೦೦೦ ಸೂ ಗಣ್ಡುಗಲಿ ...{Loading}...
ಸೂ. ಗಂಡುಗಲಿ ಕೋದಂಡ ರುದ್ರನ
ಕಂಡು ವಿರಥನ ಮಾಡಿದನು ಮಾ
ರ್ತಾಂಡತನಯನ ಗೆಲಿದು ರಣದಲಿ ನೊಂದನಾ ಭೀಮ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಗಂಡುಗಲಿಯೂ, ಬಿಲ್ವಿದ್ಯೆಯಲ್ಲಿ ರುದ್ರಾವತಾರಿಯೂ ಆದ ದ್ರೋಣನನ್ನು ಕಂಡು ಆತನನ್ನು ರಥ ಹೀನನನ್ನಾಗಿ ಮಾಡಿ, ಸೂರ್ಯಪುತ್ರನಾದ ಕರ್ಣನನ್ನು ಗೆದ್ದು ರಣರಂಗದಲ್ಲಿ ಆ ಭೀಮನು ನೊಂದನು.
ಮೂಲ ...{Loading}...
ಸೂ. ಗಂಡುಗಲಿ ಕೋದಂಡ ರುದ್ರನ
ಕಂಡು ವಿರಥನ ಮಾಡಿದನು ಮಾ
ರ್ತಾಂಡತನಯನ ಗೆಲಿದು ರಣದಲಿ ನೊಂದನಾ ಭೀಮ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕಡುಗೋಪದಲಿ ಕಳಶಜ
ನಾಳ ಮೇಳೈಸಿದನು ನಿಜಮೋಹರವ ಹಿಂದಿಕ್ಕಿ
ಕಾಳೆಗದೊಳನಿಲಜನನರಸುತ
ಲೋಲುಪತಿ ಮಿಗೆ ಬರುತ ಭೀಮನ
ಕೋಲ ಕೋಳಾಹಳವನೀಕ್ಷಿಸುತಲ್ಲಿಗೈತಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ರಾಜನೇ ಕೇಳು, ಅತ್ಯಂತ ಕೋಪದಿಂದ ದ್ರೋಣನು ಶೂರಸೈನಿಕರನ್ನು ಕೂಡಿಸಿ, ಸೇನೆಯನ್ನು ಹಿಂದಿರಿಸಿಕೊಂಡು, ಯುದ್ಧದಲ್ಲಿ ವಾಯುಸುತನಾದ ಭೀಮನನ್ನು ಹುಡುಕುತ್ತ ಬರುತ್ತಿದ್ದಾಗ ಭೀಮನ ಬಾಣಗಳ ಕೋಲಾಹಲವನ್ನು ನೋಡಿ ಅಲ್ಲಿಗೆ Éಬಂದನು.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕಡುಗೋಪದಲಿ ಕಳಶಜ
ನಾಳ ಮೇಳೈಸಿದನು ನಿಜಮೋಹರವ ಹಿಂದಿಕ್ಕಿ
ಕಾಳೆಗದೊಳನಿಲಜನನರಸುತ
ಲೋಲುಪತಿ ಮಿಗೆ ಬರುತ ಭೀಮನ
ಕೋಲ ಕೋಳಾಹಳವನೀಕ್ಷಿಸುತಲ್ಲಿಗೈತಂದ ॥1॥
೦೦೨ ಇದೆ ಗದಾದಣ್ಡದ ...{Loading}...
ಇದೆ ಗದಾದಂಡದ ಹತಿಗೆ ಮು
ಗ್ಗಿದ ಮತಂಗ ವರೂಥಚಯವಿ
ಲ್ಲಿದೆ ಶರಾಳಿಯಲತಿರಥರ ಗೋನಾಳಿಗಡಿತವಿದೆ
ಇದೆ ರಥದ ಪದಘಾತದಲಿ ಹೆಣ
ಮೆದೆಯ ಪಾಯದಳೌಘ ಭೀಮನ
ಕದನ ಪಥವಿದೆಯೆನುತ ನಗುತೈತಂದನಾ ದ್ರೋಣ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಣಭೂಮಿಯಲ್ಲಿ ಬಿದ್ದಿದ್ದ ಹೆಣಗಳನ್ನು ಗುರುತಿಸಿ, ಇದೇ ಗದಾದಂಡದ ಹೊಡೆತಕ್ಕೆ ಮುಗ್ಗುರಿಸಿದ ಆನೆ, ರಥಗಳ ಸಮೂಹವು ಇಲ್ಲಿದೆ. ಬಾಣಗಳ ಸಮೂಹದಲ್ಲಿ ಅತಿರಥರ ಕೊರಳಿನ ನಾಳವನ್ನು ಸೀಳಿರುವುದು ಇಲ್ಲಿ ಕಂಡುಬರುತ್ತಿದೆ. ಇಲ್ಲಿ ರಥದ ಚಕ್ರದ ಹೊಡೆತದಲ್ಲಿ ಪದಾತಿ ಸೈನ್ಯ ಹೆಣಗಳ ರಾಸಿಯಾಗಿದೆ. ಇದೇ ಭೀಮನ ಕದನ ಪಥವೆಂದು ದ್ರೋಣನು ನಗುತ್ತ ಬಂದನು.
ಪದಾರ್ಥ (ಕ.ಗ.ಪ)
ಹತಿ-ಹೊಡೆತ,
ಮುಗ್ಗು-ಕುಸಿ,
ಮತಂಗ-ಆನೆ,
ಗೋನಾಳಿಗಡಿತ-ಕೊರಳಿನ ನಾಳವನ್ನು ಕತ್ತರಿಸಿರುವುದು,
ಮೂಲ ...{Loading}...
ಇದೆ ಗದಾದಂಡದ ಹತಿಗೆ ಮು
ಗ್ಗಿದ ಮತಂಗ ವರೂಥಚಯವಿ
ಲ್ಲಿದೆ ಶರಾಳಿಯಲತಿರಥರ ಗೋನಾಳಿಗಡಿತವಿದೆ
ಇದೆ ರಥದ ಪದಘಾತದಲಿ ಹೆಣ
ಮೆದೆಯ ಪಾಯದಳೌಘ ಭೀಮನ
ಕದನ ಪಥವಿದೆಯೆನುತ ನಗುತೈತಂದನಾ ದ್ರೋಣ ॥2॥
೦೦೩ ಕಡಿದ ಖಡೆಯದ ...{Loading}...
ಕಡಿದ ಖಡೆಯದ ಕುಸುರಿಗಳ ಚಿನ
ಕಡಿಯ ಹೀರಾವಳಿಯ ಮುಕುಟದ
ಸಡಿಲಿದನುಪಮ ರತುನರಾಜಿಯ ಮುರಿದ ಕಂಕಣದ
ಕಡಿಕು ಪಸರಿಸೆ ಕೌರವಾನುಜ
ರಡೆಗೆಡೆದ ರಣ ಕಾಂಚನಾದ್ರಿಯ
ಸಿಡಿಲ ಕಾಳೆಗದಂತೆ ಮೆರೆದಿರೆ ಕಂಡನಾ ದ್ರೋಣ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಯಗೆಲಸ ಮಾಡಿದ ಕಡಗಗಳ ಸಣ್ಣ ಚೂರುಗಳು ಬಿದ್ದಿವೆ. ರಾಜರ ಬಂಗಾರದ ಕಿರೀಟದ ಅನುಪಮವಾದ ರತ್ನಗಳ ರಾಶಿ ಮತ್ತು ಇತರ ಉಪಮಾತೀತವಾದ ರತ್ನಗಳ ಸಮೂಹವು ಸಡಿಲವಾಗಿ ನೆಲದ ಮೇಲೆ ಉದುರಿ ಬಿದ್ದಿವೆ. ಬಂಗಾರದ ಬಳೆಗಳು ಮುರಿದು ಅವೆಲ್ಲವೂ ಚೂರುಚೂರಾಗಿ ಹರಡಿವೆ. ಕೌರವನ ಸೋದರರು ಸತ್ತು ಕೆಳಗೆ ಬಿದ್ದಿದ್ದ ಆ ರಣಭೂಮಿಯನ್ನು ನೋಡಿದ ದ್ರೋಣರಿಗೆ ಆ ಯುದ್ಧವು ಇಂದ್ರನು ವಜ್ರಾಯುಧದಿಂದ ಕಾಂಚನಗಿರಿಯ ಮೇಲೆ ನಡೆಸಿದ ಸಿಡಿಲ ಕಾಳಗದಂತೆ ಕಂಡಿತು.
ಪದಾರ್ಥ (ಕ.ಗ.ಪ)
ಖಡೆಯ-ಕಡೆಯ, ಕಡಗ, ಚಿನಕಡಿ-ಚೂರು ಚೂರಾಗಿ ಕಡಿ, ಹೀರಾವಳಿ-ವಜ್ರರಾಶಿ,
ಎಡೆಗೆಡೆದ-ಕೆಳಗೆಬಿದ್ದ,
ಮೂಲ ...{Loading}...
ಕಡಿದ ಖಡೆಯದ ಕುಸುರಿಗಳ ಚಿನ
ಕಡಿಯ ಹೀರಾವಳಿಯ ಮುಕುಟದ
ಸಡಿಲಿದನುಪಮ ರತುನರಾಜಿಯ ಮುರಿದ ಕಂಕಣದ
ಕಡಿಕು ಪಸರಿಸೆ ಕೌರವಾನುಜ
ರಡೆಗೆಡೆದ ರಣ ಕಾಂಚನಾದ್ರಿಯ
ಸಿಡಿಲ ಕಾಳೆಗದಂತೆ ಮೆರೆದಿರೆ ಕಂಡನಾ ದ್ರೋಣ ॥3॥
೦೦೪ ಉಡಿದ ಬೆಳುಗೊಡೆಯಬುಜ ...{Loading}...
ಉಡಿದ ಬೆಳುಗೊಡೆಯಬುಜ ಪಂಕ್ತಿಯ
ಸಿಡಿದ ಚಮರಿಯ ಹಾವಸೆಯ ಕೆಸ
ರಿಡುವ ರಕುತಾಂಬುಗಳ ನರವಿನ ನಾಳದೇಳಿಗೆಯ
ಕಡುಮದದ ಕಾಡಾನೆ ಹೊಕ್ಕೊಡ
ನೊಡನೆ ಕಲಕಿದ ಕೊಳನವೊಲು ಭಯ
ವಡಸುತಿದೆ ಪವನಜನ ರಣಪಥವೆನುತ ಬರುತಿರ್ದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುರಿದುಬಿದ್ದ ಬಿಳಿಯ ಕೊಡೆ (ಶ್ವೇತಚ್ಛತ್ರಿ)ಗಳೇ ತಾವರೆಯ ಸಾಲು, ಹಾರಿ ಬಿದ್ದ ಚಾಮರಗಳೇ ಪಾಚಿ. ಶತ್ರು ಶರೀರದಿಂದ ಹೊರಚೆಲ್ಲಿದ ರಕ್ತವೇ ಕೆಸರು, ಶತ್ರುಸೈನಿಕರ ನರಗಳೇ ಕಮಲದ ನಳಗಳು -ಹೀಗೆ ರಣಭೂಮಿ ಒಂದು ಸರೋವರವಾಗಿ ಕಂಡು, ಆ ಸರೋವರ ಭೀಮನೆಂಬ ಮದಿಸಿದ ಕಾಡಾನೆ ಪ್ರವೇಶಿಸಲಾಗಿ ಕಲಕಿಹೋದಂತೆ ದ್ರೋಣನಿಗೆ ಕಂಡಿತು. ಈ ಭೀಮನ ಯುದ್ಧಪಥ ಭಯವುಂಟು ಮಾಡುತ್ತಿದೆ ಎನ್ನುತ್ತ ದ್ರೋಣನು ಬರುತ್ತಿದ್ದನು.
ಮೂಲ ...{Loading}...
ಉಡಿದ ಬೆಳುಗೊಡೆಯಬುಜ ಪಂಕ್ತಿಯ
ಸಿಡಿದ ಚಮರಿಯ ಹಾವಸೆಯ ಕೆಸ
ರಿಡುವ ರಕುತಾಂಬುಗಳ ನರವಿನ ನಾಳದೇಳಿಗೆಯ
ಕಡುಮದದ ಕಾಡಾನೆ ಹೊಕ್ಕೊಡ
ನೊಡನೆ ಕಲಕಿದ ಕೊಳನವೊಲು ಭಯ
ವಡಸುತಿದೆ ಪವನಜನ ರಣಪಥವೆನುತ ಬರುತಿರ್ದ ॥4॥
೦೦೫ ಧುರದೊಳಗೆ ಗುರು ...{Loading}...
ಧುರದೊಳಗೆ ಗುರು ವಹಿಲ ಮಿಗಲೈ
ತರಲು ದೂರಕೆ ಕೇಳಲಾದುದು
ಹರಿಸುತನ ಹರಿನಾದ ತೇಜಿಯ ರಥದ ರೌದ್ರರವ
ತಿರುವಿನಬ್ಬರವಂಬಿನುಬ್ಬರ
ಧುರರಭಸ ಕಲ್ಪಾಂತ ಘನ ಸಾ
ಗರದ ಮೊರೆವಾಳಾಪ ಭೀಮನ ಸಮರದಾಟೋಪ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧಭೂಮಿಯಲ್ಲಿ ಗುರುವು ಹೆಚ್ಚು ವೇಗವಾಗಿ ಬರಲು, ದೂರದಿಂದಲೇ ಭೀಮಸೇನನ ಸಿಂಹನಾದ, ರಥದ ಕುದುರೆಗಳ ರೌದ್ರಧ್ವನಿ ಕೇಳಿಸಿತು. ರಥಗಳ ಬಿಲ್ಲಿನ ಹೆದೆಯ ಧ್ವನಿಯ ಆರ್ಭಟ, ಬಾಣಗಳ ಆಧಿಕ್ಯ, ಅತಿಶಯದ ರಭಸಗಳಿಂದ ಕೂಡಿದ ಭೀಮನ ಯುದ್ಧದ ಸಡಗರವು ದ್ರೋಣನಿಗೆ ಪ್ರಳಯಕಾಲದ ಭೋರ್ಗರೆವ ಸಾಗರದ ಮೊರೆತದಂತೆ ತೋರಿತು.
ಪದಾರ್ಥ (ಕ.ಗ.ಪ)
ಹರಿ -ವಾಯು, ಹರಿ-ಸಿಂಹ,
ಮೂಲ ...{Loading}...
ಧುರದೊಳಗೆ ಗುರು ವಹಿಲ ಮಿಗಲೈ
ತರಲು ದೂರಕೆ ಕೇಳಲಾದುದು
ಹರಿಸುತನ ಹರಿನಾದ ತೇಜಿಯ ರಥದ ರೌದ್ರರವ
ತಿರುವಿನಬ್ಬರವಂಬಿನುಬ್ಬರ
ಧುರರಭಸ ಕಲ್ಪಾಂತ ಘನ ಸಾ
ಗರದ ಮೊರೆವಾಳಾಪ ಭೀಮನ ಸಮರದಾಟೋಪ ॥5॥
೦೦೬ ಅತ್ತಲದೆ ಪವನಜನ ...{Loading}...
ಅತ್ತಲದೆ ಪವನಜನ ಕಳಕಳ
ದತ್ತ ಹರಿಸೈ ರಥವನೆನುತು
ದ್ವೃತ್ತ ಭೀಮನನೈದಿದನು ಚಾಪಾಗಮಾಚಾರ್ಯ
ಇತ್ತಲಿತ್ತಲು ಭೀಮ ಬಣಗುಗ
ಳತ್ತಲೇಕೈ ವೀರ ಶೌರ್ಯೋ
ನ್ಮತ್ತನಹೆಯಿದಿರಾಗೆನುತ ಕೆಣಕಿದನು ಪವನಜನ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅದೆ, ಆ ಕಡೆ ಭೀಮನ ಗದ್ದಲ ನಡೆಯುತ್ತಿರುವತ್ತ ರಥವನ್ನು ಓಡಿಸು” ಎನ್ನುತ್ತಾ, ಶಸ್ತ್ರ ವಿದ್ಯಾ ಗುರು ದ್ರೋಣರು ಕೊಬ್ಬಿದ ಭೀಮನನ್ನು ಸಮೀಪಿಸಿದರು. “ಈ ಕಡೆ ಬಾ ಭೀಮ. ಅಲ್ಪರ ಬಳಿ ಏಕೆ ಹೋಗುವೆ ? ವೀರನೇ, ಶೌರ್ಯೋನ್ಮತ್ತನಾಗಿದ್ದೀಯೆ ನನಗೆ ಎದುರಾಗು " ಎನ್ನುತ್ತಾ ವಾಯುಸುತನಾದ ಭೀಮನನ್ನು ಕೆಣಕಿzರು.
ಪದಾರ್ಥ (ಕ.ಗ.ಪ)
ಉದ್ವೃತ್ತ-ಕೊಬ್ಬಿದ,
ಮೂಲ ...{Loading}...
ಅತ್ತಲದೆ ಪವನಜನ ಕಳಕಳ
ದತ್ತ ಹರಿಸೈ ರಥವನೆನುತು
ದ್ವೃತ್ತ ಭೀಮನನೈದಿದನು ಚಾಪಾಗಮಾಚಾರ್ಯ
ಇತ್ತಲಿತ್ತಲು ಭೀಮ ಬಣಗುಗ
ಳತ್ತಲೇಕೈ ವೀರ ಶೌರ್ಯೋ
ನ್ಮತ್ತನಹೆಯಿದಿರಾಗೆನುತ ಕೆಣಕಿದನು ಪವನಜನ ॥6॥
೦೦೭ ತಿರುಗಿನೋಡಿದನಸ್ತ್ರ ಶಿಕ್ಷಾ ...{Loading}...
ತಿರುಗಿನೋಡಿದನಸ್ತ್ರ ಶಿಕ್ಷಾ
ಗುರುವ ಕಂಡನು ಮನದೊಳಾತನ
ಚರಣಕಭಿನಮಿಸಿದನು ನುಡಿದನು ವಿನಯಪರನಾಗಿ
ಗುರುವೆ ಬಿಜಯಂಗೈದ ಹದನನು
ಕರುಣಿಸೈ ಕಾಳೆಗದ ಭಾರಿಯ
ಭರವಸದಲಾನಿದ್ದೆನೆಂದನು ನಗುತ ಕಲಿಭೀಮ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿರುಗಿ ನೋಡಿದ ಭೀಮನು ಅಸ್ತ್ರ ಶಿಕ್ಷಾ ಗುರು ದ್ರೋಣರನ್ನು ಕಂಡನು. ಮನದಲ್ಲೇ ಆತನ ಚರಣಕ್ಕೆ ವಂದಿಸಿದನು. ವಿನಯ ಪರನಾಗಿ ಹೀಗೆಂದು ನುಡಿದನು. " ಗುರುವೆ… ಇಲ್ಲಿಗೆ ಆಗಮಿಸಿದ ಕಾರಣವನ್ನು ಕರುಣಿಸಿ ಹೇಳಿ. ಯುದ್ಧದಲ್ಲಿ ನಾನು ಅತ್ಯಂತ ಹೆಚ್ಚಿನ ಹುರುಪಿನಲ್ಲಿದ್ದೆ " ಎಂದು ಕಲಿಭೀಮನು ನಗುತ್ತ ಹೇಳಿದನು.
ಮೂಲ ...{Loading}...
ತಿರುಗಿನೋಡಿದನಸ್ತ್ರ ಶಿಕ್ಷಾ
ಗುರುವ ಕಂಡನು ಮನದೊಳಾತನ
ಚರಣಕಭಿನಮಿಸಿದನು ನುಡಿದನು ವಿನಯಪರನಾಗಿ
ಗುರುವೆ ಬಿಜಯಂಗೈದ ಹದನನು
ಕರುಣಿಸೈ ಕಾಳೆಗದ ಭಾರಿಯ
ಭರವಸದಲಾನಿದ್ದೆನೆಂದನು ನಗುತ ಕಲಿಭೀಮ ॥7॥
೦೦೮ ಅನಿಲಸುತ ಫಡ ...{Loading}...
ಅನಿಲಸುತ ಫಡ ಮರುಳು ಠಕ್ಕಿನ
ವಿನಯವೇ ನಮ್ಮೊಡನೆ ಕೌರವ
ನನುಜರನು ಕೆಡೆಹೊಯ್ದ ಗರ್ವದ ಗಿರಿಯನಿಳಿಯೆನುತ
ಕನಲಿ ಕಿಡಿ ಸುರಿವಂಬ ತೆಗೆದು
ಬ್ಬಿನಲಿ ಕವಿದೆಸುತಿರೆ ವೃಕೋದರ
ನನಿತು ಶರವನು ಕಡಿದು ಬಿನ್ನಹಮಾಡಿದನು ನಗುತ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭಲೆ, ವಾಯುಪುತ್ರನೇ, ಛೇ, ಹಿಂತಿರುಗು ನಮ್ಮೊಡನೆ ಮೋಸದ ವಿನಯವೇ ? ಕೌರವ ಸೋದರರನ್ನು ಸಾಯುವಂತೆ ಹೊಡೆದ ಗರ್ವದ ಬೆಟ್ಟದಿಂದ ಇಳಿದು ಬಾ,” ಎನ್ನುತ್ತಾ ಕೋಪಿಸಿ, ಬೆಂಕಿಯ ಕಿಡಿ ಕಾರುವ ಬಾಣವನ್ನು ತೆಗೆದು ಆವೇಶದಿಂದ ಪ್ರಯೋಗಿಸಲು ಭೀಮನು ಅಷ್ಟೂ ಬಾಣಗಳನ್ನು ಕಡಿದು ನಗುತ್ತ ವಿಜ್ಞಾಪನೆ ಮಾಡಿಕೊಂಡನು.
ಮೂಲ ...{Loading}...
ಅನಿಲಸುತ ಫಡ ಮರುಳು ಠಕ್ಕಿನ
ವಿನಯವೇ ನಮ್ಮೊಡನೆ ಕೌರವ
ನನುಜರನು ಕೆಡೆಹೊಯ್ದ ಗರ್ವದ ಗಿರಿಯನಿಳಿಯೆನುತ
ಕನಲಿ ಕಿಡಿ ಸುರಿವಂಬ ತೆಗೆದು
ಬ್ಬಿನಲಿ ಕವಿದೆಸುತಿರೆ ವೃಕೋದರ
ನನಿತು ಶರವನು ಕಡಿದು ಬಿನ್ನಹಮಾಡಿದನು ನಗುತ ॥8॥
೦೦೯ ಗುರುವೆಮಗೆ ನೀವ್ ...{Loading}...
ಗುರುವೆಮಗೆ ನೀವ್ ನಿಮಗೆ ನಾವ್ ಡಿಂ
ಗರಿಗರೆಮ್ಮಿತ್ತಂಡವಿದರಲಿ
ವರ ವಿನೀತರು ಕೆಲರು ಕೆಲಬರು ಧೂರ್ತರಾಗಿಹರು
ನರ ಯುಧಿಷ್ಠಿರ ನಕುಳ ಸಹದೇ
ವರವೊಲೆನಗಿಲ್ಲತಿ ಭಕುತಿ ಸಂ
ಗರದೊಳೆನ್ನಯ ದಂಡಿ ಹೊಸಪರಿ ಬೇಡ ಮರಳೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀವು ನಮಗೆ ಗುರು. ನಿಮಗೆ ನಾವು ಸೇವಕರು. ನಮ್ಮ ಎರಡೂ ಪಕ್ಷಗಳಲ್ಲಿ ಕೆಲವರು ವಿನಮ್ರರು ಕೆಲವರು ದುಷ್ಟರೂ ಇದ್ದಾರೆ. ಅರ್ಜುನ, ಯುಧಿಷ್ಠಿರ, ನಕುಲ, ಸಹದೇವರಂತೆ ನನ್ನಲ್ಲಿ ಅತಿ ಭಕ್ತಿ ಇಲ್ಲ. ಯುದ್ಧದಲ್ಲಿ ನನ್ನ ರೀತಿ ಹೊಸ ಬಗೆಯದು. ನೀವು ಬರಬೇಡಿ ಹಿಂತಿರುಗಿ” ಎಂದನು.
ಪದಾರ್ಥ (ಕ.ಗ.ಪ)
ದಂಡಿ-ರೀತಿ
ಮೂಲ ...{Loading}...
ಗುರುವೆಮಗೆ ನೀವ್ ನಿಮಗೆ ನಾವ್ ಡಿಂ
ಗರಿಗರೆಮ್ಮಿತ್ತಂಡವಿದರಲಿ
ವರ ವಿನೀತರು ಕೆಲರು ಕೆಲಬರು ಧೂರ್ತರಾಗಿಹರು
ನರ ಯುಧಿಷ್ಠಿರ ನಕುಳ ಸಹದೇ
ವರವೊಲೆನಗಿಲ್ಲತಿ ಭಕುತಿ ಸಂ
ಗರದೊಳೆನ್ನಯ ದಂಡಿ ಹೊಸಪರಿ ಬೇಡ ಮರಳೆಂದ ॥9॥
೦೧೦ ಎಲವೊ ದುಷ್ಟಗ್ರಹದ ...{Loading}...
ಎಲವೊ ದುಷ್ಟಗ್ರಹದ ಬಾಧೆಯ
ನಿಲಿಸಲರಿಯರೆ ಮಂತ್ರವಾದಿಗ
ಳಳಿಬಲವನಂಜಿಸಿದ ಕೊಬ್ಬುಗಳಕಟ ನಮ್ಮೊಡನೆ
ಗೆಲುವ ಕೊಡುವೆನು ವಾಸಿಯೇ ಮ
ಕ್ಕಳುಗಳೊಡನೆಂದಿರ್ದಡತಿ ವೆ
ಗ್ಗಳನು ನೀನೆಂದಂಬ ಸುರಿದನು ಪವನಜನ ಮೇಲೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲವೋ…. ದುಷ್ಟಗ್ರಹಗಳ ಬಾಧೆಯನ್ನು (ಕಾಟವನ್ನು) ತಡೆಹಿಡಿಯಲು ಮಂತ್ರವಾದಿಗಳಿಗೆ ತಿಳಿದಿಲ್ಲವೇ ? ಸಾಮಾನ್ಯ ಸೇನೆಯನ್ನು ಹೆದರಿಸಿದ ಕೊಬ್ಬು ಅಯ್ಯೋ… ನಮ್ಮೊಡನೆ ಸರಿಯೇ ? ಗೆಲುವನ್ನು ಬಿಟ್ಟು ಕೊಡೋಣ. ಮಕ್ಕಳೊಡನೆ ಸ್ಪರ್ಧೆಯೇ? ಎನ್ನಬೇಕೆಂದರೆ ನೀನು ಅತಿ ಶ್ರೇಷ್ಠ ಪುರುಷ” ಎಂದು ಭೀಮನ ಮೇಲೆ ಬಾಣಗಳನ್ನು ಸುರಿದನು.
ಪದಾರ್ಥ (ಕ.ಗ.ಪ)
ವಾಸಿ-ಸ್ಪರ್ಧೆ, ಮೇಲಾಟ
ಮೂಲ ...{Loading}...
ಎಲವೊ ದುಷ್ಟಗ್ರಹದ ಬಾಧೆಯ
ನಿಲಿಸಲರಿಯರೆ ಮಂತ್ರವಾದಿಗ
ಳಳಿಬಲವನಂಜಿಸಿದ ಕೊಬ್ಬುಗಳಕಟ ನಮ್ಮೊಡನೆ
ಗೆಲುವ ಕೊಡುವೆನು ವಾಸಿಯೇ ಮ
ಕ್ಕಳುಗಳೊಡನೆಂದಿರ್ದಡತಿ ವೆ
ಗ್ಗಳನು ನೀನೆಂದಂಬ ಸುರಿದನು ಪವನಜನ ಮೇಲೆ ॥10॥
೦೧೧ ನಿಲ್ಲು ಕಳಶಜ ...{Loading}...
ನಿಲ್ಲು ಕಳಶಜ ತಪ್ಪಿದವ ನಾ
ನಲ್ಲ ಫಲುಗುಣ ಸಾತ್ಯಕಿಯವೋ
ಲಿಲ್ಲ ತನ್ನಲಿ ವಿನಯ ಹಾರದಿರಿಲ್ಲಿ ಮನ್ನಣೆಯ
ಬಿಲ್ಲ ಗುರುವಿನ ಬಿಂಕ ಬಯಲಾ
ಯ್ತಿಲ್ಲಿಯೆಂಬಪಕೀರ್ತಿ ಹೊರುವುದು
ಬಲ್ಲೆನೆನುತುರವಣಿಸಿದನು ಮುಂಗೈಯ ಮರೆವಿಡಿದು ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನೇ ನಿಲ್ಲು, ತಪ್ಪಿದವ ನಾನಲ್ಲ. ಅರ್ಜುನ, ಸಾತ್ಯಕಿಯರ ಹಾಗೆ ತನ್ನಲ್ಲಿ ವಿನಯ ಇಲ್ಲ. ಇಲ್ಲಿ ನನ್ನಿಂದ ಗೌರವವನ್ನು ನಿರೀಕ್ಷಿಸದಿರಿ. ಬಿಲ್ಲ ಗುರುವಿನ ಬಿಂಕ, ಅಹಂಕಾರ ಇಲ್ಲಿ ಪ್ರಕಟವಾಯಿತು ಎಂಬ ಅಪಕೀರ್ತಿಯನ್ನು ಹೊರಬೇಕಾಗುತ್ತದೆ ಎಂಬುದನ್ನು ತಿಳಿದಿದ್ದೇನೆ ಎನ್ನುತ್ತ ದ್ರೋಣನ ಬಾಣಗಳಿಗೆ ಮುಂಗೈಯನ್ನು ಮರೆಯಾಗಿ ಹಿಡಿದು ಸಂಭ್ರಮಿಸಿದನು.
ಪದಾರ್ಥ (ಕ.ಗ.ಪ)
ಹಾರು-ನಿರೀಕ್ಷಿಸು,
ಮೂಲ ...{Loading}...
ನಿಲ್ಲು ಕಳಶಜ ತಪ್ಪಿದವ ನಾ
ನಲ್ಲ ಫಲುಗುಣ ಸಾತ್ಯಕಿಯವೋ
ಲಿಲ್ಲ ತನ್ನಲಿ ವಿನಯ ಹಾರದಿರಿಲ್ಲಿ ಮನ್ನಣೆಯ
ಬಿಲ್ಲ ಗುರುವಿನ ಬಿಂಕ ಬಯಲಾ
ಯ್ತಿಲ್ಲಿಯೆಂಬಪಕೀರ್ತಿ ಹೊರುವುದು
ಬಲ್ಲೆನೆನುತುರವಣಿಸಿದನು ಮುಂಗೈಯ ಮರೆವಿಡಿದು ॥11॥
೦೧೨ ಮಳೆಗೆ ತೆರಳದೆ ...{Loading}...
ಮಳೆಗೆ ತೆರಳದೆ ಕೋಡ ಬಾಗಿಸಿ
ಕಲಿವೃಷಭ ಹೊಗುವಂತೆ ದ್ರೋಣನ
ಬಲುಸರಳ ಸರಿವಳೆಗೆ ದಂಡೆಯನೊಡ್ಡಿ ದಳವುಳಿಸಿ
ಅಳವಿದಪ್ಪದೆ ಕೆಲದ ಖಡ್ಗವ
ಸೆಳೆದು ಗುರುವಪ್ಪಳಿಸಿ ಕೈಯಲಿ
ಕಳೆದು ಕಟ್ಟಳವಿಯಲಿ ಹೊಕ್ಕನು ಭೀಮ ಬೊಬ್ಬಿರಿದು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲಿಷ್ಠವಾದ ಎತ್ತು ಮಳೆಗೆ ಹೆದರಿ ಹಿಂತಿರುಗದೆ ಕೋಡುಗಳನ್ನು ಬಾಗಿಸಿ ಮುನ್ನುಗ್ಗುವಂತೆ ದ್ರೋಣನ ಬಾಣಗಳ ಸುರಿಮಳೆಗೆ ದಂಡೆಹೊಡೆದು ಅವುಗಳಿಂದ ತಪ್ಪಿಸಿಕೊಂಡು, ಗೊಂದಲವಾದರೂ, ಶಕ್ತಿಗುಂದದೆ ಒರೆಯ ಖಡ್ಗವನ್ನು ಸೆಳೆದು ಬಲವಾಗಿ ಹೊಡೆದು ಹೆಚ್ಚು ಸಾಹಸದಿಂದ ಆರ್ಭಟಿಸುತ್ತ ಭೀಮನು ಮುನ್ನುಗ್ಗಿದನು.
ಪದಾರ್ಥ (ಕ.ಗ.ಪ)
ದಂಡೆ-ಯುದ್ಧದ ಪಟ್ಟು, ಅಳವಿದಪ್ಪದೆ- ಶಕ್ತಿ ಗುಂದದೆ, ಕಟ್ಟಳವಿ-ಹೆಚ್ಚು ಸಾಹಸ.
ಗುರುವಪ್ಪಳಿಸಿ - ಬಲವಾಗಿ ಹೊಡೆದು
ಮೂಲ ...{Loading}...
ಮಳೆಗೆ ತೆರಳದೆ ಕೋಡ ಬಾಗಿಸಿ
ಕಲಿವೃಷಭ ಹೊಗುವಂತೆ ದ್ರೋಣನ
ಬಲುಸರಳ ಸರಿವಳೆಗೆ ದಂಡೆಯನೊಡ್ಡಿ ದಳವುಳಿಸಿ
ಅಳವಿದಪ್ಪದೆ ಕೆಲದ ಖಡ್ಗವ
ಸೆಳೆದು ಗುರುವಪ್ಪಳಿಸಿ ಕೈಯಲಿ
ಕಳೆದು ಕಟ್ಟಳವಿಯಲಿ ಹೊಕ್ಕನು ಭೀಮ ಬೊಬ್ಬಿರಿದು ॥12॥
೦೧೩ ಗಜರಿನಲಿ ಗಿರಿ ...{Loading}...
ಗಜರಿನಲಿ ಗಿರಿ ಬಿರಿಯೆ ದಿವಿಜ
ವ್ರಜ ಭಯಂಗೊಳೆ ಹೂಣೆ ಹೊಕ್ಕರಿ
ವಿಜಯನಿಟ್ಟಣಿಸಿದರೆ ಹಿಮ್ಮೆಟ್ಟಿದರೆ ಬಳಿಸಲಿಸಿ
ಸುಜನ ವಂದ್ಯನ ರಥವ ಹಿಡಿದನಿ
ಲಜನು ಮುಂಗೈಗೊಂಡು ಪಡೆ ಗಜ
ಬಜಿಸೆ ನಭಕೀಡಾಡಿದನು ಹಿಡಿ ಬುಗುರಿಯಂದದಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗರ್ಜನೆಗೆ ಬೆಟ್ಟ ಬಿರಿಯಲಾಗಿ, ದೇವ ಸಮೂಹ ಭಯಗೊಳ್ಳಲು, ಹಟತೊಟ್ಟು ಮುನ್ನುಗ್ಗಿ ಶತ್ರು ವಿಜಯಿಯಾದ ಭೀಮನು ಆಕ್ರಮಣ ಮಾಡಲು ದ್ರೋಣನು ಹಿಮ್ಮೆಟ್ಟಿದನು. ಭೀಮನು ಸುಜನ ವಂದ್ಯನಾದ ಅವನನ್ನು ಸಮೀಪಿಸಿ ಸೇನೆ ಗಜಬಜಿಸುತ್ತಿರುವಾಗಲೇ ಅವನ ರಥವನ್ನು ಮುಂಗೈಯಿಂದ ಹಿಡಿದು ಅದನ್ನು ಬುಗುರಿಯಂತೆ ಆಕಾಶದತ್ತ ಎಸೆದನು.
ಮೂಲ ...{Loading}...
ಗಜರಿನಲಿ ಗಿರಿ ಬಿರಿಯೆ ದಿವಿಜ
ವ್ರಜ ಭಯಂಗೊಳೆ ಹೂಣೆ ಹೊಕ್ಕರಿ
ವಿಜಯನಿಟ್ಟಣಿಸಿದರೆ ಹಿಮ್ಮೆಟ್ಟಿದರೆ ಬಳಿಸಲಿಸಿ
ಸುಜನ ವಂದ್ಯನ ರಥವ ಹಿಡಿದನಿ
ಲಜನು ಮುಂಗೈಗೊಂಡು ಪಡೆ ಗಜ
ಬಜಿಸೆ ನಭಕೀಡಾಡಿದನು ಹಿಡಿ ಬುಗುರಿಯಂದದಲಿ ॥13॥
೦೧೪ ಗಗನದಲಿ ರಥ ...{Loading}...
ಗಗನದಲಿ ರಥ ಯೋಜನಾಂತಕೆ
ಚಿಗಿದು ಧರಣಿಯ ಮೇಲೆ ಬೀಳಲು
ನಗುತ ಕರಣವ ಹಾಯ್ಕಿ ಮಂಡಿಯೊಳಿರ್ದನಾ ದ್ರೋಣ
ಜಗದೊಳಾವಭ್ಯಾಸಿಯೋ ತಾ
ಳಿಗೆಯ ತಲ್ಲಣದೊಳಗೆ ನೆಗಹಿನ
ಸುಗಮ ಸಾಹಸನರರೆ ಮಝ ಭಾಪೆಂದುದುಭಯ ಬಲ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥವು ಯೋಜನಗಳಷ್ಟು ದೂರ ಆಕಾಶದಲ್ಲಿ ನೆಗೆದು ಭೂಮಿಯ ಮೇಲೆ ಬೀಳಲು ನಗುತ್ತ ಆ ಕೂಡಲೇ ಚತುರತೆಯಿಂದ ದ್ರೋಣನು ಮಂಡಿಯನ್ನೂರಿ ಕುಳಿತನು. “ಭೀಮನು ಜಗತ್ತಿನಲ್ಲಿ ಯಾವ ರೀತಿಯ ಅಭ್ಯಾಸವನ್ನು ಮಾಡಿದ್ದಾನೋ, ತಿಳಿಯದು. ಮಾತಿನಿಂದ ತಲ್ಲಣವನ್ನುಂಟು ಮಾಡುವವನೂ, ಉತ್ಸಾಹಿಯಾದ ಸುಗಮ ಸಾಹಸನೂ ಆಗಿದ್ದಾನೆ , ಅರರೆ…. ಭಲೆ” ಎಂದು ಎರಡೂ ಪಕ್ಷದ ಸೇನೆಗಳು ಪ್ರಶಂಸೆ ಮಾಡಿದವು.
ಪದಾರ್ಥ (ಕ.ಗ.ಪ)
ಕರಣನ ಹಾಯ್ಕು-ಚತುರತೆ , ತಾಳಿಗೆಯ ತಲ್ಲಣ-ಮಾತಿನ ಆರ್ಭಟ, ನಾಲಗೆಯ ಗರ್ಜನೆ, ನೆಗಹು-ಉತ್ಸಾಹ, ಸಡಗರ.
ಮೂಲ ...{Loading}...
ಗಗನದಲಿ ರಥ ಯೋಜನಾಂತಕೆ
ಚಿಗಿದು ಧರಣಿಯ ಮೇಲೆ ಬೀಳಲು
ನಗುತ ಕರಣವ ಹಾಯ್ಕಿ ಮಂಡಿಯೊಳಿರ್ದನಾ ದ್ರೋಣ
ಜಗದೊಳಾವಭ್ಯಾಸಿಯೋ ತಾ
ಳಿಗೆಯ ತಲ್ಲಣದೊಳಗೆ ನೆಗಹಿನ
ಸುಗಮ ಸಾಹಸನರರೆ ಮಝ ಭಾಪೆಂದುದುಭಯ ಬಲ ॥14॥
೦೧೫ ತೂಗಿ ಕೆಡೆದುದು ...{Loading}...
ತೂಗಿ ಕೆಡೆದುದು ತೇರು ಹುಡಿ ಹುಡಿ
ಯಾಗಿ ಹೋದುದು ದ್ರೋಣ ಮನದನು
ರಾಗ ಮಿಗೆ ಮತ್ತೊಂದು ಹೊಸರಥದೊಳಗೆ ವೆಂಠಣಿಸಿ
ಹೋಗಬಿಡೆನಿನ್ನ ನಿಲಜನ ತಲೆ
ವಾಗಿಸುವೆನಿನ್ನೆನುತ ಶಕಟದ
ಬಾಗಿಲಲಿ ಗಿರಿಯಂತೆ ನಿಂದನು ಸಮರಕನುವಾಗಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ತೇರು ನೆಲಕ್ಕೆ ಬಿದ್ದು ಹುಡಿ ಹುಡಿಯಾಗಲು, ದ್ರೋಣನು ಹೆಚ್ಚಿದ ಮನದ ಉತ್ಸಾಹದಿಂದ ಮತ್ತೊಂದು ಹೊಸರಥದೊಳಗೆ ಹೊರಟು ಸುತ್ತುವರಿದು, ಭೀಮನನ್ನು ಇನ್ನು ಹೋಗಲು ಬಿಡುವುದಿಲ್ಲ, ಅವನ ತಲೆ ಬಾಗಿಸುತ್ತೇನೆ ಎನ್ನುತ್ತ ಯುದ್ಧಕ್ಕೆ ಸಿದ್ಧನಾಗಿ ಶಕಟವ್ಯೂಹದ ಬಾಗಿಲಲ್ಲಿ ಬೆಟ್ಟದಂತೆ ನಿಂತನು.
ಮೂಲ ...{Loading}...
ತೂಗಿ ಕೆಡೆದುದು ತೇರು ಹುಡಿ ಹುಡಿ
ಯಾಗಿ ಹೋದುದು ದ್ರೋಣ ಮನದನು
ರಾಗ ಮಿಗೆ ಮತ್ತೊಂದು ಹೊಸರಥದೊಳಗೆ ವೆಂಠಣಿಸಿ
ಹೋಗಬಿಡೆನಿನ್ನ ನಿಲಜನ ತಲೆ
ವಾಗಿಸುವೆನಿನ್ನೆನುತ ಶಕಟದ
ಬಾಗಿಲಲಿ ಗಿರಿಯಂತೆ ನಿಂದನು ಸಮರಕನುವಾಗಿ ॥15॥
೦೧೬ ಕೊಲುವುದನುಚಿತವೆನ್ದು ಗಗನ ...{Loading}...
ಕೊಲುವುದನುಚಿತವೆಂದು ಗಗನ
ಸ್ಥಳಕೆ ರಥವನು ಬಿಸುಡೆ ಯೋಜನ
ದಳವಿಯಲಿ ಲಂಘಿಸಿತು ಹಯತತಿ ಸೂತಜರು ಸಹಿತ
ಎಲೆಲೆ ಕಟಕಾಚಾರ್ಯನಕಟಾ
ಕೊಳುಗುಳದೊಳಪದೆಸೆಯ ಕಂಡನೊ
ಗೆಲಿದನೋ ರಿಪುವೆಂದುಲಿಯೆ ನಿಜಪಾಯದಳವಂದು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಲ್ಲುವುದು ಉಚಿತವಲ್ಲ ಎಂದು ಭೀಮನು ದ್ರೋಣನ ರಥವನ್ನು ಗಗನ ಮಾರ್ಗದಲ್ಲಿ ಹಾರಿಸಲು , ಅದು , ಸಾರಥಿ ಮತ್ತು ಕುದುರೆಗಳ ಸಮೂಹಗಳ ಸಹಿತ ಯೋಜನದಷ್ಟು ದೂರಕ್ಕೆ ಬಿದ್ದಿತು. “ಎಲೆಲೆ… ಶಸ್ತ್ರ ವಿದ್ಯಾಗುರು ದ್ರೋಣನು ಯುದ್ಧ ಭೂಮಿಯಲ್ಲಿ ದುಸ್ಥಿತಿಯನ್ನು ಕಂಡನೋ! ಶತ್ರುವು ಗೆದ್ದನೋ! " ಎಂದು ಪದಾತಿ ಸೇನೆ ಮಾತನಾಡಿಕೊಂಡಿತು.
ಮೂಲ ...{Loading}...
ಕೊಲುವುದನುಚಿತವೆಂದು ಗಗನ
ಸ್ಥಳಕೆ ರಥವನು ಬಿಸುಡೆ ಯೋಜನ
ದಳವಿಯಲಿ ಲಂಘಿಸಿತು ಹಯತತಿ ಸೂತಜರು ಸಹಿತ
ಎಲೆಲೆ ಕಟಕಾಚಾರ್ಯನಕಟಾ
ಕೊಳುಗುಳದೊಳಪದೆಸೆಯ ಕಂಡನೊ
ಗೆಲಿದನೋ ರಿಪುವೆಂದುಲಿಯೆ ನಿಜಪಾಯದಳವಂದು ॥16॥
೦೧೭ ನಿಜವರೂಥದಲನ್ದು ಕೌರವ ...{Loading}...
ನಿಜವರೂಥದಲಂದು ಕೌರವ
ವಿಜಯ ಮಾರುತಿ ಹೊಕ್ಕು ರಿಪು ಭೂ
ಭುಜರನರೆಯಟ್ಟಿದನು ಬಹಳಿತ ಸಿಂಹನಾದದಲಿ
ತ್ರಿಜಗ ತಲ್ಲಣಿಸಿದುದು ವರ ವಾ
ರಿಜವಿಲೋಚನ ಕೇಳಿದನು ಪವ
ನಜನ ಪಡಿಬಲ ಬಂದುದೆಂದರುಹಿದನು ಪಾರ್ಥಂಗೆ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ರಥದಲ್ಲಿ ಅಂದು ಕೌರವ ವಿಜಯಿಯಾದ ಮಾರುತಿಯು ಮುನ್ನುಗ್ಗಿ ಶತ್ರು ರಾಜರುಗಳನ್ನು ಹೊಡೆದೋಡಿಸಿದನು. ಅವನ ಅತಿಶಯವಾದ ಸಿಂಹನಾದಕ್ಕೆ ತ್ರಿಲೋಕಗಳೂ ತಲ್ಲಣಿಸಿದುವು. ಕಮಲದಂತಹ ಕಣ್ಣುಗಳುಳ್ಳ ಶ್ರೇಷ್ಠನಾದ ಶ್ರೀಕೃಷ್ಣನು ಆ ನಾದವನ್ನು ಕೇಳಿದನು. ಭೀಮಸೇನನ ಸೇನೆ ಬಂದುದು ಎಂದು ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಅರೆಯಟ್ಟು-ಹೊಡೆದೋಡಿಸು, ಪಡಿಬಲ-ಪ್ರತಿಬಲ, ಸಹಾಯಕ ಸೈನ್ಯ,
ಮೂಲ ...{Loading}...
ನಿಜವರೂಥದಲಂದು ಕೌರವ
ವಿಜಯ ಮಾರುತಿ ಹೊಕ್ಕು ರಿಪು ಭೂ
ಭುಜರನರೆಯಟ್ಟಿದನು ಬಹಳಿತ ಸಿಂಹನಾದದಲಿ
ತ್ರಿಜಗ ತಲ್ಲಣಿಸಿದುದು ವರ ವಾ
ರಿಜವಿಲೋಚನ ಕೇಳಿದನು ಪವ
ನಜನ ಪಡಿಬಲ ಬಂದುದೆಂದರುಹಿದನು ಪಾರ್ಥಂಗೆ ॥17॥
೦೧೮ ಭಕುತ ಮುಖ ...{Loading}...
ಭಕುತ ಮುಖ ದರ್ಪಣನು ಬಹ ಸಾ
ತ್ಯಕಿಯ ಕಂಡನು ಭೀಮಸೇನನ
ವಿಕಟ ಸಿಂಹಧ್ವನಿಯನಾಲಿಸಿ ಹಿಗ್ಗಿದನು ಪಾರ್ಥ
ವಿಕಳತನವನು ಮಾದು ಧರ್ಮಜ
ಸುಕರ ಪರಿತೋಷದಲಿರಲು ರಿಪು
ನಿಕರ ಮುರಿದುದು ಪವನಪುತ್ರನ ರಥದ ಖುರಪುಟಕೆ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಕ್ತರ ಮುಖಕನ್ನಡಿಯಾದ ಕೃಷ್ಣನು ಬರುತ್ತಿರುವ ಸಾತ್ಯಕಿಯನ್ನು ಕಂಡನು. ಭೀಮಸೇನನ ಭಯಂಕರ ಸಿಂಹನಾದವನ್ನು ಕೇಳಿ ಪಾರ್ಥ ಹಿಗ್ಗಿದನು. ಕಳವಳ, ಗಾಬರಿಯನ್ನು ಕಳೆದುಕೊಂಡು ಧರ್ಮಜನ ಪರಿವಾರ ಅತ್ಯಂತ ಸಂತೋಷದಲ್ಲಿರಲು, ಶತ್ರು ಸಮೂಹವು ಭೀಮನ ರಥದ ಕುದುರೆಗಳ ಗೊರಸಿನ ಧ್ವನಿಗೆ ಹಿಮ್ಮೆಟ್ಟಿತು.
ಪದಾರ್ಥ (ಕ.ಗ.ಪ)
ಮಾದು-ನೀಗಿ, ಸುಕರ-ಸರಾಗ, ಸುಲಭ, ಪರಿತೋಷ-ಅತ್ಯಂತ ಆನಂದ, ಹಿಗ್ಗು
ಮೂಲ ...{Loading}...
ಭಕುತ ಮುಖ ದರ್ಪಣನು ಬಹ ಸಾ
ತ್ಯಕಿಯ ಕಂಡನು ಭೀಮಸೇನನ
ವಿಕಟ ಸಿಂಹಧ್ವನಿಯನಾಲಿಸಿ ಹಿಗ್ಗಿದನು ಪಾರ್ಥ
ವಿಕಳತನವನು ಮಾದು ಧರ್ಮಜ
ಸುಕರ ಪರಿತೋಷದಲಿರಲು ರಿಪು
ನಿಕರ ಮುರಿದುದು ಪವನಪುತ್ರನ ರಥದ ಖುರಪುಟಕೆ ॥18॥
೦೧೯ ಅರಿಭಟರು ಪವನಜನನಾನುತ ...{Loading}...
ಅರಿಭಟರು ಪವನಜನನಾನುತ
ಮರಳುತುಬ್ಬರ ಬವರವನು ತಂ
ದರನೆಲೆಗೆ ಹಾಯ್ಕಿದರು ಕರ್ಣಾದಿಗಳ ಮುಂಬಿನಲಿ
ಜರಿದುದತಿರಥರಾಜಿ ಬಾಯಲಿ
ಕರಿಷ ಹಾಯ್ದುದು ಭೂಮಿಪಾಲರ
ಬಿರುದು ಮುದ್ರಿಸಿದವು ಸಮೀರಕುಮಾರನುರವಣೆಗೆ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು ಸೈನಿಕರು ವಾಯುಸುತನಾದ ಭೀಮಸೇನನನ್ನು ಎದುರಿಸಿ, ಹಿಂತಿರುಗುತ್ತ, ಅತಿಶಯವಾದ ಯುದ್ಧವನ್ನು ಬಿಡಾರದ ಹತ್ತಿರಕ್ಕೆ ಕರ್ಣನೇ ಮೊದಲಾದವರ ಮುಂಭಾಗಕ್ಕೆ ತಂದರು. ಅತಿರಥರ ಸಮೂಹ ಹಿಮ್ಮೆಟ್ಟಿತು. ವಾಯುಪುತ್ರ ಭೀಮನ ಯುದ್ಧ ಸಂಭ್ರಮದಿಂದ ರಾಜರುಗಳ ಮುಖಕ್ಕೆ ಶೆಗಣಿ ಬಳಿದಂತಾಗಿ ಅವರ ಬಿರುದುಗಳು ನಾಶವಾದುವು.
ಪದಾರ್ಥ (ಕ.ಗ.ಪ)
ಆನುತ-ಎದುರಿಸು, ಕರಿಷ-ಶೆಗಣಿ,
ಮೂಲ ...{Loading}...
ಅರಿಭಟರು ಪವನಜನನಾನುತ
ಮರಳುತುಬ್ಬರ ಬವರವನು ತಂ
ದರನೆಲೆಗೆ ಹಾಯ್ಕಿದರು ಕರ್ಣಾದಿಗಳ ಮುಂಬಿನಲಿ
ಜರಿದುದತಿರಥರಾಜಿ ಬಾಯಲಿ
ಕರಿಷ ಹಾಯ್ದುದು ಭೂಮಿಪಾಲರ
ಬಿರುದು ಮುದ್ರಿಸಿದವು ಸಮೀರಕುಮಾರನುರವಣೆಗೆ ॥19॥
೦೨೦ ಓಡುವುದು ಗರುವಾಯಿಯೇ ...{Loading}...
ಓಡುವುದು ಗರುವಾಯಿಯೇ ಭಯ
ಬೇಡ ಭೂಮಿಪರೆನ್ನ ತೇರಿನ
ಕೂಡೆ ಗಡಣಿಸಿ ಸಾಕು ತಾರೆನು ನಿಮಗೆ ಕಾಳೆಗವ
ನೋಡಿ ನಿಮಿಷಕೆ ಭೀಮನಡಗಿನ
ಲೂಡುವೆನು ರಣಭೂತವನು ಭಯ
ಬೇಡೆನುತ್ತನಿಲಜನ ರಥವನು ತರುಬಿದನು ಕರ್ಣ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಣರಂಗದಿಂದ ಓಡುವುದು ಗಾಂಭೀರ್ಯವೇ ? ಭಯ ಬೇಡ, ರಾಜರುಗಳು ನನ್ನ ರಥದ ಜೊತೆ ಗುಂಪುಗೂಡಿ ಬನ್ನಿ ಸಾಕು. ನಿಮಗೆ ಯುದ್ಧ ಮಾಡುವ ಪರಿಸ್ಥಿತಿಯನ್ನು ತರುವುದಿಲ್ಲ. ನೋಡಿ. ನಿಮಿಷ ಮಾತ್ರದಲ್ಲಿ ಭೀಮನ ದೇಹದ ಮಾಂಸದ ಆಹಾರವನ್ನು ರಣಭೂತಗಳಿಗೆ ಉಣಿಸುವೆನು ಭಯಬೇಡ " ಎನ್ನುತ್ತ ಕರ್ಣನು ವಾಯುಪುತ್ರ ಭೀಮನ ರಥವನ್ನು ಅಡ್ಡಗಟ್ಟಿ ನಿಲ್ಲಿಸಿದನು.
ಮೂಲ ...{Loading}...
ಓಡುವುದು ಗರುವಾಯಿಯೇ ಭಯ
ಬೇಡ ಭೂಮಿಪರೆನ್ನ ತೇರಿನ
ಕೂಡೆ ಗಡಣಿಸಿ ಸಾಕು ತಾರೆನು ನಿಮಗೆ ಕಾಳೆಗವ
ನೋಡಿ ನಿಮಿಷಕೆ ಭೀಮನಡಗಿನ
ಲೂಡುವೆನು ರಣಭೂತವನು ಭಯ
ಬೇಡೆನುತ್ತನಿಲಜನ ರಥವನು ತರುಬಿದನು ಕರ್ಣ ॥20॥
೦೨೧ ಬಿಗಿದ ಹುಬ್ಬಿನ ...{Loading}...
ಬಿಗಿದ ಹುಬ್ಬಿನ ಬಿಲ್ಲ ತೆಗಹಿನ
ಹೊಗರಲಗಿನುರವಣೆಯ ರಥದಲಿ
ಮಗುಳ್ದ ಮಂಡಿಯ ದೃಷ್ಟಿಯೋರೆಯ ಬಾಗಿದವಯವದ
ಅಗಿದು ಕಡುಗೋಪವನು ಬೆಸಲಹ
ನಗೆಯ ನಿರಿಗೆಯಲರಿಯ ನುಂಗುವ
ಬಗೆಯ ಬಲುಗೈ ಕರ್ಣ ಮೂದಲಿಸಿದನು ಪವನಜನ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹುಬ್ಬು ಗಂಟುಹಾಕಿದ, ಬಿಲ್ಲನ್ನು ಎಳೆದು ಸಿದ್ಧನಾಗಿ, ವೇಗದ ರಥದಲ್ಲಿ ಮಂಡಿಗಳನ್ನು ಮಡಿಚಿದ್ದ, , ಓರೆದೃಷ್ಟಿಯುಳ್ಳವನಾಗಿದ್ದ ಕಾಂತಿಯುಕ್ತವಾದ ಬಾಣಗಳನ್ನು ಹೊಂದಿ ಅವನ್ನು ಪ್ರಯೋಗಿಸಲು ಬೆನ್ನನ್ನು ಬಗ್ಗಿಸಿದ್ದ ಕರ್ಣನು ಹೆಚ್ಚಾದ ಕೋಪವನ್ನು ನುಂಗುತ್ತ, ಹೊಮ್ಮಿದ ನಗೆಯ ಅಲೆಗಳಲ್ಲಿಯೇ ಶತ್ರುಗಳನ್ನು ನುಂಗುವ ಹಾಗೆ ನೋಡುತ್ತ ವಾಯುಪುತ್ರ ಭೀಮನನ್ನು ಮೂದಲಿಸಿದನು.
ಮೂಲ ...{Loading}...
ಬಿಗಿದ ಹುಬ್ಬಿನ ಬಿಲ್ಲ ತೆಗಹಿನ
ಹೊಗರಲಗಿನುರವಣೆಯ ರಥದಲಿ
ಮಗುಳ್ದ ಮಂಡಿಯ ದೃಷ್ಟಿಯೋರೆಯ ಬಾಗಿದವಯವದ
ಅಗಿದು ಕಡುಗೋಪವನು ಬೆಸಲಹ
ನಗೆಯ ನಿರಿಗೆಯಲರಿಯ ನುಂಗುವ
ಬಗೆಯ ಬಲುಗೈ ಕರ್ಣ ಮೂದಲಿಸಿದನು ಪವನಜನ ॥21॥
೦೨೨ ಸಾರೆಲವೊ ಸಾಯದೆ ...{Loading}...
ಸಾರೆಲವೊ ಸಾಯದೆ ವೃಥಾಹಂ
ಕಾರವೇತಕೆ ನುಗ್ಗ ಸದೆದ ಕ
ಠೋರ ಸಾಹಸವಿಲ್ಲಿ ಕೊಳ್ಳದು ಕರ್ಣ ತಾನೆನುತ
ಅರಿದೈದಂಬಿನಲಿ ಪವನಕು
ಮಾರಕನನೆಸೆ ಮೇಘ ಘನ ಗಂ
ಭೀರರವದಲಿ ಭೀಮ ನುಡಿದನು ಭಾನುನಂದನನ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲವೋ… ಸಾಯದೆ ಅತ್ತ ಸರಿ. ವ್ಯರ್ಥವಾದ ಅಹಂಕಾರವೇಕೆ ? ಶತ್ರುಗಳ ಗುಂಪನ್ನು ನಾಶಗೈದ ಭಯಂಕರ ಸಾಹಸ ಇಲ್ಲಿ ಸಾಧ್ಯವಿಲ್ಲ. ನಾನು ಕರ್ಣ” ಎನ್ನುತ್ತ… ಹರಿತವಾದ ಐದು ಬಾಣಗಳನ್ನು ಭೀಮನ ಮೇಲೆ ಪ್ರಯೋಗಿಸಲು, ಗುಡುಗಿನಂತೆ ಗಂಭೀರ ಧ್ವನಿಯಲ್ಲಿ ಭೀಮನು ಕರ್ಣನಿಗೆ ಹೀಗೆಂದು ನುಡಿದನು.
ಮೂಲ ...{Loading}...
ಸಾರೆಲವೊ ಸಾಯದೆ ವೃಥಾಹಂ
ಕಾರವೇತಕೆ ನುಗ್ಗ ಸದೆದ ಕ
ಠೋರ ಸಾಹಸವಿಲ್ಲಿ ಕೊಳ್ಳದು ಕರ್ಣ ತಾನೆನುತ
ಅರಿದೈದಂಬಿನಲಿ ಪವನಕು
ಮಾರಕನನೆಸೆ ಮೇಘ ಘನ ಗಂ
ಭೀರರವದಲಿ ಭೀಮ ನುಡಿದನು ಭಾನುನಂದನನ ॥22॥
೦೨೩ ದೇವ ದಾನವ ...{Loading}...
ದೇವ ದಾನವ ಭಟರು ನುಗ್ಗೆಂ
ದಾವು ಬಗೆದಿಹೆವುಳಿದ ಮತ್ರ್ಯರು
ನೀವು ತಾವೇಸರ ಸಮರ್ಥರು ಕರ್ಣ ಗಳಹದಿರು
ಡಾವರಿಗತನವಾರ ಕೂಡೆ ವೃ
ಥಾ ವಿಲಾಸಿಗಳೆಲವೊ ಸುಭಟರೆ
ನೀವೆನುತ ಹದಿನೈದು ಶರದಿಂದೆಚ್ಚನಿನಸುತನ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೇವ-ದಾನವ ಭಟರೇ ಕ್ಷುಲ್ಲಕರೆಂದು ನಾವು ತಿಳಿದಿದ್ದೇವೆ. ಇನ್ನು ಉಳಿದ ಮಾನವರು ನೀವು. ತಾವು ಎಷ್ಟರ ಮಟ್ಟಿಗೆ ಸಮರ್ಥರು ? ಕರ್ಣ… ಹರಟಬೇಡ. ನಿನ್ನ ಶೂರತನ ಯಾರ ಮುಂದೆ ? ಎಲವೋ ವೃಥಾವಿಲಾಸಿಗಳು. ನೀವೇನು ಸುಭಟರೇ ?” ಎನ್ನುತ್ತಾ ಹದಿನೈದು ಬಾಣಗಳನ್ನು ಸೂರ್ಯಪುತ್ರ ಕರ್ಣನ ಮೇಲೆ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ನುಗ್ಗು-ಕ್ಷುಲ್ಲಕರು,
ಮೂಲ ...{Loading}...
ದೇವ ದಾನವ ಭಟರು ನುಗ್ಗೆಂ
ದಾವು ಬಗೆದಿಹೆವುಳಿದ ಮತ್ರ್ಯರು
ನೀವು ತಾವೇಸರ ಸಮರ್ಥರು ಕರ್ಣ ಗಳಹದಿರು
ಡಾವರಿಗತನವಾರ ಕೂಡೆ ವೃ
ಥಾ ವಿಲಾಸಿಗಳೆಲವೊ ಸುಭಟರೆ
ನೀವೆನುತ ಹದಿನೈದು ಶರದಿಂದೆಚ್ಚನಿನಸುತನ ॥23॥
೦೨೪ ಎಸಲು ಭೀಮನ ...{Loading}...
ಎಸಲು ಭೀಮನ ಬಾಣವನು ಖಂ
ಡಿಸಿದ ಮೂರಂಬಿನಲಿ ರವಿಸುತ
ನಸಮ ಸಾಹಸಿಯೆಚ್ಚಡೆಚ್ಚನು ಭೀಮ ಮರುಗಣೆಯ
ನಿಶಿತ ಶರವನು ಹತ್ತು ಶರದಲಿ
ಕುಸುರಿದರಿದನು ಕರ್ಣನಿಬ್ಬರ
ದೆಸೆಗೆ ದೇವಾನೀಕ ಮೆಚ್ಚಿತು ಭೂಪ ಕೇಳ್ ಎಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಪ್ರಯೋಗಿಸಿದ ಬಾಣಗಳನ್ನು ರವಿಸುತ ಕರ್ಣನು ಮೂರು ಬಾಣಗಳಿಂದ ಕತ್ತರಿಸಿದನು. ಅಸಮಾನ ಸಾಹಸಿ ಕರ್ಣನು ಬಾಣ ಬಿಡಲಾಗಿ ಭೀಮ ಪ್ರತಿಯಾಗಿ ಮರು ಬಾಣವನ್ನು ಪ್ರಯೋಗಿಸಿದನು. ಆತನ ಹರಿತವಾದ ಬಾಣವನ್ನು ಕರ್ಣನು ಹತ್ತು ಬಾಣಗಳಿಂದ ಚೂರು ಚೂರು ಮಾಡಿದನು. ಇವರಿಬ್ಬರ ಯುದ್ಧದ ರೀತಿಗೆ ದೇವತೆಗಳ ಸಮೂಹ ಮೆಚ್ಚುಗೆಯನ್ನು ಸೂಚಿಸಿತು. ರಾಜನೇ ಕೇಳು ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಮೂಲ ...{Loading}...
ಎಸಲು ಭೀಮನ ಬಾಣವನು ಖಂ
ಡಿಸಿದ ಮೂರಂಬಿನಲಿ ರವಿಸುತ
ನಸಮ ಸಾಹಸಿಯೆಚ್ಚಡೆಚ್ಚನು ಭೀಮ ಮರುಗಣೆಯ
ನಿಶಿತ ಶರವನು ಹತ್ತು ಶರದಲಿ
ಕುಸುರಿದರಿದನು ಕರ್ಣನಿಬ್ಬರ
ದೆಸೆಗೆ ದೇವಾನೀಕ ಮೆಚ್ಚಿತು ಭೂಪ ಕೇಳೆಂದ ॥24॥
೦೨೫ ತೋಳುವಲಕಿದಿರಿಲ್ಲ ಬಿನುಗು ...{Loading}...
ತೋಳುವಲಕಿದಿರಿಲ್ಲ ಬಿನುಗು ನೃ
ಪಾಲನೆಲವೋ ಕರ್ಣ ಫಡ ಫಡ
ಮೇಳವಾದರೆ ಮೊಗೆವೆನರುಣಾಂಬುವನು ನಿನ್ನೊಡಲ
ಕೋಲ ಸುರಿ ಸುರಿಯೆನುತ ಕುರುಭೂ
ಪಾಲಕನ ಮದದಾನೆಯನು ಹೀ
ಹಾಳಿಗೆಡಿಸಿ ತುರಂಗ ರಥ ಸಾರಥಿಯ ಖಂಡಿಸಿದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತೋಳ್ಬಲಕ್ಕೆ ಸರಿಸಾಟಿಯಿಲ್ಲ. ಎಲವೋ ಹೀನರಾಜನಾದ ಕರ್ಣನೇ… ಭಲೆ, ಭಲೆ ಯುದ್ಧದಲ್ಲಿ ಸೇರುವೆಯಾದರೆ ನಿನ್ನ ಶರೀರದ ಕೆಂಪು ನೀರನ್ನು (ರಕ್ತ) ಬೊಗಸೆಯಲ್ಲಿ ಕುಡಿವೆನು. ಬಾಣಗಳನ್ನು ಸುರಿಸು” ಎನ್ನುತ್ತ ಕುರುರಾಜನ ಮದಿಸಿದ ಆನೆ ಎನಿಸಿದ್ದ ಕರ್ಣನನ್ನು ತೆಗಳಿ, ರಥ, ಕುದುರೆ, ಸಾರಥಿಯನ್ನು ತುಂಡು ತುಂಡು ಮಾಡಿದನು.
ಮೂಲ ...{Loading}...
ತೋಳುವಲಕಿದಿರಿಲ್ಲ ಬಿನುಗು ನೃ
ಪಾಲನೆಲವೋ ಕರ್ಣ ಫಡ ಫಡ
ಮೇಳವಾದರೆ ಮೊಗೆವೆನರುಣಾಂಬುವನು ನಿನ್ನೊಡಲ
ಕೋಲ ಸುರಿ ಸುರಿಯೆನುತ ಕುರುಭೂ
ಪಾಲಕನ ಮದದಾನೆಯನು ಹೀ
ಹಾಳಿಗೆಡಿಸಿ ತುರಂಗ ರಥ ಸಾರಥಿಯ ಖಂಡಿಸಿದ ॥25॥
೦೨೬ ಉಡಿದು ರಥ ...{Loading}...
ಉಡಿದು ರಥ ಸಾರಥಿಗಳವನಿಗೆ
ಕೆಡೆಯೆ ಕಾಲಾಳಾಗಿ ಭೀಮನ
ಬಿಡದೆ ಥಟ್ಟೈಸಿದನು ಶರನಿಕರದಲಿ ರವಿಸೂನು
ಕಡಿದು ಬಿಸುಡದೆ ಕರುಣಿಸಿದಡವ
ಗಡಿಸಿದನೆ ತಪ್ಪೇನೆನುತ ಕೈ
ಗಡಿಯ ಪವನಜನೆಚ್ಚು ಕರ್ಣನ ಧನುವ ಖಂಡಿಸಿದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥವು ಮುರಿದು ಸಾರಥಿ ನೆಲದ ಮೇಲೆ ಬೀಳಲು ಕರ್ಣನು ಭೀಮನನ್ನು ಬಿಡದೆ ಕಾಲ್ನಡಿಗೆಯಲ್ಲಿಯೇ ಬಾಣಗಳ ಸಮೂಹದಿಂದ ಆಕ್ರಮಿಸಿದನು. “ಕತ್ತರಿಸಿ ಬಿಸಾಡದೆ ಕರುಣೆ ತೋರಿದರೆ ಪುನಃ ಪ್ರತಿಭಟಿಸುತ್ತಿದ್ದಾನೆಯೇ ? ತಪ್ಪೇನು?” ಎನ್ನುತ್ತ ಶೂರ ಭೀಮನು ಬಾಣ ಪ್ರಯೋಗಿಸಿ ಕರ್ಣನ ಧನುಸ್ಸನ್ನು ಕತ್ತರಿಸಿದನು.
ಮೂಲ ...{Loading}...
ಉಡಿದು ರಥ ಸಾರಥಿಗಳವನಿಗೆ
ಕೆಡೆಯೆ ಕಾಲಾಳಾಗಿ ಭೀಮನ
ಬಿಡದೆ ಥಟ್ಟೈಸಿದನು ಶರನಿಕರದಲಿ ರವಿಸೂನು
ಕಡಿದು ಬಿಸುಡದೆ ಕರುಣಿಸಿದಡವ
ಗಡಿಸಿದನೆ ತಪ್ಪೇನೆನುತ ಕೈ
ಗಡಿಯ ಪವನಜನೆಚ್ಚು ಕರ್ಣನ ಧನುವ ಖಂಡಿಸಿದ ॥26॥
೦೨೭ ಕರದ ಬಿಲು ...{Loading}...
ಕರದ ಬಿಲು ಕಳಚಿದರೆ ಖಾತಿಯೊ
ಳಿರದೆ ಹೊಸ ಹೊಂದೇರ ತರಿಸಲು
ತಿರುಗಿದನು ನಿಜಮೋಹರಕೆ ದುಗುಡದಲಿ ಕಲಿಕರ್ಣ
ತೆರಹು ಕೊಡದಿರಿ ಸೋತ ಕರ್ಣನ
ಹರಿಬವೆಮ್ಮದು ನೂಕು ನೂಕೆಂ
ದುರವಣಿಸಿದರು ಮತ್ತೆ ಕೌರವನನುಜರವಗಡಿಸಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೈಯಲ್ಲಿನ ಬಿಲ್ಲು ಕಳಚಿ ಬೀಳಲು ಸುಮ್ಮನಿರದೆ ಕೋಪದಿಂದ ಹೊಸ ಬಂಗಾರದ ರಥವನ್ನು ತರಿಸಲೆಂದು ಶೂರ ಕರ್ಣನು ದುಗುಡದಲ್ಲಿ ಸೈನ್ಯದ ಕಡೆ ತಿರುಗಿದನು. ಭೀಮನಿಗೆ ಅವಕಾಶ ಕೊಡದಿರಿ. ಸೋತ ಕರ್ಣನ ಹೊಣೆಗಾರಿಕೆ ನಮ್ಮದು. ಶತ್ರುಗಳನ್ನು ಹಿಂದಕ್ಕೆ ತಳ್ಳಿ (ಹಿಮ್ಮೆಟ್ಟಿಸಿ) ಎಂದು ಕೌರವನ ಸೋದರರು ಭೀಮನನ್ನು ವಿರೋಧಿಸಿ ಸಾಹಸದಿಂದ ಸಂಭ್ರಮಿಸಿ ಮುಂದುವರೆದರು.
ಮೂಲ ...{Loading}...
ಕರದ ಬಿಲು ಕಳಚಿದರೆ ಖಾತಿಯೊ
ಳಿರದೆ ಹೊಸ ಹೊಂದೇರ ತರಿಸಲು
ತಿರುಗಿದನು ನಿಜಮೋಹರಕೆ ದುಗುಡದಲಿ ಕಲಿಕರ್ಣ
ತೆರಹು ಕೊಡದಿರಿ ಸೋತ ಕರ್ಣನ
ಹರಿಬವೆಮ್ಮದು ನೂಕು ನೂಕೆಂ
ದುರವಣಿಸಿದರು ಮತ್ತೆ ಕೌರವನನುಜರವಗಡಿಸಿ ॥27॥
೦೨೮ ಎಲವೊ ಕರ್ಣನ ...{Loading}...
ಎಲವೊ ಕರ್ಣನ ಗೆಲಿದ ಗರ್ವವ
ಕಲಕುವೆವು ಫಡ ನಿಲ್ಲೆನುತ ಕೈ
ಚಳಕಿಗರು ಪೂರಾಯಚಾಪದ ಬೆರಳ ಕಿವಿಗಡಿಯ
ಬಲುಸರಳ ಸರಿವಳೆಯ ಸಾಹಸಿ
ಗಳುರವಣಿಸಿ ಕವಿದೆಸುತ ಬರೆ ಕಂ
ಡೆಲೆ ಮಿಡುಕನಾ ಭೀಮ ಮೂಗಿನ ಬೆರಳ ಬೆರಗಿನಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲವೋ… ಕರ್ಣನನ್ನು ಗೆದ್ದ ಗರ್ವವನ್ನು ಕಲಕುವೆವು. ಫಡ, ನಿಲ್ಲು ಎನ್ನುತ್ತ, ಬಿಲ್ಲನ್ನು ಕಿವಿಯವರೆಗೂ ಸೆಳೆಯುವ ಕೈಚಳಕವುಳ್ಳವರು, ಅತಿಶಯವಾದ ಬಾಣಗಳ ಸುರಿಮಳೆಯನ್ನೇ ಸುರಿಸುವ ಸಾಹಸಿಗಳು ಸಂಭ್ರಮಿಸಿ ಮೇಲೇರಿ ಬಂದು ಬಾಣ ಪ್ರಯೋಗಿಸಲು ಅದನ್ನು ಕಂಡು ಎಲೆ ಕೂಡ ಅಲುಗದ ಮರದಂತೆ ಸ್ತಬ್ಧವಾಗಿ ಭೀಮನು ಕರುಣೆ ಹಾಗೂ ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳನ್ನಿಟ್ಟನು.
ಮೂಲ ...{Loading}...
ಎಲವೊ ಕರ್ಣನ ಗೆಲಿದ ಗರ್ವವ
ಕಲಕುವೆವು ಫಡ ನಿಲ್ಲೆನುತ ಕೈ
ಚಳಕಿಗರು ಪೂರಾಯಚಾಪದ ಬೆರಳ ಕಿವಿಗಡಿಯ
ಬಲುಸರಳ ಸರಿವಳೆಯ ಸಾಹಸಿ
ಗಳುರವಣಿಸಿ ಕವಿದೆಸುತ ಬರೆ ಕಂ
ಡೆಲೆ ಮಿಡುಕನಾ ಭೀಮ ಮೂಗಿನ ಬೆರಳ ಬೆರಗಿನಲಿ ॥28॥
೦೨೯ ರಾಯನೊಡಹುಟ್ಟಿದರಲಾ ಪೂ ...{Loading}...
ರಾಯನೊಡಹುಟ್ಟಿದರಲಾ ಪೂ
ರಾಯವಿವದಿರ ಕೈ ಮಹಾದೇ
ವಾಯುಧದ ಮಳೆಗರೆದರೈ ನಿಲಲರಿದು ನಮಗೆನುತ
ವಾಯುಸುತನಬ್ಬರಿಸೆ ಗಾಳಿಯ
ಘಾಯ ಮೇಘದ ಮೇಲೆ ಬಿದ್ದವೊ
ಲಾಯಿತೇನೆಂಬೆನು ಕುಮಾರರ ಹೊಯಿಲ ಬೆಳೆ ಸಿರಿಯ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜ ದುರ್ಯೋಧನನ ಒಡಹುಟ್ಟಿದವರಲ್ಲವೇ ? ವಿಸ್ತಾರವಾದ ಕೈ ಇವರದು. ಮಹಾದೇವ ಆಯುಧದ ಮಳೆಗರೆಯುತ್ತಿರುವರಲ್ಲಾ ! ನಮಗೆ ನಿಲ್ಲಲು ಸಾಧ್ಯವಿಲ್ಲ”-ಎನ್ನುತ್ತ ಭೀಮನು ಅಬ್ಬರಿಸಲಾಗಿ ಗಾಳಿಯ ಹೊಡೆತವು ಮೋಡಗಳ ಮೇಲೆ ಬಿದ್ದ ಹಾಗೆ ಆಯಿತು. ಕುಮಾರರ ಬಾಣನ ಹೊಡೆತಗಳ ಬೆಳೆಸಿರಿಯನ್ನು ಏನೆಂದು ಹೇಳಲಿ ?
ಪದಾರ್ಥ (ಕ.ಗ.ಪ)
ಘಾಯ-ಹೊಡೆತ
ಮೂಲ ...{Loading}...
ರಾಯನೊಡಹುಟ್ಟಿದರಲಾ ಪೂ
ರಾಯವಿವದಿರ ಕೈ ಮಹಾದೇ
ವಾಯುಧದ ಮಳೆಗರೆದರೈ ನಿಲಲರಿದು ನಮಗೆನುತ
ವಾಯುಸುತನಬ್ಬರಿಸೆ ಗಾಳಿಯ
ಘಾಯ ಮೇಘದ ಮೇಲೆ ಬಿದ್ದವೊ
ಲಾಯಿತೇನೆಂಬೆನು ಕುಮಾರರ ಹೊಯಿಲ ಬೆಳೆ ಸಿರಿಯ ॥29॥
೦೩೦ ಬಲ್ಲಡಗ್ನಿಸ್ತಮ್ಭವನು ಸಿಡಿ ...{Loading}...
ಬಲ್ಲಡಗ್ನಿಸ್ತಂಭವನು ಸಿಡಿ
ಲಲ್ಲಿ ಮೇಳವೆ ಬಿನುಗುಗಳ ಗೆಲ
ಬಲ್ಲಡಿವರಿಗೆ ಭೀಮ ಸದರವೆ ಹೇಳಲೇನಿದನು
ಚೆಲ್ಲಿದರೆ ಬಳಿವರಿದು ಚೌಪಟ
ಮಲ್ಲ ಹೊಕ್ಕನು ಹೊಯ್ದ ಗದೆಯಲಿ
ಘಲ್ಲಿಸಿದನಸಿಯರೆದು ಕೊಂದನು ಕೌರವಾನುಜರ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಗ್ನಿಸ್ತಂಭವನ್ನು ಬಲ್ಲ ಮಾತ್ರಕ್ಕೇ ಸಿಡಿಲಿನೊಡನೆ ಸಾಟಿಯೇ? ಕ್ಷುಲ್ಲಕರನ್ನು ಗೆದ್ದ ಮಾತ್ರಕ್ಕೆ ಇವರಿಗೆ ಭೀಮನೊಡನೆ ಸದರವೇ? ಏನು ಹೇಳಲಿ ? ಚೌಪಟ ಮಲ್ಲನಾದ ಭೀಮನು ಚೆಲ್ಲಾಪಿಲ್ಲಿಯಾಗಿ ಚದುರಿದ ರಣರಂಗದಲ್ಲಿ ಸುತ್ತಾಡಿ ಒಳಹೊಕ್ಕು ಕೌರವ ಸೋದರರನ್ನು ಗದೆಯಲ್ಲಿ ಅಪ್ಪಳಿಸಿದನು. ಕತ್ತಿಯಿಂದ ತಿವಿದು ಕೊಂದನು.
ಮೂಲ ...{Loading}...
ಬಲ್ಲಡಗ್ನಿಸ್ತಂಭವನು ಸಿಡಿ
ಲಲ್ಲಿ ಮೇಳವೆ ಬಿನುಗುಗಳ ಗೆಲ
ಬಲ್ಲಡಿವರಿಗೆ ಭೀಮ ಸದರವೆ ಹೇಳಲೇನಿದನು
ಚೆಲ್ಲಿದರೆ ಬಳಿವರಿದು ಚೌಪಟ
ಮಲ್ಲ ಹೊಕ್ಕನು ಹೊಯ್ದ ಗದೆಯಲಿ
ಘಲ್ಲಿಸಿದನಸಿಯರೆದು ಕೊಂದನು ಕೌರವಾನುಜರ ॥30॥
೦೩೧ ವರ ಸುಲೋಚನ ...{Loading}...
ವರ ಸುಲೋಚನ ಚಿತ್ರರಥ ದು
ರ್ಮರುಷಣ ಶತಾನೀಕ ನೀಲಾಂ
ಬರ ವಿವಿಂಶತಿ ಚಿತ್ರಸೇನರ ದೀರ್ಘಲೋಚನನ
ತರಿದು ತಿರುಗಿ ಸುಯೋಧನನ ಮೋ
ಹರಕೆ ಮೊಳಗಲು ಮತ್ತೆ ಬಲ ಸಂ
ವರಣೆಯಲಿ ಕೈಗೈದು ಭೀಮನ ಹಳಚಿದನು ಕರ್ಣ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಶ್ರೇಷ್ಠನಾದ ಸುಲೋಚನ, ಚಿತ್ರರಥ, ದುರ್ಮರುಷಣ, ಶತಾನೀಕ, ನೀಲಾಂಬರ, ವಿವಿಂಶತಿ, ಚಿತ್ರಸೇನ, ದೀರ್ಘಲೋಚನ-ಇವರೇ ಮೊದಲಾದವರನ್ನು ತರಿದು, ಪುನಃ ಸುಯೋಧನನ ಸೈನ್ಯಕ್ಕೆ ಮುನ್ನುಗ್ಗಲು, ಕರ್ಣನು ಸೈನ್ಯವನ್ನು ಪುನಃ ಕೂಡಿಸಿಕೊಂಡು, ಭೀಮನನ್ನು ಎದುರಿಸಿದನು.
ಮೂಲ ...{Loading}...
ವರ ಸುಲೋಚನ ಚಿತ್ರರಥ ದು
ರ್ಮರುಷಣ ಶತಾನೀಕ ನೀಲಾಂ
ಬರ ವಿವಿಂಶತಿ ಚಿತ್ರಸೇನರ ದೀರ್ಘಲೋಚನನ
ತರಿದು ತಿರುಗಿ ಸುಯೋಧನನ ಮೋ
ಹರಕೆ ಮೊಳಗಲು ಮತ್ತೆ ಬಲ ಸಂ
ವರಣೆಯಲಿ ಕೈಗೈದು ಭೀಮನ ಹಳಚಿದನು ಕರ್ಣ ॥31॥
೦೩೨ ಫಡ ತೊಲಗು ...{Loading}...
ಫಡ ತೊಲಗು ಪವಮಾನಸುತ ನಿ
ನ್ನೊಡಲನೀ ಶಾಕಿನಿಯ ಬಳಗಕೆ
ಬಡಿಸುವೆನು ಬದುಕುವರೆ ಹಿಮ್ಮೆಟ್ಟೆನುತ ಬಳಿಸಲಿಸೆ
ಕಡುನುಡಿಗೆ ಮೆಚ್ಚಿದನು ಹಿಂದಕೆ
ಮಿಡುಕುವವನೇ ಕರ್ಣನೀತನ
ಕಡುಹ ನೋಡು ವಿಶೋಕ ಎಂದನು ನಗುತ ಕಲಿಭೀಮ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಫಡ, ತೊಲಗು-ಭೀಮನೇ… ನಿನ್ನ ಶರೀರವನ್ನು ಈ ಶಾಕಿನಿಯರ ಸಮೂಹಕ್ಕೆ ಆಹಾರವನ್ನಾಗಿ ಬಡಿಸುವೆನು. ಬದುಕಬೇಕೆನಿಸಿದರೆ ಹಿಮ್ಮೆಟ್ಟು” ಎನ್ನುತ್ತಾ ಕರ್ಣನು ಭೀಮನನ್ನು ಸಮೀಪಿಸಲು, ಭೀಮನು ಕರ್ಣನ ಕಠೋರವಾದ ಬಿರುನುಡಿಗೆ ಮೆಚ್ಚಿದನು. “ಆದರೆ ಹಿಂದಕ್ಕೆ ಸರಿಯುವವನೇ ಕರ್ಣನು ? ಈತನ ಶೌರ್ಯ ನೋಡು ವಿಶೋಕಾ " ಎಂದು ನಗುತ್ತ ಕಲಿ ಭೀಮನು ನುಡಿದನು.
ಟಿಪ್ಪನೀ (ಕ.ಗ.ಪ)
ವಿಶೋಕ-ಭೀಮನ ಸಾರಥಿ, ಶ್ರೀಕೃಷ್ಣನಿಂದ ಕುಬ್ಜಾ ಅಥವಾ ತ್ರಿವಕ್ರಯೆಂಬುವಳಲ್ಲಿ ಜನಿಸಿದವ, ಇವನಿಗೆ ಅಶೋಕನೆಂಬುದು ನಾಮಾಂತರ.
ಮೂಲ ...{Loading}...
ಫಡ ತೊಲಗು ಪವಮಾನಸುತ ನಿ
ನ್ನೊಡಲನೀ ಶಾಕಿನಿಯ ಬಳಗಕೆ
ಬಡಿಸುವೆನು ಬದುಕುವರೆ ಹಿಮ್ಮೆಟ್ಟೆನುತ ಬಳಿಸಲಿಸೆ
ಕಡುನುಡಿಗೆ ಮೆಚ್ಚಿದನು ಹಿಂದಕೆ
ಮಿಡುಕುವವನೇ ಕರ್ಣನೀತನ
ಕಡುಹ ನೋಡು ವಿಶೋಕ ಎಂದನು ನಗುತ ಕಲಿಭೀಮ ॥32॥
೦೩೩ ತಗರು ತೊಲಗಿದಡೇನು ...{Loading}...
ತಗರು ತೊಲಗಿದಡೇನು ಬಲುಗಾ
ಳೆಗದ ಗಾಢಿಕೆ ಮೇಲೆ ಶೌರ್ಯದ
ಸೊಗಡ ಸೈರಿಸಲರಿಯೆ ಕಲಿತನದಂಗ ನಿನಗೇಕೆ
ಉಗಿ ಸರಳ ಬಿಲುಗಾರನಾದರೆ
ತೆಗೆದು ಕೈದುವ ಕೊಳ್ಳೆನುತ ತನಿ
ಹೊಗರುಗಣೆಗಳ ಸೂಸಿದನು ರವಿಸೂನು ಸಮರದಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಡೆತಡೆಗಳು ದೂರವಾದರೆ ತಾನೆ ಏನು ? ದೊಡ್ಡ ಕಾಳಗದ ಉತ್ಕಟತೆ ಹಾಗೂ ಶೌರ್ಯದ ವಾಸನೆಯನ್ನು ನೀನು ಸಹಿಸಲಾರೆ. ಪರಾಕ್ರಮದ ರೀತಿ ನಿನಗೇಕೆ ? ಬಿಲ್ಲುಗಾರನಾದರೆ ಬಾಣ ತೆಗೆ, ಆಯುಧವನ್ನು ತೆಗೆದುಕೊ” ಎನ್ನುತ್ತಾ ಕರ್ಣನು ಹೊಸ ಕಾಂತಿಯುಕ್ತವಾದ ಬಾಣಗಳನ್ನು ಯುದ್ಧದಲ್ಲಿ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ತಗರು-ಅಡೆತಡೆ,
ಮೂಲ ...{Loading}...
ತಗರು ತೊಲಗಿದಡೇನು ಬಲುಗಾ
ಳೆಗದ ಗಾಢಿಕೆ ಮೇಲೆ ಶೌರ್ಯದ
ಸೊಗಡ ಸೈರಿಸಲರಿಯೆ ಕಲಿತನದಂಗ ನಿನಗೇಕೆ
ಉಗಿ ಸರಳ ಬಿಲುಗಾರನಾದರೆ
ತೆಗೆದು ಕೈದುವ ಕೊಳ್ಳೆನುತ ತನಿ
ಹೊಗರುಗಣೆಗಳ ಸೂಸಿದನು ರವಿಸೂನು ಸಮರದಲಿ ॥33॥
೦೩೪ ಸರಳ ಸರಳಲಿ ...{Loading}...
ಸರಳ ಸರಳಲಿ ಕಡಿದನೆಚ್ಚರೆ
ತರಹರಿಸಿ ಮಗುಳೆಚ್ಚನೌಕಿದ
ಡುರವಣಿಸಿದನು ಸಿಂಹಗರ್ಜನದೊಡನೆ ಗರ್ಜಿಸಿದ
ತಿರುಗೆ ತಿರುಗಿದನೊತ್ತಲಗಿದೊ
ತ್ತರಿಸಿದನು ಭುಜಬಲಕೆ ಭುಜಬಲ
ಸರಿಯೆನಿಸಿ ಸಮ ಬೆಸನನೆಚ್ಚಾಡಿದನು ಕಲಿಕರ್ಣ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣವನ್ನು ಬಾಣಗಳಿಂದ ಕಡಿದನು. ಬಿಟ್ಟಿ ಬಾಣವನ್ನು ಸೈರಿಸಿಕೊಂಡು ಪುನಃ ಪ್ರತಿಯಾಗಿ ಪ್ರಯೋಗಿಸಿದನು. ಮೇಲೇರಿ ಬಂದ ಸೈನಿಕರನ್ನು ಸಂಭ್ರಮಿಸಿ ತಡೆದನು. ಸಿಂಹಗರ್ಜನೆ ಮಾಡಿದರೆ ತಾನೂ ಗರ್ಜಿಸಿದನು. ತಿರುಗಿದರೆ ತಿರುಗಿ, ಒತ್ತಿ ಬಂದರೆ ತಾನೂ ಒತ್ತಾಗಿ ಬಂದು, ಬಾಹುಬಲಕ್ಕೆ ಬಾಹುಬಲ ಸಮನೆನಿಸಿ ಸಮಸಮನಾಗಿ ಶೂರ ಕರ್ಣನು ಬಾಣಪ್ರಯೋಗ ಮಾಡಿದನು.
ಪದಾರ್ಥ (ಕ.ಗ.ಪ)
ಸರಳು-ಬಾಣ, ತರಹರಿಸು-ಸೈರಿಸು, ಸಮಬೆಸ -ಸಮಕ್ಕೆ ಸಮ ಬೆಸಕ್ಕೆ ಬೆಸ
ಮೂಲ ...{Loading}...
ಸರಳ ಸರಳಲಿ ಕಡಿದನೆಚ್ಚರೆ
ತರಹರಿಸಿ ಮಗುಳೆಚ್ಚನೌಕಿದ
ಡುರವಣಿಸಿದನು ಸಿಂಹಗರ್ಜನದೊಡನೆ ಗರ್ಜಿಸಿದ
ತಿರುಗೆ ತಿರುಗಿದನೊತ್ತಲಗಿದೊ
ತ್ತರಿಸಿದನು ಭುಜಬಲಕೆ ಭುಜಬಲ
ಸರಿಯೆನಿಸಿ ಸಮ ಬೆಸನನೆಚ್ಚಾಡಿದನು ಕಲಿಕರ್ಣ ॥34॥
೦೩೫ ಬಳಲಿದವು ತೇಜಿಗಳು ...{Loading}...
ಬಳಲಿದವು ತೇಜಿಗಳು ಸಾರಥಿ
ಯಳುಕಿದನು ಶರಹತಿಗೆ ಭೀಮನ
ಬಲು ಪತಾಕೆ ತನುತ್ರ ರಥ ಕರ್ಣಾಸ್ತ್ರಮಯವಾಯ್ತು
ಹಿಳುಕ ಹೊದಿಸಿದನಖಿಲ ದೆಸೆಗಳ
ನಿಲುಕಲರಿದೆನೆ ನಿಮಿಷ ಮಾತ್ರಕೆ
ಕಳಚಿ ಕಳೆದನು ಭೀಮ ತೊಟ್ಟನು ಮತ್ತೆ ಮಾರ್ಗಣವ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಕುದುರೆಗಳು ಆಯಾಸಗೊಂಡುವು, ಕರ್ಣನ ಬಾಣಗಳ ಹೊಡೆತಕ್ಕೆ ಭೀಮನ ಸಾರಥಿ ಅಳುಕಿದನು. ಭೀಮನ ಶ್ರೇಷ್ಠ ಪತಾಕೆ, ರಥ ಹಾಗೂ ರಕ್ಷಾಕವಚಗಳು ಕರ್ಣಾಸ್ತ್ರಗಳ ಮಯವಾಯಿತು. ಎಲ್ಲಾ ದಿಕ್ಕುಗಳನ್ನೂ ಸೋಕಲೂ ಸಾಧ್ಯವಿಲ್ಲವೆಂಬಂತೆ ಕರ್ಣನು ಬಾಣಗಳ ಗರಿಗಳನ್ನೇ ಹೊದಿಸಿದನು. ನಿಮಿಷ ಮಾತ್ರದಲ್ಲಿ ಭೀಮನು ಬಾಣ ಪ್ರಯೋಗಿಸಿ ಆ ಬಾಣಗಳ ಹೊದಿಕೆಯನ್ನು ಕಳಚಿ ಕಳೆದನು. ಮತ್ತೆ ಬಾಣವನ್ನು ತೊಟ್ಟನು.
ಪದಾರ್ಥ (ಕ.ಗ.ಪ)
ತನುತ್ರ-ರಕ್ಷಾಕವಚ,
ಮೂಲ ...{Loading}...
ಬಳಲಿದವು ತೇಜಿಗಳು ಸಾರಥಿ
ಯಳುಕಿದನು ಶರಹತಿಗೆ ಭೀಮನ
ಬಲು ಪತಾಕೆ ತನುತ್ರ ರಥ ಕರ್ಣಾಸ್ತ್ರಮಯವಾಯ್ತು
ಹಿಳುಕ ಹೊದಿಸಿದನಖಿಲ ದೆಸೆಗಳ
ನಿಲುಕಲರಿದೆನೆ ನಿಮಿಷ ಮಾತ್ರಕೆ
ಕಳಚಿ ಕಳೆದನು ಭೀಮ ತೊಟ್ಟನು ಮತ್ತೆ ಮಾರ್ಗಣವ ॥35॥
೦೩೬ ತರಹರಿಸು ಬಿಲುಗಾರನಾದರೆ ...{Loading}...
ತರಹರಿಸು ಬಿಲುಗಾರನಾದರೆ
ಪರಿಹರಿಸಿಕೊಳ್ಳೆನುತ ಪವನಜ
ಬಿರುಗಣೆಯಲಿರದೆಚ್ಚನಹಿತನ ಧನುವ ಸಾರಥಿಯ
ತುರಗವನು ಸಿಂಧವನು ಮಾರ್ಗಣ
ವೆರಡರಲಿ ನುಗ್ಗೊತ್ತೆ ರಥದಿಂ
ಧರಣಿಗಿಳಿದನು ಕರ್ಣ ಕೊಂಡನು ಹಲಗೆ ಖಂಡೆಯವ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸೈರಿಸಿಕೋ… ಬಿಲ್ಲುಗಾರನಾದರೆ ನಿವಾರಿಸಿಕೋ” ಎನ್ನುತ್ತಾ ಭೀಮನು ತೀಕ್ಷ್ಣವಾದ ಬಾಣಗಳನ್ನು ಪ್ರಯೋಗಿಸಿ, ಶತ್ರುವಿನ ಧನುವನ್ನೂ ಸಾರಥಿಯನ್ನೂ ಇರಿದನು. ಕುದುರೆ, ಧ್ವಜ ಮೊದಲಾದುವನ್ನು ಎರಡು ಬಾಣಗಳಿಂದ ಹುಡಿ ಹುಡಿಯಾಗುವಂತೆ ಹೊಡೆದಾಗ, ಕರ್ಣನು ರಥದಿಂದ ಕೆಳಗಿಳಿದು ಗುರಾಣಿ, ಖಡ್ಗವನ್ನು ತೆಗೆದುಕೊಂಡನು.
ಮೂಲ ...{Loading}...
ತರಹರಿಸು ಬಿಲುಗಾರನಾದರೆ
ಪರಿಹರಿಸಿಕೊಳ್ಳೆನುತ ಪವನಜ
ಬಿರುಗಣೆಯಲಿರದೆಚ್ಚನಹಿತನ ಧನುವ ಸಾರಥಿಯ
ತುರಗವನು ಸಿಂಧವನು ಮಾರ್ಗಣ
ವೆರಡರಲಿ ನುಗ್ಗೊತ್ತೆ ರಥದಿಂ
ಧರಣಿಗಿಳಿದನು ಕರ್ಣ ಕೊಂಡನು ಹಲಗೆ ಖಂಡೆಯವ ॥36॥
೦೩೭ ಲುಳಿಯಲೊಲೆದಿದಿರಾಗಿ ತಾಗಿದ ...{Loading}...
ಲುಳಿಯಲೊಲೆದಿದಿರಾಗಿ ತಾಗಿದ
ಬಲುಕಣೆಯ ಕರವಾಳನಿಕ್ಕಡಿ
ಗಳೆದು ಹಲಗೆಯನೆಂಟು ಕಡಿ ಮಾಡಿದನು ಕಲಿಭೀಮ
ತೊಲಗು ಬಾಹಿರ ಮತ್ತೆ ಸಾರಥಿ
ಬಿಲು ರಥವನನುಮಾಡು ಪಾರ್ಥಗೆ
ಕಳದ ಮೀಸಲು ಕೊಲ್ಲೆನೆಲವೋ ಕರ್ಣ ಹೋಗೆಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇಗವಾಗಿ ತಿರುಗಿಕೊಂಡು ಬಂದು ತಾಗಿದ ಬಾಣದಷ್ಟು ತೀಕ್ಷ್ಣವಾದ ಕತ್ತಿಯನ್ನು ಕಲಿಭೀಮನು ಎರಡು ತುಂಡು ಮಾಡಿ, ಹಲಗೆಯನ್ನು ಎಂಟು ಭಾಗ ಮಾಡಿ ಬಿಸಾಡಿದನು. “ನೀಚನೇ… ತೊಲಗು. ಪುನಃ ಸಾರಥಿಯನ್ನೂ ಬಿಲ್ಲು, ರಥಗಳನ್ನೂ ಸಿದ್ಧಮಾಡು. ನೀನು ಪಾರ್ಥನಿಗೆ ಯುದ್ಧದಲ್ಲಿ ಮೀಸಲಾಗಿರುವುದರಿಂದ ನಾನು ಕೊಲ್ಲುವುದಿಲ್ಲ ಎಲವೋ… ಕರ್ಣ, ಹೋಗು” ಎಂದನು.
ಪದಾರ್ಥ (ಕ.ಗ.ಪ)
ಲುಳಿ-ವೇಗ,
ಮೂಲ ...{Loading}...
ಲುಳಿಯಲೊಲೆದಿದಿರಾಗಿ ತಾಗಿದ
ಬಲುಕಣೆಯ ಕರವಾಳನಿಕ್ಕಡಿ
ಗಳೆದು ಹಲಗೆಯನೆಂಟು ಕಡಿ ಮಾಡಿದನು ಕಲಿಭೀಮ
ತೊಲಗು ಬಾಹಿರ ಮತ್ತೆ ಸಾರಥಿ
ಬಿಲು ರಥವನನುಮಾಡು ಪಾರ್ಥಗೆ
ಕಳದ ಮೀಸಲು ಕೊಲ್ಲೆನೆಲವೋ ಕರ್ಣ ಹೋಗೆಂದ ॥37॥
೦೩೮ ತೇರ ಚಾಚಲಿ ...{Loading}...
ತೇರ ಚಾಚಲಿ ಬೇಗ ಬಲುಗೈ
ಸಾರಥಿಯ ಬರಹೇಳು ಹಿಂದಣ
ಸಾರಥಿಯ ದೆಸೆಯಿಂದ ಬಂದುದು ಕರ್ಣ ಸೋಲುವನೆ
ವೀರನಾವೆಡೆ ಶೌರ್ಯ ಪಾರಾ
ವಾರನಾವೆಡೆಯೆನುತ ಕೌರವ
ಧಾರುಣೀಪತಿ ಬೆಸಸಿದನು ತನ್ನನುಜ ದುರ್ಜಯಗೆ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬೇರೆ ರಥವನ್ನು ಬೇಗನೆ ನೀಡೋಣವಾಗಲಿ. ಶೂರ ಸಾರಥಿಯನ್ನು ಬರಹೇಳು. ಹಿಂದಣ ಸಾರಥಿಯ ಕಾರಣದಿಂದ ಈ ಪರಿಸ್ಥಿತಿ ಉಂಟಾಯಿತು. ಇಲ್ಲದಿದ್ದರೆ ಕರ್ಣ ಸೋಲುವನೇ ? ವೀರನಾದ ಕರ್ಣ ಎಲ್ಲಿದ್ದಾನೆ ?, ಶೌರ್ಯ, ಪರಾಕ್ರಮಗಳಲ್ಲಿ ಮೇರೆ ಇಲ್ಲದವ ಕರ್ಣ ಎಲ್ಲಿದ್ದಾನೆ ?” ಎನ್ನುತ್ತಾ ಕೌರವರಾಯ ತನ್ನ ತಮ್ಮನಾದ ದುರ್ಜಯನನ್ನು ಕೇಳಿದನು.
ಮೂಲ ...{Loading}...
ತೇರ ಚಾಚಲಿ ಬೇಗ ಬಲುಗೈ
ಸಾರಥಿಯ ಬರಹೇಳು ಹಿಂದಣ
ಸಾರಥಿಯ ದೆಸೆಯಿಂದ ಬಂದುದು ಕರ್ಣ ಸೋಲುವನೆ
ವೀರನಾವೆಡೆ ಶೌರ್ಯ ಪಾರಾ
ವಾರನಾವೆಡೆಯೆನುತ ಕೌರವ
ಧಾರುಣೀಪತಿ ಬೆಸಸಿದನು ತನ್ನನುಜ ದುರ್ಜಯಗೆ ॥38॥
೦೩೯ ಬಿಲುದುಡುಕಿ ರಿಪುಭಟನೊಡನೆ ...{Loading}...
ಬಿಲುದುಡುಕಿ ರಿಪುಭಟನೊಡನೆ ಮುಂ
ಕೊಳಿಸಿದನು ದುರ್ಜಯನು ಹಿಮ್ಮೆ
ಟ್ಟೆಲವೊ ಪವನಜ ನಿಂದಡರಿವೆನು ನಿನ್ನೊಡಲನೆನುತ
ಒಲುಮೆಯೊಡಹುಟ್ಟಿದರ ಬಯಕೆಯ
ಸಲಿಸುವರೆ ನಾವಲ್ಲವೇ ಕುರು
ಕುಲ ಲಲಾಮರು ತಪ್ಪಿ ನುಡಿಯರೆನುತ್ತ ಮಂಡಿಸಿದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲನ್ನು ಹಿಡಿದು ಶತ್ರು ಸೈನಿಕನೊಡನೆ ದುರ್ಜಯನು ಮುನ್ನುಗ್ಗಿ, “ಎಲವೋ… ವಾಯುಪುತ್ರ ಭೀಮನೇ… ಹಿಂದಿರುಗು. ಎದುರು ನಿಂತರೆ ನಿನ್ನ ಶರೀರವನ್ನು ಕತ್ತರಿಸುತ್ತೇನೆ.” ಎಂದನು. ಪ್ರತಿಯಾಗಿ ಭೀಮನು “ಪ್ರೀತಿಯ ಒಡಹುಟ್ಟಿದವರ ಬಯಕೆಗಳನ್ನು ಸಲ್ಲಿಸಬೇಕಾದುದು ನಾವು ತಾನೇ? ಕುರುಕುಲ ಶ್ರೇಷ್ಠರು ಎಂದೂ ತಪ್ಪಿ ಮಾತನಾಡುವುದಿಲ್ಲ “ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಅರಿ-ಕತ್ತರಿಸು,
ಮೂಲ ...{Loading}...
ಬಿಲುದುಡುಕಿ ರಿಪುಭಟನೊಡನೆ ಮುಂ
ಕೊಳಿಸಿದನು ದುರ್ಜಯನು ಹಿಮ್ಮೆ
ಟ್ಟೆಲವೊ ಪವನಜ ನಿಂದಡರಿವೆನು ನಿನ್ನೊಡಲನೆನುತ
ಒಲುಮೆಯೊಡಹುಟ್ಟಿದರ ಬಯಕೆಯ
ಸಲಿಸುವರೆ ನಾವಲ್ಲವೇ ಕುರು
ಕುಲ ಲಲಾಮರು ತಪ್ಪಿ ನುಡಿಯರೆನುತ್ತ ಮಂಡಿಸಿದ ॥39॥
೦೪೦ ಕೀಲಿಸಿದನೆಣ್ಟಮ್ಬಿನಲಿ ತುರ ...{Loading}...
ಕೀಲಿಸಿದನೆಂಟಂಬಿನಲಿ ತುರ
ಗಾಳಿಯನು ಸಾರಥಿಯನಾತನ
ಕೋಲ ಖಂಡಿಸಿ ಧನುವ ಕಡಿದನು ಮೂರುಬಾಣದಲಿ
ಹೋಳುಗಳೆದನು ಸುಭಟನಿಟ್ಟೆಲು
ಮೂಳೆಯನು ಮುಂಕೊಂಡ ಬಿರುದರ
ಸೀಳಿದನು ಕರೆ ಮತ್ತೆ ಕರ್ಣನನೆನುತ ಬೊಬ್ಬಿರಿದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಶತ್ರುವಿನ ಕುದುರೆಗಳನ್ನು ಸಾರಥಿಯನ್ನು ಎಂಟು ಬಾಣಗಳಿಂದ ತೇಲಿಸಿದನು (ನಾಟಿದನು). ಶತ್ರುವಿನ ಬಾಣವನ್ನು ಕತ್ತರಿಸಿ, ಮೂರು ಬಾಣಗಳಿಂದ ಧನುಸ್ಸನ್ನು ತುಂಡು ಮಾಡಿದನು. ಯೋಧನ ಬೆನ್ನ ಮೂಳೆಯನ್ನು ಚೂರು ಚೂರು ಮಾಡಿದನು. ಮುಂದೆ ಎದುರಾದ ಬಿರುದಾಂಕಿತರನ್ನು ಸೀಳಿದನು. “ಮತ್ತೆ ನಿನ್ನ ಕರ್ಣನನ್ನು ಯುದ್ಧಕ್ಕೆ ಕರೆ” ಎನ್ನುತ್ತಾ ಭೀಮನು ಆರ್ಭಟಿಸಿದನು.
ಮೂಲ ...{Loading}...
ಕೀಲಿಸಿದನೆಂಟಂಬಿನಲಿ ತುರ
ಗಾಳಿಯನು ಸಾರಥಿಯನಾತನ
ಕೋಲ ಖಂಡಿಸಿ ಧನುವ ಕಡಿದನು ಮೂರುಬಾಣದಲಿ
ಹೋಳುಗಳೆದನು ಸುಭಟನಿಟ್ಟೆಲು
ಮೂಳೆಯನು ಮುಂಕೊಂಡ ಬಿರುದರ
ಸೀಳಿದನು ಕರೆ ಮತ್ತೆ ಕರ್ಣನನೆನುತ ಬೊಬ್ಬಿರಿದ ॥40॥
೦೪೧ ರಥವ ಮೇಳೈಸಿದನು ...{Loading}...
ರಥವ ಮೇಳೈಸಿದನು ಹೊಸ ಸಾ
ರಥಿಯ ಕರಸಿದನಾಹವದೊಳತಿ
ರಥಭಯಂಕರನೇರಿದನು ಬಲುಬಿಲ್ಲನೊದರಿಸುತ
ಪೃಥುವಿ ನೆಗ್ಗಲು ಸುಭಟ ಸಾಗರ
ಮಥನ ಕರ್ಣನು ಭೀಮಸೇನನ
ರಥವನರಸುತ ಬಂದು ಪುನರಪಿ ಕಾಳೆಗವ ಹಿಡಿದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥವನ್ನು ಸಿದ್ಧಪಡಿಸಿಕೊಂಡು, ಹೊಸ ಸಾರಥಿಯನ್ನು ಕರೆಸಿಕೊಂಡು ಯುದ್ಧದಲ್ಲಿ ಅತಿರಥರಿಗೆ ಭಯಂಕರನಾದ ಕರ್ಣನು ರಥವನ್ನು ಏರಿದನು. ಶತ್ರುಸೇನೆಯೆಂಬ ಸಾಗರವನ್ನು ಮಥಿಸುವ ಕರ್ಣನು ಭಾರಿ ಧನುಸ್ಸನ್ನು ಠೇಂಕಾರ ಮಾಡುತ್ತಾ ಭೂಮಿಯೇ ನಡುಗುವಂತೆ ಭೀಮಸೇನನ ರಥವನ್ನು ಹುಡುಕುತ್ತಾ ಬಂದು ಪುನಃ ಕಾಳಗವನ್ನು ಪ್ರಾರಂಭಿಸಿದನು.
ಮೂಲ ...{Loading}...
ರಥವ ಮೇಳೈಸಿದನು ಹೊಸ ಸಾ
ರಥಿಯ ಕರಸಿದನಾಹವದೊಳತಿ
ರಥಭಯಂಕರನೇರಿದನು ಬಲುಬಿಲ್ಲನೊದರಿಸುತ
ಪೃಥುವಿ ನೆಗ್ಗಲು ಸುಭಟ ಸಾಗರ
ಮಥನ ಕರ್ಣನು ಭೀಮಸೇನನ
ರಥವನರಸುತ ಬಂದು ಪುನರಪಿ ಕಾಳೆಗವ ಹಿಡಿದ ॥41॥
೦೪೨ ಗೆಲಿದು ಹೋಗದಿರಿನ್ನು ...{Loading}...
ಗೆಲಿದು ಹೋಗದಿರಿನ್ನು ಕರುಳನು
ಕಲಕುವೆನು ನಿಲ್ಲೆನುತ ರವಿಸುತ
ಸೆಳೆದು ಮುಷ್ಟಿಯ ಕೆನ್ನೆಗಡಿಯಂಬಿನಲಿ ಬರೆ ಕಂಡು
ಎಲವೊ ಲೋಕದ ಭಂಡ ನಿನ್ನೊಡ
ನುಲಿವವರು ನಾವಲ್ಲ ಮಲೆತರೆ
ತಲೆಯ ಕಾಯಿದು ಬಿಡುವೆನಲ್ಲದೆ ಕೊಲುವನಲ್ಲೆಂದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗೆದ್ದೆನೆಂದು ಹೋಗಬೇಡ ನಿನ್ನ ಕರುಳನ್ನು ಕಲಕಿ ಬಿಡುತ್ತೇನೆ. ನಿಲ್ಲು.” ಎನ್ನುತ್ತಾ ಕರ್ಣನು ಮುಷ್ಟಿಯಲ್ಲಿ ಕೆನ್ನೆಯವರೆಗೆ ಸೆಳೆದು ಹಿಡಿದಿದ್ದ ಬಾಣದೊಡನೆ ಬಂದುದನ್ನು ಕಂಡು, ಭೀಮನು “ಎಲವೋ ಲೋಕದ ಭಂಡ, ನಿನ್ನೊಡನೆ ಮಾತನಾಡುವವರು ನಾವಲ್ಲ. ಉದ್ಧಟತನದಿಂದ ವರ್ತಿಸಿದರೂ ನಿನ್ನ ತಲೆ ಕಾಯುವೆನೇ ಹೊರತು ಕೊಲ್ಲುವವನಲ್ಲ ಎಂದನು.
ಮೂಲ ...{Loading}...
ಗೆಲಿದು ಹೋಗದಿರಿನ್ನು ಕರುಳನು
ಕಲಕುವೆನು ನಿಲ್ಲೆನುತ ರವಿಸುತ
ಸೆಳೆದು ಮುಷ್ಟಿಯ ಕೆನ್ನೆಗಡಿಯಂಬಿನಲಿ ಬರೆ ಕಂಡು
ಎಲವೊ ಲೋಕದ ಭಂಡ ನಿನ್ನೊಡ
ನುಲಿವವರು ನಾವಲ್ಲ ಮಲೆತರೆ
ತಲೆಯ ಕಾಯಿದು ಬಿಡುವೆನಲ್ಲದೆ ಕೊಲುವನಲ್ಲೆಂದ ॥42॥
೦೪೩ ಸರಳ ಸರಿಸೋನೆಯನು ...{Loading}...
ಸರಳ ಸರಿಸೋನೆಯನು ಪವನಜ
ಗಿರಿಗೆ ಕರೆದುದು ಕರ್ಣ ಮೇಘದ
ಹೊರಳಿಯೇನೆಂಬೆನು ಮಹಾಸಂಗ್ರಾಮ ಸಂಭ್ರಮವ
ಸರಳಿನಲಿ ಧನುವಿನಲಿ ಗದೆಯಲಿ
ಕರಹತಿಯಲಹಿತಾಸ್ತ್ರವನು ಸಂ
ಹರಿಸಿ ಬೀಸಿತು ಭೀಮಮಾರುತ ಕರ್ಣಮೇಘದಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನೆಂಬ ಮೋಡಗಳ ರಾಸಿ ಭೀಮನೆಂಬ ಬೆಟ್ಟದ ಮೇಲೆ ನಿರಂತರನಾಗಿ ಬಾಣಗಳ ಸುರಿ ಮಳೆಯನ್ನೇ ಸುರಿಸಿತು. ಆ ಮಹಾ ಸಂಗ್ರಾಮದ ಸಂಭ್ರಮವನ್ನು ಏನೆಂದು ಹೇಳಲಿ ? ತನ್ನ ಬಾಣ, ಧನುಸ್ಸು, ಗದೆ, ಕೈಗಳ ಹೊಡೆತ-ಇವೇ ಮೊದಲಾದವುಗಳಿಂದ ಶತ್ರುವಿನ ಅಸ್ತ್ರವನ್ನು ಉಪಸಂಹಾರ ಮಾಡಿ, ಭೀಮ ಮಾರುತವು ಕರ್ಣ ಮೇಘದ ಮೇಲೆ ಬೀಸಿತು.
ಪದಾರ್ಥ (ಕ.ಗ.ಪ)
ಹೊರಳಿ-ರಾಶಿ,
ಮೂಲ ...{Loading}...
ಸರಳ ಸರಿಸೋನೆಯನು ಪವನಜ
ಗಿರಿಗೆ ಕರೆದುದು ಕರ್ಣ ಮೇಘದ
ಹೊರಳಿಯೇನೆಂಬೆನು ಮಹಾಸಂಗ್ರಾಮ ಸಂಭ್ರಮವ
ಸರಳಿನಲಿ ಧನುವಿನಲಿ ಗದೆಯಲಿ
ಕರಹತಿಯಲಹಿತಾಸ್ತ್ರವನು ಸಂ
ಹರಿಸಿ ಬೀಸಿತು ಭೀಮಮಾರುತ ಕರ್ಣಮೇಘದಲಿ ॥43॥
೦೪೪ ಧನುವನಿಕ್ಕಡಿಗಳೆದು ರಿಪು ...{Loading}...
ಧನುವನಿಕ್ಕಡಿಗಳೆದು ರಿಪು ಸೂ
ತನ ಶಿರವ ಹರಿಯೆಸಲು ಸಾರಥಿ
ತನವ ತಾನೇ ಮಾಡುತಿದಿರಾದನು ಕೃಪಾಣದಲಿ
ಕನಲಿ ಖಡ್ಗವ ಮುರಿಯೆಸಲು ಮು
ಮ್ಮೊನೆಯ ಶೂಲದಲಿಟ್ಟನಂತದ
ನನಿಲಸುತ ಖಂಡಿಸಲು ಮುರಿದನು ಮೋನದಲಿ ಕರ್ಣ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಕರ್ಣನ ಧನುಸ್ಸನ್ನು ಎರಡು ತುಂಡಾಗಿ ಕತ್ತರಿಸಿ ಅವನ ಸಾರಥಿಯ ತಲೆ ಕತ್ತರಿಸುವಂತೆ ಬಾಣ ಪ್ರಯೋಗಿಸಲು, ಕರ್ಣನು ಸಾರಥ್ಯವನ್ನು ತಾನೇ ಮಾಡುತ್ತಾ ಖಡ್ಗದೊಂದಿಗೆ ಭೀಮನಿಗೆಎದುರಾದನು. ಆಗ ಭೀಮನು ಕೋಪದಿಂದ ಆ ಕತ್ತಿಯನ್ನು ತುಂಡಾಗುವಂತೆ ಬಾಣ ಪ್ರಯೋಗಿಸಿದನು. ಪ್ರತಿಯಗಿ ಮೂರು ಮೊನೆಯ ಶೂಲದಿಂದ ಕರ್ಣನು ಹೊಡೆದನು. ಅದನ್ನು ಸಹ ಭೀಮನು ಕತ್ತರಿಸಲು ಕರ್ಣನು ಮೌನವಾಗಿ ಹಿಂತಿರುಗಿದನು.
ಪದಾರ್ಥ (ಕ.ಗ.ಪ)
ಇಕ್ಕಡಿಗಳೆ-ಎರಡು ಭಾಗ ಮಾಡು,
ಮೂಲ ...{Loading}...
ಧನುವನಿಕ್ಕಡಿಗಳೆದು ರಿಪು ಸೂ
ತನ ಶಿರವ ಹರಿಯೆಸಲು ಸಾರಥಿ
ತನವ ತಾನೇ ಮಾಡುತಿದಿರಾದನು ಕೃಪಾಣದಲಿ
ಕನಲಿ ಖಡ್ಗವ ಮುರಿಯೆಸಲು ಮು
ಮ್ಮೊನೆಯ ಶೂಲದಲಿಟ್ಟನಂತದ
ನನಿಲಸುತ ಖಂಡಿಸಲು ಮುರಿದನು ಮೋನದಲಿ ಕರ್ಣ ॥44॥
೦೪೫ ಪವನಜನ ಬಡಿಹೋರಿ ...{Loading}...
ಪವನಜನ ಬಡಿಹೋರಿ ಹೋದನೆ
ರವಿ ಸುತನು ಹೋಗಲಿ ವೃಕೋದರ
ನವಯವವ ಕೇಣಿಯನು ಕೊಟ್ಟೆವು ಬಾಣತತಿಗೆನುತ
ತವ ಕುಮಾರರು ಮತ್ತೆ ಬಹಳಾ
ಹವವ ಹೊಕ್ಕರು ಹಕ್ಕಲಾದವ
ರವಗಡಿಸಿ ಕೆಣಕಿದರು ರಿಪು ಕಲ್ಪಾಂತ ಭೈರವನ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನಿಂದ ಹೋರಿಯಂತೆ ಹೊಡೆಸಿಕೊಳ್ಳುವವನಾದನೇ ಕರ್ಣನು ? ಹೋಗಲಿ. ಭೀಮನ ದೇಹದ ಅಂಗಗಳನ್ನು ಬಾಣಗಳ ಸಮೂಹಕ್ಕೆ ಗುತ್ತಿಗೆಗೆ ಕೊಟ್ಟಿದ್ದೇವೆ ಎನ್ನುತ್ತಾ ಕೌರವ ಕುಮಾರರು ಪುನಃ ಯುದ್ಧ ಭೂಮಿಯನ್ನು ಪ್ರವೇಶಿಸಿದರು, ಚದುರಿ ಹಿಮ್ಮೆಟ್ಟಿದ್ದ ಅವರು ಆರ್ಭಟಿಸಿ, ಶತ್ರುಗಳಿಗೆ ಪ್ರಳಯಕಾಲದ ಭೈರವ ಸ್ವರೂಪಿಯಾದ ಭೀಮನನ್ನು ಕೆಣಕಿದರು.
ಪದಾರ್ಥ (ಕ.ಗ.ಪ)
ಬಡಿಹೋರಿ-ಗೂಳಿಯಂತೆ ಹೊಡೆಸಿಕೊಳ್ಳುವವ, ಹಕ್ಕಲಾದವರು-ಚದುರಿದವರು,
ಮೂಲ ...{Loading}...
ಪವನಜನ ಬಡಿಹೋರಿ ಹೋದನೆ
ರವಿ ಸುತನು ಹೋಗಲಿ ವೃಕೋದರ
ನವಯವವ ಕೇಣಿಯನು ಕೊಟ್ಟೆವು ಬಾಣತತಿಗೆನುತ
ತವ ಕುಮಾರರು ಮತ್ತೆ ಬಹಳಾ
ಹವವ ಹೊಕ್ಕರು ಹಕ್ಕಲಾದವ
ರವಗಡಿಸಿ ಕೆಣಕಿದರು ರಿಪು ಕಲ್ಪಾಂತ ಭೈರವನ ॥45॥
೦೪೬ ವೀರರೆನ್ದೆನಿಸುವರು ತೊಡೆಹದ ...{Loading}...
ವೀರರೆಂದೆನಿಸುವರು ತೊಡೆಹದ
ಶೌರಿಯದ ಸಿರಿವಂತರರಸುಕು
ಮಾರಕರು ನಿನ್ನವರು ಕೋಮಲಧೈರ್ಯರಾಹವಕೆ
ಮಾರಿ ಮುಖದವ ಕಠಿನಮನ ನಿ
ಸ್ಸಾರ ಹೃದಯನು ಭೀಮನವನೊಳು
ಹೋರಿದವರೇನಹರು ಕೇಳೈ ನಿನ್ನವರ ವಿಧಿಯ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆ ಧೃತರಾಷ್ಟ್ರ, ನಿನ್ನವರು ಅರಸು ಕುಮಾರರು, ಸಿರಿವಂತರು. ಶೌರ್ಯದ ಲೇಪನ ಹೊಂದಿದ ವೀರರೆಂದೆನಿಸಿಕೊಳ್ಳುವರು. ಯುದ್ಧದ ವಿಷಯದಲ್ಲಿ ಕೋಮಲವಾದ ಧೈರ್ಯವುಳ್ಳವರಷ್ಟೆ. ಆದರೆ ಮಾರಿ ಮುಖದವನಾದ, ಕಠಿಣಮನನಾದ, ನಿಸ್ಸಾರ ಹೃದಯನಾದ ಭೀಮನೊಡನೆ ಹೋರಾಟಕ್ಕೆ ಸ್ಪರ್ಧೆಗೆ ನಿಂತರೆ ಏನಾಗುವರು ? ನಿನ್ನವರ ವಿಧಿಯನ್ನು ಕೇಳು “ಎಂದನು ಸಂಜಯ.
ಪದಾರ್ಥ (ಕ.ಗ.ಪ)
ತೊಡೆಹದ-ಲೇಪನಗೊಂಡ,
ಮೂಲ ...{Loading}...
ವೀರರೆಂದೆನಿಸುವರು ತೊಡೆಹದ
ಶೌರಿಯದ ಸಿರಿವಂತರರಸುಕು
ಮಾರಕರು ನಿನ್ನವರು ಕೋಮಲಧೈರ್ಯರಾಹವಕೆ
ಮಾರಿ ಮುಖದವ ಕಠಿನಮನ ನಿ
ಸ್ಸಾರ ಹೃದಯನು ಭೀಮನವನೊಳು
ಹೋರಿದವರೇನಹರು ಕೇಳೈ ನಿನ್ನವರ ವಿಧಿಯ ॥46॥
೦೪೭ ಒಳಗೊಳಗೆ ತನ್ನಾಣೆ ...{Loading}...
ಒಳಗೊಳಗೆ ತನ್ನಾಣೆ ಘೋಷಣೆ
ಸಲುವುದಲ್ಲದೆ ಸೊಡರು ಬೀದಿಗೆ
ಸುಳಿಯಲೆಲ್ಲಿಯ ಬೆಳಗು ತನ್ನುಳಿವಿಂಗೆ ಹೊಣೆಯಾರು
ಕೆಲಬಲದ ಮನ್ನೆಯರ ಹೊಯ್ವ
ಗ್ಗಳಿಕೆ ಕೊಂಬುದೆ ಭೀಮನಲಿ ಕೈ
ಹೊಲಸುಗಾರನು ಹಿಂಡಿದನು ಕೌರವ ಸಹೋದರರ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನೆಯೊಳಗೆ ಮಾತ್ರ ತಮ್ಮ ಆಜ್ಞೆ, ಘೋಷಣೆ ನಡೆಯುತ್ತದಷ್ಟೆ. ಉರಿವ ಸೊಡರು ಮನೆಯೊಳಗೆ ಬೆಳಕು ಕೊಡುತ್ತದೆ. ಅದನ್ನು ಬೀದಿಯನ್ನು ಬೆಳಗಲೆಂದು ತಂದರೆ ಗಾಳಿಗೆ ದೀಪವೇ ಆರಿ ಹೋಗುತ್ತದೆ. ಬೆಳಕೆಲ್ಲಿ ಉಳಿದೀತು ? ಅದರ ಉಳಿವಿಗೆ ಯಾರು ಹೊಣೆಯಾದಾರು ? ಏನೋ, ಅಕ್ಕಪಕ್ಕದ ಸಣ್ಣಪುಟ್ಟ ರಾಜರನ್ನು ಬಡಿದು ಗೆಲ್ಲುವ ದೊಡ್ಡಸ್ತಿಕೆ ಭೀಮನಲ್ಲಿ ನಡೆಯುತ್ತದೆಯೇ ? ಕೊಳಕು ಕೈಯಿನ ಭೀಮ ಆ ಕೌರವ ಸೋದರರನ್ನೆಲ್ಲ ಹಿಂಡಿ ಕೊಂದು ಹಾಕಿದನು.
ಮೂಲ ...{Loading}...
ಒಳಗೊಳಗೆ ತನ್ನಾಣೆ ಘೋಷಣೆ
ಸಲುವುದಲ್ಲದೆ ಸೊಡರು ಬೀದಿಗೆ
ಸುಳಿಯಲೆಲ್ಲಿಯ ಬೆಳಗು ತನ್ನುಳಿವಿಂಗೆ ಹೊಣೆಯಾರು
ಕೆಲಬಲದ ಮನ್ನೆಯರ ಹೊಯ್ವ
ಗ್ಗಳಿಕೆ ಕೊಂಬುದೆ ಭೀಮನಲಿ ಕೈ
ಹೊಲಸುಗಾರನು ಹಿಂಡಿದನು ಕೌರವ ಸಹೋದರರ ॥47॥
೦೪೮ ದ್ರುಮ ವಿಕರ್ಣ ...{Loading}...
ದ್ರುಮ ವಿಕರ್ಣ ಸುಷೇಣ ಚಾರು
ಕ್ರಮ ವಿವಿತ್ಸುಕ ವಜ್ರಬಾಹುಕ
ದಮನ ದೀರ್ಘೋದರ ಮಹೋದರ ಕುಂಡದಾರುಕನ
ಯಮನ ಕೈಯೆಡೆಗೊಟ್ಟು ಘನವಿ
ಕ್ರಮದ ಸಿರಿ ಹೊದರೇಳೆ ಜಯವಿ
ಕ್ರಮದೊಳಬ್ಬರಿಸಿದನು ನಿಷ್ಠುರ ಸಿಂಹನಾದದಲಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರುಮ, ವಿಕರ್ಣ, ಸುಷೇಣ, ಚಾರುಕ್ರಮ, ವಿವಿತ್ಸುಕ, ವಜ್ರಬಾಹುಕ, ದಮನ, ದೀರ್ಘೋದರ, ಮಹೋದರ, ಕುಂಡದಾರುಕನೇ ಮೊದಲಾದವರನ್ನು ಯಮನ ಕೈಗೆ ಕೊಟ್ಟು ಗಂಭೀರ ಪರಾಕ್ರಮದ ಸಿರಿ ಅತಿಶಯವಾಗಲು ಜಯದ ಸಂಭ್ರಮದಲ್ಲಿ ಭೀಮನು ನಿಷ್ಠುರ ಸಿಂಹನಾದಗೈಯುತ್ತಾ ಆರ್ಭಟಿಸಿದನು.
ಮೂಲ ...{Loading}...
ದ್ರುಮ ವಿಕರ್ಣ ಸುಷೇಣ ಚಾರು
ಕ್ರಮ ವಿವಿತ್ಸುಕ ವಜ್ರಬಾಹುಕ
ದಮನ ದೀರ್ಘೋದರ ಮಹೋದರ ಕುಂಡದಾರುಕನ
ಯಮನ ಕೈಯೆಡೆಗೊಟ್ಟು ಘನವಿ
ಕ್ರಮದ ಸಿರಿ ಹೊದರೇಳೆ ಜಯವಿ
ಕ್ರಮದೊಳಬ್ಬರಿಸಿದನು ನಿಷ್ಠುರ ಸಿಂಹನಾದದಲಿ ॥48॥
೦೪೯ ಇದೆ ಸಮೀರಕುಮಾರಕನ ...{Loading}...
ಇದೆ ಸಮೀರಕುಮಾರಕನ ಜಯ
ಮದದ ಸಿಂಹಧ್ವನಿಯೆನುತ ಹಿ
ಗ್ಗಿದನು ಧರ್ಮಜನೊದರಿದವು ಗಂಭೀರಭೇರಿಗಳು
ಕದನ ಲಗ್ಗೆಯ ಕಹಳೆ ಬಹು ವಾ
ದ್ಯದ ಮಹಾದ್ಭುತರಭಸ ಮಿಗೆ ಹೂ
ಡಿದನು ಸನ್ನಾಹದಲಿ ಹೊಕ್ಕನು ಮತ್ತೆ ಕಲಿಕರ್ಣ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಭೀಮನ ಜಯ ಮದದ ಸಿಂಹಧ್ವನಿ ಎನ್ನುತ್ತ ಧರ್ಮಜನು ಹಿಗ್ಗಿದನು. ಗಂಭೀರ ಭೇರಿಗಳು ಮೊಳಗಿದವು. ಯುದ್ಧದ ಆಕ್ರಮಣದ ಕಹಳೆ, ಅನೇಕ ವಾದ್ಯಗಳ ಮಹಾ ಅದ್ಭುತ ರಭಸ ಹೆಚ್ಚಲು ಕಲಿಕರ್ಣನು ಪುನಃ ಸಿದ್ಧತೆಯಿಂದ ಯುದ್ಧಭೂಮಿಯನ್ನು ಪ್ರವೇಶಿಸಿದನು.
ಮೂಲ ...{Loading}...
ಇದೆ ಸಮೀರಕುಮಾರಕನ ಜಯ
ಮದದ ಸಿಂಹಧ್ವನಿಯೆನುತ ಹಿ
ಗ್ಗಿದನು ಧರ್ಮಜನೊದರಿದವು ಗಂಭೀರಭೇರಿಗಳು
ಕದನ ಲಗ್ಗೆಯ ಕಹಳೆ ಬಹು ವಾ
ದ್ಯದ ಮಹಾದ್ಭುತರಭಸ ಮಿಗೆ ಹೂ
ಡಿದನು ಸನ್ನಾಹದಲಿ ಹೊಕ್ಕನು ಮತ್ತೆ ಕಲಿಕರ್ಣ ॥49॥
೦೫೦ ನವ ವರೂಥ ...{Loading}...
ನವ ವರೂಥ ತುರಂಗ ಸಾರಥಿ
ಸವಗ ಮೊಚ್ಚಯದಲ್ಲಿ ಬಹಳಾ
ಹವದೊಳಗೆ ಮುಂಕೊಂಡು ಭೀಮನ ಹಳಚಿದನು ಕರ್ಣ
ತವಕ ಮಿಗಲೆಚ್ಚಾಡಿ ಪುನರಪಿ
ಪವನಜನ ಘಾಯದಲಿ ಸೋಲಿದು
ಬವರ ಮುಖದಲಿ ಹಿಂಗಿದನು ಹದಿನೆಂಟು ಸೂಳಿನಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಸ ರಥ, ಕುದುರೆ, ಸಾರಥಿ, ಕವಚ, ಪಾದರಕ್ಷೆಯೊಡಗೂಡಿ ಭಾರೀ ಯುದ್ಧದಲ್ಲಿ ಮುಂದೆ ಹೋಗಿ ಕರ್ಣನು ಭೀಮನನ್ನು ಎದುರಿಸಿದನು. ತವಕ ಹೆಚ್ಚಿ ಕಾದಾಡಿ ಭೀಮನ ಹೊಡೆತದಿಂದ ಪುನಃ ಸೋತು ಯುದ್ಧದಲ್ಲಿ ಹದಿನೆಂಟು ಬಾರಿ ಹಿಂದೆ ಸರಿದನು.
ಪದಾರ್ಥ (ಕ.ಗ.ಪ)
ಸವಗ-ಕವಚ, ಮೊಚ್ಚಯ-ಪಾದರಕ್ಷೆ,
ಮೂಲ ...{Loading}...
ನವ ವರೂಥ ತುರಂಗ ಸಾರಥಿ
ಸವಗ ಮೊಚ್ಚಯದಲ್ಲಿ ಬಹಳಾ
ಹವದೊಳಗೆ ಮುಂಕೊಂಡು ಭೀಮನ ಹಳಚಿದನು ಕರ್ಣ
ತವಕ ಮಿಗಲೆಚ್ಚಾಡಿ ಪುನರಪಿ
ಪವನಜನ ಘಾಯದಲಿ ಸೋಲಿದು
ಬವರ ಮುಖದಲಿ ಹಿಂಗಿದನು ಹದಿನೆಂಟು ಸೂಳಿನಲಿ ॥50॥
೦೫೧ ಮುಳಿದು ಮೀಸೆಯ ...{Loading}...
ಮುಳಿದು ಮೀಸೆಯ ಮುರಿದು ಹುಬ್ಬನು
ಬಲಿದು ದಳ್ಳುರಿದಿರುಳನಕ್ಷಿಗ
ಳೊಳಗೆ ಪಸರಿಸಿ ಘುಡುಘುಡಿಸಿ ರೋಮಾಳಿ ಸೈನಿಮಿರೆ
ಹಲು ಮೊರೆದು ಹೊಗರಿಡುವ ಮೋರೆಯ
ಲಿಳಿವ ಬೆಮರನು ಬೆರಳ ಕೊನೆಯಲಿ
ಬಳಿದು ಭಾರ್ಗವದತ್ತಬಾಣಕೆ ನೀಡಿದನು ಕರವ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಪಿಸಿ, ಮೀಸೆಯನ್ನು ಹುರಿಮಾಡಿ, ಹುಬ್ಬುಗಳನ್ನು ಗಂಟಿಕ್ಕಿ, ಧಗಧಗಿಸುವ ಉರಿಯ ತಿರುಳು ಕಣ್ಣುಗಳೊಳಗೆ ಹರಡಿರಲು, ಆರ್ಭಟಿಸಿ, ಕೂದಲು ನಿಮಿರಿ ನಿಲ್ಲಲು, ಹಲ್ಲು ಕಡಿಯುತ್ತಾ , ಕಾಂತಿಯುಕ್ತವಾದ ಮುಖದ ಮೇಲೆ ಇಳಿಯುತ್ತಿರುವ ಬೆವರನ್ನು ಬೆರಳ ಕೊನೆಯಿಂದ ಒರೆಸಿ ಪರಶುರಾಮನು ಕೊಟ್ಟ ಬಾಣಕ್ಕೆ ಕರ್ಣನು ತನ್ನ ಕೈಗಳನ್ನು ನೀಡಿದನು.
ಮೂಲ ...{Loading}...
ಮುಳಿದು ಮೀಸೆಯ ಮುರಿದು ಹುಬ್ಬನು
ಬಲಿದು ದಳ್ಳುರಿದಿರುಳನಕ್ಷಿಗ
ಳೊಳಗೆ ಪಸರಿಸಿ ಘುಡುಘುಡಿಸಿ ರೋಮಾಳಿ ಸೈನಿಮಿರೆ
ಹಲು ಮೊರೆದು ಹೊಗರಿಡುವ ಮೋರೆಯ
ಲಿಳಿವ ಬೆಮರನು ಬೆರಳ ಕೊನೆಯಲಿ
ಬಳಿದು ಭಾರ್ಗವದತ್ತಬಾಣಕೆ ನೀಡಿದನು ಕರವ ॥51॥
೦೫೨ ಎಲವೆಲವೊ ಕಲಿಯಾಗು ...{Loading}...
ಎಲವೆಲವೊ ಕಲಿಯಾಗು ಮಾರುತಿ
ಗೆಲಿದನೆಂದಿರಬೇಡ ಸೋಲದ
ಗೆಲವಿನುದಯ ಮುಹೂರ್ತ ವಶ ಮೈಗುಡದೆ ಕಾದುವುದು
ಛಲವದುಳ್ಳಡೆ ಸಾಕು ನೀನೀ
ಹಲಗೆಯಲಿ ಹೊಕ್ಕಾಡಿ ಮರಳಿದು
ತಲೆವೆರಸಿ ನೀ ಹೋದಡಸ್ತ್ರತ್ಯಾಗ ತನಗೆಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲವೆಲವೋ ಮಾರುತಿ… ಶೂರನಾಗು, ಗೆದ್ದೆನೆಂದು ಸುಮ್ಮನಿರಬೇಡ. ಆಯಾ ಸೋಲು ಗೆಲುವಿನ ಉದಯಮುಹೂರ್ತಕ್ಕೆ ವಶವಾಗುತ್ತದೆ. ಮೈಯೊಡ್ಡದೆ ಕಾದುವುದು. ಛಲವಿರುವುದಾದರೆ ಸಾಕು. ನೀನು ಯುದ್ಧವೆಂಬ ದ್ಯೂತದಲ್ಲಿ ಕಾದಾಡಿ , ತಲೆಯುಳಿಸಿಕೊಂಡು ಹಿಂತಿರುಗಿ ಹೋದರೆ ನನಗೆ ಅಸ್ತ್ರತ್ಯಾಗವೇ ಗತಿ ಎಂದು ಕರ್ಣನು ಹೇಳಿದನು.
ಮೂಲ ...{Loading}...
ಎಲವೆಲವೊ ಕಲಿಯಾಗು ಮಾರುತಿ
ಗೆಲಿದನೆಂದಿರಬೇಡ ಸೋಲದ
ಗೆಲವಿನುದಯ ಮುಹೂರ್ತ ವಶ ಮೈಗುಡದೆ ಕಾದುವುದು
ಛಲವದುಳ್ಳಡೆ ಸಾಕು ನೀನೀ
ಹಲಗೆಯಲಿ ಹೊಕ್ಕಾಡಿ ಮರಳಿದು
ತಲೆವೆರಸಿ ನೀ ಹೋದಡಸ್ತ್ರತ್ಯಾಗ ತನಗೆಂದ ॥52॥
೦೫೩ ಉಣ್ಟು ಶಿವ ...{Loading}...
ಉಂಟು ಶಿವ ಶಿವ ಹುಸಿಯ ನುಡಿ ನಿನ
ಗುಂಟೆ ಗೆಲ್ಲದೆ ಮಾಣೆ ಶೌರ್ಯದ
ಗಂಟು ಬಲುಹದ ಕಂಡು ಬಲ್ಲೆನು ಹಲವುಬಾರಿಯಲಿ
ಸುಂಟಿಗೆಯನಾಯ್ವೆನು ಕಣಾ ಬಲು
ಕಂಟಕವಲೇ ನರನ ನುಡಿ ನೀ
ನೆಂಟುಮಡಿ ಗಳಹಿದರೆ ತಪ್ಪೇನೆಂದನಾ ಭೀಮ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವ ಶಿವಾ… ನಿಜ, ಸುಳ್ಳು ಮಾತು ನಿನಗುಂಟೇ ? ಗೆಲ್ಲದೆ ಬಿಡುವುದಿಲ್ಲ. ನಿನ್ನ ಶೌರ್ಯದ ಗಂಟು ದೊಡ್ಡದು, ಅದನ್ನು ಹಲವು ಬಾರಿ ಕಂಡಿದ್ದೇನೆ. ಯುದ್ಧದಲ್ಲಿ ಹೃದಯವನ್ನು ಆಯುತ್ತಿದ್ದೆನಯ್ಯಾ. ಆದರೆ ಪಾರ್ಥನ ನುಡಿ (ಪ್ರತಿಜ್ಞೆ) ಅಡ್ಡ ಬರುತ್ತಿದೆ. ನೀನು ಎಂಟರಷ್ಟು ಹರಟಿದರೂ ತಪ್ಪೇನು ? ಎಂದನು ಆ ಭೀಮ.
ಪದಾರ್ಥ (ಕ.ಗ.ಪ)
ಸುಂಟಿಗೆ-ಹೃದಯ
ಮೂಲ ...{Loading}...
ಉಂಟು ಶಿವ ಶಿವ ಹುಸಿಯ ನುಡಿ ನಿನ
ಗುಂಟೆ ಗೆಲ್ಲದೆ ಮಾಣೆ ಶೌರ್ಯದ
ಗಂಟು ಬಲುಹದ ಕಂಡು ಬಲ್ಲೆನು ಹಲವುಬಾರಿಯಲಿ
ಸುಂಟಿಗೆಯನಾಯ್ವೆನು ಕಣಾ ಬಲು
ಕಂಟಕವಲೇ ನರನ ನುಡಿ ನೀ
ನೆಂಟುಮಡಿ ಗಳಹಿದರೆ ತಪ್ಪೇನೆಂದನಾ ಭೀಮ ॥53॥
೦೫೪ ಆದಡೆಲವೊ ದುರಾತ್ಮ ...{Loading}...
ಆದಡೆಲವೊ ದುರಾತ್ಮ ಮಾರುತಿ
ವಾದದಲಿ ಫಲವೇನು ಬಲ್ಲರೆ
ಕಾದುಕೊಳ್ಳಾ ಸಾಕು ಕಡುಸಾಹಸಿಕ ಗಡ ನೀನು
ಹೋದೆ ಹೋಗಿನ್ನೆನುತ ಕಣೆಹದಿ
ನೈದರಲಿ ಕೆಡಹಿದನು ತುರಗವ
ನೈದುಬಾಣದಲೆಚ್ಚು ಕಡಿದೀಡಾಡಿದನು ರಥವ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆದರೆ ಎಲವೋ ಮಾರುತಿ… ದುರಾತ್ಮ, ವಾದದಿಂದ ಫಲವೇನು ? ಸಾಧ್ಯವಾದರೆ ಕಾಪಾಡಿಕೊ ಸಾಕು. ಬಹಳ ಶೂರ ನೀನು ಅಲ್ಲವೇ ? ಕಾದಬಲ್ಲವನಾದರೆ ನಿಲ್ಲು. ಇಲ್ಲವಾದರೆ ಜೀವ ಉಳಿಸಿಕೊಂಡು ಹೋಗು” ಎನ್ನುತ್ತ ಕರ್ಣನು ಹದಿನೈದು ಬಾಣಗಳಿಂದ ಕುದುರೆಗಳನ್ನು ಕೆಡವಿ, ಐದು ಬಾಣಗಳನ್ನು ಪ್ರಯೋಗಿಸಿ ರಥವನ್ನು ಕಡಿದು ಬಿಸಾಡಿದನು.
ಮೂಲ ...{Loading}...
ಆದಡೆಲವೊ ದುರಾತ್ಮ ಮಾರುತಿ
ವಾದದಲಿ ಫಲವೇನು ಬಲ್ಲರೆ
ಕಾದುಕೊಳ್ಳಾ ಸಾಕು ಕಡುಸಾಹಸಿಕ ಗಡ ನೀನು
ಹೋದೆ ಹೋಗಿನ್ನೆನುತ ಕಣೆಹದಿ
ನೈದರಲಿ ಕೆಡಹಿದನು ತುರಗವ
ನೈದುಬಾಣದಲೆಚ್ಚು ಕಡಿದೀಡಾಡಿದನು ರಥವ ॥54॥
೦೫೫ ಎರಡು ಶರದಲಿ ...{Loading}...
ಎರಡು ಶರದಲಿ ಸಾರಥಿಯ ಹೇ
ರುರವನೆಸೆಯಲು ಘಾಯದಲಿ ತರ
ಹರಿಸದವ ಹಾಯ್ದನು ಯುಧಾಮನ್ಯುವಿನ ಹೊರೆಗಾಗಿ
ಮರಳಿ ಹತ್ತಂಬಿನಲಿ ಭೀಮನ
ಕೆರಳಿಚಿದನಾರಂಬಿನಲಿ ಹ
ನ್ನೆರಡರಲಿ ಹದಿನೆಂಟರಲಿ ಮಗುಳೆಚ್ಚು ಬೊಬ್ಬಿರಿದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಎರಡು ಬಾಣಗಳನ್ನು ಭೀಮನ ಸಾರಥಿಯ ವಿಶಾಲವಾದ ಎದೆಗೆ ಪ್ರಯೋಗಿಸಿದನು. ಗಾಯಗೊಂಡು ತಡೆಯಲಾರದೆ ಅವನು ಯುಧಾಮನ್ಯುವಿನ ಸಮೀಪಕ್ಕೆ ಹೋದನು. ಪುನಃ ಹತ್ತು ಬಾಣಗಳಿಂದ ಭೀಮನನ್ನು ಕೆರಳಿಸಿ, (ಕೆಣಕಿ) ಆರು, ಹನ್ನೆರಡು, ಹದಿನೆಂಟು ಬಾಣಗಳನ್ನು ಮತ್ತೆ ಮತ್ತ ಪ್ರಯೋಗಿಸುತ್ತಾ ಆರ್ಭಟಿಸಿದನು.
ಮೂಲ ...{Loading}...
ಎರಡು ಶರದಲಿ ಸಾರಥಿಯ ಹೇ
ರುರವನೆಸೆಯಲು ಘಾಯದಲಿ ತರ
ಹರಿಸದವ ಹಾಯ್ದನು ಯುಧಾಮನ್ಯುವಿನ ಹೊರೆಗಾಗಿ
ಮರಳಿ ಹತ್ತಂಬಿನಲಿ ಭೀಮನ
ಕೆರಳಿಚಿದನಾರಂಬಿನಲಿ ಹ
ನ್ನೆರಡರಲಿ ಹದಿನೆಂಟರಲಿ ಮಗುಳೆಚ್ಚು ಬೊಬ್ಬಿರಿದ ॥55॥
೦೫೬ ಶರಹತಿಗೆ ಸೆಡೆಯದೆ ...{Loading}...
ಶರಹತಿಗೆ ಸೆಡೆಯದೆ ವೃಕೋದರ
ನೆರಡು ಕವಲಂಬಿನಲಿ ಕರ್ಣನ
ಶಿರವನೆಚ್ಚಡೆ ತರಿದನೆಡೆಯಲಿ ಭಾನುಸುತ ನಗುತ
ತಿರುಹಿ ಶಕ್ತಿಯಲಿಟ್ಟರೆಡೆಯಲಿ
ತರಿದು ಭೀಮನ ಕರದ ಚಾಪವ
ನೆರಡುಕಡಿ ಮಾಡಿದನು ಬಳಿಯಲಿ ನೊಸಲನೊಡೆಯೆಚ್ಚ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಬಾಣದ ಹೊಡೆತಕ್ಕೆ ಹೆದರದೆ ಭೀಮನು ಎರಡು ಕವಲು ಬಾಣಗಳನ್ನು ಕರ್ಣನ ತಲೆಗೆ ಪ್ರಯೋಗಿಸಲು ಕರ್ಣನು ನಗುತ್ತ ಅದನ್ನು ನಡುವೆಯೇ ಕತ್ತರಿಸಿ ಹಾಕಿದನು. ಪುನಃ ಭೀಮನು ಶಕ್ತ್ಯಾಯುಧದಿಂದ ಹೊಡೆಯಲು ಕರ್ಣನು ಅದನ್ನು ಮಧ್ಯದಲ್ಲೇ ತರಿದು, ಭೀಮನ ಕೈಯಲ್ಲಿದ್ದ ಬಿಲ್ಲನ್ನು ಎರಡು ತುಂಡು ಮಾಡಿದನು. ಅನಂತರ ಆತನ ಹಣೆಗೆ ಗುರಿಯಿಟ್ಟು ಹೊಡೆದನು.
ಪದಾರ್ಥ (ಕ.ಗ.ಪ)
ಸೆಡೆಯದೆ-ಹೆದರದೆ,
ಮೂಲ ...{Loading}...
ಶರಹತಿಗೆ ಸೆಡೆಯದೆ ವೃಕೋದರ
ನೆರಡು ಕವಲಂಬಿನಲಿ ಕರ್ಣನ
ಶಿರವನೆಚ್ಚಡೆ ತರಿದನೆಡೆಯಲಿ ಭಾನುಸುತ ನಗುತ
ತಿರುಹಿ ಶಕ್ತಿಯಲಿಟ್ಟರೆಡೆಯಲಿ
ತರಿದು ಭೀಮನ ಕರದ ಚಾಪವ
ನೆರಡುಕಡಿ ಮಾಡಿದನು ಬಳಿಯಲಿ ನೊಸಲನೊಡೆಯೆಚ್ಚ ॥56॥
೦೫೭ ವಾಯುಸುತ ಖಾತಿಯಲಿ ...{Loading}...
ವಾಯುಸುತ ಖಾತಿಯಲಿ ಹಲಗೆಯ
ಡಾಯುಧವ ಕೊಂಡರಿಭಟನ ಮೇ
ಲ್ವಾಯಿದಡೆ ಸಮ್ಮುಖವ ಬಿಟ್ಟನು ಧ್ವಜದ ಕಂಭದಲಿ
ಆಯುಧವ ಕೊಂಡೈದಿದಡೆ ಹಗೆ
ಮಾಯವಾದನು ಪೂತುರೆನುತ ಗ
ದಾಯುಧನು ಮರಳಿದರೆ ಕೈಯೊಡನೆದ್ದನಾ ಕರ್ಣ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಕೋಪದಿಂದ ಗುರಾಣಿ ಖಡ್ಗವನ್ನು ತೆಗೆದುಕೊಂಡು ಶತ್ರುವಿನ ಮೇಲೆ ನುಗ್ಗಲು ಅವನನ್ನು ಎದುರಿಸಲಾರದೆ ಕರ್ಣನು ಧ್ವಜದ ಕಂಭದ ಮರೆಗೆ ಹೋದನು. “ಆಯುಧವನ್ನು ತೆಗೆದುಕೊಂಡು ಮೇಲೆ ಬೀಳಲು ಶತ್ರು ಮಾಯವಾದನು. ಭಲೆ” ಎನ್ನುತ್ತಾ ಭೀಮನು ಹಿಂದಿರುಗಲು ತತ್ಕ್ಷಣ ಕರ್ಣನು ಪುನಃ ಎದುರಾದನು.
ಮೂಲ ...{Loading}...
ವಾಯುಸುತ ಖಾತಿಯಲಿ ಹಲಗೆಯ
ಡಾಯುಧವ ಕೊಂಡರಿಭಟನ ಮೇ
ಲ್ವಾಯಿದಡೆ ಸಮ್ಮುಖವ ಬಿಟ್ಟನು ಧ್ವಜದ ಕಂಭದಲಿ
ಆಯುಧವ ಕೊಂಡೈದಿದಡೆ ಹಗೆ
ಮಾಯವಾದನು ಪೂತುರೆನುತ ಗ
ದಾಯುಧನು ಮರಳಿದರೆ ಕೈಯೊಡನೆದ್ದನಾ ಕರ್ಣ ॥57॥
೦೫೮ ಆರಿ ಬೊಬ್ಬಿರಿದೆಚ್ಚನನಿಲಕು ...{Loading}...
ಆರಿ ಬೊಬ್ಬಿರಿದೆಚ್ಚನನಿಲಕು
ಮಾರಕನ ಖಂಡೆಯವನೊಂದೇ
ಕೂರಲಗಿನಲಿ ಕಡಿದು ಬಿಸುಟನು ಹಿಡಿದ ಹಲಗೆಯನು
ಆರುಭಟೆಯಲಿ ಭೀಮ ಕಾವವ
ರಾರು ಕರೆಯಾ ಕರ್ಣ ಕೊಲುವಡ
ದಾರು ಫಡ ಹಿಂದಿಕ್ಕಿ ಕೊಂಬವರೆನುತ ಗರ್ಜಿಸಿದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಕೂಗುತ್ತಾ ಆರ್ಭಟಿಸಿ ಬಾಣಪ್ರಯೋಗ ಮಾಡಿದನು. ಭೀಮನ ಖಡ್ಗವನ್ನು ತುಂಡು ಮಾಡಿ, ಹಿಡಿದ ಹಲಗೆಯನ್ನು ಹರಿತವಾದ ಒಂದೇ ಬಾಣದಿಂದ ಕತ್ತರಿಸಿ ಬಿಸಾಡಿದನು. ಮತ್ತೆ ಆರ್ಭಟಿಸುತ್ತಾ. ಎಲವೋ ಭೀಮನೇ ಕಾಯುವವರಾರು ? ಅವರನ್ನು ಕರೆ. ಕರ್ಣನಾದ ತಾನು ಕೊಲ್ಲುವುದಾದರೆ ಭಲೆ… ಅವನನ್ನು ಹಿಂದಿರಿಸಿಕೊಳ್ಳುವವರರು ? ಎನ್ನುತ್ತಾ ಗರ್ಜಿಸಿದ.
ಮೂಲ ...{Loading}...
ಆರಿ ಬೊಬ್ಬಿರಿದೆಚ್ಚನನಿಲಕು
ಮಾರಕನ ಖಂಡೆಯವನೊಂದೇ
ಕೂರಲಗಿನಲಿ ಕಡಿದು ಬಿಸುಟನು ಹಿಡಿದ ಹಲಗೆಯನು
ಆರುಭಟೆಯಲಿ ಭೀಮ ಕಾವವ
ರಾರು ಕರೆಯಾ ಕರ್ಣ ಕೊಲುವಡ
ದಾರು ಫಡ ಹಿಂದಿಕ್ಕಿ ಕೊಂಬವರೆನುತ ಗರ್ಜಿಸಿದ ॥58॥
೦೫೯ ಮಡಿದ ಕರಿಗಳ ...{Loading}...
ಮಡಿದ ಕರಿಗಳ ಕಾಯವನು ನಿ
ಟ್ಟೊಡಲ ತುರಗಂಗಳನು ಮುಗ್ಗಿದ
ಕೆಡೆದ ತೇರಿನ ಗಾಲಿಗಳ ಕೊಂಡಿಟ್ಟನಾ ಭೀಮ
ಎಡೆಯಲಾ ಕರಿಯೊಡಲನಾ ಹಯ
ದೊಡಲನಾ ರಥ ಚಕ್ರವನು ಕಡಿ
ಕಡಿದು ಬಿಸುಟನು ಹೊದ್ದಿದನು ಕಟ್ಟಳವಿಯಲಿ ಕರ್ಣ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಸತ್ತ ಆನೆಗಳ ದೇಹವನ್ನು, ನೀಳ ಶರೀರವುಳ್ಳ ಕುದುರೆಗಳನ್ನು, ನುಚ್ಚು ನೂರಾಗಿ ಬಿಸಾಡಿದ್ದ ರಥದ ಗಾಲಿಗಳನ್ನು ತೆಗೆದುಕೊಂಡು ಹೊಡೆಯಲು ಶುರುಮಾಡಿದನು ಕರ್ಣನು ಮಧ್ಯದಲ್ಲೇ ಆನೆಯ, ಕುದುರೆಗಳ ದೇಹವನ್ನು, ರಥದ ಚಕ್ರವನ್ನು ತುಂಡು ತುಂಡು ಮಾಡಿ ಬಿಸಾಡಿದನು. ಈ ರೀತಿಯಲ್ಲಿ ಕರ್ಣನು ಕಠಿಣವಾದ ಯುದ್ಧದಲ್ಲಿ ತೊಡಗಿದನು.
ಪದಾರ್ಥ (ಕ.ಗ.ಪ)
ಮುಗ್ಗಿದ-ಮುರಿದ,
ಮೂಲ ...{Loading}...
ಮಡಿದ ಕರಿಗಳ ಕಾಯವನು ನಿ
ಟ್ಟೊಡಲ ತುರಗಂಗಳನು ಮುಗ್ಗಿದ
ಕೆಡೆದ ತೇರಿನ ಗಾಲಿಗಳ ಕೊಂಡಿಟ್ಟನಾ ಭೀಮ
ಎಡೆಯಲಾ ಕರಿಯೊಡಲನಾ ಹಯ
ದೊಡಲನಾ ರಥ ಚಕ್ರವನು ಕಡಿ
ಕಡಿದು ಬಿಸುಟನು ಹೊದ್ದಿದನು ಕಟ್ಟಳವಿಯಲಿ ಕರ್ಣ ॥59॥
೦೬೦ ಕೈದು ನೆರೆತೀರಿದರೆ ...{Loading}...
ಕೈದು ನೆರೆತೀರಿದರೆ ಹೆಣನೇ
ಕೈದುವಾದುವು ಪರಬಲಾಂತಕ
ಕೈದುಕಾರರ ಕೈಯ ಬಾಯಲಿ ಭೀಮ ಸಿಲುಕಿದೆಲಾ
ಕಾದುಕೊಳ್ಳನೆ ಕೃಷ್ಣ ನಿನ್ನಯ
ಮೈದುನನು ಗಡ ಮರೆಯ ಹೊಗು ಹೋ
ಗೈದೆಯಹಳೋ ವಿಧವೆಯೋ ಪಾಂಚಾಲಿ ಹೇಳೆಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಯುಧಗಳು ಮುಗಿಯಲಾಗಿ ಹೆಣಗಳೇ ಆಯುಧಗಳಾದುವು. ಶತ್ರು ಸೈನ್ಯನಾಶಕನಾದ ಪರಾಕ್ರಮಿಯ ಕೈಯ ಬಾಯಲ್ಲಿ ಸಿಲುಕಿಕೊಂಡೆಯಲ್ಲಾ ಭೀಮ, ಕೃಷ್ಣ ಕಾಪಾಡಲಾರನೇ ? ಆ ನಿನ್ನ ಮೈದುನನನ್ನು ಮೊರೆಹೊಗು. ದ್ರೌಪದಿಯು ಮುತ್ತೈದೆಯೋ ? ವಿಧವೆಯೋ ಹೇಳು” ಎಂದು ಕರ್ಣನು ಹೇಳಿದನು.
ಮೂಲ ...{Loading}...
ಕೈದು ನೆರೆತೀರಿದರೆ ಹೆಣನೇ
ಕೈದುವಾದುವು ಪರಬಲಾಂತಕ
ಕೈದುಕಾರರ ಕೈಯ ಬಾಯಲಿ ಭೀಮ ಸಿಲುಕಿದೆಲಾ
ಕಾದುಕೊಳ್ಳನೆ ಕೃಷ್ಣ ನಿನ್ನಯ
ಮೈದುನನು ಗಡ ಮರೆಯ ಹೊಗು ಹೋ
ಗೈದೆಯಹಳೋ ವಿಧವೆಯೋ ಪಾಂಚಾಲಿ ಹೇಳೆಂದ ॥60॥
೦೬೧ ಬಿಲ್ಲ ಕೊಪ್ಪಿನಲಿರಿದು ...{Loading}...
ಬಿಲ್ಲ ಕೊಪ್ಪಿನಲಿರಿದು ಭೀಮನ
ಘಲ್ಲಿಸಿದನೆಲವೆಲವೊ ಮಾರುತಿ
ಯುಳ್ಳಿಗಡ್ಡದ ಹರಿದಲೆಯ ರಣಮೂಢ ಸಿಲುಕಿದೆಲಾ
ಎಲ್ಲಿ ನಿನ್ನಾಟೋಪ ಹಿಂದಣ
ಹೊಳ್ಳುನುಡಿ ಹಾರಿದವೆ ಕೌರವ
ರೆಲ್ಲರನು ಸವರಿದೆಯೆಲಾ ಸಂದೇಹವೇನೆಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಿಲ್ಲ ತುದಿಯಿಂದ ಭೀಮನನ್ನು ಇರಿದು ಘಾಸಿಗೊಳಿಸಿದನು. ಎಲವೊ ಮಾರುತಿ… ಕುರುಚಲುಗಡ್ಡದ, ಕೆದರಿದ ತಲೆಯ ರಣಮೂಢ… ಸಿಕ್ಕಿ ಬಿದ್ದೆಯಲ್ಲೋ ? ಎಲ್ಲಿ ನಿನ್ನ ಆಟೋಪ ? ಹಿಂದಿನ ಪೊಳ್ಳು ಮಾತುಗಳು ಹಾರಿಹೋದವೇ ? ಕೌರವರೆಲ್ಲರನ್ನೂ ನಾಶ ಮಾಡಿದೆಯಲ್ಲಾ… ಸಂದೇಹವೇನು ?” ಎಂದು ಕರ್ಣನು ಹಂಗಿಸಿದನು.
ಟಿಪ್ಪನೀ (ಕ.ಗ.ಪ)
ಉಳ್ಳಿಗಡ್ಡದ ಹರಿದಲೆಯ ಮೂಢ-ತಿರಸ್ಕಾರದ ಬೈಗುಳ. ಈರುಳ್ಳಿಯ ಕೆಳಭಾಗದಲ್ಲಿ ವಿರಳವಾಗಿ ಹರಡಿರುವ ಬೇರುಗಳಂತೆ ಕುರುಚುಗಡ್ಡ ಇರುವವನು. ಒರಟಾದ ಮುಖ, ದಪ್ಪದಾದ ಉದ್ದನೆಯ ಮೀಸೆಯುಳ್ಳವನು - ಅಂತಹವನನ್ನು ಕವಿ ಇಲ್ಲಿ ಉಳ್ಳಿ ಗಡ್ಡದ ಹರಿದಲೆಯ ಮೂಢ ಎನ್ನುತ್ತಾನೆ. ಭೀಮನಿಗೆ ಅನ್ವಯಿಸುವ ಮಾತು.
ಮೂಲ ...{Loading}...
ಬಿಲ್ಲ ಕೊಪ್ಪಿನಲಿರಿದು ಭೀಮನ
ಘಲ್ಲಿಸಿದನೆಲವೆಲವೊ ಮಾರುತಿ
ಯುಳ್ಳಿಗಡ್ಡದ ಹರಿದಲೆಯ ರಣಮೂಢ ಸಿಲುಕಿದೆಲಾ
ಎಲ್ಲಿ ನಿನ್ನಾಟೋಪ ಹಿಂದಣ
ಹೊಳ್ಳುನುಡಿ ಹಾರಿದವೆ ಕೌರವ
ರೆಲ್ಲರನು ಸವರಿದೆಯೆಲಾ ಸಂದೇಹವೇನೆಂದ ॥61॥
೦೬೨ ಒಡೆಯ ದುರಿಯೋಧನನ ...{Loading}...
ಒಡೆಯ ದುರಿಯೋಧನನ ತೊಡೆಗಳ
ನುಡಿವೆ ದುಶ್ಯಾಸನನ ರಕುತವ
ಕುಡಿವೆನೆಂದುಬ್ಬಟೆಯ ಭಾಷೆಯಲಾ ಮಹಾದೇವ
ನುಡಿದ ನುಡಿವಳಿ ಸಂದುದೇ ನಿ
ಮ್ಮಡಿಗಳಿಗೆ ಕಲಿಭೀಮ ದುಗುಡವ
ಬಿಡು ಮರುಳೆ ತಲೆಗುತ್ತಲೇತಕೆಯೆಂದನಾ ಕರ್ಣ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
62.” ಒಡೆಯನಾದ ದುರ್ಯೋಧನನ ತೊಡೆಗಳನ್ನು ಮುರಿವೆ, ದುಶ್ಶಾಸನನ ರಕ್ತವನ್ನು ಕುಡಿವೆನೆಂದು ಆರ್ಭಟದಿಂದ ಮಾಡಿದ ಪ್ರತಿಜ್ಞೆ ಅಲ್ಲವೇ ಮಹಾದೇವ…… ಹೇಳಿದ ಮಾತುಗಳು ನಿನ್ನ ಕೃಪೆಯಿಂದ ನೆರವೇರಿತೇ ? ಶೂರಭೀಮನೇ ದುಗುಡವನ್ನು ಬಿಡು. ಮೂರ್ಖನೇ…. ತಲೆ ತಗ್ಗಿಸುವುದೇಕೆ ?” ಎಂದು ಆ ಕರ್ಣನು ಹೀಯಾಳಿಸಿದನು.
ಪದಾರ್ಥ (ಕ.ಗ.ಪ)
ಉಡಿ-ಮುರಿ, ತಲೆಗುತ್ತಲೇಕೆ-ತಲೆ ತಗ್ಗಿಸುವುದೇಕೆ ?
ಮೂಲ ...{Loading}...
ಒಡೆಯ ದುರಿಯೋಧನನ ತೊಡೆಗಳ
ನುಡಿವೆ ದುಶ್ಯಾಸನನ ರಕುತವ
ಕುಡಿವೆನೆಂದುಬ್ಬಟೆಯ ಭಾಷೆಯಲಾ ಮಹಾದೇವ
ನುಡಿದ ನುಡಿವಳಿ ಸಂದುದೇ ನಿ
ಮ್ಮಡಿಗಳಿಗೆ ಕಲಿಭೀಮ ದುಗುಡವ
ಬಿಡು ಮರುಳೆ ತಲೆಗುತ್ತಲೇತಕೆಯೆಂದನಾ ಕರ್ಣ ॥62॥
೦೬೩ ಎಲ್ಲಿ ಷಡುರಸಮಯದ ...{Loading}...
ಎಲ್ಲಿ ಷಡುರಸಮಯದ ಭೋಜನ
ವೆಲ್ಲಿ ಮಧುರ ಫಲೌಘದುಬ್ಬರ
ವೆಲ್ಲಿ ನಾನಾಭಕ್ಷ್ಯಗಿರಿಗಳು ಘೃತದ ಕಡಲುಗಳು
ಅಲ್ಲಿ ನಿನ್ನುರವಣೆಗಳೊಪ್ಪುವ
ದಲ್ಲದೀ ಸಂಗ್ರಾಮ ಮುಖದಲಿ
ಬಿಲ್ಲಹಬ್ಬದ ತುಷ್ಟಿ ನಿನಗೇಕೆಂದನಾ ಕರ್ಣ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲ್ಲಿ ನಿನಗೆ ಷಡ್ರಸಭೋಜನ ದೊರಕುವುದೋ ಅಲ್ಲಿಗೆ ಹೋಗು. ಎಲ್ಲಿ ಮಧುರವಾದ, ಫಲಗಳ ರಾಶಿ, ನಾನಾ ರೀತಿಯ ಭಕ್ಷ್ಯಗಳ ಬೆಟ್ಟಗಳು, ಭೋಜ್ಯಗಳು, ತುಪ್ಪದ ಸಾಗರಗಳು ಇವೆಯೋ ಅಲ್ಲಿ ನಿನ್ನ ಸಂಭ್ರಮ, ಸಡಗರಗಳು ಶೋಭಿಸುತ್ತದೆಯೇ ಹೊರತು ಸಂಗ್ರಾಮದ ಎದುರು ಅಲ್ಲ. ಬಿಲ್ಲುಗಾರಿಕೆಯ ಉತ್ಸವದಿಂದ ಸಿಗುವ ತೃಪ್ತಿ ನಿನಗೇಕೆ ? ನಿನಗೆ ಶೋಭಿಸುವುದಿಲ್ಲ” ಎಂದು ಕರ್ಣನು ಹೇಳಿದನು.
ಮೂಲ ...{Loading}...
ಎಲ್ಲಿ ಷಡುರಸಮಯದ ಭೋಜನ
ವೆಲ್ಲಿ ಮಧುರ ಫಲೌಘದುಬ್ಬರ
ವೆಲ್ಲಿ ನಾನಾಭಕ್ಷ್ಯಗಿರಿಗಳು ಘೃತದ ಕಡಲುಗಳು
ಅಲ್ಲಿ ನಿನ್ನುರವಣೆಗಳೊಪ್ಪುವ
ದಲ್ಲದೀ ಸಂಗ್ರಾಮ ಮುಖದಲಿ
ಬಿಲ್ಲಹಬ್ಬದ ತುಷ್ಟಿ ನಿನಗೇಕೆಂದನಾ ಕರ್ಣ ॥63॥
೦೬೪ ತಾಯ ಮಾತನು ...{Loading}...
ತಾಯ ಮಾತನು ಮೀರಿ ನಿನ್ನನು
ನೋಯಿಸಿದೆನದೆ ಸಾಕು ಜೀವವ
ಕಾಯಿದೆನು ಬಿಟ್ಟೆನು ವೃಕೋದರ ಹೋಗು ಹೋಗೆನಲು
ವಾಯುಸುತ ಸಿಲುಕಿದನಲಾ ಕಾ
ಳಾಯಿತೆನುತಸುರಾರಿ ರಥವನು
ಹಾಯಿಸಲು ಮುರಿಯೆಚ್ಚು ಕರ್ಣನ ತೆಗೆಸಿದನು ಪಾರ್ಥ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾಯಿಗೆ ಕೊಟ್ಟ ಮಾತನ್ನು ಮೀರಿ ನಿನ್ನನ್ನು ನೋಯಿಸಿದ್ದೇನೆ. ಅಷ್ಟೇ ಸಾಕು ಜೀವವನ್ನು ಕಾಪಾಡಿದ್ದೇನೆ. ನಿನ್ನನ್ನು ಬಿಟ್ಟಿದ್ದೇನೆ. ಹೋಗು, ಹೋಗು” ಎಂದು ಕರ್ಣನು ಹೆಳಿದನು. ಆವೇಳೆಗೆ " ಭೀಮಸೇನನು ಸಿಲುಕಿzನು. ಕೇಡಾಯಿತು” ಎನ್ನುತ್ತಾ ಕೃಷ್ಣನು ರಥವನ್ನು ನಡೆಸಲು, ಪಾರ್ಥನು ಕರ್ಣನ ಮೇಲೆ ಬಾಣಗಳನ್ನು ಪ್ರಯೋಗಿಸಿ ಹಿಮ್ಮೆಟ್ಟಿಸಿದನು.
ಮೂಲ ...{Loading}...
ತಾಯ ಮಾತನು ಮೀರಿ ನಿನ್ನನು
ನೋಯಿಸಿದೆನದೆ ಸಾಕು ಜೀವವ
ಕಾಯಿದೆನು ಬಿಟ್ಟೆನು ವೃಕೋದರ ಹೋಗು ಹೋಗೆನಲು
ವಾಯುಸುತ ಸಿಲುಕಿದನಲಾ ಕಾ
ಳಾಯಿತೆನುತಸುರಾರಿ ರಥವನು
ಹಾಯಿಸಲು ಮುರಿಯೆಚ್ಚು ಕರ್ಣನ ತೆಗೆಸಿದನು ಪಾರ್ಥ ॥64॥