೦೦೦ ಸೂ ವಿಜಯ ...{Loading}...
ಸೂ. ವಿಜಯ ವಿಗ್ರಹ ವೀರನಾ ಧ
ರ್ಮಜನ ನೇಮದಲಂದು ವೈರಿ
ವ್ರಜವ ತೊತ್ತಳದುಳಿದು ಸಾತ್ಯಕಿ ಕಂಡನರ್ಜುನನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಯುದ್ಧದಲ್ಲಿ ಜಯಗಳಿಸುವ ವೀರನಾದ ಸಾತ್ಯಕಿಯು ಆ ಧರ್ಮರಾಯನ ಅಪ್ಪಣೆಯಂತೆ ಅಂದು ಯುದ್ಧದಲ್ಲಿ ಶತ್ರು ಸಮೂಹವನ್ನು ತುಳಿದು ನುಗ್ಗು ನುರಿ ಮಾಡಿ ಅರ್ಜುನನನ್ನು ಕಂಡನು.
ಪದಾರ್ಥ (ಕ.ಗ.ಪ)
ವಿಗ್ರಹ -ಯುದ್ಧ
ಮೂಲ ...{Loading}...
ಸೂ. ವಿಜಯ ವಿಗ್ರಹ ವೀರನಾ ಧ
ರ್ಮಜನ ನೇಮದಲಂದು ವೈರಿ
ವ್ರಜವ ತೊತ್ತಳದುಳಿದು ಸಾತ್ಯಕಿ ಕಂಡನರ್ಜುನನ
೦೦೧ ಬವರದೊಳು ಹರಿಪಾಞ್ಚಜನ್ಯದ ...{Loading}...
ಬವರದೊಳು ಹರಿಪಾಂಚಜನ್ಯದ
ರವ ಭಯಂಕರವಾಯ್ತು ಬಹಳಾ
ಹವದೊಳಗೆ ಪಾರ್ಥಂಗೆ ಬಿದ್ದುದು ಭಟರ ಭಾರಾಂಕ
ಅವನಿ ಬಿರಿದುದು ಧರ್ಮಪುತ್ರನ
ಕಿವಿಗೆ ಸೆಲ್ಲೆಹವಾಯ್ತು ರಣರೌ
ರವದೊಳರ್ಜುನದೇವನಳಿಯದೆ ಮಾಣನಕಟೆಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಹರಿಯು (ಪಾಂಡವ ಸೇನೆಯ ಹಾನಿಯನ್ನು ಗಮನಿಸಿ) ಪಾಂಚಜನ್ಯವನ್ನು ಊದಲಾಗಿ ಅದರ ಧ್ವನಿ ಭಯಂಕರವಾಯಿತು. ಆ ಮಹಾ ಸಂಗ್ರಾಮದಲ್ಲಿ ಶತ್ರುಸೈನಿಕರೊಡನೆ ಮಹಾಯುದ್ಧವನ್ನು ಮಾಡುವ ಹೊಣೆ ಪಾರ್ಥನ ಮೇಲೆ ಬಿದ್ದಿತು. ಶಂಖದ ಧ್ವನಿಯಿಂದ ಭೂಮಿ ಬಿರಿಯಿತು. ಆ ಧ್ವನಿ ಧರ್ಮಜನ ಕಿವಿಗೆ ಶಲ್ಯದಂತೆ ನಾಟಿ ಆತನು ಕಂಗೆಟ್ಟನು. ಈ ಭಯಂಕರ ಯುದ್ಧದಲ್ಲಿ ಅರ್ಜುನ ದೇವನು ನಾಶವಾಗದೆ ಇರಲಾರ. ಅಯ್ಯೋ…. ಎಂದು ಪರಿತಪಿಸಿದನು.
ಪದಾರ್ಥ (ಕ.ಗ.ಪ)
ಸೆಲ್ಲೆಹ-ಶಲ್ಯ, ಈಟಿ,
ಮೂಲ ...{Loading}...
ಬವರದೊಳು ಹರಿಪಾಂಚಜನ್ಯದ
ರವ ಭಯಂಕರವಾಯ್ತು ಬಹಳಾ
ಹವದೊಳಗೆ ಪಾರ್ಥಂಗೆ ಬಿದ್ದುದು ಭಟರ ಭಾರಾಂಕ
ಅವನಿ ಬಿರಿದುದು ಧರ್ಮಪುತ್ರನ
ಕಿವಿಗೆ ಸೆಲ್ಲೆಹವಾಯ್ತು ರಣರೌ
ರವದೊಳರ್ಜುನದೇವನಳಿಯದೆ ಮಾಣನಕಟೆಂದ ॥1॥
೦೦೨ ತನ್ದೆ ಸಾತ್ಯಕಿ ...{Loading}...
ತಂದೆ ಸಾತ್ಯಕಿ ಹೋಗು ಫಲುಗುಣ
ನೊಂದನೋ ಜೀವಿಸಿದನೋ ಸುರ
ವೃಂದವನು ಸೇರಿದನೊ ಮೇಣೆಂಬೀ ನಿಧಾನವನು
ತಂದು ನೀನೆನಗರುಹು ಪಾರ್ಥನ
ಹಿಂದೆ ಬದುಕಿಲ್ಲವನಿಯಲಿ ತನ
ಗೆಂದು ದುಗುಡವ ಹಿಡಿದು ಸಾತ್ಯಕಿಗರಸ ನೇಮಿಸಿದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆ ಸಾತ್ಯಕಿ, ಹೋಗು, ಯುದ್ಧದಲ್ಲಿ ಅರ್ಜುನನು ನೊಂದಿದ್ದಾನೋ, ಜೀವಿಸಿದ್ದಾನೋ ಅಥವಾ ದೇವಸಮೂಹವನ್ನು ಸೇರಿ ಸ್ವರ್ಗಸ್ಥನಾದನೋ ಎಂಬ ಕುರಿತು ನಿಶ್ಚಿತವಾಗಿ ತಿಳಿದು ಬಂದು ನನಗೆ ಹೇಳು. ಭೂಮಿಯಲ್ಲಿ ತನಗೆ ಪಾರ್ಥನಿಲ್ಲದೆ ಬದುಕಿಲ್ಲ ಎಂದು ದುಃಖಿಸಿ, ಧರ್ಮಜನು ಸಾತ್ಯಕಿಯನ್ನು ಪಾರ್ಥನ ಸಹಾಯಕ್ಕೆ ಹೋಗಿ ಬಾ ಎಂದು ನೇಮಿಸಿದನು.
ಪದಾರ್ಥ (ಕ.ಗ.ಪ)
ನಿಧಾನ-ನಿಶ್ಚಿತ
ಟಿಪ್ಪನೀ (ಕ.ಗ.ಪ)
ಫಲುಗುಣ - ಅರ್ಜುನ, ಈತನು ಫಾಲ್ಗುಣಮಾಸದ ಹುಣ್ಣಿಮೆಯ ದಿನ ಹುಟ್ಟಿದುದರಿಂದ ಇವನಿಗೆ ಈ ಹೆಸರು ಪ್ರಾಪ್ತವಾಯಿತು. ಇವನು ಪೂರ್ವಫಲ್ಗುಣೀ ಎಂಬ ಹುಬ್ಬಾ ನಕ್ಷತ್ರಕ್ಕೂ, ಉತ್ತರ ಫಲ್ಗುಣೀ ಎಂಬ ಉತ್ತರಾ ನಕ್ಷತ್ರಕ್ಕೂ ನಡುವೆ ಹುಟ್ಟಿದವ.
ಮೂಲ ...{Loading}...
ತಂದೆ ಸಾತ್ಯಕಿ ಹೋಗು ಫಲುಗುಣ
ನೊಂದನೋ ಜೀವಿಸಿದನೋ ಸುರ
ವೃಂದವನು ಸೇರಿದನೊ ಮೇಣೆಂಬೀ ನಿಧಾನವನು
ತಂದು ನೀನೆನಗರುಹು ಪಾರ್ಥನ
ಹಿಂದೆ ಬದುಕಿಲ್ಲವನಿಯಲಿ ತನ
ಗೆಂದು ದುಗುಡವ ಹಿಡಿದು ಸಾತ್ಯಕಿಗರಸ ನೇಮಿಸಿದ ॥2॥
೦೦೩ ಮೊಲನ ಬಲೆಯಲಿ ...{Loading}...
ಮೊಲನ ಬಲೆಯಲಿ ವನದ ಮದಕರಿ
ಸಿಲುಕಲರಿವುದೆ ಶಿವಶಿವಾ ನರ
ನಳವನರಿಯಾ ಕೃಷ್ಣನಾರೆಂದರಸ ಮರೆದೆಯಲಾ
ಕೊಳಗುಳವನಾರೈದು ಬಾಯೆನೆ
ನಿಲುವುದನುಚಿತವರ್ಜುನನ ನೆಲೆ
ಗೊಳಿಸಿ ಬಹೆನೆಂದಾಯುಧವ ಕೊಂಡಡರಿದನು ರಥವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೊಲದ ಬಲೆಯಲ್ಲಿ ಕಾಡಿನ ಮದಿಸಿದ ಆನೆ ಸಿಕ್ಕಿ ಹಾಕಿಕೊಳ್ಳಲು ಸಾಧ್ಯವೇ ? ಶಿವಶಿವಾ, ಅರ್ಜುನನ ಸಾಮಥ್ರ್ಯವನ್ನು ತಿಳಿದಿಲ್ಲವೇ ? ರಾಜನೇ, ಕೃಷ್ಣನಾರೆಂಬುದನ್ನು ಮರೆತಿರುವೆಯಲ್ಲಾ ? ಯುದ್ಧ ಭೂಮಿಯಲ್ಲಿ ಅರ್ಜುನನ ಸ್ಥಿತಿ ಏನೆಂಬುದನ್ನು ಪರೀಕ್ಷಿಸಿ ಬಾ ಎಂದು ಅಪ್ಪಣೆ ಮಾಡಿರುವುದರಿಂದ ತಡಮಾಡುವುದು ಸರಿಯಲ್ಲ. ಅರ್ಜುನನು ಎಲ್ಲಿದ್ದಾನೆಂಬುದನ್ನು ತಿಳಿದು ಸಹಕಾರವನ್ನು ನೀಡಿ ಬರುವೆನು” ಎಂದು ಆಯುಧವನ್ನು ತೆಗೆದುಕೊಂಡು ರಥವನ್ನು ಏರಿದನು.
ಪದಾರ್ಥ (ಕ.ಗ.ಪ)
ಕೊಳಗುಳ-ಯುದ್ಧ ಭೂಮಿ,
ಮೂಲ ...{Loading}...
ಮೊಲನ ಬಲೆಯಲಿ ವನದ ಮದಕರಿ
ಸಿಲುಕಲರಿವುದೆ ಶಿವಶಿವಾ ನರ
ನಳವನರಿಯಾ ಕೃಷ್ಣನಾರೆಂದರಸ ಮರೆದೆಯಲಾ
ಕೊಳಗುಳವನಾರೈದು ಬಾಯೆನೆ
ನಿಲುವುದನುಚಿತವರ್ಜುನನ ನೆಲೆ
ಗೊಳಿಸಿ ಬಹೆನೆಂದಾಯುಧವ ಕೊಂಡಡರಿದನು ರಥವ ॥3॥
೦೦೪ ದಾರುಕನು ನಿಜ ...{Loading}...
ದಾರುಕನು ನಿಜ ರಥವನೆಸಗಲು
ದಾರ ಸಾತ್ಯಕಿ ಭೀಮಸೇನಗೆ
ಧಾರುಣೀಶನ ಕೊಟ್ಟು ಭಾರಿಯ ಭಟರ ಗಡಣದಲಿ
ಭಾರಣೆಯಲೈತಪ್ಪ ನಿಜ ಪರಿ
ವಾರವನು ಬೋಳೈಸಿ ನಿಸ್ಸಾ
ಳಾರವದ ಥಟ್ಟಣೆಯಲಿದಿರಾದನು ರಿಪುವ್ರಜಕೆ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಾರುಕನು ತನ್ನ ರಥವನ್ನು ನಡೆಸಲು, ಶ್ರೇಷ್ಠನಾದ ಸಾತ್ಯಕಿಯು ರಾಜನಾದ ಧರ್ಮರಾಯನನ್ನು ಭೀಮಸೇನನಿಗೆ ಒಪ್ಪಿಸಿದನು, ನಂತರ ಅವನು ಅಪಾರವಾದ ಸೈನಿಕರ ಸಮೂಹದೊಡನೆ, ಯುದ್ಧಕಾರ್ಯಗಳನ್ನು ನಿರ್ವಹಿಸಲು ಬರುತ್ತಿರುವ ತನ್ನ ಪರಿವಾರದವರನ್ನು ಸಂತೈಸಿ ಯುದ್ಧ ರಣಭೇರಿಗಳ ಧ್ವನಿ ಮೊಳಗುತ್ತಿರಲಾಗಿ ಶತ್ರು ಸಮೂಹಕ್ಕೆ ಇದಿರಾದನು.
ಮೂಲ ...{Loading}...
ದಾರುಕನು ನಿಜ ರಥವನೆಸಗಲು
ದಾರ ಸಾತ್ಯಕಿ ಭೀಮಸೇನಗೆ
ಧಾರುಣೀಶನ ಕೊಟ್ಟು ಭಾರಿಯ ಭಟರ ಗಡಣದಲಿ
ಭಾರಣೆಯಲೈತಪ್ಪ ನಿಜ ಪರಿ
ವಾರವನು ಬೋಳೈಸಿ ನಿಸ್ಸಾ
ಳಾರವದ ಥಟ್ಟಣೆಯಲಿದಿರಾದನು ರಿಪುವ್ರಜಕೆ ॥4॥
೦೦೫ ತಳಿತ ಬೆಳುಗೊಡೆಗಳಲಿ ...{Loading}...
ತಳಿತ ಬೆಳುಗೊಡೆಗಳಲಿ ದೆಸೆ ಕ
ತ್ತಲಿಸೆ ಕರಿ ರಥ ತುರಗ ಚರಣೋ
ಚ್ಚಲಿತ ಧೂಳಿಯ ದಂಡು ನಡೆದುದು ಸೂರ್ಯಮಂಡಲಕೆ
ಮೊಳಗಿದವು ಬರಸಿಡಿಲ ಕಣ್ಣಿಯ
ಕಳಚಿದಂತಿರೆ ವಾದ್ಯಚಯವರಿ
ಬಲಕೆ ನಡೆದನು ವೀರಸಾತ್ಯಕಿ ಸಕಲ ಬಲಸಹಿತ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಳಿಸಿದ ಬೆಳುಗೊಡೆಗಳ ಕಾರಣ ದಿಕ್ಕುದಿಕ್ಕುಗಳಲ್ಲಿ ಕತ್ತಲೆ ಆವರಿಸಿತು. ಆನೆ, ಕುದುರೆ, ರಥ, ಸೈನಿಕರ ಪಾದ ಧೂಳಿಯ ಸಮೂಹ ಸೂರ್ಯಮಂಡಲವನ್ನು ವ್ಯಾಪಿಸಿತು. ಬರಸಿಡಿಲ ಹಗ್ಗದ ಕುಣಿಕೆಯನ್ನು ಕಳಚಿದ ಹಾಗೆ ವಾದ್ಯ ವೃಂದದ ಧ್ವನಿ ಮೊಳಗಿದವು. ವೀರ ಸಾತ್ಯಕಿಯು ಸಕಲ ಸೈನ್ಯದೊಡಗೂಡಿ ಶತ್ರುಗಳನ್ನೆದುರಿಸಲು ಮುನ್ನಡೆದನು.
ಮೂಲ ...{Loading}...
ತಳಿತ ಬೆಳುಗೊಡೆಗಳಲಿ ದೆಸೆ ಕ
ತ್ತಲಿಸೆ ಕರಿ ರಥ ತುರಗ ಚರಣೋ
ಚ್ಚಲಿತ ಧೂಳಿಯ ದಂಡು ನಡೆದುದು ಸೂರ್ಯಮಂಡಲಕೆ
ಮೊಳಗಿದವು ಬರಸಿಡಿಲ ಕಣ್ಣಿಯ
ಕಳಚಿದಂತಿರೆ ವಾದ್ಯಚಯವರಿ
ಬಲಕೆ ನಡೆದನು ವೀರಸಾತ್ಯಕಿ ಸಕಲ ಬಲಸಹಿತ ॥5॥
೦೦೬ ಬರಬರಲು ಮುನ್ದುಭಯರಾಯರ ...{Loading}...
ಬರಬರಲು ಮುಂದುಭಯರಾಯರ
ಗರುಡಿಯಧಿಪತಿ ಕಂಡನೆಲೆ ಸಂ
ಗರ ಸಹಾಯಸಮಗ್ರ ಸಾತ್ಯಕಿ ಗಮನವಾವೆಡೆಗೆ
ಧುರದ ಬಡವರನೆಮ್ಮ ವಂದಿಸಿ
ಮರಳು ಮೇಣ್ ನೀ ಸರಳ ಮೊನೆಯಲಿ
ಪರಿಹರಿಸಿ ಹೋಗೆನುತ ಗುರು ಚಾಚಿದನು ನಿಜರಥವ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿಯು ಮುಂದುವರಿಯುತ್ತಿರಲು ಕೌರವ ಹಾಗೂ ಪಾಂಡವ ಧನುರ್ವಿದ್ಯಾಗುರು ದ್ರೋಣರು, ಯುದ್ಧದಲ್ಲಿ ಎಲ್ಲಾ ರೀತಿಯ ಸಹಾಯವನ್ನು ನೀಡಲು ಬಂದಿರುವ ಅವನ್ನು ಕಂಡು ಎಲ್ಲಿಗೆ ಹೊರಟಿರುವೆ ? ಯುದ್ಧದಲ್ಲಿ ಬಡವರಾದ ನಮ್ಮನ್ನು ವಂದಿಸಿ ಹಿಂತಿರುಗು ಅಥವಾ ಈ ಬಾಣದ ತುದಿಯಿಂದ ನಮ್ಮನ್ನು ನಿವಾರಿಸಿಕೊಂಡು ಹೋಗು-ಎನ್ನುತ್ತಾ ತನ್ನ ರಥವನ್ನು ಅವನ ಮುಂದೆ ಚಾಚಿದನು.
ಮೂಲ ...{Loading}...
ಬರಬರಲು ಮುಂದುಭಯರಾಯರ
ಗರುಡಿಯಧಿಪತಿ ಕಂಡನೆಲೆ ಸಂ
ಗರ ಸಹಾಯಸಮಗ್ರ ಸಾತ್ಯಕಿ ಗಮನವಾವೆಡೆಗೆ
ಧುರದ ಬಡವರನೆಮ್ಮ ವಂದಿಸಿ
ಮರಳು ಮೇಣ್ ನೀ ಸರಳ ಮೊನೆಯಲಿ
ಪರಿಹರಿಸಿ ಹೋಗೆನುತ ಗುರು ಚಾಚಿದನು ನಿಜರಥವ ॥6॥
೦೦೭ ನಿನ್ದು ಕಾದುವ ...{Loading}...
ನಿಂದು ಕಾದುವ ಮನವೊ ಮೇಣು ಪು
ರಂದರಾತ್ಮಜನಂತೆ ಭಯದಲಿ
ವಂದಿಸಿಯೆ ಬೀಳ್ಕೊಂಬ ಮನವೋ ಹೇಳು ನಿಶ್ವಯವ
ಎಂದಡಾಲಿಸಿ ನಗುತ ಸಾತ್ಯಕಿ
ಯೆಂದನವಧರಿಸೈ ಗುರೋರಪಿ
ಯೆಂದು ನೀ ಗುರುವೆಂದು ತಲೆವಾಗಿದನು ವಿನಯದಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಂತು ಯುದ್ಧ ಮಾಡುವ ಮನಸ್ಸಿದೆಯೋ ಅಥವಾ ಪಾರ್ಥನಂತೆ ಭಯದಿಂದ ನಮಸ್ಕರಿಸಿ ಬೀಳ್ಕೊಳ್ಳಬೇಕೆಂಬ ಮನಸ್ಸಿದೆಯೋ ನಿಜವಾಗಿ ಹೇಳು ಎಂದು ದ್ರೋಣನೆನ್ನಲು, ಅದನ್ನು ಕೇಳಿ ಸಾತ್ಯಕಿ ನಗುತ್ತ…. ಗುರುವೇ ಕೇಳಿರಿ… ನೀವು ಗುರುವಿಗೂ ಗುರು ಎಂದು ವಿನಯದಿಂದ ತಲೆಬಾಗಿದನು.
ಮೂಲ ...{Loading}...
ನಿಂದು ಕಾದುವ ಮನವೊ ಮೇಣು ಪು
ರಂದರಾತ್ಮಜನಂತೆ ಭಯದಲಿ
ವಂದಿಸಿಯೆ ಬೀಳ್ಕೊಂಬ ಮನವೋ ಹೇಳು ನಿಶ್ವಯವ
ಎಂದಡಾಲಿಸಿ ನಗುತ ಸಾತ್ಯಕಿ
ಯೆಂದನವಧರಿಸೈ ಗುರೋರಪಿ
ಯೆಂದು ನೀ ಗುರುವೆಂದು ತಲೆವಾಗಿದನು ವಿನಯದಲಿ ॥7॥
೦೦೮ ಇತ್ತಲೀತನ ಕೂಡೆ ...{Loading}...
ಇತ್ತಲೀತನ ಕೂಡೆ ಕಾದುವ
ಡತ್ತಲರ್ಜುನನಿರವನರಿಯೆನು
ಚಿತ್ತದಲಿ ಖತಿಗೊಂಬನವನೀಪಾಲನೆಂದೆನುತ
ಮತ್ತೆ ಸಾತ್ಯಕಿ ಬಿಲ್ಲನಿಳುಹಿದ
ನುತ್ತಮಾಂಗಕೆ ಕರಯುಗವ ಚಾ
ಚುತ್ತ ಬಿನ್ನೈಸಿದ ಧನುರ್ಧರ ಫಾಲನೇತ್ರಂಗೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಈತನ ಜೊತೆ ಯುದ್ಧ ಮಾಡಲು ನಿಂತರೆ ಆ ಕಡೆ ಅರ್ಜುನನ ಸ್ಥಿತಿ ಏನೆಂಬುದನ್ನು ತಿಳಿಯಲು ಸಾಧ್ಯವಿಲ್ಲ. ತನ್ನನ್ನು ಯುದ್ಧಕ್ಕೆ ಕಳಿಸಿದ ರಾಜ ಧರ್ಮಜನು ಮನದಲ್ಲಿ ಕೋಪಗೊಳ್ಳುತ್ತಾನೆ - ಎಂದು ಚಿಂತಿಸುತ್ತ ಸಾತ್ಯಕಿಯು ಬಿಲ್ಲನ್ನು ಇಳಿಸಿ, ಎರಡೂ ಕೈಗಳನ್ನೂ ಹಣೆಯವರೆಗೂ ಮೇಲಕ್ಕೆತ್ತಿ ಜೋಡಿಸಿ, ಧನುರ್ಧಾರಿಯಾದ ಹಾಗೂ ಹಣೆಗಣ್ಣುಳ್ಳ ಶಿವನಿಗೆ ಸಮಾನನಾದ ದ್ರೋಣನಿಗೆ ಬಿನ್ನೈಸಿದನು.
ಮೂಲ ...{Loading}...
ಇತ್ತಲೀತನ ಕೂಡೆ ಕಾದುವ
ಡತ್ತಲರ್ಜುನನಿರವನರಿಯೆನು
ಚಿತ್ತದಲಿ ಖತಿಗೊಂಬನವನೀಪಾಲನೆಂದೆನುತ
ಮತ್ತೆ ಸಾತ್ಯಕಿ ಬಿಲ್ಲನಿಳುಹಿದ
ನುತ್ತಮಾಂಗಕೆ ಕರಯುಗವ ಚಾ
ಚುತ್ತ ಬಿನ್ನೈಸಿದ ಧನುರ್ಧರ ಫಾಲನೇತ್ರಂಗೆ ॥8॥
೦೦೯ ಕಳುಹಿದನು ಯಮಸೂನು ...{Loading}...
ಕಳುಹಿದನು ಯಮಸೂನು ಪಾರ್ಥನ
ಬಳಿಗೆ ನೀ ಕೃಪೆಮಾಡಿ ತನ್ನನು
ಕಳುಹಬೇಹುದು ನಿಮ್ಮೊಳಿದಿರೇ ರಣಕೆ ತಾನೆನುತ
ಸೆಳೆದ ಬಾಣವನಿಳುಹಿದರೆ ಗುರು
ತೊಲಗಿ ಕೊಟ್ಟನು ಪದವನಹಿತಾ
ವಳಿಗೆ ಸಾತ್ಯಕಿ ಮೊಳಗಿದನು ಕಳಶಜನ ನೇಮದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರ್ಮರಾಯನು ಪಾರ್ಥನ ಬಳಿಗೆ ನನ್ನನ್ನು ಕಳುಹಿಸಿದನು. ನೀವು ಕೃಪೆ ಮಾಡಿ ನನ್ನನ್ನು ಪಾರ್ಥನ ಬಳಿಗೆ ಕಳುಹಿಸಬೇಕು. ನಿಮಗೆ ಎದುರಾಗಿ ನಿಂತು ಯುದ್ಧ ಮಾಡಲು ನಾನು ಸಮರ್ಥನೇ ?” ಎನ್ನುತ್ತಾ ಸೆಳೆದ ಬಾಣವನ್ನು ಕೆಳಕ್ಕೆ ಇಳಿಸಿದ. ಗುರುವು ಅವನನ್ನು ಮುಂದಕ್ಕೆ ಕಳಿಸಿಕೊಟ್ಟನು. ದ್ರೋಣನ ಅನುಮತಿಯಂತೆ ಸಾತ್ಯಕಿಯು ಶತ್ರುಸೇನೆಯ ಕಡೆಗೆ ಮುನ್ನುಗ್ಗಿದನು.
ಮೂಲ ...{Loading}...
ಕಳುಹಿದನು ಯಮಸೂನು ಪಾರ್ಥನ
ಬಳಿಗೆ ನೀ ಕೃಪೆಮಾಡಿ ತನ್ನನು
ಕಳುಹಬೇಹುದು ನಿಮ್ಮೊಳಿದಿರೇ ರಣಕೆ ತಾನೆನುತ
ಸೆಳೆದ ಬಾಣವನಿಳುಹಿದರೆ ಗುರು
ತೊಲಗಿ ಕೊಟ್ಟನು ಪದವನಹಿತಾ
ವಳಿಗೆ ಸಾತ್ಯಕಿ ಮೊಳಗಿದನು ಕಳಶಜನ ನೇಮದಲಿ ॥9॥
೦೧೦ ಪಾರಸಿಕ ನೇಪಾಳ ...{Loading}...
ಪಾರಸಿಕ ನೇಪಾಳ ಸಿಂಹಳ
ವೀರಬಾಹ್ಲಿಕ ಯವನ ಕೌಸಲ
ಪಾರಿಯಾತ್ರರು ತುರುಕ ಬರ್ಬರ ವಂಗ ಮಾಗಧರು
ಕೌರವೇಂದ್ರನ ಮನ್ನಣೆಯ ಪರಿ
ವಾರವೀತನ ಕೆಣಕಿದರು ಸರ
ಳೋರಣವ ಸೈಗರೆದರದುಭುತವಾಯ್ತು ಸಂಗ್ರಾಮ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರಸಿಕ, ನೇಪಾಳ, ಸಿಂಹಳ, ವೀರಬಾಹ್ಲಿಕ, ಯವನ, ಕೌಸಲ, ಪಾರಿಯಾತ್ರರು, ತುರುಕ, ಬರ್ಬರ, ವಂಗ, ಮಾಗಧ ಮೊದಲಾದ ಕೌರವೇಂದ್ರನ ಮನ್ನಣೆಯ ಪರಿವಾರದವರು ಸಾತ್ಯಕಿಯನ್ನು ಕೆಣಕಿದರು. ಬಾಣಗಳ ಜಾಲವನ್ನೇ ಸುರಿಸಿದರು. ಇದರಿಂದ ಸಂಗ್ರಾಮವು ಅದ್ಭುತವಾಗಿ ತೋರಿತು.
ಪದಾರ್ಥ (ಕ.ಗ.ಪ)
ಸೈಗರೆ-ಒಂದೇ ಸವನೆ ಸುರಿ
ಮೂಲ ...{Loading}...
ಪಾರಸಿಕ ನೇಪಾಳ ಸಿಂಹಳ
ವೀರಬಾಹ್ಲಿಕ ಯವನ ಕೌಸಲ
ಪಾರಿಯಾತ್ರರು ತುರುಕ ಬರ್ಬರ ವಂಗ ಮಾಗಧರು
ಕೌರವೇಂದ್ರನ ಮನ್ನಣೆಯ ಪರಿ
ವಾರವೀತನ ಕೆಣಕಿದರು ಸರ
ಳೋರಣವ ಸೈಗರೆದರದುಭುತವಾಯ್ತು ಸಂಗ್ರಾಮ ॥10॥
೦೧೧ ಚೀನ ಭೋಟ ...{Loading}...
ಚೀನ ಭೋಟ ವರಾಳ ಕೇಶಿ ಸು
ದೀನ ಖುರಸಾಣಾದಿ ದೇಶದ
ಮಾನನಿಧಿಗಳು ಕವಿದು ಮುತ್ತಿತು ಕೈಯ ಕೋಲ್ಗಳಲಿ
ಏನನೆಂಬೆನು ಸಮರದಲಿ ರಾ
ಜಾನುಮಿತ ಮಂತ್ರಣವೆನಿಪ ಮುನಿ
ಪಾನುಮತವರಿದಾಯ್ತು ಸಾತ್ಯಕಿಗಾ ಮಹಾಕದನ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೀನ, ಭೋಟ, ವರಾಳ, ಕೇಶಿ, ಸುದೀನ, ಖುರಸಾಣ-ಮೊದಲಾದ ದೇಶದ ಮಾನವಂತರು ಕೈಯಲ್ಲಿ ಬಾಣಗಳನ್ನು ಹಿಡಿದು ಮುತ್ತಿಗೆ ಹಾಕಿದರು. ಏನು ಹೇಳಲಿ ? ಧರ್ಮರಾಯನ ಆದೇಶ ಎಂಬುದೇ ಮುನಿಪನಾದ ದ್ರೋಣನ ಅನುಮತ ಎನ್ನುವಂತೆ ಯುದ್ಧರಂಗದೊಳಕ್ಕೆ ಪ್ರವೇಶ ದೊರೆತರೂ ಸಹ ಸಾತ್ಯಕಿಗೆ ಆ ಮಹಾ ಕದನವನ್ನು ತಡೆಯಲು ಅಸಾಧ್ಯವಾಯಿತು.
ಟಿಪ್ಪನೀ (ಕ.ಗ.ಪ)
ರಾಜಾನುಮಿತ ಮಂತ್ರಣವೆನಿಪ ಮುನಿಪನ ಅನುಮತ-‘ರಾಜನು ಸಮ್ಮತಿಸಿದುದೇ ರಾಜನೀತಿ’ ಎಂದು ಹೇಳಿರುವ ಋಷಿಯ ಮಾತು
ಮೂಲ ...{Loading}...
ಚೀನ ಭೋಟ ವರಾಳ ಕೇಶಿ ಸು
ದೀನ ಖುರಸಾಣಾದಿ ದೇಶದ
ಮಾನನಿಧಿಗಳು ಕವಿದು ಮುತ್ತಿತು ಕೈಯ ಕೋಲ್ಗಳಲಿ
ಏನನೆಂಬೆನು ಸಮರದಲಿ ರಾ
ಜಾನುಮಿತ ಮಂತ್ರಣವೆನಿಪ ಮುನಿ
ಪಾನುಮತವರಿದಾಯ್ತು ಸಾತ್ಯಕಿಗಾ ಮಹಾಕದನ ॥11॥
೦೧೨ ಕಡಿದನನಿಬರ ಕೈಯ ...{Loading}...
ಕಡಿದನನಿಬರ ಕೈಯ ಕೋಲ್ಗಳ
ನಡಗುದರಿದನನೇಕಭೂಪರ
ಗಡಣವನು ಘಾಡಿಸಿದನಂಬಿನ ಸರಿಯನುರವಣಿಸಿ
ಕಡಗಿ ಸಾತ್ಯಕಿಯೊಡನೆ ಬವರವ
ಹಿಡಿದ ಭಟರಮರರ ವಿಮಾನವ
ನಡರುತಿದ್ದರು ಕೊಂದನತಿಬಳನಹಿತಮೋಹರವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಷ್ಟೂ ಜನ ಶತ್ರುಗಳ ಕೈಯ ಬಾಣಗಳನ್ನು ಕತ್ತರಿಸಿದನು. ಅನೇಕ ರಾಜರ ಸಮೂಹವನ್ನು ತುಂಡು ತುಂಡು ಮಾಡಿದನು. ಬಾಣಗಳ ರಾಶಿಯನ್ನು ಸಂಭ್ರಮದಿಂದ ತುಂಡರಿಸಿದನು. ಉತ್ಸಾಹದಿಂದ ಸಾತ್ಯಕಿಯೊಡನೆ ಯುದ್ಧ ನಡೆಸಿದ ವೀರರು ದೇವತೆಗಳ ವಿಮಾನವನ್ನು ಏರುತ್ತಿದ್ದರು. ಅತಿ ಪರಾಕ್ರಮಿಯಾದ ಸಾತ್ಯಕಿಯು ಶತ್ರುಸೇನೆಯನ್ನು ಕೊಂದು ಹಾಕಿದನು.
ಮೂಲ ...{Loading}...
ಕಡಿದನನಿಬರ ಕೈಯ ಕೋಲ್ಗಳ
ನಡಗುದರಿದನನೇಕಭೂಪರ
ಗಡಣವನು ಘಾಡಿಸಿದನಂಬಿನ ಸರಿಯನುರವಣಿಸಿ
ಕಡಗಿ ಸಾತ್ಯಕಿಯೊಡನೆ ಬವರವ
ಹಿಡಿದ ಭಟರಮರರ ವಿಮಾನವ
ನಡರುತಿದ್ದರು ಕೊಂದನತಿಬಳನಹಿತಮೋಹರವ ॥12॥
೦೧೩ ಎಡಬಲಕೆ ತೂಳುವ ...{Loading}...
ಎಡಬಲಕೆ ತೂಳುವ ಮದೇಭವ
ಕಡಿದು ಹರಹಿದನೌಕಿ ಚೂರಿಸಿ
ಗಡಣಿಸುವ ಭೂಪರಿಗೆ ಮಾಡಿದನಮರಪದವಿಯನು
ಕಡಿದು ಬಿಸುಟನು ಕೇಣವಿಲ್ಲದೆ
ಕಡುಗಲಿಗಳನು ವೈರಿಸೇನೆಯ
ನಡಗುದರಿದನು ಕೆಡಹಿದನು ಜಲಸಂಧಭೂಪತಿಯ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಡಬಲಗಳಲ್ಲಿ ನುಗ್ಗುತ್ತಿದ್ದ ಮದಿಸಿದ ಆನೆಗಳನ್ನು ಕತ್ತರಿಸಿ ಬಿಸಾಡಿದನು. ಚೂರಿ ಹಿಡಿದು ಗರ್ಜಿಸುವ ರಾಜರಿಗೆ ಅಮರ ಪದವಿಯನ್ನು (ಸ್ವರ್ಗ) ಉಂಟು ಮಾಡಿದನು. ದಾಕ್ಷಿಣ್ಯವಿಲ್ಲದೆ ವೀರಸೈನಿಕರನ್ನು ಕತ್ತರಿಸಿ ಬಿಸಾಡಿದನು. ವೈರಿ ಸೇನೆಯನ್ನು ಚೂರು ಚೂರು ಮಾಡಿದನು. ಜಲಸಂಧ ಭೂಪತಿಯನ್ನು ಕೆಡವಿ ಬೀಳಿಸಿದನು.
ಪದಾರ್ಥ (ಕ.ಗ.ಪ)
ತೂಳು-ಬೆನ್ನಟ್ಟು, ಹೊಡೆ,
ಕೇಣ-ದಾಕ್ಷಿಣ್ಯ,
ಟಿಪ್ಪನೀ (ಕ.ಗ.ಪ)
ಜಲಸಂಧ-ಭೂಪತಿ, ಮಗಧದೇಶದ ರಾಜ, ಈತನು ಭಾರತ ಯುದ್ಧದಲ್ಲಿ ಕೌರವನ ಪಕ್ಷದಲ್ಲಿ ನಿಂತು ಹೋರಾಡಿ ಸಾತ್ಯಕಿಯಿಂದ ಹತನಾದನು.
ಮೂಲ ...{Loading}...
ಎಡಬಲಕೆ ತೂಳುವ ಮದೇಭವ
ಕಡಿದು ಹರಹಿದನೌಕಿ ಚೂರಿಸಿ
ಗಡಣಿಸುವ ಭೂಪರಿಗೆ ಮಾಡಿದನಮರಪದವಿಯನು
ಕಡಿದು ಬಿಸುಟನು ಕೇಣವಿಲ್ಲದೆ
ಕಡುಗಲಿಗಳನು ವೈರಿಸೇನೆಯ
ನಡಗುದರಿದನು ಕೆಡಹಿದನು ಜಲಸಂಧಭೂಪತಿಯ ॥13॥
೦೧೪ ಒನ್ದು ದೆಸೆಯಲಿ ...{Loading}...
ಒಂದು ದೆಸೆಯಲಿ ಪಾರ್ಥ ಸವರಿದ
ನೊಂದು ದೆಸೆಯಲಿ ಸಾತ್ಯಕಿಯ ಸರ
ಳಿಂದ ನೊಂದುದು ಸೇನೆಯೆನೆ ಕೃತವರ್ಮನಿದಿರಾಗಿ
ನಿಂದನೆಲವೋ ಮರುಳೆ ಮೀರಿದ
ಡಿಂದುಧರ ತಲೆಗಾವಡೀಗಳೆ
ಕೊಂದಡಲ್ಲದೆ ಬಿಡೆನೆನುತ ಮೂದಲಿಸುತೈತಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಕಡೆಯಿಂದ ಪಾರ್ಥನು ಸೇನೆಯನ್ನು ನಾಶಗೈದನು. ಇನ್ನೊಂದು ಕಡೆಯಲ್ಲಿ ಸಾತ್ಯಕಿಯ ಬಾಣಗಳಿಂದ ಶತ್ರುಸೇನೆ ನೋಯುವಂತಾಯಿತು. ಆಗ ಕೃತವರ್ಮನು ಎದುರು ನಿಂತು “ಎಲವೋ ಮೂರ್ಖನೇ, ಚಂದ್ರಧರನಾದ ಶಿವನು ರಕ್ಷಿಸಲೆಂದು ಬಂದರೂ ನಿನ್ನನ್ನು ಈಗಲೇ ಕೊಲ್ಲದೆ ಬಿಡೆನು” ಎಂದು ಸಾತ್ಯಕಿಯನ್ನು ಮೂದಲಿಸಿದನು.
ಮೂಲ ...{Loading}...
ಒಂದು ದೆಸೆಯಲಿ ಪಾರ್ಥ ಸವರಿದ
ನೊಂದು ದೆಸೆಯಲಿ ಸಾತ್ಯಕಿಯ ಸರ
ಳಿಂದ ನೊಂದುದು ಸೇನೆಯೆನೆ ಕೃತವರ್ಮನಿದಿರಾಗಿ
ನಿಂದನೆಲವೋ ಮರುಳೆ ಮೀರಿದ
ಡಿಂದುಧರ ತಲೆಗಾವಡೀಗಳೆ
ಕೊಂದಡಲ್ಲದೆ ಬಿಡೆನೆನುತ ಮೂದಲಿಸುತೈತಂದ ॥14॥
೦೧೫ ನರನ ಮೈಗಣ್ಡೀತನಲಿ ...{Loading}...
ನರನ ಮೈಗಂಡೀತನಲಿ ಸಂ
ಗರವನಾದರಿಸುವೆನು ಬಳಿಕೆಂ
ದರಿದು ಕೃತವರ್ಮಕನ ರಥವನು ಧನುವ ಸಾರಥಿಯ
ಸರಳು ಮೂರರಲೆಚ್ಚು ರಿಪುವನು
ಧುರದಿ ಹಿಂಗಿಸಿ ಹಂಸಮಯ ಮೋ
ಹರದೊಳಗೆ ಮೊಳಗಿದನು ತಾಗಿದನತಿರಥಾವಳಿಯ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥನನ್ನು ಕಂಡು ಅನಂತರ ಈತನಲ್ಲಿ ಯುದ್ಧವನ್ನು ಮಾಡುವೆನು ಎಂದು ನಿರ್ಧರಿಸಿ, ಕೃತವರ್ಮನ ರಥ, ಧನುಸ್ಸು, ಸಾರಥಿಯ ಮೇಲೆ ಮೂರು ಬಾಣಗಳನ್ನು ಪ್ರಯೋಗಿಸಿ, ಶತ್ರುವನ್ನು ರಣರಂಗದಿಂದ ಹಿಮ್ಮೆಟ್ಟಿಸಿ, ಹಂಸಾಕಾರದಲ್ಲಿರುವ ಸೈನ್ಯದೊಳಗೆ ನುಗ್ಗಿ ಅತಿರಥರ ಗುಂಪನ್ನು ಎದುರಿಸಿದನು.
ಮೂಲ ...{Loading}...
ನರನ ಮೈಗಂಡೀತನಲಿ ಸಂ
ಗರವನಾದರಿಸುವೆನು ಬಳಿಕೆಂ
ದರಿದು ಕೃತವರ್ಮಕನ ರಥವನು ಧನುವ ಸಾರಥಿಯ
ಸರಳು ಮೂರರಲೆಚ್ಚು ರಿಪುವನು
ಧುರದಿ ಹಿಂಗಿಸಿ ಹಂಸಮಯ ಮೋ
ಹರದೊಳಗೆ ಮೊಳಗಿದನು ತಾಗಿದನತಿರಥಾವಳಿಯ ॥15॥
೦೧೬ ಹೊಗಿಸದಿರಿ ಸಾತ್ಯಕಿಯ ...{Loading}...
ಹೊಗಿಸದಿರಿ ಸಾತ್ಯಕಿಯ ಹಿಂದಕೆ
ತೆಗೆಸು ತೆಗಿಸೋ ಫಲುಗುಣನ ತೆ
ತ್ತಿಗನಿವನು ಹೊಯ್ ಹೊಯ್ಯೆನುತ ಹೊರವಂಟರತಿರಥರು
ಬಿಗಿದ ಬಿಲುಗಳ ತಿರುವೆರಳಬೊ
ಬ್ಬೆಗಳ ಕಿವಿಗಡಿಯಂಬುಗಳಿನಾ
ಳುಗಳ ದೇವನ ತರುಬಿದರು ಕೌರವ ಸಹೋದರರು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿಯು ಪ್ರವೇಶಿಸಲು ಬಿಡಬೇಡಿರಿ, ಹಿಂದಕ್ಕೆ ಕಳಿಸಿರಿ, ಅರ್ಜುನನ ನೆಂಟ ಇವನು. ಹೊಡೆಯಿರಿ ಹೊಡೆಯಿರಿ ಎಂದು ಅತಿರಥರು ಹೊರಟರು. ಬಿಗಿದ ಬಿಲ್ಲುಗಳನ್ನು ಹಿಡಿದು, ಬಿಲ್ಲಿನ ಹಗ್ಗವನ್ನು ಬೆರಳಿನಲ್ಲಿ ಠೇಂಕಾರ ಮಾಡುತ್ತಾ ಕಿವಿಗೆ ಆರ್ಭಟವನ್ನುಂಟುಮಾಡುವ ಬಾಣಗಳಿಂದ ಯೋಧರ ಯೋಧನಾದ ಸಾತ್ಯಕಿಯನ್ನು ಕೌರವ ಸಹೋದರರು ತಡೆದರು.
ಪದಾರ್ಥ (ಕ.ಗ.ಪ)
ತಿರು-ಬಿಲ್ಲಿನ ಹೆದೆ
ಮೂಲ ...{Loading}...
ಹೊಗಿಸದಿರಿ ಸಾತ್ಯಕಿಯ ಹಿಂದಕೆ
ತೆಗೆಸು ತೆಗಿಸೋ ಫಲುಗುಣನ ತೆ
ತ್ತಿಗನಿವನು ಹೊಯ್ ಹೊಯ್ಯೆನುತ ಹೊರವಂಟರತಿರಥರು
ಬಿಗಿದ ಬಿಲುಗಳ ತಿರುವೆರಳಬೊ
ಬ್ಬೆಗಳ ಕಿವಿಗಡಿಯಂಬುಗಳಿನಾ
ಳುಗಳ ದೇವನ ತರುಬಿದರು ಕೌರವ ಸಹೋದರರು ॥16॥
೦೧೭ ಅವರ ಬಲನೆಡವಙ್ಕದಲಿ ...{Loading}...
ಅವರ ಬಲನೆಡವಂಕದಲಿ ಸೈಂ
ಧವನ ಮೊನೆಯವರೌಕಿದರು ಕೌ
ರವನ ಬಳಿಯಲಿ ಸಂದಣಿಸಿದರು ಕರ್ಣ ನಂದನರು
ಬವರವಸದಳವಾಯ್ತು ರಿಪುಭಟ
ನಿವಹ ಮಧ್ಯದೊಳೀತ ಸಿಲುಕಿದ
ನವಿರಳಾಸ್ತ್ರವ ಸುರಿದು ಕಾಣನು ಹಗೆಗೆ ಹರಿವುಗಳ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಎಡಬಲಗಳಲ್ಲಿ ಸೈಂಧವನ ಸೇನೆಯವರು ನುಗ್ಗಿ ಬಂದರು, ಕರ್ಣನಂದನರು ಕೌರವನ ಬಳಿಯಲ್ಲಿ ಒಟ್ಟಾಗಿ ಸೇರಿದರು. ಯುದ್ಧವು ಅಸಾಧಾರಣವಾಯ್ತು. ಶತ್ರು ಸೈನಿಕರ ಸಮೂಹ ಮಧ್ಯದಲ್ಲಿ ಸಾತ್ಯಕಿಯು ಸಿಲುಕಿದನು. ಅಪಾರವಾದ ಸಂಖ್ಯೆಯಲ್ಲಿ ಒಂದೇ ಸಮನೆ ಅಸ್ತ್ರಗಳನ್ನು ಪ್ರಯೋಗಿಸಿದರೂ ಸಹ ಶತ್ರುಗಳನ್ನು ಕೊನೆಗಾಣಿಸುವ ಉಪಾಯ ಕಾಣಲಿಲ್ಲ.
ಪದಾರ್ಥ (ಕ.ಗ.ಪ)
ಹರಿವು-ಕೊನೆಗಾಣಿಸುವ ಉಪಾಯ
ಮೂಲ ...{Loading}...
ಅವರ ಬಲನೆಡವಂಕದಲಿ ಸೈಂ
ಧವನ ಮೊನೆಯವರೌಕಿದರು ಕೌ
ರವನ ಬಳಿಯಲಿ ಸಂದಣಿಸಿದರು ಕರ್ಣ ನಂದನರು
ಬವರವಸದಳವಾಯ್ತು ರಿಪುಭಟ
ನಿವಹ ಮಧ್ಯದೊಳೀತ ಸಿಲುಕಿದ
ನವಿರಳಾಸ್ತ್ರವ ಸುರಿದು ಕಾಣನು ಹಗೆಗೆ ಹರಿವುಗಳ ॥17॥
೦೧೮ ಅತ್ತ ಸಾತ್ಯಕಿಗಾಯ್ತು ...{Loading}...
ಅತ್ತ ಸಾತ್ಯಕಿಗಾಯ್ತು ರಣದೊ
ತ್ತೊತ್ತೆ ಮೋಹರ ಮಧ್ಯರಂಗದೊ
ಳಿತ್ತಲರ್ಜುನನಾಹವವನೇನೆಂಬೆನದ್ಭುತವ
ಮತ್ತೆ ಕೃಷ್ಣನ ಶಂಖನಾದವ
ನಿತ್ತಲವನೀಪಾಲ ಕೇಳಿದು
ಚಿತ್ತ ಕದಡಿದುದಡಿಗಡಿಗೆ ಮನನೊಂದು ಬಿಸುಸುಯ್ದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕಡೆ ರಣರಂಗದಲ್ಲಿ ಸಾತ್ಯಕಿಯು ಸೇನೆಯ ಮಧ್ಯದಲ್ಲಿ ಸಿಕ್ಕಿಬಿದ್ದನು, ಈ ಕಡೆ ಅರ್ಜುನನ ಯುದ್ಧದ ವೈಖರಿಯ ಅದ್ಭುತವನ್ನು ಏನೆಂದು ಹೇಳಲಿ ? ಮತ್ತೆ ಕೃಷ್ಣನ ಶಂಖನಾದವನ್ನು ಅವನೀಪಾಲನಾದ ಧರ್ಮಜನು ಕೇಳಿ ಅವನ ಚಿತ್ತ ಪುನಃ ಪುನಃ ಕದಡಿಹೋಗಿ ಮನದಲ್ಲೇ ನೊಂದು ನಿಟ್ಟುಸಿರುಬಿಟ್ಟನು.
ಮೂಲ ...{Loading}...
ಅತ್ತ ಸಾತ್ಯಕಿಗಾಯ್ತು ರಣದೊ
ತ್ತೊತ್ತೆ ಮೋಹರ ಮಧ್ಯರಂಗದೊ
ಳಿತ್ತಲರ್ಜುನನಾಹವವನೇನೆಂಬೆನದ್ಭುತವ
ಮತ್ತೆ ಕೃಷ್ಣನ ಶಂಖನಾದವ
ನಿತ್ತಲವನೀಪಾಲ ಕೇಳಿದು
ಚಿತ್ತ ಕದಡಿದುದಡಿಗಡಿಗೆ ಮನನೊಂದು ಬಿಸುಸುಯ್ದ ॥18॥