೦೦೦ ಸೂ ಅರಿ ...{Loading}...
ಸೂ. ಅರಿ ಮಹೇಶನುದಾರವೀರನು
ವರ ಕಿರೀಟಿಕುಮಾರ ಧೀರನು
ಸುರರ ನಗರಿಗೆ ನಡೆಯೆ ಹಲುಬಿದನಂದು ಯಮಸೂನು
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಶತ್ರುರಾಜರುಗಳಿಗೆ ಕಾಲರುದ್ರ್ರನಂತಿರುವವನೂ ಕೊಡಲಿಯಾಗಿರುವ ವೀರನೂ ಶ್ರೇಷ್ಠನಾದ ಅರ್ಜುನನ ಕುಮಾರನೂ, ಧೀರನೂ ಎನಿಸಿದ ಅಭಿಮನ್ಯು ದೇವಲೋಕಕ್ಕೆ ನಡೆಯಲು ಧರ್ಮರಾಯ ಶೋಕಿಸಿದ.
ಪದಾರ್ಥ (ಕ.ಗ.ಪ)
ಕಿರೀಟಿ-ಅರ್ಜುನ, ಸುರರ ನಗರಿ-ಸ್ವರ್ಗ, ಯಮಸೂನು-ಧರ್ಮರಾಯ
ಪಾಠಾನ್ತರ (ಕ.ಗ.ಪ)
“ಅರಿ ಮಹೇಶ ಕುಠಾರ ವೀರನು” ಇದಕ್ಕೆ ಮತ್ತೊಂದು ಪಾಠಾಂತರವಿದೆ.
“ಅರಿ ಮಹೀಶ ಕುಠಾರ ಧೀರನು” (ಕನ್ನಡ ಭಾರತ ಸಂ : ಡಾ.ಎ.ವಿ. ಪ್ರಸನ್ನ, ಪ್ರಕಾಶಕರು, ಕನ್ನಡ ವಿಶ್ವ ವಿದ್ಯಾಲಯ, ಹಂಪಿ) ಸಂಧಿ : 8 ರ ಸೂಚನಾ ಪದ್ಯ. ಇಲ್ಲಿ ‘ಮಹೇಶ’ದ ಬದಲಿಗೆ ‘ಮಹೀಶ’ ನೆಂದಿದೆ. ಇದರಲ್ಲಿ ಯಾವ ಸಂದಿಗ್ಧತೆಯೂ ಇಲ್ಲದೆ ‘ಶತ್ರುರಾಜರಿಗೆ ಕುಠಾರ ಪ್ರಾಯನಾದ ಧೀರನು" ಎಂಬ ಅರ್ಧ ಸ್ಪಷ್ಟವಾಗಿದೆ. ಇದು ಡಾ|| ಎ.ವಿ. ಪ್ರಸನ್ನ ಅವರ ಊಹಾಪಾಠ
ಮೂಲ ...{Loading}...
ಸೂ. ಅರಿ ಮಹೇಶನುದಾರವೀರನು
ವರ ಕಿರೀಟಿಕುಮಾರ ಧೀರನು
ಸುರರ ನಗರಿಗೆ ನಡೆಯೆ ಹಲುಬಿದನಂದು ಯಮಸೂನು
೦೦೧ ತೆಗೆದುದರಿ ಪರಿವಾರ ...{Loading}...
ತೆಗೆದುದರಿ ಪರಿವಾರ ಕಹಳಾ
ದಿಗಳ ಸನ್ನೆಯಲುಭಯ ಬಲ ಕಾ
ಳೆಗವನುಳಿದುದು ಬಂದು ಹೊಕ್ಕರು ತಮ್ಮ ಪಾಳಯವ
ಮಗನು ರಣದಲಿ ಮಡಿದ ಹದ ಬೀ
ಡುಗಳೊಳಾದುದು ವಾರ್ತೆ ದೂತರು
ದುಗುಡ ಭರದಲಿ ಬಂದು ಹೊಕ್ಕರು ರಾಜ ಮಂದಿರವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳಾದ ಪಾಂಡವರ ಪರಿವಾರವು ಯುದ್ಧ ಭೂಮಿಯಿಂದ ಹಿಂದಿರುಗಿತು. ಕಹಳೆಗಳ ವಾದ್ಯಗಳ ಸೂಚನೆಯಂತೆ (ಯುದ್ಧ ನಿಲ್ಲುವ ಸೂಚನೆ) ಉಭಯ ಪಕ್ಷಗಳ ಸೇನೆಗಳು ಯುದ್ಧವನ್ನು ಬಿಟ್ಟು ತಮ್ಮ ಪಾಳೆಯವನ್ನು ಪ್ರವೇಶಿಸಿದವು. ಅಭಿಮನ್ಯುವು ಯುದ್ಧದಲ್ಲಿ ಮಡಿದ ಸುದ್ದಿ ಬೀಡುಗಳಲ್ಲಿ ಹಬ್ಬಿತು. ದುಗುಡದಿಂದ ಕೂಡಿದ ದೂತರು ಬಂದು ರಾಜನ ಮಂದಿರವನ್ನು ಹೊಕ್ಕರು.
ಮೂಲ ...{Loading}...
ತೆಗೆದುದರಿ ಪರಿವಾರ ಕಹಳಾ
ದಿಗಳ ಸನ್ನೆಯಲುಭಯ ಬಲ ಕಾ
ಳೆಗವನುಳಿದುದು ಬಂದು ಹೊಕ್ಕರು ತಮ್ಮ ಪಾಳಯವ
ಮಗನು ರಣದಲಿ ಮಡಿದ ಹದ ಬೀ
ಡುಗಳೊಳಾದುದು ವಾರ್ತೆ ದೂತರು
ದುಗುಡ ಭರದಲಿ ಬಂದು ಹೊಕ್ಕರು ರಾಜ ಮಂದಿರವ ॥1॥
೦೦೨ ಅವನಿಪನ ಖಣ್ಡೆಯವ ...{Loading}...
ಅವನಿಪನ ಖಂಡೆಯವ ನಕುಲನ
ಪವನಸುತನ ಕಠಾರಿಯನು ನೃಪ
ನಿವಹದಾಯುಧ ತತಿಯನೊಯ್ಯನೆ ತೆಗೆದು ಬೈಚಿಟ್ಟು
ಬವರದಲಿ ಸುತನಳಿದನೋ ಕೌ
ರವರ ಕೈವಶವಾದನೋ ಸಂ
ಭವಿಪ ಹದನೇನೆಂಬ ನೃಪತಿಯ ಕಂಡರೈತಂದು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೂತರ ಧರ್ಮರಾಯನ ಖಡ್ಗವನ್ನು, ನಕುಲ ಹಾಗೂ ಭೀಮರ ಕಠಾರಿಯನ್ನು, ಇತರ ರಾಜರ ಆಯುಧಗಳನ್ನು ಕೂಡಲೇ ಬಚ್ಚಿಟ್ಟು ರಣರಂಗದಲ್ಲಿ ಮಗನಾದ ಅಭಿಮನ್ಯು ಸತ್ತನೊ ? ಅಥವಾ ಕೌರವರಿಗೆ ಸೆರೆಸಿಕ್ಕನೋ ? ಮುಂದಾಗಬಹುದಾದುದೇನು ? ಎಂದು ಮಾತನಾಡುತ್ತಿದ್ದ ಧರ್ಮರಾಯನನ್ನು ಅವರು ಬಂದು ಕಂಡರು.
ಮೂಲ ...{Loading}...
ಅವನಿಪನ ಖಂಡೆಯವ ನಕುಲನ
ಪವನಸುತನ ಕಠಾರಿಯನು ನೃಪ
ನಿವಹದಾಯುಧ ತತಿಯನೊಯ್ಯನೆ ತೆಗೆದು ಬೈಚಿಟ್ಟು
ಬವರದಲಿ ಸುತನಳಿದನೋ ಕೌ
ರವರ ಕೈವಶವಾದನೋ ಸಂ
ಭವಿಪ ಹದನೇನೆಂಬ ನೃಪತಿಯ ಕಂಡರೈತಂದು ॥2॥
೦೦೩ ಅವನಿಪಾಲ ಕುಮಾರ ...{Loading}...
ಅವನಿಪಾಲ ಕುಮಾರ ಕಂಠೀ
ರವನು ರಣದಲಿ ಬೀದಿವರಿದು
ತ್ಸವದಲಹಿತರನಿರಿದು ಕೌರವ ರಾಯ ನಂದನರ
ಜವನ ನಗರಿಗೆ ಕಳುಹಿ ತಾ ವಾ
ಸವನ ಸಿಂಹಾಸನವನಡರುವ
ತವಕದಲಿ ಜಾರಿದನೆನಲು ಶಿವ ಎನುತ ಬಸವಳಿದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರ್ಮರಾಯನೆ, ಕುಮಾರ ಕಂಠೀರವನಾದ ಅಭಿಮನ್ಯು ಯುದ್ಧ ರಂಗದಲ್ಲಿ ಎಲ್ಲೆಡೆ ಹರಿದಾಡಿ ಅತ್ಯಂತ ಉತ್ಸಾಹದಿಂದ ಶತ್ರುಗಳನ್ನು ಸಂಹರಿಸಿ, ದುರ್ಯೋಧನನ ಮಕ್ಕಳೆಲ್ಲರನ್ನೂ ಯಮರಾಯನ ಪಟ್ಟಣಕ್ಕೆ ಕಳುಹಿಸಿ ತಾನು ಇಂದ್ರನ ಸಿಂಹಾಸನವನ್ನೇರಲು ಅವಸರಪಟ್ಟು ದೇವಲೋಕಕ್ಕೆ ನಡೆದನು” ಎಂದು ದೂತರು ಹೇಳಲು ಧರ್ಮರಾಯನು ಶಿವಶಿವಾ ಎನ್ನುತ್ತ ಬಸವಳಿದ.
ಮೂಲ ...{Loading}...
ಅವನಿಪಾಲ ಕುಮಾರ ಕಂಠೀ
ರವನು ರಣದಲಿ ಬೀದಿವರಿದು
ತ್ಸವದಲಹಿತರನಿರಿದು ಕೌರವ ರಾಯ ನಂದನರ
ಜವನ ನಗರಿಗೆ ಕಳುಹಿ ತಾ ವಾ
ಸವನ ಸಿಂಹಾಸನವನಡರುವ
ತವಕದಲಿ ಜಾರಿದನೆನಲು ಶಿವ ಎನುತ ಬಸವಳಿದ ॥3॥
೦೦೪ ಕುಲಿಶ ಹತಿಯಲಿ ...{Loading}...
ಕುಲಿಶ ಹತಿಯಲಿ ಕುಲ ಶಿಲೋಚ್ಚಯ
ವಿಳೆಗೆ ಕೆಡೆವಂದದಲಿ ನಿಜಸುತ
ನಳಿದ ವಾರ್ತಾ ವಚನದುಪಟಳಕವನಿಪಾಲಕನು
ಮಲಗಿದನು ಮೈಮರೆದು ಮಹಿ ಮಂ
ಡಳಿಕರೊಳು ಗುಜುಗುಜಿನೊಳಿರೆ ಕಳ
ವಳಿಕೆ ಮೊಳೆತುದು ಕಟಕದಲಿ ದುಮ್ಮಾನಮಯವಾಯ್ತು ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದ್ರನ ವಜ್ರಾಯುಧದ ಏಟಿನಿಂದ ಕುಲಪರ್ವತವು ಭೂಮಿಯ ಮೇಲೆ ಬೀಳುವ ಹಾಗೆ ತನ್ನ ಮಗನು ಮರಣ ಹೊಂದಿದನೆಂಬ ಸುದ್ದಿಯ ಆಘಾತದಿಂದ ಧರ್ಮರಾಯನು ಮೂರ್ಛೆ ಹೋಗಿ ಮಲಗಿದನು. ರಾಜರುಗಳು ಗುಜು ಗುಜು ಮಾತಿನಲ್ಲಿರಲು ಕಳವಳ ಪ್ರಾರಂಭವಾಯಿತು. ಸೈನ್ಯದಲ್ಲಿ ದುಃಖ ತುಂಬಿತು.
ಪದಾರ್ಥ (ಕ.ಗ.ಪ)
ಕುಲಿಶ-ವಜ್ರಾಯುಧ, ಹತಿ-ಏಟು,
ಮೂಲ ...{Loading}...
ಕುಲಿಶ ಹತಿಯಲಿ ಕುಲ ಶಿಲೋಚ್ಚಯ
ವಿಳೆಗೆ ಕೆಡೆವಂದದಲಿ ನಿಜಸುತ
ನಳಿದ ವಾರ್ತಾ ವಚನದುಪಟಳಕವನಿಪಾಲಕನು
ಮಲಗಿದನು ಮೈಮರೆದು ಮಹಿ ಮಂ
ಡಳಿಕರೊಳು ಗುಜುಗುಜಿನೊಳಿರೆ ಕಳ
ವಳಿಕೆ ಮೊಳೆತುದು ಕಟಕದಲಿ ದುಮ್ಮಾನಮಯವಾಯ್ತು ॥4॥
೦೦೫ ಅರಮನೆಯ ಗಜಬಜದ ...{Loading}...
ಅರಮನೆಯ ಗಜಬಜದ ಹದನರಿ
ದರಸನಪಗತನೆಂದು ಪಾಳಯ
ದಿರುಳು ನಡುಗಿತು ತೊಡಗಿದವು ಕೈಸೂರೆ ಕೆಲಕಡೆಯ
ನೆರವಿ ಮಸಗಿತು ಕೆತ್ತುವಂಗಡಿ
ದುರುಳರಬ್ಬರಿಸಿದರು ಮುಸುಕಿನ
ಸುರಗಿ ಕೆತ್ತವು ಮಂದಿ ದಳವುಳವಾಯ್ತು ನಿಮಿಷದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಮನೆಯಲ್ಲಿನ ಗಲಿಬಿಲಿಯನ್ನು ತಿಳಿದು, ರಾಜನು ಮರಣ ಹೊಂದಿದ್ದಾನೆಂದು ಭಾವಿಸಿ ತಿಳಿದು ರಾತ್ರಿಯಲ್ಲಿ ರಣರಂಗದ ಬಿಡಾರದಲ್ಲಿದ್ದವರೆಲ್ಲ ನಡುಗಿದರು. ಕೆಲವರು ದೊಂಬಿ ಮಾಡಿ ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು ಹೋಗಲಾರಂಭಿಸಿದರು. ಜನರು ಗುಂಪು ಗುಂಪಾಗಿ ಹೊರಟು ಅಂಗಡಿಗಳನ್ನು ದೋಚುತ್ತಾ, ಆರ್ಭಟಿಸಲಾರಂಭಿಸಿದರು. ಒರೆಯೊಳಗಿದ್ದ ಕತ್ತಿಗಳು ಸಿಕ್ಕವರನ್ನು ಕತ್ತರಿಸಲು ಪ್ರಾರಂಭಿಸಿದುವು. ಜನರನ್ನು ನಿಯಂತ್ರಿಸಲಾಗಲಿಲ್ಲ. ಒಂದೆ ನಿಮಿಷದಲ್ಲಿ ಮಂದಿಯಲ್ಲಿ ಕೋಲಾಹಲವಾಯಿತು.
ಪದಾರ್ಥ (ಕ.ಗ.ಪ)
ಅಪಗತ-ಸತ್ತನು,
ಕೆತ್ತು-ಸುಲಿಗೆ, ಕತ್ತರಿಸು
ಮೂಲ ...{Loading}...
ಅರಮನೆಯ ಗಜಬಜದ ಹದನರಿ
ದರಸನಪಗತನೆಂದು ಪಾಳಯ
ದಿರುಳು ನಡುಗಿತು ತೊಡಗಿದವು ಕೈಸೂರೆ ಕೆಲಕಡೆಯ
ನೆರವಿ ಮಸಗಿತು ಕೆತ್ತುವಂಗಡಿ
ದುರುಳರಬ್ಬರಿಸಿದರು ಮುಸುಕಿನ
ಸುರಗಿ ಕೆತ್ತವು ಮಂದಿ ದಳವುಳವಾಯ್ತು ನಿಮಿಷದಲಿ ॥5॥
೦೦೬ ಹೊಳಲು ತಲೆಕೆಳಕಾಯ್ತು ...{Loading}...
ಹೊಳಲು ತಲೆಕೆಳಕಾಯ್ತು ಹುಯ್ಯಲು
ತಳಿತುದೊಳತೋಟಿಯಲಿ ಕೆತ್ತವು
ನಿಳಯ ನಿಳಯ ಕವಾಟವುದ್ರೇಕಿಗಳ ಮಯವಾಯ್ತು
ಎಲೆಲೆ ಕೆಟ್ಟುದು ಕಟಕವೆಂದು
ಮ್ಮಳಿಸಿದರು ಸಚಿವರು ಮಹೀಪತಿ
ಯುಳಿವನರಿಯಲು ನಾಸಿಕದಲಾರೈದರುಸುರುಗಳ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಗರವೇ ತಲೆಕೆಳಗಾಯ್ತು (ಕೋಲಾಹಲವುಂಟಾಯ್ತು) ಅಂತಃಕಲಹದಿಂದ ಗಲಭೆಗಳು ಪಾಳಯವನ್ನು ಕವಿದವು. ಮನೆಮನೆಗಳ ಚಿಲಕ ಬೀಗಗಳನ್ನು ಒಡೆದರು. ಎಲ್ಲೆಲ್ಲೂ ಗಲಭೆ ಕೋರರೇ ತುಂಬಿದ್ದರು. ಅಯ್ಯೋ ಸೈನ್ಯ ವ್ಯವಸ್ಥೆ ಕೆಟ್ಟು ಹೋಯಿತೆಂದು ಸಚಿವರು ದುಃಖಿಸಿದರು. ಧರ್ಮರಾಯನು ಬದುಕಿದ್ದಾನೆಯೇ ಎಂದು ತಿಳಿಯಲು ಅವನ ಮೂಗಿನಿಂದ ಉಸಿರು ಹೋಗಿ ಬರುವುದನ್ನು ಪರೀಕ್ಷಿಸಿದರು.
ಪದಾರ್ಥ (ಕ.ಗ.ಪ)
ಹೊಳಲು-ನಗರ, ಕವಾಟ-ಚಿಲಕ, ಉದ್ರೇಕಿಗಳು-ಗಲಭೆಕೋರರು
ಮೂಲ ...{Loading}...
ಹೊಳಲು ತಲೆಕೆಳಕಾಯ್ತು ಹುಯ್ಯಲು
ತಳಿತುದೊಳತೋಟಿಯಲಿ ಕೆತ್ತವು
ನಿಳಯ ನಿಳಯ ಕವಾಟವುದ್ರೇಕಿಗಳ ಮಯವಾಯ್ತು
ಎಲೆಲೆ ಕೆಟ್ಟುದು ಕಟಕವೆಂದು
ಮ್ಮಳಿಸಿದರು ಸಚಿವರು ಮಹೀಪತಿ
ಯುಳಿವನರಿಯಲು ನಾಸಿಕದಲಾರೈದರುಸುರುಗಳ ॥6॥
೦೦೭ ಉರಿಯ ಚೂಣಿಯಲುಸುರು ...{Loading}...
ಉರಿಯ ಚೂಣಿಯಲುಸುರು ಮೂಗಿನ
ಲುರವಣಿಸುತಿದೆ ಧರಣಿಪತಿ ಸು
ಸ್ಥಿರನು ಹೊಯ್ ಹೊಯ್ ಹೊಳಲ ಬೆದರಿಸಿ ಸುಲಿವ ಬಣಗುಗಳ
ಹರಿಯೆನಲು ಹೊರವಂಟು ಹೊಯ್ದರು
ತುರಗ ಗಜಘಟೆ ಬೀದಿವರಿದವು
ನೆರವಿದೊಳಸಿನ ಮನ್ನೆಯರ ಸೆಣಸಿದರು ಶೂಲದಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಸಿಯುಸಿರು ಧರ್ಮರಾಯನ ಮೂಗಿನಲ್ಲಿ ನುಗ್ಗಿ ಬರುತ್ತಿದೆ. ಧರ್ಮರಾಯನು ಸ್ಥಿರವಾಗಿದ್ದಾನೆ. ಹೊಡೆ, ನಗರವನ್ನು ಬೆದರಿಸಿ ಸುಲಿಗೆ ಮಾಡುತ್ತಿರುವ ಅಯೋಗ್ಯರನ್ನು ತುಂಡು ಮಾಡಿ ಎನ್ನಲು (ಸೈನಿಕರು) ಹೊರಟು ಅವರುಗಳನ್ನು ಹೊಡೆದರು. ಕುದುರೆ ಆನೆಗಳ ಸೈನ್ಯ ಬೀದಿಯಲ್ಲಿ ಓಡಾಡಿದವು. ಕ್ಷೋಭೆಗೆ ಕಾರಣರಾದವರನ್ನು ಶೂಲದಲ್ಲಿ ಚುಚ್ಚಿದರು.
ಪದಾರ್ಥ (ಕ.ಗ.ಪ)
ನೆರವಿದೊಳಸು-ಕ್ಷೋಭೆ
ಮೂಲ ...{Loading}...
ಉರಿಯ ಚೂಣಿಯಲುಸುರು ಮೂಗಿನ
ಲುರವಣಿಸುತಿದೆ ಧರಣಿಪತಿ ಸು
ಸ್ಥಿರನು ಹೊಯ್ ಹೊಯ್ ಹೊಳಲ ಬೆದರಿಸಿ ಸುಲಿವ ಬಣಗುಗಳ
ಹರಿಯೆನಲು ಹೊರವಂಟು ಹೊಯ್ದರು
ತುರಗ ಗಜಘಟೆ ಬೀದಿವರಿದವು
ನೆರವಿದೊಳಸಿನ ಮನ್ನೆಯರ ಸೆಣಸಿದರು ಶೂಲದಲಿ ॥7॥
೦೦೮ ಹೊಳಲ ಗಜಬಜವಡಗಿತರಮನೆ ...{Loading}...
ಹೊಳಲ ಗಜಬಜವಡಗಿತರಮನೆ
ಯೊಳಗೆ ಪಸರಿಸಿತತುಳ ಶೋಕದ
ಜಲಧಿ ಭೂಪಾಲಕನ ಸೈರಣೆಗಾಯ್ತು ಮಹನವಮಿ
ಒಳಗುರಿವ ಹಸಿಮರದ ತುದಿಯಲಿ
ಜಲವೊಗುವವೊಲು ಹೃದಯ ಶಿಖಿಯುರೆ
ತಳಿತು ಲೋಚನವಾರಿ ತುಳುಕಿತು ಪವನಜಾದಿಗಳ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಗರದಲ್ಲಿ ಉಂಟಾದ ಕ್ಷೋಭೆ ಅಡಗಿತು. ಅರಮನೆಯಲ್ಲಿ ಮಿತಿಯಿಲ್ಲದಷ್ಟು ದುಃಖ ಆವರಿಸಿತು. ಧರ್ಮರಾಯನ ತಾಳ್ಮೆ ನಾಶವಾಯಿತು. ಒಲೆಯ ಒಳಗೆ ಉರಿಯುವ ಹಸಿಯಾದ ಮರದ ಹೊರತುದಿಯಲ್ಲಿ ನೀರು ಒಸರುವಂತೆ ಭೀಮಾದಿಗಳ ಹೃದಯದ ಅಗ್ನಿಯ ತಾಪ ಹೆಚ್ಚಾಗಿ ಕಣ್ಣೀರು ತುಳುಕಿತು.
ಪದಾರ್ಥ (ಕ.ಗ.ಪ)
ಮಹನವಮಿ-ಅಂತ್ಯ, ನಾಶ , ಒಗುವವೊಲು-ಚಿಮ್ಮುವಂತೆ, ಲೋಚನವಾರಿ-ಕಣ್ಣೀರು,
ಮೂಲ ...{Loading}...
ಹೊಳಲ ಗಜಬಜವಡಗಿತರಮನೆ
ಯೊಳಗೆ ಪಸರಿಸಿತತುಳ ಶೋಕದ
ಜಲಧಿ ಭೂಪಾಲಕನ ಸೈರಣೆಗಾಯ್ತು ಮಹನವಮಿ
ಒಳಗುರಿವ ಹಸಿಮರದ ತುದಿಯಲಿ
ಜಲವೊಗುವವೊಲು ಹೃದಯ ಶಿಖಿಯುರೆ
ತಳಿತು ಲೋಚನವಾರಿ ತುಳುಕಿತು ಪವನಜಾದಿಗಳ ॥8॥
೦೦೯ ಮರೆವುತೆಚ್ಚರುತವನಿಪತಿ ಕರೆ ...{Loading}...
ಮರೆವುತೆಚ್ಚರುತವನಿಪತಿ ಕರೆ
ತರುಣನಾವೆಡೆ ರಾಯಗಜ ಕೇ
ಸರಿಯದಾವೆಡೆ ಕಂದ ಬಾಯೆನುತಪ್ಪಿದನು ಬಯಲ
ಹೊರಳಿದನು ಹುಡಿಯೊಳಗೆ ಸಲೆ ಕಾ
ತರಸಿದನು ಮೋಹಾಂಧಕಾರಕೆ
ಕರಣವನು ಕೈಸೂರೆಗೊಟ್ಟನು ನಿಜದೊಳೆಚ್ಚರದೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಚ್ಚರಗೊಳುತ್ತ, ಮೂರ್ಛೆ ಹೋಗುತ್ತಿದ್ದ ಧರ್ಮರಾಯನು ಕರೆ, ತರುಣನೆಲ್ಲಿ? ಅರಿರಾಜಕರಿಗಳಿಗೆ ಸಿಂಹದಂತಿದ್ದ ಅಭಿಮನ್ಯು ಎಲ್ಲಿ ? ಅಭಿಮನ್ಯು ಬಾ, ಕಂದ ಎಂದು ಬಯಲನ್ನೆ ಅಪ್ಪಿಕೊಂಡನು. ನೆಲದ ಧೂಳಿನಲ್ಲಿ ಬಿದ್ದು ಹೊರಳಾಡಿದನು; ಕಾತರವನ್ನು ಹೊಂದಿದನು; ಮೋಹದಿಂದ ಅವನ ಕಣ್ಣುಗಳಿಗೆ ಕತ್ತಲು ಕವಿಯಿತು. ಅವನು ಎಲ್ಲ ಇಂದ್ರಿಯಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಂಡನು.
ಮೂಲ ...{Loading}...
ಮರೆವುತೆಚ್ಚರುತವನಿಪತಿ ಕರೆ
ತರುಣನಾವೆಡೆ ರಾಯಗಜ ಕೇ
ಸರಿಯದಾವೆಡೆ ಕಂದ ಬಾಯೆನುತಪ್ಪಿದನು ಬಯಲ
ಹೊರಳಿದನು ಹುಡಿಯೊಳಗೆ ಸಲೆ ಕಾ
ತರಸಿದನು ಮೋಹಾಂಧಕಾರಕೆ
ಕರಣವನು ಕೈಸೂರೆಗೊಟ್ಟನು ನಿಜದೊಳೆಚ್ಚರದೆ ॥9॥
೦೧೦ ಬನ್ದು ಫಲುಗುಣನೆನ್ನ ...{Loading}...
ಬಂದು ಫಲುಗುಣನೆನ್ನ ಮೋಹದ
ಕಂದನಾವೆಡೆಯೆಂದಡಾನೇ
ನೆಂದು ಮಾರುತ್ತರವ ಕೊಡುವೆನು ವೈರಿ ನಾಯಕರು
ಕೊಂದರೆಂಬೆನೊ ಮೇಣು ನಾನೇ
ಕೊಂದೆನೆಂಬೆನೊ ಶಿವ ಮಹಾ ದೇ
ವೆಂದು ಪುತ್ರಸ್ನೇಹ ಸೌರಂಭದಲಿ ಹಲುಬಿದನು ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಬಂದು ತನ್ನ ಮುದ್ದಿನ ಮಗನೆಲ್ಲಿ ? ಎಂದು ಪ್ರಶ್ನಿಸಿದರೆ ನಾನು ಏನೆಂದು ಉತ್ತರವನ್ನು ಕೊಡಲಿ ? ಶತ್ರುನಾಯಕರು ಕೊಂದರೆಂದು ಹೇಳಲೇ ಅಥವಾ ನಾನೇ ಕೊಂದೆನೆಂದು ಹೇಳಲೆ ? ಶಿವ ಮಹಾದೇವ ಎಂದು ಪುತ್ರ ಸ್ನೇಹ ಕಾತರನಾಗಿ ಹಲುಬಿದನು.
ಮೂಲ ...{Loading}...
ಬಂದು ಫಲುಗುಣನೆನ್ನ ಮೋಹದ
ಕಂದನಾವೆಡೆಯೆಂದಡಾನೇ
ನೆಂದು ಮಾರುತ್ತರವ ಕೊಡುವೆನು ವೈರಿ ನಾಯಕರು
ಕೊಂದರೆಂಬೆನೊ ಮೇಣು ನಾನೇ
ಕೊಂದೆನೆಂಬೆನೊ ಶಿವ ಮಹಾ ದೇ
ವೆಂದು ಪುತ್ರಸ್ನೇಹ ಸೌರಂಭದಲಿ ಹಲುಬಿದನು ॥10॥
೦೧೧ ಅರಮನೆಯ ಗಜಬಜವ ...{Loading}...
ಅರಮನೆಯ ಗಜಬಜವ ಕೇಳಿದು
ದೊರೆಯೊಳಾವವನಳಿದನಕಟೆಂ
ದರಸಿಯರು ಬೆಸಗೊಳಲು ದ್ರೌಪದಿಗರುಹಿದರು ಹದನ
ಉರಿವ ಡಾವರವೆಳೆಯ ಬಾಳೆಯ
ಬೆರಸುವಂತಿರೆ ರಾಯ ಕುವರನ
ಮರಣ ವಾರ್ತೆಯನಾ ಸುಭದ್ರಾ ದೇವಿ ಕೇಳಿದಳು ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಮನೆಯ ಗಜಿಬಿಜಿಯನ್ನು ಕೇಳಿದ ದ್ರೌಪದಿಯು ರಾಜರುಗಳಲ್ಲಿ ಸತ್ತವನು ಯಾರೆಂದು ಕೇಳಲು ದ್ರೌಪದಿಗೆ ಅಭಿಮನ್ಯು ಮಡಿದ ವಿಚಾರವನ್ನು ತಿಳಿಸಿದರು. ಉರಿಯ ಬೇಗೆಯು ಬಾಳೆಯ (ಮರವನ್ನು) ಸೇರಿದಂತೆ ರಾಜಕುಮಾರನಾದ ಅಭಿಮನ್ಯುವಿನ ಮರಣ ವಾರ್ತೆಯನ್ನು ಸುಭದ್ರಾದೇವಿಯು ಕೇಳಿದಳು.
ಮೂಲ ...{Loading}...
ಅರಮನೆಯ ಗಜಬಜವ ಕೇಳಿದು
ದೊರೆಯೊಳಾವವನಳಿದನಕಟೆಂ
ದರಸಿಯರು ಬೆಸಗೊಳಲು ದ್ರೌಪದಿಗರುಹಿದರು ಹದನ
ಉರಿವ ಡಾವರವೆಳೆಯ ಬಾಳೆಯ
ಬೆರಸುವಂತಿರೆ ರಾಯ ಕುವರನ
ಮರಣ ವಾರ್ತೆಯನಾ ಸುಭದ್ರಾ ದೇವಿ ಕೇಳಿದಳು ॥11॥
೦೧೨ ತೆಳುವಸುರ ಬಿರುವೊಯ್ಲ ...{Loading}...
ತೆಳುವಸುರ ಬಿರುವೊಯ್ಲ ಮುರಜದ
ಬಳಲ ಮುಡಿಯರಳುಗಳ ಮುತ್ತಿಗೆ
ಯಳಿ ರವದ ಭಾರಣೆಯ ಹಾಹಾರವದ ಕಾಯದಲಿ
ಲಲನೆ ಬರೆ ಚೆಲುವಾಯ್ತು ಧರ್ಮಜ
ನಳಲು ಮಿಗೆ ಕೊಂಡಿರಲು ನಾಟ್ಯದ
ಕಳನ ಗೆಲದಿರಳೆನಲು ಬಂದಳು ದ್ರೌಪದಾದೇವಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೆಳುವಾದ ಉದರವನ್ನು ಜೋರಾಗಿ ಬಡಿದುಕೊಳ್ಳುತ್ತಿದ್ದ ದನಿ, ಬಿಚ್ಚಿ ಹರಡಿದ ಹೂವಿನಂತಹ ಕೇಶರಾಶಿಗೆ ಮುತ್ತಿರುವ ದುಂಬಿಗಳ ಸದ್ದಿನ ಗಾಯನದ ಹಾಹಾಕಾರ ದನಿ, ಇವುಗಳಿಂದ ಇಡೀ ಶರೀರವೇ ಆಕ್ರಂದಿಸುತ್ತಿದೆ ಎನಿಸುತ್ತಿದ್ದ ದ್ರೌಪದಿಯು ಬರಲು, ಧರ್ಮರಾಯನ ದುಃಖ ಹೆಚ್ಚಾಯಿತು. ಧರ್ಮರಾಯನ ಹೆಚ್ಚಿದ ದುಃಖವನ್ನು ಸಂತೈಸಲು ನಾಟ್ಯದ ರಂಗಸ್ಥಳವನ್ನು ಗೆಲ್ಲದಿರುತ್ತಾಳೆಯೆ ಎನ್ನುವಂತೆ ದ್ರೌಪದಿ ಬಂದಳು.
ಪದಾರ್ಥ (ಕ.ಗ.ಪ)
ತೆಳುವಸುರ-ತೆಳ್ಳಗಿರುವ ಹೊಟ್ಟೆಯ, ಬಿರುವೊಯ್ಲ-ಕಠೋರವಾದ ಮಾನಸಿಕ ಆಘಾತದಿಂದ, ಮುಡಿಯರಳು-ಬಿಚ್ಚಿದ ಕೂದಲು ಹಾಹಾರವ-ದುಃಖದ ಧ್ವನಿ, ಮುರಜ -ಮೃದಂಗ, ಮದ್ದಳೆ
ಪಾಠಾನ್ತರ (ಕ.ಗ.ಪ)
‘ಮುರಚಿದ’ ಎಂಬ ಶಬ್ದಕ್ಕೆ ಈ ವಾಕ್ಯದಲ್ಲಿ ಅರ್ಥ ಸುಸಂಬದ್ಧವಾಗಿಲ್ಲ. ಇದಕ್ಕೆ ‘ಮುರಜದ’ ಎಂಬ ಒಂದು ಪಾಠಾಂತರವಿದೆ. (ಎನ್. ಅನಂತರಂಗಾಚಾರ್ ಅವರು ಸಂಪಾದಿಸಿರುವ ಮೈಸೂರು ವಿ.ವಿ. ಪ್ರಕಟಿಸಿರುವ ದ್ರೋಣ ಪರ್ವ) ಅದನ್ನು ಸ್ವೀಕರಿಸಿ ಅರ್ಥ ನೀಡಿದೆ.
ಮೂಲ ...{Loading}...
ತೆಳುವಸುರ ಬಿರುವೊಯ್ಲ ಮುರಜದ
ಬಳಲ ಮುಡಿಯರಳುಗಳ ಮುತ್ತಿಗೆ
ಯಳಿ ರವದ ಭಾರಣೆಯ ಹಾಹಾರವದ ಕಾಯದಲಿ
ಲಲನೆ ಬರೆ ಚೆಲುವಾಯ್ತು ಧರ್ಮಜ
ನಳಲು ಮಿಗೆ ಕೊಂಡಿರಲು ನಾಟ್ಯದ
ಕಳನ ಗೆಲದಿರಳೆನಲು ಬಂದಳು ದ್ರೌಪದಾದೇವಿ ॥12॥
೦೧೩ ಅಳಲ ಶಿಖಿಯಲಿ ...{Loading}...
ಅಳಲ ಶಿಖಿಯಲಿ ಬಾಡಿದಾನನ
ಜಲರುಹದ ಕಡುವೇದನೆಯ ಕಳ
ಕಳದ ಹಾಹಾ ರವದ ರೌದ್ರೆ ಸುಭದ್ರೆ ನಡೆತಂದು
ನೆಲಕೆ ಧೊಪ್ಪನೆ ಕೆಡೆದು ಸಭೆಯಲಿ
ಹಲುಬಿದಳು ಕೊಳುಗುಳಕೆ ಕಂದನ
ಕಳುಹಿದವರಿಗೆ ಸಂದುದೇ ಪರಿಣಾಮವೆಂದೆನುತ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಃಖವೆಂಬ ಬೆಂಕಿಯಿಂದ ಬಾಡಿದ ಮುಖ ಕಮಲದ, ಅಪಾರ ವೇದನೆಯಿಂದ ‘ಹಾ ಹಾ’ ಎಂದು ಕೂಗುತ್ತಿದ್ದ, ಕೋಪದಿಂದ ಕೂಡಿದ್ದ ಸುಭದ್ರೆಯು ಸಭೆಗೆ ಬಂದು ನೆಲದ ಮೇಲೆ ದಢಾರನೆ ಬಿದ್ದು ಒಂದೇ ಸಮನೆ ಪ್ರಲಾಪಿಸಿದಳು. “ಯುದ್ಧಕ್ಕೆ ನನ್ನ ಮಗನನ್ನು ಕಳುಹಿಸಿದವರಿಗೆ ಈ ದಿನ ತೃಪ್ತಿಯಾಯಿತೆ” ಎಂದು ನುಡಿದಳು.
ಮೂಲ ...{Loading}...
ಅಳಲ ಶಿಖಿಯಲಿ ಬಾಡಿದಾನನ
ಜಲರುಹದ ಕಡುವೇದನೆಯ ಕಳ
ಕಳದ ಹಾಹಾ ರವದ ರೌದ್ರೆ ಸುಭದ್ರೆ ನಡೆತಂದು
ನೆಲಕೆ ಧೊಪ್ಪನೆ ಕೆಡೆದು ಸಭೆಯಲಿ
ಹಲುಬಿದಳು ಕೊಳುಗುಳಕೆ ಕಂದನ
ಕಳುಹಿದವರಿಗೆ ಸಂದುದೇ ಪರಿಣಾಮವೆಂದೆನುತ ॥13॥
೦೧೪ ಎಲೆ ಯುಧಿಷ್ಠಿರದೇವ ...{Loading}...
ಎಲೆ ಯುಧಿಷ್ಠಿರದೇವ ಸಾಲದೆ
ಕೆಲನ ಮೆಚ್ಚಿಸುವಳಲು ಲೋಚನ
ಜಲವ ತೊಡೆಯೈ ಭೀಮ ಬಲ್ಲೆನು ನಿಮ್ಮ ನೆನಹುಗಳ
ಅಳಲದಿರಿ ಸಹದೇವ ನಕುಳರು
ನಿಲಿಸಿರೈ ನಿಮ್ಮಿಷ್ಟ ಸಿದ್ಧಿಯ
ಬೆಳಸು ಫಲವಾಯ್ತೇಕೆ ನೋವಿನ್ನೆಂದಳಿಂದುಮುಖಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಭದ್ರೆಯು ದುಃಖಿಸುತ್ತಾ, “ಎಲೈ ಧರ್ಮರಾಯನೆ, ಬೇರೆಯವರನ್ನು ಮೆಚ್ಚಿಸುವ ತೋರಿಕೆಯ ದುಃಖ ಸಾಕು. ಭೀಮನೆ ಕಣ್ಣೀರನ್ನು ಒರೆಸಿಕೋ, ನಿಮ್ಮ ಆಲೋಚನೆಗಳನ್ನು ನಾನು ತಿಳಿದಿದ್ದೇನೆ. ನಕುಲ, ಸಹದೇವರೆ ದುಃಖಿಸಬೇಡಿ, ನಿಲ್ಲಿಸಿ. ನಿಮ್ಮ ಇಷ್ಟಾರ್ಥ ಸಿದ್ಧಸಿದೆಯಲ್ಲವೆ? ಇನ್ನು ನಿಮಗೆ ನೋವೇಕೆ " ಎಂದು ಸುಭದ್ರೆ ನುಡಿದಳು.
ಮೂಲ ...{Loading}...
ಎಲೆ ಯುಧಿಷ್ಠಿರದೇವ ಸಾಲದೆ
ಕೆಲನ ಮೆಚ್ಚಿಸುವಳಲು ಲೋಚನ
ಜಲವ ತೊಡೆಯೈ ಭೀಮ ಬಲ್ಲೆನು ನಿಮ್ಮ ನೆನಹುಗಳ
ಅಳಲದಿರಿ ಸಹದೇವ ನಕುಳರು
ನಿಲಿಸಿರೈ ನಿಮ್ಮಿಷ್ಟ ಸಿದ್ಧಿಯ
ಬೆಳಸು ಫಲವಾಯ್ತೇಕೆ ನೋವಿನ್ನೆಂದಳಿಂದುಮುಖಿ ॥14॥
೦೧೫ ಮಗನು ಪಞ್ಚದ್ರೌಪದೇಯರ ...{Loading}...
ಮಗನು ಪಂಚದ್ರೌಪದೇಯರ
ಬಗೆಯನೆನ್ನವನಿರಲು ರಾಜ್ಯವ
ಹೊಗಿಸಲನುವಿಲ್ಲೆಂದು ಕಂದನ ರಣಕೆ ನೂಕಿದಿರಿ
ಬಗೆಯೊಲವು ಫಲವಾಯ್ತಲಾ ಕಾ
ಳೆಗವ ಗೆಲಿದೈವರು ಕುಮಾರರ
ಹೊಗಿಸಿರೈ ಗಜಪುರವನೆಂದು ಸುಭದ್ರೆ ಹಲುಬಿದಳು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
15.” ನನ್ನ ಮಗ ಅಭಿಮನ್ಯುವು ದ್ರೌಪದಿಯ ಐದು ಜನ ಮಕ್ಕಳನ್ನು ಲೆಕ್ಕಿಸುವುದಿಲ್ಲ. ನನ್ನ ಮಗನು ಬದುಕಿದ್ದರೆ ಈ ಐವರು ದ್ರೌಪದೀ ಕುಮಾರರಿಗೆ ರಾಜ್ಯದಲ್ಲಿ ಸ್ಥಾನವಿರುವುದಿಲ್ಲವೆಂದು ನನ್ನ ಕಂದನನ್ನು ಯುದ್ಧರಂಗಕ್ಕೆ ನೂಕಿದಿರಿ. ನಿಮ್ಮ ಮನಸ್ಸಿನ ಆಸೆ ಫಲಿಸಿತಲ್ಲ್ಲವೇ. ಯುದ್ಧದಲ್ಲಿ ಗೆದ್ದು ನಿಮ್ಮ ಐದೂ ಜನ ಮಕ್ಕಳನ್ನು ಹಸ್ತಿನಾವತಿಯಲ್ಲಿ ಪ್ರತಿಷ್ಠಾಪಿಸಿ" ಎಂದು ಸುಭದ್ರೆ ಹಲುಬಿದಳು.
ಪಾಠಾನ್ತರ (ಕ.ಗ.ಪ)
ಗೆಲಿದೈವರು ಕುಮಾರರು ಹೊಗಿಸಿರೈ ಗಜಪುರವ….. ಎಂಬಲ್ಲಿನ ಕುಮಾರರು ಎಂಬುದು ವ್ಯಾಕರಣದ ಹಾಗೂ ಅರ್ಥದ ದೃಷ್ಟಿಯಿಂದ ಸರಿಯಾಗುವುದಿಲ್ಲ. ‘ಕುಮಾರರು ಹೊಗಿಸಿರೈ’ ಎಂಬ ಪ್ರಥಮಾ ವಿಭಕ್ತಿ ಪ್ರತ್ಯಯದ ಬದಲಾಗಿ, ಷಷ್ಠೀ ವಿಭಕ್ತಿಯಲ್ಲಿ ಕುಮಾರರ ಹೊಗಿಸಿರೈ ಎಂದು ಹೇಳಿದರೆ ಸರಿಯಾಗುತ್ತದೆ. ಆದರೆ ಇದಕ್ಕೆ ಯಾವುದೇ ಪಾಠಾಂತರವೂ ಸೂಚಿತವಾಗಿಲ್ಲ. ಇದನ್ನು ಊಹಾ ಪಾಠವೆಂದು ಪರಿಗಣಿಸಬಹುದು.
ಮೂಲ ...{Loading}...
ಮಗನು ಪಂಚದ್ರೌಪದೇಯರ
ಬಗೆಯನೆನ್ನವನಿರಲು ರಾಜ್ಯವ
ಹೊಗಿಸಲನುವಿಲ್ಲೆಂದು ಕಂದನ ರಣಕೆ ನೂಕಿದಿರಿ
ಬಗೆಯೊಲವು ಫಲವಾಯ್ತಲಾ ಕಾ
ಳೆಗವ ಗೆಲಿದೈವರು ಕುಮಾರರ
ಹೊಗಿಸಿರೈ ಗಜಪುರವನೆಂದು ಸುಭದ್ರೆ ಹಲುಬಿದಳು ॥15॥
೦೧೬ ಅಕಟ ಮಗನೇ ...{Loading}...
ಅಕಟ ಮಗನೇ ಬಹಳ ಪಾಪಾ
ತ್ಮಕರ ಬಸುರಲಿ ಬಹುದರಿಂದೀ
ನಕುಳನುದರದಲಾಗಲೀ ಧರ್ಮಜನ ಜಠರದಲಿ
ಸುಕೃತಿ ನೀನುದಯಿಸಲು ಬಹು ಕಂ
ಟಕರು ಬಳಿಕಾರುಂಟು ಕಡುಪಾ
ತಕಿಯಲಾ ನಿಮ್ಮಯ್ಯನೆಂದಳು ಫಲುಗುಣನ ರಾಣಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ ಮಗನೆ, ನೀನು ಬಹಳ ಪಾಪವನ್ನು ಮಾಡಿದವರ ಹೊಟ್ಟೆಯಲ್ಲಿ ಹುಟ್ಟುವುದಕ್ಕಿಂತ ನಕುಲ, ಅಥವಾ ಧರ್ಮ ರಾಜನ ಮಗನಾಗಿ ಪುಣ್ಯವಂತನಾದ ನೀನು ಹುಟ್ಟಿದ್ದರೆ ನಿನಗೆ ಕಂಟಕರಾದವರು ಯಾರಿರುತ್ತಿದ್ದರು. ನಿಮ್ಮ ತಂದೆ ಮಹಾ ಪಾತಕಿಯಲ್ಲವೇ” ಎಂದಳು, ಅರ್ಜುನನ ರಾಣಿ.
ಮೂಲ ...{Loading}...
ಅಕಟ ಮಗನೇ ಬಹಳ ಪಾಪಾ
ತ್ಮಕರ ಬಸುರಲಿ ಬಹುದರಿಂದೀ
ನಕುಳನುದರದಲಾಗಲೀ ಧರ್ಮಜನ ಜಠರದಲಿ
ಸುಕೃತಿ ನೀನುದಯಿಸಲು ಬಹು ಕಂ
ಟಕರು ಬಳಿಕಾರುಂಟು ಕಡುಪಾ
ತಕಿಯಲಾ ನಿಮ್ಮಯ್ಯನೆಂದಳು ಫಲುಗುಣನ ರಾಣಿ ॥16॥
೦೧೭ ಧುರವ ಹೊಗತಕ್ಕವನೆ ...{Loading}...
ಧುರವ ಹೊಗತಕ್ಕವನೆ ಚಿಕ್ಕವ
ನಿರಿಯಲಾಪನೆ ಬಹನೆ ಮರಳಿದು
ಧರೆಯ ವೈಭವಕಳುಪಿ ಕಳುಹಿದಿರೆನ್ನ ಕಂದನನು
ವರ ಯುಧಿಷ್ಠಿರ ಜನಪ ಲೋಕದ
ಕರುಣಿಯೆಂಬರು ಕುನ್ನಿಗಳು ಮರೆ
ಗೊರಳುಗೊಯ್ಕನನರಿಯರೆಂದಳು ಫಲುಗುಣನ ರಾಣಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
17." ಚಿಕ್ಕವನಾದ ಅಭಿಮನ್ಯುವು ರಣರಂಗವನ್ನು ಒಬ್ಬನೇ ಪ್ರವೇಶಿಸಲು ಅರ್ಹನೆ ? ಯುದ್ಧ ಮಾಡಲು ಶಕ್ತನೆ ? ರಣರಂಗದೊಳಗೆ ಹೋದ ಮೇಲೆ ಹಿಂದಿರುಗಿ ಬರುತ್ತಾನೆಯೆ ? ರಾಜ್ಯದ ವೈಭವಕ್ಕೆ ಆಶಿಸಿ ನನ್ನ ಮಗನನ್ನು ರಣರಂಗಕ್ಕೆ ನೂಕಿದಿರಿ. ಶ್ರೇಷ್ಠನಾದ ಧರ್ಮರಾಜನು ಲೋಕದಲ್ಲಿ ಮಹಾಕರುಣಿ ಎನ್ನುತ್ತಾರೆ ಕುನ್ನಿಗಳು. ಆದರೆ ಅವನು ಮೋಸದಿಂದ ಕೊರಳನ್ನು ಕೊಯ್ಯುವವನೆಂದು ಅವರಿಗೆ ತಿಳಿಯದು" ಎಂದು ಸುಭದ್ರೆ ಹೇಳಿದಳು.
ಪದಾರ್ಥ (ಕ.ಗ.ಪ)
ಮರೆಗೊರಳುಗೊಯ್ಕನು-ಇತರರಿಗೆ ತಿಳಿಯದ ಹಾಗೆ ಕೊರಳನ್ನು ಕತ್ತರಿಸುವವನು.
ಮೂಲ ...{Loading}...
ಧುರವ ಹೊಗತಕ್ಕವನೆ ಚಿಕ್ಕವ
ನಿರಿಯಲಾಪನೆ ಬಹನೆ ಮರಳಿದು
ಧರೆಯ ವೈಭವಕಳುಪಿ ಕಳುಹಿದಿರೆನ್ನ ಕಂದನನು
ವರ ಯುಧಿಷ್ಠಿರ ಜನಪ ಲೋಕದ
ಕರುಣಿಯೆಂಬರು ಕುನ್ನಿಗಳು ಮರೆ
ಗೊರಳುಗೊಯ್ಕನನರಿಯರೆಂದಳು ಫಲುಗುಣನ ರಾಣಿ ॥17॥
೦೧೮ ಶೋಕವಿಮ್ಮಡಿಸಿತ್ತು ಚಿತ್ತ ...{Loading}...
ಶೋಕವಿಮ್ಮಡಿಸಿತ್ತು ಚಿತ್ತ
ವ್ಯಾಕುಳತೆಯಾ ಸತಿಯ ನುಡಿಗಳ
ನೇಕ ಸಾಣೆಯ ಸರಳು ಮುರಿದವು ನೃಪನ ಹೃದಯದಲಿ
ಆ ಕುಮಾರ ವಿಯೋಗವಹ್ನಿಗೆ
ಯೀಕೆಯಳಲು ಸಮೀರನಾಯ್ತು ದಿ
ವೌಕಸರ ಸಮ್ಮೇಳವೇ ಪುರುಷಾರ್ಥ ತನಗೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನಿಗೆ ದುಃಖ ಇಮ್ಮಡಿಸಿತು. ಸುಭದ್ರೆಯ ದುಃಖದ ಮಾತುಗಳೆಂಬ ಹರಿತವಾದ ಬಾಣಗಳು ಧರ್ಮರಾಯನ ಹೃದಯದಲ್ಲಿ ನಾಟಿದವು. “ಅಭಿಮನ್ಯು ಕುಮಾರನ ಅಗಲಿಕೆಯ ಬೆಂಕಿಗೆ ಸುಭದ್ರೆಯ ಶೋಕವು ಗಾಳಿಯಂತಾಯ್ತು. ತನಗೆ ದೇವ ಲೋಕದವರೊಡನೆ ಬೆರೆಯುವುದೊಂದೇ ಉಳಿದಿರುವ ಪುರುಷಾರ್ಥ ಮಾರ್ಗ” ಎಂದು ಧರ್ಮರಾಯ ಹೇಳಿದ.
ಮೂಲ ...{Loading}...
ಶೋಕವಿಮ್ಮಡಿಸಿತ್ತು ಚಿತ್ತ
ವ್ಯಾಕುಳತೆಯಾ ಸತಿಯ ನುಡಿಗಳ
ನೇಕ ಸಾಣೆಯ ಸರಳು ಮುರಿದವು ನೃಪನ ಹೃದಯದಲಿ
ಆ ಕುಮಾರ ವಿಯೋಗವಹ್ನಿಗೆ
ಯೀಕೆಯಳಲು ಸಮೀರನಾಯ್ತು ದಿ
ವೌಕಸರ ಸಮ್ಮೇಳವೇ ಪುರುಷಾರ್ಥ ತನಗೆಂದ ॥18॥
೦೧೯ ಎಲೆ ವೃಕೋದರ ...{Loading}...
ಎಲೆ ವೃಕೋದರ ನಕುಳ ಸಾತ್ಯಕಿ
ನಿಲಿಸಿರೈ ತಂಗಿಯನು ತನ್ನಯ
ಕೊಲೆಗೆ ಮಗನಳಿವೊಂದು ಸಾಲದೆ ತನ್ನ ನುಡಿಯೇಕೆ
ನಳಿನನಾಭನ ಕರುಣದೊರತೆಯು
ಕಳಿದರಾರೇಗುವರು ಶಿವ ಶಿವ
ನೆಲನೊಳೆನ್ನವೊಲಾರು ಪಾಪಿಗಳೆಂದು ಬಿಸುಸುಯ್ದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೈ ಭೀಮ, ನಕುಳ, ಸಾತ್ಯಕಿಯರಾ, ತಂಗಿಯಂತಿರುವ ಸುಭದ್ರೆಯ ಮಾತುಗಳನ್ನು ನಿಲ್ಲಿಸಿ. ನನ್ನನ್ನು ಕೊಲ್ಲಲು ಅಭಿಮನ್ಯುವಿನ ಸಾವು ಒಂದೇ ಸಾಲದೆ; ಇನ್ನು ಅವಳ ಮಾತುಗಳೇಕೆ. ಕಮಲನಾಭನೆನಿಸಿದ ಕೃಷ್ಣನ ಕೃಪಾ ಚಿಲುಮೆ ನಿಂತು ಹೋದರೆ ಯಾರು ಶಕ್ತರಾಗುತ್ತಾರೆ. ಶಿವಶಿವ ನನ್ನಂತ ಪಾಪಿಗಳು ಇನ್ನು ಯಾರಿದ್ದಾರೆ ಎಂದು ನಿಟ್ಟುಸಿರು ಬಿಟ್ಟ.
ಮೂಲ ...{Loading}...
ಎಲೆ ವೃಕೋದರ ನಕುಳ ಸಾತ್ಯಕಿ
ನಿಲಿಸಿರೈ ತಂಗಿಯನು ತನ್ನಯ
ಕೊಲೆಗೆ ಮಗನಳಿವೊಂದು ಸಾಲದೆ ತನ್ನ ನುಡಿಯೇಕೆ
ನಳಿನನಾಭನ ಕರುಣದೊರತೆಯು
ಕಳಿದರಾರೇಗುವರು ಶಿವ ಶಿವ
ನೆಲನೊಳೆನ್ನವೊಲಾರು ಪಾಪಿಗಳೆಂದು ಬಿಸುಸುಯ್ದ ॥19॥
೦೨೦ ಧರಣಿಪನ ಶೋಕಾತಿಶಯವನು ...{Loading}...
ಧರಣಿಪನ ಶೋಕಾತಿಶಯವನು
ವರ ಸಮಾಧಿಯೊಳರಿದು ಮುನಿಪತಿ
ಕರುಣದಲಿ ಕಡುನೊಂದು ಸಕಲ ಜಗಕ್ಕನುಗ್ರಹವ
ಕರುಣಿಸುವವೊಲು ಕರುಣಿತನವನು
ಮೆರೆಯಲೋಸುಗವಿರದೆ ಗಗನೇ
ಚರದ ಗತಿಯಲಿ ಬಂದನೈ ದ್ವೈಪಾಯನವ್ರತಿಪ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಅತಿಶಯವಾದ ಶೋಕವನ್ನು, ಯೋಗದಿಂದ ತಿಳಿದ ವ್ಯಾಸಮುನಿಗಳು ಕರುಣೆಯಿಂದ, ನೊಂದವರಾಗಿ ಸಕಲ ಜಗತ್ತಿಗೂ ಕರುಣೆಯನ್ನು ಅನುಗ್ರಹಿಸುವಂತೆ, ಕಾರುಣ್ಯವನ್ನು ಬೀರಲು ತಡಮಾಡದೇ ಆಕಾಶಮಾರ್ಗದಲ್ಲಿ ಬಂದನು.
ಪದಾರ್ಥ (ಕ.ಗ.ಪ)
ಸಮಾಧಿ-ಧ್ಯಾನಸ್ಥಿತಿ . ಯೋಗಸ್ಥಿತಿ,
ವ್ರತಿಪ-ವ್ರತಗಳನ್ನಾಚರಿಸುವವನು,ಮುನಿ
ಮೂಲ ...{Loading}...
ಧರಣಿಪನ ಶೋಕಾತಿಶಯವನು
ವರ ಸಮಾಧಿಯೊಳರಿದು ಮುನಿಪತಿ
ಕರುಣದಲಿ ಕಡುನೊಂದು ಸಕಲ ಜಗಕ್ಕನುಗ್ರಹವ
ಕರುಣಿಸುವವೊಲು ಕರುಣಿತನವನು
ಮೆರೆಯಲೋಸುಗವಿರದೆ ಗಗನೇ
ಚರದ ಗತಿಯಲಿ ಬಂದನೈ ದ್ವೈಪಾಯನವ್ರತಿಪ ॥20॥
೦೨೧ ಬನ್ದು ವೇದವ್ಯಾಸಮುನಿ ...{Loading}...
ಬಂದು ವೇದವ್ಯಾಸಮುನಿ ನೃಪ
ಮಂದಿರವ ಹೊಗಲೆದ್ದು ಪದದಲಿ
ಸಂದಣಿಸಿ ಚಾಚಿದನು ಮಕುಟವನವನಿಪಾಲಕನು
ನೊಂದವರು ಸತ್ಸಂಗತಿಯಲಾ
ನಂದವಡೆವುದೆನುತ್ತ ಮುನಿಪತಿ
ಕಂದು ಮೋರೆಯ ಮಹಿಪತಿಯ ನೆಗಹಿದನು ಕರುಣದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದವ್ಯಾಸ ಮಹರ್ಷಿಯು ಧರ್ಮರಾಯನ ಅರಮನೆಯನ್ನು ಪ್ರವೇಶಿಸಿದ ತಕ್ಷಣ ಧರ್ಮರಾಯಾದಿಗಳು ದುಃಖ ತಪ್ತರಾಗಿದ್ದರೂ ಎದ್ದು ಅವರ ಪಾದಗಳಿಗೆ ನಮಸ್ಕರಿಸಿದರು. ಪಾಂಡವರು ಕಿರೀಟ ಸಹಿತವಾಗಿ ವೇದವ್ಯಾಸರ ಪಾದಗಳಿಗೆ ನಮಸ್ಕರಿಸಿದಾಗ ಅವರು “ನೀವು ಅಪಾರವಾಗಿ ನೊಂದಿದ್ದೀರಿ. ಉತ್ತಮವಾದ ವಿಚಾರಗಳಿಂದ ಮನಸ್ಸಿಗೆ ಸಂತೋಷ ಉಂಟಾಗಲಿ” ಎಂದು ಆಶೀರ್ವದಿಸಿ ಧರ್ಮರಾಯನ ಕಂದಿದ ಮುಖವನ್ನು ಕರುಣೆಯಿಂದ ಮೇಲೆತ್ತಿದರು.
ಪದಾರ್ಥ (ಕ.ಗ.ಪ)
ನೃಪಮಂದಿರ-ಅರಮನೆ, ಮಕುಟ-ಕಿರೀಟ, ನೆಗಹಿ-ಎತ್ತಿ
ಮೂಲ ...{Loading}...
ಬಂದು ವೇದವ್ಯಾಸಮುನಿ ನೃಪ
ಮಂದಿರವ ಹೊಗಲೆದ್ದು ಪದದಲಿ
ಸಂದಣಿಸಿ ಚಾಚಿದನು ಮಕುಟವನವನಿಪಾಲಕನು
ನೊಂದವರು ಸತ್ಸಂಗತಿಯಲಾ
ನಂದವಡೆವುದೆನುತ್ತ ಮುನಿಪತಿ
ಕಂದು ಮೋರೆಯ ಮಹಿಪತಿಯ ನೆಗಹಿದನು ಕರುಣದಲಿ ॥21॥
೦೨೨ ಎಲೆ ಯುಧಿಷ್ಠಿರ ...{Loading}...
ಎಲೆ ಯುಧಿಷ್ಠಿರ ನೃಪ ಕುಮಾರ
ಪ್ರಳಯದಾಪತ್ತಾಯ್ತೆ ಭೀಮನ
ನಲವಿಗೂಣೆಯವಾಯ್ತೆ ದುಸ್ಥಿತಿಯಾಯ್ತೆ ನಕುಲಂಗೆ
ಬಲು ದುಗುಡ ಸಹದೇವನಲಿ ಸಂ
ಗಳಿಸಿತೇ ದ್ರೌಪದಿ ಸುಭದ್ರಾ
ಲಲನೆಯರಿಗನುಚಿತವು ಘಟಿಸಿತೆ ಎಂದನಾ ಮುನಿಪ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
22.“ಎಲೈ ಧರ್ಮರಾಯ, ನಿನ್ನ ಜೀವನದಲ್ಲಿ ಪ್ರಳಯಕಾಲದ ಆಪತ್ತು ಸಂಭವಿಸಿದಂತಾಯಿತು. ಭೀಮನ ಸಂತೋಷಕ್ಕೆ ಕುಂದುಂಟಾಯಿತೆ ? ನಕುಲನಿಗೆ ದುಃಸ್ಥಿತಿ ಉಂಟಾಯಿತೆ? ಸಹದೇವನಿಗೆ ಅಪಾರವಾದ ದುಃಖವಾಯಿತೆ ? ದ್ರೌಪದಿ, ಸುಭದ್ರೆಯರ ಜೀವನದಲ್ಲಿ ಅನುಚಿತ ಘಟನೆ ಘಟಿಸಿತೆ? " ಎಂದು ಹೇಳುತ್ತಾ ವೇದವ್ಯಾಸ ಮುನಿ ಅವರೆಲ್ಲರನ್ನು ಸಮಾಧಾನಗೊಳಿಸಲು ಯತ್ನಿಸಿದನು.
ಮೂಲ ...{Loading}...
ಎಲೆ ಯುಧಿಷ್ಠಿರ ನೃಪ ಕುಮಾರ
ಪ್ರಳಯದಾಪತ್ತಾಯ್ತೆ ಭೀಮನ
ನಲವಿಗೂಣೆಯವಾಯ್ತೆ ದುಸ್ಥಿತಿಯಾಯ್ತೆ ನಕುಲಂಗೆ
ಬಲು ದುಗುಡ ಸಹದೇವನಲಿ ಸಂ
ಗಳಿಸಿತೇ ದ್ರೌಪದಿ ಸುಭದ್ರಾ
ಲಲನೆಯರಿಗನುಚಿತವು ಘಟಿಸಿತೆ ಎಂದನಾ ಮುನಿಪ ॥22॥
೦೨೩ ಅಡಸಿದಾಪತ್ತಿನಲಿ ಧೈರ್ಯವ ...{Loading}...
ಅಡಸಿದಾಪತ್ತಿನಲಿ ಧೈರ್ಯವ
ಹಿಡಿವುದೇ ಸುಪ್ರೌಢಿ ಸಾಕಿ
ನ್ನೊಡಲು ಕರಗಿದೊಡೇಳಲರಿವನೆ ಹಿಂಗಿದಭಿಮನ್ಯು
ಒಡನೆ ಬಂದವು ಬಿಡವು ಭವದಲಿ
ತೊಡಕಿ ಸುಕೃತವು ದುಷ್ಕೃತಂಗಳು
ಕಡೆಗೆ ತಿಳಿವಿನೊಳಲ್ಲದಿಹಪರ ಸೌಖ್ಯವಿಲ್ಲೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕಷ್ಟಗಳು ಬಂದಾಗ ಧೈರ್ಯವನ್ನು ತಾಳುವುದೇ ಪ್ರೌಢನ ಲಕ್ಷಣ. ಇನ್ನು ಅಳಲು ಸಾಕು. ದುಃಖದಿಂದ ದೇಹವೇ ಕರಗಿದರೂ ಸತ್ತ ಅಭಿಮನ್ಯು ಏಳಬಲ್ಲನೆ. ಹುಟ್ಟು ಸಾವುಗಳ ಚಕ್ರದಲ್ಲಿ ಸೇರಿಕೊಂಡು ಜೊತೆಯಲ್ಲಿಯೇ ಬರುವ ಪಾಪ ಪುಣ್ಯಗಳು ಬಿಟ್ಟು ಹೋಗುವುದಿಲ್ಲ. ಈ ಜ್ಞಾನವಿಲ್ಲದಿದ್ದರೆ ಇಹ ಪರಗಳಲ್ಲಿ ಸೌಖ್ಯವಿಲ್ಲ " ಎಂದು ವೇದವ್ಯಾಸ ನುಡಿದ.
ಮೂಲ ...{Loading}...
ಅಡಸಿದಾಪತ್ತಿನಲಿ ಧೈರ್ಯವ
ಹಿಡಿವುದೇ ಸುಪ್ರೌಢಿ ಸಾಕಿ
ನ್ನೊಡಲು ಕರಗಿದೊಡೇಳಲರಿವನೆ ಹಿಂಗಿದಭಿಮನ್ಯು
ಒಡನೆ ಬಂದವು ಬಿಡವು ಭವದಲಿ
ತೊಡಕಿ ಸುಕೃತವು ದುಷ್ಕೃತಂಗಳು
ಕಡೆಗೆ ತಿಳಿವಿನೊಳಲ್ಲದಿಹಪರ ಸೌಖ್ಯವಿಲ್ಲೆಂದ ॥23॥
೦೨೪ ಎಲ್ಲರೋಪಾದಿಯ ಕುಮಾರಕ ...{Loading}...
ಎಲ್ಲರೋಪಾದಿಯ ಕುಮಾರಕ
ನಲ್ಲ ಕಾಣಿರೆ ವೀರ ವಿತರಣ
ದಲ್ಲಿ ಛಲದಲಿ ಶೀಲದಲಿ ನಾನಾ ಗುಣಂಗಳಲಿ
ಇಲ್ಲ ಸುಕುಮಾರಂಗೆ ಸರಿ ಮಗ
ನಿಲ್ಲದೇಗುವೆನಕಟ ವಚನದ
ಸೆಲ್ಲಹದಲಿರಿಯದಿರೆನುತ ಹಲುಬಿದನು ಭೂಪಾಲ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಮ್ಮ ಅಭಿಮನ್ಯು ಇತರ ಎಲ್ಲರಂತಲ್ಲ. ಅವನು ವೀರ. ಔಚಿತ್ಯಪ್ರಜ್ಞೆಯಲ್ಲಿ, ಛಲದಲ್ಲಿ, ನಡತೆಯಲ್ಲಿ ಹಾಗೂ ಇತರ ಉತ್ತಮ ಗುಣಗಳಲ್ಲಿ ಅಭಿಮನ್ಯುವಿಗೆ ಸರಿಸಮರಾದವರು ಇಲ್ಲ. ಅಂತಹ ಮಗನಿಲ್ಲದೆ ಹೇಗೆ ಜೀವಿಸುವುದು ? ಮಾತೆಂಬ ಶಲ್ಯದಲ್ಲಿ (ಈಟಿ) ನನ್ನನ್ನು ಚುಚ್ಚ ಬೇಡಿರಿ” ಎಂದು ಧರ್ಮರಾಯನು ಹಲುಬಿದನು.
ಪದಾರ್ಥ (ಕ.ಗ.ಪ)
ಸೆಲ್ಲಹ-ಶಲ್ಯ (ಒಂದು ಆಯುಧ)
ಮೂಲ ...{Loading}...
ಎಲ್ಲರೋಪಾದಿಯ ಕುಮಾರಕ
ನಲ್ಲ ಕಾಣಿರೆ ವೀರ ವಿತರಣ
ದಲ್ಲಿ ಛಲದಲಿ ಶೀಲದಲಿ ನಾನಾ ಗುಣಂಗಳಲಿ
ಇಲ್ಲ ಸುಕುಮಾರಂಗೆ ಸರಿ ಮಗ
ನಿಲ್ಲದೇಗುವೆನಕಟ ವಚನದ
ಸೆಲ್ಲಹದಲಿರಿಯದಿರೆನುತ ಹಲುಬಿದನು ಭೂಪಾಲ ॥24॥
೦೨೫ ಜನನವೇ ಲಯಬೀಜ ...{Loading}...
ಜನನವೇ ಲಯಬೀಜ ಮರಣವೆ
ಜನನ ಬೀಜವು ತೋರಿ ಕೆಡುವೀ
ತನುವಿನಭಿರಂಜನೆಯ ಸೌಖ್ಯಕೆ ಮಾರದಿರು ಮನವ
ಘನಪರಂಜ್ಯೋತಿ ಸ್ವರೂಪದ
ನೆನಹ ಮರೆದೀ ಮೋಹಮಯ ಬಂ
ಧನದೊಳಗೆ ಮರುಳಹರೆ ಮಗನೇ ನಿನ್ನನರಿಯೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮನುಷ್ಯ ಹುಟ್ಟಿದ ದಿನವೇ ಅವನ ಮರಣದ ಬೀಜ ಮೊಳಕೆಯೊಡೆಯುತ್ತದೆ. ಹುಟ್ಟು ಸಾವುಗಳು ಒಂದನ್ನೊಂದು ಅಟ್ಟಿಸಿಕೊಂಡು ಹೋಗುತ್ತಿರುತ್ತವೆ. ಇಂದು ಇದ್ದು ನಾಳೆ ಇಲ್ಲವಾಗುವ ಈ ದೇಹದ ಸಂತೋಷ ಹಾಗು ಸುಖಕ್ಕೆ ಮನಸ್ಸನ್ನು ಮಾರಿಕೊಳ್ಳುವುದು ಜಾಣ್ಮೆಯಲ್ಲ. ಶ್ರೇಷ್ಠವಾದ ಪರಂಜ್ಯೋತಿ ಸ್ವರೂಪದ ಜ್ಞಾನವನ್ನು ಮರೆತು ಮೋಹ ಪೂರಿತವಾದ ಈ ಸಂಸಾರದ ಬಂಧನದೊಳಗೆ ಸಿಕ್ಕಿ ಹಾಕಿಕೊಳ್ಳುವುದು ಬುದ್ಧಿವಂತಿಕೆಯಾಗುವುದಿಲ್ಲ. ಆದ್ದರಿಂದ ನೀನು ಯಾರು ? ಎಂಬುದನ್ನು ತಿಳಿದುಕೊ” ಎಂದು ವೇದವ್ಯಾಸರು ಉಪದೇಶಿಸಿದರು.
ಪದಾರ್ಥ (ಕ.ಗ.ಪ)
ಪರಂಜ್ಯೋತಿ-ಪರಮಾತ್ಮ
ಮೂಲ ...{Loading}...
ಜನನವೇ ಲಯಬೀಜ ಮರಣವೆ
ಜನನ ಬೀಜವು ತೋರಿ ಕೆಡುವೀ
ತನುವಿನಭಿರಂಜನೆಯ ಸೌಖ್ಯಕೆ ಮಾರದಿರು ಮನವ
ಘನಪರಂಜ್ಯೋತಿ ಸ್ವರೂಪದ
ನೆನಹ ಮರೆದೀ ಮೋಹಮಯ ಬಂ
ಧನದೊಳಗೆ ಮರುಳಹರೆ ಮಗನೇ ನಿನ್ನನರಿಯೆಂದ ॥25॥
೦೨೬ ಹರನೊಡನೆ ಹೊಯ್ದಾಡಿದಗ್ಗದ ...{Loading}...
ಹರನೊಡನೆ ಹೊಯ್ದಾಡಿದಗ್ಗದ
ನರನು ತಂದೆ ಸಮಸ್ತ ಭುವನೇ
ಶ್ವರನಲಾ ಮುರವೈರಿ ಮಾವನು ನಿನ್ನ ತನಯನಿಗೆ
ಧುರದೊಳೀ ಹದನಾಯ್ತು ಮಿಕ್ಕಿನ
ನೊರಜುಗಳ ಪಾಡೇನು ಕಾಲನು
ಹರಿಹರ ಬ್ರಹ್ಮಾದಿಗಳ ಕೈಕೊಂಬನಲ್ಲೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈಶ್ವರನೊಡನೆ ಯುದ್ಧವನ್ನು ಮಾಡಿದ ಶ್ರೇಷ್ಠ ವೀರನಾದ ಅರ್ಜುನನು ಅಭಿಮನ್ಯುವಿನ ತಂದೆ ; ಸಮಸ್ತ ಲೋಕಕ್ಕೆ ಒಡೆಯನಾದ ಮುರವೈರಿಯು ಅಭಿಮನ್ಯುವಿಗೆ ಮಾವ. ಆದರೂ ನಿನ್ನ ಮಗನಿಗೆ ಯುದ್ಧದಲ್ಲಿ ಈ ಗತಿಯಾಯ್ತು. ಉಳಿದ ಸೊಳ್ಳೆಗಳ ಪಾಡು ಏನಾಗುತ್ತದೆ ? ಯಮನನ್ನು ತಡೆಯಲು ಹರಿಹರ ಬ್ರಹ್ಮಾದಿಗಳಿಗೂ ಸಾಧ್ಯವಿಲ್ಲ. ಹುಟ್ಟಿದವನು ಸಾಯಲೇಬೇಕು” ಎಂದು ವ್ಯಾಸನು ಧರ್ಮರಾಯಾದಿಗಳಿಗೆ ವಿವರಿಸಿದನು.
ಪದಾರ್ಥ (ಕ.ಗ.ಪ)
ಅಗ್ಗದ-ಶ್ರೇಷ್ಠನಾದ, ಮುರವೈರಿ-ಕೃಷ್ಣ, ಧುರ-ಯುದ್ಧ, ಹದನಾಯ್ತು-ಹೀಗಾಯಿತು, ನೊರಜು-ಸೊಳ್ಳೆ
ಮೂಲ ...{Loading}...
ಹರನೊಡನೆ ಹೊಯ್ದಾಡಿದಗ್ಗದ
ನರನು ತಂದೆ ಸಮಸ್ತ ಭುವನೇ
ಶ್ವರನಲಾ ಮುರವೈರಿ ಮಾವನು ನಿನ್ನ ತನಯನಿಗೆ
ಧುರದೊಳೀ ಹದನಾಯ್ತು ಮಿಕ್ಕಿನ
ನೊರಜುಗಳ ಪಾಡೇನು ಕಾಲನು
ಹರಿಹರ ಬ್ರಹ್ಮಾದಿಗಳ ಕೈಕೊಂಬನಲ್ಲೆಂದ ॥26॥
೦೨೭ ದೇಹ ತಾನಭಿಮನ್ಯುವೋ ...{Loading}...
ದೇಹ ತಾನಭಿಮನ್ಯುವೋ ದಿಟ
ದೇಹಿ ತಾನಭಿಮನ್ಯುವೋ ಜಡ
ದೇಹ ತಾನಭಿಮನ್ಯುವಲ್ಲದು ಕೆಟ್ಟರೇನಾಯ್ತು
ದೇಹವೆಂಬುದನಿತ್ಯ ನಿನ್ನವ
ರಾಹವದೊಳಳಿದವರ ಬಿಡು ಸಂ
ದೇಹವನಹಮ್ಮಮತೆಗಳ ಬೀಳ್ಕೊಟ್ಟು ನೋಡೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಹ ಅಭಿಮನ್ಯುವೋ ಅಥವಾ ದೇಹವನ್ನು ಧರಿಸಿದ್ದ ಜೀವಾತ್ಮ ಅಭಿಮನ್ಯುವೋ? ಜಡದೇಹವು ಅಭಿಮನ್ಯುವಲ್ಲ, ಅದು ನಾಶ ಹೊಂದಿದರೇನಾಯಿತು. ದೇಹವೆಂಬುದು ಅಶಾಶ್ವತ. ಯುದ್ಧದಲ್ಲಿ ಮಡಿದ ನಿನ್ನವರ ವಿಚಾರವನ್ನು ಬಿಟ್ಟು, ಸಂದೇಹ, ಅಹಂ ಹಾಗೂ ಮಮಕಾರಗಳನ್ನು ಹೊರತುಪಡಿಸಿ ಯೋಚಿಸು ಎಂದ.
ಪದಾರ್ಥ (ಕ.ಗ.ಪ)
ದೇಹಿ-ದೇಹವನ್ನು ಹೊಂದಿರುವುದು, ಆತ್ಮ, ಜಡದೇಹ-ಪಂಚ ಭೂತಗಳಿಂದ ನಿರ್ಮಾಣವಾದ ದೇಹ,
ಮೂಲ ...{Loading}...
ದೇಹ ತಾನಭಿಮನ್ಯುವೋ ದಿಟ
ದೇಹಿ ತಾನಭಿಮನ್ಯುವೋ ಜಡ
ದೇಹ ತಾನಭಿಮನ್ಯುವಲ್ಲದು ಕೆಟ್ಟರೇನಾಯ್ತು
ದೇಹವೆಂಬುದನಿತ್ಯ ನಿನ್ನವ
ರಾಹವದೊಳಳಿದವರ ಬಿಡು ಸಂ
ದೇಹವನಹಮ್ಮಮತೆಗಳ ಬೀಳ್ಕೊಟ್ಟು ನೋಡೆಂದ ॥27॥
೦೨೮ ಎನ್ನದಾನೆಮ್ಬೆರಡರಿನ್ದವೆ ...{Loading}...
ಎನ್ನದಾನೆಂಬೆರಡರಿಂದವೆ
ಬನ್ನಬಡುವನು ಜೀವನಲ್ಲದೆ
ಮುನ್ನವಿನ್ನೆಂದೆಂದಿಗಾತ್ಮಂಗಿಲ್ಲ ಭವಬಂಧ
ನಿನ್ನ ನೀನರಿ ಸಾಕು ಮಾಯೆಯ
ಗನ್ನಗತಕವ ಗೆಲುವೆ ಕನಸಿನ
ಪೊನ್ನ ಕಾಣದೆ ದುಃಖಪಡುವರೆ ಭೂಪ ಕೇಳ್ ಎಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನ್ನದು, ಮತ್ತು ನಾನು ಎಂಬ ಎರಡು ಭಾವನೆಗಳಿಂದ ಮನುಷ್ಯ ಯಾತನೆಯನ್ನು ಅನುಭವಿಸುತ್ತಾನೆ. ಅಷ್ಟಲ್ಲದೇ ಈ ಆತ್ಮಕ್ಕೆ ಹುಟ್ಟು ಸಾವುಗಳೆಂಬ ಬಂಧನಗಳು ಇರುವುದಿಲ್ಲ. ನಿನ್ನನ್ನು ನೀನು ಅರಿತರೆ ಸಾಕು; ಮಾಯೆಯ ಬಂಧನದಿಂದ ಬಿಡುಗಡೆಯನ್ನು ಪಡೆಯಬಹುದು, ಕನಸಿನಲ್ಲಿ ಬಂಗಾರವನ್ನು ಕಂಡು ನಿಜಜೀವನದಲ್ಲಿ ಅದು ದೊರಕಲಿಲ್ಲವೆಂದು ದುಃಖ ಪಡುತ್ತಾರೆಯೆ? ಧರ್ಮರಾಯನೇ ಕೇಳು” ಎಂದು ವ್ಯಾಸರು ಹೇಳಿದರು
ಪದಾರ್ಥ (ಕ.ಗ.ಪ)
ಆನು-ನಾನು, ಬನ್ನ-ದುಃಖ, ಭವ-ಜನ್ಮ (ಹುಟ್ಟು-ಸಾವು) ಗನ್ನಗತಕ-ಮೋಸ, ಪೊನ್ನ-ಬಂಗಾರವನ್ನು
ಮೂಲ ...{Loading}...
ಎನ್ನದಾನೆಂಬೆರಡರಿಂದವೆ
ಬನ್ನಬಡುವನು ಜೀವನಲ್ಲದೆ
ಮುನ್ನವಿನ್ನೆಂದೆಂದಿಗಾತ್ಮಂಗಿಲ್ಲ ಭವಬಂಧ
ನಿನ್ನ ನೀನರಿ ಸಾಕು ಮಾಯೆಯ
ಗನ್ನಗತಕವ ಗೆಲುವೆ ಕನಸಿನ
ಪೊನ್ನ ಕಾಣದೆ ದುಃಖಪಡುವರೆ ಭೂಪ ಕೇಳೆಂದ ॥28॥
೦೨೯ ಉರಗ ನರ ...{Loading}...
ಉರಗ ನರ ದಿವಿಜಾದಿಗಳಿಗಿದು
ಪರಿಹರಿಸಲಳವಲ್ಲ ದೈವದ
ಪರುಠವಣೆ ಮುನ್ನಾದಿಯಲಿ ನಿರ್ಮಿಸಿತು ಮೃತ್ಯುವನು
ಅರಸನಾಗಲಿ ಧನಿಕನಾಗಲಿ
ಹಿರಿಯನಾಗಲಿ ಬಡವನಾಗಲಿ
ಮರಣ ಜನಿಸಿದ ಬಳಿಕ ತಪ್ಪದು ಮಗನೆ ಕೇಳ್ ಎಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪ್ರಾಣಿ, ಮನುಷ್ಯ, ದೇವತೆಗಳು ಯಾರಿಗೇ ಆಗಲಿ ಸಾವನ್ನು ತಪ್ಪಿಸಲು ಸಾಧ್ಯವಿಲ್ಲ. ದೈವದ ನಿಶ್ಚಯವು ಮೊದಲು ಮೃತ್ಯುವನ್ನು ನಿರ್ಮಾಣ ಮಾಡಿತು. ರಾಜನಾಗಲಿ, ಶ್ರೀಮಂತನಾಗಲಿ, ಹಿರಿಯನಾಗಲಿ, ಬಡವನಾಗಲಿ, ಹುಟ್ಟಿದ ನಂತರ ಮರಣವು ತಪ್ಪದು. ಮಗನೇ ಕೇಳು” ಎಂದು ವ್ಯಾಸನು ಹೇಳಿದ.
ಮೂಲ ...{Loading}...
ಉರಗ ನರ ದಿವಿಜಾದಿಗಳಿಗಿದು
ಪರಿಹರಿಸಲಳವಲ್ಲ ದೈವದ
ಪರುಠವಣೆ ಮುನ್ನಾದಿಯಲಿ ನಿರ್ಮಿಸಿತು ಮೃತ್ಯುವನು
ಅರಸನಾಗಲಿ ಧನಿಕನಾಗಲಿ
ಹಿರಿಯನಾಗಲಿ ಬಡವನಾಗಲಿ
ಮರಣ ಜನಿಸಿದ ಬಳಿಕ ತಪ್ಪದು ಮಗನೆ ಕೇಳೆಂದ ॥29॥
೦೩೦ ಇರುಳು ಹಗಲಿನ ...{Loading}...
ಇರುಳು ಹಗಲಿನ ಬೀಜ ನೆರವಿಯೆ
ಹರೆವುದಕೆ ಮೊದಲುನ್ನತೋನ್ನತ
ಮರುಳೆ ಕೇಡಿನ ಕಾಳಕೂಟವೆ ವೀರನಿರ್ವಹಣ
ಸಿರಿ ದರಿದ್ರತೆಗಡಹು ಜನನವೆ
ಮರಣ ಫಲವಿದನರಿದು ಬುಧರಾ
ಚರಿಸುವುದು ಕೇಳ್ ಎಂದು ವೇದವ್ಯಾಸ ಮುನಿ ನುಡಿದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾತ್ರಿಯೇ ಹಗಲಿನ ಬೀಜ. ದೊಡ್ಡದಾದ ಗುಂಪು ಕೂಡಿದ ನಂತರವೇ ಗುಂಪು ಕರಗುವುದು. ಮರುಳು ಧರ್ಮಜನೇ ! ಕೆಡುಕೆಂಬ ಮಹಾ ವಿಷದ ನಂತರವೇ ವೀರರು ಆ ಕೇಡನ್ನು ನಾಶಮಾಡಲು ಸಾಧ್ಯ. ಐಶ್ವರ್ಯವೇ ದಾರಿದ್ರ್ಯಕ್ಕೆ ಅವಕಾಶ ನೀಡುವುದು. (ಹಾಗೆಯೇ) ಜನನದ ಫಲವೇ ಮರಣ. ಬುದ್ಧಿವಂತರು ಇದನ್ನು ತಿಳಿದು ನಡೆದುಕೊಳ್ಳಬೇಕು. ಕೇಳು ಎಂದು ವೇದವ್ಯಾಸ ಮುನಿ ಹೇಳಿದ.
ಮೂಲ ...{Loading}...
ಇರುಳು ಹಗಲಿನ ಬೀಜ ನೆರವಿಯೆ
ಹರೆವುದಕೆ ಮೊದಲುನ್ನತೋನ್ನತ
ಮರುಳೆ ಕೇಡಿನ ಕಾಳಕೂಟವೆ ವೀರನಿರ್ವಹಣ
ಸಿರಿ ದರಿದ್ರತೆಗಡಹು ಜನನವೆ
ಮರಣ ಫಲವಿದನರಿದು ಬುಧರಾ
ಚರಿಸುವುದು ಕೇಳೆಂದು ವೇದವ್ಯಾಸ ಮುನಿ ನುಡಿದ ॥30॥
೦೩೧ ತಿಳಿದು ಧರ್ಮಜ ...{Loading}...
ತಿಳಿದು ಧರ್ಮಜ ಕೇಳು ಕೃತಯುಗ
ದೊಳಗೆ ಕಂಪನನೆಂಬ ಭೂಪನು
ಕುಲತಿಲಕ ಹರಿಯೆಂಬ ಮಗನಾತಂಗೆ ಜನಿಸಿದನು
ಬಳಿಕ ಯೌವನನಾಗಿ ಪರಮಂ
ಡಲಕೆ ನಡೆದನು ವೈರಿ ರಾಯರ
ವಳಿತವನು ತಾನೊತ್ತಿಕೊಂಡನು ರಿಪು ನೃಪರ ಕೆಡಹಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರನೆ, ಕೇಳು, ಕೃತಯುಗದಲ್ಲಿ ಕಂಪನ ಎಂಬ ರಾಜನಿದ್ದ. ಅವನಿಗೆ ಕುಲತಿಲಕದಂತಿದ್ದ ಹರಿ ಎಂಬ ಮಗನು ಹುಟ್ಟಿದನು. ಹರಿಯು ತಾರುಣ್ಯವನ್ನು ಪಡೆದ ಮೇಲೆ ಬೇರೆ ರಾಜ್ಯಕ್ಕೆ ಹೋಗಿ ಶತ್ರು ರಾಜರನ್ನು ಸಂಹಾರ ಮಾಡಿ ಅವರ ರಾಜ್ಯವನ್ನು ವಶಪಡಿಸಿಕೊಂಡನು.
ಪದಾರ್ಥ (ಕ.ಗ.ಪ)
ಪರಮಂಡಲ-ಅನ್ಯ ರಾಜ್ಯ,
ಮೂಲ ...{Loading}...
ತಿಳಿದು ಧರ್ಮಜ ಕೇಳು ಕೃತಯುಗ
ದೊಳಗೆ ಕಂಪನನೆಂಬ ಭೂಪನು
ಕುಲತಿಲಕ ಹರಿಯೆಂಬ ಮಗನಾತಂಗೆ ಜನಿಸಿದನು
ಬಳಿಕ ಯೌವನನಾಗಿ ಪರಮಂ
ಡಲಕೆ ನಡೆದನು ವೈರಿ ರಾಯರ
ವಳಿತವನು ತಾನೊತ್ತಿಕೊಂಡನು ರಿಪು ನೃಪರ ಕೆಡಹಿ ॥31॥
೦೩೨ ಮಗನೆ ಕಮ್ಪನನೆಮ್ಬ ...{Loading}...
ಮಗನೆ ಕಂಪನನೆಂಬ ಭೂಪನ
ಮಗನು ಮತ್ತೊಮ್ಮಿನಲಿ ಬಲುಗಾ
ಳೆಗವ ಕಾದಿ ವಿರೋಧಿ ಸೇನೆಯೊಳಾನೆವರಿವರಿದು
ಬಗೆಯೆ ನಿನ್ನಭಿಮನ್ಯುವಿನವೋ
ಲಗಣಿತರನಸಿಯರೆದು ಸುರಪನ
ನಗರಿಗೈದಿದನೆಂದು ಕಂಪನು ಕೇಳಿ ಬಸವಳಿದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಂಪನನೆಂಬ ರಾಜನ ಮಗನಾದ ಹರಿಯು ಮತ್ತೊಮ್ಮೆ ದೊಡ್ಡ ಯುದ್ಧವನ್ನು ಮಾಡಿ ಶತ್ರು ಸೈನ್ಯದಲ್ಲಿ ಆನೆಯಂತೆ ಮುನ್ನುಗ್ಗಿ ನಿನ್ನ ಅಭಿಮನ್ಯುವಿನಂತೆ ಹೋರಾಡಿ ಲೆಕ್ಕವಿಲ್ಲದಷ್ಟು ಸಂಖ್ಯೆಯ ಸೈನಿಕರನ್ನು ಅರೆದು ಹಾಕಿ ಸ್ವರ್ಗಲೋಕಕ್ಕೆ ಹೋದನೆಂದು ಕೇಳಿದ ಕಂಪನ ಮೂರ್ಛೆ ಹೋದನು.
ಪದಾರ್ಥ (ಕ.ಗ.ಪ)
ಆನೆವರಿವರಿದು-ಆನೆಯಂತೆ ಮುನ್ನುಗ್ಗು, ಅರೆದು-ಕೊಂದು, ಸುರಪನ-ಇಂದ್ರನ, ಬಸವಳಿದ-ಮೂರ್ಛೆ ಹೋದನು
ಮೂಲ ...{Loading}...
ಮಗನೆ ಕಂಪನನೆಂಬ ಭೂಪನ
ಮಗನು ಮತ್ತೊಮ್ಮಿನಲಿ ಬಲುಗಾ
ಳೆಗವ ಕಾದಿ ವಿರೋಧಿ ಸೇನೆಯೊಳಾನೆವರಿವರಿದು
ಬಗೆಯೆ ನಿನ್ನಭಿಮನ್ಯುವಿನವೋ
ಲಗಣಿತರನಸಿಯರೆದು ಸುರಪನ
ನಗರಿಗೈದಿದನೆಂದು ಕಂಪನು ಕೇಳಿ ಬಸವಳಿದ ॥32॥
೦೩೩ ನಿನಗೆ ಬನ್ದಾಪತ್ತಿನನ್ತಿರ ...{Loading}...
ನಿನಗೆ ಬಂದಾಪತ್ತಿನಂತಿರ
ಲನಿತು ಬಂದುದು ಕಂಪನೆಂಬಾ
ತನನು ಸಂತೈಸಲ್ಕೆ ನಾರದನವನಿಗೈತಂದು
ಜನಪತಿಯ ಹಿಡಿದೆತ್ತಿದನು ಕಾ
ಲನನು ಮೀರುವರಾರು ಪೌರಾ
ತನ ಕೃತ ಧ್ರುವ ಮೃತ್ಯುವನು ಗೆಲುವಾತನಿಲ್ಲೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನಗೆ ಬಂದ ಹಾಗೆಯೇ ಆಪತ್ತು ಕಂಪನನಿಗೂ ಬಂದಿತು. ಅವನನ್ನು ಸಂತೈಸಲು ನಾರದನು ಭೂಲೋಕಕ್ಕೆ ಬಂದು. ಕಂಪನ ರಾಜನನ್ನು ಹಿಡಿದು ಮೇಲಕ್ಕೆತ್ತಿದನು. ‘ಕಾಲನನ್ನು-ಯಮನನ್ನು ಯಾರು ತಾನೆ ಮೀರಲು ಸಾಧ್ಯ ? ಪ್ರಾಚೀನ ಕಾಲದಲ್ಲಿ ಸೃಷ್ಟಿಯಾದ, ಖಚಿತವಾದ ಮೃತ್ಯುವನ್ನು ಗೆಲ್ಲುವಾತನು ಯಾರೂ ಇಲ್ಲ’ ಎಂದು ನಾರದನು ಆ ರಾಜನಿಗೆ ಹೇಳಿದನು. " ಎಂದು ವೇದವ್ಯಾಸ ಮುನಿ ಹೇಳಿದನು.
ಪದಾರ್ಥ (ಕ.ಗ.ಪ)
ಧ್ರುವ-ಖಚಿತ
ಮೂಲ ...{Loading}...
ನಿನಗೆ ಬಂದಾಪತ್ತಿನಂತಿರ
ಲನಿತು ಬಂದುದು ಕಂಪನೆಂಬಾ
ತನನು ಸಂತೈಸಲ್ಕೆ ನಾರದನವನಿಗೈತಂದು
ಜನಪತಿಯ ಹಿಡಿದೆತ್ತಿದನು ಕಾ
ಲನನು ಮೀರುವರಾರು ಪೌರಾ
ತನ ಕೃತ ಧ್ರುವ ಮೃತ್ಯುವನು ಗೆಲುವಾತನಿಲ್ಲೆಂದ ॥33॥
೦೩೪ ಮೃತ್ಯುವಾರೆನ್ದವನಿಪತಿ ಮುನಿ ...{Loading}...
ಮೃತ್ಯುವಾರೆಂದವನಿಪತಿ ಮುನಿ
ಪೋತ್ತಮನ ಬೆಸಗೊಳಲು ಬ್ರಹ್ಮನ
ಕಿತ್ತಡದ ಕೋಪದಲಿ ಜನಿಸಿದ ರುದ್ರನಿಂ ಬಳಿಕ
ಮೃತ್ಯುವೆಂಬವಳಾದಳಾ ಸತಿ
ಯತ್ತ ಕಂಬನಿ ರುಜೆಗಳಾದವು
ತೆತ್ತಿಗರು ಷಡುವರ್ಗ ಕಾಮಕ್ರೋಧ ಮೊದಲಾಗಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೃತ್ಯು ಎಂದರೆ ಯಾರು ?” ಎಂದು ಕಂಪನನು ನಾರದನನ್ನು ಕೇಳಲು, “ಬ್ರಹ್ಮನ ಅಸಮಾಧಾನ ಮತ್ತು ಕೋಪಗಳಿಂದ ಹುಟ್ಟಿದ ರುದ್ರನ ತರುವಾಯ ಮೃತ್ಯು ದೇವತೆ ಎಂಬ ಹೆಂಗಸು ಹುಟ್ಟಿದಳು, ಅವಳ ನಂತರ ಕಣ್ಣೀರು ಖಾಯಿಲೆಗಳು ಜನಿಸಿದವು. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯಗಳು ಎಂಬ ಅರಿಷಡ್ವರ್ಗಗಳು ಮೃತ್ಯುದೇವತೆಯ ಸೇವಕರಾದರು.” ಎಂದು ನಾರದನು ಹೇಳಿದನು.
ಪದಾರ್ಥ (ಕ.ಗ.ಪ)
ಕಿತ್ತಡ-ಅಸಮಾಧಾನ, ರುಜೆ-ಖಾಯಿಲೆ, ರೋಗ
ಮೂಲ ...{Loading}...
ಮೃತ್ಯುವಾರೆಂದವನಿಪತಿ ಮುನಿ
ಪೋತ್ತಮನ ಬೆಸಗೊಳಲು ಬ್ರಹ್ಮನ
ಕಿತ್ತಡದ ಕೋಪದಲಿ ಜನಿಸಿದ ರುದ್ರನಿಂ ಬಳಿಕ
ಮೃತ್ಯುವೆಂಬವಳಾದಳಾ ಸತಿ
ಯತ್ತ ಕಂಬನಿ ರುಜೆಗಳಾದವು
ತೆತ್ತಿಗರು ಷಡುವರ್ಗ ಕಾಮಕ್ರೋಧ ಮೊದಲಾಗಿ ॥34॥
೦೩೫ ಜನದ ಕೊಲೆಗೆಲಸದ ...{Loading}...
ಜನದ ಕೊಲೆಗೆಲಸದ ನಿರೂಪಕೆ
ಮನವ ತಂದಳು ಮೃತ್ಯು ನಿಜ ಸಾ
ಧನ ಸಹಿತ ಕೈಕೊಂಡ ಕೆಲಸವನಾಗುಮಾಡುವಳು
ಜನಪ ದೃಷ್ಟನ್ನಷ್ಟವೆಂಬುದ
ನನುಕರಿಸಿ ಮೂರ್ತಿ ತ್ರಯಂಗಳ
ತನಗೆ ನೆರೆ ವಶಮಾಡಿಕೊಂಡಿಹಳೆಂದು ಮುನಿ ನುಡಿದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೃತ್ಯು ದೇವತೆಯು ಜನರ ಕೊಲೆಗೆ ಮನಸ್ಸು ಮಾಡಿದಳು ಮತ್ತು ತನ್ನ ಸಾಧನಗಳೊಂದಿಗೆ (ಶೋಕ, ಖಾಯಿಲೆ ಕಾಮಾದಿ ಷಡ್ವರ್ಗಗಳು) ತಾನು ಕೈಗೊಂಡ ಕೆಲಸವನ್ನು ಸಾಧಿಸುತ್ತಾಳೆ. ಅವಳ ದೃಷ್ಟಿಗೆ ಬಿದ್ದವರು ಸಾಯಬೇಕು ಎಂಬ ಮಾತನ್ನು ಅನುಸರಿಸಿ ತ್ರಿಮೂರ್ತಿಗಳನ್ನೂ ತನ್ನ ವಶಮಾಡಿಕೊಂಡಿದ್ದಾಳೆ " ಎಂದು ನಾರದ ಮುನಿ ನುಡಿದ.
ಪದಾರ್ಥ (ಕ.ಗ.ಪ)
ದೃಷ್ಟನ್ನಷ್ಟ-ನೋಡಿದರೆ ಸಾಯುವುದು, ಮೂರ್ತಿತ್ರಯ-ಹರಿ,ಹರ, ಬ್ರಹ್ಮ
ಮೂಲ ...{Loading}...
ಜನದ ಕೊಲೆಗೆಲಸದ ನಿರೂಪಕೆ
ಮನವ ತಂದಳು ಮೃತ್ಯು ನಿಜ ಸಾ
ಧನ ಸಹಿತ ಕೈಕೊಂಡ ಕೆಲಸವನಾಗುಮಾಡುವಳು
ಜನಪ ದೃಷ್ಟನ್ನಷ್ಟವೆಂಬುದ
ನನುಕರಿಸಿ ಮೂರ್ತಿ ತ್ರಯಂಗಳ
ತನಗೆ ನೆರೆ ವಶಮಾಡಿಕೊಂಡಿಹಳೆಂದು ಮುನಿ ನುಡಿದ ॥35॥
೦೩೬ ಆ ಮಹಾ ...{Loading}...
ಆ ಮಹಾ ಮೃತ್ಯುವನು ಹುಟ್ಟಿಸಿ
ದಾ ಮಹಾದೇವಾದಿ ದೇವರು
ಕಾಮಿನಿಯ ಕಳುಹಲ್ಕೆ ಬಾರದೆನುತ್ತ ಬೋಧಿಸಲು
ಭೂಮಿಪತಿ ನಿಜಸುತನ ಮೃತಿಯು
ದ್ದಾಮ ತಾಪವ ಕಳೆಯ ಬೇಕೆಂ
ದಾ ಮುನೀಶ್ವರ ಸಂತವಿಟ್ಟನು ಕಂಪಭೂಪತಿಯ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಂತಹ ಮಹಾ ಮೃತ್ಯು ದೇವತೆಯನ್ನು ಹುಟ್ಟಿಸಿದ ಶಿವನೇ ಮೊದಲಾದ ದೇವರುಗಳು ಈ ಹೆಂಗಸನ್ನು (ಮೃತ್ಯು ದೇವತೆಯನ್ನು) ಮರಣವನ್ನುಂಟು ಮಾಡದೆ ಹಿಂದಿರುಗು ಎಂದು ಹೇಳಲು ಸಾಧ್ಯವಿಲ್ಲ.” ಎಂದು ನಾರದರು ಕಂಪನ ರಾಜನಿಗೆ ತಿಳಿಯ ಹೇಳಿ, ತನ್ನ ಮಗನ ಮರಣದ ತೀವ್ರವಾದ ಸಂತಾಪವನ್ನು ಬಿಡಬೇಕೆಂದು ನಾರದರು ಕಂಪನ ಭೂಪತಿಯನ್ನು ಸಮಾಧಾನ ಮಾಡಿದರು.
ಪದಾರ್ಥ (ಕ.ಗ.ಪ)
ಕಾಮಿನಿ-ಹೆಣ್ಣು, ಇಲ್ಲಿ ಮೃತ್ಯು ದೇವತೆ,
ಮೂಲ ...{Loading}...
ಆ ಮಹಾ ಮೃತ್ಯುವನು ಹುಟ್ಟಿಸಿ
ದಾ ಮಹಾದೇವಾದಿ ದೇವರು
ಕಾಮಿನಿಯ ಕಳುಹಲ್ಕೆ ಬಾರದೆನುತ್ತ ಬೋಧಿಸಲು
ಭೂಮಿಪತಿ ನಿಜಸುತನ ಮೃತಿಯು
ದ್ದಾಮ ತಾಪವ ಕಳೆಯ ಬೇಕೆಂ
ದಾ ಮುನೀಶ್ವರ ಸಂತವಿಟ್ಟನು ಕಂಪಭೂಪತಿಯ ॥36॥
೦೩೭ ಆದರಾ ಮೃತ್ಯುವಿನ ...{Loading}...
ಆದರಾ ಮೃತ್ಯುವಿನ ಕೈವಶ
ವಾದವರನೆನಗರುಹ ಬೇಹುದು
ಮೇದಿನೀಶರೊಳೆಂದು ಬಿನ್ನಹ ಮಾಡಿದನು ನೃಪತಿ
ಆ ದಯಾಳುಗಳರಸನಾ ಶೋ
ಕೋದಧಿಗೆ ವಡಬಾಗ್ನಿ ಸಮನೆನಿ
ಪಾದಿಯಲಿ ಷೋಡಶ ಮಹೀಶರ ಕಥೆಯ ವಿರಚಿಸಿದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗಾದರೆ, ರಾಜರುಗಳಲ್ಲಿ ಆ ಮೃತ್ಯುವಿಗೆ ವಶವಾದವರ ಸಂಗತಿಯನ್ನು ನನಗೆ ತಿಳಿಸಬೇಕೆಂದು ಕಂಪನ ರಾಜ ಪ್ರಾರ್ಥನೆ ಮಾಡಿದನು. ದಯಾಳುಗಳಾದ ನಾರದರು ಅರಸನ ಆ ಶೋಕವೆಂಬ ಸಮುದ್ರಕ್ಕೆ ಪ್ರಳಯಾಗ್ನಿಯಂತಿರುವ (ಶೋಕ ಸಾಗರವನ್ನು ಇಂಗಿಸುವ) ಹದಿನಾರು ರಾಜರ ಕಥೆಯನ್ನು ಹೇಳಿದರು.
ಪದಾರ್ಥ (ಕ.ಗ.ಪ)
ಶೋಕೋದಧಿ-ದುಃಖ ಸಾಗರ
ಮೂಲ ...{Loading}...
ಆದರಾ ಮೃತ್ಯುವಿನ ಕೈವಶ
ವಾದವರನೆನಗರುಹ ಬೇಹುದು
ಮೇದಿನೀಶರೊಳೆಂದು ಬಿನ್ನಹ ಮಾಡಿದನು ನೃಪತಿ
ಆ ದಯಾಳುಗಳರಸನಾ ಶೋ
ಕೋದಧಿಗೆ ವಡಬಾಗ್ನಿ ಸಮನೆನಿ
ಪಾದಿಯಲಿ ಷೋಡಶ ಮಹೀಶರ ಕಥೆಯ ವಿರಚಿಸಿದ ॥37॥
೦೩೮ ಭರತ ಪೃಥು ...{Loading}...
ಭರತ ಪೃಥು ಪೌರವ ಭಗೀರಥ
ವರ ಯಯಾತಿ ಮರುತ್ತ ನಹುಷೇ
ಶ್ವರ ಪುರೂರವ ರಂತಿದೇವ ಗಯಾಂಬರೀಷಕರು
ಪರಶುರಾಮ ದಿಲೀಪ ಮಾಂಧಾ
ತರು ಹರಿಶ್ಚಂದ್ರಾದಿ ಪೃಥ್ವೀ
ಶ್ವರರನಂತರು ಮೃತ್ಯುವಶವರ್ತಿಗಳು ಕೇಳ್ ಎಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭರತ, ಪೃಥು, ಪೌರವ, ಭಗೀರಥ, ಯಯಾತಿ, ಮರುತ್ತ, ನಹುಷ, ಪುರೂರವ, ರಂತಿ ದೇವ, ಗಯ, ಅಂಬರೀಷ, ಪರಶುರಾಮ, ದಿಲೀಪ, ಮಾಂಧಾತ, ಹರಿಶ್ಚಂದ್ರನೇ ಮೊದಲಾದ ಅನೇಕ ಮಹಾರಾಜರು ಮೃತ್ಯುದೇವತೆಯ ವಶವಾಗಿ ಹೋದರು” ಕೇಳು ಎಂದು ನಾರದನು ಕಂಪನನಿಗೆ ಹೇಳಿದ.
ಟಿಪ್ಪನೀ (ಕ.ಗ.ಪ)
ಪೃಥು ಚಕ್ರವರ್ತಿ - ಒಬ್ಬ ಪೌರಾಣಿಕ ರಾಜನದ ಪೃಥದುವ ವೇನರಾಜನ ಮಗ. ಈತನೇ ಭೂಮಿಯನ್ನು ಹದಗೊಳಿಸಿದ್ದರಿಂದ ಇವನ ಮಗಳೆನಿಸಿಕೊಂಡು ಭೂಮಿ ‘ಪೃಥ್ವಿ’ ಆದಳು. ಎಲ್ಲರಿಗಿಂತ ದೊಡ್ಡವನಾದ್ದರಿಂದ ಋಷಿಗಳು ಇವನನ್ನು ಪೃಥು ಎಂದು ಕರೆದರು. ಜನರ ಬದುಕಿಗೆ ರಂಜನೆ ಅಂದರೆ ಶೋಭೆ ತಂದದ್ದರಿಂದ ‘ರಾಜ’ ಎಂದು ಕರೆದರು. ದಂಡನೀತಿ ನಿಪುಣನೂ ಸಮಸ್ತ ಜೀವಜಾಲವನ್ನು ಸಮಾನ ದೃಷ್ಟಿಯಿಂದ ನೋಡುವ ಉದಾರಿಯೂ ಆದ ಈ ದೊರೆ ಮನುಷ್ಯ ಧರ್ಮವನ್ನು ತಿರಸ್ಕರಿಸಿದವರನ್ನು ತನ್ನ ಬಾಹುಬಲದಿಂದ ದಂಡಿಸಿದ. ಪುರಾಣವನ್ನು ನಂಬಬಹುದಾದರೆ ಜಗತ್ತಿನ ಧನುಸ್ಸನ್ನು ಸೃಷ್ಟಿಸಿದವನು ಇವನೇ. ಅದರೆ ಹೆಸರು ‘ಅಜಗವ’. ಇವನು ಸಮುದ್ರ ಯಾನಕ್ಕೆ ಹೊರಟರೆ ಸಮುದ್ರದ ನೀರು ತಟಸ್ಥವಾಗುತ್ತಿತ್ತು. ಕಾಡಿನ ಮಾರ್ಗದಲ್ಲಿ ಹೊರಟರೆ ಪರ್ವತಗಳು ದಾರಿ ಮಾಡಿಕೊಡುತ್ತಿದ್ದವು. ಪ್ರಪಂಚದ ಎಲ್ಲ ಜೀವ ಜಡವಸ್ತುಗಳು ಇವನ ಬಳಿಗೆ ಬಂದು ಬೇಡಿದ್ದರಿಂದ ಪೃಥುವು ಭೂಮಿಯನ್ನು ‘‘ಎಲ್ಲರಿಗೂ ದುಗ್ಧಧಾರೆಯನ್ನು ಹರಿಸು’ ಎಂದು ಕೇಳಿಕೊಂಡ ಸಮಸ್ತರಿಗೂ ಭೂಮಿಯಿಂದ ಪ್ರಯೋಜನವಾಗುವಂತೆ ಮಾಡಿದ. ಉಳದೆ ಬಿತ್ತದೆ ಭೂಮಿಯೇ ಜನರಿಗೆ ಫಲವನ್ನು ನೀಡುವಂತೆ ಮಾಡಿದ. ಆ ಕಾಲದ ಹಸುಗಳೆಲ್ಲ ಕಾಮಧೇನುಗಳೇ. ಎಲೆ ಎಲೆಯಲ್ಲೂ ಜೇನು. ಮರದ ಹಣ್ಣುಗಳೋ ಮಧುರಾತಿ ಮಧುರ. ಜನರೆಲ್ಲ ನೆಮ್ಮದಿವಂತರು ನಿರ್ಭಯ ಜೀವಿಗಳು, ನಿರೋಗಿಗು! ದೇಶ-ನಗರ ಎಂಬ ಭೇದಗಳಿರದಿದ್ದ ರಾಷ್ಟ್ರದಲ್ಲಿ ಅವನ್ನೆಲ್ಲ ಒಪ್ಪಗೊಳಿಸಿದ ಕೀರ್ತಿ ಈತನದು. ಹಳ್ಳತಿಟ್ಟುಗಳಿಂದ ಕೂಡಿದ್ದ ಭೂಮಿಯನ್ನು ಸಮತಟ್ಟಾಗಿ ಮಾಡಿ ಅನೇಕ ಕಡೆ ಉಳಲು ಯೋಗ್ಯವಾಗುವಂತೆ ಮಾಡಿದ ಕೀರ್ತಿ ಈತನದೇ.ರಾಮರಾಜ್ಯ ಎಂದು ಕೇಳಿದ್ದೇವೆ. ಆದರೆ ಅದಕ್ಕಿಂತ ಸೊಗಸಾದ ಕಲ್ಪನಾ ರಾಜ್ಯವನ್ನು ವ್ಯಾಸರು ಪೃಥುವಿನ ಮೂಲಕ ಸೃಷ್ಟಿಸಿದ್ದಾರೆ.ಹದಿನೇಳು ಬಗೆಯ ಬೇಳೆಗಳನ್ನು ಸೃಷ್ಟಿಸಿದ ಕೀರ್ತಿ ಪೃಥ್ವಿಗೆ ಸಲ್ಲುತ್ತದೆ. ಇವನ ಆಡಳಿತ ವೈಭವಯುತವಾಗಿತ್ತು. ಶುಕ್ರಾಚಾರ್ಯರು ಪುರೋಹಿತರು~ ವಾಲಖಿಲ್ಯರು ಮತ್ತು ಸರಸ್ವತೀ ನದಿಯ ತೀರದ ಋಷಿಗಳು ಮಂತ್ರಿಗಳು. ಗರ್ಗ ಮಹರ್ಷಿ ರಾಜಜ್ಯೋತಿಷಿ ಪೃಥುವಿನ ಭಕ್ತಿಗೆ ಮೆಚ್ಚಿ ಸ್ವಯಂ ವಿಷ್ಣುವೇ ಇವನ ಶರೀರವನ್ನು ಪ್ರವೇಶಿಸಿದ್ದನಂತೆ! ಇವನ ಕಾಲದಲ್ಲಿ ವಿಷ್ಣುವಿನ ಹಣೆಯಿಂದ ಹೊರಟ ಚಿನ್ನದ ಕಮಲವೇ ಶ್ರೀದೇವಿಯನ್ನು ಸೃಷ್ಟಿಸಿ ನಮ್ಮ ಅರ್ಥವ್ಯವಸ್ಥೆಗೆ ನಾಂದಿಹಾಡಿತು. ಇಷ್ಟು ಸಾಲದೆ! ಇನ್ನೂ ಬೇಕೆ? ಬ್ರಹ್ಮನು ಎಂಟು ದಿಕ್ಕುಗಳಿಗೆ ಇಂದ್ರಾದಿ ದಿಗ್ವೇವತೆಗಳನ್ನು ಅಧಿಪತಿಗಳಾಗಿ ನೇಮಿಸಿದ್ದು ಈ ಪೃಥುವಿನ ಕಾಲದಲ್ಲೇ.
ರಂತಿದೇವ - ಮಹಾಕರುಣಿ, ಮಹಾದಾನಿ ಎಂದು ಸ್ತುತ್ಯನಾಗಿರುವ ಒಬ್ಬ ಪ್ರಾಚೀನ ದೊರೆ ರಂತಿದೇವ. ದಶಪುರ ಈತನ ರಾಜಧಾನಿ. ಸಂಕೃತಿ ಎಂಬಾತನ ಮಗ ಈತ. ತನ್ನ ಸಮಸ್ತ ಸಂಪತ್ತನ್ನು ಕಳೆದುಕೊಂಡಾಗ ಕೂಡ ಶುದ್ಧ ಮನಸ್ಸಿನಿಂದ ವಸಿಷ್ಠರಿಗೆ ಸ್ವಲ್ಪ ನೀರನ್ನು ಕುಡಿಯಲು ಕೊಟ್ಟವನು. ಈ ಸೇವೆಯಿಂದಾಗಿ ಸ್ವರ್ಗವನ್ನು ಪಡೆದವನು. ಕಾಳಿದಾಸನ ಮೇಘದೂತದಲ್ಲೂ ಇವನ ಸಂಗತಿಯಿದೆ. ಇವನ ಸಾಮಾಜಿಕ ಸೇವೆಯ ಕಾಳಜಿ ಎಷ್ಟಿತ್ತೆಂದರೆ ಅರಮನೆಗೆ ಬರುತ್ತಿದ್ದ ಅತಿಥಿಗಳಿಗೆ ಪ್ರತಿದಿನವೂ ಊಟದ ವ್ಯವಸ್ಥೆ ಮಾಡುವುದಕ್ಕೆ 20,000 ಅಡಿಗೆಯವರನ್ನು ನೇಮಿಸಿದ್ದನಂತೆ. ಹಗಲು-ರಾತ್ರಿ ಅತಿಥಿಗಳಿಗೆ ಸತ್ಕಾರ ಮಾಡುವುದು ಇವನಿಗೆ ಸಂತೋಷದ ಕಾಯಕವಾಗಿತ್ತು. ತಾನು ನ್ಯಾಯವಾಗಿ ಅರ್ಜಿಸಿದ್ದ ಸಮಸ್ತ ಸಂಪತ್ತನ್ನೂ ಬ್ರಾಹ್ಮಣರ ದಾನಕ್ಕೆ ವಿನಿಯೋಗಿಸಿದ ಕೀರ್ತಿ ಈತನದು ಎಂದು ಶಾಂತಿಪರ್ವ (29ನೇ ಅಧ್ಯಾಯ) ದ್ರೋಣಪರ್ವ (ಅಧ್ಯಾಯ 67)ಗಳಲ್ಲಿ ಹೇಳಲಾಗಿದೆ. ಅನುಶಾಸನ ಪರ್ವವಂತೂ, ಹಗಲು-ಇರುಳು ನೆನೆಯಬೇಕಾದ ಆರು ಜನ ಚಕ್ರವರ್ತಿಗಳಲ್ಲಿ ರಂತಿದೇವನೂ ಒಬ್ಬನೆಂದು ಹೇಳುತ್ತದೆ.
ಬಂದ ಅತಿಥಿಗಳಿಗಾಗಿ ಪ್ರತಿನಿತ್ಯ 21,000 ದನಗಳನ್ನು ಕಡಿದು ಮಾಂಸವನ್ನು ಬಡಿಸಲಾಗುತ್ತಿತ್ತು. ತಾನು ಸ್ವಯಂ ಸಸ್ಯಾಹಾರಿಯಾದರೂ ರಂತಿದೇವ ಈ ಬಗೆಯ ಮಾಂಸಾಹಾರವನ್ನು ಸಿದ್ಧಗೊಳಿಸುವಂತೆ ಅಪ್ಪಣೆ ಮಾಡಿದ್ದ. ಈ ದನಗಳ ಸಂಖ್ಯೆ ಎಷ್ಟಾಯಿತೆಂದರೆ ಈ ದನಗಳ ಚರ್ಮದಿಂದ ಸುರಿಯುತ್ತಿದ್ದ ರಕ್ತವೇ ಕೊನೆಗೆ ಚರ್ಮಣ್ವತೀ ನದಿಯಾಯಿತು ಎಂದು ವ್ಯಾಸರು ಹೇಳುತ್ತಾರೆ. ಇಂದು ಈ ನದಿಗೆ ಚಂಬಲ್ ನದಿ, ಚಂಪಾ ನದಿ ಎಂಬ ಹೆಸರಿದೆ. ರಾಶಿ ಹಾಕಿದ ದನಗಳ ಚರ್ಮ ಬೆಟ್ಟದಂತಾಯಿತೆಂದೂ ಮಳೆ ಸುರಿದಾಗ ಈ ಚರ್ಮ ಪರ್ವತದಿಂದ ಹರಿದ ನೀರು ಹೀಗೆ ಚರ್ಮಣ್ವತಿಯಾಯಿತೆಂದೂ ಹೇಳುತ್ತಾರೆ.
ರಂತಿದೇವನ ಭೋಜನ ಶಾಲೆಯಲ್ಲಿ ಅರ್ಪಿತವಾದ ದನಗಳಿಗೆ ಮೋಕ್ಷ ಎಂಬ ಸಂಗತಿಯನ್ನು ತಿಳಿದ ದನಗಳು ತಂಡೋಪತಂಡವಾಗಿ ರಂತಿದೇವನ ಬಳಿಗೆ ಬಂದು ತಮ್ಮನ್ನು ಸ್ವರ್ಗಕ್ಕೆ ಕಳಿಸುವಂತೆ ಬೇಡಿಕೊಳ್ಳುತ್ತಿದ್ದುವಂತೆ! ವಿಷ್ಣುಪುರಾಣ, ಭಾರತ, ಭಾಗವತಗಳಲ್ಲಿಯೂ ರಂತಿದೇವನ ಹಿರಿಮೆಯನ್ನು ಕುರಿತ ಪ್ರಸ್ತಾವಗಳಿವೆ. ಬಂದ ಯಾಚಕರಿಗೆ ಇಲ್ಲವೆನ್ನದ ಈತ ತನ್ನ ಸಂಪತ್ತನ್ನೆಲ್ಲ ಕಳೆದುಕೊಂಡು ನಲವತ್ತು ದಿನ ಉಪವಾಸ ಮಾಡಬೇಕಾಯಿತಂತೆ! ನಲವತ್ತೊಂದನೆಯ ದಿನ ಸ್ವಲ್ಪ ಆಹಾರ, ನೀರು ಸಿಕ್ಕಿದರೆ ಅದನ್ನು ಕೇಳಲು ಭಿಕ್ಷುಕರು ಬಂದರಂತೆ! ಒಂದು ನಾಯಿ ಕೂಡ ಅದರಲ್ಲಿ ಪಾಲಿಗೆ ಬಂದತಂತೆ! ಇಂಥ ದಾನಶೀಲನನ್ನು ದೇವತೆಗಳು ಮೆಚ್ಚದೆ ಇರುತ್ತಾರೆಯೇ?
ಮೂಲ ...{Loading}...
ಭರತ ಪೃಥು ಪೌರವ ಭಗೀರಥ
ವರ ಯಯಾತಿ ಮರುತ್ತ ನಹುಷೇ
ಶ್ವರ ಪುರೂರವ ರಂತಿದೇವ ಗಯಾಂಬರೀಷಕರು
ಪರಶುರಾಮ ದಿಲೀಪ ಮಾಂಧಾ
ತರು ಹರಿಶ್ಚಂದ್ರಾದಿ ಪೃಥ್ವೀ
ಶ್ವರರನಂತರು ಮೃತ್ಯುವಶವರ್ತಿಗಳು ಕೇಳೆಂದ ॥38॥
೦೩೯ ಎನ್ದು ಷೋಡಶ ...{Loading}...
ಎಂದು ಷೋಡಶ ರಾಯರಾ ಕಥೆ
ಯಿಂದ ನೃಪತಿಯ ಸಂತವಿಟ್ಟನು
ಬಂದು ಧರ್ಮಜನೆರಗಿದನು ಮುನಿರಾಯನಂಘ್ರಿಯಲಿ
ಅಂದು ವೇದವ್ಯಾಸ ಪಾಳಯ
ದಿಂದ ಕಳುಹಿಸಿಕೊಂಡನಿತ್ತ ಮು
ಕುಂದನಭಿಮನ್ಯುವಿನ ಮರಣವನರಿದ ಮನದೊಳಗೆ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹದಿನಾರು ಚಕ್ರವರ್ತಿಗಳ ಕಥೆಯಿಂದ ಕಂಪನ ರಾಜನಿಗೆ ನಾರದನು ಸಮಾಧಾನ ಮಾಡಿದನು ಎಂಬುದನ್ನು ವ್ಯಾಸರು ಧರ್ಮರಾಯನಿಗೆ ತಿಳಿಸಿದರು. ಆ ನಂತರ ಧರ್ಮರಾಯನು ವೇದವ್ಯಾಸ ಮಹರ್ಷಿಯ ಪಾದಗಳಿಗೆ ನಮಸ್ಕಾರ ಮಾಡಿದನು. ಅನಂತರ ವೇದವ್ಯಾಸರು ಅರಮನೆಯಿಂದ ಬೀಳ್ಕೊಂಡರು. ಈ ಕಡೆ ಕೃಷ್ಣನು ಅಭಿಮನ್ಯುವಿನ ಮರಣದ ವಿಚಾರವನ್ನು ತನ್ನ ಮನಸ್ಸಿನಲ್ಲಿಯೇ ಅರಿತುಕೊಂಡನು.
ಪದಾರ್ಥ (ಕ.ಗ.ಪ)
ಷೋಡಶ-ಹದಿನಾರು, ನೃಪತಿ-ರಾಜ, ಎರಗು-ವಂದಿಸು, ಅಂಘ್ರಿ-ಪಾದ, ಪಾಳಯ-ಬಿಡಾರ
ಮೂಲ ...{Loading}...
ಎಂದು ಷೋಡಶ ರಾಯರಾ ಕಥೆ
ಯಿಂದ ನೃಪತಿಯ ಸಂತವಿಟ್ಟನು
ಬಂದು ಧರ್ಮಜನೆರಗಿದನು ಮುನಿರಾಯನಂಘ್ರಿಯಲಿ
ಅಂದು ವೇದವ್ಯಾಸ ಪಾಳಯ
ದಿಂದ ಕಳುಹಿಸಿಕೊಂಡನಿತ್ತ ಮು
ಕುಂದನಭಿಮನ್ಯುವಿನ ಮರಣವನರಿದ ಮನದೊಳಗೆ ॥39॥