೦೦೦ ಸೂ ಚಣ್ಡಬಲ ...{Loading}...
ಸೂ. ಚಂಡಬಲ ಪವಮಾನಜನ ಮುಂ
ಕೊಂಡು ವಿರಥನಮಾಡಿ ಕದನೋ
ದ್ದಂಡ ನರನೊಳು ಕಾದಿ ಮಡಿದನು ವೀರವೃಷಸೇನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಪ್ರಚಂಡ ಬಲಶಾಲಿಯಾದ ಭೀಮನನ್ನು ಎದುರಿಸಿ ಅವನ ರಥವನ್ನು ಮುರಿದು, ಯುದ್ಧವೀರನಾದ ಅರ್ಜುನನ ಜೊತೆಯಲ್ಲಿ ಯುದ್ಧ ಮಾಡಿ ವೀರನಾದ ವೃಷಸೇನನು ಸತ್ತು ಹೋದನು.
ಮೂಲ ...{Loading}...
ಸೂ. ಚಂಡಬಲ ಪವಮಾನಜನ ಮುಂ
ಕೊಂಡು ವಿರಥನಮಾಡಿ ಕದನೋ
ದ್ದಂಡ ನರನೊಳು ಕಾದಿ ಮಡಿದನು ವೀರವೃಷಸೇನ
೦೦೧ ಅವಧರಿಸು ಧೃತರಾಷ್ಟ್ರನೃಪ ...{Loading}...
ಅವಧರಿಸು ಧೃತರಾಷ್ಟ್ರನೃಪ ನಿ
ನ್ನವಗೆ ತಿಳಿದುದು ಸೊಕ್ಕು ಚಿತ್ತದ
ಬವಣಿ ಬೀತುದು ಮನದ ಜೊಂಪಿಳಿದುದು ಛಡಾಳಿಸಿದ
ಡವರಿಸಿದ ಡೊಳ್ಳಾಸ ರಣಬೇ
ಳುವೆಯ ಬಿಗುಹಡಗಿದವೊಲನಿಬರು
ತವತವಗೆ ನಾಚಿದರು ಕೋಳಾಹಳಕೆ ಪವನಜನ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ ಕೇಳು, ನಿನ್ನ ಮಗನ ಸೊಕ್ಕು ಇಳಿಯಿತು. ಮನಸ್ಸಿನ ಅಹಂಕಾರ ದೂರವಾಯಿತು. ಮನಸ್ಸಿನ ಮರೆವು ಇಳಿದು ಹೋಯಿತು. ಹೆಚ್ಚಾದ, ವಂಚನೆ ಮತ್ತು ರಣವೆಂಬ ಯಾಗದ ರಭಸ ಅಡಗಿದಂತೆ, ಎಲ್ಲರಿಗೂ ಭೀಮನ ಯುದ್ಧದಿಂದ ತಮತಮಗೆ ನಾಚುವಂತಾಯಿತು. “ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಜೊಂಪು-ಮರೆವು, ಛಡಾಳಿಸು-ಹೆಚ್ಚಾಗು, ಡೊಳ್ಳಾಸ-ವಂಚನೆ, ಡವರಿಸು-ಹಿಂಸಿಸು
ಮೂಲ ...{Loading}...
ಅವಧರಿಸು ಧೃತರಾಷ್ಟ್ರನೃಪ ನಿ
ನ್ನವಗೆ ತಿಳಿದುದು ಸೊಕ್ಕು ಚಿತ್ತದ
ಬವಣಿ ಬೀತುದು ಮನದ ಜೊಂಪಿಳಿದುದು ಛಡಾಳಿಸಿದ
ಡವರಿಸಿದ ಡೊಳ್ಳಾಸ ರಣಬೇ
ಳುವೆಯ ಬಿಗುಹಡಗಿದವೊಲನಿಬರು
ತವತವಗೆ ನಾಚಿದರು ಕೋಳಾಹಳಕೆ ಪವನಜನ ॥1॥
೦೦೨ ಮುಟ್ಟಿ ಬನ್ದುದು ...{Loading}...
ಮುಟ್ಟಿ ಬಂದುದು ಕೇಡು ನೃಪನೊಡ
ಹುಟ್ಟಿದನ ಹೊಯ್ದರುಣಜಲದಲಿ
ಚಟ್ಟಿರಿದು ರಿಪು ಚಾರಿವರಿದನು ಕಳನ ಚೌಕದಲಿ
ಇಟ್ಟಣಿಸುವೀ ರಣಮದಾಂಧನ
ತೊಟ್ಟುಳಿಕೆಯನು ಕೀಳ್ವ ರಾಯಘ
ರಟ್ಟನಿಲ್ಲಾ ಎನುತ ತನಿಮಸಗಿತು ಭಟಸ್ತೋಮ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೈನಿಕರು, ಅಪಾಯ ನಮ್ಮನ್ನು ಸಮೀಪಿಸಿತು. ದೊರೆಯ ತಮ್ಮನನ್ನು ಸಾಯಿಸಿ, ರಕ್ತದ ನೀರಿನಲ್ಲಿ ಚಟ್ಟನ್ನು ಬಡಿದು, ಶತ್ರುವು ಯುದ್ಧ ಭೂಮಿಯಲ್ಲಿ ಸುಲಭವಾಗಿ ಓಡಾಡಿದನು. ಎಲ್ಲ ಕಡೆ ವಿಜೃಂಭಿಸುತ್ತಿರುವ ಈ ರಣಮದಾಂಧನಾದ ಭೀಮನನ್ನು ಅಸ್ತಿತ್ವವೇ ಇಲ್ಲದಂತೆ ಮಾಡುವ ರಾಜರನ್ನು ನಾಶಮಾಡುವ ವೀರರು ಇಲ್ಲವಲ್ಲಾ ಎಂದು ಹೆಚ್ಚಾಗಿ ಕೋಪಗೊಂಡರು.
ಪದಾರ್ಥ (ಕ.ಗ.ಪ)
ಚಟ್ಟ-ರಕ್ತದ ಹಸ್ತದಿಂದ ಗೋಡೆಗಳ ಮೇಲೆ ಹಸ್ತದ ಗುರುತನ್ನು ಮಂಡಿಸುವುದು, ಇಟ್ಟಣಿಸು-ಗುಂಪು ಸೇರು, ವಿಜೃಂಭಿಸು, ತೊಟ್ಟಳಿಕೆ-ಅಸ್ತಿತ್ವ
ಮೂಲ ...{Loading}...
ಮುಟ್ಟಿ ಬಂದುದು ಕೇಡು ನೃಪನೊಡ
ಹುಟ್ಟಿದನ ಹೊಯ್ದರುಣಜಲದಲಿ
ಚಟ್ಟಿರಿದು ರಿಪು ಚಾರಿವರಿದನು ಕಳನ ಚೌಕದಲಿ
ಇಟ್ಟಣಿಸುವೀ ರಣಮದಾಂಧನ
ತೊಟ್ಟುಳಿಕೆಯನು ಕೀಳ್ವ ರಾಯಘ
ರಟ್ಟನಿಲ್ಲಾ ಎನುತ ತನಿಮಸಗಿತು ಭಟಸ್ತೋಮ ॥2॥
೦೦೩ ದೊರೆಯೊಡನೆ ತಲೆಯೊತ್ತಿ ...{Loading}...
ದೊರೆಯೊಡನೆ ತಲೆಯೊತ್ತಿ ಮುರಿದ
ಬ್ಬರಿಗನುಬ್ಬಿದ ಸಮರದಲಿ ನಿ
ಬ್ಬರದ ಬೆರಗಿನೊಳಿದ್ದರೈ ಬಳಿಕೀಗಲರಿತಿರಲಾ
ಅರಸನನುಜನ ಕುಡಿದನೆತ್ತರ
ಬರಿಸುವೆನು ಮೂಗಿನಲಿ ಮಾಣೆನು
ತರಿಯ ರಥದುರವಣೆಗೆ ಕರ್ಣನಸೂನುವಿದಿರಾದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಗೆ ಎದುರಾಗಿ ಅವನನ್ನು ಸೋಲಿಸಿ ಅಬ್ಬರ ಮಾಡುತ್ತಿರುವ ಭೀಮನ ಮಹಾಯುದ್ಧದಲ್ಲಿ ನಮ್ಮವರು ವಿಪರೀತ ಆಶ್ಚರ್ಯಗೊಂಡಿದ್ದಾರೆ. ಈಗ ಅವರು ತಿಳಿದಿರಲಿ. ದೊರೆಯ ತಮ್ಮನ ರಕ್ತವನ್ನು ಕುಡಿದಿರುವ ಭೀಮನ ಮೂಗಿನಿಂದ ಆ ರಕ್ತವನ್ನು ಹೊರತೆಗೆಯುತ್ತೇನೆ. ನೋಡುತ್ತಿರಿ” ಎನ್ನುತ್ತಾ ರಭಸದಿಂದ ಮುನ್ನುಗ್ಗುತ್ತಿದ್ದ ಶತ್ರುವಿನ ರಥವನ್ನು ಕರ್ಣನ ಮಗನಾದ ವೃಷಸೇನನು ಎದುರಿಸಿದನು.
ಮೂಲ ...{Loading}...
ದೊರೆಯೊಡನೆ ತಲೆಯೊತ್ತಿ ಮುರಿದ
ಬ್ಬರಿಗನುಬ್ಬಿದ ಸಮರದಲಿ ನಿ
ಬ್ಬರದ ಬೆರಗಿನೊಳಿದ್ದರೈ ಬಳಿಕೀಗಲರಿತಿರಲಾ
ಅರಸನನುಜನ ಕುಡಿದನೆತ್ತರ
ಬರಿಸುವೆನು ಮೂಗಿನಲಿ ಮಾಣೆನು
ತರಿಯ ರಥದುರವಣೆಗೆ ಕರ್ಣನಸೂನುವಿದಿರಾದ ॥3॥
೦೦೪ ಫಡ ವಿಕಾರವೆ ...{Loading}...
ಫಡ ವಿಕಾರವೆ ನೋಡು ನೆತ್ತರು
ಗುಡುಹಿತನವೇ ನಮ್ಮೊಡನೆ ಮೊಲೆ
ಮುಡಿಯ ಮೂದಲೆಗರುಹರೇ ಕರ್ಣಾದಿನಾಯಕರು
ಕುಡಿದ ರಕುತದ ಜಿಗುಳೆ ನೀ ನಿ
ನ್ನೊಡಲ ನಿಗುಚುವೆ ನಿಲ್ಲೆನುತ ಬಲ
ನೆಡನ ಬಿರುದರ ಮೇಳದಲಿ ತೂಗಿದನು ವೃಷಸೇನ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೃಷಸೇನನು ‘ನಮ್ಮ ಜೊತೆಯಲ್ಲಿ ಕೆಟ್ಟದಾಗಿ ಮಾತಾಡುತ್ತೀಯಾ ? ರಕ್ತವನ್ನು ಕುಡಿಯುವುದರಿಂದ ನಮ್ಮನ್ನು ಹೆದರಿಸುತ್ತೀಯಾ ? ಮೊಲೆ, ಮುಡಿಗಳಿಂದ ಕೂಡಿದ ಅಸಹಾಯಕರು ಎಂಬ ಮೂದಲಿಕೆಗೆ ಕರ್ಣ ಮೊದಲಾದ ನಾಯಕರು ಅರ್ಹರೆ? . ರಕ್ತವನ್ನು ಕುಡಿಯುವ ಜಿಗಣೆ ನೀನು. ನಿನ್ನ ದೇಹವನ್ನು ಎತ್ತಿ ಹಾಕುತ್ತೇನೆ ನಿಲ್ಲು’ ಎನ್ನುತ್ತಾ ಎಡಬಲಗಳಲ್ಲಿದ್ದ ಬಿರುದಿನ ವೀರರ ಗುಂಪಿನ ಜೊತೆಯಲ್ಲಿ ಮುನ್ನುಗ್ಗಿದನು.
ಪದಾರ್ಥ (ಕ.ಗ.ಪ)
ನಿಗುಚು-ಎತ್ತಿಹಾಕು
ಮೂಲ ...{Loading}...
ಫಡ ವಿಕಾರವೆ ನೋಡು ನೆತ್ತರು
ಗುಡುಹಿತನವೇ ನಮ್ಮೊಡನೆ ಮೊಲೆ
ಮುಡಿಯ ಮೂದಲೆಗರುಹರೇ ಕರ್ಣಾದಿನಾಯಕರು
ಕುಡಿದ ರಕುತದ ಜಿಗುಳೆ ನೀ ನಿ
ನ್ನೊಡಲ ನಿಗುಚುವೆ ನಿಲ್ಲೆನುತ ಬಲ
ನೆಡನ ಬಿರುದರ ಮೇಳದಲಿ ತೂಗಿದನು ವೃಷಸೇನ ॥4॥
೦೦೫ ವೀರ ಮಝ ...{Loading}...
ವೀರ ಮಝ ಸೇನಾಧಿಪತಿಯ ಕು
ಮಾರ ನೂಕಿದನೆನುತಖಿಳಪರಿ
ವಾರ ಕವಿದುದು ಕರಿ ರಥಾಶ್ವ ಪದಾತಿಯೊಡ್ಡಿನಲಿ
ಆರು ಪೊಗಳುವರನಿಲಸುತನ ಸ
ಧಾರತನವನು ಮೇಲೆ ಬೀಳ್ವ ಕ
ಠೋರ ಶಸ್ತ್ರವ್ರಜವ ನೂಕಿದನಡ್ಡವರಿಗೆಯಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೇಷ್ ಸೇನಾಪತಿಯ ಮಗನು ಮುನ್ನುಗ್ಗುತ್ತಿದ್ದಾನೆ’ ಎಂದು ಹೇಳುತ್ತಾ ಪರಿವಾರದವರೆಲ್ಲಾ ಆನೆ ರಥ ಕುದುರೆ ಪದಾತಿಗಳೊಂದಿಗೆ ವೃಷಸೇನನೊಂದಿಗೆ ಮುತ್ತಿಗೆ ಹಾಕಿದರು. ಭೀಮನ ಶೌರ್ಯವನ್ನು ಹೊಗಳುವುದು ಯಾರಿಂದ ಸಾಧ್ಯ? ತನ್ನ ಮೇಲೆ ಬೀಳುತ್ತಿದ್ದ ಅಪಾಯಕಾರಿಯಾದ ಶಸ್ತ್ರಗಳನ್ನು ತನ್ನ ಗುರಾಣಿಯಿಂದ ಪಕ್ಕಕ್ಕೆ ತಳ್ಳಿ ನಿವಾರಿಸಿಕೊಂಡನು.
ಪದಾರ್ಥ (ಕ.ಗ.ಪ)
ಸಧಾರತನ-ಶೂರತ್ವ , ಅಡ್ಡವರಿಗೆ-ಗುರಾಣಿ
ಮೂಲ ...{Loading}...
ವೀರ ಮಝ ಸೇನಾಧಿಪತಿಯ ಕು
ಮಾರ ನೂಕಿದನೆನುತಖಿಳಪರಿ
ವಾರ ಕವಿದುದು ಕರಿ ರಥಾಶ್ವ ಪದಾತಿಯೊಡ್ಡಿನಲಿ
ಆರು ಪೊಗಳುವರನಿಲಸುತನ ಸ
ಧಾರತನವನು ಮೇಲೆ ಬೀಳ್ವ ಕ
ಠೋರ ಶಸ್ತ್ರವ್ರಜವ ನೂಕಿದನಡ್ಡವರಿಗೆಯಲಿ ॥5॥
೦೦೬ ಅಕಟ ಮಗುವಿನ ...{Loading}...
ಅಕಟ ಮಗುವಿನ ಕೂಡೆ ಬಲುನಾ
ಯಕರು ಬಯಸಿದರಳಿವನಿದು ಸೇ
ವಕರ ಪಂಥವಲಾ ವಿರೋಧವೆ ಎನುತ ಮುರಿದೆದ್ದು
ಲಕುಟಹತನಿರ್ಭಿನ್ನಭಾಂಡ
ಪ್ರಕರವೋ ನಿನ್ನಾಳುಕುದುರೆಯೊ
ಸಕಲ ಸುಭಟರನೊಕ್ಕಲಿಕ್ಕಿದನೊಂದುನಿಮಿಷದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಯ್ಯೋ ಈ ಚಿಕ್ಕವನ ಜೊತೆಯಲ್ಲಿ ಮಹಾನಾಯಕರು ಸಾವನ್ನು ಬಯಸುತ್ತಿದ್ದಾರೆ. ಇದು ಸೇವಕರ ಪ್ರತಿಜ್ಞೆಯ ನಡವಳಿಕೆ. ಅದರಲ್ಲಿ ತಪ್ಪೇನು ಇಲ್ಲ’ ಎನ್ನುತ್ತಾ ತಿರುಗಿ ಬಿದ್ದ ಭೀಮನು ದೊಣ್ಣೆಯಿಂದ ಒಡೆದುಹಾಕಿದ ಮಡಿಕೆಗಳೋ, ನಿನ್ನ ಆಳುಕುದುರೆಗಳು ಎನ್ನುವಂತೆ ಎಲ್ಲಾ ಸೈನಿಕರನ್ನು ಒಂದು ನಿಮಿಷದಲ್ಲಿ ಬಡಿದು ರಾಶಿ ಹಾಕಿದನು.
ಪದಾರ್ಥ (ಕ.ಗ.ಪ)
ಲಕುಟ-ಲಕುಡ- ದೊಣ್ಣೆ, ಒಕ್ಕಲಿಕ್ಕು-ಬಡಿ
ಮೂಲ ...{Loading}...
ಅಕಟ ಮಗುವಿನ ಕೂಡೆ ಬಲುನಾ
ಯಕರು ಬಯಸಿದರಳಿವನಿದು ಸೇ
ವಕರ ಪಂಥವಲಾ ವಿರೋಧವೆ ಎನುತ ಮುರಿದೆದ್ದು
ಲಕುಟಹತನಿರ್ಭಿನ್ನಭಾಂಡ
ಪ್ರಕರವೋ ನಿನ್ನಾಳುಕುದುರೆಯೊ
ಸಕಲ ಸುಭಟರನೊಕ್ಕಲಿಕ್ಕಿದನೊಂದುನಿಮಿಷದಲಿ ॥6॥
೦೦೭ ನುಗ್ಗ ಬಡಿದಞ್ಜಿಸಿದ ...{Loading}...
ನುಗ್ಗ ಬಡಿದಂಜಿಸಿದ ಗೆಲವಿನ
ಸುಗ್ಗಿಗಿದೆ ಮಳೆಗಾಲವೆನುತ ನಿ
ರಗ್ರ್ಗಳಿತ ಭುಜಶೌರ್ಯ ಸುರಿದನು ಸರಳ ಸರಿವಳೆಯ
ಬಗ್ಗಿ ಕವಿವಂಬುಗಳ ಗರಿಗಳ
ಲಗ್ಗೆಗರಿನಾಯಕರ ಕಿವಿಗಳು
ನೆಗ್ಗಿದವು ಮುಗ್ಗಿದವು ಮನ ಮಾರಂಕದತಿರಥರ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮುನ್ನುಗ್ಗಿ ಬಡಿದು ಹೆದರಿಸಿದ ಗೆಲುವು ಎಂಬ ಸುಗ್ಗಿಯ ಸಮಯಕ್ಕೆ ಇದೆ ಮಳೆಗಾಲ’ ಎನ್ನುತ್ತಾ ಮಹಾಭುಜಬಲ ವೀರನಾದ ವೃಷಸೇನನು, ಬಾಣಗಳ ಮಳೆಯನ್ನೇ ಸುರಿಸಿದನು. ಮೇಲೆ ಬೀಳುತ್ತಿರುವ ಬಾಣಗಳ ಗರಿಗಳ ಶಬ್ದದ ಆಕ್ರಮಣದಿಂದ ಶತ್ರು ವೀರ ಕಿವಿಗಳು ಜಜ್ಜಿಹೋದವು. ಮನಸ್ಸು ಕೆಟ್ಟು ಹೋಯಿತು.
ಪದಾರ್ಥ (ಕ.ಗ.ಪ)
ನೆಗ್ಗು-ಜಜ್ಜು, ಮುಗ್ಗು-ಕೆಡು
ಮೂಲ ...{Loading}...
ನುಗ್ಗ ಬಡಿದಂಜಿಸಿದ ಗೆಲವಿನ
ಸುಗ್ಗಿಗಿದೆ ಮಳೆಗಾಲವೆನುತ ನಿ
ರಗ್ರ್ಗಳಿತ ಭುಜಶೌರ್ಯ ಸುರಿದನು ಸರಳ ಸರಿವಳೆಯ
ಬಗ್ಗಿ ಕವಿವಂಬುಗಳ ಗರಿಗಳ
ಲಗ್ಗೆಗರಿನಾಯಕರ ಕಿವಿಗಳು
ನೆಗ್ಗಿದವು ಮುಗ್ಗಿದವು ಮನ ಮಾರಂಕದತಿರಥರ ॥7॥
೦೦೮ ಬಲುಹು ಮಗುವಿನ ...{Loading}...
ಬಲುಹು ಮಗುವಿನ ಶೌರ್ಯವೀಸ
ಗ್ಗಳೆಯನೈ ಶಿವಯೆನುತ ಚಿತ್ತದೊ
ಳಳುಕಿ ಹೂಡಿದನಂಬನವಧಾನದಲಿ ಬಿಡೆಯರಿದು
ಹಿಳುಕುಹಿಳುಕುಗಳೊರಸೊರಸು ಮುಂ
ಕೊಳಿಸೆ ಹಿಂದಣಿನಂಬನಂಬು
ಚ್ಚಳಿಸಲೆಚ್ಚನು ಭೀಮ ರವಿನಂದನನ ನಂದನನ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ಹುಡುಗನ ಶೌರ್ಯ ಅತಿಶಯವಾಗಿದೆ. ಇವನು ನಿಜವಾಗಲು ಇಷ್ಟೊಂದು ಬಲಶಾಲಿ, ದೇವರೇ’ ಎನ್ನುತ್ತಾ ಭೀಮನು ಮನಸ್ಸಿನಲ್ಲಿ ಹೆದರುತ್ತಾ ಗುರಿನೋಡುತ್ತಾ ಬಾಣಗಳನ್ನು ಎಚ್ಚರಿಕೆಯಿಂದ ಬಿಲ್ಲಿನಲ್ಲಿ ಹೂಡಿದನು. ಒಂದು ಬಾಣ ಮತ್ತೊಂದು ಬಾಣವನ್ನು ಉಜ್ಜುತ್ತಾ ಮುನ್ನುಗ್ಗಿತು. ಹಿಂದಿನ ಬಾಣವನ್ನು ದಾಟಿ ಬಾಣಗಳು ಮುನ್ನುಗ್ಗುವಂತೆ ವೃಷಸೇನನ ಮೇಲೆ ಬಾಣಗಳನ್ನು ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಬಿಡೆಯರಿದು-ಗುರಿಯನ್ನು ನೋಡು, ಹಿಳುಕು-ಬಾಣ, ಒರಸು-ಉಜ್ಜು, ಮುಂಕೊಳಿಸು, ಮುನ್ನುಗ್ಗು, ಉಚ್ಚಳಿಸು-ಮೇಲೆ ಹಾರು
ಮೂಲ ...{Loading}...
ಬಲುಹು ಮಗುವಿನ ಶೌರ್ಯವೀಸ
ಗ್ಗಳೆಯನೈ ಶಿವಯೆನುತ ಚಿತ್ತದೊ
ಳಳುಕಿ ಹೂಡಿದನಂಬನವಧಾನದಲಿ ಬಿಡೆಯರಿದು
ಹಿಳುಕುಹಿಳುಕುಗಳೊರಸೊರಸು ಮುಂ
ಕೊಳಿಸೆ ಹಿಂದಣಿನಂಬನಂಬು
ಚ್ಚಳಿಸಲೆಚ್ಚನು ಭೀಮ ರವಿನಂದನನ ನಂದನನ ॥8॥
೦೦೯ ಕೆಣಕಿದುರಿಯನ್ದದಲಿ ದಣ್ಡೆಯೊ ...{Loading}...
ಕೆಣಕಿದುರಿಯಂದದಲಿ ದಂಡೆಯೊ
ಳಣೆದ ಕಾಳೋರಗನವೊಲು ಚ
ಡ್ಡಣೆಯ ಚಪಳಕ್ರೋಧಶಿಖಿ ಮೋಹಿದುದು ಮೋರೆಯಲಿ
ಕಣೆಗಳೋ ಕಲ್ಪಾಂತವಹ್ನಿಯ
ಡೊಣೆಗಳೋ ಹಾಳಾಹಳದ ಡಾ
ವಣಿಗಳೋ ನಾವರಿಯೆವೆಚ್ಚನು ವೀರ ವೃಷಸೇನ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉರಿಯನ್ನು ಕೆದಕಿದಂತೆ, ಕೋಲಿನಿಂದ ಕಾಳಸರ್ಪವನ್ನು ಹೊಡೆದಂತೆ ಆಗಿ ಹೆಚ್ಚಾದ ಕೋಪದ ಬೆಂಕಿ, ವೃಷಸೇನನ ಮುಖದಲ್ಲಿ ಮೂಡಿತು. ಬಾಣಗಳೋ ಪ್ರಳಯಾಗ್ನಿಯ ಹೊಂಡವೋ ಹಾಲಾಹಲ ಎಂಬ ವಿಷವನ್ನು ಕಟ್ಟಿ ಹಾಕಿದ ಹಗ್ಗವೋ ತಿಳಿಯದು, ಎನ್ನುವಂತೆ ಬಾಣಗಳನ್ನು ವೃಷಸೇನನು ಪ್ರಯೋಗಿಸಿದ.
ಪದಾರ್ಥ (ಕ.ಗ.ಪ)
ಚಡ್ಡಣೆ-ಅತಿ,
ಡಾವಣಿ-ಸಾಲಾಗಿ ಕಟ್ಟುವ ಹಗ್ಗ,
ಡೊಣೆ-ಹೊಂಡ
ಮೂಲ ...{Loading}...
ಕೆಣಕಿದುರಿಯಂದದಲಿ ದಂಡೆಯೊ
ಳಣೆದ ಕಾಳೋರಗನವೊಲು ಚ
ಡ್ಡಣೆಯ ಚಪಳಕ್ರೋಧಶಿಖಿ ಮೋಹಿದುದು ಮೋರೆಯಲಿ
ಕಣೆಗಳೋ ಕಲ್ಪಾಂತವಹ್ನಿಯ
ಡೊಣೆಗಳೋ ಹಾಳಾಹಳದ ಡಾ
ವಣಿಗಳೋ ನಾವರಿಯೆವೆಚ್ಚನು ವೀರ ವೃಷಸೇನ ॥9॥
೦೧೦ ಫಲಿತ ಶಾಳೀವನವ ...{Loading}...
ಫಲಿತ ಶಾಳೀವನವ ಮುತ್ತಿದ
ಗಿಳಿಗಳೋ ತಾವರೆಯ ತೆಕ್ಕೆಯೊ
ಳಿಳಿದ ಮರಿದುಂಬಿಗಳೊ ವೃಷಸೇನನ ಶರಾವಳಿಯೊ
ಹಿಳುಕು ಹೇರಿದವಾತನಶ್ವಾ
ವಳಿಯಲಾತನ ಸೂತನೊಡಲಲಿ
ಹಲವು ಮಾತೇನಾತನಂಗೋಪಾಂಗ ನಿಕರದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೆನೆ ಬಿಟ್ಟ ಬತ್ತದ ಗದ್ದೆಯ ಪೈರಿನ ಮೇಲೆ ಕುಳಿತ ಗಿಣಿಗಳೋ, ತಾವರೆಯ ಸಮೂಹದ ಮೇಲೆ ಮುತ್ತಿದ ಮರಿದುಂಬಿಗಳೋ, ಎನ್ನುವಂತೆ ವೃಷಸೇನನ ಬಾಣಗಳು ಭೀಮನ ಕುದುರೆಗಳ ಮೇಲೆ ಆಕ್ರಮಣ ಮಾಡಿದವು. ಅವನ ಸಾರಥಿಯ ದೇಹದ ಮೇಲೆ ಇನ್ನು ಏನು ಭೀಮನ ಅಂಗೋಪಂಗಗಳಲ್ಲ್ಲಿಯೂ ಚುಚ್ಚಿಕೊಂಡವು.
ಮೂಲ ...{Loading}...
ಫಲಿತ ಶಾಳೀವನವ ಮುತ್ತಿದ
ಗಿಳಿಗಳೋ ತಾವರೆಯ ತೆಕ್ಕೆಯೊ
ಳಿಳಿದ ಮರಿದುಂಬಿಗಳೊ ವೃಷಸೇನನ ಶರಾವಳಿಯೊ
ಹಿಳುಕು ಹೇರಿದವಾತನಶ್ವಾ
ವಳಿಯಲಾತನ ಸೂತನೊಡಲಲಿ
ಹಲವು ಮಾತೇನಾತನಂಗೋಪಾಂಗ ನಿಕರದಲಿ ॥10॥
೦೧೧ ಕೂಡೆ ಹಾಹಾಧ್ವನಿಯ ...{Loading}...
ಕೂಡೆ ಹಾಹಾಧ್ವನಿಯ ರವವ
ಲ್ಲಾಡಿಸಿತು ಪರಬಲವನೀತನ
ತೋಡು ಬೀಡಿನ ಸಂಚ ಸೆಳೆದುದು ಹಗೆಯ ಸಾಹಸವ
ಓಡಲರಿಯದೆ ಭೀಮನಂಬಿನ
ರೂಢಿ ನಿಗುಚದೆ ಕಾದುವರೆ ಜಯ
ಜೋಡಿಸದೆ ಜೋವಳಿಸಿ ಜವಗುಂದಿದನು ಕಲಿಭೀಮ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೈನ್ಯ ಹಾಹಾಕಾರ ಮಾಡಿ, ನಡುಗಿತು. ವೃಷಸೇನನ ಬಾಣಪ್ರಯೋಗದ ಯುಕ್ತಿ ಶತ್ರುವಿನ ಸಾಹಸವನ್ನೆಲ್ಲಾ ಅಡಗಿಸಿತು. ಭೀಮನಿಗೆ ಓಡಲೂ ಸಾಧ್ಯವಾಗಲಿಲ್ಲ. ಬಾಣಗಳನ್ನು ಯಥಾ ಪ್ರಕಾರ ಪ್ರಯೋಗಿಸುತ್ತಾ ಯುದ್ಧ ಮಾಡಿದರೂ ಭೀಮನಿಗೆ ಜಯ ಲಭಿಸಲಿಲ್ಲ. ವೀರ ಭೀಮನು ದೇಹಕ್ಕೆ ಜೋಮು ಹಿಡಿದಂತೆ ಆಗಿ, ಶಕ್ತಿಗುಂದಿದನು.
ಪದಾರ್ಥ (ಕ.ಗ.ಪ)
ನಿಗುಚು-ಎತ್ತಿಹಾಕು, ಜೋವಳಿಸು-ಜೋಮು ಹಿಡಿದಂತೆ ಆಗು
ಮೂಲ ...{Loading}...
ಕೂಡೆ ಹಾಹಾಧ್ವನಿಯ ರವವ
ಲ್ಲಾಡಿಸಿತು ಪರಬಲವನೀತನ
ತೋಡು ಬೀಡಿನ ಸಂಚ ಸೆಳೆದುದು ಹಗೆಯ ಸಾಹಸವ
ಓಡಲರಿಯದೆ ಭೀಮನಂಬಿನ
ರೂಢಿ ನಿಗುಚದೆ ಕಾದುವರೆ ಜಯ
ಜೋಡಿಸದೆ ಜೋವಳಿಸಿ ಜವಗುಂದಿದನು ಕಲಿಭೀಮ ॥11॥
೦೧೨ ಅರಸ ಕೇಳೈ ...{Loading}...
ಅರಸ ಕೇಳೈ ಬಳಿಕ ಭೀಮನ
ತರಹರವನರಿದಾಚೆಯಲಿ ಸಂ
ವರಿಸಿಕೊಂಡನು ನಕುಳ ಬಿಟ್ಟನು ಸೂಠಿಯಲಿ ರಥವ
ತರುವಲಿಯೆ ನೀನಿದಿರಹುದೆ ಫಡ
ಸರಿಸವೇ ಭೀಮಂಗೆ ನೀನೆನು
ತರಿಭಟನ ಕೆಣಕಿದನು ಕೆದರಿದನಸ್ತ್ರ ಸಂತತಿಯ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ ಕೇಳು, ನಕುಲನು ಆಗ ಭೀಮನಿಗಾದ ಹೆದರಿಕೆಯನ್ನು ತಿಳಿದು, ರಥವನ್ನು ವೇಗದಿಂದ ಓಡಿಸಿಕೊಂಡು ಬಂದನು. ‘ಎಲೈ ಹುಡುಗನೇ, ನೀನು ಭೀಮನಿಗೆ ಸರಿಸಮನಾಗಿ ಎದುರು ನಿಲ್ಲಬಹುದೇ’ ಎನ್ನುತ್ತಾ ಶತ್ರುವನ್ನು ಕೆಣಕಿದನು, ಅಸ್ತ್ರಗಳನ್ನು ಪ್ರಯೋಗಿಸಿದನು.
ಮೂಲ ...{Loading}...
ಅರಸ ಕೇಳೈ ಬಳಿಕ ಭೀಮನ
ತರಹರವನರಿದಾಚೆಯಲಿ ಸಂ
ವರಿಸಿಕೊಂಡನು ನಕುಳ ಬಿಟ್ಟನು ಸೂಠಿಯಲಿ ರಥವ
ತರುವಲಿಯೆ ನೀನಿದಿರಹುದೆ ಫಡ
ಸರಿಸವೇ ಭೀಮಂಗೆ ನೀನೆನು
ತರಿಭಟನ ಕೆಣಕಿದನು ಕೆದರಿದನಸ್ತ್ರ ಸಂತತಿಯ ॥12॥
೦೧೩ ಆರಿವರು ನಕುಲಾಙ್ಕರೇ ...{Loading}...
ಆರಿವರು ನಕುಲಾಂಕರೇ ಜು
ಜ್ಝಾರರೇ ನಿಮ್ಮಣ್ಣನಾಡಿ ದು
ಹಾರದಲಿ ಸೆರೆಯೋದನಾತನ ಹರಿಬವೇ ನಿಮಗೆ
ತೀರದೇ ನಿಮ್ಮಲಿ ವೃಥಾಹಂ
ಕಾರವೇಕಿದು ಪಾರ್ಥನೆಂಬನ
ತೋರಿರೇ ನೀ ಸಾರೆನುತ ತೆಗೆದೆಚ್ಚು ಬೊಬ್ಬಿರಿದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
13.” ಯಾರು ನೀವು, ನಕುಲ ಎಂಬ ಹೆಸರಿನವರೇ ಧೈರ್ಯಶಾಲಿಗಳೇ? ನಿಮ್ಮಣ್ಣ ಪಗಡೆಯಾಟವಾಡಿ ಸೋತು ಹೋಗಿದ್ದಾನೆ. ಅವನ ಚಿಂತೆಯೇ ನಿಮಗೆ? ನಿಮ್ಮ ವೃಥಾ ಅಹಂಕಾರ ಇನ್ನು ಮುಗಿಯಲಿಲ್ಲವೇ ಅದನ್ನು ಏಕೆ ತೋರಿಸುತ್ತಿದ್ದೀರಿ. ಅರ್ಜುನನನ್ನು ತೋರಿಸಿ, ನೀನು ಪಕ್ಕಕ್ಕೆ ಹೋಗು,” ಎನ್ನುತ್ತಾ ವೃಷಸೇನನು ಆರ್ಭಟಿಸುತ್ತಾ ಬಾಣ ಪ್ರಯೋಗಿಸಿದ
ಪದಾರ್ಥ (ಕ.ಗ.ಪ)
ಜುಜ್ಝಾರ-ಧೈರ್ಯಶಾಲಿ
ಮೂಲ ...{Loading}...
ಆರಿವರು ನಕುಲಾಂಕರೇ ಜು
ಜ್ಝಾರರೇ ನಿಮ್ಮಣ್ಣನಾಡಿ ದು
ಹಾರದಲಿ ಸೆರೆಯೋದನಾತನ ಹರಿಬವೇ ನಿಮಗೆ
ತೀರದೇ ನಿಮ್ಮಲಿ ವೃಥಾಹಂ
ಕಾರವೇಕಿದು ಪಾರ್ಥನೆಂಬನ
ತೋರಿರೇ ನೀ ಸಾರೆನುತ ತೆಗೆದೆಚ್ಚು ಬೊಬ್ಬಿರಿದ ॥13॥
೦೧೪ ಮಗುವು ನಿನ್ನೊಡನೇನು ...{Loading}...
ಮಗುವು ನಿನ್ನೊಡನೇನು ಸರಿಯೋ
ಮಿಗಿಲೊ ಶರವಿವ ಹೇಳೆಸುತ ಕೈ
ಮಗುಚಿದನು ಹೊದೆಯಂಬನೀತನಮೇಲೆ ನಿಮಿಷದಲಿ
ಮುಗಿಲ ಹರಿಗೆಗೆ ಮಾರುತನ ಬಂ
ದಿಗೆಯ ಹೊಯ್ಲೆನೆ ನಕುಳನೆಚ್ಚಂ
ಬುಗಳು ಕಿಡಿಸೂಸಿದವು ಕಂಡನು ರಥದ ಬಳಸಿನಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀನು ಇನ್ನೂ ಮಗು, ನಿನ್ನೊಡನೆ ಮಾತು ಏಕೆ ! ಈ ಬಾಣಗಳು ನಿನ್ನ ಬಾಣಗಳಿಗೆ ಸರಿಸಮನಾಗಿವೆಯೋ ಇಲ್ಲವೋ ಹೇಳು’ ಎನ್ನುತ್ತಾ ನಕುಲನು ಒಂದು ನಿಮಿಷದಲ್ಲಿ ಬಾಣಗಳ ಹೊರೆಯನ್ನೇ ವೃಷಸೇನನ ಮೇಲೆ ಪ್ರಯೋಗಿಸಿದನು. ಮೋಡಗಳ ಗುರಾಣಿಯ ಮೇಲೆ ಬಂಧಿಸುವಂತಹ ಗಾಳಿಯ ಹೊಡೆತವೇನೋ ಎನ್ನುವಂತೆ, ನಕುಲನು ಪ್ರಯೋಗಿಸಿದ ಬಾಣಗಳು ಕಿಡಿಗಳನ್ನು ಸೂಸುತ್ತಾ ರಥವನ್ನು ಮುತ್ತಿಕೊಂಡವು.
ಪದಾರ್ಥ (ಕ.ಗ.ಪ)
ಬಂದಿಗೆ-ಸೆರೆ
ಮೂಲ ...{Loading}...
ಮಗುವು ನಿನ್ನೊಡನೇನು ಸರಿಯೋ
ಮಿಗಿಲೊ ಶರವಿವ ಹೇಳೆಸುತ ಕೈ
ಮಗುಚಿದನು ಹೊದೆಯಂಬನೀತನಮೇಲೆ ನಿಮಿಷದಲಿ
ಮುಗಿಲ ಹರಿಗೆಗೆ ಮಾರುತನ ಬಂ
ದಿಗೆಯ ಹೊಯ್ಲೆನೆ ನಕುಳನೆಚ್ಚಂ
ಬುಗಳು ಕಿಡಿಸೂಸಿದವು ಕಂಡನು ರಥದ ಬಳಸಿನಲಿ ॥14॥
೦೧೫ ಮರಳಿ ನಕುಲನನೆಚ್ಚನಾತನ ...{Loading}...
ಮರಳಿ ನಕುಲನನೆಚ್ಚನಾತನ
ತುರಗವನು ಮುರಿಯೆಚ್ಚನಾತನ
ವರ ರಥವ ಸಾರಥಿಯನಾತನ ಟೆಕ್ಕೆಯವ ಧನುವ
ಉರುಳೆಗಡಿದನು ಮತ್ತೆ ಜೋಡಿಸಿ
ಪರಿತರಲು ಮುರಿಯೆಚ್ಚು ಪುನರಪಿ
ಹುರುಳುಗೆಡಿಸಿದನರಸಿ ಹರಿದನು ಮತ್ತೆ ಪವನಜನ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ವೃಷಸೇನನು ಮತ್ತೆ ನಕುಲನನ್ನು ಬಾಣದಿಂದ ಹೊಡೆದನು. ಅವನ ಕುದುರೆಗಳು ಹಿಂದೆಗೆಯುವಂತೆ ಮಾಡಿದನು. ಅವನ ರಥವನ್ನು ಸಾರಥಿಯನ್ನು ಧ್ವಜ, ಬಿಲ್ಲುಗಳನ್ನು ಧ್ವಂಸ ಮಾಡಿದನು. ನಕುಲನು ಮತ್ತೆ ಅವುಗಳನ್ನು ಜೋಡಿಸಿಕೊಂಡು ಬಂದಾಗ, ಅವುಗಳನ್ನು ಮತ್ತೊಮ್ಮೆ ಧ್ವಂಸ ಮಾಡಿದನು. ಅವನ ಶಕ್ತಿಯನ್ನು ಹಾಳು ಮಾಡಿದನು. ಭೀಮನನ್ನು ಹುಡುಕಿಕೊಂಡು ಹೋದನು.
ಮೂಲ ...{Loading}...
ಮರಳಿ ನಕುಲನನೆಚ್ಚನಾತನ
ತುರಗವನು ಮುರಿಯೆಚ್ಚನಾತನ
ವರ ರಥವ ಸಾರಥಿಯನಾತನ ಟೆಕ್ಕೆಯವ ಧನುವ
ಉರುಳೆಗಡಿದನು ಮತ್ತೆ ಜೋಡಿಸಿ
ಪರಿತರಲು ಮುರಿಯೆಚ್ಚು ಪುನರಪಿ
ಹುರುಳುಗೆಡಿಸಿದನರಸಿ ಹರಿದನು ಮತ್ತೆ ಪವನಜನ ॥15॥
೦೧೬ ನಕುಲ ಮುರಿದನು ...{Loading}...
ನಕುಲ ಮುರಿದನು ಭೀಮ ನಿಲು ಕಾ
ರ್ಮುಕವ ಹಿಡಿ ಬಿಡು ಸರಳನಳುಕುವ
ಡಕಟ ಕೊಲ್ಲೆನು ನಿನ್ನ ತಮ್ಮನ ಕರಸು ಫಲುಗುಣನ
ವಿಕಳರುಳಿದಿರಲಾಗದೀ ಸಾ
ಯಕದ ಸೃಷ್ಟಿವಿರಿಂಚ ಸುಭಟ
ಪ್ರಕರದೊಳು ತಾನೆನುತ ತೆಗೆದೆಚ್ಚನು ವೃಕೋದರನ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
16.” ‘ನಕುಲನು ಸೋತಿದ್ದಾನೆ, ಭೀಮನೇ ನಿಂತು ಬಿಲ್ಲನ್ನು ಹಿಡಿದು ಬಾಣ ಪ್ರಯೋಗಿಸು. ಹೆದರಿಕೆಯಾಗಿದ್ದರೆ ನಿನ್ನನ್ನು ಕೊಲ್ಲುವುದಿಲ್ಲ. ನಿನ್ನ ತಮ್ಮ ಅರ್ಜುನನನ್ನು ಕರೆಸಿಕೋ ಭಯಪಡುವವರನ್ನು ಉಳಿಸಬಾರದು. ಸುಭಟರ ಸಮೂಹದಲ್ಲಿ ಈ ಬಾಣದ ರಚನೆ ಮಾಡಿರುವ ಬ್ರಹ್ಮ ನಾನು “ಎನ್ನುತ್ತಾ ಭೀಮನ ಮೇಲೆ ಬಾಣ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ವಿಕಳರ್-ಹೇಡಿಗಳು, ಭಯಪಡುವವರು
ಮೂಲ ...{Loading}...
ನಕುಲ ಮುರಿದನು ಭೀಮ ನಿಲು ಕಾ
ರ್ಮುಕವ ಹಿಡಿ ಬಿಡು ಸರಳನಳುಕುವ
ಡಕಟ ಕೊಲ್ಲೆನು ನಿನ್ನ ತಮ್ಮನ ಕರಸು ಫಲುಗುಣನ
ವಿಕಳರುಳಿದಿರಲಾಗದೀ ಸಾ
ಯಕದ ಸೃಷ್ಟಿವಿರಿಂಚ ಸುಭಟ
ಪ್ರಕರದೊಳು ತಾನೆನುತ ತೆಗೆದೆಚ್ಚನು ವೃಕೋದರನ ॥16॥
೦೧೭ ಮುರಿದು ನಕುಲನ ...{Loading}...
ಮುರಿದು ನಕುಲನ ಭೀಮಸೇನನ
ನರಸಿ ಹಿಡಿದನು ಬವರವನು ಭಟ
ನುರುಬೆ ಬಲುಹೋ ದಿಟ್ಟನಿವ ಕೌರವರ ಥಟ್ಟಿನಲಿ
ತೆರಹುಗೊಡದಿರಿ ನೂಕುನೂಕೆನು
ತುರುಬಿದನು ಸಹದೇವನೀತನ
ತರುಬಿ ಮೂದಲಿಸಿದನು ಮುಸುಕಿದನಂಬಿನಲಿ ರಥವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಕುಲನನ್ನು ಸೋಲಿಸಿ, ಭೀಮಸೇನನನ್ನು ಹುಡುಕಿ ಯುದ್ಧ ಮಾಡುತ್ತಿದ್ದಾನೆ. ಈ ವೀರನ ಉತ್ಸಾಹ ಬಲವಾಗಿದೆ. ಕೌರವರ ಸೈನ್ಯದಲ್ಲಿ ಇವನು ಧೈರ್ಯಶಾಲಿ. ಆತನಿಗೆ ಅವಕಾಶ ಕೊಡಬೇಡಿ, ತಳ್ಳಿಹಾಕಿ’ ಎನ್ನುತ್ತಾ ಸಹದೇವನು ವೃಷಸೇನನ ಮೇಲೆ ಬಿದ್ದು ಅಡ್ಡಗಟ್ಟಿ ಮೂದಲಿಸಿದನು. ರಥವನ್ನು ಬಾಣಗಳಿಂದ ಮುಚ್ಚಿ ಹಾಕಿದನು.
ಪದಾರ್ಥ (ಕ.ಗ.ಪ)
ಉರುಬು-ಮೇಲೆ ಬೀಳು, vರುಬು-ಅಡ್ಡಗಟ್ಟು
ಮೂಲ ...{Loading}...
ಮುರಿದು ನಕುಲನ ಭೀಮಸೇನನ
ನರಸಿ ಹಿಡಿದನು ಬವರವನು ಭಟ
ನುರುಬೆ ಬಲುಹೋ ದಿಟ್ಟನಿವ ಕೌರವರ ಥಟ್ಟಿನಲಿ
ತೆರಹುಗೊಡದಿರಿ ನೂಕುನೂಕೆನು
ತುರುಬಿದನು ಸಹದೇವನೀತನ
ತರುಬಿ ಮೂದಲಿಸಿದನು ಮುಸುಕಿದನಂಬಿನಲಿ ರಥವ ॥17॥
೦೧೮ ಮೊದಲ ಬಲುಹನು ...{Loading}...
ಮೊದಲ ಬಲುಹನು ಕಂಡೆನಿನ್ನೀ
ತುದಿವರನ ತನಿಗೆಚ್ಚು ನಮ್ಮನು
ಬೆದರಿಸುವುದೋ ಶಿವಶಿವಾ ತಪ್ಪೇನು ತಪ್ಪೇನು
ಸದೆಗರಿವದಿರ ಗೆಲುವುದಾವಂ
ಗದಲಿ ಬಹುದೋ ಎನುತ ಪರಿಹಾ
ಸದಲಿ ರಿಪುಭಟನಂಬುಗಳ ಕೆದರಿದನು ಕಣೆಗಳಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೃಷಸೇನನು “ನಿಮ್ಮ ಆರಂಭ ಶೂರತ್ವವನ್ನು ನೋಡಿದ್ದಾಯಿತು. ಈಗ ಕೊನೆಗೆ ಬಂದಿರುವ ತೀವ್ರವಾದ ಕೋಪ, ನನ್ನನ್ನು ಬೆದರಿಸುತ್ತದೆಯೇ, ಶಿವಶಿವಾ ಅದರಲ್ಲಿ ತಪ್ಪೇನೂ ಇಲ್ಲ ‘ಈ ಅಲ್ಪರನ್ನು ಯಾವ ಪರಾಕ್ರಮ ತೋರಿಸಿ ಗೆಲ್ಲಬೇಕಾಗುತ್ತದೋ’ ಎಂದು ಅಪಹಾಸ್ಯ ಮಾಡುತ್ತಾ, ಶತ್ರುವಿನ ಬಾಣಗಳನ್ನು ತನ್ನ ಬಾಣಗಳಿಂದ ಕತ್ತರಿಸಿ ಹಾಕಿದನು.
ಪದಾರ್ಥ (ಕ.ಗ.ಪ)
ಸದೆಗೆ-ಅಲ್ಪರು
ಮೂಲ ...{Loading}...
ಮೊದಲ ಬಲುಹನು ಕಂಡೆನಿನ್ನೀ
ತುದಿವರನ ತನಿಗೆಚ್ಚು ನಮ್ಮನು
ಬೆದರಿಸುವುದೋ ಶಿವಶಿವಾ ತಪ್ಪೇನು ತಪ್ಪೇನು
ಸದೆಗರಿವದಿರ ಗೆಲುವುದಾವಂ
ಗದಲಿ ಬಹುದೋ ಎನುತ ಪರಿಹಾ
ಸದಲಿ ರಿಪುಭಟನಂಬುಗಳ ಕೆದರಿದನು ಕಣೆಗಳಲಿ ॥18॥
೦೧೯ ಆತನೊಡನೆಯೆ ತೇರುತುರಗ ...{Loading}...
ಆತನೊಡನೆಯೆ ತೇರುತುರಗ
ವ್ರಾತವನು ಹುಡಿಮಾಡಿ ರಥಹಯ
ಸೂತ ಧನು ಶಸ್ತ್ರೌಘ ಕವಚ ಧ್ವಜ ಪತಾಕೆಗಳ
ಘಾತಿಸಿದನೈದಂಬಿನಲಿ ಮಗು
ಳಾತನುರವನು ತೋಡಿ ತೊಲಗಿಸಿ
ವಾತಜನನರಸಿದನು ಮೂದಲಿಸಿದನು ಸರಳಿನಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೊತೆಯಲ್ಲಿಯೇ, ಸಹದೇವನ ರಥ ಕುದುರೆಗಳನ್ನು ಪುಡಿ ಮಾಡಿ, ರಥ, ಕುದುರೆ, ಸಾರಥಿ, ಬಿಲ್ಲು, ಶಸ್ತ್ರಗಳು, ಕವಚ, ಬಾವುಟಗಳನ್ನು ಹಾಳು ಮಾಡಿದನು. ಐದು ಬಾಣಗಳಿಂದ ಅವನ ಎದೆಯನ್ನು ಬಗಿದು ಗಾಯ ಮಾಡಿ, ಓಡಿಸಿದನು. ವಾಯುಪುತ್ರ ಭೀಮನನ್ನು ಹುಡುಕಿ, ಬಾಣಗಳ ಮೂಲಕ ಮೂದಲಿಸಿದನು.
ಮೂಲ ...{Loading}...
ಆತನೊಡನೆಯೆ ತೇರುತುರಗ
ವ್ರಾತವನು ಹುಡಿಮಾಡಿ ರಥಹಯ
ಸೂತ ಧನು ಶಸ್ತ್ರೌಘ ಕವಚ ಧ್ವಜ ಪತಾಕೆಗಳ
ಘಾತಿಸಿದನೈದಂಬಿನಲಿ ಮಗು
ಳಾತನುರವನು ತೋಡಿ ತೊಲಗಿಸಿ
ವಾತಜನನರಸಿದನು ಮೂದಲಿಸಿದನು ಸರಳಿನಲಿ ॥19॥
೦೨೦ ಶಿವಶಿವಾ ಸಹದೇವ ...{Loading}...
ಶಿವಶಿವಾ ಸಹದೇವ ನಕುಲರ
ಬವರ ಮುರಿದುದು ಬಿಡದೆ ಬಳಿಯಲಿ
ಪವನಜನ ತುಡುಕಿದನು ನೂಕಲಿ ಸರ್ವದಳವೆನುತ
ತವತವಗೆ ಸುತಸೋಮಕಾದಿಗ
ಳವಗಡಿಸಿದರು ಮತ್ಸ್ಯಕೈಕೆಯ
ನಿವಹ ಸಾತ್ಯಕಿ ಚೇಕಿತಾನರು ಕವಿದರುರವಣಿಸಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಶಿವಶಿವಾ ಸಹದೇವ ನಕುಲರು ಯುದ್ಧದಲ್ಲಿ ಸೋತರು. ಅಲ್ಲಿಗೇ ಬಿಡದೆ ಈ ವೃಷಸೇನನು ಭೀಮನನ್ನು ಹಿಡಿಯುತ್ತಿದ್ದಾನೆ. ಎಲ್ಲಾ ಸೈನಿಕರು ಮುನ್ನುಗ್ಗಲಿ’ ಎನ್ನುತ್ತಾ ಸುತಸೋಮ ಮೊದಲಾದವರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಪ್ರತಿಭಟಿಸಿದರು. ಮತ್ಸ್ಯ, ಕೇಕಯ ದೊರೆಗಳು, ಸಾತ್ಯಕಿ, ಚೇಕಿತಾನರು, ರಭಸದಿಂದ ಮುನ್ನುಗ್ಗಿ ಆಕ್ರಮಣ ಮಾಡಿದರು.
ಟಿಪ್ಪನೀ (ಕ.ಗ.ಪ)
ಚೇಕಿತಾನ-ವೃಷ್ಣಿ ವಂಶದ ಕ್ಷತ್ರಿಯ, ದುರ್ಯೋಧನನಿಂದ ಯುದ್ಧದಲ್ಲಿ ಹತನಾದವನು.
ಸಾತ್ಯಕಿ-ಯದುವಂಶದ ಸತ್ಯಕನ ಮಗ, ಶಿನಿಯನ ಮೊಮ್ಮಗ ಇವನಿಗೆ ಯುಯುಧಾನ ಎಂಬ ಇನ್ನೊಂದು ಹೆಸರಿದೆ
ಮೂಲ ...{Loading}...
ಶಿವಶಿವಾ ಸಹದೇವ ನಕುಲರ
ಬವರ ಮುರಿದುದು ಬಿಡದೆ ಬಳಿಯಲಿ
ಪವನಜನ ತುಡುಕಿದನು ನೂಕಲಿ ಸರ್ವದಳವೆನುತ
ತವತವಗೆ ಸುತಸೋಮಕಾದಿಗ
ಳವಗಡಿಸಿದರು ಮತ್ಸ್ಯಕೈಕೆಯ
ನಿವಹ ಸಾತ್ಯಕಿ ಚೇಕಿತಾನರು ಕವಿದರುರವಣಿಸಿ ॥20॥
೦೨೧ ಎಲೆಲೆ ಪಾಣ್ಡವ ...{Loading}...
ಎಲೆಲೆ ಪಾಂಡವ ಸರ್ವದಳವಿ
ಟ್ಟಳಿಸಿತೋ ಸುಕುಮಾರನೊಬ್ಬನೆ
ನಿಲುವುದರಿದೋ ನೂಕೆನುತ ಕುರುಸೇನೆ ಸಂವರಿಸೆ
ಉಲುಕದಿರಿ ಭಾರಣೆಯ ಭಟರ
ಗ್ಗಳೆಯರೆನ್ನೀ ಮಕ್ಕಳಾಟಿಕೆ
ಯಳವನೀಕ್ಷಿಸಿ ಸಾಕೆನುತ ತರುಬಿದನು ಪರಬಲವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲೇ ಸಮಸ್ತ ಪಾಂಡವರ ಸೈನ್ಯ ಸುಕುಮಾರನಾದ ವೃಷಸೇನನನ್ನು ಮುತ್ತಿಕೊಂಡಿದೆ. ಒಬ್ಬನಿಗೇ ಯುದ್ಧ ಮಾಡಲು ಸಾಧ್ಯವಾಗುವುದಿಲ್ಲ. ಮುನ್ನುಗ್ಗಿ’ ಎನ್ನುತ್ತಾ ಕೌರವರ ಸೈನ್ಯ ಸಿದ್ಧವಾಯಿತು. ‘ಹೆದರಬೇಡಿ, ನೀವು ಮಹಾವೀರರು, ಶ್ರೇಷ್ಠರು. ಮಕ್ಕಳಾಟಿಕೆ ಎಂದು ನೀವು ತಿಳಿದಿರುವ ನನ್ನ ಸಾಮಥ್ರ್ಯವನ್ನು ನೋಡಿ ಸಾಕು’ ಎನ್ನುತ್ತಾ ವೃಷಸೇನನು ಪಾಂಡವರ ಸೈನ್ಯವನ್ನು ತಡೆದು ನಿಲ್ಲಿಸಿದನು.
ಪದಾರ್ಥ (ಕ.ಗ.ಪ)
ಉಲುಕು-ಕಂಪಿಸು, ಹೆದರು, ಸಂವರಿಸು-ಸಿದ್ಧವಾಗು, ತರುಬು-ತಡೆ
ಮೂಲ ...{Loading}...
ಎಲೆಲೆ ಪಾಂಡವ ಸರ್ವದಳವಿ
ಟ್ಟಳಿಸಿತೋ ಸುಕುಮಾರನೊಬ್ಬನೆ
ನಿಲುವುದರಿದೋ ನೂಕೆನುತ ಕುರುಸೇನೆ ಸಂವರಿಸೆ
ಉಲುಕದಿರಿ ಭಾರಣೆಯ ಭಟರ
ಗ್ಗಳೆಯರೆನ್ನೀ ಮಕ್ಕಳಾಟಿಕೆ
ಯಳವನೀಕ್ಷಿಸಿ ಸಾಕೆನುತ ತರುಬಿದನು ಪರಬಲವ ॥21॥
೦೨೨ ತೇರನೆಚ್ಚನು ಕುದುರೆಕಾರರ ...{Loading}...
ತೇರನೆಚ್ಚನು ಕುದುರೆಕಾರರ
ದೂರದಲಿ ಖಂಡಿಸಿದನೊಗ್ಗಿನ
ವಾರಣೌಘವ ಸೀಳಿದನು ಹೂಳಿದನು ರಕುತದಲಿ
ಆರು ಬಲ್ಲರು ಪಯದಳವನಾ
ವೀರ ಸುತಸೋಮಾದಿ ನಿಖಿಳಕು
ಮಾರರಂಘವಣೆಗಳ ಸೆಳೆದುದು ಭೀತಿರಸಜಲಧಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೃಷಸೇನನು ರಥಕ್ಕೆ ಹೊಡೆದನು, ಕುದುರೆ ಸವಾರರನ್ನು ದೂರದಿಂದಲೇ ಕತ್ತರಿಸಿದನು, ಶ್ರೇಷ್ಠವಾದ ಆನೆಗಳ ಸಮೂಹವನ್ನು ಸೀಳಿದನು. ಅವುಗಳನ್ನು ರಕ್ತದಲ್ಲಿ ಹೂತುಹಾಕಿದನು. ಪದಾತಿಯ ಅವಸ್ಥೆಯನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ವೀರ ಸುತಸೋಮ ಮೊದಲಾದ ಎಲ್ಲಾ ಕುಮಾರರ ಸಾಮಥ್ರ್ಯ ಭಯರಸ ಸಮುದ್ರದಲ್ಲಿ ಲೀನವಾಯಿತು.
ಮೂಲ ...{Loading}...
ತೇರನೆಚ್ಚನು ಕುದುರೆಕಾರರ
ದೂರದಲಿ ಖಂಡಿಸಿದನೊಗ್ಗಿನ
ವಾರಣೌಘವ ಸೀಳಿದನು ಹೂಳಿದನು ರಕುತದಲಿ
ಆರು ಬಲ್ಲರು ಪಯದಳವನಾ
ವೀರ ಸುತಸೋಮಾದಿ ನಿಖಿಳಕು
ಮಾರರಂಘವಣೆಗಳ ಸೆಳೆದುದು ಭೀತಿರಸಜಲಧಿ ॥22॥
೦೨೩ ಉಗುಳುಗುಳು ದುಶ್ಯಾಸನನ ...{Loading}...
ಉಗುಳುಗುಳು ದುಶ್ಯಾಸನನ ನೀ
ನುಗುಳು ಮಗುಳಿನ್ನಾರ ಬಸುರನು
ಹೊಗುವೆ ಮೊಲೆಮುಡಿಯಾರಿಗಿವು ಫಡ ನಿಲ್ಲು ನಿಲ್ಲೆನುತ
ಹೊಗರೊಗುವ ಹೊಸಮಸೆಯ ಬಾಯ್ಧಾ
ರೆಗಳ ಬಂಬಲುಗಿಡಿಯ ಬಾಣಾ
ಳಿಗಳಲೀತನ ಹೂಳಿದನು ಕಾಣೆನು ವೃಕೋದರನ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದುಶ್ಶಾಸನನನ್ನು ನೀನು ಉಗುಳು. ನೀನು ಇನ್ನು ಯಾರ ಹೊಟ್ಟೆಯಲ್ಲಿ ಅಡಗಿ ಬದುಕಲು ಸಾಧ್ಯ. ಮೊಲೆ ಮುಡಿಗಳು ಇರುವುದು ಯಾರಿಗೆ, ಛೀ ನಿಲ್ಲು ಎನ್ನುತ್ತಾ ವೃಷಸೇನನು ಕಾಂತಿ ಚಿಮ್ಮುವ ಹೊಸದಾಗಿ ಮಸೆದಿರುವ ಅಂಚಿನಿಂದ ಕೂಡಿದ, ಕಿಡಿಗಳನ್ನು ಸೂಸುತ್ತಿರುವ ಬಾಣಗಳಿಂದ ಭೀಮನನ್ನು ಹೂತು ಹಾಕಿದನು. ಅದರಿಂದ ಭೀಮನು ಕಾಣದೇ ಹೋಗುವಂತಾಯಿತು.
ಮೂಲ ...{Loading}...
ಉಗುಳುಗುಳು ದುಶ್ಯಾಸನನ ನೀ
ನುಗುಳು ಮಗುಳಿನ್ನಾರ ಬಸುರನು
ಹೊಗುವೆ ಮೊಲೆಮುಡಿಯಾರಿಗಿವು ಫಡ ನಿಲ್ಲು ನಿಲ್ಲೆನುತ
ಹೊಗರೊಗುವ ಹೊಸಮಸೆಯ ಬಾಯ್ಧಾ
ರೆಗಳ ಬಂಬಲುಗಿಡಿಯ ಬಾಣಾ
ಳಿಗಳಲೀತನ ಹೂಳಿದನು ಕಾಣೆನು ವೃಕೋದರನ ॥23॥
೦೨೪ ಕಳವಳಿಸಿತರಿಸೇನೆ ಬೊಬ್ಬೆಯೊ ...{Loading}...
ಕಳವಳಿಸಿತರಿಸೇನೆ ಬೊಬ್ಬೆಯೊ
ಳುಲಿದುದೀ ನಮ್ಮವರು ಕಂಡನು
ಬಳಿಕ ಮುರರಿಪು ತೋರಿದನು ಪಾರ್ಥಂಗೆ ಪವನಜನ
ಎಲೆ ಧನಂಜಯ ಭೀಮಲಯ ನಿ
ಮ್ಮಳಿವು ನಮ್ಮ ಪರೋಕ್ಷದಲಿ ನಾ
ವುಳಿವರಲ್ಲೀ ಹವಣ ಕಂಡೆವು ಕರ್ಣತನಯನಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳ ಸೈನ್ಯ ಕಳವಳಗೊಂಡಿತು. ನಮ್ಮ ಕಡೆಯವರು ಬೊಬ್ಬೆ ಹಾಕುತ್ತಾ ಶಬ್ದ ಮಾಡಿದರು. ಆಗ ಕೃಷ್ಣನು ಅರ್ಜುನನಿಗೆ ಭೀಮನ ಅವಸ್ಥೆಯನ್ನು ತೋರಿಸಿ, ‘ಎಲೆ ಧನಂಜಯ, ಭೀಮನು ನಾಶವಾದರೆ ನೀವೂ ನಾಶವಾದಂತೆ ನಿಮ್ಮ ನಂತರ ನಾವೂ ಉಳಿಯುವುದಿಲ್ಲ. ಕರ್ಣನ ಮಗನಲ್ಲಿ ಇಂತಹ ಶೌರ್ಯವ ನ್ನು ನೋಡುತ್ತಿದ್ದೇನೆ’ ಎಂದನು.
ಮೂಲ ...{Loading}...
ಕಳವಳಿಸಿತರಿಸೇನೆ ಬೊಬ್ಬೆಯೊ
ಳುಲಿದುದೀ ನಮ್ಮವರು ಕಂಡನು
ಬಳಿಕ ಮುರರಿಪು ತೋರಿದನು ಪಾರ್ಥಂಗೆ ಪವನಜನ
ಎಲೆ ಧನಂಜಯ ಭೀಮಲಯ ನಿ
ಮ್ಮಳಿವು ನಮ್ಮ ಪರೋಕ್ಷದಲಿ ನಾ
ವುಳಿವರಲ್ಲೀ ಹವಣ ಕಂಡೆವು ಕರ್ಣತನಯನಲಿ ॥24॥
೦೨೫ ಈಸು ಘನವೇ ...{Loading}...
ಈಸು ಘನವೇ ಕೃಷ್ಣ ಮಗುವಿವ
ನೈಸರವನೆಂದಿದ್ದೆನಾದರೆ
ಹಾಯ್ಸು ರಥವನು ಭೀಮಸೇನನ ರಥದ ಮುಂಗುಡಿಗೆ
ವಾಸಿಯೇಕಿವನಲಿ ವಚೋವಿ
ನ್ಯಾಸದಿಂ ರಥ ಮುಂಚಿತಹಿತನ
ಘಾಸಿಯಿಂದನಿಲಜನನುಗಿದನು ಬಗಿದು ರಿಪುಶರವ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ‘ಇದು ದೊಡ್ಡ ವಿಚಾರವೇ ಇವನು ಮಗು ಯಾವ ಲೆಕ್ಕ ಎಂದಿದ್ದೆ. ಭೀಮಸೇನನ ರಥದ ಮುಂದಕ್ಕೆ ನಮ್ಮ ರಥವನ್ನು ಹಾಯಿಸು. ಇವನ ಜೊತೆ ಪಂಥದ ಮಾತುಗಳು ಏಕೆ ಬೇಕು’ ಎಂದು ಹೇಳುವುದಕ್ಕೆ ಮೊದಲೇ ರಥವನ್ನು ಕೃಷ್ಣನು ಮುನ್ನುಗ್ಗಿಸಿದನು. ಅರ್ಜುನನು ಶತ್ರುವಿನ ಬಾಣಗಳನ್ನು ನಿವಾರಿಸಿ, ಶತ್ರುವಿನ ಘಾಸಿಗೆ ಸಿಕ್ಕಿದ್ದ ಭೀಮನನ್ನು ಈಚೆಗೆ ತೆಗೆದು ರಕ್ಷಿಸಿದನು.
ಪದಾರ್ಥ (ಕ.ಗ.ಪ)
ವಾಸಿ-ಪಂಥ
ಮೂಲ ...{Loading}...
ಈಸು ಘನವೇ ಕೃಷ್ಣ ಮಗುವಿವ
ನೈಸರವನೆಂದಿದ್ದೆನಾದರೆ
ಹಾಯ್ಸು ರಥವನು ಭೀಮಸೇನನ ರಥದ ಮುಂಗುಡಿಗೆ
ವಾಸಿಯೇಕಿವನಲಿ ವಚೋವಿ
ನ್ಯಾಸದಿಂ ರಥ ಮುಂಚಿತಹಿತನ
ಘಾಸಿಯಿಂದನಿಲಜನನುಗಿದನು ಬಗಿದು ರಿಪುಶರವ ॥25॥
೦೨೬ ಎಸುಗೆ ಚೆಲುವನು ...{Loading}...
ಎಸುಗೆ ಚೆಲುವನು ಹಾಲುಗಲ್ಲದ
ಹಸುಳೆಯಂಗವಿದಲ್ಲ ತುಂಬಿಯ
ದೆಸೆಗೆ ಕೆಂದಾವರೆಯ ಬನವೇ ವನದವಾನಳನು
ಉಸುರದೀ ಜಯದೊಪ್ಪದಲಿ ಜಾ
ಳಿಸುವರೊಳ್ಳಿತು ತೊಲಗೆನುತ ನಿ
ಪ್ಪಸರದಲಿ ತೆಗೆದೆಚ್ಚನರ್ಜುನನಿನಸುತನಸುತನ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನ ಬಾಣ ಪ್ರಯೋಗದ ಅಂದವನ್ನು ನೋಡಿದರೆ, ಹಾಲುಗಲ್ಲದ ಮಗುವಿನ ಪರಾಕ್ರಮವಲ್ಲ ಎಂದು ತೋರುತ್ತದೆ. ದುಂಬಿಗಳ ನಾಶಕ್ಕೆ ಕೆಂಪು ತಾವರೆಯ ಕೊಳವೇ ಕಾಡುಕಿಚ್ಚಾಗಬಲ್ಲದು. ಹೆಚ್ಚು ಮಾತನ್ನಾಡದೇ, ಇದುವರೆಗೂ ಪಡೆದಿರುವ ಜಯದ ಸೊಗಸಿನಿಂದ ಸುಮ್ಮನೆ ಹೋಗುವುದು ಒಳ್ಳೆಯದು ! ಎಂದು ವೃಷಸೇನನ ಮೇಲೆ ಅರ್ಜುನನು ರಭಸದಿಂದ ಬಾಣ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ನಿಪ್ಪಸರ-ರಭಸ
ಮೂಲ ...{Loading}...
ಎಸುಗೆ ಚೆಲುವನು ಹಾಲುಗಲ್ಲದ
ಹಸುಳೆಯಂಗವಿದಲ್ಲ ತುಂಬಿಯ
ದೆಸೆಗೆ ಕೆಂದಾವರೆಯ ಬನವೇ ವನದವಾನಳನು
ಉಸುರದೀ ಜಯದೊಪ್ಪದಲಿ ಜಾ
ಳಿಸುವರೊಳ್ಳಿತು ತೊಲಗೆನುತ ನಿ
ಪ್ಪಸರದಲಿ ತೆಗೆದೆಚ್ಚನರ್ಜುನನಿನಸುತನಸುತನ ॥26॥
೦೨೭ ಚಾರುಪೌರುಷ ಸಮರವಿಹ್ವಳ ...{Loading}...
ಚಾರುಪೌರುಷ ಸಮರವಿಹ್ವಳ
ತಾರಕರು ನೀವ್ ನಮ್ಮದಿದು ಕೌ
ಮಾರದೆಸೆ ತಾಮಸವಲೇ ನಿಮಗಾನು ಸಮಬಳನೆ
ಕೂರಲಗು ತೊಲೆಗೋಲಿನಲಿ ನಿ
ಮ್ಮಾರುಭಟೆಯನು ನಮ್ಮ ಬಾಹುವಿ
ಕಾರಬಲವನು ತೂಗಿಯೆನುತೆಚ್ಚನು ಧನಂಜಯನ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮನೋಹರವಾದ ಸಾಹಸದಿಂದ ಯುದ್ಧದಲ್ಲಿ ಭಯಪಡಿಸುವ ಕೊನೆ ಮುಟ್ಟಿಸುವವರು ನೀವು. ನಾನು ಇನ್ನೂ ಕೌಮಾರದೆಸೆಯಲ್ಲಿರುವವನು, ಮೂರ್ಖತನ ನನ್ನದು, ನಿಮಗೆ ನಾನು ಸಮಬಲನಾಗಲು ಸಾಧ್ಯವೇ? ಚೂಪಾದ ಬಾಣದ ತಕ್ಕಡಿಯಲ್ಲಿ ನಿಮ್ಮ ಆರ್ಭಟದ ಸಾಹಸವನ್ನು ನನ್ನ ಬಾಹುಬಲವನ್ನು ತೂಕ ಹಾಕಿ” ಎನ್ನುತ್ತಾ ವೃಷಸೇನನು ಅರ್ಜುನನ ಮೇಲೆ ಬಾಣ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ತಾರಕೆ-ಕೊನೆ ಮುಟ್ಟಿಸುವವನು
ಮೂಲ ...{Loading}...
ಚಾರುಪೌರುಷ ಸಮರವಿಹ್ವಳ
ತಾರಕರು ನೀವ್ ನಮ್ಮದಿದು ಕೌ
ಮಾರದೆಸೆ ತಾಮಸವಲೇ ನಿಮಗಾನು ಸಮಬಳನೆ
ಕೂರಲಗು ತೊಲೆಗೋಲಿನಲಿ ನಿ
ಮ್ಮಾರುಭಟೆಯನು ನಮ್ಮ ಬಾಹುವಿ
ಕಾರಬಲವನು ತೂಗಿಯೆನುತೆಚ್ಚನು ಧನಂಜಯನ ॥27॥
೦೨೮ ಮುರಮಥನ ಚಿತ್ತೈಸಿದೈ ...{Loading}...
ಮುರಮಥನ ಚಿತ್ತೈಸಿದೈ ತರು
ವರಿಯ ಸಾಭಿಪ್ರಾಯ ವಾಕ್ಯ
ಸ್ಫುರಣವನು ಸಭ್ಯಾಂಗ ಭಾಷಿತ ಭಾವ ನಿಷ್ಠುರವ
ಪರಿಹೃತಿಯೆ ಕರ್ತವ್ಯವೆನುತು
ಚ್ಚರಿಸಿದನು ಮೌರ್ವೀ ನಿನಾದ
ಸ್ಫುರಿತ ವಿಮಳ ಪ್ರಣವಮುಖ ಶರಸೂಕ್ತಸಂತತಿಯ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ‘ಕೃಷ್ಣಾ, ಕೇಳಿಸಿಕೊಂಡೆಯಾ, ಈ ಬಾಲಕನ ಅರ್ಥಪೂರ್ಣವಾದ ಮಾತುಗಳನ್ನು, ಸಭ್ಯತೆಯಿಂದ ಕೂಡಿದ ನಿಷ್ಠುರವಾದ ನುಡಿಗಳನ್ನು ಇದಕ್ಕೆ ಪರಿಹಾರವನ್ನು ಕೊಡುವುದೇ ನನ್ನ ಕರ್ತವ್ಯ’ ಎನ್ನುತ್ತಾ ಬಿಲ್ಲಿನ ಹೆದೆಯನಾದದಿಂದ ಹೊರಟ ನಿರ್ಮಲವಾದ ಓಂಕಾರ ಧ್ವನಿಯಿಂದ ಕೂಡಿರುವ ಬಾಣಗಳೆಂಬ ‘ಶರ’ಸೂಕ್ತ ಮಂತ್ರಗಳನ್ನು ಪ್ರಯೋಗಿಸಿದನು.
ಮೂಲ ...{Loading}...
ಮುರಮಥನ ಚಿತ್ತೈಸಿದೈ ತರು
ವರಿಯ ಸಾಭಿಪ್ರಾಯ ವಾಕ್ಯ
ಸ್ಫುರಣವನು ಸಭ್ಯಾಂಗ ಭಾಷಿತ ಭಾವ ನಿಷ್ಠುರವ
ಪರಿಹೃತಿಯೆ ಕರ್ತವ್ಯವೆನುತು
ಚ್ಚರಿಸಿದನು ಮೌರ್ವೀ ನಿನಾದ
ಸ್ಫುರಿತ ವಿಮಳ ಪ್ರಣವಮುಖ ಶರಸೂಕ್ತಸಂತತಿಯ ॥28॥
೦೨೯ ಅದು ಬಳಿಕ ...{Loading}...
ಅದು ಬಳಿಕ ಲೋಕಾಯತಾಂಗ
ಚ್ಛದನ ಪರನಾರಾಚ ನಿರ್ಮಾ
ಣದಲಿ ಭಂಗಿತವಾಯ್ತು ಪಾರ್ಥನ ಬಾಣದೊಡ್ಡವಣೆ
ಬಿದಿರ ಮೊಳೆಯಲಿ ಹರಿವುದೇ ಬೆ
ಟ್ಟದಲಿ ಹರಿಯದ ವಸ್ತು ಹರನಿಂ
ದೊದಗಿದಂಬಿನ ಹವಣ ತೋರೆಂದೆಚ್ಚನರ್ಜುನನ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಪ್ರಯೋಗಿಸಿದ ‘ಶರಸೂಕ್ತ’ವೆಂಬ ಮಂತ್ರ ಬಾಣಗಳು ಲೋಕಾಯತ ಎಂಬ ವೃಷಸೇನನ ಬಾಣಗಳೆಂಬ ವಾದದಲ್ಲಿ ಸೋತವು. ‘ಬೆಟ್ಟದಿಂದ ಇಳಿದು ಹರಿಯದ ಹೊಳೆ ಬಿದಿರ ಮಳೆಯಲ್ಲಿ ಹೇಗೆ ಹರಿಯುತ್ತದೆ. ಶಿವನಿಂದ ಪಡೆದ ಬಾಣಗಳ ಶಕ್ತಿಯನ್ನು ತೋರಿಸು’ ಎಂದು ಅರ್ಜುನನ ಮೇಲೆ ಬಾಣಪ್ರಯೋಗಿಸಿದನು.
ಮೂಲ ...{Loading}...
ಅದು ಬಳಿಕ ಲೋಕಾಯತಾಂಗ
ಚ್ಛದನ ಪರನಾರಾಚ ನಿರ್ಮಾ
ಣದಲಿ ಭಂಗಿತವಾಯ್ತು ಪಾರ್ಥನ ಬಾಣದೊಡ್ಡವಣೆ
ಬಿದಿರ ಮೊಳೆಯಲಿ ಹರಿವುದೇ ಬೆ
ಟ್ಟದಲಿ ಹರಿಯದ ವಸ್ತು ಹರನಿಂ
ದೊದಗಿದಂಬಿನ ಹವಣ ತೋರೆಂದೆಚ್ಚನರ್ಜುನನ ॥29॥
೦೩೦ ದನುಜರಿಪು ಹುಸಿಯಲ್ಲ ...{Loading}...
ದನುಜರಿಪು ಹುಸಿಯಲ್ಲ ನಮ್ಮೊ
ಡ್ಡಿನಲಿ ಭಟನಭಿಮನ್ಯು ಪರರೊ
ಡ್ಡಿನಲಿ ಭಟನಿವನಲ್ಲದಿಲ್ಲ ಕುಮಾರವರ್ಗದಲಿ
ತನಗೆ ದೇವತ್ರಿತಯವಲ್ಲದೆ
ದನುಜ ದಿವಿಜಾದಿ ತ್ರಿಲೋಕದ
ಜನವಿದಿರೆ ಮೆಚ್ಚಿಸಿತು ಮಗುವಿನ ದಿಟ್ಟತನವೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ, ಕುಮಾರರ ಗುಂಪಿನಲ್ಲಿ ನಮ್ಮ ಸೈನ್ಯದಲ್ಲಿ ವೀರನೆಂದರೆ ಅಭಿಮನ್ಯು, ಶತ್ರು ಸೈನ್ಯದಲ್ಲಿ ಇವನನ್ನು ಬಿಟ್ಟರೆ, ಬೇರೆಯವರಿಲ್ಲ. ನನಗೆ ತ್ರಿಮೂರ್ತಿಗಳೂ ರಾಕ್ಷಸರೂ ದೇವತೆಗಳೂ, ಮೂರು ಲೋಕದ ಜನರೂ ಹೆದರುತ್ತಾರೆ. ಈ ಮಗುವಿನ ಧೈರ್ಯ ನನಗೆ ಮೆಚ್ಚಿಗೆಯಾಯಿತು ಎಂದ ಅರ್ಜುನ.
ಮೂಲ ...{Loading}...
ದನುಜರಿಪು ಹುಸಿಯಲ್ಲ ನಮ್ಮೊ
ಡ್ಡಿನಲಿ ಭಟನಭಿಮನ್ಯು ಪರರೊ
ಡ್ಡಿನಲಿ ಭಟನಿವನಲ್ಲದಿಲ್ಲ ಕುಮಾರವರ್ಗದಲಿ
ತನಗೆ ದೇವತ್ರಿತಯವಲ್ಲದೆ
ದನುಜ ದಿವಿಜಾದಿ ತ್ರಿಲೋಕದ
ಜನವಿದಿರೆ ಮೆಚ್ಚಿಸಿತು ಮಗುವಿನ ದಿಟ್ಟತನವೆಂದ ॥30॥
೦೩೧ ಪೂತುರೇ ವೃಷಸೇನ ...{Loading}...
ಪೂತುರೇ ವೃಷಸೇನ ಶರಸಂ
ಘಾತವಿದೆಕೋ ಸೈರಿಸಾದಡೆ
ಪಾತಕಕ್ಕೋಸರಿಸಿದೆವಲೇ ಭ್ರೂಣಹತಿಯೆಂಬ
ಮಾತು ಹಲವರಲೇನು ಪಾರ್ಥಿವ
ಜಾತಿಗೆನುತ ಮಹಾಸ್ತ್ರನಿಕರದೊ
ಳೀತನನು ಮುಸುಕಿದನು ಶರಮಯವಾಯ್ತು ರಣಭೂಮಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೇಷ್ ವೃಷಸೇನ, ತೆಗೆದುಕೋ ಈ ಬಾಣದ ಪೆಟ್ಟನ್ನು ಸಹಿಸಲು ಸಾಧ್ಯವಾಗುತ್ತದೆಯೇ? ಶಿಶುಹತ್ಯೆಯಾಗುತ್ತದೆ ಎಂಬ ಕಾರಣದಿಂದ ಸುಮ್ಮನಿದ್ದೆ. ಕ್ಷತ್ರಿಯರು ಹೆಚ್ಚು ಮಾತನಾಡುವುದರಿಂದ ಪ್ರಯೋಜನವಿಲ್ಲ’ ಎನ್ನುತ್ತಾ ಮಹಾಸ್ತ್ರ ಸಮೂಹದಲ್ಲಿ ಅವನನ್ನು ಮುಚ್ಚಿ ಹಾಕಿದನು. ರಣರಂಗವೆಲ್ಲಾ ಬಾಣಗಳಿಂದ ತುಂಬಿ ಹೋಯಿತು.
ಮೂಲ ...{Loading}...
ಪೂತುರೇ ವೃಷಸೇನ ಶರಸಂ
ಘಾತವಿದೆಕೋ ಸೈರಿಸಾದಡೆ
ಪಾತಕಕ್ಕೋಸರಿಸಿದೆವಲೇ ಭ್ರೂಣಹತಿಯೆಂಬ
ಮಾತು ಹಲವರಲೇನು ಪಾರ್ಥಿವ
ಜಾತಿಗೆನುತ ಮಹಾಸ್ತ್ರನಿಕರದೊ
ಳೀತನನು ಮುಸುಕಿದನು ಶರಮಯವಾಯ್ತು ರಣಭೂಮಿ ॥31॥
೦೩೨ ಆವ ವಹಿಲದೊಳರ್ಜುನನ ...{Loading}...
ಆವ ವಹಿಲದೊಳರ್ಜುನನ ಬಾ
ಣಾವಳಿಯ ತರಿದೊಟ್ಟಿ ಮಗುಳೆ ಶ
ರಾವಳಿಯ ಕೊನೆಗಳಲಿ ಮುದ್ರಿಸಿದನು ಧನಂಜಯನ
ನಾವರಿಯೆವೀಸದುಭುತವನಿವ
ಕಾವನೇ ಮಿಕ್ಕವರನರ್ಜುನ
ದೇವನಲಿ ಸರಿಮಿಗಿಲ ಕಾದಿದನರಸ ಕೇಳ್ ಎಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಾವ ವೇಗದಲ್ಲಿ ಅರ್ಜುನನು ಬಾಣಗಳನ್ನು ಕತ್ತರಿಸಿ ರಾಶಿ ಹಾಕಿ, ಜೊತೆಯಲ್ಲಿಯೇ ತನ್ನ ಬಾಣಗಳಿಂದ ಅರ್ಜುನನನ್ನು ಬಚ್ಚಿಹಾಕಿದನೋ ಅಷ್ಟೊಂದು ಅದ್ಭುತವಾದ ಕೆಲಸ ನನಗೆ ತಿಳಿದಿಲ್ಲ, ಧೃತರಾಷ್ಟ್ರ, ಇಂತಹವನು ಉಳಿದವರನ್ನು ಬಿಡುತ್ತಾನೆಯೇ. ಅರ್ಜುನನೊಂದಿಗೆ ಸರಿಸಮಾನವಾಗಿ ಯುದ್ಧ ಮಾಡಿದನು’ ಎಂದ ಸಂಜಯ.
ಪದಾರ್ಥ (ಕ.ಗ.ಪ)
ಶರಾವಳಿಯ ಕೊನೆ-ಬಾಣಗಳ ಆಕ್ರಮಣ
ಮೂಲ ...{Loading}...
ಆವ ವಹಿಲದೊಳರ್ಜುನನ ಬಾ
ಣಾವಳಿಯ ತರಿದೊಟ್ಟಿ ಮಗುಳೆ ಶ
ರಾವಳಿಯ ಕೊನೆಗಳಲಿ ಮುದ್ರಿಸಿದನು ಧನಂಜಯನ
ನಾವರಿಯೆವೀಸದುಭುತವನಿವ
ಕಾವನೇ ಮಿಕ್ಕವರನರ್ಜುನ
ದೇವನಲಿ ಸರಿಮಿಗಿಲ ಕಾದಿದನರಸ ಕೇಳೆಂದ ॥32॥
೦೩೩ ನರನ ಮಾರಙ್ಕದ ...{Loading}...
ನರನ ಮಾರಂಕದ ಮಹೇಂದ್ರಗೆ
ಚರಣಯುಗ ಬೆನ್ನಿನಲಿ ಬವರದೊ
ಳರಿದಲೈ ಭೀಷ್ಮಾದಿಗಳಿಗೀ ರಣದ ಮೇಳಾಪ
ಜರಡನೈ ಭಾರಂಕದಾಳಿವ
ತರಳನೇ ಸುರಗಿರಿಯನಾನುವ
ಕೊರಳ ಸತ್ವವೆ ಶಿವಶಿವೆಂದುದು ಮೇಲೆ ಸುರಕಟಕ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರ್ಜುನನಿಗೆ ಪ್ರತಿಸ್ಪರ್ಧಿಯಾದ ಇಂದ್ರನಿಗೇ ಯುದ್ಧದಲ್ಲಿ ಬೆನ್ನು ತೋರಿಸಿ ಓಡುವಂತಾಗಿತ್ತು. (ಅಂತಹ ಅರ್ಜುನನಿಗೆ ಈ ಗತಿ ಬಂದಿದೆ) ಭೀಷ್ಮ ಮೊದಲಾದವರಿಗೂ ಈ ಯುದ್ಧ ಸರಿಹೊಂದುವುದಿಲ್ಲ. ಇವನು ಅಲ್ಪನಲ್ಲ. ಭಾರೀ ಯುದ್ಧದ ವೀರ ಬಾಲಕನಲ್ಲವೆ? ಮೇರು ಪರ್ವತವನ್ನೇ ಹೊರುವ ಸಾಮಥ್ರ್ಯದ ಕೊರಳಿನ ಸಾಹಸಿ’ ಎಂದು ಆಕಾಶದಲ್ಲಿ ನಿಂತಿದ್ದ ದೇವತೆಗಳು ಹೊಗಳಿದರು.
ಪದಾರ್ಥ (ಕ.ಗ.ಪ)
ಮಾರಂಕ-ಪ್ರತಿಸ್ಪರ್ಧಿ, ಮೇಳಾಪ-ಹೊಂದಿಕೆ, ಜರಡ-ಅಲ್ಪ
ಪಾಠಾನ್ತರ (ಕ.ಗ.ಪ)
ಜರಡನೇ ಎಂಬ ಪಾಠವನ್ನು ಊಹಿಸಬೇಕಾಗುತ್ತದೆ
ಮೂಲ ...{Loading}...
ನರನ ಮಾರಂಕದ ಮಹೇಂದ್ರಗೆ
ಚರಣಯುಗ ಬೆನ್ನಿನಲಿ ಬವರದೊ
ಳರಿದಲೈ ಭೀಷ್ಮಾದಿಗಳಿಗೀ ರಣದ ಮೇಳಾಪ
ಜರಡನೈ ಭಾರಂಕದಾಳಿವ
ತರಳನೇ ಸುರಗಿರಿಯನಾನುವ
ಕೊರಳ ಸತ್ವವೆ ಶಿವಶಿವೆಂದುದು ಮೇಲೆ ಸುರಕಟಕ ॥33॥
೦೩೪ ಎಸಲು ಕಡಿದನು ...{Loading}...
ಎಸಲು ಕಡಿದನು ಝೂಡಿಯಲಿ ಝೊಂ
ಪಿಸಲು ಜಡಿದನು ಚಳಕದಲಿ ಜಾ
ಳಿಸಿದರೊಂದಕ್ಕೆರಡು ನಾಲ್ಕಕ್ಕೆಂಟು ತೋರಿಸಿದ
ಮುಸುಕಿದರೆ ಮಂತ್ರಾಸ್ತ್ರದಲಿ ಮೋ
ಹಿಸಿದ ಸರಿಸಕೆ ಸರಿಸ ವಿಷಮಕೆ
ವಿಷಮಗತಿ ಶರಸಾರ ಸಾಳಂಗದಲಿ ರಂಜಿಸಿದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಪ್ರಯೋಗಿಸಿದ ಬಾಣಗಳನ್ನು ರಭಸದಿಂದ ಕತ್ತರಿಸಿದನು. ಮೈಮರೆಯುವಂತೆ ಒಂದೇ ಸಮನೆ ಬೇಗ ಬೇಗ ಹೊಡೆದನು. ಹಿಮ್ಮೆಟ್ಟಿದರೆ ಒಂದು ಬಾಣಕ್ಕೆ ಎರಡು, ನಾಲ್ಕು ಬಾಣಗಳಿಗೆ ಎಂಟು ಬಾಣಗಳನ್ನು ಪ್ರಯೋಗಿಸಿದನು. ಮೇಲೆ ಬೀಳಲು ಪ್ರಯತ್ನಿಸಿದರೆ ಮಂತ್ರಾಸ್ತ್ರವನ್ನು ಬಿಟ್ಟು ಮೈಮರೆಯುವಂತೆ ಮಾಡಿದ, ಎದುರಿಗೆ ಬಂದರೆ ಎದುರಿಗೆ ನಿಂತು, ಕಷ್ಟಕರವಾಗಿ ಬಂದರೆ ತಾನೂ ಹಾಗೇ ಎದುರಿಸಿ ಬಾಣಗಳನ್ನು ಪ್ರಯೋಗಿಸಿ, ಶರಸಾರ ಸಾಳಂಗ, ಎಂಬ ರಾಗದಲ್ಲಿ ಶೋಭಿಸಿದ.
ಪದಾರ್ಥ (ಕ.ಗ.ಪ)
ಝಾಡಿ-ರಭಸ, ಝೋಂಪಿಸು-ಮೈಮರೆ, ಜಾಳಿಸು-ಹಿಂತೆಗೆ, ಸರಿಸ-ಎದುರು, ವಿಷಮ-ಕಷ್ಟ, ಸರಿಸ ಮತ್ತು ವಿಷಮ-ಸಂಗೀತಶಾಸ್ತ್ರದಲ್ಲಿ ಸೂಚಿಸುವ ತಾಳ ಗತಿಗಳು
ಮೂಲ ...{Loading}...
ಎಸಲು ಕಡಿದನು ಝೂಡಿಯಲಿ ಝೊಂ
ಪಿಸಲು ಜಡಿದನು ಚಳಕದಲಿ ಜಾ
ಳಿಸಿದರೊಂದಕ್ಕೆರಡು ನಾಲ್ಕಕ್ಕೆಂಟು ತೋರಿಸಿದ
ಮುಸುಕಿದರೆ ಮಂತ್ರಾಸ್ತ್ರದಲಿ ಮೋ
ಹಿಸಿದ ಸರಿಸಕೆ ಸರಿಸ ವಿಷಮಕೆ
ವಿಷಮಗತಿ ಶರಸಾರ ಸಾಳಂಗದಲಿ ರಂಜಿಸಿದ ॥34॥
೦೩೫ ಆಯಿತಿದು ಸಮರದಲಿ ...{Loading}...
ಆಯಿತಿದು ಸಮರದಲಿ ಗುರು ಗಾಂ
ಗೇಯ ಕರ್ಣದ್ರೌಣಿಗಳ ತರು
ವಾಯ ಲೆಕ್ಕಕೆ ಸಂದನೈ ಮಝ ಪೂತು ಪಾಯ್ಕೆನುತ
ಸಾಯಕವನಭಿಮಂತ್ರಿಸುತ ವೈ
ನಾಯಕಾಸ್ತ್ರವ ಹೂಡಿದನು ಬಲ
ಬಾಯಬಿಡೆ ಚಿಗಿದಂಬು ಕಡಿದುದು ಕರ್ಣನಂದನನ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ವೃಷಸೇನನು ಯುದ್ಧ ಮಾಡುವುದರಲ್ಲಿ ದ್ರೋಣ, ಭೀಷ್ಮ, ಕರ್ಣ, ಅಶ್ವತ್ಥಾಮ, ಇವರುಗಳ ಸಾಲಿಗೆ ಸೇರುತ್ತಾನೆ. ‘ಭೇಷ್’ ಎನ್ನುತ್ತಾ ಅರ್ಜುನನು ವೈನಾಯಕ ಎಂಬ ಬಾಣವನ್ನು ಮಂತ್ರ ಪೂರ್ವಕವಾಗಿ ಪ್ರಯೋಗಿಸಿದಾಗ ಅದು ನೆಗೆದು ವೃಷಸೇನನನ್ನು ಕತ್ತರಿಸಿ ಹಾಕಿತು. ಸೈನ್ಯವೆಲ್ಲಾ ಗೋಳಿಟ್ಟಿತು.
ಮೂಲ ...{Loading}...
ಆಯಿತಿದು ಸಮರದಲಿ ಗುರು ಗಾಂ
ಗೇಯ ಕರ್ಣದ್ರೌಣಿಗಳ ತರು
ವಾಯ ಲೆಕ್ಕಕೆ ಸಂದನೈ ಮಝ ಪೂತು ಪಾಯ್ಕೆನುತ
ಸಾಯಕವನಭಿಮಂತ್ರಿಸುತ ವೈ
ನಾಯಕಾಸ್ತ್ರವ ಹೂಡಿದನು ಬಲ
ಬಾಯಬಿಡೆ ಚಿಗಿದಂಬು ಕಡಿದುದು ಕರ್ಣನಂದನನ ॥35॥
೦೩೬ ಚಿಗಿದ ತಲೆ ...{Loading}...
ಚಿಗಿದ ತಲೆ ಬೊಬ್ಬಿರಿಯೆ ಬಳಿಕಾ
ಳುಗಳ ದೇವನು ಮುಷ್ಟಿಬಳಿಗೋ
ಲುಗಳನೈದಾರೇಳ ಹಳುಹಳುವಾಯಿಯೆಸುಗೆಯಲಿ
ತೆಗೆದು ನಿಂದುದು ಭಯರಸದ ಹ
ಬ್ಬುಗೆಯಲುಬ್ಬಿದ ಶೋಕದೊಡ್ಡಿನ
ಮುಗಿಲು ಕರೆದುದು ಕುರುಬಲದ ಕಂಬನಿಯ ಬಿರುವಳೆಯ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇಲಕ್ಕೆ ಹಾರಿದ ವೃಷಸೇನನ ತಲೆಯೂ ಆರ್ಭಟಿಸಿತು. ವೀರರಿಗೆ ಭಗವಂತನಾದ ಅರ್ಜುನನು ಐದು, ಆರು, ಏಳರ ಲೆಕ್ಕದಲ್ಲಿ ‘ಮುಷ್ಟಿಗೋಲು’ ಗಳೆಂಬ ಬಾಣಗಳನ್ನು ಪ್ರಯೋಗಿಸಿದಾಗ ಸುಲಭವಾದ ಮತ್ತು ನೇರವಾದ ಅವುಗಳಿಂದ ಉಂಟಾದ ಭಯರಸದ ಹೆಚ್ಚುವಿಕೆಯಿಂದ, ಅಧಿಕವಾದ ಶೋಕ ಸಮೂಹದ ಮೋಡ ಕವಿದು, ಕೌರವ ಸೈನ್ಯದವರು ಕಂಬನಿಯ ಬಿರುಮಳೆಯನ್ನು ಸುರಿಸುವಂತಾಯಿತು.
ಪದಾರ್ಥ (ಕ.ಗ.ಪ)
ಹಳುಹಳುವಾಯಿ-ಸುಲಭವಾದ ದಾರಿ
ಮೂಲ ...{Loading}...
ಚಿಗಿದ ತಲೆ ಬೊಬ್ಬಿರಿಯೆ ಬಳಿಕಾ
ಳುಗಳ ದೇವನು ಮುಷ್ಟಿಬಳಿಗೋ
ಲುಗಳನೈದಾರೇಳ ಹಳುಹಳುವಾಯಿಯೆಸುಗೆಯಲಿ
ತೆಗೆದು ನಿಂದುದು ಭಯರಸದ ಹ
ಬ್ಬುಗೆಯಲುಬ್ಬಿದ ಶೋಕದೊಡ್ಡಿನ
ಮುಗಿಲು ಕರೆದುದು ಕುರುಬಲದ ಕಂಬನಿಯ ಬಿರುವಳೆಯ ॥36॥
೦೩೭ ಕದಡಿತೀ ಬಲಜಲಧಿ ...{Loading}...
ಕದಡಿತೀ ಬಲಜಲಧಿ ಕಲ್ಪಾಂ
ತದ ಸಮುದ್ರದವೊಲು ಮಹಾಧ್ವನಿ
ಗದಗದಿಸೆ ಹಾ ಕರ್ಣಸುತ ಹಾ ಕರ್ಣಸುತ ಎನುತ
ಕೆದರಿತೀಶನ ಭಾಳದುರಿನೇ
ತ್ರದವೊಲುರಿದುದು ಸೂತಸುತ ಸಾ
ಕಿದ ಕುಮಾರನ ಮೇಳವದ ಮನ್ನಣೆಯ ಪರಿವಾರ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾ ಕರ್ಣಸುತ ಎಂದು ಸೈನಿಕರು ಗದ್ಗದಿಸುತ್ತಾ ಕೂಗಿದಾಗ, ಆ ಕೂಗು ಪ್ರಳಯಕಾಲದ ಸಮುದ್ರದ ಮಹಾಘೋಷದಂತಿತ್ತು. ಸೂತಪುತ್ರನಾದ ಕರ್ಣನು ಸಾಕಿದ ವೃಷಸೇನನ ಜೊತೆಯ ಮಾನ್ಯ ಪರಿವಾರದವರು ಈಶ್ವರನ ಹಣೆಗಣ್ಣಿನ ಉರಿಯಂತೆ ಕೋಪದಿಂದ ಉರಿದುಹೋದರು.
ಮೂಲ ...{Loading}...
ಕದಡಿತೀ ಬಲಜಲಧಿ ಕಲ್ಪಾಂ
ತದ ಸಮುದ್ರದವೊಲು ಮಹಾಧ್ವನಿ
ಗದಗದಿಸೆ ಹಾ ಕರ್ಣಸುತ ಹಾ ಕರ್ಣಸುತ ಎನುತ
ಕೆದರಿತೀಶನ ಭಾಳದುರಿನೇ
ತ್ರದವೊಲುರಿದುದು ಸೂತಸುತ ಸಾ
ಕಿದ ಕುಮಾರನ ಮೇಳವದ ಮನ್ನಣೆಯ ಪರಿವಾರ ॥37॥
೦೩೮ ನೂಕಿತೀ ಬಲದಳದ ...{Loading}...
ನೂಕಿತೀ ಬಲದಳದ ಪದಹತಿ
ಗೇಕೆ ಬಿರಿಯದು ಧರಣಿ ದಿಕ್ಕರಿ
ಯೋಕರಿಸದೇ ಮದವನಾದರೆ ಪುಣ್ಯನಬುಜಭವ
ಈ ಕಡುಹಿನಾತಗಳನಾನುವ
ಡೀ ಕಪರ್ದಿಯೆ ಸಾಕು ಕೆಲನವ
ರಾಕೆವಾಳರೆ ಎನುತಲಿರ್ದುದು ಮೇಲೆ ಸುರಕಟಕ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮುನ್ನುಗ್ಗಿದ ವೃಷಸೇನನ ಸೈನ್ಯ ದಳದ ಪಾದಗಳ ತುಳಿತಕ್ಕೆ ಭೂಮಿ ಏಕೆ ಬಿರಿಯುವುದಿಲ್ಲ ? ದಿಕ್ಕನ್ನು ಹೊತ್ತಿರುವ ಆನೆಗಳು ಮದಜಲವನ್ನು ಸುರಿಸದೇ ಇರುತ್ತವೆಯೇ ? ಹಾಗಾಗದೇ ಹೋದರೆ ಬ್ರಹ್ಮನೇ ಪುಣ್ಯ ಶಾಲಿ. ಈ ವೀರ ಪುರುಷರನ್ನು ಎದುರಿಸಲು ಶಿವನೇ ಬೇಕಾಗುತ್ತದೆ. ಉಳಿದವರು ಇಲ್ಲಿ ಯಾರೂ ಶೂರರಿಲ್ಲ.” ಎಂದು ಆಕಾಶದಲ್ಲಿದ್ದ ದೇವತೆಗಳು ಹೇಳಿಕೊಳ್ಳುತ್ತಿದ್ದರು.
ಮೂಲ ...{Loading}...
ನೂಕಿತೀ ಬಲದಳದ ಪದಹತಿ
ಗೇಕೆ ಬಿರಿಯದು ಧರಣಿ ದಿಕ್ಕರಿ
ಯೋಕರಿಸದೇ ಮದವನಾದರೆ ಪುಣ್ಯನಬುಜಭವ
ಈ ಕಡುಹಿನಾತಗಳನಾನುವ
ಡೀ ಕಪರ್ದಿಯೆ ಸಾಕು ಕೆಲನವ
ರಾಕೆವಾಳರೆ ಎನುತಲಿರ್ದುದು ಮೇಲೆ ಸುರಕಟಕ ॥38॥
೦೩೯ ಉರಿಯ ಸರಿಗೇರಿದ ...{Loading}...
ಉರಿಯ ಸರಿಗೇರಿದ ಪತಂಗಕೆ
ಮರಳುದಲೆಯೇ ಮತ್ತೆ ರಣದಲಿ
ನರನೊಡನೆ ಕಳನೇರಿದಾತನ ಸತಿ ಸುವಾಸಿನಿಯೆ
ಅರಳ ಹೊಸ ಸಂಪಗೆಯ ಮಧುವನು
ಮರಿಗೆ ತಹವೇ ತುಂಬಿಗಳು ಕೇ
ಳರಸ ಹರಿಬಕೆ ಹೊಕ್ಕ ಸುಭಟರ ಕಾಣೆ ನಾನೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉರಿಯ ರಾಶಿಯಲ್ಲಿ ಬಿದ್ದ ಚಿಟ್ಟೆಗೆ ಜೀವ ಉಳಿಯುತ್ತದೆಯೇ, ಮತ್ತೆ ಯುದ್ಧದಲ್ಲಿ ಅರ್ಜುನನೊಡನೆ ಎದುರು ನಿಂತವನ ಸತಿ ಮುತ್ತೈದೆಯಾಗಿ ಉಳಿಯುತ್ತಾಳೆಯೇ ? ಹೊಸದಾಗಿ ಅರಳಿದ ಸಂಪಗೆಯ ಮಕರಂದವನ್ನು ದುಂಬಿಗಳು ತಮ್ಮ ಮರಿಗಳಿಗೆ ತಂದುಕೊಡುತ್ತವೆಯೇ? ಧೃತರಾಷ್ಟ್ರನೇ, “ತಮ್ಮ ಕರ್ತವ್ಯವೆಂದು ಯುದ್ಧದಲ್ಲಿ ಮುನ್ನುಗ್ಗಿದ ವೃಷಸೇನನ ಸೈನಿಕರು ಏನಾದರೋ ನನಗೆ ತಿಳಿಯಲಿಲ್ಲ” ಎಂದ ಸಂಜಯ.
ಪದಾರ್ಥ (ಕ.ಗ.ಪ)
ಸರಿ-ರಾಶಿ
ಮೂಲ ...{Loading}...
ಉರಿಯ ಸರಿಗೇರಿದ ಪತಂಗಕೆ
ಮರಳುದಲೆಯೇ ಮತ್ತೆ ರಣದಲಿ
ನರನೊಡನೆ ಕಳನೇರಿದಾತನ ಸತಿ ಸುವಾಸಿನಿಯೆ
ಅರಳ ಹೊಸ ಸಂಪಗೆಯ ಮಧುವನು
ಮರಿಗೆ ತಹವೇ ತುಂಬಿಗಳು ಕೇ
ಳರಸ ಹರಿಬಕೆ ಹೊಕ್ಕ ಸುಭಟರ ಕಾಣೆ ನಾನೆಂದ ॥39॥
೦೪೦ ಕೇಣವಿಲ್ಲದೆ ಹೊಕ್ಕ ...{Loading}...
ಕೇಣವಿಲ್ಲದೆ ಹೊಕ್ಕ ಕುದುರೆಗ
ಳಾಣತಿಯ ತುಂಬಿಯ ಕಪೋಲ
ದ್ರೋಣಿಯೊರತೆಯ ಮದದ ಕರಿಗಳ ಕಡುಹ ನಿಜರಥದ
ಸಾಣೆಯಲಗಿನ ಸರಿಯ ಸೋನೆಯ
ಜಾಣತನವೋ ಜಯದ ಸುಭಟರ
ಕಾಣೆನೈ ಕಣೆಯೆರಡರಲಿ ಸಂವರಿಸಿದನು ಪಾರ್ಥ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೇಟು ಹಾಕದೆ ಮುನ್ನುಗ್ಗಿದ ಕುದುರೆಗಳು ದುಂಬಿಗಳು ತುಂಬಿದ ಮದಸುರಿಯುತ್ತಿರುವ ಕುಂಭಸ್ಥಳದಿಂದ ಕೂಡಿದ ಮದದಾನೆಗಳು, ವೇಗದ ತನ್ನ ರಥವೋ, ಚೂಪು ಮಾಡಿದ ಬಾಣದ ರಾಶಿಯ ಸುರಿಮಳೆಯೋ, ಜಯಶಾಲಿಯಾಗುವ ಸೈನಿಕರನ್ನು ಕಾಣಲೇ ಇಲ್ಲ ಎನ್ನುವಂತೆ ಎರಡು ಬಾಣಗಳಲ್ಲಿ ಅರ್ಜುನನು ಅವರೆಲ್ಲರನ್ನು ನಾಶ ಮಾಡಿದನು.
ಪದಾರ್ಥ (ಕ.ಗ.ಪ)
ಕೇಣ-ಕೊರತೆ, ಹಿಂದೇಲು ಹಾಕು
ಮೂಲ ...{Loading}...
ಕೇಣವಿಲ್ಲದೆ ಹೊಕ್ಕ ಕುದುರೆಗ
ಳಾಣತಿಯ ತುಂಬಿಯ ಕಪೋಲ
ದ್ರೋಣಿಯೊರತೆಯ ಮದದ ಕರಿಗಳ ಕಡುಹ ನಿಜರಥದ
ಸಾಣೆಯಲಗಿನ ಸರಿಯ ಸೋನೆಯ
ಜಾಣತನವೋ ಜಯದ ಸುಭಟರ
ಕಾಣೆನೈ ಕಣೆಯೆರಡರಲಿ ಸಂವರಿಸಿದನು ಪಾರ್ಥ ॥40॥
೦೪೧ ವೀರದುಶ್ಯಾಸನನು ಕರ್ಣಕು ...{Loading}...
ವೀರದುಶ್ಯಾಸನನು ಕರ್ಣಕು
ಮಾರಕರು ನೀ ಸಾಕಿದಗ್ಗಳ
ವೀರದಳ ಕೌರವ ಸಹೋದರಸೇನೆ ಮೊದಲಾಗಿ
ತೀರಿತಾಹವದಲಿ ಕುರುವ್ರಜ
ವಾರುಧಿಗೆ ಸರಿಯಾಯ್ತು ನಿನ್ನ ಕು
ಮಾರನಿಂಗಿತವರಿದು ಸಮರಕೆ ಕರ್ಣನನುವಾದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರ ದುಶ್ಶಾಸನನು, ಕರ್ಣನ ಮಕ್ಕಳು, ನೀನು ಸಲಹಿದ ಶ್ರೇಷ್ಠರಾದ ವೀರಸೈನಿಕರು, ಕೌರವ ಸಹೋದರರ ಸೈನ್ಯ ಮೊದಲಾದವರೆಲ್ಲ ಯುದ್ಧದಲ್ಲಿ ಸತ್ತರು. ಕೌರವ ಸೇನಾ ಸಾಗರ ಸಣ್ಣ ನದಿಯಾಗಿ ಹೋಯಿತು. ನಿನ್ನ ಮಗನ ಇಷ್ಟವನ್ನು ತಿಳಿದು ಕರ್ಣನು ಯುದ್ಧಕ್ಕೆ ಸಿದ್ಧನಾದ.
ಪದಾರ್ಥ (ಕ.ಗ.ಪ)
ಸರಿ-ಝರಿ
ಮೂಲ ...{Loading}...
ವೀರದುಶ್ಯಾಸನನು ಕರ್ಣಕು
ಮಾರಕರು ನೀ ಸಾಕಿದಗ್ಗಳ
ವೀರದಳ ಕೌರವ ಸಹೋದರಸೇನೆ ಮೊದಲಾಗಿ
ತೀರಿತಾಹವದಲಿ ಕುರುವ್ರಜ
ವಾರುಧಿಗೆ ಸರಿಯಾಯ್ತು ನಿನ್ನ ಕು
ಮಾರನಿಂಗಿತವರಿದು ಸಮರಕೆ ಕರ್ಣನನುವಾದ ॥41॥