲ ...{Loading}...
ಸಲಹಿದೊಡೆಯನ ಜೋಳವಾಳಿಗೆ
ತಲೆಯ ಮಾರುವುದೊಂದು ಪುಣ್ಯದ
ಫಲವು ಮರಣದ ಹೊತ್ತು ಕೃಷ್ಣನ ಕಾಬ ಸುಕೃತಫಲ
ಇಳೆಯ ಮೇಲೆನಗಲ್ಲದಾರಿಗೆ
ಫಲಿಸುವುದು ತಾ ಧನ್ಯನೆನುತೆವೆ
ಹಳಚದಸುರಾಂತಕನನೀಕ್ಷಿಸುತಿರ್ದನಾ ಕರ್ಣ ॥9॥
೦೧೦ ಒಳಗೆ ಹೃದಯಾಮ್ಬುಜದ ...{Loading}...
ಒಳಗೆ ಹೃದಯಾಂಬುಜದ ಮಧ್ಯ
ಸ್ಥಳದೊಳಗೆ ಮುರವೈರಿಯನು ಹೊರ
ವಳಯದಲಿ ಫಲುಗುಣನ ಮಣಿರಥದಗ್ರಭಾಗದಲಿ
ಹೊಳೆವ ಹರಿಯನು ಕಂಡನಿದು ಹೊರ
ಗೊಳಗೆ ಹರಿ ತಾನೆಂಬಭೇದವ
ತಿಳಿದು ನಿಜದೆಚ್ಚರ ಸಮಾಧಿಯೊಳಿರ್ದನಾ ಕರ್ಣ ॥10॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಒಳಗಿನ ಹೃದಯ ಕಮಲದ ಮಧ್ಯಸ್ಥಳದಲ್ಲಿರುವ ಕೃಷ್ಣ; ಹಾಗೆಯೇ ಹೊರಗಡೆ ಅರ್ಜುನನ ಮಣಿಮಯವಾದ ರಥದ ಮುಂಭಾಗದಲ್ಲಿ ಹೊಳೆಯುತ್ತಿರುವ ಕೃಷ್ಣ. ಇಬ್ಬರನ್ನೂ ನೋಡಿ, ಈ ಕೃಷ್ಣ ಹೊರಗೆ ಒಳಗೆ ಇದ್ದಾನೆ ಎಂಬ ಅಭೇದವನ್ನು ಅರ್ಥಮಾಡಿಕೊಂಡು ಜಾಗೃತನಾಗಿದ್ದರೂ ಸಮಾಧಿಯಲ್ಲಿದವನಂತೆ ಕರ್ಣನು ಕಾಣಿಸುತ್ತಿದ್ದ.
ಮೂಲ ...{Loading}...
ಒಳಗೆ ಹೃದಯಾಂಬುಜದ ಮಧ್ಯ
ಸ್ಥಳದೊಳಗೆ ಮುರವೈರಿಯನು ಹೊರ
ವಳಯದಲಿ ಫಲುಗುಣನ ಮಣಿರಥದಗ್ರಭಾಗದಲಿ
ಹೊಳೆವ ಹರಿಯನು ಕಂಡನಿದು ಹೊರ
ಗೊಳಗೆ ಹರಿ ತಾನೆಂಬಭೇದವ
ತಿಳಿದು ನಿಜದೆಚ್ಚರ ಸಮಾಧಿಯೊಳಿರ್ದನಾ ಕರ್ಣ ॥10॥
೦೧೧ ಅರಸ ಚಿತ್ತೈಸಾಚೆಯಲಿ ...{Loading}...
ಅರಸ ಚಿತ್ತೈಸಾಚೆಯಲಿ ಮುರ
ಹರನಲೇ ನಿಮ್ಮನ್ವಯವ ಸಂ
ಹರಿಸಿದಾತನು ಭೀಮಸೇನನೊ ಮೇಣ್ ಧನಂಜಯನೊ
ಸರಳ ತೊಡುತೊಡು ಪಾರ್ಥ ಕರ್ಣನ
ಶಿರವನಿಳುಹಾ ಹಾರದಿರು ಹೇ
ವರಿಸದಿರು ತೆಗೆ ದಿವ್ಯಶರವನು ಬೇಗಮಾಡೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ದೊರೆಯೇ ಗಮನವಿಟ್ಟು ಕೇಳು, ನಿಜವಾಗಲೂ ನಿಮ್ಮ ವಂಶವನ್ನು ನಾಶಮಾಡಿದವನು ಭೀಮನೂ ಅಲ್ಲ ಅರ್ಜುನನೂ ಅಲ್ಲ. ಅದು ಕೃಷ್ಣನ ಕೆಲಸ. ‘ಅರ್ಜುನ, ಬೇಗ ಬೇಗ ಬಾಣಗಳನ್ನು ತೊಡು, ಕರ್ಣನ ತಲೆಯನ್ನು ಕತ್ತರಿಸು. ಬೇರೆ ಏನನ್ನೂ ನಿರೀಕ್ಷಿಸಬೇಡ, ಹಿಂದೆಗೆಯಬೇಡ, ದಿವ್ಯವಾದ ಬಾಣವನ್ನು ಬೇಗ ಪ್ರಯೋಗಿಸು’ ಎಂದು ಕೃಷ್ಣ ಹೇಳಿದನೆಂದು ಸಂಜಯನು ನುಡಿದನು.
ಮೂಲ ...{Loading}...
ಅರಸ ಚಿತ್ತೈಸಾಚೆಯಲಿ ಮುರ
ಹರನಲೇ ನಿಮ್ಮನ್ವಯವ ಸಂ
ಹರಿಸಿದಾತನು ಭೀಮಸೇನನೊ ಮೇಣ್ ಧನಂಜಯನೊ
ಸರಳ ತೊಡುತೊಡು ಪಾರ್ಥ ಕರ್ಣನ
ಶಿರವನಿಳುಹಾ ಹಾರದಿರು ಹೇ
ವರಿಸದಿರು ತೆಗೆ ದಿವ್ಯಶರವನು ಬೇಗಮಾಡೆಂದ ॥11॥
೦೧೨ ಕರಗುವರೆ ನೀ ...{Loading}...
ಕರಗುವರೆ ನೀ ಸಾರು ಭೀಮನ
ಕರೆದು ಕೊಲಿಸುವೆನೀತನನು ನಿ
ಷ್ಠುರನಲಾ ನೀನೆನ್ನದಿರು ತೆಗೆ ನಿನ್ನ ತನ್ನಿಂದ
ಹರಿಯದೇ ಹಗೆ ನಮ್ಮ ಚಕ್ರದ
ಲರಿಭಟನ ಮುರಿವೆನು ಯುಧಿಷ್ಠಿರ
ನರಸುತನವದು ನಿಲಲಿ ನೀನಂಜುವರೆ ಸಾರೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಮಾತನ್ನು ಮುಂದುವರೆಸಿ “ಕರ್ಣನ ಬಗೆಗೆ ಕರುಣೆಯುಂಟಾಗುತ್ತಿದ್ದರೆ, ನೀನು ಪಕ್ಕಕ್ಕೆ ಹೋಗು. ಭೀಮನನ್ನು ಕರೆದು, ಇವನನ್ನು ಕೊಲ್ಲಿಸುತ್ತೇನೆ. ‘ನೀನು ಏಕೆ ಇಷ್ಟೊಂದು ನಿಷ್ಠುರನಾಗಿದ್ದೀಯೆ’ ಎಂದು ಕೇಳಬೇಡ. ಬಿಡು ನಿನ್ನಿಂದ ಶತ್ರುವನ್ನು ನಾಶ ಮಾಡಲು ಆಗುವುದಿಲ್ಲವಾದರೆ, ನನ್ನ ಚಕ್ರದಿಂದ ಶತ್ರು ವೀರನನ್ನು ಕೊಲ್ಲುತ್ತೇನೆ. ಧರ್ಮರಾಯನಿಗೆ ರಾಜ ಪದವಿ ನಿಲ್ಲಬೇಕು ಅಷ್ಟೇ. ನಿನಗೆ ಹೆದರಿಕೆಯಾದರೆ, ಹೋಗು” ಎಂದನು.
ಮೂಲ ...{Loading}...
ಕರಗುವರೆ ನೀ ಸಾರು ಭೀಮನ
ಕರೆದು ಕೊಲಿಸುವೆನೀತನನು ನಿ
ಷ್ಠುರನಲಾ ನೀನೆನ್ನದಿರು ತೆಗೆ ನಿನ್ನ ತನ್ನಿಂದ
ಹರಿಯದೇ ಹಗೆ ನಮ್ಮ ಚಕ್ರದ
ಲರಿಭಟನ ಮುರಿವೆನು ಯುಧಿಷ್ಠಿರ
ನರಸುತನವದು ನಿಲಲಿ ನೀನಂಜುವರೆ ಸಾರೆಂದ ॥12॥
೦೧೩ ಈಸು ಕರ್ಣನ ...{Loading}...
ಈಸು ಕರ್ಣನ ಮೇಲೆ ಬಹಳ
ದ್ವೇಷವೇನೋ ಎನುತ ಮನದಲಿ
ಘಾಸಿಯಾದನು ಪಾರ್ಥ ಕರುಣಕ್ರೋಧದುಪಟಳಕೆ
ಆಸೆಯಿನ್ನೇಕೆನುತ ಸೆಳೆದನು
ಸೂಸುಗಿಡಿಗಳ ಹೊಗೆಯ ಹೊದರಿನ
ಮೀಸಲಳಿದಾರೆಂಜಲಿಸದಂಜಳಿಕ ಮಾರ್ಗಣವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕರ್ಣನ ಮೇಲೆ ಈ ಕೃಷ್ಣನಿಗೆ ಇಷ್ಟೊಂದು ದ್ವೇಷವೇಕೆ’ ಎಂದು ಅರ್ಜುನನಿಗೆ ಚಿಂತೆಯಾಯಿತು. ಅವನಿಗೆ ಕರುಣೆ ಕೋಪಗಳೆರಡೂ ತೊಂದರೆ ಮಾಡಿದವು. ‘ಕರ್ಣನ ಬಗೆಗೆ ಇನ್ನು ಆಸೆಯನ್ನೇಕೆ ತೋರಬೇಕು’ ಎಂದು ಕಿಡಿಗಳನ್ನು ಸೂಸುತ್ತಿದ್ದ, ಹೊಗೆಯ ಸಮೂಹದಿಂದ ಕೂಡಿದ, ಯಾರಿಂದಲೂ ಗೆಲ್ಲಲು ಸಾಧ್ಯವಲ್ಲದ ಅಂಜಳಿಕ ಎಂಬ ಬಾಣವನ್ನು ಮೀಸಲನ್ನು ಮುರಿದು ಸೆಳೆದನು.
ಮೂಲ ...{Loading}...
ಈಸು ಕರ್ಣನ ಮೇಲೆ ಬಹಳ
ದ್ವೇಷವೇನೋ ಎನುತ ಮನದಲಿ
ಘಾಸಿಯಾದನು ಪಾರ್ಥ ಕರುಣಕ್ರೋಧದುಪಟಳಕೆ
ಆಸೆಯಿನ್ನೇಕೆನುತ ಸೆಳೆದನು
ಸೂಸುಗಿಡಿಗಳ ಹೊಗೆಯ ಹೊದರಿನ
ಮೀಸಲಳಿದಾರೆಂಜಲಿಸದಂಜಳಿಕ ಮಾರ್ಗಣವ ॥13॥
೦೧೪ ಉರಿಯನುಗುಳುವ ಬಾಣದಲಿ ...{Loading}...
ಉರಿಯನುಗುಳುವ ಬಾಣದಲಿ ಕ
ತ್ತರಿಸಿ ಕರ್ಣನನೆಸಲು ಸಮರದ
ಲುರವ ಕೀಲಿಸಿತಂಬು ಗರಿಗಡಿಯಾಗಿ ಗಾಢದಲಿ
ಹರಣ ತೊಲಗದ ಮರ್ಮವನು ಮುರ
ಹರನು ಕಂಡನು ರಥದ ವಾಘೆಯ
ನಿರಿಸಿ ಕರ್ಣನ ಹೊರೆಗೆ ಬಂದನು ವಿಪ್ರವೇಷದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉರಿಯನ್ನು ಉಗುಳುತ್ತಿರುವ ಬಾಣದಿಂದ ಕರ್ಣನನ್ನು, ಕತ್ತರಿಸುವಂತೆ ಹೊಡೆದಾಗ, ಅದು ಕರ್ಣನ ಎದೆಗೆ ಗರಿಯವರೆಗೂ ಆಳವಾಗಿ ಬಲವಾಗಿ ಚುಚ್ಚಿಕೊಂಡಿತು. ಆದರೆ ಅವನ ಪ್ರಾಣ ಹೋಗಲಿಲ್ಲ. ಅದರ ಗುಟ್ಟನ್ನು ತಿಳಿದ ಕೃಷ್ಣನು ತನ್ನ ರಥದ ಲಗಾಮುಗಳನ್ನು ಪಕ್ಕಕ್ಕಿಟ್ಟು ಬ್ರಾಹ್ಮಣನ ವೇಷದಲ್ಲಿ ಕರ್ಣನ ಬಳಿಗೆ ಬಂದನು.
ಮೂಲ ...{Loading}...
ಉರಿಯನುಗುಳುವ ಬಾಣದಲಿ ಕ
ತ್ತರಿಸಿ ಕರ್ಣನನೆಸಲು ಸಮರದ
ಲುರವ ಕೀಲಿಸಿತಂಬು ಗರಿಗಡಿಯಾಗಿ ಗಾಢದಲಿ
ಹರಣ ತೊಲಗದ ಮರ್ಮವನು ಮುರ
ಹರನು ಕಂಡನು ರಥದ ವಾಘೆಯ
ನಿರಿಸಿ ಕರ್ಣನ ಹೊರೆಗೆ ಬಂದನು ವಿಪ್ರವೇಷದಲಿ ॥14॥
೦೧೫ ತ್ಯಾಗಿ ಜಗದೊಳಗೆಮ್ಬ ...{Loading}...
ತ್ಯಾಗಿ ಜಗದೊಳಗೆಂಬ ಕೀರ್ತಿಯ
ಲೋಗರಿಂದವೆ ಕೇಳ್ದು ಬಂದೆನು
ಮೇಗಳತಿಶಯ ಪದವನೊಲುವಡೆ ಮನದ ಬಯಕೆಗಳ
ಈಗಳೀವುದು ನಮ್ಮಭೀಷ್ಟ
ಶ್ರೀಗೆ ಮಂಗಳವೆಂದು ಹರಸಿದ
ಡಾಗಳರಿದಾ ಕರ್ಣ ನಸುನಗುತಿರ್ದ ಮನದೊಳಗೆ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಲೋಕದಲ್ಲೆಲ್ಲಾ ತ್ಯಾಗಿ ಎಂಬ ನಿನ್ನ ಕೀರ್ತಿಯನ್ನು ಜನರಿಂದ ಕೇಳಿ ಬಂದಿದ್ದೇನೆ. ಮೇಲು ಲೋಕದ ಅತಿಶಯ ಪದವಿಯನ್ನು ಪಡೆಯಬೇಕೆಂಬ ಆಸೆಯಿದ್ದರೆ, ನನ್ನ ಮನಸ್ಸಿನ ಆಸೆಯನ್ನು ತೀರಿಸು ನಿನಗೆ ಮಂಗಳವಾಗುತ್ತದೆ’ ಎಂದು ಆಶೀರ್ವದಿಸಿದಾಗ, ಕೃಷ್ಣನ ಉದ್ದೇಶವನ್ನು ತಿಳಿದ ಕರ್ಣನು ಮನಸ್ಸಿನಲ್ಲೇ ನಗುತ್ತಿದ್ದನು.
ಮೂಲ ...{Loading}...
ತ್ಯಾಗಿ ಜಗದೊಳಗೆಂಬ ಕೀರ್ತಿಯ
ಲೋಗರಿಂದವೆ ಕೇಳ್ದು ಬಂದೆನು
ಮೇಗಳತಿಶಯ ಪದವನೊಲುವಡೆ ಮನದ ಬಯಕೆಗಳ
ಈಗಳೀವುದು ನಮ್ಮಭೀಷ್ಟ
ಶ್ರೀಗೆ ಮಂಗಳವೆಂದು ಹರಸಿದ
ಡಾಗಳರಿದಾ ಕರ್ಣ ನಸುನಗುತಿರ್ದ ಮನದೊಳಗೆ ॥15॥
೦೧೬ ತ್ಯಾಗಿ ಸಿಂಹಾಸನದ ...{Loading}...
ತ್ಯಾಗಿ ಸಿಂಹಾಸನದ ಮೇಲಿ
ದ್ದಾಗ ಬೇಡಿತನೀಯಬೇಹುದು
ಈಗಳೀವುದ ಬೆಸಸಿಯೆನೆ ನಗುತೆಂದನಾ ವಿಪ್ರ
ತೂಗುವೀ ಕುಂಡಲವನೀವುದು
ಬೇಗ ಧಾರೆಯನೆರೆದು ಕೊಡಿಯೆನ
ಲಾಗಳುದಕವನರಸಿ ಕಾಣದೆ ನೋಡಿದನು ಕೆಲನ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತ್ಯಾಗಿಯಾದವನು ಸಿಂಹಾಸನದ ಮೇಲೆ ಕುಳಿತಿದ್ದರೆ, ಬೇಡಿದ್ದನ್ನು ಕೊಡುವುದಕ್ಕೆ ಸಾಧ್ಯ. ಈಗ ಏನನ್ನು ಕೇಳಬೇಕೆಂದುಕೊಂಡಿದ್ದೀರೋ ಅಪ್ಪಣೆ ಮಾಡಿ’ ಎಂದು ಕೃಷ್ಣನನ್ನು ಕೇಳಿದನು. ಆ ವಿಪ್ರ ವೇಷದ ಕೃಷ್ಣನು ‘ನಿನ್ನ ಕಿವಿಯಲ್ಲಿ ತೂಗಾಡುತ್ತಿರುವ ಕುಂಡಲಗಳನ್ನು ಕೊಡು’ ಎಂದಾಗ, ದಾನಕೊಡಲು ಬೇಕಾದ ನೀರು ಸಿಗದೆ ಕರ್ಣನು ಆ ಕಡೆ ಈ ಕಡೆ ನೋಡಿದನು.
ಮೂಲ ...{Loading}...
ತ್ಯಾಗಿ ಸಿಂಹಾಸನದ ಮೇಲಿ
ದ್ದಾಗ ಬೇಡಿತನೀಯಬೇಹುದು
ಈಗಳೀವುದ ಬೆಸಸಿಯೆನೆ ನಗುತೆಂದನಾ ವಿಪ್ರ
ತೂಗುವೀ ಕುಂಡಲವನೀವುದು
ಬೇಗ ಧಾರೆಯನೆರೆದು ಕೊಡಿಯೆನ
ಲಾಗಳುದಕವನರಸಿ ಕಾಣದೆ ನೋಡಿದನು ಕೆಲನ ॥16॥
೦೧೭ ಉದಕವನು ಹೊರಗರಸುತಿರಲಾ ...{Loading}...
ಉದಕವನು ಹೊರಗರಸುತಿರಲಾ
ಪದುಮನಾಭನು ನಗುತ ನಿನ್ನಯ
ಹೃದಯದೊಳಗಿರ್ದಮಲಗಂಗಾಜಲವ ತೆಗೆದೆನಗೆ
ಹದುಳದಿಂದೆರೆ ಧಾರೆಯನು ಸಂ
ಪದದ ಮುಕುತಿಯ ಪದವನೊಲುವಡೆ
ಇದು ಶುಭೋದಯವೆಂದು ಮಾಯಾವಿಪ್ರನರುಹಿದನು ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ನೀರನ್ನು ಹೊರಗಡೆ ಹುಡುಕುತ್ತಿರುವಾಗ, ಕೃಷ್ಣನು ನಗುತ್ತಾ, ‘ನಿನ್ನ ಹೃದಯದಲ್ಲಿರುವ ನಿರ್ಮಲವಾದ ಗಂಗಾಜಲವನ್ನು ತೆಗೆದು, ಸಂತೋಷದಿಂದ ನನಗೆ ಧಾರೆ ಎರೆದುಕೊಡು. ಮುಕ್ತಿಯ ಸಂಪತ್ತಿನ ಪದವನ್ನು ಪಡೆಯಬೇಕಾದರೆ ಇದು ಒಳ್ಳೆಯ ಆರಂಭವಾಗುತ್ತದೆ’ ಎಂದು ಸೂಚಿಸಿದನು.
ಮೂಲ ...{Loading}...
ಉದಕವನು ಹೊರಗರಸುತಿರಲಾ
ಪದುಮನಾಭನು ನಗುತ ನಿನ್ನಯ
ಹೃದಯದೊಳಗಿರ್ದಮಲಗಂಗಾಜಲವ ತೆಗೆದೆನಗೆ
ಹದುಳದಿಂದೆರೆ ಧಾರೆಯನು ಸಂ
ಪದದ ಮುಕುತಿಯ ಪದವನೊಲುವಡೆ
ಇದು ಶುಭೋದಯವೆಂದು ಮಾಯಾವಿಪ್ರನರುಹಿದನು ॥17॥
೦೧೮ ಸರಳ ತೆಗೆದನು ...{Loading}...
ಸರಳ ತೆಗೆದನು ಸರಸಿಜಪ್ರಿಯ
ವರ ಸುತನು ತನ್ನುರವ ಬಗಿದನು
ಘರಿಘರಿಲು ಘರಿಲೆನಲು ತೆಗೆದನು ನಿರ್ಮಲೋದಕವ
ಪರಮ ಸಂತೋಷದಲಿ ಧಾರೆಯ
ನೆರೆದು ಕುಂಡಲವೀಯೆ ಮಿಗೆ ಪು
ಷ್ಕರದ ಜನ ಜಯಯೆನಲು ಮುರರಿಪುವೊಲಿದು ಕೈಕೊಂಡ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಮಲಪ್ರಿಯನಾದ ಸೂರ್ಯನ ಮಗ ಕರ್ಣನು ಬಾಣವನ್ನು ತೆಗೆದು ತನ್ನ ಎದೆಯನ್ನು ಬಗೆದನು. ‘ಘರಿಲ್ ಘರಿಲ್’ ಎಂದು ಶಬ್ದ ಮಾಡುತ್ತಿರಲು, ನಿರ್ಮಲವಾದ ನೀರನ್ನು ತೆಗೆದು, ಅತ್ಯಂತ ಸಂತೋಷದಿಂದ ಧಾರೆಯನ್ನು ಹಾಕುತ್ತಾ ಕುಂಡಲಗಳನ್ನು ಕೃಷ್ಣನಿಗೆ ನೀಡಿದನು. ಮೇಲೆ ಆಕಾಶದಲ್ಲಿ ನಿಂತಿದ್ದ ದೇವತೆಗಳು ಜಯಜಯ ಎಂದು ಹೊಗಳುತ್ತಿರಲು ಕೃಷ್ಣನು ಪ್ರೀತಿಯಿಂದ ಅದನ್ನು ಸ್ವೀಕರಿಸಿದನು.
ಪದಾರ್ಥ (ಕ.ಗ.ಪ)
ಪುಷ್ಕರ-ಆಕಾಶ
ಮೂಲ ...{Loading}...
ಸರಳ ತೆಗೆದನು ಸರಸಿಜಪ್ರಿಯ
ವರ ಸುತನು ತನ್ನುರವ ಬಗಿದನು
ಘರಿಘರಿಲು ಘರಿಲೆನಲು ತೆಗೆದನು ನಿರ್ಮಲೋದಕವ
ಪರಮ ಸಂತೋಷದಲಿ ಧಾರೆಯ
ನೆರೆದು ಕುಂಡಲವೀಯೆ ಮಿಗೆ ಪು
ಷ್ಕರದ ಜನ ಜಯಯೆನಲು ಮುರರಿಪುವೊಲಿದು ಕೈಕೊಂಡ ॥18॥
೦೧೯ ಪರಮ ಕರುಣಾಸಿನ್ಧು ...{Loading}...
ಪರಮ ಕರುಣಾಸಿಂಧು ಕರ್ಣಂ
ಗಿರದೆ ನಿಜಮೂರ್ತಿಯನು ತೋರಿದ
ನುರುತರ ಪ್ರೇಮದಲಿ ಮುಕುತಿಯ ಪದವ ನೇಮಿಸಿದ
ನರನನೆಚ್ಚರಿಸಿದನು ಕರುಣಿಗೆ
ಕರುಣದನುಸಂಧಾನ ಮಾಣದು
ಧರೆಯೊಳಚ್ಚರಿಯೆನುತ ಬೆರಗಿನೊಳಿದ್ದುದಮರಗಣ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಮ ಕರುಣಾ ಸಾಗರನಾದ ಕೃಷ್ಣನು, ತಕ್ಷಣ ಕರ್ಣನಿಗೆ ತನ್ನ ಸಹಜ ಆಕಾರವನ್ನು ಪ್ರತ್ಯಕ್ಷ ಮಾಡಿ ತೋರಿಸಿ, ಅತಿಶಯವಾದ ಪ್ರೇಮದಿಂದ ಮುಕ್ತಿಪದ ಸಿಗುವಂತೆ ಕರುಣಿಸಿದನು. ಆನಂತರ ಅರ್ಜುನನನ್ನು ಎಚ್ಚರಿಸಿದನು. ಕೃಷ್ಣನ ಈ ನಿಷ್ಕರುಣ ನಡವಳಿಕೆಯನ್ನು ಕುರಿತು ‘ಕರುಣಿಯಾದ ಕೃಷ್ಣನಿಗೆ ಕರುಣೆಯ ಮಾರ್ಗ ಇಲ್ಲವೇ ಇಲ್ಲ. ಇದು ಲೋಕದಲ್ಲಿ ಆಶ್ಚರ್ಯಕರವಾದ ವಿಚಾರ’ ಎಂದು ಮಾತನಾಡಿಕೊಂಡು ದೇವತೆಗಳು ಬೆರಗಾಗಿ ನೋಡುತ್ತಿದ್ದರು.
ಮೂಲ ...{Loading}...
ಪರಮ ಕರುಣಾಸಿಂಧು ಕರ್ಣಂ
ಗಿರದೆ ನಿಜಮೂರ್ತಿಯನು ತೋರಿದ
ನುರುತರ ಪ್ರೇಮದಲಿ ಮುಕುತಿಯ ಪದವ ನೇಮಿಸಿದ
ನರನನೆಚ್ಚರಿಸಿದನು ಕರುಣಿಗೆ
ಕರುಣದನುಸಂಧಾನ ಮಾಣದು
ಧರೆಯೊಳಚ್ಚರಿಯೆನುತ ಬೆರಗಿನೊಳಿದ್ದುದಮರಗಣ ॥19॥
೦೨೦ ಹಿನ್ದೆ ಪಾಶುಪತಕ್ಕೆ ...{Loading}...
ಹಿಂದೆ ಪಾಶುಪತಕ್ಕೆ ಬಳುವಳಿ
ಬಂದುದಂಜನ ಬಾಣವದರೆಣೆ
ಯಿಂದ ತೆಗೆದನು ಗಿರಿಜೆಯಂಘ್ರಿಯ ನೆನೆದು ಮಂತ್ರಿಸುತ
ಮಂದರಾಚಲ ನಡುಗೆ ಕಿಡಿಗಳ
ಸಂದಣಿಯ ಸುರಿವಂಬನಾ ರವಿ
ನಂದನನ ಕೊರಳೆಡೆಯೊಳೆಚ್ಚನು ವಾಸವನ ಸೂನು ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ಶಿವನು ಪಾಶುಪತಾಸ್ತ್ರವನ್ನು ಕೊಟ್ಟಾಗ, ಪಾರ್ವತಿಯಿಂದ ಅಂಜನಾಸ್ತ್ರ ಉಡುಗೊರೆಯಾಗಿ ಅರ್ಜುನನಿಗೆ ದೊರೆತಿತ್ತು. ಪಾರ್ವತಿಯ ಪಾದಗಳನ್ನು ನೆನೆಯುತ್ತಾ ಪಾಶುಪತಾಸ್ತ್ರದ ಜೊತೆಯಲ್ಲಿದ್ದ ಅದನ್ನು ಬತ್ತಳಿಕೆಯಿಂದ ತೆಗೆದನು. ಮಂತ್ರಿಸುತ್ತಾ, ಮಂದರ ಪರ್ವತ ನಡುಗುವಂತೆ, ಕಿಡಿಗಳನ್ನು ಸುರಿಸುತ್ತಿರುವ ಆ ಬಾಣವನ್ನು ಸೂರ್ಯಪುತ್ರ ಕರ್ಣನ ಕೊರಳಿಗೆ ಗುರಿಯಿಟ್ಟು ಇಂದ್ರನ ಮಗನಾದ ಅರ್ಜುನನು ಪ್ರಯೋಗಿಸಿದನು.
ಮೂಲ ...{Loading}...
ಹಿಂದೆ ಪಾಶುಪತಕ್ಕೆ ಬಳುವಳಿ
ಬಂದುದಂಜನ ಬಾಣವದರೆಣೆ
ಯಿಂದ ತೆಗೆದನು ಗಿರಿಜೆಯಂಘ್ರಿಯ ನೆನೆದು ಮಂತ್ರಿಸುತ
ಮಂದರಾಚಲ ನಡುಗೆ ಕಿಡಿಗಳ
ಸಂದಣಿಯ ಸುರಿವಂಬನಾ ರವಿ
ನಂದನನ ಕೊರಳೆಡೆಯೊಳೆಚ್ಚನು ವಾಸವನ ಸೂನು ॥20॥
೦೨೧ ಅರಸ ಕೇಳೈ ...{Loading}...
ಅರಸ ಕೇಳೈ ಕರ್ಣನೊಡಲಲಿ
ಪರಮತೇಜಃಪುಂಜವೊದೆದು
ಪ್ಪರಿಸಿ ಹಾಯ್ದುದು ಹೊಳೆದುದಿನಮಂಡಲದ ಮಧ್ಯದಲಿ
ಅರರೆ ಭಾಪುರೆ ಕರ್ಣ ಮಝ ಭಾ
ಪುರೆ ಭಟಾಗ್ರಣಿ ನಿನ್ನ ಸರಿದೊರೆ
ಯೆರಡು ಯುಗದಲಿ ಕಾಣೆನೆಂದಳಲಿದನು ಹನುಮಂತ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಕೇಳು, ಕರ್ಣನ ದೇಹದಿಂದ ಹೊರಟ ಪರಮ ತೇಜಸ್ಸಿನ ಪುಂಜವೊಂದು ಮೇಲಕ್ಕೆ ನೆಗೆದು ಹಾರಿ ಸೂರ್ಯ ಮಂಡಲದ ಮಧ್ಯದಲ್ಲಿ ಹೊಳೆಯಿತು. ‘ಭೇಷ್, ಕರ್ಣ, ಭೇಷ್, ವೀರರಲ್ಲಿ ಅಗ್ರಗಣ್ಯ, ನಿನಗೆ ಸಮಾನರಾದವರು ಈ ಎರಡು ಯುಗದಲ್ಲೂ (‘ತ್ರೇತಾಯುಗ ಮತ್ತು ದ್ವಾಪರಯುಗ’) ಕಾಣಲಿಲ್ಲ ಎಂದು ಹನುಮಂತನು ದುಃಖಿಸಿದನು.
ಮೂಲ ...{Loading}...
ಅರಸ ಕೇಳೈ ಕರ್ಣನೊಡಲಲಿ
ಪರಮತೇಜಃಪುಂಜವೊದೆದು
ಪ್ಪರಿಸಿ ಹಾಯ್ದುದು ಹೊಳೆದುದಿನಮಂಡಲದ ಮಧ್ಯದಲಿ
ಅರರೆ ಭಾಪುರೆ ಕರ್ಣ ಮಝ ಭಾ
ಪುರೆ ಭಟಾಗ್ರಣಿ ನಿನ್ನ ಸರಿದೊರೆ
ಯೆರಡು ಯುಗದಲಿ ಕಾಣೆನೆಂದಳಲಿದನು ಹನುಮಂತ ॥21॥
೦೨೨ ಕೊಟ್ಟ ಭಾಷೆಗೆ ...{Loading}...
ಕೊಟ್ಟ ಭಾಷೆಗೆ ಮರಳಿ ಬಾಣವ
ತೊಟ್ಟನೇ ತಾನೊಡೆಯನೆಂದರೆ
ಯಟ್ಟಿದನೆ ಪಾಂಡವರೊಳನುಸಂಧಾನವನು ಬಿಸುಟು
ನಟ್ಟ ಕಣೆಗಳುಕಿದನೆ ಕೌರವ
ಕೆಟ್ಟನಕಟಕಟೆಂದು ಕಾಯವ
ಬಿಟ್ಟ ಕರ್ಣನೊಳಾರು ಸರಿಯೆನುತಿರ್ದುದಮರಗಣ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತಾಯಿಗೆ ಕೊಟ್ಟ ಭಾಷೆಯಂತೆ ತೊಟ್ಟ ಬಾಣವನ್ನು ಮತ್ತೆ ತೊಟ್ಟನೇ, ತಾನೇ ರಾಜ್ಯಕ್ಕೆ ಒಡೆಯನೆಂದು ಪಾಂಡವರ ಜೊತೆ ಯುದ್ಧ ಮಾಡದೆ ಆ ಆಸೆಯನ್ನು ಬೆನ್ನಟ್ಟಿ ಹೋದನೇ ಚುಚ್ಚಿಕೊಂಡ ಬಾಣಗಳಿಗೆ ಹೆದರಿದನೆ. ಅಯ್ಯೋ ದುರ್ಯೋಧನನಿಗೆ ಅನ್ಯಾಯವಾಯಿತಲ್ಲಾ ಎಂದು ಕೊರಗುತ್ತಾ ದೇಹವನ್ನು ಬಿಟ್ಟ ಕರ್ಣನಿಗೆ ಸಮಾನರಾದವರು ಯಾರು’ ಎಂದು ದೇವತೆಗಳು ಹೊಗಳುತ್ತಿದ್ದರು.
ಪದಾರ್ಥ (ಕ.ಗ.ಪ)
ಅರೆಯಟ್ಟು-ಬೆನ್ನಟ್ಟು
ಮೂಲ ...{Loading}...
ಕೊಟ್ಟ ಭಾಷೆಗೆ ಮರಳಿ ಬಾಣವ
ತೊಟ್ಟನೇ ತಾನೊಡೆಯನೆಂದರೆ
ಯಟ್ಟಿದನೆ ಪಾಂಡವರೊಳನುಸಂಧಾನವನು ಬಿಸುಟು
ನಟ್ಟ ಕಣೆಗಳುಕಿದನೆ ಕೌರವ
ಕೆಟ್ಟನಕಟಕಟೆಂದು ಕಾಯವ
ಬಿಟ್ಟ ಕರ್ಣನೊಳಾರು ಸರಿಯೆನುತಿರ್ದುದಮರಗಣ ॥22॥
೦೨೩ ಬಲುವಿಡಿಯ ಬಿಲು ...{Loading}...
ಬಲುವಿಡಿಯ ಬಿಲು ವಾಮದಲಿ ಬೆರ
ಳೊಳಗೆ ಸವಡಿಸಿ ತೆಗೆವ ತಿರುವಿನ
ಹಿಳುಕು ನಿಮಿರಿದ ತೋಳ ತೋರಿಕೆ ಬಲದ ಭಾಗದಲಿ
ಬಲಿದ ಮಂಡಿಯ ಬಾಗಿದೊಡಲಿನ
ಹೊಳೆವ ತನುಕಾಂತಿಯ ಮಹೀಪತಿ
ತಿಲಕ ಕೇಳೈ ಕರ್ಣನೆಸೆದನು ರಥದ ಮಧ್ಯದಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಡಗೈಯಲ್ಲಿ ಬಲವಾಗಿ ಹಿಡಿದಿರುವ ಬಿಲ್ಲು, ಬಲಗೈಯ ಬೆರಳನ್ನು ಜೋಡಿಸಿ ಬಲವಾಗಿ ಹಿಡಿದಿರುವ ಬಾಣದ ಹಿಂತುದಿ, ಊರಿದ ಮಂಡಿ, ಬಾಗಿದ ದೇಹ, ಹೊಳೆಯುತ್ತಿರುವ ದೇಹದ ಕಾಂತಿ - ಇವುಗಳಿಂದ ಕರ್ಣನ ದೇಹ ರಥದ ಮಧ್ಯದಲ್ಲಿ ಶೋಭಿಸಿತು. ಕೇಳು ದೊರೆಯೇ” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಸವಡಿಸು-ಜೋಡಿಸು, ಹಿಳುಕು-ಬಾಣದ ಹಿಂತುದಿ
ಮೂಲ ...{Loading}...
ಬಲುವಿಡಿಯ ಬಿಲು ವಾಮದಲಿ ಬೆರ
ಳೊಳಗೆ ಸವಡಿಸಿ ತೆಗೆವ ತಿರುವಿನ
ಹಿಳುಕು ನಿಮಿರಿದ ತೋಳ ತೋರಿಕೆ ಬಲದ ಭಾಗದಲಿ
ಬಲಿದ ಮಂಡಿಯ ಬಾಗಿದೊಡಲಿನ
ಹೊಳೆವ ತನುಕಾಂತಿಯ ಮಹೀಪತಿ
ತಿಲಕ ಕೇಳೈ ಕರ್ಣನೆಸೆದನು ರಥದ ಮಧ್ಯದಲಿ ॥23॥
೦೨೪ ಕಳಚಿ ದುರಿಯೋಧನನ ...{Loading}...
ಕಳಚಿ ದುರಿಯೋಧನನ ಬೆಳುಗೊಡೆ
ನೆಲಕೆ ಬೀಳ್ವಂದದಲಿ ಕೌರವ
ಕುಲದ ನಿಖಿಳೈಶ್ವರ್ಯವಿಳೆಗೊರ್ಗುಡಿಸಿ ಕೆಡೆವಂತೆ
ಥಳಥಳಿಪ ನಗೆಮೊಗದ ಗಂಟಿಕಿ
ಬಲಿದ ಹುಬ್ಬಿನ ಬಿಟ್ಟ ಕಂಗಳ
ಹೊಳೆವ ಹಲುಗಳ ಕರ್ಣಶಿರ ಕೆಡೆದುದು ಧರಿತ್ರಿಯಲಿ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಬೆಳ್ಗೊಡೆ ಮುರಿದು ನೆಲಕ್ಕೆ ಬೀಳುವಂತೆ, ಕೌರವ ವಂಶದ ಎಲ್ಲಾ ಐಶ್ವರ್ಯ ಭೂಮಿಗೆ ಒಟ್ಟಾಗಿ ಬೀಳುವಂತೆ ಎಂದರೆ ಸಂಪತ್ತೆಲ್ಲಾ ಮಣ್ಣಾಗುವಂತೆ, ಥಳಥಳ ಹೊಳೆಯುತ್ತಿದ್ದ ನಗುಮುಖದ ಗಂಟು ಹಾಕಿದ ಹುಬ್ಬಿನ, ಬಿಟ್ಟಿರುವ ಕಣ್ಣುಗಳ ಹೊಳೆಯುತ್ತಿರುವ ಹಲ್ಲುಗಳ ಕರ್ಣನ ತಲೆ ಭೂಮಿಯ ಮೇಲೆ ಬಿದ್ದಿತು.
ಮೂಲ ...{Loading}...
ಕಳಚಿ ದುರಿಯೋಧನನ ಬೆಳುಗೊಡೆ
ನೆಲಕೆ ಬೀಳ್ವಂದದಲಿ ಕೌರವ
ಕುಲದ ನಿಖಿಳೈಶ್ವರ್ಯವಿಳೆಗೊರ್ಗುಡಿಸಿ ಕೆಡೆವಂತೆ
ಥಳಥಳಿಪ ನಗೆಮೊಗದ ಗಂಟಿಕಿ
ಬಲಿದ ಹುಬ್ಬಿನ ಬಿಟ್ಟ ಕಂಗಳ
ಹೊಳೆವ ಹಲುಗಳ ಕರ್ಣಶಿರ ಕೆಡೆದುದು ಧರಿತ್ರಿಯಲಿ ॥24॥
೦೨೫ ಕರ್ಣ ಹಾ ...{Loading}...
ಕರ್ಣ ಹಾ ಹಾ ಸೂತಸುತ ಹಾ
ಕರ್ಣ ಹಾ ರಾಧಾತನುಜ ಹಾ
ಕರ್ಣ ಹಾ ಎನ್ನಾನೆ ಹಾ ಬಹಿರಂಗ ಜೀವನವೆ
ನಿರ್ಣಯವು ಕುರುಕುಲಕೆ ಹಾ ಹಾ
ಕರ್ಣ ಮಡಿದೈ ತಂದೆಯೆನುತವೆ
ನಿನ್ನ ಮಗ ರಥದಿಂದ ಧೊಪ್ಪನೆ ಕೆಡೆದನವನಿಯಲಿ ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ಕಂಡ ದುರ್ಯೋಧನನು ‘ಹಾ ಕರ್ಣ, ಹಾ ಸೂತಪುತ್ರ, ಹಾ ರಾಧೇಯ, ನನ್ನ ಪ್ರೀತಿಯ ಆನೆಯೇ, ನನ್ನ ಜೀವ ಸರ್ವಸ್ವವೇ, ಕುರುಕುಲಕ್ಕೆ ಮುಕ್ತಾಯವಾದಂತಾಯಿತು. ಅಯ್ಯೋ ಕರ್ಣ, ಸತ್ತುಹೋದೆಯಾ’ ಎನ್ನುತ್ತಾ ರಥದಿಂದ ಭೂಮಿಯ ಮೇಲೆ ದೊಪ್ಪನೆ ಬಿದ್ದನು.
ಮೂಲ ...{Loading}...
ಕರ್ಣ ಹಾ ಹಾ ಸೂತಸುತ ಹಾ
ಕರ್ಣ ಹಾ ರಾಧಾತನುಜ ಹಾ
ಕರ್ಣ ಹಾ ಎನ್ನಾನೆ ಹಾ ಬಹಿರಂಗ ಜೀವನವೆ
ನಿರ್ಣಯವು ಕುರುಕುಲಕೆ ಹಾ ಹಾ
ಕರ್ಣ ಮಡಿದೈ ತಂದೆಯೆನುತವೆ
ನಿನ್ನ ಮಗ ರಥದಿಂದ ಧೊಪ್ಪನೆ ಕೆಡೆದನವನಿಯಲಿ ॥25॥
೦೨೬ ರಾಯ ಹಮ್ಮೈಸಿದನು ...{Loading}...
ರಾಯ ಹಮ್ಮೈಸಿದನು ಹಾ ರಾ
ಧೇಯ ಹಾ ರಾಧೇಯ ಹಾ ರಾ
ಧೇಯ ಹಾ ಎನ್ನಾನೆ ಬಾರೈ ನಿನ್ನ ತೋರೆನುತ
ಬಾಯಬಿಟ್ಟುದು ಕಯ್ಯ ಕೈದುವ
ಹಾಯಿಕಿತು ಕಂಬನಿಯ ಕಡಲೊಳು
ಹಾಯಿದೆದ್ದುದು ಹೊರಳುತಿರ್ದುದು ಕೂಡೆ ಪರಿವಾರ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರಾಯನು ‘ಹಾ ಕರ್ಣ’ ‘ಹಾ ನನ್ನ ಪ್ರೀತಿಯ ಆನೆಯೇ ಎಲ್ಲಿದ್ದೀಯಾ’ ಎನ್ನುತ್ತಾ ಮೂರ್ಛೆ ಹೋದನು. ಜೊತೆಗೆ ಕರ್ಣನ ಪರಿವಾರದವರು ಗೋಳಿಡುತ್ತಾ ಆಯುಧಗಳನ್ನು ಕೈಗಳಿಂದ ಬಿಸಾಡಿದರು, ಕಣ್ಣೀರಿನ ಸಮುದ್ರದಲ್ಲಿ ಮುಳುಗಾಡಿದರು, ಹೊರಳಾಡಿದರು.
ಪದಾರ್ಥ (ಕ.ಗ.ಪ)
ಹಮ್ಮೈಸು-ಮೂರ್ಛೆಹೋಗು
ಮೂಲ ...{Loading}...
ರಾಯ ಹಮ್ಮೈಸಿದನು ಹಾ ರಾ
ಧೇಯ ಹಾ ರಾಧೇಯ ಹಾ ರಾ
ಧೇಯ ಹಾ ಎನ್ನಾನೆ ಬಾರೈ ನಿನ್ನ ತೋರೆನುತ
ಬಾಯಬಿಟ್ಟುದು ಕಯ್ಯ ಕೈದುವ
ಹಾಯಿಕಿತು ಕಂಬನಿಯ ಕಡಲೊಳು
ಹಾಯಿದೆದ್ದುದು ಹೊರಳುತಿರ್ದುದು ಕೂಡೆ ಪರಿವಾರ ॥26॥
೦೨೭ ನರರ್ಗೆ ಸೈರಣೆಯೆತ್ತಣದು ...{Loading}...
ನರರ್ಗೆ ಸೈರಣೆಯೆತ್ತಣದು ಕರಿ
ತುರಗ ಕಂಬನಿಗರೆದುದದ್ಭುತ
ತರದ ಶೋಕಾಂಬುಧಿಯ ಸುಳಿಯಲಿ ಸಿಕ್ಕಿತೀ ಸೇನೆ
ಅರಸ ಕೇಳಾಚೆಯಲಿ ಭೀಮನ
ನರ ನಕುಲ ಸಹದೇವ ಸಾತ್ಯಕಿ
ಧರಣಿಪನ ದ್ರೌಪದಿಯ ಚಿಂತೆ ದುರಂತವಾಯ್ತೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮನುಷ್ಯರು ಮಾತ್ರವಲ್ಲ, ಆನೆ ಕುದುರೆಗಳೂ ಸಹ ಕರ್ಣನ ಸಾವಿನಿಂದ ಕಣ್ಣೀರು ಸುರಿಸಿದವು. ಸೈನ್ಯ ಅದ್ಭುತ ರೀತಿಯ ಶೋಕ ಸಮುದ್ರದ ಸುಳಿಯಲ್ಲಿ ಸಿಕ್ಕಿಕೊಂಡಿತು. ದೊರೆಯೇ ಕೇಳು, ಆಚೆ ಪಾಂಡವರ ಕಡೆಯಲ್ಲಿ, ಭೀಮ, ಅರ್ಜುನ, ನಕುಲ, ಸಹದೇವ, ಸಾತ್ಯಕಿ, ಧರ್ಮರಾಯ, ದ್ರೌಪದಿ ಮೊದಲಾದವರೂ ಖಿನ್ನರಾದರು.
ಮೂಲ ...{Loading}...
ನರರ್ಗೆ ಸೈರಣೆಯೆತ್ತಣದು ಕರಿ
ತುರಗ ಕಂಬನಿಗರೆದುದದ್ಭುತ
ತರದ ಶೋಕಾಂಬುಧಿಯ ಸುಳಿಯಲಿ ಸಿಕ್ಕಿತೀ ಸೇನೆ
ಅರಸ ಕೇಳಾಚೆಯಲಿ ಭೀಮನ
ನರ ನಕುಲ ಸಹದೇವ ಸಾತ್ಯಕಿ
ಧರಣಿಪನ ದ್ರೌಪದಿಯ ಚಿಂತೆ ದುರಂತವಾಯ್ತೆಂದ ॥27॥
೦೨೮ ಕಿತ್ತರೋ ಕಲ್ಪದ್ರುಮವ ...{Loading}...
ಕಿತ್ತರೋ ಕಲ್ಪದ್ರುಮವ ಕೆಡೆ
ಗುತ್ತಿದರೊ ಸುರಧೇನುವನು ಕೈ
ವರ್ತಿಸಿದರೋ ಪರುಷವನು ಹಾ ಜಲಧಿ ಮಧ್ಯದಲಿ
ಎತ್ತಣದು ಭಾರತದ ರಣ ನಮ
ಗೆತ್ತಲರಸುತ ಬಂದುದಕಟಾ
ಮಿತ್ತುವೆಂದೊರಲಿದರು ವಂದಿಗಳೆರಡು ಥಟ್ಟಿನಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲ್ಪ ವೃಕ್ಷವನ್ನು ಕಿತ್ತು ಹಾಕಿದರೋ, ಕಾಮಧೇನುವನ್ನು ಕೆಳಕ್ಕೆ ಬೀಳುವಂತೆ ಸದೆ ಬಡಿದರೋ, ಅಯ್ಯೋ ಸ್ಪರ್ಶ ಶಿಲೆಯನ್ನು ಸಮುದ್ರದ ಮಧ್ಯದಲ್ಲಿ ಬಿಸಾಡಿದರೋ, ಈ ಭಾರತ ಯುದ್ಧ ಏಕಾಯಿತೋ? ನಮ್ಮವರಿಗೆ ಮೃತ್ಯು ಎಲ್ಲಿಂದ ಹುಡುಕಿಕೊಂಡು ಬಂದಿತೋ ಎಂದು ಎರಡೂ ಕಡೆಯ ಹೊಗಳುಭಟ್ಟರು ಕೂಗುವಂತಾಯಿತು.
ಪದಾರ್ಥ (ಕ.ಗ.ಪ)
ಕೈವರ್ತಿಸು-ಒಪ್ಪಿಸು, ಬಿಸಾಡು
ಮೂಲ ...{Loading}...
ಕಿತ್ತರೋ ಕಲ್ಪದ್ರುಮವ ಕೆಡೆ
ಗುತ್ತಿದರೊ ಸುರಧೇನುವನು ಕೈ
ವರ್ತಿಸಿದರೋ ಪರುಷವನು ಹಾ ಜಲಧಿ ಮಧ್ಯದಲಿ
ಎತ್ತಣದು ಭಾರತದ ರಣ ನಮ
ಗೆತ್ತಲರಸುತ ಬಂದುದಕಟಾ
ಮಿತ್ತುವೆಂದೊರಲಿದರು ವಂದಿಗಳೆರಡು ಥಟ್ಟಿನಲಿ ॥28॥
೦೨೯ ಅರಸ ನೀ ...{Loading}...
ಅರಸ ನೀ ಸೈರಿಸಿದೆಲಾ ಶಂ
ಕರ ವಿರಿಂಚಾದಿಗಳು ಕರ್ಣನ
ಪರಮಸತ್ಯವ್ರತವ ಕೊಂಡಾಡಿದರು ಅಕಟೆನುತ
ಎರಡು ಥಟ್ಟಿನ ದುಃಖಮಯಸಾ
ಗರವ ಹವಣಿಸಲರಿಯೆನರ್ಜುನ
ತಿರುಗಿದನು ದುಮ್ಮಾನದಲಿ ಪಾಳೆಯಕೆ ಹರಿಸಹಿತ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ, ಇದನ್ನು ನೀನು ಹೇಗೆ ಸೈರಿಸಿಕೊಂಡಿದ್ದೀಯಾ. ಶಿವ, ಬ್ರಹ್ಮ ಮೊದಲಾದವರು ಅಯ್ಯೋ ಎಂದು ದುಃಖಿಸಿ ಕರ್ಣನ ಪರಮ ಸತ್ಯವ್ರತವನ್ನು ಕೊಂಡಾಡಿದರು. ಎರಡೂ ಸೈನ್ಯದ ದುಃಖದ ಸಾಗರವನ್ನು ಹೇಳಲು ನನ್ನಿಂದ ಸಾಧ್ಯವಿಲ್ಲ. ಈ ಕಡೆ ಅರ್ಜುನನು ದುಃಖದಿಂದ ಕೃಷ್ಣನ ಜೊತೆಯಲ್ಲಿ ಬಿಡಾರಕ್ಕೆ ಹಿಂತಿರುಗಿದನು.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ವಿರಿಂಚಿ-ಬ್ರಹ್ಮ
ಮೂಲ ...{Loading}...
ಅರಸ ನೀ ಸೈರಿಸಿದೆಲಾ ಶಂ
ಕರ ವಿರಿಂಚಾದಿಗಳು ಕರ್ಣನ
ಪರಮಸತ್ಯವ್ರತವ ಕೊಂಡಾಡಿದರು ಅಕಟೆನುತ
ಎರಡು ಥಟ್ಟಿನ ದುಃಖಮಯಸಾ
ಗರವ ಹವಣಿಸಲರಿಯೆನರ್ಜುನ
ತಿರುಗಿದನು ದುಮ್ಮಾನದಲಿ ಪಾಳೆಯಕೆ ಹರಿಸಹಿತ ॥29॥
೦೩೦ ಇತ್ತ ಪರವಶವಾದ ...{Loading}...
ಇತ್ತ ಪರವಶವಾದ ರಾಯನ
ತೆತ್ತಿಗರು ದಂಡಿಗೆಯೊಳೀತನ
ನೆತ್ತಿ ತಂದರು ಪಾಳೆಯಕೆ ದುಃಸ್ಥಿತಿಯ ಮೇಳೆಯಕೆ
ತೆತ್ತನೇ ಮಗನಸುವನಕಟ ಎ
ನುತ್ತ ಚಿಂತಾರಾಗದಲಿ ಕಡ
ಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಮೂರ್ಛೆ ಬಿದ್ದಿದ್ದ ಕೌರವನನ್ನು ಅವನ ಪರಿವಾರದವರು ಪಲ್ಲಕ್ಕಿಯ ಮೇಲೆ ಬಿಡಾರಕ್ಕೆ ಹೊತ್ತು ತಂದರು. ಆ ಪಾಳೆಯವು ದುಸ್ಥಿತಿಯ ಮನೆಯಾಗಿತ್ತು. ‘ನನ್ನ ಮಗ ಪ್ರಾಣವನ್ನು ಬಿಟ್ಟನೇ’ ಎಂದು ಚಿಂತಿಸುತ್ತಾ, ಕಮಲಮಿತ್ರನಾದ ಸೂರ್ಯನು ಆಕಾಶವನ್ನು ಬಿಟ್ಟು ಸಮುದ್ರದ ಕಡೆಗೆ ನಡೆದನು.
ಪದಾರ್ಥ (ಕ.ಗ.ಪ)
ತೆತ್ತಿಗ-ದಾಸ
ಮೂಲ ...{Loading}...
ಇತ್ತ ಪರವಶವಾದ ರಾಯನ
ತೆತ್ತಿಗರು ದಂಡಿಗೆಯೊಳೀತನ
ನೆತ್ತಿ ತಂದರು ಪಾಳೆಯಕೆ ದುಃಸ್ಥಿತಿಯ ಮೇಳೆಯಕೆ
ತೆತ್ತನೇ ಮಗನಸುವನಕಟ ಎ
ನುತ್ತ ಚಿಂತಾರಾಗದಲಿ ಕಡ
ಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ ॥30॥
೦೩೧ ದ್ಯುಮಣಿ ಕರ್ಣದ್ಯುಮಣಿಸಹಿತ ...{Loading}...
ದ್ಯುಮಣಿ ಕರ್ಣದ್ಯುಮಣಿಸಹಿತ
ಸ್ತಮಿಸೆ ಕಮಲಿನಿ ಕೌರವನ ಮುಖ
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ
ಅಮಳ ಚಕ್ರಾಂಗಕ್ಕೆ ಭೂಪೋ
ತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಜನಮೇಜಯ ರಾಯನೇ ಕೇಳು, ಸೂರ್ಯನೂ ಸೂರ್ಯನಂತನ ಕರ್ಣನ ಜೊತೆಯಲ್ಲಿ, ಮುಳುಗಿದಾಗ, ಕಮಲಗಳೂ ಕೌರವನ ಮುಖ ಕಮಲವೂ ಬಾಡಿ ಹೋಯಿತು. ದುಃಖದ ಕತ್ತಲಿನೊಡನೆ ಕತ್ತಲೂ ಹೆಚ್ಚಿತು. ನಿರ್ಮಲವಾದ ಚಕ್ರವಾಕ ಪಕ್ಷಿಗಳೂ ಅಗಲಿದವು. ಕೌರವನಿಗೆ ವಿಜಯಲಕ್ಷ್ಮಿಯ ಅಗಲಿಕೆಯುಂಟಾಯಿತು’. ಎಂದು ವೈಶಂಪಾಯನರು ಹೇಳಿದರು
ಮೂಲ ...{Loading}...
ದ್ಯುಮಣಿ ಕರ್ಣದ್ಯುಮಣಿಸಹಿತ
ಸ್ತಮಿಸೆ ಕಮಲಿನಿ ಕೌರವನ ಮುಖ
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ
ಅಮಳ ಚಕ್ರಾಂಗಕ್ಕೆ ಭೂಪೋ
ತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ ॥31॥
೦೩೨ ಇತಿ ಶ್ರೀಮದಚಿನ್ತ್ಯ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಕರ್ಣಪರ್ವಂ ಸಮಾಪ್ತಮಾದುದು.
ಸರ್ವ-ಟೀಕೆಗಳು ...{Loading}...
ಮೂಲ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಕರ್ಣಪರ್ವಂ ಸಮಾಪ್ತಮಾದುದು.