೧೪

೦೦೦ ಸೂ ಸಙ್ಗರದೊಳನ್ದಹಿತಭಟ ...{Loading}...

ಸೂ. ಸಂಗರದೊಳಂದಹಿತಭಟ ಮಾ
ತಂಗ ಕಂಠೀರವನು ರಣದೊಳ
ಭಂಗ ಮುರಿದನು ಫಲುಗುಣನು ರಿಪುರಾಯ ಸೈಂಧವನ

೦೦೧ ಚಿತ್ತವಿಸು ಧೃತರಾಷ್ಟ್ರ ...{Loading}...

ಚಿತ್ತವಿಸು ಧೃತರಾಷ್ಟ್ರ ರವಿಸುತ
ನಿತ್ತ ಮುರಿದನು ಸಾತ್ಯಕಿಯ ರಥ
ದತ್ತ ತಿರುಗಿದನನಿಲಸುತ ಭಾರಣೆಯ ದುಗುಡದಲಿ
ಇತ್ತ ಭೂರಿಶ್ರವನು ಭಾರಿಯ
ಹತ್ತು ಸಾವಿರ ರಥಸಹಿತ ಕೈ
ಗುತ್ತಿದನು ರಣವಿಜಯಲಕ್ಷ್ಮಿಯ ಲಲಿತಕಬರಿಯಲಿ ॥1॥

೦೦೨ ಒನ್ದು ಕಡೆಯಲಿ ...{Loading}...

ಒಂದು ಕಡೆಯಲಿ ಕರ್ಣ ಗುರುಸುತ
ರೊಂದು ದೆಸೆಯಲಿ ಶಲ್ಯ ಶಕುನಿಗ
ಳೊಂದು ದೆಸೆಯಲಿ ಭೂರಿ ಕೃತವರ್ಮಕ ಸುಯೋಧನರು
ಮುಂದುಗೆಡಿಸಿದರರ್ಜುನನನೀ
ಬಂದ ಭೂರಿಶ್ರವನ ನಿಲಿಸುವೆ
ನೆಂದು ಸಾತ್ಯಕಿ ಬಿಟ್ಟನಾತನ ಹೊರೆಗೆ ನಿಜರಥವ ॥2॥

೦೦೩ ಎಲವೆಲವೋ ಭೂರಿಶ್ರವನೆ ...{Loading}...

ಎಲವೆಲವೋ ಭೂರಿಶ್ರವನೆ ಫಡ
ಗೆಲಿದು ಹೋಗದಿರೆಲ್ಲಿ ಹೊಗುವಡೆ
ತಲೆವೆರಸಿ ಹೊಗಲೀಯೆನಿದಿರಾಗೆನುತ ಮೂದಲಿಸೆ
ಎಲವೊ ಸಾತ್ಯಕಿ ಸುಭಟ ಬಾಹಿರ
ಗಳಹದಿರು ದಿಟ ವೀರನೇ ಕೂ
ರಲಗಿನಲಿ ಮಾತಾಡು ಬರಿನುಡಿ ಭಂಡತನವೆಂದ ॥3॥

೦೦೪ ಆದಡಿದ ಕೊಳ್ಳೆನುತ ...{Loading}...

ಆದಡಿದ ಕೊಳ್ಳೆನುತ ಸಾತ್ಯಕಿ
ಕೋದನಭ್ರವನಂಬಿನಲಿ ಬಲು
ಹಾದನೈ ಮಝ ಎನುತ ಕಡಿದನು ಸೋಮದತ್ತಸುತ
ಕಾದುಕೊಳ್ಳೆನುತೆಚ್ಚನಂಬಿನ
ಬೀದಿವರಿ ಬಲುಹಾಯ್ತು ಖತಿಯಲಿ
ಕೈದುಕಾರರು ಮೆಚ್ಚಿಸಿದರಮರಾಸುರಾವಳಿಯ ॥4॥

೦೦೫ ದೂರದಲಿ ನಿನ್ದೊಬ್ಬರೊಬ್ಬರ ...{Loading}...

ದೂರದಲಿ ನಿಂದೊಬ್ಬರೊಬ್ಬರ
ನಾರು ಮಾಡುವುದೇನು ಸಾತ್ಯಕಿ
ಕೂರಸಿಯನುಗಿ ಬಿಸುಟು ಕಳೆ ಕೋದಂಡ ಮಾರ್ಗಣವ
ವೀರನಹಡಿದಿರಾಗೆನುತ ಬಹು
ಭಾರಣದ ಚಮ್ಮಟದ ಖಡುಗದ
ಪಾರಗದ ಪರಿಣತರು ಹೆಣಗಿದರುಬ್ಬಣಾಯತರು ॥5॥

೦೦೬ ನೆಲನ ತಗ್ಗಿನಲುಪ್ಪರದ ...{Loading}...

ನೆಲನ ತಗ್ಗಿನಲುಪ್ಪರದ ಮೆ
ಯ್ಯೊಲವಿನಲಿ ಪಾರಗದ ಬವರಿಯ
ಸುಳುಹಿನಲಿ ಚಮ್ಮಟದ ಪಯವಂಚನೆಯಲುಜ್ಝಟದ
ಬಲಿದ ದಂಡೆಯ ಮಸೆಯ ಬಯಸಿಕೆ
ಲುಳಿಯ ಮೈಗಳ ಲವಣಿಸಾರರು
ಕೊಳುಗಿಡಿಯ ಖಂಡೆಯದ ಖಣಿಕಟಿಲೆಸೆಯೆ ಕಾದಿದರು ॥6॥

೦೦೭ ತಳಿತ ಮಿಞ್ಚಿನ ...{Loading}...

ತಳಿತ ಮಿಂಚಿನ ಮುರಿವುಗಳೊ ತನಿ
ಹೊಳಹುಗಳೊ ಖಂಡೆಯದ ಧಾರೆಯ
ಕೊಳುಗಿಡಿಯೊ ಖದ್ಯೋತರಾಸಿಯೊ ಹೇಳಲೇನದನು
ಖಳಿಕಟಿಲ ಬಿರುವೊಯಿಲೊ ಸಿಡಿಲಿನ
ಸುಳಿಯೊ ಮೈಮಸೆಯರುಣವಾರಿಯೊ
ಮಳೆಗಳಿಲ್ಲದ ಹೊನಲೊ ರಣದಲಿ ಚಿತ್ರವಾಯ್ತೆಂದ ॥7॥

೦೦೮ ಲುಳಿಯ ಪಯಪಾಡುಗಳ ...{Loading}...

ಲುಳಿಯ ಪಯಪಾಡುಗಳ ಬವರಿಯ
ಸುಳಿವುಗಳ ಜಾರುಗಳ ಘಾಯದ
ಕಳವುಗಳ ಕೈಮೆಗಳ ಮೋಡಾಮೋಡಿಯುಬ್ಬಣದ
ಲಲಿತ ಚಿತ್ರದ ಚದುರ ಭಟರ
ವ್ವಳಿಸಿ ಹೊಯ್ದಾಡಿದರು ನೋಟಕ
ರುಲಿದುದಿಬ್ಬರ ಶ್ರಮದ ಶೌರ್ಯದ ವೆಗ್ಗಳೆಯತನಕೆ ॥8॥

೦೦೯ ಮಸೆಯ ಮೈಗಳೊಳೊರೆವುತಿರ್ದುವು ...{Loading}...

ಮಸೆಯ ಮೈಗಳೊಳೊರೆವುತಿರ್ದುವು
ಬಿಸಿರಕುತ ಮೊನೆಗುತ್ತುಗಳ ಕಿ
ಬ್ಬಸುರಿನಲಿ ಜೋಲಿದವು ಕರುಳುಗಳಾಹವದ ಭಟರ
ಮಸಕ ಮಸುಳದು ಮನದ ಖಾತಿಯ
ಮುಸುಡು ಮುರಿಯದು ಬಿಗಿದ ಹುಬ್ಬಿನ
ಬೆಸುಗೆ ಸಡಿಲದು ಭೂಪ ಭೂರಿಶ್ರವನ ಸಾತ್ಯಕಿಯ ॥9॥

೦೧೦ ಬರಬರಲು ರಿಪುಭಟನ ...{Loading}...

ಬರಬರಲು ರಿಪುಭಟನ ಹೊಯ್ಗುಳ
ಧರಧುರಕೆ ಕಲಿ ಸಾತ್ಯಕಿಯ ತರ
ಹರಣೆ ತಗ್ಗಿತು ಮಹಿಮೆ ಮುಗ್ಗಿತು ಮುರಿದುದಗ್ಗಳಿಕೆ
ಉರವಣಿಸಿ ಭೂರಿಶ್ರವನು ರಿಪು
ವರನ ಖಡುಗವ ಮುರಿಯ ಹೊಯ್ದ
ಬ್ಬರಿಸಿ ಕಡೆಗಾಲಿಂದ ಹೊಯ್ದನು ಹಾಯ್ದು ಮುಂದಲೆಗೆ ॥10॥

೦೧೧ ಕೊಡಹಿ ಕುಸುಕಿರಿದಡ್ಡ ...{Loading}...

ಕೊಡಹಿ ಕುಸುಕಿರಿದಡ್ಡ ಬೀಳಿಕಿ
ಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
ಹಿಡಿ ಮಹಾಸ್ತ್ರವ ನಿನ್ನ ಶಿಷ್ಯನ
ಕಡು ನಿರೋಧವ ನೋಡು ಫಲುಗುಣ
ನುಡಿಗೆ ತೆರಹಿಲ್ಲೆಂದು ಮುರರಿಪು ಜರೆದನರ್ಜುನನ ॥11॥

೦೧೨ ದೇವ ನಮ್ಮದು ...{Loading}...

ದೇವ ನಮ್ಮದು ಧರ್ಮಯುದ್ಧವಿ
ದಾವ ಹದನನು ಬೆಸಸಿದಿರಿ ತಲೆ
ಗಾವುದೇನರಿದಲ್ಲ ಮೊದಲಲಿ ನುಡಿದ ಸಮಯವನು
ಭಾವಿಸುವುದೆನೆ ಮುಗುಳುನಗೆಯಲಿ
ರಾವಣಾಂತಕನೆಂದನೆಲೆ ಮರು
ಳಾವ ನಿರುತದ ಧರ್ಮವಿದ್ದುದು ಕೌರವೇಂದ್ರನಲಿ ॥12॥

೦೧೩ ನೆರೆದ ಷಡುರಥರೊಬ್ಬ ...{Loading}...

ನೆರೆದ ಷಡುರಥರೊಬ್ಬ ಹಸುಳೆಯ
ಕೊರಳನರಿವಂದಾವ ಧರ್ಮದ
ನಿರುತವನು ನೀ ಕಂಡೆಯೆನಲುರಿ ಮಸಗಿತುದರದಲಿ
ಸರಳ ಕೆನ್ನೆಗೆ ಸೇದಿದನು ಸಂ
ಗರದ ಭೂರಿಶ್ರವನ ಖಡುಗದ
ಕರವ ಕತ್ತರಿಸಿದನು ತಲೆಗಾಯಿದನು ಸಾತ್ಯಕಿಯ ॥13॥

೦೧೪ ಭರದಲೆತ್ತಿದ ತೋಳು ...{Loading}...

ಭರದಲೆತ್ತಿದ ತೋಳು ಕಡಿವಡೆ
ದುರುಳಿತವನಿಗೆ ಸುರಿವ ರಕುತದ
ಸರಿವಿನಲಿ ನೆರೆ ನನೆದು ಭೂರಿಶ್ರವನು ನಸುನಗುತ
ಮುರಿದು ಪಾರ್ಥನ ನೋಡಿ ವಾಮದ
ಬೆರಳನೊಲೆದನು ಲೇಸು ಲೇಸ
ಬ್ಬರದ ಬಿರುದಿನ ಧರ್ಮನಿಷ್ಠರು ಪಾಂಡುಸುತರೆಂದ ॥14॥

೦೧೫ ಆರು ಕೊಟ್ಟರು ...{Loading}...

ಆರು ಕೊಟ್ಟರು ಶರವನಿದ ಮದ
ನಾರಿಯೋ ನಿಮ್ಮಯ್ಯನಹ ಜಂ
ಭಾರಿಯೋ ಮೇಣ್ ಕೃಷ್ಣ ದ್ರೋಣರೊ ಹೇಳು ಹುಸಿಯದಿರು
ವೀರನಹೆಯೋ ಪಾರ್ಥ ನಿನ್ನವೊ
ಲಾರು ಬಿಲುಗಾರರು ಮಹಾಸ್ತ್ರವಿ
ದಾರು ಕಲಿಸಿದ ವಿದ್ಯವುಪಯೋಗಿಸಿತು ನಿನಗೆಂದ ॥15॥

೦೧೬ ಅರಿದೆನೀ ವಿದ್ಯವನು ...{Loading}...

ಅರಿದೆನೀ ವಿದ್ಯವನು ಕೃಷ್ಣನೊ
ಳರಿದೆಯಾಗಲು ಬೇಕು ಕಪಟದ
ನೆರೆವಣಿಗಗಳನರಿಯರಿಂದ್ರ ದ್ರೋಣ ಶಂಕರರು
ಮರೆ ಮರೆಯಲಿರಿಗಾರನಸುರರ
ಮುರಿದನೆಂಬರು ಕುಹಕತಂತ್ರದ
ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟಿರಕಟೆಂದ ॥16॥

೦೧೭ ಓಡಿ ಕೊನ್ದನು ...{Loading}...

ಓಡಿ ಕೊಂದನು ಕಾಲಯವನನು
ಬೇಡಿ ಕೊಂದನು ಕೈಟಭನ ಕೈ
ಮಾಡಿ ಕೊಲಿಸಿದ ಮಾಗಧನನಭಿಮಾನಗೇಡುಗನ
ಕೂಡಿಕೊಂಡಿರಿ ಮೂರುಲೋಕದ
ಬೀಡರಿಯೆ ಬಾಹಿರನನೀ ಹರಿ
ಯಾಡಿಸಿದವೋಲಾಡಿ ಕೆಟ್ಟಿರಿ ಖಳರು ನೀವೆಂದ ॥17॥

೦೧೮ ಪೊಡವಿಯೊಳು ಯಾದವರು ...{Loading}...

ಪೊಡವಿಯೊಳು ಯಾದವರು ಕ್ಷತ್ರಿಯ
ಗೆಡುಕರದರೊಳು ಹುಟ್ಟಿದನು ಕೊಲೆ
ಗಡಿಗ ಹಾವಿನ ಹುತ್ತದಲಿ ಹಾವ್ಮೆಕ್ಕೆ ಬೆಳೆದಂತೆ
ನಡೆವಳಿಯ ನೋಡಿದರೆ ಲೋಗರ
ಮಡದಿಯರು ತನ್ನವರು ಠಕ್ಕಿನ
ಕಡಲು ಕೃಷ್ಣನ ನಂಬಲಿಹಪರವಿಲ್ಲ ನಿಮಗೆಂದ ॥18॥

೦೧೯ ಎನ್ದಡೆನ್ದನು ಪಾರ್ಥನೆಲವೋ ...{Loading}...

ಎಂದಡೆಂದನು ಪಾರ್ಥನೆಲವೋ
ಮಂದಮತಿ ನೀನೆಂದರಹುದೆ ಮು
ಕುಂದನನು ನಂಬಿದರಿಗಿಹಪರಸೌಖ್ಯಭಯವಿಲ್ಲ
ಇಂದು ನಾವ್ ಮಾಡಿದುದು ಹೊಲ್ಲೆಹ
ವೆಂದೆ ನೀನದನರಿಯೆ ಶಿಷ್ಯನ
ಕುಂದು ಹೆಚ್ಚುಗಳಾರದೆಂಬುದ ಹೇಳು ನೀನೆಂದ ॥19॥

೦೨೦ ಎನಗೆ ಸಾತ್ಯಕಿ ...{Loading}...

ಎನಗೆ ಸಾತ್ಯಕಿ ಕೋಲ ಮಗನಾ
ತನ ವಧೆಯನಾ ಕಾಣಲಾಗದು
ಮನಕೆ ಮತವೇ ನಮ್ಮ ಹರಿಬಕೆ ಬಂದು ಕಾದುವನ
ನಿನಗೆ ಕೊಡುವೆನೆ ನಮ್ಮ ಧರ್ಮವ
ಜನವರಿಯದೇ ಹೋಗು ಹೋಗೆನೆ
ಮನದೊಳಗೆ ನಗುತಿರ್ದನಾ ಭೂರಿಶ್ರವ ಕ್ಷಿತಿಪ ॥20॥

೦೨೧ ಎಲವೊ ಸಾತ್ಯಕಿ ...{Loading}...

ಎಲವೊ ಸಾತ್ಯಕಿ ಬದುಕಿದೈ ನರ
ನುಳುಹಿಕೊಂಡನು ಹೋಗೆನುತ ಹೆಡ
ತಲೆಯನೊದೆದನು ನಿಂದು ಬರಿಕೈ ಮುರಿದ ಗಜದಂತೆ
ಒಲೆವುತೈತಂದೊಂದು ರಣಮಂ
ಡಲದೊಳಗೆ ಪದ್ಮಾಸನವನನು
ಕೊಳಿಸಿ ಯೋಗಾರೂಢನಾದನು ವರಸಮಾಧಿಯಲಿ ॥21॥

೦೨೨ ತರಣಿಮಣ್ಡಲದಲ್ಲಿ ದೃಷ್ಟಿಯ ...{Loading}...

ತರಣಿಮಂಡಲದಲ್ಲಿ ದೃಷ್ಟಿಯ
ನಿರಿಸಿ ಬಹಿರಿಂದ್ರಿಯ ಬಳಕೆಯ
ಮುರಿದು ವೇದಾಂತದ ರಹಸ್ಯದ ವಸ್ತು ತಾನಾಗಿ
ಇರಲು ಸಾತ್ಯಕಿ ಕಂಡು ಖತಿಯು
ಬ್ಬರಿಸಿ ಕಿತ್ತ ಕಠಾರಿಯಲಿ ಹೊ
ಕ್ಕುರವಣಿಸಿ ಭೂರಿಶ್ರವನ ತುರುಬಿಂಗೆ ಲಾಗಿಸಿದ ॥22॥

೦೨೩ ಆಗದಾಗದು ಕಷ್ಟವಿದು ...{Loading}...

ಆಗದಾಗದು ಕಷ್ಟವಿದು ತೆಗೆ
ಬೇಗದೆನಲರ್ಜುನನ ಕೃಷ್ಣನ
ನಾಗಳವ ಕೈಕೊಳ್ಳದರಿದನು ಗೋಣನಾ ನೃಪನ
ಹೋಗು ಹೋಗೆಲೆ ಪಾಪಿ ಸುಕೃತವ
ನೀಗಿ ಹುಟ್ಟಿದೆ ರಾಜಋಷಿಯವ
ನೇಗಿದನು ನಿನಗೆನುತ ಬೈದುದು ನಿಖಿಳಪರಿವಾರ ॥23॥

೦೨೪ ಒಡಲನೊಡೆದಾ ಜ್ಯೋತಿ ...{Loading}...

ಒಡಲನೊಡೆದಾ ಜ್ಯೋತಿ ಗಗನಕೆ
ನಡೆದುದಿತ್ತಲು ಸುರರು ಮತ್ರ್ಯರು
ಸುಡು ಸುಡೆಂದುದು ಸಾತ್ಯಕಿಯ ದುಷ್ಕರ್ಮವಾಸನೆಗೆ
ಹಿಡಿದ ದುಗುಡದಲರ್ಜುನನು ಮನ
ಮಿಡುಕಿದನು ಕುರುನೃಪರು ಶೋಕದ
ಕಡಲೊಳದ್ದರು ಬೈವುತಿದ್ದರು ಕೃಷ್ಣಫಲುಗುಣರ ॥24॥

೦೨೫ ಇತ್ತ ರವಿರಶ್ಮಿಗಳು ...{Loading}...

ಇತ್ತ ರವಿರಶ್ಮಿಗಳು ನೆರೆ ಕೆಂ
ಪೊತ್ತಿದವು ಸೈಂಧವನನೀಗೊ
ತ್ತೊತ್ತೆಯಲಿ ನೆಲೆ ಕಾಣಬಾರದು ಸಾಕು ದುಮ್ಮಾನ
ಇತ್ತ ನಿಜ ಭಾಷೆಗೆ ಪರಾಭವ
ಹತ್ತಿರಾಯಿತು ನರ ನಿದಾನಿಸೆ
ನುತ್ತ ಮುರರಿಪು ರಥವ ಬಿಟ್ಟನು ಕಡೆಯ ಮೋಹರಕೆ ॥25॥

೦೨೬ ಕಾದಿರೈ ಷಡು ...{Loading}...

ಕಾದಿರೈ ಷಡು ರಥರು ನೃಪತಿಗೆ
ಕಾದು ಕೊಡಿರೈ ಸೈಂಧವನನಿದು
ಕೈದುಕಾರರ ಠಾವು ಸಾಹಸಿಗರಿಗೆ ಸಮಯವಿದು
ಮೂದಲೆಗಳಿವು ಮುಟ್ಟುವಡೆ ಮುನಿ
ಸಾದಡೊಳ್ಳಿತು ನಿಪ್ಪಸರದಲಿ
ಕಾದುವಿರಲೈ ಕಾಣಲಹುದೆಂದೊರಲಿದನು ಪಾರ್ಥ ॥26॥

೦೨೭ ಜರಿದುದೀ ಬಲರಾಸಿ ...{Loading}...

ಜರಿದುದೀ ಬಲರಾಸಿ ಗಾಳಿಯ
ಹೊರಳಿಗೊಡ್ಡಿದ ಹೊಟ್ಟು ಹಾರುವು
ದರಿದೆ ಗಿರಿಗಳು ನೆಲನ ಬಿಟ್ಟುದನೇನ ಹೇಳುವೆನು
ಗುರುತನುಜ ಕೃಪ ಕರ್ಣ ಮಾದ್ರೇ
ಶ್ವರ ಸುಯೋಧನ ಚಿತ್ರಸೇನರು
ಮುರಿದು ತರಹರಿಸಿದರು ಸೂಚೀವ್ಯೂಹದಗ್ರದಲಿ ॥27॥

೦೨೮ ಹರಿಯ ಬೊಬ್ಬೆ ...{Loading}...

ಹರಿಯ ಬೊಬ್ಬೆ ರಥಾಶ್ವದಬ್ಬರ
ನರನ ಬಿಲುಟಂಕಾರ ತೇರಿನ
ಧರಧುರದ ಚೀತ್ಕಾರ ಹನುಮನ ಸಿಂಹನಿರ್ಘೋಷ
ಅರಿಬಲವ ತಿವಿದುದು ಚತುರ್ಬಲ
ಹೊರಳಿಯೊಡೆದುದು ಸುಭಟರೆದೆ ಜ
ರ್ಝರಿತವಾದುದು ಪಾರ್ಥ ಹೊಕ್ಕನು ಸೈಂಧವನ ದಳವ ॥28॥

೦೨೯ ಅಳವಿಗೊಡಲಿ ಮಹಾರಥರು ...{Loading}...

ಅಳವಿಗೊಡಲಿ ಮಹಾರಥರು ಕೈ
ಕೊಳಲಿ ಸೈಂಧವ ನೃಪನನೊಂದರೆ
ಘಳಿಗೆ ಕಾಯ್ದರೆ ನಾವು ನೆರೆ ಕೊಂದವರು ಫಲುಗುಣನ
ಹೊಳಹುಗಳಿದುದು ಕಾಲವಿನ್ನರೆ
ಘಳಿಗೆ ಸೈರಿಸಿ ಶಿವ ಶಿವಾಯೆಂ
ದೊಳಗೊಳಗೆ ಮೂದಲಿಸುತಿರ್ದರು ಭಟರು ತಮ್ಮೊಳಗೆ ॥29॥

೦೩೦ ಧನುವನೊದರಿಸಿ ಸಕಲ ...{Loading}...

ಧನುವನೊದರಿಸಿ ಸಕಲ ಸುಭಟರು
ಮನವ ಬಲಿದೊಗ್ಗಾಗಿ ಸರಳಿನ
ಜಿನುಗುವಳೆಯಲಿ ನಾದಿದರು ನಾರಾಯಣಾರ್ಜುನರ
ಅನಿಬರಂಬನು ಕಡಿದು ಗುರುನಂ
ದನನ ಕರ್ಣನ ಕೃಪನ ದುರಿಯೋ
ಧನನ ಮೆಯ್ಯಲಿ ಮೆತ್ತಿದನು ಮುಮ್ಮೊನೆಯ ಬೋಳೆಗಳ ॥30॥

೦೩೧ ಫಡಫಡರ್ಜುನ ಹೋಗು ...{Loading}...

ಫಡಫಡರ್ಜುನ ಹೋಗು ಹೋಗಳ
ವಡದು ಸೈಂಧವನಳಿವು ಭಾಷೆಯ
ನಡಸಬಲ್ಲರೆ ಬೇಗ ಬೆಳಗಿಸು ಹವ್ಯವಾಹನನ
ಕಡಲ ಮಧ್ಯದ ಗಿರಿಗೆ ಸುರಪತಿ
ಕಡುಗಿ ಮಾಡುವುದೇನೆನುತ ಕೈ
ಗಡಿಯ ಬಿಲ್ಲಾಳುಗಳು ಬಿಗಿದರು ಸರಳಲಂಬರವ ॥31॥

೦೩೨ ದ್ಯುಮಣಿಯೊದೆದರೆ ...{Loading}...

ದ್ಯುಮಣಿಯೊದೆದರೆ ತರಹರಿಸುವುದೆ
ತಿಮಿರ ರಾಜನ ದೇಹವೀ ವಿ
ಕ್ರಮ ದರಿದ್ರರಿಗಳುಕಿದರೆ ಬಳಿಕವ ಧನಂಜಯನೆ
ಸಮತಳಿಸಿ ಶರವಳೆಯ ಕರೆದು
ದ್ಭ ್ರಮಿ ಮಹಾರಥ ಭಟರ ವಿಜಯದ
ಮಮತೆಗಳ ಮಾಣಿಸಿದನಂದಮಳಾಸ್ತ್ರಬೋಧೆಯಲಿ ॥32॥

೦೩೩ ನೊನ್ದು ಮರಳದೆ ...{Loading}...

ನೊಂದು ಮರಳದೆ ಮಸಗಿ ಸೂರ್ಯನ
ನಂದನನು ತಾಗಿದನು ಗುರುಸುತ
ಮುಂದುವರಿದನು ತಲೆ ಹರಿದರೆನ್ನಟ್ಟೆ ಕಲಿಯೆನುತ
ಇಂದಿನಲಿ ಮಹನವಮಿಯ ತಲೆಗಳಿ
ಗೆಂದು ಕವಿದರು ಸಕಲ ಭಟರರ
ವಿಂದಸಖ ಹೊದ್ದಿದನು ಮೆಲ್ಲನೆ ಪಶ್ಚಿಮಾಂಬುಧಿಯ ॥33॥

೦೩೪ ಮೇಲೆ ಬಿದ್ದುದು ...{Loading}...

ಮೇಲೆ ಬಿದ್ದುದು ಸೇನೆ ಸವೆಯದು
ನಾಳೆ ಪರಿಯಂತರ ಘಳಿಗೆಗಿನ
ನಾಳುವನು ಜಲಧಿಯಲಿ ಕಾಣೆನು ವೈರಿ ಸೈಂಧವನ
ಹೇಳಿ ಫಲವೇನಿನ್ನು ವಹ್ನಿ
ಜ್ವಾಲೆ ಕೊಳ್ಳಲಿ ದೇಹವನು ಸಾ
ಕೇಳು ಮುರಹರ ತೇರ ತಿರುಹಿನ್ನೆಂದನಾ ಪಾರ್ಥ ॥34॥

೦೩೫ ಸಲಿಸಬೇಹುದು ಭಕುತ ...{Loading}...

ಸಲಿಸಬೇಹುದು ಭಕುತ ಮಾಡಿದ
ಛಲದ ಭಾಷೆಯನೆನುತ ರವಿಮಂ
ಡಲಕೆ ಮರೆಯೊಡ್ಡಿದನು ಮುರರಿಪು ವರಸುದರ್ಶನವ
ಕಳನೊಳಗೆ ಕತ್ತಲಿಸಿತಹಿತನ
ಕೊಲೆಗೆ ಕಾವಳ ಕವಿದವೋಲರೆ
ಘಳಿಗೆಯಲಿ ಸುಮ್ಮಾನ ಮಸಗಿತು ಸಕಲ ಕುರುಬಲಕೆ ॥35॥

೦೩೬ ಸೆರಗ ಬೀಸಿದರಾರಿದರು ...{Loading}...

ಸೆರಗ ಬೀಸಿದರಾರಿದರು ಬೊ
ಬ್ಬಿರಿದರುರು ಗಂಭೀರಭೇರಿಯ
ಬಿರುದನಿಗಳುಬ್ಬರಿಸಿದವು ಗಬ್ಬರಿಸಿದವು ನಭವ
ತೆರಹ ಕೊಡು ಕೊಡು ಭಾಷೆಕಾರನು
ಮೆರೆದು ಹೋಗಲಿ ವಹ್ನಿ ಕುಂಡದೊ
ಳೊರಗುವುದ ನೋಡುವೆವೆನುತ ತನಿಗೆದರಿತರಿಸೇನೆ ॥36॥

೦೩೭ ಹೊಲಬುದಪ್ಪಿದ ತಳಪಟದ ...{Loading}...

ಹೊಲಬುದಪ್ಪಿದ ತಳಪಟದ ಹೆ
ಬ್ಬುಲಿಯವೊಲು ನಿನ್ನಾತ ಸಿಲುಕಿದ
ನಿಲುಕಿ ನೋಡಿದನೆಲ್ಲಿ ತೋರರ್ಜುನನನೆನಗೆನುತ
ಉಲಿಯೆ ಸೈಂಧವನಿತ್ತ ಪಾರ್ಥನ
ಮುಳಿದು ಜರೆದನು ಕೃಷ್ಣನಹಿತನ
ತಲೆಗೆ ಹರ ಹಿಡಿವಂಬ ತೊಡು ತೊಡು ಬೇಗ ಮಾಡೆಂದ ॥37॥

೦೩೮ ದೇವ ರವಿಯಸ್ತಮಿಸಿದನು ...{Loading}...

ದೇವ ರವಿಯಸ್ತಮಿಸಿದನು ನೀ
ವಾವುದುಚಿತವ ಕಂಡಿರೆನೆ ನಿನ
ಗಾವ ಭಯ ಬೇಡಾಡಬಾರದು ತೊಡು ಮಹಾಶರವ
ಈ ವಿರೋಧಿಯ ಕೆಡಹು ಸೂರ್ಯನ
ನಾವು ತೋರಿಸಿ ಕೊಡುವೆವೆನೆ ಗಾಂ
ಡೀವದಲಿ ಹೂಡಿದನು ಫಲುಗುಣ ಪಾಶುಪತಶರವ ॥38॥

೦೩೯ ತೆಗೆಯೆ ಜಗ ...{Loading}...

ತೆಗೆಯೆ ಜಗ ಕಂಪಿಸಿತು ತಾರೆಗ
ಳೊಗಡಿಸಿತು ನಭ ಜಲಧಿ ರತ್ನಾ
ಳಿಗಳನೋಕರಿಸಿತು ಕುಲಾದ್ರಿಗಳೊಲೆದವೆಡಬಲಕೆ
ದಿಗಿಭತತಿ ನಡುನಡುಗೆ ತಳ ವಾ
ಸುಗಿ ಫಣಾಳಿಯ ಸೆಳೆಯೆ ಬಲುಸರ
ಳುಗಿದು ದಳ್ಳುರಿದಿರುಳ ಕಾರಿತು ಬೆಸಸು ಬೆಸಸೆನುತ ॥39॥

೦೪೦ ಬಲಿದು ಮಣ್ಡಿಯನೂರಿ ...{Loading}...

ಬಲಿದು ಮಂಡಿಯನೂರಿ ಕೆನ್ನೆಗೆ
ಸೆಳೆದು ಮುಷ್ಟಿಯ ಪಾರ್ಥನಹಿತನ
ತಲೆಯನೆಚ್ಚನು ಗೋಣ ಕಡಿದುದು ಪಾಶುಪತ ಬಾಣ
ಹೊಳೆವ ಮಕುಟದ ವದನ ಗಗನಾಂ
ಗಳಕೆ ಚಿಮ್ಮಿತು ರಕುತಧಾರಾ
ವಳಿಯ ರಿಂಗಣವಾಯ್ತು ಮುಂಡದ ತಲೆಯ ಮಧ್ಯದಲಿ ॥40॥

೦೪೧ ಬೀಳು ಬೀಳಭಿಮನ್ಯುವಿನ ...{Loading}...

ಬೀಳು ಬೀಳಭಿಮನ್ಯುವಿನ ವಧೆ
ಬಾಳಲೀವುದೆ ನಿನ್ನನೆನುತು
ಬ್ಬಾಳುತನದಲಿ ಪಾರ್ಥ ಬೊಬ್ಬಿಡೆ ಕೃಷ್ಣ ಖಾತಿಯಲಿ
ಖೂಳ ಕೇಳಿಳೆಗವನ ತಲೆಯನು
ಬೀಳಿಕಿದನ ಕಪಾಲ ಸಾವಿರ
ಹೋಳಹುದು ತೊಡು ಪಾಪಿ ಬೇಗದಲಂಬ ಕಳುಹೆಂದ ॥41॥

೦೪೨ ಇವನ ತನ್ದೆಯ ...{Loading}...

ಇವನ ತಂದೆಯ ಶಾಪವಾವವ
ನಿವನ ತಲೆಯನು ನೆಲಕೆ ಕೆಡಹುವ
ನವನ ಮಸ್ತಕ ಬಿರಿದು ಬೀಳಲಿಯೆಂದನೀ ತಲೆಯ
ಇವನ ತಂದೆಯ ಕೈಯೊಳಗೆ ಬೀ
ಳುವವುಪಾಯವ ಮಾಡು ನೀನೆನೆ
ದಿವಿಜಪತಿಸುತನಾ ಮಹಾಸ್ತ್ರಕೆ ಬೆಸಸಿದನು ಹದನ ॥42॥

೦೪೩ ತುಡುಕಿ ಖಣ್ಡವ ...{Loading}...

ತುಡುಕಿ ಖಂಡವ ಕಚ್ಚಿ ನಭದಲಿ
ಗಿಡಿಗ ಹಾಯ್ವಂದದಲಿ ತಲೆಯನು
ಹಿಡಿದು ಹಾಯ್ದುದು ಬಾಣ ವೃದ್ಧ ಕ್ಷತ್ರನಿದ್ದೆಡೆಗೆ
ಕುಡಿತೆಯೆರಡರೊಳಘ್ರ್ಯಜಲವನು
ಹಿಡಿದು ಹಾಯ್ಕುವ ಸಮಯದಲಿ ತಲೆ
ನಡುವೆ ಬಿದ್ದುದು ಅಘ್ರ್ಯಜಲ ನರರಕ್ತಮಯವಾಗೆ ॥43॥

೦೪೪ ಏನಿದದ್ಭುತವೆನುತ ತಲೆಯನು ...{Loading}...

ಏನಿದದ್ಭುತವೆನುತ ತಲೆಯನು
ತಾನೆ ಕೊಡಹಿದನಂಜಲಿಯನದ
ನೇನನೆಂಬೆನು ಕೃಷ್ಣರಾಯನ ಮಂತ್ರಶಕ್ತಿಯನು
ಆ ನರೇಂದ್ರನ ತಲೆ ಸಹಸ್ರವಿ
ಧಾನದಲಿ ಬಿರಿದುದು ಸುಯೋಧನ
ಸೇನೆ ಹರಿದುದು ಜರಿದುದರಿಭಟಧೈರ್ಯಗಿರಿನಿಕರ ॥44॥

೦೪೫ ನಡುಗಿ ಸಙ್ಗರ ...{Loading}...

ನಡುಗಿ ಸಂಗರ ಭೀತಿಯಲಿ ಬೆಂ
ಗೊಡುವ ನಾಯಕವಾಡಿಗಳ ಪಂ
ಗಡವ ನೋಡುತ ಮರೆಯ ಚಕ್ರವ ತೆಗೆದನಸುರಾರಿ
ಪಡುವಲಿಳಿಯದ ರವಿಯ ಬಯ್ವುತ
ನಡೆದನಾ ಕುರುರಾಯನಿತ್ತಲು
ಹಿಡಿದ ಚೌರಿಗಳಾಡಿದವು ಪಾಂಡವರ ಸೇನೆಯಲಿ ॥45॥

೦೪೬ ದೈವ ಪೌರುಷದೊಳಗೆ ...{Loading}...

ದೈವ ಪೌರುಷದೊಳಗೆ ಶಿವ ಶಿವ
ದೈವ ಬಲವೇ ಬಲವಲಾ ನಿ
ರ್ದೈವರಂಗೈತಳಕೆ ಬಂದರೆ ಪರುಷ ಪಾಷಾಣ
ದೈವದೂರರು ಧರ್ಮಹೀನರು
ನೆಯ್ವ ನೆಯ್ಗೆಗಳೆನುತ ಮಿಗೆ ಬಿಸು
ಸುಯ್ವುತಿರ್ದರು ಕರ್ಣ ಕೃಪ ಗುರುನಂದನಾದಿಗಳು ॥46॥

೦೪೭ ಕಡಲ ಮೊರಹಿನ ...{Loading}...

ಕಡಲ ಮೊರಹಿನ ಲಹರಿ ಲಘುವೀ
ಪಡೆಯನೊಡೆಯಲು ಯುಗಸಹಸ್ರದೊ
ಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ
ಒಡೆದು ಹೋಯಿತ್ತೊಡ್ಡು ಸೈಂಧವ
ನೊಡಲು ನೀಗಿತು ತಲೆಯನಕಟಾ
ತೊಡಗಿದೆವು ದೈವದಲಿ ಕಲಹವನೆಂದನಾ ಕರ್ಣ ॥47॥

೦೪೮ ಮುನಿದು ಮಾಡುವುದೇನು ...{Loading}...

ಮುನಿದು ಮಾಡುವುದೇನು ಕೃಷ್ಣನ
ನೆನಹು ಘನ ನಮ್ಮಸುವ ನಾವೀ
ಜನಪತಿಗೆ ಮಾರಿದೆವು ನಮಗೀ ಚಿಂತೆಯೇಕೆನುತ
ಇನಸುತಾದಿಗಳಿದ್ದರಿತ್ತಲು
ಮನದ ಹರುಷದ ಹರಹಿನಲಿ ಪಾ
ರ್ಥನ ರಥವ ತಿರುಹಿದನು ಗದುಗಿನ ವೀರನಾರಯಣ ॥48॥

+೧೪ ...{Loading}...