೦೦೦ ಸೂಚನೆ ಸೆಣಸು ...{Loading}...
ಸೂಚನೆ: ಸೆಣಸು ಮಿಗಲೊಳಗೊಳಗೆ ಖತಿಯಲಿ
ಕೆಣಕಿ ಬೈದಾಡಿದರು ಸಮರಾಂ
ಗಣಭಯಂಕರ ಶಲ್ಯಭಾಸ್ಕರಸುತರು ರಥದೊಳಗೆ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ. ಪರಸ್ಪರ ವೈಮನಸ್ಯವು ಹೆಚ್ಚಲು ಸಮರಾಂಗಣ ಭಯಂಕರರಾದ ಶಲ್ಯ ಕರ್ಣರು ಒಳಗೊಳಗೆ ಕೋಪದಿಂದ ಕೆಣಕಿ ರಥದೊಳಗೆ ಬೈದಾಡಿದರು.
ಮೂಲ ...{Loading}...
ಸೂಚನೆ: ಸೆಣಸು ಮಿಗಲೊಳಗೊಳಗೆ ಖತಿಯಲಿ
ಕೆಣಕಿ ಬೈದಾಡಿದರು ಸಮರಾಂ
ಗಣಭಯಂಕರ ಶಲ್ಯಭಾಸ್ಕರಸುತರು ರಥದೊಳಗೆ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಖರೆಯದ ನುಡಿಯನಾಲಿಸಿ
ಕೇಳಿದನು ಕಲಿಶಲ್ಯ ಬೆರಳಲಿ ಮೀಸೆಗಳ ಮುರಿದು
ಹೇಳು ಹೇಳಿನ್ನೊಮ್ಮೆ ಪಾರ್ಥನ
ಹೇಳಿ ತೋರಿಸಲೇನ ಕೊಡುವೆ ನೃ
ಪಾಲಕನ ಪದದಾಣೆ ನುಡಿ ನುಡಿ ಕರ್ಣ ನುಡಿಯೆಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೇಳು ಧೃತರಾಷ್ಟ್ರ ರಾಜನೇ, ಕಲಿ ಶಲ್ಯನು ಬೆರಳಲ್ಲಿ ಮೀಸೆಗಳನ್ನು ತಿರುವುತ್ತ ನಿನ್ನವನ ಸತ್ಯದ ನುಡಿಯನ್ನು ಆಲಿಸಿ, ‘ಹೇಳು, ಹೇಳಿನ್ನೊಮ್ಮೆ, ಪಾರ್ಥನ ಹೇಳಿ ತೋರಿಸಿದರೆ ಏನನ್ನು ಕೊಡುವೆ? ದುರ್ಯೋಧನನ ಪಾದದಾಣೆ ನುಡಿ, ನುಡಿ ಕರ್ಣ ನುಡಿ’ ಎಂದು ಕೇಳಿದನು.” ಎಂದು ಸಂಜಯನು ಹೇಳಿದನು
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಖರೆಯದ ನುಡಿಯನಾಲಿಸಿ
ಕೇಳಿದನು ಕಲಿಶಲ್ಯ ಬೆರಳಲಿ ಮೀಸೆಗಳ ಮುರಿದು
ಹೇಳು ಹೇಳಿನ್ನೊಮ್ಮೆ ಪಾರ್ಥನ
ಹೇಳಿ ತೋರಿಸಲೇನ ಕೊಡುವೆ ನೃ
ಪಾಲಕನ ಪದದಾಣೆ ನುಡಿ ನುಡಿ ಕರ್ಣ ನುಡಿಯೆಂದ ॥1॥
೦೦೨ ಹಾರ ಖಡೆಯವ ...{Loading}...
ಹಾರ ಖಡೆಯವ ಬೇಹ ಗಜಹಯ
ನಾರಿಯರ ಕೊಡಬೇಡ ಪಾರ್ಥನ
ತೋರಿ ಕೊಡುವೆನು ತನಗೆ ಹೇಳದೆ ಬರಿದೆ ಹಲುಗಿರಿದೈ
ಸೈರಿಸೀಗಳೆ ನಿನ್ನ ಕರುಳಿನ
ತೋರಣದ ಬಾಗಿಲಲಿ ವಿಜಯ
ಶ್ರೀರಮಣಿಯನು ತಹ ಕಿರೀಟಿಯ ತೋರಿಸುವೆನೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಹಾರ, ಕಾಲ್ಗಡಗ, ಬೇಕಾದ ಆನೆ, ಕುದುರೆ, ನಾರಿಯರನ್ನು ಕೊಡಬೇಡ, ಪಾರ್ಥನನ್ನು ತೋರಿಸಿ ಕೊಡುವೆನು. ತನಗೆ ಹೇಳದೆ ಬರಿದೆ ಹಲುಗಿರಿದೆಯಲ್ಲಾ! ಸೈರಿಸು ಈಗಲೆ ನಿನ್ನ ಕರುಳಿನ ತೋರಣದ ಬಾಗಿಲಿನಲ್ಲಿ ವಿಜಯಶ್ರೀ ರಮಣಿಯನ್ನು ತರುವ ಅರ್ಜುನನನ್ನು ತೋರಿಸುತ್ತೇನೆ." ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಹಾರ ಖಡೆಯವ ಬೇಹ ಗಜಹಯ
ನಾರಿಯರ ಕೊಡಬೇಡ ಪಾರ್ಥನ
ತೋರಿ ಕೊಡುವೆನು ತನಗೆ ಹೇಳದೆ ಬರಿದೆ ಹಲುಗಿರಿದೈ
ಸೈರಿಸೀಗಳೆ ನಿನ್ನ ಕರುಳಿನ
ತೋರಣದ ಬಾಗಿಲಲಿ ವಿಜಯ
ಶ್ರೀರಮಣಿಯನು ತಹ ಕಿರೀಟಿಯ ತೋರಿಸುವೆನೆಂದ ॥2॥
೦೦೩ ಮೊಲನ ಕಾಹಿನ ...{Loading}...
ಮೊಲನ ಕಾಹಿನ ಕಾಡಿನಲಿ ಹೆ
ಬ್ಬುಲಿ ವಿಭಾಡಿಸುವಂತೆ ನರಿಗಳು
ಬಲಿದ ಬೇಲಿಯ ಕದಳಿಯನು ಕಾಡಾನೆ ಹೊಗುವಂತೆ
ದಳವ ಬಗಿದು ಮಹಾರಥರನೊಡೆ
ದುಳಿದು ನಿನ್ನಯ ನಾಲಗೆಯ ಹೆಡ
ತಲೆಯಲುಗಿವರ್ಜುನನನೀಗಳೆ ತೋರಿಸುವೆನೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊಲದಿಂದ ಸಂರಕ್ಷಿತವಾದ ಕಾಡಿನಲ್ಲಿ ಹೆಬ್ಬುಲಿ ನಾಶಮಾಡುವಂತೆ ನರಿಗಳು ಬೇಲಿ ಕಟ್ಟಿದ ಬಾಳೆಯ ತೋಟವನ್ನು ಕಾಡಾನೆ ಹೊಗುವಂತೆ, ಸೈನ್ಯವನ್ನು ಬಗೆದು ಮಹಾರಥರನ್ನು ಒಟ್ಟಿಗೆ ತುಳಿದು ನಿನ್ನಯ ನಾಲಗೆಯ ಹೆಡತಲೆಯಲ್ಲಿ ಉಗಿವ ಅರ್ಜುನನನ್ನು ಈಗಳೆ ತೋರಿಸುತ್ತೇನೆ ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಮೊಲನ ಕಾಹಿನ ಕಾಡಿನಲಿ ಹೆ
ಬ್ಬುಲಿ ವಿಭಾಡಿಸುವಂತೆ ನರಿಗಳು
ಬಲಿದ ಬೇಲಿಯ ಕದಳಿಯನು ಕಾಡಾನೆ ಹೊಗುವಂತೆ
ದಳವ ಬಗಿದು ಮಹಾರಥರನೊಡೆ
ದುಳಿದು ನಿನ್ನಯ ನಾಲಗೆಯ ಹೆಡ
ತಲೆಯಲುಗಿವರ್ಜುನನನೀಗಳೆ ತೋರಿಸುವೆನೆಂದ ॥3॥
೦೦೪ ಹೊರಗೆ ಕೊಡುವುದನಿತ್ತ ...{Loading}...
ಹೊರಗೆ ಕೊಡುವುದನಿತ್ತ ತಾ ನಾ
ನರಸಿ ತಹೆನರ್ಜುನನನೇತಕೆ
ಬರಿದೆ ಭಟರಿಗೆ ಬಾಯ ಬಿಡುತಿಹೆ ಕರ್ಣ ಖೂಳನಲ
ಅರಸಲೇತಕೆ ಕಾಲ ಮೃತ್ಯುವ
ನರಸುವರೆ ಕಾಲಾಗ್ನಿಯನು ನೀ
ನರಸಲೇಕರ್ಜುನನನೀಗಳೇ ತೋರಿಸುವೆನೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೊರಗೆ ಕೊಡುವುದನ್ನು ಇತ್ತ ತಾ. ನಾನು ಅರ್ಜುನನನ್ನು ಅರಸಿ ತರುವೆನು. ಏತಕ್ಕೆ ಸುಮ್ಮನೆ ಭಟರಿಗೆ ಬಾಯಿ ಬಿಡುತ್ತಿರುವೆ, ಕರ್ಣ. ನೀನೊಬ್ಬ ದುಷ್ಟ. ಕಾಲ ಮೃತ್ಯುವನ್ನು ಹುಡುಕುತ್ತಾರೆಯೆ? ಕಾಲಾಗ್ನಿಯನ್ನು ನೀನು ಹುಡುಕುವುದೇತಕ್ಕೆ? ಅರ್ಜುನನನ್ನು ಈಗಲೇ ತೋರಿಸುತ್ತೇನೆ ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಹೊರಗೆ ಕೊಡುವುದನಿತ್ತ ತಾ ನಾ
ನರಸಿ ತಹೆನರ್ಜುನನನೇತಕೆ
ಬರಿದೆ ಭಟರಿಗೆ ಬಾಯ ಬಿಡುತಿಹೆ ಕರ್ಣ ಖೂಳನಲ
ಅರಸಲೇತಕೆ ಕಾಲ ಮೃತ್ಯುವ
ನರಸುವರೆ ಕಾಲಾಗ್ನಿಯನು ನೀ
ನರಸಲೇಕರ್ಜುನನನೀಗಳೇ ತೋರಿಸುವೆನೆಂದ ॥4॥
೦೦೫ ಆವನೊಬ್ಬನ ಬಿಲ್ಲ ...{Loading}...
ಆವನೊಬ್ಬನ ಬಿಲ್ಲ ಬೊಬ್ಬೆಯ
ಡಾವರದಲೆದೆ ಬಿರಿವುದಹಿತರಿ
ಗಾವನೊಬ್ಬನ ದನಿಗೆ ಬಿರಿವುದು ಧೈರ್ಯಗಿರಿಶಿಖರ
ಆವನೊಬ್ಬನ ಕಂಡರರಿಗಳ
ಜೀವ ತಲೆಕೆಳಕಹುದು ಸುಭಟರ
ದೇವನಾತನು ಪಾರ್ಥ ಬೇಕೇ ತೋರಿಸುವೆನೆಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾರ ಬಿಲ್ಲ ಬೊಬ್ಬೆಯ ಅಬ್ಬರದಲ್ಲಿ ಶತ್ರುಗಳ ಎದೆ ಬಿರಿಯುತ್ತದೆಯೊ, ಯಾರ ದನಿಗೆ ಶತ್ರುಗಳ ಧೈರ್ಯಗಿರಿಶಿಖರ ಬಿರಿಯುತ್ತದೆಯೊ, ಯಾರನ್ನು ಕಂಡರೆ ಶತ್ರುಗಳ ಜೀವ ತಲೆಕೆಳಗಾಗುತ್ತದೆಯೊ ಅಂತಹ ಸುಭಟರ ದೇವನಾದ ಪಾರ್ಥನು ಬೇಕೇ? ತೋರಿಸುತ್ತೇನೆ” ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಆವನೊಬ್ಬನ ಬಿಲ್ಲ ಬೊಬ್ಬೆಯ
ಡಾವರದಲೆದೆ ಬಿರಿವುದಹಿತರಿ
ಗಾವನೊಬ್ಬನ ದನಿಗೆ ಬಿರಿವುದು ಧೈರ್ಯಗಿರಿಶಿಖರ
ಆವನೊಬ್ಬನ ಕಂಡರರಿಗಳ
ಜೀವ ತಲೆಕೆಳಕಹುದು ಸುಭಟರ
ದೇವನಾತನು ಪಾರ್ಥ ಬೇಕೇ ತೋರಿಸುವೆನೆಂದ ॥5॥
೦೦೬ ಹಸುಳೆ ನಿದ್ದೆಯ ...{Loading}...
ಹಸುಳೆ ನಿದ್ದೆಯ ಹಾವ ಹೊಯ್ದ್ ಎ-
ಬ್ಬಿಸುವರೇ, ಮೈಮರೆದ ಮಾರಿಯ
ಮುಸುಕನುಗಿವುದು ಬುದ್ಧಿಯೇ ಜೀವಾಭಿಲಾಷರಿಗೆ
ನುಸಿಗಳುರಿಜಾಳಿಗೆಯೊಡನೆ ಝೊಂ
ಪಿಸುವುದುಚಿತವೆ ಕರ್ಣ ಪಾರ್ಥನ
ಘಸಣಿಯೇಕೈ ನಿನಗೆ ಬೇಕೇ ತೋರಿಸುವೆನೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಗ ತಾನೆ ಮಲಗಿರುವ ಹಾವನ್ನು ಹೊಡೆದು ಎಬ್ಬಿಸುತ್ತಾರೆಯೆ? ಮೈಮರೆತಿರುವ ಮಾರಿಯ ಮುಸುಕನ್ನು ಎಳೆಯುವುದು ಬುದ್ಧಿವಂತಿಕೆಯೆ? ಬದುಕಲು ಆಸೆಪಡುವ ನುಸಿಗಳು ಸುಡುವ ಬೆಂಕಿಯ ಮೇಲೆ ಬೀಳುವುದು ಉಚಿತವೆ? ಕರ್ಣ. ನಿನಗೆ ಪಾರ್ಥನ ತೊಂದರೆ ಏಕೆ? ಬೇಕೆಂದರೆ ತೋರಿಸುತ್ತೇನೆ.” ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಹಸುಳೆ ನಿದ್ದೆಯ ಹಾವ ಹೊಯ್ದೆ
ಬ್ಬಿಸುವರೇ ಮೈಮರೆದ ಮಾರಿಯ
ಮುಸುಕನುಗಿವುದು ಬುದ್ಧಿಯೇ ಜೀವಾಭಿಲಾಷರಿಗೆ
ನುಸಿಗಳುರಿಜಾಳಿಗೆಯೊಡನೆ ಝೊಂ
ಪಿಸುವುದುಚಿತವೆ ಕರ್ಣ ಪಾರ್ಥನ
ಘಸಣಿಯೇಕೈ ನಿನಗೆ ಬೇಕೇ ತೋರಿಸುವೆನೆಂದ ॥6॥
೦೦೭ ಗರುಡನೆತ್ತಲು ...{Loading}...
ಗರುಡನೆತ್ತಲು ಕೊಬ್ಬಿದೊಳ್ಳೆಯ
ಮರಿಯದೆತ್ತಲು ಸಿಂಹವೆತ್ತಲು
ನರಿಗಳೆತ್ತಲು ದಿಗಿಭವೆತ್ತಲು ನಾಯಮರಿಯೆತ್ತ
ನರನೊಡನೆ ಸಮದಂಡಿಯೇ ಜಗ
ವರಿಯದೇ ನಿನ್ನಾತನಭ್ಯಂ
ತರವನಕಟಾ ಕರ್ಣ ಸುಡು ನೀ ಕಷ್ಟ ಹೋಗೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗರುಡ ಎಲ್ಲಿ? , ಕೊಬ್ಬಿದ ನೀರುಹಾವಿನ ಮರಿ ಎಲ್ಲಿ? ಸಿಂಹವೆಲ್ಲಿ , ನರಿಗಳು ಎಲ್ಲಿ ? ದಿಗ್ಗಜವೆಲ್ಲಿ , ನಾಯಮರಿಯೆಲ್ಲಿ ? ನೀನು ಅರ್ಜುನನಿಗೆ ಸಮಾನನೆ ? ನಿನ್ನ ಆತನ ನಡುವಿನ ಅಂತರವನ್ನು ಜಗತ್ತು ಅರಿಯದೆ? ಅಯ್ಯೊ! ಕರ್ಣ, ಸುಡು, ಕಷ್ಟ, ನೀನು ಹೋಗು” ಎಂದು ಶಲ್ಯನು ಹೇಳಿದನು .
ಮೂಲ ...{Loading}...
ಗರುಡನೆತ್ತಲು ಕೊಬ್ಬಿದೊಳ್ಳೆಯ
ಮರಿಯದೆತ್ತಲು ಸಿಂಹವೆತ್ತಲು
ನರಿಗಳೆತ್ತಲು ದಿಗಿಭವೆತ್ತಲು ನಾಯಮರಿಯೆತ್ತ
ನರನೊಡನೆ ಸಮದಂಡಿಯೇ ಜಗ
ವರಿಯದೇ ನಿನ್ನಾತನಭ್ಯಂ
ತರವನಕಟಾ ಕರ್ಣ ಸುಡು ನೀ ಕಷ್ಟ ಹೋಗೆಂದ ॥7॥
೦೦೮ ದಿಟಕೆ ಪಾರ್ಥನ ...{Loading}...
ದಿಟಕೆ ಪಾರ್ಥನ ತೋರಿದರೆ ಸಂ
ಕಟವ ಮಾಡದೆ ಮಾಣಲಾಕಟ
ಕಟ ಧನಂಜಯನೆಂದು ಸೋತನು ಹಿಂದೆ ನಿನ್ನೊಡನೆ
ಕುಟಿಲಮತಿ ಗೋಗ್ರಹಣದಲಿ ಲಟ
ಕಟಿಸಿದನಲಾ ಮದುವೆಯೊಳಗು
ಬ್ಬಟೆಯ ಬಿಲ್ಲಿನೊಳೊದಸಿಕೊಂಡವ ಪಾರ್ಥನಹುದೆಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿಜವಾಗಿಯೂ ಅರ್ಜುನನನ್ನು ತೋರಿಸಿದರೆ ಸಂಕಟಪಡದಿರಲು ಸಾಧ್ಯವಿಲ್ಲ. ಅಕಟಕಟ! ಹಿಂದೆ ಧನಂಜಯನು ನಿನ್ನೊಡನೆ ಎಂದು ಸೋತಿದ್ದಾನೆ? ಕುಟಿಲಮತಿ, ಗೋಗ್ರಹಣದಲ್ಲಿ ಅವನು ಲಟಕಟಿಸಿದನಲ್ಲವೆ? ಮದುವೆಯೊಳಗೆ ಉಬ್ಬಟೆಯ ಬಿಲ್ಲಿನಲ್ಲಿ ಒದೆಸಿಕೊಂಡವನು ಪಾರ್ಥನೇ ಹೌದು” ಎಂದು ಶಲ್ಯನು ಹೇಳಿದನು.
ಮೂಲ ...{Loading}...
ದಿಟಕೆ ಪಾರ್ಥನ ತೋರಿದರೆ ಸಂ
ಕಟವ ಮಾಡದೆ ಮಾಣಲಾಕಟ
ಕಟ ಧನಂಜಯನೆಂದು ಸೋತನು ಹಿಂದೆ ನಿನ್ನೊಡನೆ
ಕುಟಿಲಮತಿ ಗೋಗ್ರಹಣದಲಿ ಲಟ
ಕಟಿಸಿದನಲಾ ಮದುವೆಯೊಳಗು
ಬ್ಬಟೆಯ ಬಿಲ್ಲಿನೊಳೊದಸಿಕೊಂಡವ ಪಾರ್ಥನಹುದೆಂದ ॥8॥
೦೦೯ ನರನ ತೋರಿಸಿದವಗೆ ...{Loading}...
ನರನ ತೋರಿಸಿದವಗೆ ಶತಸಾ
ಸಿರವ ಸೂಸುವೆನೆಂದಲಾ ನಿ
ನ್ನರಸನನು ಗಂಧರ್ವರೆಳೆದೊಯ್ದಂದು ಗಗನದಲಿ
ಅರಸಿಯರು ಸಚಿವರು ಕುಮಾರರು
ಮೊರೆಯಿಡಲು ಫಲುಗುಣನ
ಬಿಡಿಸಿದ ಪರಿಯ ನೀ ನೆರೆ ಕಂಡು ಮರೆವರೆ ಕರ್ಣ ಹೋಗೆಂದ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನನ್ನು ತೋರಿಸಿದವರಿಗೆ ಲಕ್ಷ ನೀಡುತ್ತೇನೆ ಎಂದೆಯಲ್ಲವೇ? ನಿನ್ನ ಅರಸನನ್ನು ಎಳೆದು ಗಗನದಲ್ಲಿ ಒಯ್ದದಿನ ರಾಣಿಯರು, ಸಚಿವರು, ಕುಮಾರರು ಮೊರೆಯಿಟ್ಟಾಗ ಅಜುನನು ಬಿಡಿಸಿದ ರೀತಿಯನ್ನು ನೀನು ಚೆನ್ನಾಗಿ ನೋಡಿಯೂ ಮರೆಯಬಹುದೇ ಕರ್ಣ? ಹೋಗು” ಎಂದು ಶಲ್ಯನು ಹೇಳಿದನು
ಮೂಲ ...{Loading}...
ನರನ ತೋರಿಸಿದವಗೆ ಶತಸಾ
ಸಿರವ ಸೂಸುವೆನೆಂದಲಾ ನಿ
ನ್ನರಸನನು ಗಂಧರ್ವರೆಳೆದೊಯ್ದಂದು ಗಗನದಲಿ
ಅರಸಿಯರು ಸಚಿವರು ಕುಮಾರರು
ಮೊರೆಯಿಡಲು ಫಲುಗುಣನ
ಬಿಡಿಸಿದ ಪರಿಯ ನೀ ನೆರೆ ಕಂಡು ಮರೆವರೆ ಕರ್ಣ ಹೋಗೆಂದ
೦೧೦ ಕಣ್ಡು ಮಾಡುವುದೇನು ...{Loading}...
ಕಂಡು ಮಾಡುವುದೇನು ಭೀಷ್ಮರು
ಕಂಡುದಿಲ್ಲಾ ಚಾಪವಿದ್ಯಾ
ಖಂಡಪರಶು ದ್ರೋಣನರ್ಜುನನನು ರಣಾಗ್ರದಲಿ
ಕಂಡು ನೀನೇಗುವೆ ಸುಯೋಧನ
ಭಂಡನೋ ಸಾರಥಿತನದ ನಾ
ಭಂಡನೋ ನೀ ಭಂಡನೋ ನಾವರಿಯೆವಿದನೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕಂಡು ಮಾಡುವುದೇನು? ಭೀಷ್ಮರು ಕಾಣಲಿಲ್ಲವೆ? ಚಾಪವಿದ್ಯಾ ಪರಮೇಶ್ವರ ದ್ರೋಣನು ಅರ್ಜುನನನ್ನು ಕಾಣಲಿಲ್ಲವೇ? ರಣಾಗ್ರದಲ್ಲಿ ಅವನನ್ನು ಕಂಡು ನೀನು ಏನು ಮಾಡುವೆ? ಸುಯೋಧನ ಭಂಡನೋ? ಸಾರಥಿತನದ ನಾನು ಭಂಡನೋ? ನೀನು ಭಂಡನೋ? ನಾವರಿಯೆವು " ಎಂದು ಶಲ್ಯನು ಹೇಳಿದನು .
ಮೂಲ ...{Loading}...
ಕಂಡು ಮಾಡುವುದೇನು ಭೀಷ್ಮರು
ಕಂಡುದಿಲ್ಲಾ ಚಾಪವಿದ್ಯಾ
ಖಂಡಪರಶು ದ್ರೋಣನರ್ಜುನನನು ರಣಾಗ್ರದಲಿ
ಕಂಡು ನೀನೇಗುವೆ ಸುಯೋಧನ
ಭಂಡನೋ ಸಾರಥಿತನದ ನಾ
ಭಂಡನೋ ನೀ ಭಂಡನೋ ನಾವರಿಯೆವಿದನೆಂದ ॥10॥
೦೧೧ ಕಡು ಪರಾಕ್ರಮಪಿತ್ತ ...{Loading}...
ಕಡು ಪರಾಕ್ರಮಪಿತ್ತ ನೆತ್ತಿಯ
ಹಿಡಿದು ನೀ ಗಳಹಿದರೆ ನಿನ್ನೀ
ಹಡಪದವರೀ ಚಮರದವರೀ ಛತ್ರಧಾರಿಗಳು
ಒಡೆಯ ನೀನೆಂದಂಜಿ ನಿರುತವ
ನುಡಿಯಲಮ್ಮರು ತಮ್ಮ ಮನದೊಳ
ಗೊಡಬಡುವರೇ ಕದನಬಾಹಿರ ಕರ್ಣ ಹೋಗೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನಗೆ ಬಹಳ ಪರಾಕ್ರಮದ ಪಿತ್ತ ನೆತ್ತಿಗೇರಿದೆ. ಆದ್ದರಿಂದ ಮನಬಂದಂತೆ ಮಾತನಾಡುತ್ತಿರುವೆ. ಅವಕ್ಕೆ ನಿನ್ನ ಹಡಪದವರಾಗಲಿ ಅಥವಾ ಚಾಮರ ಬೀಸುವವರಾಗಲಿ, ಅಥವಾ ಛತ್ರ ಹಿಡಿಯುವವರಾಗಲಿ, ನೀನು ಒಡೆಯ ಎಂಬ ಭಾವನೆಯಿಂದ ಅಂಜಿ, ಇದ್ದುದ್ದನ್ನು ಇದ್ದಂತೆ ಹೇಳದೇ ಸುಮ್ಮನೆ ಇದ್ದಾರು. ಆದರೆ ಅವರು ಮನಸ್ಸಿನೊಳಗೆ ಒಪ್ಪುವರೇ? ಎಲೋ ಕದನಕ್ಕೆ ಅಯೋಗ್ಯನಾದವನೇ ಕರ್ಣಾ ! ನೀನು ತೊಲಗು ನಡೆ” ಎಂದು ಶಲ್ಯನು ಹೇಳಿದನು .
ಮೂಲ ...{Loading}...
ಕಡು ಪರಾಕ್ರಮಪಿತ್ತ ನೆತ್ತಿಯ
ಹಿಡಿದು ನೀ ಗಳಹಿದರೆ ನಿನ್ನೀ
ಹಡಪದವರೀ ಚಮರದವರೀ ಛತ್ರಧಾರಿಗಳು
ಒಡೆಯ ನೀನೆಂದಂಜಿ ನಿರುತವ
ನುಡಿಯಲಮ್ಮರು ತಮ್ಮ ಮನದೊಳ
ಗೊಡಬಡುವರೇ ಕದನಬಾಹಿರ ಕರ್ಣ ಹೋಗೆಂದ ॥11॥
೦೧೨ ಕೇಳುತಿರ್ದನು ಕರ್ಣನಿವನಾ ...{Loading}...
ಕೇಳುತಿರ್ದನು ಕರ್ಣನಿವನಾ
ಭೀಳವಚನವನಧಿಕ ರೋಷ
ಜ್ವಾಲೆ ಝಳಪಿಸೆ ಮೀಸೆಗಡಿದನು ತೂಗಿದನು ಶಿರವ
ಖೂಳನಿವನನು ಹೊಯ್ದರೊಳಗೊಳ
ಗಾಳುದೋಟಿ ವಿಕಾರಿವಿಪ್ರನ
ಕಾಳುಶಾಪದ ಫಲವಲಾ ಸಂಪ್ರಾಪ್ತವಾಯ್ತೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಶಲ್ಯನ ಭೀಕರವಾದ ಮಾತುಗಳನ್ನು ಕೇಳುತ್ತಿದ್ದನು. ಅವನ ಕೋಪ ಕೆರಳಿತು. ರೋಷದ ಉರಿ ಕುಡಿ ಚಾಚಹತ್ತಿತು. ಆಗ ಅವನು ಮೀಸೆ ಕಡಿದನು. ತಲೆದೂಗಿದನು. : “ಈ ನೀಚನನ್ನು ಕೊಂದಿದ್ದಾದರೆ ಒಬ್ಬರೊಬ್ಬರಲ್ಲಿ ಒಳತೋಟಿ ಆರಂಭವಾದಂತಾಗುತ್ತದೆ. ಇದೆಲ್ಲಾ ಆ ಬ್ರಾಹ್ಮಣ (ಪರಶುರಾಮ)ನು ಸಿಟ್ಟಿಗೆದ್ದು ಕೊಟ್ಟ ಹಾಳು ಶಾಪದ ಫಲ. ಅದು ಈಗ ಪ್ರಾಪ್ತವಾದಂತಾಯಿತು” ಎಂದು ಅಂದುಕೊಂಡನು.
ಪದಾರ್ಥ (ಕ.ಗ.ಪ)
ಅಭೀಳ-ಭಯಂಕರ;
ಮೂಲ ...{Loading}...
ಕೇಳುತಿರ್ದನು ಕರ್ಣನಿವನಾ
ಭೀಳವಚನವನಧಿಕ ರೋಷ
ಜ್ವಾಲೆ ಝಳಪಿಸೆ ಮೀಸೆಗಡಿದನು ತೂಗಿದನು ಶಿರವ
ಖೂಳನಿವನನು ಹೊಯ್ದರೊಳಗೊಳ
ಗಾಳುದೋಟಿ ವಿಕಾರಿವಿಪ್ರನ
ಕಾಳುಶಾಪದ ಫಲವಲಾ ಸಂಪ್ರಾಪ್ತವಾಯ್ತೆಂದ ॥12॥
೦೧೩ ಈಸು ನೀನರ್ಜುನನ ...{Loading}...
ಈಸು ನೀನರ್ಜುನನ ಪಕ್ಷಾ
ವೇಶಿಯೇ ಶಿವಶಿವ ಮಹಾದೇ
ವೇಸು ನಂಬಿಹನೋ ಸುಯೋಧನನೇನ ಮಾಡುವೆನೊ
ಸೀಸಕವೆ ರವಿಕಾಂತವಾಗಿ ದಿ
ನೇಶನನು ಕೆಣಕಿದವೊಲಿಂದವ
ನೀಶನೀತನ ನಂಬಿ ಕೆಟ್ಟನು ಕೆಟ್ಟನಕಟೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ಕರ್ಣನು “ಅಯ್ಯೋ ನೀನು ಇಷ್ಟು ಅರ್ಜುನನ ಪಕ್ಷಪಾತಿಯೇ? ಶಿವ ಶಿವಾ ! ಶಿವ ಶಿವಾ !! ಆ ದುರ್ಯೋಧನನು ನಿನ್ನನ್ನು ಎಷ್ಟು ನಂಬಿದ್ದಾನಲ್ಲಾ? ಈಗ ಇನ್ನೇನು ಮಾಡುವೆನು. ತೊಟ್ಟ ಕವಚವೇ ಸೂರ್ಯಕಾಂತಶಿಲೆಯಾಗಿ ಸೂರ್ಯನನ್ನು ಕೆಣಕಿದರೆ ಏನಾಗಬೇಡ? ಅವನೀಶ ದುರ್ಯೋಧನನು ನಿನ್ನನ್ನು ನಂಬಿ ನಿಜವಾಗಿ ಕೆಟ್ಟನು”. ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಪಕ್ಷಾವೇಶಿ - ಪಕ್ಷಪಾತಿ
ಮೂಲ ...{Loading}...
ಈಸು ನೀನರ್ಜುನನ ಪಕ್ಷಾ
ವೇಶಿಯೇ ಶಿವಶಿವ ಮಹಾದೇ
ವೇಸು ನಂಬಿಹನೋ ಸುಯೋಧನನೇನ ಮಾಡುವೆನೊ
ಸೀಸಕವೆ ರವಿಕಾಂತವಾಗಿ ದಿ
ನೇಶನನು ಕೆಣಕಿದವೊಲಿಂದವ
ನೀಶನೀತನ ನಂಬಿ ಕೆಟ್ಟನು ಕೆಟ್ಟನಕಟೆಂದ ॥13॥
೦೧೪ ಸೆಣಸಿದೈ ತನ್ನೊಡನೆಯೀ ...{Loading}...
ಸೆಣಸಿದೈ ತನ್ನೊಡನೆಯೀ ಫಲು
ಗುಣನ ಭಟನೋ ನೀನು ನೃಪತಿಯ
ರಣವಿಜಯವಿದ್ವೇಷಿಯೋ ನಾವರಿಯೆವಿಂದೀಗ
ಅಣಕವೇ ತುರುಗಾಹಿ ಕಾಜಿನ
ಮಣಿಯ ಬಲ್ಲನು ಗಡ ಕಿರೀಟಿಯ
ಗುಣ ಪರಾಕ್ರಮತನವ ನೀನೇ ಬಲ್ಲೆ ದಿಟವೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನ್ನೊಂದಿಗೆ ನೀನು (ವಿನಾ ಕಾರಣ) ಸ್ಪರ್ಧಿಸುತ್ತಿರುವೆ. ನೀನೇನು ಅರ್ಜುನನ ಕಡೆಯ ಭಟನೋ? ಅಥವಾ ದುರ್ಯೋಧನನ ವಿಜಯವನ್ನು ಬಲವಾಗಿ ದ್ವೇಷಿಸುವವನೋ? ನನಗೆ ತಿಳಿಯದು. ಇದೇನು ಅಣಕವೇ? ದನಗಾಹಿಗಳು ಕಾಜಿನ ಮಣಿಯನ್ನು ಮಾತ್ರ ಬಲ್ಲರು ಅಲ್ಲವೇ? ಅರ್ಜುನನ ಗುಣ, ಪರಾಕ್ರಮಗಳನ್ನು ನೀನು ಮಾತ್ರ ತಿಳಿದಿರುವೆ. ನಿಜ” ಎಂದು ಕರ್ಣನು ಹೇಳಿದನು.
ಮೂಲ ...{Loading}...
ಸೆಣಸಿದೈ ತನ್ನೊಡನೆಯೀ ಫಲು
ಗುಣನ ಭಟನೋ ನೀನು ನೃಪತಿಯ
ರಣವಿಜಯವಿದ್ವೇಷಿಯೋ ನಾವರಿಯೆವಿಂದೀಗ
ಅಣಕವೇ ತುರುಗಾಹಿ ಕಾಜಿನ
ಮಣಿಯ ಬಲ್ಲನು ಗಡ ಕಿರೀಟಿಯ
ಗುಣ ಪರಾಕ್ರಮತನವ ನೀನೇ ಬಲ್ಲೆ ದಿಟವೆಂದ ॥14॥
೦೧೫ ರೂಢಿಯೋಲೆಯಕಾರನರ್ಜುನ ನಾಡಿ ...{Loading}...
ರೂಢಿಯೋಲೆಯಕಾರನರ್ಜುನ
ನಾಡಿ ಪತಿಕರಿಸುವನು ನೀನದ
ನೋಡಿ ಸಂತಸಬಡುವರಿಬ್ಬರು ಕೃಪನು ಗುರುಸುತನು
ಕೋಡಗದ ಮೊಗಸಿರಿಗೆ ಕಾವಲಿ
ಯೋಡು ಕನ್ನಡಿಯಾಯ್ತು ಗಡ ಕೃತ
ಗೇಡಿಗುಚಿತವನೇನ ಮಾಡುವೆನೆಂದನಾ ಕರ್ಣ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನು ಒಬ್ಬ ಪ್ರಸಿದ್ಧ ವೀರ. ಅವನನ್ನು ಮೆಚ್ಚಿ ಹೊಗಳಿ ಮನ್ನಿಸುವವ ನೀನು. ಅದನ್ನು ನೋಡಿ ಸಂತೋಷಪಡುವವರು ಕೃಪ ಮತ್ತು ಅಶ್ವತ್ಥಾಮ. ಇದು ಮಂಗನ ಚೆಲುವಿಕೆಯನ್ನು ನೋಡಲು ಸುಟ್ಟಹಂಚು ಕನ್ನಡಿಯಾದಂತೆ. ಈ ಕೃತಘ್ನನಿಗೆ ಏನು ಶಿಕ್ಷೆ ಕೊಡಲಿ?” ಎಂದು ಕರ್ಣನು ತಳಮಳಿಸಿದನು.
ಪದಾರ್ಥ (ಕ.ಗ.ಪ)
ರೂಢಿ-ಪ್ರಸಿದ್ಧ
ಕೃತಗೇಡಿ-ಕೃತಘ್ನ
ಮೂಲ ...{Loading}...
ರೂಢಿಯೋಲೆಯಕಾರನರ್ಜುನ
ನಾಡಿ ಪತಿಕರಿಸುವನು ನೀನದ
ನೋಡಿ ಸಂತಸಬಡುವರಿಬ್ಬರು ಕೃಪನು ಗುರುಸುತನು
ಕೋಡಗದ ಮೊಗಸಿರಿಗೆ ಕಾವಲಿ
ಯೋಡು ಕನ್ನಡಿಯಾಯ್ತು ಗಡ ಕೃತ
ಗೇಡಿಗುಚಿತವನೇನ ಮಾಡುವೆನೆಂದನಾ ಕರ್ಣ ॥15॥
೦೧೬ ಹಗೆಯನೇ ಕೊಣ್ಡಾಡಿ ...{Loading}...
ಹಗೆಯನೇ ಕೊಂಡಾಡಿ ಸ್ವಾಮಿಗೆ
ಬೆಗಡ ಬೆಳಸಿ ರಣಾಗ್ರ ಸುಭಟರ
ನಗಡುಮಾಡಿ ವೃಥಾತ್ಮ ಕುಕ್ಷಿಂಭರಿಕರೆಂದೆನಿಸಿ
ಹೊಗಳಿಕೆಗೆ ಹೊರಗಾದರೈವರು
ವಿಗಡರದರೊಳಗಿಬ್ಬರಳಿದರು
ಹಗೆಗಳುಳಿದಿರಿ ಮೂವರೆಂದನು ಭಾನುಸುತ ಮುಳಿದು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವೈರಿಯನ್ನು ಹೊಗಳಿ, ಒಡೆಯನಿಗೆ (ದುರ್ಯೋಧನನಿಗೆ) ಭಯವನ್ನು ಹೆಚ್ಚಿಸಿ, ಶ್ರೇಷ್ಠ ಸುಭಟರನ್ನು ಕೀಳುಮಾಡಿ, ವ್ಯರ್ಥವಾಗಿ ತಮ್ಮ ಹೊಟ್ಟೆಹೊರೆದುಕೊಳ್ಳುವವರು, ಹೊಗಳಿಕೆಗೆ ಹೊರಗಾದವರು ಐದು ಜನರು. ಅವರಲ್ಲಿ ಇಬ್ಬರು (ಭೀಷ್ಮ-ದ್ರೋಣರು) ದುರುಳರು, ಅಳಿದು ಹೋದರು. ಈಗ ನೀವು ಮೂವರು (ಕೃಪ, ಅಶ್ವತ್ಥಾಮ, ಶಲ್ಯ) ಹಿತಶತ್ರುಗಳಾಗಿ ಉಳಿದಿದ್ದೀರಿ” ಎಂದು ಕರ್ಣನು ಸಿಟ್ಟಿನಿಂದ ಮಾತನಾಡಿದನು.
ಪದಾರ್ಥ (ಕ.ಗ.ಪ)
ಬೆಗಡು-ಭಯ
ಮೂಲ ...{Loading}...
ಹಗೆಯನೇ ಕೊಂಡಾಡಿ ಸ್ವಾಮಿಗೆ
ಬೆಗಡ ಬೆಳಸಿ ರಣಾಗ್ರ ಸುಭಟರ
ನಗಡುಮಾಡಿ ವೃಥಾತ್ಮ ಕುಕ್ಷಿಂಭರಿಕರೆಂದೆನಿಸಿ
ಹೊಗಳಿಕೆಗೆ ಹೊರಗಾದರೈವರು
ವಿಗಡರದರೊಳಗಿಬ್ಬರಳಿದರು
ಹಗೆಗಳುಳಿದಿರಿ ಮೂವರೆಂದನು ಭಾನುಸುತ ಮುಳಿದು ॥16॥
೦೧೭ ನಾವು ಭಣ್ಡರು ...{Loading}...
ನಾವು ಭಂಡರು ಗರುವ ರಾಯರು
ನೀವಲೇ ಭುವನದಲಿ ಬಾಹಿರ
ರಾವು ನೀವತಿ ಚದುರರಾದಿರಲಾ ಮಹಾದೇವ
ತಾವು ತಮ್ಮಯ ಹೆಚ್ಚು ಕುಂದಿನ
ಜೀವಕಳೆಯರಿಯದ ನಿರರ್ಥಕ
ಜೀವಿಗಳಹಂಕಾರತನಕೇನೆಂಬುದಿದಕೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸರಿ, ನಾವೇ ಕೆಟ್ಟವರು. ನೀವು ಒಳ್ಳೆಯ ಶ್ರೇಷ್ಠರಾಜರು. ಜಗತ್ತಿನಲ್ಲೇ ಬಾಹಿರರಾದವರು ನಾವು. ನೀವು ಅತಿ ಬುದ್ಧಿವಂತರಾದಿರಲ್ಲಾ, ಶಿವ ಶಿವಾ ಯಾವುದು ಹೆಚ್ಚು ಯಾವುದು ಕಡಿಮೆ ಎಂಬುದರ ಮರ್ಮವನ್ನೇ ತಿಳಿಯದೆ, ನಿರರ್ಥಕವಾಗಿ (ಬದುಕಿ ಬಾಳುವ) ಈ ಜೀವಿಗಳ ಅಹಂಕಾರಕ್ಕೆ ಏನೆನ್ನ ಬೇಕು?” ಎಂದು ಕರ್ಣನು ಹೇಳಿದನು.
ಮೂಲ ...{Loading}...
ನಾವು ಭಂಡರು ಗರುವ ರಾಯರು
ನೀವಲೇ ಭುವನದಲಿ ಬಾಹಿರ
ರಾವು ನೀವತಿ ಚದುರರಾದಿರಲಾ ಮಹಾದೇವ
ತಾವು ತಮ್ಮಯ ಹೆಚ್ಚು ಕುಂದಿನ
ಜೀವಕಳೆಯರಿಯದ ನಿರರ್ಥಕ
ಜೀವಿಗಳಹಂಕಾರತನಕೇನೆಂಬುದಿದಕೆಂದ ॥17॥
೦೧೮ ಮುನಿದೆನಾದರೆ ಕೋಟಿ ...{Loading}...
ಮುನಿದೆನಾದರೆ ಕೋಟಿ ಕೃಷ್ಣಾ
ರ್ಜುನರ ಕೊಂಬೆನೆ ರಣಕೆ ದುರ್ಯೋ
ಧನಗೆ ಮಲೆವರ ಮಾರಿ ಪಾಂಡವಮೇಘ ಪವಮಾನ
ತನಗೆ ಸರಿ ಯಾರಿಲ್ಲ ನೆಣಗೊ
ಬ್ಬಿನಲಿ ನುಡಿದೈ ನಿನ್ನ ಬಾಂಧವ
ಜನ ಸಹಿತ ಹಿಂಡುವೆನು ಹಿಂದಿಕ್ಕುವನ ತೋರೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾನು ಸಿಟ್ಟಿಗೆ ಎದ್ದರೆ ಕೋಟಿ ಕೃಷ್ಣರು, ಕೋಟಿ ಅರ್ಜುನರು ಬಂದರೂ ಅದನ್ನು ಗಣಿಸುವೆನೆ? ಯುದ್ಧಭೂಮಿಯಲ್ಲಿ ದುರ್ಯೊಧನನಿಗೆ ಯಾರು ಎದುರಾಗುವರೋ ಅವರ ಮೃತ್ಯುದೇವತೆ ನಾನು. ಪಾಂಡವರೆಂಬ ಮೇಘಕ್ಕೆ ಬಿರುಗಾಳಿಯಂತಿರುವವನು. (ನಿಜಕ್ಕೂ) ನನ್ನ ಸಮ ಯಾರೂ ಇಲ್ಲ. ನೀನು ಮೈ ಸೊಕ್ಕಿನಿಂದ ಮಾತನಾಡುತ್ತಿರುವೆ. ನಿನ್ನ ಬಂಧು ಬಾಂಧವರ ಸಹಿತ ನಿನ್ನನ್ನು ಸೀಳಿ ಹಾಕುವೆನು. ನಿನ್ನನ್ನು ಬೆಂಬಲಿಸುವವರು ಯಾರು? ತೋರಿಸು” ಎಂದು ಕರ್ಣನು ಹೇಳಿದನು.
ಮೂಲ ...{Loading}...
ಮುನಿದೆನಾದರೆ ಕೋಟಿ ಕೃಷ್ಣಾ
ರ್ಜುನರ ಕೊಂಬೆನೆ ರಣಕೆ ದುರ್ಯೋ
ಧನಗೆ ಮಲೆವರ ಮಾರಿ ಪಾಂಡವಮೇಘ ಪವಮಾನ
ತನಗೆ ಸರಿ ಯಾರಿಲ್ಲ ನೆಣಗೊ
ಬ್ಬಿನಲಿ ನುಡಿದೈ ನಿನ್ನ ಬಾಂಧವ
ಜನ ಸಹಿತ ಹಿಂಡುವೆನು ಹಿಂದಿಕ್ಕುವನ ತೋರೆಂದ ॥18॥
೦೧೯ ಆರಿಗಾವುದು ದೇಶವಾ ...{Loading}...
ಆರಿಗಾವುದು ದೇಶವಾ ಸಂ
ಸ್ಕಾರವವರಿಗೆ ಬಿಡದು ಬುದ್ಧಿಗೆ
ಬೇರುಗೊಲೆಯಲ್ಲಾ ಕುದೇಶ ಕುವಂಶ ಸಂಭೂತಿ
ಊರುಗರಲಾ ಮಾದ್ರದೇಶದ
ಭೂರಿ ದುರಿತರು ಕ್ಷತ್ರ ತಿಮಿರ ವಿ
ಕಾರಿಗಳ ಜಾತಿಯಲಿ ಜನಿಸಿದೆ ಶಲ್ಯ ಕೇಳ್ ಎಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾರಿಗೆ ಯಾವ ದೇಶವೋ ಅವರಿಗೆ, ಅವರ ಬುದ್ಧಿಗೆ ಆ ಸಂಸ್ಕಾರ ಬಿಡುವುದಿಲ್ಲ. ಕೆಟ್ಟ ದೇಶ, ಕೆಟ್ಟವಂಶ, ಅದರಲ್ಲಿ ಹುಟ್ಟುವುದು ಬುದ್ಧಿಯ ಸಮಗ್ರ ನಾಶಕ್ಕೆ ಕಾರಣ. ಮಾದ್ರ ದೇಶದ ನೀವು ಮೂಢರು. ಮಹಾ ಪಾಪಿಗಳು. ಕ್ಷತ್ರಿಯ ದ್ರೋಹಿಗಳ ಜಾತಿಯಲಿ ಶಲ್ಯ ನೀನು ಜನಿಸಿದೆ ಕೇಳು” ಎಂದು ಕರ್ಣನು ನುಡಿದನು.
ಪದಾರ್ಥ (ಕ.ಗ.ಪ)
ಊರುಗ-ಮೂರ್ಖ;
ಮೂಲ ...{Loading}...
ಆರಿಗಾವುದು ದೇಶವಾ ಸಂ
ಸ್ಕಾರವವರಿಗೆ ಬಿಡದು ಬುದ್ಧಿಗೆ
ಬೇರುಗೊಲೆಯಲ್ಲಾ ಕುದೇಶ ಕುವಂಶ ಸಂಭೂತಿ
ಊರುಗರಲಾ ಮಾದ್ರದೇಶದ
ಭೂರಿ ದುರಿತರು ಕ್ಷತ್ರ ತಿಮಿರ ವಿ
ಕಾರಿಗಳ ಜಾತಿಯಲಿ ಜನಿಸಿದೆ ಶಲ್ಯ ಕೇಳೆಂದ ॥19॥
೦೨೦ ಖೂಳರಿಗೆ ತಾ ...{Loading}...
ಖೂಳರಿಗೆ ತಾ ಜನ್ಮಭೂಮಿ ವಿ
ಟಾಳಚರಿತರ ತೌರುಮನೆ ದು
ಶ್ಶೀಲರಿಗೆ ದರ್ಪಣ ವಿಕಾರಿಗಳಿಗೆ ವಿಹಾರವನ
ಹೇಳುವರೆ ಪರಮಾಣು ಗುಣವಾ
ಬಾಲ ವೃದ್ಧರೊಳಿಲ್ಲ ಠಕ್ಕಿನ
ಠೌಳಿಕಾರರು ಮಾದ್ರದವರೆಲೆ ಶಲ್ಯ ಕೇಳ್ ಎಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “(ಮಾದ್ರದೇಶ) ನೀಚರಿಗೆ ಜನ್ಮ ಭೂಮಿ, ಅಪವಿತ್ರಚರಿತರ ತವರುಮನೆ, ದುರ್ನಡತೆಯವರಿಗೆ ಕನ್ನಡಿ ಹಾಗೂ ವಿಕಾರಿಗಳು ವಿಹರಿಸುವ ತೋಟ ಎನಿಸಿಕೊಳ್ಳುತ್ತದೆ. (ಸ್ವಲ್ಪದರಲ್ಲಿ) ಹೇಳಬೇಕೆಂದರೆ ಮಕ್ಕಳಿಂದ ಮುದುಕರವರೆಗೂ ಒಂದು ಚಿಕ್ಕ ಅಣುವಿನಷ್ಟೂ ಒಳ್ಳೆಯ ಗುಣವು ಯಾರಲ್ಲೂ ಇರುವುದಿಲ್ಲ. ಮಾದ್ರದೇಶದವರೆಲ್ಲ ಠಕ್ಕರು, ಮೋಸಗಾರರೇ ಆಗಿರುತ್ತಾರೆ. ಶಲ್ಯನೇ ಕೇಳು” ಎಂದು ಕರ್ಣ (ಹೀಯಾಳಿಸಿ) ನುಡಿದ.
ಪದಾರ್ಥ (ಕ.ಗ.ಪ)
ವಿಟಾಳ-ಅಪವಿತ್ರ;
ಮೂಲ ...{Loading}...
ಖೂಳರಿಗೆ ತಾ ಜನ್ಮಭೂಮಿ ವಿ
ಟಾಳಚರಿತರ ತೌರುಮನೆ ದು
ಶ್ಶೀಲರಿಗೆ ದರ್ಪಣ ವಿಕಾರಿಗಳಿಗೆ ವಿಹಾರವನ
ಹೇಳುವರೆ ಪರಮಾಣು ಗುಣವಾ
ಬಾಲ ವೃದ್ಧರೊಳಿಲ್ಲ ಠಕ್ಕಿನ
ಠೌಳಿಕಾರರು ಮಾದ್ರದವರೆಲೆ ಶಲ್ಯ ಕೇಳೆಂದ ॥20॥
೦೨೧ ರಣದೊಳೊಡೆಯನ ಜರೆದು ...{Loading}...
ರಣದೊಳೊಡೆಯನ ಜರೆದು ಜಾರುವ
ಗುಣಸಮುದ್ರರು ಮಾದ್ರದೇಶದ
ಭಣಿತೆ ತಾನದು ಬೇರೆ ನಡೆವಳಿಯಂಗವದು ಬೇರೆ
ಗಣಿಕೆಯರ ಮಧ್ಯದಲಿ ಮದ್ಯದ
ತಣಿವಿನಲಿ ತನಿಸೊಕ್ಕಿ ಬತ್ತಲೆ
ಕುಣಿವ ಭಂಗಿಯ ಭಂಡರೆಲವೋ ಶಲ್ಯ ಕೇಳ್ ಎಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಣದಲ್ಲಿ ಒಡೆಯನನ್ನು ಜರಿದು ಹೊರಟುಹೋಗುವ ಗುಣಶಾಲಿಗಳು ನಿಮ್ಮವರು. ಮಾದ್ರ ದೇಶದ ಮಾತಿನ ರೀತಿ ಬೇರೆ. ನಡವಳಿಕೆಯ ರೀತಿ ಬೇರೆ. ನೀವು ವೇಶ್ಯೆಯರ ಮಧ್ಯದಲ್ಲಿ ಇದ್ದು ಮದ್ಯಪಾನ ಮಾಡಿ ಅದರ ಮದದಲ್ಲಿ ಮೈಮರೆತು ಬೆತ್ತಲೆ ಕುಣಿಯುವ ನಡತೆಯ ಭಂಡರು, ಶಲ್ಯನೇ ಕೇಳು” ಎಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಭಣಿತೆ-ಮಾತಿನ ರೀತಿ
ಮೂಲ ...{Loading}...
ರಣದೊಳೊಡೆಯನ ಜರೆದು ಜಾರುವ
ಗುಣಸಮುದ್ರರು ಮಾದ್ರದೇಶದ
ಭಣಿತೆ ತಾನದು ಬೇರೆ ನಡೆವಳಿಯಂಗವದು ಬೇರೆ
ಗಣಿಕೆಯರ ಮಧ್ಯದಲಿ ಮದ್ಯದ
ತಣಿವಿನಲಿ ತನಿಸೊಕ್ಕಿ ಬತ್ತಲೆ
ಕುಣಿವ ಭಂಗಿಯ ಭಂಡರೆಲವೋ ಶಲ್ಯ ಕೇಳೆಂದ ॥21॥
೦೨೨ ಕುಟಿಲಸೃಷ್ಟಿಗೆ ನೀವರಸು ...{Loading}...
ಕುಟಿಲಸೃಷ್ಟಿಗೆ ನೀವರಸು ಚಾ
ವಟೆಯರಿಗೆ ಮನೆ ದುವ್ರ್ಯಸನ ಲಂ
ಪಟರಿಗಾಚಾರಿಯರು ಖಳರಿಗೆ ನಿಮ್ಮೊಳುಪದೇಶ
ಅಟಮಟದ ಘನದೇಹಸಿದ್ಧಿಯ
ಘುಟಿಕೆ ನಿಮ್ಮಲಿ ರಣಪಲಾಯನ
ಪಟುಭಟರಲಾ ಗುಣವಿಹೀನರು ಶಲ್ಯ ನೀವೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೋಸದ ಸೃಷ್ಟಿಗೆ ನೀವು ಅರಸುಗಳು. ಉದ್ದಟರಿಗೆ ಆಶ್ರಯ, ದುಷ್ಟವ್ಯಸನ ವಿಲಾಸಿಗಳಿಗೆ ಗುರುಗಳು, ನೀಚರಿಗೆ ನಿಮ್ಮಿಂದಲೇ ಉಪದೇಶ, ಕಪಟತನದಿಂದ ದೇಹವನ್ನು ಬಲಪಡಿಸಿಕೊಳ್ಳುವ ಗುಳಿಗೆ ಸೇವನೆಯ ಕಲೆ ನಿಮ್ಮಲ್ಲಿ ಇದೆ. ಇಷ್ಟೊಂದು ದೇಹದಾಢ್ರ್ಯರು ನೀವಾಗಿದ್ದರೂ ನೀವು ರಣಪಲಾಯನ ಪಂಡಿತರು. (ಒಟ್ಟಾರೆ) ನೀವು ಗುಣಹೀನರು. ಶಲ್ಯ ಕೇಳು” ಎಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಚಾವಟೆಯರು-ಉದ್ಧಟರು; ಲಂಪಟರು-ಸ್ತ್ರೀವ್ಯಸನದವರು; ಅಟಮಟ ಮೋಸ; ಪಲಾಯನ-ಓಟ; ಪಟುಭಟರು-ಶೂರನಾದ ಯೋಧ
ಮೂಲ ...{Loading}...
ಕುಟಿಲಸೃಷ್ಟಿಗೆ ನೀವರಸು ಚಾ
ವಟೆಯರಿಗೆ ಮನೆ ದುವ್ರ್ಯಸನ ಲಂ
ಪಟರಿಗಾಚಾರಿಯರು ಖಳರಿಗೆ ನಿಮ್ಮೊಳುಪದೇಶ
ಅಟಮಟದ ಘನದೇಹಸಿದ್ಧಿಯ
ಘುಟಿಕೆ ನಿಮ್ಮಲಿ ರಣಪಲಾಯನ
ಪಟುಭಟರಲಾ ಗುಣವಿಹೀನರು ಶಲ್ಯ ನೀವೆಂದ ॥22॥
೦೨೩ ಗರುಡ ಮತದಲಿ ...{Loading}...
ಗರುಡ ಮತದಲಿ ಸರ್ಪವಿಷ ಪರಿ
ಹರಿಸುವುದು ದುರ್ಜನ ವಚೋ ನಿ
ಷ್ಠುರ ಮಹಾ ವಿಷಕಾವ ಗಾರುಡವಾವ ಮಂತ್ರಮುಖ
ದುರುಳ ನೀ ದುರುದುಂಬಿತನದಲಿ
ಹುರುಳುಗೆಡಿಸಿದಡೀಸರಲಿ ನೀ
ಗರುವನೇ ಬಾಹಿರನು ನಾನೇ ಶಲ್ಯ ಕೇಳ್ ಎಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಂಥ ಹಾವಿನ ವಿಷವಾದರೂ ಗರುಡ ಮಂತ್ರದಿಂದ ಪರಿಹಾರವಾಗಿ ಬಿಡುತ್ತದೆ. ಆದರೆ ದುರ್ಜನರ ನಿಷ್ಠುರವಾದ ಮಾತೆಂಬ ಮಹಾವಿಷಕ್ಕೆ ಯಾವ ಗರುಡಮಂತ್ರವಿದೆ? ಎಲೋ ದುಷ್ಟ ನೀನು ದುಷ್ಟತನದಿಂದ ನನ್ನ ಪರಾಕ್ರಮವನ್ನು ತೆಗಳಿದರೆ ನೀನು ಶ್ರೇಷ್ಠನೆನಿಸುವಿಯಾ? ಶಲ್ಯ ನಾನು ಬಾಹಿರನೇ? ಕೇಳು” ಎಂದು ಕರ್ಣನು ನುಡಿದನು.
ಪದಾರ್ಥ (ಕ.ಗ.ಪ)
ಗರುಡಮತ-ಗರುಡತತ್ವ;
ಮೂಲ ...{Loading}...
ಗರುಡ ಮತದಲಿ ಸರ್ಪವಿಷ ಪರಿ
ಹರಿಸುವುದು ದುರ್ಜನ ವಚೋ ನಿ
ಷ್ಠುರ ಮಹಾ ವಿಷಕಾವ ಗಾರುಡವಾವ ಮಂತ್ರಮುಖ
ದುರುಳ ನೀ ದುರುದುಂಬಿತನದಲಿ
ಹುರುಳುಗೆಡಿಸಿದಡೀಸರಲಿ ನೀ
ಗರುವನೇ ಬಾಹಿರನು ನಾನೇ ಶಲ್ಯ ಕೇಳೆಂದ ॥23॥
೦೨೪ ಏಸು ಪರಿಯಲಿ ...{Loading}...
ಏಸು ಪರಿಯಲಿ ನುಡಿದು ನಮ್ಮಯ
ದೇಶವನು ನೀ ಹಳಿದಡೆಯು ನೀ
ನೇಸು ಪರಿಯಲಿ ಬಯ್ದು ಭಂಗಿಸಿ ನಮ್ಮ ದೂರಿದಡೆ
ಆ ಸಿತಾಶ್ವನ ಬಿಲ್ಲನೊದೆದಾ
ಕಾಶಕವ್ವಳಿಸುವ ಶರೌಘಕೆ
ಮೀಸಲರಿಯಾ ಕರ್ಣ ನಿನ್ನೊಡಲೆಂದನಾ ಶಲ್ಯ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀನು ಎಷ್ಟು ಬಗೆಯಿಂದ ಮಾತಾಡಿ, ನಮ್ಮ ದೇಶವನ್ನು ಹಳಿದರೂ, ಎಷ್ಟು ರೀತಿಯಿಂದ ಬೈದು ಅವಮಾನ ಪಡಿಸಿ ನಿಂದಿಸಿದರೂ ಕಡೆಗೂ ಅರ್ಜುನನ ಬಾಣಗಳಿಗೆ ಕರ್ಣಾ, ನಿನ್ನ ದೇಹ ಮೀಸಲೆಂಬುದನ್ನು ಅರಿತುಕೋ.” ಎಂದು ಶಲ್ಯನು ನುಡಿದನು.
ಪದಾರ್ಥ (ಕ.ಗ.ಪ)
ಸಿತಾಶ್ವ-ಅರ್ಜುನ (ಕೃಷ್ಣ);
ಅವ್ವಳಿಸು-ಜಿಗಿ, ಹಾರು;
ಮೂಲ ...{Loading}...
ಏಸು ಪರಿಯಲಿ ನುಡಿದು ನಮ್ಮಯ
ದೇಶವನು ನೀ ಹಳಿದಡೆಯು ನೀ
ನೇಸು ಪರಿಯಲಿ ಬಯ್ದು ಭಂಗಿಸಿ ನಮ್ಮ ದೂರಿದಡೆ
ಆ ಸಿತಾಶ್ವನ ಬಿಲ್ಲನೊದೆದಾ
ಕಾಶಕವ್ವಳಿಸುವ ಶರೌಘಕೆ
ಮೀಸಲರಿಯಾ ಕರ್ಣ ನಿನ್ನೊಡಲೆಂದನಾ ಶಲ್ಯ ॥24॥
೦೨೫ ಅರಳಿದಮ್ಬುಜದೆಸಳಿನಲಿ ಕಡ ...{Loading}...
ಅರಳಿದಂಬುಜದೆಸಳಿನಲಿ ಕಡ
ದುರುವ ಕಂಡಡೆ ಕೂಡುವುದೆ ಮಧು
ಕರನಲಾಯದೊಳೆಲವೊ ಕರ್ಣ ದುರಾತ್ಮ ನಿನ್ನೊಡನೆ
ನರನ ಸರಿದೂಗುವರೆ ತೋರಿದ
ಪರಿಯಲೆಮ್ಮನು ಹೊಳ್ಳುಗಳೆ ಸಾ
ವಿರವನಿದರಲಿ ಖಾತಿಗೊಂಡಡೆ ಪಾರ್ಥನಾಣೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಚೆನ್ನಾಗಿ ಅರಳಿದ ಒಂದು ಕಮಲದ ಎಸಳಿನಲ್ಲಿ ಒಂದು ಕಡಜೀರಿಗೆ ಹುಳುವು ಬಂದು ಕುಳಿತಿದ್ದಾದರೆ, ಅದನ್ನು ಜೇನುನೊಣ ತನ್ನ ಗುಂಪಿನಲ್ಲಿ ಸೇರಿಸಿಕೊಳ್ಳುವದೇ? ಎಲೋ ದುರಾತ್ಮನಾದ ನಿನ್ನೊಡನೆ ಆ ಅರ್ಜುನನನ್ನು ಸರಿಹೋಲಿಸುವುದೇ ನನ್ನನ್ನು ಬೇಕಾದರೆ ನಿನಗೆ ಬಲ್ಲಂತೆ ಆಡಿಕೋ. ನಿರುಪಯೋಗಿ ಎಂದು ತಿರಸ್ಕರಿಸು. ಸಾವಿರ ಬಾರಿ ಹಳಿ, ನಾನು ಸಿಟ್ಟಾದರೆ ಆ ಪಾರ್ಥನ ಆಣೆ” ಎಂದು ಶಲ್ಯ ನುಡಿದ.
ಪದಾರ್ಥ (ಕ.ಗ.ಪ)
ಕಡದುರು -ಕಡಜೀರಿಗೆಹುಳ;
ಮೂಲ ...{Loading}...
ಅರಳಿದಂಬುಜದೆಸಳಿನಲಿ ಕಡ
ದುರುವ ಕಂಡಡೆ ಕೂಡುವುದೆ ಮಧು
ಕರನಲಾಯದೊಳೆಲವೊ ಕರ್ಣ ದುರಾತ್ಮ ನಿನ್ನೊಡನೆ
ನರನ ಸರಿದೂಗುವರೆ ತೋರಿದ
ಪರಿಯಲೆಮ್ಮನು ಹೊಳ್ಳುಗಳೆ ಸಾ
ವಿರವನಿದರಲಿ ಖಾತಿಗೊಂಡಡೆ ಪಾರ್ಥನಾಣೆಂದ ॥25॥
೦೨೬ ಕ್ಷಣದೊಳೀಗಳೆ ಭೀಮ ...{Loading}...
ಕ್ಷಣದೊಳೀಗಳೆ ಭೀಮ ಪಾರ್ಥರ
ರಣದೊಳಗೆ ತೋರುವೆನು ಕದಳಿಯ
ಹಣಿದವೋ ನಿನ್ನಾಳು ಕುದುರೆಯ ಕಾಣಲಹುದೀಗ
ಬಣಗು ನೀ ಭಾರಂಕ ಭಟನೊಳ
ಗಣಕಿಸುವೆ ಫಡ ಪಾಡನರಿಯದೆ
ಸೆಣಸಿದರೆ ನೀ ಶೂರನೆಂಬರೆ ಕರ್ಣ ಕೇಳ್ ಎಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಒಂದು ಕ್ಷಣದಲ್ಲಿ ನಿನಗೆ ನಾನು ಭೀಮ ಹಾಗೂ ಅರ್ಜುನರನ್ನು ಯುದ್ಧಭೂಮಿಯಲ್ಲಿ ತೋರಿಸುತ್ತೇನೆ. ಆಮೇಲೇನು? ಇದೇನು ಬಾಳೆವನ ಕಡಿದಷ್ಟು ಸುಲಭವೆಂದು ತಿಳಿದುಕೊಂಡೆಯಾ? ಈಗ ನಿನ್ನ ಆಳು ಕುದುರೆ ಕಾಣುತ್ತವೆ. ಅವು ಇನ್ನೊಂದು ಕ್ಷಣದಲ್ಲಿ ಕಣ್ಣಾರೆ ಕಣ್ಮರೆಯಾದಾವು. ಕ್ಷುಲ್ಲಕನಾದ ನೀನು ವೀರಭಟನನ್ನು ಅಣಕಿಸುವೆಯಾ? ಛೀ ಅದರ ಮಹತ್ವವನ್ನು ತಿಳಿಯದೆ ಕೇವಲ ಸ್ಪರ್ಧೆಗೆ ನಿಂತರೆ ನಿನಗೆ ಶೂರನೆನ್ನುತ್ತಾರೆಯೇ? ಕರ್ಣ ಕೇಳು” ಎಂದನು.
ಮೂಲ ...{Loading}...
ಕ್ಷಣದೊಳೀಗಳೆ ಭೀಮ ಪಾರ್ಥರ
ರಣದೊಳಗೆ ತೋರುವೆನು ಕದಳಿಯ
ಹಣಿದವೋ ನಿನ್ನಾಳು ಕುದುರೆಯ ಕಾಣಲಹುದೀಗ
ಬಣಗು ನೀ ಭಾರಂಕ ಭಟನೊಳ
ಗಣಕಿಸುವೆ ಫಡ ಪಾಡನರಿಯದೆ
ಸೆಣಸಿದರೆ ನೀ ಶೂರನೆಂಬರೆ ಕರ್ಣ ಕೇಳೆಂದ ॥26॥
೦೨೭ ಜಲಧಿ ಗಹನವೆ ...{Loading}...
ಜಲಧಿ ಗಹನವೆ ನಿನ್ನೊಡನೆ ಹೊ
ಕ್ಕಳವಿಗೊದಗುವೆನೆಂದು ವಾಯಸ
ಕಳಿನುಡಿದು ಹಾರಿತ್ತು ಹಂಸೆಯ ಕೂಡೆ ಗಗನದಲಿ
ಬಳಿಕ ತಲೆಕೆಳಗಾಗಿ ಸಾಗರ
ದೊಳಗೆ ಬಿದ್ದುದು ಹಂಸೆ ತಂದಿಳೆ
ಗಿಳುಹಿತಾ ಪರಿ ಕಾಕಪೌರುಷ ಕರ್ಣ ನೀನೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಮುದ್ರವೇನು ಮಹಾ? ನಾನು ನಿನ್ನೊಡನೆ ಸಮಬಲವಾಗಿ ಹಾರಬಲ್ಲೆ ಎಂದು ಜಂಬದ ಮಾತನಾಡಿ ಕಾಗೆಯು ಹಂಸಗಳ ಕೂಡ ಆಕಾಶದಲ್ಲಿ ಹಾರಿತ್ತು. ಬಳಿಕ (ಕಣ್ ತಿರುಗಿ) ತಲೆಕೆಳಗಾಗಿ ಸಮುದ್ರದಲ್ಲಿ ಬಿದ್ದಿತು. ಅದನ್ನು ಹಂಸಗಳು ಎತ್ತಿ ತಂದು ಭೂಮಿಗೆ ಇಳಿಸಿದವು. ನಿನ್ನದು ಆ ಪರಿಯ ಕಾಕ ಪೌರುಷ. ಕರ್ಣ” ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಜಲಧಿ ಗಹನವೆ ನಿನ್ನೊಡನೆ ಹೊ
ಕ್ಕಳವಿಗೊದಗುವೆನೆಂದು ವಾಯಸ
ಕಳಿನುಡಿದು ಹಾರಿತ್ತು ಹಂಸೆಯ ಕೂಡೆ ಗಗನದಲಿ
ಬಳಿಕ ತಲೆಕೆಳಗಾಗಿ ಸಾಗರ
ದೊಳಗೆ ಬಿದ್ದುದು ಹಂಸೆ ತಂದಿಳೆ
ಗಿಳುಹಿತಾ ಪರಿ ಕಾಕಪೌರುಷ ಕರ್ಣ ನೀನೆಂದ ॥27॥
೦೨೮ ಆಡಲರಿಯದೆ ಬರಿದೆ ...{Loading}...
ಆಡಲರಿಯದೆ ಬರಿದೆ ಸೈನ್ಯವ
ಹೂಡಿ ಹಲಬರ ಕೊಲಿಸಿ ಬಲವ
ಕ್ಕಾಡೆ ಕುರುಪತಿ ಕಟ್ಟುವಡೆಯನೆ ಕಳನ ಮಧ್ಯದಲಿ
ಆಡಿದಾತನು ಗೆಲವನರಸಿಗೆ
ಮಾಡಿದಾತನು ಸಾಕು ಪಾರ್ಥನ
ಕೂಡೆ ವಿಗ್ರಹ ಬೇಡ ತೆಗೆ ಮರಳೆಂದನಾ ಶಲ್ಯ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾತಾಡಿ ಏನು ಪ್ರಯೋಜನ? ಸುಮ್ಮನೆ ಸೈನ್ಯವನ್ನು ಕೂಡಿಸಿ ಅನೇಕರನ್ನು ಕೊಲ್ಲಿಸಿ ಬಳಿಕ ಸೈನ್ಯವು ಸಂಪೂರ್ಣ ನಾಶವಾಗಲು ದುರ್ಯೋಧನನು ಯುದ್ಧದಲ್ಲಿ ಸಿಕ್ಕಿ ಬಂಧನಕ್ಕೆ ಒಳಗಾಗನೇ? ಆಡಿದವನು ಅರಸನಿಗೆ ಗೆಲುವನ್ನು ತಂದುಕೊಡುವನೇ? ಇನ್ನು ನಿನ್ನ ಅಬ್ಬರವನ್ನು ಸಾಕು ಮಾಡು. ಅರ್ಜುನನೊಂದಿಗೆ ನೀನು ಕಾದುವದೇ ಬೇಡ ಸುಮ್ಮನೆ ನಿನ್ನ ಪಾಳಯಕ್ಕೆ ತಿರುಗು” ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಆಡಲರಿಯದೆ ಬರಿದೆ ಸೈನ್ಯವ
ಹೂಡಿ ಹಲಬರ ಕೊಲಿಸಿ ಬಲವ
ಕ್ಕಾಡೆ ಕುರುಪತಿ ಕಟ್ಟುವಡೆಯನೆ ಕಳನ ಮಧ್ಯದಲಿ
ಆಡಿದಾತನು ಗೆಲವನರಸಿಗೆ
ಮಾಡಿದಾತನು ಸಾಕು ಪಾರ್ಥನ
ಕೂಡೆ ವಿಗ್ರಹ ಬೇಡ ತೆಗೆ ಮರಳೆಂದನಾ ಶಲ್ಯ ॥28॥
೦೨೯ ಬರಿಯ ಪಕ್ಷಭ್ರಮೆಯಲಾಡಿದ ...{Loading}...
ಬರಿಯ ಪಕ್ಷಭ್ರಮೆಯಲಾಡಿದ
ಡುರುವ ನುಡಿಯೇ ಶಲ್ಯ ಪಾರ್ಥನ
ನರಿವೆ ನಾನೆನ್ನಂಘವಣೆಯನು ಬಲ್ಲನಾ ಪಾರ್ಥ
ಸರಿಹೃದಯ ನೀ ನಿನ್ನೊಡನೆ ಸರಿ
ಗೊರಲಲಾರೆನು ಭೀಮ ಪಾರ್ಥರ
ನೊರಲಿಸುವೆನೀ ಬಾಣದಲಿ ಮಾದ್ರೇಶ ಕೇಳ್ ಎಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸುಮ್ಮನೆ ಪಕ್ಷಪಾತದಿಂದ ಮಾತನಾಡಿದರೆ ಅದು ದೊಡ್ಡ ಮಾತಾಯಿತೇ? ಶಲ್ಯನೇ, ನಾನು ಪಾರ್ಥನನ್ನು (ಅವನ ಸಾಮಥ್ರ್ಯವನ್ನು ಬಲ್ಲೆ. ಆ ಪಾರ್ಥನು ನನ್ನನ್ನು, ನನ್ನ ಹವಣನ್ನು ಬಲ್ಲನು. ನೀನು ಇಬ್ಬರಿಗೂ ಸರಿ ಹೃದಯ. ನಿನ್ನೊಂದಿಗೆ ನಾನು, ವ್ಯರ್ಥವಾಗಿ ಒದರಲಾರೆನು. ಆದರೆ ಆ ಭೀಮಾರ್ಜುನರಿಬ್ಬರನ್ನೂ ಈ ಬಾಣದಿಂದ ಒದರುವಂತೆ ಮಾಡುವೆನು. ಮಾದ್ರೇಶ ಈ ನನ್ನ ಮಾತನ್ನು ಚೆನ್ನಾಗಿ ಕೇಳು” ಎಂದು ಕರ್ಣನು ಅಂದನು.
ಪದಾರ್ಥ (ಕ.ಗ.ಪ)
ಪಕ್ಷಭ್ರಮೆ-ಪಕ್ಷಪಾತ ; ಉರುವ -ದೊಡ್ಡ
ಮೂಲ ...{Loading}...
ಬರಿಯ ಪಕ್ಷಭ್ರಮೆಯಲಾಡಿದ
ಡುರುವ ನುಡಿಯೇ ಶಲ್ಯ ಪಾರ್ಥನ
ನರಿವೆ ನಾನೆನ್ನಂಘವಣೆಯನು ಬಲ್ಲನಾ ಪಾರ್ಥ
ಸರಿಹೃದಯ ನೀ ನಿನ್ನೊಡನೆ ಸರಿ
ಗೊರಲಲಾರೆನು ಭೀಮ ಪಾರ್ಥರ
ನೊರಲಿಸುವೆನೀ ಬಾಣದಲಿ ಮಾದ್ರೇಶ ಕೇಳೆಂದ ॥29॥
೦೩೦ ಝಳದ ಝಾಡಿಗೆ ...{Loading}...
ಝಳದ ಝಾಡಿಗೆ ಹೆದರಿ ಸೂರ್ಯನ
ನುಳುಹುವನೆ ಕಲಿ ರಾಹು ದಾವಾ
ನಳನ ದಳ್ಳುರಿಗಳುಕುವುದೆ ಜೀಮೂತ ಸಂದೋಹ
ಫಲುಗುಣನ ಕಣೆಗಿಣೆಯ ಪವನಜ
ನಳಬಳವ ಕೈಕೊಂಬ ಕರ್ಣನೆ
ತಿಳಿಯಲಾ ಮಾದ್ರೇಶ ನನ್ನಯ ವ್ಯಥೆಯ ಕೇಳ್ ಎಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಉರಿ ಹಾಗೂ ಅದರ ಪ್ರಕಾಶಕ್ಕೆ ಹೆದರಿ ವೀರನಾದ ರಾಹು ಸೂರ್ಯನನ್ನು ಮುತ್ತುವುದನ್ನು ಬಿಡುವನೇ? ಕಾಡುಗಿಚ್ಚಿನ ಪ್ರಜ್ವಲಿಸುವ ಬೆಂಕಿಗೆ ಮೋಡಗಳು ಹದರುತ್ತವೆಯೆ? ಅರ್ಜುನನ ಬಾಣಕ್ಕೆ , ಭೀಮನ ಪರಾಕ್ರಮಕ್ಕಾಗಲಿ, ಈ ಕರ್ಣನು ಅಂಜತಕ್ಕವನೇ? ಶಲ್ಯ ತಿಳಿದುಕೋ. ನೀನು ನನ್ನ ವ್ಯಥೆಯನ್ನು ಕೇಳು” ಎಂದು ಕಣ್ನು ಹೇಳಿದನು.
ಪದಾರ್ಥ (ಕ.ಗ.ಪ)
ಜೀಮೂತ-ಮೋಡ;
ಮೂಲ ...{Loading}...
ಝಳದ ಝಾಡಿಗೆ ಹೆದರಿ ಸೂರ್ಯನ
ನುಳುಹುವನೆ ಕಲಿ ರಾಹು ದಾವಾ
ನಳನ ದಳ್ಳುರಿಗಳುಕುವುದೆ ಜೀಮೂತ ಸಂದೋಹ
ಫಲುಗುಣನ ಕಣೆಗಿಣೆಯ ಪವನಜ
ನಳಬಳವ ಕೈಕೊಂಬ ಕರ್ಣನೆ
ತಿಳಿಯಲಾ ಮಾದ್ರೇಶ ನನ್ನಯ ವ್ಯಥೆಯ ಕೇಳೆಂದ ॥30॥
೦೩೧ ಪರಶುರಾಮನ ಕಣ್ಡು ...{Loading}...
ಪರಶುರಾಮನ ಕಂಡು ಹೊಕ್ಕೆನು
ಗರುಡಿಯನು ದ್ವಿಜನೆಂದು ಕಲಿತೆನು
ವರಧನುರ್ವೇದವನು ಪಡೆದೆನು ದಿವ್ಯಮಾರ್ಗಣವ
ಸುರಪತಿಯ ಬೇಳಂಬವನು ವಿ
ಸ್ತರಿಸಲೇತಕೆ ವಜ್ರ ಕೀಟೋ
ತ್ಕರವ ಕಳುಹಿದರೆನ್ನ ತೊಡೆಗಳನುಗಿದವವು ಬಳಿಕ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾನು ಪರಶುರಾಮನನ್ನು ಗುರುವೆಂದು ಸ್ವೀಕರಿಸಿ ಆತನ ಬಳಿಗೆ ಧನುರ್ವೇದವನ್ನು ಅಭ್ಯಾಸ ಮಾಡಲು ದ್ವಿಜನೆಂದು ತಿಳಿಸಿ ಅವನ ಗರಡಿಯನ್ನು ಹೊಕ್ಕೆನು. ಅಲ್ಲಿ ಅನೇಕ ದಿನ ಅಭ್ಯಸಿಸಿ ಧನುರ್ವೇದವನ್ನು ಕಲಿತೆನು. ಉತ್ತಮ ಬಾಣಗಳನ್ನು ಪಡೆದೆನು. ಆದರೆ ಮುಂದೆ ಇಂದ್ರನ ಮೋಸವನ್ನು ಏನೆಂದು ಹೇಳಲಿ? ಅವನು ವಜ್ರಕೀಟಗಳನ್ನು ಕಳುಹಿಸಿದ. ಅವು ನನ್ನ ತೊಡೆಗಳನ್ನು ಕೊರೆದವು”
ಪದಾರ್ಥ (ಕ.ಗ.ಪ)
ಬೇಳಂಬ-ಮೋಸ ;
ವಜ್ರಕೀಟ-ಕೊರೆಯುವ ಹುಳು,
ಮೂಲ ...{Loading}...
ಪರಶುರಾಮನ ಕಂಡು ಹೊಕ್ಕೆನು
ಗರುಡಿಯನು ದ್ವಿಜನೆಂದು ಕಲಿತೆನು
ವರಧನುರ್ವೇದವನು ಪಡೆದೆನು ದಿವ್ಯಮಾರ್ಗಣವ
ಸುರಪತಿಯ ಬೇಳಂಬವನು ವಿ
ಸ್ತರಿಸಲೇತಕೆ ವಜ್ರ ಕೀಟೋ
ತ್ಕರವ ಕಳುಹಿದರೆನ್ನ ತೊಡೆಗಳನುಗಿದವವು ಬಳಿಕ ॥31॥
೦೩೨ ಅರುಣಜಲ ಹೊನಲೆದ್ದು ...{Loading}...
ಅರುಣಜಲ ಹೊನಲೆದ್ದು ಮಗ್ಗುಲ
ಲುರವಣಿಸಲಾ ರಾಮ ನಿದ್ರಾ
ಭರದಲಿದ್ದವನೆದ್ದು ನೋಡಿದನೆನಗೆ ಕಡುಮುಳಿದು
ಧರಣಿಸುರನೆಂದೆನ್ನ ಠಕ್ಕಿಸಿ
ಶರವ ಬೇಡಿದೆ ಕಾಳೆಗದೊಳೀ
ಶರ ನಿರರ್ಥಕವಾಗಲೆಂದನು ಶಾಪಹಸ್ತದಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ರಕ್ತದ ಪ್ರವಾಹವು ಮಗ್ಗುಲಲ್ಲಿ ಹೆಚ್ಚಾಗಿ ಹರಿಯಿತು. ಆಗ ನಿದ್ರೆ ತಿಳಿದು ಎಚ್ಚೆತ್ತ ಪರಶುರಾಮನು ಎಲ್ಲವನ್ನೂ ಗ್ರಹಿಸಿದ. ಕೂಡಲೇ ತೀರ ಸಿಟ್ಟಾಗಿ “ನೀನು ಕ್ಷತ್ರಿಯನಿದ್ದೂ ಬ್ರಾಹ್ಮಣನೆಂದು ನನಗೆ ಮೋಸ ಮಾಡಿದೆ. ನನ್ನಲ್ಲಿ ಬಾಣ ಬೇಡಿದೆ. ಆದರೆ ಆ ಬಾಣಗಳು ನಿನಗೆ ಯುದ್ಧಭೂಮಿಯಲ್ಲಿ ನಿರರ್ಥಕವಾಗಲಿ” ಎಂದು ಶಾಪ ಕೊಟ್ಟನು.
ಮೂಲ ...{Loading}...
ಅರುಣಜಲ ಹೊನಲೆದ್ದು ಮಗ್ಗುಲ
ಲುರವಣಿಸಲಾ ರಾಮ ನಿದ್ರಾ
ಭರದಲಿದ್ದವನೆದ್ದು ನೋಡಿದನೆನಗೆ ಕಡುಮುಳಿದು
ಧರಣಿಸುರನೆಂದೆನ್ನ ಠಕ್ಕಿಸಿ
ಶರವ ಬೇಡಿದೆ ಕಾಳೆಗದೊಳೀ
ಶರ ನಿರರ್ಥಕವಾಗಲೆಂದನು ಶಾಪಹಸ್ತದಲಿ ॥32॥
೦೩೩ ಅದರಿನೀ ದಿವ್ಯಾಸ್ತ್ರ ...{Loading}...
ಅದರಿನೀ ದಿವ್ಯಾಸ್ತ್ರ ಕಾಳೆಗ
ಕೊದಗಲರಿಯವು ಶಲ್ಯ ಪಾರ್ಥನ
ಸದೆವುದೇನರಿದಲ್ಲ ಕುರುಪತಿ ಹೀನಪುಣ್ಯನಲೆ
ಇದು ನಿದಾನವು ಬಾಣ ಮತ್ತೆನ
ಗೊದಗುವುವು ಬೇರುಂಟು ನೃಪನ
ಭ್ಯುದಯವುಳ್ಳಡೆ ಗೆಲುವೆನಹಿತರನೆಂದನಾ ಕರ್ಣ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆದ್ದರಿಂದ ಎಷ್ಟು ಉತ್ತಮವಾದ ಅಸ್ತ್ರಗಳಿದ್ದರೂ ಅವು ಯುದ್ಧಭೂಮಿಯಲ್ಲಿ ಕಾದಲು ನಿಂತಾಗ ಕೆಲಸ ಮಾಡಲಾರವು. (ಇಲ್ಲದಿದ್ದರೆ) ಶಲ್ಯ, ಅರ್ಜುನನನ್ನು ಕೊಲ್ಲುವುದು ದೊಡ್ಡ ಮಾತೇನಲ್ಲ. (ಏನು ಮಾಡುವುದು?) ನಮ್ಮ ಕುರುಪತಿಯ (ದೈವ ಕೆಟ್ಟದ್ದು) ಅವನು ಪುಣ್ಯಹೀನನು. ಇದು ನನ್ನ ಸಂಗತಿ. ನನ್ನಲ್ಲಿ ಸಮಯಕ್ಕೆ ಒದಗತಕ್ಕ ಬೇರೆ ಬಾಣಗಳಿವೆ. ಅರಸನ ದೈವದಲ್ಲಿ ಅಭ್ಯುದಯವಾಗುವದು ಬರೆದಿದ್ದರೆ ನಾನು ವೈರಿಗಳನ್ನು ಗೆದ್ದು ತೋರಿಸುತ್ತೇನೆ” ಎಂದು ಕರ್ಣನು ಅಂದನು.
ಮೂಲ ...{Loading}...
ಅದರಿನೀ ದಿವ್ಯಾಸ್ತ್ರ ಕಾಳೆಗ
ಕೊದಗಲರಿಯವು ಶಲ್ಯ ಪಾರ್ಥನ
ಸದೆವುದೇನರಿದಲ್ಲ ಕುರುಪತಿ ಹೀನಪುಣ್ಯನಲೆ
ಇದು ನಿದಾನವು ಬಾಣ ಮತ್ತೆನ
ಗೊದಗುವುವು ಬೇರುಂಟು ನೃಪನ
ಭ್ಯುದಯವುಳ್ಳಡೆ ಗೆಲುವೆನಹಿತರನೆಂದನಾ ಕರ್ಣ ॥33॥
೦೩೪ ಅರಸನಭ್ಯುದಯವನು ನೀನಧಿ ...{Loading}...
ಅರಸನಭ್ಯುದಯವನು ನೀನಧಿ
ಕರಿಸಿ ಗೆಲುವಡೆ ನಿನ್ನ ಹಂಗೇ
ಕರಿಗಳನು ಜಯಿಸುವರು ನಮ್ಮೀ ಛತ್ರಧಾರಕರು
ಸೊರಹದಿರು ಸಾರತ್ತ ತಾಗಿತು
ಪರಶುರಾಮನ ಶಾಪ ಗಡ ಮರು
ಳರಸು ಕೌರವ ನಿನ್ನ ಸಾಕಿದನೆಂದನಾ ಶಲ್ಯ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಸನ ಅಭ್ಯುದಯ ದೈವ ಎಂದು ಅದರ ಅವಲಂಬನೆ ಮಾಡಿ ನೀನು ಗೆಲ್ಲುವುದಾದರೆ ನೀನೇ ಏತಕ್ಕೆ ಬೇಕು? ನಮ್ಮಲ್ಲಿಯ ಕೇವಲ ಛತ್ರ ಹಿಡಿದವರೇ ವೈರಿಗಳನ್ನು ಗೆದ್ದುಬಿಟ್ಟಾರು. ಆದ್ದರಿಂದ ನೀನು ಸುಳ್ಳೇ ಬಾಯಿಗೆ ಬಂದಂತೆ ಮಾತಾಡಬೇಡ. ನಡೆ ಅತ್ತ. ಇನ್ನು ಪರಶುರಾಮನ ಶಾಪತಟ್ಟಿದಂತಾಯಿತು. ನಮ್ಮ ಹುಚ್ಚು ಅರಸ ಸುಳ್ಳೇ ನಿನ್ನನ್ನು ಸಾಕಿದ” ಎಂದು ಶಲ್ಯನು ಕರ್ಣನನ್ನು ಜರಿದು ನುಡಿದ.
ಪದಾರ್ಥ (ಕ.ಗ.ಪ)
ಅಧಿಕರಿಸಿ-ಅವಲಂಬಿಸಿ; ಛತ್ರಧಾರಕರು-ಛತ್ತರಿಗೆ ಹಿಡಿದವರು; ಸೊರಹು-ಬಾಯಿಗೆ ಬಂದಂತೆ ಮಾತಾಡು
ಮೂಲ ...{Loading}...
ಅರಸನಭ್ಯುದಯವನು ನೀನಧಿ
ಕರಿಸಿ ಗೆಲುವಡೆ ನಿನ್ನ ಹಂಗೇ
ಕರಿಗಳನು ಜಯಿಸುವರು ನಮ್ಮೀ ಛತ್ರಧಾರಕರು
ಸೊರಹದಿರು ಸಾರತ್ತ ತಾಗಿತು
ಪರಶುರಾಮನ ಶಾಪ ಗಡ ಮರು
ಳರಸು ಕೌರವ ನಿನ್ನ ಸಾಕಿದನೆಂದನಾ ಶಲ್ಯ ॥34॥
೦೩೫ ಕುಲಕೆ ಸೇರುವ ...{Loading}...
ಕುಲಕೆ ಸೇರುವ ಮಾತು ಮಾತಿನ
ಬಳಿಗೆ ಸೇರುವ ಬಾಹುಬಲ ಭುಜ
ಬಲದ ತೂಕದ ಕೀರ್ತಿ ಕೀರ್ತಿಯ ಪರಿಯ ಪರಲೋಕ
ಇಳೆಯೊಳಗೆ ನಿನಗಲ್ಲದಾರಿಗೆ
ಸಲುವುದೆಲವೋ ಸೂತಸುತ ನಿ
ರ್ಮಳ ಪುರುಷ ನಿನ್ನಂಗ ದೇಶದ ವಿಧಿಯ ಕೇಳ್ ಎಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೀನ ಕುಲಕ್ಕೆ ಸೇರುವ ಮಾತು, ಆ ಮಾತಿಗೆ ತಕ್ಕ ಬಾಹುಬಲ, ಆ ಭುಜಬಲಕ್ಕೆ ತಕ್ಕ ಕೀರ್ತಿ, ಆ ಕೀರ್ತಿಗೆ ತಕ್ಕ ಪರಲೋಕ ಇವು ಈ ಪ್ರಪಂಚದಲ್ಲಿ ನಿನಗೆ ಸಲ್ಲದೆ ಮತ್ತಾರಿಗೆ ಸಲ್ಲಬಲ್ಲವು? ಎಲೋ? ಸೂತನ ಮಗನೇ! ಉತ್ತಮ ಪುರುಷನೆ, ಇದು ಏಕೆ ಹೀಗೆ ಎಂಬ ಬಗ್ಗೆ ಆ ನಿನ್ನ ಅಂಗದೇಶದ ರೀತಿಯನ್ನು ಕೇಳಿಕೋ” ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಕುಲಕೆ ಸೇರುವ ಮಾತು ಮಾತಿನ
ಬಳಿಗೆ ಸೇರುವ ಬಾಹುಬಲ ಭುಜ
ಬಲದ ತೂಕದ ಕೀರ್ತಿ ಕೀರ್ತಿಯ ಪರಿಯ ಪರಲೋಕ
ಇಳೆಯೊಳಗೆ ನಿನಗಲ್ಲದಾರಿಗೆ
ಸಲುವುದೆಲವೋ ಸೂತಸುತ ನಿ
ರ್ಮಳ ಪುರುಷ ನಿನ್ನಂಗ ದೇಶದ ವಿಧಿಯ ಕೇಳೆಂದ ॥35॥
೦೩೬ ವೇದಕರ್ಮವಿರೋಧಿಗಳು ಪರಿ ...{Loading}...
ವೇದಕರ್ಮವಿರೋಧಿಗಳು ಪರಿ
ವಾದಶೀಲರು ವರ್ಣಜಾತಿವಿ
ಭೇದಹೀನರು ಸಾರಸಪ್ತವ್ಯಸನಸಂಗತರು
ಕಾದುವರು ಬೆನ್ನಿನಲಿ ಗೆಲುವರು
ಪಾದದಲಿ ಪರಬಲವನಿರಿವರು
ಬೀದಿಯಲಿ ನಿನ್ನಂಗದೇಶದ ಸಿರಿಯ ಕೇಳ್ ಎಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
36.“ಕರ್ಣಾ ನಿನ್ನ ದೇಶದ ಜನರು ವೇದಕರ್ಮ ವಿರೋಧಿಗಳು, ಕೇವಲ ತರ್ಕಬುದ್ದಿಯವರು. ವರ್ಣ, ಜಾತಿ ಇವುಗಳಲ್ಲಿ ಭೇದವೇ ಇಲ್ಲದವರು. ಯಾವಾಗಲೂ ಏಳು ವ್ಯಸನಗಳಲ್ಲಿ ತೊಡಗಿರುವವರು. ಬೆನ್ನ ಹಿಂದಿನಿಂದ ಕಾದುವವರು. ಇವರು ಪಲಾಯನದಲ್ಲಿ ಮಾತ್ರ ಗೆಲುವು ಸಾಧಿಸಬಲ್ಲರು. ಬೀದಿಯಲ್ಲಿ ಪೌರುಷದಿಂದ ಪರಬಲವನ್ನು ಇರಿಯುವರು. ಇದು ನಿನ್ನ ಅಂಗದೇಶದ ವೈಭವ ತಿಳಿದುಕೋ” ಎಂದ.
ಪದಾರ್ಥ (ಕ.ಗ.ಪ)
ಪರಿವಾದ-ತರ್ಕ;
ಮೂಲ ...{Loading}...
ವೇದಕರ್ಮವಿರೋಧಿಗಳು ಪರಿ
ವಾದಶೀಲರು ವರ್ಣಜಾತಿವಿ
ಭೇದಹೀನರು ಸಾರಸಪ್ತವ್ಯಸನಸಂಗತರು
ಕಾದುವರು ಬೆನ್ನಿನಲಿ ಗೆಲುವರು
ಪಾದದಲಿ ಪರಬಲವನಿರಿವರು
ಬೀದಿಯಲಿ ನಿನ್ನಂಗದೇಶದ ಸಿರಿಯ ಕೇಳೆಂದ ॥36॥
೦೩೭ ನಿನಗೆ ಸಾರಥಿಯಾದ ...{Loading}...
ನಿನಗೆ ಸಾರಥಿಯಾದ ಬಾಹಿರ
ತನವೆ ತಾನದು ಸಾಲದೇ ಬೇ
ರೆನಗೆ ತಲೆಗುತ್ತಾವುದೆನುತವೆ ಬಿಸುಟು ವಾಘೆಯವ
ಮನಕತದ ಮೋರೆಯಲಿ ತತ್ಸ ್ಯಂ
ದನವನಿಳಿಯಲು ಭಂಡ ಫಡ ಹೋ
ಗೆನುತ ಖಡುಗವ ಜಡಿದು ನುಡಿದನು ಭಾನುಸುತ ಮುಳಿದು ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನಗೆ ನಾನು ಸಾರಥಿಯಾದ ಅಯೋಗ್ಯತನವೇ ಸಾಕಾಗದೇ? ಇದಕ್ಕೂ ಹೆಚ್ಚಿನ ನಾಚಿಕೆಗೇಡಿನ ಕೆಲಸವಾವುದು?” ಎನ್ನುತ್ತ ಶಲ್ಯನು ಕುದುರೆಯ ಕಡಿವಾಣವನ್ನು ಬಿಸುಟು, ನೊಂದ ಮೋರೆಯಿಂದ ರಥವನ್ನು ಇಳಿಯಲು (ಕರ್ಣನು) “ಛೀ ! ಭಂಡಾ ಹೋಗು” ಎನ್ನುತ್ತ ಖಡ್ಗವನ್ನು ಹಿರಿದು ಝಳಪಿಸಿ ಶಲ್ಯನನ್ನು ತುಚ್ಛೀಕರಿಸಿ ಸಿಟ್ಟಾಗಿ ನುಡಿದನು.
ಪದಾರ್ಥ (ಕ.ಗ.ಪ)
ತಲೆಗುತ್ತು-ನಾಚಿಕೆಗೇಡುತನ; ಮನಕತ-ವ್ಯಥೆ; ಸ್ಯಂದನ-ರಥ
ಮೂಲ ...{Loading}...
ನಿನಗೆ ಸಾರಥಿಯಾದ ಬಾಹಿರ
ತನವೆ ತಾನದು ಸಾಲದೇ ಬೇ
ರೆನಗೆ ತಲೆಗುತ್ತಾವುದೆನುತವೆ ಬಿಸುಟು ವಾಘೆಯವ
ಮನಕತದ ಮೋರೆಯಲಿ ತತ್ಸ ್ಯಂ
ದನವನಿಳಿಯಲು ಭಂಡ ಫಡ ಹೋ
ಗೆನುತ ಖಡುಗವ ಜಡಿದು ನುಡಿದನು ಭಾನುಸುತ ಮುಳಿದು ॥37॥
೦೩೮ ಹೊಡೆದು ತಲೆಯನು ...{Loading}...
ಹೊಡೆದು ತಲೆಯನು ನಿನ್ನ ರಕುತವ
ಕುಡಿಸುವೆನು ಕೂರಸಿಗೆ ಪವನಜ
ನೊಡಲನೆತ್ತರ ತುಂಬುವೆನು ಪಾರ್ಥನ ಕಪಾಲದಲಿ
ಮಿಡುಕಬಾರದಲೇ ಸುಯೋಧನ
ತೊಡಗಿದಗ್ಗದ ರಾಜಕಾರಿಯ
ಕೆಡುವುದೆಂದೇ ನಿನ್ನನುಳಿಹಿದೆನೆಂದನಾ ಕರ್ಣ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನ್ನ ತಲೆ ಹೊಡೆದು ಈ ನನ್ನ ಹದನವಾದ ಬಾಣಕ್ಕೆ ನಿನ್ನ ರಕ್ತವನ್ನು ಕುಡಿಸುತ್ತೇನೆ. ಭೀಮನ ರಕ್ತವನ್ನು ಅರ್ಜುನನ ತಲೆಬುರುಡೆಯಲ್ಲಿ ತುಂಬುತ್ತೇನೆ. ಸುಯೋಧನನು ಮಿಡುಕಬಾರದಷ್ಟೇ! ಅವನ ಶ್ರೇಷ್ಠವಾದ ರಾಜಕಾರ್ಯ ಕೆಡಬಾರದಷ್ಟೇ! ಅದಕ್ಕೆಂದೇ ನಾನು ನಿನ್ನನ್ನು ಉಳಿಸಿರುವೆ. ಇಲ್ಲವಾದರೆ ಇಷ್ಟು ಹೊತ್ತಿಗೆ ಎಂದೋ ನಿನ್ನ ಪ್ರಾಣ ತೆಗೆಯುತ್ತಿದ್ದೆ” ಎಂದು ಕರ್ಣನು ಹೇಳಿದನು.
ಮೂಲ ...{Loading}...
ಹೊಡೆದು ತಲೆಯನು ನಿನ್ನ ರಕುತವ
ಕುಡಿಸುವೆನು ಕೂರಸಿಗೆ ಪವನಜ
ನೊಡಲನೆತ್ತರ ತುಂಬುವೆನು ಪಾರ್ಥನ ಕಪಾಲದಲಿ
ಮಿಡುಕಬಾರದಲೇ ಸುಯೋಧನ
ತೊಡಗಿದಗ್ಗದ ರಾಜಕಾರಿಯ
ಕೆಡುವುದೆಂದೇ ನಿನ್ನನುಳಿಹಿದೆನೆಂದನಾ ಕರ್ಣ ॥38॥
೦೩೯ ಒಳಗೆ ಗಜಬಜವಾಯ್ತು ...{Loading}...
ಒಳಗೆ ಗಜಬಜವಾಯ್ತು ಶಲ್ಯನ
ಬಲುಭಟರು ಮುಕ್ಕುರುಕಿದರು ಕುರು
ಬಲದ ಮೆಳೆಯಲ್ಲಾಡಿತಲ್ಲಿಯದಲ್ಲಿ ಗುಜುಗುಜಿಸಿ
ಬಳಿಕ ಕೌರವರಾಯ ಹರಿತಂ
ದಿಳಿದು ದಂಡಿಗೆಯಿಂದ ಗುಣದಲಿ
ತಿಳುಹಿ ಶಲ್ಯನ ಬೇಡಿಕೊಂಡನು ರಥಕೆ ಮರಳಿಚಿದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದಲ್ಲಿ ಒಳಗೊಳಗೇ ಗದ್ದಲವಾಯಿತು. ಶಲ್ಯನ ವೀರ ಸೈನಿಕರು (ಇದಿರು ನಿಂತು) ಗುಂಪುಗೂಡಿದರು. ಆಗ ಕುರು ಬಲದ ಹಿಂಡು ಎಲ್ಲಂದರಲ್ಲಿ ಹೊಯ್ದಾಡಿತು. ಗುಜುಗುಜು ಮಾತಾಡತೊಡಗಿತು. ಇದನ್ನು ನೋಡಿದ ಕೌರವರಾಯನು ಕೂಡಲೇ ಓಡಿಬಂದು ಪಲ್ಲಕ್ಕಿಯಿಂದ ಕೆಳಗಿಳಿದು, ಸವಿಮಾತಿನಿಂದ ಶಲ್ಯನಿಗೆ ತಿಳಿಹೇಳಿ ಬೇಡಿಕೊಂಡು ಅವನನ್ನು ಮತ್ತೆ ರಥಕ್ಕೆ ಮರಳಿಸಿದನು.
ಮೂಲ ...{Loading}...
ಒಳಗೆ ಗಜಬಜವಾಯ್ತು ಶಲ್ಯನ
ಬಲುಭಟರು ಮುಕ್ಕುರುಕಿದರು ಕುರು
ಬಲದ ಮೆಳೆಯಲ್ಲಾಡಿತಲ್ಲಿಯದಲ್ಲಿ ಗುಜುಗುಜಿಸಿ
ಬಳಿಕ ಕೌರವರಾಯ ಹರಿತಂ
ದಿಳಿದು ದಂಡಿಗೆಯಿಂದ ಗುಣದಲಿ
ತಿಳುಹಿ ಶಲ್ಯನ ಬೇಡಿಕೊಂಡನು ರಥಕೆ ಮರಳಿಚಿದ ॥39॥
೦೪೦ ನುಡಿದು ಕರ್ಣನ ...{Loading}...
ನುಡಿದು ಕರ್ಣನ ತಿಳುಹಿ ಶಲ್ಯನ
ನೊಡಬಡಿಸಿ ರವಿಸುತನನಂಘ್ರಿಗೆ
ಕೆಡಹಿ ಮಾದ್ರೇಶನ ಮನಸ್ತಾಪವನು ನೆರೆ ಬಿಡಿಸೆ
ಕಡಹದಂಬುಧಿಯಂತೆ ವಾದ್ಯದ
ಗಡಣ ಮೊರೆದವು ಪ್ರಳಯಸಮಯದ
ಸಿಡಿಲವೊಲು ಸೂಳೈಸಿದವು ನಿಸ್ಸಾಳಕೋಟಿಗಳು ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ದುರ್ಯೋಧನನು ಕರ್ಣನಿಗೂ ಸಾಕಷ್ಟು ತಿಳಿಹೇಳಿ ಶಲ್ಯನನ್ನು ಒಪ್ಪಿಸಿ, ರವಿಸುತನನ್ನು ಶಲ್ಯನ ಪಾದಕ್ಕೆ ಬೀಳಿಸಿ ಮಾದ್ರೇಶನ ಮನಸ್ತಾಪವನ್ನು ನಿವಾರಿಸಿದನು. ಆಗ ಸಮುದ್ರವನ್ನೇ ಕಡೆದಂತೆ ವಾದ್ಯಗಳ ಸಮೂಹ ಮೊಳಗಿದವು. ಪ್ರಳಯ ಕಾಲದ ಸಿಡಿಲಿನಂತೆ ಕೋಟಿ ನಿಸ್ಸಾಳಗಳು ಧ್ವನಿ ಮಾಡಿದವು.
ಪದಾರ್ಥ (ಕ.ಗ.ಪ)
ಕಡಹದಂಬುಧಿಯಂತೆ- ಮಥನಗೊಂಡ ಸಮುದ್ರದಂತೆ
ಮೂಲ ...{Loading}...
ನುಡಿದು ಕರ್ಣನ ತಿಳುಹಿ ಶಲ್ಯನ
ನೊಡಬಡಿಸಿ ರವಿಸುತನನಂಘ್ರಿಗೆ
ಕೆಡಹಿ ಮಾದ್ರೇಶನ ಮನಸ್ತಾಪವನು ನೆರೆ ಬಿಡಿಸೆ
ಕಡಹದಂಬುಧಿಯಂತೆ ವಾದ್ಯದ
ಗಡಣ ಮೊರೆದವು ಪ್ರಳಯಸಮಯದ
ಸಿಡಿಲವೊಲು ಸೂಳೈಸಿದವು ನಿಸ್ಸಾಳಕೋಟಿಗಳು ॥40॥