೦೦೦ ಸೂ ಹಾ ...{Loading}...
ಸೂ. ಹಾ ಮಗನೆ ರಣರಂಗ ಧೀರನೆ
ಹಾ ಮದೀಯ ಕುಮಾರ ವೀರನೆ
ಬಾ ಮಗನೆ ಮೊಗದೋರೆನುತ ಹಲುಬಿದನು ಕಲಿ ಪಾರ್ಥ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಹಾ ಮಗನೇ, ರಣರಂಗ ಧೀರನೇ, ಹಾ ನನ್ನ ಮಗನೇ, ವೀರನೇ, ಬಾ ಮಗನೇ ನಿನ್ನ ಮುಖವನ್ನು ತೋರಿಸು ಎನ್ನುತ್ತ ವೀರನಾದ ಅರ್ಜುನನು ಗೋಳಾಡಿದನು.
ಪದಾರ್ಥ (ಕ.ಗ.ಪ)
ಮದೀಯ-ನನ್ನ
ಮೂಲ ...{Loading}...
ಸೂ. ಹಾ ಮಗನೆ ರಣರಂಗ ಧೀರನೆ
ಹಾ ಮದೀಯ ಕುಮಾರ ವೀರನೆ
ಬಾ ಮಗನೆ ಮೊಗದೋರೆನುತ ಹಲುಬಿದನು ಕಲಿ ಪಾರ್ಥ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಮಸಪ್ತಕರ ಬಲ ನಿಜ
ಪಾಳಯಕೆ ತಿರುಗಿದುದು ತೀರಿತು ತರಣಿಯಾಟೋಪ
ಕಾಳೆಗವ ತೆಗೆಸಿದರು ಕೌರವ
ರೇಳು ಫಲುಗುಣ ಎನುತ ಲಕ್ಷ್ಮೀ
ಲೋಲ ವಾಘೆಯ ಮರಳಿ ಕೊಂಡನು ಹಯವ ಬೋಳೈಸಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಯನೇ ಕೇಳು, ಸಮಸಪ್ತಕರ ಸೈನ್ಯ ತಮ್ಮ ಪಾಳಯಕ್ಕೆ ಹಿಂದಿರುಗಿತು. ಸೂರ್ಯನ ಪ್ರತಾಪ ಮುಗಿಯಿತು. (ಸೂರ್ಯಾಸ್ತವಾಯಿತು) ಕೌರವರು ಯುದ್ಧದಿಂದ (ಪಾಳಯಕ್ಕೆ) ಹಿಂದಿರುಗಿದರು, ಅರ್ಜುನಾ ಏಳು ಎನ್ನುತ್ತಾ ಕೃಷ್ಣ ಕುದುರೆಗಳ ಹಗ್ಗವನ್ನು ಪುನಃ ಕೈಗೆ ತೆಗೆದುಕೊಂಡು ಕುದುರೆಗಳನ್ನು ಪ್ರೀತಿಯಿಂದ ಮೈಸವರಿದ.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಮಸಪ್ತಕರ ಬಲ ನಿಜ
ಪಾಳಯಕೆ ತಿರುಗಿದುದು ತೀರಿತು ತರಣಿಯಾಟೋಪ
ಕಾಳೆಗವ ತೆಗೆಸಿದರು ಕೌರವ
ರೇಳು ಫಲುಗುಣ ಎನುತ ಲಕ್ಷ್ಮೀ
ಲೋಲ ವಾಘೆಯ ಮರಳಿ ಕೊಂಡನು ಹಯವ ಬೋಳೈಸಿ ॥1॥
೦೦೨ ಅಳಿಯನಳಿವನು ಹೇಳಬಾರದು ...{Loading}...
ಅಳಿಯನಳಿವನು ಹೇಳಬಾರದು
ತಿಳಿಯಲಿದನಿನ್ನೆನುತ ಚಿಂತಿಸಿ
ನಳಿನಲೋಚನ ಬರುತ ಕಂಡನು ವರ ಸರೋವರವ
ಇಳಿದು ರಥವನು ರಣ ಪರಿಶ್ರಮ
ಗಳೆವೆನೆನುತವೆ ಪಾರ್ಥ ಸಹಿತಾ
ಕೊಳನ ಹೊಕ್ಕನು ಜಗದುದರ ಲೀಲಾವತಾರಕನು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು “ತನ್ನ ಸೋದರಳಿಯನಾದ ಅಭಿಮನ್ಯುವಿನ ಮರಣದ ವಿಚಾರವನ್ನು ಹೇಳಬಾರದು; ಈ ವಿಚಾರವನ್ನು (ಮುಂದೆ) ತಿಳಿಯಲಿ” ಎಂದುಕೊಳ್ಳುತ್ತ ಮರಳಿ ಬರುತ್ತಿರುವಾಗ ಒಂದು ಸರೋವರವನ್ನು ನೋಡಿದನು. ರಥದಿಂದ ಇಳಿದು “ಯುದ್ಧದ ಶ್ರಮವನ್ನು ಪರಿಹಾರ ಮಾಡಿಕೊಳ್ಳುವೆನು” ಎನ್ನುತ್ತ ಅರ್ಜುನನ ಸಮೇತ, ಜಗತ್ತನ್ನು ತನ್ನ ಉದರದಲ್ಲಿ ಇಟ್ಟುಕೊಂಡಿರುವ ಲೀಲಾವತಾರಿಯಾದ ಕೃಷ್ಣನು ಆ ಕೊಳವನ್ನು ಪ್ರವೇಶಿಸಿದನು.
ಮೂಲ ...{Loading}...
ಅಳಿಯನಳಿವನು ಹೇಳಬಾರದು
ತಿಳಿಯಲಿದನಿನ್ನೆನುತ ಚಿಂತಿಸಿ
ನಳಿನಲೋಚನ ಬರುತ ಕಂಡನು ವರ ಸರೋವರವ
ಇಳಿದು ರಥವನು ರಣ ಪರಿಶ್ರಮ
ಗಳೆವೆನೆನುತವೆ ಪಾರ್ಥ ಸಹಿತಾ
ಕೊಳನ ಹೊಕ್ಕನು ಜಗದುದರ ಲೀಲಾವತಾರಕನು ॥2॥
೦೦೩ ಧುರದ ಕೋಳಾಹಳದ ...{Loading}...
ಧುರದ ಕೋಳಾಹಳದ ಢಗೆ ಡಾ
ವರಿಸಿ ಬಳಲಿ ಧನಂಜಯನು ವರ
ಸರಸಿಯಲಿ ಮುಳುಗಿರಲು ನಸು ನಗುತೊಂದುಪಾಯದಲಿ
ನರನೊಳಿನ್ನರುಹುವೆನು ಘನ ಸಂ
ಗರದೊಳಡಗಿದ ರಾಜ ಕುವರನ
ಮರಣವಾರ್ತೆಯನೆಂದು ಮನದಲಿ ನೆನೆದನಸುರಾರಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದ ಕೋಲಾಹಲದಿಂದುಂಟಾದ ಧಗೆ (ಸೆಖೆ)ಯಿಂದ ಆಯಾಸಗೊಂಡ ಅರ್ಜುನನು ಆ ಸರೋವರದಲ್ಲಿ ಮುಳುಗಿರಲು, ಕೃಷ್ಣನು ನಸುನಗುತ್ತಾ ಒಂದು ಉಪಾಯದಿಂದ ಮಹಾಯುದ್ಧದಲ್ಲಿ ಮಡಿದ ರಾಜಕುಮಾರನ (ಅಭಿಮನ್ಯುವಿನ) ವಿಚಾರವನ್ನು ಇನ್ನು ಅರ್ಜುನನಿಗೆ ತಿಳಿಸುತ್ತೇನೆಂದು ಮನಸ್ಸಿನಲ್ಲಿ ಚಿಂತಿಸಿದನು.
ಪದಾರ್ಥ (ಕ.ಗ.ಪ)
ಸರಸಿ-ಸರೋವರ
ಮೂಲ ...{Loading}...
ಧುರದ ಕೋಳಾಹಳದ ಢಗೆ ಡಾ
ವರಿಸಿ ಬಳಲಿ ಧನಂಜಯನು ವರ
ಸರಸಿಯಲಿ ಮುಳುಗಿರಲು ನಸು ನಗುತೊಂದುಪಾಯದಲಿ
ನರನೊಳಿನ್ನರುಹುವೆನು ಘನ ಸಂ
ಗರದೊಳಡಗಿದ ರಾಜ ಕುವರನ
ಮರಣವಾರ್ತೆಯನೆಂದು ಮನದಲಿ ನೆನೆದನಸುರಾರಿ ॥3॥
೦೦೪ ಎಲೆ ಸುರೇನ್ದ್ರ ...{Loading}...
ಎಲೆ ಸುರೇಂದ್ರ ಕುಮಾರ ಕೇಳ್ ನಿ
ನ್ನೊಲುಮೆಯಣುಗನು ರಣದೊಳಗೆ ರಿಪು
ಬಲವ ಕೋಳಾಹಳಿಸಿ ಕೌರವ ಸುತರು ನೂರ್ವರನು
ತಲೆಯನರಿದನು ಬಳಿಕ ತಾ ಸುರ
ಲಲನೆಯರ ಚೆಲುವಿಂಗೆ ಸೋತನು
ಕಳಿದನೆನುತವೆ ನುಡಿದು ಹರಿ ಮುಳುಗಿದನು ಜಲದೊಳಗೆ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲೈ ಇಂದ್ರ ಪುತ್ರನಾದ ಧನಂಜಯನೆ, ಕೇಳು, ನಿನ್ನ ಪ್ರೀತಿ ಪಾತ್ರನಾದ ಮಗನಾಗಿರುವ ಅಭಿಮನ್ಯು ಇಂದು ರಣಾಂಗಣದಲ್ಲಿ ದೊಡ್ಡ ಕೋಲಾಹಲವನ್ನುಂಟು ಮಾಡಿ ಕೌರವರ ನೂರು ಮಕ್ಕಳನ್ನು ಕೊಂದು ಅನಂತರ ಸ್ವರ್ಗ ಲೋಕದ ಚೆಲುವೆಯರಿಗೆ ಮನಸೋತು ಮಡಿದನು’ ಎಂದು ಹೇಳಿ ಕೃಷ್ಣನು ನೀರಿನಲ್ಲಿ ಮುಳುಗಿದನು.
ಪದಾರ್ಥ (ಕ.ಗ.ಪ)
ಅಣುಗ-ಮಗ, ಅರಿದು-ಕತ್ತರಿಸಿ
ಮೂಲ ...{Loading}...
ಎಲೆ ಸುರೇಂದ್ರ ಕುಮಾರ ಕೇಳ್ ನಿ
ನ್ನೊಲುಮೆಯಣುಗನು ರಣದೊಳಗೆ ರಿಪು
ಬಲವ ಕೋಳಾಹಳಿಸಿ ಕೌರವ ಸುತರು ನೂರ್ವರನು
ತಲೆಯನರಿದನು ಬಳಿಕ ತಾ ಸುರ
ಲಲನೆಯರ ಚೆಲುವಿಂಗೆ ಸೋತನು
ಕಳಿದನೆನುತವೆ ನುಡಿದು ಹರಿ ಮುಳುಗಿದನು ಜಲದೊಳಗೆ ॥4॥
೦೦೫ ಆ ಸುತನ ...{Loading}...
ಆ ಸುತನ ಶೋಕದ ಮರುಕವಾ
ಕಾಶ ವಚನದೊಳಾಯ್ತು ಶಿವ ಶಿವ
ವಾಸುದೇವ ಎನುತ್ತ ಫಲುಗುಣ ಜಲವ ಬಗಿದೆದ್ದು
ಘಾಸಿಯಾದನು ಮಗನಕಟ ಸಂ
ತೋಷವೆಲ್ಲಿಯದೆನುತ ಮಾಯಾ
ವೇಷಿಯನು ಕರೆದನು ವಿಲೋಚನ ವಾರಿಪೂರದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನ್ನ ಪುತ್ರಶೋಕದ ಸುದ್ದಿ ಆಕಾಶ ವಾಣಿಯಿಂದ ತಿಳಿಯಿತು. ಶಿವ ಶಿವ, ವಾಸುದೇವ, ಎನ್ನುತ್ತ ಅರ್ಜುನ ನೀರನ್ನು ಬಗೆದು ಮೇಲಕ್ಕೆದ್ದು, ಅಯ್ಯೋ ಮಗನು ತೊಂದರೆಗೊಳಗಾದ, ಇನ್ನು ಸಂತೋಷವು ಎಲ್ಲಿಯದು” ಎನ್ನುತ್ತಾ ಕಣ್ಣೀರು ತುಂಬಿಕೊಂಡು ಮಾಯಾ ರೂಪನಾದ ಕೃಷ್ಣನನ್ನು ಕರೆದನು.
ಮೂಲ ...{Loading}...
ಆ ಸುತನ ಶೋಕದ ಮರುಕವಾ
ಕಾಶ ವಚನದೊಳಾಯ್ತು ಶಿವ ಶಿವ
ವಾಸುದೇವ ಎನುತ್ತ ಫಲುಗುಣ ಜಲವ ಬಗಿದೆದ್ದು
ಘಾಸಿಯಾದನು ಮಗನಕಟ ಸಂ
ತೋಷವೆಲ್ಲಿಯದೆನುತ ಮಾಯಾ
ವೇಷಿಯನು ಕರೆದನು ವಿಲೋಚನ ವಾರಿಪೂರದಲಿ ॥5॥
೦೦೬ ಎನಲು ಧಿಮ್ಮನೆ ...{Loading}...
ಎನಲು ಧಿಮ್ಮನೆ ಕೊಳದೊಳಗೆ ನಿಂ
ದನು ಮುಕುಂದನು ಸುರಪ ಸುತನಾ
ನನವ ನೋಡುತದೇನದೇನೆನೆ ಬಿಕ್ಕಿ ಬಿರಿದಳುತ
ತನಯನಳಿಯದೆ ಮಾಣ ಗಗನ
ಧ್ವನಿಯೊಳಾದುದು ವಾರ್ತೆ ಚಿತ್ತಕೆ
ಮೊನೆಯ ಸರಳೆನೆ ಮರುಳೆ ಬಾ ಎಂದೇರಿದನು ರಥವ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಹೀಗೆ ಹೇಳಲು ಕೃಷ್ಣನು ಕೊಳದೊಳಗೆ ಧಿಮ್ಮನೆ ನಿಂತು ಇಂದ್ರನ ಪುತ್ರನಾದ ಅರ್ಜುನನ ಮುಖವನ್ನು ನೋಡುತ್ತಾ, “ಇದೇನಿದು ಅರ್ಜುನಾ,” ಎನ್ನಲು ಅರ್ಜುನನು “ಬಿಕ್ಕಿ ಬಿಕ್ಕಿ ಅಳುತ್ತಾ, ನನ್ನ ಮಗನು ಮರಣ ಹೊಂದಿಲ್ಲದೆ ಇರನು. ಮನಸ್ಸಿಗೆ ಹರಿತವಾದ ಬಾಣ ತಾಕಿದಂತೆ ಆಕಾಶವಾಣಿಯಲ್ಲಿ ಸುದ್ದಿಯಾಯಿತು.” ಎಂದನು. ಕೃಷ್ಣನು “ಮರುಳೆ, ಬಾ” ಎಂದು ಹೇಳುತ್ತಾ ಕೃಷ್ಣ ರಥವನ್ನೇರಿದನು.
ಮೂಲ ...{Loading}...
ಎನಲು ಧಿಮ್ಮನೆ ಕೊಳದೊಳಗೆ ನಿಂ
ದನು ಮುಕುಂದನು ಸುರಪ ಸುತನಾ
ನನವ ನೋಡುತದೇನದೇನೆನೆ ಬಿಕ್ಕಿ ಬಿರಿದಳುತ
ತನಯನಳಿಯದೆ ಮಾಣ ಗಗನ
ಧ್ವನಿಯೊಳಾದುದು ವಾರ್ತೆ ಚಿತ್ತಕೆ
ಮೊನೆಯ ಸರಳೆನೆ ಮರುಳೆ ಬಾ ಎಂದೇರಿದನು ರಥವ ॥6॥
೦೦೭ ಹರಿ ಕಿರೀಟಿಗಳಿತ್ತ ...{Loading}...
ಹರಿ ಕಿರೀಟಿಗಳಿತ್ತ ಶಿಬಿರಕೆ
ತಿರುಗಿದರು ಸುತಶೋಕ ಸೂಚನೆ
ನರನ ಚಿತ್ತದೊಳಾಯ್ತು ವೆಂಠಣಿಸಿತ್ತು ಪರಿತಾಪ
ಕೊರಳ ಸೆರೆ ಹಿಗ್ಗಿದವು ಕಂಬನಿ
ದುರುಗಿದವು ಕಡುಶೋಕ ಜಠರದ
ಲುರವಣಿಸಲಾಕಸ್ಮಿಕದ ಭಯವಾಯ್ತು ಪಾರ್ಥಂಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣಾರ್ಜುನರು ಶಿಬಿರಕ್ಕೆ ಹಿಂದಿರುಗಿದರು. ಆಗ ಅರ್ಜುನನ ಮನಸ್ಸಿನಲ್ಲಿ ಪುತ್ರಶೋಕದ ಸೂಚನೆಯಾಯಿತು. ಅವನ ಮನಸ್ಸು ದುಃಖದಿಂದ ತುಂಬಿ ಹೋಗಿತ್ತು. ಅವನ ಕೊರಳ ನರಗಳು ದುಃಖದಿಂದ ಉಬ್ಬಿದುವು. ಕಣ್ಣುಗಳಲ್ಲಿ ನೀರು ಉಕ್ಕುತ್ತಿತ್ತು. ಹೊಟ್ಟೆಯಲ್ಲಿ ತೀವ್ರ ಶೋಕವು ಆವರಿಸಲು ಅವನಿಗೆ ಆಶ್ಚರ್ಯಕರವಾದ ಭಯವಾಯಿತು.
ಪದಾರ್ಥ (ಕ.ಗ.ಪ)
ಕಿರೀಟಿ-ಅರ್ಜುನ, ಚಿತ್ತ-ಮನಸ್ಸು, ವೆಂಠಣಿಸು-ತುಂಬು, ಪರಿತಾಪ-ದುಃಖ, ಸೆರೆ-ಗಂಟಲ ನರ, ಉರವಣಿಸಲು-ಹೆಚ್ಚಲು
ಮೂಲ ...{Loading}...
ಹರಿ ಕಿರೀಟಿಗಳಿತ್ತ ಶಿಬಿರಕೆ
ತಿರುಗಿದರು ಸುತಶೋಕ ಸೂಚನೆ
ನರನ ಚಿತ್ತದೊಳಾಯ್ತು ವೆಂಠಣಿಸಿತ್ತು ಪರಿತಾಪ
ಕೊರಳ ಸೆರೆ ಹಿಗ್ಗಿದವು ಕಂಬನಿ
ದುರುಗಿದವು ಕಡುಶೋಕ ಜಠರದ
ಲುರವಣಿಸಲಾಕಸ್ಮಿಕದ ಭಯವಾಯ್ತು ಪಾರ್ಥಂಗೆ ॥7॥
೦೦೮ ತರಣಿ ತೊಲಗಿದ ...{Loading}...
ತರಣಿ ತೊಲಗಿದ ಗಗನವೋ ಪಂ
ಕರುಹವಿಲ್ಲದ ಸರಸಿಯೋ ಕೇ
ಸರಿಯ ಲೀಲಾಳಾಪವಿಲ್ಲದ ಬಹಳ ಕಾನನವೊ
ಪರಮತತ್ತ ್ವನಿಧಾನವರಿಯದ
ನರನ ವಿದ್ಯಾರಚನೆಯೋ ನಿ
ರ್ಭರ ಭಯಂಕರವಾಯ್ತು ಪಾಳಯವೆನುತ ಬರುತಿರ್ದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನಿಲ್ಲದ ಆಕಾಶವೋ ಕಮಲ ಪುಷ್ಪಗಳಿಲ್ಲದ ಸರೋವರವೋ ಸಿಂಹದ ಗರ್ಜನೆಯಿಲ್ಲದ ದೊಡ್ಡ ಅರಣ್ಯವೋ ಶ್ರೇಷ್ಠವಾದ ತತ್ವ ವಿಚಾರವನ್ನು ತಿಳಿಯದುದರಿಂದ ನಿರರ್ಥಕವಾದ ವ್ಯಕ್ತಿಯ ವಿದ್ಯಾಧ್ಯಯನವೋ ಎಂಬಂತೆ ಭೀಕರತೆಯಿಂದ ಪಾಳಯವು ತುಂಬಿದೆಯೆನ್ನುತ್ತಾ ಅರ್ಜುನ ಬರುತ್ತಿದ್ದ.
ಮೂಲ ...{Loading}...
ತರಣಿ ತೊಲಗಿದ ಗಗನವೋ ಪಂ
ಕರುಹವಿಲ್ಲದ ಸರಸಿಯೋ ಕೇ
ಸರಿಯ ಲೀಲಾಳಾಪವಿಲ್ಲದ ಬಹಳ ಕಾನನವೊ
ಪರಮತತ್ತ ್ವನಿಧಾನವರಿಯದ
ನರನ ವಿದ್ಯಾರಚನೆಯೋ ನಿ
ರ್ಭರ ಭಯಂಕರವಾಯ್ತು ಪಾಳಯವೆನುತ ಬರುತಿರ್ದ ॥8॥
೦೦೯ ದೆಸೆದೆಸೆಯ ನೋಡಿದರೆ ...{Loading}...
ದೆಸೆದೆಸೆಯ ನೋಡಿದರೆ ಕತ್ತಲೆ
ಮಸಗುವುದು ಪರಿತಾಪ ತನುವನು
ಮುಸುಕುವುದು ಮನ ಮರುಗುವುದು ಕಳವಳಿಸುವುದು ಧೈರ್ಯ
ಮಸೆದ ಸರಳೊಡಲೊಳಗೆ ಮುರಿದವೊ
ಲುಸುರಿಗುಬ್ಬಸವಾಯ್ತು ಬಲ್ಲಡೆ
ಬೆಸಸು ಮುರಹರ ಹಿರಿದು ಬಳಲಿಸಬೇಡ ಹೇಳೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದಿಕ್ಕು ದಿಕ್ಕುಗಳನ್ನು ನೋಡಿದರೆ ಕತ್ತಲೆ ತುಂಬಿದೆ. ದುಃಖ ದೇಹವನ್ನು ಮುಚ್ಚಿದೆ. ಮನಸ್ಸು ದುಃಖಿಸುತ್ತಿದೆ. ಧೈರ್ಯವೇ ಗಾಬರಿಗೊಂಡಿದೆ. ಹರಿತಗೊಳಿಸಿದ ಬಾಣವು ದೇಹದೊಳಗೆ ಮುರಿದಿರುವಂತೆ ಉಸಿರಾಡಲು ಸಾಧ್ಯವಾಗದೆ ಉಬ್ಬಸವಾಗುತ್ತಿದೆ. ನಿನಗೆ ತಿಳಿದಿದ್ದರೆ ಹೇಳು. ನನ್ನನ್ನು ಇನ್ನೂ ಹೆಚ್ಚು ಬಳಲಿಸಬೇಡ.” ಎಂದು ಅರ್ಜುನನು ಕೃಷ್ಣನನ್ನು ಕೇಳಿದನು.
ಮೂಲ ...{Loading}...
ದೆಸೆದೆಸೆಯ ನೋಡಿದರೆ ಕತ್ತಲೆ
ಮಸಗುವುದು ಪರಿತಾಪ ತನುವನು
ಮುಸುಕುವುದು ಮನ ಮರುಗುವುದು ಕಳವಳಿಸುವುದು ಧೈರ್ಯ
ಮಸೆದ ಸರಳೊಡಲೊಳಗೆ ಮುರಿದವೊ
ಲುಸುರಿಗುಬ್ಬಸವಾಯ್ತು ಬಲ್ಲಡೆ
ಬೆಸಸು ಮುರಹರ ಹಿರಿದು ಬಳಲಿಸಬೇಡ ಹೇಳೆಂದ ॥9॥
೦೧೦ ತನ್ದೆ ಧೃತಿಗೆಡಬೇಡ ...{Loading}...
ತಂದೆ ಧೃತಿಗೆಡಬೇಡ ನಡೆ ನಿಜ
ನಂದನನನಾರೈವೆವೆನುತೈ
ತಂದು ಕೋಟೆಯ ಕಳೆದು ಬಂದರು ರಾಜ ಬೀದಿಯಲಿ
ಕಂದನಿರವನು ಕಾಣಲಾಪೆನೊ
ಕೊಂದರೆಂಬುದ ಕೇಳುವೆನೊ ತನ
ಗಿಂದು ಗತಿಯೇನೆನುತ ಬಂದನು ರಾಜ ಮಂದಿರಕೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಪ್ಪಾ ಅರ್ಜುನ, ಧೈರ್ಯಗುಂದಬೇಡ, ನಡೆ ನಿನ್ನ ಮಗನನ್ನು ನೋಡೋಣ” ಎಂದು ಕೃಷ್ಣನು ಹೇಳುತ್ತಿರಲು, ಅವರು ಕೋಟೆಯನ್ನು ದಾಟಿ, ರಾಜ ಬೀದಿಯಲ್ಲಿ ಬಂದರು. “ನನ್ನ ಮಗನು ಬದುಕಿರುವುದನ್ನು ಕಾಣುತ್ತೇನೋ ಅಥವಾ ಕೊಂದರು ಎಂಬುದನ್ನು ಕೇಳುತ್ತೇನೆಯೋ, ತನಗೆ ಇಂದು ಗತಿಯೇನು” ಎನ್ನುತ್ತ ಅರ್ಜುನ ರಾಜಮಂದಿರಕ್ಕೆ ಬಂದ.
ಪದಾರ್ಥ (ಕ.ಗ.ಪ)
ಆರೈವೆನು-ಹುಡುಕುವೆನು
ಮೂಲ ...{Loading}...
ತಂದೆ ಧೃತಿಗೆಡಬೇಡ ನಡೆ ನಿಜ
ನಂದನನನಾರೈವೆವೆನುತೈ
ತಂದು ಕೋಟೆಯ ಕಳೆದು ಬಂದರು ರಾಜ ಬೀದಿಯಲಿ
ಕಂದನಿರವನು ಕಾಣಲಾಪೆನೊ
ಕೊಂದರೆಂಬುದ ಕೇಳುವೆನೊ ತನ
ಗಿಂದು ಗತಿಯೇನೆನುತ ಬಂದನು ರಾಜ ಮಂದಿರಕೆ ॥10॥
೦೧೧ ಸುರನಗರಿ ನಡುಗಿತ್ತು ...{Loading}...
ಸುರನಗರಿ ನಡುಗಿತ್ತು ಸುರಪತಿ
ಹರನ ನೆನೆದನು ಯಮನ ಪಟ್ಟಣ
ಸರಕುದೆಗೆಯಿತು ಮೃತ್ಯು ಮರೆಹೊಕ್ಕಳು ಮಹೇಶ್ವರನ
ಬಿರುದರಂಜಿತು ದೇಶದೇಶದ
ಧರಣಿಪತಿಗಳಪಾಯವಾಯ್ತೆನೆ
ನರನ ಕಡು ದುಮ್ಮಾನ ನೆರೆ ಹೆದರಿಸಿತು ಮೂಜಗವ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವರ್ಗ ನಡುಗಿ ಹೋಯಿತು. ಇಂದ್ರ ಶಿವನನ್ನು ನೆನೆದನು. ಎಲ್ಲ ಸಾಮಗ್ರಿಗಳ ಸಹಿತ ಯಮನ ಪಟ್ಟಣ ಖಾಲಿಯಾಯಿತು. ಮೃತ್ಯು ದೇವತೆ ಹೆದರಿ ಶಿವನ ಮರೆಹೊಕ್ಕಳು. ಬಿರುದಾಂಕಿತರಾದವರು ಹೆದರಿದರು. ದೇಶ ದೇಶಗಳ ರಾಜರು ಅಪಾಯವುಂಟಾಯಿತು ಎನ್ನಲು ಅರ್ಜುನನ ತೀವ್ರವಾದ ದುಃಖವು ಮೂರು ಲೋಕಗಳನ್ನು ಹೆದರಿಸಿತು.
ಮೂಲ ...{Loading}...
ಸುರನಗರಿ ನಡುಗಿತ್ತು ಸುರಪತಿ
ಹರನ ನೆನೆದನು ಯಮನ ಪಟ್ಟಣ
ಸರಕುದೆಗೆಯಿತು ಮೃತ್ಯು ಮರೆಹೊಕ್ಕಳು ಮಹೇಶ್ವರನ
ಬಿರುದರಂಜಿತು ದೇಶದೇಶದ
ಧರಣಿಪತಿಗಳಪಾಯವಾಯ್ತೆನೆ
ನರನ ಕಡು ದುಮ್ಮಾನ ನೆರೆ ಹೆದರಿಸಿತು ಮೂಜಗವ ॥11॥
೦೧೨ ವೀರರಿದಿರುಗ್ಗಡಣಿಗಳ ಕೈ ...{Loading}...
ವೀರರಿದಿರುಗ್ಗಡಣಿಗಳ ಕೈ
ವಾರಿಗಳ ಮಾಣಿಸುತಲೈತಹ
ನಾರಿಯರ ರತುನಾರತಿಯ ತಳಿಗೆಗಳ ನೂಕಿಸುತ
ಸಾರಿ ಕೈಗೊಡುವದಟರನು ಕ
ಣ್ಣೋರೆಯಲಿ ಕೋಪಿಸುತ ತನ್ನಯ
ತೇರನಿಳಿದನು ಪಾರ್ಥನಸುರಾರಿಯ ನಿರೂಪದಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎದುರುಗೊಳ್ಳಲು ಬಂದ ವೀರರನ್ನು, ಉಗ್ಗಡಿಸುತ್ತಿದ್ದ ಹೊಗಳುಭಟರನ್ನು ಸುಮ್ಮನಿರಿಸಿ, ಮುಂದೆ ಬಂದ ಸ್ತ್ರೀಯರ ರತ್ನದ ಆರತಿಯ ತಟ್ಟೆಗಳನ್ನು ನೂಕಿ, ಹತ್ತಿರಕ್ಕೆ ಬಂದು ಹಸ್ತಲಾಘವ ನೀಡುತ್ತಿದ್ದ ವೀರರತ್ತ ಕಡೆಗಣ್ಣ ನೋಟದಲ್ಲಿಯೇ ಕೋಪವನ್ನು ಸೂಚಿಸುತ್ತಾ ಅರ್ಜುನ ಕೃಷ್ಣನ ಸೂಚನೆಯಂತೆ ತನ್ನ ರಥದಿಂದ ಇಳಿದ.
ಪದಾರ್ಥ (ಕ.ಗ.ಪ)
ಉಗ್ಗಡಣಿ-ಹೊಗಳುವ ಘೋಷಣೆ, ತಳಿಗೆ-ತಟ್ಟೆ,
ಮೂಲ ...{Loading}...
ವೀರರಿದಿರುಗ್ಗಡಣಿಗಳ ಕೈ
ವಾರಿಗಳ ಮಾಣಿಸುತಲೈತಹ
ನಾರಿಯರ ರತುನಾರತಿಯ ತಳಿಗೆಗಳ ನೂಕಿಸುತ
ಸಾರಿ ಕೈಗೊಡುವದಟರನು ಕ
ಣ್ಣೋರೆಯಲಿ ಕೋಪಿಸುತ ತನ್ನಯ
ತೇರನಿಳಿದನು ಪಾರ್ಥನಸುರಾರಿಯ ನಿರೂಪದಲಿ ॥12॥
೦೧೩ ಹರಿ ರಥವನಿಳಿದನ್ತೆ ...{Loading}...
ಹರಿ ರಥವನಿಳಿದಂತೆ ಪಾರ್ಥನ
ಭರದ ಕೋಪವ ಕಂಡು ನಿಜಮಂ
ದಿರಕೆ ಮೆಲ್ಲನೆ ಜುಣುಗಿದನು ಯಾದವರ ಗಡಣದಲಿ
ವರ ಧನುವ ಶಸ್ತ್ರಾಸ್ತ್ರ ಕವಚವ
ನಿರಿಸಿ ಕೈಗೊಡುವವರ ಕನಲು
ತ್ತರಮನೆಯ ಹೊಕ್ಕನು ಯುಧಿಷ್ಠಿರ ರಾಯನೋಲಗವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ರಥದಿಂದ ಇಳಿಯುತ್ತಿದ್ದ ಹಾಗೆಯೇ ಅರ್ಜುನನ ಅತಿಶಯವಾದ ಕೋಪವನ್ನು ಕಂಡು ಮೆಲ್ಲಗೆ ಅವನಿಂದ ಜಾರಿಕೊಂಡು ಯಾದವರ ಗುಂಪಿನಲ್ಲಿ ತನ್ನ ಬಿಡಾರವನ್ನು ಸೇರಿಕೊಂಡನು. ಅರ್ಜುನನು ತನ್ನ ಬಿಲ್ಲನ್ನು ಶಸ್ತ್ರಾಸ್ತ್ರಗಳನ್ನು, ಕವಚವನ್ನು ಒಂದೆಡೆ ಇಟ್ಟು, ಕೈಹಿಡಿದು ಗೌರವಿಸಲು ಬಂದವರ ಮೇಲೆ ಕೋಪಿಸಿಕೊಂಡು ಅರಮನೆಗೆ ಪ್ರವೇಶಿಸಿ ಯುಧಿಷ್ಠಿರ (ಧರ್ಮರಾಯ) ನಿದ್ದ ರಾಜ ಸಭೆಯನ್ನು ಹೊಕ್ಕನು.
ಪದಾರ್ಥ (ಕ.ಗ.ಪ)
ಜುಣಗು-ಜಾರು
ಮೂಲ ...{Loading}...
ಹರಿ ರಥವನಿಳಿದಂತೆ ಪಾರ್ಥನ
ಭರದ ಕೋಪವ ಕಂಡು ನಿಜಮಂ
ದಿರಕೆ ಮೆಲ್ಲನೆ ಜುಣುಗಿದನು ಯಾದವರ ಗಡಣದಲಿ
ವರ ಧನುವ ಶಸ್ತ್ರಾಸ್ತ್ರ ಕವಚವ
ನಿರಿಸಿ ಕೈಗೊಡುವವರ ಕನಲು
ತ್ತರಮನೆಯ ಹೊಕ್ಕನು ಯುಧಿಷ್ಠಿರ ರಾಯನೋಲಗವ ॥13॥
೦೧೪ ಧರಣಿಪನ ನಿರಿಗೆಯಲಿ ...{Loading}...
ಧರಣಿಪನ ನಿರಿಗೆಯಲಿ ಕಂದನ
ಮರಣವನು ನಿಶ್ಚಯಿಸಿ ಪ್ರಳಯದ
ಹರನ ಕೋಪವ ಕೇಣಿಗೊಂಡನು ತನ್ನ ಚಿತ್ತದಲಿ
ಸುರಿವ ನಯನಾಂಬುಗಳ ಜಲನಿಧಿ
ಗುರವಣಿಸಿದನೊ ವಡಬನೆನೆ ಮುರ
ಹರನ ಮೈದುನನೊಯ್ಯನೈದಿದನವನಿಪಾಲಕನ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಇದ್ದ ರೀತಿಯಿಂದಲೇ, ಅರ್ಜುನ ತನ್ನ ಮಗನ ಮರಣವನ್ನು ಊಹಿಸಿ, ತನ್ನ ಮನಸ್ಸಿನಲ್ಲಿ ಪ್ರಳಯಕಾಲದ ರುದ್ರಕೋಪವನ್ನು ತಾಳಿದನು. ಸುರಿಯುತ್ತಿರುವ ಕಣ್ಣೀರಿನ ಸಮುದ್ರಕ್ಕೆ ಪ್ರಳಯಾಗ್ನಿಯು ಮುನ್ನುಗ್ಗಿದನೋ ಎಂಬಂತೆ ಅರ್ಜುನನು ವೇಗವಾಗಿ ಧರ್ಮರಾಯನ ಸಮೀಪಕ್ಕೆ ಬಂದ.
ಪದಾರ್ಥ (ಕ.ಗ.ಪ)
ನಿರಿಗೆ-ಭಂಗಿ, ಕೇಣಿ-ತಾಳು, ಧರಿಸು, ಜೊತೆಯಾಗು, ಒಯ್ಯನೆ-ವೇಗವಾಗಿ
ಟಿಪ್ಪನೀ (ಕ.ಗ.ಪ)
(ಧರ್ಮಜನನ್ನು ಕಣ್ಣೀರಿನ ಸಮುದ್ರಕ್ಕೂ ಅರ್ಜುನನ್ನು ಪ್ರಳಯಾಗ್ನಿಗೂ ಹೋಲಿಸಿದೆ)
ಮೂಲ ...{Loading}...
ಧರಣಿಪನ ನಿರಿಗೆಯಲಿ ಕಂದನ
ಮರಣವನು ನಿಶ್ಚಯಿಸಿ ಪ್ರಳಯದ
ಹರನ ಕೋಪವ ಕೇಣಿಗೊಂಡನು ತನ್ನ ಚಿತ್ತದಲಿ
ಸುರಿವ ನಯನಾಂಬುಗಳ ಜಲನಿಧಿ
ಗುರವಣಿಸಿದನೊ ವಡಬನೆನೆ ಮುರ
ಹರನ ಮೈದುನನೊಯ್ಯನೈದಿದನವನಿಪಾಲಕನ ॥14॥
೦೧೫ ಉಕ್ಕಿ ಶೋಕದ ...{Loading}...
ಉಕ್ಕಿ ಶೋಕದ ಕಡಲು ಪಾರ್ಥನ
ಮುಕ್ಕುಳಿಸಿತಾ ಶೋಕಶರಧಿಯ
ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ
ಮಕ್ಕಳೊಳು ನೋಡಿದನು ಕಂದನ
ನಿಕ್ಕಿದಿರಲಾ ಲೇಸು ಮಾಡಿದಿ
ರೆಕ್ಕತುಳದಾಳುಗಳೆನುತ ಭೂಪತಿಗೆ ಪೊಡವಂಟ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನಸ್ಸಿನಲ್ಲಿ ದುಃಖದ ಸಾಗರ ಉಕ್ಕಿ. ಅರ್ಜುನನನ್ನು ಮುಳುಗಿಸಿತು. ದುಃಖದ ಸಮುದ್ರವು ಅಧಿಕಾಧಿಕವಾದಂತೆ ಕೋಪವೆಂಬ ಬಡಬಾಗ್ನಿಯೂ ಮನಸ್ಸಿನಲ್ಲಿ ಉದಯಿಸಿ ಬೆಳೆಯಿತು. ಅವನು ಅಲ್ಲಿದ್ದ ಮಕ್ಕಳುಗಳಲ್ಲಿ ಅಭಿಮನ್ಯುವನ್ನು ಹುಡುಕಿದನು. (ಅಲ್ಲಿ ಕಾಣದೇ) “ಅಯ್ಯೋ ನನ್ನ ಮಗನನ್ನು ಕೊಂದು ಹಾಕಿದಿರಲ್ಲಾ ! ಪರಾಕ್ರಮಿಗಳಾದ ನೀವು ಬಹಳ ಒಳ್ಳೆಯ ಕೆಲಸವನ್ನು ಮಾಡಿದಿರಿ ಎನ್ನುತ್ತಾ ಧರ್ಮರಾಯನಿಗೆ ನಮಸ್ಕಾರ ಮಾಡಿದನು.
ಪದಾರ್ಥ (ಕ.ಗ.ಪ)
ಎಕ್ಕತುಳದಾಳು - ಪರಾಕ್ರಮಿ
ಮೂಲ ...{Loading}...
ಉಕ್ಕಿ ಶೋಕದ ಕಡಲು ಪಾರ್ಥನ
ಮುಕ್ಕುಳಿಸಿತಾ ಶೋಕಶರಧಿಯ
ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ
ಮಕ್ಕಳೊಳು ನೋಡಿದನು ಕಂದನ
ನಿಕ್ಕಿದಿರಲಾ ಲೇಸು ಮಾಡಿದಿ
ರೆಕ್ಕತುಳದಾಳುಗಳೆನುತ ಭೂಪತಿಗೆ ಪೊಡವಂಟ ॥15॥
೦೧೬ ತಲೆಯ ಮುಸುಕಿನ ...{Loading}...
ತಲೆಯ ಮುಸುಕಿನ ಕಂಗಳೊರತೆಯ
ಜಲದ ದುಗುಡದ ಮುಖದ ಜನಪತಿ
ಫಲುಗುಣನನೆತ್ತಿದನು ತಲೆಗುತ್ತಿದನು ಭೀತಿಯಲಿ
ಮಲಗಿದನು ವರ ಭೀಮ ಸಭೆ ತ
ಲ್ಲಳಿಸಿತರ್ಜುನ ಬಂದನೆನೆ ಬಸ
ವಳಿದು ಬಂದು ಸುಭದ್ರೆ ಪತಿಯಂಘ್ರಿಯಲಿ ಹೊರಳಿದಳು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಲೆಯ ಮೇಲೆ ಮುಸುಕನ್ನು ಹೊದೆದಿದ್ದ , ಕಣ್ಣುಗ¼ಲ್ಲಿ ಧಾರಾಕಾರವಾಗಿ ನೀರು ಸುರಿಸುತ್ತಿದ್ದ , ಮುಖದಲ್ಲಿ ದುಃಖವು ತುಂಬಿದ್ದ ಧರ್ಮರಾಯನು ಅರ್ಜುನನನ್ನು ಮೇಲೆತ್ತಿದನು. ಕೂಡಲೇ ಭಯದಿಂದ ತಲೆ ತಗ್ಗಿಸಿದನು. ಭೀಮನು ಒರಗಿಕೊಂಡು ಕುಳಿತನು. ಸಭೆ ನಡುಗಿತು. ಅರ್ಜುನನು ಬಂದನೆನ್ನಲು ಸುಭದ್ರೆ ಬಸವಳಿದು ಬಂದು ಅರ್ಜುನನ ಪಾದಗಳ ಮೇಲೆ ಹೊರಳಾಡಿದಳು.
ಪದಾರ್ಥ (ಕ.ಗ.ಪ)
ತಲೆಗುತ್ತಿ-ತಲೆ ತಗ್ಗಿಸಿ, ತಲ್ಲಣಿಸಿತು-ನಡುಗಿತು.
ಮೂಲ ...{Loading}...
ತಲೆಯ ಮುಸುಕಿನ ಕಂಗಳೊರತೆಯ
ಜಲದ ದುಗುಡದ ಮುಖದ ಜನಪತಿ
ಫಲುಗುಣನನೆತ್ತಿದನು ತಲೆಗುತ್ತಿದನು ಭೀತಿಯಲಿ
ಮಲಗಿದನು ವರ ಭೀಮ ಸಭೆ ತ
ಲ್ಲಳಿಸಿತರ್ಜುನ ಬಂದನೆನೆ ಬಸ
ವಳಿದು ಬಂದು ಸುಭದ್ರೆ ಪತಿಯಂಘ್ರಿಯಲಿ ಹೊರಳಿದಳು ॥16॥
೦೧೭ ಕನ್ದನಾವೆಡೆ ತನ್ನ ...{Loading}...
ಕಂದನಾವೆಡೆ ತನ್ನ ಮೋಹದ
ಸಿಂಧುವಾವೆಡೆ ತನುಜವನ ಮಾ
ಕಂದನಾವೆಡೆ ಹೇಳೆನುತ ಫಲುಗುಣನು ತೊದಳಿಸುತ
ನೊಂದು ಮನದಲಿ ಪಾರ್ಥನಾ ಸತಿ
ಯಂದವನು ಕಾಣುತ್ತ ಬೆದೆಬೆದೆ
ಬೆಂದು ಯಮರಾಜನ ಕುಮಾರನ ಮೊಗವ ನೋಡಿದನು ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಕಂದನೆಲ್ಲಿ, ತನ್ನ ಮುದ್ದಿನ ಸಾಗರನೆಲ್ಲಿ, ಮಕ್ಕಳೆಂಬ ವನಕ್ಕೆ ಮಾವಿನ ಮರದಂತಿದ್ದ ಮಗನೆಲ್ಲಿದ್ದಾನೆ ? ಹೇಳು ಎನ್ನುತ್ತಾ ನಡುಗುವ ಧ್ವನಿಯಿಂದ ಅರ್ಜುನನು ಕೇಳಿದನು. ಮನಸ್ಸಿನಲ್ಲಿಯೇ ನೊಂದು ಸುಭದ್ರೆ ಇರುವ ರೀತಿಯನ್ನು ನೋಡಿಯೇ (ಅನಾಹುತವಾಗಿರುವುದು ದಿಟವೆಂದು ನಿರ್ಧರಿಸಿ) ಬೆಂದು ಹೋದನು. ಧರ್ಮರಾಯನ ಮುಖವನ್ನು ನೋಡಿದನು.
ಮೂಲ ...{Loading}...
ಕಂದನಾವೆಡೆ ತನ್ನ ಮೋಹದ
ಸಿಂಧುವಾವೆಡೆ ತನುಜವನ ಮಾ
ಕಂದನಾವೆಡೆ ಹೇಳೆನುತ ಫಲುಗುಣನು ತೊದಳಿಸುತ
ನೊಂದು ಮನದಲಿ ಪಾರ್ಥನಾ ಸತಿ
ಯಂದವನು ಕಾಣುತ್ತ ಬೆದೆಬೆದೆ
ಬೆಂದು ಯಮರಾಜನ ಕುಮಾರನ ಮೊಗವ ನೋಡಿದನು ॥17॥
೦೧೮ ಪತಿಯಳಿದ ಸತಿಯಿರವು ...{Loading}...
ಪತಿಯಳಿದ ಸತಿಯಿರವು ನಾಯಕ
ರತುನವಿಲ್ಲದ ಪದಕ ದೈವ
ಸ್ತುತಿಗಳಿಲ್ಲದ ಕಾವ್ಯ ರಚನಾ ಭಾವದಂದದಲಿ
ಕೃತಕವಲ್ಲಭಿಮನ್ಯುವಿಲ್ಲದೆ
ಕ್ಷಿತಿಪ ನಿನ್ನಾಸ್ಥಾನ ಮೆರೆಯದು
ಸುತನ ಸುದ್ದಿಯದೇನು ಮರುಗಿಸಬೇಡ ಹೇಳೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪತಿಯು ಸತ್ತ ಪತ್ನಿಯ ಬದುಕು, ಪ್ರಧಾನ ರತ್ನವಿಲ್ಲದಿರುವ ಪದಕ, ದೇವರ ಸ್ತೋತ್ರವಿಲ್ಲದ ಕಾವ್ಯರಚನೆ ಹೇಗೆ ನಿರರ್ಥಕವೋ ಹಾಗೆ ಅಭಿಮನ್ಯುವಿಲ್ಲದೆ, ಧರ್ಮರಾಯ, ನಿನ್ನ ಆಸ್ಥಾನ ಶೋಭಿಸುವುದಿಲ್ಲ. ನನ್ನ ಮಗನ ಸುದ್ದಿ ಏನೆಂಬುದನ್ನು ಹೇಳು;ನನಗೆ ದುಃಖವನ್ನುಂಟು ಮಾಡಬೇಡ” ಎಂದು ಅರ್ಜುನನು ಕೇಳಿದನು.
ಮೂಲ ...{Loading}...
ಪತಿಯಳಿದ ಸತಿಯಿರವು ನಾಯಕ
ರತುನವಿಲ್ಲದ ಪದಕ ದೈವ
ಸ್ತುತಿಗಳಿಲ್ಲದ ಕಾವ್ಯ ರಚನಾ ಭಾವದಂದದಲಿ
ಕೃತಕವಲ್ಲಭಿಮನ್ಯುವಿಲ್ಲದೆ
ಕ್ಷಿತಿಪ ನಿನ್ನಾಸ್ಥಾನ ಮೆರೆಯದು
ಸುತನ ಸುದ್ದಿಯದೇನು ಮರುಗಿಸಬೇಡ ಹೇಳೆಂದ ॥18॥
೦೧೯ ಬರಲು ಬಹನಿದಿರಾಗಿ ...{Loading}...
ಬರಲು ಬಹನಿದಿರಾಗಿ ತನ್ನಯ
ವರ ರಥವ ಬಂದೇರುವನು ನಿಜ
ಕರತಳದಿ ಮೈದಡವಿ ಘಾಯವ ನೋಡಿ ಮರುಗುವನು
ತರುಣನಿದಿರೈತರಲು ತನ್ನಯ
ಧುರದ ಬಳಲಿಕೆ ಹಿಂಗುವುದು ಹೇ
ಳರಸ ಕಂದನ ಸುಳಿವ ಕಾಣೆನು ಕರೆಸಿ ತೋರೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯುದ್ಧವನ್ನು ಮುಗಿಸಿಕೊಂಡು ಬಂದ ತಕ್ಷಣ ಎದುರಿಗೆ ಬಂದು ರಥವನ್ನು ಏರಿ, ತನ್ನ ಕೈಯಿಂದ ನನ್ನ ಮೈಯನ್ನು ಸವರಿ, ಮೈಮೇಲಿನ ಘಾಯವನ್ನು ನೋಡಿ ದುಃಖಿಸುತ್ತಿದ್ದನು. ಮಗನು ಎದುರು ಬಂದಾಕ್ಷಣ ಯುದ್ಧದ ಆಯಾಸವೆಲ್ಲ ಪರಿಹಾರವಾಗುತ್ತಿತ್ತು. ಧರ್ಮರಾಯನೇ ಅಭಿಮನ್ಯುವಿನ ಸುಳಿವನ್ನು ಕಾಣೆ. ಅವನನ್ನು ಕರೆಸಿ ನನಗೆ ತೋರಿಸು” ಎಂದು ಅರ್ಜುನನು ಧರ್ಮರಾಯನನ್ನು ಕೇಳಿದನು.
ಮೂಲ ...{Loading}...
ಬರಲು ಬಹನಿದಿರಾಗಿ ತನ್ನಯ
ವರ ರಥವ ಬಂದೇರುವನು ನಿಜ
ಕರತಳದಿ ಮೈದಡವಿ ಘಾಯವ ನೋಡಿ ಮರುಗುವನು
ತರುಣನಿದಿರೈತರಲು ತನ್ನಯ
ಧುರದ ಬಳಲಿಕೆ ಹಿಂಗುವುದು ಹೇ
ಳರಸ ಕಂದನ ಸುಳಿವ ಕಾಣೆನು ಕರೆಸಿ ತೋರೆಂದ ॥19॥
೦೨೦ ಮಗನ ಮಣಿರಥವೆಲ್ಲಿ ...{Loading}...
ಮಗನ ಮಣಿರಥವೆಲ್ಲಿ ಹೂಡಿದ
ವಿಗಡ ತೇಜಿಗಳೆಲ್ಲಿ ಮಣಿವೆಳ
ಗುಗಳ ಛತ್ರವದೆಲ್ಲಿ ಚಾಮರವೆಲ್ಲಿ ಧನುವೆಲ್ಲಿ
ಹಗೆಯರಲಿ ಹತವಾದನೇ ಹಾ
ಸುಗುಣನಿಲ್ಲಿಗೆ ಬಾರನೇ ತಾ
ಮೊಗವ ಕಾಣದೆ ಹೋದನೇ ಎನಗೇನು ಗತಿಯೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಗನ ರತ್ನಾಲಂಕೃತವಾದ ರಥವೆಲ್ಲಿ ? ಆ ರಥಕ್ಕೆ ಕಟ್ಟಿದ ಶ್ರೇಷ್ಠವಾದ ಕುದುರೆಗಳೆಲ್ಲಿ ? ರತ್ನಕಾಂತಿಯಿಂದ ಬೆಳಗುವ ಛತ್ರವೆಲ್ಲಿ ? ಚಾಮರವೆಲ್ಲಿ ? ಅವನ ಬಿಲ್ಲು ಎಲ್ಲಿ ? ಅಭಿಮನ್ಯು ಶತ್ರುಗಳಿಂದ ಸಂಹಾರವಾದನೆ ? ಅಯ್ಯೋ ಸುಗುಣಗಳನ್ನು ಹೊಂದಿದ ಮಗನು ಮತ್ತೆ ನನ್ನೆದುರಿಗೆ ಬರುವಂತಿಲ್ಲವೆ ? ನಾನು ಮಗನ ಮುಖವನ್ನು ಕಾಣದಂತಾದೆನಲ್ಲಾ ? ಮುಂದೇನು ಗತಿ ?” ಎಂದು ಅರ್ಜುನನು ಪ್ರಲಾಪಿಸಿದನು.
ಪದಾರ್ಥ (ಕ.ಗ.ಪ)
ವಿಗಡ-ಶ್ರೇಷ್ಠವಾದ,
ಮೂಲ ...{Loading}...
ಮಗನ ಮಣಿರಥವೆಲ್ಲಿ ಹೂಡಿದ
ವಿಗಡ ತೇಜಿಗಳೆಲ್ಲಿ ಮಣಿವೆಳ
ಗುಗಳ ಛತ್ರವದೆಲ್ಲಿ ಚಾಮರವೆಲ್ಲಿ ಧನುವೆಲ್ಲಿ
ಹಗೆಯರಲಿ ಹತವಾದನೇ ಹಾ
ಸುಗುಣನಿಲ್ಲಿಗೆ ಬಾರನೇ ತಾ
ಮೊಗವ ಕಾಣದೆ ಹೋದನೇ ಎನಗೇನು ಗತಿಯೆಂದ ॥20॥
೦೨೧ ಕನ್ದ ಬಾರೋ ...{Loading}...
ಕಂದ ಬಾರೋ ಎನ್ನ ಮನಕಾ
ನಂದ ಬಾರೋ ಬಾಲಕರ ಪೂ
ರ್ಣೇಂದು ಬಾರೋ ರಿಪುಕುಲಾಂತಕ ನಿಪುಣ ಮುಖದೋರೊ
ತಂದೆ ನಿನಗೆನ್ನಲ್ಲಿ ಋಣ ಸಂ
ಬಂಧ ಸವೆದುದೆ ಶಿವ ಶಿವಾ ತಾ
ಮಂದಭಾಗ್ಯಂಗಣುಗ ದಕ್ಕುವನಲ್ಲ ಎನಗೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕಂದಾ ಬಾ, ನನ್ನ ಮನಸ್ಸಿಗೆ ಆನಂದವನ್ನುಂಟು ಮಾಡುವವನೇ ಬಾ. ಬಾಲಕರಿಗೆ ಪೂರ್ಣಚಂದ್ರನಂತಿರುವವನೆ, ಬಾ, ಶತ್ರು ವಂಶಕ್ಕೆ ಯಮನಂತಿರುವವನೆ. ನಿನ್ನ ಮುಖವನ್ನು ತೋರಿಸು. ಅಪ್ಪಾ ! ನಿನಗೆ ನನ್ನ ಋಣ ಸಂಬಂಧ ಮುಗಿಯಿತೆ ! ಶಿವ ಶಿವಾ, ನಾನು ದುರದೃಷ್ಟವಂತ. ನನಗೆ ಮಗನು ದಕ್ಕುವುದಿಲ್ಲ’ ಎಂದು ಅರ್ಜುನನು ಪ್ರಲಾಪಿಸಿದನು.
ಮೂಲ ...{Loading}...
ಕಂದ ಬಾರೋ ಎನ್ನ ಮನಕಾ
ನಂದ ಬಾರೋ ಬಾಲಕರ ಪೂ
ರ್ಣೇಂದು ಬಾರೋ ರಿಪುಕುಲಾಂತಕ ನಿಪುಣ ಮುಖದೋರೊ
ತಂದೆ ನಿನಗೆನ್ನಲ್ಲಿ ಋಣ ಸಂ
ಬಂಧ ಸವೆದುದೆ ಶಿವ ಶಿವಾ ತಾ
ಮಂದಭಾಗ್ಯಂಗಣುಗ ದಕ್ಕುವನಲ್ಲ ಎನಗೆಂದ ॥21॥
೦೨೨ ಅಸಮ ಪದ್ಮವ್ಯೂಹವನು ...{Loading}...
ಅಸಮ ಪದ್ಮವ್ಯೂಹವನು ಭೇ
ದಿಸುವನಾವವನೆನಲು ಕೇಳಿದು
ಶಿಶುತನದಲಾಹವಕೆ ನಡೆದನು ನಾವು ಬೇಡೆನಲು
ಹೊಸ ಮದದ ವನದಂತಿ ಕದಳಿಯ
ಕುಸುರಿದರಿದಂದದಲಿ ಘನ ಪೌ
ರುಷವ ಮಾಡಿದನೆಂದನವನೀಪಾಲನನುಜಂಗೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಸಮಾನವಾದ ಪದ್ಮವ್ಯೂಹವನ್ನು ಯಾರು ಭೇದಿಸುತ್ತೀರಿ?” ಎಂದು ಸಮಸ್ತ ಸೇನೆಯನ್ನು ಕೇಳಿದಾಗ ಅಭಿಮನ್ಯುವು “ನಾವು ಬೇಡ ಬೇಡ ಎಂದು ಹೇಳಿದರೂ ಬಾಲೋತ್ಸಾಹದಿಂದ ರಣರಂಗಕ್ಕೆ ಹೊರಟನು. ಹೊಸತಾಗಿ ಮದವನ್ನು ಹೊಂದಿದ ಕಾಡಿನ ಆನೆಯು ಬಾಳೆಯ ವನವನ್ನು ನಾಶ ಮಾಡುವ ಹಾಗೆ ಶತ್ರುಗಳನ್ನು ಕತ್ತರಿಸಿ ಅತ್ಯಂತ ಶ್ರೇಷ್ಠವಾದ ಪರಾಕ್ರಮವನ್ನು ಪ್ರದರ್ಶಿಸಿದನು” ಎಂದು ಧರ್ಮರಾಯನು ತಮ್ಮನಿಗೆ ಹೇಳಿದನು.
ಮೂಲ ...{Loading}...
ಅಸಮ ಪದ್ಮವ್ಯೂಹವನು ಭೇ
ದಿಸುವನಾವವನೆನಲು ಕೇಳಿದು
ಶಿಶುತನದಲಾಹವಕೆ ನಡೆದನು ನಾವು ಬೇಡೆನಲು
ಹೊಸ ಮದದ ವನದಂತಿ ಕದಳಿಯ
ಕುಸುರಿದರಿದಂದದಲಿ ಘನ ಪೌ
ರುಷವ ಮಾಡಿದನೆಂದನವನೀಪಾಲನನುಜಂಗೆ ॥22॥
೦೨೩ ಅರಿನೃಪಾಲರ ನೂರು ...{Loading}...
ಅರಿನೃಪಾಲರ ನೂರು ಮಕ್ಕಳ
ಶಿರವನರಿದನು ಷಡುರಥರ ಮಿಗೆ
ಪರಿಭವಿಸಿದನು ರಿಪುಬಲವನಡಹಾಯ್ದಾನೆವರಿವರಿದು
ಧುರಕೆ ಹೆರತೆಗೆದೆಮ್ಮ ನಾಲ್ವರ
ಸರಿದು ಹೋದಭಿಮಾನವನು ಕಾ
ಯ್ದುರವಣಿಸಿ ಮಗನೇರಿದನು ವಾಸವನ ಗದ್ದುಗೆಯ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶತ್ರುರಾಜರ ನೂರು ಮಕ್ಕಳ ತಲೆಗಳನ್ನು ಕತ್ತರಿಸಿ ಆರು ಜನ ಅತಿರಥರನ್ನು ಸೋಲಿಸಿ ಶತ್ರು ಸೇನೆಗೆ ಅಡ್ಡವಾಗಿ ನಿಂತು ಆನೆಯಂತೆ ಮುನ್ನುಗ್ಗಿ, ಯುದ್ಧಕ್ಕೆ ಹಿಂಜರಿದ ನಮ್ಮನ್ನು ತೊರೆದು ಹೋಗುತ್ತಿದ್ದ ಹೆಮ್ಮೆಯನ್ನು ಮತ್ತೆ ತಂದುಕೊಟ್ಟು ಉತ್ಸಾಹದಿಂದ ಅಭಿಮನ್ಯುವು ಇಂದ್ರನ ಸಿಂಹಾಸನವನ್ನು ಏರಿದನು. (ಸ್ವರ್ಗಸ್ಥನಾದನು).” ಎಂದು ದುಃಖಿಸಿದನು.
ಮೂಲ ...{Loading}...
ಅರಿನೃಪಾಲರ ನೂರು ಮಕ್ಕಳ
ಶಿರವನರಿದನು ಷಡುರಥರ ಮಿಗೆ
ಪರಿಭವಿಸಿದನು ರಿಪುಬಲವನಡಹಾಯ್ದಾನೆವರಿವರಿದು
ಧುರಕೆ ಹೆರತೆಗೆದೆಮ್ಮ ನಾಲ್ವರ
ಸರಿದು ಹೋದಭಿಮಾನವನು ಕಾ
ಯ್ದುರವಣಿಸಿ ಮಗನೇರಿದನು ವಾಸವನ ಗದ್ದುಗೆಯ ॥23॥
೦೨೪ ಈ ನಕುಳನೀ ...{Loading}...
ಈ ನಕುಳನೀ ಭೀಮನೀ ಪಾಂ
ಚಾಲನೀ ಸಹದೇವನೀ ಭೂ
ಪಾಲನೀ ಸಾತ್ಯಕಿ ಯುಧಾಮನ್ಯೂತ್ತಮೌಂಜಸರು
ಕಾಳೆಗದೊಳಂಗೈಸಲಮ್ಮದೆ
ಬಾಲಕನ ನೂಕಿದಿರಲಾ ನಿ
ಮ್ಮಾಳುತನವನು ತೋರಿದಿರಲಾ ತನ್ನ ಮೇಲೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ನಕುಲ, ಭೀಮ, ದ್ರುಪದ, ಸಹದೇವ, ಸಾತ್ಯಕಿ, ಯುಧಾಮನ್ಯು, ಉತ್ತಮೌಂಜಸರೇ ಮೊದಲಾದವರು ಯುದ್ಧವನ್ನು ಮಾಡುವ ಧೈರ್ಯ ಮಾಡದೆ ಚಿಕ್ಕವನಾದ ಅಭಿಮನ್ಯುವನ್ನು ರಣರಂಗಕ್ಕೆ ನೂಕಿದಿರಿ, ನಿಮ್ಮ ಶೌರ್ಯವನ್ನು ನನ್ನ ಮೇಲೆ ತೋರಿಸಿದಿರಲ್ಲವೇ” ಎಂದು ಅರ್ಜುನ ಹೇಳಿದ.
ಪದಾರ್ಥ (ಕ.ಗ.ಪ)
ಅಂಗೈಸಲು-ಯುದ್ಧ ಮಾಡಲು,
ಅಮ್ಮದೆ-ಅಂಜದೆ, ಮನಸ್ಸು ಮಾಡದೆ
ಮೂಲ ...{Loading}...
ಈ ನಕುಳನೀ ಭೀಮನೀ ಪಾಂ
ಚಾಲನೀ ಸಹದೇವನೀ ಭೂ
ಪಾಲನೀ ಸಾತ್ಯಕಿ ಯುಧಾಮನ್ಯೂತ್ತಮೌಂಜಸರು
ಕಾಳೆಗದೊಳಂಗೈಸಲಮ್ಮದೆ
ಬಾಲಕನ ನೂಕಿದಿರಲಾ ನಿ
ಮ್ಮಾಳುತನವನು ತೋರಿದಿರಲಾ ತನ್ನ ಮೇಲೆಂದ ॥24॥
೦೨೫ ವೀರರಿನಿಬರು ನೆರೆದು ...{Loading}...
ವೀರರಿನಿಬರು ನೆರೆದು ರಿಪುಪರಿ
ವಾರವನು ಹೊಗಲಂಜಿ ಹೊರಗಣ
ಮಾರಿಹೊರಹೊರಗೆಂಬವೊಲು ನಂದನನ ನೂಕಿದಿರಿ
ಆರ ನಂಬಲುಬಹುದು ನಿಮಿಷವು
ದೂರ ತಾ ತೊಲಗಿದರೆ ತನ್ನ ಕು
ಮಾರನಿದ್ದರೆ ಹರಿವ ಕಂಡಿರಿ ಹೊಲ್ಲಹೇನೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
25.” ಇಷ್ಟು ಜನ ವೀರರಿದ್ದರೂ ಶತ್ರು ಸೇನಾವ್ಯೂಹದೊಳಗೆ ಹೋಗಲು ಹೆದರಿ ಹೊರಗಿರುವ ಮಾರಿ ಹೊರಗೆ ಇರಲಿ ಎಂಬ ಮಾತಿನಂತೆ ನೀವು ನನ್ನ ಮಗನನ್ನು ರಣರಂಗಕ್ಕೆ ನೂಕಿದಿರಿ. ನಾನು ಯಾರನ್ನು ತಾನೆ ನಂಬಬಹುದು ? ಒಂದು ನಿಮಿಷ ನಾನು ದೂರ ಹೋಗಲು, ನನ್ನ ಕುಮಾರನು ನಿಮ್ಮೊಂದಿಗಿರಲು ಅವನನ್ನು ಪರಿಹರಿಸುವ (ಕೊಲ್ಲುವ) ಉಪಾಯವನ್ನು ಕಂಡುಕೊಂಡಿರಿ. ಇದೇನು ತಪ್ಪಲ್ಲ ಬಿಡಿ" ಎಂದ.
ಪದಾರ್ಥ (ಕ.ಗ.ಪ)
ಹರಿವ-ಪರಿಹಾರವನ್ನು
ಮೂಲ ...{Loading}...
ವೀರರಿನಿಬರು ನೆರೆದು ರಿಪುಪರಿ
ವಾರವನು ಹೊಗಲಂಜಿ ಹೊರಗಣ
ಮಾರಿಹೊರಹೊರಗೆಂಬವೊಲು ನಂದನನ ನೂಕಿದಿರಿ
ಆರ ನಂಬಲುಬಹುದು ನಿಮಿಷವು
ದೂರ ತಾ ತೊಲಗಿದರೆ ತನ್ನ ಕು
ಮಾರನಿದ್ದರೆ ಹರಿವ ಕಂಡಿರಿ ಹೊಲ್ಲಹೇನೆಂದ ॥25॥
೦೨೬ ಕೆಡೆನುಡಿದು ಫಲವೇನು ...{Loading}...
ಕೆಡೆನುಡಿದು ಫಲವೇನು ಸಾಕಿ
ನ್ನೊಡೆಯರಿಲ್ಲದ ವಸ್ತುವಾದೆನು
ಕಡೆಗೆ ಧರ್ಮಜ ಹೇಳು ಕೊಂದವನಾರು ನಂದನನ
ಕಡುವಗೆಯದಾರವರ ಬಲದಲಿ
ನುಡಿ ನಿದಾನವನವನ ಜೀವಕೆ
ಹಿಡಿ ಮಹೀಪತಿ ಸಂಚಕಾರವನೆಂದನಾ ಪಾರ್ಥ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಯಾರನ್ನು ಬೈದು ಇನ್ನೇನು ಪ್ರಯೋಜನ ? ನನ್ನ ಬದುಕು ಒಡೆಯರಿಲ್ಲದ ವಸ್ತುವಿನಂತೆ ಆಯಿತು ; ಧರ್ಮರಾಯ, ನನ್ನ ಮಗನನ್ನು ಕೊಂದವರಾರು ? ಹೇಳು. ಕೌರವರ ಸೈನ್ಯದಲ್ಲಿ ಅತಿಯಾದ ಹಗೆ ಯಾರು? ಅವನ ಜೀವಕ್ಕೆ ಸಂಚಕಾರವನ್ನು ಹಿಡಿ" ಎಂದು ಅರ್ಜುನ ಹೇಳಿದ.
ಪದಾರ್ಥ (ಕ.ಗ.ಪ)
ಕೆಡೆನುಡಿದು-ಬೈದು,
ಮೂಲ ...{Loading}...
ಕೆಡೆನುಡಿದು ಫಲವೇನು ಸಾಕಿ
ನ್ನೊಡೆಯರಿಲ್ಲದ ವಸ್ತುವಾದೆನು
ಕಡೆಗೆ ಧರ್ಮಜ ಹೇಳು ಕೊಂದವನಾರು ನಂದನನ
ಕಡುವಗೆಯದಾರವರ ಬಲದಲಿ
ನುಡಿ ನಿದಾನವನವನ ಜೀವಕೆ
ಹಿಡಿ ಮಹೀಪತಿ ಸಂಚಕಾರವನೆಂದನಾ ಪಾರ್ಥ ॥26॥
೦೨೭ ಹೇಳಿ ಫಲವೇನಿನ್ನು ...{Loading}...
ಹೇಳಿ ಫಲವೇನಿನ್ನು ಶೋಕ
ಜ್ವಾಲೆಗಿಂಧನವೆನ್ನ ನುಡಿ ರಿಪು
ಜಾಲವನು ನೀ ಖಂಡಿಗಳೆ ಬಹೆವಾವು ಬಳಿಸಲಿಸಿ
ಕಾಳೆಗವ ಜಯಿಸುವೆವು ನಡೆಯೆನೆ
ಬಾಲನುರವಣಿಸಿದನು ಮಸಗಿದ
ಕಾಲರುದ್ರನ ರೂಪ ತಾಳ್ದನು ವೈರಿ ಸೇನೆಯಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನಾ, ಈಗ ಹೇಳಿ ಪ್ರಯೋಜನವೇನು. ನಿನ್ನ ಶೋಕವೆಂಬ ಬೆಂಕಿಗೆ ನನ್ನ ಮಾತು ಇಂಧನವಾಗುತ್ತದೆ. ಶತ್ರು ಜಾಲವನ್ನು ನೀನು ಕತ್ತರಿಸಿ ಹಾಕು. ನಾವು ನಿನ್ನನ್ನು ಅನುಸರಿಸಿ ಬರುತ್ತೇವೆ. ಯುದ್ಧದಲ್ಲಿ ಜಯವನ್ನು ಪಡೆಯೋಣ ನಡೆ, ಎನ್ನಲು ಅಭಿಮನ್ಯು ಉತ್ಸಾಹದಿಂದ ಹೋಗಿ ವೈರಿ ಸೇನೆಯಲ್ಲಿ ಕಾಲರುದ್ರನ ರೂಪವನ್ನು ತಾಳಿದನು.” ಎಂದು ಧರ್ಮರಾಯನು ಹೇಳಿದನು.
ಮೂಲ ...{Loading}...
ಹೇಳಿ ಫಲವೇನಿನ್ನು ಶೋಕ
ಜ್ವಾಲೆಗಿಂಧನವೆನ್ನ ನುಡಿ ರಿಪು
ಜಾಲವನು ನೀ ಖಂಡಿಗಳೆ ಬಹೆವಾವು ಬಳಿಸಲಿಸಿ
ಕಾಳೆಗವ ಜಯಿಸುವೆವು ನಡೆಯೆನೆ
ಬಾಲನುರವಣಿಸಿದನು ಮಸಗಿದ
ಕಾಲರುದ್ರನ ರೂಪ ತಾಳ್ದನು ವೈರಿ ಸೇನೆಯಲಿ ॥27॥
೦೨೮ ಅರಸು ಮಕ್ಕಳ ...{Loading}...
ಅರಸು ಮಕ್ಕಳ ಕೊಂದನೈನೂ
ರ್ವರನು ಮೂರಕ್ಷೋಣಿ ಸೈನ್ಯವ
ನೊರಸಿದನು ಮಸೆಗಾಣಿಸಿದನಗ್ಗದ ಮಹಾರಥರ
ಧುರವ ಗೆಲಿದನು ಪಡಿತಳಿಸಿ ನಾ
ವುರವಣಿಸಲಡಹಾಯ್ದು ನಮ್ಮನು
ಹರನ ವರವುಂಟೆಂದು ತಡೆದನು ಸಿಂಧು ಭೂಪಾಲ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಭಿಮನ್ಯುವು ಐದು ನೂರು ಜನ ರಾಜಕುಮಾರರನ್ನು ಕೊಂದನು. ಮೂರು ಅಕ್ಷೋಹಿಣಿ ಸೈನ್ಯವನ್ನು, ಒರೆಸಿಹಾಕಿದನು. ಶ್ರೇಷ್ಠರಾದ ಅನೇಕ ಮಹಾರಥರನ್ನು ಸಂಹಾರ ಮಾಡಿದನು. ಯುದ್ಧವನ್ನು ಜಯಿಸಿದನು. ನಾವು ಮುನ್ನುಗ್ಗಿ ಮೇಲೆ ಬೀಳಲು, ಶಿವನ ವರವಿದೆಯೆಂದು ಅಡ್ಡಗಟ್ಟಿ ಸಿಂಧುರಾಜನಾದ ಸೈಂಧವನು ನಮ್ಮನ್ನು ತಡೆದನು.”
ಪದಾರ್ಥ (ಕ.ಗ.ಪ)
ಒರಸಿದನು-ಕೊಂದನು, ಪಡಿತಳಿಸಿ-ಆಕ್ರಮಿಸಿ
ಟಿಪ್ಪನೀ (ಕ.ಗ.ಪ)
ಹರನವರವುಂಟೆಂದು…. ಅರಣ್ಯ ಪರ್ವದ 22ನೆಯ ಸಂಧಿಯನ್ನು ನೋಡಿ.
ಮೂಲ ...{Loading}...
ಅರಸು ಮಕ್ಕಳ ಕೊಂದನೈನೂ
ರ್ವರನು ಮೂರಕ್ಷೋಣಿ ಸೈನ್ಯವ
ನೊರಸಿದನು ಮಸೆಗಾಣಿಸಿದನಗ್ಗದ ಮಹಾರಥರ
ಧುರವ ಗೆಲಿದನು ಪಡಿತಳಿಸಿ ನಾ
ವುರವಣಿಸಲಡಹಾಯ್ದು ನಮ್ಮನು
ಹರನ ವರವುಂಟೆಂದು ತಡೆದನು ಸಿಂಧು ಭೂಪಾಲ ॥28॥
೦೨೯ ವಿರಥನಾದನು ಭೀಮ ...{Loading}...
ವಿರಥನಾದನು ಭೀಮ ನಕುಳನು
ತಿರುಗಿದನು ಸಹದೇವ ಕೊರಳಿನ
ಹರಣದಲಿ ಹಿಮ್ಮೆಟ್ಟಿದನು ದ್ರುಪದಾದಿ ನಾಯಕರು
ಧುರದೊಳೋಸರಿಸಿದರು ಸೈಂಧವ
ಹರನ ವರದಲಿ ನಮ್ಮ ಗೆಲಿದನು
ಮರಣವನು ಕಂದಂಗೆ ತಂದವನವನು ಕೇಳ್ ಎಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೀಮನು ರಥವನ್ನು ಕಳೆದುಕೊಂಡ. ನಕುಲನು ರಣರಂಗದಿಂದ ಹಿಂದಕ್ಕೆ ತಿರುಗಿದ. ಸಹದೇವ ಕೊರಳಿನಲ್ಲಿ ಪ್ರಾಣವನ್ನಿಟ್ಟುಕೊಂಡು ಹಿಂದಿರುಗಿದ. ದ್ರುಪದನೇ ಮೊದಲಾದ ನಾಯಕರು ರಣರಂಗದಿಂದ ಪಕ್ಕಕ್ಕೆ ಸರಿದರು. ಸೈಂಧವನು ಶಿವನಿತ್ತ ವರದಿಂದ ನಮ್ಮನ್ನು ಜಯಿಸಿದನು. ಅಭಿಮನ್ಯುವಿಗೆ ಮರಣವನ್ನು ತಂದವನು ಸೈಂಧವ” ಎಂದು ಧರ್ಮರಾಯ ಹೇಳಿದ.
ಮೂಲ ...{Loading}...
ವಿರಥನಾದನು ಭೀಮ ನಕುಳನು
ತಿರುಗಿದನು ಸಹದೇವ ಕೊರಳಿನ
ಹರಣದಲಿ ಹಿಮ್ಮೆಟ್ಟಿದನು ದ್ರುಪದಾದಿ ನಾಯಕರು
ಧುರದೊಳೋಸರಿಸಿದರು ಸೈಂಧವ
ಹರನ ವರದಲಿ ನಮ್ಮ ಗೆಲಿದನು
ಮರಣವನು ಕಂದಂಗೆ ತಂದವನವನು ಕೇಳೆಂದ ॥29॥
೦೩೦ ಇನ್ನು ಹೇಳುವುದೇನೆನುತ ...{Loading}...
ಇನ್ನು ಹೇಳುವುದೇನೆನುತ ಕೈ
ಸನ್ನೆಯಲಿ ಮಾತಾಡಿ ಭೂಪತಿ
ಬೆನ್ನತೆತ್ತನು ಭೀಮಸೇನನ ವಿಪುಲ ವಕ್ಷದಲಿ
ತನ್ನ ಮರೆದನು ನಯನ ಧಾರಾ
ಭಿನ್ನ ಚಾರು ಕಪೋಲನಿರೆ ಸಂ
ಪನ್ನ ಶೋಕಾಗ್ನಿಯಲಿ ಬೆಂದುದು ಸಕಲ ಜನಹೃದಯ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇನ್ನು ಹೇಳುವುದು ಏನು” ಎನ್ನುತ್ತಾ ಕೈ ಸನ್ನೆಯಲ್ಲಿ ಸೂಚಿಸಿ ಧರ್ಮರಾಯನು ಭೀಮನ ವಿಶಾಲವಾದ ಎದೆಗೆ ಒರಗಿಕೊಂಡು ಮೈಮರೆತ. (ಪ್ರಜ್ಞಾಹೀನನಾದ). ಕಣ್ಣೀರು ಅವನ ಕಪೋಲದ ಮೇಲೆ ಧಾರಾಕಾರವಾಗಿ ಪ್ರವಹಿಸುತ್ತಿರಲು, ಎಲ್ಲರ ಹೃದಯಗಳು ಶೋಕಾಗ್ನಿಯಲ್ಲಿ ಬೆಂದುವು.
ಮೂಲ ...{Loading}...
ಇನ್ನು ಹೇಳುವುದೇನೆನುತ ಕೈ
ಸನ್ನೆಯಲಿ ಮಾತಾಡಿ ಭೂಪತಿ
ಬೆನ್ನತೆತ್ತನು ಭೀಮಸೇನನ ವಿಪುಲ ವಕ್ಷದಲಿ
ತನ್ನ ಮರೆದನು ನಯನ ಧಾರಾ
ಭಿನ್ನ ಚಾರು ಕಪೋಲನಿರೆ ಸಂ
ಪನ್ನ ಶೋಕಾಗ್ನಿಯಲಿ ಬೆಂದುದು ಸಕಲ ಜನಹೃದಯ ॥30॥
೦೩೧ ಮುಚ್ಚಿದನು ಕಙ್ಗಳನು ...{Loading}...
ಮುಚ್ಚಿದನು ಕಂಗಳನು ಧೈರ್ಯದ
ಕೆಚ್ಚಿನೆದೆ ಕರಗಿತ್ತು ಶೋಕದ
ಕಿಚ್ಚು ಕೊಂಡುದು ಮನವನಖಿಳೇಂದ್ರಿಯದ ಸುಳಿವಡಗೆ
ಎಚ್ಚರಡಗಿತು ನೆಲಕೆ ಕೈಗಳ
ಬಿಚ್ಚಿ ಬಿದ್ದನು ಪುತ್ರವಿರಹದ
ಹೆಚ್ಚಿಗೆಯ ತಾಪವನು ಹೆಸರಿಡಲರಿಯೆನರ್ಜುನನ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು, ಕಣ್ಣುಗಳನ್ನು ಮುಚ್ಚಿದನು. ಧೈರ್ಯದ ಕೆಚ್ಚಿನಿಂದ ತುಂಬಿದ್ದ ಎದೆ ಕರಗಿತು. ಶೋಕಾಗ್ನಿಯು ಮನಸ್ಸನ್ನು ಸುಟ್ಟು ಹಾಕಿತು. ಎಲ್ಲ ಇಂದ್ರಿಯಗಳ ಚಟುವಟಿಕೆ ನಿಂತಿತು. ಎಚ್ಚರ ತಪ್ಪಿತು. ಕೈಗಳನ್ನು ಅಗಲಿಸಿ ನೆಲಕ್ಕೆ ಜಾರಿ ಬಿದ್ದನು. ಅರ್ಜುನನ ಪುತ್ರವಿಯೋಗದ ತಾಪದ ಆಧಿಕ್ಯವನ್ನು ಹೇಳಲು ಸಾಧ್ಯವಿಲ್ಲ.
ಮೂಲ ...{Loading}...
ಮುಚ್ಚಿದನು ಕಂಗಳನು ಧೈರ್ಯದ
ಕೆಚ್ಚಿನೆದೆ ಕರಗಿತ್ತು ಶೋಕದ
ಕಿಚ್ಚು ಕೊಂಡುದು ಮನವನಖಿಳೇಂದ್ರಿಯದ ಸುಳಿವಡಗೆ
ಎಚ್ಚರಡಗಿತು ನೆಲಕೆ ಕೈಗಳ
ಬಿಚ್ಚಿ ಬಿದ್ದನು ಪುತ್ರವಿರಹದ
ಹೆಚ್ಚಿಗೆಯ ತಾಪವನು ಹೆಸರಿಡಲರಿಯೆನರ್ಜುನನ ॥31॥
೦೩೨ ಘನ ವಿಕರ್ಮದ ...{Loading}...
ಘನ ವಿಕರ್ಮದ ವಿಲಗದಲಿ ನಿಜ
ತನುಜಶೋಕದ ತಗಹಿನೊಳಗ
ರ್ಜುನನು ಧೈರ್ಯ ದರಿದ್ರನಾದನದೇನ ಹೇಳುವೆನು
ಮನ ಬಳಲಿ ಮೈ ಮರೆದು ತಾಪದಿ
ಕನಸ ಕಂಡನು ಝಡಿಕೆ ಮಿಗೆ ಝೊ
ಮ್ಮಿನ ಸುಷುಪ್ತಿಯೊಳಿದ್ದು ನಿಮಿಷದೊಳೆದ್ದು ಕಣ್ದೆರೆದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೂರ್ವ ಜನ್ಮದ ಕರ್ಮಗಳ ಜಂಜಾಟದಿಂದ ಮಗನ ಮರಣದ ಶೋಕದ ಹಿಡಿತದಲ್ಲಿ ಅರ್ಜುನನು ಧೈರ್ಯಹೀನನಾದನು. ಅದನ್ನು ಏನೆಂದು ಹೇಳಲಿ. ಮನಕ್ಕೆ ಆಯಾಸವಾಗಿ, ಮೈಮೇಲಿನ ಪ್ರಜ್ಞೆ ಕಳೆದುಹೋಗಿ, ತಾಪದಿಂದ ಅರ್ಜುನ ಕನಸು ಕಂಡ. ಆಯಾಸ ಹೆಚ್ಚಾಗಲು ಝೊಂಪು ಹತ್ತಿ, ಸುಷುಪ್ತಿ ಸ್ಥಿತಿಯಲ್ಲಿದ್ದು ಮರು ನಿಮಿಷದಲ್ಲಿ ಎಚ್ಚರಗೊಂಡು ಕಣ್ಣು ಬಿಟ್ಟ.
ಪದಾರ್ಥ (ಕ.ಗ.ಪ)
ವಿಲಗ-ಜಂಜಾಟ
ಝಡಿಕೆ-ಆಯಾಸ,
ಸುಷುಪ್ತಿ-ನಿದ್ದೆಯನ್ನು ಮೀರಿದ ಸ್ಥಿತಿ
ಮೂಲ ...{Loading}...
ಘನ ವಿಕರ್ಮದ ವಿಲಗದಲಿ ನಿಜ
ತನುಜಶೋಕದ ತಗಹಿನೊಳಗ
ರ್ಜುನನು ಧೈರ್ಯ ದರಿದ್ರನಾದನದೇನ ಹೇಳುವೆನು
ಮನ ಬಳಲಿ ಮೈ ಮರೆದು ತಾಪದಿ
ಕನಸ ಕಂಡನು ಝಡಿಕೆ ಮಿಗೆ ಝೊ
ಮ್ಮಿನ ಸುಷುಪ್ತಿಯೊಳಿದ್ದು ನಿಮಿಷದೊಳೆದ್ದು ಕಣ್ದೆರೆದ ॥32॥
೦೩೩ ಅಳಲ ಮುಕ್ಕುಳಿಸಿದನು ...{Loading}...
ಅಳಲ ಮುಕ್ಕುಳಿಸಿದನು ಮೋಹದ
ಬೆಳವಿಗೆಯ ಗವಸಣಿಸಿದನು ಕಳ
ಕಳಿಕೆ ಹಿಂಗಿದುದಶ್ರು ಜಲವನು ಕಂಗಳಲಿ ಕುಡಿದು
ಪ್ರಳಯ ರುದ್ರನ ಕೋಪಶಿಖಿ ವೆ
ಗ್ಗಳಿಸಿತೆನೆ ಕಂಗಳಲಿ ಕಿಡಿಗಳು
ತುಳುಕಿದವು ರೌದ್ರಾನುಭಾವದ ರಸದ ಭಂಗಿಯಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ತನ್ನ ಅಂತರಂಗದಲ್ಲಿದ್ದ ದುಃಖವೆಲ್ಲವನ್ನು ಹೊರಗೆ ಹಾಕಿದನು. ಪುತ್ರ ಮಮತೆಯ ಹೆಚ್ಚಳಕ್ಕೆ ತಡೆಹಾಕಿದನು. ಕಳವಳವನ್ನು ಹತ್ತಿಕ್ಕಿದನು. ಅವನ ಕಣ್ಣುಗಳಲ್ಲಿ ಉಕ್ಕುತ್ತಿದ್ದ ನೀರನ್ನು ಕಣ್ಣುಗಳಿಂದಲೇ ಕುಡಿದನು. ರೌದ್ರ ರಸದ ಭಂಗಿಯಲ್ಲಿ ಪ್ರಳಯಕಾಲದ ಶಿವನ ಕೋಪ ಹೆಚ್ಚಾದಾಗ ಆಗುವಂತೆ ಅವನ ಕಣ್ಣುಗಳು ಕಿಡಿಕಾರಲಾರಂಭಿಸಿದವು.
ಪದಾರ್ಥ (ಕ.ಗ.ಪ)
ಗವಸಣಿಸು-ಹೊದಿಸು,
ಮೂಲ ...{Loading}...
ಅಳಲ ಮುಕ್ಕುಳಿಸಿದನು ಮೋಹದ
ಬೆಳವಿಗೆಯ ಗವಸಣಿಸಿದನು ಕಳ
ಕಳಿಕೆ ಹಿಂಗಿದುದಶ್ರು ಜಲವನು ಕಂಗಳಲಿ ಕುಡಿದು
ಪ್ರಳಯ ರುದ್ರನ ಕೋಪಶಿಖಿ ವೆ
ಗ್ಗಳಿಸಿತೆನೆ ಕಂಗಳಲಿ ಕಿಡಿಗಳು
ತುಳುಕಿದವು ರೌದ್ರಾನುಭಾವದ ರಸದ ಭಂಗಿಯಲಿ ॥33॥
೦೩೪ ಹೇಳು ಹೇಳಿನ್ನೇನು ...{Loading}...
ಹೇಳು ಹೇಳಿನ್ನೇನು ಮಾರಿಯ
ಮೇಳವಾಡಿದನೇ ಜಯದ್ರಥ
ನಾಳುತನವನು ಬವರದಲಿ ತನ್ನೊಡನೆ ತೋರಿದನೆ
ನಾಳೆ ಬೈಗಿಂದೊಳಗೆ ರಿಪುವನು
ಸೀಳುವೆನು ಸೀಳದಿರೆ ಧರ್ಮಜ
ಕೇಳು ಭಾಷೆಯನೆಂದು ಮಿಗೆ ಗರ್ಜಿಸಿದನಾ ಪಾರ್ಥ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೇಳು, ಹೇಳು ಇನ್ನೇನು ! ಜಯದ್ರಥ (ಸೈಂಧವ)ನು ಮಾರಿಯೊಡನೆ ಆಟವಾಡಿದನೇ. ಅವನು ತನ್ನ ಶೌರ್ಯವನ್ನು, ಯುದ್ಧದಲ್ಲಿ ನನ್ನೊಡನೆ ತೋರಿಸಿದನೆ. ನಾಳೆ ಸಂಜೆಯೊಳಗಾಗಿ ಶತ್ರುವನ್ನು ಸೀಳಿ ಹಾಕುತ್ತೇನೆ. ಹಾಗೆ ಸೀಳಲಾಗದಿದ್ದರೆ, ಧರ್ಮರಾಯನೇ, ಏನು ಮಾಡುವೆನೆಂಬ ನನ್ನ ಪ್ರತಿಜ್ಞೆಯನ್ನು ಕೇಳು” ಎಂದು ಅರ್ಜುನ ಘರ್ಜಿಸಿದ.
ಮೂಲ ...{Loading}...
ಹೇಳು ಹೇಳಿನ್ನೇನು ಮಾರಿಯ
ಮೇಳವಾಡಿದನೇ ಜಯದ್ರಥ
ನಾಳುತನವನು ಬವರದಲಿ ತನ್ನೊಡನೆ ತೋರಿದನೆ
ನಾಳೆ ಬೈಗಿಂದೊಳಗೆ ರಿಪುವನು
ಸೀಳುವೆನು ಸೀಳದಿರೆ ಧರ್ಮಜ
ಕೇಳು ಭಾಷೆಯನೆಂದು ಮಿಗೆ ಗರ್ಜಿಸಿದನಾ ಪಾರ್ಥ ॥34॥
೦೩೫ ಹರನ ದುರ್ಗದಲಿರಲಿ ...{Loading}...
ಹರನ ದುರ್ಗದಲಿರಲಿ ಮೇಣಾ
ಹರಿಯ ಕಡಲೊಳಗಿರಲಿ ಬ್ರಹ್ಮನ
ಕರಕಮಂಡಲದೊಳಗೆ ಹುದುಗಲಿ ರವಿಯ ಮರೆಹೊಗಲಿ
ಉರಗ ಭುವನದೊಳಿರಲಿ ಮೇಣ್ ಸಾ
ಗರವ ಮುಳುಗಲಿ ನಾಳೆ ಪಡುವಣ
ತರಣಿ ತೊಲಗದ ಮುನ್ನ ಕೊಲುವೆನು ವೈರಿ ಸೈಂಧವನ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈಶ್ವರನ ಕೈಲಾಸದ ಬೆಟ್ಟದಲ್ಲಿ ಅಡಗಲಿ, ಅಥವಾ ವಿಷ್ಣುವಿರುವ ಕ್ಷೀರಸಮುದ್ರದಲ್ಲಿ ಬಚ್ಚಿಟ್ಟುಕೊಳ್ಳಲಿ; ಬ್ರಹ್ಮನ ಕೈಯಲ್ಲಿರುವ ಕಮಂಡಲದೊಳಗೆ ಅಡಗಲಿ. ಸೂರ್ಯನ ಆಶ್ರಯವನ್ನು ಪಡೆಯಲಿ; ಸರ್ಪಲೋಕದಲ್ಲಿರಲಿ; ಅಥವಾ ಸಮುದ್ರದಲ್ಲಾದರೂ ಮುಳುಗಲಿ, ನಾಳೆಯ ದಿನ ಸೂರ್ಯನು ಪಶ್ಚಿಮದಲ್ಲಿ ಮುಳುಗುವುದಕ್ಕೆ ಮೊದಲು ಶತ್ರುವಾದ ಸೈಂಧವನನ್ನು ಕೊಲ್ಲುತ್ತೇನೆ.”
ಮೂಲ ...{Loading}...
ಹರನ ದುರ್ಗದಲಿರಲಿ ಮೇಣಾ
ಹರಿಯ ಕಡಲೊಳಗಿರಲಿ ಬ್ರಹ್ಮನ
ಕರಕಮಂಡಲದೊಳಗೆ ಹುದುಗಲಿ ರವಿಯ ಮರೆಹೊಗಲಿ
ಉರಗ ಭುವನದೊಳಿರಲಿ ಮೇಣ್ ಸಾ
ಗರವ ಮುಳುಗಲಿ ನಾಳೆ ಪಡುವಣ
ತರಣಿ ತೊಲಗದ ಮುನ್ನ ಕೊಲುವೆನು ವೈರಿ ಸೈಂಧವನ ॥35॥
೦೩೬ ಕುರುಬಲವ ಬಿಟ್ಟರೆ ...{Loading}...
ಕುರುಬಲವ ಬಿಟ್ಟರೆ ಯುಧಿಷ್ಠಿರ
ನರಮನೆಯ ಹೊಕ್ಕರೆ ಮುರಾರಿಯ
ಶರಣುವೊಕ್ಕರೆ ಸರ್ವಥಾ ಕೊಲ್ಲೆನು ಜಯದ್ರಥನ
ಧುರದೊಳುಳಿದಂತಿಂದ್ರ ಯಮ ಭಾ
ಸ್ಕರ ವಿರಂಚಿಗಳಡ್ಡವಿಸಿದರೆ
ಶಿರವನರಿವೆನು ನಾಳೆ ಬೈಗಿಂದೊಳಗೆ ಸೈಂಧವನ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೌರವರ ಸೇನೆಯನ್ನು (ಪಕ್ಷವನ್ನು) ಬಿಟ್ಟರೂ ಧರ್ಮರಾಯನ ಅರಮನೆಯನ್ನು ಪ್ರವೇಶಿಸಿದರೆ, ಕೃಷ್ಣನ ಶರಣು ಹೊಕ್ಕರೆ ಏನೇ ಆದರೂ ಅವನನ್ನು ಕೊಲ್ಲುವುದಿಲ್ಲ. ಯುದ್ಧದಲ್ಲಿ ಉಳಿದಂತೆ ಇಂದ್ರ, ಯಮ, ಸೂರ್ಯ, ಬ್ರಹ್ಮಾದಿಗಳು ತಡೆಯೊಡ್ಡಿದರೂ ಸಹ ನಾಳೆ ಸಂಜೆಯೊಳಗಾಗಿ ಸೈಂಧವನ ತಲೆಯನ್ನು ಕತ್ತರಿಸುತ್ತೇನೆ.”
ಪದಾರ್ಥ (ಕ.ಗ.ಪ)
ಅರಿವೆನು-ಕತ್ತರಿಸುತ್ತೇನೆ
ಮೂಲ ...{Loading}...
ಕುರುಬಲವ ಬಿಟ್ಟರೆ ಯುಧಿಷ್ಠಿರ
ನರಮನೆಯ ಹೊಕ್ಕರೆ ಮುರಾರಿಯ
ಶರಣುವೊಕ್ಕರೆ ಸರ್ವಥಾ ಕೊಲ್ಲೆನು ಜಯದ್ರಥನ
ಧುರದೊಳುಳಿದಂತಿಂದ್ರ ಯಮ ಭಾ
ಸ್ಕರ ವಿರಂಚಿಗಳಡ್ಡವಿಸಿದರೆ
ಶಿರವನರಿವೆನು ನಾಳೆ ಬೈಗಿಂದೊಳಗೆ ಸೈಂಧವನ ॥36॥
೦೩೭ ಗುರುವಿಘಾತಿಯ ವೇದನಿನ್ದಾ ...{Loading}...
ಗುರುವಿಘಾತಿಯ ವೇದನಿಂದಾ
ಪರನ ಪರದಾರಾಭಿಗಾಮಿಯ
ಹರ ಮುರಾರಿಯ ಭೇದವಾದಿಯ ವಿಪ್ರನಿಂದಕನ
ಪರಗುಣಾಸೂಯಕನ ಹಿಂಸಾ
ಪರನ ಹಿಸುಣನ ಶಠನ ಕೃಪಣನ
ನರಕವಾಗಲಿ ಕೊಲ್ಲದಿದ್ದರೆ ನಾಳೆ ಸೈಂಧವನ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಾರನೆಯ ದಿನ ಸೈಂಧವನನ್ನು ಕೊಲ್ಲದಿದ್ದರೆ, ಗುರುಗಳನ್ನು ಕೊಂದವನ, ವೇದಗಳನ್ನು ಬೈದವನ, ಅನ್ಯರ ಪತ್ನಿಯನ್ನು ಸೇರುವವನ, ಹರಿಹರರಲ್ಲಿ ಭೇದವನ್ನು ಎಣಿಸುವವನ, ಬ್ರಾಹ್ಮಣರನ್ನು ಬಯ್ಯುವವನ, ಪರರ ಗುಣಗಳನ್ನು ಕಂಡು ಹೊಟ್ಟೆ ಕಿಚ್ಚು ಪಡುವವನ, ಹಿಂಸೆಯನ್ನು ಮಾಡುವವನ, ಚಾಡಿಕೋರನ, ಶಠನ, ಜಿಪುಣನ ನರಕವು ತನಗುಂಟಾಗಲಿ” ಎಂದು ಅರ್ಜುನನು ಪ್ರತಿಜ್ಞೆ ಮಾಡಿದನು.
ಪದಾರ್ಥ (ಕ.ಗ.ಪ)
ದಾರಾ-ಪತ್ನಿ, ಅಭಿಗಾಮಿ-ಬಯಸುವವನು
ಮೂಲ ...{Loading}...
ಗುರುವಿಘಾತಿಯ ವೇದನಿಂದಾ
ಪರನ ಪರದಾರಾಭಿಗಾಮಿಯ
ಹರ ಮುರಾರಿಯ ಭೇದವಾದಿಯ ವಿಪ್ರನಿಂದಕನ
ಪರಗುಣಾಸೂಯಕನ ಹಿಂಸಾ
ಪರನ ಹಿಸುಣನ ಶಠನ ಕೃಪಣನ
ನರಕವಾಗಲಿ ಕೊಲ್ಲದಿದ್ದರೆ ನಾಳೆ ಸೈಂಧವನ ॥37॥
೦೩೮ ಖಳನ ಧೂರ್ತನ ...{Loading}...
ಖಳನ ಧೂರ್ತನ ನಾಸ್ತಿಕನ ಚಂ
ಚಳನ ಪರನಿಕ್ಷೇಪಹಾರಿಯ
ದಳಿತ ಮರ್ಯಾದನ ಕೃತಘ್ನನ ಭರ್ತೃನಿಂದಕನ
ಸ್ಖಲಿತ ವಚನನ ಯೋಗಿ ನಿಂದಾ
ಕುಳನ ವಿಕಳವ್ರತನ ಲೋಕಾ
ವಳಿಗಳಾಗಲಿ ಕೊಲ್ಲದಿದ್ದರೆ ನಾಳೆ ಸೈಂಧವನ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ತಾನು ಮಾರನೆಯ ದಿನ ಸಂಜೆಯೊಳಗೆ ಸೈಂಧವನನ್ನು ಕೊಲ್ಲದಿದ್ದರೆ, ದುಷ್ಟನ, ಧೂರ್ತನ, ನಾಸ್ತಿಕನ, ಚಂಚಲನ, ಅನ್ಯರ ಐಶ್ವರ್ಯವನ್ನು ಅಪಹರಿಸುವವನ, ಮರ್ಯಾದೆ ಇಲ್ಲದವನ, ಮಾಡಿದ ಉಪಕಾರಗಳನ್ನು ಮರೆತವನ, ಕೃತಜ್ಞತೆ ಇಲ್ಲದವನ, ಸ್ವಾಮಿ ದ್ರೋಹಿಯ, ವಚನ ಭ್ರಷ್ಟನ, ಯೋಗಿಗಳನ್ನು ನಿಂದಿಸುವವನ, ವ್ರತ ಭ್ರಷ್ಟನಾದವನ ಲೋಕಗಳು (ಪಾಪಿಗಳ ಲೋಕಗಳು) ತನಗಾಗಲಿ" ಎಂದು ಘೋಷಿಸಿದನು.
ಪದಾರ್ಥ (ಕ.ಗ.ಪ)
ನಿಕ್ಷೇಪ-ಹಣ, ಭರ್ತೃ-ಯಜಮಾನ
ಮೂಲ ...{Loading}...
ಖಳನ ಧೂರ್ತನ ನಾಸ್ತಿಕನ ಚಂ
ಚಳನ ಪರನಿಕ್ಷೇಪಹಾರಿಯ
ದಳಿತ ಮರ್ಯಾದನ ಕೃತಘ್ನನ ಭರ್ತೃನಿಂದಕನ
ಸ್ಖಲಿತ ವಚನನ ಯೋಗಿ ನಿಂದಾ
ಕುಳನ ವಿಕಳವ್ರತನ ಲೋಕಾ
ವಳಿಗಳಾಗಲಿ ಕೊಲ್ಲದಿದ್ದರೆ ನಾಳೆ ಸೈಂಧವನ ॥38॥
೦೩೯ ನಾಳೆ ಖಚರೀಜನದ ...{Loading}...
ನಾಳೆ ಖಚರೀಜನದ ತೊಡವಿನ
ತೋಳನವನಸು ನೆಮ್ಮದಿದ್ದರೆ
ಕಾಳೆಗದೊಳೆನ್ನೊಡಲ ಬಿಸುಡುವೆನಗ್ನಿ ಕುಂಡದಲಿ
ಕೇಳು ಧರ್ಮಜ ಎಂಬ ನುಡಿಗಳು
ಕಾಳೆಗದ ಸೊಗಸಾಗೆ ಲಕ್ಷ್ಮೀ
ಲೋಲ ಕೇಳುತ ಬಂದು ಪಾರ್ಥನ ಬಿರುದ ಹೊಗಳಿದನು ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಜಯದ್ರಥನ ಜೀವವು ಮಾರನೆಯ ದಿನ ದೇವಲೋಕದ ಸ್ತ್ರೀಯರ ಆಭರಣಗಳಿಂದ ಕೂಡಿದ ತೋಳುಗಳನ್ನು ಆಶ್ರಯಿಸದಿದ್ದರೆ (ಅವನು ಮರಣ ಹೊಂದದಿದ್ದರೆ) ಯುದ್ಧದಲ್ಲಿ ನಾನು ನನ್ನ ದೇಹವನ್ನು ಅಗ್ನಿಗೆ ಅರ್ಪಿಸುತ್ತೇನೆ ಕೇಳು, ಧರ್ಮಜ.” ಎಂಬ ಅರ್ಜುನನ ಮಾತುಗಳನ್ನು ಕೇಳಿ ಯುದ್ಧವು ಕಳೆಗಟ್ಟುವುದೆಂದು ತಿಳಿದು ಲಕ್ಷ್ಮೀಪತಿಯಾದ ಕೃಷ್ಣನು ಬಂದು ಅರ್ಜುನನ ಪರಾಕ್ರಮವನ್ನು ಹೊಗಳಿದನು.
ಪದಾರ್ಥ (ಕ.ಗ.ಪ)
ಖಚರೀಜನ-ದೇವಲೋಕದ ನಾರೀ ಜನ
ಮೂಲ ...{Loading}...
ನಾಳೆ ಖಚರೀಜನದ ತೊಡವಿನ
ತೋಳನವನಸು ನೆಮ್ಮದಿದ್ದರೆ
ಕಾಳೆಗದೊಳೆನ್ನೊಡಲ ಬಿಸುಡುವೆನಗ್ನಿ ಕುಂಡದಲಿ
ಕೇಳು ಧರ್ಮಜ ಎಂಬ ನುಡಿಗಳು
ಕಾಳೆಗದ ಸೊಗಸಾಗೆ ಲಕ್ಷ್ಮೀ
ಲೋಲ ಕೇಳುತ ಬಂದು ಪಾರ್ಥನ ಬಿರುದ ಹೊಗಳಿದನು ॥39॥
೦೪೦ ತೀರಿತಿನ್ನೇನರಿ ನೃಪನ ...{Loading}...
ತೀರಿತಿನ್ನೇನರಿ ನೃಪನ ಸಂ
ಸಾರ ನೀನೇರಿಸಿದ ನುಡಿಗಳ
ನಾರು ಕಳಚಲು ಬಲ್ಲರಗ್ಗದ ದೇವ ದೈತ್ಯರಲಿ
ವೀರ ರಾಮನ ನುಡಿಗೆ ರಾಮನು
ದಾರ ಬಾಣಕೆ ನಿನ್ನ ನುಡಿಗಳು
ಕೂರಲಗು ಸಮಜೋಳಿ ಜಗದೊಳಗೆಂದನಸುರಾರಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುರಾಜನಾದ ದುರ್ಯೋಧನನ ಪರಿವಾರ ಸತ್ತಂತೆಯೇ ಸರಿ. ನೀನಾಡಿರುವ ಮಾತುಗಳನ್ನು ಶ್ರೇಷ್ಠರಾದ ದೇವದಾನವರಲ್ಲಿ ಯಾರು ತಾನೇ ಒಡೆಯಬಲ್ಲರು ? ಈ ಜಗತ್ತಿನಲ್ಲಿ ವೀರ ರಾಮನ ಮಾತುಗಳಿಗೆ ನಿನ್ನ ಮಾತುಗಳು ಹಾಗೂ ರಾಮನ ಉದಾರ ಬಾಣಗಳಿಗೆ ನಿನ್ನ ಹರಿತವಾದ ಬಾಣಗಳು ಸರಿಸಾಟಿಯಾಗಿವೆಯೆಂದು ಕೃಷ್ಣ ಹೇಳಿದ.
ಟಿಪ್ಪನೀ (ಕ.ಗ.ಪ)
ಉದಾರಬಾಣ - ವಿಸ್ತಾರವಾದ ವ್ಯಾಪ್ತಿಯ ಬಾಣ
ಮೂಲ ...{Loading}...
ತೀರಿತಿನ್ನೇನರಿ ನೃಪನ ಸಂ
ಸಾರ ನೀನೇರಿಸಿದ ನುಡಿಗಳ
ನಾರು ಕಳಚಲು ಬಲ್ಲರಗ್ಗದ ದೇವ ದೈತ್ಯರಲಿ
ವೀರ ರಾಮನ ನುಡಿಗೆ ರಾಮನು
ದಾರ ಬಾಣಕೆ ನಿನ್ನ ನುಡಿಗಳು
ಕೂರಲಗು ಸಮಜೋಳಿ ಜಗದೊಳಗೆಂದನಸುರಾರಿ ॥40॥
೦೪೧ ನಳಿನನಾಭನು ಪಾಞ್ಚಜನ್ಯವ ...{Loading}...
ನಳಿನನಾಭನು ಪಾಂಚಜನ್ಯವ
ಮೊಳಗಿದನು ನಿಜದೇವದತ್ತವ
ಸೆಳೆದು ಫಲುಗುಣನೂದಿದನು ಗಾಂಡಿವವನೊದರಿಸುತ
ಪ್ರಳಯ ದಿನದಲಿ ತಿವಿವ ಸಿಡಿಲ
ವ್ವಳಿಸುವಂತಿರೆ ರೌದ್ರರವ ಘುಳು
ಘುಳಿಸಿ ತಲ್ಲಣಿಸಿತ್ತು ಕೌರವ ರಾಯ ಪರಿವಾರ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ಪಾಂಚಜನ್ಯ ಎಂಬ ತನ್ನ ಶಂಖವನ್ನು ಊದಿದನು. ಅರ್ಜುನನು ತನ್ನಲ್ಲಿದ್ದ ‘ದೇವ ದತ್ತ’ ಎಂಬ ಶಂಖವನ್ನು ಮೊಳಗಿಸಿದನು. ಜೊತೆಗೆ ಗಾಂಡೀವ ಎಂಬ ಬಿಲ್ಲಿನ ಠೇಂಕಾರಗೈದನು. ಆ ಧ್ವನಿಯು ಪ್ರಳಯ ಕಾಲದಲ್ಲಿ ಉಂಟಾಗುವ ಸಿಡಿಲಿನ ಧ್ವನಿಯಂತೆ ಭಯಂಕರವಾಯಿತು. ಆ ಭಯಂಕರ ಧ್ವನಿಯಿಂದ ಕೌರವ ರಾಯನ ಪರಿವಾರವೆಲ್ಲವೂ ಭಯ ಪಟ್ಟಿತು.
ಪದಾರ್ಥ (ಕ.ಗ.ಪ)
ಅವ್ವಳಿಸು-ಅಪ್ಪಳಿಸು,
ಮೂಲ ...{Loading}...
ನಳಿನನಾಭನು ಪಾಂಚಜನ್ಯವ
ಮೊಳಗಿದನು ನಿಜದೇವದತ್ತವ
ಸೆಳೆದು ಫಲುಗುಣನೂದಿದನು ಗಾಂಡಿವವನೊದರಿಸುತ
ಪ್ರಳಯ ದಿನದಲಿ ತಿವಿವ ಸಿಡಿಲ
ವ್ವಳಿಸುವಂತಿರೆ ರೌದ್ರರವ ಘುಳು
ಘುಳಿಸಿ ತಲ್ಲಣಿಸಿತ್ತು ಕೌರವ ರಾಯ ಪರಿವಾರ ॥41॥
೦೪೨ ಏನಿದೆತ್ತಣ ರಭಸ ...{Loading}...
ಏನಿದೆತ್ತಣ ರಭಸ ತ್ರೈಲೋ
ಕ್ಯಾನುಕಂಪನವಾಯ್ತು ಶಿವ ಎನು
ತಾ ನರೇಂದ್ರ ನಿಕಾಯ ನಡುಗಿತು ಕೌರವೇಶ್ವರನ
ಸೇನೆ ತಲೆಕೆಳಕಾಯ್ತು ಪಾರ್ಥನ
ಸೂನುವಿನ ಮರಣದಲಿ ಮಂತ್ರ
ಧ್ಯಾನ ನಮಗಾಯ್ತೆಂದು ತಲ್ಲಣಿಸಿತ್ತು ನೃಪಕಟಕ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದು ಎಂತಹ ರಭಸ ಮೂರು ಲೋಕಗಳು ಈ ಶಬ್ದಕ್ಕೆ ನಡುಗಿವೆ” ಶಿವಶಿವಾ ಎನ್ನುತ್ತಾ ಆ ರಾಜಸಮೂಹ ನಡುಗಿತು. ಕೌರವನ ಸೇನೆ ತಲೆ ಕೆಳಗಾಯಿತು. ಅರ್ಜುನನ ಮಗನ ಮರಣದಿಂದ ನಮಗೆ ಮಂತ್ರೋಚ್ಛಾರಣೆ ಮತ್ತು ಧ್ಯಾನ ಮಾಡುವಂತಾಯಿತು (ಯುದ್ಧವನ್ನು ಬಿಟ್ಟು) ಎಂದ ಹೇಳುತ್ತಾ ಕೌರವ ರಾಜ ಸೇನೆಯು ತಲ್ಲಣಿಸಿತು.
ಮೂಲ ...{Loading}...
ಏನಿದೆತ್ತಣ ರಭಸ ತ್ರೈಲೋ
ಕ್ಯಾನುಕಂಪನವಾಯ್ತು ಶಿವ ಎನು
ತಾ ನರೇಂದ್ರ ನಿಕಾಯ ನಡುಗಿತು ಕೌರವೇಶ್ವರನ
ಸೇನೆ ತಲೆಕೆಳಕಾಯ್ತು ಪಾರ್ಥನ
ಸೂನುವಿನ ಮರಣದಲಿ ಮಂತ್ರ
ಧ್ಯಾನ ನಮಗಾಯ್ತೆಂದು ತಲ್ಲಣಿಸಿತ್ತು ನೃಪಕಟಕ ॥42॥
೦೪೩ ಎಲೆಲೆ ಕವಿ ...{Loading}...
ಎಲೆಲೆ ಕವಿ ಕಳ್ಳೇರಿ ಹಾಯ್ದರು
ಕೊಲೆಗಡಿಗರೋ ನೃಪರು ಮಗ ಮಡಿ
ದಳಲು ಮಿಗಲನ್ಯಾಯಕೆಳಸಿದನೇ ಯುಧಿಷ್ಠಿರನು
ಬಲವ ಕರೆ ಕರೆ ಎನುತ ಕಾಹಿನ
ತೊಳಲಿಕೆಯ ನಾಯಕರು ಗಜರಲು
ಬೆಳಗಿದವು ಬೊಂಬಾಳ ದೀವಿಗೆ ನೆರೆದುದತಿರಥರು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ! ಮುತ್ತಿಗೆ ಹಾಕಿರಿ. ಕಳ್ಳೇರಿ ಮೇಲೆ ಬಿದ್ದರು. ರಾಜರು ಕೊಲೆಗಡುಕರಾದರೇ; ಮಗ ಮರಣ ಹೊಂದಿದ ದುಃಖ ಹೆಚ್ಚಿ ಯುಧಿಷ್ಠರನು ಅನ್ಯಾಯಕ್ಕೆ ಮನಸ್ಸು ಮಾಡಿದನೇ. ಸೈನ್ಯವನ್ನು ಕರೆ ಎನ್ನುತ್ತಾ ಕಾವಲಿಗಿದ್ದ, ಗಸ್ತಿನ ನಾಯಕರು ಗದರಿಸಲು ಬೊಂಬಾಳ ದೀವಿಗೆಗಳು ಬೆಳಗಿದವು. ಅತಿರಥರು ಗುಂಪಾಗಿ ಸೇರಿದರು.
ಪದಾರ್ಥ (ಕ.ಗ.ಪ)
ಬೊಂಬಾಳ ದೀವಿಗೆ-ಪ್ರಕಾಶಮಾನವಾಗಿರುವ ದೀಪ,
ಕಳ್ಳೇರು- ಕಳ್ಳು ಕುಡಿದು ಮತ್ತು ಏರುವುದು
ತೊಳಲಿಕೆಯ ನಾಯಕರು-ಸಂಚಾರೀ ನಾಯಕರು, ಗಸ್ತು ತಿರುಗುವ ನಾಯಕರು
ಮೂಲ ...{Loading}...
ಎಲೆಲೆ ಕವಿ ಕಳ್ಳೇರಿ ಹಾಯ್ದರು
ಕೊಲೆಗಡಿಗರೋ ನೃಪರು ಮಗ ಮಡಿ
ದಳಲು ಮಿಗಲನ್ಯಾಯಕೆಳಸಿದನೇ ಯುಧಿಷ್ಠಿರನು
ಬಲವ ಕರೆ ಕರೆ ಎನುತ ಕಾಹಿನ
ತೊಳಲಿಕೆಯ ನಾಯಕರು ಗಜರಲು
ಬೆಳಗಿದವು ಬೊಂಬಾಳ ದೀವಿಗೆ ನೆರೆದುದತಿರಥರು ॥43॥
೦೪೪ ಪಾಳಯವು ಗಜಬಜಿಸೆ ...{Loading}...
ಪಾಳಯವು ಗಜಬಜಿಸೆ ತೊಳಲಿಕೆ
ಯಾಳು ನೆರೆದುದು ಕೋರಡಿಯ ಮುಳು
ವೇಲಿಗಾಂತರು ಬೇಹ ಹರಿಸಿದರಖಿಳ ದೆಸೆದೆಸೆಗೆ
ಮೇಲುಗುದುರೆಗಳೊದಗಿದವು ಭೂ
ಪಾಲಕರು ತಲೆಗೆದರಿ ಹುಯ್ಯಲ
ನಾಲಿಸುತ ಹೊರವಂಟು ತಳಕೆಳಕಾಯ್ತು ನೃಪಕಟಕ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಡಾರದಲ್ಲಿ ಗಜಬಜ ಪ್ರಾರಂಭವಾಗಲು, ಗಸ್ತು ತಿರುಗುತ್ತಿದ್ದ ಆಳುಗಳು ಸೇರಿದರು. ರಕ್ಷಣೆಗಾಗಿದ್ದ ಮುಳ್ಳು ಬೇಲಿಗಳ ಸಮೀಪದಲ್ಲಿ (ಕಾವಲಿಗಾಗಿ) ನಿಂತರು. ಸುದ್ದಿ ವಾಹಕರನ್ನು ತಮ್ಮ ಪಾಳಯದ ದಿಕ್ಕು ದಿಕ್ಕುಗಳಿಗೆ ಕಳಿಸಿದರು. ಕುದುರೆಗಳು ಬಂದವು. ಗಲಭೆಯನ್ನು ಕೇಳುತ್ತಾ ರಾಜರು ತಮ್ಮ ಕೆದರಿದ ತಲೆಗಳಲ್ಲಿಯೇ ಹೊರಡಲು ರಾಜನ ಸೈನ್ಯವು ಅಸ್ತವ್ಯಸ್ತವಾಯಿತು.
ಪದಾರ್ಥ (ಕ.ಗ.ಪ)
ಕೋರಡಿ-ರಭಸ ನಿರ್ಬಂಧ, ರಕ್ಷಣೆ,, ಮುಳುವೇಲಿಗೆ-ಮುಳ್ಳಿನ ಬೇಲಿಗೆ, ಆಂತರು-ಒಡ್ಡಿದರು, ಮೇಲುಗುದುರೆ - ಶ್ರೇಷ್ಠವಾದ ಕುದುರೆಗಳು
ಮೂಲ ...{Loading}...
ಪಾಳಯವು ಗಜಬಜಿಸೆ ತೊಳಲಿಕೆ
ಯಾಳು ನೆರೆದುದು ಕೋರಡಿಯ ಮುಳು
ವೇಲಿಗಾಂತರು ಬೇಹ ಹರಿಸಿದರಖಿಳ ದೆಸೆದೆಸೆಗೆ
ಮೇಲುಗುದುರೆಗಳೊದಗಿದವು ಭೂ
ಪಾಲಕರು ತಲೆಗೆದರಿ ಹುಯ್ಯಲ
ನಾಲಿಸುತ ಹೊರವಂಟು ತಳಕೆಳಕಾಯ್ತು ನೃಪಕಟಕ ॥44॥
೦೪೫ ಕಡಿವಣವನಾನೆಗಳ ಮೋರೆಗೆ ...{Loading}...
ಕಡಿವಣವನಾನೆಗಳ ಮೋರೆಗೆ
ತೊಡಸಿದರು ದಂತಿಗಳ ಹೆಗಲಲಿ
ನಿಡು ನೊಗನ ಕಟ್ಟಿದರು ಕಿವಿಯಲಿ ಕೀಲಿಗಳ ಸರಿಸಿ
ಜಡಿವ ಗುಳವನು ಹಾಯ್ಕಿ ಬೀಸಿದ
ರೊಡನೊಡನೆ ಹಕ್ಕರಿಕೆ ಜೋಡಿನ
ಲಡಸಿ ಗಾಲಿಯ ಬಿಗಿದು ಗಜಬಜಿಸಿತ್ತು ನೃಪಕಟಕ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳ ಮುಖಕ್ಕೆ ಕಡಿವಾಣಗಳನ್ನು ತೊಡಿಸಿದರು. ಆನೆಗಳ ಹೆಗಲಿಗೆ (ರಥದ) ಕೀಲಿಗಳನ್ನು ಕೂಡಿಸಿ ದೊಡ್ಡ ನೊಗವನ್ನು ಕಟ್ಟಿದರು. ಆನೆಕುದುರೆಗಳ ಪಕ್ಕೆಗಳನ್ನು ರಕ್ಷಿಸಲು ಇರುವ ಸಾಧನಗಳನ್ನು ಕವಚಗಳಲ್ಲಿ ಸೇರಿಸಿ ರಥದ ಗಾಲಿಗೆ ಬಿಗಿದರು. ಹೀಗೆ ಸೈನ್ಯದಲ್ಲಿ ಕೋಲಾಹಲವುಂಟಾಯಿತು.
ಪದಾರ್ಥ (ಕ.ಗ.ಪ)
ಗುಳ-ಕುದುರೆಗಳ ಮೇಲೆ ಹೊದ್ದಿಸುವ ಬಟ್ಟೆ, ಹಕ್ಕರಿಕೆ-ಆನೆ ಕುದುರೆಗಳನ್ನು ರಕ್ಷಿಸುವ ಸಾಧನ,
ಟಿಪ್ಪನೀ (ಕ.ಗ.ಪ)
(ರಾತ್ರಿಯ ವೇಳೆಯಲ್ಲಿ ಯುದ್ಧ ಅನಿರೀಕ್ಷಿತವಾಗಿ ಪ್ರಾರಂಭವಾಯಿತೆಂಬ ಗಾಬರಿಯಿಂದ ಸೈನಿಕರು ಅಪಹಾಸ್ಯವಾಗುವಂತೆ ವರ್ತಿಸಿರುವುದನ್ನು ಕವಿ ಚಿತ್ರಿಸಿದ್ದಾನೆ. ಮುಂದಿನ ಎರಡು ಪದ್ಯಗಳಲ್ಲಿಯೂ ಇದೇ ವೈರುಧ್ಯದ ವರ್ಣನೆಗಳಿವೆ)
ಮೂಲ ...{Loading}...
ಕಡಿವಣವನಾನೆಗಳ ಮೋರೆಗೆ
ತೊಡಸಿದರು ದಂತಿಗಳ ಹೆಗಲಲಿ
ನಿಡು ನೊಗನ ಕಟ್ಟಿದರು ಕಿವಿಯಲಿ ಕೀಲಿಗಳ ಸರಿಸಿ
ಜಡಿವ ಗುಳವನು ಹಾಯ್ಕಿ ಬೀಸಿದ
ರೊಡನೊಡನೆ ಹಕ್ಕರಿಕೆ ಜೋಡಿನ
ಲಡಸಿ ಗಾಲಿಯ ಬಿಗಿದು ಗಜಬಜಿಸಿತ್ತು ನೃಪಕಟಕ ॥45॥
೦೪೬ ಶಿರದೊಳಾನ್ತರು ಮೊಚ್ಚೆಯವನಾ ...{Loading}...
ಶಿರದೊಳಾಂತರು ಮೊಚ್ಚೆಯವನಾ
ಚರಣದಲಿ ಸೀಸಕವ ತೋಳಲಿ
ಬರಿಯ ಕವಚವ ಬೆನ್ನಿನಲಿ ಕಟ್ಟಿದರು ಕೈಹೊಡೆಯ
ಸುರಗಿಗಳನೀಡಾಡಿ ತಿರುಹಿದ
ರೊರೆಗಳನು ಬತ್ತಳಿಕೆಯನು ಬಿಲು
ದಿರುವಿನಲಿ ಮೋಹಿದರು ತಲ್ಲಣಿಸಿತ್ತು ತಮತಮಗೆ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾದರಕ್ಷೆಗಳನ್ನು ತಲೆಗೆ ಧರಿಸಿದರು. ಪಾದಗಳಿಗೆ ಶಿರಸ್ತ್ರಾಣವನ್ನು ಹಾಕಿಕೊಂಡರು. ಸೊಂಟದ ಕವಚವನ್ನು ತೋಳಿಗೂ, ಕೈಗೆ ಹಾಕಿಕೊಳ್ಳಬೇಕಾದ ಗುರಾಣಿಯನ್ನು ಬೆನ್ನಿಗೂ ಕಟ್ಟಿಕೊಂಡರು. ಕತ್ತಿಗಳನ್ನು ಬಿಸಾಡಿ, ಒರೆಯನ್ನು ಕೈಯಲ್ಲಿ ಹಿಡಿದು ತಿರುಗಿಸಿದರು. ಬತ್ತಳಿಕೆಗಳನ್ನು ಬಿಲ್ಲಿನಲ್ಲಿ ಹೂಡಿದರು. ಸೈನ್ಯ ಹೀಗೆ ಗಲಿಬಿಲಿಯಲ್ಲಿತ್ತು.
ಮೂಲ ...{Loading}...
ಶಿರದೊಳಾಂತರು ಮೊಚ್ಚೆಯವನಾ
ಚರಣದಲಿ ಸೀಸಕವ ತೋಳಲಿ
ಬರಿಯ ಕವಚವ ಬೆನ್ನಿನಲಿ ಕಟ್ಟಿದರು ಕೈಹೊಡೆಯ
ಸುರಗಿಗಳನೀಡಾಡಿ ತಿರುಹಿದ
ರೊರೆಗಳನು ಬತ್ತಳಿಕೆಯನು ಬಿಲು
ದಿರುವಿನಲಿ ಮೋಹಿದರು ತಲ್ಲಣಿಸಿತ್ತು ತಮತಮಗೆ ॥46॥
೦೪೭ ಕರಿಗಳನು ರಾವುತರು ...{Loading}...
ಕರಿಗಳನು ರಾವುತರು ಜೋಧರು
ತುರಗವನು ಕಾಲಾಳು ರಥವನು
ವರಮಹಾರಥರಿಟ್ಟಿ ಸಬಳ ಕಠಾರಿಯುಬ್ಬಣವ
ಧುರದ ಭರ ಮಿಗೆ ಕೊಂಡು ಬೆದರ
ಳ್ಳಿರಿಯೆ ಬೆರಗಿನ ಬಳಿಯಲೊದಗಿ
ತ್ತರರೆ ಪಾಂಡವರೆನುತ ಹೊಯ್ದಾಡಿದರು ತಮ್ಮೊಳಗೆ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾವುತರು ಆನೆಗಳನ್ನು ಏರಿದರು ; ಆನೆಸವಾರರು ಕುದುರೆಗಳನ್ನು ಹತ್ತಿದರು. ಕಾಲಾಳು ರಥವನ್ನೇರಿತು. ಮಹಾರಥರು ಸಬಳ, ಕಠಾರಿ ಅಗಣಿಗಳನ್ನು ಹಿಡಿದು ಯುದ್ಧದ ರಭಸ ಹೆಚ್ಚಾಗಲು, ಹೆದರಿಕೆಯು ತೀವ್ರವಾಗಿ ಬಾಧಿಸುತ್ತಿರಲು ಬೆರಗಿನಿಂದ ಕೂಡಿ ಅರರೆ ! ಪಾಂಡವರು ! ಎನ್ನುತ್ತಾ ತಮ್ಮ ತಮ್ಮೊಳಗೆ ಹೊಡೆದಾಡಿದರು.
ಪದಾರ್ಥ (ಕ.ಗ.ಪ)
ಇಟ್ಟಿ-ಈಟಿ,
ಉಬ್ಬಣ-ಅಗಳಿ
ಮೂಲ ...{Loading}...
ಕರಿಗಳನು ರಾವುತರು ಜೋಧರು
ತುರಗವನು ಕಾಲಾಳು ರಥವನು
ವರಮಹಾರಥರಿಟ್ಟಿ ಸಬಳ ಕಠಾರಿಯುಬ್ಬಣವ
ಧುರದ ಭರ ಮಿಗೆ ಕೊಂಡು ಬೆದರ
ಳ್ಳಿರಿಯೆ ಬೆರಗಿನ ಬಳಿಯಲೊದಗಿ
ತ್ತರರೆ ಪಾಂಡವರೆನುತ ಹೊಯ್ದಾಡಿದರು ತಮ್ಮೊಳಗೆ ॥47॥
೦೪೮ ಹರಿದು ಬೇಹಿನ ...{Loading}...
ಹರಿದು ಬೇಹಿನ ಚರರು ಪಾಂಡವ
ರರಮನೆಯ ಹೊಕ್ಕರಿದು ಮರಳಿದು
ಬರುತ ಕಟಕದ ಗಜಬಜವನಲ್ಲಲ್ಲಿ ಮಾಣಿಸುತ
ನೆರವಿ ನಗೆಗೆಡೆಯಾಗೆ ಮುಸುಕಿನ
ಮುರುವಿನಲಿ ಪಾಳಯವ ಹೊಕ್ಕರು
ಗರುವ ಮನ್ನೆಯ ಮಂಡಳೀಕರು ಕೇಳ್ದರೀ ಹದನ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರ ಗುಪ್ತಚರರು ವೇಗವಾಗಿ ಹೋಗಿ ಪಾಂಡವರ ಅರಮನೆಯನ್ನು ಹೊಕ್ಕು ಅಲ್ಲಿನ ಸಮಾಚಾರವನ್ನು (ಅರ್ಜುನನ ಪ್ರತಿಜ್ಞೆ ಇತ್ಯಾದಿ) ತಿಳಿದು ಹಿಂದಿರುಗಿ ಬರುತ್ತ, ತಮ್ಮ ಕಡೆಯ ಸೈನ್ಯದ ಗಜಬಜವನ್ನು ನಿಲ್ಲಿಸಿದರು. ನೆರೆದವರ ಅಪಹಾಸ್ಯದ ನಗುವಿಗೆಡೆಯಾಗುವಂತೆ ಸೈನಿಕರು ತಲೆಗೆ ಮುಸುಕು ಹಾಕಿಕೊಂಡು ಪಾಳೆಯವನ್ನು ಹೊಕ್ಕರು. ಹೆಮ್ಮೆಯ, ಮಾನ್ಯರಾದ ಮಾಂಡಳಿಕರು ಈ ಸುದ್ದಿಯನ್ನು ಕೇಳಿದರು.
ಮೂಲ ...{Loading}...
ಹರಿದು ಬೇಹಿನ ಚರರು ಪಾಂಡವ
ರರಮನೆಯ ಹೊಕ್ಕರಿದು ಮರಳಿದು
ಬರುತ ಕಟಕದ ಗಜಬಜವನಲ್ಲಲ್ಲಿ ಮಾಣಿಸುತ
ನೆರವಿ ನಗೆಗೆಡೆಯಾಗೆ ಮುಸುಕಿನ
ಮುರುವಿನಲಿ ಪಾಳಯವ ಹೊಕ್ಕರು
ಗರುವ ಮನ್ನೆಯ ಮಂಡಳೀಕರು ಕೇಳ್ದರೀ ಹದನ ॥48॥
೦೪೯ ರವಿತನುಜ ಗುರುಸೂನು ...{Loading}...
ರವಿತನುಜ ಗುರುಸೂನು ಭೂರಿ
ಶ್ರವ ಸುಲೋಚನ ಶಲ್ಯ ಕೃಪ ಸೈಂ
ಧವ ವಿವಿಂಶತಿ ಚಿತ್ರಸೇನರು ಕರ್ಣನಂದನರು
ತವತವಗೆ ಬೆದರಿದರು ರಿಪು ಕೌ
ರವನ ಹೊರೆಗೈತಂದರಂದಿನ
ರವದ ರೌದ್ರದ ರಾಜಕಾರ್ಯವ ತಿಳಿವ ತವಕದಲಿ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯ ಪುತ್ರನಾದ ಕರ್ಣ, ದ್ರೋಣರ ಪುತ್ರನಾದ ಅಶ್ವತ್ಥಾಮ, ಭೂರಿಶ್ರವ, ಸುಲೋಚನ, ಶಲ್ಯ, ಕೃಪ, ಸೈಂಧವ, ವಿವಿಂಶತಿ, ಚಿತ್ರಸೇನ, ಕರ್ಣನ ಮಕ್ಕಳು ತಮ್ಮೊಳಗೆ ಹೆದರಿದರು. ಅವರು ಗಲಭೆಯ, ಭೀಕರಧ್ವನಿಯ ವಿಚಾರಗಳನ್ನು ಮತ್ತು ಮುಂದಿನ ರಾಜಕಾರ್ಯವನ್ನು ತಿಳಿಯುವ ಆತುರದಿಂದ ದುರ್ಯೋಧನನ ಬಳಿಗೆ ಬಂದರು.
ಪದಾರ್ಥ (ಕ.ಗ.ಪ)
ಸುಲೋಚನ-ಚಂದ್ರ ವಂಶದ ಒಬ್ಬ ರಾಜ,
ಮೂಲ ...{Loading}...
ರವಿತನುಜ ಗುರುಸೂನು ಭೂರಿ
ಶ್ರವ ಸುಲೋಚನ ಶಲ್ಯ ಕೃಪ ಸೈಂ
ಧವ ವಿವಿಂಶತಿ ಚಿತ್ರಸೇನರು ಕರ್ಣನಂದನರು
ತವತವಗೆ ಬೆದರಿದರು ರಿಪು ಕೌ
ರವನ ಹೊರೆಗೈತಂದರಂದಿನ
ರವದ ರೌದ್ರದ ರಾಜಕಾರ್ಯವ ತಿಳಿವ ತವಕದಲಿ ॥49॥
೦೫೦ ಇರುಳು ಬೇಹಿನ ...{Loading}...
ಇರುಳು ಬೇಹಿನ ಚರರು ಪಾರ್ಥನ
ನಿರುಪಮಿತ ಗಾಢ ಪ್ರತಿಜ್ಞಾ
ಚರಿತವನು ಕೌರವನ ಸಭೆಯಲಿ ತಂದು ಹರಹಿದರು
ಮರಣ ಸೈಂಧವಗಲ್ಲದಿದ್ದರೆ
ಮರಣ ಪಾರ್ಥಂಗಲ್ಲದೆಡೆಯಲಿ
ಪರಿಹರಿಸುವುದ ಕಾಣೆವೆಂದರು ಚರರು ಭೂಪತಿಗೆ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾತ್ರಿಯಲ್ಲಿ ಗೂಢಚಾರರು, ಅರ್ಜುನನ ಅನುಪಮವಾದ ಗಾಢ ಪ್ರತಿಜ್ಞೆಗಳ ಸುದ್ದಿಯನ್ನು ದುರ್ಯೋಧನನ ಸಭೆಯಲ್ಲಿ ತಿಳಿಸಿದರು. ಮರಣವು ಸೈಂಧವನಿಗೆ, ಇಲ್ಲದಿದ್ದರೆ ಮರಣವು ಅರ್ಜುನನಿಗೆ ಇವೆರಡರ ನಡುವೆ ಬೇರೆ ಪರಿಹಾರವನ್ನು ನಾವು ಕಾಣೆವು ಎಂದು ದುರ್ಯೋಧನನಿಗೆ ತಿಳಿಸಿದರು.
ಮೂಲ ...{Loading}...
ಇರುಳು ಬೇಹಿನ ಚರರು ಪಾರ್ಥನ
ನಿರುಪಮಿತ ಗಾಢ ಪ್ರತಿಜ್ಞಾ
ಚರಿತವನು ಕೌರವನ ಸಭೆಯಲಿ ತಂದು ಹರಹಿದರು
ಮರಣ ಸೈಂಧವಗಲ್ಲದಿದ್ದರೆ
ಮರಣ ಪಾರ್ಥಂಗಲ್ಲದೆಡೆಯಲಿ
ಪರಿಹರಿಸುವುದ ಕಾಣೆವೆಂದರು ಚರರು ಭೂಪತಿಗೆ ॥50॥
೦೫೧ ಲೇಸು ಲೇಸಭಿಮನ್ಯುವೀ ...{Loading}...
ಲೇಸು ಲೇಸಭಿಮನ್ಯುವೀ ದು
ಶ್ಯಾಸನನ ಮಗನಿಂದ ರಣದಲಿ
ಘಾಸಿಯಾದನು ನಾವು ಮಾಡಿದುದೇನು ಪಾರ್ಥಂಗೆ
ಈಸನೇರಿಸಿ ನುಡಿದ ಪಾರ್ಥನ
ಭಾಷೆ ಹೊಳ್ಳಾಗದು ಸುಯೋಧನ
ದೇಶವನು ಬೀಳ್ಕೊಂಡೆನೆಂದನು ಸೈಂಧವನು ಸಭೆಗೆ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳ್ಳೆಯದು ! ಒಳ್ಳೆಯದು ! ಅಭಿಮನ್ಯುವು ದುಶ್ಶಾಸನನ ಮಗನಿಂದ ಯುದ್ಧದಲ್ಲಿ ಪ್ರಾಣಬಿಟ್ಟನು. ನಾನು ಅರ್ಜುನನಿಗೆ ಮಾಡಿದುದೇನು ? ಇಷ್ಟೊಂದು ದೊಡ್ಡದಾಗಿ ನುಡಿದ ಅರ್ಜುನನ ಭಾಷೆ ಪೊಳ್ಳಾಗುವುದಿಲ್ಲ. ಸುಯೋಧನಾ, ನಾನು ದೇಶವನ್ನು ಬಿಟ್ಟು ಹೊರಟು ಹೋಗುತ್ತೇನೆ" ಎಂದು ಸೈಂಧವನು ಸಭೆಗೆ ಹೇಳಿದನು.
ಪದಾರ್ಥ (ಕ.ಗ.ಪ)
ಈಸನು-ಇಷ್ಟೊಂದು, ಹೊಳ್ಳಾಗದು-ಸುಳ್ಳಾಗದು
ಮೂಲ ...{Loading}...
ಲೇಸು ಲೇಸಭಿಮನ್ಯುವೀ ದು
ಶ್ಯಾಸನನ ಮಗನಿಂದ ರಣದಲಿ
ಘಾಸಿಯಾದನು ನಾವು ಮಾಡಿದುದೇನು ಪಾರ್ಥಂಗೆ
ಈಸನೇರಿಸಿ ನುಡಿದ ಪಾರ್ಥನ
ಭಾಷೆ ಹೊಳ್ಳಾಗದು ಸುಯೋಧನ
ದೇಶವನು ಬೀಳ್ಕೊಂಡೆನೆಂದನು ಸೈಂಧವನು ಸಭೆಗೆ ॥51॥
೦೫೨ ಅಳಲಿ ಮನೆಯಲಿ ...{Loading}...
ಅಳಲಿ ಮನೆಯಲಿ ಕಾಳುಗೆಡೆದಡೆ
ಫಲವಹುದೆ ನಿಜಸತಿಯ ಹಿಡಿದಾ
ನೆಳಸುವಂದಿನ ಭೀಮ ಮಾಡಿದ ಭಾಷೆಯೇನಾಯ್ತು
ಅಳುಕದಿರು ಪರಿವಾರವಿದೆ ಕೊಳು
ಗುಳಕೆ ವಜ್ರದ ಜೋಡು ದ್ರೋಣನು
ಬಲವಿಹೀನನೆ ತಾನೆನುತ ಕುರುರಾಯ ಗರ್ಜಿಸಿದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ರೀತಿ ದುಃಖಿಸಿ ಮನೆಯಲ್ಲಿ ಉಪಯೋಗವಿಲ್ಲದೇ ಕುಳಿತರೆ ಏನು ಪ್ರಯೋಜನವಾಗುತ್ತದೆ ? ನಾನು ಪಾಂಡವರ ಸತಿಯಾದ ದ್ರೌಪದಿಯನ್ನು ಎಳೆಸಿ ತಂದಾಗ ಭೀಮ ಮಾಡಿದ ಪ್ರತಿಜ್ಞೆ ಏನಾಯಿತು ? ಹೆದರಬೇಡ ಸೈನ್ಯವಿದೆ. ನಮ್ಮ ರಣರಂಗಕ್ಕೆ ದ್ರೋಣಾಚಾರ್ಯರು ವಜ್ರದ ಕವಚ. ನಾನು ಬಲವಿಲ್ಲದವನೆ?’ ಎಂದು ಎಂದು ದುರ್ಯೋಧನನು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಅಳಲಿ-ದುಃಖಿಸಿ, ಕಾಳುಗೆಡೆದಡೆ-ಉಪಯೋಗವಿಲ್ಲದೆ4 ಕುಳಿತರೆ, ಅಳುಕದಿರು-ಹೆದರಬೇಡ, ಕೊಳಗುಳಕೆ-ಯುದ್ಧಕ್ಕೆ
ಮೂಲ ...{Loading}...
ಅಳಲಿ ಮನೆಯಲಿ ಕಾಳುಗೆಡೆದಡೆ
ಫಲವಹುದೆ ನಿಜಸತಿಯ ಹಿಡಿದಾ
ನೆಳಸುವಂದಿನ ಭೀಮ ಮಾಡಿದ ಭಾಷೆಯೇನಾಯ್ತು
ಅಳುಕದಿರು ಪರಿವಾರವಿದೆ ಕೊಳು
ಗುಳಕೆ ವಜ್ರದ ಜೋಡು ದ್ರೋಣನು
ಬಲವಿಹೀನನೆ ತಾನೆನುತ ಕುರುರಾಯ ಗರ್ಜಿಸಿದ ॥52॥
೦೫೩ ಅವನೋಲೆಯಕಾರತನ ಗಾಂ ...{Loading}...
ಅವನೋಲೆಯಕಾರತನ ಗಾಂ
ಡೀವಿಯಿದಿರಲಿ ಫಲಿಸುವುದು ಮೇ
ಣಾವನದ್ಭುತ ಮಂತ್ರಶಕ್ತಿಗೆ ಮಣಿವನಸುರಾರಿ
ಕಾವರಿಲ್ಲರ್ಜುನನ ಕೈಯಲಿ
ಸಾವವರು ನಾವಲ್ಲೆನಲು ನರ
ದೇವ ಕುರುಪತಿ ಮತ್ತೆ ನುಡಿದನು ನಗುತ ಸೈಂಧವಗೆ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾರ ಶೌರ್ಯವು ತಾನೇ ಅರ್ಜುನನ ಎದುರಿನಲ್ಲಿ ಫಲಿಸುತ್ತದೆ ? (ಪ್ರಯೋಜನವಾಗುತ್ತದೆ) ಮತ್ತು ಯಾರ ಅದ್ಭುತವಾದ ಮಂತ್ರ ಶಕ್ತಿಗೆ ಕೃಷ್ಣನು ಬಗ್ಗುತ್ತಾನೆ. (ನಮ್ಮನ್ನು) ಕಾಯುವವರು ಯಾರೂ ಇಲ್ಲ. ಅರ್ಜುನನ ಕೈಯಲ್ಲಿ ಸಾಯುವವನು ನಾನಲ್ಲ ಎದು ಸೈಂಧವನು ಹೇಳಲು ಕುರುಪತಿಯಾದ ದುರ್ಯೋಧನನು ನಗುತ್ತಾ ಪುನಃ ಸೈಂಧವನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಓಲೆಯಕಾರತನ-ಶೌರ್ಯ, ಮಣಿವನು-ಸೋಲುತ್ತಾನೆ, ನರದೇವ-ರಾಜ
ಮೂಲ ...{Loading}...
ಅವನೋಲೆಯಕಾರತನ ಗಾಂ
ಡೀವಿಯಿದಿರಲಿ ಫಲಿಸುವುದು ಮೇ
ಣಾವನದ್ಭುತ ಮಂತ್ರಶಕ್ತಿಗೆ ಮಣಿವನಸುರಾರಿ
ಕಾವರಿಲ್ಲರ್ಜುನನ ಕೈಯಲಿ
ಸಾವವರು ನಾವಲ್ಲೆನಲು ನರ
ದೇವ ಕುರುಪತಿ ಮತ್ತೆ ನುಡಿದನು ನಗುತ ಸೈಂಧವಗೆ ॥53॥
೦೫೪ ಗರುಡನೂರವರೆರೆವರೇ ನಾ ...{Loading}...
ಗರುಡನೂರವರೆರೆವರೇ ನಾ
ಗರಿಗೆ ತನಿಯನು ನಮ್ಮ ಬಲದಲಿ
ಗುರುವಲಾ ಪಾಲಕನು ಕೈಕೊಂಬನೆ ಧನಂಜಯನ
ನರನ ನುಡಿಯನು ಹೊಳ್ಳುಗಳೆವರೆ
ಚರಣದಲಿ ಬೀಳುವೆವು ನಡೆಯೆಂ
ದಿರುಳು ದ್ರೋಣನ ಮನೆಗೆ ಬಂದನು ಕೌರವರ ರಾಯ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗರುಡನ ಊರಿನಲ್ಲಿರುವವರು ಹಾವುಗಳಿಗೆ ತನಿ ಎರೆಯುವ ಕೆಲಸವನ್ನು ಮಾಡುತ್ತಾರೆಯೇ. ನಮ್ಮ ಸೈನ್ಯವನ್ನು ಕಾಯುವವನು ಗುರುವಾದ ದ್ರೋಣನಲ್ಲವೆ? ಅವನು ಧನಂಜಯನಿಗೆ ಹೆದರುವನೆ? ಅರ್ಜುನನ ಪ್ರತಿಜ್ಞೆಯನ್ನು ನಿಷ್ಫಲಗೊಳಿಸಲು ದ್ರೋಣರ ಪಾದಗಳ ಮೇಲೆ ಬೀಳೋಣ ನಡೆಯಿರಿ” ಎಂದು ರಾತ್ರಿಯಲ್ಲಿ ದುರ್ಯೋಧನ ದ್ರೋಣನ ಮನೆಗೆ ಬಂದ.
ಪದಾರ್ಥ (ಕ.ಗ.ಪ)
ತನಿ ಎರೆ-ನೀರು, ಹಾಲು, ಮೊದಲಾದುವನ್ನು ನಾಗರ ಪ್ರತಿಮೆಗೆ ಹಾಕುವುದು
ಹೊಳ್ಳುಗಳೆವರೆ-ಪೊಳ್ಳಾಗಿಸಲು, ನಿಷ್ಪಲಗೊಳಿಸಲು
ಮೂಲ ...{Loading}...
ಗರುಡನೂರವರೆರೆವರೇ ನಾ
ಗರಿಗೆ ತನಿಯನು ನಮ್ಮ ಬಲದಲಿ
ಗುರುವಲಾ ಪಾಲಕನು ಕೈಕೊಂಬನೆ ಧನಂಜಯನ
ನರನ ನುಡಿಯನು ಹೊಳ್ಳುಗಳೆವರೆ
ಚರಣದಲಿ ಬೀಳುವೆವು ನಡೆಯೆಂ
ದಿರುಳು ದ್ರೋಣನ ಮನೆಗೆ ಬಂದನು ಕೌರವರ ರಾಯ ॥54॥
೦೫೫ ನೆಗಹಿದವು ಕೈದೀವಿಗೆಯ ...{Loading}...
ನೆಗಹಿದವು ಕೈದೀವಿಗೆಯ ಸಾ
ಲುಗಳು ಹೊಂದಂಡಿಗೆಯ ದೂವಾ
ರಿಗಳು ವೆಂಠಣಿಸಿದರು ಸೀಗುರಿ ಮೊಗವ ಮೋಹಿದವು
ಉಗಿದ ಕಡಿತಲೆ ಮುಸುಕಿದವು ಚೌ
ರಿಗಳ ಡೊಂಕಣಿ ತುರುಗಿದವು ಮೌ
ಳಿಗಳ ಮಸ್ತಕದವರು ನೆಲನುಗ್ಗಡಿಸಲೈತಂದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೈದೀವಿಗೆಗಳ ಸಾಲುಗಳು ಮೇಲಕ್ಕೆ ಎದ್ದುವು. ಚಿನ್ನದ ಪಲ್ಲಕ್ಕಿಗಳನ್ನು ಹೊರುವವರು ಸೇರಿದರು. ಚಾಮರಗಳು ಮುಖವನ್ನು ಮುತ್ತಿದವು. ಸೆಳೆದ ಖಡ್ಗಗಳು ಚೌರಿಗಳನ್ನು ಮುಸುಕಿದವು. ಈಟಿಗಳು ಗುಂಪಾದವು. ವಂದಿಮಾಗಧರು ಬಿರುದುಗಳನ್ನು ಉದ್ಘೋಷಿಸುತ್ತಿರಲು ದುರ್ಯೋಧನನು ಬಂದನು.
ಪದಾರ್ಥ (ಕ.ಗ.ಪ)
ನೆಗಹಿದವು-ಮೇಲೆದ್ದು ಶೋಭಿಸಿದುವು, ಹೊಂದಂಡಿಗೆ-ಬಂಗಾರದ ಪಲ್ಲಕ್ಕಿ
ವೆಂಠಣಿಸಿ-ಮುತ್ತಿ,
ಡೊಂಕಣಿ-ಸಬಳ ಎಂಬ ಆಯುಧ,
ಉಗ್ಗಡಿಸಲು-ಉದ್ಘೋಷಿಸುತ್ತಿರಲು
ತುರುಗಿ-ತುಂಬಿ
ಮೂಲ ...{Loading}...
ನೆಗಹಿದವು ಕೈದೀವಿಗೆಯ ಸಾ
ಲುಗಳು ಹೊಂದಂಡಿಗೆಯ ದೂವಾ
ರಿಗಳು ವೆಂಠಣಿಸಿದರು ಸೀಗುರಿ ಮೊಗವ ಮೋಹಿದವು
ಉಗಿದ ಕಡಿತಲೆ ಮುಸುಕಿದವು ಚೌ
ರಿಗಳ ಡೊಂಕಣಿ ತುರುಗಿದವು ಮೌ
ಳಿಗಳ ಮಸ್ತಕದವರು ನೆಲನುಗ್ಗಡಿಸಲೈತಂದ ॥55॥
೦೫೬ ಗರುಡಿಯೊಡೆಯನ ಪಾಳಯಕೆ ...{Loading}...
ಗರುಡಿಯೊಡೆಯನ ಪಾಳಯಕೆ ಕಡು
ಭರದಲೈತರೆ ಕೌರವೇಂದ್ರನ
ಬರವಿದೇನೆಂದಿದಿರು ಬಂದನು ದ್ರೋಣನಿದಿರಾಗಿ
ಧರಣಿಪನ ಸತ್ಕರಿಸಿ ನೆಲೆಯು
ಪ್ಪರಿಗೆಗೊಯ್ದನು ನುಸುಳುಗಂಡಿಯೊ
ಳುರವಣಿಸಿದರು ಕರ್ಣ ಕೃಪ ಮೊದಲಾದ ಬೇಹವರು ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗರುಡಿ ವಿದ್ಯೆಯ ನಾಯಕನಾದ ದ್ರೋಣಾಚಾರ್ಯನ ಪಾಳಯಕ್ಕೆ ಮಹಾ ರಭಸದಿಂದ ದುರ್ಯೋಧನನು ಬರಲು, ಕೌರವೇಂದ್ರನು ಬರಲು ಕಾರಣವೇನೆಂದುಕೊಳ್ಳುತ್ತಾ ದ್ರೋಣನು ಅವನನ್ನು ಇದಿರುಗೊಳ್ಳಲು ಎದುರಿಗೆ ಬಂದ. ರಾಜನನ್ನು ಸತ್ಕರಿಸಿ, ಉಪ್ಪರಿಗೆಗೆ ಕರೆದೊಯ್ದ. ಕರ್ಣ, ಕೃಪನೇ ಮೊದಲಾದ ವೀರರು ನುಸುಳು ದಾರಿಯ ಮೂಲಕ ದುರ್ಯೋಧನನಿದ್ದ ಸ್ಥಳಕ್ಕೆ ವೇಗವಾಗಿ ಬಂದರು.
ಪದಾರ್ಥ (ಕ.ಗ.ಪ)
ಗರುಡಿಯೊಡೆಯ-ದ್ರೋಣ, ಕಡುಭರ-ಮಹಾರಭಸ,
ನುಸುಳುಗಂಡಿ-ಕಿರುದಾರಿ (ಗುಪ್ತಮಾರ್ಗ)
ಮೂಲ ...{Loading}...
ಗರುಡಿಯೊಡೆಯನ ಪಾಳಯಕೆ ಕಡು
ಭರದಲೈತರೆ ಕೌರವೇಂದ್ರನ
ಬರವಿದೇನೆಂದಿದಿರು ಬಂದನು ದ್ರೋಣನಿದಿರಾಗಿ
ಧರಣಿಪನ ಸತ್ಕರಿಸಿ ನೆಲೆಯು
ಪ್ಪರಿಗೆಗೊಯ್ದನು ನುಸುಳುಗಂಡಿಯೊ
ಳುರವಣಿಸಿದರು ಕರ್ಣ ಕೃಪ ಮೊದಲಾದ ಬೇಹವರು ॥56॥
೦೫೭ ವೀಳೆಯವ ಕರ್ಪುರವನಿತ್ತು ...{Loading}...
ವೀಳೆಯವ ಕರ್ಪುರವನಿತ್ತು ನೃ
ಪಾಲರನು ಕರ್ಣಾದಿ ಸುಭಟರ
ಸಾಲ ಮನ್ನಿಸಿ ದ್ರೋಣ ಬೆಸಕೊಂಡನು ಸುಯೋಧನನ
ಕಾಳಿಕೆಯ ಕೈಕೊಂಡು ಸಿರಿಮೊಗ
ಹೇಳುತಿದೆ ಭೀತಿಯನು ನಿನ್ನಿನ
ಕಾಳೆಗದ ಜಯ ನಮ್ಮದೀ ದುಮ್ಮಾನವೇನೆಂದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀಳೆಯ ಕರ್ಪೂರಗಳನ್ನು ಕೊಟ್ಟು ದುರ್ಯೋಧನನನ್ನು ಕರ್ಣಾದಿ ವೀರರ ಸಮೂಹವನ್ನು ಗೌರವಿಸಿ, ದ್ರೋಣ ದುರ್ಯೋಧನನನ್ನು ಕೇಳಿದ :" ಕಪ್ಪಿಟ್ಟಿರುವ ನಿನ್ನ ಸಿರಿಮುಖ ಭೀತಿಯನ್ನು ತೋರುತ್ತಿದೆ. ನೆನ್ನೆಯ ಯುದ್ಧದಲ್ಲಿ ಜಯ ನಮ್ಮದಾಯಿತು. ಈ ದುಃಖಕ್ಕೆ ಕಾರಣವೇನು?" ಎಂದ.
ಮೂಲ ...{Loading}...
ವೀಳೆಯವ ಕರ್ಪುರವನಿತ್ತು ನೃ
ಪಾಲರನು ಕರ್ಣಾದಿ ಸುಭಟರ
ಸಾಲ ಮನ್ನಿಸಿ ದ್ರೋಣ ಬೆಸಕೊಂಡನು ಸುಯೋಧನನ
ಕಾಳಿಕೆಯ ಕೈಕೊಂಡು ಸಿರಿಮೊಗ
ಹೇಳುತಿದೆ ಭೀತಿಯನು ನಿನ್ನಿನ
ಕಾಳೆಗದ ಜಯ ನಮ್ಮದೀ ದುಮ್ಮಾನವೇನೆಂದ ॥57॥
೦೫೮ ಏನ ಹೇಳುವೆನುರ್ಜುನನು ...{Loading}...
ಏನ ಹೇಳುವೆನುರ್ಜುನನು ನಿಜ
ಸೂನು ಮಡಿಯೆ ದುರಾಭಿಮಾನದ
ಲೇನನೆಂದನು ಕೇಳಿರೈ ಕರ್ಣಾದಿ ಮಂತ್ರಿಗಳು
ತಾನು ಗಡ ಸೈಂಧವನ ತಲೆಯನು
ಭಾನುವಡಗದ ಮುನ್ನ ಕೊಂಬೆನು
ಹೀನನಾದರೆ ಹೊಗುವೆನೆಂದನು ಹವ್ಯವಾಹನನ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
58." ಏನು ಹೇಳಲಿ, ಅರ್ಜುನನು, ಮಗನು ಸಾಯಲು, ದುರಭಿಮಾನದಿಂದ ಏನು ಹೇಳಿದನೆಂದು ಕರ್ಣಾದಿ ಮಂತ್ರಿಗಳು ಕೇಳಿರಿ - ‘ಸೂರ್ಯ ಮುಳುಗುವ ಮೊದಲು ಸೈಂಧವನ ತಲೆಯನ್ನು ತೆಗೆಯುತ್ತೇನೆ, ತಪ್ಪಿದರೆ ಅಗ್ನಿ ಪ್ರವೇಶ ಮಾಡುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ್ದಾನೆ"
ಪದಾರ್ಥ (ಕ.ಗ.ಪ)
ಹವ್ಯವಾಹನ-ಅಗ್ನಿ
ಮೂಲ ...{Loading}...
ಏನ ಹೇಳುವೆನುರ್ಜುನನು ನಿಜ
ಸೂನು ಮಡಿಯೆ ದುರಾಭಿಮಾನದ
ಲೇನನೆಂದನು ಕೇಳಿರೈ ಕರ್ಣಾದಿ ಮಂತ್ರಿಗಳು
ತಾನು ಗಡ ಸೈಂಧವನ ತಲೆಯನು
ಭಾನುವಡಗದ ಮುನ್ನ ಕೊಂಬೆನು
ಹೀನನಾದರೆ ಹೊಗುವೆನೆಂದನು ಹವ್ಯವಾಹನನ ॥58॥
೦೫೯ ಕೊನ್ದವನು ದುಶ್ಯಾಸನನ ...{Loading}...
ಕೊಂದವನು ದುಶ್ಯಾಸನನ ಮಗ
ಬಂದುದಪರಾಧವು ಜಯದ್ರಥ
ಗಿಂದಿವನ ಪತಿಕರಿಸಬೇಹುದು ರಣದೊಳರ್ಜುನನ
ಮುಂದುಗೆಡಿಸಲೆಬೇಕು ಭೀಷ್ಮರು
ಸಂದ ಬಳಿಕೆಮಗಾಪ್ತ ನೀನೇ
ತಂದೆ ನೀನೆಂದರಸನೆರಗಿದನವರ ಚರಣದಲಿ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಭಿಮನ್ಯುವನ್ನು ಕೊಂದವನು ದುಶ್ಶಾಸನನ ಮಗ. ಆದರೆ ಅಪರಾಧ ಬಂದದ್ದು ಜಯದ್ರಥನಿಗೆ. ಇಂದು ಇವನನ್ನು ಕಾಪಾಡಬೇಕು. ಯುದ್ಧದಲ್ಲಿ ಅರ್ಜುನನ್ನು ಹಿಮ್ಮೆಟ್ಟಿಸಲೇ ಬೇಕು. ಭೀಷ್ಮರು ಕಳೆದ ನಂತರ ನೀನೇ ನಮಗೆ ಆಪ್ತ, ನೀನೇ ತಂದೆ " ಎಂದು ದುರ್ಯೋಧನ ದ್ರೋಣರ ಪಾದಗಳಿಗೆ ನಮಸ್ಕರಿಸಿದ.
ಪದಾರ್ಥ (ಕ.ಗ.ಪ)
ಪತಿಕರಿಸು-ಕಾಪಾಡು,
ಮುಂದುಗೆಡಿಸು-ದಾರಿ ತೋರದಂತೆ ಮಾಡು
ಮೂಲ ...{Loading}...
ಕೊಂದವನು ದುಶ್ಯಾಸನನ ಮಗ
ಬಂದುದಪರಾಧವು ಜಯದ್ರಥ
ಗಿಂದಿವನ ಪತಿಕರಿಸಬೇಹುದು ರಣದೊಳರ್ಜುನನ
ಮುಂದುಗೆಡಿಸಲೆಬೇಕು ಭೀಷ್ಮರು
ಸಂದ ಬಳಿಕೆಮಗಾಪ್ತ ನೀನೇ
ತಂದೆ ನೀನೆಂದರಸನೆರಗಿದನವರ ಚರಣದಲಿ ॥59॥
೦೬೦ ಮಕುಟವನು ನೆಗಹಿದನು ...{Loading}...
ಮಕುಟವನು ನೆಗಹಿದನು ಭೂಪಾ
ಲಕ ನಿದಾನಿಸಿ ಕೇಳು ಶಶಿಕುಲ
ಮುಕುರವಿತ್ತಂಡದಲಿ ನೆನೆಯೆವು ಭೇದಬುದ್ಧಿಗಳ
ಯುಕುತಿಯಿನ್ನಿದಕಿಲ್ಲ ಪಾರ್ಥನ
ಶಕುತಿ ಘನವೀ ರಾಜಕಾರ್ಯಕೆ
ಚಕಿತರಾದೆವು ರಾಯ ಚಿತ್ತೈಸೆಂದನಾ ದ್ರೋಣ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು ದುರ್ಯೋಧನನ ತಲೆಯನ್ನು ಎತ್ತಿದನು. “ದೊರೆಯೇ ಆಲೋಚಿಸಿ ಕೇಳು, ಚಂದ್ರವಂಶಕ್ಕೆ ಕನ್ನಡಿಯಂತಿರುವ ಪಾಂಡವ ಕೌರವರೆಂಬ ಎರಡೂ ತಂಡಗಳಲ್ಲಿ ನಾವು ಭೇದ ಬುದ್ಧಿಗಳನ್ನು ಮಾಡುವುದಿಲ್ಲ. ಇದಕ್ಕೆ ಇನ್ನು ಬೇರೆ ಉಪಾಯವಿಲ್ಲ. ಅರ್ಜುನನ ಶಕ್ತಿ ಹಿರಿದಾದದ್ದು. ಈ ರಾಜಕಾರ್ಯವು ನನಗೆ ಅಚ್ಚರಿ ಮೂಡಿಸಿದೆ.” ಎಂದು ದ್ರೋಣ ಹೇಳಿದ.
ಪದಾರ್ಥ (ಕ.ಗ.ಪ)
ನೆಗಹು-ಎತ್ತು,
ನಿದಾನಿಸಿ-ಆಲೋಚಿಸಿ
ಮೂಲ ...{Loading}...
ಮಕುಟವನು ನೆಗಹಿದನು ಭೂಪಾ
ಲಕ ನಿದಾನಿಸಿ ಕೇಳು ಶಶಿಕುಲ
ಮುಕುರವಿತ್ತಂಡದಲಿ ನೆನೆಯೆವು ಭೇದಬುದ್ಧಿಗಳ
ಯುಕುತಿಯಿನ್ನಿದಕಿಲ್ಲ ಪಾರ್ಥನ
ಶಕುತಿ ಘನವೀ ರಾಜಕಾರ್ಯಕೆ
ಚಕಿತರಾದೆವು ರಾಯ ಚಿತ್ತೈಸೆಂದನಾ ದ್ರೋಣ ॥60॥
೦೬೧ ಕಾವಡೆನ್ನಳವಲ್ಲ ಮೇಣ್ ...{Loading}...
ಕಾವಡೆನ್ನಳವಲ್ಲ ಮೇಣ್ ಗಾಂ
ಡೀವಿ ಕೊಲುವವನಲ್ಲ ಕೃಷ್ಣನು
ಕಾವರೆಯು ಕೊಲುವರೆ ಸಮರ್ಥನು ವೇದಸಿದ್ಧವಿದು
ಜೀವಜಾತಕ್ಕೊಡೆಯನಾ ರಾ
ಜೀವನಾಭನು ಬರಿಯಹಂಕಾ
ರಾವಲಂಬನದಿಂದ ಕೆಡುತಿಹುದಖಿಳ ಜಗವೆಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಕ್ಷಿಸುವುದು ನನ್ನ ಅಳತೆಯಲಿಲ್ಲ. (ನಾನು ಅಸಮರ್ಥ) ಅರ್ಜುನನು ಕೊಲ್ಲುವವನಲ್ಲ. ಕೃಷ್ಣನೇ ಕಾಪಾಡುವವನೂ, ಕೊಲ್ಲುವವನೂ ಆಗಿದ್ದಾನೆ. ಇದು ವೇದದಲ್ಲಿ ಸಿದ್ಧವಾಗಿರುವ ವಿಚಾರ. ಸಕಲ ಜೀವರ ಒಡೆಯ ಆ ಕೃಷ್ಣ (ಆದರೆ ಈ ವಿಚಾರವನ್ನು ತಿಳಿಯz) ಕೇವಲ ಅಹಂಕಾರದಿಂದ ಜಗತ್ತು ಹಾಳಾಗುತ್ತಿದೆ " ಎಂದು ದ್ರೋಣ ಹೇಳಿದ.
ಮೂಲ ...{Loading}...
ಕಾವಡೆನ್ನಳವಲ್ಲ ಮೇಣ್ ಗಾಂ
ಡೀವಿ ಕೊಲುವವನಲ್ಲ ಕೃಷ್ಣನು
ಕಾವರೆಯು ಕೊಲುವರೆ ಸಮರ್ಥನು ವೇದಸಿದ್ಧವಿದು
ಜೀವಜಾತಕ್ಕೊಡೆಯನಾ ರಾ
ಜೀವನಾಭನು ಬರಿಯಹಂಕಾ
ರಾವಲಂಬನದಿಂದ ಕೆಡುತಿಹುದಖಿಳ ಜಗವೆಂದ ॥61॥
೦೬೨ ಇದು ಮುರಾರಿಯ ...{Loading}...
ಇದು ಮುರಾರಿಯ ಲೀಲೆಗೋಸುಗ
ಉದಯಿಸಿದ ಜಗವಿದರೊಳೊಬ್ಬನ
ಸದೆವನೊಬ್ಬನ ಹಿಡಿದು ಸಲಹುವನೊಬ್ಬನೊಬ್ಬನಲಿ
ಇದರೊಳಾತಂಗಿಲ್ಲ ಕರುಣಾ
ಸ್ಪದತೆ ನಿಷ್ಕಾರುಣ್ಯ ಭೂಯಂ
ತ್ರದ ವಿನೋದಕ್ರೀಡೆ ಕೃಷ್ಣನದೆಂದನಾ ದ್ರೋಣ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಜಗತ್ತು ಶ್ರೀಕೃಷ್ಣನ ಲೀಲೆಗಾಗಿ ಹುಟ್ಟಿರುವುದು. ಇದರಲ್ಲಿ ಕೃಷ್ಣನು ಒಬ್ಬನನ್ನು ಕೊಲ್ಲುತ್ತಾನೆ, ಒಬ್ಬನನ್ನು ಹಿಡಿದು ಕಾಪಾಡುತ್ತಾನೆ. ಈ ಕೆಲಸದಲ್ಲಿ ಕೃಷ್ಣನಿಗೆ ಯಾವ ಕರುಣೆಯೂ ಇರುವುದಿಲ್ಲ. ನಿಷ್ಕಾರುಣ್ಯವಾದ ಭೂಮಿಯೆಂಬ ಯಂತ್ರದಿಂದ ವಿನೋದದ ಕ್ರೀಡೆಯಾಡುವುದು ಕೃಷ್ಣನ ಕೆಲಸ” ಎಂದು ದ್ರೋಣ ಹೇಳಿದ.
ಪದಾರ್ಥ (ಕ.ಗ.ಪ)
ಲೀಲೆ-ಆಟ, ಸದೆವನು-ಕೊಲ್ಲುತ್ತಾನೆ, ಭೂಯಂತ್ರ-ಭೂಮಿಯೆಂಬ ಯಂತ್ರ
ಮೂಲ ...{Loading}...
ಇದು ಮುರಾರಿಯ ಲೀಲೆಗೋಸುಗ
ಉದಯಿಸಿದ ಜಗವಿದರೊಳೊಬ್ಬನ
ಸದೆವನೊಬ್ಬನ ಹಿಡಿದು ಸಲಹುವನೊಬ್ಬನೊಬ್ಬನಲಿ
ಇದರೊಳಾತಂಗಿಲ್ಲ ಕರುಣಾ
ಸ್ಪದತೆ ನಿಷ್ಕಾರುಣ್ಯ ಭೂಯಂ
ತ್ರದ ವಿನೋದಕ್ರೀಡೆ ಕೃಷ್ಣನದೆಂದನಾ ದ್ರೋಣ ॥62॥
೦೬೩ ನರನ ನುಡಿಯೆನ್ದಿರದಿರವು ...{Loading}...
ನರನ ನುಡಿಯೆಂದಿರದಿರವು ಮುರ
ಹರನ ನುಡಿಗಳು ಕೇಳು ಗಿರಿಗ
ಹ್ವರದ ನುಡಿಯೋ ಜಂಗಮ ಧ್ವನಿಯೋ ವಿಚಾರಿಸಲು
ನರನ ನುಡಿ ಹೊಳ್ಳಾಗದಾ ಮುರ
ಹರನ ಬಲುಹುಳ್ಳನ್ನ ಬರವೆನ
ಲರಸನಾಲಿಸಿ ಕೇಳುತಿರ್ದನು ಕೈಯ ಗಲ್ಲದಲಿ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನಾಡಿದ ಮಾತುಗಳು ಅವನವೆಂದು ಭಾವಿಸಬೇಡ. ಅವು ಕೃಷ್ಣನ ಮಾತುಗಳಾಗಿವೆ. ವಿಚಾರಿಸಿ ನೋಡಲು ಈ ಮಾತುಗಳು ಬೆಟ್ಟ ಗವಿಗಳ ಮಾತುಗಳೋ ಅಥವಾ ಚಲಿಸುತ್ತಿರುವ ಮಾತುಗಳೋ ಅಲ್ಲ. (ಸ್ಥಿರವಾದ ನುಡಿಗಳು). ಅರ್ಜುನನ ಮಾತು ಕೃಷ್ಣನ ಬಲವಿರುವವರೆಗೆ ಪೊಳ್ಳಾಗುವುದಿಲ್ಲ. " ಎಂದು ದ್ರೋಣರು ಹೇಳಲು ದುರ್ಯೋಧನನು ಗಲ್ಲದ ಮೇಲೆ ಕೈಯಿಟ್ಟುಕೊಂಡು ಕೇಳುತ್ತಿದ್ದನು.
ಮೂಲ ...{Loading}...
ನರನ ನುಡಿಯೆಂದಿರದಿರವು ಮುರ
ಹರನ ನುಡಿಗಳು ಕೇಳು ಗಿರಿಗ
ಹ್ವರದ ನುಡಿಯೋ ಜಂಗಮ ಧ್ವನಿಯೋ ವಿಚಾರಿಸಲು
ನರನ ನುಡಿ ಹೊಳ್ಳಾಗದಾ ಮುರ
ಹರನ ಬಲುಹುಳ್ಳನ್ನ ಬರವೆನ
ಲರಸನಾಲಿಸಿ ಕೇಳುತಿರ್ದನು ಕೈಯ ಗಲ್ಲದಲಿ ॥63॥
೦೬೪ ಕೇಳುತಿರ್ದೈ ಕರ್ಣ ...{Loading}...
ಕೇಳುತಿರ್ದೈ ಕರ್ಣ ಬೊಮ್ಮವ
ಕೇಳ ಬಂದೆವೆ ನಾವು ನಾಳಿನ
ಕಾಳೆಗದ ಜಯಮುಖವ ಬೆಸಗೊಳ ಬಂದೆವಿಂದೀಗ
ಹೇಳುತಿದ್ದರಸಂಗತವನಿದು
ಹೋಲುವುದಲೇ ಮುನಿ ಕುಮಾರರು
ಕಾಳೆಗವನೇಗುವರು ಬಳಿಕೇನೆಂದನಾ ಭೂಪ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರ್ಣಾ, ಈ ದ್ರೋಣರಾಡುವ ಮಾತುಗಳನ್ನು ಕೇಳಿದೆಯಲ್ಲವೆ ? ನಾವು ಬ್ರಹ್ಮ ವಿಚಾರವನ್ನು ಕೇಳಲೆಂದು ಇಲ್ಲಿಗೆ ಬಂದೆವೆ? ನಾವು ನಾಳೆಯ ದಿನ ಯುದ್ಧದಲ್ಲಿ ಹೇಗೆ ಜಯ ಸಾಧಿಸುವುದೆಂಬುದನ್ನು ಕೇಳಲು ಬಂದದ್ದು. ಇವರು ಹೇಳುತ್ತಿರುವ ಮಾತುಗಳು ಅಸಂಗತವಾಗಿವೆ. ಮುನಿಕುಮಾರರು ಯುದ್ಧವನ್ನು ನಿರ್ವಹಿಸುತ್ತಾರೆಯೇ, ಇನ್ನೇನು?” ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಬೊಮ್ಮ-ಬ್ರಹ್ಮ-ತತ್ವ ವಿಚಾರ, ಏಗುವರು-ನಿರ್ವಹಿಸುವರು
ಮೂಲ ...{Loading}...
ಕೇಳುತಿರ್ದೈ ಕರ್ಣ ಬೊಮ್ಮವ
ಕೇಳ ಬಂದೆವೆ ನಾವು ನಾಳಿನ
ಕಾಳೆಗದ ಜಯಮುಖವ ಬೆಸಗೊಳ ಬಂದೆವಿಂದೀಗ
ಹೇಳುತಿದ್ದರಸಂಗತವನಿದು
ಹೋಲುವುದಲೇ ಮುನಿ ಕುಮಾರರು
ಕಾಳೆಗವನೇಗುವರು ಬಳಿಕೇನೆಂದನಾ ಭೂಪ ॥64॥
೦೬೫ ಕಟಕಿಯೇಕಿದು ವಿಪ್ರರಹೆವು ...{Loading}...
ಕಟಕಿಯೇಕಿದು ವಿಪ್ರರಹೆವು
ತ್ಕಟದ ಶೌರಿಯವಿಲ್ಲ ನಾವ್ ದಿಟ
ಪುಟವ ನುಡಿದರೆ ಖಾತಿಯಾದುದೆ ನಿಮ್ಮ ಚಿತ್ತದಲಿ
ನಿಟಿಲಲೋಚನ ನೋಡುವರೆ ದು
ರ್ಘಟವೆನಿಪ ಮೋಹರದ ಬಲು ಸಂ
ಘಟನೆಯನು ತೋರುವೆನು ಚಿಂತಿಸಬೇಡ ನೀನೆಂದ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾವು ಬ್ರಾಹ್ಮಣರೆಂಬುದು ನಿಜ. ತೀವ್ರವಾದ ಶೌರ್ಯ ನಮ್ಮಲ್ಲಿಲ್ಲ. ಈ ವ್ಯಂಗ್ಯವೇಕೆ, ಸತ್ಯ ಹೇಳಿದ್ದರಿಂದ ನಿಮ್ಮ ಮನಸ್ಸಿಗೆ ಕೋಪ ಉಂಟಾಗಿದೆಯೆ. ಹಣೆಗಣ್ಣನ್ನು ಹೊಂದಿದ ಶಿವನು ನೋಡುವಂತೆ, ಒಡೆಯಲು ಅಸಾಧ್ಯವೆನಿಸುವಂತಹ ಸೈನ್ಯದ ಸಂಘಟನೆಯನ್ನು ಮಾಡಿ ತೋರಿಸುತ್ತೇನೆ. ನೀನು ಯೋಚಿಸಬೇಡ” ಎಂದು ದ್ರೋಣ ಹೇಳಿದ.
ಮೂಲ ...{Loading}...
ಕಟಕಿಯೇಕಿದು ವಿಪ್ರರಹೆವು
ತ್ಕಟದ ಶೌರಿಯವಿಲ್ಲ ನಾವ್ ದಿಟ
ಪುಟವ ನುಡಿದರೆ ಖಾತಿಯಾದುದೆ ನಿಮ್ಮ ಚಿತ್ತದಲಿ
ನಿಟಿಲಲೋಚನ ನೋಡುವರೆ ದು
ರ್ಘಟವೆನಿಪ ಮೋಹರದ ಬಲು ಸಂ
ಘಟನೆಯನು ತೋರುವೆನು ಚಿಂತಿಸಬೇಡ ನೀನೆಂದ ॥65॥
೦೬೬ ವ್ಯೂಹವನು ರಚಿಸುವೆನು ...{Loading}...
ವ್ಯೂಹವನು ರಚಿಸುವೆನು ನಾಳಿನೊ
ಳಾಹವಕೆ ತಳತಂತ್ರವೊಂದೇ
ಮೋಹರಕೆ ನಡೆತರಲಿ ಷಡುರಥರಾದಿ ಯಾದವರು
ಸಾಹಸವನುದಯದಲಿ ತೋರುವೆ
ಬಾಹುಬಲವನು ಸೈಂಧವನ ಮೈ
ಗಾಹ ಬಲಿವೆನು ಕಾಂಬೆ ಕೃಷ್ಣನ ನೆನಹ ಬಳಿಕೆಂದ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಳೆಯ ದಿನ ಯುದ್ಧಕ್ಕೆ ಕಾಲಾಳುಗಳ ಸೈನ್ಯವೊಂದರ ವ್ಯೂಹವನ್ನು ರಚಿಸುತ್ತೇನೆ. ಷಡ್ರಥರಾದಿಯಾದ ಯಾದವರು ಯುದ್ಧರಂಗಕ್ಕೆ ಬರಲಿ. ಬೆಳಗಿನಲ್ಲಿ ನನ್ನ ಸಾಹಸವನ್ನು ಬಾಹುಬಲವನ್ನು ತೋರಿಸುತ್ತೇನೆ. ಸೈಂಧವನ ರಕ್ಷಣೆಯನ್ನು ಏರ್ಪಡಿಸುತ್ತೇನೆ. ಆ ಬಳಿಕ ಕೃಷ್ಣನ ಆಲೋಚನೆಯನ್ನು ಮಾಡುತ್ತೇನೆ.
ಪದಾರ್ಥ (ಕ.ಗ.ಪ)
ತಳತಂತ್ರ-ಕಾಲಾಳುಗಳ ಸೈನ್ಯ
ಮೂಲ ...{Loading}...
ವ್ಯೂಹವನು ರಚಿಸುವೆನು ನಾಳಿನೊ
ಳಾಹವಕೆ ತಳತಂತ್ರವೊಂದೇ
ಮೋಹರಕೆ ನಡೆತರಲಿ ಷಡುರಥರಾದಿ ಯಾದವರು
ಸಾಹಸವನುದಯದಲಿ ತೋರುವೆ
ಬಾಹುಬಲವನು ಸೈಂಧವನ ಮೈ
ಗಾಹ ಬಲಿವೆನು ಕಾಂಬೆ ಕೃಷ್ಣನ ನೆನಹ ಬಳಿಕೆಂದ ॥66॥
೦೬೭ ಸಾಕು ನೀ ...{Loading}...
ಸಾಕು ನೀ ಚಿಂತಿಸಲು ಬೇಡ ಪಿ
ನಾಕಧರನಡಹಾಯ್ದಡೆಯು ನಾ
ವಾಕೆವಾಳರು ರಣಕೆ ಕೃಷ್ಣಾರ್ಜುನರ ಪಾಡೇನು
ನೂಕಿ ನೋಡಾ ಸೈಂಧವನನೇ
ಕೈಕವೀರರು ಕಾವೆವೆಂದು
ದ್ರೇಕ ಮಿಗೆ ಗರ್ಜಿಸಿತು ಕರ್ಣಾದಿಗಳು ತಮತಮಗೆ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದುರ್ಯೋಧನ, ನೀನು ಚಿಂತೆ ಮಾಡಬೇಡ, ಪಿನಾಕ ಎಂಬ ಬಿಲ್ಲನ್ನು ಹಿಡಿದು ಸಾಕ್ಷಾತ್ ಶಿವನೇ ಯುದ್ಧಕ್ಕೆ ಬಂದರೂ ರಣರಂಗದಲ್ಲಿ ನಾವು ಶೂರರು. ಇನ್ನು ಕೃಷ್ಣ ಹಾಗೂ ಅರ್ಜುನರು ಯಾವ ಲೆಕ್ಕ ? ಸೈಂಧವನನ್ನು ಮುಂದೆ ಬಿಟ್ಟು ನೋಡು. ನಾವು ಅವನನ್ನು ಕಾಪಾಡುತ್ತೇವೆ” ಎಂದು ಉದ್ರೇಕ ಹೆಚ್ಚಲು ಕರ್ಣಾದಿಗಳು ತಾವು ತಾವೇ ಗರ್ಜಿಸಿದರು.
ಮೂಲ ...{Loading}...
ಸಾಕು ನೀ ಚಿಂತಿಸಲು ಬೇಡ ಪಿ
ನಾಕಧರನಡಹಾಯ್ದಡೆಯು ನಾ
ವಾಕೆವಾಳರು ರಣಕೆ ಕೃಷ್ಣಾರ್ಜುನರ ಪಾಡೇನು
ನೂಕಿ ನೋಡಾ ಸೈಂಧವನನೇ
ಕೈಕವೀರರು ಕಾವೆವೆಂದು
ದ್ರೇಕ ಮಿಗೆ ಗರ್ಜಿಸಿತು ಕರ್ಣಾದಿಗಳು ತಮತಮಗೆ ॥67॥
೦೬೮ ಬೀಳುಕೊಣ್ಡುದು ರಾಜಸಭೆ ...{Loading}...
ಬೀಳುಕೊಂಡುದು ರಾಜಸಭೆ ತ
ಮ್ಮಾಲಯಕೆ ಸೈಂಧವನು ಚಿಂತಾ
ಲೋಲನಿರ್ದನು ಮರಣಜೀವನ ಜಾತ ಸಂಶಯನು
ಕೋಲಗುರುವಿನ ವಿವಿಧ ರಚನೆಯ
ಕೇಳಿದನು ನಸುನಗುತ ಪಾರ್ಥಗೆ
ಹೇಳಿದನು ಕರುಣದಲಿ ಗದುಗಿನ ವೀರ ನಾರಯಣ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜಸಭೆಯಲ್ಲಿದ್ದವರು ತಮ್ಮ ಮನೆಗಳಿಗೆ ತೆರಳಿದರು. ಸೈಂಧವನು ತನಗೆ ಮರಣವೋ ಜೀವನವೋ ಎಂಬ ಚಿಂತೆಯಲ್ಲಿದ್ದನು. ಶಸ್ತ್ರ ವಿದ್ಯಾಗುರುವಾದ ದ್ರೋಣನ ವಿವಿಧ ವ್ಯೂಹ ರಚನೆಯ ವಿವರಗಳನ್ನ ಕೇಳಿದ ಕೃಷ್ಣ ನಸುನಗುತ್ತಾ ಅರ್ಜುನನಿಗೆ ಕರುಣೆಯಿಂದ ಆ ವಿವರಗಳನ್ನು ಹೇಳಿದನು.
ಮೂಲ ...{Loading}...
ಬೀಳುಕೊಂಡುದು ರಾಜಸಭೆ ತ
ಮ್ಮಾಲಯಕೆ ಸೈಂಧವನು ಚಿಂತಾ
ಲೋಲನಿರ್ದನು ಮರಣಜೀವನ ಜಾತ ಸಂಶಯನು
ಕೋಲಗುರುವಿನ ವಿವಿಧ ರಚನೆಯ
ಕೇಳಿದನು ನಸುನಗುತ ಪಾರ್ಥಗೆ
ಹೇಳಿದನು ಕರುಣದಲಿ ಗದುಗಿನ ವೀರ ನಾರಯಣ ॥68॥