೦೦೦ ಸೂಚನೆ ಮರಳಿದನು ...{Loading}...
ಸೂಚನೆ: ಮರಳಿದನು ಪಾಳೆಯಕೆ ಪಾಂಡವ
ರರಸನಿತ್ತಲು ಪಾರ್ಥ ಕೇಳಿದು
ಬರುತ ಗೆಲಿದನು ಸಕಲ ಕೌರವ ರಾಯ ಮೋಹರವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ: ಧರ್ಮರಾಯನು ಪಾಳೆಯಕ್ಕೆ ಮರಳಿದನು. ಅದನ್ನು ಕೇಳಿ, ಅವನನ್ನು ನೋಡಲು ಪಾಳೆಯಕ್ಕೆ ಹೋಗುವ ದಾರಿಯಲ್ಲಿ ಅರ್ಜುನನು ಕೌರವರಾಯನ ಸಕಲ ಸೈನ್ಯವನ್ನು ಗೆದ್ದನು.
ಮೂಲ ...{Loading}...
ಸೂಚನೆ: ಮರಳಿದನು ಪಾಳೆಯಕೆ ಪಾಂಡವ
ರರಸನಿತ್ತಲು ಪಾರ್ಥ ಕೇಳಿದು
ಬರುತ ಗೆಲಿದನು ಸಕಲ ಕೌರವ ರಾಯ ಮೋಹರವ
೦೦೧ ದೂರುವರಲೇ ಕರ್ಣನೋಲೆಯ ...{Loading}...
ದೂರುವರಲೇ ಕರ್ಣನೋಲೆಯ
ಕಾರತನವನು ಹಿಂದೆ ಕೆಲಬರು
ದೂರಿದರೆ ಫಲವೇನು ಕದನದಲವಗೆ ಸರಿಯಹರೆ
ಹಾರಲೂದಿದನಹಿತ ರಾಯನ
ನೀರತನವನು ತನ್ನ ರಾಯನ
ಸೂರೆಗಡಹಾಯ್ದರಿಯ ತಡೆದನು ಭೂಪ ಕೇಳ್ ಎಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೂಪನೇ ಕೇಳು. ಕರ್ಣನ ಸೇವೆಯನ್ನು ಕೆಲವರು ಹಿಂದೆ ದೂರುವರಲ್ಲವೆ? ದೂರಿದರೆ ಫಲವೇನು? ಕದನದಲ್ಲಿ ಅವರು ಅವನಿಗೆ ಸರಿಗಟ್ಟುತ್ತಾರೆಯೆ? ಕರ್ಣನು ಶತ್ರುರಾಜನ ಶೌರ್ಯವನ್ನು ಹಾರುವಂತೆ ಊದಿದನು. ತನ್ನ ರಾಜನು ಸೂರೆಗೊಳ್ಳಲು ಬಂದ ಶತ್ರುವನ್ನು ತಡೆದನು” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ನೀರತನ-ಶೌರ್ಯ, ಪರಾಕ್ರಮ
ಮೂಲ ...{Loading}...
ದೂರುವರಲೇ ಕರ್ಣನೋಲೆಯ
ಕಾರತನವನು ಹಿಂದೆ ಕೆಲಬರು
ದೂರಿದರೆ ಫಲವೇನು ಕದನದಲವಗೆ ಸರಿಯಹರೆ
ಹಾರಲೂದಿದನಹಿತ ರಾಯನ
ನೀರತನವನು ತನ್ನ ರಾಯನ
ಸೂರೆಗಡಹಾಯ್ದರಿಯ ತಡೆದನು ಭೂಪ ಕೇಳೆಂದ ॥1॥
೦೦೨ ಅರರೆ ಸಿಂಹದ ...{Loading}...
ಅರರೆ ಸಿಂಹದ ತೋಳ ತೆಕ್ಕೆಯ
ಕರಿಯ ಸೆಳೆವಂದದಲಿ ಗರುಡನ
ಕೊರಳ ಬಿಲದಲಿ ಬಿಳ್ದ ಸರ್ಪನ ಸೇದುವಂದದಲಿ
ಧರಣಿಪಾಲನ ತೆಗೆದು ಭೀಮನ
ಬರಿಯನೆಚ್ಚನು ಜೋಡ ಜೋಕೆಯ
ಜರುಹಿದನು ಜವಗೆಡಿಸಿದನು ನಿನ್ನಾತನನಿಲಜನ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರರೆ! ನಿನ್ನಾತ ಕರ್ಣನು, ಸಿಂಹದ ತೋಳ ತೆಕ್ಕೆಯಿಂದ ಆನೆಯನ್ನು ಎಳೆದುಕೊಳ್ಳುವಂತೆ, ಗರುಡನ ಕೊರಳ ಬಿಲದಲ್ಲಿ ಬಿದ್ದ ಸರ್ಪವನ್ನು ಸೆಳೆದುಕೊಳ್ಳುವಂತೆ ದುರ್ಯೋಧನನನ್ನು ರಕ್ಷಿಸಿ ಭೀಮನ ಪಕ್ಕೆಗೆ ಹೊಡೆದನು. ಭೀಮನ ಮೈಕವಚವನ್ನು ಭೇದಿಸಿ ಶಕ್ತಿಗುಂದಿಸಿದನು”.
ಪದಾರ್ಥ (ಕ.ಗ.ಪ)
ಬರಿ-ಪಕ್ಕೆ, ಜವಗೆಡಿಸು - ಶಕ್ತಿಗುಂದಿಸು, ಸತ್ವಹೀನನನ್ನಾಗಿಸು. ಜರುಹು - ಭೇದಿಸು
ಮೂಲ ...{Loading}...
ಅರರೆ ಸಿಂಹದ ತೋಳ ತೆಕ್ಕೆಯ
ಕರಿಯ ಸೆಳೆವಂದದಲಿ ಗರುಡನ
ಕೊರಳ ಬಿಲದಲಿ ಬಿಳ್ದ ಸರ್ಪನ ಸೇದುವಂದದಲಿ
ಧರಣಿಪಾಲನ ತೆಗೆದು ಭೀಮನ
ಬರಿಯನೆಚ್ಚನು ಜೋಡ ಜೋಕೆಯ
ಜರುಹಿದನು ಜವಗೆಡಿಸಿದನು ನಿನ್ನಾತನನಿಲಜನ ॥2॥
೦೦೩ ಅರಸ ಕೇಳೈ ...{Loading}...
ಅರಸ ಕೇಳೈ ಕರ್ಣ ಭೀಮರ
ಧರಧುರದ ದೆಖ್ಖಾಯ್ಲತನ ಗ
ಬ್ಬರಿಸಿತಾಹವ ಗರ್ವಿತರ ಗಾಢಾಯ್ಲ ಚೇತನವ
ಧರಣಿಪಾಲನನತ್ತಲವರಾ
ದರಿಸಿದರು ಸಹದೇವ ನಕುಳರು
ಸರಳ ಕಿತ್ತರು ಘಾಯವನು ತೊಳೆತೊಳೆದು ಮಂತ್ರಿಸುತ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು. ಕರ್ಣ ಭೀಮರ ಯುದ್ಧದ ತೀವ್ರತೆ ಯುದ್ಧಗರ್ವಿತರ ದೃಢವಾದ ಚೈತನ್ಯಶಕ್ತಿಯನ್ನು ಆವರಿಸಿತು. ಅತ್ತ ನಕುಳ ಸಹದೇವರು ಧರ್ಮರಾಯನನ್ನು ಉಪಚರಿಸಿ ಬಾಣಗಳನ್ನು ಕಿತ್ತು ಮಂತ್ರಿಸುತ್ತ ಅವನ ಗಾಯವನ್ನು ತೊಳೆದರು.
ಪದಾರ್ಥ (ಕ.ಗ.ಪ)
ಗಬ್ಬರಿಸು-ಆವರಿಸು, ವ್ಯಾಪಿಸು.
ಮೂಲ ...{Loading}...
ಅರಸ ಕೇಳೈ ಕರ್ಣ ಭೀಮರ
ಧರಧುರದ ದೆಖ್ಖಾಯ್ಲತನ ಗ
ಬ್ಬರಿಸಿತಾಹವ ಗರ್ವಿತರ ಗಾಢಾಯ್ಲ ಚೇತನವ
ಧರಣಿಪಾಲನನತ್ತಲವರಾ
ದರಿಸಿದರು ಸಹದೇವ ನಕುಳರು
ಸರಳ ಕಿತ್ತರು ಘಾಯವನು ತೊಳೆತೊಳೆದು ಮಂತ್ರಿಸುತ ॥3॥
೦೦೪ ದುರುದುರಿಪ ಬಿಸಿರಕ್ತವೇರಿನೊ ...{Loading}...
ದುರುದುರಿಪ ಬಿಸಿರಕ್ತವೇರಿನೊ
ಳೊರತೆ ಮಸಗಿತು ಬಹಳ ಧೈರ್ಯದ
ಹೊರಿಗೆ ಮುರಿದುದು ಮೂಗಿನುಸಿರುಬ್ಬೆದ್ದುದಡಿಗಡಿಗೆ
ಅರಿವು ಮರವೆಗಳೊಂದನೊಂದನು
ಮುರಿದು ನೂಕಿದವವನಿಪತಿ ಕಡು
ವೆರಗ ಕೇಣಿಯ ಕೊಂಡವೋಲಿದ್ದನು ವಿಚೇಷ್ಟೆಯಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದೇ ಸಮನಾಗಿ ಹೊರಚಿಮ್ಮುವ ಬಿಸಿರಕ್ತವು ಗಾಯದಲ್ಲ್ಲಿ ಒರತೆಯಾಗಿ ಮಸಗಿತು. ಬಹಳ ಧೈರ್ಯದ ಭಾರ ಇಳಿಯಿತು. ಮೂಗಿನಲ್ಲಿ ಉಸಿರು ಅಡಿಗಡಿಗೆ ಉಬ್ಬೆದ್ದಿತು. ಅರಿವು ಮರವೆಗಳು ಒಂದು ಇನ್ನೊಂದನ್ನು ಮುರಿದು ಮುಂದಾದುವು. ಧರ್ಮರಾಯನು ಕಡು ಬೆರಗನ್ನು ಗುತ್ತಿಗೆÂ ತೆಗೆದುಕೊಂಡವನ ಹಾಗೆ ನಿಶ್ಚಲನಾಗಿದ್ದನು.
ಪದಾರ್ಥ (ಕ.ಗ.ಪ)
ದುರುದುರಿಪ-ಒಂದೇ ಸಮನಾಗಿ ಹೊರಚಿಮ್ಮುವ,
ಮೂಲ ...{Loading}...
ದುರುದುರಿಪ ಬಿಸಿರಕ್ತವೇರಿನೊ
ಳೊರತೆ ಮಸಗಿತು ಬಹಳ ಧೈರ್ಯದ
ಹೊರಿಗೆ ಮುರಿದುದು ಮೂಗಿನುಸಿರುಬ್ಬೆದ್ದುದಡಿಗಡಿಗೆ
ಅರಿವು ಮರವೆಗಳೊಂದನೊಂದನು
ಮುರಿದು ನೂಕಿದವವನಿಪತಿ ಕಡು
ವೆರಗ ಕೇಣಿಯ ಕೊಂಡವೋಲಿದ್ದನು ವಿಚೇಷ್ಟೆಯಲಿ ॥4॥
೦೦೫ ಜಯಸಮರ ಜಾರಾಯ್ತು ...{Loading}...
ಜಯಸಮರ ಜಾರಾಯ್ತು ತೆಗೆ ಪಾ
ಳೆಯಕೆ ಮರಳಿಚು ರಥವನಿನ್ನೆ
ಲ್ಲಿಯದು ನೆಲ ನೆರೆ ಕುದಿವ ಕುರುಡನ ಮಕ್ಕಳೇ ಕೊಳಲಿ
ನಿಯತವೆಮ್ಮಿಬ್ಬರಿಗೆ ರಾಯನ
ಲಯವೆ ಲಯವಿನ್ನೆನುತಲಾ ಮಾ
ದ್ರಿಯ ಕುಮಾರರು ದೊರೆ ಸಹಿತ ತಿರುಗಿದರು ಪಾಳೆಯಕೆ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೆಲುವಿನ ಯುದ್ಧ ಜಾರಿತು. ತೆಗೆ. ರಥವನ್ನು ಪಾಳೆಯಕ್ಕೆ ಮರಳಿಸು. ಇನ್ನೆಲ್ಲಿಯದು ರಾಜ್ಯ? ವಿಪರೀತವಾಗಿ ಹೊಟ್ಟೆಯುರಿ ಪಡುವ ಧೃತರಾಷ್ಟ್ರನ ಮಕ್ಕಳೇ ಅದನ್ನು ತೆಗೆದುಕೊಳ್ಳಲಿ. ಇನ್ನು ನಮ್ಮಿಬ್ಬರಿಗೆ ಧರ್ಮರಾಯನ ಸಾವೇ ನಮ್ಮಿಬ್ಬರಿಗೆ ಸಾವು. ಇದು ನಿಶ್ಚಯ, ಎನ್ನುತ್ತ ನಕುಳ ಸಹದೇವರು ಧರ್ಮರಾಯನ ಸಹಿತ ಪಾಳೆಯಕ್ಕೆ ಹಿಂದಿರುಗಿದರು.
ಮೂಲ ...{Loading}...
ಜಯಸಮರ ಜಾರಾಯ್ತು ತೆಗೆ ಪಾ
ಳೆಯಕೆ ಮರಳಿಚು ರಥವನಿನ್ನೆ
ಲ್ಲಿಯದು ನೆಲ ನೆರೆ ಕುದಿವ ಕುರುಡನ ಮಕ್ಕಳೇ ಕೊಳಲಿ
ನಿಯತವೆಮ್ಮಿಬ್ಬರಿಗೆ ರಾಯನ
ಲಯವೆ ಲಯವಿನ್ನೆನುತಲಾ ಮಾ
ದ್ರಿಯ ಕುಮಾರರು ದೊರೆ ಸಹಿತ ತಿರುಗಿದರು ಪಾಳೆಯಕೆ ॥5॥
೦೦೬ ರಾಯರಥ ಮಡಮುರಿಯೆ ...{Loading}...
ರಾಯರಥ ಮಡಮುರಿಯೆ ಮುರಿದುದು
ನಾಯಕರು ಪಾಂಚಾಲಕರು ವಾ
ನಾಯುಜರು ಮತ್ಸ್ಯ ಪ್ರಬುದ್ಧಕ ಸೋಮಕಾದಿಗಳು
ವಾಯುಹತಿಯಲಿ ಮೇಘದೊಡ್ಡಿಂ
ಗಾಯಸವು ಕರ್ಣಾಸ್ತ್ರ ಹತಿಯಲ
ಪಾಯವರಿರಾಯರಿಗಪೂರ್ವವೆ ಭೂಪ ಕೇಳ್ ಎಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೂಪನೆ, ಕೇಳು. ಧರ್ಮರಾಯನ ರಥವು ಹಿಂದಿರುಗಲು, ಪಾಂಚಾಲಕರು ವಾನಾಯುಜರು ಮತ್ಸ್ಯ ಪ್ರಬುದ್ಧಕ ಸೋಮಕಾದಿ ನಾಯಕರೂ ಹಿಂದಕ್ಕೆ ತಿರುಗಿದರು. ಗಾಳಿಯ ಹೊಡೆತದಿಂದ ಮೋಡಗಳ ಗುಂಪು ಆಯಾಸಗೊಳ್ಳುವಂತೆ ಕರ್ಣನ ಅಸ್ತ್ರಗಳ ಹೊಡೆತದಿಂದ ಶತ್ರುರಾಜರಿಗೆ ಅಪಾಯವಾಗುವುದು ವಿರಳವೆ?” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಮಡ-ಹಿಮ್ಮಡಿ
ಮೂಲ ...{Loading}...
ರಾಯರಥ ಮಡಮುರಿಯೆ ಮುರಿದುದು
ನಾಯಕರು ಪಾಂಚಾಲಕರು ವಾ
ನಾಯುಜರು ಮತ್ಸ್ಯ ಪ್ರಬುದ್ಧಕ ಸೋಮಕಾದಿಗಳು
ವಾಯುಹತಿಯಲಿ ಮೇಘದೊಡ್ಡಿಂ
ಗಾಯಸವು ಕರ್ಣಾಸ್ತ್ರ ಹತಿಯಲ
ಪಾಯವರಿರಾಯರಿಗಪೂರ್ವವೆ ಭೂಪ ಕೇಳೆಂದ ॥6॥
೦೦೭ ಮುರಿದುದೈ ರಿಪುರಾಯದಳ ...{Loading}...
ಮುರಿದುದೈ ರಿಪುರಾಯದಳ ಹಗೆ
ಹರಿದುದೈ ಕುರುಪತಿಗೆ ಹರುಷವ
ಕರೆದುದೈ ಕರ್ಣಪ್ರತಾಪಾಟೋಪ ಜೀಮೂತ
ಇರಿತ ಮೆರೆದುದು ನಿನ್ನವರ ಬೊ
ಬ್ಬಿರಿತ ಜರೆದುದು ವಿಜಯಲಕ್ಷ್ಮಿಯ
ಸೆರಗು ಸೋಂಕಿತು ಕೌರವೇಶ್ವರಗರಸ ಕೇಳ್ ಎಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಸನೇ, ಕೇಳು ಶತ್ರುರಾಜರ ಸೈನ್ಯವು ಭಂಗಗೊಂಡಿತು. ವೈರವು ಮುಗಿಯಿತು. ಕರ್ಣಪ್ರತಾಪದ ಆಟೋಪದ ಮೋಡವು ಕುರುಪತಿಗೆ ಹರುµದ ಮಳೆಯನ್ನು ಸುರಿಸಿತು. ಇರಿತವು ಮೆರೆಯಿತು. ನಿನ್ನವರ ಬೊಬ್ಬಿರಿತ ಶತ್ರುಗಳನ್ನು ಜರೆಯಿತು. ದುರ್ಯೋಧನನಿಗೆ ವಿಜಯಲಕ್ಷ್ಮಿಯ ಸೆರಗು ಸೋಕಿತು” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಜೀಮೂತ-ಮೋಡ,
ಮೂಲ ...{Loading}...
ಮುರಿದುದೈ ರಿಪುರಾಯದಳ ಹಗೆ
ಹರಿದುದೈ ಕುರುಪತಿಗೆ ಹರುಷವ
ಕರೆದುದೈ ಕರ್ಣಪ್ರತಾಪಾಟೋಪ ಜೀಮೂತ
ಇರಿತ ಮೆರೆದುದು ನಿನ್ನವರ ಬೊ
ಬ್ಬಿರಿತ ಜರೆದುದು ವಿಜಯಲಕ್ಷ್ಮಿಯ
ಸೆರಗು ಸೋಂಕಿತು ಕೌರವೇಶ್ವರಗರಸ ಕೇಳೆಂದ ॥7॥
೦೦೮ ಅರಿಬಲದ ಲಗ್ಗೆಯನು ...{Loading}...
ಅರಿಬಲದ ಲಗ್ಗೆಯನು ನಿಜ ಮೋ
ಹರದ ಮುರಿವಿನ ಸುಗ್ಗಿಯನು ಧರ
ಧುರದ ಪರಬಲದೊಸಗೆಯನು ನಿಜಬಲದ ಹಸುಗೆಯನು
ಮುರಮಥನ ನೋಡಿದನು ಮೂಗಿನ
ಬೆರಳ ತೂಗುವ ಮಕುಟದೊಲಹಿನ
ಬೆರಳ ಕುಡಿಚಮ್ಮಟಿಗೆಯಲಿ ಸೂಚಿಸಿದನರ್ಜುನಗೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಸೈನ್ಯದ ಲಗ್ಗೆಯನ್ನೂ ತನ್ನ ಸೈನ್ಯದ ಸೋಲಿನ ಸುದ್ದಿಯನ್ನೂ ಶತ್ರು ಸೈನ್ಯದ ಸಂತೋಷದ ಆಧಿಕ್ಯವನ್ನೂ ತನ್ನ ಸೈನ್ಯವು ಹರಿದು ಹಂಚಿಹೋಗಿರುವುದನ್ನೂ ಕೃಷ್ಣನು ನೋಡಿ , ಮೂಗಿನಮೇಲೆ ಬೆರಳನ್ನು ಇಟ್ಟ ಕಿರೀಟವನ್ನು ತೂಗುತ್ತ, ಕೈಯಲ್ಲಿ ಹಿಡಿದಿದ್ದ ಚಾವಟಿಯ ಕುಡಿಯ ಸನ್ನೆಯಲ್ಲಿ ಅದನ್ನು ಅರ್ಜುನನಿಗೆ ತೋರಿಸಿದನು.
ಮೂಲ ...{Loading}...
ಅರಿಬಲದ ಲಗ್ಗೆಯನು ನಿಜ ಮೋ
ಹರದ ಮುರಿವಿನ ಸುಗ್ಗಿಯನು ಧರ
ಧುರದ ಪರಬಲದೊಸಗೆಯನು ನಿಜಬಲದ ಹಸುಗೆಯನು
ಮುರಮಥನ ನೋಡಿದನು ಮೂಗಿನ
ಬೆರಳ ತೂಗುವ ಮಕುಟದೊಲಹಿನ
ಬೆರಳ ಕುಡಿಚಮ್ಮಟಿಗೆಯಲಿ ಸೂಚಿಸಿದನರ್ಜುನಗೆ ॥8॥
೦೦೯ ಆರ ರಥವಾ ...{Loading}...
ಆರ ರಥವಾ ಹೋಹುದದು ಹಿಂ
ದಾರವರು ಬಳಿವಳಿಯಲೊಗ್ಗಿನ
ಲೋರಣಿಸಿ ಮುಂಚುವರು ಟೆಕ್ಕೆಯವಾರ ತೇರಿನದು
ಆರ ದಳವದು ಧುರಪಲಾಯನ
ಚಾರು ದೀಕ್ಷಿತರಾಯ್ತು ಫಲುಗುಣ
ಧಾರುಣೀಪತಿಯಾಣೆ ಹೇಳೆಂದಸುರರಿಪು ನುಡಿದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನ, ಈಗ ಅಲ್ಲಿ ಹೋದುದು ಯಾರ ರಥ? ಹಿಂದೆ ಬಳಿವಿಡಿದು ಒತ್ತಿನಲ್ಲಿ ಸಾಲಾಗಿ ಮುನ್ನುಗ್ಗುವವರು ಯಾರವರು? ಬಾವುಟವು ಯಾರ ತೇರಿನದು? ಯುದ್ಧಪಲಾಯನದೀಕ್ಷಿತವಾದ ಅದು ಯಾರ ಸೈನ್ಯ? ಧರ್ಮರಾಯನಾಣೆ! ಹೇಳು” ಎಂದು ಕೃಷ್ಣನು ಕೇಳಿದನು.
ಮೂಲ ...{Loading}...
ಆರ ರಥವಾ ಹೋಹುದದು ಹಿಂ
ದಾರವರು ಬಳಿವಳಿಯಲೊಗ್ಗಿನ
ಲೋರಣಿಸಿ ಮುಂಚುವರು ಟೆಕ್ಕೆಯವಾರ ತೇರಿನದು
ಆರ ದಳವದು ಧುರಪಲಾಯನ
ಚಾರು ದೀಕ್ಷಿತರಾಯ್ತು ಫಲುಗುಣ
ಧಾರುಣೀಪತಿಯಾಣೆ ಹೇಳೆಂದಸುರರಿಪು ನುಡಿದ ॥9॥
೦೧೦ ನೋಡಿ ನೋಡಿ ...{Loading}...
ನೋಡಿ ನೋಡಿ ಕಿರೀಟವನು ತೂ
ಗಾಡಿದನು ಕಂಬನಿಗಳಾಲಿಯೊ
ಳೀಡಿರಿದು ಸೋರಿದವು ಸೊಂಪಡಗಿತು ಮುಖಾಂಬುಜದ
ಹೂಡಿದಂಬಿನ ತೋಳ ತೆಗಹಿನ
ಬಾಡಿದುತ್ಸಾಹದ ವಿತಾಳದ
ಬೀಡಿಕೆಯ ಬೇಳುವೆಗೆ ಬೆಬ್ಬಳೆವೋದನಾ ಪಾರ್ಥ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಅದನ್ನು ನೋಡಿ ನೋಡಿ ಅಸಮ್ಮತಿಯಿಂದ ಕಿರೀಟವನ್ನು ತೂಗಾಡಿದನು. ಅವನ ಕಣ್ಣಿನಲ್ಲಿ ಕಂಬನಿಗಳು ತುಂಬಿ ತುಳುಕಿದವು. ಅವನ ಮುಖ ಕಮಲದ ಸೊಂಪು ಅಡಗಿತು. ಬಾಣವನ್ನು ಹಿಡಿದಿದ್ದ ಅವನ ತೋಳು ಕುಸಿಯಿತು. ಉತ್ಸಾಹ ಬಾಡಿತು. ಚಿಂತೆಯು ಆವರಿಸಿತು. ಇಂತಹ ಸ್ಥತಿಯಲ್ಲಿ ಅವನು ದಿಗ್ಭ್ರಾಂತನಾದನು.
ಪದಾರ್ಥ (ಕ.ಗ.ಪ)
ವಿತಾಳ-ಚಿಂತೆ, ಬೀಡಿಕೆ-ನೆಲೆಸು
ಮೂಲ ...{Loading}...
ನೋಡಿ ನೋಡಿ ಕಿರೀಟವನು ತೂ
ಗಾಡಿದನು ಕಂಬನಿಗಳಾಲಿಯೊ
ಳೀಡಿರಿದು ಸೋರಿದವು ಸೊಂಪಡಗಿತು ಮುಖಾಂಬುಜದ
ಹೂಡಿದಂಬಿನ ತೋಳ ತೆಗಹಿನ
ಬಾಡಿದುತ್ಸಾಹದ ವಿತಾಳದ
ಬೀಡಿಕೆಯ ಬೇಳುವೆಗೆ ಬೆಬ್ಬಳೆವೋದನಾ ಪಾರ್ಥ ॥10॥
೦೧೧ ಸೇನೆ ಮುರಿಯಲಿ ...{Loading}...
ಸೇನೆ ಮುರಿಯಲಿ ಕೌರವನ ದು
ಮ್ಮಾನ ಹರಿಯಲಿ ನನಗೆ ಚಿತ್ತ
ಗ್ಲಾನಿಯೆಳ್ಳನಿತಿಲ್ಲ ಕಟ್ಟಲಿ ಗುಡಿಯ ಗಜನಗರ
ಆ ನರೇಂದ್ರನ ಸಿರಿಮೊಗಕೆ ದು
ಮ್ಮಾನವೋ ಮೇಣ್ ಸುರಪುರಕೆ ಸಂ
ಧಾನವೋ ನಾನರಿಯೆನಳ್ಳೆದೆಯಾದುದೆನಗೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಮ್ಮ ಸೇನೆಯು ಹಿಂದಿರುಗಲಿ. ಕೌರವನ ದುಮ್ಮಾನವು ಹೋಗಲಿ. ನನಗೆ ಎಳ್ಳಿನಷ್ಟೂ ಚಿತ್ತಗ್ಲಾನಿ ಇಲ್ಲ. ಹಸ್ತಿನಾವತಿಯು ವಿಜಯದ ಬಾವುಟವನ್ನು ಹಾರಿಸಲಿ. ಈಗ ಧರ್ಮರಾಯನು ದುಮ್ಮಾನದಿಂದ ಹಿಂದಿರುಗುತ್ತಿದ್ದಾನೆಯೋ ಅಥವಾ ಮರಣಹೊಂದಿದ್ದಾನೆಯೋ ನಾನು ಅರಿಯೆನು! ನನಗೆ ಅಂಜಿಕೆಯಾಗುತ್ತಿದೆ " ಎಂದು ಅರ್ಜುನನು ಹೇಳಿದನು.
ಮೂಲ ...{Loading}...
ಸೇನೆ ಮುರಿಯಲಿ ಕೌರವನ ದು
ಮ್ಮಾನ ಹರಿಯಲಿ ನನಗೆ ಚಿತ್ತ
ಗ್ಲಾನಿಯೆಳ್ಳನಿತಿಲ್ಲ ಕಟ್ಟಲಿ ಗುಡಿಯ ಗಜನಗರ
ಆ ನರೇಂದ್ರನ ಸಿರಿಮೊಗಕೆ ದು
ಮ್ಮಾನವೋ ಮೇಣ್ ಸುರಪುರಕೆ ಸಂ
ಧಾನವೋ ನಾನರಿಯೆನಳ್ಳೆದೆಯಾದುದೆನಗೆಂದ ॥11॥
೦೧೨ ಧರಣಿಪತಿ ಸಪ್ರಾಣನೇ ...{Loading}...
ಧರಣಿಪತಿ ಸಪ್ರಾಣನೇ ಗಜ
ಪುರದ ರಾಜ್ಯಕೆ ನಿಲಿಸುವೆನು ಮೇಣ್
ಸುರರೊಳಗೆ ಸಮ್ಮೇಳವೇ ಕುಂತೀಕುಮಾರಂಗೆ
ಅರೆಘಳಿಗೆ ಧರ್ಮಜನ ಬಿಟ್ಟಾ
ನಿರೆನು ಮುರಹರ ರಥವ ಮರಳಿಚು
ಮರಳಿಚೈ ರಥ ಮುಂಚುವುದೊ ಮನ ಮುಂಚುವುದೊ ಎಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರ್ಮರಾಯನು ಜೀವಂತನಾಗಿದ್ದರೆ ಅವನಿಗೆ ಹಸ್ತಿನಾವತಿಯಲ್ಲಿ ಪಟ್ಟಕಟ್ಟುತ್ತೇನೆ. ಅಥವಾ ಅವನಿಗೆ ಸ್ವರ್ಗಪ್ರಾಪ್ತಿಯಾಗಿದ್ದರೆ ಧರ್ಮಜನನ್ನು ಬಿಟ್ಟು ನಾನು ಅರೆಘಳಿಗೆ ಇರುವುದಿಲ್ಲ. ಕೃಷ್ಣ, ರಥವನ್ನು ಹಿಂದಕ್ಕೆ ತಿರುಗಿಸು, ತಿರುಗಿಸು. ರಥ ಮುನ್ನುಗುವುದೋ, ಮನಸ್ಸು ಮುನ್ನುಗ್ಗುತ್ತದೆಯೊ ನೋಡೋಣ” ಎಂದು ಅರ್ಜುನನು ಹೇಳಿದನು.
ಮೂಲ ...{Loading}...
ಧರಣಿಪತಿ ಸಪ್ರಾಣನೇ ಗಜ
ಪುರದ ರಾಜ್ಯಕೆ ನಿಲಿಸುವೆನು ಮೇಣ್
ಸುರರೊಳಗೆ ಸಮ್ಮೇಳವೇ ಕುಂತೀಕುಮಾರಂಗೆ
ಅರೆಘಳಿಗೆ ಧರ್ಮಜನ ಬಿಟ್ಟಾ
ನಿರೆನು ಮುರಹರ ರಥವ ಮರಳಿಚು
ಮರಳಿಚೈ ರಥ ಮುಂಚುವುದೊ ಮನ ಮುಂಚುವುದೊ ಎಂದ ॥12॥
೦೧೩ ತಿರುಹಿ ವಾಘೆಯ ...{Loading}...
ತಿರುಹಿ ವಾಘೆಯ ಹಿಡಿದು ಹರಿ ಹೂಂ
ಕರಿಸಿ ಬಿಟ್ಟನು ರಥವನಾತನ
ಮುರಿವ ಕಂಡುದು ಲಳಿ ಮಸಗಿ ಸಮಸಪ್ತಕರ ಸೇನೆ
ಅರರೆ ನರ ಪೈಸರಿಸಿದನೊ ಪೈ
ಸರಿಸಿದನೊ ಫಡ ಹೋಗಬಿಡದಿರಿ
ಕುರುನೃಪಾಲನ ಪುಣ್ಯವೆನುತಟ್ಟಿದರು ಸೂಠಿಯಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ರಥವನ್ನು ತಿರುಗಿಸಿ ಲಗಾಮನ್ನು ಹಿಡಿದು ಹೂಂಕರಿಸಿ ರಥವನ್ನು ನಡೆಸಿದನು. ಆತನು ಹಿಂದಿರುಗುವುದನ್ನು ಸಮಸಪ್ತಕರ ಸೇನೆಯು ನೋಡಿತು. ಅರರೆ! ಅರ್ಜುನನು ಹಿಂದಿರುಗುತ್ತಿರುವನೇ ? ಹಿಮ್ಮೆಟ್ಟಿದನು! ಫಡ! ಕುರುನೃಪಾಲನ ಪುಣ್ಯ! ಅವನಿಗೆ ಹೋಗಲು ಬಿಡದಿರಿ. ಎಂದು ಆವೇಶದಿಂದ ಹೇಳುತ್ತ ವೇಗವಾಗಿ ಅವನನ್ನು ಬೆನ್ನಟ್ಟಿದರು.
ಪದಾರ್ಥ (ಕ.ಗ.ಪ)
ಲಳಿ-ಆವೇಶ, ಪೈಸರಿಸು-ಹಿಮ್ಮೆಟ್ಟು
ಮೂಲ ...{Loading}...
ತಿರುಹಿ ವಾಘೆಯ ಹಿಡಿದು ಹರಿ ಹೂಂ
ಕರಿಸಿ ಬಿಟ್ಟನು ರಥವನಾತನ
ಮುರಿವ ಕಂಡುದು ಲಳಿ ಮಸಗಿ ಸಮಸಪ್ತಕರ ಸೇನೆ
ಅರರೆ ನರ ಪೈಸರಿಸಿದನೊ ಪೈ
ಸರಿಸಿದನೊ ಫಡ ಹೋಗಬಿಡದಿರಿ
ಕುರುನೃಪಾಲನ ಪುಣ್ಯವೆನುತಟ್ಟಿದರು ಸೂಠಿಯಲಿ ॥13॥
೦೧೪ ಕವಿದುದದುಭುತ ಬಲ ...{Loading}...
ಕವಿದುದದುಭುತ ಬಲ ಮುರಾರಿಯ
ತಿವಿದರಡಗಟ್ಟಿದರು ತೇಜಿಯ
ಜವಗೆಡಿಸಿ ತಲೆಯಾರ ತಡೆದರು ತುಡುಕಿದರು ನೊಗನ
ಅವರನೊಂದೇ ನಿಮಿಷದಲಿ ಪರಿ
ಭವಿಸಿ ನಡೆತರೆ ಮುಂದೆ ಗುರುಸಂ
ಭವನ ರಥವಡಹಾಯ್ದುದವನೀಪಾಲ ಕೇಳ್ ಎಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜನೇ ಕೇಳು. ಅದ್ಭುತವಾದ ಸೈನ್ಯವು ಅವರನ್ನು ಕವಿಯಿತು. ಕೃಷ್ಣನನ್ನು ತಿವಿದರು, ಕುದುರೆಯನ್ನು ಅಡ್ಡಗಟ್ಟಿ ಅದರ ವೇಗವನ್ನು ಕೆಡಿಸಿದರು, ಅದನ್ನು ತಲೆಯಾರ ತಡೆದರು. ನೊಗವನ್ನು ಹಿಡಿದರು. ಅವರನ್ನು ಒಂದೇ ನಿಮಿಷದಲ್ಲಿ ಸೋಲಿಸಿ ಅಜುನನು ಮುಂದೆ ನಡೆದರೆ ಅಶ್ವತ್ಥಾಮನ ರಥವು ಅಡ್ಡ ಬಂದಿತು” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಕವಿದುದದುಭುತ ಬಲ ಮುರಾರಿಯ
ತಿವಿದರಡಗಟ್ಟಿದರು ತೇಜಿಯ
ಜವಗೆಡಿಸಿ ತಲೆಯಾರ ತಡೆದರು ತುಡುಕಿದರು ನೊಗನ
ಅವರನೊಂದೇ ನಿಮಿಷದಲಿ ಪರಿ
ಭವಿಸಿ ನಡೆತರೆ ಮುಂದೆ ಗುರುಸಂ
ಭವನ ರಥವಡಹಾಯ್ದುದವನೀಪಾಲ ಕೇಳೆಂದ ॥14॥
೦೧೫ ಇತ್ತಲಿತ್ತಲು ಪಾರ್ಥ ...{Loading}...
ಇತ್ತಲಿತ್ತಲು ಪಾರ್ಥ ಹೋಗದಿ
ರಿತ್ತಲಶ್ವತ್ಥಾಮನಾಣೆ ಮ
ಹೋತ್ತಮರು ಗುರು ಭೀಷ್ಮರಲಿ ಮೆರೆ ನಿನ್ನ ಸಾಹಸವ
ಕಿತ್ತು ಬಿಸುಡುವೆನಸುವನಿದಿರಾ
ಗತ್ತಲೆಲವೋ ನಿನ್ನ ಜೋಕೆಯ
ಜೊತ್ತಿನಾಹವವಲ್ಲೆನುತ ತರುಬಿದನು ಗುರುಸೂನು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರ್ಜುನ, ಈ ಕಡೆ ಈ ಕಡೆ ಆ ಕಡೆಗೆ ಹೋಗಬೇಡ. ಅಶ್ವತ್ಥಾಮನ ಆಣೆ! ನಿನ್ನ ಸಾಹಸವನ್ನು ಮಹಾ ಉತ್ತಮರಾದ ದ್ರೋಣ, ಭೀಷ್ಮರಲ್ಲಿ ತೋರಿಸು. ನಿನ್ನ ಪ್ರಾಣವನ್ನು ನಾನು ಕಿತ್ತು ಬಿಸಾಡುತ್ತೇನೆ. ಎಲವೊ, ಎದುರಿಗೆ ಬಾ. ಇದು ನಿನ್ನ ವಂಚನೆಯ ಮೋಸದ ಯುದ್ದವಲ್ಲ’ ಎನ್ನುತ್ತ ಅಶ್ವತ್ಥಾಮನು ಮುತ್ತಿದನು.
ಪದಾರ್ಥ (ಕ.ಗ.ಪ)
ಜೊತ್ತು-ಮೋಸ
ಮೂಲ ...{Loading}...
ಇತ್ತಲಿತ್ತಲು ಪಾರ್ಥ ಹೋಗದಿ
ರಿತ್ತಲಶ್ವತ್ಥಾಮನಾಣೆ ಮ
ಹೋತ್ತಮರು ಗುರು ಭೀಷ್ಮರಲಿ ಮೆರೆ ನಿನ್ನ ಸಾಹಸವ
ಕಿತ್ತು ಬಿಸುಡುವೆನಸುವನಿದಿರಾ
ಗತ್ತಲೆಲವೋ ನಿನ್ನ ಜೋಕೆಯ
ಜೊತ್ತಿನಾಹವವಲ್ಲೆನುತ ತರುಬಿದನು ಗುರುಸೂನು ॥15॥
೦೧೬ ಆವುದಿಲ್ಲಿಗುಪಾಯವೀತನ ಭಾವ ...{Loading}...
ಆವುದಿಲ್ಲಿಗುಪಾಯವೀತನ
ಭಾವ ಬೆಟ್ಟಿತು ತೆರಹುಗೊಡನಿಂ
ದೀ ವಿಸಂಧಿಯೊಳರಿಯೆನವನಿಪನಾಗುಹೋಗುಗಳ
ದೇವ ಹದನೇನೆನುತ ವರ ಗಾಂ
ಡೀವಿ ಮುಕ್ತಕಳಂಬಕಾಂಡ
ಪ್ರಾವರಣದಲಿ ಮುಸುಕಿದನು ಗುರುನಂದನನ ರಥವ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದಕ್ಕೇನು ಮಾಡುವುದು? ಅಶ್ವತ್ಥಾಮನ (ಉದ್ರೇಕದ) ಭಾವವು ಬಿರುಸಾಗಿದೆ. ಇವನು ಮುಂದೆ ಹೋಗಲು ಅವಕಾಶವನ್ನು ಕೊಡುವುದಿಲ್ಲ. ಇಂದಿನ ಈ ವಿಲಕ್ಷಣ ಸಂದರ್ಭದಲ್ಲಿ ಧರ್ಮರಾಯನ ಆಗುಹೋಗುಗಳು ಹೇಗೋ ನನಗೆ ತಿಳಿಯದು. ಕೃಷ್ಣ, ಈಗ ಮಾಡುವುದಕ್ಕೆ ಉಚಿತವಾದುದು ಯಾವುದು ಎಂದು ಅರ್ಜುನನು ಕೇಳಿ, ತಾನು ಬಿಟ್ಟ ಬಾಣಗಳ ಸಮೂಹದಿಂದ ಅಶ್ವತ್ಥಾಮನ ರಥವನ್ನು ಮುಚ್ಚಿದನು.
ಪದಾರ್ಥ (ಕ.ಗ.ಪ)
ವಿಸಂಧಿ-ಒಪ್ಪಂದ ಮುರಿಯುವಿಕೆ, ಕಳಂಬ-ಬಾಣ, ಪ್ರಾವರಣ-ಮೇಲುಹೊದಿಕೆ
ಮೂಲ ...{Loading}...
ಆವುದಿಲ್ಲಿಗುಪಾಯವೀತನ
ಭಾವ ಬೆಟ್ಟಿತು ತೆರಹುಗೊಡನಿಂ
ದೀ ವಿಸಂಧಿಯೊಳರಿಯೆನವನಿಪನಾಗುಹೋಗುಗಳ
ದೇವ ಹದನೇನೆನುತ ವರ ಗಾಂ
ಡೀವಿ ಮುಕ್ತಕಳಂಬಕಾಂಡ
ಪ್ರಾವರಣದಲಿ ಮುಸುಕಿದನು ಗುರುನಂದನನ ರಥವ ॥16॥
೦೧೭ ಖೂಳ ತೆಗೆ ...{Loading}...
ಖೂಳ ತೆಗೆ ಹೆರಸಾರು ಠಕ್ಕಿನ
ಠೌಳಿಯಾಟವೆ ಕದನ ಕುಟಿಲದ
ಬೇಳುವೆಯ ಡೊಳ್ಳಾಸ ಮದ್ದಿನ ಮಾಯೆ ನಮ್ಮೊಡನೆ
ಅಳುತನವುಳ್ಳೊಡೆ ಮಹಾಸ್ತ್ರದ
ಜಾಳಿಗೆಯನುಗಿಯೆನುತ ಪಾರ್ಥನ
ಕೋಲುಗಳ ನೆರೆ ತರಿದನು ತೀವಿದನಂಬಿನಲಿ ನಭವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಷ್ಟ, ತೆಗೆ. ದೂರಸರಿ. ಠಕ್ಕಿನ ಮೋಸದಾಟವೆ? ನಿನಗೆ ನಮ್ಮೊಡನೆ ಯುದ್ಧದ ಕುತಂತ್ರದ ವಂಚನೆಯ ಜಾಲವೆ? ನಮ್ಮ ವಿಷಯದಲ್ಲಿ ಇಂದ್ರಜಾಲವೆ? ಪರಾಕ್ರಮವಿದ್ದರೆ ಮಹಾಸ್ತ್ರದ ಜಾಲವನ್ನು ಭೇದಿಸು ಎನ್ನುತ್ತ ಅಶ್ವತ್ಥಾಮನು ಅರ್ಜುನನ ಬಾಣಗಳ ಸಮೂಹವನ್ನು ಕತ್ತರಿಸಿ ಆಕಾಶವನ್ನು ತನ್ನ ಬಾಣಗಳಿಂದ ತುಂಬಿದನು.
ಪದಾರ್ಥ (ಕ.ಗ.ಪ)
ಠಕ್ಕು ಠೌಳಿ-ಮೋಸ, ಡೊಳ್ಳಾಸ-ಕಪಟ, ಮೋಸ
ಮೂಲ ...{Loading}...
ಖೂಳ ತೆಗೆ ಹೆರಸಾರು ಠಕ್ಕಿನ
ಠೌಳಿಯಾಟವೆ ಕದನ ಕುಟಿಲದ
ಬೇಳುವೆಯ ಡೊಳ್ಳಾಸ ಮದ್ದಿನ ಮಾಯೆ ನಮ್ಮೊಡನೆ
ಅಳುತನವುಳ್ಳೊಡೆ ಮಹಾಸ್ತ್ರದ
ಜಾಳಿಗೆಯನುಗಿಯೆನುತ ಪಾರ್ಥನ
ಕೋಲುಗಳ ನೆರೆ ತರಿದನು ತೀವಿದನಂಬಿನಲಿ ನಭವ ॥17॥
೦೧೮ ಸರಳ ಹರಿಮೇಖಳೆಗೆ ...{Loading}...
ಸರಳ ಹರಿಮೇಖಳೆಗೆ ನೀವೇ
ಗುರುಗಳಲ್ಲಾ ನಿಮ್ಮ ವಿದ್ಯೆಯ
ಹುರುಳುಗೆಡಿಸುವಿರೆನುತ ಗುರುಸುತನಂಬ ಹರೆಗಡಿದು
ತುರಗದಲಿ ರಥಚಕ್ರದಲಿ ಕೂ
ಬರದೊಳೀಸಿನಲಚ್ಚಿನಲಿ ದು
ರ್ಧರ ಶಿಳೀಮುಖ ಜಾಳವನು ಜೋಡಿಸಿದನಾ ಪಾರ್ಥ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಾಣಗಳ ಯಕ್ಷಿಣಿಗೆ ನೀವೇ ಗುರುಗಳಲ್ಲವೆ! ನಿಮ್ಮ ವಿದ್ಯೆಯ ಅರ್ಥವನ್ನು ನೀವೇ ಕೆಡಿಸುವಿರಾ!” ಎನ್ನುತ್ತ ಅರ್ಜುನನು ಅಶ್ವತ್ಥಾಮನ ಬಾಣಗಳನ್ನು ಕತ್ತರಿಸಿ ಅವನ ಕುದುರೆಯಲ್ಲಿ, ರಥದ ಚಕ್ರದಲ್ಲಿ, ಬಾವುಟದಲ್ಲಿ, ಈಸಿನಲ್ಲಿ, ಅಚ್ಚಿನಲ್ಲಿ, ಸಹಿಸಲಶಕ್ಯವಾದ ಬಾಣಗಳ ಜಾಲವನ್ನು ಜೋಡಿಸಿದನು.
ಪದಾರ್ಥ (ಕ.ಗ.ಪ)
ಕೂಬರ-ಬಾವುಟ, ಶಿಳೀಮುಖ-ಬಾಣ ಈಸು-ಈಚು -ರಥದ ಭಾಗ
ಮೂಲ ...{Loading}...
ಸರಳ ಹರಿಮೇಖಳೆಗೆ ನೀವೇ
ಗುರುಗಳಲ್ಲಾ ನಿಮ್ಮ ವಿದ್ಯೆಯ
ಹುರುಳುಗೆಡಿಸುವಿರೆನುತ ಗುರುಸುತನಂಬ ಹರೆಗಡಿದು
ತುರಗದಲಿ ರಥಚಕ್ರದಲಿ ಕೂ
ಬರದೊಳೀಸಿನಲಚ್ಚಿನಲಿ ದು
ರ್ಧರ ಶಿಳೀಮುಖ ಜಾಳವನು ಜೋಡಿಸಿದನಾ ಪಾರ್ಥ ॥18॥
೦೧೯ ತಳಿವ ನಿನ್ನಮ್ಬಿನ ...{Loading}...
ತಳಿವ ನಿನ್ನಂಬಿನ ಮಳೆಗೆ ಮನ
ನಲಿವ ಚಾತಕಿಯರಿಯೆಲಾ ಕಳ
ವಳಿಸದಿರು ಕೊಳ್ಳಾದಡೆನುತೆಚ್ಚನು ಧನಂಜಯನ
ಹೊಳೆವ ಕಣೆ ಹೊಕ್ಕಿರಿದ ದಾರಿಯೊ
ಳುಳಿದ ಕಣೆ ದಾಂಟಿದವು ಗುರುಸುತ
ತುಳುಕಿದನು ಫಲುಗುಣನ ಮೈಯಲಿ ರಕುತ ರಾಟಳವ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸುರಿಯುವ ನಿನ್ನ ಬಾಣಗಳ ಮಳೆಗೆ ನಾನು ಮನ ನಲಿಯುವ ಚಾತಕ ಪಕ್ಷಿ ತಿಳಿದುಕೋ! ಕಳವಳಿಸಬೇಡ. ಸಾಧ್ಯವಾದರೆ ಈ ಬಾಣವನ್ನು ಸ್ವೀಕರಿಸು. " ಎಂದು ಅಶ್ವತ್ಥಾಮನು ಅರ್ಜುನನನ್ನು ಹೊಡೆದನು. ಅವನ ಹೊಳೆಯುವ ಬಾಣವು ಹೊಕ್ಕು ಇರಿದ ದಾರಿಯಲ್ಲಿ ಉಳಿದ ಬಾಣಗಳು ನುಗ್ಗಿದವು. ಆಶ್ವತ್ಥಾಮನು ಅರ್ಜುನನ ಮೈಯಲ್ಲಿ ರಾಟೆಯಿಂz ನೀರು ಹರಿಸಿದಂತೆ ರಕ್ತವನ್ನು ಹರಿಸಿದನು.
ಪದಾರ್ಥ (ಕ.ಗ.ಪ)
ರಾಟಳ-ರಾಟೆ
ಮೂಲ ...{Loading}...
ತಳಿವ ನಿನ್ನಂಬಿನ ಮಳೆಗೆ ಮನ
ನಲಿವ ಚಾತಕಿಯರಿಯೆಲಾ ಕಳ
ವಳಿಸದಿರು ಕೊಳ್ಳಾದಡೆನುತೆಚ್ಚನು ಧನಂಜಯನ
ಹೊಳೆವ ಕಣೆ ಹೊಕ್ಕಿರಿದ ದಾರಿಯೊ
ಳುಳಿದ ಕಣೆ ದಾಂಟಿದವು ಗುರುಸುತ
ತುಳುಕಿದನು ಫಲುಗುಣನ ಮೈಯಲಿ ರಕುತ ರಾಟಳವ ॥19॥
೦೨೦ ಕಡುಗಿದರೆ ಕಾಲಾಗ್ನಿ ...{Loading}...
ಕಡುಗಿದರೆ ಕಾಲಾಗ್ನಿ ರುದ್ರನ
ಕಡುಹನಾನುವರೀತನೇ ಸೈ
ಗೆಡೆವ ರೋಮದ ಧೂಮ್ರವಕ್ತ್ರದ ಸ್ವೇದಬಿಂದುಗಳ
ಜಡಿವ ರೋಷದ ಭರದಲಡಿಗಡಿ
ಗೊಡಲನೊಲೆದು ಮಹಾಸ್ತ್ರದಲಿ ಕಡಿ
ಕಡಿದು ಬಿಸುಟನು ಗುರುಸುತನ ಸಾರಥಿಯ ರಥಹಯವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ಸಾಹಗೊಂಡರೆ, ಕಾಲಾಗ್ನಿ ರುದ್ರನ ತೀವ್ರತೆಯನ್ನು ಎದುರಿಸುವುದಾದರೆ ಈತನೇ ಸಮರ್ಥ. ಕೆದರಿದ ಕೂದಲು, ಕಪ್ಪಾಗಿ ಬೆವರಿನ ಹನಿಗಳಿಂದ ಕೂಡಿದ ಮುಖದ, ಅರ್ಜುನನು ಹೊಡೆಯುವ ರೋಷದ ಭರದಲ್ಲಿ ಅಡಿಗಡಿಗೆ ದೇಹವನ್ನು ಬಾಗಿಸಿ, ಮಹಾಸ್ತ್ರದಿಂದ ಅಶ್ವತ್ಥಾಮನ ರಥವನ್ನು, ಕುದುರೆಯನ್ನು ಕಡಿಕಡಿದು ಬಿಸಾಡಿದನು.
ಮೂಲ ...{Loading}...
ಕಡುಗಿದರೆ ಕಾಲಾಗ್ನಿ ರುದ್ರನ
ಕಡುಹನಾನುವರೀತನೇ ಸೈ
ಗೆಡೆವ ರೋಮದ ಧೂಮ್ರವಕ್ತ್ರದ ಸ್ವೇದಬಿಂದುಗಳ
ಜಡಿವ ರೋಷದ ಭರದಲಡಿಗಡಿ
ಗೊಡಲನೊಲೆದು ಮಹಾಸ್ತ್ರದಲಿ ಕಡಿ
ಕಡಿದು ಬಿಸುಟನು ಗುರುಸುತನ ಸಾರಥಿಯ ರಥಹಯವ ॥20॥
೦೨೧ ಧನುವನುರು ಬತ್ತಳಿಕೆಗಳನಂ ...{Loading}...
ಧನುವನುರು ಬತ್ತಳಿಕೆಗಳನಂ
ಬಿನ ಹೊದೆಯನುರು ಟೆಕ್ಕೆಯವ ಜೋ
ಡಿನ ಬನವ ಕಡಿದಿಕ್ಕಿದನು ಸೆಕ್ಕಿದನು ಸರಳುಗಳ
ಧನು ವರೂಥದ ಹಾನಿ ಗುರು ನಂ
ದನನ ಗರ್ವವಿನಾಶಿಯೇ ಫಡ
ಎನುತ ಪಾರ್ಥನ ತರುಬಿ ನಿಂದನು ಸೆಳೆದಡಾಯುಧದಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧನುಸ್ಸನ್ನು, ಶ್ರೇಷ್ಠವಾದ ಬತ್ತಳಿಕೆಗಳನ್ನು, ಬಾಣಗಳ ಮೊತ್ತವನ್ನು ಶ್ರೇಷ್ಠವಾದ ಬಾವುಟವನ್ನು, ಕವಚಗಳ ಕಾಡನ್ನು ಕಡಿದಿಟ್ಟನು. ಬಾಣಗಳನ್ನು ನಾಟಿಸಿದನು. ಧನುಸ್ಸು, ರಥಗಳ ಹಾನಿಯು ಅಶ್ವತ್ಥಾಮನ ಗರ್ವವನ್ನು ನಾಶಮಾಡುತ್ತದೆಯೇ? ಫಡ! ಎನ್ನುತ್ತ ಅಶ್ವತ್ಥಾಮನು ಕತ್ತಿಯನ್ನು ಸೆಳೆದು ಅರ್ಜುನನನ್ನು ಎದುರಿಸಿ ನಿಂತನು.
ಮೂಲ ...{Loading}...
ಧನುವನುರು ಬತ್ತಳಿಕೆಗಳನಂ
ಬಿನ ಹೊದೆಯನುರು ಟೆಕ್ಕೆಯವ ಜೋ
ಡಿನ ಬನವ ಕಡಿದಿಕ್ಕಿದನು ಸೆಕ್ಕಿದನು ಸರಳುಗಳ
ಧನು ವರೂಥದ ಹಾನಿ ಗುರು ನಂ
ದನನ ಗರ್ವವಿನಾಶಿಯೇ ಫಡ
ಎನುತ ಪಾರ್ಥನ ತರುಬಿ ನಿಂದನು ಸೆಳೆದಡಾಯುಧದಿ ॥21॥
೦೨೨ ದಿಟ್ಟನೈ ಗುರುಸೂನು ...{Loading}...
ದಿಟ್ಟನೈ ಗುರುಸೂನು ಶಿವ ಜಗ
ಜಟ್ಟಿಯಲ್ಲಾ ಕೌರವೇಂದ್ರನ
ಥಟ್ಟಿನಲಿ ಭಟರಾರೆನುತ ತಲೆದೂಗಿದನು ಪಾರ್ಥ
ಇಟ್ಟಣಿಸಿದನು ಹಿಂದೆ ಕೃಪನಡ
ಗಟ್ಟಿದನು ಸಮಸಪ್ತಕರು ಸಲೆ
ಮುಟ್ಟಿ ಬಂದರು ಕೌರವೇಶ್ವರ ಸಕಲಬಲ ಸಹಿತ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ಧೈರ್ಯವಂತನಯ್ಯಾ! ಶಿವ! ಅವನು ಜಗಜಟ್ಟಿಯಲ್ಲವೆ! ಕೌರವೇಂದ್ರನ ಸೇನೆಯಲ್ಲಿ ಅವನಿಗೆ ಸಮಾನರಾದ ಯೋಧರು ಯಾರು ಎನ್ನುತ್ತ ಅರ್ಜುನನು ತಲೆದೂಗಿದನು. ಹಿಂದೆ ಕೃಪನು ಗುಂಪುಗೂಡಿ ಬಂದು ಅಡ್ಡಗಟ್ಟಿದನು. ಸಮಸಪ್ತಕರು ಕೌರವೇಶ್ವರನ ಸಕಲ ಸೈನ್ಯ ಸಹಿತ ಹತ್ತಿರಕ್ಕೆ ಬಂದರು.
ಮೂಲ ...{Loading}...
ದಿಟ್ಟನೈ ಗುರುಸೂನು ಶಿವ ಜಗ
ಜಟ್ಟಿಯಲ್ಲಾ ಕೌರವೇಂದ್ರನ
ಥಟ್ಟಿನಲಿ ಭಟರಾರೆನುತ ತಲೆದೂಗಿದನು ಪಾರ್ಥ
ಇಟ್ಟಣಿಸಿದನು ಹಿಂದೆ ಕೃಪನಡ
ಗಟ್ಟಿದನು ಸಮಸಪ್ತಕರು ಸಲೆ
ಮುಟ್ಟಿ ಬಂದರು ಕೌರವೇಶ್ವರ ಸಕಲಬಲ ಸಹಿತ ॥22॥
೦೨೩ ತಡೆಯಿ ಪಾರ್ಥನನಿವನ ...{Loading}...
ತಡೆಯಿ ಪಾರ್ಥನನಿವನ ರಾಯನ
ಕೆಡಹಿದನು ಕಲಿ ಕರ್ಣನೀಗಳೆ
ಮುಡುಹುವನು ಪವನಜನನೊಂದರೆಘಳಿಗೆ ಮಾತ್ರದಲಿ
ಬಿಡಿದಿರೀತನನೆನುತ ಕುರುಪತಿ
ಯೊಡನೆ ದುಶ್ಯಾಸನ ಕೃಪಾದಿಗ
ಳಡಸಿದರು ಕೆಂಗೋಲ ಮಳೆಯಲಿ ನಾದಿದರು ನರನ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನನ್ನು ತಡೆಯಿರಿ. ಕಲಿಯಾದ ಕರ್ಣನು ರಾಜ ಧರ್ಮರಾಯನನ್ನು ಕೆಡಹಿದ್ದಾನೆ. ಭೀಮನನ್ನು ಕೂಡ ಈಗಲೇ ಒಂದು ಅರೆಘಳಿಗೆ ಮಾತ್ರದಲ್ಲಿ ಕೊಂದುಹಾಕುತ್ತಾನೆ. ಈತನನ್ನು ಬಿಡದಿರಿ, ಎನ್ನುತ್ತ ದುರ್ಯೋಧನನೊಡನೆ ದುಶ್ಶಾಸನ, ಕೃಪ ಮೊದಲಾದವರು ಮೇಲೆಬಿದ್ದರು. ಅರ್ಜುನನನ್ನು ರಕ್ತದ ಬಾಣಗಳ ಮಳೆಯಲ್ಲಿ ತೀಡಿದರು.
ಮೂಲ ...{Loading}...
ತಡೆಯಿ ಪಾರ್ಥನನಿವನ ರಾಯನ
ಕೆಡಹಿದನು ಕಲಿ ಕರ್ಣನೀಗಳೆ
ಮುಡುಹುವನು ಪವನಜನನೊಂದರೆಘಳಿಗೆ ಮಾತ್ರದಲಿ
ಬಿಡಿದಿರೀತನನೆನುತ ಕುರುಪತಿ
ಯೊಡನೆ ದುಶ್ಯಾಸನ ಕೃಪಾದಿಗ
ಳಡಸಿದರು ಕೆಂಗೋಲ ಮಳೆಯಲಿ ನಾದಿದರು ನರನ ॥23॥
೦೨೪ ಅವನಿಪನ ಕಾಣಿಕೆಗೆ ...{Loading}...
ಅವನಿಪನ ಕಾಣಿಕೆಗೆ ಬಹು ವಿ
ಘ್ನವನು ಬಲಿದುದೆ ದೈವ ಯಂತ್ರವ
ನವಗಡಿಸಿ ನೂಕುವರೆ ನಮ್ಮಳವೇ ಶಿವಾ ಎನುತ
ಕವಲುಗೋಲೈದರಲಿ ಕೃಪ ಕೌ
ರವನ ತಮ್ಮಂದಿರ ಸುಸನ್ನಾ
ಹವ ವಿಸಂಚಿಸಿ ಬಗಿದು ಸಮಸಪ್ತಕರನೊಡೆಹಾಯ್ಸಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನಾದ ಧರ್ಮರಾಯನನ್ನು ಕಾಣುವುದಕ್ಕೆ ದೈವವು ಬಹುವಿಘ್ನವನ್ನು ಒಡ್ಡಿದೆಯೆ? ದೈವಯಂತ್ರವನ್ನು ಪ್ರತಿಭಟಿಸಿ ನಡೆಯುವುದು ನಮಗೆ ಸಾಧ್ಯವೆ? ಶಿವಾ! ಎನ್ನುತ್ತ ಅರ್ಜುನನು ಐದು ಕವಲುಬಾಣಗಳಲ್ಲಿ ಕೃಪ ಕೌರವನ ತಮ್ಮಂದಿರ ಸುಸನ್ನಾಹವನ್ನು ತಪ್ಪಿಸಿ ಸಮಸಪ್ತಕರನ್ನು ಭೇದಿಸಿ ಬೇರೆಮಾಡಿದನು.
ಪದಾರ್ಥ (ಕ.ಗ.ಪ)
ವಿಸಂಚಿಸು-ನಾಶಮಾಡು, ಒಡೆಹಾಯಿಸು-ಬೇರೆಮಾಡು
ಮೂಲ ...{Loading}...
ಅವನಿಪನ ಕಾಣಿಕೆಗೆ ಬಹು ವಿ
ಘ್ನವನು ಬಲಿದುದೆ ದೈವ ಯಂತ್ರವ
ನವಗಡಿಸಿ ನೂಕುವರೆ ನಮ್ಮಳವೇ ಶಿವಾ ಎನುತ
ಕವಲುಗೋಲೈದರಲಿ ಕೃಪ ಕೌ
ರವನ ತಮ್ಮಂದಿರ ಸುಸನ್ನಾ
ಹವ ವಿಸಂಚಿಸಿ ಬಗಿದು ಸಮಸಪ್ತಕರನೊಡೆಹಾಯ್ಸಿ ॥24॥
೦೨೫ ಹೋಗಹೋಗಲು ಮತ್ತೆ ...{Loading}...
ಹೋಗಹೋಗಲು ಮತ್ತೆ ಕುರುಬಲ
ಸಾಗರದ ಭಟಲಹರಿ ಲಳಿಯಲಿ
ತಾಗಿದರು ತುಡುಕಿದರು ತಡೆದರು ನಾಲ್ಕು ದೆಸೆಗಳಲಿ
ನೀಗಿದರು ಶಸ್ರ್ರಾಸ್ತ್ರವನು ಕೈ
ಲಾಗಿನಲಿ ಮರಳಿದರು ಪುನರಪಿ
ತಾಗಿದರು ಗುರುಸೂನು ಕೃತವರ್ಮಾದಿ ನಾಯಕರು ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಮುಂದೆ ಹೋದಂತೆ, ಕುರುಸೈನ್ಯಸಾಗರದ ಯೋಧರ ಅಲೆಗಳ ಉತ್ಸ್ಸಾಹದಲ್ಲಿ ಅಶ್ವತ್ಥಾಮ, ಕೃತವರ್ಮ ಮೊದಲಾದ ನಾಯಕರು ನಾಲ್ಕು ದಿಕ್ಕುಗಳಲ್ಲಿ ಮತ್ತೆ ತಾಗಿದರು, ತುಡುಕಿದರು, ತಡೆದರು. ಶಸ್ರ್ರಾಸ್ತ್ರವನ್ನು ಕಳೆದುಕೊಂಡು ಪುನಹ ಅವನ್ನು ತೆಗೆದುಕೊಂಡು ಸಜ್ಜಾಗಿ ಮರಳಿದರು.
ಪದಾರ್ಥ (ಕ.ಗ.ಪ)
ಕೈಲಾಗು-ಕೈಚಳಕ
ಮೂಲ ...{Loading}...
ಹೋಗಹೋಗಲು ಮತ್ತೆ ಕುರುಬಲ
ಸಾಗರದ ಭಟಲಹರಿ ಲಳಿಯಲಿ
ತಾಗಿದರು ತುಡುಕಿದರು ತಡೆದರು ನಾಲ್ಕು ದೆಸೆಗಳಲಿ
ನೀಗಿದರು ಶಸ್ರ್ರಾಸ್ತ್ರವನು ಕೈ
ಲಾಗಿನಲಿ ಮರಳಿದರು ಪುನರಪಿ
ತಾಗಿದರು ಗುರುಸೂನು ಕೃತವರ್ಮಾದಿ ನಾಯಕರು ॥25॥
೦೨೬ ಮೇಲೆ ಬಿದ್ದುದು ...{Loading}...
ಮೇಲೆ ಬಿದ್ದುದು ಮತ್ತೆ ಬಲಮೇ
ಘಾಳಿ ನೂಕಿತು ನರನ ರಥ ಸುಳಿ
ಗಾಳಿಯಂತಿರೆ ತಿರುತಿರುಗಿದುದು ವಿಶ್ವತೋಮುಖದಿ
ಹೇಳಲೇನವನೀಶ ಚಪಳ ಛ
ಡಾಳ ಪಾರ್ಥನ ವಿಕ್ರಮಾಗ್ನಿ
ಜ್ವಾಲೆಯಲಿ ನೆರೆ ಸೀದು ಸೀಕರಿವೋಯ್ತು ಕುರುಸೇನೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ರಾಜನೆ, ಮತ್ತೆ ಕೌರವ ಸೈನ್ಯದ ಮೋಡಗಳ ಸಮೂಹವು ಆಕ್ರಮಣ ಮಾಡಿತು. ಅರ್ಜುನನ ರಥ ಮುನ್ನುಗ್ಗಿತು. ಅದು ಸುಳಿಗಾಳಿಯಂತೆ ಎಲ್ಲ ದಿಕ್ಕುಗಳಲ್ಲಿಯೂ ತಿರುತಿರುಗುತ್ತಿತ್ತು. ಪ್ರಭು ಏನು ಹೇಳಲಿ? ಅರ್ಜುನನ ಚುರುಕಿನ ರಭಸದ ಪರಾಕ್ರಮವೆಂಬ ಅಗ್ನಿಯ ಜ್ವಾಲೆಯಲ್ಲಿ ಕುರುಸೇನೆಯು ಚೆನ್ನಾಗಿ ಸುಟ್ಟು ಸೀದು ಸೀಕರಿಹೋಯಿತು. " ಎಂದು ಸಂಜಯನು ಹೇಳಿದನು
ಮೂಲ ...{Loading}...
ಮೇಲೆ ಬಿದ್ದುದು ಮತ್ತೆ ಬಲಮೇ
ಘಾಳಿ ನೂಕಿತು ನರನ ರಥ ಸುಳಿ
ಗಾಳಿಯಂತಿರೆ ತಿರುತಿರುಗಿದುದು ವಿಶ್ವತೋಮುಖದಿ
ಹೇಳಲೇನವನೀಶ ಚಪಳ ಛ
ಡಾಳ ಪಾರ್ಥನ ವಿಕ್ರಮಾಗ್ನಿ
ಜ್ವಾಲೆಯಲಿ ನೆರೆ ಸೀದು ಸೀಕರಿವೋಯ್ತು ಕುರುಸೇನೆ ॥26॥
೦೨೭ ಗುರುಸುತನ ಮುರಿಯೆಚ್ಚು ...{Loading}...
ಗುರುಸುತನ ಮುರಿಯೆಚ್ಚು ಶಕುನಿಯ
ಪರಿಭವಿಸಿ ಕೃತವರ್ಮಕನ ವಿ
ಸ್ತರಿಸಲೀಯದೆ ಕೇರಳ ದ್ರವಿಡಾಂಧ್ರ ಕೌಸಲರ
ಹುರುಳುಗೆಡಿಸಿ ಸುಯೋಧನನ ಮೊಗ
ಮುರಿಯಲೆಚ್ಚು ಸುಷೇಣ ಗೌತಮ
ರುರವಣಿಯ ನೆಗ್ಗೊತ್ತಿ ಹಾಯ್ದನು ಮತ್ತೆ ಸೈವರಿದು ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಅಶ್ವತ್ಥಾಮನನ್ನು ಹಿಂದಿರುಗುವಂತೆ ಹೊಡೆದು, ಶಕುನಿಯನ್ನು ಸೋಲಿಸಿ, ಕೃತವರ್ಮಕನು ಮುಂದುವರಿಯಲು ಅವಕಾಶಕೊಡದೆ ಕೇರಳ, ದ್ರವಿಡ, ಆಂಧ್ರ, ಕೌಸಲರನ್ನು ಹುರುಳುಗೆಡಿಸಿ, ಸುಯೋಧನನು ಹಿಮ್ಮೆಟ್ಟುವಂತೆ ಹೊಡೆದು, ಮತ್ತೆ ಮುಂದುವರಿದು ಸುಷೇಣ ಗೌತಮರ ಸಂಭ್ರಮವು ಕುಗ್ಗಿ ಕುಸಿಯುವಂತೆ ಆಕ್ರಮಣ ಮಾಡಿದನು.
ಪದಾರ್ಥ (ಕ.ಗ.ಪ)
ನೆಗ್ಗೊತ್ತು-ಕೆಳಗೆ ಹೋಗುವಂತೆ ತುಳಿ, ಸೈವರಿ-ಮುಂದುವರಿ
ಮೂಲ ...{Loading}...
ಗುರುಸುತನ ಮುರಿಯೆಚ್ಚು ಶಕುನಿಯ
ಪರಿಭವಿಸಿ ಕೃತವರ್ಮಕನ ವಿ
ಸ್ತರಿಸಲೀಯದೆ ಕೇರಳ ದ್ರವಿಡಾಂಧ್ರ ಕೌಸಲರ
ಹುರುಳುಗೆಡಿಸಿ ಸುಯೋಧನನ ಮೊಗ
ಮುರಿಯಲೆಚ್ಚು ಸುಷೇಣ ಗೌತಮ
ರುರವಣಿಯ ನೆಗ್ಗೊತ್ತಿ ಹಾಯ್ದನು ಮತ್ತೆ ಸೈವರಿದು ॥27॥
೦೨೮ ಆವರಿಸಿದುದು ಮತ್ತೆ ...{Loading}...
ಆವರಿಸಿದುದು ಮತ್ತೆ ಹೊಸ ಮೇ
ಳಾವದಲಿ ಕುರುಸೇನೆ ಘನ ಗಾಂ
ಡೀವ ವಿಗಳಿತ ವಿಶಿಖ ವಿಸರದ ವಹಿಗೆ ವಂಚಿಸದೆ
ಲಾವಣಿಗೆಗೊಳಲಲಸಿ ಯಮನನು
ಜೀವಿಗಳು ಜಡರಾಯ್ತು ಫಲುಗುಣ
ನಾವ ವಹಿಲದಲೆಸುವನೆಂಬುದನರಿಯೆ ನಾನೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಘನವಾದ ಗಾಂಡೀವದಿಂದ ಹೊರಬಿದ್ದ ಬಾಣಗಳ ಸಮೂಹದ ಲೆಕ್ಕಕ್ಕೆ ನುಸುಳಿಕೊಳ್ಳದೆ, ಕುರುಸೇನೆಯು ಹೊಸದಾಗಿ ಕೂಡಿಕೊಂಡು ಮತ್ತೆ ಮುತ್ತಿತು. ಯುದ್ಧದಲ್ಲಿ ಸತ್ತವರನ್ನು ಲೆಕ್ಕಕ್ಕ್ಕೆ ತೆಗೆದುಕೊಳ್ಳಲು ಅಲಸಿ ಯಮನ ಕಿಂಕರರು ಜಡರಾದರು. ಅರ್ಜುನನು ಯಾವ ವೇಗದಲ್ಲಿ ಬಾಣಬಿಡುತ್ತಾನೆ ಎಂಬುದನ್ನು ನಾನು ಅರಿಯೆ” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ವಹಿ-ಲೆಕ್ಕ, ಲಾವಣಿಗೆಗೊಳ್ಳು-ವಶಕ್ಕೆ ತೆಗೆದುಕೊ, ಅನುಜೀವಿ-ಕಿಂಕರ
ಮೂಲ ...{Loading}...
ಆವರಿಸಿದುದು ಮತ್ತೆ ಹೊಸ ಮೇ
ಳಾವದಲಿ ಕುರುಸೇನೆ ಘನ ಗಾಂ
ಡೀವ ವಿಗಳಿತ ವಿಶಿಖ ವಿಸರದ ವಹಿಗೆ ವಂಚಿಸದೆ
ಲಾವಣಿಗೆಗೊಳಲಲಸಿ ಯಮನನು
ಜೀವಿಗಳು ಜಡರಾಯ್ತು ಫಲುಗುಣ
ನಾವ ವಹಿಲದಲೆಸುವನೆಂಬುದನರಿಯೆ ನಾನೆಂದ ॥28॥
೦೨೯ ಜಾಳಿಸಿತು ರಥ ...{Loading}...
ಜಾಳಿಸಿತು ರಥ ಜಡಿವ ಕೌರವ
ನಾಳ ಝೋಂಪಿಸಿ ಡೊಂಬು ಮಾಡುವ
ಜಾಳ ಝಾಡಿಸಿ ಬೈದು ಹೊಕ್ಕನು ಮತ್ತೆ ಗುರುಸೂನು
ಖೂಳ ಫಡಫಡ ಜಾರದಿರು ತೋ
ರಾಳ ತೂರಿದ ಡೊಂಬು ಬೇಡ ವಿ
ಡಾಳ ವಿದ್ಯೆಗಳೆಮ್ಮೊಡನೆಯೆನುತೆಚ್ಚನರ್ಜುನನ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಪಾರ್ಥನ ರಥವು ಜಡಿಯುವ ಕೌರವನ ಯೋಧರನ್ನು ಬೆದರಿಸಿತು, ಅಶ್ವತ್ಥಾಮನು ತೋರಿಕೆಯನ್ನು ಮಾಡುರ ಜಾಲವನ್ನು ಝಾಡಿಸಿ ಬೈದು ಮತ್ತೆ ಹೊಕ್ಕನು. “ಖೂಳ! ಫಡಫಡ! ಜಾರಿಕೊಳ್ಳಬೇಡ. ನಿಲ್ಲು. ಸೈನ್ಯವನ್ನು ಚದುರಿಸಿದ ದೊಂಬರಾಟ ಇಲ್ಲಿ ಬೇಡ. ನಮ್ಮ ಸಂಗಡ ಕಪಟವಿದ್ಯೆಯೇ?” ಎನ್ನುತ್ತ ಅರ್ಜುನನ್ನು ಹೊಡೆದನು.
ಪದಾರ್ಥ (ಕ.ಗ.ಪ)
ಡೊಂಬುಮಾಡು-ಆರ್ಭಟಿಸು, ಝೋಂಪಿಸು-ಬೆಚ್ಚಿಸಿ, ವಿಡಾಳ - ವಿಡಾಯ? ವಿಢಾಳ?
ಮೂಲ ...{Loading}...
ಜಾಳಿಸಿತು ರಥ ಜಡಿವ ಕೌರವ
ನಾಳ ಝೋಂಪಿಸಿ ಡೊಂಬು ಮಾಡುವ
ಜಾಳ ಝಾಡಿಸಿ ಬೈದು ಹೊಕ್ಕನು ಮತ್ತೆ ಗುರುಸೂನು
ಖೂಳ ಫಡಫಡ ಜಾರದಿರು ತೋ
ರಾಳ ತೂರಿದ ಡೊಂಬು ಬೇಡ ವಿ
ಡಾಳ ವಿದ್ಯೆಗಳೆಮ್ಮೊಡನೆಯೆನುತೆಚ್ಚನರ್ಜುನನ ॥29॥
೦೩೦ ಗುರುಸುತನನೊಟ್ಟೈಸಿ ಫಲುಗುಣ ...{Loading}...
ಗುರುಸುತನನೊಟ್ಟೈಸಿ ಫಲುಗುಣ
ತಿರುಗಿ ಹಾಯ್ದನು ಮುಂದೆ ಶರಪಂ
ಜರವ ಹೂಡಿದನೀತನಾತನ ಬಯ್ದು ಬೆಂಬತ್ತಿ
ಸರಳ ಹರಹಿನ ಹೂಟವನು ಕಾ
ಹುರದ ಕಡುಹಿನಲೊದೆದು ಬೊಬ್ಬಿರಿ
ದುರವಣಿಸಿದನು ಪಾರ್ಥನೀತನ ಧನುವ ಖಂಡಿಸಿದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನನ್ನು ಆಕ್ರಮಿಸಿ ಅರ್ಜುನನು ತಿರುಗಿ ಹಿಂದಿರುಗಿದನು. ಆಗ ಅಶ್ವತ್ಥಾಮನು ಅರ್ಜುನನ್ನು ಬಯ್ದು ಶರಪಂಜರವನ್ನು ಹೂಡಿ ಬೆಂಬತ್ತಿದನು. ಬಾಣಗಳನ್ನು ಹರಡುವ ಅಶ್ವತ್ಥಮನ ಹೂಟವನ್ನು ಕಾಡಿನ ತೊರೆಯ ವೇಗದಲ್ಲಿ ನಿವಾರಿಸಿ ಅರ್ಜುನನು ಬೊಬ್ಬಿರಿದು ಉರವಣಿಸಿದನು. ಅವನ ಬಿಲ್ಲನ್ನು ಕತ್ತರಿಸಿದನು.
ಪದಾರ್ಥ (ಕ.ಗ.ಪ)
ಒಟ್ಟೈಸು-ಪ್ರತಿಭಟಿಸು, ಕಾಹುರ- ಕಾಡಿನ ತೊರೆ,
ಮೂಲ ...{Loading}...
ಗುರುಸುತನನೊಟ್ಟೈಸಿ ಫಲುಗುಣ
ತಿರುಗಿ ಹಾಯ್ದನು ಮುಂದೆ ಶರಪಂ
ಜರವ ಹೂಡಿದನೀತನಾತನ ಬಯ್ದು ಬೆಂಬತ್ತಿ
ಸರಳ ಹರಹಿನ ಹೂಟವನು ಕಾ
ಹುರದ ಕಡುಹಿನಲೊದೆದು ಬೊಬ್ಬಿರಿ
ದುರವಣಿಸಿದನು ಪಾರ್ಥನೀತನ ಧನುವ ಖಂಡಿಸಿದ ॥30॥
೦೩೧ ಧನು ಮುರಿಯೆ ...{Loading}...
ಧನು ಮುರಿಯೆ ದಿಟ್ಟಾಯ ತನವೀ
ತನಲಿ ಸಾಕಿನ್ನೆನುತ ಗುರು ನಂ
ದನನು ಮುರಿದನು ಹೊಗರು ಮೋರೆಯ ಹೊತ್ತ ದುಗುಡದಲಿ
ಅನಿಲಸೂನುವ ಹಳಚಿದರು ಮು
ಮ್ಮೊನೆಯ ಬೋಳೆಯ ಮೈಯ ಕೊಳು ಕೊಡೆ
ಯೆನಗೆ ತನಗೆಂಬಗ್ಗಳಿಕೆಗಳ ಮೆರೆದರಿಚ್ಛೆಯಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲು ಮುರಿಯಲು ಅಶ್ವತ್ಥಾಮನು, ‘ಇವನಲ್ಲಿ ಪರಾಕ್ರಮವು ಇನ್ನು ಸಾಕು’ ಎಂದು ಸಿಡಿಮಿಡಿಗುಟ್ಟುವ ಮೋರೆಯನ್ನು ಹೊತ್ತು ದುಗುಡದಲ್ಲಿ ಹಿಂದಿರುಗಿದನು. ಅವನ ಕಡೆಯವರು ಭೀಮನನ್ನು ಮುತ್ತಿದರು. ಭೀಮನ ಮೈನ್ನು ಹರಿತವಾದ ಮೊನೆಯ ಬಾಣದಿಂದ ಘಾತಿಸಲು ನಾನು ತಾನು ಎಂಬ ಶೌರ್ಯದಲ್ಲಿ ಕಾದಿದರು.
ಪದಾರ್ಥ (ಕ.ಗ.ಪ)
ದಿಟ್ಟಾಯತನ-ಪರಾಕ್ರಮ, ಹಳಚು-ಆಕ್ರಮಿಸು
ಮೂಲ ...{Loading}...
ಧನು ಮುರಿಯೆ ದಿಟ್ಟಾಯ ತನವೀ
ತನಲಿ ಸಾಕಿನ್ನೆನುತ ಗುರು ನಂ
ದನನು ಮುರಿದನು ಹೊಗರು ಮೋರೆಯ ಹೊತ್ತ ದುಗುಡದಲಿ
ಅನಿಲಸೂನುವ ಹಳಚಿದರು ಮು
ಮ್ಮೊನೆಯ ಬೋಳೆಯ ಮೈಯ ಕೊಳು ಕೊಡೆ
ಯೆನಗೆ ತನಗೆಂಬಗ್ಗಳಿಕೆಗಳ ಮೆರೆದರಿಚ್ಛೆಯಲಿ ॥31॥
೦೩೨ ತರಣಿತನಯನ ತೆಗೆದು ...{Loading}...
ತರಣಿತನಯನ ತೆಗೆದು ಭೀಮನೊ
ಳುರವಣಿಸಿ ಗುರುಸೂನು ಕಾದು
ತ್ತಿರೆ ಧನಂಜಯ ತೆರಳಿದನು ಪಾಳೆಯದ ಪಥವಿಡಿದು
ಅರರೆ ಫಲುಗುಣನೋಟವನು ಸಂ
ಗರ ಸಮರ್ಥರ ನೋಟವನು ನ
ಮ್ಮರಸ ಕಂಡನಲಾ ಎನುತ ನೂಕಿದನು ಕಲಿಕರ್ಣ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ಕರ್ಣನನ್ನು ಅತ್ತ ಸರಿಸಿ ತಾನು ಭೀಮನೊಂದಿಗೆ ಸಂಭ್ರಮದಿಂದ ಯುದ್ಧಮಾಡುತ್ತಿರಲು ಅರ್ಜುನನು ಪಾಳೆಯದ ದಾರಿಯನ್ನು ಹಿಡಿದು ತೆರಳಿದನು. ಅದನ್ನು ನೋಡಿದ ಕಲಿ ಕರ್ಣನು ಅರರೆ, ಅರ್ಜುನನ ಓಟವನ್ನು ನಮ್ಮ ಯುದ್ಧಸಮರ್ಥರು ನೋಡುತ್ತಿರುವುದನ್ನು ಅರಸನು ಕಾಣುವಂತಾಯಿತಲ್ಲಾ ಎನ್ನುತ್ತ ಮುನ್ನುಗ್ಗಿದನು.
ಮೂಲ ...{Loading}...
ತರಣಿತನಯನ ತೆಗೆದು ಭೀಮನೊ
ಳುರವಣಿಸಿ ಗುರುಸೂನು ಕಾದು
ತ್ತಿರೆ ಧನಂಜಯ ತೆರಳಿದನು ಪಾಳೆಯದ ಪಥವಿಡಿದು
ಅರರೆ ಫಲುಗುಣನೋಟವನು ಸಂ
ಗರ ಸಮರ್ಥರ ನೋಟವನು ನ
ಮ್ಮರಸ ಕಂಡನಲಾ ಎನುತ ನೂಕಿದನು ಕಲಿಕರ್ಣ ॥32॥
೦೩೩ ನೆರೆದುದಲ್ಲಿಯದಲ್ಲಿ ಕಹಳೆಯ ...{Loading}...
ನೆರೆದುದಲ್ಲಿಯದಲ್ಲಿ ಕಹಳೆಯ
ಧರಧುರದ ನಿಸ್ಸಾಳ ಸೂಳಿನ
ಮೊರೆವ ಭೇರಿಯ ರಾಯಗಿಡಿಗನ ಜಡಿವ ಚಂಬಕನ
ತುರಗ ಕರಿ ರಥ ಪಾಯದಳ ಚಾ
ಮರದ ಧವಳಚ್ಛತ್ರ ಪಟ ಪಳ
ಹರದ ಪಡಪಿನಲೌಕಿ ನಡೆದುದು ಮುಂದೆ ಪಾಯದಳ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿಯದು (ಸೇನೆ) ಅಲ್ಲಿ ನೆರೆಯಿತು. ಕಹಳೆ, ಭೋರಿಡುವ ನಿಸ್ಸಾಳವಾದ್ಯ, ಮೊರೆವ ಭೇರಿ, ರಾಯಗಿಡಿಗನೆಂಬ ವಾದ್ಯ, ಹೊಯ್ಯುವ ತಮಟೆ, ಕುದುರೆ ಆನೆ ರಥ ಪದಾತಿದಳ, ಚಾಮರ, ಧವಳಚ್ಛತ್ರ, ಪಟ ಬಾವುಟ ಎಲ್ಲವುಗಳ ಆಧಿಕ್ಯದಲ್ಲಿ ಪದಾತಿ ದಳಗಳು ಒತ್ತಿ ಮುಂದೆ ನಡೆದವು.
ಪದಾರ್ಥ (ಕ.ಗ.ಪ)
ರಾಯಗಿಡಿಗ- ಒಂದು ಬಗೆಯ ದೊಡ್ಡ ವಾದ್ಯ ಚಂಬಕ- ತಮಟೆ ಪಳಹರ- ಬಾವುಟ ಪಡಪು- ಆಧಿಕ್ಯ
ಮೂಲ ...{Loading}...
ನೆರೆದುದಲ್ಲಿಯದಲ್ಲಿ ಕಹಳೆಯ
ಧರಧುರದ ನಿಸ್ಸಾಳ ಸೂಳಿನ
ಮೊರೆವ ಭೇರಿಯ ರಾಯಗಿಡಿಗನ ಜಡಿವ ಚಂಬಕನ
ತುರಗ ಕರಿ ರಥ ಪಾಯದಳ ಚಾ
ಮರದ ಧವಳಚ್ಛತ್ರ ಪಟ ಪಳ
ಹರದ ಪಡಪಿನಲೌಕಿ ನಡೆದುದು ಮುಂದೆ ಪಾಯದಳ ॥33॥
೦೩೪ ಕವಿದು ಕೆನ್ಧೂಳಿಡುವ ...{Loading}...
ಕವಿದು ಕೆಂಧೂಳಿಡುವ ಸೇನಾ
ಟವಿಯ ನೋಡುತ ಹಿಂದೆ ಕರ್ಣನ
ಲವಲವಿಕೆಯಾಯತವ ಕಂಡನು ಕದನಕೇಳಿಯಲಿ
ಅವನಿಪನ ದರುಶನವೆನಗೆ ಸಂ
ಭವಿಸಲರಿಯದು ಭಾಪುರೇ ಕೌ
ರವ ಮಹಾರ್ಣವವೆನುತ ಮಕುಟವ ತೂಗಿದನು ಪಾರ್ಥ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕವಿದು ಕೆಂಧೂಳಿಡುತ್ತಿರುವ ಸೇನಾಸಮೂಹವನ್ನೂ ಹಿಂದೆ ಕದನಕ್ರೀಡೆಯಲ್ಲಿ ಕರ್ಣನಿಗಿರುವ ಲವಲವಿಕೆಯ ಅತಿಶಯತೆಯನ್ನೂ ಅರ್ಜುನನು ಕಂಡನು. ಧರ್ಮರಾಯನ ದರ್ಶನವು ನನಗೆ ಸಿಗಲು ಸಾಧ್ಯವಿಲ್ಲ. ಭಾಪುರೇ! ಕೌರವ ಸೇನಾ ಸಮುದ್ರವೇ ಎನ್ನುತ್ತ ಅವನು ಮಕುಟವನ್ನು ತೂಗಿದನು.
ಪದಾರ್ಥ (ಕ.ಗ.ಪ)
ಆಯತ-ಅತಿಶಯ, ಆಧಿಕ್ಯ
ಮೂಲ ...{Loading}...
ಕವಿದು ಕೆಂಧೂಳಿಡುವ ಸೇನಾ
ಟವಿಯ ನೋಡುತ ಹಿಂದೆ ಕರ್ಣನ
ಲವಲವಿಕೆಯಾಯತವ ಕಂಡನು ಕದನಕೇಳಿಯಲಿ
ಅವನಿಪನ ದರುಶನವೆನಗೆ ಸಂ
ಭವಿಸಲರಿಯದು ಭಾಪುರೇ ಕೌ
ರವ ಮಹಾರ್ಣವವೆನುತ ಮಕುಟವ ತೂಗಿದನು ಪಾರ್ಥ ॥34॥
೦೩೫ ಬಳಿಕ ಸೇನಾಸ್ತಮ್ಭ ...{Loading}...
ಬಳಿಕ ಸೇನಾಸ್ತಂಭ ಶರದಲಿ
ನಿಲಿಸಿದನು ಮಾರ್ಬಲವನಿತ್ತಲು
ಚಳೆಯದಲಿ ಹಿಮ್ಮೆಟ್ಟುತಿರೆ ಕಂಡನು ಧನಂಜಯನ
ಹೊಳಹು ದೂವಾಳಿಯಲಿ ಪಾರ್ಥನ
ಕೆಲಕೆ ಬಿಟ್ಟನು ರಥವ ನಿಲು ನಿ
ಲ್ಲೆಲವೊ ಹೋಗದಿರೆನುತ ಬೆಂಬತ್ತಿದನು ಕಲಿಕರ್ಣ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ಅರ್ಜುನನು ಶತ್ರುಸೈನ್ಯವನ್ನು ಸೇನಾಸ್ತಂಭನ ಬಾಣದಿಂದ ನಿಲ್ಲಿಸಿ ಪಾಳೆಯದತ್ತ ವೇಗವಾಗಿ ತೆರಳಿದನು. ಇತ್ತ ಕರ್ಣನು ವೇಗವಾಗಿ ಹಿಮ್ಮೆಟ್ಟುತ್ತಿರುವ ಅರ್ಜುನನನ್ನು ನೋಡಿದನು. ಹೊಳಹು, ದೂವಾಳಿ ಎಂಬ ಗತಿಭೇದಗಳಲ್ಲಿ ರಥವನ್ನು ಅರ್ಜುನನ ಸಮೀಪಕ್ಕೆ ಓಡಿಸಿದನು. “ನಿಲ್ಲು! ನಿಲ್ಲು! ಎಲವೊ ಹೋಗದಿರು!” ಎನ್ನುತ್ತ ಅವನನ್ನು ಬೆಂಬತ್ತಿದನು.
ಪದಾರ್ಥ (ಕ.ಗ.ಪ)
ಸೇನಾಸ್ತಂಭ ಶರ-ಸೇನೆಯನ್ನು ನಿಶ್ಚಲಗೊಳಿಸುವ ಬಾಣ, ಚಳಯ-ವೇಗವಾಗಿ , ಹೊಳಹು ದೂವಾಳಿ-ಕುದುರೆಯ ಗತಭೇದಗಳು
ಮೂಲ ...{Loading}...
ಬಳಿಕ ಸೇನಾಸ್ತಂಭ ಶರದಲಿ
ನಿಲಿಸಿದನು ಮಾರ್ಬಲವನಿತ್ತಲು
ಚಳೆಯದಲಿ ಹಿಮ್ಮೆಟ್ಟುತಿರೆ ಕಂಡನು ಧನಂಜಯನ
ಹೊಳಹು ದೂವಾಳಿಯಲಿ ಪಾರ್ಥನ
ಕೆಲಕೆ ಬಿಟ್ಟನು ರಥವ ನಿಲು ನಿ
ಲ್ಲೆಲವೊ ಹೋಗದಿರೆನುತ ಬೆಂಬತ್ತಿದನು ಕಲಿಕರ್ಣ ॥35॥
೦೩೬ ಕಣ್ಡನರ್ಜುನನಿದಿರೊಳಿವನು ...{Loading}...
ಕಂಡನರ್ಜುನನಿದಿರೊಳಿವನು
ದ್ದಂಡತನವನು ನೃಪತಿ ಚಿಂತಾ
ಖಂಡಧೈರ್ಯರು ನಾವಲಾ ಹೊತ್ತಲ್ಲ ಕಾದುವರೆ
ಕಂಡಿರೇ ಮುರವೈರಿ ದಳಪತಿ
ಚಂಡಬಳನಹ ನಡುಹಗಲ ಮಾ
ರ್ತಾಂಡನಂತಿರೆ ತೋರುತೈದನೆ ರಥವ ತಿರುಹೆಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಎದುರಿನಲ್ಲಿ ಕರ್ಣನ ಉದ್ದಂಡತನವನ್ನು ಅರ್ಜುನನು ನೋಡಿದನು. “ಈಗ ನಾವು ಧರ್ಮರಾಯನ ಚಿಂತೆಯಿಂದ ಧೈರ್ಯ ಕುಗ್ಗಿದವರಲ್ಲವೇ? ಇದು ಯುದ್ಧಮಾಡುವ ಸಮಯವಲ್ಲ. ನೋಡಿದೆಯಾ ಮುರವೈರಿ, ದಳಪತಿ ಕರ್ಣನು ತೀಕ್ಷ್ಣವಾದ ನಡುಹಗಲ ಸೂರ್ಯನಂತೆ ತೋರುತ್ತಿದ್ದಾನೆ. ರಥವನ್ನು ತಿರುಗಿಸು” ಎಂದು ಅರ್ಜುನನು ಹೇಳಿದನು.
ಮೂಲ ...{Loading}...
ಕಂಡನರ್ಜುನನಿದಿರೊಳಿವನು
ದ್ದಂಡತನವನು ನೃಪತಿ ಚಿಂತಾ
ಖಂಡಧೈರ್ಯರು ನಾವಲಾ ಹೊತ್ತಲ್ಲ ಕಾದುವರೆ
ಕಂಡಿರೇ ಮುರವೈರಿ ದಳಪತಿ
ಚಂಡಬಳನಹ ನಡುಹಗಲ ಮಾ
ರ್ತಾಂಡನಂತಿರೆ ತೋರುತೈದನೆ ರಥವ ತಿರುಹೆಂದ ॥36॥
೦೩೭ ಜೀವಿಸಿರಲಾವಾವ ಲೇಸಿನ ...{Loading}...
ಜೀವಿಸಿರಲಾವಾವ ಲೇಸಿನ
ಠಾವ ಕಾಣೆನು ಜೀಯ ಕರ್ಣನ
ನಾವು ತೊಡಚುವರಲ್ಲ ತೆರಳಿಚು ಪಾಳೆಯಕೆ ರಥವ
ಈ ವಿಗಡನಂತಿರಲೆನುತ ಗಾಂ
ಡೀವಿ ಚಾಪವನಿಳುಹೆ ರಥವನು
ದೇವಕೀಸುತ ನೂಕಿದನು ಪವಮಾನ ವೇಗದಲಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಡೆಯಾ, ನಾವು ಜೀವಿಸಿದ್ದರೆ ಯಾವ ಕ್ಷೇಮದ ತಾಣವನ್ನು ತಾನೆ ಕಾಣುವುದಿಲ್ಲ! ಕರ್ಣನಿಗೆ ನಾನು ಬಾಣ ಹೂಡುವುದಿಲ್ಲ. ರಥವನ್ನು ಪಾಳೆಯಕ್ಕೆ ತೆರಳಿಸು. ಈ ವಿಗಡನು ಹಾಗೆಯೇ ಇರಲಿ” ಎನ್ನುತ್ತ ಅರ್ಜುನನು ಧನುಸ್ಸನ್ನು ಇಳಿಸಲು, ಕೃಷ್ಣನು ವಾಯುವೇಗದಿಂದ ರಥವನ್ನು ಓಡಿಸಿದನು.
ಪದಾರ್ಥ (ಕ.ಗ.ಪ)
ತೊಡಚು-ಬಾಣ ಹೂಡು
ಮೂಲ ...{Loading}...
ಜೀವಿಸಿರಲಾವಾವ ಲೇಸಿನ
ಠಾವ ಕಾಣೆನು ಜೀಯ ಕರ್ಣನ
ನಾವು ತೊಡಚುವರಲ್ಲ ತೆರಳಿಚು ಪಾಳೆಯಕೆ ರಥವ
ಈ ವಿಗಡನಂತಿರಲೆನುತ ಗಾಂ
ಡೀವಿ ಚಾಪವನಿಳುಹೆ ರಥವನು
ದೇವಕೀಸುತ ನೂಕಿದನು ಪವಮಾನ ವೇಗದಲಿ ॥37॥
೦೩೮ ಬರುತ ಭೀಮನ ...{Loading}...
ಬರುತ ಭೀಮನ ಕಂಡರಾತನ
ಹೊರೆಗೆ ಬಿಟ್ಟರು ರಥವನರ್ಜುನ
ಕರೆದು ಬೆಸಗೊಂಡನು ನೃಪಾಲನ ಕ್ಷೇಮ ಕೌಶಲವ
ಅರಸನಿಂದು ಸಜೀವಿಯೋ ಸುರ
ಪುರ ನಿವಾಸಿಯೊ ಹದನನೇನೆಂ
ದರಿಯೆನೀ ಸಂಗ್ರಾಮ ಧುರವೆನಗೆಂದನಾ ಭೀಮ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರು ಬರುತ್ತಿರುವಾಗ ಭೀಮನನ್ನು ನೋಡಿದರು. ರಥವನ್ನು ಅವನ ಸಮೀಪಕ್ಕೆ ತಂದರು. ಅರ್ಜುನನು ಅವನನ್ನು ಕರೆದು ಧರ್ಮರಾಯನ ಕ್ಷೇಮಕೌಶಲವನ್ನು ವಿಚಾರಿಸಿದನು. ಇಲ್ಲಿಯ ಯುದ್ಧದಲ್ಲಿ ಮಗ್ನನಾಗಿದ್ದೇನೆ. ಧರ್ಮರಾಯನು ಬದುಕಿದ್ದಾನೆಯೋ ಸ್ವರ್ಗವಾಸಿಯೋ ಎಂಬುದು ನನಗೆ ಗೊತ್ತಿಲ್ಲ" ಎಂದು ಭೀಮನು ಹೇಳಿದನು.
ಮೂಲ ...{Loading}...
ಬರುತ ಭೀಮನ ಕಂಡರಾತನ
ಹೊರೆಗೆ ಬಿಟ್ಟರು ರಥವನರ್ಜುನ
ಕರೆದು ಬೆಸಗೊಂಡನು ನೃಪಾಲನ ಕ್ಷೇಮ ಕೌಶಲವ
ಅರಸನಿಂದು ಸಜೀವಿಯೋ ಸುರ
ಪುರ ನಿವಾಸಿಯೊ ಹದನನೇನೆಂ
ದರಿಯೆನೀ ಸಂಗ್ರಾಮ ಧುರವೆನಗೆಂದನಾ ಭೀಮ ॥38॥
೦೩೯ ಆದಡೆಲೆ ಪವಮಾನಸುತ ...{Loading}...
ಆದಡೆಲೆ ಪವಮಾನಸುತ ನೀ
ನಾದರಿಸು ನಡೆ ನೃಪತಿಯನು ನಾ
ಕಾದುವೆನು ಕೌರವರ ಸಕಲಬಲ ಪ್ರಘಾಟದಲಿ
ಕೈದುಕಾರರು ನಿಖಿಳ ದೆಸೆಗಳ
ಲೈದಿ ಬರುತಿದೆ ನೀ ಮರಳು ನಾ
ಛೇದಿಸುವೆನರೆಘಳಿಗೆ ಮಾತ್ರದಲೆಂದನಾ ಪಾರ್ಥ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹಾಗಾದರೆ “ಎಲೆ ಭೀಮ, ನೀನು ನಡೆ. ನೃಪತಿಯನ್ನು ನೋಡಿಕೋ. ನಾನು ಕೌರವರ ಎಲ್ಲ ಸೈನ್ಯಗಳ ಸಮೂಹದಲ್ಲಿ ಯುದ್ಧಮಾಡುತ್ತೇನೆ ವೀರರು ಎಲ್ಲ ದಿಕ್ಕುಗಳಿಂದ ಬರುತ್ತಿದ್ದಾರೆ. ನೀನು ಹಿಂದಿರುಗು. ನಾನು ಅವರನ್ನು ಅರೆಘಳಿಗೆ ಮಾತ್ರದಲ್ಲಿ ಕತ್ತರಿಸುತ್ತೇನೆ” ಎಂದು ಅರ್ಜುನನು ಹೇಳಿದನು.
ಪದಾರ್ಥ (ಕ.ಗ.ಪ)
ಪ್ರಘಾಟ-ಸಮೂಹ
ಮೂಲ ...{Loading}...
ಆದಡೆಲೆ ಪವಮಾನಸುತ ನೀ
ನಾದರಿಸು ನಡೆ ನೃಪತಿಯನು ನಾ
ಕಾದುವೆನು ಕೌರವರ ಸಕಲಬಲ ಪ್ರಘಾಟದಲಿ
ಕೈದುಕಾರರು ನಿಖಿಳ ದೆಸೆಗಳ
ಲೈದಿ ಬರುತಿದೆ ನೀ ಮರಳು ನಾ
ಛೇದಿಸುವೆನರೆಘಳಿಗೆ ಮಾತ್ರದಲೆಂದನಾ ಪಾರ್ಥ ॥39॥
೦೪೦ ಎಲೆ ಧನಞ್ಜಯ ...{Loading}...
ಎಲೆ ಧನಂಜಯ ನೀನೆ ಬಲುಗೈ
ಯುಳಿದವರು ರಣಖೇಡರೇ ಕುರು
ಬಲವನೊಬ್ಬನೆ ಕೇಣಿಗೊಂಡೆನು ಕರ್ಣ ಮೊದಲಾಗಿ
ಅಳಿಕಿಸುವೆನೀಕ್ಷಣಕೆ ತನ್ನ
ಗ್ಗಳಿಕೆಯನು ನೋಡವನಿಪಾಲನ
ಬಳಲಿಕೆಯ ಸಂತೈಸು ನಡೆ ನೀನೆಂದನಾ ಭೀಮ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆ ಅರ್ಜುನ, ನೀನೇ ಬಲಶಾಲಿ, ಉಳಿದವರು ರಣಹೇಡಿಗಳೇ? ಕರ್ಣ ಮೊದಲಾಗಿ ಕುರುಸೈನ್ಯವನ್ನು ನಾನೊಬ್ಬನೇ ಗುತ್ತಿಗೆ ತೆಗೆದುಕೊಂಡಿದ್ದೇನೆ. ನಿಮಿಷಮಾತ್ರದಲ್ಲಿ ಅಂಜಿಕೆ ಹುಟ್ಟಿಸುತ್ತೇನೆ; ನನ್ನ ಹಿರಿಮೆಯನ್ನು ನೋಡು. ನೀನು ಧರ್ಮರಾಯನ ಬಳಲಿಕೆಯನ್ನು ಸಂತೈಸು, ನಡೆ ಎಂದು ಭೀಮನು ಹೇಳಿದನು.
ಪದಾರ್ಥ (ಕ.ಗ.ಪ)
ಬಲುಗೈ-ಬಲಶಾಲಿ, ರಣಖೇಡಿ-ರಣಹೇಡಿ, ಅಳಿಕಿಸು-ಹೆದರಿಸು
ಪಾಠಾನ್ತರ (ಕ.ಗ.ಪ)
ಅಳಿಕಿಸು - ಅಳುಕಿಸು
ಕರ್ಣಪರ್ವ ಮೈ.ವಿ.ವಿ. ಆವೃತ್ತಿ
ಮೂಲ ...{Loading}...
ಎಲೆ ಧನಂಜಯ ನೀನೆ ಬಲುಗೈ
ಯುಳಿದವರು ರಣಖೇಡರೇ ಕುರು
ಬಲವನೊಬ್ಬನೆ ಕೇಣಿಗೊಂಡೆನು ಕರ್ಣ ಮೊದಲಾಗಿ
ಅಳಿಕಿಸುವೆನೀಕ್ಷಣಕೆ ತನ್ನ
ಗ್ಗಳಿಕೆಯನು ನೋಡವನಿಪಾಲನ
ಬಳಲಿಕೆಯ ಸಂತೈಸು ನಡೆ ನೀನೆಂದನಾ ಭೀಮ ॥40॥