೦೦೦ ಸೂ ರಾಯ ...{Loading}...
ಸೂ. ರಾಯ ರಿಪುರವಿರಾಹು ಪಾಂಡವ
ರಾಯ ಸೇನಾಜಲಧಿ ವಡಬನ
ಜೇಯ ರವಿನಂದನನು ಗೆಲಿದನು ಧರ್ಮನಂದನನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
sಸೂಚನೆ : ಶತ್ರುರಾಜರೆಂಬ ಸೂರ್ಯನಿಗೆ ರಾಹುವಾಗಿ, ಪಾಂಡವರಾಜರ ಸೇನಾಸಮುದ್ರಕ್ಕೆ ವಡಬಾನಲನಾಗಿ ಅಜೇಯವಾಗಿ ಉಳಿದಿರುವ ಕರ್ಣನು ಧರ್ಮರಾಯನನ್ನು ಗೆದ್ದನು.
ಮೂಲ ...{Loading}...
ಸೂ. ರಾಯ ರಿಪುರವಿರಾಹು ಪಾಂಡವ
ರಾಯ ಸೇನಾಜಲಧಿ ವಡಬನ
ಜೇಯ ರವಿನಂದನನು ಗೆಲಿದನು ಧರ್ಮನಂದನನ
೦೦೧ ಮಗನ ತೊಲಗಿಸಿ ...{Loading}...
ಮಗನ ತೊಲಗಿಸಿ ಮಿಗುವ ಚೂಣಿಯ
ತೆಗಸಿ ಬಲವಂಕದ ಭಟಾಳಿಗೆ
ಮೊಗದ ಸನ್ನೆಯ ಮಾಡುತೆಡವಂಕದ ಕಟಾಕ್ಷದಲಿ
ತೆಗೆದು ತೂರಂಬಿನಲಿ ಭೀಮನ
ಬಿಗಿದನಾವೆಡೆ ಧರಣಿಯಾವೆಡೆ
ಗಗನವಾವೆಡೆ ದೆಸೆಗಳೆನೆ ತುರುಗಿದವು ಶರಜಾಳ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಮಗನನ್ನು ಕಳುಹಿಸಿ, ಮೀರಿ ನುಗ್ಗುವ ಮುಂಭಾಗದ ಸೈನ್ಯವನ್ನು ಹಿಂದಕ್ಕೆ ಕಳುಹಿಸಿ, ಬಲಗಡೆಯ ಯೋಧರ ಸಮೂಹಕ್ಕೆ ಮುಖದಿಂದಲೇ ಸನ್ನೆ ಮಾಡುತ್ತ, ಎಡಗಡೆಯ ಯೋಧರನ್ನು ಕಣ್ಸನ್ನೆಯಿಂದ ದೂರ ಸರಿಸಿ, ಬಾಣಗಳನ್ನು ಚಿಮ್ಮಿಸಿ ಭೀಮನನ್ನು ಕಟ್ಟಿಹಾಕಿದನು. ಭೂಮಿ ಯಾವ ಕಡೆ? ಆಕಾಶ ಯಾವ ಕಡೆ? ದಿಕ್ಕುಗಳು ಎಲ್ಲಿವೆ? ಎನ್ನುವುದು ತಿಳಿಯದ ಹಾಗೆ ಬಾಣಗಳ ಸಮೂಹಗಳು ಮುತ್ತಿದವು.
ಮೂಲ ...{Loading}...
ಮಗನ ತೊಲಗಿಸಿ ಮಿಗುವ ಚೂಣಿಯ
ತೆಗಸಿ ಬಲವಂಕದ ಭಟಾಳಿಗೆ
ಮೊಗದ ಸನ್ನೆಯ ಮಾಡುತೆಡವಂಕದ ಕಟಾಕ್ಷದಲಿ
ತೆಗೆದು ತೂರಂಬಿನಲಿ ಭೀಮನ
ಬಿಗಿದನಾವೆಡೆ ಧರಣಿಯಾವೆಡೆ
ಗಗನವಾವೆಡೆ ದೆಸೆಗಳೆನೆ ತುರುಗಿದವು ಶರಜಾಳ ॥1॥
೦೦೨ ಭೀಮನೋ ನಿಮಿಷಾರ್ಧದಲಿ ...{Loading}...
ಭೀಮನೋ ನಿಮಿಷಾರ್ಧದಲಿ ನಿ
ರ್ನಾಮನೋ ತಡವೇಕೆ ರಿಪುವೇ
ಕಾಮನೋ ಕರ್ಣನೆ ಕಪರ್ದಿ ವಿಚಾರವೇಕೆನುತ
ತಾಮಸದ ಭುಲ್ಲವಣೆಯಲಿ ಕುರು
ಭೂಮಿಪನ ಬಲವೊದರಿ ವೈರಿ
ಸ್ತೋಮ ಕಂಡುದು ಪವನತನಯನ ರಣದ ಭಾರಣೆಯ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೀಮನೊ? ಅರ್ಧನಿಮಿಷದಲ್ಲಿ (ಹೇಳ)ಹೆಸರಿಲ್ಲದಂತೆ ನಾಶವಾಗುವವನೊ? ‘ತಡವೇಕೆ?’ ‘ಶತ್ರುವಾದ ಭೀಮನೇ ಕಾಮ; ಕರ್ಣನೇ ಈಶ್ವರ. ಯೋಚಿಸುವುದೇಕೆ?’ ಎಂದು ತಾಮಸಗುಣವು ಹೆಚ್ಚಿ ಕೌರವ ಸೈನ್ಯವು ಕೂಗಿತು. ಭೀಮನ ಯುದ್ಧದ ಮೋಡಿಯನ್ನು ಶತ್ರುಗಳ ಸೈನ್ಯವು ನೋಡಿತು.
ಮೂಲ ...{Loading}...
ಭೀಮನೋ ನಿಮಿಷಾರ್ಧದಲಿ ನಿ
ರ್ನಾಮನೋ ತಡವೇಕೆ ರಿಪುವೇ
ಕಾಮನೋ ಕರ್ಣನೆ ಕಪರ್ದಿ ವಿಚಾರವೇಕೆನುತ
ತಾಮಸದ ಭುಲ್ಲವಣೆಯಲಿ ಕುರು
ಭೂಮಿಪನ ಬಲವೊದರಿ ವೈರಿ
ಸ್ತೋಮ ಕಂಡುದು ಪವನತನಯನ ರಣದ ಭಾರಣೆಯ ॥2॥
೦೦೩ ಉಲಿವುತಿದೆ ಕೌರವನ ...{Loading}...
ಉಲಿವುತಿದೆ ಕೌರವನ ಸೇನಾ
ಜಲಧಿ ಹರುಷದಲಿತ್ತಲನಿಲಜ
ನಳುಕದೊಬ್ಬನೆ ಕಾದುತೈದನೆ ಕರ್ಣನೊಡನೆನುತ
ತಳಿತ ಧವಳಚ್ಛತ್ರ ಚಮರಾ
ವಳಿಯ ಮಧ್ಯದಲವನಿಪತಿ ನಿಜ
ಬಲಸಹಿತ ನೂಕಿದನು ಬಹುವಿಧವಾದ್ಯ ರಭಸದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೇನಾಸಮುದ್ರವು ಆನಂದದಿಂದ ಕೂಡಿತ್ತು. ಇತ್ತ, ‘ಭೀಮನು ಕರ್ಣನ ಜೊತೆ ಅಳುಕದೆ ಏಕಾಂಗಿಯಾಗಿ ಹೋರಾಡುತ್ತಿದ್ದಾನೆ’ ಎನ್ನುತ್ತ ಹಲವು ಬಗೆಯ ವಾದ್ಯಗಳ ಸಹಿತ, ದಟ್ಟೈಸಿದ ಬಿಳಿಯ ಛತ್ರಚಾಮರಗಳ ನಡುವೆ ಇದ್ದ ಧರ್ಮರಾಯನು ತನ್ನ ಸೈನ್ಯವನ್ನು ರಭಸದಿಂದ ಮುನ್ನುಗ್ಗಿಸಿದನು.
ಪದಾರ್ಥ (ಕ.ಗ.ಪ)
ತಳಿತ-ಕೂಡಿದ, ದಟ್ಟೈಸಿದ
ಮೂಲ ...{Loading}...
ಉಲಿವುತಿದೆ ಕೌರವನ ಸೇನಾ
ಜಲಧಿ ಹರುಷದಲಿತ್ತಲನಿಲಜ
ನಳುಕದೊಬ್ಬನೆ ಕಾದುತೈದನೆ ಕರ್ಣನೊಡನೆನುತ
ತಳಿತ ಧವಳಚ್ಛತ್ರ ಚಮರಾ
ವಳಿಯ ಮಧ್ಯದಲವನಿಪತಿ ನಿಜ
ಬಲಸಹಿತ ನೂಕಿದನು ಬಹುವಿಧವಾದ್ಯ ರಭಸದಲಿ ॥3॥
೦೦೪ ಒನ್ದು ಕಡೆಯಲಿ ...{Loading}...
ಒಂದು ಕಡೆಯಲಿ ಭೀಮ ಸಾತ್ಯಕಿ
ಯೊಂದು ಕಡೆಯಲಿ ನಕುಳ ದ್ರೌಪದ
ರೊಂದು ಕಡೆಯಲಿ ಚೇಕಿತಾನ ಶಿಖಂಡಿ ಶೃಂಜಯರು
ಒಂದು ಕಡೆ ಸಹದೇವನೀ ಪರಿ
ಹಿಂದೆ ಮುಂದಿಕ್ಕೆಲದೊಳೀತನ
ಸಂದಣಿಸಿ ಮುತ್ತಿದರು ಮುಕ್ಕುರಿಕಿತ್ತು ರಿಪುಸೇನೆ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಕಡೆಯಿಂದ ಭೀಮ, ಸಾತ್ಯಕಿಯರು, ಇನ್ನೊಂದು ಕಡೆಯಿಂದ ನಕುಲ, ದ್ರುಪದನ ಮಕ್ಕಳು, ಮತ್ತೊಂದು ಕಡೆಯಿಂದ ಚೇಕಿತಾನ, ಸೃಂಜಯರು, ಇನ್ನೊಂದು ಕಡೆಯಿಂದ ಸಹದೇವ - ಹೀಗೆ ಹಿಂದು ಮುಂದಿನ ಎರಡೂ ಕಡೆಗಳಿಂದ ಶತ್ರು ಸೈನ್ಯವು ಕರ್ಣನನ್ನು ಮುತ್ತಿತು.
ಪದಾರ್ಥ (ಕ.ಗ.ಪ)
ಮುಕ್ಕುರಿಕು-ತಿಣುಕು
ಮೂಲ ...{Loading}...
ಒಂದು ಕಡೆಯಲಿ ಭೀಮ ಸಾತ್ಯಕಿ
ಯೊಂದು ಕಡೆಯಲಿ ನಕುಳ ದ್ರೌಪದ
ರೊಂದು ಕಡೆಯಲಿ ಚೇಕಿತಾನ ಶಿಖಂಡಿ ಶೃಂಜಯರು
ಒಂದು ಕಡೆ ಸಹದೇವನೀ ಪರಿ
ಹಿಂದೆ ಮುಂದಿಕ್ಕೆಲದೊಳೀತನ
ಸಂದಣಿಸಿ ಮುತ್ತಿದರು ಮುಕ್ಕುರಿಕಿತ್ತು ರಿಪುಸೇನೆ ॥4॥
೦೦೫ ರಾಯದಳವುಬ್ಬೆದ್ದುದೋ ಪಡಿ ...{Loading}...
ರಾಯದಳವುಬ್ಬೆದ್ದುದೋ ಪಡಿ
ನಾಯಕರನಪ್ಪಳಿಸುವೆನು ರಿಪು
ವಾಯುಜನ ಗಾಢಣೆಯ ಗರ್ವಗ್ರಹವ ಕಳಚುವೆನು
ರಾಯಕೌರವ ಸಹಿತ ನೀವ್ ನಿ
ಮ್ಮಾಯತದಲಿರಿಯೆನುತ ಸಾರದ
ಸಾಯಕದ ಸರಿವಳೆಯ ಸುರಿದನು ಭಾನುಸುತ ಮುಳಿದು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಶತ್ರುರಾಜನ ಸೈನ್ಯವು ಉಬ್ಬಿ ಎದ್ದಿದೆಯೆ? ಪ್ರತಿನಾಯಕರನ್ನು ಅಪ್ಪಳಿಸುತ್ತೇನೆ. ಭೀಮನ ಅತಿಶಯವಾದ ಗರ್ವದ ಗ್ರಹಚಾರವನ್ನು ಬಿಡಿಸುತ್ತೇನೆ. ದುರ್ಯೋಧನನ ಸಹಿತ ನೀವು ನಿಮ್ಮ ನೆಲೆಗಳಲ್ಲಿರಿ’ ಎನ್ನುತ್ತ ಕೋಪಗೊಂಡ ಕರ್ಣನು ಧಾರಾಕಾರವಾಗಿ ಪ್ರಬಲವಾದ ಬಾಣಗಳ ಮಳೆಯನ್ನು ಸುರಿಸಿದನು.
ಮೂಲ ...{Loading}...
ರಾಯದಳವುಬ್ಬೆದ್ದುದೋ ಪಡಿ
ನಾಯಕರನಪ್ಪಳಿಸುವೆನು ರಿಪು
ವಾಯುಜನ ಗಾಢಣೆಯ ಗರ್ವಗ್ರಹವ ಕಳಚುವೆನು
ರಾಯಕೌರವ ಸಹಿತ ನೀವ್ ನಿ
ಮ್ಮಾಯತದಲಿರಿಯೆನುತ ಸಾರದ
ಸಾಯಕದ ಸರಿವಳೆಯ ಸುರಿದನು ಭಾನುಸುತ ಮುಳಿದು ॥5॥
೦೦೬ ಧನುವಿನಲಿ ಸಾತ್ಯಕಿಯ ...{Loading}...
ಧನುವಿನಲಿ ಸಾತ್ಯಕಿಯ ಮಾದ್ರೀ
ತನುಜರನು ತೇರಿನಲಿ ದ್ರುಪದನ
ತನಯನನು ಸಾರಥಿಗಳಲಿ ಜೋಡಿನಲಿ ಪವನಜನ
ಬಿನುಗರವರವರಂಗದಲಿ ಕೈ
ಮನವ ಖಂಡಿಸಿ ಸಕಲ ರಿಪುಸಾ
ಧನವನೊಬ್ಬನೆ ಕರ್ಣ ಗೆಲಿದನು ನೃಪತಿ ಕೇಳ್ ಎಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೃಪತಿಯೇ ಕೇಳು, ಕರ್ಣನು - ಸಾತ್ಯಕಿಯನ್ನು ಧನುವಿನಲ್ಲಿ, ನಕುಲ ಸಹದೇವರನ್ನು ರಥದಲ್ಲಿ , ಧೃಷ್ಟದ್ಯುಮ್ನನನ್ನುಸಾರಥಿಯಲ್ಲಿ, ಭೀಮನನ್ನು ಕವಚದಲ್ಲಿ- ಅಲ್ಪರಾದ ಅವರನ್ನು ಅವರ ನೆಲೆಗಳಲ್ಲಿಯೇ, ಅವರ ಸಾಮಥ್ರ್ಯ ಕುಗ್ಗುವಂತೆ, ಮನಸ್ಸು ಅಧೀರವಾಗುವಂತೆ ಖಂಡಿಸಿ- ಏಕಾಂಗಿಯಾಗಿ ಶತ್ರುಸೇನೆಯ ಸಮೂಹವನ್ನು ಗೆದ್ದನು’ ಎಂದು ಸಂಜಯನು ಹೇಳಿದನು.
ಮೂಲ ...{Loading}...
ಧನುವಿನಲಿ ಸಾತ್ಯಕಿಯ ಮಾದ್ರೀ
ತನುಜರನು ತೇರಿನಲಿ ದ್ರುಪದನ
ತನಯನನು ಸಾರಥಿಗಳಲಿ ಜೋಡಿನಲಿ ಪವನಜನ
ಬಿನುಗರವರವರಂಗದಲಿ ಕೈ
ಮನವ ಖಂಡಿಸಿ ಸಕಲ ರಿಪುಸಾ
ಧನವನೊಬ್ಬನೆ ಕರ್ಣ ಗೆಲಿದನು ನೃಪತಿ ಕೇಳೆಂದ ॥6॥
೦೦೭ ಮುನ್ದುಗೆಟ್ಟುದು ದೊರೆಗಳೆನೆ ...{Loading}...
ಮುಂದುಗೆಟ್ಟುದು ದೊರೆಗಳೆನೆ ರವಿ
ನಂದನನ ರಥಕಾಗಿ ಸೇನಾ
ವೃಂದ ಕವಿದುದು ಚೈದ್ಯ ಶೃಂಜಯ ಮತ್ಸ್ಯ ಕೈಕೆಯರು
ಸಂದಣಿಸಿ ಪಾಂಚಾಲ ಕೇರಳ
ವಿಂದ ಮಗಧ ದ್ರವಿಡ ವಂಗ ಪು
ಳಿಂದ ಬಲ ಬಹಳಾಬ್ಧಿ ಮುತ್ತಿತು ಮತ್ತೆ ಮೂದಲಿಸಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೊರೆಗಳು ಕಂಗೆಟ್ಟರು’ ಎನ್ನುತ್ತ ಸೇನಾವೃಂದವು ಕರ್ಣನ ರಥವನ್ನು ಮುತ್ತಿತು. ಚೇದಿ, ಸೃಂಜಯ, ಮತ್ಸ್ಯ, ಕೇಕಯ ದೇಶಗಳವರು ಗುಂಪುಗೂಡಿದರು. ಪಾಂಚಾಲ, ಕೇರಳ, ವಿಂದ, ಮಗಧ, ವಂಗ, ದ್ರವಿಡ, ಪುಳಿಂದರ ಮಹಾಸೈನ್ಯವು ಮೂದಲಿಸುತ್ತ ಮತ್ತೆ ಮುತ್ತಿಗೆ ಹಾಕಿತು.
ಮೂಲ ...{Loading}...
ಮುಂದುಗೆಟ್ಟುದು ದೊರೆಗಳೆನೆ ರವಿ
ನಂದನನ ರಥಕಾಗಿ ಸೇನಾ
ವೃಂದ ಕವಿದುದು ಚೈದ್ಯ ಶೃಂಜಯ ಮತ್ಸ್ಯ ಕೈಕೆಯರು
ಸಂದಣಿಸಿ ಪಾಂಚಾಲ ಕೇರಳ
ವಿಂದ ಮಗಧ ದ್ರವಿಡ ವಂಗ ಪು
ಳಿಂದ ಬಲ ಬಹಳಾಬ್ಧಿ ಮುತ್ತಿತು ಮತ್ತೆ ಮೂದಲಿಸಿ ॥7॥
೦೦೮ ಒದೆವ ಮನ್ದರವನು ...{Loading}...
ಒದೆವ ಮಂದರವನು ತರಂಗದ
ಲುದಧಿ ಹೊಯ್ವಂದದಲಿ ಹೊಕ್ಕವು
ಕುದುರೆ ತೂಳಿದವಾನೆ ಕವಿದರು ರಥಿಕರೊಳಬಿದ್ದು
ಒದರಿ ವಿವಿಧಾಯುಧದ ಕಾಲಾ
ಳೊದಗಿ ಕೈದೋರಿಸಿದರಿನಿಬರ
ಸದೆದನೊಬ್ಬನ ಕರ್ಣ ಕೆದರಿದನಾ ಮಹಾಬಲವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನನ್ನು ಕಡೆಯುತ್ತಿರುವ ಮಂದರ ಪರ್ವತವನ್ನು ಸಮುದ್ರವು ಅಲೆಗಳಿಂದ ಅಪ್ಪಳಿಸುವಂತೆ ಕುದುರೆಗಳು ಆಕ್ರಮಣ ಮಾಡಿದವು. ಆನೆಗಳು ನುಗ್ಗಿದವು. ರಥಿಕರು ಒಳಹೊಕ್ಕು ಮುತ್ತಿದರು. ವಿವಿಧ ಆಯುಧಗಳನ್ನು ಹಿಡಿದ ಕಾಲಾಳುಗಳು ಒಟ್ಟಾಗಿ ಆರ್ಭಟಿಸುತ್ತ ಎದುರಾದರು. ಆದರೆ ಕರ್ಣನು ಒಬ್ಬನೇ ಅವರೆಲ್ಲರನ್ನೂ ಸವರಿಹಾಕಿ, ಶತ್ರ್ರುಗಳ ಮಹಾಸೈನ್ಯವನ್ನು ಚೆಲ್ಲಾಪಿಲ್ಲಿ ಮಾಡಿದನು.
ಮೂಲ ...{Loading}...
ಒದೆವ ಮಂದರವನು ತರಂಗದ
ಲುದಧಿ ಹೊಯ್ವಂದದಲಿ ಹೊಕ್ಕವು
ಕುದುರೆ ತೂಳಿದವಾನೆ ಕವಿದರು ರಥಿಕರೊಳಬಿದ್ದು
ಒದರಿ ವಿವಿಧಾಯುಧದ ಕಾಲಾ
ಳೊದಗಿ ಕೈದೋರಿಸಿದರಿನಿಬರ
ಸದೆದನೊಬ್ಬನ ಕರ್ಣ ಕೆದರಿದನಾ ಮಹಾಬಲವ ॥8॥
೦೦೯ ಬೀಳುವಮ್ಬಿನ ಹೊಯ್ವ ...{Loading}...
ಬೀಳುವಂಬಿನ ಹೊಯ್ವ ಖಡ್ಗದ
ತೂಳುವಾನೆಯ ತೂಕಿ ತಾಗುವ
ಶೂಲಿಗೆಯ ತುಂಡಿಸುವ ವಂಕಿಯ ನೆಡುವ ಬಲ್ಲೆಹದ
ಸೀಳುವಿಟ್ಟಿಯ ಮುರಿವ ಪರಿಘದ
ಪಾಳಿಸುವ ಪರಶುವಿನ ಧಾಳಾ
ಧೂಳಿ ಮಸಗಿತು ಮತ್ತೆ ಕರ್ಣನ ರಥದ ಬಳಸಿನಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೀಳುವ ಬಾಣ, ಹೊಡೆಯುವ ಖಡ್ಗ, ನುಗ್ಗುವ ಆನೆ, ತೂಗುತ್ತ ತಾಗುವ ಶೂಲ, ತುಂಡರಿಸುವ ವಂಕಿ, ನೆಡುವ ಭಲ್ಲೆ, ಸೀಳುವ ಈಟಿ, ಮುರಿಯುವ ಗದೆ, ಸೀಳುವ ಗಂಡುಗೊಡಲಿ - ಇವು ಕರ್ಣನ ರಥದ ಸುತ್ತ ಮತ್ತೆ ಆಕ್ರಮಣ ಮಾಡಿದವು.
ಪದಾರ್ಥ (ಕ.ಗ.ಪ)
ಶೂಲಿಗೆ, ವಂಕಿ, ಬಲ್ಲೆಹ, ಪರಿಘ, ಒಂದೊಂದು ಬಗೆಯ ಆಯುಧಗಳು, ಪರಶು-ಗಂಡುಗೊಡಲಿ, ಧಾಳಾಧೂಳಿ-ಆಕ್ರಮಣ.
ಮೂಲ ...{Loading}...
ಬೀಳುವಂಬಿನ ಹೊಯ್ವ ಖಡ್ಗದ
ತೂಳುವಾನೆಯ ತೂಕಿ ತಾಗುವ
ಶೂಲಿಗೆಯ ತುಂಡಿಸುವ ವಂಕಿಯ ನೆಡುವ ಬಲ್ಲೆಹದ
ಸೀಳುವಿಟ್ಟಿಯ ಮುರಿವ ಪರಿಘದ
ಪಾಳಿಸುವ ಪರಶುವಿನ ಧಾಳಾ
ಧೂಳಿ ಮಸಗಿತು ಮತ್ತೆ ಕರ್ಣನ ರಥದ ಬಳಸಿನಲಿ ॥9॥
೦೧೦ ತುರಗ ರಾವ್ತರಿಗವರ ...{Loading}...
ತುರಗ ರಾವ್ತರಿಗವರ ಖಡ್ಗಕೆ
ಕರಿಗೆ ಜೋಧರಿಗವರ ಶಸ್ತ್ರಕೆ
ವರ ರಥಕೆ ಸಾರಥಿಗೆ ರಥಿಕರ ಚಾಪ ಮಾರ್ಗಣಕೆ
ಸರಳನೊಂದೊಂದೆಚ್ಚು ನೆರೆ ಕ
ತ್ತರಿಸಿದನು ಕಾಲಾಳನೊಂದೇ
ಸರಳಲೈನೂರಳಿಯೆ ಕೊಂದನು ಕರ್ಣ ಪರಬಲವ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು, ಕುದುರೆಗಳಿಗೆ, ಅದರ ಸವಾರರಿಗೆ ಮತ್ತು ಅವರ ಖಡ್ಗಗಳಿಗೆ, ಆನೆಗಳಿಗೆ ಅದರ ಯೋಧರಿಗೆ ಅವರ ಶಸ್ತ್ರಕ್ಕೆ, ಶ್ರೇಷ್ಠವಾದ ರಥಗಳಿಗೆ, ಅವುಗಳ ಸಾರಥಿಗಳಿಗೆ ಮತ್ತು ರಥಿಕರ ಬಿಲ್ಲುಬಾಣಗಳಿಗೆ -ಒಂದೊಂದಕ್ಕೆ ಒಂದೊಂದು ಬಾಣವನ್ನು ಹೊಡೆದು, ಒಂದೇ ಬಾಣದಿಂದ ಐದುನೂರು ಕಾಲಾಳುಗಳನ್ನು ಕತ್ತರಿಸುತ್ತ ಶತ್ರುಗಳ ಸೈನ್ಯವನ್ನು ಕೊಂದನು.
ಮೂಲ ...{Loading}...
ತುರಗ ರಾವ್ತರಿಗವರ ಖಡ್ಗಕೆ
ಕರಿಗೆ ಜೋಧರಿಗವರ ಶಸ್ತ್ರಕೆ
ವರ ರಥಕೆ ಸಾರಥಿಗೆ ರಥಿಕರ ಚಾಪ ಮಾರ್ಗಣಕೆ
ಸರಳನೊಂದೊಂದೆಚ್ಚು ನೆರೆ ಕ
ತ್ತರಿಸಿದನು ಕಾಲಾಳನೊಂದೇ
ಸರಳಲೈನೂರಳಿಯೆ ಕೊಂದನು ಕರ್ಣ ಪರಬಲವ ॥10॥
೦೧೧ ನಕುಳನನು ಹದಿನೆಣ್ಟರಲಿ ...{Loading}...
ನಕುಳನನು ಹದಿನೆಂಟರಲಿ ಸಾ
ತ್ಯಕಿಯನೈದಂಬಿನಲಿ ಸಹದೇ
ವಕನನೊಂಬತ್ತರಲಿ ಭೀಮನನೆಂಟು ಕೋಲಿನಲಿ
ಸಕಲ ರಥಿಕರನೆಲ್ಲ ಶತ ಸಾ
ಯಕದಲೊರಗಿಸಿ ಚೈದ್ಯ ಪಾಂಚಾ
ಲಕರ ಥಟ್ಟಿನೊಳೊಕ್ಕಲಿಕ್ಕಿದನರಸ ಕೇಳ್ ಎಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರಸ ಕೇಳು ಕರ್ಣನು, ಹದಿನೆಂಟು ಬಾಣಗಳಲ್ಲಿ ನಕುಲನನ್ನು, ಐದರಲ್ಲಿ ಸಾತ್ಯಕಿಯನ್ನು, ಒಂಬತ್ತರಲ್ಲಿ ಸಹದೇವನನ್ನು, ಎಂಟರಲ್ಲಿ ಭೀಮನನ್ನು, ನೂರು ಬಾಣಗಳಲ್ಲಿ ಎಲ್ಲ ರಥಿಕರನ್ನು ಬೀಳಿಸಿ ಚೇದಿ, ಪಾಂಚಾಲಕರ ಸೇನೆಯನ್ನು ಸದೆಬಡಿದನು’ ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಕೋಲು-ಬಾಣ, ಒಕ್ಕಲಿಕ್ಕು-ಸದೆಬಡಿ.
ಮೂಲ ...{Loading}...
ನಕುಳನನು ಹದಿನೆಂಟರಲಿ ಸಾ
ತ್ಯಕಿಯನೈದಂಬಿನಲಿ ಸಹದೇ
ವಕನನೊಂಬತ್ತರಲಿ ಭೀಮನನೆಂಟು ಕೋಲಿನಲಿ
ಸಕಲ ರಥಿಕರನೆಲ್ಲ ಶತ ಸಾ
ಯಕದಲೊರಗಿಸಿ ಚೈದ್ಯ ಪಾಂಚಾ
ಲಕರ ಥಟ್ಟಿನೊಳೊಕ್ಕಲಿಕ್ಕಿದನರಸ ಕೇಳೆಂದ ॥11॥
೦೧೨ ಅದು ಬಳಿಕ ...{Loading}...
ಅದು ಬಳಿಕ ಹೇರಾಳ ದಳವಾಂ
ತುದು ಮಹಾರಥರೆಸುಗೆಯಲಿ ಹೂ
ಳಿದುದು ನಭ ನುಗ್ಗಾಯ್ತು ನೆಲ ಚತುರಂಗ ಪದಹತಿಗೆ
ಕುದುರೆ ಕರಿ ತೇರಾಳ ತೆಕ್ಕೆಯ
ಹೊದರಿನಲಿ ಮುಳುಗಿದನು ನಿನ್ನವ
ನದುಭುತವನೇನೆಂಬೆನೈ ಧೃತರಾಷ್ಟ್ರ ಕೇಳ್ ಎಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆಮೇಲೆ ಮಹಾನ್ ಸೈನ್ಯವು ಮತ್ತೆ ಎದುರಾಯಿತು. ಮಹಾರಥರು ಬಿಟ್ಟ ಬಾಣಗಳಿಂದ ಆಕಾಶವು ಹೂತುಹೋಯಿತು. ಚತುರಂಗದ ಹೆಜ್ಜೆಗಳ ತುಳಿತಕ್ಕೆ ನೆಲ ನುಗ್ಗಾಯಿತು. ಕುದುರೆ, ಆನೆ, ರಥ, ಕಾಲಾಳುಗಳ ತೆಕ್ಕೆಯ ಪೊದೆಯಲ್ಲಿ ನಿನ್ನವನು ಮುಳುಗಿದನು. ಆ ಅದ್ಭುತವನ್ನು ಏನೆಂದು ಹೇಳಲಿ? ಧೃತರಾಷ್ಟ್ರ ಕೇಳು!’ ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಹೇರಾಳ-ಆಧಿಕ್ಯ
ಮೂಲ ...{Loading}...
ಅದು ಬಳಿಕ ಹೇರಾಳ ದಳವಾಂ
ತುದು ಮಹಾರಥರೆಸುಗೆಯಲಿ ಹೂ
ಳಿದುದು ನಭ ನುಗ್ಗಾಯ್ತು ನೆಲ ಚತುರಂಗ ಪದಹತಿಗೆ
ಕುದುರೆ ಕರಿ ತೇರಾಳ ತೆಕ್ಕೆಯ
ಹೊದರಿನಲಿ ಮುಳುಗಿದನು ನಿನ್ನವ
ನದುಭುತವನೇನೆಂಬೆನೈ ಧೃತರಾಷ್ಟ್ರ ಕೇಳೆಂದ ॥12॥
೦೧೩ ತಾರಕನ ಥಟ್ಟಿನಲಿ ...{Loading}...
ತಾರಕನ ಥಟ್ಟಿನಲಿ ಹರನ ಕು
ಮಾರ ಹೊಕ್ಕಂದದಲಿ ವೃತ್ರನ
ತಾರಕಾಕ್ಷನ ಜೋಡಿಯನು ಜಂಭಾರಿ ತರಿವಂತೆ
ಆರಿದೆಚ್ಚನು ಶಿವಶಿವಾ ಕಾ
ಮಾರಿಯೋ ಪಾಂಡವ ಬಲದ ಹೆ
ಮ್ಮಾರಿಯೋ ನಿನ್ನಾನೆ ಸವರಿತು ವೈರಿಭಟವನವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಷಣ್ಮುಖನು ತಾರಕಾಸುರನ ಸೇನೆಯನ್ನು ಹೊಕ್ಕ ರೀತಿಯಲ್ಲಿ, ಇಂದ್ರನು ವೃತ್ರ ಮತ್ತು ತಾರಕಾಕ್ಷನ ಜೋಡಿಯನ್ನು ತರಿಯುವಂತೆ ಕರ್ಣನು ಶತ್ರುಗಳನ್ನು ಕತ್ತರಿಸಿದನು. ಶಿವಶಿವಾ! ಕರ್ಣನೇನು ರುದ್ರನೊ, ಪಾಂಡವ ಸೈನ್ಯದ ಹೆಮ್ಮಾರಿಯೊ! ನಿನ್ನ ಆನೆಯು ಶತ್ರು ಸೈನ್ಯವನವನ್ನು ಸವರಿತು.’
ಮೂಲ ...{Loading}...
ತಾರಕನ ಥಟ್ಟಿನಲಿ ಹರನ ಕು
ಮಾರ ಹೊಕ್ಕಂದದಲಿ ವೃತ್ರನ
ತಾರಕಾಕ್ಷನ ಜೋಡಿಯನು ಜಂಭಾರಿ ತರಿವಂತೆ
ಆರಿದೆಚ್ಚನು ಶಿವಶಿವಾ ಕಾ
ಮಾರಿಯೋ ಪಾಂಡವ ಬಲದ ಹೆ
ಮ್ಮಾರಿಯೋ ನಿನ್ನಾನೆ ಸವರಿತು ವೈರಿಭಟವನವ ॥13॥
೦೧೪ ವಾಘೆ ಸರಿಸದ ...{Loading}...
ವಾಘೆ ಸರಿಸದ ರಾವುತೋ ದೃಢ
ವಾಘೆಯೆನುತೇರಿದ ಹಯೌಘದ
ಮೇಘಪಟಲದ ಪಾಡೆ ಫಡಯೆನೆ ಹೊಕ್ಕ ಗಜದಳದ
ಲಾಘವದ ಲುಳಿಸಾರತನದ ಶ
ರೌಘ ರಚನೆಯ ರಥಿಕಯೂಥ
ಶ್ಲಾಘೆಗಳ ನಾ ಕಾಣೆನೊಂದು ವಿಘಳಿಗೆ ಮಾತ್ರದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಲಗಾಮನ್ನು ಹಿಡಿದಿರುವವವರನ್ನು ರಾವುತೋ ಎಂದು ಪ್ರೋತ್ಸಾಹಿಸುತ್ತ, , ನಿಮ್ಮ ಲಗಾಮಿನ ಹಿಡಿತ ಗಟ್ಟಿಯಾಗಿರಲಿ’ ಎನ್ನುತ್ತ ರಾವುತರ ಸಮೂಹದ, ‘ಇದು ಮೋಡಗಳ ರೀತಿಯೆ ಫಡ!’ ಎನ್ನುತ್ತ ಗಜಗಳನ್ನು ಏರಿದ ದಳದ, ಬಾಣಗಳ ಸಮೂಹ ರಚನೆಯ ಲಾಘವದ ಕೈಚಳಕದ, ರಥಿಕಸೈನ್ಯದ ಮೆಚ್ಚುಗೆಗಳನ್ನು ಒಂದು ವಿಘಳಿಗೆ ಮಾತ್ರದಲ್ಲಿಯೂ ನಾನು ಕಾಣಲಿಲ್ಲ’ ಎಂದು ಸಂಜಯನು ಹೇಳಿದನು.
ಮೂಲ ...{Loading}...
ವಾಘೆ ಸರಿಸದ ರಾವುತೋ ದೃಢ
ವಾಘೆಯೆನುತೇರಿದ ಹಯೌಘದ
ಮೇಘಪಟಲದ ಪಾಡೆ ಫಡಯೆನೆ ಹೊಕ್ಕ ಗಜದಳದ
ಲಾಘವದ ಲುಳಿಸಾರತನದ ಶ
ರೌಘ ರಚನೆಯ ರಥಿಕಯೂಥ
ಶ್ಲಾಘೆಗಳ ನಾ ಕಾಣೆನೊಂದು ವಿಘಳಿಗೆ ಮಾತ್ರದಲಿ ॥14॥
೦೧೫ ಬೇರೆ ಲಗ್ಗೆಯ ...{Loading}...
ಬೇರೆ ಲಗ್ಗೆಯ ಮಾಡಿ ಭೋಯೆಂ
ದೇರಿ ಹಳಚುವ ರಭಸ ಕಿವಿಗಳ
ಕೀರಿದುದು ಬಳಿಕವರು ಕರ್ಣನ ತಾಗಿದಾಕ್ಷಣಕೆ
ತಾರು ಥಟ್ಟಿಗೆ ಹರೆದು ರೌದ್ರವ
ಹಾರಿದವು ಕಣ್ಣುಗಳು ರಿಪುಬಲ
ದೇರ ನಾಲಗೆ ಹೊಗಳಲಮ್ಮದು ನೃಪತಿ ಕೇಳ್ ಎಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೃಪತಿ ಕೇಳು, ಶತ್ರುಗಳು ಮತ್ತೆ ಲಗ್ಗೆಹಾಕಿ ಭೋ ಎಂದು ಮೇಲೆಬೀಳುವ ರಭಸವು ಕಿವಿಗಳನ್ನು ಕೊರೆಯಿತು. ಬಳಿಕ ಅವರು ಕರ್ಣನನ್ನು ತಾಗಿದ ಕೂಡಲೆ ಚಲ್ಲಾಪಿಲ್ಲಿಯಾಗಿಹೋದರು. ಕರ್ಣನ ಕಣ್ಣುಗಳು ರೌದ್ರವನ್ನು ಸೂಸಿದವು. ಶತ್ರು ಸೈನ್ಯಕ್ಕಾದ ಗಾಯಗಳನ್ನು ವಿವರಿಸಲು ನನ್ನ ನಾಲಗೆ ಸಮರ್ಥವಾಗಿಲ್ಲ’ ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಹಳಚು-ಮೇಲೆಬೀಳು, ತಾರುತಟ್ಟು-ಚಲ್ಲಾಪಿಲ್ಲಿ, ಕೀರು-ಶಬ್ದಮಾಡು, ಭೋರ್ಗರೆ, ಹಾಱು-ಸೂಸು, ಹೊರಚೆಲ್ಲು, ಏಱ್-ಗಾಯ,
ಮೂಲ ...{Loading}...
ಬೇರೆ ಲಗ್ಗೆಯ ಮಾಡಿ ಭೋಯೆಂ
ದೇರಿ ಹಳಚುವ ರಭಸ ಕಿವಿಗಳ
ಕೀರಿದುದು ಬಳಿಕವರು ಕರ್ಣನ ತಾಗಿದಾಕ್ಷಣಕೆ
ತಾರು ಥಟ್ಟಿಗೆ ಹರೆದು ರೌದ್ರವ
ಹಾರಿದವು ಕಣ್ಣುಗಳು ರಿಪುಬಲ
ದೇರ ನಾಲಗೆ ಹೊಗಳಲಮ್ಮದು ನೃಪತಿ ಕೇಳೆಂದ ॥15॥
೦೧೬ ಆಳ ಕೊನ್ದನು ...{Loading}...
ಆಳ ಕೊಂದನು ಲಕ್ಕವನು ತುರ
ಗಾಳಿಯನು ನಾಲ್ಸಾವಿರವ ಶುಂ
ಡಾಲ ಘಟೆಗಳ ತುಂಡಿಸಿದನೊಂದೆರಡು ಸಾವಿರವ
ಮೌಳಿಮಣಿಯಲಿ ಹೊಳೆಹೊಳೆವ ನರ
ಪಾಲರನು ನಾನೂರರೋಲೆಯ
ಸೀಳಿದನಲೈ ಚೈದ್ಯ ಪಾಂಚಾಲರಲಿ ಕಲಿಕರ್ಣ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲೈ (ದೊರೆಯೆ), ಕಲಿ ಕರ್ಣನು ಒಂದು ಲಕ್ಷ ಯೋಧರು, ನಾಲ್ಕು ಸಾವಿರ ಕುದುರೆಗಳ ಸಮೂಹ, ಒಂದೆರಡು ಸಾವಿರ ಆನೆಗಳ ಸಮೂಹಗಳನ್ನು ಕೊಂದನು. ಮಣಿಖಚಿತ ಕಿರೀಟಗಳನ್ನು ಧರಿಸಿ ಹೊಳೆಹೊಳೆಯುತ್ತಿದ್ದ ನಾಲ್ಕುನೂರು ಚೇದಿ, ಪಾಂಚಾಲ ರಾಜರ ರಥಗಳನ್ನು ನಾಶಮಾಡಿದನು’.
ಪದಾರ್ಥ (ಕ.ಗ.ಪ)
ಶುಂಡಾಲಘಟೆ-ಆನೆಗಳ ಸಮೂಹ,
ಓಲೆ - ರಥದ ಮೇಲೆ ಛತ್ರದಂತೆ ಇರುವ ಮೇಲ್ಗಟ್ಟು.
ಮೂಲ ...{Loading}...
ಆಳ ಕೊಂದನು ಲಕ್ಕವನು ತುರ
ಗಾಳಿಯನು ನಾಲ್ಸಾವಿರವ ಶುಂ
ಡಾಲ ಘಟೆಗಳ ತುಂಡಿಸಿದನೊಂದೆರಡು ಸಾವಿರವ
ಮೌಳಿಮಣಿಯಲಿ ಹೊಳೆಹೊಳೆವ ನರ
ಪಾಲರನು ನಾನೂರರೋಲೆಯ
ಸೀಳಿದನಲೈ ಚೈದ್ಯ ಪಾಂಚಾಲರಲಿ ಕಲಿಕರ್ಣ ॥16॥
೦೧೭ ತೆರಳಿದನು ಸಹದೇವ ...{Loading}...
ತೆರಳಿದನು ಸಹದೇವ ನಸು ಪೈ
ಸರಿಸಿದನು ನಕುಳನು ಶಿಖಂಡಿಯ
ಕರಣ ತಲೆಕೆಳಕಾಯ್ತು ಕಾಣೆನು ಸಾತ್ಯಕಿಯ ರಥವ
ಮುರಿವ ಕಂಡೆನು ಭೀಮ ದುಗುಡದ
ಭರದಲಿದ್ದನು ಮಿಕ್ಕ ಬಲ ನಾ
ಲ್ಕೆರಡೊ ನಾಲ್ಕೊಂದೋ ನಿಧಾನಿಸಲರಿಯೆ ನಾನೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸಹದೇವ ನಿರ್ಗಮಿಸಿದನು. ನಕುಳನು ಸ್ವಲ್ಪ ಹಿಮ್ಮೆಟ್ಟಿದನು. ಶಿಖಂಡಿಯ ಜ್ಞಾನೇಂದ್ರಿಯ ತಲೆಕೆಳಗಾಯಿತು. ಸಾತ್ಯಕಿಯ ರಥವನ್ನು ಕಾಣಲಿಲ್ಲ. ಹಿಂಜರಿತವನ್ನು ಕಂಡೆನು. ಭೀಮನು ದುಗುಡದ ಭರದಲ್ಲಿ ಇದ್ದನು. ಉಳಿದ ಬಲ ಎಷ್ಟು ಎಂಬುದನ್ನು ನಿರ್ಧರಿಸಲು ನಾನು ಸಮರ್ಥನಲ್ಲ’ ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಪೈಸರಿಸು-ಹಿಮ್ಮೆಟ್ಟು, ಕರಣ-ಜ್ಞಾನೇಂದ್ರಿಯ, ಮುರಿ-ಹಿಂದಿರುಗು, ಮರಳು.
ಮೂಲ ...{Loading}...
ತೆರಳಿದನು ಸಹದೇವ ನಸು ಪೈ
ಸರಿಸಿದನು ನಕುಳನು ಶಿಖಂಡಿಯ
ಕರಣ ತಲೆಕೆಳಕಾಯ್ತು ಕಾಣೆನು ಸಾತ್ಯಕಿಯ ರಥವ
ಮುರಿವ ಕಂಡೆನು ಭೀಮ ದುಗುಡದ
ಭರದಲಿದ್ದನು ಮಿಕ್ಕ ಬಲ ನಾ
ಲ್ಕೆರಡೊ ನಾಲ್ಕೊಂದೋ ನಿಧಾನಿಸಲರಿಯೆ ನಾನೆಂದ ॥17॥
೦೧೮ ಇಟ್ಟಣಿಸಿಕೊಣ್ಡೊತ್ತಿ ರಾಯನ ...{Loading}...
ಇಟ್ಟಣಿಸಿಕೊಂಡೊತ್ತಿ ರಾಯನ
ಥಟ್ಟ ಹೊಕ್ಕನು ಜರುಹಿದನು ಜಗ
ಜಟ್ಟಿ ಜೋಡಿಸಿದಂಗಸುಯ್ದಾನದ ಮಹಾರಥರ
ಕೆಟ್ಟ ದಳವನಘಾಟದವರೊಳ
ಗಿಟ್ಟು ಕೊಳ್ಳರದೇನು ರಾಯನ
ಮುಟ್ಟುತಿದಲಾ ರೌದ್ರರಣವೆನುತೆಚ್ಚನಾ ಕರ್ಣ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ತನ್ನ ಬಲವನ್ನು ಸಿದ್ಧಮಾಡಿಕೊಂಡು ಆಕ್ರಮಿಸಿ ಧರ್ಮರಾಯನ ಸೈನ್ಯವನ್ನು ಹೊಕ್ಕನು. ಜಗಜಟ್ಟಿಗಳು ಅಂಗರಕ್ಷಕರಾಗಿರುವ ಮಹಾರಥರ ವ್ಯವಸ್ಥೆಯನ್ನು ಕದಲಿಸಿದನು. ‘ಚೆದುರಿಹೋದ, ಬಲಹೀನ ದಳವನ್ನು ಅತಿಶಯದವರು ಜೊತೆಗೆ ಕೂಡಿಸಿಕೊಳ್ಳುವುದಿಲ್ಲ. ಇದೇನು, ರೌದ್ರರಣವು ರಾಯನನ್ನು ತಲಪಿಬಿಟ್ಟಿದೆ ನೋಡಿ’ ಎನ್ನುತ್ತ ಬಾಣವನ್ನು ಬಿಟ್ಟನು.
ಮೂಲ ...{Loading}...
ಇಟ್ಟಣಿಸಿಕೊಂಡೊತ್ತಿ ರಾಯನ
ಥಟ್ಟ ಹೊಕ್ಕನು ಜರುಹಿದನು ಜಗ
ಜಟ್ಟಿ ಜೋಡಿಸಿದಂಗಸುಯ್ದಾನದ ಮಹಾರಥರ
ಕೆಟ್ಟ ದಳವನಘಾಟದವರೊಳ
ಗಿಟ್ಟು ಕೊಳ್ಳರದೇನು ರಾಯನ
ಮುಟ್ಟುತಿದಲಾ ರೌದ್ರರಣವೆನುತೆಚ್ಚನಾ ಕರ್ಣ ॥18॥
೦೧೯ ಕುರುಬಲದ ಸುಮ್ಮಾನ ...{Loading}...
ಕುರುಬಲದ ಸುಮ್ಮಾನ ಕಹಳೆಯ
ಬಿರಿವ ನಿಸ್ಸಾಳದ ನೃಪಾಲರ
ಹರುಷ ಪುಳಕದ ಭುಜದ ಹೊಯ್ಲಿನ ಬೊಬ್ಬೆಯಬ್ಬರದ
ಅರಿಬಲದೊಳಕಟಕಟ ವಿಧಿ ನಿ
ಷ್ಕರುಣಿ ಹಾಹಾಯೆಂಬ ರವದ
ಬ್ಬರದ ನಿಬ್ಬರ ಕೇಳಲಾದುದು ನೃಪತಿ ಕೇಳ್ ಎಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುಬಲದಲ್ಲಿ ಸಂತೋಷದ ಕಹಳೆ, ಬಿರಿಯುವ ನಿಸ್ಸಾಳ, ರಾಜರ ಹರ್ಷದ ಪುಳಕ, ಭುಜವನ್ನು ಹೊಡೆದುಕೊಳ್ಳುವ ಸದ್ದು, ಬೊಬ್ಬೆಯ ಅಬ್ಬರ- ಇವು ಕೇಳಿಬರುತ್ತಿದ್ದರೆ, ಶತ್ರುಪಾಳೆಯದಲ್ಲಿ ಅಕಟಕಟ! ವಿಧಿ! ನಿಷ್ಕರುಣಿ! ಹಾ! ಹಾ! ಎಂಬ ಧ್ವನಿಗಳ ಆಕ್ರಂದನದ ಅತಿಶಯತೆ - ಇವುಗಳನ್ನು ಕೇಳುವಂತಾಯಿತು. ದೊರೆಯೆ, ಕೇಳು’ ಎಂದನು.
ಪದಾರ್ಥ (ಕ.ಗ.ಪ)
ಸುಮ್ಮಾನ-ಸಂತೋಷ, ನಿಸ್ಸಾಳ-ಊದುವ ವಾದ್ಯ. ನಿಬ್ಬರ-ಆಕ್ರಂದನ.
ಮೂಲ ...{Loading}...
ಕುರುಬಲದ ಸುಮ್ಮಾನ ಕಹಳೆಯ
ಬಿರಿವ ನಿಸ್ಸಾಳದ ನೃಪಾಲರ
ಹರುಷ ಪುಳಕದ ಭುಜದ ಹೊಯ್ಲಿನ ಬೊಬ್ಬೆಯಬ್ಬರದ
ಅರಿಬಲದೊಳಕಟಕಟ ವಿಧಿ ನಿ
ಷ್ಕರುಣಿ ಹಾಹಾಯೆಂಬ ರವದ
ಬ್ಬರದ ನಿಬ್ಬರ ಕೇಳಲಾದುದು ನೃಪತಿ ಕೇಳೆಂದ ॥19॥
೦೨೦ ಎಲೆಲೆ ರಾಯನ ...{Loading}...
ಎಲೆಲೆ ರಾಯನ ಮೇಲೆ ಬಿದ್ದುದು
ಕಲಹವಕಟಾ ಹೋಗಬೇಡಿ
ಟ್ಟಳಿಸಿದವ ಹಗೆ ನಮ್ಮ ಭೀಷ್ಮ ದ್ರೋಣನಿವನಲ್ಲ
ಅಳುಕದಿರಿ ಕವಿಕವಿಯೆನುತ ಹೆ
ಬ್ಬಲ ಸಘಾಡದಲೌಕಿ ಕರ್ಣನ
ಹೊಲಬುಗೆಡಿಸಿದುದಂಬುಗಳ ಸಾರಾಯ ಸೋನೆಯಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲೆಲೆ! ಧರ್ಮರಾಯನ ಮೇಲೆ ಕಲಹವು ಬಿದ್ದಿದೆ. ಅಕಟಾ! ಹೋಗಬೇಡಿ! ಆಕ್ರಮಣ ಮಾಡಿರುವವನು ಶತ್ರು! ಇವನು ನಮ್ಮ ಭೀಷ್ಮ, ದ್ರೋಣರ ಹಾಗಲ್ಲ. ಅಳುಕದಿರಿ. ಮುತ್ತಿಗೆ ಹಾಕಿ, ಮುತ್ತಿಗೆ ಹಾಕಿ’ ಎನ್ನುತ್ತ ಪಾಂಡವರ ಹಿರಿದಾದ ಸೈನ್ಯವು ಬಾಣಗಳ ಮಳೆಯನ್ನು ವೇಗವಾಗಿ ಸುರಿಸಿ ಕರ್ಣನನ ದಾರಿಯನ್ನು ತಪ್ಪಿಸಿತು.
ಮೂಲ ...{Loading}...
ಎಲೆಲೆ ರಾಯನ ಮೇಲೆ ಬಿದ್ದುದು
ಕಲಹವಕಟಾ ಹೋಗಬೇಡಿ
ಟ್ಟಳಿಸಿದವ ಹಗೆ ನಮ್ಮ ಭೀಷ್ಮ ದ್ರೋಣನಿವನಲ್ಲ
ಅಳುಕದಿರಿ ಕವಿಕವಿಯೆನುತ ಹೆ
ಬ್ಬಲ ಸಘಾಡದಲೌಕಿ ಕರ್ಣನ
ಹೊಲಬುಗೆಡಿಸಿದುದಂಬುಗಳ ಸಾರಾಯ ಸೋನೆಯಲಿ ॥20॥
೦೨೧ ಕೊಮ್ಬನೇ ಬಳಿಕೀ ...{Loading}...
ಕೊಂಬನೇ ಬಳಿಕೀ ಮಹಾರಥ
ರಂಬುಗಿಂಬನು ನಿಮ್ಮ ಹಿರಿಯರ
ಡೊಂಬಿನಾಹವವಲ್ಲಲೇ ತಮತಮಗೆ ತುಡುಕುವಡೆ
ಅಂಬುನಿಧಿ ಮಕರಂದವಾದರೆ
ತುಂಬಿಯಾಗನೆ ವಡಬನೀತನ
ನೆಂಬ ಖುಲ್ಲರು ಸುಭಟರೇ ಧೃತರಾಷ್ಟ್ರ ಕೇಳ್ ಎಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ‘ಈ ಮಹಾರಥರ ಬಾಣಗೀಣಗಳನ್ನು ಕರ್ಣನು ಲೆಕ್ಕಿಸುತ್ತಾನೆಯೆ? ತಮ್ಮತಮ್ಮಲ್ಲಿ ಯುದ್ಧಮಾಡುವುದಾದರೆ ಇದು ನಿಮ್ಮ ಹಿರಿಯರ ತೋರಿಕೆಯ ಯುದ್ಧವಲ್ಲವಷ್ಟೆ. ( ಭೀಷ್ಮ , ದ್ರೋಣರ ಯುದ್ಧದಂತೆ ಇದು ತೋರಿಕೆಯದಲ್ಲ)ಸಮುದ್ರವು ಮಕರಂದವಾದರೆ ವಡಬಾನಲನಾದ ಈತನು ದುಂಬಿಯಾಗುವುದಿಲ್ಲವೆ? ಕರ್ಣನನ್ನು ಆಕ್ಷೇಪಿಸುವ ಕ್ಷುಲ್ಲಕ ವ್ಯಕ್ತಿಗಳು ಸುಭಟರೆ? ಧೃತರಾಷ್ಟ್ರ, ಕೇಳು’ ಎಂದು ಸಂಜಯನು ಹೇಳಿದನು.
ಮೂಲ ...{Loading}...
ಕೊಂಬನೇ ಬಳಿಕೀ ಮಹಾರಥ
ರಂಬುಗಿಂಬನು ನಿಮ್ಮ ಹಿರಿಯರ
ಡೊಂಬಿನಾಹವವಲ್ಲಲೇ ತಮತಮಗೆ ತುಡುಕುವಡೆ
ಅಂಬುನಿಧಿ ಮಕರಂದವಾದರೆ
ತುಂಬಿಯಾಗನೆ ವಡಬನೀತನ
ನೆಂಬ ಖುಲ್ಲರು ಸುಭಟರೇ ಧೃತರಾಷ್ಟ್ರ ಕೇಳೆಂದ ॥21॥
೦೨೨ ರಾಯದಳದೊಳು ಮಡಿವ ...{Loading}...
ರಾಯದಳದೊಳು ಮಡಿವ ಕರಿವಾ
ನಾಯುಜಕೆ ಕಡೆಯಿಲ್ಲ ರಥಿಕರು
ಪಾಯದಳವೆನಿತಳಿದುದೋ ನಾನರಿಯೆನದರೊಳಗೆ
ಬಾಯಬಿಟ್ಟುದು ಸೇನೆ ಕಡಿಖಂ
ಡಾಯತದ ಹೆಣನೊಟ್ಟಲಿನ ಮುರಿ
ದಾಯುಧದ ಸಂದಣಿಯೆ ನಿಲಿಸಿತು ಬಳಿಕ ರವಿಸುತನ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಸೈನ್ಯದಲ್ಲಿ ಸಾಯುವ ಆನೆ, ಕುದುರೆಗಳಿಗೆ ಕೊನೆ ಇಲ್ಲ. ಅದರಲ್ಲಿ ರಥಿಕರು, ಪದಾತಿದಳ ಎಷ್ಟು ನಾಶವಾದರೊ ನಾನು ತಿಳಿಯೆ. ಸೇನೆ ಬಾಯಿಬಿಟ್ಟಿತು. ಕಡಿದ ಖಂಡಗಳ ರಾಶಿ, ಹೆಣಗಳ ಬಣಬೆ, ಮುರಿದ ಆಯುಧಗಳು -ಇವೇ ಕರ್ಣನನ್ನು ಮುನ್ನುಗ್ಗದಂತೆ ತಡೆದು ನಿಲ್ಲಿಸಿದವು.
ಪದಾರ್ಥ (ಕ.ಗ.ಪ)
ವಾನಾಯುಜ-(ವಾಯವ್ಯ ದಿಕ್ಕಿನಲ್ಲಿರುವ ವಾನಾಯ ದೇಶದಲ್ಲಿ ಹುಟ್ಟಿದ) ಕುದುರೆ.
ಮೂಲ ...{Loading}...
ರಾಯದಳದೊಳು ಮಡಿವ ಕರಿವಾ
ನಾಯುಜಕೆ ಕಡೆಯಿಲ್ಲ ರಥಿಕರು
ಪಾಯದಳವೆನಿತಳಿದುದೋ ನಾನರಿಯೆನದರೊಳಗೆ
ಬಾಯಬಿಟ್ಟುದು ಸೇನೆ ಕಡಿಖಂ
ಡಾಯತದ ಹೆಣನೊಟ್ಟಲಿನ ಮುರಿ
ದಾಯುಧದ ಸಂದಣಿಯೆ ನಿಲಿಸಿತು ಬಳಿಕ ರವಿಸುತನ ॥22॥
೦೨೩ ತರಿದ ಹೊಸ ...{Loading}...
ತರಿದ ಹೊಸ ಕುಮ್ಮರಿಯೊಳಗೆ ರಥ
ಹರಿಯಬಲ್ಲುದೆ ಕರ್ಣ ನಾವಿಂ
ದರಿದೆವೈ ನೀ ನೆಟ್ಟನೋಲೆಯಕಾರನೆಂಬುದನು
ಇರಿತಕಿವರಾರಿದಿರಹರು ನಿ
ನ್ನುರವಣಿಯನಾರಾನುವರು ಮ
ತ್ಸರವ ಬಿಸುಟೆನು ಪೂತು ರವಿಸುತ ಎಂದನಾ ಶಲ್ಯ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
23.’ ಆಗತಾನೆ ಕಾಡುಕಡಿದು ಒಟ್ಟಿರುವ ಜಾಗದಲ್ಲಿ ರಥ ಹರಿಯಬಲ್ಲುದೆ? ಕರ್ಣ, ನೀನು ನಿಜವಾಗಿಯೂ ಶೂರ ಎಂಬುದನ್ನು ಇಂದು ತಿಳಿದೆವು. ನಿನ್ನ ಇರಿತವನ್ನು ಎದುರಿಸಲು ಇವರಲ್ಲಿ ಯಾರು ಸಮರ್ಥರು? ನಿನ್ನ ಸಂಭ್ರಮವನ್ನು ತಾಳುವವರು ಯಾರು? ಭಲೆ! ಕರ್ಣ! ನಿನ್ನ ಬಗ್ಗೆ ಮತ್ಸರವನ್ನು ಬಿಸುಟೆ’ ಎಂದು ಶಲ್ಯನು ಹೇಳಿದನು.
ಪದಾರ್ಥ (ಕ.ಗ.ಪ)
ಕುಮ್ಮರಿ-ಕಾಡು ಕಡಿದು ಮಾಡಿದ (ಯುದ್ಧಭೂಮಿ) ಬಯಲು, ಓಲೆಕಾರ-ಸೇವೆಯಲ್ಲಿರುವವನು.
ಮೂಲ ...{Loading}...
ತರಿದ ಹೊಸ ಕುಮ್ಮರಿಯೊಳಗೆ ರಥ
ಹರಿಯಬಲ್ಲುದೆ ಕರ್ಣ ನಾವಿಂ
ದರಿದೆವೈ ನೀ ನೆಟ್ಟನೋಲೆಯಕಾರನೆಂಬುದನು
ಇರಿತಕಿವರಾರಿದಿರಹರು ನಿ
ನ್ನುರವಣಿಯನಾರಾನುವರು ಮ
ತ್ಸರವ ಬಿಸುಟೆನು ಪೂತು ರವಿಸುತ ಎಂದನಾ ಶಲ್ಯ ॥23॥
೦೨೪ ಕಾಲಿಡುವಡಿದು ದುರ್ಗವೆನುತಾ ...{Loading}...
ಕಾಲಿಡುವಡಿದು ದುರ್ಗವೆನುತಾ
ಸಾಲ ಬಿಟ್ಟನು ದಕ್ಷಿಣಕೆ ದು
ವ್ವಾಳಿಸಿದನಾ ರಥವನವನೀಪತಿಯ ಮೋಹರಕೆ
ಏಳು ಕಲಿಯಾಗಿನ್ನು ಕೆಲಬಲ
ದಾಳ ಹಾರದಿರೆನುತ ರಾಯನ
ಮೇಲೆ ಕರೆದನು ಕರ್ಣ ಖತಿಯಲಿ ಕಣೆಯ ಬಿರುವಳೆಯ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಕಾಲಿಡಲು ದುರ್ಗಮವಾಗಿದೆ ಎನ್ನುತ್ತ ಶಲ್ಯನು , ಆ ಸಾಲನ್ನು ಬಿಟ್ಟು ಬಲದಿಕ್ಕಿಗೆ, ಅಂದರೆ ಧರ್ಮರಾಯನ ಸೇನೆ ಇರುವೆಡೆಗೆ ರಥವನ್ನು ತಿರುಗಿಸಿದನು. ಕರ್ಣನು ‘ಏಳು ಯುದ್ಧಕ್ಕೆ ಸಿದ್ಧನಾಗು. ಇನ್ನು ಕಲಿಯಾಗು. ಅಕ್ಕಪಕ್ಕದ ಯೋಧರ ನೆರವನ್ನು ಬಯಸಬೇಡ’ ಎನ್ನುತ್ತ ಧರ್ಮರಾಯನ ಮೇಲೆ ಕೋಪದಿಂದ ಬಾಣಗಳ ಬಿರುಮಳೆಯನ್ನು ಕರೆದನು.
ಪದಾರ್ಥ (ಕ.ಗ.ಪ)
ದುವ್ವಾಳಿಸು-ಓಡಿಸು
ಮೂಲ ...{Loading}...
ಕಾಲಿಡುವಡಿದು ದುರ್ಗವೆನುತಾ
ಸಾಲ ಬಿಟ್ಟನು ದಕ್ಷಿಣಕೆ ದು
ವ್ವಾಳಿಸಿದನಾ ರಥವನವನೀಪತಿಯ ಮೋಹರಕೆ
ಏಳು ಕಲಿಯಾಗಿನ್ನು ಕೆಲಬಲ
ದಾಳ ಹಾರದಿರೆನುತ ರಾಯನ
ಮೇಲೆ ಕರೆದನು ಕರ್ಣ ಖತಿಯಲಿ ಕಣೆಯ ಬಿರುವಳೆಯ ॥24॥
೦೨೫ ಗಳಹದಿರು ಕೆಲಬಲದ ...{Loading}...
ಗಳಹದಿರು ಕೆಲಬಲದ ಹಂಗಿನ
ಬಳಕೆಯೇ ಫಡ ಸೂತಸುತ ಬಾ
ಳ್ಗೊಲೆಯ ಬಾಹಿರ ಬಿನುಗ ಬೆದರಿಸಿ ಬರಿದೆ ಬೆರತೆಯಲ
ಉಲುಕಿದರೆ ನಾಲಗೆಯ ತೊಡಬೆಯ
ಕಳಚುವೆನು ನಿಲ್ಲೆನುತಲಾ ಕುಂ
ಡಳಿತ ಕಾರ್ಮುಕನೆಚ್ಚು ಕಡಿದನು ಕರ್ಣನಂಬುಗಳ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಗಿದ ಬಿಲ್ಲನ್ನು ಹಿಡಿದ ಧರ್ಮರಾಯನು, ‘ಹರಟಬೇಡ. ನನಗೆ ನೆರೆಯವರ ಹಂಗಿನ ಬಳಕೆಯೆ? ಫಡ! ಸೂತಸುತ, ಬಾಳ್ಗೊಲೆಯ ಜೀವಹಂತಕನಾದ ಬಾಹಿರ! ಕ್ಷುದ್ರರಾದವರನ್ನು ಬೆದರಿಸಿ ವ್ಯರ್ಥವಾಗಿ ಅಹಂಕಾರ ಪಡುವೆಯಲ್ಲವೆ? ಉಲಿದರೆ ನಾಲಗೆಯನ್ನು ಕಳಚುತ್ತೇನೆ. ನಿಲ್ಲು’ ಎನ್ನುತ್ತ ಬಾಣಹೂಡಿ ಕರ್ಣನ ಬಾಣಗಳನ್ನು ಕಡಿದನು.
ಮೂಲ ...{Loading}...
ಗಳಹದಿರು ಕೆಲಬಲದ ಹಂಗಿನ
ಬಳಕೆಯೇ ಫಡ ಸೂತಸುತ ಬಾ
ಳ್ಗೊಲೆಯ ಬಾಹಿರ ಬಿನುಗ ಬೆದರಿಸಿ ಬರಿದೆ ಬೆರತೆಯಲ
ಉಲುಕಿದರೆ ನಾಲಗೆಯ ತೊಡಬೆಯ
ಕಳಚುವೆನು ನಿಲ್ಲೆನುತಲಾ ಕುಂ
ಡಳಿತ ಕಾರ್ಮುಕನೆಚ್ಚು ಕಡಿದನು ಕರ್ಣನಂಬುಗಳ ॥25॥
೦೨೬ ಆಲಿಕಲುಗಳು ಸಿಡಿಲಮರಿಗಳ ...{Loading}...
ಆಲಿಕಲುಗಳು ಸಿಡಿಲಮರಿಗಳ
ಮೇಲುವಾಯ್ದವು ಗಡ ಯುಧಿಷ್ಠಿರ
ನಾಳುತನದಲಿ ನಮ್ಮ ಜರೆದನು ಶಲ್ಯ ನೋಡೆನುತ
ಬೋಳೆಯಂಬೈದರಲಿ ರಾಯನ
ತೋಳನೆಚ್ಚನು ಜಡಿವ ಜೋಡಿನ
ಮೇಲೆ ಮುರಿದವು ಬಾಣ ನೃಪ ಮಗುಳೆಚ್ಚನಿನಸುತನ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆಲಿಕಲ್ಲುಗಳು ಸಿಡಿಲಮರಿಗಳ ಮೇಲೆ ಹಾಯ್ದವು ಅಲ್ಲವೆ! ಯುಧಿಷ್ಠಿರನು ಪರಾಕ್ರಮದಿಂದ ನಮ್ಮನ್ನು ಜರೆದನು, ನೋಡು ಶಲ್ಯ,’ ಎನ್ನುತ್ತ ಕರ್ಣನು ಐದು ಹರಿತವಾದ ಬಾಣಗಳಿಂದ ಧರ್ಮರಾಯನ ತೋಳುಗಳಿಗೆ ಹೊಡೆದನು. ಅವು ಧರ್ಮರಾಯನ ಕವಚದ ಮೇಲೆ ಬಿದ್ದವು. ಧರ್ಮರಾಯನೂ ಪ್ರತಿಯಾಗಿ ಬಾಣಗಳನ್ನು ಬಿಟ್ಟನು.
ಪದಾರ್ಥ (ಕ.ಗ.ಪ)
ಬೋಳೆ-ಹರಿತವಾದ, ಜೋಡು-ಕವಚ.
ಮೂಲ ...{Loading}...
ಆಲಿಕಲುಗಳು ಸಿಡಿಲಮರಿಗಳ
ಮೇಲುವಾಯ್ದವು ಗಡ ಯುಧಿಷ್ಠಿರ
ನಾಳುತನದಲಿ ನಮ್ಮ ಜರೆದನು ಶಲ್ಯ ನೋಡೆನುತ
ಬೋಳೆಯಂಬೈದರಲಿ ರಾಯನ
ತೋಳನೆಚ್ಚನು ಜಡಿವ ಜೋಡಿನ
ಮೇಲೆ ಮುರಿದವು ಬಾಣ ನೃಪ ಮಗುಳೆಚ್ಚನಿನಸುತನ ॥26॥
೦೨೭ ಬಲುಹು ಕೈಗಳಲುಣ್ಟೆ ...{Loading}...
ಬಲುಹು ಕೈಗಳಲುಂಟೆ ತೋರುವು
ದುಲಿವ ಹೊತ್ತದು ಬೇರೆನುತ ಮುಂ
ಕೊಳಿಸಿ ಕರ್ಣನ ಶರವ ಕಡದೀರೇಳು ಬಾಣದಲಿ
ಅಳುಕದೆಚ್ಚನು ತೇರು ತುರಗಾ
ವಳಿಯ ಧವಳಚ್ಛತ್ರ ಚಮರಿಯ
ನಿಳುಹಿದನು ಧ್ವಜದಂಡ ಸಹಿತೈವತ್ತು ಬಾಣದಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪರಾಕ್ರಮವು ಇದ್ದರೆ ಅದನ್ನು ಕೈಗಳಲ್ಲಿ ತೋರಿಸಬೇಕು. ಮಾತನಾಡುವ ಹೊತ್ತು ಬೇರೆ’ ಎನ್ನುತ್ತ ಧರ್ಮರಾಯನು ಅಳುಕದೆ ಮುಂದೆ ಬಂದು ಹದಿನಾಲ್ಕು ಬಾಣಗಳಲ್ಲಿ ಕರ್ಣನ ಬಾಣ, ರಥ, ಕುದುರೆಗಳ ಸಮೂಹವನ್ನು ಕಡಿದನು. ಐವತ್ತು ಬಾಣಗಳಲ್ಲಿ ಕರ್ಣನ ಬೆಳ್ಗೊಡೆ, ಚಾಮರಗಳನ್ನು ಧ್ವಜದಂಡಸಹಿತ ಇಳಿಸಿದನು.
ಪದಾರ್ಥ (ಕ.ಗ.ಪ)
ಮುಂಕೊಳಿಸು-ಎದುರಾಗು
ಮೂಲ ...{Loading}...
ಬಲುಹು ಕೈಗಳಲುಂಟೆ ತೋರುವು
ದುಲಿವ ಹೊತ್ತದು ಬೇರೆನುತ ಮುಂ
ಕೊಳಿಸಿ ಕರ್ಣನ ಶರವ ಕಡದೀರೇಳು ಬಾಣದಲಿ
ಅಳುಕದೆಚ್ಚನು ತೇರು ತುರಗಾ
ವಳಿಯ ಧವಳಚ್ಛತ್ರ ಚಮರಿಯ
ನಿಳುಹಿದನು ಧ್ವಜದಂಡ ಸಹಿತೈವತ್ತು ಬಾಣದಲಿ ॥27॥
೦೨೮ ಬೇಗೆವರಿ ಬೆಳುದಿಙ್ಗಳಲಿ ...{Loading}...
ಬೇಗೆವರಿ ಬೆಳುದಿಂಗಳಲಿ ನಮ
ಗೀಗ ತೋರಿತಲಾ ಎನುತ ಮುರಿ
ದಾಗಳೇ ಸಂಧಿಸಿದ ತನ್ನಯ ಹಯ ರಥಾದಿಗಳ
ಈಗಲರಿಯಾದರೆಯೆನುತ ಕಿವಿ
ಗಾಗಿ ತೆಗೆದನು ನಿಶಿತಬಾಣವ
ತೂಗಿ ಬಿಟ್ಟನು ಬೀಳೆನುತ ಕಲಿಕರ್ಣ ಬೊಬ್ಬಿರಿದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿಕರ್ಣನು, ‘ನಮಗೆ ಈಗ ಬೆಳುದಿಂಗಳಿನಲ್ಲಿ ಬಿಸಿಲಿನ ಬೇಗೆ ತೋರಿತಲ್ಲವೆ!’ ಎನ್ನುತ್ತ ತಿರುಗಿ, ‘ತನ್ನ ಕುದುರೆ, ರಥ ಮೊದಲಾದವನ್ನು ಈಗ ಸಾಧ್ಯವಾದರೆ ಕಡಿ!’ ಎನ್ನುತ್ತ ಹರಿತವಾದ ಬಾಣವನ್ನು ಕಿವಿಯವರೆಗೆ ಎಳೆದು ‘ಬೀಳು’ ಎಂದು ಬೊಬ್ಬಿರಿದು ತೂಗಿ ಬಿಟ್ಟನು.
ಮೂಲ ...{Loading}...
ಬೇಗೆವರಿ ಬೆಳುದಿಂಗಳಲಿ ನಮ
ಗೀಗ ತೋರಿತಲಾ ಎನುತ ಮುರಿ
ದಾಗಳೇ ಸಂಧಿಸಿದ ತನ್ನಯ ಹಯ ರಥಾದಿಗಳ
ಈಗಲರಿಯಾದರೆಯೆನುತ ಕಿವಿ
ಗಾಗಿ ತೆಗೆದನು ನಿಶಿತಬಾಣವ
ತೂಗಿ ಬಿಟ್ಟನು ಬೀಳೆನುತ ಕಲಿಕರ್ಣ ಬೊಬ್ಬಿರಿದ ॥28॥
೦೨೯ ಅರಸ ಕೇಳಾಶ್ಚರಿಯವನು ...{Loading}...
ಅರಸ ಕೇಳಾಶ್ಚರಿಯವನು ರಿಪು
ಶರವನೆಡೆಯಲಿ ಕಡಿದು ರವಿಸುತ
ನುರವನೆಚ್ಚನು ಧರ್ಮನಂದನನೆಂಟು ಬಾಣದಲಿ
ಬಿರಿಯೆ ಬಲುವಜ್ರಾಂಗಿ ಹಾಯ್ದವು
ಗರಿಸಹಿತಲುಚ್ಚಳಿಸಿ ನೆಲದಲಿ
ಸರಳು ನೆಟ್ಟವು ಕರ್ಣ ನನೆದನು ರುಧಿರಧಾರೆಯಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರಸ, ಆಶ್ಚರ್ಯವನ್ನು ಕೇಳು! ಧರ್ಮನಂದನನು ಶತ್ರುವಿನ ಬಾಣವನ್ನು ಮಧ್ಯದಲ್ಲಿಯೇ ಕತ್ತರಿಸಿ ಕರ್ಣನ ಎದೆಯು ಬಿರಿಯುವಂತೆ ಎಂಟು ಬಾಣಗಳಲ್ಲಿ ಹೊಡೆದನು. ಬಾಣಗಳು ಗರಿಸಹಿತ ಬಲಿಷ್ಠವಾದ ವಜ್ರ ಕವಚವನ್ನು ಹಾಯ್ದು ಮೇಲಕ್ಕೆ ಚಲಿಸಿ ನೆಲದಲ್ಲಿ ನೆಟ್ಟವು. ಕರ್ಣನು ರಕ್ತಧಾರೆಯಲ್ಲಿ ನೆನೆದನು’.
ಮೂಲ ...{Loading}...
ಅರಸ ಕೇಳಾಶ್ಚರಿಯವನು ರಿಪು
ಶರವನೆಡೆಯಲಿ ಕಡಿದು ರವಿಸುತ
ನುರವನೆಚ್ಚನು ಧರ್ಮನಂದನನೆಂಟು ಬಾಣದಲಿ
ಬಿರಿಯೆ ಬಲುವಜ್ರಾಂಗಿ ಹಾಯ್ದವು
ಗರಿಸಹಿತಲುಚ್ಚಳಿಸಿ ನೆಲದಲಿ
ಸರಳು ನೆಟ್ಟವು ಕರ್ಣ ನನೆದನು ರುಧಿರಧಾರೆಯಲಿ ॥29॥
೦೩೦ ತೂಗುವೊಡಲರೆಮುಚ್ಚುಗಙ್ಗಳ ...{Loading}...
ತೂಗುವೊಡಲರೆಮುಚ್ಚುಗಂಗಳ
ಸೂಗುರಿಸುವಂಗದಲಿ ತಾಳದ
ಮೂಗಿನುಸುರಿನ ಮೂರ್ಛೆಯಲಿ ರವಿಸೂನು ಮೈಮರೆದ
ಆಗಳಂತಿರೆ ಹೊರೆಯವರ ಕೈ
ಲಾಗುಮದ್ದಿನ ಕಮಳಜಲ ಮಂ
ತ್ರಾಗಮದಲೆಚ್ಚತ್ತನೊಂದೇ ನಿಮಿಷದಲಿ ಕರ್ಣ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೂಗುವ ಒಡಲು, ಅರೆಮುಚ್ಚಿದ ಕಣ್ಣುಗಳು, ಜೂಗಾಡುವ ಅಂಗ, ಉಸಿರನ್ನು ತಾಳದ ಮೂಗು - ಇವುಗಳಿಂದ ಕರ್ಣನು ಮೂರ್ಛೆಯಿಂದ ಮೈಮರೆತನು. ಹಾಗಿರುವಾಗ ಸೇವಕರ ಕೈ ಆಸರೆ, ಮದ್ದಿನ ಕಮಲಜಲ, ಮಂತ್ರಾಗಮ- ಇವುಗಳಿಂದ ಒಂದೇ ನಿಮಿಷದಲ್ಲಿ ಎಚ್ಚೆತ್ತನು.
ಪದಾರ್ಥ (ಕ.ಗ.ಪ)
ಸೂಗರಿಸು-ತೂಕಡಿಸು, ಜೂಗಾಡು,
ಕೈಲಾಗು-ಕೈಗುಣ .
ಮೂಲ ...{Loading}...
ತೂಗುವೊಡಲರೆಮುಚ್ಚುಗಂಗಳ
ಸೂಗುರಿಸುವಂಗದಲಿ ತಾಳದ
ಮೂಗಿನುಸುರಿನ ಮೂರ್ಛೆಯಲಿ ರವಿಸೂನು ಮೈಮರೆದ
ಆಗಳಂತಿರೆ ಹೊರೆಯವರ ಕೈ
ಲಾಗುಮದ್ದಿನ ಕಮಳಜಲ ಮಂ
ತ್ರಾಗಮದಲೆಚ್ಚತ್ತನೊಂದೇ ನಿಮಿಷದಲಿ ಕರ್ಣ ॥30॥
೦೩೧ ಬಸಿವ ರಕುತವ ...{Loading}...
ಬಸಿವ ರಕುತವ ತೊಳೆತೊಳೆದು ಮಂ
ತ್ರಿಸಿದ ಸಲಿಲವ ಮುಕ್ಕುಳಿಸಿಯುಗು
ಳ್ದಸಮ ಸಾಹಸಿ ಕೊಂಡ ವರ ಕರ್ಪುರದ ವೀಳೆಯವ
ಮುಸುಡ ದುಗುಡದ ತನ್ನ ಸೇನಾ
ಪ್ರಸರಕಭಯವನಿತ್ತು ಮಾರಿಯ
ಮುಸುಕನುಗಿದನ ತೋರೆನುತ ತಾಗಿದನು ಭೂಪತಿಯ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಸಮಸಾಹಸಿಯಾದ ಕರ್ಣನು ಸುರಿಯುತ್ತಿರುವ ರಕ್ತವನ್ನು ತೊಳೆತೊಳೆದು, ಮಂತ್ರಿಸಿದ ನೀರನ್ನು ಮುಕ್ಕುಳಿಸಿ ಉಗಿದು, ಶ್ರೇಷ್ಠವಾದ ಕರ್ಪೂರದ ವೀಳೆಯವನ್ನು ಹಾಕಿಕೊಂಡನು. ಮುಖದಲ್ಲಿ ದುಗುಡವಿದ್ದ ತನ್ನ ಸೇನಾಸಮೂಹಕ್ಕೆ ಅಭಯವನ್ನು ಕೊಟ್ಟು ‘ಮಾರಿಯ ಮುಸುಕನ್ನು ಕಳಚಿದವನನ್ನು ತೋರಿಸಿ’ ಎನ್ನುತ್ತ ಧರ್ಮರಾಯನನ್ನು ತಾಗಿದನು.
ಮೂಲ ...{Loading}...
ಬಸಿವ ರಕುತವ ತೊಳೆತೊಳೆದು ಮಂ
ತ್ರಿಸಿದ ಸಲಿಲವ ಮುಕ್ಕುಳಿಸಿಯುಗು
ಳ್ದಸಮ ಸಾಹಸಿ ಕೊಂಡ ವರ ಕರ್ಪುರದ ವೀಳೆಯವ
ಮುಸುಡ ದುಗುಡದ ತನ್ನ ಸೇನಾ
ಪ್ರಸರಕಭಯವನಿತ್ತು ಮಾರಿಯ
ಮುಸುಕನುಗಿದನ ತೋರೆನುತ ತಾಗಿದನು ಭೂಪತಿಯ ॥31॥
೦೩೨ ಮನ್ದಿ ಕವಿಯಲಿ ...{Loading}...
ಮಂದಿ ಕವಿಯಲಿ ಘಾಯ ತಾಗಿದ
ಹಂದಿಯೋ ರಾಧೇಯನರಸನ
ಮುಂದುಗೆಡಿಸದೆ ಮಾಣನೋ ತೆಗೆ ನೂಕು ನೂಕೆನುತ
ಸಂದಣಿಸಿತತಿರಥರು ರಾಯನ
ಮುಂದೆ ತಲೆವರಿಗೆಯಲಿ ಸೇನಾ
ವೃಂದ ತುಡುಕಿತು ಕುಪಿತಕಾಳೋರಗನ ನಾಲಗೆಯ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸೈನಿಕರು ಮುತ್ತಿಗೆ ಹಾಕಲಿ. ಕರ್ಣನು ಗಾಯಗೊಂಡಿರುವ ಹಂದಿ! ಅವನು ಧರ್ಮರಾಯನನ್ನು ಮುಂದುಗೆಡಿಸದೆ ಬಿಡುವುದಿಲ್ಲ. ತೆಗೆ, ನುಗ್ಗು ನುಗು’್ಗ ಎನ್ನುತ್ತ ಅತಿರಥರು ಒಂದುಗೂಡಿದರು. ಧರ್ಮರಾಯನ ಮುಂದೆ ಶಿರಸ್ತ್ರಾಣವನ್ನು ಧರಿಸಿದ ಸೇನಾವೃಂದವು ಕೋಪಗೊಂಡಿರುವ ಕಾಳೋರಗನನ್ನು ಎದುರಿಸಿತು.
ಮೂಲ ...{Loading}...
ಮಂದಿ ಕವಿಯಲಿ ಘಾಯ ತಾಗಿದ
ಹಂದಿಯೋ ರಾಧೇಯನರಸನ
ಮುಂದುಗೆಡಿಸದೆ ಮಾಣನೋ ತೆಗೆ ನೂಕು ನೂಕೆನುತ
ಸಂದಣಿಸಿತತಿರಥರು ರಾಯನ
ಮುಂದೆ ತಲೆವರಿಗೆಯಲಿ ಸೇನಾ
ವೃಂದ ತುಡುಕಿತು ಕುಪಿತಕಾಳೋರಗನ ನಾಲಗೆಯ ॥32॥
೦೩೩ ರಾಯನಳಲಿಗರಿವರಘಾಟದ ನಾಯಕರು ...{Loading}...
ರಾಯನಳಲಿಗರಿವರಘಾಟದ
ನಾಯಕರು ಕಾಣಿರೆ ಸಮೀರನ
ಲಾಯದಲಿ ಲಂಬಿಸಿದವಕಟ ತುಷಾರ ವಾಜಿಗಳು
ಆಯಿತದು ತಪ್ಪೇನೆನುತ ಕ
ರ್ಣಾಯತಾಸ್ತ್ರದಿ ಹರೆಗಡಿದು ರಿಪು
ರಾಯನಲ್ಲಿಗೆ ರಥವ ಬಿಟ್ಟನು ಸೂಠಿಯಲಿ ಕರ್ಣ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ರಾಯನ ಕಷ್ಟಕ್ಕಾಗುವವರು, ನೋಡಿ, ಅಕಟ, ಗಾಳಿಯ ಲಾಯದಲ್ಲಿ ಇಬ್ಬನಿಯ ಕುದುರೆಗಳು ಹೆಚ್ಚಿದವು! ಆಯಿತು. ತಪ್ಪೇನು ’ ಎನ್ನುತ್ತ ಕರ್ಣನು, ಕಿವಿಯವರೆಗೆ ಎಳೆದು ಹೂಡಿದ ಬಾಣದಿಂದ ಅವರನ್ನು ಚಲ್ಲಾಪಿಲ್ಲಿಯಾಗುವಂತೆ ಕಡಿದು ಧರ್ಮರಾಯನಿರುವ ಕಡೆಗೆ ವೇಗವಾಗಿ ರಥವನ್ನು ಬಿಟ್ಟನು.
ಪದಾರ್ಥ (ಕ.ಗ.ಪ)
ಕರ್ಣಾಯತಾಸ್ತ್ರ-ಕಿವಿಯವರೆಗೆ ಎಳೆದು ಹೂಡಿದ ಬಾಣ
ಮೂಲ ...{Loading}...
ರಾಯನಳಲಿಗರಿವರಘಾಟದ
ನಾಯಕರು ಕಾಣಿರೆ ಸಮೀರನ
ಲಾಯದಲಿ ಲಂಬಿಸಿದವಕಟ ತುಷಾರ ವಾಜಿಗಳು
ಆಯಿತದು ತಪ್ಪೇನೆನುತ ಕ
ರ್ಣಾಯತಾಸ್ತ್ರದಿ ಹರೆಗಡಿದು ರಿಪು
ರಾಯನಲ್ಲಿಗೆ ರಥವ ಬಿಟ್ಟನು ಸೂಠಿಯಲಿ ಕರ್ಣ ॥33॥
೦೩೪ ಹೊಟ್ಟ ನೂಕಿ ...{Loading}...
ಹೊಟ್ಟ ನೂಕಿ ವೃಥಾಹವದ ಜಗ
ಜಟ್ಟಿ ನೀ ಹೊರಕಾಲುಗೊಂಡರೆ
ಬಿಟ್ಟೆನೇ ತಾ ಕರ್ಣನರಿಯಾ ಕಾಯ್ದುಕೊಳ್ಳೆನುತ
ಕಟ್ಟಳವಿಯಲಿ ವೈರಿ ರಾಯನ
ನಿಟ್ಟಳಿಸಿ ಮುರಿಯೆಸುತ ಬರಲಡ
ಗಟ್ಟಿ ತಡೆದರು ಮತ್ತೆ ಸಕಲ ಮಹಾರಥರು ಭಟನ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀನು ವ್ಯರ್ಥವಾದ, ತೋರಿಕೆಯ ಯುದ್ಧದ ಜಗಜಟ್ಟಿ! ಜಳ್ಳುಗಳಂತಿರುವ ರಾಜರನ್ನು ಮುಂದೆ ನುಗ್ಗಿಸಿ ಹೊರಗೆ ಉಳಿದರೆ ನಿನ್ನನ್ನು ಬಿಡುತ್ತೇನೆಯೆ? ನಾನು ಕರ್ಣ ಎಂಬುದು ತಿಳಿದಿಲ್ಲವೆ? ನಿನ್ನನ್ನು ರಕ್ಷಿಸಿಕೊ’ ಎನ್ನುತ್ತ ಕರ್ಣನು ಕಡು ಪರಾಕ್ರಮದಿಂದ ಧರ್ಮರಾಯನನ್ನು ಆಕ್ರಮಿಸಿ ಅವನು ಭಂಗಗೊಳ್ಳುವಂತೆ ಬಾಣಪ್ರಯೋಗಮಾಡುತ್ತ ಬರಲು ಸಕಲ ಮಹಾರಥರು ಅಡ್ಡಗಟ್ಟಿ ಮತ್ತೆ ಅವನನ್ನು ತಡೆದರು.
ಪದಾರ್ಥ (ಕ.ಗ.ಪ)
ಹೊಟ್ಟನೂಕಿ-ಜಳ್ಳಿನಂತಿರುವ ರಾಜರನ್ನು ಮುಂದೆ ನೂಕಿ ಇಟ್ಟಳಿಸು ಆಕ್ರಮಿಸು
ಮೂಲ ...{Loading}...
ಹೊಟ್ಟ ನೂಕಿ ವೃಥಾಹವದ ಜಗ
ಜಟ್ಟಿ ನೀ ಹೊರಕಾಲುಗೊಂಡರೆ
ಬಿಟ್ಟೆನೇ ತಾ ಕರ್ಣನರಿಯಾ ಕಾಯ್ದುಕೊಳ್ಳೆನುತ
ಕಟ್ಟಳವಿಯಲಿ ವೈರಿ ರಾಯನ
ನಿಟ್ಟಳಿಸಿ ಮುರಿಯೆಸುತ ಬರಲಡ
ಗಟ್ಟಿ ತಡೆದರು ಮತ್ತೆ ಸಕಲ ಮಹಾರಥರು ಭಟನ ॥34॥
೦೩೫ ನಿಲ್ಲು ಸೈರಿಸು ...{Loading}...
ನಿಲ್ಲು ಸೈರಿಸು ಸೂತಸುತ ಜವ
ನಲ್ಲಿ ಮೇಳವೆ ಜೀವರಿಗೆ ಭೂ
ವಲ್ಲಭನ ಸಮಜೋಳಿಯೇ ನೀ ಸಾರು ಸಾರೆನುತ
ಚೆಲ್ಲಿದರು ಕೂರಂಬುಗಳನೆಡ
ದಲ್ಲಿ ಬಲದಲಿ ಹಿಂದೆ ಮುಂದೆಸೆ
ಝಲ್ಲರಿಯ ಶರಜಾಳ ಝೊಂಪಿಸಿತಬುಜಸಖಸುತನ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರು, ‘ಸೂತಸುತ, ನಿಲ್ಲು, ಸೈರಿಸು. ಜೀವಂತವಾಗಿರುವವರಿಗೆ ಯಮನಲ್ಲಿ ಮೇಳವೆ? ನೀನು ಧರ್ಮರಾಯನಿಗೆ ಸಮಾನನೆ? ದೂರ ಸರಿ, ದೂರ ಸರಿ ಎನ್ನುತ್ತ ಹರಿತವಾದ ಬಾಣಗಳನ್ನು ಕರ್ಣನ ಎಡ, ಬಲ, ಹಿಂದೆ, ಮುಂದೆ ಪ್ರಯೋಗಿಸಿ ಕರ್ಣನನ್ನು ಮುಚ್ಚಿದರು.
ಪದಾರ್ಥ (ಕ.ಗ.ಪ)
ಸಾರು-ದೂರಸರಿ, ಝಲ್ಲರಿ-ಛತ್ರಿಯ ಕುಚು,್ಚ ಝೋಂಪಿಸು-ಕಂಪಿಸು.
ಮೂಲ ...{Loading}...
ನಿಲ್ಲು ಸೈರಿಸು ಸೂತಸುತ ಜವ
ನಲ್ಲಿ ಮೇಳವೆ ಜೀವರಿಗೆ ಭೂ
ವಲ್ಲಭನ ಸಮಜೋಳಿಯೇ ನೀ ಸಾರು ಸಾರೆನುತ
ಚೆಲ್ಲಿದರು ಕೂರಂಬುಗಳನೆಡ
ದಲ್ಲಿ ಬಲದಲಿ ಹಿಂದೆ ಮುಂದೆಸೆ
ಝಲ್ಲರಿಯ ಶರಜಾಳ ಝೊಂಪಿಸಿತಬುಜಸಖಸುತನ ॥35॥
೦೩೬ ತುರಗ ದಳವೊನ್ದೆಸೆಯಲೌಕಿತು ...{Loading}...
ತುರಗ ದಳವೊಂದೆಸೆಯಲೌಕಿತು
ಕರಿಘಟೆಗಳೊಂದೆಸೆಯಲತಿರಥ
ರುರವಣೆಯ ಪದಹತಿಯ ಧೂಳಿಯ ಮಬ್ಬಿನುಬ್ಬರದ
ಧರಧುರವದೊಂದೆಸೆ ಪದಾತಿಯ
ಹೊರಳಿಗಳದೊಂದೆಸೆ ವಿಘಾತಿಸಿ
ತರಿಭಟನನೇನೆಂಬೆನೈ ಧೃತರಾಷ್ಟ್ರ ಕೇಳ್ ಎಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕುದುರೆಗಳ ಸೈನ್ಯವು ಒಂದು ದಿಕ್ಕಿನಿಂದ , ಆನೆಗಳ ಸಮೂಹ ಒಂದು ದಿಕ್ಕಿನಿಂದ , ಅತಿರಥರ ಸಂಭ್ರಮದ ಹೆಜ್ಜೆಗಳ ಧೂಳಿಯ ಮಬ್ಬಿನ ಉಬ್ಬರದ ಹೆಚ್ಚಳವು ಒಂದು ದಿಕ್ಕಿನಿಂದ್ಕ, ಕಾಲಾಳುಗಳ ಗುಂಪು- ಅದು ಒಂದು ದಿಕ್ಕು - ಇವು ಶತ್ರುವಾದ ಕರ್ಣನನ್ನು ಹೊಡೆದು ಗಾಯಗೊಳಿಸಿದವು. ಏನು ಹೇಳಲಿ! ಧೃತರಾಷ್ಟ್ರ ಕೇಳು!’ ಎಂದು ಸಂಜಯನು ಹೇಳಿದನು.
ಮೂಲ ...{Loading}...
ತುರಗ ದಳವೊಂದೆಸೆಯಲೌಕಿತು
ಕರಿಘಟೆಗಳೊಂದೆಸೆಯಲತಿರಥ
ರುರವಣೆಯ ಪದಹತಿಯ ಧೂಳಿಯ ಮಬ್ಬಿನುಬ್ಬರದ
ಧರಧುರವದೊಂದೆಸೆ ಪದಾತಿಯ
ಹೊರಳಿಗಳದೊಂದೆಸೆ ವಿಘಾತಿಸಿ
ತರಿಭಟನನೇನೆಂಬೆನೈ ಧೃತರಾಷ್ಟ್ರ ಕೇಳೆಂದ ॥36॥
೦೩೭ ಮುಸುಕುವುದು ಮುಗಿಲೊಮ್ಮೆ ...{Loading}...
ಮುಸುಕುವುದು ಮುಗಿಲೊಮ್ಮೆ ಸೂರ್ಯನ
ಮಸಕ ಮಿಗಿಲಹುದೊಮ್ಮೆ ಮೇಘ
ಪ್ರಸರಕೊಳಗಹನೊಮ್ಮೆ ರವಿ ತೋರುವನು ಮತ್ತೊಮ್ಮೆ
ಅಸಮಸಮರದೊಳೀತನಾ ಪರಿ
ಮಸುಳುವನು ತೋರುವನು ತೊಡೆವನು
ದೆಸೆಗೆಡಿಸುವನು ಬಳಿಕ ಮುಳಿಸಿನೊಳಾ ಮಹಾರಥರ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನನ್ನು ಒಮ್ಮೆ ಮುಗಿಲು ಮುಸುಕುವುದು. ಒಮ್ಮೆ ಅವನ ತೇಜಸ್ಸು ಮಿಗಿಲಾಗುವುದು. ಒಮ್ಮೆ ಅವನು ಮೋಡಗಳ ಗುಂಪಿನಲ್ಲಿ ಮರೆಯಾಗುವನು. ಮತ್ತೊಮ್ಮೆ ಕಾಣಿಸಿಕೊಳ್ಳುವನು. ಅದೇ ರೀತಿ ಕರ್ಣನೂ ಆ ವಿಷಮ ಯುದ್ಧದಲ್ಲಿ ಒಮ್ಮೆ ಮಸುಕಾದರೆ ಮತ್ತೆ ಪ್ರಜ್ವಲಿಸಿ ಮುಳಿಸಿನಿಂದ ಆ ಮಹಾರಥರನ್ನು ಒರೆಸುತ್ತಿದ್ದನು, ದಿಕ್ಕುಗೆಡಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಮಸಕ - ಕಾಂತಿ
ಮೂಲ ...{Loading}...
ಮುಸುಕುವುದು ಮುಗಿಲೊಮ್ಮೆ ಸೂರ್ಯನ
ಮಸಕ ಮಿಗಿಲಹುದೊಮ್ಮೆ ಮೇಘ
ಪ್ರಸರಕೊಳಗಹನೊಮ್ಮೆ ರವಿ ತೋರುವನು ಮತ್ತೊಮ್ಮೆ
ಅಸಮಸಮರದೊಳೀತನಾ ಪರಿ
ಮಸುಳುವನು ತೋರುವನು ತೊಡೆವನು
ದೆಸೆಗೆಡಿಸುವನು ಬಳಿಕ ಮುಳಿಸಿನೊಳಾ ಮಹಾರಥರ ॥37॥
೦೩೮ ಬಿದ್ದುದೈನೂರಾನೆ ರುಧಿರದೊ ...{Loading}...
ಬಿದ್ದುದೈನೂರಾನೆ ರುಧಿರದೊ
ಳದ್ದರಿನ್ನೂರರಸು ಮಕ್ಕಳು
ಕದ್ದನಂತಕನಾರು ಸಾವಿರ ಕುದುರೆಯುಸುರುಗಳ
ಬಿದ್ದವರನೊಡೆತುಳಿದು ಮೇಲು
ಬ್ಬೆದ್ದು ಕವಿಕವಿದಾಳುಕುದುರೆಯ
ಬಿದ್ದಿನಲಿ ಬೇಸರಿಸಿದನು ಪಿತೃಪತಿಯ ಪರಿಜನವ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐನೂರು ಆನೆಗಳು ಬಿದ್ದವು. ಇನ್ನೂರು ರಾಜಕುಮಾರರು ರಕ್ತದಲ್ಲಿ ಮುಳುಗಿದರು. ಅಂತಕನು ಆರು ಸಾವಿರ ಕುದುರೆಯ ಉಸಿರನ್ನು ಕದ್ದನು. ಬಿದ್ದವರನ್ನು ಜೊತೆಯಲ್ಲಿ ತುಳಿದು ಮೇಲೆ ಉಬ್ಬೆದ್ದು ಕವಿಕವಿದ ಯೋಧರ, ಕುದುರೆಗಳ ಔತಣದಿಂದ ಕರ್ಣನು ಯಮನ ಪರಿಜನರು ಜುಗುಪ್ಸೆಪಡುವಂತೆ ಮಾಡಿದನು.
ಪದಾರ್ಥ (ಕ.ಗ.ಪ)
ಪಿತೃಪತಿ-ಯಮ
ಮೂಲ ...{Loading}...
ಬಿದ್ದುದೈನೂರಾನೆ ರುಧಿರದೊ
ಳದ್ದರಿನ್ನೂರರಸು ಮಕ್ಕಳು
ಕದ್ದನಂತಕನಾರು ಸಾವಿರ ಕುದುರೆಯುಸುರುಗಳ
ಬಿದ್ದವರನೊಡೆತುಳಿದು ಮೇಲು
ಬ್ಬೆದ್ದು ಕವಿಕವಿದಾಳುಕುದುರೆಯ
ಬಿದ್ದಿನಲಿ ಬೇಸರಿಸಿದನು ಪಿತೃಪತಿಯ ಪರಿಜನವ ॥38॥
೦೩೯ ಆಳ ನೋಯಿಸಿ ...{Loading}...
ಆಳ ನೋಯಿಸಿ ನೋಡುತಿಹ ಹೀ
ಹಾಳಿ ತಾನೇಕಕಟಕಟ ದೊರೆ
ಯಾಳ ಧೀವಶವೆನುತ ಸಹದೇವಾದಿಗಳು ಜರೆದು
ತೋಳು ಬಳಲದೆ ತೆಗೆದೆಸುತ ಸಮ
ಜೋಳಿಯಲಿ ನೂಕಿದರು ಕರ್ಣನ
ಮೇಲೆ ಸಾತ್ಯಕಿ ಭೀಮರವನೀಪಾಲನಿದಿರಿನಲಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸೈನ್ಯವನ್ನು ನೋಯಿಸಿ ನೋಡುತ್ತಿರುವ ಅಪಮಾನ ತಾನೇಕೆ, ಅಕಟಕಟ! ನಮ್ಮ ಅರಸನ ಸೈನ್ಯದ ಕೆಚ್ಚು ಇಷ್ಟೆಯೇ’ ಎಂದು ಜರೆದು ಸಹದೇವ ಮೊದಲಾದವರು ಕೈಸೋಲದ ಹಾಗೆ ಬಾಣಬಿಡುತ್ತಿರಲು, ಸಾತ್ಯಕಿ ಭೀಮರು ಧರ್ಮರಾಯನ ಎದಿರಿನಲ್ಲಿ ಸಮಸಮವಾಗಿ ಕರ್ಣನ ಮೇಲೆ ನುಗ್ಗಿದರು.
ಪದಾರ್ಥ (ಕ.ಗ.ಪ)
ಹೀಹಾಳಿ-ನಿಂದೆ
ಮೂಲ ...{Loading}...
ಆಳ ನೋಯಿಸಿ ನೋಡುತಿಹ ಹೀ
ಹಾಳಿ ತಾನೇಕಕಟಕಟ ದೊರೆ
ಯಾಳ ಧೀವಶವೆನುತ ಸಹದೇವಾದಿಗಳು ಜರೆದು
ತೋಳು ಬಳಲದೆ ತೆಗೆದೆಸುತ ಸಮ
ಜೋಳಿಯಲಿ ನೂಕಿದರು ಕರ್ಣನ
ಮೇಲೆ ಸಾತ್ಯಕಿ ಭೀಮರವನೀಪಾಲನಿದಿರಿನಲಿ ॥39॥
೦೪೦ ಪೂತು ಮಝರೇ ...{Loading}...
ಪೂತು ಮಝರೇ ಭೀಮ ಸಾತ್ಯಕಿ
ಯಾತರೋ ತಮ್ಮೊಡೆಯನಿದಿರಲಿ
ಘಾತಕರ ಘಟ್ಟಿಸುವೆನೀಗಳೆ ಶಲ್ಯ ನೋಡೆನುತ
ಭೂತನಾಥನ ಭಾಳನಯನೋ
ದ್ಧೂತಧೂಮಧ್ವಜ ಶಿಖಾ ಸಂ
ಘಾತವಿವೆಯೆನೆ ಕೆದರಿದನು ಮಾರ್ಗಣ ಮಹೋದಧಿಯ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೂತು! ಮಝರೆ! ಭೀಮ ಸಾತ್ಯಕಿಗಳು ತಮ್ಮ ಒಡೆಯನ ಎದುರಿನಲ್ಲಿ ನನಗೆ ಅಡ್ಡನಿಂತರು! ಶಲ್ಯ ನೋಡು, ಶತ್ರುಗಳನ್ನು ಘಟ್ಟಿಸುವೆನು ಎನ್ನುತ್ತ, ಇವು ಶಿವನ ಹಣೆಗಣ್ಣಿನಿಂದ ಹೊಮ್ಮಿದ ಅಗ್ನಿಯ ಜ್ವಾಲೆಗಳ ಗುಂಪು ಎನ್ನುವಂತೆ ಬಾಣಗಳ ಮಹಾಸಮುದ್ರವನ್ನು ಕರೆದನು.
ಮೂಲ ...{Loading}...
ಪೂತು ಮಝರೇ ಭೀಮ ಸಾತ್ಯಕಿ
ಯಾತರೋ ತಮ್ಮೊಡೆಯನಿದಿರಲಿ
ಘಾತಕರ ಘಟ್ಟಿಸುವೆನೀಗಳೆ ಶಲ್ಯ ನೋಡೆನುತ
ಭೂತನಾಥನ ಭಾಳನಯನೋ
ದ್ಧೂತಧೂಮಧ್ವಜ ಶಿಖಾ ಸಂ
ಘಾತವಿವೆಯೆನೆ ಕೆದರಿದನು ಮಾರ್ಗಣ ಮಹೋದಧಿಯ ॥40॥
೦೪೧ ಪವನಸುತ ಮುಖದಿರುಹಿದನು ...{Loading}...
ಪವನಸುತ ಮುಖದಿರುಹಿದನು ಯಾ
ದವನ ಕಂಡವರಾರು ಸೇನಾ
ನಿವಹಗಿವಹದ ಪಾಡೆ ಕರ್ಣನ ಖಾತಿ ಖೊಪ್ಪರಿಸೆ
ಬವರ ಮುರಿದುದು ವಿಜಯಲಕ್ಷ್ಮಿಯ
ಸವತಿ ಸೇರಿತು ಸುಭಟರಿಗೆ ಬಳಿ
ಕವನಿಪತಿಯೇ ತರುಬಿ ನಿಂದನು ಭಾನುನಂದನನ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಮುಖವನ್ನು ತಿರುಗಿಸಿದನು. ಸಾತ್ಯಕಿಯನ್ನು ಕಂಡವರು ಯಾರು? ಇನ್ನು ಸೇನೆಯ ಸಮೂಹಗಿಮೂಹ ಕರ್ಣನಿಗೆ ಒಂದು ಲೆಕ್ಕವೆ? ಕರ್ಣನ ಕೋಪವು ಹೆಚ್ಚಾಗಲು, ಯುದ್ಧವು ಕೊನೆಗೊಂಡಿತು. ಶತ್ರುಭಟರನ್ನು ವಿಜಯಲಕ್ಷ್ಮಿಯ ಸವತಿಯಾದ ಅಪಜಯಲಕ್ಷ್ಮಿಯ ಸೇರಿಕೊಂಡಳು. ಬಳಿಕ ಧರ್ಮರಾಯನೇ ಕರ್ಣನನ್ನು ಅಡ್ಡಗಟ್ಟಿ ನಿಂತನು.
ಮೂಲ ...{Loading}...
ಪವನಸುತ ಮುಖದಿರುಹಿದನು ಯಾ
ದವನ ಕಂಡವರಾರು ಸೇನಾ
ನಿವಹಗಿವಹದ ಪಾಡೆ ಕರ್ಣನ ಖಾತಿ ಖೊಪ್ಪರಿಸೆ
ಬವರ ಮುರಿದುದು ವಿಜಯಲಕ್ಷ್ಮಿಯ
ಸವತಿ ಸೇರಿತು ಸುಭಟರಿಗೆ ಬಳಿ
ಕವನಿಪತಿಯೇ ತರುಬಿ ನಿಂದನು ಭಾನುನಂದನನ ॥41॥
೦೪೨ ಅಞ್ಜುವೆವು ನಿಮಗರಸರೇ ...{Loading}...
ಅಂಜುವೆವು ನಿಮಗರಸರೇ ಬಲ
ಪಂಜರದ ಗಿಣಿ ನೀವು ನಿಮಗೀ
ಮಂಜರನ ಪಡಿಮುಖಕೆ ನಿಲುವುದು ನೀತಿಯೇ ನಿಮಗೆ
ಭಂಜನೆಗೆ ಬಲುಹುಳ್ಳಡೆಯು ನಿಮ
ಗಂಜುವರು ಗುರು ಭೀಷ್ಮರಾ ಪರಿ
ರಂಜಕರು ತಾವಲ್ಲೆನುತ ತಾಗಿದನು ಭೂಪತಿಯ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸರೇ ನಿಮಗೆ ಅಂಜುತ್ತೇವೆ. ನೀವು ಈಗ ಸೇನೆಯ ಪಂಜರದ ಗಿಣಿ. ಈ ಬೆಕ್ಕಿಗೆ ಎದುರಾಗಿ ನಿಲ್ಲುವುದು ನಿಮಗೆ ನೀತಿಯೇ? ತಮಗೆ ಹೊಡೆಯುವ ಸಾಮಥ್ರ್ಯವಿದೆ. ದ್ರೋಣ ಮತ್ತು ಭೀಷ್ಮರು ನಿಮಗೆ ಅಂಜುತ್ತಾರೆ. ಆದರೆ ನಾವು ಆ ರೀತಿಯ ರಂಜಕರಲ್ಲ ಎನ್ನುತ್ತ ಕರ್ಣನು ಧರ್ಮರಾಯನನ್ನು ತಾಗಿದನು.
ಪದಾರ್ಥ (ಕ.ಗ.ಪ)
ಮಂಜರ-ಬೆಕ್ಕು
ಮೂಲ ...{Loading}...
ಅಂಜುವೆವು ನಿಮಗರಸರೇ ಬಲ
ಪಂಜರದ ಗಿಣಿ ನೀವು ನಿಮಗೀ
ಮಂಜರನ ಪಡಿಮುಖಕೆ ನಿಲುವುದು ನೀತಿಯೇ ನಿಮಗೆ
ಭಂಜನೆಗೆ ಬಲುಹುಳ್ಳಡೆಯು ನಿಮ
ಗಂಜುವರು ಗುರು ಭೀಷ್ಮರಾ ಪರಿ
ರಂಜಕರು ತಾವಲ್ಲೆನುತ ತಾಗಿದನು ಭೂಪತಿಯ ॥42॥
೦೪೩ ಕಲಿತನವೆ ಹೃದಯದಲಿ ...{Loading}...
ಕಲಿತನವೆ ಹೃದಯದಲಿ ಕಾರ್ಯದ
ಬಳಕೆ ಕೈಯಲಿ ನಡುವೆ ನಾಲಗೆ
ಯುಲಿದಡೇನಗ್ಗಳಿಕೆಯಹುದೋ ವೀರ ಸಿರಿಯಹುದೊ
ಕಲಿತನದ ಕೆಚ್ಚುಳ್ಳಡೆಸುಗೆಯ
ಸುಳಿವ ತೋರಾದರೆಯೆನುತ ನೃಪ
ತಿಲಕ ಬತ್ತಳಿಕೆಯಲಿ ಸೆಳೆದನು ಹೂಡಿದನು ಶರವ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೃದಯದಲ್ಲಿ ಕಲಿತನವಿದ್ದರೆ ಅದು ಕೈಯಲ್ಲಿ ಬಳಕೆಯಾಗಲಿ. ನಡುವೆ ನಾಲಗೆಯು ಉಲಿದರೆ ಅದೇನು ಹೆಚ್ಚುಗಾರಿಕೆಯಾಗುತ್ತದೆಯೊ? ವೀರ ಸಿರಿಯಾಗುತ್ತದೆಯೊ? ಕಲಿತನದ ಕೆಚ್ಚು ಇರುವುದಾದರೆ ಬಾಣವನ್ನು ಬಿಡುವ ಸುಳಿವನ್ನು ನಿನಗೆ ಸಾಧ್ಯವಾದರೆ ತೋರಿಸು ಎನ್ನುತ್ತ ಧರ್ಮರಾಯನು ಬತ್ತಳಿಕೆಯಿಂದ ಬಾಣವನ್ನು ಸೆಳೆದು ಹೂಡಿದನು.
ಮೂಲ ...{Loading}...
ಕಲಿತನವೆ ಹೃದಯದಲಿ ಕಾರ್ಯದ
ಬಳಕೆ ಕೈಯಲಿ ನಡುವೆ ನಾಲಗೆ
ಯುಲಿದಡೇನಗ್ಗಳಿಕೆಯಹುದೋ ವೀರ ಸಿರಿಯಹುದೊ
ಕಲಿತನದ ಕೆಚ್ಚುಳ್ಳಡೆಸುಗೆಯ
ಸುಳಿವ ತೋರಾದರೆಯೆನುತ ನೃಪ
ತಿಲಕ ಬತ್ತಳಿಕೆಯಲಿ ಸೆಳೆದನು ಹೂಡಿದನು ಶರವ ॥43॥
೦೪೪ ರೂಪಿದೊಳ್ಳಿತು ರೇಖೆಯುಚಿತ ...{Loading}...
ರೂಪಿದೊಳ್ಳಿತು ರೇಖೆಯುಚಿತ ಕ
ಳಾಪವತಿ ಹಸನಾಯ್ತು ಬಾಣ
ಸ್ಥಾಪನಕೆ ಮೆಚ್ಚಿದೆನು ಮೇಲಣ ತೂಕದಾಳವನು
ಈ ಪರಿಯಲೆಂದರಿಯೆನಹುದೈ
ಚಾಪವಿದ್ಯಾಪಾತ್ರವಿಂದವ
ನೀಪತಿಯಲಾ ಪೂತು ಮಝ ಎಂದೆಚ್ಚನಾ ಕರ್ಣ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ಬಾಣಹೂಡುವಿಕೆಯನ್ನು ಮೆಚ್ಚಿದೆನು! ಈ ನಿಲವು ಒಳ್ಳೆಯದು! ಭಂಗಿಯು ಉಚಿತ! ಬಾಣವು ಅತಿ ಹಸನಾಯಿತು! ಮೇಲಿನ ತೂಕದ ಆಳ ಈ ರೀತಿಯಲ್ಲಿ ಇದೆ ಎಂದು ತಿಳಿದಿರಲಿಲ್ಲ. ಹೌದು! ಧರ್ಮರಾಯನು ಇಂದು ಚಾಪವಿದ್ಯಾ ಪ್ರವೀಣನಂತೆ ಕಾಣಿಸುತ್ತಿದ್ದಾನೆ. ಪೂತು! ಮಝ! ಎಂದು ಅಣಕಿಸಿ ಕರ್ಣನು ಬಾಣವನ್ನು ಪ್ರಯೋಗಿಸಿದನು.
ಮೂಲ ...{Loading}...
ರೂಪಿದೊಳ್ಳಿತು ರೇಖೆಯುಚಿತ ಕ
ಳಾಪವತಿ ಹಸನಾಯ್ತು ಬಾಣ
ಸ್ಥಾಪನಕೆ ಮೆಚ್ಚಿದೆನು ಮೇಲಣ ತೂಕದಾಳವನು
ಈ ಪರಿಯಲೆಂದರಿಯೆನಹುದೈ
ಚಾಪವಿದ್ಯಾಪಾತ್ರವಿಂದವ
ನೀಪತಿಯಲಾ ಪೂತು ಮಝ ಎಂದೆಚ್ಚನಾ ಕರ್ಣ ॥44॥
೦೪೫ ಗಣ್ಡು ಗರ್ವವನೆಮ್ಮೊಡನೆ ...{Loading}...
ಗಂಡು ಗರ್ವವನೆಮ್ಮೊಡನೆ ಕೋ
ದಂಡದಲಿ ಮೆರೆ ಸಾಕು ನಿನ್ನಯ
ಭಂಡವಿದ್ಯವ ಮೆರೆವಡದಲಾ ಕೌರವಾಸ್ಥಾನ
ದಿಂಡುದರಿವೆನು ಸೈರಿಸೆನುತವ
ಖಂಡಶರನಿಕರದಲಿ ರಿಪುಮಾ
ರ್ತಂಡತನಯನನೆಚ್ಚು ಬೊಬ್ಬಿರಿದನು ಮಹೀಪಾಲ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಪೌರುಷವನ್ನು ನಮ್ಮೊಡನೆ ಕೋದಂಡದಲ್ಲಿ ಮೆರೆ. ಅಷ್ಟು ಸಾಕು! ನಿನ್ನ ಭಂಡವಿದ್ಯೆಯನ್ನು ಮೆರೆಯುವುದಾದರೆ ಅದಕ್ಕೆ ಕೌರವನ ಆಸ್ಥಾನ ಇದೆಯಲ್ಲ! ನಿನ್ನನ್ನು ಕಡಿದು ಹಾಕುತ್ತೇನೆ. ಸಹಿಸಿಕೊ! ಎನ್ನುತ್ತ ಧರ್ಮರಾಯನು ಒಂದೇ ಸಮನೆ ಬಾಣಗಳ ಸಮೂಹದಿಂದ ಶತ್ರುವಾದ ಕರ್ಣನನ್ನು ಹೊಡೆದು ಬೊಬ್ಬಿರಿದನು.
ಮೂಲ ...{Loading}...
ಗಂಡು ಗರ್ವವನೆಮ್ಮೊಡನೆ ಕೋ
ದಂಡದಲಿ ಮೆರೆ ಸಾಕು ನಿನ್ನಯ
ಭಂಡವಿದ್ಯವ ಮೆರೆವಡದಲಾ ಕೌರವಾಸ್ಥಾನ
ದಿಂಡುದರಿವೆನು ಸೈರಿಸೆನುತವ
ಖಂಡಶರನಿಕರದಲಿ ರಿಪುಮಾ
ರ್ತಂಡತನಯನನೆಚ್ಚು ಬೊಬ್ಬಿರಿದನು ಮಹೀಪಾಲ ॥45॥
೦೪೬ ಇರಿತ ಮುನ್ನವೊ ...{Loading}...
ಇರಿತ ಮುನ್ನವೊ ಸುಭಟರಿಗೆ ಬೊ
ಬ್ಬಿರಿತಮುನ್ನವೊ ನಿಮ್ಮ ನುಡಿಯಲಿ
ಮುರಿವಡೆದಿರೈ ನೀವೆನುತ ನೃಪನಂಬ ಹರೆಗಡಿದು
ತೆರಹುಗೊಡದೆಚ್ಚನು ನೃಪಾಸ್ತ್ರವ
ತರಿದು ಮಗುಳೆಚ್ಚನು ಶರಾವಳಿ
ಯೆರಗಿದವು ತುರುಗಿದವು ತೆತ್ತಿಸಿದವು ರಥಾಂಗದಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶೂರರಿಗೆ ಇರಿಯುವುದು ಮೊದಲೊ? ಬೊಬ್ಬಿರಿಯುವುದು ಮೊದಲೊ? ನೀವು ನಿಮ್ಮ ಮಾತಿನಲ್ಲಿ ಸೋತಿರಿ!,” ಎನ್ನುತ್ತ ಧರ್ಮರಾಯನ ಬಾಣವನ್ನು ತರಿದುಹಾಕಿ ಅವಕಾಶಕೊಡದೆ ಕರ್ಣನು ಬಾಣಗಳನ್ನು ಬಿಟ್ಟನು. ಧರ್ಮರಾಯನ ಬಾಣಗಳನ್ನು ತರಿದು ಮತ್ತೆ ಬಾಣಪ್ರಯೋಗ ಮಾಡಿದನು. ರಥದ ಒಡಲಿನಲ್ಲಿ ಬಾಣಗಳ ಸಮೂಹಗಳು ತುಂಬಿದವು, ನಾಟಿದವು.
ಮೂಲ ...{Loading}...
ಇರಿತ ಮುನ್ನವೊ ಸುಭಟರಿಗೆ ಬೊ
ಬ್ಬಿರಿತಮುನ್ನವೊ ನಿಮ್ಮ ನುಡಿಯಲಿ
ಮುರಿವಡೆದಿರೈ ನೀವೆನುತ ನೃಪನಂಬ ಹರೆಗಡಿದು
ತೆರಹುಗೊಡದೆಚ್ಚನು ನೃಪಾಸ್ತ್ರವ
ತರಿದು ಮಗುಳೆಚ್ಚನು ಶರಾವಳಿ
ಯೆರಗಿದವು ತುರುಗಿದವು ತೆತ್ತಿಸಿದವು ರಥಾಂಗದಲಿ ॥46॥
೦೪೭ ಕಾಯಲಾಪರೆ ಕರೆದುಕೊಳ್ಳಾ ...{Loading}...
ಕಾಯಲಾಪರೆ ಕರೆದುಕೊಳ್ಳಾ
ವಾಯುಜನನರ್ಜುನನ ನಕುಲನ
ನಾಯಕರೊಳುಬ್ಬಾಳುಗಳನತಿರಥಮಹಾರಥರ
ಸಾಯಲಂಜುವಡಿಳುಹು ಧನುವನು
ನೋಯಿಸೆನು ನುಡಿಸಿದಡೆ ಕೌರವ
ರಾಯನಾಣೆ ನೃಪಾಲ ಕೇಳೆನುತೆಚ್ಚನಾ ಕರ್ಣ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನನ್ನು ಕಾಯಲು ಅವರು ಸಮರ್ಥರಾದರೆ ಭೀಮ, ಅರ್ಜುನ, ನಕುಲ, ಅಥವಾ ನಿಮ್ಮ ನಾಯಕರಲ್ಲಿ ಹೆಚ್ಚಿನ ಯೋಧರನ್ನು ಅತಿರಥಮಹಾರಥರನ್ನು ಕರೆದುಕೋ. ಸಾಯಲು ಹೆದರುವೆಯಾದರೆ ಬಿಲ್ಲನ್ನು ಇಳಿಸು. ನಿನ್ನನ್ನು ನೋಯಿಸುವುದಿಲ್ಲ. ನಿನ್ನನ್ನು ಮಾತನಾಡಿಸಿದರೆ ಕೌರವರಾಯನ ಆಣೆ! ನೃಪಾಲ, ಕೇಳು ಎನ್ನುತ್ತ ಕರ್ಣನು ಬಾಣಗಳನ್ನು ಬಿಟ್ಟನು.
ಮೂಲ ...{Loading}...
ಕಾಯಲಾಪರೆ ಕರೆದುಕೊಳ್ಳಾ
ವಾಯುಜನನರ್ಜುನನ ನಕುಲನ
ನಾಯಕರೊಳುಬ್ಬಾಳುಗಳನತಿರಥಮಹಾರಥರ
ಸಾಯಲಂಜುವಡಿಳುಹು ಧನುವನು
ನೋಯಿಸೆನು ನುಡಿಸಿದಡೆ ಕೌರವ
ರಾಯನಾಣೆ ನೃಪಾಲ ಕೇಳೆನುತೆಚ್ಚನಾ ಕರ್ಣ ॥47॥
೦೪೮ ಅರಸನೆಚ್ಚನು ಕರ್ಣ ...{Loading}...
ಅರಸನೆಚ್ಚನು ಕರ್ಣ ಶರವನು
ಪರಿಹರಿಸಿ ಮಗುಳೆಚ್ಚನೀತನು
ಧರಣಿಪನನವನೀಶನೆಚ್ಚನು ಹಗೆಯ ರಥ ಹಯವ
ಮರಳಿ ಶಲ್ಯನನೆಚ್ಚಡೀತನ
ಹೊರೆಯವರನೆಚ್ಚನು ರಥಾಂಗವ
ಹುರುಳುಗೆಡಿಸಿ ಮಹೀಶನೆಚ್ಚನು ಭಾನುನಂದನನ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಕರ್ಣನ ಬಾಣವನ್ನು ತಪ್ಪಿಸಿ ತಾನು ಬಾಣ ಪ್ರಯೋಗಮಾಡಿದನು. ಪುನಃ ಇವನು ಧರ್ಮರಾಯನ ಮೇಲೆ ಬಾಣ ಬಿಟ್ಟನು. ಆಗ ಧರ್ಮರಾಯನು ಕರ್ಣನ ರಥ ಕುದುರೆಗಳನ್ನು, ಶಲ್ಯನನ್ನು ಮತ್ತೆ ಹೊಡೆದನು. ಕರ್ಣನು ಪ್ರತಿಯಾಗಿ ಹೊಡೆದಾಗ ಧರ್ಮರಾಯನು ಕರ್ಣನ ಅಕ್ಕಪಕ್ಕದವರನ್ನು, ಕರ್ಣನ ರಥ ಚಕ್ರವನ್ನು ಹುರುಳುಗೆಡುವಂತೆ ಹೊಡೆದನು.
ಮೂಲ ...{Loading}...
ಅರಸನೆಚ್ಚನು ಕರ್ಣ ಶರವನು
ಪರಿಹರಿಸಿ ಮಗುಳೆಚ್ಚನೀತನು
ಧರಣಿಪನನವನೀಶನೆಚ್ಚನು ಹಗೆಯ ರಥ ಹಯವ
ಮರಳಿ ಶಲ್ಯನನೆಚ್ಚಡೀತನ
ಹೊರೆಯವರನೆಚ್ಚನು ರಥಾಂಗವ
ಹುರುಳುಗೆಡಿಸಿ ಮಹೀಶನೆಚ್ಚನು ಭಾನುನಂದನನ ॥48॥
೦೪೯ ಅಕಟ ಚನ್ದ್ರಿಕೆ ...{Loading}...
ಅಕಟ ಚಂದ್ರಿಕೆ ಗೆದ್ದುದೋ ಪಾ
ವಕನ ಝಳವೀ ಧರ್ಮಪುತ್ರನ
ವಿಕಳ ಶರದಲಿ ಕರ್ಣ ನೊಂದನಲಾ ಮಹಾದೇವ
ಅಕುಟಿಲರು ನೀವೆಮ್ಮವೊಲು ಬಾ
ಧಕರೆ ಪರರಿಗೆ ಪರಶುಧರ ಸಾ
ಯಕದ ಸವಿ ನೋಡಾದಡೆನುತೆಚ್ಚನು ಮಹೀಪತಿಯ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಕಟ! ಬೆಂಕಿಯ ಝಳವನ್ನು ಬೆಳುದಿಂಗಳು ಗೆದ್ದಿತಲ್ಲ! ಈ ಧರ್ಮಪುತ್ರನ ಹುಚ್ಚು ಬಾಣದಿಂದ ಕರ್ಣ ನೊಂದನಲ್ಲ! ಮಹಾದೇವ! ನೀವು ಕುಟಿಲವಿಲ್ಲದವರು. ನಮ್ಮ ಹಾಗೆ ಪರರನ್ನು ಬಾಧಿಸುವವರೆ! ಪರಶುರಾಮನ ಬಾಣದ ಸವಿಯನ್ನು ಸಾಧ್ಯವಾದರೆ ನೋಡಿ” ಎನ್ನುತ್ತ ಕರ್ಣನು ಧರ್ಮರಾಯನನ್ನು ಹೊಡೆದನು.
ಮೂಲ ...{Loading}...
ಅಕಟ ಚಂದ್ರಿಕೆ ಗೆದ್ದುದೋ ಪಾ
ವಕನ ಝಳವೀ ಧರ್ಮಪುತ್ರನ
ವಿಕಳ ಶರದಲಿ ಕರ್ಣ ನೊಂದನಲಾ ಮಹಾದೇವ
ಅಕುಟಿಲರು ನೀವೆಮ್ಮವೊಲು ಬಾ
ಧಕರೆ ಪರರಿಗೆ ಪರಶುಧರ ಸಾ
ಯಕದ ಸವಿ ನೋಡಾದಡೆನುತೆಚ್ಚನು ಮಹೀಪತಿಯ ॥49॥
೦೫೦ ಏನ ಹೇಳುವೆನವನಿಪತಿ ...{Loading}...
ಏನ ಹೇಳುವೆನವನಿಪತಿ ನಿ
ನ್ನಾನೆಯಗ್ಗಳಿಕೆಯನು ಪಾಂಡವ
ಸೇನೆ ಮಗುಳಡ್ಡವಿಸಿತವನೀಶನ ರಥಾಗ್ರದಲಿ
ಆನೆ ಹೊಕ್ಕವು ಬದ್ದರದ ಬಲು
ವಾನಿಸದ ಬಂಡಿಗಳನೊಡ್ಡಿದ
ರಾ ನಿರಂತರ ಶರವ ತಡೆದರು ತೆಕ್ಕೆವರಿಗೆಯಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನಿಪತಿ, ನಿನ್ನ ಆನೆಯ(ಕರ್ಣನ) ಅತಿಶಯವನ್ನು ಏನೆಂದು ಹೇಳಲಿ. ಧರ್ಮರಾಯನ ರಥದ ಎದುರು ಪಾಂಡವಸೇನೆ ಮತ್ತೆ ಅಡ್ಡಗಟ್ಟಿತು. ಆನೆ ಹೊಕ್ಕವು. ಬಣಗಳನ್ನಿರಿಸುವ ಬಂಡಿಗಳನ್ನು ಅಡ್ಡವಾಗಿ ಒಡ್ಡಿದರು. ರಾಶಿರಾಶಿ ಗುರಾಣಿಗಳಿಂದ ನಿರಂತರವಾಗಿ ಬಾಣಗಳನ್ನು ತಡೆದರು.
ಮೂಲ ...{Loading}...
ಏನ ಹೇಳುವೆನವನಿಪತಿ ನಿ
ನ್ನಾನೆಯಗ್ಗಳಿಕೆಯನು ಪಾಂಡವ
ಸೇನೆ ಮಗುಳಡ್ಡವಿಸಿತವನೀಶನ ರಥಾಗ್ರದಲಿ
ಆನೆ ಹೊಕ್ಕವು ಬದ್ದರದ ಬಲು
ವಾನಿಸದ ಬಂಡಿಗಳನೊಡ್ಡಿದ
ರಾ ನಿರಂತರ ಶರವ ತಡೆದರು ತೆಕ್ಕೆವರಿಗೆಯಲಿ ॥50॥
೦೫೧ ಕಡಿದು ಬಿಸುಟನು ...{Loading}...
ಕಡಿದು ಬಿಸುಟನು ತೆಕ್ಕೆವರಿಗೆಯ
ಗಡಣವನು ಬದ್ದರದ ಬಂಡಿಗ
ಳಡಗಿದವು ನಿಜಸೇನೆಸಹಿತರುಣಾಂಬುಪೂರದಲಿ
ಅಡಿಗಡಿಗೆ ಮುಕ್ಕುರಿಕಿ ತನ್ನನು
ತಡೆವ ರಿಪುಚತುರಂಗವಿಪಿನದ
ಕಡಿತ ತೀರಿತು ಮತ್ತೆ ರಾಯನ ಕೆಣಕಿದನು ಕರ್ಣ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುರಾಣಿಗಳ ಸಮೂಹವನ್ನು ಕಡಿದು ಬಿಸುಟನು. ತಮ್ಮ ಸೇನೆಯ ರಕ್ತಪ್ರವಾಹದಲ್ಲಿ ಬದ್ದರದ ಬಂಡಿಗಳು ಮುಳುಗಿದವು. ಕರ್ಣನು ಪದೇ ಪದೇ ತನ್ನನ್ನು ಮುತ್ತಿ ತಡೆಯುತ್ತಿರುವ ಸೇನೆಯನ್ನು ಕ್ಷಣ ಮಾತ್ರದಲ್ಲಿ ಕತ್ತರಿಸಿ ಹಾಕಿ ಮತ್ತೆ ಧರ್ಮರಾಯನನ್ನು ಕೆಣಕಿದನು.
ಪದಾರ್ಥ (ಕ.ಗ.ಪ)
ಮುಕ್ಕುರಿಕು-ಮುತ್ತು,
ಮೂಲ ...{Loading}...
ಕಡಿದು ಬಿಸುಟನು ತೆಕ್ಕೆವರಿಗೆಯ
ಗಡಣವನು ಬದ್ದರದ ಬಂಡಿಗ
ಳಡಗಿದವು ನಿಜಸೇನೆಸಹಿತರುಣಾಂಬುಪೂರದಲಿ
ಅಡಿಗಡಿಗೆ ಮುಕ್ಕುರಿಕಿ ತನ್ನನು
ತಡೆವ ರಿಪುಚತುರಂಗವಿಪಿನದ
ಕಡಿತ ತೀರಿತು ಮತ್ತೆ ರಾಯನ ಕೆಣಕಿದನು ಕರ್ಣ ॥51॥
೦೫೨ ಕಾವನಾರೈ ಕರ್ಣ ...{Loading}...
ಕಾವನಾರೈ ಕರ್ಣ ಮುನಿದರೆ
ಜೀವದಲಿ ಕಕ್ಕುಲಿತೆಯೇಕೆ ಶ
ರಾವಳಿಗಳಿವಲಾ ಕರಾಗ್ರದಲುಗ್ರ ಧನುವಿದಲಾ
ನಾವು ಸೂತನ ಮಕ್ಕಳುಗಳೈ
ನೀವಲೇ ಕ್ಷತ್ರಿಯರು ನಿಮಗೆಮ
ಗಾವುದಂತರವತಿಬಳರು ನೀವೆನುತ ತೆಗೆದೆಚ್ಚ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರ್ಣ ಮುನಿದರೆ ಕಾಯುವವರು ಯಾರು? ಬದುಕಿನಲ್ಲಿ ಆಸೆ ಏಕೆ? ಇವು ಬಾಣಗಳ ಸಮೂಹವಲ್ಲವೆ! ಕೈಯಲ್ಲಿ ಭಯಂಕರವಾದ ಬಿಲ್ಲಿದೆಯಲ್ಲವೆ? ನಾವು ಸೂತನ ಮಕ್ಕಳೇ. ನೀವು ಕ್ಷತ್ರಿಯರಲ್ಲವೇ? ನಿಮಗೆ ನಮಗೆ ಎಲ್ಲಿಂದೆಲ್ಲಿಗೆ? ಮಹಾ ಬಲಶಾಲಿಗಳು ನೀವು " ಎನ್ನುತ್ತ ಕರ್ಣನು ತೆಗೆದು ಹೊಡೆದನು.
ಪದಾರ್ಥ (ಕ.ಗ.ಪ)
ಕಕ್ಕುಲಿತೆ-ಪ್ರೀತಿ
ಮೂಲ ...{Loading}...
ಕಾವನಾರೈ ಕರ್ಣ ಮುನಿದರೆ
ಜೀವದಲಿ ಕಕ್ಕುಲಿತೆಯೇಕೆ ಶ
ರಾವಳಿಗಳಿವಲಾ ಕರಾಗ್ರದಲುಗ್ರ ಧನುವಿದಲಾ
ನಾವು ಸೂತನ ಮಕ್ಕಳುಗಳೈ
ನೀವಲೇ ಕ್ಷತ್ರಿಯರು ನಿಮಗೆಮ
ಗಾವುದಂತರವತಿಬಳರು ನೀವೆನುತ ತೆಗೆದೆಚ್ಚ ॥52॥
೦೫೩ ಅರಿಯ ಶರಹತಿಗಡ್ಡವರಿಗೆಯ ...{Loading}...
ಅರಿಯ ಶರಹತಿಗಡ್ಡವರಿಗೆಯ
ನರಸನಭಿಮುಖಕೊಡ್ಡಿದರು ರಥ
ತುರಗವನು ಚಪ್ಪರಿಸಿ ಸಾರಥಿ ನೂಕಿದನು ರಥವ
ಧರಣಿಪತಿ ಕೇಳೈದು ಶರದಲಿ
ಹರಿಗೆಯನು ಮುರಿಯೆಚ್ಚು ಸೂತನ
ಶಿರವನಿಳುಹಿದಡೊದೆದುಕೊಂಡುದು ಮುಂಡ ಸಾರಥಿಯ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುವಿನ ಬಾಣದ ಹೊಡೆತಕ್ಕೆ ಗುರಾಣಿಯನ್ನು ಧರ್ಮರಾಯನ ಎದುರು ಒಡ್ಡಿದರು. ಸಾರಥಿ ಕುದುರೆಯನ್ನು ಚಪ್ಪರಿಸಿ ರಥವನ್ನು ಮುಂದಕ್ಕೆ ನುಗ್ಗಿಸಿದನು. ಧರಣಿಪತಿ ಕೇಳು. ಕರ್ಣನು ಐದು ಬಾಣಗಳಿಂದ ಗುರಾಣಿಯನ್ನು ಮುರಿಯುವಂತೆ ಹೊಡೆದು ಸಾರಥಿಯ ಶಿರವನ್ನು ಮುಂಡದಿಂದ ಬೇರ್ಪಡಿಸಿ ಇಳುಹಿದನು.
ಪದಾರ್ಥ (ಕ.ಗ.ಪ)
ಅಡ್ಡವರಿಗೆ-ಗುರಾಣಿ.
ಮೂಲ ...{Loading}...
ಅರಿಯ ಶರಹತಿಗಡ್ಡವರಿಗೆಯ
ನರಸನಭಿಮುಖಕೊಡ್ಡಿದರು ರಥ
ತುರಗವನು ಚಪ್ಪರಿಸಿ ಸಾರಥಿ ನೂಕಿದನು ರಥವ
ಧರಣಿಪತಿ ಕೇಳೈದು ಶರದಲಿ
ಹರಿಗೆಯನು ಮುರಿಯೆಚ್ಚು ಸೂತನ
ಶಿರವನಿಳುಹಿದಡೊದೆದುಕೊಂಡುದು ಮುಂಡ ಸಾರಥಿಯ ॥53॥
೦೫೪ ಕೆದರಿದನು ಮಾರ್ಗಣೆಯೊಳರಸನ ...{Loading}...
ಕೆದರಿದನು ಮಾರ್ಗಣೆಯೊಳರಸನ
ಹೊದಸಿದನು ಹುಸಿಯೇಕೆ ರಾಯನ
ಹುದಿದ ಕವಚವ ಭೇದಿಸಿದವೊಳಬಿದ್ದವಂಬುಗಳು
ಎದೆಯಲೌಕಿದ ಬಾಣ ಬೆನ್ನಲಿ
ತುದಿಮೊನೆಯ ತೋರಿದವು ಪೂರಾ
ಯದ ವಿಘಾತಿಯಲರಸ ಕಳವಳಿಸಿದನು ಕಂಪಿಸುತ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಶತ್ರುಸೈನ್ಯವನ್ನು ಅಸ್ತವ್ಯಸ್ತಗೊಳಿಸಿದನು. ಧರ್ಮರಾಯನನ್ನು ಬಾಣಗಳಿಂದ ಮುಚ್ಚಿದನು. ಹುಸಿ ಏಕೆ? ಧರ್ಮರಾಯನು ತೊಟ್ಟಿದ್ದ ಕವಚವನ್ನು ಭೇದಿಸಿ ಬಾಣಗಳು ಒಳ ಹೊಕ್ಕವು. ಎದೆಯಲ್ಲಿ ನೆಟ್ಟ ಬಾಣಗಳು ಬೆನ್ನಿನಲ್ಲಿ ತುದಿಮೊನೆಯನ್ನು ತೋರಿಸಿದ್ದವು. ಬಿದ್ದ ಹೊಡೆತಗಳಿಂದ ಧರ್ಮರಾಯನು ಕಂಪಿಸುತ್ತ ಕಳವಳಿಸಿದನು.
ಮೂಲ ...{Loading}...
ಕೆದರಿದನು ಮಾರ್ಗಣೆಯೊಳರಸನ
ಹೊದಸಿದನು ಹುಸಿಯೇಕೆ ರಾಯನ
ಹುದಿದ ಕವಚವ ಭೇದಿಸಿದವೊಳಬಿದ್ದವಂಬುಗಳು
ಎದೆಯಲೌಕಿದ ಬಾಣ ಬೆನ್ನಲಿ
ತುದಿಮೊನೆಯ ತೋರಿದವು ಪೂರಾ
ಯದ ವಿಘಾತಿಯಲರಸ ಕಳವಳಿಸಿದನು ಕಂಪಿಸುತ ॥54॥
೦೫೫ ಅರೆಮರಳುವಾಲಿಗಳ ಹೆಗಲಲಿ ...{Loading}...
ಅರೆಮರಳುವಾಲಿಗಳ ಹೆಗಲಲಿ
ಮುರಿದ ಗೋಣಿನ ದುರುದುರಿಪ ನೆ
ತ್ತರನಿಹಾರದ ಮೈಯ ಸಡಲಿದ ಕೈಯ ಬಿಲುಸರಳ
ಅರಸನನು ಕಂಡಳಲಿದರು ಚಾ
ಮರದ ಛತ್ರದ ಹಡಪದವರಾ
ಪ್ತರು ವಿಘಾತಿಯಲಂಬ ಕಿತ್ತರು ಬಹಳ ಶೋಕದಲಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಧ ಮುಚ್ಚಿದ ಕಣ್ಣುಗುಡ್ಡೆಗಳ, ಹೆಗಲಿನಲ್ಲಿ ಜೋಲಿದ ಕುತ್ತಿಗೆಯ ಒಂದೇ ಸಮನಾಗಿ ಚಿಮ್ಮುವ ರಕ್ತದಿಂದ ಹೆಪ್ಪುಗಟ್ಟಿದ ಮೈಯ, ಕೈಗಳಿಂದ ಜಾರಿದ ಬಿಲ್ಲುಬಾಣಗಳ, ಅರಸನನ್ನು ಕಂಡು ಚಾಮರದ ಛತ್ರದ ಹಡಪದ ಪರಿಚಾರಕರು, ಆಪ್ತರು, ನಾಟಿದ್ದ ಬಾಣಗಳನ್ನು ಬಹಳ ಶೋಕದಿಂದ ಹೊರತೆಗೆದರು.
ಪದಾರ್ಥ (ಕ.ಗ.ಪ)
ದುರುದುರಿಪ-ಒಂದೇ ಸಮನಾಗಿ ಚಿಮ್ಮುವ,
ಮೂಲ ...{Loading}...
ಅರೆಮರಳುವಾಲಿಗಳ ಹೆಗಲಲಿ
ಮುರಿದ ಗೋಣಿನ ದುರುದುರಿಪ ನೆ
ತ್ತರನಿಹಾರದ ಮೈಯ ಸಡಲಿದ ಕೈಯ ಬಿಲುಸರಳ
ಅರಸನನು ಕಂಡಳಲಿದರು ಚಾ
ಮರದ ಛತ್ರದ ಹಡಪದವರಾ
ಪ್ತರು ವಿಘಾತಿಯಲಂಬ ಕಿತ್ತರು ಬಹಳ ಶೋಕದಲಿ ॥55॥
೦೫೬ ಮನ್ತ್ರಜಲದಲಿ ತೊಳೆದು ...{Loading}...
ಮಂತ್ರಜಲದಲಿ ತೊಳೆದು ಘಾಯವ
ಮಂತ್ರಿಸುತ ಕರ್ಪುರದ ಕವಳದ
ಯಂತ್ರರಕ್ಷೆಯಲವನಿಪನ ಸಂತೈಸಿ ಮಲಗಿಸುತ
ತಂತ್ರ ತಲ್ಲಣಿಸದಿರಿ ಜಿತಶತ
ತಂತ್ರನೋ ಭೂಪತಿ ವಿರೋದಿಭ
ಟಾಂತ್ರಭಂಜನನೀಗಳೆಂದುದು ರಾಯನಾಪ್ತಜನ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂತ್ರಿಸುತ್ತ ಗಾಯವನ್ನು ಮಂತ್ರಜಲದಲ್ಲಿ ತೊಳೆದು, ಕರ್ಪೂರದ ಕವಳದ ತಾಯಿತಿಯ ರಕ್ಷೆಯಲ್ಲಿ ರಾಜನನ್ನು ಸಂತೈಸಿ ಮಲಗಿಸಿದರು. ಸೈನ್ಯವು ಗಾಬರಿಗೊಳ್ಳದಿರಲಿ. ದೊರೆಯು ಬದುಕಲು ನೂರು ತಂತ್ರಗಳನ್ನು ಬಲ್ಲವನು. ಈಗ ಅವನು ಶತ್ರುಭಟರ ಕರುಳನ್ನು ಭಗ್ನಗೊಳಿಸುವವನು ಎಂದು ಧರ್ಮರಾಯನ ಆಪ್ತಜನರು ಹೇಳಿದರು.
ಮೂಲ ...{Loading}...
ಮಂತ್ರಜಲದಲಿ ತೊಳೆದು ಘಾಯವ
ಮಂತ್ರಿಸುತ ಕರ್ಪುರದ ಕವಳದ
ಯಂತ್ರರಕ್ಷೆಯಲವನಿಪನ ಸಂತೈಸಿ ಮಲಗಿಸುತ
ತಂತ್ರ ತಲ್ಲಣಿಸದಿರಿ ಜಿತಶತ
ತಂತ್ರನೋ ಭೂಪತಿ ವಿರೋದಿಭ
ಟಾಂತ್ರಭಂಜನನೀಗಳೆಂದುದು ರಾಯನಾಪ್ತಜನ ॥56॥
೦೫೭ ಸಿಕ್ಕಿದೆಯಲಾ ...{Loading}...
ಸಿಕ್ಕಿದೆಯಲಾ ಸ್ವಾಮಿದ್ರೋಹಿಗ
ಳಿಕ್ಕಿ ಹೋದರೆ ಭೀಮಫಲುಗುಣ
ರೆಕ್ಕತುಳದಲಿ ತೊಡಕಿ ನೀಗಿದಲಾ ನಿಜೋನ್ನತಿಯ
ಚುಕ್ಕಿಗಳು ನಿನ್ನವರ ಮಡುವಿನ
ಲಿಕ್ಕಿ ಕೌರವ ರಾಯನನು ಮರೆ
ವೊಕ್ಕು ಬದುಕಾ ಧರ್ಮಸುತ ಬಾ ಎಂದನಾ ಕರ್ಣ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “(ಕಷ್ಟಕ್ಕೆ)ಸಿಕ್ಕಿದೆಯಲ್ಲ! ಭೀಮ ಫಲುಗುಣರು ಸ್ವಾಮಿದ್ರೋಹಿಗಳು, ನಿನ್ನನ್ನು ಬಿಟ್ಟು ಹೋದರೆ? ದ್ವಂದ್ವಯುದ್ಧದಲ್ಲಿ (ಏಕಾಂಗಸಾಹಸದಲಿ)್ಲ ಸಿಕ್ಕಿಕೊಂಡು ನಿಜೋನ್ನತಿಯನ್ನು ನೀಗಿದೆಯಲ್ಲ! ನಿನ್ನವರು ನಿಷ್ಪ್ರಯೋಜಕರು. ಅವರನ್ನು ಮಡುವಿನಲ್ಲಿ ಹಾಕಿ ಕೌರವ ರಾಯನನ್ನು ಮರೆವೊಕ್ಕು ಬದುಕಲು ಬಾ " ಎಂದು ಧರ್ಮಸುತನಿಗೆ ಆ ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಎಕ್ಕತುಳ-ಪರಾಕ್ರಮ, ದ್ವಂದ್ವಯುದ್ಧ
ಮೂಲ ...{Loading}...
ಸಿಕ್ಕಿದೆಯಲಾ ಸ್ವಾಮಿದ್ರೋಹಿಗ
ಳಿಕ್ಕಿ ಹೋದರೆ ಭೀಮಫಲುಗುಣ
ರೆಕ್ಕತುಳದಲಿ ತೊಡಕಿ ನೀಗಿದಲಾ ನಿಜೋನ್ನತಿಯ
ಚುಕ್ಕಿಗಳು ನಿನ್ನವರ ಮಡುವಿನ
ಲಿಕ್ಕಿ ಕೌರವ ರಾಯನನು ಮರೆ
ವೊಕ್ಕು ಬದುಕಾ ಧರ್ಮಸುತ ಬಾ ಎಂದನಾ ಕರ್ಣ ॥57॥
೦೫೮ ಸಾಳುವನ ಕೂಡರಗಿಳಿಗೆ ...{Loading}...
ಸಾಳುವನ ಕೂಡರಗಿಳಿಗೆ ಸಮ
ಮೇಳವೇ ಶಸ್ತ್ರಜ್ಞ ನಾದಡೆ
ಸೋಲುವುದೆ ವರ ಶಸ್ತ್ರವಿದ್ಯಾ ಪ್ರೌಢಿಯದು ಬೇರೆ
ಆಳುತನದಭಿಮಾನವದು ಕರ
ವಾಳಧಾರಾಗಮನವರಸರೆ
ಖೂಳರಾದಿರಿ ನೀವೆನುತ ಭಂಗಿಸಿದನಾ ಕರ್ಣ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗಿಡುಗದ ಜೊತೆ ಅರಗಿಳಿಗೆ ಒಡನಾಟವೇ? ನೀವು ಶಸ್ತ್ರಗಳನ್ನು ಬಲ್ಲವರಾಗಿದ್ದರೆ ಸೋಲುತ್ತಿದ್ದಿರಾ? ಶ್ರೇಷ್ಠವಾದ ಶಸ್ತ್ರವಿದ್ಯಾ ಪ್ರೌಢಿಮೆ ಬೇರೆ. ಪೌರುಷದ ಅಭಿಮಾನ ಬೇರೆ. ಅದು ಕತ್ತಿಯ ಅಲುಗಿನ ಮೇಲಿನ ನಡೆ. ಅರಸರೆ, ನೀವು ಖೂಳರಾದಿರಿ! " ಎನ್ನುತ್ತ ಆ ಕರ್ಣನು ಧರ್ಮರಾಯನನ್ನು ಭಂಗಿಸಿದನು.
ಪದಾರ್ಥ (ಕ.ಗ.ಪ)
ಸಾಳುವ-ಗಿಡುಗ ಆಗಮ(ನ) ವಿದ್ಯೆ(?)
ಮೂಲ ...{Loading}...
ಸಾಳುವನ ಕೂಡರಗಿಳಿಗೆ ಸಮ
ಮೇಳವೇ ಶಸ್ತ್ರಜ್ಞ ನಾದಡೆ
ಸೋಲುವುದೆ ವರ ಶಸ್ತ್ರವಿದ್ಯಾ ಪ್ರೌಢಿಯದು ಬೇರೆ
ಆಳುತನದಭಿಮಾನವದು ಕರ
ವಾಳಧಾರಾಗಮನವರಸರೆ
ಖೂಳರಾದಿರಿ ನೀವೆನುತ ಭಂಗಿಸಿದನಾ ಕರ್ಣ ॥58॥
೦೫೯ ಶ್ರುತಿರಹಸ್ಯವನರಿವ ಧರ್ಮ ...{Loading}...
ಶ್ರುತಿರಹಸ್ಯವನರಿವ ಧರ್ಮ
ಸ್ಥಿತಿಗತಿಯನಾರೈವ ಶಾಸ್ತ್ರ
ಪ್ರತತಿಯರ್ಥ ವಿಚಾರವಾಚರಣಾದಿ ಕರ್ಮದಲಿ
ಚತುರರಹ ದರುಶನದ ತರ್ಕದ
ಮತನಿಧಾನವನರಿವ ವರ ಪಂ
ಡಿತರು ನಿಮಗೀ ಕದನಕರ್ಕಶವಿದ್ಯೆಯೇಕೆಂದ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶ್ರುತಿರಹಸ್ಯವನ್ನು ಅರಿಯುವ, ಧರ್ಮಸ್ಥಿತಿಗತಿಯನ್ನು ವಿಚಾರಿಸುವ, ಶಾಸ್ತ್ರಸಮೂಹದ ಅರ್ಥ, ವಿಚಾರ, ಆಚರಣೆ ಮೊದಲಾದ ಕರ್ಮಗಳಲ್ಲಿ ಚತುರರಾದ, ದರ್ಶನದ ತರ್ಕದ ಮತದ ಭಂಡಾರವನ್ನು ಅರಿಯುವ ಶ್ರೇಷ್ಠರಾದ ಪಂಡಿತರು ನೀವು. ನಿಮಗೆ ಈ ಕದನಕರ್ಕಶವಿದ್ಯೆ ಏಕೆ” ಎಂದು ಕರ್ಣನು ಹೇಳಿದನು.
ಮೂಲ ...{Loading}...
ಶ್ರುತಿರಹಸ್ಯವನರಿವ ಧರ್ಮ
ಸ್ಥಿತಿಗತಿಯನಾರೈವ ಶಾಸ್ತ್ರ
ಪ್ರತತಿಯರ್ಥ ವಿಚಾರವಾಚರಣಾದಿ ಕರ್ಮದಲಿ
ಚತುರರಹ ದರುಶನದ ತರ್ಕದ
ಮತನಿಧಾನವನರಿವ ವರ ಪಂ
ಡಿತರು ನಿಮಗೀ ಕದನಕರ್ಕಶವಿದ್ಯೆಯೇಕೆಂದ ॥59॥
೦೬೦ ವರ ನದಿಗಳಲಿ ...{Loading}...
ವರ ನದಿಗಳಲಿ ಮುಳುಗಿ ಮೂಗಿನ
ಬೆರಳಲೂಧ್ರ್ವಶ್ವಾಸ ಪವನನ
ಧರಿಸಿ ಕಾಲತ್ರಯಜಪಾನುಷ್ಠಾನಹೋಮದಲಿ
ಪರಮಋಷಿ ಮಧ್ಯದಲಿ ನೀವಾ
ಚರಿಸುವುದು ಬಿಸುಟುಗಿವಡಾಯ್ದದ
ಹೊರಳಿಗಿಡಿಗಳ ಹೊದರೊಳಾಚರಿಸುವರೆ ನೀವೆಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠವಾದ ನದಿಗಳಲ್ಲಿ ಮುಳುಗಿ ಮೂಗಿನ ಬೆರಳಿನಲ್ಲಿ ಊಧ್ರ್ವಶ್ವಾಸವಾಯುವನ್ನು ಧರಿಸಿ ಮೂರು ಹೊತ್ತು ಪರಮ ಋಷಿಗಳ ಮಧ್ಯದಲ್ಲಿ ಜಪಾನುಷ್ಠಾನಹೋಮಗಳನ್ನು ಆಚರಿಸುವುದನ್ನು ಬಿಟ್ಟು , ನೀವು ಯುದ್ಧದ ಮಧ್ಯದಲ್ಲಿ ಸೆಳೆದ ಸಣ್ಣ ಕತ್ತಿಯ ರಾಶಿ ಕಿಡಿಗಳ ಹೊದರಿನಲ್ಲಿ ಆಚರಿಸುತ್ತೀರಾ? ಎಂದು ಕರ್ಣನು ಹೇಳಿದನು.
ಮೂಲ ...{Loading}...
ವರ ನದಿಗಳಲಿ ಮುಳುಗಿ ಮೂಗಿನ
ಬೆರಳಲೂಧ್ರ್ವಶ್ವಾಸ ಪವನನ
ಧರಿಸಿ ಕಾಲತ್ರಯಜಪಾನುಷ್ಠಾನಹೋಮದಲಿ
ಪರಮಋಷಿ ಮಧ್ಯದಲಿ ನೀವಾ
ಚರಿಸುವುದು ಬಿಸುಟುಗಿವಡಾಯ್ದದ
ಹೊರಳಿಗಿಡಿಗಳ ಹೊದರೊಳಾಚರಿಸುವರೆ ನೀವೆಂದ ॥60॥
೦೬೧ ಕೊಲುವಡವ್ವೆಗೆ ಕೊಟ್ಟ ...{Loading}...
ಕೊಲುವಡವ್ವೆಗೆ ಕೊಟ್ಟ ಮಾತಿಂ
ಗಳುಕುವೆನು ನೀ ಹೋಗು ಹರಿಬಕೆ
ಮಲೆವರಾದರೆ ಕಳುಹು ಭೀಮಾರ್ಜುನರನಾಹವಕೆ
ಉಲುಕಿದರೆ ನಿನ್ನಾಣೆಯೆನುತ
ಗ್ಗಳಿಸಿ ನೃಪತಿಯ ಕೆಡೆನುಡಿದು ಪರ
ಬಲವ ಬರಹೇಳೆನುತ ನಿಂದನು ನುಡಿಸಿ ನಿಜಧನುವ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೊಲ್ಲುವುದಾದರೆ ತಾಯಿಗೆ ಕೊಟ್ಟ ಮಾತಿಗೆ ಅಳುಕುತ್ತೇನೆ. ನೀನು ಹೋಗು. ಪ್ರತಿಭಟಿಸುವವರಾದರೆ ಆ ಭೀಮಾರ್ಜುನರನ್ನು ಯುದ್ಧಕ್ಕೆ ಕಳುಹಿಸು. ನಾನು ಅಲುಗಾಡಿದರೆ ನಿನ್ನಾಣೆ ಎನ್ನುತ್ತ ಅಗ್ಗಳಿಸಿ ನೃಪತಿಯನ್ನು ಹೀಯಾಳಿಸಿ, ಶತ್ರುಸೈನ್ಯವನ್ನು ಬರಹೇಳು " ಎನ್ನುತ್ತ ಕರ್ಣನು ತನ್ನ ಧನುಸ್ಸನ್ನು ಮಿಡಿದು ನಿಂತನು.
ಮೂಲ ...{Loading}...
ಕೊಲುವಡವ್ವೆಗೆ ಕೊಟ್ಟ ಮಾತಿಂ
ಗಳುಕುವೆನು ನೀ ಹೋಗು ಹರಿಬಕೆ
ಮಲೆವರಾದರೆ ಕಳುಹು ಭೀಮಾರ್ಜುನರನಾಹವಕೆ
ಉಲುಕಿದರೆ ನಿನ್ನಾಣೆಯೆನುತ
ಗ್ಗಳಿಸಿ ನೃಪತಿಯ ಕೆಡೆನುಡಿದು ಪರ
ಬಲವ ಬರಹೇಳೆನುತ ನಿಂದನು ನುಡಿಸಿ ನಿಜಧನುವ ॥61॥