೦೦೦ ಸೂ ರಾಯದಳದುಳಕಾರ ...{Loading}...
ಸೂ. ರಾಯದಳದುಳಕಾರ ಕೌರವ
ರಾಯಸೇನಾಸೂರೆಕಾರನ
ಜೇಯನೋ ಕಲಿಭೀಮ ಗೆಲಿದನು ಭಾನುನಂದನನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ: ರಾಜಸೂರೆಗಾರನೂ ಕೌರವರಾಯನ ಸೇನೆಯ ಸೂರೆಕಾರನೂ ಆದ ಕಲಿಭೀಮನು ಅಜೇಯನು. ಅವನು ಕರ್ಣನನ್ನು ಗೆದ್ದನು.
ಪದಾರ್ಥ (ಕ.ಗ.ಪ)
ದಳದುಳಕಾರ-ಕೊಳ್ಳೆ ಹೊಡೆಯುವವ
ಮೂಲ ...{Loading}...
ಸೂ. ರಾಯದಳದುಳಕಾರ ಕೌರವ
ರಾಯಸೇನಾಸೂರೆಕಾರನ
ಜೇಯನೋ ಕಲಿಭೀಮ ಗೆಲಿದನು ಭಾನುನಂದನನ
೦೦೧ ಏನ ಹೇಳುವೆನರಸ ...{Loading}...
ಏನ ಹೇಳುವೆನರಸ ಪಾಂಡವ
ಸೇನೆಗಾದ ವಿಪತ್ತನರಸನ
ಹಾನಿಯನು ನಿನ್ನವರ ಸುಮ್ಮಾನದ ಸಘಾಡಿಕೆಯ
ಭಾನುಸುತನೋ ಕೌರವನ ಮದ
ದಾನೆಯೋ ಕುರುಸೈನ್ಯ ನಳಿನೀ
ಭಾನು ಮಝ ಭಾಪೆಂದು ಹೊಗಳಿತು ಕೂಡೆ ಪರಿವಾರ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ, ಪಾಂಡವರ ಸೇನೆಗೆ ಆದ ವಿಪತ್ತನ್ನೂ ಧರ್ಮರಾಯನಿಗಾದ ಹಾನಿಯನ್ನೂ ನಿನ್ನವರ ಸಂತೋಷದ ಉಬ್ಬಟೆಯನ್ನೂ ಏನೆಂದು ಹೇಳಲಿ? ಇವನು ಸೂರ್ಯನ ಮಗನೊ? ದುರ್ಯೋಧನನ ಮದಿಸಿದ ಆನೆಯೊ? ಕುರುಸೈನ್ಯವೆಂಬ ಕಮಲಕ್ಕೆ ಸೂರ್ಯ! ಮಝ! ಭಾಪು! ಎಂದು ಸೇರಿದ್ದ ಪರಿವಾರವು ಕರ್ಣನನ್ನು ಹೊಗಳಿತು.
ಮೂಲ ...{Loading}...
ಏನ ಹೇಳುವೆನರಸ ಪಾಂಡವ
ಸೇನೆಗಾದ ವಿಪತ್ತನರಸನ
ಹಾನಿಯನು ನಿನ್ನವರ ಸುಮ್ಮಾನದ ಸಘಾಡಿಕೆಯ
ಭಾನುಸುತನೋ ಕೌರವನ ಮದ
ದಾನೆಯೋ ಕುರುಸೈನ್ಯ ನಳಿನೀ
ಭಾನು ಮಝ ಭಾಪೆಂದು ಹೊಗಳಿತು ಕೂಡೆ ಪರಿವಾರ ॥1॥
೦೦೨ ಇವರ ಹರುಷದ ...{Loading}...
ಇವರ ಹರುಷದ ನಗೆಯನಾ ಬಲ
ದವರ ಮೋರೆಯ ಹೊಗೆಯನೀ ಬಲ
ದವರ ಭುಜದುರೆವೊಯ್ಲನಾ ಬಲದವರ ಬಿಸುಸುಯ್ಲ
ಇವರೊಸಗೆ ಕೈಗುಡಿಯನಾ ಬಲ
ದವರ ಗೆಲುವಿನ ಗಡಿಯ ನೀ ಚಿ
ತ್ತವಿಸಿದೈ ಧೃತರಾಷ್ಟ್ರ ಎಂದನು ಸಂಜಯನು ನಗುತ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ, ಕೌರವರ ಹರುಷದ ನಗೆಯನ್ನೂ ಪಾಂಡವರ ಮುಖದ ದುಗುಡವನ್ನೂ ಈ ಸೈನ್ಯದವರು ಉತ್ಸಾಹದಿಂದ ಭುಜತಟ್ಟುವುದನ್ನೂ ಆ ಸೈನ್ಯದವರು ನಿಟ್ಟುಸಿರು ಬಿಡುವುದನ್ನೂ, ಇವರು ಪ್ರೀತಿಯಿಂದ ಕೈಯಲ್ಲಿ ಹಿಡಿದ ಬಾವುಟವನ್ನು ಬೀಸುವುದನ್ನೂ ಅವರ ಸೈನ್ಯದ ಗೆಲುವಿನ ಮೇರೆಯನ್ನೂ ನೀನು ಮನವರಿಕೆ ಮಾಡಿಕೊಂಡೆ! ಎಂದು ಸಂಜಯನು ನಗುತ್ತ ಹೇಳಿದನು
ಮೂಲ ...{Loading}...
ಇವರ ಹರುಷದ ನಗೆಯನಾ ಬಲ
ದವರ ಮೋರೆಯ ಹೊಗೆಯನೀ ಬಲ
ದವರ ಭುಜದುರೆವೊಯ್ಲನಾ ಬಲದವರ ಬಿಸುಸುಯ್ಲ
ಇವರೊಸಗೆ ಕೈಗುಡಿಯನಾ ಬಲ
ದವರ ಗೆಲುವಿನ ಗಡಿಯ ನೀ ಚಿ
ತ್ತವಿಸಿದೈ ಧೃತರಾಷ್ಟ್ರ ಎಂದನು ಸಂಜಯನು ನಗುತ ॥2॥
೦೦೩ ಅಳುವವರ ನಗಿಸುವುದು ...{Loading}...
ಅಳುವವರ ನಗಿಸುವುದು ನಗುವರ
ನಳಿಸುವುದು ಗೆಲಿದವರ ಸೋಲಿಸಿ
ಗೆಲಿಸುವುದು ಸೋತವರನೀ ವಿಪರೀತಗತಿ ವಿಧಿಗೆ
ಅಳಲದಿರು ಸುಮ್ಮಾನದಲಿ ವೆ
ಗ್ಗಳಿಸದಿರು ನಿನ್ನವರು ನಿಮಿಷದೊ
ಳಳಲುದೊರೆಯಲಿ ಮುಳುಗುವಂದವನಿನ್ನು ಕೇಳ್ ಎಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವಿಧಿ, ಅಳುವವರನ್ನು ನಗಿಸುತ್ತದೆ; ನಗುವವರನ್ನು ಅಳಿಸುತ್ತದೆ. ಗೆದ್ದವರನ್ನು ಸೋಲಿಸಿ ಸೋತವರನ್ನು ಗೆಲ್ಲಿಸುತ್ತದೆ. ಈ ವಿಪರೀತ ವರ್ತನೆಯ ವಿಧಿಗೆ ಶೋಕಿಸಬೇಡ; ಸಂತೋಷದಿಂದ ಉಬ್ಬಬೇಡ. ನಿಮಿಷದಲ್ಲಿ ನಿನ್ನವರು ದುಃಖದ ತೊರೆಯಲ್ಲಿ ಮುಳುಗುವ ರೀತಿಯನ್ನು ಇನ್ನು ಕೇಳು” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ವೆಗ್ಗಳಿಸು-ಹಿಗ್ಗು, ಉಬ್ಬು
ಮೂಲ ...{Loading}...
ಅಳುವವರ ನಗಿಸುವುದು ನಗುವರ
ನಳಿಸುವುದು ಗೆಲಿದವರ ಸೋಲಿಸಿ
ಗೆಲಿಸುವುದು ಸೋತವರನೀ ವಿಪರೀತಗತಿ ವಿಧಿಗೆ
ಅಳಲದಿರು ಸುಮ್ಮಾನದಲಿ ವೆ
ಗ್ಗಳಿಸದಿರು ನಿನ್ನವರು ನಿಮಿಷದೊ
ಳಳಲುದೊರೆಯಲಿ ಮುಳುಗುವಂದವನಿನ್ನು ಕೇಳೆಂದ ॥3॥
೦೦೪ ಲಳಿಯ ಲಹರಿಯಲಬ್ಬರದ ...{Loading}...
ಲಳಿಯ ಲಹರಿಯಲಬ್ಬರದ ಕಳ
ಕಳದ ವಾದ್ಯದ ಲಗ್ಗೆಯಲಿ ಪರ
ಬಲವ ಹೊಕ್ಕನು ಮತ್ತೆ ಮೂದಲಿಸುತ್ತ ಮಹಿಪತಿಯ
ಎಲೆಲೆ ರಾಯನ ರಣಕೆ ಮಾರಿದ
ತಲೆಯ ಕದ್ದಿರೆ ಕುನ್ನಿಗಳಿರೆನು
ತೊಳಗೊಳಗೆ ಬಿಡೆ ಜರೆದು ಜೋಡಿಸಿ ನೂಕಿತರಿಸೇನೆ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಅಬ್ಬರದ, ಕಳಕಳ ಧ್ವನಿಮಾಡುವ ವಾದ್ಯಗಳ ಬೊಬ್ಬೆಯಲ್ಲಿ, ಧರ್ಮರಾಯನನ್ನು ಮತ್ತೆ ಮೂದಲಿಸುತ್ತ ಸಾಮಥ್ರ್ಯದ ಅತಿಶಯತೆಯಲ್ಲಿ ಶತ್ರು ಸೈನ್ಯವನ್ನು ಹೊಕ್ಕನು ‘ಎಲೆಲೆ! ರಾಜನ ಯುದ್ಧಕ್ಕೆ ಎಂದು ಮಾರಿಕೊಂಡಿದ್ದ ನೀವು ತಲೆ ತಪ್ಪಿಸಿಕೊಂಡು ಹೋಗುತ್ತಿರುವಿರಾ? ಕುನ್ನಿಗಳಿರಾ!’ ಎನ್ನುತ್ತ ಅರಿಸೇನೆ ತಮ್ಮಲ್ಲಿಯೇ ಬಿಡದೆ ಮೂದಲಿಸುತ್ತ ಜೊತೆಗೂಡಿ ಮುನ್ನುಗ್ಗಿತು.
ಮೂಲ ...{Loading}...
ಲಳಿಯ ಲಹರಿಯಲಬ್ಬರದ ಕಳ
ಕಳದ ವಾದ್ಯದ ಲಗ್ಗೆಯಲಿ ಪರ
ಬಲವ ಹೊಕ್ಕನು ಮತ್ತೆ ಮೂದಲಿಸುತ್ತ ಮಹಿಪತಿಯ
ಎಲೆಲೆ ರಾಯನ ರಣಕೆ ಮಾರಿದ
ತಲೆಯ ಕದ್ದಿರೆ ಕುನ್ನಿಗಳಿರೆನು
ತೊಳಗೊಳಗೆ ಬಿಡೆ ಜರೆದು ಜೋಡಿಸಿ ನೂಕಿತರಿಸೇನೆ ॥4॥
೦೦೫ ಅಕಟ ರಾಯನ ...{Loading}...
ಅಕಟ ರಾಯನ ಹರಿಬದಲಿ ಸೇ
ವಕರಿಗಾದುದು ಸೂರೆ ವೃಂದಾ
ರಕ ವಧೂವರ್ಗದಲಿ ಚಾಳಿಸಬೇಡ ವಿಗ್ರಹಕೆ
ವಿಕಳಬಲನಿವನೇನು ಭಾಳಾಂ
ಬಕನೊ ಬಲಿಬಂಧಕನೊ ಸುರಪಾ
ಲಕನೋ ಫಡಫಡ ಎನುತ ಕವಿದುದು ಕರ್ಣನಿದಿರಿನಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
‘5. ಅಕಟ! ರಾಜನ ಕರ್ತವ್ಯದಲ್ಲಿ ಸೇವೆಯ ಮಂದಿ ಅಪ್ಸರೆಯರಿಂದ ಸೂರೆಯಾದರು! ಯುದ್ಧಕ್ಕೆ ಬೇಸರಪಡಬೇಡ. ಬಲಹೀನನಾದ ಇವನು ಏನು ಹಣೆಯಲ್ಲಿ ಕಣ್ಣುಳ್ಳ ರುದ್ರನೊ? ಬಲಿಯನ್ನು ಬಂಧಿಸಿದ ಹರಿಯೊ? ದೇವೇಂದ್ರನೊ? ಫಡ! ಫಡ!’ ಎನ್ನುತ್ತ ಶತ್ರುಸೈನ್ಯವು ಕರ್ಣನ ಎದುರು ಕವಿಯಿತು.
ಪದಾರ್ಥ (ಕ.ಗ.ಪ)
ವೃಂದಾರಕ ವಧೂವರ್ಗ-ಅಪ್ಸರೆಯರ ಗುಂಪು, ಚಾಳಿಸು-ಬೇಸರಿಸು, ತಿರಸ್ಕರಿಸು,
ಮೂಲ ...{Loading}...
ಅಕಟ ರಾಯನ ಹರಿಬದಲಿ ಸೇ
ವಕರಿಗಾದುದು ಸೂರೆ ವೃಂದಾ
ರಕ ವಧೂವರ್ಗದಲಿ ಚಾಳಿಸಬೇಡ ವಿಗ್ರಹಕೆ
ವಿಕಳಬಲನಿವನೇನು ಭಾಳಾಂ
ಬಕನೊ ಬಲಿಬಂಧಕನೊ ಸುರಪಾ
ಲಕನೋ ಫಡಫಡ ಎನುತ ಕವಿದುದು ಕರ್ಣನಿದಿರಿನಲಿ ॥5॥
೦೦೬ ಅರಸ ಕೇಳಾಕ್ಷಣಕೆ ...{Loading}...
ಅರಸ ಕೇಳ್ ಆ ಕ್ಷಣಕೆ ರುಧಿರದ
ಬಿರುವೊನಲ ಬಲುಗೆಸರ ನೆಣ-ವಸೆಯ್
ಅರಿಲ ನೆಲದಲಿ ಧೂಳಿಯ್ ಎದ್ದುದು ದಳದ ಪದ-ಹತಿಗೆ
ಸರ-ಕಟಿಸಿ ರಿಪು ಸರ್ವದಳ ಸಂ
ವರಿಸಿ ನೂಕಿತು ಕಲ್ಪ-ಮೇಘದ
ಸರಿವಳೆಗೆ ಸಿಗುರೆದ್ದು ಕೊಬ್ಬಿದ ಕಡಲಿನ್ ಅಂದದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ. ಕೇಳು. ಸೈನ್ಯದ ಕಾಲತುಳಿತಕ್ಕೆ ಆ ಕ್ಷಣದಲ್ಲಿ ರಕ್ತದ ದೊಡ್ಡ ಪ್ರವಾಹದ ಬಗ್ಗಡದಿಂದ ಕೂಡಿದ ಕೊಬ್ಬಿನ ರಾಡಿಯ ನೆಲದಲ್ಲಿ ಸೈನ್ಯದ ಕಾಲ್ತುಳಿತಕ್ಕೆ ಕೆಸರು ಮೇಲೆ ಸಿಡಿಯಿತು. ಯುಗಾಂತದ ಸುರಿಮಳೆಗೆ ಸಿಗುರೆದ್ದು ಕೊಬ್ಬಿದ ಕಡಲಿನ ಹಾಗೆ ಶತ್ರುಗಳ ಸರ್ವದಳಗಳೂ ರಭಸವಾಗಿ ದಾಳಿ ಇಟ್ಟು ಮುನ್ನುಗ್ಗಿದವು.
ಪದಾರ್ಥ (ಕ.ಗ.ಪ)
ನೆಣವಸೆ-ಕೊಬ್ಬಿನ ತೇವ; ಅಱಿಲ್-ಬಗ್ಗಡ, ರಾಡಿ, ಕೆಸರು (ಅಱಿಲ್<ಅಳಿಱ್)
ಮೂಲ ...{Loading}...
ಅರಸ ಕೇಳಾಕ್ಷಣಕೆ ರುಧಿರದ
ಬಿರುವೊನಲ ಬಲುಗೆಸರ ನೆಣವಸೆ
ಯರಿಲ ನೆಲದಲಿ ಧೂಳಿಯೆದ್ದುದು ದಳದ ಪದಹತಿಗೆ
ಸರಕಟಿಸಿ ರಿಪು ಸರ್ವದಳ ಸಂ
ವರಿಸಿ ನೂಕಿತು ಕಲ್ಪಮೇಘದ
ಸರಿವಳೆಗೆ ಸಿಗುರೆದ್ದು ಕೊಬ್ಬಿದ ಕಡಲಿನಂದದಲಿ ॥6॥
೦೦೭ ನೊನ್ದನೇ ಧರ್ಮಜನು ...{Loading}...
ನೊಂದನೇ ಧರ್ಮಜನು ಭಂಗಕೆ
ತಂದನೇ ರಾಧೇಯನಕಟಕ
ಟಿಂದು ಮಡಿದರೆ ಭೀಮಪಾರ್ಥರು ಭೀತಿಯೇಕಿದಕೆ
ನೊಂದನೀ ಪರಿ ತನ್ನ ಕಂಗಳ
ಮುಂದೆ ನರಪತಿ ಪಾರ್ಥನಿನ್ನೇ
ನೆಂದು ಮುನಿವನೊ ಶಿವಶಿವಾ ಎಂದಳಲಿದನು ಭೀಮ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಧರ್ಮರಾಯನು ನೊಂದನೇ? ಅವನನ್ನು ಕರ್ಣನು ಕಷ್ಟಕ್ಕೆ ಗುರಿಮಾಡಿದನೆ? ಅಕಟಾ! ಭೀಮಪಾರ್ಥರು ಇಂದು ಮಡಿದರೆ? ಇದಕ್ಕೆ ಭೀತಿಯೇಕೆ? ಧರ್ಮರಾಯನು ತನ್ನ ಕಣ್ಣುಗಳ ಮುಂದೆಯೇ ಈ ರೀತಿ ನೊಂದನು. ಇನ್ನು ಪಾರ್ಥನು ನನ್ನ ಮೇಲೆ ಏನೆಂದು ಮುನಿಯುತ್ತಾನೆಯೊ ಶಿವಶಿವಾ!’ ಎಂದು ಭೀಮನು ದುಃಖಿಸಿದನು.
ಮೂಲ ...{Loading}...
ನೊಂದನೇ ಧರ್ಮಜನು ಭಂಗಕೆ
ತಂದನೇ ರಾಧೇಯನಕಟಕ
ಟಿಂದು ಮಡಿದರೆ ಭೀಮಪಾರ್ಥರು ಭೀತಿಯೇಕಿದಕೆ
ನೊಂದನೀ ಪರಿ ತನ್ನ ಕಂಗಳ
ಮುಂದೆ ನರಪತಿ ಪಾರ್ಥನಿನ್ನೇ
ನೆಂದು ಮುನಿವನೊ ಶಿವಶಿವಾ ಎಂದಳಲಿದನು ಭೀಮ ॥7॥
೦೦೮ ಅರಸ ಮುರಿವಡೆದಲ್ಲಿ ...{Loading}...
ಅರಸ ಮುರಿವಡೆದಲ್ಲಿ ದಿಕ್ಕನೆ
ಬೆರಸಿದನೆ ಬವರವನೆನುತ ನ
ಮ್ಮರಸಿ ನಗಳೇ ಭಂಡವೀರನ ಮಾತ ತೆಗೆಯೆನುತ
ಅರಸ ತಾನಿನ್ನಾವ ಪರಿ ಹೇ
ವರಿಸುವನೊ ತಾ ಮುನ್ನ ಕರ್ಣನ
ಶರಹತಿಯಲೇಕಳಿದುದಿಲ್ಲಾ ಎನುತ ಚಿಂತಿಸಿದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರ್ಮರಾಯನು ಹಿಮ್ಮೆಟ್ಟಿದಾಗ ಇವನು ಯುದ್ಧವನ್ನು ಕೈಗೊಂಡನೇ, ಈ ಭಂಡವೀರನ ಮಾತನ್ನು ಬಿಡು ಎಂದು ನಮ್ಮ ಅರಸಿ ದ್ರೌಪದಿಯು ನಗುವುದಿಲ್ಲವೆ? " ಧರ್ಮರಾಯನು ಇನ್ನು ಯಾವ ರೀತಿ ಜಿಗುಪ್ಸೆಪಡುತ್ತಾನೆಯೊ? ಹೀಗಾಗುವ ಮೊದಲೆ ತಾನು ಕರ್ಣನ ಬಾಣದ ಹೊಡೆತದಿಂದ ಏಕೆ ಸಾಯಲಿಲ್ಲ?’ ಎಂದು ಭೀಮನು ಚಿಂತಿಸಿದನು.
ಮೂಲ ...{Loading}...
ಅರಸ ಮುರಿವಡೆದಲ್ಲಿ ದಿಕ್ಕನೆ
ಬೆರಸಿದನೆ ಬವರವನೆನುತ ನ
ಮ್ಮರಸಿ ನಗಳೇ ಭಂಡವೀರನ ಮಾತ ತೆಗೆಯೆನುತ
ಅರಸ ತಾನಿನ್ನಾವ ಪರಿ ಹೇ
ವರಿಸುವನೊ ತಾ ಮುನ್ನ ಕರ್ಣನ
ಶರಹತಿಯಲೇಕಳಿದುದಿಲ್ಲಾ ಎನುತ ಚಿಂತಿಸಿದ ॥8॥
೦೦೯ ನರನ ಖಾತಿಗೆ ...{Loading}...
ನರನ ಖಾತಿಗೆ ದ್ರೌಪದಿಯ ತೂ
ತ್ತಿರುಗಳುಪಹಾಸ್ಯಕ್ಕೆ ನೃಪತಿಯ
ಮರಣ ಸಾದೃಶ್ಯ ಪ್ರಹಾರವ್ಯಥೆಯ ಕಾಣಿಕೆಗೆ
ಅರರೆ ಭಾಜನವಾದೆನೈ ಹರ
ಹರ ಮಹಾದೇವಾ ಎನುತ ತುದಿ
ವೆರಳಲಾಲಿಯ ನೀರ ಮಿಡಿದಳಲಿದನು ಕಲಿಭೀಮ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನ ಕೋಪಕ್ಕೆ, ದ್ರೌಪದಯ ದಾಸಿಯರ ಪರಿಹಾಸಕ್ಕೆ, ಸಾವಿಗೆ ಸಮನಾದ ಹೊಡೆತಗಳನ್ನು ಅನುಭವಿಸಿದ ಧರ್ಮರಾಯನ ದುಃಖದ ನೋಟಕ್ಕೆ ಅರರೆ! ನಾನು ಭಾಜನನಾದೆನಲ್ಲಾ! ಹರಹರ! ಮಹಾದೇವಾ!’ ಎನ್ನುತ್ತ ಕಲಿಭೀಮನು ತುದಿಬೆರಳಿನಲ್ಲಿ ಕಣ್ಣನೀರನ್ನು ಒರೆಸಿ ದುಃಖಿಸಿದನು.
ಮೂಲ ...{Loading}...
ನರನ ಖಾತಿಗೆ ದ್ರೌಪದಿಯ ತೂ
ತ್ತಿರುಗಳುಪಹಾಸ್ಯಕ್ಕೆ ನೃಪತಿಯ
ಮರಣ ಸಾದೃಶ್ಯ ಪ್ರಹಾರವ್ಯಥೆಯ ಕಾಣಿಕೆಗೆ
ಅರರೆ ಭಾಜನವಾದೆನೈ ಹರ
ಹರ ಮಹಾದೇವಾ ಎನುತ ತುದಿ
ವೆರಳಲಾಲಿಯ ನೀರ ಮಿಡಿದಳಲಿದನು ಕಲಿಭೀಮ ॥9॥
೦೧೦ ಅರಸ ಕೇಳೈ ...{Loading}...
ಅರಸ ಕೇಳೈ ಶೋಕರಸಸಾ
ಗರದೊಳದ್ದುದೊ ವಡಬನೆನೆ ಕ
ಣ್ಣರಳಿದವು ಕುಡಿಮೀಸೆ ಕುಣಿದವು ಸುಯ್ಲ ಹೊಗೆ ಮಸಗೆ
ಕರ ನಡುಗೆ ಮೈ ಬಲಿಯೆ ಹುಬ್ಬುಗ
ಳುರೆ ಬಿಗಿಯೆ ಕಂಗಳಲಿ ಕೆಂಗಿಡಿ
ಸುರಿಯೆ ವೀರಾವೇಶದಲಿ ಮಸಗಿದನು ಕಲಿಭೀಮ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು, ವಡಬಾನಲವು ಶೋಕರಸದ ಸಾಗರದಲ್ಲಿ ಅದ್ದಿದೆಯೊ ಎನ್ನುವಂತೆ ಭೀಮನ ಕಣ್ಣುಗಳು ಅರಳಿದವು. ಕುಡಿಮೀಸೆಗಳು ಕುಣಿದವು. ನಿಟ್ಟುಸಿರಿನ ಹೊಗೆ ಹೊತ್ತಿ, ಕೈ ನಡುಗಿ, ಮೈ ಸೆಟೆದು, ಹುಬ್ಬುಗಳು ಚೆನ್ನಾಗಿ ಬಿಗಿದು ಕಣ್ಣುಗಳಲ್ಲಿ ಕೆಂಗಿಡಿಗಳು ಸುರಿಯುತ್ತಿರಲು ಕಲಿಭೀಮನು ವೀರಾವೇಷದಿಂದ ಕೆರಳಿದನು.
ಮೂಲ ...{Loading}...
ಅರಸ ಕೇಳೈ ಶೋಕರಸಸಾ
ಗರದೊಳದ್ದುದೊ ವಡಬನೆನೆ ಕ
ಣ್ಣರಳಿದವು ಕುಡಿಮೀಸೆ ಕುಣಿದವು ಸುಯ್ಲ ಹೊಗೆ ಮಸಗೆ
ಕರ ನಡುಗೆ ಮೈ ಬಲಿಯೆ ಹುಬ್ಬುಗ
ಳುರೆ ಬಿಗಿಯೆ ಕಂಗಳಲಿ ಕೆಂಗಿಡಿ
ಸುರಿಯೆ ವೀರಾವೇಶದಲಿ ಮಸಗಿದನು ಕಲಿಭೀಮ ॥10॥
೦೧೧ ಧರಣಿಪನ ಸಂರಕ್ಷೆಗೈಸಾ ...{Loading}...
ಧರಣಿಪನ ಸಂರಕ್ಷೆಗೈಸಾ
ವಿರ ರಥವನಿಪ್ಪತ್ತು ಸಾವಿರ
ತುರಗವನು ಹದಿನಾರು ಸಾವಿರ ಮತ್ತಗಜಘಟೆಯ
ದೊರೆಗಳನು ಸಹದೇವ ಸಾತ್ಯಕಿ
ವರನಕುಳ ಸುತಸೋಮ ಪಾಂಚಾ
ಲರ ಕುಮಾರಾನೀಕವನು ಕರೆಕರೆದು ನೇಮಿಸಿದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು, ಧರ್ಮರಾಯನ ಸಂರಕ್ಷಣೆಗೆ ಐದು ಸಾವಿರ ರಥಗಳನ್ನೂ ಇಪ್ಪತ್ತು ಸಾವಿರ ಕುದುರೆಗಳನ್ನೂ ಹದಿನಾರು ಸಾವಿರ ಮದಿಸಿದ ಆನೆಗಳ ಸಮೂಹವನ್ನೂ ರಾಜರುಗಳನ್ನೂ ಸಹದೇವ, ಸಾತ್ಯಕಿ, ನಕುಲ, ಸುತಸೋಮ, ಪಾಂಚಾಲರ ಮಕ್ಕಳ ಸಮೂಹವನ್ನೂ ಕರೆದು ನೇಮಿಸಿದನು.
ಮೂಲ ...{Loading}...
ಧರಣಿಪನ ಸಂರಕ್ಷೆಗೈಸಾ
ವಿರ ರಥವನಿಪ್ಪತ್ತು ಸಾವಿರ
ತುರಗವನು ಹದಿನಾರು ಸಾವಿರ ಮತ್ತಗಜಘಟೆಯ
ದೊರೆಗಳನು ಸಹದೇವ ಸಾತ್ಯಕಿ
ವರನಕುಳ ಸುತಸೋಮ ಪಾಂಚಾ
ಲರ ಕುಮಾರಾನೀಕವನು ಕರೆಕರೆದು ನೇಮಿಸಿದ ॥11॥
೦೧೨ ವೈರಿ ಕರ್ಣನ ...{Loading}...
ವೈರಿ ಕರ್ಣನ ಕಾಂತೆಯರ ದೃಗು
ವಾರಿ ಧಾರೆಯಲೆನ್ನ ಭಾರಿಯ
ಭೂರಿ ಕೋಪಾನಳನ ಲಳಿಯನು ತಗ್ಗಿಸುವೆನೆನುತ
ಧಾರುಣೀಪತಿಗೆರಗಿ ನಿಜ ಪರಿ
ವಾರವನು ಸುಯ್ದಾನವರಸೆನು
ತಾರುಭಟೆಯಲಿ ಭೀಮ ಮೊಳಗಿದನಹಿತ ಮೋಹರಕೆ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು “ವೈರಿಯಾದ ಕರ್ಣನ ಕಾಂತೆಯರ ಕಣ್ಣನೀರಿನ ಧಾರೆಯಲ್ಲಿ ನನ್ನ ಮಹತ್ತಾದ ಕೋಪವೆಂಬ ಬೆಂಕಿಯ ಉರುಬನ್ನು ತಗ್ಗಿಸುತ್ತೇನೆ’ ಎನ್ನುತ್ತ, ಧರ್ಮರಾಯನಿಗೆ ನಮಸ್ಕರಿಸಿ, ತನ್ನ ಪರಿವಾರಕ್ಕೆ “ಎಚ್ಚರಿಕೆ, ಅರಸು!” ಹೇಳುತ್ತ, ಶತ್ರುಸೇನೆಯನ್ನು ಉದ್ದೇಶಿಸಿ ಆರ್ಭಟದಿಂದ ಗುಡುಗಿದನು.
ಮೂಲ ...{Loading}...
ವೈರಿ ಕರ್ಣನ ಕಾಂತೆಯರ ದೃಗು
ವಾರಿ ಧಾರೆಯಲೆನ್ನ ಭಾರಿಯ
ಭೂರಿ ಕೋಪಾನಳನ ಲಳಿಯನು ತಗ್ಗಿಸುವೆನೆನುತ
ಧಾರುಣೀಪತಿಗೆರಗಿ ನಿಜ ಪರಿ
ವಾರವನು ಸುಯ್ದಾನವರಸೆನು
ತಾರುಭಟೆಯಲಿ ಭೀಮ ಮೊಳಗಿದನಹಿತ ಮೋಹರಕೆ ॥12॥
೦೧೩ ಬೀಳ ಹೊಯ್ ...{Loading}...
ಬೀಳ ಹೊಯ್ ಹೊಯ್ ಬಿಡೆಯದಲಿ ಹೊ
ಕ್ಕಾಳುತೆಗೆಯಲಿ ಧರ್ಮಪುತ್ರನ
ಮೇಲುನೋಟದಲಿರಲಿ ನೋಡಲಿ ನಮ್ಮ ನಾಟಕವ
ಆಳ ನಿಲಿಸೋ ನಿಲಿಸೆನುತ ಸಂ
ಸ್ಥಾಳಿತೋದ್ಧತ ಚಪಳ ಚಾಪ ಕ
ರಾಳ ಮೌರ್ವೀನಾದ ಭೀಷಣನಾದನಾ ಭೀಮ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಭೀಮನು, ‘ಶತ್ರುವು ಬೀಳುವಂತೆ ಹೊಡೆ, ಹೊಡೆ, ದಾಕ್ಷಿಣ್ಯಕ್ಕಾಗಿ ಯುದ್ಧಕ್ಕೆ ಬಂದವರು ಹಿಮ್ಮೆಟ್ಟಲಿ. ಅವರು ಧರ್ಮಪುತ್ರನ ರಕ್ಷಣೆಗೆ ಕಣ್ಗಾವಲಿನಲ್ಲಿದ್ದುಕೊಂಡು ನಮ್ಮ ನಾಟಕವನ್ನು ನೋಡಲಿ! ಯೋಧರನ್ನು ತಡೆದು ನಿಲ್ಲಿಸು ನಿಲ್ಲಿಸು’ ಎನ್ನುತ್ತ ಭಯಂಕರವಾಗಿ ಸ್ಫುರಿಸುತ್ತಿರುವ ಬಿಲ್ಲಿನ ಉಗ್ರವಾದ ಹೆದೆಯ ಝೇಂಕಾರದಿಂದ ಭಯಂಕರನಾದನು.
ಪದಾರ್ಥ (ಕ.ಗ.ಪ)
ಬಿಡೆ-ಭಿಡೆ, ದಾಕ್ಷಿಣ್ಯ.
ಸಂಸ್ಫಾಳಿತೋದ್ಧತ-ತೊಡೆಯನ್ನು ಚಪ್ಪರಿಸುವ ಅಹಂಕಾರಿ.
ಮೌರ್ವಿನಾದ-ಬಿಲ್ಲಿನ ಹೆದೆಯ ಝೇಂಕಾರ, ಠೇಂಕಾರ.
ಮೂಲ ...{Loading}...
ಬೀಳ ಹೊಯ್ ಹೊಯ್ ಬಿಡೆಯದಲಿ ಹೊ
ಕ್ಕಾಳುತೆಗೆಯಲಿ ಧರ್ಮಪುತ್ರನ
ಮೇಲುನೋಟದಲಿರಲಿ ನೋಡಲಿ ನಮ್ಮ ನಾಟಕವ
ಆಳ ನಿಲಿಸೋ ನಿಲಿಸೆನುತ ಸಂ
ಸ್ಥಾಳಿತೋದ್ಧತ ಚಪಳ ಚಾಪ ಕ
ರಾಳ ಮೌರ್ವೀನಾದ ಭೀಷಣನಾದನಾ ಭೀಮ ॥13॥
೦೧೪ ಪವನಸುತನಿಙ್ಗಿತವ ಮನದಂ ...{Loading}...
ಪವನಸುತನಿಂಗಿತವ ಮನದಂ
ಘವಣೆಯನು ಮಾದ್ರೇಶ ಕಂಡನು
ರವಿಸುತನ ನೋಡಿದನು ಮುಖದಲಿ ಮುರಿದು ತೋರಿದನು
ಇವನ ಬಲ್ಲೈ ಭೀಮನೋ ಭೈ
ರವನೋ ಭರ್ಗನೊ ಮನುಜ ಕಂಠೀ
ರವನೊ ಕಾಲಾಂತಕನೊ ಕೋಳಾಹಳವಿದೇನೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಇಂಗಿತವನ್ನೂ ಅವನ ಮನದ ಉದ್ದೇಶವನ್ನೂ ಶಲ್ಯನು ಕಂಡನು. ಅವನು ಕರ್ಣನ ಕಡೆ ನೋಡಿ, ಕರ್ಣನಿಗೆ ಭೀಮನನ್ನು ಮುಖ ತಿರುವಿ ತೋರಿಸುತ್ತಾ. ‘ಇವನನ್ನು ಬಲ್ಲೆಯೊ? ಇವನು ಭೀಮನೋ? ಭೈರವನೋ? ಪರಶುರಾಮನೊ? ನರಸಿಂಹನೊ? ಯಮನೊ? ಇದೇನು ಕೋಲಾಹಲ’ ಎಂದು ಕೇಳಿದನು.
ಮೂಲ ...{Loading}...
ಪವನಸುತನಿಂಗಿತವ ಮನದಂ
ಘವಣೆಯನು ಮಾದ್ರೇಶ ಕಂಡನು
ರವಿಸುತನ ನೋಡಿದನು ಮುಖದಲಿ ಮುರಿದು ತೋರಿದನು
ಇವನ ಬಲ್ಲೈ ಭೀಮನೋ ಭೈ
ರವನೋ ಭರ್ಗನೊ ಮನುಜ ಕಂಠೀ
ರವನೊ ಕಾಲಾಂತಕನೊ ಕೋಳಾಹಳವಿದೇನೆಂದ ॥14॥
೦೧೫ ಉರಿಯ ಚೂಣಿಯಲುಸುರ ...{Loading}...
ಉರಿಯ ಚೂಣಿಯಲುಸುರ ಹೊಗೆಯು
ಬ್ಬರಿಸುತದೆ ಕೆಂಪೇರಿದಕ್ಷಿಯ
ಲೆರಡು ಕೋಡಿಯಲೊಗುತಲದೆ ಕಿಡಿಗಳ ತುಷಾರಚಯ
ಸ್ಫುರದಹಂಕಾರ ಪ್ರತಾಪ
ಜ್ವರದಿ ಮೈ ಕಾಹೇರುತದೆ ನಿ
ಬ್ಬರದ ಬರವಿಂದೀತನದು ಕಲಿಕರ್ಣ ನೋಡೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಉರಿಯ ತುದಿಯಿಂದ ಕೂಡಿ ಉಸುರಿನ ಹೊಗೆಯು ಉಬ್ಬರಿಸುತ್ತಿದೆ. ಕೆಂಪೇರಿದ ಕಣ್ಣುಗಳಲ್ಲಿ ಎರಡು ಕೋಡಿಗಳಾಗಿ ಕಿಡಿಗಳ ತುಂತುರು ಸಮೂಹ ಹೊಮ್ಮುತ್ತಿವೆ. ಹೊಮ್ಮುತ್ತಿರುವ ಅಹಂಕಾರಪ್ರತಾಪದ ಜ್ವರದಿಂದ ಮೈ ಕಾವು ಏರುತ್ತಿದೆ. ಇಂದು ಈತನದು ರಭಸದಿಂದ ಕೂಡಿದ ಬರವು, ಕಲಿಕರ್ಣ, ನೋಡು" ಎಂದು ಶಲ್ಯನು ಹೇಳಿದನು
ಮೂಲ ...{Loading}...
ಉರಿಯ ಚೂಣಿಯಲುಸುರ ಹೊಗೆಯು
ಬ್ಬರಿಸುತದೆ ಕೆಂಪೇರಿದಕ್ಷಿಯ
ಲೆರಡು ಕೋಡಿಯಲೊಗುತಲದೆ ಕಿಡಿಗಳ ತುಷಾರಚಯ
ಸ್ಫುರದಹಂಕಾರ ಪ್ರತಾಪ
ಜ್ವರದಿ ಮೈ ಕಾಹೇರುತದೆ ನಿ
ಬ್ಬರದ ಬರವಿಂದೀತನದು ಕಲಿಕರ್ಣ ನೋಡೆಂದ ॥15॥
೦೧೬ ಕಾಯಲಳವೇ ಕರ್ಣ ...{Loading}...
ಕಾಯಲಳವೇ ಕರ್ಣ ಬರಿಯ ನ
ವಾಯಿಯಲಿ ಫಲವಿಲ್ಲ ದೇಹದ
ಬೀಯಕಿದು ಹೊತ್ತಲ್ಲ ಸಾಧಕವಿದಕೆ ಬೇರುಂಟು
ಸಾಯಲಡಸಿದ ಬಡತನಕ್ಕೆ ಪ
ಲಾಯನವೆ ನಿಕ್ಷೇಪವಿದೆ ಬಯ
ಲಾಯಸವು ನಮಗೇತಕೆಂದನು ಮಾದ್ರಪತಿ ನಗುತ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರ್ಣಾ, ನಮಗೆ ಇವನಿಂದ ಕಾಯ್ದುಕೊಳ್ಳಲು ಸಾಧ್ಯವೆ? ಬರಿಯ ಆರ್ಭಟದಿಂದ ಫಲವಿಲ್ಲ. ದೇಹವನ್ನು ಕಳೆದುಕೊಳ್ಳುವುದಕ್ಕೆ ಇದು ಹೊತ್ತಲ್ಲ. ಇದಕ್ಕೆ ಬೇರೆ ಉಪಾಯವಿದೆ. ಸಾವು ಸಮೀಪಿಸಿದಾಗ ಬಡತನಕ್ಕೆ ಪಲಾಯನವೇ ಹೂತಿಟ್ಟ ನಿಧಿ! ನಮಗೆ ವ್ಯರ್ಥವಾದ ಆಯಾಸವು ಏತಕ್ಕೆ?" ಎಂದು ಮಾದ್ರಪತಿಯು ನಗುತ್ತ ಹೇಳಿದನು.
ಮೂಲ ...{Loading}...
ಕಾಯಲಳವೇ ಕರ್ಣ ಬರಿಯ ನ
ವಾಯಿಯಲಿ ಫಲವಿಲ್ಲ ದೇಹದ
ಬೀಯಕಿದು ಹೊತ್ತಲ್ಲ ಸಾಧಕವಿದಕೆ ಬೇರುಂಟು
ಸಾಯಲಡಸಿದ ಬಡತನಕ್ಕೆ ಪ
ಲಾಯನವೆ ನಿಕ್ಷೇಪವಿದೆ ಬಯ
ಲಾಯಸವು ನಮಗೇತಕೆಂದನು ಮಾದ್ರಪತಿ ನಗುತ ॥16॥
೦೧೭ ನೀ ಮರುಳಲಾ ...{Loading}...
ನೀ ಮರುಳಲಾ ಶಲ್ಯ ಫಡ ಸು
ತ್ರಾಮನೇ ಸಮವರ್ತಿಯೇ ಜಿತ
ಕಾಮನೇ ಬಡ ಭೀಮನುರುಬೆಗೆ ಖೇಡನಾದೆಯಲ
ತಾಮಸನ ತಡೆಗಡಿದು ಭೂತ
ಸ್ತೋಮಕುಣಬಡಿಸುವೆನು ಜಯ ಸಂ
ಗ್ರಾಮ ರುದ್ರನು ಕರ್ಣನಾರೆಂದರಿಯೆ ನೀನೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಲ್ಯ, ನೀನು ಮರುಳನಲ್ಲವೆ! ಫಡ! ಫಡ ! ಭೀಮನೇನು ದೇವೇಂದ್ರನೇ? ಯಮನೆ? ಪರಶಿವನೇ? ಬಡಭೀಮನ ಉಬ್ಬಾಟಕ್ಕೆ ನೀನು ಹೇಡಿಯಾದೆಯಲ್ಲ! ಆ ತಾಮಸನನ್ನು ತಡೆದು, ಕಡಿದು ಭೂತಸಮೂಹಕ್ಕೆ ಉಣಬಡಿಸುತ್ತೇನೆ. ನಾನು ಯುದ್ಧವನ್ನು ಗೆಲ್ಲುವ ರುದ್ರನಾದ ಕರ್ಣ. ನಾನು ಯಾರು ಎಂದು ನೀನು ತಿಳಿಯೆ’ ಎಂದನು.
ಪದಾರ್ಥ (ಕ.ಗ.ಪ)
ಸುತ್ರಾಮ-ದೇವೇಂದ್ರ;
ಸಮವರ್ತಿ-ಯಮ
ಉರುಬೆ- ಉಬ್ಬಾಟ,
ಖೇಡ-ಹೇಡಿ;
ಮೂಲ ...{Loading}...
ನೀ ಮರುಳಲಾ ಶಲ್ಯ ಫಡ ಸು
ತ್ರಾಮನೇ ಸಮವರ್ತಿಯೇ ಜಿತ
ಕಾಮನೇ ಬಡ ಭೀಮನುರುಬೆಗೆ ಖೇಡನಾದೆಯಲ
ತಾಮಸನ ತಡೆಗಡಿದು ಭೂತ
ಸ್ತೋಮಕುಣಬಡಿಸುವೆನು ಜಯ ಸಂ
ಗ್ರಾಮ ರುದ್ರನು ಕರ್ಣನಾರೆಂದರಿಯೆ ನೀನೆಂದ ॥17॥
೦೧೮ ಅಕಟ ಬಲುಗೈಯಹೆ ...{Loading}...
ಅಕಟ ಬಲುಗೈಯಹೆ ಕಣಾ ಸಾ
ಧಕನು ನಾನದಕೆನ್ನೆನಿಂದಿನ
ವಿಕಟ ಕೋಪಾಟೋಪ ಭೀಮನ ದಂಡಿಯದು ಬೇರೆ
ತ್ರಿಕಟುಕದ ಕಜ್ಜಾಯವಿದು ಬಾ
ಲಕರ ಸೊಗಸೇ ಕರ್ಣ ಹೇಳ್ ಕೌ
ತುಕದ ಮಾತೇ ನಿನ್ನ ಮೇಲಾಣೆಂದನಾ ಶಲ್ಯ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಕಟ! ಕರ್ಣ, ನೀನು ಶಕ್ತಿವಂತನಾಗಿದ್ದೀಯೆ ! ನಾನು ನಿನಗೆ ಸಾಧಕನಾಗಿದ್ದೇನೆ. ಇದಕ್ಕೆ ಎರಡು ಮಾತಿಲ್ಲ. ಆದರೆ ಭೀಮನ ಇಂದಿನ ವಿಕಟ ಕೋಪಾಟೋಪ ಬೇರೆ ವರಸೆಯದು. ಇದು ಶುಂಠಿ, ಹಿಪ್ಪಲಿ, ಮೆಣಸುಗಳೆಂಬ ಕಟುವಾದ ಪದಾರ್ಥಗಳಿಂದಾದ ಕಜ್ಜಾಯ. ಇದು ಬಾಲಕರಿಗೆ ಸೊಗಸುತ್ತದೆಯೆ? ಕರ್ಣ ಹೇಳು. ಅದೆನು ಕೇವಲ ಕುತೂಹಲದ ಮಾತೇ? ನಿನ್ನ ಮೇಲೆ ಆಣೆ" ಎಂದು ಶಲ್ಯನು ಹೇಳಿzನು.
ಪದಾರ್ಥ (ಕ.ಗ.ಪ)
ತ್ರಿಕಟುಕ-ಶುಂಠಿ, ಹಿಪ್ಪಲಿ, ಮೆಣಸುಗಳೆಂಬ ಮೂರು ಖಾರವಾದ ಔಷಧದ್ರವ್ಯಗಳು
ಮೂಲ ...{Loading}...
ಅಕಟ ಬಲುಗೈಯಹೆ ಕಣಾ ಸಾ
ಧಕನು ನಾನದಕೆನ್ನೆನಿಂದಿನ
ವಿಕಟ ಕೋಪಾಟೋಪ ಭೀಮನ ದಂಡಿಯದು ಬೇರೆ
ತ್ರಿಕಟುಕದ ಕಜ್ಜಾಯವಿದು ಬಾ
ಲಕರ ಸೊಗಸೇ ಕರ್ಣ ಹೇಳ್ ಕೌ
ತುಕದ ಮಾತೇ ನಿನ್ನ ಮೇಲಾಣೆಂದನಾ ಶಲ್ಯ ॥18॥
೦೧೯ ನುಡಿನುಡಿಗೆ ಭಙ್ಗಿಸುವೆ ...{Loading}...
ನುಡಿನುಡಿಗೆ ಭಂಗಿಸುವೆ ನೀ ನಿ
ನ್ನಡಿಗಡಿಗೆ ತಲೆಯೊತ್ತುವೆನೊ ನಿ
ನ್ನೊಡನೆ ಬಂದರಿಯೊಡನೆ ತಲೆಯೊತ್ತುವೆನೊ ತವಕದಲಿ
ಪಡಿಮುಖದೊಳೌಕುವ ವಿರೋಧಿಯ
ಕಡುಹ ತಗ್ಗಿಸಿ ನಿನ್ನ ಮೆಚ್ಚಿಸಿ
ಕೊಡುವೆನಿನ್ನರೆಗಳಿಗೆ ಸೈರಿಸು ಮಾದ್ರಪತಿಯೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು, ‘ಮಾದ್ರಪತಿ! ನೀನು ಮಾತು ಮಾತಿಗೆ ನನ್ನನ್ನು ಹೀಯಾಳಿಸುತ್ತಿರುವೆ. ಅಡಿಗಡಿಗೆ ನಿನ್ನನ್ನು ಸಮಾಧಾನ ಪಡಿಸುತ್ತಿರಲೋ? ಬಂದ ಶತ್ರುವಿನೊಡನೆ ಯುದ್ಧಮಾಡಲೋ? ಉತ್ಸಾಹದಿಂದ, ಎದುರಾಳಿಯಾಗಿ ಆಕ್ರಮಿಸುತ್ತಿರುವ ವಿರೋಧಿಯ ಪ್ರತಾಪವನ್ನು ತಗ್ಗಿಸಿ, ನಿನ್ನನ್ನು ಮೆಚ್ಚಿಸುತ್ತೇನೆ. ಇನ್ನು ಅರ್ಧಗಳಿಗೆ ಸಹಿಸಿಕೊ!" ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ತಲೆಯೊತ್ತು-ಸಮಾಧಾನಪಡಿಸು.
ಮೂಲ ...{Loading}...
ನುಡಿನುಡಿಗೆ ಭಂಗಿಸುವೆ ನೀ ನಿ
ನ್ನಡಿಗಡಿಗೆ ತಲೆಯೊತ್ತುವೆನೊ ನಿ
ನ್ನೊಡನೆ ಬಂದರಿಯೊಡನೆ ತಲೆಯೊತ್ತುವೆನೊ ತವಕದಲಿ
ಪಡಿಮುಖದೊಳೌಕುವ ವಿರೋಧಿಯ
ಕಡುಹ ತಗ್ಗಿಸಿ ನಿನ್ನ ಮೆಚ್ಚಿಸಿ
ಕೊಡುವೆನಿನ್ನರೆಗಳಿಗೆ ಸೈರಿಸು ಮಾದ್ರಪತಿಯೆಂದ ॥19॥
೦೨೦ ಇತ್ತಲೀ ಮಾತಿಙ್ಗೆ ...{Loading}...
ಇತ್ತಲೀ ಮಾತಿಂಗೆ ಮುನ್ನ ವಿ
ಯತ್ತಳವನಳ್ಳಿರಿವ ಸಿಂಧದ
ಸುತ್ತು ಝಲ್ಲರಿ ಚೌರಿಗಳ ಫಲ್ಲಣೆಯ ಘಂಟೆಗಳ
ಹೊತ್ತ ಕೋಪದ ಹೊಗೆವ ಮುಖದೌ
ಡೊತ್ತುವಧರದ ವೈರಿ ಸೇನೆಯ
ಕುತ್ತಿ ತೇಗುವ ಮನದ ಮಾರುತಿ ಮೊಳಗಿದನು ಮುಂದೆ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ, ಈ ಮಾತಿಗೆ ಮೊದಲು, ಆಕಾಶವನ್ನು, ತಿವಿಯುತ್ತಿರುವ ಬಾವುಟಗಳ, ಸುತ್ತು ಕುಚ್ಚಗಳ ಮತ್ತು ಚೌರಿಗಳ, ಘಲ್ಘಲ್ ಎಂದು ಶಬ್ದಮಾಡುವ ರಥದ ಗಂಟೆಗ¼,À ಹೊತ್ತಿಕೊಂಡ ಕೋಪ ಹೊಗೆಯಾಡುವ ಮುಖದ, ಔಡುಗಚ್ಚಿದ ತುಟಿಗಳ, ಶತ್ರುಸೈನ್ಯವನ್ನು ಕೊಂದು ತೃಪ್ತಿಪಡುವ ಮನಸ್ಸಿನ ಭೀಮನು ಆಕಾಶವನ್ನು ನಡುಗಿಸುವಂತೆ ಗುಡುಗಿದನು.
ಪದಾರ್ಥ (ಕ.ಗ.ಪ)
ಅಳ್ಳಿರಿ-ನಡುಗಿಸು, ಕುತ್ತು-ತಿವಿ;
ಮೂಲ ...{Loading}...
ಇತ್ತಲೀ ಮಾತಿಂಗೆ ಮುನ್ನ ವಿ
ಯತ್ತಳವನಳ್ಳಿರಿವ ಸಿಂಧದ
ಸುತ್ತು ಝಲ್ಲರಿ ಚೌರಿಗಳ ಫಲ್ಲಣೆಯ ಘಂಟೆಗಳ
ಹೊತ್ತ ಕೋಪದ ಹೊಗೆವ ಮುಖದೌ
ಡೊತ್ತುವಧರದ ವೈರಿ ಸೇನೆಯ
ಕುತ್ತಿ ತೇಗುವ ಮನದ ಮಾರುತಿ ಮೊಳಗಿದನು ಮುಂದೆ ॥20॥
೦೨೧ ಎಲೆಲೆ ಭೀಮನು ...{Loading}...
ಎಲೆಲೆ ಭೀಮನು ಶಿವಶಿವಾ ದಳ
ದುಳವ ಹಾಯ್ದನೊ ದಿಟ್ಟರಾವೆಡೆ
ನಿಲಿಸಲಾಪವರಿಲ್ಲಲಾ ಕುರುರಾಯನಾನೆಗಳು
ಕಳಕಳದ ಕಾಲಾಟ ರಾಯನ
ದಳಕೆ ದುರ್ಲಭವೆನುತ ಮಿಗೆ ಮುಂ
ಕೊಳಿಸಿ ಭೀಮನ ತುಡುಕಿದರು ರವಿಸುತನ ಪರಿವಾರ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆಲೆ! ಶಿವಶಿವಾ! ಭೀಮನು ದಾಳಿಯಿಟ್ಟು ಕೊಳ್ಳೆ ಹೊಡೆದನು. ಧೈರ್ಯವಂತರು ಎಲ್ಲಿ? ಅವನನ್ನು ನಿಲ್ಲಿಸುವ ಕುರುರಾಯನ ಸೇನೆಯ ನಾಯಕರು ಯಾರೂ ಇಲ್ಲವಲ್ಲಾ! ವ್ಯಥೆಯ ಸುಳಿದಾಟ ರಾಯನ ಸೈನ್ಯಕ್ಕೆ ಸಹಿಸಲಶಕ್ತವಾಗಿದ್ದು. ಕರ್ಣನ ಪರಿವಾರದವರು ಮುನ್ನುಗ್ಗಿ ಭೀಮನನ್ನು ಎದುರಿಸಿದರು.
ಮೂಲ ...{Loading}...
ಎಲೆಲೆ ಭೀಮನು ಶಿವಶಿವಾ ದಳ
ದುಳವ ಹಾಯ್ದನೊ ದಿಟ್ಟರಾವೆಡೆ
ನಿಲಿಸಲಾಪವರಿಲ್ಲಲಾ ಕುರುರಾಯನಾನೆಗಳು
ಕಳಕಳದ ಕಾಲಾಟ ರಾಯನ
ದಳಕೆ ದುರ್ಲಭವೆನುತ ಮಿಗೆ ಮುಂ
ಕೊಳಿಸಿ ಭೀಮನ ತುಡುಕಿದರು ರವಿಸುತನ ಪರಿವಾರ ॥21॥
೦೨೨ ಕವಿದವಾನೆಗಳಟ್ಟಿ ರಾವ್ತರು ...{Loading}...
ಕವಿದವಾನೆಗಳಟ್ಟಿ ರಾವ್ತರು
ತಿವಿದರಂಬಿನ ಸರಿಯ ಸಾರದೊ
ಳವಘಟಿಸಿದರು ರಥಿಕರುರವಣಿಸಿದರು ಸಬಳಿಗರು
ಸವಗ ಖಂಡಿಸಲೊದಗಿದರು ಬಿ
ಲ್ಲವರು ಕಟ್ಟಿರಿಕಾರರಾತನ
ಜವಗೆಡಿಸಿದರು ಕಡಲುವಡಬನ ತಡೆದು ನಿಲುವಂತೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಡಲು ಬಡಬಾನಲವನ್ನು ತಡೆದು ನಿಲ್ಲಿಸುವಂತೆ ಭೀಮನನ್ನು - ಆನೆಗಳು ಮುತ್ತಿದವು . ರಾವುತರು ಬೆನ್ನಟ್ಟಿ ಕುತ್ತಿದರು. ಬಾಣಗಳ ಮಳೆ ಜಡಿಯಲ್ಲಿ ರಥಿಕರು ಪರಾಕ್ರಮದಿಂದ ಪ್ರತಿಭಟಿಸಿದರು. ಈಟಿ ಹಿಡಿದ ಯೋಧರು ರಭಸದಿಂದ ಮುನ್ನುಗ್ಗಿದರು. ಬಿಲ್ಲುಗಾರರು ಅವನ ಮೈ ಕವಚ ಕತ್ತರಿಸಿಹೋಗುವಂತೆ ಮೇಲೆಬಿದ್ದರು. ಹೀಗೆ ಕಠಿನ ವೀರಯೋಧರು ಅವನ ವೇಗವನ್ನು ಕೆಡಿಸಿದರು.
ಮೂಲ ...{Loading}...
ಕವಿದವಾನೆಗಳಟ್ಟಿ ರಾವ್ತರು
ತಿವಿದರಂಬಿನ ಸರಿಯ ಸಾರದೊ
ಳವಘಟಿಸಿದರು ರಥಿಕರುರವಣಿಸಿದರು ಸಬಳಿಗರು
ಸವಗ ಖಂಡಿಸಲೊದಗಿದರು ಬಿ
ಲ್ಲವರು ಕಟ್ಟಿರಿಕಾರರಾತನ
ಜವಗೆಡಿಸಿದರು ಕಡಲುವಡಬನ ತಡೆದು ನಿಲುವಂತೆ ॥22॥
೦೨೩ ನುಸಿಗಳಳವಿಯ ಥಟ್ಟಣೆಯ ...{Loading}...
ನುಸಿಗಳಳವಿಯ ಥಟ್ಟಣೆಯ ತೋ
ರಿಸಿದರೋ ಬಲುಹಾಯ್ತು ರಾಯನ
ಘಸಣಿಗಕಟ ವಿಶೋಕ ನೋಡೈ ಪೂತು ವಿಧಿಯೆನುತ
ಮಸಗಿ ಮೊಗೆದನು ಹೊಗುವ ಸೇನಾ
ಪ್ರಸರವನು ಕುಡಿತೆಯಲಿ ಚೆಲ್ಲಿದ
ನಸಮಬಲನಡಹಾಯ್ಸಿ ಕೊಂಡನು ನೆಲನನಳವಿಯಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಯೋಧರು ನುಸಿಗಳಂತೆ ತಮ್ಮ ಸಾಮಥ್ರ್ಯವನ್ನು ತೋರಿಸಿದರು! ಕೌರವರಾಯರನ ಕಷ್ಟ ಹೆಚ್ಚಾಯಿತು. ‘ಅಕಟ! ದುಃಖ! ನೋಡು! ಪೂತು ವಿಧಿ! ‘ಎನ್ನುತ್ತ ಭೀಮನು ಕೆರಳಿ ಮುನ್ನುಗ್ಗುವ ಸೇನಾಸಮೂಹವನ್ನು ನಾಶ ಮಾಡಿದನು. ಆ ಅಸಮ ಶೌರ್ಯನು ತನ್ನ ಪೌರುಷದಿಂದ ಶತ್ರುವಿನ ನೆಲವನ್ನು ತನ್ನದಾಗಿ ಮಾಡಿಕೊಂಡನು.
ಮೂಲ ...{Loading}...
ನುಸಿಗಳಳವಿಯ ಥಟ್ಟಣೆಯ ತೋ
ರಿಸಿದರೋ ಬಲುಹಾಯ್ತು ರಾಯನ
ಘಸಣಿಗಕಟ ವಿಶೋಕ ನೋಡೈ ಪೂತು ವಿಧಿಯೆನುತ
ಮಸಗಿ ಮೊಗೆದನು ಹೊಗುವ ಸೇನಾ
ಪ್ರಸರವನು ಕುಡಿತೆಯಲಿ ಚೆಲ್ಲಿದ
ನಸಮಬಲನಡಹಾಯ್ಸಿ ಕೊಂಡನು ನೆಲನನಳವಿಯಲಿ ॥23॥
೦೨೪ ಎಲವೊ ಸೂತನ ...{Loading}...
ಎಲವೊ ಸೂತನ ಮಗನೆ ರಾಯನ
ನಳಲಿಸಿದೆಲಾ ನಿನ್ನ ರಕುತವ
ತುಳುಕುವೆನು ಹಿಂದಿಕ್ಕಿಕೊಂಬನ ತೋರು ತೋರೆನುತ
ಬಲುಸರಿಯ ನಾರಾಚದಲಿ ಕ
ತ್ತಲಿಸೆ ದಸೆ ಕೈಮಾಡಿದನು ಕೈ
ಚಳಕದೆಸುಗೆಯ ಕೇಣದಳತೆಯನರಿಯೆ ನಾನೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “Éಎಲವೋ ಸೂತನ ಮಗನೇ! ಧರ್ಮರಾಯನನ್ನು ನೋಯಿಸಿದೆಯಲ್ಲವೆ? ನಿನ್ನ ರಕ್ತವನ್ನು ಚೆಲ್ಲುತ್ತೇನೆ. ನಿನ್ನನ್ನು ಹಿಂದಿಟ್ಟುಕೊಂಡು ರಕ್ಷಿಸುವವರನ್ನು ತೋರಿಸು! ತೋರಿಸು! ಎನ್ನುತ್ತ ಭೀಮನು ಬಾಣಗಳ ಭಾರಿಮಳೆಯಿಂದ ದಿಕ್ಕುಗಳು ಕತ್ತಲಾಗುವಂತೆ ಮಾಡಿದನು. ಬಾಣಬಿಡುವ ಅವನ ಕೈಚಳಕದ ಆವೇಶದ ಅಳತೆಯನ್ನು ನಾನು ಅರಿಯೆ!” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಎಲವೊ ಸೂತನ ಮಗನೆ ರಾಯನ
ನಳಲಿಸಿದೆಲಾ ನಿನ್ನ ರಕುತವ
ತುಳುಕುವೆನು ಹಿಂದಿಕ್ಕಿಕೊಂಬನ ತೋರು ತೋರೆನುತ
ಬಲುಸರಿಯ ನಾರಾಚದಲಿ ಕ
ತ್ತಲಿಸೆ ದಸೆ ಕೈಮಾಡಿದನು ಕೈ
ಚಳಕದೆಸುಗೆಯ ಕೇಣದಳತೆಯನರಿಯೆ ನಾನೆಂದ ॥24॥
೦೨೫ ಏನ ಹೇಳುವೆನಿತ್ತಲೀ ...{Loading}...
ಏನ ಹೇಳುವೆನಿತ್ತಲೀ ರವಿ
ಸೂನುವೇ ದುರ್ಬಲನೆ ಭೀಮನ
ನೂನ ಶರಸಂಘಾತವನು ಖಂಡಿಸಿದನಾಕ್ಷಣಕೆ
ದೀನನೇ ಶರನಿಕರದಲಿ ಪವ
ಮಾನಜನೊ ಪಾತಾಳಿಯೋ ಕಲಿ
ವೈನತೇಯನೋ ಕರ್ಣನೋ ನಾವರಿಯೆವಿದನೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಏನು ಹೇಳಲಿ? ಈ ಕಡೆ ಕರ್ಣನೇನು ದುರ್ಬಲನೆ? ಭೀಮನ ಊನವಿಲ್ಲದ ಬಾಣಗಳ ಸಮೂಹವನ್ನು ಆಕ್ಷಣವೇ ಕತ್ತರಿಸಿದನು. ಅವನೇನು ಸಾಮಾನ್ಯನೇ? ಬಾಣಗಳ ದಟ್ಟಣೆಯಲ್ಲಿ ಭೀಮನೋ, ಆದಿಶೇಷನೋ, ವೀರನಾದ ಗರುಡನೋ, ಕರ್ಣನೋ ನಮಗೆ ಗೊತ್ತಾಗುತ್ತಿಲ್ಲ.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಪಾತಾಳಿ-ಆದಿಶೇಷ; ವೈನತೇಯ-ಗರುಡ
ಮೂಲ ...{Loading}...
ಏನ ಹೇಳುವೆನಿತ್ತಲೀ ರವಿ
ಸೂನುವೇ ದುರ್ಬಲನೆ ಭೀಮನ
ನೂನ ಶರಸಂಘಾತವನು ಖಂಡಿಸಿದನಾಕ್ಷಣಕೆ
ದೀನನೇ ಶರನಿಕರದಲಿ ಪವ
ಮಾನಜನೊ ಪಾತಾಳಿಯೋ ಕಲಿ
ವೈನತೇಯನೋ ಕರ್ಣನೋ ನಾವರಿಯೆವಿದನೆಂದ ॥25॥
೦೨೬ ಅರಸ ಕೇಳಾಶ್ಚರಿಯವನು ...{Loading}...
ಅರಸ ಕೇಳಾಶ್ಚರಿಯವನು ಟೆ
ಬ್ಬರಿಸುವನೆ ಕಲಿಭೀಮನುಬ್ಬಟೆ
ಯರಿಗಳಾಹವ ಧೀರರಾದರೆ ಧಾತುಗೆಡುವವನೆ
ಶರ ಧನುವ ಹಾಯ್ಕಿದನು ಧೊಪ್ಪನೆ
ಧರೆಗೆ ಧುಮ್ಮಿಕ್ಕಿದನು ಖಡುಗವ
ತಿರುಹಿ ಬೆರಸಿದನಳವಿಯಲಿ ಕುರುಸೇನೆ ಕಳವಳಿಸೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸಾ! ಆಶ್ಚರ್ಯವನ್ನು ಕೇಳು. ಕಲಿಭೀಮನು ಶಕ್ತಿಗುಂದುವನೇ? ಸಾಹಸಿಗಳಾದ ಶತ್ರುಗಳು ಯುದ್ಧವೀರರಾದರೆ ಕಲಿಭೀಮನು ನಿಸ್ಸತ್ವನಾಗುತ್ತಾನೆಯೇ? ಬಾಣ, ಬಿಲ್ಲುಗಳನ್ನು ಕೆಳಕ್ಕೆ ಹಾಕಿ ಧೊಪ್ಪನೆ ಭೂಮಿಗೆ ಧುಮುಕಿದನು. ಖಡ್ಗವನ್ನು ಝಳಪಿಸುತ್ತ ಕುರುಸೇನೆಯು ಕಳವಳಿಸುವಂತೆ ಪೌರುಷದಿಂದ ಸೆಣಸಿದನು.
ಮೂಲ ...{Loading}...
ಅರಸ ಕೇಳಾಶ್ಚರಿಯವನು ಟೆ
ಬ್ಬರಿಸುವನೆ ಕಲಿಭೀಮನುಬ್ಬಟೆ
ಯರಿಗಳಾಹವ ಧೀರರಾದರೆ ಧಾತುಗೆಡುವವನೆ
ಶರ ಧನುವ ಹಾಯ್ಕಿದನು ಧೊಪ್ಪನೆ
ಧರೆಗೆ ಧುಮ್ಮಿಕ್ಕಿದನು ಖಡುಗವ
ತಿರುಹಿ ಬೆರಸಿದನಳವಿಯಲಿ ಕುರುಸೇನೆ ಕಳವಳಿಸೆ ॥26॥
೦೨೭ ಹೊಡೆದು ತಲೆಯನು ...{Loading}...
ಹೊಡೆದು ತಲೆಯನು ಹಗೆಯ ರಕುತವ
ಕುಡಿವೆನಲ್ಲದೊಡವನಿಪಾಲನ
ಕೆಡೆನುಡಿದ ನಾಲಗೆಯ ಕೀಳುವೆನೆನುತ ಕೋಪದಲಿ
ಸಿಡಿವ ಕಿಡಿಗಳ ಕೋಪಶಿಖಿಯು
ಗ್ಗಡದ ಮಾರುತಿ ಹೊಯ್ದು ಕರ್ಣನ
ಕೆಡಹಿದನು ಮುರಿಯೊದೆದನೆದೆಯನು ಹಾಯ್ದು ಮುಂದಲೆಗೆ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಲೆಯನ್ನು ಹೊಡೆದು ಶತ್ರುವಿನ ರಕ್ತವನ್ನು ಕುಡಿಯುತ್ತೇನೆ; ಅಲ್ಲವಾದರೆ ಧರ್ಮರಾಯನನ್ನು ನಿಂದಿಸಿದ ನಾಲಗೆಯನ್ನು ಕೀಳುತ್ತೇನೆ ಎನ್ನುತ್ತ ಸಿಡಿಯುತ್ತಿದ್ದ ಕಿಡಿಗಳ ಕೋಪಾಗ್ನಿಯಿಂದ ಕೂಡಿದ ಭೀಮನು ಮುಂದಕ್ಕೆ ನುಗ್ಗಿ ಬಂದು ತಲೆಗೆ ಹಾಯ್ದು, ಕರ್ಣನನ್ನು ಕೆಡವಿ, ಕೆಳಗೆ ಬೀಳುವಂತೆ ಎದೆಗೆ ಒದ್ದನು.
ಮೂಲ ...{Loading}...
ಹೊಡೆದು ತಲೆಯನು ಹಗೆಯ ರಕುತವ
ಕುಡಿವೆನಲ್ಲದೊಡವನಿಪಾಲನ
ಕೆಡೆನುಡಿದ ನಾಲಗೆಯ ಕೀಳುವೆನೆನುತ ಕೋಪದಲಿ
ಸಿಡಿವ ಕಿಡಿಗಳ ಕೋಪಶಿಖಿಯು
ಗ್ಗಡದ ಮಾರುತಿ ಹೊಯ್ದು ಕರ್ಣನ
ಕೆಡಹಿದನು ಮುರಿಯೊದೆದನೆದೆಯನು ಹಾಯ್ದು ಮುಂದಲೆಗೆ ॥27॥
೦೨೮ ಬಾಯ ಬಿಟ್ಟುದು ...{Loading}...
ಬಾಯ ಬಿಟ್ಟುದು ಸೇನೆ ಕೌರವ
ರಾಯನಾವೆಡೆ ದಳಕೆ ಬಲುಗೈ
ನಾಯಕರು ಕೃಪ ಗುರುಸುತರು ಕೈಗೊಟ್ಟರೇ ಹಗೆಗೆ
ವಾಯುಜನ ಕೈದೊಳಸಿನಲಿ ಕುರು
ರಾಯ ರಾಜ್ಯಶ್ರೀಯ ಮುಂದಲೆ
ಹೋಯಿತೋ ಹಾ ಎನುತ ಮರುಗಿತು ಕೂಡೆ ಕುರುಸೇನೆ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ ಸೈನ್ಯವು ಗೋಳಿಟ್ಟಿತು. ದುರ್ಯೋಧನನು ಎಲ್ಲಿ? ಸೈನ್ಯದ ಬಲಗೈನಂತಿದ್ದ ಕೃಪ, ಅಶ್ವತ್ಥಾಮರು ಶತ್ರುವಿನೊಡನೆ ಕೈಜೋಡಿಸಿದರೆ? ಭೀಮನ ಮುಷ್ಟಿಯುದ್ಧದಲ್ಲಿ ದುರ್ಯೋಧನನ ರಾಜ್ಯಶ್ರೀಯು ಶತ್ರುವಿನ ವಶವಾದಳೆ! ಹಾ! ಎನುತ್ತ ಕುರುಸೈನ್ಯವು ಮರುಗಿತು.
ಪದಾರ್ಥ (ಕ.ಗ.ಪ)
ಕೈತೊಳಸು-ಮುಷ್ಟಿಯುದ್ಧ,
ಮೂಲ ...{Loading}...
ಬಾಯ ಬಿಟ್ಟುದು ಸೇನೆ ಕೌರವ
ರಾಯನಾವೆಡೆ ದಳಕೆ ಬಲುಗೈ
ನಾಯಕರು ಕೃಪ ಗುರುಸುತರು ಕೈಗೊಟ್ಟರೇ ಹಗೆಗೆ
ವಾಯುಜನ ಕೈದೊಳಸಿನಲಿ ಕುರು
ರಾಯ ರಾಜ್ಯಶ್ರೀಯ ಮುಂದಲೆ
ಹೋಯಿತೋ ಹಾ ಎನುತ ಮರುಗಿತು ಕೂಡೆ ಕುರುಸೇನೆ ॥28॥
೦೨೯ ಥಟ್ಟುಗೆಡಹಿದ ಕರ್ಣನನು ...{Loading}...
ಥಟ್ಟುಗೆಡಹಿದ ಕರ್ಣನನು ಕೈ
ಮುಟ್ಟದಿರು ಹೆರಸಾರು ಪಾರ್ಥನು
ಕೊಟ್ಟ ಭಾಷೆಯ ಮರೆದೆಲಾ ಕೈತಪ್ಪ ಮಾಡದಿರು
ಬಿಟ್ಟು ಹಿಂಗೆಲೆ ಭೀಮ ಭೀತಿಯ
ಬಿಟ್ಟು ಬೆರಸಿದೆ ಸಾಕು ಹರಿಬಕೆ
ಮುಟ್ಟಿಸಿದ ಗೆಲವಾಯ್ತು ಮರಳಿನ್ನೆಂದನಾ ಶಲ್ಯ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೆಳಗೆ ಬಿದ್ದಿರುವ ಕರ್ಣನನ್ನು ಮುಟ್ಟಬೇಡ. ಹಿಂದೆ ಸರಿ. ಅರ್ಜುನನ ಪ್ರತಿಜ್ಞೆಯನ್ನು ಮರತೆಯಲ್ಲ! ತಪ್ಪು ಮಾಡಬೇಡ. ಎಲೆ ಭೀಮ, ಬಿಟ್ಟು ಹಿಂದಿರುಗು. ಭಯವನ್ನು ಬಿಟ್ಟು ಈವರೆಗೆ ಸೆಣಸಿದೆ. ಸಾಕು. ನೀನು ಸಂಕಲ್ಪಿಸಿದ ಕೆಲಸ ಯಶಸ್ವಿಯಾಯಿತು. ಇನ್ನು ಹಿಂದಿರುಗು” ಎಂದು ಶಲ್ಯನು ಹೇಳಿದನು.
ಪದಾರ್ಥ (ಕ.ಗ.ಪ)
ಥಟ್ಟುಗೆಡಹು-ಕೆಳಗೆ ಬೀಳಿಸು
ಮೂಲ ...{Loading}...
ಥಟ್ಟುಗೆಡಹಿದ ಕರ್ಣನನು ಕೈ
ಮುಟ್ಟದಿರು ಹೆರಸಾರು ಪಾರ್ಥನು
ಕೊಟ್ಟ ಭಾಷೆಯ ಮರೆದೆಲಾ ಕೈತಪ್ಪ ಮಾಡದಿರು
ಬಿಟ್ಟು ಹಿಂಗೆಲೆ ಭೀಮ ಭೀತಿಯ
ಬಿಟ್ಟು ಬೆರಸಿದೆ ಸಾಕು ಹರಿಬಕೆ
ಮುಟ್ಟಿಸಿದ ಗೆಲವಾಯ್ತು ಮರಳಿನ್ನೆಂದನಾ ಶಲ್ಯ ॥29॥
೦೩೦ ದುರುಳತನದಿನ್ದಣ್ಣ ದೇವನ ...{Loading}...
ದುರುಳತನದಿಂದಣ್ಣ ದೇವನ
ಹುರುಳುಗೆಡೆ ನುಡಿದನು ವಿರೋಧಿಯ
ಶರಹತಿಗೆ ಬೆಂಡಾಗನಿವನ ದುರುಕ್ತಿ ಶರಹತಿಗೆ
ಅರಸ ಬಳಲಿದನೇನ ಮಾಡುವೆ
ದುರುಳ ನುಡಿದನ ನಾಲಗೆಯ ನಿಡು
ಸೆರೆಯ ಬಿಡಿಸುವೆ ಮಾವ ಸೈರಿಸಿಯೆಂದನಾ ಭೀಮ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಣ್ಣ ಧರ್ಮರಾಯನ ಸ್ಥೈರ್ಯಗುಂದುವಂತೆ ಅವಮಾನವಾಗುವಂತೆ (ಭಂಗವುಂಟಾಗುವಂತೆ) ಕರ್ಣನು ಮಾತನಾಡಿದ್ದಾನೆ. ಶತ್ರುಗಳ ಬಾಣದ ಹೊಡೆತಕ್ಕೆ ಅರಸನು ಸೋಲುವುದಿಲ್ಲ; ಇವನ ಕೆಟ್ಟ ಮಾತುಗಳೆಂಬ ಬಾಣಗಳ ಹೊಡೆತಕ್ಕೆ ಬಳಲಿದ್ದಾನೆ. ಏನು ಮಾಡಲಿ? ಕೆಟ್ಟ ಮಾತನಾಡಿದ ಇವನ ನಾಲಗೆಯನ್ನು ಕತ್ತರಿಸಿ ಹಾಕುತ್ತೇನೆ. ಸಹಿಸಿಕೊಳ್ಳಿ ಮಾವ!” ಎಂದು ಭೀಮನು ಹೇಳಿದನು.
ಮೂಲ ...{Loading}...
ದುರುಳತನದಿಂದಣ್ಣ ದೇವನ
ಹುರುಳುಗೆಡೆ ನುಡಿದನು ವಿರೋಧಿಯ
ಶರಹತಿಗೆ ಬೆಂಡಾಗನಿವನ ದುರುಕ್ತಿ ಶರಹತಿಗೆ
ಅರಸ ಬಳಲಿದನೇನ ಮಾಡುವೆ
ದುರುಳ ನುಡಿದನ ನಾಲಗೆಯ ನಿಡು
ಸೆರೆಯ ಬಿಡಿಸುವೆ ಮಾವ ಸೈರಿಸಿಯೆಂದನಾ ಭೀಮ ॥30॥
೦೩೧ ಸಾಕು ಹೆರತೆಗೆ ...{Loading}...
ಸಾಕು ಹೆರತೆಗೆ ಘಾಯವಡೆದವಿ
ವೇಕಿ ಮೈ ಮರೆದಿದ್ದ ಹೊತ್ತಿದು
ನೀ ಕುಠಾರನಲಾ ಕಿರೀಟಿಯ ಭಾಷಿತದ್ರುಮಕೆ
ಲೋಕಮಾನ್ಯನು ಕರ್ಣ ಕುರುಬಲ
ದಾಕೆವಾಳನು ಭಂಗವಡೆದುದೆ
ಸಾಕು ನೀ ಸಾರೆಂದು ಭೀಮನ ನೂಕಿದನು ಶಲ್ಯ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
31.“ಸಾಕು, ಹಿಮ್ಮೆಟ್ಟು, ಗಾಯಗೊಂಡು ಅವಿವೇಕಿ ಮೈಮರೆತಿರುವ ಹೊತ್ತು ಇದು. ಅರ್ಜುನನ ಭಾಷೆ ಎಂಬ ಮರಕ್ಕೆ ನೀನು ಕೊಡಲಿಯಾಗಿದ್ದೀಯೆ. ಲೋಕಮಾನ್ಯನೂ ಕುರುಸೈನ್ಯದ ಶೂರನೂ ಆದ ಕರ್ಣನು ಅವಮಾನಪಟ್ಟುದೇ ಸಾಕು. ಇನ್ನು ನೀನು ದೂರಸರಿ” ಎಂದು ಶಲ್ಯನು ಭೀಮನನ್ನು ನೂಕಿದನು.
ಪದಾರ್ಥ (ಕ.ಗ.ಪ)
ಆಕೆವಾಳ-ವೀರ
ಮೂಲ ...{Loading}...
ಸಾಕು ಹೆರತೆಗೆ ಘಾಯವಡೆದವಿ
ವೇಕಿ ಮೈ ಮರೆದಿದ್ದ ಹೊತ್ತಿದು
ನೀ ಕುಠಾರನಲಾ ಕಿರೀಟಿಯ ಭಾಷಿತದ್ರುಮಕೆ
ಲೋಕಮಾನ್ಯನು ಕರ್ಣ ಕುರುಬಲ
ದಾಕೆವಾಳನು ಭಂಗವಡೆದುದೆ
ಸಾಕು ನೀ ಸಾರೆಂದು ಭೀಮನ ನೂಕಿದನು ಶಲ್ಯ ॥31॥
೦೩೨ ರಥಕೆ ಮರಳಿದನಾತನೀತನ ...{Loading}...
ರಥಕೆ ಮರಳಿದನಾತನೀತನ
ವ್ಯಥೆಯನೇನೆಂಬೆನು ಸುಯೋಧನ
ರಥಿಗಳುಬ್ಬಟೆ ಗರ್ಭವಿಕ್ಕಿತು ನಿಮಿಷಮಾತ್ರದಲಿ
ರಥದೊಳಗೆ ಮಾದ್ರೇಶನೀ ಸಮ
ರಥನ ಸಂತೈಸಿದನು ಕವಳ
ಪ್ರಥಿತ ಮಂತ್ರೌಷಧಿಗಳಲಿ ಹದುಳಿಸಿದನಾ ಕರ್ಣ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ರಥಕ್ಕೆ ಹಿಂದಿರುಗಿದನು. ಕರ್ಣನ ವ್ಯಥೆಯನ್ನು ಏನೆಂದು ಹೇಳಲಿ? ದುರ್ಯೋಧನನ ವೀರರ ಉತ್ಸಾಹ ನಿಮಿಷಮಾತ್ರದಲ್ಲಿ ತಗ್ಗಿಹೋಯಿತು. ಶಲ್ಯನು ರಥದಲ್ಲಿ ಸಮರ್ಥನಾದ ಕರ್ಣನ ಆರೈಕೆಯನ್ನು ಮಾಡಿದನು. ತಾಂಬೂಲದೊಂದಿಗೆ ಕೊಟ್ಟ ಮಂತ್ರ ಔಷಧಿಗಳಿಂದ ಕರ್ಣನು ಚೇತರಿಸಿಕೊಂಡನು.
ಪದಾರ್ಥ (ಕ.ಗ.ಪ)
ಗರ್ಭವಿಕ್ಕು-ತಗ್ಗಿಹೋಗು
ಮೂಲ ...{Loading}...
ರಥಕೆ ಮರಳಿದನಾತನೀತನ
ವ್ಯಥೆಯನೇನೆಂಬೆನು ಸುಯೋಧನ
ರಥಿಗಳುಬ್ಬಟೆ ಗರ್ಭವಿಕ್ಕಿತು ನಿಮಿಷಮಾತ್ರದಲಿ
ರಥದೊಳಗೆ ಮಾದ್ರೇಶನೀ ಸಮ
ರಥನ ಸಂತೈಸಿದನು ಕವಳ
ಪ್ರಥಿತ ಮಂತ್ರೌಷಧಿಗಳಲಿ ಹದುಳಿಸಿದನಾ ಕರ್ಣ ॥32॥
೦೩೩ ಆರಿತದು ಬೊಬ್ಬೆಯಲಿ ...{Loading}...
ಆರಿತದು ಬೊಬ್ಬೆಯಲಿ ದುಗುಡದ
ಭಾರದಲಿ ತಲೆಗುತ್ತಿತಿವರು
ಬ್ಬಾರದಲಿ ಭುಲ್ಲವಿಸಿತವರು ವಿಘಾತಿಯಿಂದಿವರು
ಪೂರವಿಸಿದುದು ಪುಳಕದಲಿ ದೃಗು
ವಾರಿ ಪೂರದಲಿವರಖಿಳ ಪರಿ
ವಾರವಿದ್ದುದು ಕೇಳು ಜನಮೇಜಯ ಮಹೀಪಾಲ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ರಾಜನೇ, ಕೇಳು. ಆ ಗುಂಪು ಬೊಬ್ಬೆಯಲ್ಲಿ ಘರ್ಜಿಸಿತು. ಇವರು ದುಗುಡದ ಭಾರದಲ್ಲಿ ತಲೆಯನ್ನು ತಗ್ಗಿಸಿದರು. ಅವರು ಹಿಗ್ಗಿನಿಂದ ಕೇಕೆ ಹಾಕಿದರು. ಇವರು ವಿಘಾತಿಯಿಂದ ಹುಯಿಲಿಟ್ಟರು. ಅವರು ಹಿಗ್ಗಿನ ರೋಮಾಂಚನದಿಂದ ತುಂಬಿದ್ದರೆ, ಇವರ ಅಖಿಲ ಪರಿವಾರ ಕಣ್ಣೀರಿನ ಪ್ರವಾಹದಲ್ಲಿತ್ತು.
ಪದಾರ್ಥ (ಕ.ಗ.ಪ)
ಉಬ್ಬಾರ-ಹಿಗ್ಗು, ಪೂರವಿಸು-ತುಂಬು
ಮೂಲ ...{Loading}...
ಆರಿತದು ಬೊಬ್ಬೆಯಲಿ ದುಗುಡದ
ಭಾರದಲಿ ತಲೆಗುತ್ತಿತಿವರು
ಬ್ಬಾರದಲಿ ಭುಲ್ಲವಿಸಿತವರು ವಿಘಾತಿಯಿಂದಿವರು
ಪೂರವಿಸಿದುದು ಪುಳಕದಲಿ ದೃಗು
ವಾರಿ ಪೂರದಲಿವರಖಿಳ ಪರಿ
ವಾರವಿದ್ದುದು ಕೇಳು ಜನಮೇಜಯ ಮಹೀಪಾಲ ॥33॥