೧೦

೦೦೦ ಸೂ ನಡೆದು ...{Loading}...

ಸೂ. ನಡೆದು ಪರಬಲ ಮಧ್ಯದಲಿ ನೀ
ರ್ಗುಡಿಸಿ ಹರಿಯನು ಸಕಲ ಸುಭಟರ
ಮಡುಹಿ ಫಲುಗುಣ ಗೆಲಿದನಗ್ಗದ ಕೌರವೇಶ್ವರನ

೦೦೧ ನರನು ಕಳುಹಿಸಿಕೊಳಲು ...{Loading}...

ನರನು ಕಳುಹಿಸಿಕೊಳಲು ಗುರುಮೋ
ಹರವನಪಸವ್ಯದಲಿ ವಂಚಿಸಿ
ಮುರುಹಿದನು ಮುರವೈರಿ ರಥವನು ಮುಂದಣೊಡ್ಡಿಂಗೆ
ಅರರೆ ನರನೋ ನೂಕು ನೂಕರಿ
ಬಿರುದರಾವಡೆ ಪೂತು ಮಝ ಎಂ
ದುರವಣಿಸಿದರು ಮುರಿದು ಮಕರವ್ಯೂಹದತಿರಥರು ॥1॥

೦೦೨ ನೂಕಿತರಿಚತುರಙ್ಗಬಲ ನೆಲ ...{Loading}...

ನೂಕಿತರಿಚತುರಂಗಬಲ ನೆಲ
ನೋಕರಿಸಿತೋ ಪ್ರಳಯಜಲಧಿಯ
ನೂಕುತೆರೆಗಳ ಲಹರಿಯೋ ನಿಲುವಾತನಾರಿದಕೆ
ನಾಕು ಕಡೆಯಲಿ ಕವಿದುದಳವಿಗೆ
ನೂಕುನೂಕಾಯಿತ್ತು ನರನ
ವ್ಯಾಕುಳತೆಯಲಿ ಸವರ ತೊಡಗಿದನಹಿತಬಲ ವನವ ॥2॥

೦೦೩ ಕುಸುರಿದರಿದವು ಜೋಡು ...{Loading}...

ಕುಸುರಿದರಿದವು ಜೋಡು ವಜ್ರದ
ರಸುಮೆಗಳು ಹಾರಿದವು ರಿಪುಗಳ
ಯೆಸೆವ ಸೀಸಕ ಕವಚವನು ಸೀಳಿದನು ತೋಳಿನಲಿ
ನೊಸಲ ಸೀಸಕ ನುಗ್ಗುನುಸಿ ಬಂ
ಧಿಸಿದ ಸರಪಣಿ ಹಿಳಿದವರಿಬಲ
ದೆಸಕ ನಿಂದುದು ಪಾರ್ಥನೆಚ್ಚನು ವೈರಿಮೋಹರವ ॥3॥

೦೦೪ ಕುಳುವೆಳಗು ಕಿಡಿಗೆದರೆ ...{Loading}...

ಕುಳುವೆಳಗು ಕಿಡಿಗೆದರೆ ಹೊಗರಿನ
ಹೊಳಹು ಗಗನವನುಗುಳೆ ಧಾರೆಯ
ಬಲುಗಿಡಿಗಳುರಿ ಮಸಗೆ ತಳಿಹದ ಬಣ್ಣ ಗಜಗಜಿಸೆ
ಹಿಳುಕು ಬೊಬ್ಬಿಡೆ ಹೊದರಡಸಿ ಕಣ
ಗಿಲೆಯ ಕೋಲುಳಿಯಂಬು ಕವಲಂ
ಬಲಗಿನಂಬೀಸಾಡಿದವು ಪರಸೈನ್ಯಸಾಗರವ ॥4॥

೦೦೫ ವ್ರಣದ ಬಲುವೊನಲೊಳಗೆ ...{Loading}...

ವ್ರಣದ ಬಲುವೊನಲೊಳಗೆ ತಲೆಗಳು
ಕುಣಿದವರ್ಜುನನಂಬಿನುರುಬೆಗೆ
ಹೆಣನ ದಾವಣಿ ಹಾಸಿದವು ಸೂಸಿದವು ದೊಂಡೆಗಳು
ತಣಿದನಂತಕನಟ್ಟೆಗಳ ರಿಂ
ಗಣದ ನಾಟಕದೊಳಗೆ ಸಮರಾಂ
ಗಣದ ರೌರವ ರೌದ್ರವಾಯಿತು ಕಳನ ಚೌಕದಲಿ ॥5॥

೦೦೬ ಏರುಗಳು ಬುದುಬುದಿಸಿ ...{Loading}...

ಏರುಗಳು ಬುದುಬುದಿಸಿ ರಕುತವ
ಕಾರಿ ಕಾಳಿಜ ಖಂಡ ನೆಣ ಜಿಗಿ
ದೋರಿ ಬೆಳುನೊರೆ ಮಸಗಿ ನಸುಬಿಸಿರಕುತ ಹೊನಲಿಡಲು
ಕೌರಿಡಲು ಕಡಿದುಡಿದವೆಲು ಮೊಗ
ದೋರುಗಳ ಪೂರಾಯ ಘಾಯದ
ತಾರುಥಟ್ಟಿನ ಹೆಣನ ಮೆದೆ ಹೇರಾಳ ರಂಜಿಸಿತು ॥6॥

೦೦೭ ಎಲೆಲೆ ಪ್ರಳಯದ ...{Loading}...

ಎಲೆಲೆ ಪ್ರಳಯದ ರುದ್ರನನು ತಲೆ
ಬಳಿಚಿಬಿಟ್ಟನು ದ್ರೋಣನಕಟಾ
ನೆಲನೊಡೆಯನಾಪ್ತಿಗರು ಬಗೆದರು ಸ್ವಾಮಿದ್ರೋಹಿಕೆಯ
ಕೊಲುವವನು ಫಲುಗುಣನೊ ದ್ರೋಣನೊ
ಕೊಲೆಗಡಿಗನೋ ಕೊಂದನೋ ಕುರು
ಕುಲತಿಲಕ ನೆರೆ ಪಾಪಿಯೆಂದರು ನಿಖಿಳ ಪರಿವಾರ ॥7॥

೦೦೮ ಈತನರ್ಜುನನಿತ್ತಲಿದೆ ಪುರು ...{Loading}...

ಈತನರ್ಜುನನಿತ್ತಲಿದೆ ಪುರು
ಹೂತಸುತನ ವರೂಥವಿದೆ ಕಪಿ
ಕೇತನನ ಬೊಬ್ಬಾಟವಿದೆ ಫಲುಗುಣನ ಶರಜಾಲ
ಈತ ಪಾರ್ಥನು ಹೊಕ್ಕನಿತ್ತಲು
ಶ್ವೇತಹಯನಿತ್ತಲು ಧನಂಜಯ
ನೀತನೆನೆ ಫಲುಗುಣನ ಮಯವಾಯ್ತಖಿಳ ತಳತಂತ್ರ ॥8॥

೦೦೯ ಇದೆ ಕಿರೀಟಿಯ ...{Loading}...

ಇದೆ ಕಿರೀಟಿಯ ಬಿಲ್ಲ ಜೀವಡೆ
ಯದೆ ಸಿತಾಶ್ವನ ಸಿಂಹಗರ್ಜನೆ
ಯಿದೆ ಮುರಾರಿಯ ಮನಕೆ ಮುಂಚುವ ಹಯದ ಖುರನಿನದ
ಅದೆ ವಿಜಯನಸ್ತ್ರೌಘವತ್ತಲು
ಕದನ ಕಾಲಾನಲನ ತೀವ್ರತೆ
ಯದೆಯೆನುತ ಹೆದರೆದೆಯ ಸುಭಟರು ಬಿಸುಟರುತ್ಸಹವ ॥9॥

೦೧೦ ಉಡಿದು ಕುಪ್ಪಳಿಸಿದವು ...{Loading}...

ಉಡಿದು ಕುಪ್ಪಳಿಸಿದವು ರಥ ಕಡಿ
ವಡೆದುದಗ್ಗದ ಸಾರಥಿಗಳೆಡೆ
ಗೆಡೆದುದತಿರಥ ಸಮರಥಾರ್ಧ ಮಹಾರಥಾದಿಗಳು
ಹೊಡೆಗೆಡೆದ ದಂತಿಗಳು ರಕ್ತದ
ಕಡಲೊಳೀಸಾಡಿದವು ತೇಜಿಯ
ಕಡಿಕು ಹರಿದವು ಹೊರೆದನಂತಕನುರುಪರಿಗ್ರಹವ ॥10॥

೦೧೧ ಸರಳು ಸೇನೆಯ ...{Loading}...

ಸರಳು ಸೇನೆಯ ತಾಗಿ ರಿಪುಗಳ
ಕೊರಳ ಕೊಯ್ಯದ ಮುನ್ನವರಿಮೋ
ಹರವ ಹಿಂದಿಕ್ಕುವುದು ರಥವತಿಜವದ ಜೋಕೆಯಲಿ
ಹೊರಳಿದವು ಭಟರಟ್ಟೆ ಶೋಣಿತ
ಶರಧಿ ಮಸಗಿತು ಮಕುಟಬದ್ಧರ
ಹರಣದನಿಲಸಮೂಹ ಬೀಸಿತು ನಭಕೆ ಬಿರುಬಿನಲಿ ॥11॥

೦೧೨ ಮುರಿವಡೆದು ಚತುರಙ್ಗವರ್ಜುನ ...{Loading}...

ಮುರಿವಡೆದು ಚತುರಂಗವರ್ಜುನ
ನುರುಬೆಗಾರದೆ ನಿಲೆ ಶ್ರುತಾಯುಧ
ನಿರಿಯಲುತ್ಸಾಹಿಸಿದನಿದಿರಾದನು ಧನಂಜಯನ
ಮುರಿಯೆಸುತ ಮುಂಕೊಂಡು ಪಾರ್ಥನ
ತರುಬಿದರು ಬಳಿಕೀತನಾತನ
ನೆರೆವಣಿಗೆ ಲೇಸೆನುತ ತುಳುಕಿದನಂಬಿನಂಬುಧಿಯ ॥12॥

೦೧೩ ನರನ ಬಾಣಾನೀಕವನು ...{Loading}...

ನರನ ಬಾಣಾನೀಕವನು ಕ
ತ್ತರಿಸಿದನು ನಿಜಗದೆಯಲಾತನ
ಧುರಚಮತ್ಕಾರವನು ನೋಡುತ ಪಾರ್ಥ ಬೆರಗಾಗೆ
ಕೆರಳಿ ವಾಘೆಯ ಕೊಂಡು ರಥವನು
ಧುರಕೆ ದುವ್ವಾಳಿಸಲು ಮುರಹರ
ನುರವಣೆಗೆ ಕನಲುತ ಶ್ರುತಾಯುಧ ಹೊಯ್ದನಚ್ಯುತನ ॥13॥

೦೧೪ ವರುಣನಿತ್ತುಪದೇಶ ಬರಿದಿ ...{Loading}...

ವರುಣನಿತ್ತುಪದೇಶ ಬರಿದಿ
ದ್ದರನು ಹೊಯ್ದರೆ ತನ್ನ ಕೊಲುವುದು
ನಿರುತವೆನಲದ ಮರೆದು ಹೊಯ್ದನು ಹರಿಯ ಮಸ್ತಕವ
ಕೆರಳಿ ಗದೆ ಮುರಹರನ ಮುಟ್ಟದೆ
ಮರಳಿ ತನ್ನನೆ ಕೊಂದುದೇನ
ಚ್ಚರಿಯೊ ದೈವದ್ರೋಹಿಗೆತ್ತಣ ಲೇಸುಬಹುದೆಂದ ॥14॥

೦೧೫ ಆ ಶ್ರುತಾಯುಧ ...{Loading}...

ಆ ಶ್ರುತಾಯುಧ ಮಡಿದನಲ್ಲಿ ಮ
ಹಾಸುರದ ರಣವಾಯ್ತು ಕಾಂಭೋ
ಜೇಶ ಕೈದುಡುಕಿದನು ಕದನವನಿಂದ್ರಸುತನೊಡನೆ
ಸೂಸಿದನು ಸರಳುಗಳನಾತನ
ಸಾಸವನು ಮನ್ನಿಸುತ ಫಲುಗುಣ
ಬೇಸರದೆ ಕೊಂಡಾಡಿ ಕಾದಿದನೊಂದು ನಿಮಿಷದಲಿ ॥15॥

೦೧೬ ಸರಳು ಸವೆಯಲು ...{Loading}...

ಸರಳು ಸವೆಯಲು ಶಕ್ತಿಯಲಿ ಕಾ
ತರಿಸಿ ಕವಿದಿಡೆ ಶಕ್ತಿಯನು ಕ
ತ್ತರಿಸಿದನು ಕಾಂಭೋಜಭೂಪನ ಮುಕುಟಮಸ್ತಕವ
ಕೊರಳ ತೊಲಗಿಸಿ ಮುಂದೆ ನೂಕುವ
ವರ ಶ್ರುತಾಯುವಿನೊಡನೆ ಘನಸಂ
ಗರಕೆ ತೆಗೆದನು ಕಳುಹಿದನು ಕಾಂಭೋಜನೊಡನವರ ॥16॥

೦೧೭ ಹರಿಬದಯುತಾಯುವನು ಮಗುಳಿ ...{Loading}...

ಹರಿಬದಯುತಾಯುವನು ಮಗುಳಿ
ಬ್ಬರು ಸುತರು ನಿಯತಾಯು ಘನಸಂ
ಗರದ ದೀರ್ಘಾಯುವನು ಕಳುಹಿದನಮರಮಂದಿರಕೆ
ಧುರಕೆ ನೂಕಿದವಂಗರಾಜನ
ಕರಿಘಟೆಗಳಂಬಟ್ಟ ಮೊದಲಾ
ದರಿ ಸುಭಟ ಸಂದೋಹ ಮುತ್ತಿತು ಮತ್ತೆ ಫಲುಗುಣನ ॥17॥

೦೧೮ ಕರಿಘಟೆಯನಮ್ಬಟ್ಟಭೂಪನ ...{Loading}...

ಕರಿಘಟೆಯನಂಬಟ್ಟಭೂಪನ
ಶಿರವನೆಚ್ಚನು ಪಾರಸೀಕರ
ತುರಗ ಕವಿಯಲು ಕುಸುರಿದರಿದನು ಕೋಟಿಸಂಖ್ಯೆಗಳ
ಬಿರುದ ಹೊಗಳಿಸಿಕೊಂಡು ದಾತಾ
ರರ ಹಣವ ಸಲೆ ತಿಂದು ಹೆಚ್ಚಿದ
ಹಿರಿಯ ಡೊಳ್ಳಿನ ರಾವುತರ ಕೆಡಹಿದನು ನಿಮಿಷದಲಿ ॥18॥

೦೧೯ ಇರಿದು ಚಕ್ರವ್ಯೂಹವನು ...{Loading}...

ಇರಿದು ಚಕ್ರವ್ಯೂಹವನು ಕುರಿ
ದರಿಯ ಮಾಡಿ ಕಿರೀಟಿಯದರಿಂ
ಹೊರಗೆ ಹಂಸವ್ಯೂಹದಲಿ ಕೆಣಕಿದನು ಕಾಳೆಗವ
ತುರುಗಿದವು ತೂರಂಬು ತಲೆಗಳ
ತರಿದು ಬಿಸುಟವು ಘಮ್ಮು ಘಲಿಲೆನೆ
ನಿರಿನಿಳಿಲುಗರೆದೊರಲಿದವು ಫಲುಗುಣನ ಶರಜಾಲ ॥19॥

೦೨೦ ಬಿಲುರವದ ಮೊಳಗಿನಲಿ ...{Loading}...

ಬಿಲುರವದ ಮೊಳಗಿನಲಿ ಕೃಷ್ಣನ
ಫಲುಗುಣನ ಮೈಕಾಂತಿ ಮೇಘಾ
ವಳಿಗಳಲಿ ಹೊಂಗರಿಯ ಗಾಳಿಯ ಸರಳಸೋನೆಯಲಿ
ನಿಲುವ ಹಂಸವ್ಯೂಹವೆಲ್ಲಿಯ
ದೆಲೆ ಮಹೀಪತಿ ಕೇಳು ನಿನ್ನ
ಗ್ಗಳೆಯ ಸುಭಟರ ವಿಧಿಯನೆಂದನು ಸಂಜಯನು ನಗುತ ॥20॥

೦೨೧ ಅಳಿದುದೈನೂರರಸುಗಳು ಮು ...{Loading}...

ಅಳಿದುದೈನೂರರಸುಗಳು ಮು
ಮ್ಮುಳಿತವಾಯ್ತೈವತ್ತು ಸಾವಿರ
ಬಲುಗುದುರೆ ನುಗ್ಗಾದುದೊಂಬೈನೂರು ಭದ್ರಗಜ
ಅಳಿದುದಕೆ ಕೊಲೆಕೊತ್ತುವಡೆದ
ಗ್ಗಳ ಪದಾತಿಗೆ ಗಣನೆಯೆಲ್ಲೀ
ಬಲದ ಮೈವಶವವರ ಕೈವಶವೇನು ಹೊಸತೆಂದ ॥21॥

೦೨೨ ಕೆಡಹಿದನು ವಿನ್ದಾನುವಿನ್ದರ ...{Loading}...

ಕೆಡಹಿದನು ವಿಂದಾನುವಿಂದರ
ನಡಗುದರಿಯಾಯ್ತಖಿಳಬಲದು
ಗ್ಗಡದ ವೀರರು ಕಾದಿ ಬಿದ್ದುದು ಕಾಯಮಾರಿಗಳು
ನಡುಹಗಲು ಪರಿಯಂತ ಕಾಳೆಗ
ಬಿಡದೆ ಬಲುಹಾಯ್ತಖಿಳ ವೇಗದ
ಕಡುಗುದುರೆ ಬಳಲಿದವು ಬಗೆಯದೆ ಹರಿಯ ಗರ್ಜನೆಯ ॥22॥

೦೨೩ ಭಾರಿಸಿತು ಮೈ ...{Loading}...

ಭಾರಿಸಿತು ಮೈ ಮುಷ್ಟಿಯಲಿ ಲುಳಿ
ಸಾರತರ ಲಂಬಿಸಿತು ತಾಗಿದ
ಕೂರಲಗು ಗರಿದೋರಿದವು ನಿಜ ಹಯದ ಮೈಗಳಲಿ
ಹಾರಿದರ್ಜುನನರಿದನಾ ದೈ
ತ್ಯಾರಿಗೆಂದನು ದೇವ ಬಿನ್ನಹ
ವಾರುವಂಗಳ ವಹಿಲತೆಯ ಚಿತ್ತೈಸಿದಿರೆಯೆಂದ ॥23॥

೦೨೪ ಕಡಿಯಣವ ಕಾರಿದವು ...{Loading}...

ಕಡಿಯಣವ ಕಾರಿದವು ಕಂದವ
ನಡಿಗಡಿಗೆ ಹಾಯ್ಕಿದವು ಸುತ್ತಿದ
ಕುಡಿನೊರೆಯ ಕಟವಾಯ ಲೋಳೆಯ ನಿಮಿರ್ದಮೈಲುಳಿಯ
ತಡಿನೆನೆದ ಬಲುಬೆಮರ ಘುಡುಘುಡು
ಘುಡಿಪ ನಾಸಾಶ್ವಾಸ ಲಹರಿಯ
ಕಡುಮನದ ರಥತುರಗ ಮಿಕ್ಕವು ಸರಳಸೂಠಿಯಲಿ ॥24॥

೦೨೫ ಗಮನ ತಟ್ಟೆಯವಾಯ್ತು ...{Loading}...

ಗಮನ ತಟ್ಟೆಯವಾಯ್ತು ವೇಗ
ಭ್ರಮಣ ಜಡವಾಯ್ತಡಿಗಡಿಗೆ ನಿ
ಗ್ಗಮದೊಳಗೆ ರಥವದ್ದುದರಿ ಭಾರಣೆಯ ಭರವಸದ
ಸಮತೆ ನಿಂದುದು ಸಾಹಸೀಕರು
ಭ್ರಮಿಸುತಿದೆ ಭಟಜಲಧಿ ತುರಗ
ಶ್ರಮವ ನಾವ್ ಪರಿಹರಿಸಿದಲ್ಲದೆ ಕಾದಲರಿದೆಂದ ॥25॥

೦೨೬ ಉಣ್ಟು ಹೊಲ್ಲೆಹವಲ್ಲ ...{Loading}...

ಉಂಟು ಹೊಲ್ಲೆಹವಲ್ಲ ರಣದೊಳ
ಗೆಂಟುಮಡಿ ಬಳಲಿದವು ತೇಜಿಗ
ಳೀಂಟುವರೆ ನೀರಿಲ್ಲ ಮುರಿದರೆ ಬೆನ್ನ ಬಿಡರಿವರು
ಗೆಂಟರಲಿ ನಮ್ಮೊಡ್ಡ ಸುತ್ತಲು
ವೆಂಟಣಿಸಿ ರಿಪುಸೇನೆಯಿದೆ ಏ
ನುಂಟು ಮಾಡುವುಪಾಯವೆಂದನು ನಗುತ ಮುರವೈರಿ ॥26॥

೦೨೭ ದೇವ ಕಾಳೆಗ ...{Loading}...

ದೇವ ಕಾಳೆಗ ಬಲುಹು ಬಿಸಿಲಿನ
ಡಾವರಕೆ ರಥತುರಗವತಿ ನಿ
ರ್ಜೀವಿಯಾದವು ಹರಿಯ ಗಮನದ ಹದನನರಿಯೆನಲು
ಆ ವಿನೋದಿಗಳರಸ ಶರಣರ
ಕಾವ ಭರದಲಿ ದನುಜಕುಲ ವಿ
ದ್ರಾವಣನು ನಸುನಗುತ ಬೋಳೈಸಿದನು ತೇಜಿಗಳ ॥27॥

೦೨೮ ದೇವ ವಾಘೆಯ ...{Loading}...

ದೇವ ವಾಘೆಯ ಹಿಡಿ ತುರಂಗಕೆ
ಜೀವನವನೀ ಕಳನೊಳಗೆ ಸಂ
ಭಾವಿಸುವೆ ನೋಡೆನುತ ಧುಮ್ಮಿಕ್ಕಿದನು ಧಾರುಣಿಗೆ
ತೀವಿ ತೆಗೆದನು ವಜ್ರಶರದಲಿ
ಡಾವರಿಸಿದನು ಕಳನೊಳುದಕದ
ಸೈವಳೆಯ ಸೆಲೆಯರಿದು ಚೌಕಕೆ ಸೀಳಿದನು ನೆಲನ ॥28॥

೦೨೯ ನೋಡಿ ನರನುದ್ದಣ್ಡತನವನು ...{Loading}...

ನೋಡಿ ನರನುದ್ದಂಡತನವನು
ತೋಡುತೈದನೆ ತುರಗ ಲೀಲೆಗೆ
ಖೇಡಕುಳಿಯನು ಶೌರ್ಯಗರ್ವಿತನೈ ಶಿವಾ ಎನುತ
ಕೂಡೆ ಮಸಗಿತು ರಿಪುಚತುರ್ಬಲ
ಜೋಡು ಮಾಡಿತು ಕಡಹದಮರರು
ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ ॥29॥

೦೩೦ ಒದರಿ ಮೇಲಿಕ್ಕಿದರು ...{Loading}...

ಒದರಿ ಮೇಲಿಕ್ಕಿದರು ನಿಸ್ಸಾ
ಳದ ನಿರಂತರ ಸೂಳುವೊಯ್ಲಿನ
ಹೊದರುಗಳ ಹೊಸ ಮಸೆಯಡಾಯ್ದದ ಸಾಲ ಸಂದಣಿಯ
ಸದರವೀ ಹೊತ್ತೆನುತ ಗೆಲವಿನ
ಕುದುಕುಳಿಗಳುರವಣಿಸೆ ಕಾಣುತ
ಗದಗದಿಸಿ ಮುರವೈರಿ ಚಾಚಿದನರ್ಜುನಗೆ ರಥವ ॥30॥

೦೩೧ ಆಲಿಕಲುಗಳ ಕಡಿವಡುಕ್ಕಿನ ...{Loading}...

ಆಲಿಕಲುಗಳ ಕಡಿವಡುಕ್ಕಿನ
ಚೀಲಣದ ಹಂಗೇಕೆ ನಿಮ್ಮಡಿ
ಮೇಲುನೋಟವ ನೋಡೆ ರಥ ಪರಿಯಂತ ಕಾಳೆಗವೆ
ಹೋಳುಗಳೆವೆನು ಹುಗ್ಗಿಗರನೆನು
ತಾಳೊಳಗೆ ಬೆರಸಿದನು ಬರಿಗಾ
ಲಾಳುತನದಲಿ ಕಾದಿ ಕೊಂದನು ಕೋಟಿ ರಿಪುಭಟರ ॥31॥

೦೩೨ ವರುಣ ಬಾಣದಲುದಕವನು ...{Loading}...

ವರುಣ ಬಾಣದಲುದಕವನು ತ
ತ್ಸರಸಿಯಲಿ ತುಂಬಿದನು ತಮಗವ
ಸರವಿದೆಂದೌಕುವ ಮಹೀಶರ ಮತ್ತೆ ಬರಿಕೈದು
ಕರಿ ರಥಾಶ್ವ ಪದಾತಿಯನು ಸಂ
ಗರದ ಮಧ್ಯದೊಳೊಬ್ಬನೇ ಸಂ
ಹರಿಸಿದನು ಶತಗುಣವನೊಂದೇ ಲೋಭ ಗೆಲುವಂತೆ ॥32॥

೦೩೩ ಕೊಳನ ತಡಿಯಲಿ ...{Loading}...

ಕೊಳನ ತಡಿಯಲಿ ಹೂಡಿದನು ಶರ
ವಳಯದಲಿ ಚಪ್ಪರವನಾತನ
ಬಲುಹ ಕಂಡಸುರಾರಿ ಮೆಚ್ಚಿದನಡಿಗಡಿಗೆ ಹೊಗಳಿ
ಕಳಚಿ ನೊಗನನು ತೆಗೆದು ಕಬ್ಬಿಯ
ನಿಳುಹಿ ಪಡಿವಾಘೆಗಳ ಸರಿದನು
ಕೊಳಿಸಿ ಪಿಡಿಯಲು ಪಾಡಿಗೈದವು ಮರಳಿದೆಡಬಲಕೆ ॥33॥

೦೩೪ ಮುರುಹಿ ನಿನ್ದವು ...{Loading}...

ಮುರುಹಿ ನಿಂದವು ಕೊಡಹಿದವು ಕೇ
ಸರವನಧ್ವ ಶ್ರಮದ ಢಗೆ ಪರಿ
ಹರಿಸೆ ನೀರೊಳು ಹೊಗಿಸಿದನು ಹರಿ ಹಯ ಚತುಷ್ಟಯವ
ಸರಸಿಯಲಿ ಮೊಗವಿಟ್ಟು ಮೊಗೆದವು
ವರ ಜಲವನೆರಡಳ್ಳೆ ಹಿಗ್ಗಲು
ಮುರುಹಿದವು ಮುಖವನು ಮುರಾಂತಕ ತಡಿಯನಡರಿಸಿದ ॥34॥

೦೩೫ ಕರತಳದಿ ಮೈದಡವಿ ...{Loading}...

ಕರತಳದಿ ಮೈದಡವಿ ಗಾಯದ
ಸರಳ ಕಿತ್ತೌಷಧಿಯ ಲೇಪವ
ನೊರಸಿದನು ಕರುಣದಲಿ ಚಪ್ಪರಿಸಿದನು ಕಂಧರವ
ಹರುಷ ಮಿಗೆ ಕೊರಳೆತ್ತಿ ನಯನವ
ತಿರುಹಿ ದೇವನ ನೋಡುತಿರ್ದುವು
ತುರಗ ನಾಲ್ಕರ ಪುಣ್ಯ ಸನಕಾದಿಗಳಿಗಿಲ್ಲೆಂದ ॥35॥

೦೩೬ ಮೊಗಕೆ ಭಾಣವ ...{Loading}...

ಮೊಗಕೆ ಭಾಣವ ಕಟ್ಟಿ ನೆಳಲಲಿ
ಬಿಗಿದು ಫಲುಗುಣ ಸಹಿತ ಕೊಳನನು
ನಗುತ ಹೊಕ್ಕನು ನೋಡುತಿದ್ದುದು ಕೂಡೆ ಕುರುಸೇನೆ
ಬಿಗಿದ ಕತ್ತಲೆ ದೂರದಲಿ ದೀ
ವಿಗೆಯ ಸುತ್ತಲು ಕಟ್ಟಿ ನಿಂದವೊ
ಲಗಣಿತ ಪ್ರತಿಸುಭಟರಿದ್ದುದು ನರನ ಬಳಸಿನಲಿ ॥36॥

೦೩೭ ಚರಣ ವದನವ ...{Loading}...

ಚರಣ ವದನವ ತೊಳೆದು ನಿರ್ಮಳ
ವರಜಲವನೀಂಟಿದರು ನಿರುಪಮ
ಪರಮ ಕರುಣಾರ್ಣವನು ಮೈದುನಸಹಿತ ಸರಸಿಯಲಿ
ಪರಿಹೃತಶ್ರಮನಾಗಿ ಹರುಷೋ
ತ್ಕರುಷದಲಿ ಹರಿ ಕಳೆದುಕೊಂಡನು
ನರಗೆ ಕೊಟ್ಟನು ಹೋಳಿಸಿದ ಕರ್ಪುರದ ವೀಳೆಯವ ॥37॥

೦೩೮ ರಾಗ ಮಿಗೆ ...{Loading}...

ರಾಗ ಮಿಗೆ ಬ್ರಹ್ಮಾಂಡಕೋಟಿಯ
ನಾಗುಮಾಡುವನಲಸಿದರೆ ಮುನಿ
ದಾಗ ನುಂಗುವುದೊಂದು ಲೀಲೆ ಮನುಷ್ಯದೇಹದಲಿ
ಲೋಗರೆಂದುದನೈದೆ ಮಾಡುವ
ನಾಗಿ ಜನಿಸಿಹುದೊಂದು ಲೀಲಾ
ಸಾಗರನು ಲಕ್ಷ್ಮೀಪತಿಗೆ ನಮೊ ಎಂದುದಮರಗಣ ॥38॥

೦೩೯ ಸೆಳೆದು ಪಡಿವಾಘೆಯಲಿ ...{Loading}...

ಸೆಳೆದು ಪಡಿವಾಘೆಯಲಿ ತುರಗಾ
ವಳಿಯನನುಕೊಳಿಸಿದನು ಹರಿ ಕೈ
ಚಳಕದಲಿ ತುಡುಕಿದನು ಫಲುಗುಣನತುಳ ಗಾಂಡಿವವ
ಉಲಿದುದಾಹವ ಸೇನೆ ರಿಪುಮಂ
ಡಳಿಕರೋರಣಗೆಡಲು ರಣಮಂ
ಡಲದ ಪದ್ಮವ್ಯೂಹದಲಿ ಕೆಣಕಿದನು ಕಾಳೆಗವ ॥39॥

೦೪೦ ಇದು ಕೃತಾನ್ತನ ...{Loading}...

ಇದು ಕೃತಾಂತನ ಸೀಮೆಗಳವ
ಟ್ಟುದು ಸುಯೋಧನನೃಪತಿ ವಿಗತಾ
ಭ್ಯುದಯನಾದನೆನುತ್ತ ಕರ್ಣಾದಿಗಳು ಕಳವಳಿಸೆ
ಹೆದರೆದೆಯ ಹೇರಾಳ ವೀರರ
ಕದನದನುವನು ಕಂಡು ಕಡುಗೋ
ಪದಲಿ ಕೌರವರಾಯ ಸಮರೋದ್ಯೋಗಪರನಾದ ॥40॥

೦೪೧ ತಳತವಮಳಚ್ಛತ್ರ ಚಾಮರ ...{Loading}...

ತಳತವಮಳಚ್ಛತ್ರ ಚಾಮರ
ವಲುಗಿದವು ನವಹೇಮ ದಂಡದ
ಹಳವಿಗೆಯ ತುದಿವಲಗೆಯಲಿ ಹಾಯ್ಕಿದರು ಪನ್ನಗನ
ಮೊಳಗಿದವು ನಿಸ್ಸಾಳ ಬಿರುದಾ
ವಳಿಯ ಕಹಳೆಗಳೂದಿದವು ನೆಲ
ಮೊಳಗಿದಂತಿರೆ ಬಿರುದ ಹೊಗಳಿತು ಭಟ್ಟ ಸಂದೋಹ ॥41॥

೦೪೨ ತಳಿತುದರನೆಲೆ ರಾಯ ...{Loading}...

ತಳಿತುದರನೆಲೆ ರಾಯ ಥಟ್ಟಿನ
ಕಳವಳಿಗರುರವಣಿಸಿದರು ಮುರಿ
ದೊಳಸರಿವ ಮನ್ನೆಯರ ಹೊಯ್ದರು ಮುಂದೆ ಕಂಬಿಯಲಿ
ಉಲಿವ ಪಾಠಕರೋದುಗಳ ಕಳ
ಕಳಿಕೆಯಲಿ ನೃಪ ಬಂದು ಗುರುವಿನ
ದಳವ ಹೊಕ್ಕನು ನಮಿಸಿ ಬಿನ್ನಹಮಾಡಿದನು ನಗುತ ॥42॥

೦೪೩ ನರನ ಬಲುಗೈತನವನೀ ...{Loading}...

ನರನ ಬಲುಗೈತನವನೀ ಮೋ
ಹರದ ಹೆಂಗುಸುತನವ ನೀವವ
ಧರಿಸಿದಿರೆ ಜಗಭಂಡರಿವರಿಗೆ ಮತ್ತೆ ಬಿರುದುಗಳೆ
ತುರಗ ನೀರಡಸಿದರೆ ರಣದಲಿ
ಸರಸಿಯನು ತೋಡಿದನು ನಮ್ಮನು
ಸರಕುಮಾಡನು ಕಂಡು ಬಲ್ಲಿರೆ ಮುನ್ನ ನೀವೆಂದ ॥43॥

೦೪೪ ಅರಸ ಮೃತಸಞ್ಜೀವಿನಿಯ ...{Loading}...

ಅರಸ ಮೃತಸಂಜೀವಿನಿಯ ಬಲು
ಹಿರಲು ಬಹಳವ್ಯಾಧಿ ಮಾಡುವ
ದುರುಳತನ ತಾನೇನು ನರರಿಗೆ ದಿಟ ವಿಚಾರಿಸಲು
ಪರಮಪುರುಷೋತ್ತಮ ಮುಕುಂದನ
ಕರುಣಕವಚದ ಬಲದಿನಮರಾ
ಸುರರ ಬಗೆಯನು ಪಾರ್ಥನಿದು ನಮ್ಮಾರ ಹವಣೆಂದ ॥44॥

೦೪೫ ಹಗೆಯ ಪತಿಕರಿಸುವರೆ ...{Loading}...

ಹಗೆಯ ಪತಿಕರಿಸುವರೆ ನಾಲಗೆ
ನಿಗುರುವುದು ನೂರು ಮಡಿಯಲಿ ಕಾ
ಳೆಗಕೆ ತನ್ನನು ಬಿಟ್ಟು ನೋಡಿರೆ ನುಡಿದು ಫಲವೇನು
ತೆಗೆಸುವೆನು ಫಲುಗುಣನನೆನೆ ನಸು
ನಗುತ ಗುರು ಕೌರವ ಮಹೀಶನ
ಮೊಗದ ಸುಮ್ಮಾನಕ್ಕೆ ಹರುಷಿತನಾಗುತಿಂತೆಂದ ॥45॥

೦೪೬ ಆದಡೆಲೆ ಭೂಪಾಲ ...{Loading}...

ಆದಡೆಲೆ ಭೂಪಾಲ ನರನೊಳು
ಕಾದಲೀಶಂಗರಿದು ನೀನಿದಿ
ರಾದಡಪಜಯವಾಗದಿದ್ದರೆ ನಮ್ಮ ಪುಣ್ಯವದು
ಕಾದಲಾಪರೆ ಮಗನೆ ಪರರಿಗೆ
ಭೇದಿಸುವರಳವಲ್ಲ ಕವಚವ
ನಾದಿಯದು ಕೊಳ್ಳೆಂದು ಕೊಟ್ಟನು ಗವಸಣಿಗೆದೆಗೆದು ॥46॥

೦೪೭ ಇದು ಮಹಾದೇವರದು ...{Loading}...

ಇದು ಮಹಾದೇವರದು ವೃತ್ರನ
ಕದನದಲಿ ಕೈಸಾರ್ದುದೀಶಂ
ಗಿದು ಸುರೇಂದ್ರಂಗಾ ಸುರೇಶ್ವರನಾಂಗಿರಂಗಿತ್ತ
ಇದು ಬೃಹಸ್ಪತಿಗಾಂಗಿರನಿನಾ
ದುದು ಭರದ್ವಾಜಂಗೆ ಬಳಿಕಾ
ದುದು ಭರದ್ವಾಜಾಖ್ಯನಿತ್ತನು ತನಗೆ ಕರುಣದಲಿ ॥47॥

೦೪೮ ನರ ಸುರಾಸುರರಿದನು ...{Loading}...

ನರ ಸುರಾಸುರರಿದನು ಭೇದಿಸ
ಲರಿದು ಕೈಕೊಳ್ಳೆಂದು ಮಂತ್ರಿಸಿ
ಬರಿಗೆ ಕವಚವ ಕಟ್ಟಿದನು ಕೌರವ ಮಹೀಪತಿಗೆ
ಗುರುವಿನಂಘ್ರಿಯೊಳೆರಗಿ ಮರಳಿದು
ಧುರವ ಹೊಕ್ಕನು ಶಕ್ರತನುಜನ
ಕರೆದು ಮೂದಲಿಸಿದನು ತುಳುಕಿದನಂಬಿನಂಬುಧಿಯ ॥48॥

೦೪೯ ಎಲವೊ ಕೌರವ ...{Loading}...

ಎಲವೊ ಕೌರವ ಹಿಂದೆ ವಂಚಿಸಿ
ಕಳವಿನಲಿ ಜೂಜಾಡಿ ರಾಜ್ಯವ
ಗೆಲಿದ ಗರ್ವವನುಗುಳು ಸಮರದ್ಯೂತಕೇಳಿಯಲಿ
ಹಲಗೆಯೈ ಕುರುಭೂಮಿ ಕೌರವ
ಕುಲದ ತಲೆ ಸಾರಿಗಳು ಸೆರೆಯಲಿ
ಗೆಲಲು ಬಂದೆನು ಕೊಳ್ಳು ಹಾಸಂಗಿಗಳನೆನುತೆಚ್ಚ ॥49॥

೦೫೦ ಎಸಲು ಪಾರ್ಥನ ...{Loading}...

ಎಸಲು ಪಾರ್ಥನ ಬಾಣವನು ಖಂ
ಡಿಸಿದನೆಲವೋ ತಮ್ಮ ನಿಮಗಿಂ
ದಸುರರಿಪು ತೆತ್ತಿಗನಲೇ ತುಡುಕಲಿ ಸುದರ್ಶನವ
ನುಸಿಗಳೌಕಿದರಕಟ ದಿಗ್ಗಜ
ಘಸಣಿಗೊಂಬುದೆ ನಿನ್ನ ಬಾಣ
ಪ್ರಸರಕಾನಂಜುವೆನೆ ಫಡ ಹೋಗೆನುತ ತೆಗೆದೆಚ್ಚ ॥50॥

೦೫೧ ಕಾಲುವೊಳೆಗೇಕವನಿಪತಿ ಹರು ...{Loading}...

ಕಾಲುವೊಳೆಗೇಕವನಿಪತಿ ಹರು
ಗೋಲು ನೀವಿನ್ನರಿಯದಿದ್ದರೆ
ಹೇಳೆವಾತ್ಮಸ್ತುತಿಯ ಮಾಡೆವು ಸಾಕದಂತಿರಲಿ
ಮೇಲುಗವಚವ ನಂಬಿ ನಮ್ಮೊಳು
ಕಾಳೆಗವ ನೀ ಬಯಸಿ ಬಂದೆ ನೃ
ಪಾಲ ಜೋಡಿನ ಬಲದಿ ನಮ್ಮನು ಜಯಸುವೈ ಎಂದ ॥51॥

೦೫೨ ಆರ ದೀಪನ ...{Loading}...

ಆರ ದೀಪನ ಚೂರ್ಣಬಲದಲಿ
ವೀರರುದ್ರನು ಜಗವ ನುಂಗುವ
ನೋರೆಗೆಡೆಯದಿರಂಬ ಸುರಿ ಸುರಿ ಹೊಳ್ಳುನುಡಿಯೇಕೆ
ಸಾರು ನೀ ಬರಹೇಳು ಕೀಚಕ
ವೈರಿಯನು ಪಡಿಸಣವ ನೋಡಲಿ
ಭೂರಿಬಾಣದ ಸವಿಯನೆಂದನು ಕೌರವರರಾಯ ॥52॥

೦೫೩ ಗರುಡನಾರೋಗಣೆಯ ಬೋನಕೆ ...{Loading}...

ಗರುಡನಾರೋಗಣೆಯ ಬೋನಕೆ
ಮರಳಿ ಪಡಿಸಣವೇಕೆ ಮಾತಿನ
ಮುರಿವುಗಳು ಗೆಲ್ಲವಲೆ ನೀ ನೆರೆ ನೋಡು ಕೈಗುಣವ
ಅರಸ ನಿನ್ನಯ ಕೊರಳಕಡಿತಕೆ
ಸರಳು ಕುದಿತದಲೆನಗೆ ತನಗೆಂ
ದೊರಲುತಿದೆ ನಿನಗಿಂದಿನಲಿ ಸಾವಿಲ್ಲ ಹೋಗೆಂದ ॥53॥

೦೫೪ ಎನುತ ಕೂರಮ್ಬಿನಲಿ ...{Loading}...

ಎನುತ ಕೂರಂಬಿನಲಿ ದುರ್ಯೋ
ಧನನನೆಚ್ಚನು ವಜ್ರ ಕವಚದ
ಲನಿತು ಶರವಕ್ಕಾಡಿದವು ಸೊಪ್ಪಾದವೇಣುಗಳು
ಅನಲ ಗಿರಿ ವಜ್ರಾಸ್ತ್ರದಲಿ ಫಲು
ಗುಣನು ಬೊಬ್ಬಿರಿದೆಚ್ಚನೆಚ್ಚಂ
ಬನಿತು ಮುರಿದವು ಮಸೆಯ ಕಾಣದು ಮೈ ಮಹೀಪತಿಯ ॥54॥

೦೫೫ ಹರಿಯನೆಚ್ಚನು ಫಲುಗುಣನ ...{Loading}...

ಹರಿಯನೆಚ್ಚನು ಫಲುಗುಣನ ತನು
ಬಿರಿಯೆ ಬಿಗಿದನು ಶರವನಾ ರಥ
ತುರಗದೊಡಲಲಿ ಹೂಳಿದನು ಹೇರಾಳದಂಬುಗಳ
ವರ ಕಪೀಂದ್ರನ ಘಾಸಿಮಾಡಿದ
ನುರವಣಿಸಿ ಕವಿದೆಸುವ ಭೂಪನ
ಭರದ ಬಲುವೇಗಾಯ್ಲತನವನು ಹೊಗಳಿದನು ಪಾರ್ಥ ॥55॥

೦೫೬ ಕವಚವಿದೆ ಸರ್ವಾಙ್ಗದಲಿ ...{Loading}...

ಕವಚವಿದೆ ಸರ್ವಾಂಗದಲಿ ನೃಪ
ನವಯವಕೆ ಕೇಡಿಲ್ಲ ಕೆಲಬಲ
ದವರು ನೆರೆ ಕೈಮಾಡುತಿದೆ ಕರ್ಣಾದಿನಾಯಕರು
ರವಿಯ ಕೈಗಳನಸ್ತಗಿರಿಯಾ
ನುವವೊಲಿದೆ ಮುನಿದಿವನ ಕೊಂದರೆ
ಪವನಜನ ಕೊಂದವನು ಹದನೇನೆಂದು ಚಿಂತಿಸಿದ ॥56॥

೦೫೭ ಎನುತ ಮೂರಮ್ಬಿನಲಿ ...{Loading}...

ಎನುತ ಮೂರಂಬಿನಲಿ ರಾಯನ
ಧನುವ ಖಂಡಿಸಿ ಮತ್ತೆ ಕೂರಂ
ಬಿನಲಿ ನೃಪನಂಗೈಯನೆಚ್ಚನು ಬಾಣ ಥಟ್ಟುಗಿಯೆ
ಜನಪ ನೊಂದನು ಬಳಿಕ ಕೃತವ
ರ್ಮನು ಕೃಪಾಚಾರಿಯನು ನಿನ್ನಯ
ತನುಜನನು ತೊಲಗಿಸಿದರೈ ಧೃತರಾಷ್ಟ್ರ ಕೇಳ್ ಎಂದ ॥57॥

೦೫೮ ರಾಯ ನೊನ್ದನು ...{Loading}...

ರಾಯ ನೊಂದನು ಹರಿಬಕಿಲ್ಲದ
ನಾಯಕರ ಸುಡು ಹೊಟ್ಟೆ ಹೊರೆಕರ
ವಾಯಕಿವದಿರ ಸಂತವಿಟ್ಟನು ಸ್ವಾಮಿಕಂಟಕರ
ಆಯುಧವ ಹಿಡಿದಕಟ ರಣದಲಿ
ಸಾಯಲಮ್ಮರು ಬಿರುದ ಹೊಗಳುವ
ಬಾಯ ನೋಡೆನುತಿದ್ದುದಾ ದುಶ್ಯಾಸನಾದಿಗಳು ॥58॥

೦೫೯ ಕದಡಿತೀ ಬಲಜಲಧಿ ...{Loading}...

ಕದಡಿತೀ ಬಲಜಲಧಿ ಸುಭಟರು
ಹೊದರುಗಟ್ಟಿತು ಹೊಳೆವಡಾಯುಧ
ಹೊದಕೆಗಳ ಸತ್ತಿಗೆಯ ಸೂಸುವ ಚಮರ ಸೀಗುರಿಯ
ತುದಿವೆರಳ ಕಿರುದನಿಯ ಕೆಂಪಿನ
ಕದಡುಗಂಗಳ ಕುಣಿವಮೀಸೆಯ
ಕದನಗಲಿಗಳು ಕವಿದರೀ ಕರ್ಣಾದಿ ನಾಯಕರು ॥59॥

೦೬೦ ಮುತ್ತಿದರು ಹಿನ್ದೆಡಬಲನ ...{Loading}...

ಮುತ್ತಿದರು ಹಿಂದೆಡಬಲನ ಮುಂ
ದೆತ್ತಲೀಕ್ಷಿಸಲತ್ತ ರಾಯನ
ತೆತ್ತಿಗರ ಕೂರಂಬು ಕವಿದವು ನರನ ಹಯರಥವ
ಎತ್ತ ನೋಡುವಡತ್ತ ಬಲ ದು
ರ್ವೃತ್ತ ಸುಭಟರ ಬಲಶರೌಘದ
ಕತ್ತಲೆಗೆ ಹದನೇನೆನುತ ದೈತ್ಯಾರಿ ಚಿಂತಿಸಿದ ॥60॥

೦೬೧ ಅರಿಭಟರು ಕಟ್ಟಳವಿಯಲಿ ...{Loading}...

ಅರಿಭಟರು ಕಟ್ಟಳವಿಯಲಿ ಮು
ಕ್ಕುರುಕೆ ಮುರರಿಪು ಪಾಂಚಜನ್ಯವ
ನಿರದೆ ಮೊಳಗಿದ ಹನುಮ ಗರ್ಜಿಸಿದನು ಪತಾಕೆಯಲಿ
ಸುರರ ದೈತ್ಯರ ಸಮರಸಿರಿ ವಿ
ಸ್ತರಿಸಿತಿತ್ತಲು ದ್ರೋಣನತ್ತಲು
ತೆರಳಿಚಿದನೈ ಪಾಂಡುಪುತ್ರರ ಸೈನ್ಯ ಸಾಗರವ ॥61॥

೦೬೨ ನಕುಲನನು ಮಸೆಗಾಣಿಸಿಯೆ ...{Loading}...

ನಕುಲನನು ಮಸೆಗಾಣಿಸಿಯೆ ಸಾ
ತ್ಯಕಿಯ ವಿರಥನ ಮಾಡಿ ಪಾಂಚಾ
ಲಕರನೋಡಿಸಿ ಮತ್ಸ್ಯ ಕೇಕೆಯ ಬಲವ ಬರಿಕೈದು
ಸಕಲ ಸನ್ನಾಹದಲಿ ಚೈದ್ಯ
ಪ್ರಕರವನು ತವೆ ಕೊಂದು ಭೂಪಾ
ಲಕನ ಬೆಂಬತ್ತಿದನು ಭೀಮ ಘಟೋತ್ಕಚರ ಗೆಲಿದ ॥62॥

೦೬೩ ದಾನವರು ಬಲುಗೈಗಳಪ್ರತಿ ...{Loading}...

ದಾನವರು ಬಲುಗೈಗಳಪ್ರತಿ
ಮಾನರಹುದಾದಡೆಯು ಸಮರದೊ
ಳಾನಲಸದಳವಸುರರಿಗೆ ಸುರರಿಗೆ ಜಯಾಭ್ಯುದಯ
ಏನ ಹೇಳುವುದಲ್ಲಿ ಸುಭಟ ನಿ
ಧಾನರಿದ್ದುದು ಪಾಂಡವರೊಳವ
ಧಾನಗುಂದನು ರಾಯ ಗದುಗಿನ ವೀರನಾರಯಣ ॥63॥

+೧೦ ...{Loading}...