೦೦೦ ಸೂ ರಾಯರಿಪುಭಟಗಿರಿನಿವಹ ...{Loading}...
ಸೂ. ರಾಯರಿಪುಭಟಗಿರಿನಿವಹ ವ
ಜ್ರಾಯುಧನು ಕಲಿ ಪಾರ್ಥನಂಭೋ
ಜಾಯತಾಂಬಕ ಸಹಿತ ಕಂಡನು ಧರ್ಮನಂದನನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಶತ್ರುರಾಜ ಸೈನ್ಯವೆಂಬ ಬೆಟ್ಟಗಳ ಸಮೂಹಕ್ಕೆ ವಜ್ರಾಯುಧನಾದ ವೀರ ಅರ್ಜುನನು ಕಮಲನೇತ್ರನಾದ ಕೃಷ್ಣನ ಜೊತೆಯಲ್ಲಿ ಹೋಗಿ ಧರ್ಮರಾಯನನ್ನು ನೋಡಿದನು.
ಮೂಲ ...{Loading}...
ಸೂ. ರಾಯರಿಪುಭಟಗಿರಿನಿವಹ ವ
ಜ್ರಾಯುಧನು ಕಲಿ ಪಾರ್ಥನಂಭೋ
ಜಾಯತಾಂಬಕ ಸಹಿತ ಕಂಡನು ಧರ್ಮನಂದನನ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ಬಲು
ಗಾಳೆಗವ ಭೀಮಂಗೆ ಸೇರಿಸಿ
ಪಾಳೆಯಕೆ ತಿರುಗಿದರು ಕೃಷ್ಣಾರ್ಜುನರು ದುಗುಡದಲಿ
ಹೇಳು ಮುರಹರ ಬುದ್ಧಿ ಕದಡಿ ಛ
ಡಾಳಿಸಿತು ಪರಿಭೇೊಸಗೆಯ
ಕೇಳಲರಿಯೆನು ರಾಜವಾರ್ತೆಯನೆಂದನಾ ಪಾರ್ಥ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ ಕೇಳು, ಕೌರವರೊಡನೆ ಬಲವಾಗಿ ಯುದ್ಧ ಮಾಡಲು ಭೀಮನನ್ನು ಬಿಟ್ಟು ಕೃಷ್ಣ ಅರ್ಜುನರಿಬ್ಬರೂ ದುಃಖದಿಂದ ಪಾಳೆಯಕ್ಕೆ ಹಿಂತಿರುಗಿದರು.” ಎಂದು ಸಂಜಯನು ಹೇಳಿದನು. ಅರ್ಜುನನು “ಕೃಷ್ಣ, ಹೇಳು, ನನ್ನ ಬುದ್ದಿ ಕದಡಿ ಉದ್ವಿಗ್ನಗೊಂಡಿದೆ. ಧರ್ಮರಾಯನ ಕುರಿತಾದ ಒಳ್ಳೆಯ ಸುದ್ದಿಯನ್ನು ಕೇಳಲಾಗಿಲ್ಲ É” ಎಂದನು.
ಪದಾರ್ಥ (ಕ.ಗ.ಪ)
ಛಡಾಳಿಸು-ಉದ್ವಿಗ್ನಗೊಳಿಸು
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ಬಲು
ಗಾಳೆಗವ ಭೀಮಂಗೆ ಸೇರಿಸಿ
ಪಾಳೆಯಕೆ ತಿರುಗಿದರು ಕೃಷ್ಣಾರ್ಜುನರು ದುಗುಡದಲಿ
ಹೇಳು ಮುರಹರ ಬುದ್ಧಿ ಕದಡಿ ಛ
ಡಾಳಿಸಿತು ಪರಿಭೇೊಸಗೆಯ
ಕೇಳಲರಿಯೆನು ರಾಜವಾರ್ತೆಯನೆಂದನಾ ಪಾರ್ಥ ॥1॥
೦೦೨ ನೋಡುವೆವು ನಡೆ ...{Loading}...
ನೋಡುವೆವು ನಡೆ ಧರ್ಮಪುತ್ರನ
ಕೇಡು ಕಲಿಯುಗ ಬೀಜವೀ ಪರಿ
ಕೂಡದೀ ಹೊತ್ತಿನಲಿ ಧರ್ಮಸ್ಥಿತಿಗೆ ಲಯವಿಲ್ಲ
ಖೇಡನಾಗದಿರಿದಕೆ ಚಿಂತಿಸ
ಬೇಡೆನುತ ಫಲುಗುಣನ ಚಿತ್ತದ
ಪಾಡರಿದು ನುಡಿವುತ್ತ ತಂದನು ಪಾಳೆಯಕೆ ರಥವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು “ನೋಡೋಣ ನಡೆ, ಧರ್ಮರಾಯನಿಗೆ ಆಪತ್ತು ಒದಗಿದರೆ, ಅದೇ ಕಲಿಯುಗದ ಆರಂಭ. ಆದರೆ ಇನ್ನೂ ಆ ಕಾಲ ಬಂದಿಲ್ಲ. ಧರ್ಮದ ಸ್ಥಿತಿ ಇನ್ನೂ ಹಾಳಾಗಿಲ್ಲ. ಭಯಪಡಬೇಡ. ಅದಕ್ಕಾಗಿ ಚಿಂತಿಸಬೇಡ” ಎಂದು ಹೇಳುತ್ತಾ ಅರ್ಜುನನ ಮನಃಸ್ಥಿತಿಯನ್ನು ತಿಳಿದು ಮಾತನಾಡಿಸುತ್ತ ರಥವನ್ನು ಪಾಳೆಯಕ್ಕೆ ತಂದನು.
ಪದಾರ್ಥ (ಕ.ಗ.ಪ)
ಖೇಡ-ಭಯ
ಮೂಲ ...{Loading}...
ನೋಡುವೆವು ನಡೆ ಧರ್ಮಪುತ್ರನ
ಕೇಡು ಕಲಿಯುಗ ಬೀಜವೀ ಪರಿ
ಕೂಡದೀ ಹೊತ್ತಿನಲಿ ಧರ್ಮಸ್ಥಿತಿಗೆ ಲಯವಿಲ್ಲ
ಖೇಡನಾಗದಿರಿದಕೆ ಚಿಂತಿಸ
ಬೇಡೆನುತ ಫಲುಗುಣನ ಚಿತ್ತದ
ಪಾಡರಿದು ನುಡಿವುತ್ತ ತಂದನು ಪಾಳೆಯಕೆ ರಥವ ॥2॥
೦೦೩ ಬರಲು ಪಾರ್ಥನ ...{Loading}...
ಬರಲು ಪಾರ್ಥನ ಕಂಡು ಪುರಜನ
ಹರೆದುದಲ್ಲಿಯದಲ್ಲಿ ದುಗುಡದ
ಭರದ ಗುಜುಗುಜು ಗೋಷ್ಠಿಗಳ ಜನಜನದ ಮುಸುಕುಗಳ
ಮುರಿದ ನೀಹಾರದ ವಿಹಾರದ
ಸರಸಿರುಹವನದಂತೆ ಪಾಳೆಯ
ದಿರವು ಲೇಸಲ್ಲೆನುತ ಬಂದನು ರಾಜಮಂದಿರಕೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಬರುತ್ತಿದ್ದುನ್ನು ನೋಡಿ, ನಿಂತಿದ್ದ ಜನಸಂದಣಿ ಕರಗಿತು. ಅಲ್ಲಲ್ಲೇ ಗುಂಪು ಸೇರಿದ್ದ ಜನಗಳು ದುಃಖದ ಭಾರದಿಂದ, ಜೋರಾಗಿ ಕೇಳಿಸದಂತೆ ಗುಜುಗುಜು ಮಾತನಾಡಿಕೊಂಡರು. “ಇಬ್ಬನಿಯಿಂದ ಆವೃತವಾದ ವಿಹಾರ ಸ್ಥಳದ ಕಮಲ ಸರೋವರದಂತೆ ಮಂಕಾಗಿ ಕಾಣಿಸುತ್ತಿದ್ದ ಪಾಳೆಯ ಇದ್ದ ರೀತಿ ಏಕೋ ಸರಿಯಲ್ಲ” ಎನ್ನುತ್ತ ಅರ್ಜುನನು ರಾಜ ಮಂದಿರಕ್ಕೆ ಬಂದನು.
ಪದಾರ್ಥ (ಕ.ಗ.ಪ)
ನೀಹಾರ-ಇಬ್ಬನಿ
ಮೂಲ ...{Loading}...
ಬರಲು ಪಾರ್ಥನ ಕಂಡು ಪುರಜನ
ಹರೆದುದಲ್ಲಿಯದಲ್ಲಿ ದುಗುಡದ
ಭರದ ಗುಜುಗುಜು ಗೋಷ್ಠಿಗಳ ಜನಜನದ ಮುಸುಕುಗಳ
ಮುರಿದ ನೀಹಾರದ ವಿಹಾರದ
ಸರಸಿರುಹವನದಂತೆ ಪಾಳೆಯ
ದಿರವು ಲೇಸಲ್ಲೆನುತ ಬಂದನು ರಾಜಮಂದಿರಕೆ ॥3॥
೦೦೪ ಕಳಚಿದನು ಸೀಸಕವ ...{Loading}...
ಕಳಚಿದನು ಸೀಸಕವ ಬೆಂಬ
ತ್ತಳಿಕೆಯನು ವಜ್ರಾಂಗಿ ಮೊಚ್ಚೆಯ
ಬಿಲು ಸರಳನಿಳುಹಿದನು ರಥದಲಿ ದೈತ್ಯರಿಪು ಸಹಿತ
ಇಳಿದು ರಥವನು ರಣದ ಭಾರಿಯ
ಬಳಲಿಕೆಯ ಕೈಕೊಳ್ಳದರಸನ
ನಿಳಯವನು ಹೊಕ್ಕನು ಧನಂಜಯ ಕಂಡನವನಿಪನ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೀಸಕ, ಬೆನ್ನಿನ ಬತ್ತಳಿಕೆ, ವಜ್ರಾಂಗಿ, ಚಪ್ಪಲಿ, ಬಿಲ್ಲು, ಬಾಣಗಳನ್ನು ರಥದಲ್ಲಿಯೇ ಇಟ್ಟು ಅರ್ಜುನನು ಕೃಷ್ಣನ ಜೊತೆಯಲ್ಲಿ ರಥದಿಂದ ಇಳಿದು, ಯುದ್ಧದ ಭಾರಿ ಆಯಾಸವನ್ನು ಗಣಿಸದೆ, ಧರ್ಮರಾಯನ ಬಿಡಾರವನ್ನು ಪ್ರವೇಶಿಸಿ, ಅರಸನನ್ನು ಕಂಡನು.
ಪದಾರ್ಥ (ಕ.ಗ.ಪ)
ವಜ್ರಾಂಗಿ - ವಜ್ರ ಕವಚ
ಮೂಲ ...{Loading}...
ಕಳಚಿದನು ಸೀಸಕವ ಬೆಂಬ
ತ್ತಳಿಕೆಯನು ವಜ್ರಾಂಗಿ ಮೊಚ್ಚೆಯ
ಬಿಲು ಸರಳನಿಳುಹಿದನು ರಥದಲಿ ದೈತ್ಯರಿಪು ಸಹಿತ
ಇಳಿದು ರಥವನು ರಣದ ಭಾರಿಯ
ಬಳಲಿಕೆಯ ಕೈಕೊಳ್ಳದರಸನ
ನಿಳಯವನು ಹೊಕ್ಕನು ಧನಂಜಯ ಕಂಡನವನಿಪನ ॥4॥
೦೦೫ ಝೊಮ್ಪಿಸುವ ಸಿರಿಮೊಗದ ...{Loading}...
ಝೊಂಪಿಸುವ ಸಿರಿಮೊಗದ ನೋಟದ
ಸೊಂಪಡಗಿದಾಲಿಗಳ ಧೈರ್ಯದ
ಗುಂಪಳಿದ ನಿಜ ರಾಜತೇಜದ ವಿಪುಳ ವೇದನೆಯ
ಬಿಂಪಗಿವ ಬೇಸರಿನ ತುರುಗಿದ
ತಂಪಿನಗ್ಗಳಿಕೆಯ ವಿಘಾತಿಯ
ಝೊಂಪಿನಲಿ ಹುದುಗಿದ ಮಹೀಶನ ಕಂಡನಾ ಪಾರ್ಥ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಸಿರಿಮೊಗ ಮಂಕಾಗಿತ್ತು, ಕಣ್ಣಾಲಿಗಳ ನೋಟದಲ್ಲಿ ಶಕ್ತಿಯೇ ಇರಲಿಲ್ಲ, ಧೈರ್ಯ ನಾಶವಾಗಿತ್ತು, ರಾಜತೇಜಸ್ಸು ಮಾಯವಾಗಿತ್ತು, ಅಸಾಧ್ಯ ವೇದನೆ ಕಾಣಿಸುತ್ತಿತ್ತು, ಗಾಂಭೀರ್ಯವನ್ನು ಕುಂದಿಸಿದ ಬೇಸರ ಮನೆಮಾಡಿತ್ತು. ಶ್ರೇಷ್ಠತೆ ತಣ್ಣಗಾಗಿತ್ತು - ಹೀಗೆ ದುಃಖದಲ್ಲಿ ಮುಳುಗಿದ್ದ ದೊರೆಯನ್ನು ಅರ್ಜುನನು ನೋಡಿದ.
ಪದಾರ್ಥ (ಕ.ಗ.ಪ)
ಬಿಂಪು-ಬಿಣ್ಪು, - ಗಾಂಭೀರ್ಯ
ಮೂಲ ...{Loading}...
ಝೊಂಪಿಸುವ ಸಿರಿಮೊಗದ ನೋಟದ
ಸೊಂಪಡಗಿದಾಲಿಗಳ ಧೈರ್ಯದ
ಗುಂಪಳಿದ ನಿಜ ರಾಜತೇಜದ ವಿಪುಳ ವೇದನೆಯ
ಬಿಂಪಗಿವ ಬೇಸರಿನ ತುರುಗಿದ
ತಂಪಿನಗ್ಗಳಿಕೆಯ ವಿಘಾತಿಯ
ಝೊಂಪಿನಲಿ ಹುದುಗಿದ ಮಹೀಶನ ಕಂಡನಾ ಪಾರ್ಥ ॥5॥
೦೦೬ ಬಿಗಿದು ಕಟ್ಟಿದ ...{Loading}...
ಬಿಗಿದು ಕಟ್ಟಿದ ಘಾಯ ಮದ್ದಿನ
ಜಿಗಿಯ ತೈಲದ ತಳಿತ ಲೇಪದ
ಲುಗಿದ ಬಾಣವ್ಯಥೆಯ ಕರ್ಣಧ್ಯಾನಚೇತನದ
ಸೊಗಸು ಮಿಗೆ ದ್ರೌಪದಿಯ ತುದಿವೆರ
ಳುಗುರುವೆರಸಿದ ಸಿರಿಮುಡಿಯ ಬಲು
ದುಗುಡ ಭರದಲಿ ಕುಸಿದ ಭೂಪನ ಕಂಡನಾ ಪಾರ್ಥ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಗಾಯಗಳಿಗೆ ಔಷಧಿಯನ್ನು ಬಳಿದು, ಎಣ್ಣೆಯನ್ನು ಲೇಪಿಸಲಾಗಿತ್ತು. ಚುಚ್ಚಿದ ಬಾಣಗಳಿಂದ ನೋವು ಹಾಗೂ ಅದು ಕರ್ಣನಿಂದ ಆದದ್ದು ಅವನನ್ನು ಕೊರೆಯುತ್ತಿತ್ತು. ದ್ರೌಪದಿಯು ಧರ್ಮರಾಯನ ತಲೆಗೂದಲನ್ನು ತನ್ನ ತುದಿ ಬೆರಳಿನಿಂದ ಸವರುತ್ತಿದ್ದಳು. ಹೀಗೆ ದುಃಖದ ಭಾರದಲ್ಲಿ ಕುಸಿದು ಕುಳಿತಿದ್ದ ಧರ್ಮರಾಯನನ್ನು ಅರ್ಜುನನು ನೋಡಿದನು.
ಪದಾರ್ಥ (ಕ.ಗ.ಪ)
ಜಿಗಿ-ಲೇಪನ
ಮೂಲ ...{Loading}...
ಬಿಗಿದು ಕಟ್ಟಿದ ಘಾಯ ಮದ್ದಿನ
ಜಿಗಿಯ ತೈಲದ ತಳಿತ ಲೇಪದ
ಲುಗಿದ ಬಾಣವ್ಯಥೆಯ ಕರ್ಣಧ್ಯಾನಚೇತನದ
ಸೊಗಸು ಮಿಗೆ ದ್ರೌಪದಿಯ ತುದಿವೆರ
ಳುಗುರುವೆರಸಿದ ಸಿರಿಮುಡಿಯ ಬಲು
ದುಗುಡ ಭರದಲಿ ಕುಸಿದ ಭೂಪನ ಕಂಡನಾ ಪಾರ್ಥ ॥6॥
೦೦೭ ನಕುಳ ಧೃಷ್ಟದ್ಯುಮ್ನ ...{Loading}...
ನಕುಳ ಧೃಷ್ಟದ್ಯುಮ್ನ ಸಹದೇ
ವಕ ಯುಧಾಮನ್ಯುಕನು ಸುತಸೋ
ಮಕ ಶತಾನೀಕ ಪ್ರಬುದ್ಧಕ ಚೇಕಿತಾನಕರು
ಸಕಲ ಕೈಕೆಯ ಮತ್ಸ್ಯಸುತ ಸಾ
ತ್ಯಕಿ ಯುಯುತ್ಸು ಶಿಖಂಡಿ ಪ್ರತಿವಿಂ
ದ್ಯಕರು ಪಾರ್ಥನನುಪಚರಿಸಿ ಕುಳ್ಳಿರ್ದರಲ್ಲಲ್ಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಕುಲ, ಧೃಷ್ಟದ್ಯುಮ್ನ, ಸಹದೇವ, ಯುಧಾಮನ್ಯು, ಸುತಸೋಮ, ಶತಾನೀಕ, ಪ್ರಬುದ್ಧ, ಚೇಕಿತಾನ, ಕೈಕೆಯ, ವಿರಾಟನ ಮಗ, ಸಾತ್ಯಕಿ, ಯುಯುತ್ಸು, ಶಿಖಂಡಿ, ಪ್ರತಿವಿಂಧ್ಯ ಮೊದಲಾದವರು ಅರ್ಜುನನನ್ನು ಉಪಚರಿಸಿ, ಅಲ್ಲಲ್ಲಿ ಕುಳಿತುಕೊಂಡಿದ್ದರು.
ಮೂಲ ...{Loading}...
ನಕುಳ ಧೃಷ್ಟದ್ಯುಮ್ನ ಸಹದೇ
ವಕ ಯುಧಾಮನ್ಯುಕನು ಸುತಸೋ
ಮಕ ಶತಾನೀಕ ಪ್ರಬುದ್ಧಕ ಚೇಕಿತಾನಕರು
ಸಕಲ ಕೈಕೆಯ ಮತ್ಸ್ಯಸುತ ಸಾ
ತ್ಯಕಿ ಯುಯುತ್ಸು ಶಿಖಂಡಿ ಪ್ರತಿವಿಂ
ದ್ಯಕರು ಪಾರ್ಥನನುಪಚರಿಸಿ ಕುಳ್ಳಿರ್ದರಲ್ಲಲ್ಲಿ ॥7॥
೦೦೮ ಕರಗಿತನ್ತಃಕರಣವಾಲಿಗ ...{Loading}...
ಕರಗಿತಂತಃಕರಣವಾಲಿಗ
ಳೊರತೆಯೆನೆ ಕಣ್ಣಾಲಿಯಲಿ ಕಾ
ತರಿಸಿದವು ಜಲಬಿಂದುಗಳು ಪುರುಹೂತ ನಂದನನ
ಅರಸನಿರವಿದೆಯೆನುತ ನೊಸಲನು
ಚರಣದಲಿ ಚಾಚಿದನು ಚೇಷ್ಟಾ
ಪರಿಗತಿಯನಾರೈವುತಭಿಮುಖನಾಗಿ ಕುಳ್ಳಿರ್ದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದ್ರನ ಮಗನಾದ ಅರ್ಜುನನ ಮನಸ್ಸು ಕರಗಿಹೋಯಿತು. ನೀರಿನ ಒರತೆಯಂತೆ ಕಣ್ಣಾಲಿಗಳು ನೀರಿನ ಹನಿಗಳನ್ನು ಹೊರಚಿಮ್ಮಿದವು. ದೊರೆಗೆ ಏನು ಗತಿ ಬಂತು ಎಂದು ಹೇಳಿಕೊಳ್ಳುತ್ತ ಧರ್ಮರಾಯನ ಕಾಲುಗಳ ಮೇಲೆ ತನ್ನ ಹಣೆಯನ್ನಿರಿಸಿ ನಮಸ್ಕರಿಸಿದನು. ಧರ್ಮರಾಯನು ಏಳುವುದನ್ನೇ ನಿರೀಕ್ಷಿಸುತ್ತಾ, ಅರ್ಜುನನು ಅವನ ಎದುರುಗಡೆ ಕುಳಿತುಕೊಂಡಿದ್ದನು.
ಮೂಲ ...{Loading}...
ಕರಗಿತಂತಃಕರಣವಾಲಿಗ
ಳೊರತೆಯೆನೆ ಕಣ್ಣಾಲಿಯಲಿ ಕಾ
ತರಿಸಿದವು ಜಲಬಿಂದುಗಳು ಪುರುಹೂತ ನಂದನನ
ಅರಸನಿರವಿದೆಯೆನುತ ನೊಸಲನು
ಚರಣದಲಿ ಚಾಚಿದನು ಚೇಷ್ಟಾ
ಪರಿಗತಿಯನಾರೈವುತಭಿಮುಖನಾಗಿ ಕುಳ್ಳಿರ್ದ ॥8॥
೦೦೯ ನೊನ್ದೆಲಾ ನರನಾಥ ...{Loading}...
ನೊಂದೆಲಾ ನರನಾಥ ವಿಧಿಯೇ
ನೆಂದು ಮುನಿದುದೊ ನಿನಗೆನುತ್ತ ಮು
ಕುಂದನತಿ ಕಾರುಣ್ಯ ದೃಷ್ಟಿಯಲವನಿಪನ ನೋಡಿ
ಮಂದಮಂದದಿ ಪಾಣಿ ಪಲ್ಲವ
ದಿಂದ ತಡವಿದನೇರನಾಗಳೆ
ಕಂದೆರೆದು ನೋಡಿದನು ಭೂಪತಿ ಕೃಷ್ಣ ಫಲುಗುಣರ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರುಣೆಯಿಂದ ನೋಡುತ್ತಾ, ‘ನೊಂದೆಯಾ ದೊರೆಯೇ, ನಿನಗೆ ವಿಧಿ ಏಕೆ ಕೋಪಮಾಡಿಕೊಂಡಿತೊ, ಎಂದು ಹೇಳುತ್ತಾ. ಕೃಷ್ಣನು ಧರ್ಮರಾಯನ ಗಾಯಗಳನ್ನು ತನ್ನ ಮೃದುವಾದ ಕೈಗಳಿಂದ ನಿಧಾನವಾಗಿ ಸವರಿದನು. ಆಗ ಕಣ್ಣು ತೆರೆದ ಧರ್ಮರಾಯನು ಕೃಷ್ಣ ಅರ್ಜುನರನ್ನು ನೋಡಿದನು.
ಮೂಲ ...{Loading}...
ನೊಂದೆಲಾ ನರನಾಥ ವಿಧಿಯೇ
ನೆಂದು ಮುನಿದುದೊ ನಿನಗೆನುತ್ತ ಮು
ಕುಂದನತಿ ಕಾರುಣ್ಯ ದೃಷ್ಟಿಯಲವನಿಪನ ನೋಡಿ
ಮಂದಮಂದದಿ ಪಾಣಿ ಪಲ್ಲವ
ದಿಂದ ತಡವಿದನೇರನಾಗಳೆ
ಕಂದೆರೆದು ನೋಡಿದನು ಭೂಪತಿ ಕೃಷ್ಣ ಫಲುಗುಣರ ॥9॥
೦೧೦ ಹರಿ ಕರಾಬ್ಜಸ್ಪರ್ಶ ...{Loading}...
ಹರಿ ಕರಾಬ್ಜಸ್ಪರ್ಶ ಮಾತ್ರ
ಸ್ಫುರಣದಿಂದಾಪ್ಯಾಯಿತಾಂತಃ
ಕರಣನಾದನು ನನೆದನುದ್ಗತ ಬಾಷ್ಪವಾರಿಯಲಿ
ಮುರಿಯದೇರಿನ ಮೈವಳಿಗೆ ಲಘು
ತರದ ಲುಳಿಯಲಿ ಮೈಯ ಬಲಿದಾ
ದರಿಸಿ ಕುಳ್ಳಿರ್ದನು ಮಹೀಪತಿ ಮಾನಿನಿಯ ಮಲಗಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಕರಕಮಲಗಳ ಸ್ಪರ್ಶದಿಂದಾದ ಕಂಪನದಿಂದ ಧರ್ಮರಾಯನ ಮನಸ್ಸಿಗೆ ತೃಪ್ತಿಯಾಯಿತು. ಒಂದೇ ಸಮನಾಗಿ ಕಣ್ಣೀರು ಸುರಿಸಿದನು. ಬಾಣದ ಗಾಯವಾಗದ ಶರೀರ ಭಾಗವನ್ನು ನಿಧಾನವಾಗಿ ತಿರುಗಿಸುತ್ತಾ ದೇಹವನ್ನು ಗಟ್ಟಿಮಾಡಿಕೊಂಡು ದ್ರೌಪದಿಯನ್ನು ಒರಗಿಕೊಂಡು ಕುಳಿತುಕೊಂಡನು.
ಮೂಲ ...{Loading}...
ಹರಿ ಕರಾಬ್ಜಸ್ಪರ್ಶ ಮಾತ್ರ
ಸ್ಫುರಣದಿಂದಾಪ್ಯಾಯಿತಾಂತಃ
ಕರಣನಾದನು ನನೆದನುದ್ಗತ ಬಾಷ್ಪವಾರಿಯಲಿ
ಮುರಿಯದೇರಿನ ಮೈವಳಿಗೆ ಲಘು
ತರದ ಲುಳಿಯಲಿ ಮೈಯ ಬಲಿದಾ
ದರಿಸಿ ಕುಳ್ಳಿರ್ದನು ಮಹೀಪತಿ ಮಾನಿನಿಯ ಮಲಗಿ ॥10॥
೦೧೧ ಹದುಳವೇ ಪಾರ್ಥಙ್ಗೆ ...{Loading}...
ಹದುಳವೇ ಪಾರ್ಥಂಗೆ ಹೇರಾ
ಳದಲಿ ಕಾದಿದನಾ ಸುಶರ್ಮನ
ಕದನ ಬೆಟ್ಟಿತು ಶಪಥವಲ್ಲಾ ತಮ್ಮೊಳನಿಬರಿಗೆ
ಕೆದರಿದನು ಕೊಲ್ಲಣಿಗೆಯಲಿ ಬಂ
ದೊದಗಿ ನೀವವದಿರಲಿ ಸುಯ್ದಾ
ನದಲಿ ಬಂದುದೆ ಲಕ್ಷವೆಂದನು ನೃಪತಿ ಕೃಷ್ಣಂಗೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು “ಅರ್ಜುನನು ಕ್ಷೇಮವಾಗಿದ್ದಾನೆಯೇ? ದೊಡ್ಡದಾಗಿ ಯುದ್ಧ ಮಾಡಿದನು. ಸುಶರ್ಮನ ಯುದ್ಧ ತುಂಬ ಕಷ್ಟಕರವಾಗಿತ್ತು. ಆ ಐದು ಮಂದಿ ಸಮಸಪ್ತಕರು ಶಪಥ ಮಾಡಿ ಯುದ್ಧ ಮಾಡುವವರಲ್ಲವೆ ? ಒಂದು ಆಟವೆಂಬಂತೆ ಎಲ್ಲಕಡೆ ಇದ್ದು, ಮೇಲೆ ಬಿದ್ದು ಹೋರಾಡಿದ ಅವರಿಂದ ನೀವು ಸುರಕ್ಷಿತವಾಗಿ ಬಂದದ್ದೇ ಒಳ್ಳೆಯದಲ್ಲವೊ” ಎಂದು ಕೃಷ್ಣನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಹೇರಾಳ-ದೊಡ್ಡದು, ಕೊಲ್ಲಣಗೆ -ವಿನೋದ, ಆಟ, ಸುಯ್ದಾನ-ಕ್ಷೇಮ
ಮೂಲ ...{Loading}...
ಹದುಳವೇ ಪಾರ್ಥಂಗೆ ಹೇರಾ
ಳದಲಿ ಕಾದಿದನಾ ಸುಶರ್ಮನ
ಕದನ ಬೆಟ್ಟಿತು ಶಪಥವಲ್ಲಾ ತಮ್ಮೊಳನಿಬರಿಗೆ
ಕೆದರಿದನು ಕೊಲ್ಲಣಿಗೆಯಲಿ ಬಂ
ದೊದಗಿ ನೀವವದಿರಲಿ ಸುಯ್ದಾ
ನದಲಿ ಬಂದುದೆ ಲಕ್ಷವೆಂದನು ನೃಪತಿ ಕೃಷ್ಣಂಗೆ ॥11॥
೦೧೨ ಆಯಿತಿದು ನೀ ...{Loading}...
ಆಯಿತಿದು ನೀ ಬಂದ ಪರಿ ರಿಪು
ರಾಯ ಥಟ್ಟಿನೊಳೊಕ್ಕಲಿಕ್ಕಿದ
ದಾಯವೊಳ್ಳಿತು ದಿಟ್ಟನಾವನು ನಿನ್ನ ಹೋಲಿಸಲು
ಕಾಯಿದರಿ ಕಳುಹಿದನೊ ಮೇಣಡ
ಹಾಯಿದನೊ ಕರ್ಣಂಗೆ ಮಾಡಿದು
ಪಾಯವಾವುದು ಪಾರ್ಥ ಹೇಳೆಂದವನಿಪತಿ ನುಡಿದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಗಿದ್ದು ಆಯಿತು. ನೀನು ಯುದ್ಧ ಮಾಡಿದ ರೀತಿ, ಶತ್ರು ಸೈನ್ಯವನ್ನು ಧ್ವಂಸ ಮಾಡಿದ ರೀತಿ ಚೆನ್ನಾಗಿಯೇ ಇತ್ತು. ನಿನ್ನನ್ನು ಹೋಲುವ ಧೈರ್ಯಶಾಲಿ ಯಾರಿದ್ದಾರೆ ? ಶತ್ರುವೇ ನಿನ್ನನ್ನು ಕಾಪಾಡಿ ಹಿಂತಿರುಗಿ ಕಳುಹಿಸಿದನೋ ಅಥವಾ ನಿನಗೆ ಅಡ್ಡಬಂದು ನಿಂತನೋ? ನೀನು ಕರ್ಣನ ಎದುರಿನಲ್ಲಿ ಏನು ಉಪಾಯ ಮಾಡಿ ಯುದ್ಧ ಮಾಡಿದೆ ಅರ್ಜುನ ಹೇಳು” ಎಂದು ಧರ್ಮರಾಯನು ಕೇಳಿದನು.
ಮೂಲ ...{Loading}...
ಆಯಿತಿದು ನೀ ಬಂದ ಪರಿ ರಿಪು
ರಾಯ ಥಟ್ಟಿನೊಳೊಕ್ಕಲಿಕ್ಕಿದ
ದಾಯವೊಳ್ಳಿತು ದಿಟ್ಟನಾವನು ನಿನ್ನ ಹೋಲಿಸಲು
ಕಾಯಿದರಿ ಕಳುಹಿದನೊ ಮೇಣಡ
ಹಾಯಿದನೊ ಕರ್ಣಂಗೆ ಮಾಡಿದು
ಪಾಯವಾವುದು ಪಾರ್ಥ ಹೇಳೆಂದವನಿಪತಿ ನುಡಿದ ॥12॥
೦೧೩ ಬೇರೆ ಸಮಸಪ್ತಕರೊಳೆಕ್ಕಟಿ ...{Loading}...
ಬೇರೆ ಸಮಸಪ್ತಕರೊಳೆಕ್ಕಟಿ
ತೋರಿಸಿದೆ ನೀ ತೊಂಡಿನೋಲೆಯ
ಕಾರತನವನು ಸೂತಸುತನಿಲ್ಲವರ ಥಟ್ಟಿನಲಿ
ಹಾರಲೂದಿ ಸುಶರ್ಮನವದಿರ
ಸೂರಿ ತಿರುಗಿದ ಬಳಿಕ ಕೈ ಮೈ
ತೋರಿದನೆ ಕಲಿಕರ್ಣ ನಿನ್ನೊಡನೆಂದನಾ ಭೂಪ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸಮಸಪ್ತಕರು ಇರುವ ಜಾಗದಲ್ಲಿ ಪ್ರತ್ಯೇಕವಾಗಿ, ಏಕಾಂತವಾಗಿ, ನೀನು ಬಿಡುಬೀಸಾದ ಪರಾಕ್ರಮವನ್ನು ತೋರಿಸಿದೆ. ಅವರ ಸೈನ್ಯದಲ್ಲಿ ಸೂತಪುತ್ರನಾದ ಕರ್ಣ ಇರಲಿಲ್ಲ. ಸುಶರ್ಮ ಮೊದಲಾದವರನ್ನು ಹಾರುವಂತೆ ತೂರಿಬಿಟ್ಟು ತಿರುಗಿ ಬಂದ ಮೇಲೆ ಕರ್ಣನು ನಿನ್ನೊಡನೆ ತನ್ನ ಸಾಹಸವನ್ನು ತೋರಿದನೆ’ ಎಂದು ಅರ್ಜುನನ್ನು ಕೆಳಿದನು.
ಪದಾರ್ಥ (ಕ.ಗ.ಪ)
ತೊಂಡಿನೋಲೆಕಾರತನ-ಬಿಡುಬೀಸು ಮಾತಾಡುವ ಕಲೆ, ಸೂರಿ ತಿರುಗಿದ ಎಂಬುದಕ್ಕೆ ತೂರಿ ತಿರುಗಿದ ಎಂಬ ಸೂಕ್ತ ಪಾಠ ಇದೆ.
ಮೂಲ ...{Loading}...
ಬೇರೆ ಸಮಸಪ್ತಕರೊಳೆಕ್ಕಟಿ
ತೋರಿಸಿದೆ ನೀ ತೊಂಡಿನೋಲೆಯ
ಕಾರತನವನು ಸೂತಸುತನಿಲ್ಲವರ ಥಟ್ಟಿನಲಿ
ಹಾರಲೂದಿ ಸುಶರ್ಮನವದಿರ
ಸೂರಿ ತಿರುಗಿದ ಬಳಿಕ ಕೈ ಮೈ
ತೋರಿದನೆ ಕಲಿಕರ್ಣ ನಿನ್ನೊಡನೆಂದನಾ ಭೂಪ ॥13॥
೦೧೪ ಎಲೆ ಧನಞ್ಜಯ ...{Loading}...
ಎಲೆ ಧನಂಜಯ ಸೂತತನಯನ
ಗೆಲಿದು ಬಂದೆಯೊ ದಿವಿಜ ನಗರಿಗೆ
ಕಳುಹಿ ಬಂದೆಯೊ ಕಂಡು ಕೆಣಕದೆ ಬಂದೆಯೋ ಮೇಣು
ಉಳುಹಿ ಬಿಡುವನೆ ಸಮರ ಮುಖದಲಿ
ಮಲೆತನಾದರೆ ಕರ್ಣನೇನ
ಗ್ಗಳಿಕೆವಡೆದನೊ ಶಿವ ಶಿವಾ ಎಂದರಸ ಬಿಸುಸುಯ್ದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲೆ ಅರ್ಜುನ, ಸೂತಪುತ್ರನನ್ನು ಗೆದ್ದು ಬಂದೆಯಾ, ಸ್ವರ್ಗಕ್ಕೆ ಕಳಿಸಿ ಬಂದೆಯಾ ಅಥವಾ ನೋಡಿಯೂ ಕೆಣಕದೇ ಸುಮ್ಮನೆ ಹಿಂತಿರುಗಿ ಬಂದೆಯೋ, ಇಲ್ಲದಿದ್ದರೆ, ಅವನು ಯುದ್ಧ ಮುಖದಲ್ಲಿ ನಿನ್ನನ್ನು ನೋಡಿದ್ದರೆ ಉಳಿಯಗೊಡುತ್ತಿರಲಿಲ್ಲ ಕರ್ಣನು ಏನು ಹಿರಿಮೆಯನ್ನು ಪಡೆದಿದ್ದಾನೆಯೋ! ಅಯ್ಯೋ ಶಿವನೇ, ಎಂದು ಧರ್ಮರಾಯನು ನಿಟ್ಟುಸಿರನ್ನು ಬಿಟ್ಟನು.
ಮೂಲ ...{Loading}...
ಎಲೆ ಧನಂಜಯ ಸೂತತನಯನ
ಗೆಲಿದು ಬಂದೆಯೊ ದಿವಿಜ ನಗರಿಗೆ
ಕಳುಹಿ ಬಂದೆಯೊ ಕಂಡು ಕೆಣಕದೆ ಬಂದೆಯೋ ಮೇಣು
ಉಳುಹಿ ಬಿಡುವನೆ ಸಮರ ಮುಖದಲಿ
ಮಲೆತನಾದರೆ ಕರ್ಣನೇನ
ಗ್ಗಳಿಕೆವಡೆದನೊ ಶಿವ ಶಿವಾ ಎಂದರಸ ಬಿಸುಸುಯ್ದ ॥14॥
೦೧೫ ಜೀಯ ಖಾತಿಯಿದೇಕೆ ...{Loading}...
ಜೀಯ ಖಾತಿಯಿದೇಕೆ ಕರ್ಣನ
ಕಾಯಿದುಳುಹಿದೆನೊಂದು ಬಾರಿ ವಿ
ಘಾಯದಲಿ ಘಟ್ಟಿಸುವೆನೀಗಳೆ ಹಾಯ್ಕು ವೀಳೆಯವ
ರಾಯದಳಗಿಳವೆನ್ನ ಕೂಡೆ ನ
ವಾಯಿಯೇ ಕಲಿ ಕರ್ಣನಾಯುಷ
ಹೋಯಿತಿದೆಯೆಂದೊರಸಿದನು ವಾಮಾಂಘ್ರಿಯಲಿ ನೆಲನ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸ್ವಾಮಿ, ಈ ದುಃಖ ಏಕೆ? ಕರ್ಣನನ್ನು ಒಂದು ಬಾರಿ ಜೀವ ಸಹಿತ ಉಳಿಸಿದ್ದೇನೆ. ಅಪ್ಪಣೆಯನ್ನು ಕೊಡು’ ಈಗಲೇ ಹೋಗಿ ಬಡಿದುಹಾಕುತ್ತೇನೆ. ಕೌರವರಾಯನ ಸೈನ್ಯ ನನ್ನ ಎದುರಿನಲ್ಲಿ ತನ್ನ ವೈಭವವನ್ನು ಮೆರೆಸಲು ಸಾಧ್ಯವಿಲ್ಲ. ಇಂದಿಗೆ ವೀರ ಕರ್ಣನ ಆಯುಸ್ಸು ಮುಗಿಯಿತು. ಎಂದು ಅರ್ಜುನನು ಎಡಗಾಲಿನಿಂದ ನೆಲವನ್ನು ತೀಡಿದನು.
ಪದಾರ್ಥ (ಕ.ಗ.ಪ)
ನವಾಯಿ-ವೈಭವ
ಮೂಲ ...{Loading}...
ಜೀಯ ಖಾತಿಯಿದೇಕೆ ಕರ್ಣನ
ಕಾಯಿದುಳುಹಿದೆನೊಂದು ಬಾರಿ ವಿ
ಘಾಯದಲಿ ಘಟ್ಟಿಸುವೆನೀಗಳೆ ಹಾಯ್ಕು ವೀಳೆಯವ
ರಾಯದಳಗಿಳವೆನ್ನ ಕೂಡೆ ನ
ವಾಯಿಯೇ ಕಲಿ ಕರ್ಣನಾಯುಷ
ಹೋಯಿತಿದೆಯೆಂದೊರಸಿದನು ವಾಮಾಂಘ್ರಿಯಲಿ ನೆಲನ ॥15॥
೦೧೬ ಈಸು ಪರಿಯಲಿ ...{Loading}...
ಈಸು ಪರಿಯಲಿ ನಿಮ್ಮ ಚಿತ್ತದೊ
ಳಾಸರಾಯಿತೆ ನಮ್ಮ ದುಷ್ಕೃತ
ವಾಸನಾ ಫಲವೈಸಲೇ ತಾನಿದ್ದು ಫಲವೇನು
ಆ ಸುಯೋಧನ ವಿಗಡ ಭಟ ವಾ
ರಾಸಿಯನು ಮುಕ್ಕುಳಿಸುವೆನು ಧರ
ಣೀಶ ನಿಮ್ಮಡಿಯಾಣೆ ನೇಮವ ಕೊಂಡೆ ನಾನೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇಷ್ಟೊಂದು ಬಗೆಯಲ್ಲಿ ನಿನ್ನ ಮನಸ್ಸಿಗೆ ಬೇಸರವಾಯಿತೆ. ಇದು ನಮ್ಮ ಪಾಪದ ಫಲವಿರಬೇಕು. ಹೀಗಾದ ಮೇಲೆ ನಾನು ಬದುಕಿದ್ದು ಪ್ರಯೋಜನವೇನು ? ಆ ಕೌರವನ ವೀರ ಸೈನ್ಯ ಸಾಗರವನ್ನು ಮುಕ್ಕುಳಿಸುವೆನು. ದೊರೆಯೇ ನಿನ್ನ ಪಾದದಾಣೆ ನಿನ್ನ ಅಪ್ಪಣೆಯನ್ನು ಪಡೆದಿದ್ದೇನೆ." ಎಂದು ಅರ್ಜುನನು ಹೇಳಿದನು.
ಮೂಲ ...{Loading}...
ಈಸು ಪರಿಯಲಿ ನಿಮ್ಮ ಚಿತ್ತದೊ
ಳಾಸರಾಯಿತೆ ನಮ್ಮ ದುಷ್ಕೃತ
ವಾಸನಾ ಫಲವೈಸಲೇ ತಾನಿದ್ದು ಫಲವೇನು
ಆ ಸುಯೋಧನ ವಿಗಡ ಭಟ ವಾ
ರಾಸಿಯನು ಮುಕ್ಕುಳಿಸುವೆನು ಧರ
ಣೀಶ ನಿಮ್ಮಡಿಯಾಣೆ ನೇಮವ ಕೊಂಡೆ ನಾನೆಂದ ॥16॥
೦೧೭ ನಾಲಗೆಯ ನೆಣಗೊಬ್ಬು ...{Loading}...
ನಾಲಗೆಯ ನೆಣಗೊಬ್ಬು ಮಿಕ್ಕು ಛ
ಢಾಳಿಸಿದರೇನಹುದು ಕರ್ಣನ
ಕೋಲಗರಿ ಸೋಂಕಿದರೆ ಸೀಯದೆ ಸಿತಗತನ ನಿನಗೆ
ವೀಳೆಯವ ತಾ ಕರ್ಣನಾಯುಷ
ಕೋಳುವೋಯಿತ್ತೆಂಬ ಗರ್ವನ
ಗಾಳುತನವನು ನಂಬಲರಿವೆನೆ ಪಾರ್ಥ ಹೇಳೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನ ನಾಲಗೆಯನ್ನು ಅಹಂಕಾರ ಮದದಿಂದ ಜೋರಾಗಿ ಬಳಸಿದರೆ ಏನಾಗುತ್ತದೆ. ಕರ್ಣನ ಬಾಣದ ಗರಿ ಸೋಂಕಿದರೆ ಸಾಕು. ನಿನ್ನ ಶೌರ್ಯ ಸೀದು ಕರ್ರಗಾಗಿ ಹೋಗುತ್ತದೆ. ‘ಅಪ್ಪಣೆಯನ್ನು ಕೊಡು, ಕರ್ಣನ ಆಯುಸ್ಸನ್ನು ಮುಗಿಸುತ್ತೇನೆ’ ಎಂಬ ನಿನ್ನ ಗರ್ವದ ಸಣ್ಣ ಬುದ್ಧಿಯ ಮಾತುಗಳನ್ನು ನಾನು ನಂಬುವುದಿಲ್ಲ, ಎಂದ ಧರ್ಮರಾಯ.
ಪದಾರ್ಥ (ಕ.ಗ.ಪ)
ಸಿತಗತನ-ಶೌರ
ಗಾಳುತನ-ಗದ್ದಲದ ಸಣ್ಣಬುದ್ಧಿ, ಕೋಳುವೋಗು-ಸೆರೆಯಾಗು
ಮೂಲ ...{Loading}...
ನಾಲಗೆಯ ನೆಣಗೊಬ್ಬು ಮಿಕ್ಕು ಛ
ಢಾಳಿಸಿದರೇನಹುದು ಕರ್ಣನ
ಕೋಲಗರಿ ಸೋಂಕಿದರೆ ಸೀಯದೆ ಸಿತಗತನ ನಿನಗೆ
ವೀಳೆಯವ ತಾ ಕರ್ಣನಾಯುಷ
ಕೋಳುವೋಯಿತ್ತೆಂಬ ಗರ್ವನ
ಗಾಳುತನವನು ನಂಬಲರಿವೆನೆ ಪಾರ್ಥ ಹೇಳೆಂದ ॥17॥
೦೧೮ ನಿನಗೆ ಮಣಿವವನಲ್ಲ ...{Loading}...
ನಿನಗೆ ಮಣಿವವನಲ್ಲ ರಾಧಾ
ತನಯನವ ಹೆಚ್ಚಾಳು ಕಡ್ಡಿಯ
ಮೊನೆಗೆ ಕೊಂಬನೆ ನಿನ್ನನೀ ಹೆಮ್ಮಕ್ಕಳಿದಿರಿನಲಿ
ಕನಲಿ ಕಳವಳಿಸಿದರೆ ನೀನಾ
ತನ ವಿಭಾಡಿಸಲಾಪ ಸತ್ವದ
ಮನವ ಬಲ್ಲೆನು ಪಾರ್ಥ ನುಡಿಯದಿರೆಂದನಾ ಭೂಪ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಮಾತನ್ನು ಮುಂದುವರಿಸಿ ‘ಆ ರಾಧಾತನಯ ಕರ್ಣನು ನಿನಗೆ ತಲೆಬಾಗಿಸುವವನಲ್ಲ ದೊಡ್ಡವೀರ. ನಿನ್ನನ್ನು ಒಂದು ಹುಲ್ಲುಕಡ್ಡಿಗೂ ಸಮ ಎಂದು ಅವನು ಭಾವಿಸುವುದಿಲ್ಲ. ನೀನು ಈ ಹೆಣ್ಣು ಮಕ್ಕಳ ಎದುರಿನಲ್ಲಿ ಕೋಪದಿಂದ ಕಳವಳಗೊಂಡರೆ ಏನು ಸಾಧ್ಯ. ಅವನನ್ನು ನಾಶ ಮಾಡುವ ಮನಸ್ಸಾಮಥ್ರ್ಯವನ್ನೂ ಮನಸ್ಸನ್ನೂ ನೀನು ಪಡೆದಿಲ್ಲ. ಅರ್ಜುನ, ಮಾತನಾಡಬೇಡ’ ಎಂದನು.
ಪದಾರ್ಥ (ಕ.ಗ.ಪ)
ವಿಭಾಡಿಸು-ನಾಶಮಾಡು
ಮೂಲ ...{Loading}...
ನಿನಗೆ ಮಣಿವವನಲ್ಲ ರಾಧಾ
ತನಯನವ ಹೆಚ್ಚಾಳು ಕಡ್ಡಿಯ
ಮೊನೆಗೆ ಕೊಂಬನೆ ನಿನ್ನನೀ ಹೆಮ್ಮಕ್ಕಳಿದಿರಿನಲಿ
ಕನಲಿ ಕಳವಳಿಸಿದರೆ ನೀನಾ
ತನ ವಿಭಾಡಿಸಲಾಪ ಸತ್ವದ
ಮನವ ಬಲ್ಲೆನು ಪಾರ್ಥ ನುಡಿಯದಿರೆಂದನಾ ಭೂಪ ॥18॥
೦೧೯ ಬಲನ ಜಮ್ಭನ ...{Loading}...
ಬಲನ ಜಂಭನ ಕೈಟಭನ ದಶ
ಗಳನ ನಮುಚಿಯ ಕಾಲನೇಮಿಯ
ಬಲ ನಿಶುಂಭ ಹಿರಣ್ಯಕಾದಿಯ ಖಳರ ಸಂದೋಹ
ಅಳವಿಗೊಡುವರೆ ಪಾಡಹುದು ನೀ
ನಿಲುಕಲಳವೇ ಕರ್ಣಜಯವತಿ
ಸುಲಭವೇ ನಿನ್ನಂದದವರಿಗೆ ಪಾರ್ಥ ಹೇಳೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಬಲ, ಜಂಭ, ಕೈಟಭ, ರಾವಣ, ನಮುಚಿ, ಕಾಲನೇಮಿ, ಮೊದಲಾದ ರಾಕ್ಷಸರ ಸೈನ್ಯ, ನಿಶುಂಭ, ಹಿರಣ್ಯ ಮೊದಲಾದ ದುಷ್ಟರ ಸಮೂಹ ಸಾಹಸ ತೋರಿಸಿ ಮೇಲೆ ಬಿದ್ದರೆ, ಆಗುತ್ತದೆಯೇನೋ, ನಿನ್ನ ಕೈಯಲ್ಲಿ ಅವನ ಎದುರಿನಲ್ಲಿ ನಿಲ್ಲಲು ಸಾಧ್ಯವೇ, ನಿನ್ನಂಥವರಿಗೆ ಕರ್ಣನನ್ನು ಜಯಿಸುವುದು ಸುಲಭದ ವಿಚಾರವಲ್ಲ ಅರ್ಜುನ ಕೇಳು’ ಎಂದನು.
ಟಿಪ್ಪನೀ (ಕ.ಗ.ಪ)
ಜಂಭ-ತಾರಕಾಸುರನ ಹತ್ತು ಮಂದಿ ಪ್ರಧಾನರಲ್ಲಿ ಒಬ್ಬ. ವಿಷ್ಣುವಿನಿಂದ ಹತನಾದವನು. ಇವನ ಮಗಳು ಕಯಾಥು, ಹಿರಣ್ಯ ಕಶಿಪುವನ್ನು ಮದುವೆಯಾಗಿ ಪ್ರಹ್ಲಾದನನ್ನು ಪಡೆದವಳು.
ಕೈಟಭ-ಮಧು ಎಂಬ ರಾಕ್ಷಸನ ತಮ್ಮ, ವಿಷ್ಣುವು ಇವರಿಬ್ಬರನ್ನು ತನ್ನ ತೊಡೆಯ ಮೇಲೆ ಕೊಂದ.
ನಮುಚಿ-ಕಶ್ಯಪ-ದನುವಿನ ಮಗ. ಇಂದ್ರನಿಂದ ಹತನಾದ ರಾಕ್ಷಸ
ಕಾಲನೇಮಿ-ರಾವಣನ ಸೋದರಮಾವನಾದ ಮಾರೀಚನ ಮಗ. ಹನುಮಂತನಿಂದ ಹತನಾದವನು.
ನಿಶುಂಭ-ಇವನ ಅಣ್ಣ ಶುಂಭ ಬ್ರಹ್ಮನಿಂದ ವರ ಪಡೆದ ಸಹೋದರರು ಆದಿಶಕ್ತಿಯ ಅಂಶದ ಕೌಶಿಕೆ ಎಂಬ ದೇವತೆಯಿಂದ ಹತರಾದವರು.
ಹಿರಣ್ಯ-ಕಶ್ಯಪ-ದಿತಿಯರ ಮಗ. ವರಾಹಾವತಾರದಲ್ಲಿ ವಿಷ್ಣುವಿನಿಂದ ಹತನಾದವನು.
ಮೂಲ ...{Loading}...
ಬಲನ ಜಂಭನ ಕೈಟಭನ ದಶ
ಗಳನ ನಮುಚಿಯ ಕಾಲನೇಮಿಯ
ಬಲ ನಿಶುಂಭ ಹಿರಣ್ಯಕಾದಿಯ ಖಳರ ಸಂದೋಹ
ಅಳವಿಗೊಡುವರೆ ಪಾಡಹುದು ನೀ
ನಿಲುಕಲಳವೇ ಕರ್ಣಜಯವತಿ
ಸುಲಭವೇ ನಿನ್ನಂದದವರಿಗೆ ಪಾರ್ಥ ಹೇಳೆಂದ ॥19॥
೦೨೦ ಜಾಣತನದಲಿ ಕಾದಿ ...{Loading}...
ಜಾಣತನದಲಿ ಕಾದಿ ಹಿಂಗುವ
ದ್ರೋಣನಲ್ಲಳವಿಯಲಿ ಕಳವಿನ
ಕೇಣದಲಿ ಕೊಂಡಾಡುವರೆ ಗಾಂಗೇಯನಿವನಲ್ಲ
ಸಾಣೆಗಂಡಲಗಿವನು ಸಮರಕೆ
ಹೂಣಿಗನು ರಿಪುಬಲದ ಹಾಣಾ
ಹಾಣಿಕಾರನು ಕರ್ಣನಳುಕುವನಲ್ಲ ನಿನಗೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ಕರ್ಣನು ಬುದ್ಧಿವಂತಿಕೆಯಿಂದ ಯುದ್ಧ ಮಾಡುತ್ತಾ ಹಿಂಜರಿದ ದ್ರೋಣನಲ್ಲ, ಶೌರ್ಯದಲ್ಲಿ, ಯುದ್ಧದಲ್ಲಿ ಮೋಸದಿಂದ ಸೋತದ್ದನ್ನು ಹೊಗಳೋಣವೆಂದರೆ, ಇವನು ಭೀಷ್ಮನೂ ಅಲ್ಲ, ಸಾಣೆ ಹಿಡಿದ ಕತ್ತಿ. ಇವನು, ಯುದ್ಧದ ಪ್ರತಿಜ್ಞೆ ಮಾಡಿದವನು, ಶತ್ರುಸೈನ್ಯವನ್ನು ಅತ್ಯಂತ ತೀವ್ರವಾಗಿ ಎದುರಿಸುವವನು. ನಿನಗೆ ಕರ್ಣನು ಹೆದರುವವನಲ್ಲ’ ಎಂದನು.
ಮೂಲ ...{Loading}...
ಜಾಣತನದಲಿ ಕಾದಿ ಹಿಂಗುವ
ದ್ರೋಣನಲ್ಲಳವಿಯಲಿ ಕಳವಿನ
ಕೇಣದಲಿ ಕೊಂಡಾಡುವರೆ ಗಾಂಗೇಯನಿವನಲ್ಲ
ಸಾಣೆಗಂಡಲಗಿವನು ಸಮರಕೆ
ಹೂಣಿಗನು ರಿಪುಬಲದ ಹಾಣಾ
ಹಾಣಿಕಾರನು ಕರ್ಣನಳುಕುವನಲ್ಲ ನಿನಗೆಂದ ॥20॥
೦೨೧ ಜಾಳ ಜರೆದು ...{Loading}...
ಜಾಳ ಜರೆದು ಜಡಾತ್ಮರಿಗೆ ಜಂ
ಘಾಳತನವನು ಮೆರೆದು ಖೋಡಿಯ
ಖೂಳರನು ಖೊಪ್ಪರಿಸಿ ಚೂಣಿಯ ಚರರ ಚಪ್ಪರಿಸಿ
ಆಳುತನದಲಿ ಬೆರೆವ ನಿನಗವ
ಸೋಲಲರಿಯನು ನಿನ್ನ ಗಂಟಲ
ಗಾಳ ನಿನಗಳುಕುವನೆ ಕರ್ಣನು ಪಾರ್ಥ ಹೇಳೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಬಲಹೀನರನ್ನು ತೆಗಳಿ, ಸೋಮಾರಿಗಳ ಎದುರಿಗೆ ಸಾಹಸವನ್ನು ಪ್ರದರ್ಶಿಸಿ, ಹೀನರಾದ ದುಷ್ಟರನ್ನು ಸದೆ ಬಡಿದು, ಮುಂಚೂಣಿಯಲ್ಲಿರುವ ಸೇವಕರನ್ನು ಹುರಿದುಂಬಿಸಿ ಶೌರ್ಯ ತೋರಿಸಿದ್ದೇನೆ ಎಂದು ಗರ್ವಿಸುವ ನಿನಗೆ ಕರ್ಣನು ಸೋಲುವುದಿಲ್ಲ. ಅವನು ನಿನ್ನ ಗಂಟಲಿಗೆ ಹಾಕುವ ಗಾಳ. ನಿನಗೆ ಅವನು ಹೆದರುವುದಿಲ್ಲ’ ಎಂದನು.
ಪದಾರ್ಥ (ಕ.ಗ.ಪ)
ಜಂಘಾಳ-ವೇಗವಾಗಿ ಓಡುವ, ಖೋಡಿ-ಹೀನ, ಖೊಪ್ಪರಿಸು-ಸದೆಬಡಿ, ಗಂಟಲಗಾಳ-ಮೀನು ಹಿಡಿಯಲು ಬಳಸುವ ಕೊಕ್ಕೆ.
ಮೂಲ ...{Loading}...
ಜಾಳ ಜರೆದು ಜಡಾತ್ಮರಿಗೆ ಜಂ
ಘಾಳತನವನು ಮೆರೆದು ಖೋಡಿಯ
ಖೂಳರನು ಖೊಪ್ಪರಿಸಿ ಚೂಣಿಯ ಚರರ ಚಪ್ಪರಿಸಿ
ಆಳುತನದಲಿ ಬೆರೆವ ನಿನಗವ
ಸೋಲಲರಿಯನು ನಿನ್ನ ಗಂಟಲ
ಗಾಳ ನಿನಗಳುಕುವನೆ ಕರ್ಣನು ಪಾರ್ಥ ಹೇಳೆಂದ ॥21॥
೦೨೨ ಏನ ಹೇಳುವೆನೆನ್ನ ...{Loading}...
ಏನ ಹೇಳುವೆನೆನ್ನ ದಳದಲಿ
ತಾನು ಭೀಮನ ಥಟ್ಟಿನಲಿ ಬಳಿ
ಕೀ ನಕುಲ ಸಹದೇವ ಸಾತ್ಯಕಿ ದ್ರುಪದರೊಡ್ಡಿನಲಿ
ಮಾನನಿಧಿ ರಾಧೇಯನತ್ತಲು
ತಾನೆ ತನುಮಯವಾಯ್ತು ಪಾಂಡವ
ಸೇನೆ ಬಡ ಸಾಹಸಿಕರೆಣೆಯೇ ಸೂತತನಯಂಗೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನೆಂದು ಹೇಳಲಿ, ನನ್ನ ಸೈನ್ಯದಲ್ಲಿ, ಭೀಮನ ಸೈನ್ಯದಲ್ಲಿ, ಆ ನಂತರ ಈ ನಕುಲ, ಸಹದೇವ, ಸಾತ್ಯಕಿ, ದ್ರುಪದರ ಸೈನ್ಯದಲ್ಲಿ ಎಲ್ಲಿ ನೋಡಿದರೂ ಮಾನನಿಧಿಯಾದ ಆ ಕರ್ಣನೇ ತಾನೇ ತಾನಾಗಿ ಕಾಣಿಸಿಕೊಳ್ಳುತ್ತಿದ್ದನು. ಆ ಸೂತಪುತ್ರನಿಗೆ ಬಡಸಾಹಸಿಗರಾದ ಪಾಂಡವರ ಸೈನ್ಯ ಸಮಾನವೇ.
ಮೂಲ ...{Loading}...
ಏನ ಹೇಳುವೆನೆನ್ನ ದಳದಲಿ
ತಾನು ಭೀಮನ ಥಟ್ಟಿನಲಿ ಬಳಿ
ಕೀ ನಕುಲ ಸಹದೇವ ಸಾತ್ಯಕಿ ದ್ರುಪದರೊಡ್ಡಿನಲಿ
ಮಾನನಿಧಿ ರಾಧೇಯನತ್ತಲು
ತಾನೆ ತನುಮಯವಾಯ್ತು ಪಾಂಡವ
ಸೇನೆ ಬಡ ಸಾಹಸಿಕರೆಣೆಯೇ ಸೂತತನಯಂಗೆ ॥22॥
೦೨೩ ಎಲ್ಲಿ ಕರ್ಣನು ...{Loading}...
ಎಲ್ಲಿ ಕರ್ಣನು ತಿರುಗಿ ನೋಡಿದ
ಡಲ್ಲಿ ತಾನೆಡವಂಕ ಬಲ ಮುಖ
ದಲ್ಲಿ ಸೂತಜನೆಂತು ದೆಸೆಗಳ ನೋಡೆ ಕರ್ಣಮಯ
ಎಲ್ಲಿ ನೋಡಿದಡಲ್ಲಿ ಕರ್ಣನ
ಬಿಲ್ಲ ಬೊಬ್ಬೆ ರಥಾಶ್ವರವವೆದೆ
ದಲ್ಲಣದ ದೆಖ್ಖಾಳ ರಚನಾ ರಸಿಕನವನೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಾವ ಕಡೆ ತಿರುಗಿದರೂ ಕರ್ಣನು ಕಾಣಿಸುತ್ತಿದ್ದ ಎಡಬಲದ ಸೈನ್ಯಗಳಲ್ಲಿ ಸೂತಜ ಪ್ರತ್ಯಕ್ಷ, ಎಂಟು ದಿಕ್ಕುಗಳಲ್ಲೂ ಅವನೇ. ಯಾವ ಕಡೆ ನೋಡಿದರೂ ಅಲ್ಲಿ ಕರ್ಣನ ಬಿಲ್ಲಿನ ಬೊಬ್ಬೆ ಅವನ ರಥದ ಕುದುರೆಗಳ ಶಬ್ದ ಕೇಳಿಸುತ್ತಿತ್ತು ಹೃದಯವನ್ನು ನಡುಗಿಸುವಂತಹ ಗದ್ದಲವನ್ನು ಮಾಡುವ ಯುದ್ಧ ಚತುರ ಅವನು, ಎಂದು ಧರ್ಮರಾಯನು ಹೇಳಿದನು.
ಪದಾರ್ಥ (ಕ.ಗ.ಪ)
ದೆಖ್ಖಾಳ-ಗದ್ದಲ
ಮೂಲ ...{Loading}...
ಎಲ್ಲಿ ಕರ್ಣನು ತಿರುಗಿ ನೋಡಿದ
ಡಲ್ಲಿ ತಾನೆಡವಂಕ ಬಲ ಮುಖ
ದಲ್ಲಿ ಸೂತಜನೆಂತು ದೆಸೆಗಳ ನೋಡೆ ಕರ್ಣಮಯ
ಎಲ್ಲಿ ನೋಡಿದಡಲ್ಲಿ ಕರ್ಣನ
ಬಿಲ್ಲ ಬೊಬ್ಬೆ ರಥಾಶ್ವರವವೆದೆ
ದಲ್ಲಣದ ದೆಖ್ಖಾಳ ರಚನಾ ರಸಿಕನವನೆಂದ ॥23॥
೦೨೪ ಮುರಿದು ಹರಿಹಞ್ಚಾದ ...{Loading}...
ಮುರಿದು ಹರಿಹಂಚಾದ ನಿಜ ಮೋ
ಹರವ ನೆರೆ ಸಂತೈಸಿ ಜೋಡಿಸಿ
ಜರೆದು ಗರಿಗಟ್ಟಿದ ವಿರೋಧಿ ವ್ರಜದ ಥಟ್ಟಣೆಯ
ಮುರಿದು ಕುರಿದರಿ ಮಾಡಿ ದೊರೆಗಳ
ನರಸಿ ಕಾದಿ ವಿಭಾಡಿಸುವ ರಣ
ದುರುಬೆಕಾರನನೆಂತು ಸೈರಿಸಿ ಗೆಲುವೆ ನೀನೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ವ್ಯೂಹಗಳು ಛಿದ್ರವಾಗಿ ಒಡೆದು ಹಂಚಿನಂತೆ ಚೂರು ಚೂರಾದ ತನ್ನ ಸೈನ್ಯವನ್ನು ಪೂರ್ತಿಯಾಗಿ ಸಮಾಧಾನ ಮಾಡಿ ಮತ್ತೆ ಒಂದುಗೂಡಿಸಿ ಗೆದ್ದೆವೆಂದು ಬೀಗುತ್ತಿದ್ದ ಶತ್ರುಸೈನಿಕರನ್ನು ನಿಂದಿಸಿ, ಅವರ ವ್ಯೂಹವನ್ನು ಒಡೆದು, ಕುರಿಗಳನ್ನು ಕತ್ತರಿಸಿದಂತೆ ಛಿದ್ರ ಛಿದ್ರ ಮಾಡಿ, ಶ್ರೇಷ್ಠರಾದವರನ್ನು ಹುಡುಕಿಕೊಂಡು ಹೋಗಿ ಅವರೊಡನೆ ಯುದ್ಧಮಾಡಿ ನಾಶಮಾಡುವ ರಣದಲ್ಲಿ ಆಕ್ರಮಣಕಾರಿಯಾಗುವ ಕರ್ಣನನ್ನು ಎದುರಿಸಿ ಹೇಗೆ ನೀನು ಗೆಲ್ಲುತ್ತೀಯೆ’ ಎಂದು ಧರ್ಮರಾಯನು ಹೇಳಿದನು.
ಪದಾರ್ಥ (ಕ.ಗ.ಪ)
ಉರುಬೆಕಾರ-ರಭಸದಿಂದ ಮೇಲೆ ಬೀಳುವವನು
ಮೂಲ ...{Loading}...
ಮುರಿದು ಹರಿಹಂಚಾದ ನಿಜ ಮೋ
ಹರವ ನೆರೆ ಸಂತೈಸಿ ಜೋಡಿಸಿ
ಜರೆದು ಗರಿಗಟ್ಟಿದ ವಿರೋಧಿ ವ್ರಜದ ಥಟ್ಟಣೆಯ
ಮುರಿದು ಕುರಿದರಿ ಮಾಡಿ ದೊರೆಗಳ
ನರಸಿ ಕಾದಿ ವಿಭಾಡಿಸುವ ರಣ
ದುರುಬೆಕಾರನನೆಂತು ಸೈರಿಸಿ ಗೆಲುವೆ ನೀನೆಂದ ॥24॥
೦೨೫ ಕಾದಿ ನೊನ್ದೆನು ...{Loading}...
ಕಾದಿ ನೊಂದೆನು ತಾನು ಬಳಿಕ ವೃ
ಕೋದರನೆಯಡಹಾಯ್ದನಾತನ
ಕಾದಿ ನಿಲಿಸಿ ಮದೀಯ ರಥವನು ಮತ್ತೆ ಕೆಣಕಿದನು
ಮೂದಲಿಸಿ ಸಹದೇವ ನಕುಲರು
ಕಾದಲಿವದಿರ ಮುರಿದನಗ್ಗದ
ಕೈದುಕಾರರ ದೇವ ಕರ್ಣನ ಗೆಲುವರಾರೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯುದ್ಧ ಮಾಡಿ ನನಗೆ ನೋವಾಯಿತು. ಆನಂತರ ಭೀಮನು ಅಡ್ಡ ಬಂದಾಗ ಅವನನ್ನು ಯುದ್ಧ ಮಾಡಿ ತಡೆದು, ಮತ್ತೆ ನನ್ನ ರಥದ ಮೇಲೆ ಆಕ್ರಮಣ ಮಾಡಿದನು. ನಕುಲ ಸಹದೇವರು ಅವನನ್ನು ಮೂದಲಿಸಿ ಯುದ್ಧ ಮಾಡಿದರೂ, ಅವರನ್ನು ಸೋಲಿಸಿದನು. ಈ ಕರ್ಣನು ಶ್ರೇಷ್ಠರಾದ ಶಸ್ತ್ರಧಾರಿಗಳಿಗೆ ಸ್ವಾಮಿ, ಅವನನ್ನು ಗೆಲ್ಲುವವರು ಯಾರಿದ್ದಾರೆ’ ಎಂದು ಧರ್ಮರಾಯನು ಹೇಳಿದನು.
ಮೂಲ ...{Loading}...
ಕಾದಿ ನೊಂದೆನು ತಾನು ಬಳಿಕ ವೃ
ಕೋದರನೆಯಡಹಾಯ್ದನಾತನ
ಕಾದಿ ನಿಲಿಸಿ ಮದೀಯ ರಥವನು ಮತ್ತೆ ಕೆಣಕಿದನು
ಮೂದಲಿಸಿ ಸಹದೇವ ನಕುಲರು
ಕಾದಲಿವದಿರ ಮುರಿದನಗ್ಗದ
ಕೈದುಕಾರರ ದೇವ ಕರ್ಣನ ಗೆಲುವರಾರೆಂದ ॥25॥
೦೨೬ ಮಲೆತು ಧಾಳಾಧೂಳಿಯಲಿ ...{Loading}...
ಮಲೆತು ಧಾಳಾಧೂಳಿಯಲಿ ಬಲ
ಸುಳಿ ಮಸಗಿಯೆನ್ನೊಬ್ಬನನು ಮೈ
ಬಳಸಿ ಕಾದಿತು ವೀರ ಕರ್ಣನ ಕೂಡೆ ತಲೆಯೊತ್ತಿ
ಒಲವರವು ನಿನಗುಳ್ಳರಾಗಳೆ
ನಿಲಿಸಿದಾ ನೀ ಬಂದು ಬಯಲ
ಗ್ಗಳಿಕೆಯನೆ ಬಿಡೆ ಕೆದರುತಿಹೆ ಮಾಣೆಂದು ನೃಪ ನುಡಿದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಮ್ಮ ಸೈನ್ಯವೆಲ್ಲಾ ಪ್ರತಿಭಟಿಸುತ್ತಾ ಕೋಪದಿಂದ, ರಭಸದಿಂದ, ನನ್ನನ್ನು ಸುತ್ತುವರೆದು ರಕ್ಷಿಸುತ್ತಾ, ವೀರನಾದ ಕರ್ಣನ ಜೊತೆಯಲ್ಲಿ ತೀವ್ರವಾಗಿ ಯುದ್ಧ ಮಾಡಿತು. ನಿನಗೆ ನನ್ನ ಮೇಲೆ ಪ್ರೀತಿ ಇದ್ದಿದ್ದರೆ. ಆಗಲೇ ಬಂದು ಕರ್ಣನ ಆಕ್ರಮಣವನ್ನು ನಿಲ್ಲಿಸುತ್ತಿದ್ದೆ. ಹಾಗೆ ಮಾಡದೆ ಈಗ ಬರಿಯ ಅರ್ಥವಿಲ್ಲದ ಹೆಚ್ಚುಗಾರಿಕೆಯನ್ನು ಕೊಚ್ಚಿಕೊಳ್ಳುತ್ತಿದ್ದಿಯೆ, ನಿಲ್ಲಿಸು, ಎಂದು ಧರ್ಮರಾಯನು ನುಡಿದನು.
ಮೂಲ ...{Loading}...
ಮಲೆತು ಧಾಳಾಧೂಳಿಯಲಿ ಬಲ
ಸುಳಿ ಮಸಗಿಯೆನ್ನೊಬ್ಬನನು ಮೈ
ಬಳಸಿ ಕಾದಿತು ವೀರ ಕರ್ಣನ ಕೂಡೆ ತಲೆಯೊತ್ತಿ
ಒಲವರವು ನಿನಗುಳ್ಳರಾಗಳೆ
ನಿಲಿಸಿದಾ ನೀ ಬಂದು ಬಯಲ
ಗ್ಗಳಿಕೆಯನೆ ಬಿಡೆ ಕೆದರುತಿಹೆ ಮಾಣೆಂದು ನೃಪ ನುಡಿದ ॥26॥
೦೨೭ ಉಕ್ಕಿದುದು ತನಿ ...{Loading}...
ಉಕ್ಕಿದುದು ತನಿ ವೀರರಸ ಕುದಿ
ದುಕ್ಕಿ ಹರಿದುದು ರೌದ್ರರಸವವ
ರಕ್ಕಜವ ನಭಕೊತ್ತಿ ಪರಿದುದು ಶಾಂತಿರಸಲಹರಿ
ಮಿಕ್ಕು ಬಹಳ ಕ್ರೋಧವೊಡಲೊಳ
ಗುಕ್ಕಿತಮಳೋತ್ಸಾಹ ಚಾಪಳ
ಸುಕ್ಕಿತೊಂದೇ ನಿಮಿಷ ಮೋನದೊಳಿರ್ದನಾ ಪಾರ್ಥ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಮಾತುಗಳಿಂದ ಅರ್ಜುನನ ವೀರರಸ ಉಕ್ಕಿತು. ರೌದ್ರರಸ ಕುದಿಯುತ್ತಾ ಉಕ್ಕಿ ಹರಿಯಿತು. ಶಾಂತಿರಸದ ಅಲೆಗಳು ಆಶ್ಚರ್ಯವನ್ನು ಆಕಾಶಕ್ಕೆ ತಳ್ಳಿ ಓಡಿಹೋಯಿತು. ದೇಹದೊಳಗೆ ವಿಪರೀತ ಕೋಪವುಂಟಾಗಿ ಉತ್ಸಾಹ ಚಪಳತೆಗಳು ಮುದುಡಿದವು. ಅರ್ಜುನನು ಒಂದು ನಿಮಿಷ ಮೌನವಾಗಿದ್ದನು.
ಪದಾರ್ಥ (ಕ.ಗ.ಪ)
ಅಕ್ಕಜ-ಆಶ್ಚರ್ಯ, ಸುಕ್ಕಿತು-ಮುದುಡು
ಮೂಲ ...{Loading}...
ಉಕ್ಕಿದುದು ತನಿ ವೀರರಸ ಕುದಿ
ದುಕ್ಕಿ ಹರಿದುದು ರೌದ್ರರಸವವ
ರಕ್ಕಜವ ನಭಕೊತ್ತಿ ಪರಿದುದು ಶಾಂತಿರಸಲಹರಿ
ಮಿಕ್ಕು ಬಹಳ ಕ್ರೋಧವೊಡಲೊಳ
ಗುಕ್ಕಿತಮಳೋತ್ಸಾಹ ಚಾಪಳ
ಸುಕ್ಕಿತೊಂದೇ ನಿಮಿಷ ಮೋನದೊಳಿರ್ದನಾ ಪಾರ್ಥ ॥27॥
೦೨೮ ಹೇಳಲಞ್ಜುವೆನಾ ಸುಶರ್ಮಕ ...{Loading}...
ಹೇಳಲಂಜುವೆನಾ ಸುಶರ್ಮಕ
ನಾಳು ತಾಯಿಗೆ ಮಕ್ಕಳಾಗದೆ
ಬೀಳಹೊಯ್ದು ನಿಹಾರದಲಿ ತಿರುಗಿದೆನು ಹರಿಸಹಿತ
ಕೋಲಗುರುವಿನ ಮಗನಲೇ ಹರಿ
ಧಾಳಿ ಹರಿದಡಗಟ್ಟಿ ತಡೆದನು
ಹೇಳಿ ಫಲವಿನ್ನೇನೆನುತ ಬಿಸುಸುಯ್ದನಾ ಪಾರ್ಥ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿನಗೆ ಹೇಳಲು ನನಗೆ ಹಿಂಜರಿಕೆಯಾಗುತ್ತಿದೆ. ಸುಶರ್ಮನ ಸೈನಿಕರ ತಾಯಿಯನ್ನು ಬಂಜೆಯರನ್ನಾಗಿ ಮಾಡಿ, ಕೃಷ್ಣನ ಜೊತೆಯಲ್ಲಿ ಜಯದನಿಯೊಂದಿಗೆ ಹಿಂತಿರುಗಿದೆ. ನಮ್ಮ ಧನುರ್ವಿದ್ಯಾಗುರು ದ್ರೋಣಾಚಾರ್ಯರ ಮಗ ಅಶ್ವತ್ಥಾಮನು ದಾಳಿ ಮಾಡುವ ಸಿಂಹದಂತೆ ಓಡಿ ನನಗೆ ಅಡ್ಡ ಬಂದು ತಡೆದನು. ಅದನ್ನು ಹೇಳಿ ಏನು ಪ್ರಯೋಜನ’ ಎಂದು ಅರ್ಜುನನು ನಿಟ್ಟುಸಿರು ಬಿಟ್ಟನು.
ಪದಾರ್ಥ (ಕ.ಗ.ಪ)
ನಿಹಾರ-ಜಯಧ್ವನಿ,
ಪಾಠಾನ್ತರ (ಕ.ಗ.ಪ)
‘ಹರಿದಡಗಟ್ಟ್ಟಿ’ ಪಾಠ ಸ್ವೀಕರಿಸಿದೆ.
ಕರ್ಣಪರ್ವ, ಮೈ..ವಿ.ವಿ.
ಮೂಲ ...{Loading}...
ಹೇಳಲಂಜುವೆನಾ ಸುಶರ್ಮಕ
ನಾಳು ತಾಯಿಗೆ ಮಕ್ಕಳಾಗದೆ
ಬೀಳಹೊಯ್ದು ನಿಹಾರದಲಿ ತಿರುಗಿದೆನು ಹರಿಸಹಿತ
ಕೋಲಗುರುವಿನ ಮಗನಲೇ ಹರಿ
ಧಾಳಿ ಹರಿದಡಗಟ್ಟಿ ತಡೆದನು
ಹೇಳಿ ಫಲವಿನ್ನೇನೆನುತ ಬಿಸುಸುಯ್ದನಾ ಪಾರ್ಥ ॥28॥
೦೨೯ ಇಟ್ಟಣಿಸಿಕೊಣ್ಡೆನ್ನೊಡನೆ ...{Loading}...
ಇಟ್ಟಣಿಸಿಕೊಂಡೆನ್ನೊಡನೆ ಸರಿ
ಗಟ್ಟಿ ಕಾದಿದ ರವಿಸುತನ ಹುಡಿ
ಗುಟ್ಟಿದೆನು ರಥವಾಜಿ ಸೂತ ಶರಾಸನಾದಿಗಳ
ಮುಟ್ಟೆ ಬಂದನು ಖಡುಗದಲಿ ಮೈ
ಮುಟ್ಟಿ ಹೆಣಗಿದೆನಾಕ್ಷಣಕೆ ಸಾ
ಲಿಟ್ಟು ಸರಿದುದು ಸಕಲ ಕೌರವ ಸೇನೆ ಸರಿಸದಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಒಟ್ಟಾಗಿ ನನ್ನ ಮೇಲೆ ಆಕ್ರಮಣ ಮಾಡಿ, ಸರಿಸಮನಾಗಿ ಯುದ್ಧಮಾಡಿದ ಸೂರ್ಯಪುತ್ರನ ರಥ ಕುದುರೆ, ಸೂತ, ಬತ್ತಳಿಕೆಗಳನ್ನು ನಾನು ನಾಶ ಮಾಡಿದೆ. ಅವನು ಕತ್ತಿ ಹಿಡಿದು ನನ್ನನ್ನು ಸಮೀಪಿಸಿದನು. ತೀರಾ ಹತ್ತಿರದಲ್ಲಿ ನಾನು ನಿಂತು ಅವನೊಡನೆ ಯುದ್ಧ ಮಾಡುತ್ತಿರುವ ಸಮಯಕ್ಕೆ ಕೌರವರ ಸೈನ್ಯವೆಲ್ಲಾ ಸಾಲಾಗಿ ಬಂದು ಮುತ್ತಿಗೆ ಹಾಕಿತು, ಎಂದು ಅರ್ಜುನನು ಹೇಳಿದನು.
ಮೂಲ ...{Loading}...
ಇಟ್ಟಣಿಸಿಕೊಂಡೆನ್ನೊಡನೆ ಸರಿ
ಗಟ್ಟಿ ಕಾದಿದ ರವಿಸುತನ ಹುಡಿ
ಗುಟ್ಟಿದೆನು ರಥವಾಜಿ ಸೂತ ಶರಾಸನಾದಿಗಳ
ಮುಟ್ಟೆ ಬಂದನು ಖಡುಗದಲಿ ಮೈ
ಮುಟ್ಟಿ ಹೆಣಗಿದೆನಾಕ್ಷಣಕೆ ಸಾ
ಲಿಟ್ಟು ಸರಿದುದು ಸಕಲ ಕೌರವ ಸೇನೆ ಸರಿಸದಲಿ ॥29॥
೦೩೦ ತೊಡಕಿದನು ಗಡ ...{Loading}...
ತೊಡಕಿದನು ಗಡ ಗರುಡ ಹಾವಿನ
ತಡಿಕೆವಲೆಯಲಿ ನಿನ್ನ ಗಮನವ
ತಡೆದರೈ ತಪ್ಪೇನು ಕೌರವ ದಳದ ನಾಯಕರು
ಕಡುಹಿನಲಿ ತಡವಾದುದುಳಿದಂ
ತೆಡೆಯಲುಳಿವರ್ಜುನನೆ ನಮ್ಮವ
ಗಡವ ಕೇಳಿದು ನಿಲ್ಲನೆಂದನು ನಗುತ ಯಮಸೂನು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹಾವಿನ ತಡಿಕೆಯ ಬಲೆಯಲ್ಲಿ ಗರುಡನು ಸಿಕ್ಕಿದಂತೆ’ ಆಯಿತು. ಕೌರವನ ಸೈನ್ಯದ ನಾಯಕರು. ‘ನಿನ್ನ ಓಡಾಟವನ್ನು ತಡೆದರೆ’. ಅದರಲ್ಲಿ ತಪ್ಪೇನು ? ಪರಾಕ್ರಮ ತೋರಿಸುವುದರಲ್ಲಿ ಸ್ವಲ್ಪ ನಿಧಾನವಾಯಿತು. ಇಲ್ಲದೇ ಹೋದರೆ ಅರ್ಜುನನು ಹಿಂದೆಗೆಯುತ್ತಿದ್ದನೇ. ನನಗೆ ಉಂಟಾದ ಆಪತ್ತನ್ನು ಕೇಳಿ ನಿಧಾನ ಮಾಡುತ್ತಿದ್ದನೇ ಎಂದು ಧರ್ಮರಾಯನು ನಕ್ಕನು.
ಮೂಲ ...{Loading}...
ತೊಡಕಿದನು ಗಡ ಗರುಡ ಹಾವಿನ
ತಡಿಕೆವಲೆಯಲಿ ನಿನ್ನ ಗಮನವ
ತಡೆದರೈ ತಪ್ಪೇನು ಕೌರವ ದಳದ ನಾಯಕರು
ಕಡುಹಿನಲಿ ತಡವಾದುದುಳಿದಂ
ತೆಡೆಯಲುಳಿವರ್ಜುನನೆ ನಮ್ಮವ
ಗಡವ ಕೇಳಿದು ನಿಲ್ಲನೆಂದನು ನಗುತ ಯಮಸೂನು ॥30॥
೦೩೧ ಏನನೆಮ್ಬೆನು ನಮ್ಮ ...{Loading}...
ಏನನೆಂಬೆನು ನಮ್ಮ ಪುಣ್ಯದ
ಹಾನಿ ತಲೆದೋರಿದರೆ ಭೀಮನ
ಸೂನುವಿರಲಭಿಮನ್ಯುವಿರಲೆವಗೀ ವಿಪತ್ತಹುದೆ
ಆ ನದೀಜ ದ್ರೋಣರಲಿ ತಾ
ಹಾನಿಯನು ಮಿಗೆ ಕಂಡೆನೇ ನೆರೆ
ಹೀನನನು ಕಂಡಾದಡೆಯು ಬದುಕುವುದು ಲೇಸೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಮ್ಮ ಪುಣ್ಯಕ್ಕೆ ಹಾನಿ ಉಂಟಾದರೆ ಅದಕ್ಕೆ ಏನು ಹೇಳಲು ಸಾಧ್ಯ ? ಘಟೋತ್ಕಚ, ಅಭಿಮನ್ಯುಗಳಿದ್ದರೆ ನನಗೆ ಈ ವಿಪತ್ತು ಬರುತ್ತಿತ್ತೇ. ಭೀಷ್ಮ ದ್ರೋಣರಿಂದಲೂ ನಾನು ಇಂತಹ ಅವಮಾನವನ್ನು ಪಡೆದಿರಲಿಲ್ಲ. ಹೀಗೆ ಅವಮಾನಗೊಂಡ ಮೇಲೆ ಬದುಕಿರುವುದು ಸರಿಯೇ’ ಎಂದು ಧರ್ಮರಾಯನು ಹೇಳಿದನು.
ಮೂಲ ...{Loading}...
ಏನನೆಂಬೆನು ನಮ್ಮ ಪುಣ್ಯದ
ಹಾನಿ ತಲೆದೋರಿದರೆ ಭೀಮನ
ಸೂನುವಿರಲಭಿಮನ್ಯುವಿರಲೆವಗೀ ವಿಪತ್ತಹುದೆ
ಆ ನದೀಜ ದ್ರೋಣರಲಿ ತಾ
ಹಾನಿಯನು ಮಿಗೆ ಕಂಡೆನೇ ನೆರೆ
ಹೀನನನು ಕಂಡಾದಡೆಯು ಬದುಕುವುದು ಲೇಸೆಂದ ॥31॥
೦೩೨ ಅರಳಿಚದೆ ಮಧುಮಾಸ ...{Loading}...
ಅರಳಿಚದೆ ಮಧುಮಾಸ ಮಾಣಲಿ
ವರುಷ ಋತುವೇ ಸಾಕು ಜಾತಿಗೆ
ಜರಡರೆಮಗಿನ್ನೇನು ಪೂರ್ವಪ್ರಕೃತಿ ವನವಾಸ
ಸಿರಿಗೆ ಕಕ್ಕುಲಿತೆಯೆ ವಿಪಕ್ಷವ
ಬೆರಸಿ ಬದುಕುವೆವೈಸಲೇ ವರ
ಗುರುವಲಾ ಧೃತರಾಷ್ಟ್ರನೂಣೆಯವೇನು ಹೇಳೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೂವನ್ನು ಅರಳಿಸುವ ವಸಂತಕಾಲ ನಮ್ಮ ಜೀವನದಲ್ಲಿ ಬರಲೇ ಇಲ್ಲ. ಸದಾ ಮಳೆಗಾಲವೇ ಆಯಿತು. ಬಲಹೀನರಾದ ನಮಗೆ ವನವಾಸ ಮಾಡುವುದು ಅಭ್ಯಾಸ ಆಗಿ ಹೋಗಿದೆ. ಸಂಪತ್ತಿನ ಬಗೆಗೆ ಆಸೆ ಏಕೆ ? ಶತ್ರುಗಳ ಜೊತೆಗೇ ಒಂದಾಗಿ ಬದುಕೋಣ. ಶ್ರೇಷ್ಠನಾದ ಹಿರಿಯನಲ್ಲವೇ ಧೃತರಾಷ್ಟ್ರ. ಅದರಲ್ಲಿ ದೋಷವೇನೂ ಇಲ್ಲ’ ಎಂದನು.
ಪದಾರ್ಥ (ಕ.ಗ.ಪ)
ಊಣೆಯ-ದೋಷ
ಮೂಲ ...{Loading}...
ಅರಳಿಚದೆ ಮಧುಮಾಸ ಮಾಣಲಿ
ವರುಷ ಋತುವೇ ಸಾಕು ಜಾತಿಗೆ
ಜರಡರೆಮಗಿನ್ನೇನು ಪೂರ್ವಪ್ರಕೃತಿ ವನವಾಸ
ಸಿರಿಗೆ ಕಕ್ಕುಲಿತೆಯೆ ವಿಪಕ್ಷವ
ಬೆರಸಿ ಬದುಕುವೆವೈಸಲೇ ವರ
ಗುರುವಲಾ ಧೃತರಾಷ್ಟ್ರನೂಣೆಯವೇನು ಹೇಳೆಂದ ॥32॥
೦೩೩ ಬರಿದೆ ಬಯಸಿದಡಹುದೆ ...{Loading}...
ಬರಿದೆ ಬಯಸಿದಡಹುದೆ ರಾಜ್ಯದ
ಹೊರಿಗೆಯನು ನಿಶ್ಯಂಕೆಯಲಿ ಹೊ
ಕ್ಕಿರಿದು ಬಹ ಸತ್ವಾತಿಶಯ ಬೇಹುದು ರಣಾಗ್ರದಲಿ
ಇರಿದು ಮೇಣ್ ರಿಪುರಾಯರನು ಕು
ಕ್ಕುರಿಸುವರೆ ರಾಧೇಯನಂತಿರ
ಲುರುವನೊಬ್ಬನೆ ಬೇಹುದಲ್ಲದಡಿಲ್ಲ ಜಯವೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ರಾಜ್ಯಭಾರ ಬೇಕೆಂದು ಸುಮ್ಮನೆ ಆಸೆಪಟ್ಟರೆ ದೊರಕುತ್ತದೆಯೇ, ಹಿಂಜರಿಕೆಯಿಲ್ಲದೆ ಶತ್ರುವಿನ ಸೈನ್ಯದ ಮೇಲೆ ನುಗ್ಗಿ ಅತಿಶಯವಾದ ಶಕ್ತಿಯಿಂದ ಯುದ್ಧ ಮಾಡುವ ಸಾಹಸ ಬೇಕಾಗುತ್ತದೆ. ಯುದ್ಧಮಾಡಿ ಶತ್ರುರಾಜರನ್ನು ಸದೆ ಬಡಿಯಬೇಕಾದರೆ ರಾಧೇಯನಂತೆ (ದೊಡ್ಡ) ಶ್ರೇಷ್ಠನಾದ ವೀರನೊಬ್ಬನು ಬೇಕಾಗುತ್ತದೆ. ಇಲ್ಲದಿದ್ದರೆ ಜಯ ಸಿಗುವುದಿಲ್ಲ’ ಎಂದನು.
ಪದಾರ್ಥ (ಕ.ಗ.ಪ)
ಹೊರಿಗೆ-ಭಾರ
ಮೂಲ ...{Loading}...
ಬರಿದೆ ಬಯಸಿದಡಹುದೆ ರಾಜ್ಯದ
ಹೊರಿಗೆಯನು ನಿಶ್ಯಂಕೆಯಲಿ ಹೊ
ಕ್ಕಿರಿದು ಬಹ ಸತ್ವಾತಿಶಯ ಬೇಹುದು ರಣಾಗ್ರದಲಿ
ಇರಿದು ಮೇಣ್ ರಿಪುರಾಯರನು ಕು
ಕ್ಕುರಿಸುವರೆ ರಾಧೇಯನಂತಿರ
ಲುರುವನೊಬ್ಬನೆ ಬೇಹುದಲ್ಲದಡಿಲ್ಲ ಜಯವೆಂದ ॥33॥
೦೩೪ ಎವಗೆ ವಿಕ್ರಮವೆಮ್ಬಡೀ ...{Loading}...
ಎವಗೆ ವಿಕ್ರಮವೆಂಬಡೀ ರೌ
ರವವ ಕಂಡೆನು ಕರ್ಣನಂತಿರ
ಲೆವಗೆ ಧೀವಸಿಯಾಗಿ ಕಾದುವರೆಂಬರವರಿಲ್ಲ
ಬವರ ಗೆಲುವರೆ ಹರಿಗೆ ಕೊಡು ಗಾಂ
ಡಿವವ ಸಾರಥಿಯಾಗು ನೀನೆಂ
ದವಗಡಿಸಿದನು ವೀರ ನಾರಾಯಣನ ಮೈದುನನ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನನಗೆ ಶೌರ್ಯ ಸಾಹಸಗಳು ಇವೆ ಎಂದು ಹೇಳಿಕೊಳ್ಳೋಣವೆಂದರೆ ಈ ನರಕದಂತಹ ಅವಮಾನವನ್ನು ಅನುಭವಿಸಬೇಕಾಯಿತು. ಕರ್ಣನಂತೆ ಇದ್ದು ನಮಗೆ ಧೈರ್ಯವನ್ನುಂಟು ಮಾಡುವಂತೆ ಯುದ್ಧ ಮಾಡುವವರು ಯಾರೂ ಇಲ್ಲ. ಯುದ್ಧದಲ್ಲಿ ಗೆಲ್ಲಬೇಕೆಂದಿದ್ದರೆ ಕೃಷ್ಣನಿಗೆ ನಿನ್ನ ಗಾಂಡಿವವನ್ನು ಕೊಡು, ನೀನು ಸಾರಥಿಯಾಗು’ ಎಂದು ಧರ್ಮರಾಯನು ಕೃಷ್ಣನ ಮೈದುನನಾದ ಅರ್ಜುನನನ್ನು ಹೀಯಾಳಿಸಿದನು.
ಪದಾರ್ಥ (ಕ.ಗ.ಪ)
ಧೀವಸಿ-ಧೈರ್ಯವಾಗಿ
ಮೂಲ ...{Loading}...
ಎವಗೆ ವಿಕ್ರಮವೆಂಬಡೀ ರೌ
ರವವ ಕಂಡೆನು ಕರ್ಣನಂತಿರ
ಲೆವಗೆ ಧೀವಸಿಯಾಗಿ ಕಾದುವರೆಂಬರವರಿಲ್ಲ
ಬವರ ಗೆಲುವರೆ ಹರಿಗೆ ಕೊಡು ಗಾಂ
ಡಿವವ ಸಾರಥಿಯಾಗು ನೀನೆಂ
ದವಗಡಿಸಿದನು ವೀರ ನಾರಾಯಣನ ಮೈದುನನ ॥34॥