೧೭

೦೦೦ ಸೂ ರಾಯನನು ...{Loading}...

ಸೂ. ರಾಯನನು ಕೆಡೆನುಡಿದನಾ ವ
ಜ್ರಾಯುಧನ ನಂದನನು ಬಳಿಕಬು
ಜಾಯತಾಂಬಕ ಸಂತವಿಟ್ಟನು ಧರ್ಮಜಾರ್ಜುನರ

೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...

ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನಾಡಿದ ನುಡಿಯನಾಲಿಸಿ
ಕೇಳಿದನು ಕೆದರಿದನು ಜಡಿದವು ರೋಮರಾಜಿಗಳು
ಮೇಲು ಮೇಲುಬ್ಬೇಳ್ವ ರೋಷ
ಜ್ವಾಲೆ ಹೊದಸಿತು ವದನವನು ಕ
ಣ್ಣಾಲಿ ಕಾಹೇರಿದವು ಪಾರ್ಥಂಗೊಂದು ನಿಮಿಷದಲಿ ॥1॥

೦೦೨ ಆಯುಧವ ಹಿಡಿದೊರೆಯನುಗಿದನ ...{Loading}...

ಆಯುಧವ ಹಿಡಿದೊರೆಯನುಗಿದನ
ಡಾಯುಧವ ಝಳಪಿಸುತ ರೌದ್ರ
ಸ್ಥಾಯಿಭಾವದ ಭಾರದಲಿ ಭುಲ್ಲಯಿಸಿ ಭಯವಡಗಿ
ರಾಯನಲ್ಲಿಗೆ ಮೆಲ್ಲ ಮೆಲ್ಲನು
ಪಾಯಗತಿ ಪಲ್ಲವಿಸಲುಪ್ಪರ
ಘಾಯದಲಿ ಲಾಗಿಸುವ ಪಾರ್ಥನ ಕಂಡುದಖಿಳಜನ ॥2॥

೦೦೩ ಅಹಹ ಕೈತಪ್ಪಾಯ್ತು ...{Loading}...

ಅಹಹ ಕೈತಪ್ಪಾಯ್ತು ಹಾ ಹಾ
ರಹವಿದೇನೆನುತ ರಾಯನ
ಮಹಿಳೆ ಬಿದ್ದಳು ಮೇಲುಖಡ್ಗಕೆ ತನ್ನ ನಡೆಯೊಡ್ಡಿ
ಬಹಳ ಶೋಕದಲಖಿಳ ಜನವು
ಮ್ಮಹವ ಬಿಸುಟರು ದೈವಗತಿ ದು
ಸ್ಸಹವಲಾ ಎನುತಸುರರಿಪು ಹಿಡಿದನು ಧನಂಜಯನ ॥3॥

೦೦೪ ಹಿಡಿಯದಿರು ಮುರವೈರಿ ...{Loading}...

ಹಿಡಿಯದಿರು ಮುರವೈರಿ ಪಾರ್ಥನ
ಬಿಡು ಬಿಡೀತನ ಖಡ್ಗಕಿದೆಯೆ
ನ್ನೊಡಲು ತನ್ನನೆ ಧಾರೆಯೆರಿದನು ನಯನವಾರಿಯಲಿ
ತೊಡಗಿದೀತನ ರಾಜಕಾರ್ಯವ
ಕೆಡಿಸದಿರು ನಿರ್ವಾಹಿಸಲಿ ನೀ
ಬಿಡು ಬಿಡೆನೆ ಜರೆದನು ಮುರಾಂತಕನಿಂದ್ರನಂದನನ ॥4॥

೦೦೫ ಅಕಟ ಗುರುಹತ್ಯಾ ...{Loading}...

ಅಕಟ ಗುರುಹತ್ಯಾ ಮಹಾ ಪಾ
ತಕಕೆ ತಂದೈ ಮನವ ಭರತ
ಪ್ರಕಟಕುಲ ನಿರ್ಮೂಲಕನೆ ನೀನೊಬ್ಬನುದಿಸಿದಲ
ವಿಕಳ ಕುರುನೃಪರೊಳಗೆ ದುರಿತಾ
ತ್ಮಕರ ಕಾಣೆನು ನಿನ್ನ ಸರಿ ಹೋ
ಲಿಕೆಗೆ ಹರಹರದೇನನೆನೆದನೆನುತ್ತ ಗರ್ಜಿಸಿದ ॥5॥

೦೦೬ ಧರಣಿಪನ ಕೊಲಲೆನ್ದೊ ...{Loading}...

ಧರಣಿಪನ ಕೊಲಲೆಂದೊ ಮೇಣೀ
ತರುಣಿಯರಿಗೋ ನಕುಲ ಸಹದೇ
ವರಿಗೆಯೋ ಮೇಣೆನಗೆಯೋ ನೀನುಗಿದಡಾಯುಧದ
ಪರಿಯ ಹೇಳೈ ಪಾರ್ಥ ಮೋನದೊ
ಳಿರದಿರೆನ್ನಾಣೆನಲು ಬೆರಗಿನ
ಗರದ ಗಾಹಿನಲದ್ದು ಮೋನದೊಳಿದ್ದನಾ ಪಾರ್ಥ ॥6॥

೦೦೭ ಬೆದರಿಸದಿರೈ ಕೃಷ್ಣ ...{Loading}...

ಬೆದರಿಸದಿರೈ ಕೃಷ್ಣ ದುಷ್ಕ
ರ್ಮದಲಿ ಸುಳಿಯೆನು ಭೂಪತಿಯ ಗ
ದ್ಗದ ವಚೋವಿನ್ಯಾಸವನ್ಯಾಯ ಪ್ರಪಂಚವಿದು
ಆದರಿನೀತನ ಪೊಯ್ದು ಕೊಂದ
ಲ್ಲದೆ ಸುನಿಷ್ಕೃತಿಯಿಲ್ಲ ಸತ್ಯಾ
ಭ್ಯುದಯವೇ ತನ್ನುದಯವದರಳಿವೆನ್ನ ಲಯವೆಂದ ॥7॥

೦೦೮ ದೇವ ಪೂರ್ವದಲೆನ್ನ ...{Loading}...

ದೇವ ಪೂರ್ವದಲೆನ್ನ ನುಡಿ ಗಾಂ
ಡೀವವೇತಕೆ ನಿನಗೆ ನಿನಗೀ
ದೇವಧನು ಸಾದೃಶ್ಯವೇ ತೆಗೆಯೆಂದು ರೋಷದಲಿ
ಆವನೊಬ್ಬನ ನುಡಿದನಾತನ
ಜೀವನವ ಜಕ್ಕುಲಿಸಿಯೆನ್ನ ವ
ಚೋವಿಳಾಸವ ಕಾಯ್ವೆನೆಂದೆನು ಕೃಷ್ಣ ಕೇಳ್ ಎಂದ ॥8॥

೦೦೯ ಸಾರು ತೆಗೆ ...{Loading}...

ಸಾರು ತೆಗೆ ಗಾಂಡಿವವ ನಿನಗನು
ಸಾರಿಯೇ ಬಿಸುಡೆಂದು ನುಡಿಯನೆ
ಧಾರುಣೀಪತಿ ಕೇಳಿರೇ ನೀವಿನಿಬರೀ ನುಡಿಯ
ಆರದನ್ಯಾಯವು ವಿಚಾರ ವಿ
ಶಾರದನು ನೀನೆಲೆ ಮುಕುಂದ ವಿ
ಕಾರಿಯೇ ತಾನೆಂದು ಬಿನ್ನಹ ಮಾಡಿದನು ಪಾರ್ಥ ॥9॥

೦೧೦ ಲೇಸು ಲೇಸಿದು ...{Loading}...

ಲೇಸು ಲೇಸಿದು ತಮ್ಮನಾಡಿದ
ಭಾಷೆ ಬಾಹಿರವಾಗಬೇಡ ವಿ
ನಾಶಕಾನಂಜೆನು ಮುರಾಂತಕ ಬಿಡು ಧನಂಜಯನ
ಆಸೆಯೆನಗೀ ರಾಜ್ಯದಲಿ ಮೇ
ಣೀ ಶರೀರದಲಿಲ್ಲ ಪಾರ್ಥನ
ಭಾಷೆ ಸಂದರೆ ಸಾಕು ನೀ ಸಾರೆಂದನಾ ಭೂಪ ॥10॥

೦೧೧ ಮರುಳೆ ಮೋನದೊಳಿರು ...{Loading}...

ಮರುಳೆ ಮೋನದೊಳಿರು ಯುಧಿಷ್ಠಿರ
ನರನ ನೀ ಮುಂದಿಟ್ಟು ಯಮದೂ
ತರಿಗೆ ಕೈವರ್ತಿಸುವ ಪರಿಯೇ ಕೋಟಿ ನರಕದಲಿ
ಹುರುಳನರಿಯದೆ ಧರ್ಮಶಾಸ್ತ್ರದ
ಪರಮ ತತ್ತ್ವವದಾವ ಮುಖವೆಂ
ದರಿಯೆ ವಿಷಮ ಕ್ಷತ್ರತಾಮಸ ನಿನ್ನ ಬಿಡದೆಂದ ॥11॥

೦೧೨ ಎಲೆ ಧನಞ್ಜಯ ...{Loading}...

ಎಲೆ ಧನಂಜಯ ಧರ್ಮಪುತ್ರನ
ಕೊಲುವೆನುಳುಹುವದಿಲ್ಲವೆಂಬ
ಗ್ಗಳಿಕೆಯಿದು ನಗೆಯಲ್ಲವೇ ನಿಶ್ಚಯವೆ ಹಿಂಸೆಯಲಿ
ಕಲುಮನವಲಾ ನಿನಗಕಟ ನಿ
ರ್ಮಳದ ಧರ್ಮಸ್ಥಿತಿ ರಹಸ್ಯವ
ತಿಳುಪಿದವರಾರೆನುತ ತಲೆದೂಗಿದನು ಮುರವೈರಿ ॥12॥

೦೧೩ ನುಡಿದ ಮಾತ್ರದಲಿರದು ...{Loading}...

ನುಡಿದ ಮಾತ್ರದಲಿರದು ಧರ್ಮದ
ಬೆಡಗು ತಾನದು ಬೇರೆ ಸತ್ಯವ
ನುಡಿದು ಕೆಟ್ಟವರುಂಟು ಹಿಂಸಾಧರ್ಮವೃತ್ತಿಯಲಿ
ನಡೆದು ಯಾವಜ್ಜೀವದಲಿ ಗತಿ
ವಡೆದರುಂಟೆಲೆ ಪಾರ್ಥ ನಿನ್ನು
ಗ್ಗಡದ ವೀರಾವೇಶ ಮಾಣಲಿ ಮಾತ ಕೇಳ್ ಎಂದ ॥13॥

೦೧೪ ವನದೊಳೊಬ್ಬನು ಕೌಶಿಕಾಹ್ವಯ ...{Loading}...

ವನದೊಳೊಬ್ಬನು ಕೌಶಿಕಾಹ್ವಯ
ಮುನಿ ತಪಶ್ಚರಿಯದಲಿ ಸತ್ಯವೆ
ತನಗೆ ಸುವ್ರತವೆಂದು ಬಟ್ಟೆಯೊಳಿದ್ದನೊಂದು ದಿನ
ವನಚರರು ಬೇಹಿನಲಿ ಭೂಸುರ
ಜನವ ಬೆಂಬತ್ತಿದರು ಕೌಶಿಕ
ಮುನಿಯ ಬೆಸಗೊಂಡರು ಮಹೀಸುರ ಮಾರ್ಗಸಂಗತಿಯ ॥14॥

೦೧೫ ವಿತತ ಸತ್ಯದ ...{Loading}...

ವಿತತ ಸತ್ಯದ ವಿಷಯಭೇದ
ಸ್ಥಿತಿಯನರಿಯದ ಮುನಿಪ ವನಚರ
ತತಿಗೆ ಭೂಸುರಜನದ ಮಾರ್ಗವನರುಹಿದನು ಬಳಿಕ
ಅತಿ ದುರಾತ್ಮಕರವದಿರನಿಬರು
ಕ್ಷಿತಿಸುರರ ಕೊಂದಮಳ ಭೂಷ
ಪ್ರತತಿಯನು ಕೊಂಡೊಯ್ದರೆಲೆ ಕೌಂತೇಯ ಕೇಳ್ ಎಂದ ॥15॥

೦೧೬ ಕಾಲವಶದಲಿ ಕೌಶಿಕನನಾ ...{Loading}...

ಕಾಲವಶದಲಿ ಕೌಶಿಕನನಾ
ಕಾಲದೂತರು ತಂದರಾತನ
ಮೇಲುಪೋಗಿನ ಸುಕೃತ ದುಷ್ಕೃತವನು ವಿಚಾರಿಸಲು
ಮೇಲನರಿಯದೆ ಸತ್ಯದಲಿ ವಿ
ಪ್ರಾಳಿ ವಧೆಯಾತಂಗೆ ಬಂದುದು
ಹೇಳಲದು ಭೋಕ್ತವ್ಯವತಿ ಪಾತಕದ ಫಲವೆಂದ ॥16॥

೦೧೭ ನರಕಕಾತನ ನೂಕಿದರು ...{Loading}...

ನರಕಕಾತನ ನೂಕಿದರು ವಿ
ಸ್ತರಣವೆಂತೈ ಪಾರ್ಥ ಸತ್ಯದ
ಹುರುಳನರಿಯದೆ ಕಾಳುಗೆಡೆದರೆ ಕಾರ್ಯವೆಂತಹುದು
ಮರುಳೆ ಕೇಳದ್ಭುತವ ಹಿಂಸಾ
ಪರನಹರ್ನಿಶವಾ ದುರಾತ್ಮನ
ವರಿಸಿದರು ದೇವಾಂಗನೆಯರೀ ಕಥೆಯ ಕೇಳ್ ಎಂದ ॥17॥

೦೧೮ ಬನದೊಳೊಬ್ಬ ಬಳಾಕನೆಮ್ಬವ ...{Loading}...

ಬನದೊಳೊಬ್ಬ ಬಳಾಕನೆಂಬವ
ವನಚರನು ತನ್ನಯ ಕುಟುಂಬವ
ನನುದಿನವು ಮೃಗವಧೆಯಲೇ ಸಲಹಿದನು ಬೇಸರದೆ
ತನಗೆ ಕಡೆಪರಿಯಂತ ಮತ್ತೊಂ
ದನುವನರಿಯನು ರಾಗ ಲೋಭವ
ನೆನೆಯನದರಿಂ ಹಿಂಸೆ ಸಂದುದು ವೃತ್ತಿರೂಪದಲಿ ॥18॥

೦೧೯ ವರವವಙ್ಗೆ ಕುಟುಮ್ಬ ...{Loading}...

ವರವವಂಗೆ ಕುಟುಂಬ ರಕ್ಷಾ
ಕರಣ ಕಾರಣವಾದ ಹಿಂಸಾ
ಚರಣೆಯೆಂದೇ ಬರಹ ಧರ್ಮನ ಸೇನಬೋವನಲಿ
ಮರಣವಾತಂಗಾಗೆ ಕೊಂಡೊ
ಯ್ದರು ಸುರಾಂಗನೆಯರು ಧನಂಜಯ
ಪರಮ ಧರ್ಮರಹಸ್ಯವಾವಂಗರಿಯಬಹುದೆಂದ ॥19॥

೦೨೦ ಪಿತೃಸಮೋ ಭ್ರಾತಾ ...{Loading}...

ಪಿತೃಸಮೋ ಭ್ರಾತಾ ಎನಿಪ್ಪುದು
ಶ್ರುತಿವಚನವರಸಂಗೆ ನೀನುಪ
ಹತಿಯ ಮಾಡಲು ನೆನೆದೆ ಮಾತಿನ ವಾಸಿ ಬೇಕೆಂದು
ಕ್ಷಿತಿಯೊಳಬುಜ ಮೃಣಾಳಕೋಸುಗ
ಕೃತತಟಾಕವನೊಡೆದವೊಲು ಭೂ
ಪತಿ ವಧವ್ಯಾಪಾರ ನಿರ್ಮಳ ಧರ್ಮವಹುದೆಂದ ॥20॥

೦೨೧ ಗುರುಹತಿಯೆ ಕರ್ತವ್ಯ ...{Loading}...

ಗುರುಹತಿಯೆ ಕರ್ತವ್ಯ ತಾನಾ
ದರಿಸಿ ಮಾಡಿದ ಮಾತನೇ ಪತಿ
ಕರಿಸುವುದು ಶ್ರುತಿವಿಹಿತ ಧರ್ಮವಿದೆಂಬುದೀ ಲೋಕ
ಎರಡರಭ್ಯಂತರವ ನೀನೇ
ನರಿಯದವನೇ ವೇದಶಾಸ್ತ್ರದ
ವರ ನಿಧಾನಜ್ಞಾತೃವಲ್ಲಾ ಪಾರ್ಥ ನೀನೆಂದ ॥21॥

೦೨೨ ಈಸು ನಿರ್ದಯನೆಮ್ಬುದನು ...{Loading}...

ಈಸು ನಿರ್ದಯನೆಂಬುದನು ನಾ
ವೀಸು ದಿನವರಿಯೆವು ಮಹಾದೇ
ವೇಸು ಪರಿಯಂತಿದ್ದುದೋ ನಿನ್ನಂತರಂಗದಲಿ
ಏಸನೋದಿದಡೇನು ಪಾಪ ವಿ
ಳಾಸ ರಚನಾ ರೌರವಾತ್ಮರ
ವಾಸನೆಗಳವು ಬೇರೆ ಹರಹರ ಎಂದನಸುರಾರಿ ॥22॥

೦೨೩ ನನೆದುದನ್ತಃಕರಣ ಮಧುಸೂ ...{Loading}...

ನನೆದುದಂತಃಕರಣ ಮಧುಸೂ
ದನನ ಸೂಕ್ತಿ ಸುಧಾರಸದಿ ನೆರೆ
ನೆನೆದುದಾತನ ಮೈ ವಿಲೋಚನವಾರಿ ಪೂರದಲಿ
ಮನದ ಪರಿತಾಪ ವ್ಯಥಾ ದು
ರ್ಮನನು ಖಡ್ಗವನೊರೆಯೊಳೌಕುತ
ವಿನಯದಲಿ ಕೃಷ್ಣಂಗೆ ಬಿನ್ನಹ ಮಾಡಿದನು ಪಾರ್ಥ ॥23॥

೦೨೪ ನಾವು ನೆರೆ ...{Loading}...

ನಾವು ನೆರೆ ಸರ್ವಾಪರಾಧಿಗ
ಳಾವ ಗುಣದೋಷವನು ನಮ್ಮಲಿ
ಭಾವಿಸುವೆ ನಾವೆತ್ತ ಬಲ್ಲೆವು ಧರ್ಮನಿರ್ಣಯವ
ಆವ ಪರಿಯಲಿ ತನ್ನ ಸತ್ಯದ
ಠಾವು ನಿಲುವುದು ರಾಯನುಪಹತಿ
ಯಾವ ಪರಿಯಿಂದಾಗದಿಹುದದನರಿದು ಬೆಸಸೆಂದ ॥24॥

೦೨೫ ಭರತವಂಶದೊಳುದಿಸಿದೆಮ್ಮೈ ...{Loading}...

ಭರತವಂಶದೊಳುದಿಸಿದೆಮ್ಮೈ
ವರಿಗೆ ಇಹಲೋಕದ ನಿವಾಸಕೆ
ಪರದ ಸೌಖ್ಯಸ್ಥಿತಿಗೆ ಹೊಣೆ ನೀನಲ್ಲದೆಮಗಾರು
ದುರುಳರಾವನ್ವಯ ಮದದ ದು
ರ್ಧರ ಪರಾಕ್ರಮ ಮದದ ಘನಮ
ತ್ತರಿಗೆ ಕೃಪೆಮಾಡೆಂದು ಬಿನ್ನಹ ಮಾಡಿದನು ಪಾರ್ಥ ॥25॥

೦೨೬ ಕೊಲುವುದೇನೊನ್ದರಿದೆ ...{Loading}...

ಕೊಲುವುದೇನೊಂದರಿದೆ ಟಿಕ್ಕರಿ
ಗಳೆವುದೇ ಪರಹಿಂಸೆ ಲೋಗರ
ಹಳಿವುದೇ ವಧೆ ಶಸ್ತ್ರವಧೆ ವಧೆಯಲ್ಲ ನೋಡುವರೆ
ಖಳರ ದುಸ್ಸಹ ದುಷ್ಟವಚನದ
ಹಿಳುಕು ಹೃದಯವ ಕೊಂಡು ಮರುಮೊನೆ
ಮೊಳೆತ ಬಳಿಕವ ಬದುಕಿದವನೇ ಪಾರ್ಥ ಹೇಳೆಂದ ॥26॥

೦೨೭ ಅರಸಗುಪಹತಿಯೆನಿಸದೇ ನಿ ...{Loading}...

ಅರಸಗುಪಹತಿಯೆನಿಸದೇ ನಿ
ಷ್ಠುರ ದುರುಕ್ತಿ ಕೃಪಾಣದಲಿ ಸಂ
ಹರಿಸಿದರೆ ನಿರ್ವಾಹವಾಗದೆ ನಿನ್ನ ನುಡಿಗಳಿಗೆ
ಪರಮ ಋಷಿಮತವೆನೆ ಮುರಾರಿಯ
ಸಿರಿವಚನಕೆ ಹಸಾದವೆಂದು
ಬ್ಬರದ ಗರ್ವೋಕ್ತಿಯಲಿ ಗರುವಿಕೆಗೆಡಿಸಿದನು ನೃಪನ ॥27॥

೦೨೮ ಎಲೆ ಯುಧಿಷ್ಠಿರ ...{Loading}...

ಎಲೆ ಯುಧಿಷ್ಠಿರ ಜನಿಸಿದೈ ಶಶಿ
ಕುಲದ ವೀರ ಕ್ಷತ್ರ ಪಂತಿಯೊ
ಳೆಳಮನದ ಕಾಳಿಕೆಯ ತೊಡಹದ ಗಂಡು ರೂಪಿನಲಿ
ನೆಲನ ಕೊಂಡರು ನಿನ್ನ ಮೋರೆಯ
ಬಲುಹ ಕಂಡೇ ಕೌರವರು ನಿ
ನ್ನೊಳಗೆ ಬಲ್ಲಿದನೆನ್ನ ಭಂಗಿಸಲೇಕೆ ನೀನೆಂದ ॥28॥

೦೨೯ ನಿನ್ನ ಜೂಜಿನ ...{Loading}...

ನಿನ್ನ ಜೂಜಿನ ವಿಲಗದಲಿ ಸಂ
ಪನ್ನ ರಾಜ್ಯವ ಬಿಸುಟು ನಿನ್ನಯ
ಬೆನ್ನಲಡವಿಯಲಾಡಿದೆವು ಹನ್ನೆರಡು ವರ್ಷದಲಿ
ಮನ್ನಿಸಿದೆ ಲೇಸಾಗಿ ಕೌರವ
ರಿನ್ನು ಕೊಡುವರೆ ನಿನಗೆ ರಾಜ್ಯವ
ನಿನ್ನ ಹಿಡಿದೇ ಭೀಮ ಬದುಕಲಿ ಎಂದನಾ ಪಾರ್ಥ ॥29॥

೦೩೦ ರಣದ ಘಾರಾಘಾರಿಯಾರೋ ...{Loading}...

ರಣದ ಘಾರಾಘಾರಿಯಾರೋ
ಗಣೆಯ ಮನೆಯಲ್ಲರಸ ಶಿರದಲಿ
ಕುಣಿವಡಾಯ್ದಕೆ ಸುಳಿವ ಸುರಗಿಗೆ ತಿವಿವ ಬಲ್ಲೆಹಕೆ
ಹಣಿವ ಲೌಡಿಗೆ ಪಾಯ್ದು ಬೀಳುವ
ಕಣೆಗೆ ಖಂಡದ ರುಧಿರ ರಣದೌ
ತಣವ ರಚಿಸದೆ ಬರಿದೆ ರಾಜ್ಯವ ಕೊಂಬೆ ನೀನೆಂದ ॥30॥

೦೩೧ ಕರುಳ ಕಙ್ಕಣದಾರ ...{Loading}...

ಕರುಳ ಕಂಕಣದಾರ ಮಿದುಳಿನ
ಶಿರದ ಬಾಸಿಗ ಭುಜದ ವಕ್ಷದ
ಕರದ ಘಾಯದ ತೋಳ ಬಂದಿಯ ಪದಕ ಸರಪಣಿಯ
ಅರುಣಜಲ ಲುಳಿತಾಂಬರದ ಸಂ
ಗರ ವಿವಾಹದ ಭೂಷಣದ ಸೌಂ
ದರಿಯವಿಲ್ಲದೆ ರಾಜ್ಯಸಿರಿ ನಿನಗೊಲಿವಳಲ್ಲೆಂದ ॥31॥

೦೩೨ ಇನ್ದಿನಲಿ ಹದಿನೇಳು ...{Loading}...

ಇಂದಿನಲಿ ಹದಿನೇಳು ದಿನವಿ
ಲ್ಲಿಂದ ಹಿಂದಣ ಬವರದಲಿ ನೀ
ನೊಂದುದುಂಟೇ ದ್ರೋಣ ಭೀಷ್ಮರ ಕೋಲ ತೋಹಿನಲಿ
ಒಂದು ತೂರಂಬಿನಲಿ ಗಡ ನೀ
ನಿಂದು ಜೀವವ ಜಾರಿಸುವೆ ಸುಡ
ಲಿಂದುಕುಲ ಕಂಟಕರನಿರಿದರೆ ದೋಷವೇನೆಂದ ॥32॥

೦೩೩ ಎನುತಡಾಯ್ದವನೊರೆಯೊಳುಗಿದ ...{Loading}...

ಎನುತಡಾಯ್ದವನೊರೆಯೊಳುಗಿದ
ರ್ಜುನನು ತನ್ನಯ ಕೊರಳ ಸಂದಿಗೆ
ಮನದೊಳಗೆ ಖಯಖೋಡಿಯಿಲ್ಲದೆ ಚಾಚಿದನು ಬಳಿಕ
ದನುಜರಿಪುವಡಹಾಯ್ದು ಪಿಡಿದೀ
ತನ ಕೃಪಾಣವ ಕೊಂಡು ನಿನ್ನಯ
ನೆನಹಿದೇನೈ ಪಾರ್ಥ ಹೇಳೆನ್ನಾಣೆ ಹೇಳೆಂದ ॥33॥

೦೩೪ ಏನ ಹೇಳುವೆನಡ್ಡ ...{Loading}...

ಏನ ಹೇಳುವೆನಡ್ಡ ಹಾಯಿದು
ನೀನೆ ಕೆಡಿಸಿದೆಯೆಮ್ಮನಲ್ಲದ
ಡೇನ ಮಾಡೆನು ಸತ್ಯಶೌರ್ಯದ ಹಾನಿ ಹರಿಬದಲಿ
ಈ ನರೇಂದ್ರನ ಕೊಂದ ನನಗಿ
ನ್ನೇನು ದೇಹಕೆ ತಲೆಯೊಡನೆ ಸಂ
ಧಾನವೇ ಸಾಕೆನ್ನ ಕೈದುವನೆನಗೆ ನೀಡೆಂದ ॥34॥

೦೩೫ ಎಲವೊ ಖೂಳ ...{Loading}...

ಎಲವೊ ಖೂಳ ಕಿರೀಟಿ ಮತ್ತೆಯು
ತಿಳಿಯೆಲಾ ನೀನಾವ ಪರಿಯಲಿ
ಮುಳಿದು ರಾಯನನಿರಿದೆ ನಿನಗೆಯು ತದ್ವಿಧಾನದಲಿ
ಅಳಿವ ನೆನೆಯಾ ಸಾಕು ದೇಹವ
ನಳಿವುದೇ ಕೊಲೆಯಲ್ಲ ನಿನ್ನ
ಗ್ಗಳಿಕೆಗಳ ನೀನಾಡಿ ನಿನ್ನನೆ ಕೊಂದುಕೊಳ್ಳೆಂದ ॥35॥

೦೩೬ ಸನ್ದ ಪರಿಯಿದು ...{Loading}...

ಸಂದ ಪರಿಯಿದು ಜಗಕೆ ಲೋಗರ
ನಿಂದಿಸುವುದೇ ಹಿಂಸೆ ತನ್ನನೆ
ಕೊಂದವನು ತನ್ನಾಳುತನವನು ತಾನೆ ಹೊಗಳಿದರೆ
ಎಂದಡರ್ಜುನನವನಿಪಾಲಂ
ಗೆಂದನೆನಗಿದಿರಾಗಿ ರಣದಲಿ
ನಿಂದು ಕಾದುವನಾರು ದನುಜಾಮರರ ಥಟ್ಟಿನಲಿ ॥36॥

೦೩೭ ನಾನಲಾ ದ್ರೌಪದಿಯ ...{Loading}...

ನಾನಲಾ ದ್ರೌಪದಿಯ ಮದುವೆಯೊ
ಳಾ ನರೇಂದ್ರರ ಗೆಲಿದವನು ಬಳಿ
ಕಾ ನಿಳಿಂಪ ವ್ರಜವ ಮುರಿದುರುಪಿದೆನು ಖಾಂಡವವ
ಏನನೆಂಬೆನು ಸಕಲ ಕೌರವ
ಸೇನೆಯನು ಗೋಗ್ರಹಣದಲಿ ಸಲೆ
ನಾನಲೇ ರಥವೊಂದರಿಂದವೆ ಗೆಲಿದೆ ದಿಟವೆಂದ ॥37॥

೦೩೮ ಬಳಿಕ ಭೀಷ್ಮನನಾರು ...{Loading}...

ಬಳಿಕ ಭೀಷ್ಮನನಾರು ರಣದಲಿ
ಗೆಲಿದವನು ದ್ರೋಣ ಪ್ರತಾಪಾ
ನಳನ ನಂದಿಸಿದಾತನಾರು ಮಹಾಹವಾಗ್ರದಲಿ
ಮಲೆತು ನಿಂದರೆ ಸೂತತನಯನ
ಕೊಲುವನಾವನು ಎನ್ನ ಟಿಕ್ಕರಿ
ಗಳೆವೆ ನೀನೆನ್ನೊಡನೆ ಸೆಣಸುವ ಭಟನ ತೋರೆಂದ ॥38॥

೦೩೯ ಉಣ್ಟು ಫಲುಗುಣ ...{Loading}...

ಉಂಟು ಫಲುಗುಣ ನಿನ್ನ ಹೋಲಿಸ
ಲುಂಟೆ ಸುಭಟರು ದೇವ ದೈತ್ಯರೊ
ಳೆಂಟು ಮಡಿ ನಾವರಿಯವೇ ಕೈವಾರವೇನದಕೆ
ಕಂಟಣಿಸದಿರು ಕೃಷ್ಣನಿಕ್ಕಿದ
ಗಂಟಿನಲಿ ಸಿಲುಕದಿರು ತನ್ನಯ
ಗಂಟಲಿದೆ ಶಸ್ತ್ರೌಘವಿದೆ ನೀ ಬೇಗ ಮಾಡೆಂದ ॥39॥

೦೪೦ ಭರತ ಕುಲದಲಿ ...{Loading}...

ಭರತ ಕುಲದಲಿ ಭಾಗಧೇಯ
ಸ್ಫುರಣ ಹೀನರನೆಮ್ಮನುರೆ ಧಿ
ಕ್ಕರಿಸಿದಾದಡೆ ಮುನಿದು ಮಾಡುವದೇನು ವಿಧಿಯೊಡನೆ
ಅರಿನೃಪಾಲರ ಗೆಲಿದು ವಿಶ್ವಂ
ಭರೆಯ ಕೊಂಡರೆ ಭೀಮಸೇನನ
ನರಸುತನದಲಿ ನಿಲಿಸು ಸುಖದಲಿ ಬದುಕಿ ನೀವೆಂದ ॥40॥

೦೪೧ ಇರಿದು ಮೆರೆವ ...{Loading}...

ಇರಿದು ಮೆರೆವ ವಿನೋದ ವಿಗ್ರಹ
ದಿರಿತವೇ ಹಿಂದಾಯ್ತು ಹರಹಿನೊ
ಳುರುವ ಫಲಿತದ ಬೀಡು ಬಿಟ್ಟುದು ನಮ್ಮ ತನುವಿನಲಿ
ಇರಿದ ಕರ್ಣನೆ ಸಾಲದೇ ಪೆಣ
ನಿರಿದು ಪಗೆಯೇಕೆಂಬ ಮಾತನು
ಮರೆದು ಕಳೆದೈ ತಮ್ಮ ಎಂದವನೀಶ ಬಿಸುಸುಯ್ದ ॥41॥

೦೪೨ ನಿನ್ನ ಜನನಿಯ ...{Loading}...

ನಿನ್ನ ಜನನಿಯ ಜಠರದಲಿ ತಾ
ಮುನ್ನ ಜನಿಸಿದೆನೀ ಗುರುತ್ವಕೆ
ಮನ್ನಿಸಿದೆ ಸಾಕೈಸಲೇ ಸರ್ವಾಪರಾಧವನು
ಎನ್ನನೊಬ್ಬನನುಳಿಯಲುಳಿದರ
ಭಿನ್ನ ಸಾಹೋದರ್ಯ ಸಂಪ್ರತಿ
ಪನ್ನಗುಣರವರೊಡನೆ ಸುಖದಲಿ ರಾಜ್ಯ ಮಾಡೆಂದ ॥42॥

೦೪೩ ಸೇರುವುದು ಭೀಮನಲಿ ...{Loading}...

ಸೇರುವುದು ಭೀಮನಲಿ ಸಾಹಂ
ಕಾರನಾತನ ಕೊಂಡು ನಡೆವುದು
ಕಾರಣಿಕ ನೀನಾದಡೀ ಸಹದೇವ ನಕುಲರನು
ಆರಯಿದು ಸಲಹುವುದು ದ್ರುಪದ ಕು
ಮಾರಿಯನು ಬೇಸರಿಸದೀ ಪರಿ
ವಾರವನು ಮನ್ನಿಸುವುದರ್ಜುನದೇವ ಕೇಳ್ ಎಂದ ॥43॥

೦೪೪ ಎನುತ ನಯನೋದಕದ ...{Loading}...

ಎನುತ ನಯನೋದಕದ ಸರಿಯಲಿ
ನನೆದವಲ್ಲಿಯ ಬಾಹುಮೂಲದ
ಕನಕದೊರೆಯ ಕಠಾರಿಯವನಿಪನೆದ್ದು ಸಂವರಿಸಿ
ಮನದ ದುಗುಡದ ದಡಿಯ ಮೋರೆಯ
ತನಿಹೊಗರ ಬಿಸುಸುಯ್ಲ ತವಕದ
ಬನದ ಪಯಣದ ಧರ್ಮಸುತ ಹೊರವಂಟನರಮನೆಯ ॥44॥

೦೪೫ ರಾಯನಪರೋಕ್ಷದಲಿ ರಾಜ್ಯ ...{Loading}...

ರಾಯನಪರೋಕ್ಷದಲಿ ರಾಜ್ಯ
ಶ್ರೀಯ ಬೇಟವೆ ಶಿವ ಶಿವಾದಡೆ
ತಾಯ ನುಡಿ ತೊದಳಾಯ್ತೆ ತಮತಮ್ಮಂತರಂಗದಲಿ
ಆಯಿತಿದು ಲೇಸೆನುತ ತಮ ತ
ಮ್ಮಾಯುಧಂಗಳ ಕೊಂಡು ವರ ಮಾ
ದ್ರೇಯರರಸನ ಕೂಡೆ ಹೊರವಂಟರು ನೃಪಾಲಯವ ॥45॥

೦೪೬ ಕೊರಳನೊಲೆದಳು ಬಾಪು ...{Loading}...

ಕೊರಳನೊಲೆದಳು ಬಾಪು ದೈವದ
ಪರುಠವಣೆ ದುಶ್ಯಾಸನನ ನೆ
ತ್ತರಿನ ವೇಣೀಬಂಧಕಘಟಿತವಾಯ್ತು ಸಂಬಂಧ
ತರಣಿ ಬಿಜಯಂಗೈದರಬುಜದ
ಸಿರಿಗೆ ಸುಮ್ಮಾನವೆ ಎನುತ ಪಂ
ಕರುಹಮುಖಿ ಸಖಿಯರು ಸಹಿತ ಹೊರವಂಟಳರಮನೆಯ ॥46॥

೦೪೭ ಸದನವನು ತಮತಮಗೆ ...{Loading}...

ಸದನವನು ತಮತಮಗೆ ಹೊರವಂ
ಟುದು ನೃಪಾಲಸ್ತೋಮ ದುಮ್ಮಾ
ನದಲಿ ಧೃಷ್ಟದ್ಯುಮ್ನ ಸಾತ್ಯಕಿ ಚೇಕಿತಾನಕರು
ಕದಡಿತಾ ಪರಿವಾರ ವಾರಿಧಿ
ಕೆದರಿ ಹೊರವಂಟುದು ಕಿರೀಟಿಯ
ಹೃದಯ ಹೊಗೆದುದು ಹೊತ್ತಿದನುಪಮ ಶೋಕವಹ್ನಿಯಲಿ ॥47॥

೦೪೮ ಮೂಗನಾದನು ಪಾರ್ಥ ...{Loading}...

ಮೂಗನಾದನು ಪಾರ್ಥ ನೃಪ ಚಿಂ
ತಾಗಮದೊಳಳ್ಳಿರಿವ ಶೋಕದ
ಸಾಗರವನೀಸಾಡಿ ತೆರೆಗಳ ಹೊಯ್ಲ ಹೊದರಿನಲಿ
ಆ ಗರುವನಡಿಗದ್ದು ಮೂಡಿದ
ನಾಗಳೇ ತಡಿಗಡರಿ ಬಳಲಿದು
ತಾಗಿದನು ನೆರೆ ತಳ್ಳವಾರುತ ಪಾರ್ಥ ಹೊರವಂಟ ॥48॥

೦೪೯ ಹರಿದು ಬೀದಿಯೊಳವನಿಪಾಲನ ...{Loading}...

ಹರಿದು ಬೀದಿಯೊಳವನಿಪಾಲನ
ಚರಣದಗ್ರದೊಳೊಡಲ ಹಾಯಿಕಿ
ಹೊರಳಿದನು ಹೊನಲಿಡುವ ಲೋಚನವಾರಿ ಪೂರದಲಿ
ಧರಣಿಪತಿಯೆ ದುರಾತ್ಮಕನನು
ದ್ಧರಿಸಬೇಹುದು ಜೀಯ ಕರುಣಾ
ಕರನಲಾ ನೀನೆನುತ ಪಿಡಿದನು ಭೂಪನಂಘ್ರಿಗಳ ॥49॥

೦೫೦ ಮಾಡಿದೆನ್ನಪರಾಧಶತವನು ...{Loading}...

ಮಾಡಿದೆನ್ನಪರಾಧಶತವನು
ನೋಡಲಾಗದು ಕರುಣದಲಿ ನೀ
ಖೋಡಿಯನು ಬಿಡು ಚಿತ್ತಗೊಡದಿರು ಖತಿಯ ಘಲ್ಲಣೆಗೆ
ನೋಡುವುದು ಕಾರುಣ್ಯದೃಷ್ಟಿಯೊ
ಳೀಡಿರಿವ ಘನ ಶೋಕವಹ್ನಿಗೆ
ಖೇಡನಾದೆನು ಜೀಯೆನುತ ಹಲುಬಿದನು ಕಲಿಪಾರ್ಥ ॥50॥

೦೫೧ ಏಳು ತನ್ದೆ ...{Loading}...

ಏಳು ತಂದೆ ಕಿರೀಟಿ ತನ್ನಾ
ಣೇಳು ಸಾಕೀ ಹವಣಿನಲಿ ಮು
ನ್ನಾಳಿಕೆಯ ಕಾಂತಾರ ರಾಜ್ಯದ ಸಿರಿಯೆ ಸಾಕೆಮಗೆ
ಬಾಲಕರು ನೀವ್ ಮೇಲಣದು ದು
ಷ್ಕಾಲವೀ ಸಾಮ್ರಾಜ್ಯ ಭೋಗ
ವ್ಯಾಳ ವಿಷಕಂಜುವೆನು ಪಾಂಡುವಿನಾಣೆ ಸಾರೆಂದ ॥51॥

೦೫೨ ಹಿಙ್ಗದಿನ್ನೂ ದ್ವಾಪರದ ...{Loading}...

ಹಿಂಗದಿನ್ನೂ ದ್ವಾಪರದ ಸ
ರ್ವಾಂಗವೀ ದ್ವಾಪರದ ಸೀಮಾ
ಸಂಗದಲಿ ಸಿಗುರೆದ್ದ ಕಲಿಕೆಯ ಸೊಗಡ ಸೋಹಿನಲಿ
ಸಂಗಡಿಸಿತಧರೋತ್ತರದ ಸಮ
ರಂಗವೀ ಹದನರಿದು ರಾಜ್ಯಾ
ಸಂಗ ಸುಗತಿವ್ಯರ್ಥನಹೆನೇ ಪಾರ್ಥ ಹೇಳೆಂದ ॥52॥

೦೫೩ ಸಾಕು ಪಾರ್ಥನ ...{Loading}...

ಸಾಕು ಪಾರ್ಥನ ಬಿನ್ನಹವ ಕೆಡೆ
ನೂಕದಿರು ನೆಳಲಿಂಗೆ ಬೇರೆ ವಿ
ವೇಕ ಚೇಷ್ಟೆಗಳೇ ಸಹೋದರರೀ ಚತುಷ್ಟಯಕೆ
ಈ ಕಮಲಮುಖಿಯರಿಗೆ ನಿನ್ನಾ
ಲೋಕವಲ್ಲದೆ ಬೇರೆ ಕಾರ್ಯ
ವ್ಯಾಕುಳತೆ ಬೇಡೆಂದು ಮುರರಿಪು ತಿರುಹಿದನು ನೃಪನ ॥53॥

+೧೭ ...{Loading}...