೦೦೦ ಸೂ ರಿಪುಕುಮಾರ ...{Loading}...
ಸೂ. ರಿಪುಕುಮಾರ ಕುಠಾರ ಧೀರನು
ಚಪಳ ನೃಪಸಂಹಾರ ಕಾಲನು
ವಿಪುಳ ಸಂಗ್ರಾಮದಲಿ ಮಡಿದನು ಫಲುಗುಣನ ತನಯ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಶತ್ರುವಿನ ಮಕ್ಕಳಿಗೆ ಕೊಡಲಿಯಂತಿರುವನೂ ಧೀರನಾದವನೂ ಚಪಲ ಚಿತ್ತವುಳ್ಳ ರಾಜರನ್ನು ಸಂಹಾರ ಮಾಡಿದ ಯಮನೂ ಆದ ಫಲುಗುಣನ ಮಗನಾದ ಅಭಿಮನ್ಯು ಮಹಾರಣರಂಗದಲ್ಲಿ ಮರಣ ಹೊಂದಿದನು.
ಮೂಲ ...{Loading}...
ಸೂ. ರಿಪುಕುಮಾರ ಕುಠಾರ ಧೀರನು
ಚಪಳ ನೃಪಸಂಹಾರ ಕಾಲನು
ವಿಪುಳ ಸಂಗ್ರಾಮದಲಿ ಮಡಿದನು ಫಲುಗುಣನ ತನಯ
೦೦೧ ಮೇರೆದಪ್ಪಿತು ಕೌರವನ ...{Loading}...
ಮೇರೆದಪ್ಪಿತು ಕೌರವನ ಪರಿ
ವಾರದಲಿ ಬೇಹವರು ಮಕುಟದ
ಬಾರಿಯಾಳುಗಳಾಂತುಕೊಂಡರು ಪಾರ್ಥನಂದನನ
ಸೂರಿಯನ ಸುತ ಶಲ್ಯ ಗೌತಮ
ಕೌರವಾನುಜನುಭಯ ಕಟಕಾ
ಚಾರ್ಯನಶ್ವತ್ಥಾಮನಿವರೊಗ್ಗಾಯ್ತು ಷಡುರಥರು ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೈನ್ಯದ ಉತ್ಸಾಹ ಮೇರೆ ಮೀರಿತು. ಅವನ ಸೈನ್ಯದಲ್ಲಿ ಶೂರರು, ಕಿರೀಟ ಹೊತ್ತ ಭಾರಿ ವೀರರು ಅಭಿಮನ್ಯುವನ್ನು ಎದುರಿಸಿದರು. ಸೂರ್ಯಪುತ್ರನಾದ ಕರ್ಣ, ಶಲ್ಯ, ಗೌತಮ, ದುರ್ಯೋಧನನ ಸೋದರನಾದ ದುಶ್ಶಾಸನ, ಪಾಂಡವ-ಕೌರವರ ಧನುರ್ವಿದ್ಯಾ ಗುರು ದ್ರೋಣಾಚಾರ್ಯ ಹಾಗೂ ಅಶ್ವತ್ಥಾಮ ಈ ಆರುಜನ ರಥಿಕರು ಒಟ್ಟಾದರು.
ಪದಾರ್ಥ (ಕ.ಗ.ಪ)
ಆಂತುಕೊಂಡರು-ಮೇಲೆ ಬಿದ್ದರು, ಉಭಯ ಕಟಕಾಚಾರ್ಯ-ದ್ರೋಣ,
ಮೂಲ ...{Loading}...
ಮೇರೆದಪ್ಪಿತು ಕೌರವನ ಪರಿ
ವಾರದಲಿ ಬೇಹವರು ಮಕುಟದ
ಬಾರಿಯಾಳುಗಳಾಂತುಕೊಂಡರು ಪಾರ್ಥನಂದನನ
ಸೂರಿಯನ ಸುತ ಶಲ್ಯ ಗೌತಮ
ಕೌರವಾನುಜನುಭಯ ಕಟಕಾ
ಚಾರ್ಯನಶ್ವತ್ಥಾಮನಿವರೊಗ್ಗಾಯ್ತು ಷಡುರಥರು ॥1॥
೦೦೨ ಹೊಳೆವ ಸಿನ್ಧದ ...{Loading}...
ಹೊಳೆವ ಸಿಂಧದ ಜಡಿವ ಕಹಳಾ
ವಳಿಯ ಲಗ್ಗೆಯ ವಿವಿಧ ವಾದ್ಯದ
ಕಳಕಳದ ಕಾಲಾಳ ಬೊಬ್ಬೆಯ ಬಹಳ ರಭಸದಲಿ
ಕಲಶ ಪಲ್ಲವ ಚೌಕದಲಿ ಮಂ
ಡಳಿಸಿದವು ಸತ್ತಿಗೆಗಳೊದರುವ
ಕೆಲಬಲದ ಶಂಖಾಳಿಯಲಿ ಸಂದಣಿಸಿತತಿರಥರು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಳೆಯುತ್ತಿರುವ ಬಾವುಟದ, ಶಬ್ದ ಮಾಡುತ್ತಿದ್ದ ಕಹಳೆಗಳ, ಯುದ್ಧ ಸಿದ್ಧತೆಯನ್ನು ಸೂಚಿಸುತ್ತಿದ್ದ (ಲಗ್ಗೆ) ವಿವಿಧ ರಣವಾದ್ಯಗಳ ಕಳಕಳ ಬೊಬ್ಬೆ ಮಾಡುತ್ತಿದ್ದ ಕಾಲಾಳುಗಳ ಅತಿ ಹೆಚ್ಚಿನ ರಭಸದಲ್ಲಿ, ವಿಸ್ತಾರವಾದ ರಣರಂಗದಲ್ಲಿ ಛತ್ರಗಳು ಕಲಶಗಳಂತೆ ಸುತ್ತುವರೆದವು. ರಣಘೋಷ ಮಾಡುತ್ತಿದ್ದ ಶಂಖಗಳ ಸಮೂಹದೊಂದಿಗೆ ಅತಿರಥರು ಒಗ್ಗೂಡಿದರು.
ಪದಾರ್ಥ (ಕ.ಗ.ಪ)
ಪಲ್ಲವ-ವಿಸ್ತಾರಿತ,
ಮೂಲ ...{Loading}...
ಹೊಳೆವ ಸಿಂಧದ ಜಡಿವ ಕಹಳಾ
ವಳಿಯ ಲಗ್ಗೆಯ ವಿವಿಧ ವಾದ್ಯದ
ಕಳಕಳದ ಕಾಲಾಳ ಬೊಬ್ಬೆಯ ಬಹಳ ರಭಸದಲಿ
ಕಲಶ ಪಲ್ಲವ ಚೌಕದಲಿ ಮಂ
ಡಳಿಸಿದವು ಸತ್ತಿಗೆಗಳೊದರುವ
ಕೆಲಬಲದ ಶಂಖಾಳಿಯಲಿ ಸಂದಣಿಸಿತತಿರಥರು ॥2॥
೦೦೩ ಅಳವಿಗೊಟ್ಟುದು ಮತ್ತೆ ...{Loading}...
ಅಳವಿಗೊಟ್ಟುದು ಮತ್ತೆ ಕೌರವ
ಬಲಪಯೋನಿಧಿ ವೈರಿ ಬಡಬನ
ಬಿಲು ಸರಳು ಬಿರುಗಿಡಿಯಲೌಕಿತು ಚಾತುರಂಗದಲಿ
ಎಲೆಲೆ ಬೆಂಗಾಹಿನಲಿ ನೂಕುವ
ಬಲ ಸಮರ್ಥರ ಜೋಕೆಯಲಿ ಕುರು
ಬಲಕೆ ಕದನಾಳಾಪವಾಯ್ತೆನುತೆಚ್ಚನಭಿಮನ್ಯು ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ ಬಲ ಸಮುದ್ರವು ಪುನಃ ಯುದ್ಧಕ್ಕೆ ಸಜ್ಜಾಯಿತು. ಪ್ರಳಯಾಗ್ನಿಯಂತಹ (ಅಭಿಮನ್ಯುವಿನ)ವೈರಿಯ ಬಿಲ್ಲಿನಿಂದ ಬಾಣಗಳು ಕೆಂಪುಕಿಡಿಯನ್ನು ಸುರಿಸುತ್ತಾ ಚಾತುರಂಗ ಬಲವನ್ನು ಕವಿಯಿತು. “ಎಲೆಲೆ, ಬೆಂಗಾವಲಿನೊಂದಿಗೆ ಬರುತ್ತಿರುವ ಸಮರ್ಥ ಸೈನ್ಯದ ರಕ್ಷಣೆಯಲ್ಲಿ ಕೌರವ ಬಲಕ್ಕೆ (ಪುನಃ) ಯುದ್ಧ ಪ್ರಾರಂಭವಾಯಿತು” ಎನ್ನುತ್ತಾ ಅಭಿಮನ್ಯು ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಅಳವಿಗೊಟ್ಟುದು-ಪರಾಕ್ರಮವನ್ನು ಒಡ್ಡುತ್ತಿದೆ,
ಮೂಲ ...{Loading}...
ಅಳವಿಗೊಟ್ಟುದು ಮತ್ತೆ ಕೌರವ
ಬಲಪಯೋನಿಧಿ ವೈರಿ ಬಡಬನ
ಬಿಲು ಸರಳು ಬಿರುಗಿಡಿಯಲೌಕಿತು ಚಾತುರಂಗದಲಿ
ಎಲೆಲೆ ಬೆಂಗಾಹಿನಲಿ ನೂಕುವ
ಬಲ ಸಮರ್ಥರ ಜೋಕೆಯಲಿ ಕುರು
ಬಲಕೆ ಕದನಾಳಾಪವಾಯ್ತೆನುತೆಚ್ಚನಭಿಮನ್ಯು ॥3॥
೦೦೪ ಎಸಲು ತಲೆವರಿಗೆಯಲಿ ...{Loading}...
ಎಸಲು ತಲೆವರಿಗೆಯಲಿ ಕವಿದುದು
ದೆಸೆಯ ಹಳುವಿಂಗೌಕುವತಿರಥ
ರುಸುರುಮಾರಿಗಳೇರಿ ಹೊಯ್ದರು ರಾಯ ರಾವುತರು
ನುಸುಳಿದರು ನಾಚಿಕೆಯಲಾತನ
ವಿಶಿಖ ಜಲದಲಿ ತೊಳೆದರತಿರಥ
ರಸಮ ಸಂಗರವಾಯ್ತು ಮತ್ತಭಿಮನ್ಯುವಿದಿರಿನಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣಗಳನ್ನು ಅಸಂಖ್ಯಾತವಾಗಿ ಬಿಟ್ಟಾಗ ಶತ್ರು ಸೇನೆಯ ತಲೆಗಳೇ ಕಾಣದ ಹಾಗೆ ಅವು ಆಕಾಶದಲ್ಲಿ ತುಂಬಿ ಹೋದವು. ದಿಕ್ಕುಗಳೆಂಬ ಕಾಡನ್ನು ಒತ್ತುವ ಹಾಗೆ ಅಧಿಕ ಸಂಖ್ಯೆಯಲ್ಲಿ ಬಂದ ಅತಿರಥರು ಉಸಿರನ್ನು ನಿಲ್ಲಿಸುವ ಮಾರಿದೇವತೆಗಳಾದರು. ಆಗ ಕುದುರೆಯ ಮೇಲಿದ್ದು ಯುದ್ಧ ಮಾಡುತ್ತಿದ್ದ ರಾಜರು ನಾಚಿಕೆಯಿಂದ ನುಸುಳಿ ಪರಾರಿಯಾಗುವಂತಾಯಿತು. ಬಾಣವೆಂಬ ಜಲದಿಂದ ಶತ್ರುಗಳನ್ನು ತೊಳೆದರೆಂಬಂತೆ ಯುದ್ಧ ಭೀಕರವಾಗಿ ಮುಂದುವರಿಯಿತು. ಅಭಿಮನ್ಯು ಮತ್ತೆ ವೀರಾವೇಶದಿಂದ ಹೋರಾಡ ಬೇಕಾಯಿತು.
ಪದಾರ್ಥ (ಕ.ಗ.ಪ)
ಹಳುವು-ಕಾಡು, ಉಸುರು ಮಾರಿ-ಉಸುರನ್ನು ನಿಲ್ಲಿಸುವ ಮಾರಿ, ವಿಶಿಖ-ಬಾಣ, ಅಸಮಸಂಗರ-ಮಹಾಯುದ್ಧ, ತಲೆವರಿಗೆ-ತ¯ Éಕಾಣದಂತೆ
ಮೂಲ ...{Loading}...
ಎಸಲು ತಲೆವರಿಗೆಯಲಿ ಕವಿದುದು
ದೆಸೆಯ ಹಳುವಿಂಗೌಕುವತಿರಥ
ರುಸುರುಮಾರಿಗಳೇರಿ ಹೊಯ್ದರು ರಾಯ ರಾವುತರು
ನುಸುಳಿದರು ನಾಚಿಕೆಯಲಾತನ
ವಿಶಿಖ ಜಲದಲಿ ತೊಳೆದರತಿರಥ
ರಸಮ ಸಂಗರವಾಯ್ತು ಮತ್ತಭಿಮನ್ಯುವಿದಿರಿನಲಿ ॥4॥
೦೦೫ ಹಳಚಿ ಮುರಿದುದು ...{Loading}...
ಹಳಚಿ ಮುರಿದುದು ವೀರ ಕರ್ಣನ
ಬಲ ಕೃಪಾಚಾರಿಯರ ಸೇನೆಗೆ
ತಲೆಯ ಋಣ ಸಂಬಂಧ ಸವೆದುದು ಕಾತರಿಸಿ ಕವಿವ
ಬಲದ ಬಿರುದರಿಗಮರ ನಾರಿಯ
ರೊಳಗೆ ಸೇರುವೆಯಾಯ್ತು ಶಲ್ಯನ
ಬಲದಡಗು ಸವಿಯಾಯ್ತು ಜಂಬುಕ ಕಾಕ ಸಂತತಿಗೆ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರನಾದ ಕರ್ಣನ ಸೈನ್ಯ ಅಭಿಮನ್ಯುವಿನೊಂದಿಗೆ ಹೋರಾಡಿ ಸೋತು ಹಿಂದಿರುಗಿತು. ಕೃಪಾಚಾರ್ಯರ ಸೇನೆಗೆ ತಲೆ ಮತ್ತು ದೇಹದ ಋಣ ಮುಗಿದು ಹೋಯಿತು. ಪರಾಕ್ರಮಕ್ಕೆ ಹೆಸರಾದ ಬಿರುದಾವಳಿಗಳನ್ನು ಪಡೆದ ವೀರರು ಕಾತರದಿಂದ ಯುದ್ಧಕ್ಕೆ ಬಂದು ಸ್ವರ್ಗ ಲೋಕದ ಅಪ್ಸರೆಯರೊಂದಿಗೆ ಸೇರುವಂತಾಯಿತು. ಶಲ್ಯನ ಸೇನೆಯ ಯೋಧರ ಮಾಂಸ ಖಂಡಗಳು ನರಿ, ಕಾಗೆಗಳ ಗುಂಪಿಗೆ ಒಳ್ಳೆಯ ಆಹಾರವಾಯಿತು.
ಮೂಲ ...{Loading}...
ಹಳಚಿ ಮುರಿದುದು ವೀರ ಕರ್ಣನ
ಬಲ ಕೃಪಾಚಾರಿಯರ ಸೇನೆಗೆ
ತಲೆಯ ಋಣ ಸಂಬಂಧ ಸವೆದುದು ಕಾತರಿಸಿ ಕವಿವ
ಬಲದ ಬಿರುದರಿಗಮರ ನಾರಿಯ
ರೊಳಗೆ ಸೇರುವೆಯಾಯ್ತು ಶಲ್ಯನ
ಬಲದಡಗು ಸವಿಯಾಯ್ತು ಜಂಬುಕ ಕಾಕ ಸಂತತಿಗೆ ॥5॥
೦೦೬ ಕೆಡೆದ ರಥ ...{Loading}...
ಕೆಡೆದ ರಥ ಸಲೆ ಕಾಂಚನಾದ್ರಿಯ
ನಡಸಿದವು ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ
ಕಡಲುವರಿವರುಣಾಂಬು ಜಲಧಿಗೆ
ಬಿಡಿಸಿದವು ಬಿಂಕವನು ಶಿವ ಶಿವ
ನುಡಿವ ಕವಿ ಯಾರಿನ್ನು ಪಾರ್ಥ ಕುಮಾರನಾಹವವ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಳಗೆ ಬಿದ್ದ ರಥಗಳು ಒಂದರ ಮೇಲೊಂದು ಬಿದ್ದು ಬಂಗಾರದ ಪರ್ವತದಂತೆ ಆಯಿತು. ರುಂಡಗಳು ನಾಚಿಕೆಯಿಂದ ಆಕಾಶದಲ್ಲಿ ಸೇರಿಕೊಳ್ಳಲು ಆಕಾಶಕ್ಕೆ ಭಂಗವನ್ನು ತರುವಂತೆ ಆಕಾಶಕ್ಕಿಂತ ಮೇಲಕ್ಕೆ ರಾಶಿಯಾದವು. ಸೈನಿಕರ ದೇಹದಿಂದ ಸುರಿದ ರಕ್ತವು ಮೇರೆ ಮೀರಿ ಸಮುದ್ರದ ಜಂಬವನ್ನು ಬಿಡಿಸಿದವು. (ಸಮುದ್ರಕ್ಕಿಂತ ಹೆಚ್ಚಾಗಿ ರಕ್ತವು ಪ್ರವಹಿಸಿತು) ಶಿವ ಶಿವ ಅಭಿಮನ್ಯುವಿನ ಯುದ್ಧವನ್ನು ವರ್ಣಿಸುವ ಕವಿ ಇನ್ನು ಯಾರಿದ್ದಾರೆ ?
ಪದಾರ್ಥ (ಕ.ಗ.ಪ)
ಕಾಂಚನಾದ್ರಿ-ಬಂಗಾರದ ಬೆಟ್ಟ,
ಮೂಲ ...{Loading}...
ಕೆಡೆದ ರಥ ಸಲೆ ಕಾಂಚನಾದ್ರಿಯ
ನಡಸಿದವು ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ
ಕಡಲುವರಿವರುಣಾಂಬು ಜಲಧಿಗೆ
ಬಿಡಿಸಿದವು ಬಿಂಕವನು ಶಿವ ಶಿವ
ನುಡಿವ ಕವಿ ಯಾರಿನ್ನು ಪಾರ್ಥ ಕುಮಾರನಾಹವವ ॥6॥
೦೦೭ ಪಡೆಯ ತೆಗೆ ...{Loading}...
ಪಡೆಯ ತೆಗೆ ತರುವಲಿಯ ಕೊಲ್ಲದೆ
ಹಿಡಿಯೆನುತ ಬಿರುಸರಳ ತಿರುವಿನ
ಲಡಸಿ ಸೂತರಿಗರುಹಿ ಕೆಲಬಲದವರ ಕೈವೀಸಿ
ಕಡುಮನದ ಕೈಚಳಕಿಗರು ಮುಂ
ಗುಡಿಯಲೈತರೆ ರವಿಸುತಾದಿಗ
ಳೊಡನೊಡನೆ ಕೈಕೊಂಡರಿಂದ್ರಕುಮಾರ ನಂದನನ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯವನ್ನು ಹಿಂದಕ್ಕೆ ಕರೆಯಿರಿ, ಅಭಿಮನ್ಯುವು ಬಾಲಕನಾಗಿದ್ದಾನೆ ; ಅವನನ್ನು ಕೊಲ್ಲಬೇಡಿ; ಸೆರೆ ಹಿಡಿಯಿರಿ ಎಂದು ಹೇಳುತ್ತಾ ಬಿರುಸಾದ ಬಾಣವನ್ನು ಬಿಲ್ಲಿಗೆ ಹೂಡಿ ಕೌರವ ಪಕ್ಷದ ಸುತ್ತ ಮುತ್ತಲಿನ ಸೈನಿಕರತ್ತ ಕೈ ಬೀಸಿ ಮುಂದೆ ಬರಲು ಸೂಚಿಸಿ ದೃಢ ಚಿತ್ತದ ನಿಪುಣ ಯೋಧರು ಮುಂದೆ ಮುಂದೆ ಬರಲು ಕರ್ಣನೇ ಮುಂತಾದವರು ಅಭಿಮನ್ಯುವಿನೊಡನೆ ಯುದ್ಧಕ್ಕೆ ತೊಡಗಿದರು.
ಪದಾರ್ಥ (ಕ.ಗ.ಪ)
ಅಡಸಿ-ಸೇರಿಸಿ
ಮೂಲ ...{Loading}...
ಪಡೆಯ ತೆಗೆ ತರುವಲಿಯ ಕೊಲ್ಲದೆ
ಹಿಡಿಯೆನುತ ಬಿರುಸರಳ ತಿರುವಿನ
ಲಡಸಿ ಸೂತರಿಗರುಹಿ ಕೆಲಬಲದವರ ಕೈವೀಸಿ
ಕಡುಮನದ ಕೈಚಳಕಿಗರು ಮುಂ
ಗುಡಿಯಲೈತರೆ ರವಿಸುತಾದಿಗ
ಳೊಡನೊಡನೆ ಕೈಕೊಂಡರಿಂದ್ರಕುಮಾರ ನಂದನನ ॥7॥
೦೦೮ ಶಿಶುತನದ ಸಾಮಥ್ರ್ಯ ...{Loading}...
ಶಿಶುತನದ ಸಾಮಥ್ರ್ಯ ಸಾಕಿ
ನ್ನೆಸದಿರೆಲವೋ ಮರಳು ಮರಳೆಂ
ದಸಮ ಬಲರೈದಿದರು ಷಡುರಥರೊಂದು ಮುಖವಾಗಿ
ಎಸುಗೆ ನಿಮಗೆಂದಾಯ್ತು ನಿದ್ರೆಯ
ಮುಸುಕಿನಲಿ ಗೋಗ್ರಹಣದಲಿ ಜೀ
ವಿಸಿದ ಜಾಣರು ನೀವೆನುತ್ತಿದಿರಾದನಭಿಮನ್ಯು ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಲಕತನದ ಪರಾಕ್ರಮ ಸಾಕು. ಇನ್ನು ಬಾಣ ಪ್ರಯೋಗ ಮಾಡಬೇಡ, ಹಿಂದಿರುಗು ಹೋಗು ಹೋಗು ಎಂದು ಅಸಮಬಲರಾದ ಆರು ಜನ ರಥಿಕರು ಒಂದು ಕಡೆಯಿಂದ ಬಂದರು. “ಈ ಬಾಣಪ್ರಯೋಗ ನಿಮಗೆ ಎಂದು ಸಿದ್ಧಿಸಿತು ? ನಿದ್ರೆಯ ಮುಸುಕಿನಲ್ಲಿ (ಘೋಷ ಯಾತ್ರೆಯಲ್ಲಿ), ಗೋಗ್ರಹಣದಲ್ಲಿ ಯುದ್ಧರಂಗದಿಂದ ಓಡಿ ಹೋಗಿ ಜೀವವನ್ನು ಉಳಿಸಿಕೊಂಡ ಜಾಣರು ನೀವು” ಎನ್ನುತ್ತಾ ಅಭಿಮನ್ಯು ಅವರಿಗೆ ಎದುರಾದನು.
ಮೂಲ ...{Loading}...
ಶಿಶುತನದ ಸಾಮಥ್ರ್ಯ ಸಾಕಿ
ನ್ನೆಸದಿರೆಲವೋ ಮರಳು ಮರಳೆಂ
ದಸಮ ಬಲರೈದಿದರು ಷಡುರಥರೊಂದು ಮುಖವಾಗಿ
ಎಸುಗೆ ನಿಮಗೆಂದಾಯ್ತು ನಿದ್ರೆಯ
ಮುಸುಕಿನಲಿ ಗೋಗ್ರಹಣದಲಿ ಜೀ
ವಿಸಿದ ಜಾಣರು ನೀವೆನುತ್ತಿದಿರಾದನಭಿಮನ್ಯು ॥8॥
೦೦೯ ತರಳತನದಲಿ ನುಡಿಯದಿರು ...{Loading}...
ತರಳತನದಲಿ ನುಡಿಯದಿರು ಸಂ
ಗರಕೆ ಕರೆ ನಿಮ್ಮಯ್ಯನನು ಹೊಸ
ಸರಳು ನಾಚುವವಲ್ಲ ಶಿಶುವಧೆಯೆಂಬುದಪವಾದ
ಮರಳುವುದು ಲೇಸೆನುತ ಷಡುರಥ
ರುರವಣಿಸಿದರು ಬಿಗಿದಬಿಲ್ಲಿನ
ಗರುಡಿಕಾರನ ಕೂಡ ನೂಕಿತು ರವಿಸುತಾದಿಗಳು ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಬಾಲಕತನದಲ್ಲಿ ಮಾತನ್ನಾಡಬೇಡ, ಯುದ್ಧಕ್ಕೆ ನಿಮ್ಮ ತಂದೆಯಾದ ಅರ್ಜುನನನ್ನು ಕರೆ. ನಮ್ಮ ಹೊಸ ಬಾಣಗಳು ನಾಚಿಕೆಯನ್ನು ತೋರಿಸುವವಲ್ಲ (ಅವುಗಳು ನಿನ್ನನ್ನು ಕೊಲ್ಲುತ್ತವೆ) ಶಿಶುವಧೆಯೆಂಬ ಅಪವಾದ ಬರುತ್ತದೆ. ನೀನು ಹಿಂದಿರುಗುವುದು ಒಳ್ಳೆಯದು." ಎನ್ನುತ್ತ ಕರ್ಣಾದಿ ಆರು ಜನ ರಥಿಕರು ಹೆದೆಯನ್ನು ಕಟ್ಟಿ ಸಿದ್ಧಗೊಳಿಸಲಾದ ಬಿಲ್ಲನ್ನು ಹಿಡಿದ ದ್ರೋಣನೊಡನೆ ಮುಂದುವರಿದರು.
ಮೂಲ ...{Loading}...
ತರಳತನದಲಿ ನುಡಿಯದಿರು ಸಂ
ಗರಕೆ ಕರೆ ನಿಮ್ಮಯ್ಯನನು ಹೊಸ
ಸರಳು ನಾಚುವವಲ್ಲ ಶಿಶುವಧೆಯೆಂಬುದಪವಾದ
ಮರಳುವುದು ಲೇಸೆನುತ ಷಡುರಥ
ರುರವಣಿಸಿದರು ಬಿಗಿದಬಿಲ್ಲಿನ
ಗರುಡಿಕಾರನ ಕೂಡ ನೂಕಿತು ರವಿಸುತಾದಿಗಳು ॥9॥
೦೧೦ ಪಾರ್ಥ ಪರಿಯನ್ತೇಕೆ ...{Loading}...
ಪಾರ್ಥ ಪರಿಯಂತೇಕೆ ಸಮರ
ವ್ಯರ್ಥಜೀವರು ನೀವು ಕೌರವ
ನರ್ಥವನು ಸಲೆ ತಿಂಬುದಲ್ಲದೆ ಸಮರ ನಿಮಗೇಕೆ
ಸ್ವಾರ್ಥ ಲೋಲುಪ್ತಿಯಲಿ ನಿಲುವ ಸ
ಮರ್ಥರಾದರೆ ಬಾಣ ಧಾರಾ
ತೀರ್ಥದೊಳಗೋಲಾಡಿಸುವೆನೆಂದೆಚ್ಚನಭಿಮನ್ಯು ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥನವರೆಗೂ ಯುದ್ಧವೇಕೆ (ಈಗ ಅವನ ಅವಶ್ಯಕತೆಯಿಲ್ಲ) ನೀವು ವ್ಯರ್ಥವಾಗಿ ಬದುಕುತ್ತಿರುವವರು. ನೀವು ದುರ್ಯೋಧನನ ಹಣವನ್ನು ತಿನ್ನುತ್ತೀರಲ್ಲದೆ ಯುದ್ಧ ನಿಮಗೇಕೆ ? ನಿಮ್ಮ ಸ್ವಂತ ಸಂಪಾದನೆಯ ಶಕ್ತಿಯ ಬಲದ ಮೇಲೆ ನೀವು ನಿಲ್ಲಲು ಸಮರ್ಥರಾದರೆ ಬಾಣದ ಹರಿತವಾದ ಮೊನೆಯೆಂಬ ಪುಣ್ಯ ಸ್ಥಳಗಳಲ್ಲಿ ನಿಮ್ಮನ್ನು ಓಲಾಡಿಸುತ್ತೇನೆಂದು ಅಭಿಮನ್ಯುವು ಬಾಣಗಳಿಂದ ಹೊಡೆದ.
ಪದಾರ್ಥ (ಕ.ಗ.ಪ)
ಬಾಣಧಾರಾತೀರ್ಥ-ಬಾಣದ ಮೊನೆಯೆಂಬ ಪುಣ್ಯ ಕ್ಷೇತ್ರ.
ಮೂಲ ...{Loading}...
ಪಾರ್ಥ ಪರಿಯಂತೇಕೆ ಸಮರ
ವ್ಯರ್ಥಜೀವರು ನೀವು ಕೌರವ
ನರ್ಥವನು ಸಲೆ ತಿಂಬುದಲ್ಲದೆ ಸಮರ ನಿಮಗೇಕೆ
ಸ್ವಾರ್ಥ ಲೋಲುಪ್ತಿಯಲಿ ನಿಲುವ ಸ
ಮರ್ಥರಾದರೆ ಬಾಣ ಧಾರಾ
ತೀರ್ಥದೊಳಗೋಲಾಡಿಸುವೆನೆಂದೆಚ್ಚನಭಿಮನ್ಯು ॥10॥
೦೧೧ ಮನದ ಕೆಚ್ಚುಳ್ಳದಟನಹೆ ...{Loading}...
ಮನದ ಕೆಚ್ಚುಳ್ಳದಟನಹೆ ಮಾ
ತಿನ ಸಘಾಡಿಕೆ ಲೇಸು ಪಾರ್ಥನ
ತನಯನಲ್ಲಾ ಪೂತು ಪಾಯಿಕು ಎನುತ ಷಡುರಥರು
ತನತನಗೆ ಕೆಂಗೋಲಿನಲಿ ಮು
ಮ್ಮೊನೆಯ ಬೋಳೆಯ ಸರಳಿನಲಿ ಸಾ
ಧನ ಸಮಗ್ರರು ಶಿಶುವನೆಚ್ಚರು ದೆಸೆದೆಸೆಗೆ ಕವಿದು ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನದಲ್ಲಿ ಧೈರ್ಯವುಳ್ಳ ವೀರನಾಗಿದ್ದೀಯೆ. ಮಾತಿನ ತೀಕ್ಷ್ಣತೆ ಚೆನ್ನಾಗಿದೆ. ಪಾರ್ಥನ ಮಗನಲ್ಲವೇ, ಭಲೇ ! ಎನ್ನುತ್ತ ಆ ಷಡ್ರಥರು, ತಮ್ಮ ತಮ್ಮ ಕೆಂಪಾದ ಬಾಣಗಳಲ್ಲಿ, ತುದಿ ಚೂಪಾದ ಬೋಳೆಯಂಬುಗಳಲ್ಲಿ ಎಲ್ಲ ಯುದ್ಧ ಸಾಮಗ್ರಿಗಳನ್ನು ಹೊಂದಿದ ಈ ವೀರರು ದಿಕ್ಕು ದಿಕ್ಕುಗಳಿಂದ ಮುತ್ತಿ ಈ ಬಾಲಕನನ್ನು ಹೊಡೆದರು.
ಪದಾರ್ಥ (ಕ.ಗ.ಪ)
ಅದಟ-ಧೀರ, ಸಘಾಡಿಕೆ-ತೀಕ್ಷ್ಣ, ಪೂತು-ಪಾಯಿಕು-ಭೇಷ್, ಮುಮ್ಮೊನೆಯ-ಚಾಚಿಕೊಂಡ ಚೂಪು ತುದಿಯ,
ಮೂಲ ...{Loading}...
ಮನದ ಕೆಚ್ಚುಳ್ಳದಟನಹೆ ಮಾ
ತಿನ ಸಘಾಡಿಕೆ ಲೇಸು ಪಾರ್ಥನ
ತನಯನಲ್ಲಾ ಪೂತು ಪಾಯಿಕು ಎನುತ ಷಡುರಥರು
ತನತನಗೆ ಕೆಂಗೋಲಿನಲಿ ಮು
ಮ್ಮೊನೆಯ ಬೋಳೆಯ ಸರಳಿನಲಿ ಸಾ
ಧನ ಸಮಗ್ರರು ಶಿಶುವನೆಚ್ಚರು ದೆಸೆದೆಸೆಗೆ ಕವಿದು ॥11॥
೦೧೨ ಮಸಗಿ ಮದದಾನೆಗಳು ...{Loading}...
ಮಸಗಿ ಮದದಾನೆಗಳು ಸಿಂಹದ
ಶಿಶುವ ಮುತ್ತುವವೋಲು ಕವಿಕವಿ
ದೆಸುತ ಬಂದರು ಮಕುಟವರ್ಧನರಸಮ ಬಾಲಕನ
ನುಸುಳದವರವರಸ್ತ್ರವನು ಖಂ
ಡಿಸುತ ಸನ್ನಾಹದಲಿ ಘನ ಪೌ
ರುಷದಲೆಚ್ಚಾಡಿದನು ಹಲಬರ ಕೂಡೆ ಸುಕುಮಾರ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೆನ್ನಾಗಿ ಕೊಬ್ಬಿದ ಮದ್ದಾನೆಗಳು ಸಿಂಹದ ಮರಿಯನ್ನು ಮುತ್ತುವ ಹಾಗೆ ನಾಲ್ಕು ದಿಕ್ಕುಗಳಿಂದ ಕಿರೀಟಧಾರಿಗಳಾದ ಅವರು ಅಸಮಬಲನಾದ ಬಾಲಕನನ್ನು ಹೊಡೆಯುತ್ತಾ ಬಂದರು. ಅವರಿಂದ ತಪ್ಪಿಸಿಕೊಂಡು ಹೋಗದೇ ಅವರು ಬಿಟ್ಟ ಅಸ್ತ್ರಗಳನ್ನು ಕತ್ತರಿಸುತ್ತಾ ಮಹಾ ಪೌರುಷದಿಂದ ಅನೇಕರ ಜೊತೆಗೆ ಸುಕುಮಾರನಾದ ಅಭಿಮನ್ಯುವು ಬಾಣಗಳಿಂದ ಹೊಡೆದಾಡಿದ.
ಮೂಲ ...{Loading}...
ಮಸಗಿ ಮದದಾನೆಗಳು ಸಿಂಹದ
ಶಿಶುವ ಮುತ್ತುವವೋಲು ಕವಿಕವಿ
ದೆಸುತ ಬಂದರು ಮಕುಟವರ್ಧನರಸಮ ಬಾಲಕನ
ನುಸುಳದವರವರಸ್ತ್ರವನು ಖಂ
ಡಿಸುತ ಸನ್ನಾಹದಲಿ ಘನ ಪೌ
ರುಷದಲೆಚ್ಚಾಡಿದನು ಹಲಬರ ಕೂಡೆ ಸುಕುಮಾರ ॥12॥
೦೧೩ ಕೋಡಿದನೆ ಕೊಙ್ಕಿದನೆ ...{Loading}...
ಕೋಡಿದನೆ ಕೊಂಕಿದನೆ ನಾಯಕ
ವಾಡಿಗಳು ಹಲರೆಂದು ಬೆಂಗೊ
ಟ್ಟೋಡಿದನೆ ಕೈಗಾಯದೆಚ್ಚನು ನಚ್ಚಿದಂಬಿನಲಿ
ತೋಡು ಬೀಡಿನ ಹವಣನಾತನ
ಮಾಡಿದಾತನೆ ಬಲ್ಲನೆನೆ ಕೈ
ಮಾಡಿ ಸುರಿದನು ಸರಳ ಮಳೆಯ ಮಹಾರಥರ ಮೇಲೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆದರಿದನೆ, ಸರಿದನೆ, ಶತ್ರು ಪಕ್ಷದ ನಾಯಕರು ಹಲವರಿದ್ದಾರೆಂದು ಬೆನ್ನು ತೋರಿಸಿ ಓಡಿದನೆ, ತಾನು ನೆಚ್ಚಿದ್ದ ಬಾಣಗಳಿಂದ, ಶತ್ರುಗಳನ್ನು ಉಳಿಸದೇ ಹೊಡೆದ. ಅವನು ಬಾಣವನ್ನು ತೊಡುವ ಬಿಡುವ ಚಾತುರ್ಯವನ್ನು ಅವನನ್ನು ಸೃಷ್ಟಿಸಿದ ಬ್ರಹ್ಮ ಮಾತ್ರ ಬಲ್ಲನೆನ್ನುವಂತೆ ಬಾಣಗಳ ಮಳೆಯನ್ನು ಮಹಾರಥರ ಮೇಲೆ ಸುರಿಸಿದ.
ಪದಾರ್ಥ (ಕ.ಗ.ಪ)
ಕೋಡಿದನೆ-ಹೆದರಿದನೆ, ಕೊಂಕಿದನೆ-ಪಕ್ಕಕ್ಕೆ ಸರಿದನೆ ? ತೋಡು-ತೊಡು, ಬೀಡು-ಬಿಡು
ಮೂಲ ...{Loading}...
ಕೋಡಿದನೆ ಕೊಂಕಿದನೆ ನಾಯಕ
ವಾಡಿಗಳು ಹಲರೆಂದು ಬೆಂಗೊ
ಟ್ಟೋಡಿದನೆ ಕೈಗಾಯದೆಚ್ಚನು ನಚ್ಚಿದಂಬಿನಲಿ
ತೋಡು ಬೀಡಿನ ಹವಣನಾತನ
ಮಾಡಿದಾತನೆ ಬಲ್ಲನೆನೆ ಕೈ
ಮಾಡಿ ಸುರಿದನು ಸರಳ ಮಳೆಯ ಮಹಾರಥರ ಮೇಲೆ ॥13॥
೦೧೪ ಪೂತು ಮಝ ...{Loading}...
ಪೂತು ಮಝ ಬಿಲ್ಲಾಳುತನವಿದು
ಭೂತನಾಥಂಗಿಲ್ಲ ಸುಭಟ
ವ್ರಾತವೀಕ್ಷಿಸಲರಿದೆನುತ ಕಣೆಗೆದರಿದನು ದ್ರೋಣ
ಏತಕಿದು ಹಿಮ್ಮೆಟ್ಟು ದಿಟ ನೀ
ಸೋತಡೆಯು ಜಯವಿಲ್ಲೆಮಗೆ ಮೃಗ
ಪೋತನನು ಹರಿಹೊಯ್ವುದುಚಿತವೆ ಮಗನೆ ಕೇಳ್ ಎಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲೇ, ಈ ಬಿಲ್ಲಳುತನ ಶಿವನಿಗೇ ಇಲ್ಲ. ವೀರರಿಗೆ ಈ ಯುದ್ಧವನ್ನು ನೋಡಲೂ ಸಾಧ್ಯವಿಲ್ಲ ಎನ್ನುತ್ತಾ ದ್ರೋಣ, ಬಾಣಗಳನ್ನು ಪ್ರಯೋಗಿಸಿದ. ಏಕೆ ಈ ಯುದ್ಧ, ನೀನು ಯುದ್ಧದಿಂದ ಹಿಂದೆ ಸರಿ. ದಿಟವಾಗಿಯೂ ನೀನು ಸೋತರೂ ಸಹ ನಮಗೆ ಜಯವಿಲ್ಲ (ನಮ್ಮ ಗುರಿ ನೀನಲ್ಲ) ಜಿಂಕೆಯ ಮರಿಯನ್ನು ಸಿಂಹ ಹೊಡೆದು ಹಾಕುವುದು ನ್ಯಾಯವೇ, ಮಗನೆ ಕೇಳು ಎಂದು ದ್ರೋಣ ಹೇಳಿದ.
ಪದಾರ್ಥ (ಕ.ಗ.ಪ)
ಮೃಗಪೋತ-ಜಿಂಕೆಯ ಮರಿ ,
ಹರಿ -ಸಿಂಹ
ಮೂಲ ...{Loading}...
ಪೂತು ಮಝ ಬಿಲ್ಲಾಳುತನವಿದು
ಭೂತನಾಥಂಗಿಲ್ಲ ಸುಭಟ
ವ್ರಾತವೀಕ್ಷಿಸಲರಿದೆನುತ ಕಣೆಗೆದರಿದನು ದ್ರೋಣ
ಏತಕಿದು ಹಿಮ್ಮೆಟ್ಟು ದಿಟ ನೀ
ಸೋತಡೆಯು ಜಯವಿಲ್ಲೆಮಗೆ ಮೃಗ
ಪೋತನನು ಹರಿಹೊಯ್ವುದುಚಿತವೆ ಮಗನೆ ಕೇಳೆಂದ ॥14॥
೦೧೫ ವಿನಯವೇಕಿದು ನಿಮ್ಮ ...{Loading}...
ವಿನಯವೇಕಿದು ನಿಮ್ಮ ಭುಜಬಲ
ದನುವ ಬಲ್ಲೆನು ನಿಮ್ಮ ಕೈಮೈ
ತನದ ಹವಣನು ಕಾಬೆನೆನ್ನೊಳು ಸೆಣಸಿ ಜಯಿಸಿದರೆ
ಧನುವ ಹಿಡಿಯೆನು ಸಾಕು ಡೊಂಬನ
ಬಿನುಗು ನುಡಿಯಂತಿರಲಿ ಬಲ್ಲಡೆ
ಮೊನೆಗಣೆಯಲೇ ಮಾತನಾಡೆಂದೆಚ್ಚನಭಿಮನ್ಯು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀವು ಏಕೆ ವಿನಯದ ಮಾತುಗಳನ್ನಾಡುತ್ತಿರುವಿರಿ ? ನಿಮ್ಮ ಭುಜಬಲದ ಪರಾಕ್ರಮ ಎಷ್ಟೆಂದು ನನಗೆ ತಿಳಿದಿದೆ. ನಾನು ನಿಮ್ಮ ಕೈಚಳಕ ಮತ್ತು ದೇಹದಾಢ್ರ್ಯಗಳನ್ನು ನೋಡಿಯೇ ಬಿಡುತ್ತೇನೆ. ನೀವು ನನ್ನೊಡನೆ ಹೋರಾಡಿ ಜಯವನ್ನು ಗಳಿಸಿದರೆ ನಾನು ಮುಂದೆ ಬಿಲ್ಲನ್ನೇ ಹಿಡಿಯುವುದಿಲ್ಲ. ಡೊಂಬರಂತಹವರ ಅಲ್ಪತನದ ಮಾತುಗಳು ಈಗ ಬೇಡ. ಶಕ್ತಿ ಇದ್ದರೆ ಬಾಣಗಳ ತುದಿಯಿಂದ ಉತ್ತರವನ್ನು ಕೊಡಿ’ ಎಂದು ಹೇಳುತ್ತಾ ಅಭಿಮನ್ಯು ಬಾಣಗಳನ್ನು ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಅನುವ-ರೀತಿ, ಹವಣನು-ರೀತಿಯನ್ನು
ಬಿನುಗು-ಅಲ್ಪತನ , ಮೊನೆಗಣೆ-ಚೂಪಾದ ಬಾಣ
ಮೂಲ ...{Loading}...
ವಿನಯವೇಕಿದು ನಿಮ್ಮ ಭುಜಬಲ
ದನುವ ಬಲ್ಲೆನು ನಿಮ್ಮ ಕೈಮೈ
ತನದ ಹವಣನು ಕಾಬೆನೆನ್ನೊಳು ಸೆಣಸಿ ಜಯಿಸಿದರೆ
ಧನುವ ಹಿಡಿಯೆನು ಸಾಕು ಡೊಂಬನ
ಬಿನುಗು ನುಡಿಯಂತಿರಲಿ ಬಲ್ಲಡೆ
ಮೊನೆಗಣೆಯಲೇ ಮಾತನಾಡೆಂದೆಚ್ಚನಭಿಮನ್ಯು ॥15॥
೦೧೬ ಎಡದೊಳೌಕುವ ಕೃಪನನೆಚ್ಚನು ...{Loading}...
ಎಡದೊಳೌಕುವ ಕೃಪನನೆಚ್ಚನು
ತಡೆಯಲಶ್ವತ್ಥಾಮನನು ರಥ
ಕೆಡೆಯಲೆಚ್ಚನು ತೊಡಚಿ ಕೈಯಲಿ ಕೌರವಾನುಜನ
ಮಿಡುಕಲೆಚ್ಚನು ಹಿಂದು ಮುಂದವ
ಗಡಿಸಿದಾ ಮಾದ್ರೇಯ ರವಿಸುತ
ರೊಡಲೊಳಂಬನು ಹೂಳಿದನು ಸೀಳಿದನು ಸಮರಥರ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಡಭಾಗದಿಂದ ನುಗ್ಗುತ್ತಿದ್ದ ಕೃಪನನ್ನು ಬಾಣದಲ್ಲಿ ಹೊಡೆದು, ಮತ್ತೊಂದು ಕಡೆಯಿಂದ ಬಂದ ಅಶ್ವತ್ಥಾಮನು ಅಡ್ಡಗಟ್ಟಲು ರಥ ಮುರಿದು ಹೋಗುವ ಹಾಗೆ ಹೊಡೆದು, ದುರ್ಯೋಧನನ ತಮ್ಮನಾದ ದುಶ್ಶಾಸನನನ್ನು ನಡುಗುವಂತೆ ಕೈಯಿಂದ ಬಡಿದು, ಹಿಂದೆ-ಮುಂದೆ ಬಂದ ಶಲ್ಯ ಹಾಗೂ ಕರ್ಣರ ದೇಹದೊಳಗೆ ಬಾಣವನ್ನು ಹೊಗಿಸಿದ. ಸಮರಥರನ್ನು ಸೀಳಿದ.
ಪದಾರ್ಥ (ಕ.ಗ.ಪ)
ತೊಡಚಿ-ಹಿಡಿದು, ಮಿಡುಕಲು-ನಡುಗಲು
ಮೂಲ ...{Loading}...
ಎಡದೊಳೌಕುವ ಕೃಪನನೆಚ್ಚನು
ತಡೆಯಲಶ್ವತ್ಥಾಮನನು ರಥ
ಕೆಡೆಯಲೆಚ್ಚನು ತೊಡಚಿ ಕೈಯಲಿ ಕೌರವಾನುಜನ
ಮಿಡುಕಲೆಚ್ಚನು ಹಿಂದು ಮುಂದವ
ಗಡಿಸಿದಾ ಮಾದ್ರೇಯ ರವಿಸುತ
ರೊಡಲೊಳಂಬನು ಹೂಳಿದನು ಸೀಳಿದನು ಸಮರಥರ ॥16॥
೦೧೭ ಅಡಸಿ ಹೊಕ್ಕರೆ ...{Loading}...
ಅಡಸಿ ಹೊಕ್ಕರೆ ಕೃಪನ ರಥವನು
ಕಡಿದು ಬಿಸುಟನು ಗುರುಸುತನನಡಿ
ಮಿಡುಕಲೀಯದೆ ಬಿಗಿದು ಕರ್ಣನ ಧನುವ ಖಂಡಿಸಿದ
ಕೊಡಹಿದನು ಕೌರವನ ರಥವನು
ತುಡುಕಲೀಯದೆ ದ್ರೋಣನನು ಜವ
ಗೆಡಿಸಿದನು ಜೋಡಿಸಿದ ಷಡುರಥರೊಗ್ಗನೊಡೆಹೊಯ್ದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಪಾಚಾರ್ಯನು ಮೇಲೆ ಬಿದ್ದು ಬರಲು ಅಭಿಮನ್ಯು ಅವನ ರಥವನ್ನು ಕಡಿದು ಬಿಸಾಡಿದ. ದ್ರೋಣರ ಮಗನಾದ ಅಶ್ವತ್ಥಾಮನು ಒಂದು ಅಡಿಯೂ ಮುಂದೆ ಬರದಂತೆ ತಡೆದನು. ಕರ್ಣನ ಬಿಲ್ಲನ್ನು ಕತ್ತರಿಸಿ, ಕೌರವನ (ದುರ್ಯೋಧನನ) ರಥವನ್ನು ಉರುಳಿಸಿದನು. ದ್ರೋಣಾಚಾರ್ಯನು ಆಯುಧಗಳನ್ನು ಹಿಡಿಯಲು ಬಿಡದೆ ಅವನ ವೇಗವನ್ನು ತಪ್ಪಿಸಿದನು. ಆರು ಜನ ಅತಿರಥರ ಗುಂಪನ್ನು ಮುರಿಯುವಂತೆ ಹೊಡೆದ.
ಪದಾರ್ಥ (ಕ.ಗ.ಪ)
ಅಡಸಿ-ಮೇಲೆ ಬಿದ್ದು, ಮಿಡುಕಲು-ಮುಂದುವರಿಯಲು-ಅಲ್ಲಾಡಲು, ಜವ-ವೇಗ, ಒಗ್ಗನು-ಗುಂಪನ್ನು
ಮೂಲ ...{Loading}...
ಅಡಸಿ ಹೊಕ್ಕರೆ ಕೃಪನ ರಥವನು
ಕಡಿದು ಬಿಸುಟನು ಗುರುಸುತನನಡಿ
ಮಿಡುಕಲೀಯದೆ ಬಿಗಿದು ಕರ್ಣನ ಧನುವ ಖಂಡಿಸಿದ
ಕೊಡಹಿದನು ಕೌರವನ ರಥವನು
ತುಡುಕಲೀಯದೆ ದ್ರೋಣನನು ಜವ
ಗೆಡಿಸಿದನು ಜೋಡಿಸಿದ ಷಡುರಥರೊಗ್ಗನೊಡೆಹೊಯ್ದ ॥17॥
೦೧೮ ಮುರಿಮುರಿದು ಹಿಯ್ಯಾಳಿಯಲಿ ...{Loading}...
ಮುರಿಮುರಿದು ಹಿಯ್ಯಾಳಿಯಲಿ ಮ
ತ್ತುರವಣಿಸಿ ಗರಿಗಟ್ಟಿ ರಥಿಕರು
ಹುರಿಬಿಡದೆ ಬಿಗುಹಿನಲಿ ಭಾಷೆಯ ಮಾಡಿ ತಮ್ಮೊಳಗೆ
ಸರಳ ಸೂಸಿದರೆಡ ಬಲದಲ
ಬ್ಬರವ ಮಾಡಿದರೋಡಿದರು ಹಗೆ
ಯರುಣ ಜಲದಲಿ ನಾದಿದರು ನಿಶಿತಾಸ್ತ್ರ ಸಂತತಿಯ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುನಃ ಪುನಃ ನಿಂದಿಸುತ್ತಾ ಮತ್ತೆ ಮೇಲೆ ಬಿದ್ದು ಹುರುಪಿನಿಂದ ರಥಿಕರು ಗಟ್ಟಿಯಾಗಿ ತಮ್ಮ ತಮ್ಮೊಳಗೆ ಶಪಥ ಮಾಡಿ ಬಾಣಗಳನ್ನು ಸೂಸಿದರು. ಶತ್ರುವಿನ (ಅಭಿಮನ್ಯುವಿನ) ಎಡಬಲಗಳಲ್ಲಿ ಅಬ್ಬರವನ್ನುಂಟು ಮಾಡಿ ಓಡಿದರು. ಶತ್ರುವಿನ ರಕ್ತ ಜಲದಲ್ಲಿ ತಮ್ಮ ಹರಿತವಾದ ಆಯುಧಗಳ ಸಮೂಹವನ್ನು ನೆನೆಸಿದರು.
ಪದಾರ್ಥ (ಕ.ಗ.ಪ)
ಹಿಯ್ಯಾಳಿ-ನಿಂದನೆ, ಹುರಿಬಿಡದೆ-ಒಗ್ಗಟ್ಟನ್ನು ಬಿಡದೆ, ಅರುಣಜಲ-ರಕ್ತ, ನಿಶಿತಾಸ್ತ್ರ-ಚೂಪಾದ ಅಸ್ತ್ರ
ಮೂಲ ...{Loading}...
ಮುರಿಮುರಿದು ಹಿಯ್ಯಾಳಿಯಲಿ ಮ
ತ್ತುರವಣಿಸಿ ಗರಿಗಟ್ಟಿ ರಥಿಕರು
ಹುರಿಬಿಡದೆ ಬಿಗುಹಿನಲಿ ಭಾಷೆಯ ಮಾಡಿ ತಮ್ಮೊಳಗೆ
ಸರಳ ಸೂಸಿದರೆಡ ಬಲದಲ
ಬ್ಬರವ ಮಾಡಿದರೋಡಿದರು ಹಗೆ
ಯರುಣ ಜಲದಲಿ ನಾದಿದರು ನಿಶಿತಾಸ್ತ್ರ ಸಂತತಿಯ ॥18॥
೦೧೯ ವಡಬಗೌತಣವಿಕ್ಕುವರೆ ಕಡ ...{Loading}...
ವಡಬಗೌತಣವಿಕ್ಕುವರೆ ಕಡ
ಲೊಡೆಯಗಹುದು ಸಮರ್ಥನಲ್ಲಾ
ಬಿಡುಗಣೆಯ ಬೀರುವರೆ ಕಟಕಾಚಾರ್ಯನೆಂದೆನುತ
ಕಡುಮೊನೆಯ ಕೂರಂಬುಗಳ ಮಿಗೆ
ಗಡಣಿಸಿದನೊಗ್ಗೊಡೆದ ಷಡುರಥ
ರೊಡಲೊಳಂಬನು ಹೂಳಿದನು ಕಾರಿದರು ಶೋಣಿತವ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪ್ರಳಯಾಗ್ನಿಗೆ ಔತಣ ನೀಡಲು ಸಮುದ್ರ ರಾಜನಿಗೆ ಮಾತ್ರ ಸಾಧ್ಯವಲ್ಲವೇ. ಅವನೊಬ್ಬನೇ ಸಮರ್ಥನಲ್ಲವೇ ಬಾಣಗಳನ್ನು ಬಿಡುವುದರಲ್ಲಿ. ದ್ರೋಣಾಚಾರ್ಯ ಮಹಾ ನಿಪುಣನಾಗಿದ್ದಾನೆ.” ಎಂದು ಹೇಳುತ್ತಾ, ಅಭಿಮನ್ಯುವು ಚೂಪಾದ ಬಾಣಗಳನ್ನು ಒಟ್ಟುಗೂಡಿಸಿ, ಬೇರೆ ಬೇರೆಯಾಗಿದ್ದ ಆರು ಜನ ಅತಿರಥರ ದೇಹದೊಳಕ್ಕೆ ಬಾಣಗಳನ್ನು ನೆಟ್ಟನು. ಅವರು ರಕ್ತವನ್ನು ಕಾರಿದರು.
ಪದಾರ್ಥ (ಕ.ಗ.ಪ)
ವಡಬಗೆ-ಬಡಬಾಗ್ನಿಗೆ, ಒಗ್ಗೊಡೆದ-ಒಟ್ಟಾಗಿಲ್ಲದ
ಮೂಲ ...{Loading}...
ವಡಬಗೌತಣವಿಕ್ಕುವರೆ ಕಡ
ಲೊಡೆಯಗಹುದು ಸಮರ್ಥನಲ್ಲಾ
ಬಿಡುಗಣೆಯ ಬೀರುವರೆ ಕಟಕಾಚಾರ್ಯನೆಂದೆನುತ
ಕಡುಮೊನೆಯ ಕೂರಂಬುಗಳ ಮಿಗೆ
ಗಡಣಿಸಿದನೊಗ್ಗೊಡೆದ ಷಡುರಥ
ರೊಡಲೊಳಂಬನು ಹೂಳಿದನು ಕಾರಿದರು ಶೋಣಿತವ ॥19॥
೦೨೦ ಹೂಸಕದ ಶೌರಿಯದ ...{Loading}...
ಹೂಸಕದ ಶೌರಿಯದ ಬಾಳಿಕೆ
ಯೇಸು ದಿನವೈ ಕರ್ಣ ಕೃಪ ದು
ಶ್ಯಾಸನರ ಕೊಂಬನೆ ಕುಮಾರಕ ಸುರರಿಗಲಗಣಸು
ಘಾಸಿಯಾದರು ಘಾಯವಡೆದು ವಿ
ಳಾಸವಳಿದುದು ರಿಪುಭಟನ ಗೆಲು
ವಾಸೆ ಬೀತುದು ಧಾತುಗೆಟ್ಟುದು ಸರಳ ಸಾರದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹುಸಿಯಾದ ಪರಾಕ್ರಮವನ್ನು ತೋರುತ್ತಾ ಬದುಕುವುದು ಎಷ್ಟು ದಿನ. ಕರ್ಣ, ಕೃಪ, ದುಶ್ಯಾಸನರನ್ನು ಅಭಿಮನ್ಯುವು ಲೆಕ್ಕಿಸುತ್ತಾನೆಯೆ ? ಅವನು ದೇವತೆಗಳೊಡನೆ ಸ್ಪರ್ಧಿಸುವಂತಹವನು. ಅಭಿಮನ್ಯುವಿನ ಬಾಣಗಳ ಏಟನ್ನು ತಿಂದು ಅವರು ಗಾಯವನ್ನು ಹೊಂದಿದರು. ಕಾಂತಿ ಹೀನರಾದರು. ಅವರಿಗೆ ಶತ್ರುವಾದ ಅಭಿಮನ್ಯುವನ್ನು ಬಾಣಗಳಿಂದ ಗೆಲ್ಲುವ ಆಸೆ ಹೊರಟು ಹೋಯಿತು.
ಪದಾರ್ಥ (ಕ.ಗ.ಪ)
ಹೂಸಕ-ಸುಳ್ಳು-ಪೊಳ್ಳು,
ಅಲಗಣಸು-ಸ್ಪರ್ಧಿಸುವಂತಹ
ಮೂಲ ...{Loading}...
ಹೂಸಕದ ಶೌರಿಯದ ಬಾಳಿಕೆ
ಯೇಸು ದಿನವೈ ಕರ್ಣ ಕೃಪ ದು
ಶ್ಯಾಸನರ ಕೊಂಬನೆ ಕುಮಾರಕ ಸುರರಿಗಲಗಣಸು
ಘಾಸಿಯಾದರು ಘಾಯವಡೆದು ವಿ
ಳಾಸವಳಿದುದು ರಿಪುಭಟನ ಗೆಲು
ವಾಸೆ ಬೀತುದು ಧಾತುಗೆಟ್ಟುದು ಸರಳ ಸಾರದಲಿ ॥20॥
೦೨೧ ವಿರಥನಾದನು ಕರ್ಣನಮ್ಬಿಗೆ ...{Loading}...
ವಿರಥನಾದನು ಕರ್ಣನಂಬಿಗೆ
ತಿರುಹಿ ಬಿಲ್ಲನು ತೊಟ್ಟನಾ ಗುರು
ಗುರುತನೂಜನು ತನ್ನ ಸೂತನ ಶಿರವ ಹರಿಯೆಚ್ಚ
ಸುರಗಿಯನು ಬಿಸುಟೊರೆಯ ತಿರುಹಿದ
ನರಸನನುಜನು ಕೃಪನು ಶಲ್ಯನು
ಕೊರಳಲಸುಗಳ ಹಿಡಿದು ಹಂಗಿಗರಾದರೊಡೆಯಂಗೆ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ರಥವನ್ನು ಕಳೆದುಕೊಂಡನು. ದ್ರೋಣನು ಬಾಣಕ್ಕೆ ಬಿಲ್ಲನ್ನು ತೊಟ್ಟ. ಅಶ್ವತ್ಥಾಮನು ತನ್ನದೇ ಸಾರಥಿಯ ಶಿರವನ್ನು ಕತ್ತರಿಸುವಂತೆ ಹೊಡೆದ. ದುರ್ಯೋಧನನ ತಮ್ಮನಾದ ದುಶ್ಶಾಸನನು ಕತ್ತಿಯನ್ನು ಬಿಸಾಡಿ ಒರೆಯನ್ನು ತಿರುಗಿಸಿದ. ಕೃಪ ಮತ್ತು ಶಲ್ಯರುಗಳು ತಮ್ಮ ಕೊರಳಲ್ಲಿ ಪ್ರಾಣವನ್ನು ಉಳಿಸಿಕೊಂಡು ದುರ್ಯೋಧನನಿಗೆ ಹಂಗಿಗರಾದರು.
ಪದಾರ್ಥ (ಕ.ಗ.ಪ)
ವಿರಥ-ರಥವಿಲ್ಲದಂತಾಗುವುದು,
ಮೂಲ ...{Loading}...
ವಿರಥನಾದನು ಕರ್ಣನಂಬಿಗೆ
ತಿರುಹಿ ಬಿಲ್ಲನು ತೊಟ್ಟನಾ ಗುರು
ಗುರುತನೂಜನು ತನ್ನ ಸೂತನ ಶಿರವ ಹರಿಯೆಚ್ಚ
ಸುರಗಿಯನು ಬಿಸುಟೊರೆಯ ತಿರುಹಿದ
ನರಸನನುಜನು ಕೃಪನು ಶಲ್ಯನು
ಕೊರಳಲಸುಗಳ ಹಿಡಿದು ಹಂಗಿಗರಾದರೊಡೆಯಂಗೆ ॥21॥
೦೨೨ ಗನ್ನದಲಿ ಗುರು ...{Loading}...
ಗನ್ನದಲಿ ಗುರು ಜಾರಿದನು ಕೃಪ
ಮುನ್ನವೇ ಹಿಂಗಿದನು ಕರ್ಣನ
ನಿನ್ನು ಕಂಡವರಾರು ಮೂರ್ಛೆಗೆ ಮೂರು ಬಾರಿಯದು
ಬೆನ್ನ ತೆತ್ತರು ಬಿರುದರಾತಗೆ
ಕೆನ್ನೆಯೆಡೆಗುಗಿದಂಬು ಸಹಿತವೆ
ನಿನ್ನ ಮಗನರನೆಲೆಗೆ ಸರಿದನು ಭೂಪ ಕೇಳ್ ಎಂದ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದ್ರೋಣಾಚಾರ್ಯರು ಜಾಣ್ಮೆಯಿಂದ ದೂರ ಸರಿದರು; ಕೃಪಾಚಾರ್ಯರು ದ್ರೋಣರು ಹಿಂದಕ್ಕೆ ಸರಿಯುವ ಮೊದಲೇ ರಣರಂಗದಿಂದ ಹಿಮ್ಮೆಟ್ಟಿದರು. ಕರ್ಣನನ್ನು ಇನ್ನು ನೋಡಿದವರು ಯಾರು ? ಮೂರ್ಛೆಗೆ ಮೂರು ಬಾರಿ ಮಾತ್ರ ಅವಕಾಶ (ಆನಂತರ ಸಾವೇ ಸಿದ್ಧ - ಬಹುಶಃ ಕರ್ಣನಿಗೆ ಆ ಸ್ಥಿತಿ ಬಂದಿರಬಹುದೆಂದು ಭಾವ) ಬಿರುದಾಂಕಿತರಾದ ವೀರರು ಯುದ್ಧಕ್ಕೆ ಬೆನ್ನು ತೋರಿದರು. ನಿನ್ನ ಮಗನಾದ ದುರ್ಯೋಧನನು ಕೆನ್ನೆಯ ಭಾಗಕ್ಕೆ ಬಾಣವನ್ನು ಎಳೆದುಹಿಡಿದು ಹಾಗೆಯೇ ಪಾಳಯಕ್ಕೆಹೊರಟು ಹೋದನು’ ಎಂದು ಸಂಜಯ ಹೇಳಿದನು.
ಪದಾರ್ಥ (ಕ.ಗ.ಪ)
ಗನ್ನ-ಜಾಣ್ಮೆ, ಹಿಂಗಿದನು-ಹಿಂದಿರುಗಿದನು, ಉಗಿದ-ಬಿಟ್ಟ, ಅರನೆಲೆ-ಪಾಳಯ, ಭೂಪ-ರಾಜ
ಮೂಲ ...{Loading}...
ಗನ್ನದಲಿ ಗುರು ಜಾರಿದನು ಕೃಪ
ಮುನ್ನವೇ ಹಿಂಗಿದನು ಕರ್ಣನ
ನಿನ್ನು ಕಂಡವರಾರು ಮೂರ್ಛೆಗೆ ಮೂರು ಬಾರಿಯದು
ಬೆನ್ನ ತೆತ್ತರು ಬಿರುದರಾತಗೆ
ಕೆನ್ನೆಯೆಡೆಗುಗಿದಂಬು ಸಹಿತವೆ
ನಿನ್ನ ಮಗನರನೆಲೆಗೆ ಸರಿದನು ಭೂಪ ಕೇಳೆಂದ ॥22॥
೦೨೩ ಕೊಣ್ಡು ಬರುತಿದೆ ...{Loading}...
ಕೊಂಡು ಬರುತಿದೆ ಭಟರು ಮನ್ನೆಯ
ಗಂಡನಾಗೈ ಜೀಯ ಎನೆ ಖತಿ
ಗೊಂಡು ಕುರುಪತಿ ನೋಡಿದನು ಮೂಗಿನಲಿ ಬೆರಳಿಟ್ಟು
ಭಂಡರೆಂಬೆವೆ ಜಗದ ಗುರುಗಳು
ಗಂಡುಗಲಿಗಳು ವೈರಿ ಭಟರಿಗೆ
ಹೆಂಡಿರಾಗಲು ಹೋಗಿರೈ ದಿಟ ಹೋಗಿ ನೀವೆಂದ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನನ್ನು ಹಿಂಬಾಲಿಸಿ ಬಂದ ವೀರಭಟರುಗಳು ಅವನಿಗೆ ಗೌರವಾನ್ವಿತ ವೀರನೆನಿಸಿಕೊಳ್ಳಿರೆಂದು ಹೇಳಿದಾಗ ಅವನು ಕೋಪಗೊಂಡು ಮೂಗಿನ ಮೇಲೆ ಬೆರಳನ್ನಿಟ್ಟುಕೊಂಡು ಆಶ್ಚರ್ಯದಿಂದ ನೋಡುತ್ತ, “ಭಂಡರೆನ್ನೋಣವೆ ದ್ರೋಣರು ಜಗತ್ತಿಗೇ ಗುರುಗಳು. ಗಂಡುಗಲಿಗಳಾದವರು ವೈರಿಗಳ ವೀರರಿಗೆ ಹೆಂಡಿರಾಗುವುದೇ ನಿಜ, ನೀವು ಹೋಗಿ” ಎಂದ.
ಪದಾರ್ಥ (ಕ.ಗ.ಪ)
ಮನ್ನೆಯ-ಗೌರವದ, ಗಂಡ-ವೀರ, ಜೀಯ-ಸ್ವಾಮಿ, ದಿಟ-ಸತ್ಯ
ಮೂಲ ...{Loading}...
ಕೊಂಡು ಬರುತಿದೆ ಭಟರು ಮನ್ನೆಯ
ಗಂಡನಾಗೈ ಜೀಯ ಎನೆ ಖತಿ
ಗೊಂಡು ಕುರುಪತಿ ನೋಡಿದನು ಮೂಗಿನಲಿ ಬೆರಳಿಟ್ಟು
ಭಂಡರೆಂಬೆವೆ ಜಗದ ಗುರುಗಳು
ಗಂಡುಗಲಿಗಳು ವೈರಿ ಭಟರಿಗೆ
ಹೆಂಡಿರಾಗಲು ಹೋಗಿರೈ ದಿಟ ಹೋಗಿ ನೀವೆಂದ ॥23॥
೦೨೪ ಕಾಲ ವಹಿಲವ ...{Loading}...
ಕಾಲ ವಹಿಲವ ಕಲಿಸಲೋಸುಗ
ಕೋಲಗುರು ಜಾರಿದನು ಶಲ್ಯನ
ಮೇಲು ಮುಸುಕನುವಾಯ್ತು ಬಿರುದೇನಾಯ್ತು ಗುರುಸುತನ
ಆಳುವಾಸಿಯ ಕಡುಹು ಕರ್ಣನ
ಬೀಳುಕೊಂಡುದು ಪೂತು ಮಝರೇ
ಬಾಲ ಎಂದವನೀಶ ಮೂದಲಿಸಿದನು ತನ್ನವರ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲುಗಳಿಗೆ ವೇಗವನ್ನು ಕಲಿಸಲು ಶಸ್ತ್ರ ವಿದ್ಯಾಗುರುವಾದ ದ್ರೋಣನು ಯುದ್ಧರಂಗದಿಂದ ಜಾರಿದನು. ಶಲ್ಯನಿಗೆ ಮುಖದ ಮೇಲೆ ಹಾಕಿಕೊಂಡ ಮುಸುಕು ಯುದ್ಧ ರಂಗದಿಂದ ಓಡಿಹೋಗಲು ಸಹಾಯಕವಾಯಿತು. ಅಶ್ವತ್ಥಾಮನ ಬಿರುದು ಏನಾಯಿತು? ವೀರತನದ ಗಟ್ಟಿ ಸ್ವಭಾವ ಕರ್ಣನನ್ನು ಬೀಳುಕೊಂಡಿತು. ಭಲೇ ಬಾಲಕ ! ಎಂದು ತನ್ನವರನ್ನು ದುರ್ಯೋಧನ ಮೂದಲಿಸಿದ.
ಮೂಲ ...{Loading}...
ಕಾಲ ವಹಿಲವ ಕಲಿಸಲೋಸುಗ
ಕೋಲಗುರು ಜಾರಿದನು ಶಲ್ಯನ
ಮೇಲು ಮುಸುಕನುವಾಯ್ತು ಬಿರುದೇನಾಯ್ತು ಗುರುಸುತನ
ಆಳುವಾಸಿಯ ಕಡುಹು ಕರ್ಣನ
ಬೀಳುಕೊಂಡುದು ಪೂತು ಮಝರೇ
ಬಾಲ ಎಂದವನೀಶ ಮೂದಲಿಸಿದನು ತನ್ನವರ ॥24॥
೦೨೫ ಇದಿರೊಳೀಶನ ಭಾಳ ...{Loading}...
ಇದಿರೊಳೀಶನ ಭಾಳ ನಯನದ
ಕದಹು ತೆಗೆದಿದೆ ಹಿಂದೆ ಮರಳುವ
ಡಿದೆ ಕೃತಾಂತನ ಕೊಂತವರಸನ ಮೂದಲೆಯ ವಚನ
ಅದಟು ಕೊಳ್ಳದು ರಾಜಸೇವೆಯ
ಪದವಿ ಪಾತಕ ಫಲವೆನುತ ನೂ
ಕಿದರು ರಥವನು ಹಳಿವು ದರ್ಪದ ಹೇವ ಮಾರಿಗಳು ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ಎದುರು ನಿಂತು ಯುದ್ಧ ಮಾಡುತ್ತಿರುವ ಅಭಿಮನ್ಯು ಈಶ್ವರನೇ ತನ್ನ ಹಣೆಗಣ್ಣಿನ ಬಾಗಿಲನ್ನು ತೆರೆದು ನಿಂತಂತೆ ಕಾಣಿಸುತ್ತಿದ್ದಾನೆ ; ರಣರಂಗದಿಂದ ಪಲಾಯನ ಮಾಡಿದರೆ ಯಮನ ಶೂಲದಂತಿರುವ ದುರ್ಯೋಧನನ ಮೂದಲಿಕೆಯ ಮಾತುಗಳನ್ನು ಕೇಳಬೇಕಾಗಿದೆ. ನಮ್ಮ ಪರಾಕ್ರಮಕ್ಕೆ ಜಯ ದೊರಕುವ ಸೂಚನೆಗಳಿಲ್ಲ. ರಾಜಸೇವೆ ಎಂಬ ಪದವಿಯು ಪಾಪದ ಫಲದಿಂದ ದೊರಕುತ್ತದೆ ಎಂದುಕೊಳ್ಳುತ್ತಾ, ಅವಮಾನ, ದರ್ಪ ಮತ್ತು ದಾಕ್ಷಿಣ್ಯಗಳನ್ನು ಬಿಟ್ಟವರು (ಮಾರಿಗಳು) ತಮ್ಮ ತಮ್ಮ ರಥಗಳನ್ನು ಯುದ್ಧರಂಗಕ್ಕೆ ನೂಕಿದರು.
ಪದಾರ್ಥ (ಕ.ಗ.ಪ)
ಹೇವ-ದಾಕ್ಷಿಣ್ಯ, ನಾಚಿಕೆ
ಮೂಲ ...{Loading}...
ಇದಿರೊಳೀಶನ ಭಾಳ ನಯನದ
ಕದಹು ತೆಗೆದಿದೆ ಹಿಂದೆ ಮರಳುವ
ಡಿದೆ ಕೃತಾಂತನ ಕೊಂತವರಸನ ಮೂದಲೆಯ ವಚನ
ಅದಟು ಕೊಳ್ಳದು ರಾಜಸೇವೆಯ
ಪದವಿ ಪಾತಕ ಫಲವೆನುತ ನೂ
ಕಿದರು ರಥವನು ಹಳಿವು ದರ್ಪದ ಹೇವ ಮಾರಿಗಳು ॥25॥
೦೨೬ ರಸದ ಬನ್ಧದ ...{Loading}...
ರಸದ ಬಂಧದ ಬಿಗುಹು ವಹ್ನಿಯ
ಮುಸುಕನುಗಿದುಳಿವುದೆ ಕುಮಾರನ
ಮುಸುಡ ಮುಂದಕೆ ಬಿದ್ದು ಬದುಕುವರೇ ಮಹಾದೇವ
ಎಸುತ ಹೊಗುವರು ಭಟನ ಘಾಯಕೆ
ಮುಸುಡ ತಿರುಹುವರಡಿಗಡಿಗೆ ಸಾ
ಹಸದ ಸುಂಕಿಗನೊಡನೆ ತಲೆಯೊತ್ತಿದರು ಷಡುರಥರು ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
26.ಅಂಟಿಸಿದ ಪಾದರಸ ಬೆಂಕಿಯನ್ನು ಸಮೀಪಿಸಿದರೆ ಅದರ ಬಿಗಿ ಹೇಗೆ ಬಿಟ್ಟು ಹೋಗುವುದೋ ಹಾಗೆ ಅಭಿಮನ್ಯುವಿನ ಮುಖದೆದುರು ಯುದ್ಧ ಮಾಡಿದವರು ಬದುಕುವರೇ, ಮಹಾದೇವ ! ಬಾಣ ಪ್ರಯೋಗಿಸುತ್ತಾ ಹೋಗುತ್ತಾರೆ. ಹೆಜ್ಜೆ ಹೆಜ್ಜೆಗೆ ಮುಖ ತಿರುಗಿಸಿ ಹಿಂದಿರುಗುತ್ತಾರೆ. ಸಾಹಸದ ಸುಂಕವನ್ನು ಬೇಡುವ ಅಭಿಮನ್ಯುವಿನೊಂದಿಗೆ ಷಡ್ರಥರು ತಲೆ ತಗ್ಗಿಸಿದರು.
ಪದಾರ್ಥ (ಕ.ಗ.ಪ)
ಬಿಗುಡು-ಬಿಗಿ, ವಹ್ನಿಯ-ಬೆಂಕಿಯ,
ಮೂಲ ...{Loading}...
ರಸದ ಬಂಧದ ಬಿಗುಹು ವಹ್ನಿಯ
ಮುಸುಕನುಗಿದುಳಿವುದೆ ಕುಮಾರನ
ಮುಸುಡ ಮುಂದಕೆ ಬಿದ್ದು ಬದುಕುವರೇ ಮಹಾದೇವ
ಎಸುತ ಹೊಗುವರು ಭಟನ ಘಾಯಕೆ
ಮುಸುಡ ತಿರುಹುವರಡಿಗಡಿಗೆ ಸಾ
ಹಸದ ಸುಂಕಿಗನೊಡನೆ ತಲೆಯೊತ್ತಿದರು ಷಡುರಥರು ॥26॥
೦೨೭ ಹರಿದು ಬಿದ್ದವು ...{Loading}...
ಹರಿದು ಬಿದ್ದವು ಜೋಡು ಮೆಯ್ಯಲಿ
ಮುರಿದವಗಣಿತ ಬಾಣದೇರಿನೊ
ಳೊರೆದ ರಕುತದ ಧಾರೆ ನಾದಿತು ರಥದ ಹಲಗೆಗಳ
ಅರಿವು ಮರೆದಪಕೀರ್ತಿನಾರಿಯ
ಸೆರಗ ಹಿಡಿದರು ಹೇಳಲೇನದ
ನರಿಯೆನೇಕಾಂತದಲಿ ಕರ್ಣನ ಕರೆದನಾ ದ್ರೋಣ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ ಸೇನಾ ನಾಯಕರ ಕವಚಗಳು ಹರಿದು ಬಿದ್ದವು. ಅಸಂಖ್ಯಾತವಾದ ಬಾಣಗಳು ಅವರು ಮೈಯೊಳಗೆ ಹೊಕ್ಕು ಮುರಿದವು. ಬಾಣದ ಗಾಯದಿಂದ ಹರಿದ ಅವರೆಲ್ಲರ ದೇಹದ ರಕ್ತದ ಧಾರೆಯಿಂದ ರಥದ ಹಲಗೆಗಳು ನೆನೆದವು. ಅವರು ಪ್ರಜ್ಞೆ ಕಳೆದುಕೊಂಡವರು ಅಪಕೀರ್ತಿ ಎಂಬ ಹೆಂಗಸಿನ ಸೆರಗನ್ನು ಹಿಡಿದರು. ಅದನ್ನು ಏನು ಹೇಳಲಿ. ಆಗ ದ್ರೋಣನು ಕರ್ಣನನ್ನು ಏಕಾಂತಕ್ಕೆ ಕರೆದನು. ಕರೆದೊಯ್ದು ಮಾತನಾಡಲಾರಂಭಿಸಿದನು.
ಮೂಲ ...{Loading}...
ಹರಿದು ಬಿದ್ದವು ಜೋಡು ಮೆಯ್ಯಲಿ
ಮುರಿದವಗಣಿತ ಬಾಣದೇರಿನೊ
ಳೊರೆದ ರಕುತದ ಧಾರೆ ನಾದಿತು ರಥದ ಹಲಗೆಗಳ
ಅರಿವು ಮರೆದಪಕೀರ್ತಿನಾರಿಯ
ಸೆರಗ ಹಿಡಿದರು ಹೇಳಲೇನದ
ನರಿಯೆನೇಕಾಂತದಲಿ ಕರ್ಣನ ಕರೆದನಾ ದ್ರೋಣ ॥27॥
೦೨೮ ಇದಿರೊಳಾನುವುದರಿದು ಹಸುಳೆಯ ...{Loading}...
ಇದಿರೊಳಾನುವುದರಿದು ಹಸುಳೆಯ
ಕದನ ಹಂಗಿಗರಾದೆವಾಳ್ದನ
ವದನಕಮಲಕೆ ನಮ್ಮ ಪೌರುಷವಿಂದು ಹಿಮವಾಯ್ತು
ಇದಿರೊಳಾನಿಹೆ ಶಲ್ಯನೆಡವಂ
ಕದಲಿ ಬಲದಲಿ ಕೃಪನಪರಭಾ
ಗದಲಿ ನೀ ಬಂದೆಸು ಕುಮಾರನ ಕರದ ಕಾರ್ಮುಕವ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು ಕರ್ಣನಿಗೆ ‘ಅಭಿಮನ್ಯುವಿನ ಎದುರು ನಿಂತು ಯುದ್ಧವನ್ನು ಮಾಡಿ ಜಯಿಸಲು ಸಾಧ್ಯವೇ ಇಲ್ಲ. ಈ ಬಾಲಕನ ಯುದ್ಧದಲ್ಲಿ ನಾವು ದುರ್ಯೋಧನನಿಗೆ ಹಂಗಿಗರಾದೆವು. ನಮ್ಮನ್ನು ಆಳುತ್ತಿರುವ ದುರ್ಯೋಧನನ ಮುಖವೆಂಬ ಕಮಲಕ್ಕೆ ನಮ್ಮ ಶೌರ್ಯವು ಹಿಮವನ್ನೆರಚಿದಂತೆ ಆಗಿದೆ. ನಾನು ಅಭಿಮನ್ಯುವಿನ ಎದುರು ನಿಂತು ಯುದ್ಧ ಮಾಡುತ್ತೇನೆ. ಶಲ್ಯನು ಅಭಿಮನ್ಯುವಿನ ಎಡಭಾಗದಲ್ಲಿಯೂ, ಕೃಪಾಚಾರ್ಯನು ಬಲಭಾಗದಲ್ಲಿಯೂ ಬರಲಿ. ಹಿಂಭಾಗದಲ್ಲಿ ನೀನು ಬಂದು ಅಭಿಮನ್ಯುವಿನ ಕೈಯಲ್ಲಿರುವ ಬಿಲ್ಲನ್ನು ಕತ್ತರಿಸು’ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಆನುವುದು-ಯುದ್ಧ ಮಾಡುವುದು,
ಆಳ್ದನ-ಆಳಿದವನು ,ಒಡೆಯ
ಕಾರ್ಮುಕ-ಬಿಲ್ಲು
ಮೂಲ ...{Loading}...
ಇದಿರೊಳಾನುವುದರಿದು ಹಸುಳೆಯ
ಕದನ ಹಂಗಿಗರಾದೆವಾಳ್ದನ
ವದನಕಮಲಕೆ ನಮ್ಮ ಪೌರುಷವಿಂದು ಹಿಮವಾಯ್ತು
ಇದಿರೊಳಾನಿಹೆ ಶಲ್ಯನೆಡವಂ
ಕದಲಿ ಬಲದಲಿ ಕೃಪನಪರಭಾ
ಗದಲಿ ನೀ ಬಂದೆಸು ಕುಮಾರನ ಕರದ ಕಾರ್ಮುಕವ ॥28॥
೦೨೯ ಚಾಪವೀತನ ಕೈಯಲಿರಲಿ ...{Loading}...
ಚಾಪವೀತನ ಕೈಯಲಿರಲಿ
ನ್ನಾ ಪಿನಾಕಿಗೆ ಗೆಲವು ಘಟಿಸದು
ವೈಪರೀತ್ಯಕೆ ಬೆದರಲಾಗದು ಸ್ವಾಮಿಕಾರ್ಯವಿದು
ರೂಪುದೋರದೆ ಬಂದು ಸುಭಟನ
ಚಾಪವನು ಖಂಡಿಸುವುದಿದು ಕುರು
ಭೂಪನುಳಿವೆಂದಿನಸುತನನೊಡಬಡಿಸಿದನು ದ್ರೋಣ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ಅಭಿಮನ್ಯುವಿನ ಕೈಯಲ್ಲಿ ಬಿಲ್ಲು ಇರುವ ತನಕ ಪಿನಾಕ ಎಂಬ ಬಿಲ್ಲನ್ನು ಹೊಂದಿರುವ ಸಾಕ್ಷಾತ್ ಶಿವನೇ ಬಂದು ಯುದ್ಧ ಮಾಡಿದರೂ ಜಯ ಲಭಿಸುವುದಿಲ್ಲ; ಈ ಮೋಸ ಮಾಡಲು ಹೆದರಬೇಕಾಗಿಲ್ಲ. ಇದು ಸ್ವಾಮಿಕಾರ್ಯವಾಗಿದೆ. ನೀನು ಅಭಿಮನ್ಯುವಿಗೆ ಕಾಣಿಸಿಕೊಳ್ಳದೆ ಹಿಂದೆ ನಿಂತು ಅವನ ಬಿಲ್ಲನ್ನು ಕತ್ತರಿಸಿ ಹಾಕು. ಇದೇ ದುರ್ಯೋಧನನ ಉಳಿವು ಎಂದು ವಿವರಿಸಿ ಹೇಳಿ ಕರ್ಣನನ್ನು ಈ ಕಾರ್ಯಕ್ಕೆ ಒಪ್ಪುವ ಹಾಗೆ ಮಾಡಿದನು.
ಮೂಲ ...{Loading}...
ಚಾಪವೀತನ ಕೈಯಲಿರಲಿ
ನ್ನಾ ಪಿನಾಕಿಗೆ ಗೆಲವು ಘಟಿಸದು
ವೈಪರೀತ್ಯಕೆ ಬೆದರಲಾಗದು ಸ್ವಾಮಿಕಾರ್ಯವಿದು
ರೂಪುದೋರದೆ ಬಂದು ಸುಭಟನ
ಚಾಪವನು ಖಂಡಿಸುವುದಿದು ಕುರು
ಭೂಪನುಳಿವೆಂದಿನಸುತನನೊಡಬಡಿಸಿದನು ದ್ರೋಣ ॥29॥
೦೩೦ ಹಿನ್ದಣಿಗೆ ತಿರುಗಿದನು ...{Loading}...
ಹಿಂದಣಿಗೆ ತಿರುಗಿದನು ಭಾಸ್ಕರ
ನಂದನನು ಬಲವಂಕದಲಿ ಗುರು
ನಂದನನು ಕೃಪ ಶಲ್ಯ ವಾಮದೊಳಿದಿರಲಾ ದ್ರೋಣ
ನಿಂದು ಕದನವ ಕೆಣಕಿದರು ರಿಪು
ಬಂದಿಕಾರನೊಳೇರ ಸೂರೆಗೆ
ಬಂದು ಬಸಿವುತ ಹೋದರನಿಬರು ಬೈದು ರವಿಸುತನ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯಪುತ್ರನಾದ ಕರ್ಣನು ಅಭಿಮನ್ಯುವಿನ ಹಿಂಭಾಗಕ್ಕೆ ಬಂದು ನಿಂತನು. ಅಭಿಮನ್ಯುವಿನ ಬಲಭಾಗಕ್ಕೆ ದ್ರೋಣ ಪುತ್ರನಾದ ಅಶ್ವತ್ಥಾಮ, ಕೃಪಾಚಾರ್ಯ ಮತ್ತು ಶಲ್ಯರು ಅಭಿಮನ್ಯುವಿನ ಎಡಭಾಗದಲ್ಲಿಯೂ, ಎದುರಿನಲ್ಲಿ ದ್ರೋಣನೂ ನಿಂತು ಯುದ್ಧವನ್ನು ಪ್ರಾರಂಭಿಸಿದರು. ಇದನ್ನು ನೋಡಿ ಇತರ ವೀರರೆಲ್ಲ ಶತ್ರುಗಳನ್ನು ಬಂಧನಕ್ಕೊಳಪಡಿಸುವುದರಲ್ಲಿ ನಿಸ್ಸೀಮನಾದ ಅಭಿಮನ್ಯುವಿನೊಂದಿಗೆ ಯುದ್ಧವನ್ನು ಸೂರೆಗೊಳ್ಳಲು ರಕ್ತವನ್ನು ಸುರಿಸಿಕೊಳ್ಳುತ್ತಾ, ಕರ್ಣನನ್ನು ಬಯ್ಯುತ್ತಾ ಹೋದರು.
ಮೂಲ ...{Loading}...
ಹಿಂದಣಿಗೆ ತಿರುಗಿದನು ಭಾಸ್ಕರ
ನಂದನನು ಬಲವಂಕದಲಿ ಗುರು
ನಂದನನು ಕೃಪ ಶಲ್ಯ ವಾಮದೊಳಿದಿರಲಾ ದ್ರೋಣ
ನಿಂದು ಕದನವ ಕೆಣಕಿದರು ರಿಪು
ಬಂದಿಕಾರನೊಳೇರ ಸೂರೆಗೆ
ಬಂದು ಬಸಿವುತ ಹೋದರನಿಬರು ಬೈದು ರವಿಸುತನ ॥30॥
೦೩೧ ದಳವು ದಳವುಳವಾಯ್ತು ...{Loading}...
ದಳವು ದಳವುಳವಾಯ್ತು ಕೇಸರ
ದೊಳಗೆ ವಿಸಟಂಬರಿದು ಕರ್ಣಿಕೆ
ಯೊಳಗೆ ರಿಂಗಣಗುಣಿದು ಸಂಗರ ಜಯದ ಮಡುವಿನಲಿ
ಸಲೆ ಸೊಗಸಿ ತನಿ ಸೊಕ್ಕಿ ದೆಸೆ ಪಟ
ದುಳಿದು ಸೌಭದ್ರೇಯ ಭೃಂಗನ
ಬಿಲು ದನಿಯ ಭರವಂಜಿಸಿತು ಜಯಯುವತಿ ವಿರಹಿಗಳ ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಮಲ ಪುಷ್ಪದ ದಳಗಳು (ಪಕಳೆಗಳು) ಕೊಳ್ಳೆಗೀಡಾದವು. ಅಭಿಮನ್ಯು ಪುಷ್ಪದ ನಡುವಿನ ಕೇಸರದೊಳಗೆ ಓಡಾಡಿದ. ಆ ಹೂವಿನ ನಡುವಿನಲ್ಲಿರುವ ಬೀಜ ಕೋಶದೊಳಗೆ ಕುಣಿದು ನರ್ತಿಸಿ ಸಂಗ್ರಾಮರಂಗವೆಂಬ ನೀರಿನ ಆಳವಾದ., ಸ್ಥಳದಲ್ಲಿ ಆಟವಾಡಿ ಸಂತೋಷಿಸಿ, ಸೊಕ್ಕಿ, ದಿಕ್ಕು ದಿಕ್ಕುಗಳನ್ನು ತುಳಿಯುತ್ತಿದ್ದ. ಈ ಅಭಿಮನ್ಯುವೆಂಬ ದುಂಬಿಯ ಬಿಲ್ಲಿನ ಝೇಂಕಾರವು ಜಯಲಕ್ಷ್ಮಿಯಿಂದ ದೂರವಾಗಿದ್ದ ಕೌರವ ಸೇನೆಯನ್ನು ಹೆದರಿಸಿತು.
ಪದಾರ್ಥ (ಕ.ಗ.ಪ)
ದಳವುಳ-ಸೂರೆಹೋಗು , ವಿಸಟಂಬರಿದು-ಸುತ್ತಾಡಿ, ರಿಂಗಣ ಕುಣಿದು-ನೃತ್ಯ ಮಾಡಿ,
ಟಿಪ್ಪನೀ (ಕ.ಗ.ಪ)
ಪದ್ಮವ್ಯೂಹದಲ್ಲಿ ಅಭಿಮನ್ಯುವು ಪದ್ಮ ಪುಷ್ಪದೊಳಗೆ ಜೇನು ದುಂಬಿಯು ವಿಹರಿಸುವಂತೆ ವಿಹರಿಸಿದನು ಎಂದು ಕವಿ ರೂಪಿಸಿದ್ದಾನೆ.
ಈ ಪದ್ಯಕ್ಕೆ ಎರಡು ಬಗೆಗಳಲ್ಲಿ ಅರ್ಥ ರಚಿಸಲು ಸಾಧ್ಯವಿದೆ.
- ಗದ್ಯ ಭಾಗದಲ್ಲಿರುವಂತೆ
- ಮಧುಪಾನದಿಂದ ಸೊಕ್ಕಿ ( ವಿಜಯವೆಂಬ ಮತ್ತಿನಿಂದ) ಕುಣಿದಾಡುತ್ತಾ ( ಮೆರೆಯುತ್ತಾ) ಸುಭದ್ರೆಯ ಮಗ ಎಂಬ ದುಂಬಿಯ ಝೇಂಕಾರದ ರಭಸವು ವಿರಹಿಗಳನ್ನು ( ಜಯಲಕ್ಷ್ಮಿಯನ್ನು ಬಯಸುವವರನ್ನು )ಅಂಜಿಸಿತು.
ಮೂಲ ...{Loading}...
ದಳವು ದಳವುಳವಾಯ್ತು ಕೇಸರ
ದೊಳಗೆ ವಿಸಟಂಬರಿದು ಕರ್ಣಿಕೆ
ಯೊಳಗೆ ರಿಂಗಣಗುಣಿದು ಸಂಗರ ಜಯದ ಮಡುವಿನಲಿ
ಸಲೆ ಸೊಗಸಿ ತನಿ ಸೊಕ್ಕಿ ದೆಸೆ ಪಟ
ದುಳಿದು ಸೌಭದ್ರೇಯ ಭೃಂಗನ
ಬಿಲು ದನಿಯ ಭರವಂಜಿಸಿತು ಜಯಯುವತಿ ವಿರಹಿಗಳ ॥31॥
೦೩೨ ಆರಯಿದು ಮಗನೆನಿಸುವೀ ...{Loading}...
ಆರಯಿದು ಮಗನೆನಿಸುವೀ ಮಮ
ಕಾರವೆಮ್ಮೊಳು ಮೊಳೆತಡಾ ದಾ
ತಾರನುಳಿವೆನ್ನಿಂದ ತಪ್ಪುವುದೆನುತ ಮನದೊಳಗೆ
ಕೂರಲಗನಾ ಕರ್ಣ ಬರೆಸೆಳೆ
ದಾರಿ ಹಿಂದಣಿನೆಚ್ಚು ಪಾರ್ಥಕು
ಮಾರಕನ ಚಾಪವನು ಮುಕ್ಕಡಿಯಾಗಿ ಖಂಡಿಸಿದ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇವನು ನನ್ನ ಮಗ, ನನ್ನವನು ಎಂಬ ಭಾವ ನನ್ನಲ್ಲಿ ಚಿಗುರಿದರೆ ನನ್ನನ್ನು ಸಾಕಿ ಸಲಹಿದ ಯಜಮಾನನಾದ ದುರ್ಯೋಧನನ ಉಳಿವು ತಪ್ಪುತ್ತದೆ” ಎಂದುಕೊಂಡು ಕರ್ಣನು ಚೂಪಾದ ಕತ್ತಿಯನ್ನು ತೆಗೆದುಕೊಂಡು ಆರ್ಭಟಿಸುತ್ತಾ ಹಿಂದಿನಿಂದ ಬಂದು ಅಭಿಮನ್ಯುವಿನ ಕೈಯಲ್ಲಿದ್ದ ಬಿಲ್ಲನ್ನು ಮೂರು ತುಂಡಾಗುವ ಹಾಗೆ ಕತ್ತರಿಸಿ ಹಾಕಿದನು.
ಪದಾರ್ಥ (ಕ.ಗ.ಪ)
ಆರಯಿದು-ಆಲೋಚಿಸಿ, ಆರಿ-ಕೂಗಿ
ಮುಕ್ಕಡಿ-ಮೂರು ತುಂಡಾಗಿ,
ಮೂಲ ...{Loading}...
ಆರಯಿದು ಮಗನೆನಿಸುವೀ ಮಮ
ಕಾರವೆಮ್ಮೊಳು ಮೊಳೆತಡಾ ದಾ
ತಾರನುಳಿವೆನ್ನಿಂದ ತಪ್ಪುವುದೆನುತ ಮನದೊಳಗೆ
ಕೂರಲಗನಾ ಕರ್ಣ ಬರೆಸೆಳೆ
ದಾರಿ ಹಿಂದಣಿನೆಚ್ಚು ಪಾರ್ಥಕು
ಮಾರಕನ ಚಾಪವನು ಮುಕ್ಕಡಿಯಾಗಿ ಖಂಡಿಸಿದ ॥32॥
೦೩೩ ಉರುವ ಜಯವಧುವೊಕ್ಕತನದಲಿ ...{Loading}...
ಉರುವ ಜಯವಧುವೊಕ್ಕತನದಲಿ
ಮುರಿದ ಕಡ್ಡಿಯಿದೆನಲು ಕರದಿಂ
ಮುರಿದು ಬಿದ್ದುದು ಚಾಪವಿಂದ್ರಕುಮಾರನಂದನನ
ಬೆರಗಡರಿ ಮುಖದಿರುಹಿ ಹಿಂದಣಿ
ನಿರಿದ ಕರ್ಣನ ನೋಡಿ ಮುಖದಲಿ
ಕಿರುನಗೆಯ ಕೇವಣಿಸಿ ನುಡಿದನು ಬೆರಳನೊಲೆದೊಲೆದು ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವಿನೊಡನಿದ್ದ ಶ್ರೇಷ್ಠಳಾದ ಜಯಲಕ್ಷ್ಮಿಯು, ಅವನಿಂದ ವಿಚ್ಛೇದನ ಪಡೆಯಲು ಮುರಿದು ಹಾಕಿದ ಕಡ್ಡಿಯೋ ಎಂಬಂತೆ, ಅವನ ಕೈಯಲ್ಲಿದ್ದ ಬಿಲ್ಲು ಮುರಿದು ಬಿತ್ತು. ಬೆರಗಾಗಿ ಮುಖ ತಿರುಗಿಸಿ ಹಿಂದಿನಿಂದ ಹೊಡೆದ ಕರ್ಣನನ್ನು ನೋಡಿ ಮುಖದಲ್ಲಿ ಕಿರು ನಗೆ ಬೆರಸಿ ಅಪಹಾಸ್ಯದಿಂದ ತನ್ನ ಬೆರಳನ್ನು ತಿರುಗಿಸಿ ಅಭಿಮನ್ಯು ನುಡಿದ.
ಪದಾರ್ಥ (ಕ.ಗ.ಪ)
ಉರುವ-ಶ್ರೇಷ್ಠಳಾದ, ಒಕ್ಕತನ-ಸಂಸಾರ ಮಾಡುವುದು, ಚಾಪ-ಬಿಲ್ಲು, ಇಂದ್ರ ಕುಮಾರ ನಂದನ-ಅಭಿಮನ್ಯು, ಅಡರಿ-ಹೆಚ್ಚಾಗಿ, ಕೇವಣಿಸಿ-ಸೂಸಿ, ಒಲೆದು-ತಿರುಗಿಸಿ
ಟಿಪ್ಪನೀ (ಕ.ಗ.ಪ)
ಕಡ್ಡಿ ಮುರಿಯುವುದು - ವಿವಾಹ ವಿಚ್ಛೇದನ ಪಡೆಯಲು ಉದ್ದೇಶಿತ ಪತಿ ಪತ್ನಿಯರು ಪಂಚರ ಮುಂದೆ ಒಂದು ಕಡ್ಡಿ ಮುರಿದು ಹಾಕಿದರೆ ವಿಚ್ಛೇದನವಾಯಿತು ಎಂಬುದು ಕರ್ನಾಟಕದ ಕೆಲವೆಡೆ ಇರುವ ಸಂಪ್ರದಾಯ.
ಮೂಲ ...{Loading}...
ಉರುವ ಜಯವಧುವೊಕ್ಕತನದಲಿ
ಮುರಿದ ಕಡ್ಡಿಯಿದೆನಲು ಕರದಿಂ
ಮುರಿದು ಬಿದ್ದುದು ಚಾಪವಿಂದ್ರಕುಮಾರನಂದನನ
ಬೆರಗಡರಿ ಮುಖದಿರುಹಿ ಹಿಂದಣಿ
ನಿರಿದ ಕರ್ಣನ ನೋಡಿ ಮುಖದಲಿ
ಕಿರುನಗೆಯ ಕೇವಣಿಸಿ ನುಡಿದನು ಬೆರಳನೊಲೆದೊಲೆದು ॥33॥
೦೩೪ ಆವ ಶರಸನ್ಧಾನಲಾಘವ ...{Loading}...
ಆವ ಶರಸಂಧಾನಲಾಘವ
ದಾವ ಪರಿ ಮಝ ಪೂತು ಪಾಯಿಕು
ದೇವ ಬಿಲ್ಲಾಳೆಂತು ಕಡಿದೈ ಕರ್ಣ ನೀ ಧನುವ
ಈ ವಿವೇಕವಿದಾರ ಸೇರುವೆ
ಯಾವಗಹುದಿದು ಹಿಂದೆ ಬಂದೆಸು
ವೀ ವಿಗಡತನ ನಿನಗೆ ಮೆರೆವುದು ಕರ್ಣ ಕೇಳ್ ಎಂದ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಕರ್ಣ, ಏನಿದು ನಿನ್ನ ಶರಸಂಧಾನ, ಎಂತಹ ಕೈಚಳಕ, ಭೇಷ್, ಭೇಷ್, ದೇವಾ, ಬಿಲ್ಗಾರನೇ ಹಿಂದೆ ನಿಂತು ಬಿಲ್ಲನ್ನು ಹೇಗೆ ಕತ್ತರಿಸಿದೆ ? ಹಿಂದಿನಿಂದ ಬಂದು ಬಾಣವನ್ನು ಬಿಡುವ ಈ ವಿವೇಕ (ಅವಿವೇಕ) ದುಷ್ಟತನ ಬೇರೆ ಯಾರಿಗೆ ಸಾಧ್ಯವಾಗುತ್ತದೆ ನಿನಗೆ ಮಾತ್ರ ಶೋಭಿಸುತ್ತದೆ" ಎಂದು ಅಭಿಮನ್ಯು ಹೇಳಿದ.
ಪದಾರ್ಥ (ಕ.ಗ.ಪ)
ಲಾಘವ-ಜಾಣ್ಮೆ, ವಿಗಡತನ-ನೀಚತನ
ಮೂಲ ...{Loading}...
ಆವ ಶರಸಂಧಾನಲಾಘವ
ದಾವ ಪರಿ ಮಝ ಪೂತು ಪಾಯಿಕು
ದೇವ ಬಿಲ್ಲಾಳೆಂತು ಕಡಿದೈ ಕರ್ಣ ನೀ ಧನುವ
ಈ ವಿವೇಕವಿದಾರ ಸೇರುವೆ
ಯಾವಗಹುದಿದು ಹಿಂದೆ ಬಂದೆಸು
ವೀ ವಿಗಡತನ ನಿನಗೆ ಮೆರೆವುದು ಕರ್ಣ ಕೇಳೆಂದ ॥34॥
೦೩೫ ಎನಲು ಲಜ್ಜಿತನಾಗಿ ...{Loading}...
ಎನಲು ಲಜ್ಜಿತನಾಗಿ ತಿರುಗಿದ
ನನುವರದಲೀ ಕರ್ಣನಾತನ
ಧನು ಮುರಿಯೆ ಕೈಕೊಂಡರೀ ದ್ರೋಣಾದಿ ನಾಯಕರು
ಕನಕರಥವನು ದ್ರೋಣನಾ ಗುರು
ತನುಜ ಸಾರಥಿಯನು ಕೃಪಾಚಾ
ರ್ಯನು ತುರಗವನು ಶಲ್ಯ ಕಡಿದನು ಭಟನ ಠೆಕ್ಕೆಯವ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆನ್ನಲು ಕರ್ಣನಿಗೆ ನಾಚಿಕೆಯಾಗಿ ಯುದ್ಧರಂಗದಿಂದ ಹಿಂದಿರುಗಿದ. ಅಭಿಮನ್ಯುವಿನ ಕೈಯಲ್ಲಿರುವ ಬಿಲ್ಲು ಮುರಿದಾಕ್ಷಣ ದ್ರೋಣನೇ ಮೊದಲಾದವರು ಮುನ್ನುಗ್ಗಿದರು. ದ್ರೋಣನು ಅಭಿಮನ್ಯುವಿನ ಬಂಗಾರದ ರಥವನ್ನು ಮುರಿದು ಹಾಕಿದನು. ಅಶ್ವತ್ಥಾಮನು ಅಭಿಮನ್ಯುವಿನ ಸಾರಥಿಯನ್ನು ಕೊಂದನು. ಕೃಪಾಚಾರ್ಯನು ಕುದುರೆಯನ್ನು, ಶಲ್ಯನು ಬಾವುಟವನ್ನು ಕತ್ತರಿಸಿ ಹಾಕಿದನು.
ಪದಾರ್ಥ (ಕ.ಗ.ಪ)
ಅನುವರದಲಿ-ಯುದ್ಧದಲ್ಲಿ, ಠೆಕ್ಕೆಯ-ಬಾವುಟ
ಮೂಲ ...{Loading}...
ಎನಲು ಲಜ್ಜಿತನಾಗಿ ತಿರುಗಿದ
ನನುವರದಲೀ ಕರ್ಣನಾತನ
ಧನು ಮುರಿಯೆ ಕೈಕೊಂಡರೀ ದ್ರೋಣಾದಿ ನಾಯಕರು
ಕನಕರಥವನು ದ್ರೋಣನಾ ಗುರು
ತನುಜ ಸಾರಥಿಯನು ಕೃಪಾಚಾ
ರ್ಯನು ತುರಗವನು ಶಲ್ಯ ಕಡಿದನು ಭಟನ ಠೆಕ್ಕೆಯವ ॥35॥
೦೩೬ ತುಡುಕುವರೆ ಧನುವಿಲ್ಲ ...{Loading}...
ತುಡುಕುವರೆ ಧನುವಿಲ್ಲ ಮುಂದಡಿ
ಯಿಡಲು ಸಾರಥಿಯಿಲ್ಲ ರಥ ಕಡಿ
ವಡೆದುದಿನ್ನೆಂತೊದಗುವನೊ ಸುಕುಮಾರ ತಾನೆನುತ
ಪಡೆ ಬಿಡದೆ ಬೊಬ್ಬಿರಿಯೆ ಬೆದರದೆ
ಕಡುಗಿ ಖಡ್ಗವ ಕೊಂಡು ರಿಪುಗಳ
ಕಡಿದು ಹರಹುತ ಬೀದಿವರಿದನು ಕಣನ ಮಧ್ಯದಲಿ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವಿನ ಕೈಯಲ್ಲಿ ಹಿಡಿಯಲು ಬಿಲ್ಲು ಇರಲಿಲ್ಲ. ಮುಂದೆ ಹೋಗೋಣವೆಂದರೆ ಸಾರಥಿಯೂ ಇಲ್ಲ್ಲ;ರಥವೂ ಮುರಿದು ಬಿದ್ದಿತ್ತು. ಹೀಗಿರುವಾಗಿ ಅವನು ಹೇಗೆ ಯುದ್ಧಕ್ಕೆ ಬರುತ್ತಾನೆಂದುಕೊಂಡು ಕೌರವ ಸೈನ್ಯವು ಬೊಬ್ಬಿಡಲು, ಅಭಿಮನ್ಯುವು ಬೆದರದೆ ಕೋಪದಿಂದ ಖಡ್ಗವನ್ನು ಕೈಗೆತ್ತಿಕೊಂಡು ಶತ್ರುಗಳನ್ನು ಸಂಹಾರ ಮಾಡುತ್ತಾ ರಣರಂಗದಲ್ಲಿ ಬೇಕಾದ ಕಡೆಗೆ ಮುಂದೆ ನುಗ್ಗಲಾರಂಭಿಸಿದನು.
ಮೂಲ ...{Loading}...
ತುಡುಕುವರೆ ಧನುವಿಲ್ಲ ಮುಂದಡಿ
ಯಿಡಲು ಸಾರಥಿಯಿಲ್ಲ ರಥ ಕಡಿ
ವಡೆದುದಿನ್ನೆಂತೊದಗುವನೊ ಸುಕುಮಾರ ತಾನೆನುತ
ಪಡೆ ಬಿಡದೆ ಬೊಬ್ಬಿರಿಯೆ ಬೆದರದೆ
ಕಡುಗಿ ಖಡ್ಗವ ಕೊಂಡು ರಿಪುಗಳ
ಕಡಿದು ಹರಹುತ ಬೀದಿವರಿದನು ಕಣನ ಮಧ್ಯದಲಿ ॥36॥
೦೩೭ ಈತನಿರೆ ಕಲ್ಪಾನ್ತರುದ್ರನ ...{Loading}...
ಈತನಿರೆ ಕಲ್ಪಾಂತರುದ್ರನ
ಮಾತು ಜಗಕೇಕೆನಲು ವೈರಿ
ವ್ರಾತವನು ಮುಂಕೊಂಡು ಹೊಯ್ದನು ಹೊಳೆವ ಖಡುಗದಲಿ
ಸೋತನೇ ಶಿಶು ಷಡುರಥರ ಕರೆ
ಈತನಾರೈ ಹೇಳಿ ಭಯವಿ
ನ್ನೇತಕೆಂದವನೀಶ ಮೂದಲಿಸಿದನು ತನ್ನವರ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನಿದ್ದರೆ ಯುಗವನ್ನು ಕೊನೆ ಮಾಡುವ ಪ್ರಳಯರುದ್ರನ ಮಾತು ಜಗಕ್ಕೆ ಅಗತ್ಯವಿಲ್ಲ ಎನ್ನುವ ಹಾಗೆ ಅಭಿಮನ್ಯುವು ಮೇಲೆ ಬಿದ್ದು ಶತ್ರು ಸಮೂಹವನ್ನು ಹೊಳೆಯುವ ಖಡ್ಗದಿಂದ ಹೊಡೆದನು. “ಸೋತನೇ ಬಾಲಕ ಅಭಿಮನ್ಯು ? ಷಡ್ರಥರನ್ನು ಇಲ್ಲಿಗೆ ಕರೆಯಿರಿ ಈ ಅಭಿಮನ್ಯು ಯಾರೆಂದು ಹೇಳಿರಿ; ಇನ್ನೇಕೆ ಭಯ” ಎಂದು ದುರ್ಯೋಧನ ತನ್ನವರನ್ನು ಮೂದಲಿಸಿದನು.
ಮೂಲ ...{Loading}...
ಈತನಿರೆ ಕಲ್ಪಾಂತರುದ್ರನ
ಮಾತು ಜಗಕೇಕೆನಲು ವೈರಿ
ವ್ರಾತವನು ಮುಂಕೊಂಡು ಹೊಯ್ದನು ಹೊಳೆವ ಖಡುಗದಲಿ
ಸೋತನೇ ಶಿಶು ಷಡುರಥರ ಕರೆ
ಈತನಾರೈ ಹೇಳಿ ಭಯವಿ
ನ್ನೇತಕೆಂದವನೀಶ ಮೂದಲಿಸಿದನು ತನ್ನವರ ॥37॥
೦೩೮ ಗೆಲಿದರಭಿಮನ್ಯುವನು ತನ್ನವ ...{Loading}...
ಗೆಲಿದರಭಿಮನ್ಯುವನು ತನ್ನವ
ರೆಲವೊ ತಾ ವೀಳೆಯವನೆನುತವೆ
ಮೆಲುನಗೆಯಲತಿರಥರ ಜರೆದನು ಕೌರವರ ರಾಯ
ಬಳಿಕ ಎಡಬಲವಂಕದಲಿ ಮಂ
ಡಲಿಸಿ ಮೋಹರಿಸಿತ್ತು ರಿಪುಬಲ
ಜಲಧಿ ವಡಬನೊಳಾಂತು ತಾಗಿದರಂದು ಷಡುರಥರು ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ವ್ಯಂಗ್ಯವಾಗಿ “ನಮ್ಮವರು ಅಭಿಮನ್ಯುವನ್ನು ಗೆದ್ದಾಯಿತು. ತಾಂಬೂಲವನ್ನು ಕೊಡಿ, ಎನ್ನುತ್ತಾ ಅಪಹಾಸ್ಯದ ನಗೆಯನ್ನು ಬೀರಿ. ಅತಿರಥರನ್ನು ನಿಂದಿಸಿದನು.” ಆಗ ಎಡಬಲ ಭಾಗಗಳಲ್ಲಿ ಗುಂಪು ಗುಂಪಾಗಿ ಸೇನೆಯು ಸೇರಿ ಶತ್ರು ಸೇನೆಯೆಂಬ ಶರಧಿಗೆ ಬಡಬಾಗ್ನಿಯಂತಿದ್ದ ಅಭಿಮನ್ಯುವಿನೊಡನೆ ವೀರಾವೇಶದಿಂದ ಯುದ್ಧ ಮಾಡಲಾರಂಭಿಸಿತು.
ಪದಾರ್ಥ (ಕ.ಗ.ಪ)
ಜರೆದನು-ಬೈದನು, ಅಂಕ-ಭಾಗ, ಮಂಡಲಿಸಿ-ಸುತ್ತುವರಿದು, ಮೋಹರಿಸಿ-ಒಟ್ಟಾಗಿ, ವಡಬ-ಬಡಬಾಗ್ನಿ, ಆಂತು-ಎದುರಿಸಿ
ಮೂಲ ...{Loading}...
ಗೆಲಿದರಭಿಮನ್ಯುವನು ತನ್ನವ
ರೆಲವೊ ತಾ ವೀಳೆಯವನೆನುತವೆ
ಮೆಲುನಗೆಯಲತಿರಥರ ಜರೆದನು ಕೌರವರ ರಾಯ
ಬಳಿಕ ಎಡಬಲವಂಕದಲಿ ಮಂ
ಡಲಿಸಿ ಮೋಹರಿಸಿತ್ತು ರಿಪುಬಲ
ಜಲಧಿ ವಡಬನೊಳಾಂತು ತಾಗಿದರಂದು ಷಡುರಥರು ॥38॥
೦೩೯ ತುಡುಕಿದವು ತೇಜಿಗಳು ...{Loading}...
ತುಡುಕಿದವು ತೇಜಿಗಳು ವಾಘೆಯ
ಗಡಣದಲಿ ತೂಳಿದವು ದಂತಿಗ
ಳೆಡಬಲದ ಬವರಿಯಲಿ ಮುತ್ತಿತು ಮತ್ತೆ ರಿಪುನಿಕರ
ಕಡುಮನದ ಕಾಲಾಳು ಕರೆದುದು
ಖಡುಗ ಧಾರೆಯನೀತನಳವಿಯ
ಕೆಡಿಸಿ ತಲೆಯೊತ್ತಿದರು ಭೂಪನ ಮೊನೆಯ ನಾಯಕರು ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳ ಹಗ್ಗವನ್ನು ಹಿಡಿದೆಳೆಯಲು, ಅವುಗಳು ಉತ್ಸಾಹದಿಂದ ನುಗ್ಗಿದವು. ಆನೆಗಳು ನುಗ್ಗಿದವು. ಶತ್ರು ಸೈನಿಕರು ಎಡಬಲಗಳಲ್ಲಿ ಮುತ್ತಿ ಬಂದರು. ಗಟ್ಟಿ ಮನಸ್ಸಿನ ಕಾಲಾಳುಗಳು ಖಡ್ಗಧಾರೆಯನ್ನು ಅಭಿಮನ್ಯುವಿನ ಮೇಲೆ ಪ್ರಯೋಗಿಸಿದರು. ದುರ್ಯೋಧನನ ಅಗ್ರನಾಯಕರು ಅಭಿಮನ್ಯುವಿನ ದಿಕ್ಕುಗೆಡಿಸಿ ಅವನ ಮೇಲೆ ಆಕ್ರಮಣ ನಡೆಸಿದರು.
ಮೂಲ ...{Loading}...
ತುಡುಕಿದವು ತೇಜಿಗಳು ವಾಘೆಯ
ಗಡಣದಲಿ ತೂಳಿದವು ದಂತಿಗ
ಳೆಡಬಲದ ಬವರಿಯಲಿ ಮುತ್ತಿತು ಮತ್ತೆ ರಿಪುನಿಕರ
ಕಡುಮನದ ಕಾಲಾಳು ಕರೆದುದು
ಖಡುಗ ಧಾರೆಯನೀತನಳವಿಯ
ಕೆಡಿಸಿ ತಲೆಯೊತ್ತಿದರು ಭೂಪನ ಮೊನೆಯ ನಾಯಕರು ॥39॥
೦೪೦ ವಿಷದ ಹುಟ್ಟಿಯೊಳೆರಗಿ ...{Loading}...
ವಿಷದ ಹುಟ್ಟಿಯೊಳೆರಗಿ ನೊಣ ಜೀ
ವಿಸುವುದೇ ಶಿವ ಶಿವ ಕುಮಾರನ
ಮುಸುಡ ಮುಂದಕೆ ಬಿದ್ದು ಬದುಕುವುದುಂಟೆ ಭಟನಿಕರ
ಕುಸುರಿದರಿದನು ಕರಿಘಟೆಯನಿ
ಪ್ಪಸರದಲಿ ಕಾಲಾಳು ಕುದುರೆಗ
ಳಸುವ ಸೂರೆಯ ಬಿಟ್ಟನಂತಕ ದೂತ ಸಂತತಿಗೆ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೇನು ನೊಣವು ಜೇನು ಹುಟ್ಟಿನಲ್ಲಲ್ಲದೇ ವಿಷದ ಹುಟ್ಟಿಯಲ್ಲಿ ಬಿದ್ದರೆ ಬದುಕಲು ಸಾಧ್ಯವೆ ? ಅಭಿಮನ್ಯುವಿನ ಮುಖದ ಮುಂದೆ ಬಂದು ನಿಂತು ಭಟರು ಬದುಕುವುದುಂಟೆ. ಅವನು ಆನೆಗಳ ಸೈನ್ಯವನ್ನು ತುಂಡು ತುಂಡು ಮಾಡಿದನು. ನಿಷ್ಠುರತೆಯಿಂದ ಕಾಲುದಳ, ಕುದುರೆಗಳ ಪ್ರಾಣಗಳನ್ನು ಯಮದೂತರ ಸಮೂಹಕ್ಕೆ ಸೂರೆಗೊಟ್ಟನು. ಅವನೆದುರು ಬಂದವರೆಲ್ಲರನ್ನು ಯಮನ ದೂತರು ಎಳೆದುಕೊಂಡು ಹೋಗುವಂತಾಯಿತು.
ಪದಾರ್ಥ (ಕ.ಗ.ಪ)
ಹುಟ್ಟಿ-ಜೇನು ಹುಟ್ಟಿ, ಕುಸುರಿದರಿ-ಚಿಕ್ಕ ಚಿಕ್ಕದಾಗಿ ಕತ್ತರಿಸು, ನಿಪ್ಪಸರದಲಿ-ಕ್ರೌರ್ಯದಿಂದ, ನಿಷ್ಠುರತೆಯಿಂದ,
ಮೂಲ ...{Loading}...
ವಿಷದ ಹುಟ್ಟಿಯೊಳೆರಗಿ ನೊಣ ಜೀ
ವಿಸುವುದೇ ಶಿವ ಶಿವ ಕುಮಾರನ
ಮುಸುಡ ಮುಂದಕೆ ಬಿದ್ದು ಬದುಕುವುದುಂಟೆ ಭಟನಿಕರ
ಕುಸುರಿದರಿದನು ಕರಿಘಟೆಯನಿ
ಪ್ಪಸರದಲಿ ಕಾಲಾಳು ಕುದುರೆಗ
ಳಸುವ ಸೂರೆಯ ಬಿಟ್ಟನಂತಕ ದೂತ ಸಂತತಿಗೆ ॥40॥
೦೪೧ ಅರಿಭಟರ ಬೊಬ್ಬೆಗಳ ...{Loading}...
ಅರಿಭಟರ ಬೊಬ್ಬೆಗಳ ಮೊಳಗಿನೊ
ಳರುಣಜಲ ವರುಷದಲಿ ರಿಪುಗಳ
ಕೊರಳ ಬನದಲಿ ಕುಣಿದುವೀತನ ಖಡ್ಗವನಕೇಕಿ
ಸುರಿವ ಖಂಡದ ರಕುತ ಧಾರೆಗೆ
ತರತರದಿ ಬಾಯ್ದೆಗೆದು ಶಾಕಿನಿ
ಯರ ಸಮೂಹವು ಬಳಿಯಲೈದಿತು ಪಾರ್ಥನಂದನನ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು ಸೈನಿಕರ ಆರ್ಭಟದ ಕೂಗಿನಲ್ಲಿ , ರಕ್ತದ ಮಳೆಯಲ್ಲಿ , ಶತ್ರುಗಳ ಕೊರಳೆಂಬ ಅರಣ್ಯದಲ್ಲಿ ಅಭಿಮನ್ಯುವಿನ ಖಡ್ಗವೆಂಬ ನವಿಲು ಕುಣಿದಾಡಿತು. ಸುರಿಯುವ ಮಾಂಸಕ್ಕೆ ರಕ್ತದ ಪ್ರವಾಹಕ್ಕೆ ಬಹುವಿಧವಾಗಿ ಬಾಯನ್ನು ತೆರೆದು ಭೂತ ಬೇತಾಳಗಳ ಗುಂಪು ಅಭಿಮನ್ಯುವಿನ ಬಳಿ ಬಂದುವು.
ಪದಾರ್ಥ (ಕ.ಗ.ಪ)
ಕೇಕಿ-ನವಿಲು
ಮೂಲ ...{Loading}...
ಅರಿಭಟರ ಬೊಬ್ಬೆಗಳ ಮೊಳಗಿನೊ
ಳರುಣಜಲ ವರುಷದಲಿ ರಿಪುಗಳ
ಕೊರಳ ಬನದಲಿ ಕುಣಿದುವೀತನ ಖಡ್ಗವನಕೇಕಿ
ಸುರಿವ ಖಂಡದ ರಕುತ ಧಾರೆಗೆ
ತರತರದಿ ಬಾಯ್ದೆಗೆದು ಶಾಕಿನಿ
ಯರ ಸಮೂಹವು ಬಳಿಯಲೈದಿತು ಪಾರ್ಥನಂದನನ ॥41॥
೦೪೨ ಕರುಳ ಹೂಗೊಞ್ಚಲಿನ ...{Loading}...
ಕರುಳ ಹೂಗೊಂಚಲಿನ ಮೂಳೆಯ
ಬಿರಿಮುಗುಳ ನವ ಖಂಡದಿಂಡೆಯ
ಕರತಳದ ತಳಿರೆಲೆಯ ಕಡಿದೋಳುಗಳ ಕೊಂಬುಗಳ
ಬೆರಳ ಕಳಿಕೆಯ ತಲೆಯ ಫಲ ಬಂ
ಧುರದ ಘೂಕಧ್ವಾಂಕ್ಷ ನವ ಮಧು
ಕರದ ರಣವನವೆಸೆದುದೀತನ ಖಡ್ಗ ಚೈತ್ರದಲಿ ॥42॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರುಳುಗಳೆಂಬ ಹೂಗೊಂಚಲಿನ, ಮೂಳೆಗಳೆಂಬ ಅರಳಿದ ಹೂಗಳ, ಹೊಸ ಮಾಂಸ ಖಂಡಗಳ ದಿಂಡುಗಳ, ಹಸ್ತಗಳೆಂಬ ತಳಿರೆಲೆಯ, ಕಡಿತೋಳುಗಳೆಂಬ ಕೊಂಬುಗಳ, ಬೆರಳುಗಳೆಂಬ ಹೂಗಿಡದ, ತಲೆಯೆಂಬ ಹಣ್ಣುಗಳ, ಗೂಬೆ ಕಾಗೆಗಳೆಂಬ ದುಂಬಿಗಳ ಯುದ್ಧ ಭೂಮಿಯೆಂಬ ಅರಣ್ಯವು ಅಭಿಮನ್ಯುವಿನ ಖಡ್ಗವೆಂಬ ಚೈತ್ರ ಮಾಸದಲ್ಲಿ ಶೋಭಿಸಿತು.
ಪದಾರ್ಥ (ಕ.ಗ.ಪ)
ಬಿರಿಮುಗುಳ-ಅರಳಿದ ಮೊಗ್ಗು, ತಳಿರೆಲೆ-ಚಿಗುರಿದ ಎಲೆ, ಬಂಧುರ-ಮನೋಹರ, ಘೂಕ-ಗೂಬೆ, ಧ್ವಾಂಕ್ಷ-ಕಾಗೆ, ಮಧುಕರ-ದುಂಬಿ, ಎಸೆದುದು-ಶೋಭಿಸಿತು
ಮೂಲ ...{Loading}...
ಕರುಳ ಹೂಗೊಂಚಲಿನ ಮೂಳೆಯ
ಬಿರಿಮುಗುಳ ನವ ಖಂಡದಿಂಡೆಯ
ಕರತಳದ ತಳಿರೆಲೆಯ ಕಡಿದೋಳುಗಳ ಕೊಂಬುಗಳ
ಬೆರಳ ಕಳಿಕೆಯ ತಲೆಯ ಫಲ ಬಂ
ಧುರದ ಘೂಕಧ್ವಾಂಕ್ಷ ನವ ಮಧು
ಕರದ ರಣವನವೆಸೆದುದೀತನ ಖಡ್ಗ ಚೈತ್ರದಲಿ ॥42॥
೦೪೩ ವೈರಿ ವೀರಪ್ರತತಿಗಮರೀ ...{Loading}...
ವೈರಿ ವೀರಪ್ರತತಿಗಮರೀ
ನಾರಿಯರಿಗೆ ವಿವಾಹವನು ವಿ
ಸ್ತಾರಿಸುವ ಸಮಯದೊಳಗಾಂತ ಸಿತಾಕ್ಷತಾವಳಿಯ
ತಾರಕಿಗಳೆಸೆದಭ್ರವೆನೆ ರಿಪು
ವಾರಣದ ಮಸ್ತಕದ ಮುತ್ತುಗ
ಳೋರಣಿಸಲೊಪ್ಪಿದುದು ಖಡ್ಗ ಸುರೇಂದ್ರಸುತ ಸುತನ ॥43॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು ಸೇನೆಯ ವೀರರ ಸಮೂಹಕ್ಕೆ ಹಾಗೂ ಸ್ವರ್ಗ ಲೋಕದ ಸ್ತ್ರೀಯರಿಗೆ ವಿವಾಹವನ್ನು ನೆರವೇರಿಸುವ ಸಂದರ್ಭದಲ್ಲಿ ಬಿಳಿಯ ಮಂತ್ರಾಕ್ಷತೆಗಳೆಂಬ ನಕ್ಷತ್ರಗಳು ಶೋಭಿಸುತ್ತಿರುವ ಆಕಾಶವೋ ಎಂಬಂತೆ ಹಾಗೂ ಶತ್ರುಗಳ ಆನೆಯ ತಲೆಯ ಮೇಲಿದ್ದ ಮುತ್ತುಗಳು ಜೋಡಿಸಿವೆಯೋ ಎಂಬಂತಿದ್ದ ಅಭಿಮನ್ಯುವಿನ ಖಡ್ಗವು ಶೋಭಿಸಿತು.
ಪದಾರ್ಥ (ಕ.ಗ.ಪ)
ಸಿತಾಕ್ಷತಾವಳಿ-ಬಿಳಿಯ ಮಂತ್ರಾಕ್ಷತೆ
ಮೂಲ ...{Loading}...
ವೈರಿ ವೀರಪ್ರತತಿಗಮರೀ
ನಾರಿಯರಿಗೆ ವಿವಾಹವನು ವಿ
ಸ್ತಾರಿಸುವ ಸಮಯದೊಳಗಾಂತ ಸಿತಾಕ್ಷತಾವಳಿಯ
ತಾರಕಿಗಳೆಸೆದಭ್ರವೆನೆ ರಿಪು
ವಾರಣದ ಮಸ್ತಕದ ಮುತ್ತುಗ
ಳೋರಣಿಸಲೊಪ್ಪಿದುದು ಖಡ್ಗ ಸುರೇಂದ್ರಸುತ ಸುತನ ॥43॥
೦೪೪ ಶಾಕಿನಿಯರೋಕುಳಿಯ ಧಾರೆಯ ...{Loading}...
ಶಾಕಿನಿಯರೋಕುಳಿಯ ಧಾರೆಯ
ಜೀಕೊಳವೆಯೋ ಜವನ ಜಳ ಜಂ
ತ್ರಾಕರುಷಣವೊ ರಕುತ ಲತೆಗಳ ಕುಡಿಯ ಕೊನರುಗಳೊ
ನೂಕಿ ಕೊಯ್ಗೊರಳುಗಳ ಮುಂಡದ
ಮೂಕಿನಲಿ ನೆಗೆದೊಗುವ ನೆತ್ತರು
ನಾಕವನು ನಾದಿದುದೆನಲು ಸವರಿದನು ಪರಬಲವ ॥44॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಾಕಿನಿಯರು ಓಕುಳಿಯ ನೀರನ್ನು ಸಿಡಿಸುತ್ತಿರುವ ಜೀರ್ಕೊಳವೆಯೋ, ಯಮನ ಜಲಯಂತ್ರದ ಆಕರ್ಷಣೆಯೋ, ರಕ್ತಲತೆಗಳ ಕುಡಿಯ ಚಿಗುರುಗಳೋ (ಎಂದು ತೋರುವಂತಿದ್ದ) ಕಡಿದು ಹಾಕಿದ ಕೊರಳುಗಳ ಮುಂಡ ಭಾಗದ ನಡುವೆ ನೆಗೆದು ಹಾರುತ್ತಿದ್ದ ರಕ್ತವು ಸ್ವರ್ಗ ಲೋಕವನ್ನು ನೆನೆಸಿತೆಂಬಂತೆ ಅಭಿಮನ್ಯು ಶತ್ರು ಸೈನ್ಯವನ್ನು ಸವರಿ ಹಾಕಿದನು.
ಪದಾರ್ಥ (ಕ.ಗ.ಪ)
ಜೀಕೊಳವೆ-ಚಿಮ್ಮಿಸುವ ಕೊಳವೆ, ಜಂತ್ರ-ಯಂತ್ರ, ಒಗುವ-ಚಿಮ್ಮುವ,
ಮೂಲ ...{Loading}...
ಶಾಕಿನಿಯರೋಕುಳಿಯ ಧಾರೆಯ
ಜೀಕೊಳವೆಯೋ ಜವನ ಜಳ ಜಂ
ತ್ರಾಕರುಷಣವೊ ರಕುತ ಲತೆಗಳ ಕುಡಿಯ ಕೊನರುಗಳೊ
ನೂಕಿ ಕೊಯ್ಗೊರಳುಗಳ ಮುಂಡದ
ಮೂಕಿನಲಿ ನೆಗೆದೊಗುವ ನೆತ್ತರು
ನಾಕವನು ನಾದಿದುದೆನಲು ಸವರಿದನು ಪರಬಲವ ॥44॥
೦೪೫ ಅಟ್ಟಿ ಹೊಯ್ದನು ...{Loading}...
ಅಟ್ಟಿ ಹೊಯ್ದನು ದಂತಿಗಳ ಹುಡಿ
ಗುಟ್ಟಿದನು ವಾಜಿಗಳ ತೇರಿನ
ಥಟ್ಟುಗಳ ಸೀಳಿದನು ಮಿಗೆ ಕಾಲಾಳನಸಿಯರೆದ
ಕೆಟ್ಟು ಬಿಟ್ಟೋಡಿದುದು ಭಟನರೆ
ಯಟ್ಟಿದನು ರಣದೊಳಗೆ ರಾಯ ಘ
ರಟ್ಟ ಪಾರ್ಥನ ತನಯ ಕೊಂದನು ಖಡ್ಗ ಮನದಣಿಯೆ ॥45॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯು ಆನೆಗಳನ್ನು ಅಟ್ಟಿಕೊಂಡು ಹೋಗಿ ಹೊಡೆದನು. ಕುದುರೆಗಳನ್ನು ಪುಡಿಗಟ್ಟಿದನು. ರಥ ಸಮೂಹವನ್ನು ಸೀಳಿದನು. ಕಾಲಾಳುಗಳನ್ನು ನುಣ್ಣಗೆ ಅರೆದನು. ಭಟರು ಸೋತು ರಣರಂಗವನ್ನು ಬಿಟ್ಟು ಓಡಿದರು. ಅವರನ್ನು ಅಭಿಮನ್ಯು ಅಟ್ಟಿದನು. ತನ್ನ ಖಡ್ಗಕ್ಕೆ ತೃಪ್ತಿಯಾಗುವಂತೆ ಶತ್ರುಗಳನ್ನು ಕೊಂದು ಹಾಕಿದನು.
ಮೂಲ ...{Loading}...
ಅಟ್ಟಿ ಹೊಯ್ದನು ದಂತಿಗಳ ಹುಡಿ
ಗುಟ್ಟಿದನು ವಾಜಿಗಳ ತೇರಿನ
ಥಟ್ಟುಗಳ ಸೀಳಿದನು ಮಿಗೆ ಕಾಲಾಳನಸಿಯರೆದ
ಕೆಟ್ಟು ಬಿಟ್ಟೋಡಿದುದು ಭಟನರೆ
ಯಟ್ಟಿದನು ರಣದೊಳಗೆ ರಾಯ ಘ
ರಟ್ಟ ಪಾರ್ಥನ ತನಯ ಕೊಂದನು ಖಡ್ಗ ಮನದಣಿಯೆ ॥45॥
೦೪೬ ಸೀಳಿದನು ಸೌಬಲನೊಳಿಪ್ಪ ...{Loading}...
ಸೀಳಿದನು ಸೌಬಲನೊಳಿಪ್ಪ
ತ್ತೇಳನಾ ಮಾದ್ರೇಶರೊಳು ಹದಿ
ನೇಳನಗ್ಗದ ರವಿಸುತನ ಮಂತ್ರಿಗಳೊಳೈವರನು
ಮೇಲೆ ಕೇರಳರೊಳಗೆ ಹತ್ತು ನೃ
ಪಾಲರನು ಕೌಸಲ ಯವನ ನೇ
ಪಾಳ ಬರ್ಬರರೊಳಗೆ ಕೊಂದನು ಹತ್ತು ಸಾವಿರವ ॥46॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿಯೊಡನಿದ್ದ ಇಪ್ಪತ್ತೇಳು ರಾಜರನ್ನು, ಸೀಳಿದನು. ಶಲ್ಯನೊಡನಿದ್ದ ಹದಿನೇಳು ದೊರೆಗಳನ್ನು, ಶ್ರೇಷ್ಠನಾದ ಕರ್ಣನೊಡನಿದ್ದ ಐವರು ಮಂತ್ರಿಗಳನ್ನು, ಕೇರಳರ ಜೊತೆಯಲ್ಲಿದ್ದ ಹತ್ತು ರಾಜರನ್ನು , ಕೌಸಲ, ಯವನ, ನೇಪಾಳ, ಬರ್ಬರರೇ ಮೊದಲಾದವgಲ್ಲಿ ಹತ್ತು ಸಾವಿರ ರಾಜರನ್ನು ಸಂಹಾರ ಮಾಡಿದನು.
ಮೂಲ ...{Loading}...
ಸೀಳಿದನು ಸೌಬಲನೊಳಿಪ್ಪ
ತ್ತೇಳನಾ ಮಾದ್ರೇಶರೊಳು ಹದಿ
ನೇಳನಗ್ಗದ ರವಿಸುತನ ಮಂತ್ರಿಗಳೊಳೈವರನು
ಮೇಲೆ ಕೇರಳರೊಳಗೆ ಹತ್ತು ನೃ
ಪಾಲರನು ಕೌಸಲ ಯವನ ನೇ
ಪಾಳ ಬರ್ಬರರೊಳಗೆ ಕೊಂದನು ಹತ್ತು ಸಾವಿರವ ॥46॥
೦೪೭ ಹಸುಳೆಯೆನಬಹುದೇ ಮಹಾದೇ ...{Loading}...
ಹಸುಳೆಯೆನಬಹುದೇ ಮಹಾದೇ
ವಸಮ ಬಲ ಬಾಲಕನೆನುತ ಚಾ
ಳಿಸಿತು ಪಡೆಯಲ್ಲಲ್ಲಿ ತಲ್ಲಣಿಸಿದರು ನಾಯಕರು
ಮುಸುಡ ತಿರುಹುತ ಮಕುಟ ವರ್ಧನ
ರುಸುರಲಮ್ಮದೆ ಸಿಕ್ಕಿ ಭೂಪನ
ನುಸುಳುಗಂಡಿಯ ನೋಡುತಿರ್ದರು ಕೂಡೆ ತಮತಮಗೆ ॥47॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಶಿವಶಿವಾ ಇವನನ್ನು ಬಾಲಕ ಎನ್ನಬಹುದೇ. ಇವನು ಅಸಮಬಲನಾದ ಬಾಲಕ." ಎಂದು ಸೈನ್ಯ ಹಿಮ್ಮೆಟ್ಟಿತು. ನಾಯಕರು ಭಯಗೊಂಡರು. ಕಿರೀಟವನ್ನು ಧರಿಸಿದ ರಾಜಾಧಿರಾಜರು ಮುಖವನ್ನು ಬೇರೆಡೆ ತಿರುಗಿಸುತ್ತಾ, ಮಾತಾಡುವ ಶಕ್ತಿ ಇಲ್ಲದೆ ಯಾವ ಕಡೆಯಿಂದ ನುಸುಳಿ ರಣರಂಗದಿಂದ ಪರಾರಿಯಾಗುವುದು ಹೇಗೆ ಎಂದು ಚಿಂತಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ಚಾಳಿಸಿತು-ಹಿಮ್ಮೆಟ್ಟಿತು.
ನುಸುಳುಗಂಡಿ-ಹೊರಗೆ ಹೋಗುವ ಮಾರ್ಗ
ಮೂಲ ...{Loading}...
ಹಸುಳೆಯೆನಬಹುದೇ ಮಹಾದೇ
ವಸಮ ಬಲ ಬಾಲಕನೆನುತ ಚಾ
ಳಿಸಿತು ಪಡೆಯಲ್ಲಲ್ಲಿ ತಲ್ಲಣಿಸಿದರು ನಾಯಕರು
ಮುಸುಡ ತಿರುಹುತ ಮಕುಟ ವರ್ಧನ
ರುಸುರಲಮ್ಮದೆ ಸಿಕ್ಕಿ ಭೂಪನ
ನುಸುಳುಗಂಡಿಯ ನೋಡುತಿರ್ದರು ಕೂಡೆ ತಮತಮಗೆ ॥47॥
೦೪೮ ತುಡುಕಲಮ್ಮುವರಿಲ್ಲ ಬಲದಲಿ ...{Loading}...
ತುಡುಕಲಮ್ಮುವರಿಲ್ಲ ಬಲದಲಿ
ಮಿಡುಕಲಮ್ಮುವರಿಲ್ಲ ರಕುತದ
ಕಡಲೊಳಗೆ ಬೆಂಡೆದ್ದು ನೆಗೆದುದು ಕೋಟಿ ಪಾಯದಳ
ಸಿಡಿಲು ಜಂಗಮವಾಯ್ತೊ ಪ್ರಳಯದ
ಮೃಡನು ಬಾಲಕನಾದನೋ ಕೊಲೆ
ಗಡಿಕನಹುದೋ ಕಂದ ಎಂದನು ಕೌರವರ ರಾಯ ॥48॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎದುರಿಸಿ ನಿಲ್ಲುವವರಿಲ್ಲ, ಸೈನ್ಯದಲ್ಲಿ ಇವನನ್ನು ಅಲ್ಲಾಡಿಸುವವರಿಲ್ಲ. ಕೋಟಿ ಕಾಲ್ದಳದವರು ರಕ್ತದ ಸಮುದ್ರದಲ್ಲಿ ತೇಲಿ ಮುಳುಗಿದರು. ಸಿಡಿಲು ಓಡಾಡುವ ಅವತಾರವನ್ನು ತಾಳಿತೋ. ಪ್ರಳಯಕಾಲದ ಶಿವನು ಬಾಲಕನಾದನೋ, ಈ ಕಂದ ಕೊಲೆಗಡಿಕನೇ ಅಹುದು! " ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ತುಡುಕಲು-ಎದುರಿಸಲು
ಮಿಡುಕಲು-ಅಲ್ಲಾಡಿಸಲು,
ಅಮ್ಮುವರಿಲ್ಲ-ಶಕ್ತಿಉಳ್ಳವರಿಲ್ಲ,
ಮೂಲ ...{Loading}...
ತುಡುಕಲಮ್ಮುವರಿಲ್ಲ ಬಲದಲಿ
ಮಿಡುಕಲಮ್ಮುವರಿಲ್ಲ ರಕುತದ
ಕಡಲೊಳಗೆ ಬೆಂಡೆದ್ದು ನೆಗೆದುದು ಕೋಟಿ ಪಾಯದಳ
ಸಿಡಿಲು ಜಂಗಮವಾಯ್ತೊ ಪ್ರಳಯದ
ಮೃಡನು ಬಾಲಕನಾದನೋ ಕೊಲೆ
ಗಡಿಕನಹುದೋ ಕಂದ ಎಂದನು ಕೌರವರ ರಾಯ ॥48॥
೦೪೯ ಧನು ಮುರಿದ ...{Loading}...
ಧನು ಮುರಿದ ಬಳಿಕಿಮ್ಮಡಿಸಿತೀ
ತನ ಪರಾಕ್ರಮವೆನುತ ಸೇನಾ
ವನಧಿ ಜರೆದುದು ಭಟರು ಹರಿದರು ಬಿಟ್ಟ ಮಂಡೆಯಲಿ
ಜನಪತಿಯ ಕಟ್ಟಳವಿಯಲಿ ರವಿ
ತನುಜನಡ್ಡೈಸಿದನು ಫಡ ಹೋ
ಗೆನುತ ನಾರಾಚದಲಿ ಮುಸುಕಿದನರ್ಜುನಾತ್ಮಜನ ॥49॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲು ಮುರಿದ ಮೇಲೆ ಇವನ ಪರಾಕ್ರಮ ಎರಡರಷ್ಟು ಹೆಚ್ಚಾಯಿತು ಎಂದು ಕೌರವನ ಸೇನಾ ಸಮುದ್ರ ಬೈಯುತ್ತಿತ್ತು. ಸೈನಿಕರು ಕೂದಲು ಬಿಟ್ಟುಕೊಂಡು ರಣರಂಗವನ್ನು ಬಿಟ್ಟು ಓಡಿದರು. ದುರ್ಯೋಧನನ ಕಾವಲಿನಲ್ಲಿ ಕರ್ಣನು ಅಭಿಮನ್ಯುವನ್ನು ತಡೆದು ನಿಲ್ಲಿಸಿದನು. ಹೋಗು ಎಂದು ಕೂಗುತ್ತಾ ಬಾಣಗಳಿಂದ ಅಭಿಮನ್ಯುವನ್ನು ಮುಚ್ಚಿ ಹಾಕಿದನು.
ಮೂಲ ...{Loading}...
ಧನು ಮುರಿದ ಬಳಿಕಿಮ್ಮಡಿಸಿತೀ
ತನ ಪರಾಕ್ರಮವೆನುತ ಸೇನಾ
ವನಧಿ ಜರೆದುದು ಭಟರು ಹರಿದರು ಬಿಟ್ಟ ಮಂಡೆಯಲಿ
ಜನಪತಿಯ ಕಟ್ಟಳವಿಯಲಿ ರವಿ
ತನುಜನಡ್ಡೈಸಿದನು ಫಡ ಹೋ
ಗೆನುತ ನಾರಾಚದಲಿ ಮುಸುಕಿದನರ್ಜುನಾತ್ಮಜನ ॥49॥
೦೫೦ ಎಳೆಯ ರವಿ ...{Loading}...
ಎಳೆಯ ರವಿ ರಶ್ಮೆಗಳು ರಕ್ತೋ
ತ್ಪಲದೊಳಗೆ ಹೊಳೆವಂತೆ ಹೊನ್ನರೆ
ಬಳಿದ ಹಿಳುಕನೆ ಕಾಣಲಾದುದು ಭಟನ ಕಾಯದಲಿ
ಒಲೆದು ಕೇಸರಿ ಹೊಯ್ವವೋಲ
ವ್ವಳಿಸಿ ಕರ್ಣನ ಹಯ ರಥವನ
ಪ್ಪಳಿಸಿ ಮರಳುವ ಲಾಗಿನಲಿ ಖಂಡೆಯವ ಖಂಡಿಸಿದ ॥50॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಳೆಯಾದ ಸೂರ್ಯನ ಕಿರಣಗಳು ಕೆಂಪು ಬಣ್ಣದ ಕನ್ನೈದಿಲೆಯಲ್ಲಿ ಹೊಳೆಯುವ ಹಾಗೆ, ಬಂಗಾರದ ಬಣ್ಣವನ್ನು ಲೇಪಿಸಿದ ಬಾಣಗಳು ಅಭಿಮನ್ಯುವಿನ ದೇಹದ ತುಂಬ ನೆಟ್ಟುಕೊಂಡವು. ಆಗ ಸಿಂಹವು ತೂಗಾಡಿ ಅಪ್ಪಳಿಸುವ ಹಾಗೆ ಕರ್ಣನ ಕುದುರೆ ಹಾಗೂ ರಥದ ಮೇಲೆ ಅಪ್ಪಳಿಸಿ ಹಿಂದಿರುಗುವ ಚಲನೆಯಲ್ಲಿ ಅಭಿಮನ್ಯು ಕರ್ಣನ ಕತ್ತಿಯನ್ನು ತುಂಡು ಮಾಡಿದ.
ಪದಾರ್ಥ (ಕ.ಗ.ಪ)
ರಶ್ಮೆ -ಕಿರಣ,
ಮೂಲ ...{Loading}...
ಎಳೆಯ ರವಿ ರಶ್ಮೆಗಳು ರಕ್ತೋ
ತ್ಪಲದೊಳಗೆ ಹೊಳೆವಂತೆ ಹೊನ್ನರೆ
ಬಳಿದ ಹಿಳುಕನೆ ಕಾಣಲಾದುದು ಭಟನ ಕಾಯದಲಿ
ಒಲೆದು ಕೇಸರಿ ಹೊಯ್ವವೋಲ
ವ್ವಳಿಸಿ ಕರ್ಣನ ಹಯ ರಥವನ
ಪ್ಪಳಿಸಿ ಮರಳುವ ಲಾಗಿನಲಿ ಖಂಡೆಯವ ಖಂಡಿಸಿದ ॥50॥
೦೫೧ ಕರದ ಕರವಾಳುಡಿಯೆ ...{Loading}...
ಕರದ ಕರವಾಳುಡಿಯೆ ಬಿಡೆ ಹ
ಲ್ಮೊರೆದು ಭರದಲಿ ಗದೆಯ ಕೊಂಡ
ಬ್ಬರಿಸಿ ಕೋಪದಲಗಿದು ಹರಿಗೆಯ ಹಿಡಿದು ಮುಂದಣಿಗೆ
ಅರರೆ ಸಮ್ಮುಖವಾಗೆನುತ ಸಂ
ಗರದೊಳುರವಣಿಸಿದನು ಕರ್ಣನ
ತೆರಳಿಚಿದನೈನೂರು ಹಜ್ಜೆಯಲಿಂದ್ರಸುತ ಸೂನು ॥51॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೈಯಲ್ಲಿದ್ದ ಖಡ್ಗ ಕೆಳಗೆ ಬಿದ್ದು ಹೋಗಲು. ಕರ್ಣನು ಆಗ ಹಲ್ಲುಗಳನ್ನು ಕಡಿಯುತ್ತಾ, ವೇಗವಾಗಿ ಗದೆಯನ್ನು ಕೈಗೆತ್ತಿಕೊಂಡು ಆರ್ಭಟಿಸುತ್ತಾ, ಕೋಪದಿಂದ ಗುರಾಣಿಯನ್ನು ಮುಂದಕ್ಕೆ ಹಿಡಿದು “ಆಹಾ, ಎದುರು ನಿಂತು ಯುದ್ಧವನ್ನು ಮಾಡು ಎಂದು ಉತ್ಸಾಹದಿಂದ ಮುಂದುವರಿದನು”. ಆಗ ಅಭಿಮನ್ಯುವು ಕರ್ಣನನ್ನು ಐದು ನೂರು ಹೆಜ್ಜೆಗಳಷ್ಟು ಹಿಂದಕ್ಕೆ ಸರಿಸಿದನು.
ಪದಾರ್ಥ (ಕ.ಗ.ಪ)
ಕರವಾಳು-ಖಡ್ಗ,
ಹರಿಗೆ -ಗುರಾಣಿ
ಮೂಲ ...{Loading}...
ಕರದ ಕರವಾಳುಡಿಯೆ ಬಿಡೆ ಹ
ಲ್ಮೊರೆದು ಭರದಲಿ ಗದೆಯ ಕೊಂಡ
ಬ್ಬರಿಸಿ ಕೋಪದಲಗಿದು ಹರಿಗೆಯ ಹಿಡಿದು ಮುಂದಣಿಗೆ
ಅರರೆ ಸಮ್ಮುಖವಾಗೆನುತ ಸಂ
ಗರದೊಳುರವಣಿಸಿದನು ಕರ್ಣನ
ತೆರಳಿಚಿದನೈನೂರು ಹಜ್ಜೆಯಲಿಂದ್ರಸುತ ಸೂನು ॥51॥
೦೫೨ ಗದೆಯ ಹೊಯ್ಲಲಿ ...{Loading}...
ಗದೆಯ ಹೊಯ್ಲಲಿ ನೊಂದು ಕೋಪದೊ
ಳದಿರೆನುತ ಸೈಗೆಡೆದ ರೋಮದ
ಹೊದರುಗಳ ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ
ಕುದಿದ ಹೃದಯದ ಕಾದ ದೇಹದ
ಕದನಗಲಿ ರವಿಸೂನು ಮೇಲಿ
ಕ್ಕಿದನು ಫಡ ಹೋಗದಿರು ಹೋಗದಿರೆನುತ ತೆಗೆದೆಚ್ಚ ॥52॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯು ಹೊಡೆದ ಗದೆಯ ಏಟಿನಿಂದ ನೊಂದು, ಕೋಪದಿಂದ ನಡುಗಿ, ಕೆದರಿದ ತಲೆಗೂದಲುಗಳ ಪೊದೆಯ, ಬಿಟ್ಟ ಕಣ್ಣುಗಳ, ಕೆಂಪು ಕೆಂಪಿನ ಕುಣಿಯುವ ಮೀಸೆಗಳ, ಬಿಸಿಯೇರಿದ ಹೃದಯದ, ಕಾದ ದೇಹದ, ಕದನ ಪ್ರಚಂಡನಾದ ಕರ್ಣನು ಮೇಲೆ ಬಿದ್ದು, ಯುದ್ಧರಂಗದಿಂದ ಹೋಗಬೇಡವೆಂದು ಹೇಳುತ್ತಾ, ಅಭಿಮನ್ಯುವಿನ ಮೇಲೆ ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಸೈಗೆಡೆದ-ಬಿದ್ದ, ಕೆದರಿದ,
ಮೂಲ ...{Loading}...
ಗದೆಯ ಹೊಯ್ಲಲಿ ನೊಂದು ಕೋಪದೊ
ಳದಿರೆನುತ ಸೈಗೆಡೆದ ರೋಮದ
ಹೊದರುಗಳ ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ
ಕುದಿದ ಹೃದಯದ ಕಾದ ದೇಹದ
ಕದನಗಲಿ ರವಿಸೂನು ಮೇಲಿ
ಕ್ಕಿದನು ಫಡ ಹೋಗದಿರು ಹೋಗದಿರೆನುತ ತೆಗೆದೆಚ್ಚ ॥52॥
೦೫೩ ಶರಮಯವು ಸರ್ವಾಙ್ಗವಿನ್ನೀ ...{Loading}...
ಶರಮಯವು ಸರ್ವಾಂಗವಿನ್ನೀ
ಸರಳು ನೆಡಲಿಂಬಿಲ್ಲ ಮೈಗಳೊ
ಳರಿಯನದನಭಿಮನ್ಯು ಕರ್ಣನ ಮೇಲುವಾಯಿದನು
ತರಹರಿಸಿ ಕೆಲಸಿಡಿದು ರಿಪು ಭಟ
ನುರವನುದರವನೆಡಬಲನ ಕಿ
ಬ್ಬರಿಯನೆಚ್ಚನು ಕರ್ಣ ನೂರೈವತ್ತು ಬಾಣದಲಿ ॥53॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವಿನ ದೇಹದ ಎಲ್ಲ ಅಂಗಗಳು ಬಾಣಮಯವಾದುವು. ಇನ್ನು ಈ ಬಾಣವು ನಾಟಿಕೊಳ್ಳಲು ದೇಹದಲ್ಲಿ ಸ್ಥಳವೇ ಇಲ್ಲ. ಅಭಿಮನ್ಯು ಅದನ್ನು ಲೆಕ್ಕಿಸದೇ ಕರ್ಣನ ಮೇಲೆ ಬಿದ್ದನು. ಕರ್ಣ ಆತುರದಿಂದ ಪಕ್ಕಕ್ಕೆ ನೆಗೆದು, ಅಭಿಮನ್ಯುವಿನ ಎದೆ, ಹೊಟ್ಟೆ, ಎಡಬಲದ ಪಕ್ಕೆಗಳನ್ನು ನೂರೈವತ್ತು ಬಾಣಗಳಿಂದ ಹೊಡೆದನು.
ಪದಾರ್ಥ (ಕ.ಗ.ಪ)
ಮೇಲುವಾಯಿ-ಮೇಲೆ ಬಿದ್ದು,
ಮೂಲ ...{Loading}...
ಶರಮಯವು ಸರ್ವಾಂಗವಿನ್ನೀ
ಸರಳು ನೆಡಲಿಂಬಿಲ್ಲ ಮೈಗಳೊ
ಳರಿಯನದನಭಿಮನ್ಯು ಕರ್ಣನ ಮೇಲುವಾಯಿದನು
ತರಹರಿಸಿ ಕೆಲಸಿಡಿದು ರಿಪು ಭಟ
ನುರವನುದರವನೆಡಬಲನ ಕಿ
ಬ್ಬರಿಯನೆಚ್ಚನು ಕರ್ಣ ನೂರೈವತ್ತು ಬಾಣದಲಿ ॥53॥
೦೫೪ ಸರಳು ನೆಡಲುಬ್ಬೆದ್ದು ...{Loading}...
ಸರಳು ನೆಡಲುಬ್ಬೆದ್ದು ಬೊಬ್ಬಿರಿ
ದುರವಣಿಸಿ ಬರೆ ದಿವ್ಯ ಶರದಲಿ
ಕರವೆರಡ ಹರಿಯೆಚ್ಚಡಾಗಳೆ ಕೆಡೆದವವನಿಯಲಿ
ಇರದೆ ಗಹಗಹಿಸಿದನು ಕೇಳೆಲೆ
ಮರುಳೆ ಸೂತಜ ಕೈಮುರಿಯೆ ಸಂ
ಗರದ ಸಿರಿ ಹಿಂಗುವಳೆ ತನ್ನನೆನುತ್ತ ಗರ್ಜಿಸಿದ ॥54॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವಿನ ದೇಹದ ಮೇಲೆ ಮತ್ತೆ ನೂರೈವತ್ತು ಬಾಣಗಳು ಚುಚ್ಚಿಕೊಂಡಾಗ ಅವನು ಗರ್ಜಿಸಿ ಮತ್ತೆ ನುಗ್ಗಿ ಬರಲು ಕರ್ಣನು ದಿವ್ಯಾಸ್ತ್ರದಿಂದ ಅಭಿಮನ್ಯುವಿನ ಎರಡೂ ಕೈಗಳನ್ನು ಕತ್ತರಿಸಿ ಹಾಕಲು. ಅಭಿಮನ್ಯು ಭೂಮಿಯ ಮೇಲೆ ಉರುಳಿದನು. ಅಭಿಮನ್ಯು ನೆಲದ ಮೇಲೆ ಬಿದ್ದರೂ ಗಹಗಹಿಸಿ ನಗುತ್ತಾ “ಎಲೈ ಸೂತ ಪುತ್ರನಾದ ಕರ್ಣನೆ ಕೇಳು, ನೀನು ಕೈ ಮುರಿದರೆ ಯುದ್ಧದ ಭಾಗ್ಯಲಕ್ಷ್ಮಿ ನನ್ನಿಂದ ದೂರ ಸರಿದಳೆಂದು ಭಾವಿಸಬೇಡ” ಎಂದು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಹರಿಯೆಚ್ಚಡೆ-ಕತ್ತರಿಸುವ ಹಾಗೆ ಹೊಡೆಯಲು,
ಮೂಲ ...{Loading}...
ಸರಳು ನೆಡಲುಬ್ಬೆದ್ದು ಬೊಬ್ಬಿರಿ
ದುರವಣಿಸಿ ಬರೆ ದಿವ್ಯ ಶರದಲಿ
ಕರವೆರಡ ಹರಿಯೆಚ್ಚಡಾಗಳೆ ಕೆಡೆದವವನಿಯಲಿ
ಇರದೆ ಗಹಗಹಿಸಿದನು ಕೇಳೆಲೆ
ಮರುಳೆ ಸೂತಜ ಕೈಮುರಿಯೆ ಸಂ
ಗರದ ಸಿರಿ ಹಿಂಗುವಳೆ ತನ್ನನೆನುತ್ತ ಗರ್ಜಿಸಿದ ॥54॥
೦೫೫ ಸುರಿವ ರಕುತದ ...{Loading}...
ಸುರಿವ ರಕುತದ ಸರಿಯ ಸೆರಗಿನೊ
ಳೊರಸಿ ರಥದಚ್ಚುಗಳನೊದೆದನು
ತಿರುಹಿ ಗಾಲಿಯ ತೆಗೆದು ಮುಂಗೈಗೊಂಡು ನಡೆನಡೆದು
ಅರಿಬಲವನಿಡೆ ಮುಗ್ಗಿ ಕೆಡೆದುದು
ತುರಗವಜಿಗಿಜಿಯಾದುದಿಭ ತತಿ
ಯುರುಳಿದವು ಹೊರಳಿದವು ಹೂಣಿಗರಟ್ಟೆ ಸಮರದಲಿ ॥55॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವು ಸುರಿಯುತ್ತಿದ್ದ ರಕ್ತದ ಪ್ರವಾಹವನ್ನು ಬಟ್ಟೆಯ ತುದಿಯಿಂದ ಒರೆಸಿಕೊಂಡು ರಥದ ಗಾಲಿಯ ಅಚ್ಚನ್ನು ಒದ್ದನು. ಮುಂಗೈಯಿಂದ ಗಾಲಿಯನ್ನು ಕಡಿವಡೆದ ಕೈಯ ಉಳಿದಿರುವ ಭಾಗಕ್ಕೆ ತೂರಿಸಿಕೊಂಡು ಮುಂದೆ ಬಂದು ಶತ್ರುಗಳ ಮೇಲೆ ಪ್ರಯೋಗಿಸಲು ಶತ್ರು ಸೇನೆಯ ಕುದುರೆಗಳು ಮುಗ್ಗರಿಸಿ ಬಿದ್ದುವು. ಆನೆಗಳ ಸಮೂಹ ನುಜ್ಜು ಗುಜ್ಜಾದವು. ಹೋರಾಡುತ್ತಿದ್ದ ಭಟರ ಮುಂಡಗಳು ನೆಲಕ್ಕೆ ಉರುಳಿ ಬಿದ್ದು ಹೊರಳಾಡಿದವು.
ಪದಾರ್ಥ (ಕ.ಗ.ಪ)
ಸರಿ-ಪ್ರವಾಹ, ಹೂಣಿಗರು-ವೀರರು
ಅಟ್ಟೆ-ಮುಂಡ
ಮೂಲ ...{Loading}...
ಸುರಿವ ರಕುತದ ಸರಿಯ ಸೆರಗಿನೊ
ಳೊರಸಿ ರಥದಚ್ಚುಗಳನೊದೆದನು
ತಿರುಹಿ ಗಾಲಿಯ ತೆಗೆದು ಮುಂಗೈಗೊಂಡು ನಡೆನಡೆದು
ಅರಿಬಲವನಿಡೆ ಮುಗ್ಗಿ ಕೆಡೆದುದು
ತುರಗವಜಿಗಿಜಿಯಾದುದಿಭ ತತಿ
ಯುರುಳಿದವು ಹೊರಳಿದವು ಹೂಣಿಗರಟ್ಟೆ ಸಮರದಲಿ ॥55॥
೦೫೬ ಹರಿಯ ಚಕ್ರದ ...{Loading}...
ಹರಿಯ ಚಕ್ರದ ಸತ್ವವೀತನ
ಧುರದೊಳಾಯ್ತೆನೆ ರಥದ ಚಕ್ರದೊ
ಳರಿಬಲವನಿಡೆ ಮುಗ್ಗಿ ಕೆಡೆದುದು ಬಹಳ ತಳತಂತ್ರ
ಬಿರುದರಾನುವರಿಲ್ಲ ಷಡುರಥ
ರುರವಣಿಯು ಹಿಂದಾಯ್ತು ರಾಯರ
ಗುರುವ ಕಂಡವರಿಲ್ಲೆನುತ ಕುರುರಾಯ ಚಿಂತಿಸಿದ ॥56॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಕ್ಷಾತ್ ವಿಷ್ಣುವಿನ ಚಕ್ರದ ಶಕ್ತಿ ಅಭಿಮನ್ಯುವಿನ ಈ ಯುದ್ಧದಲ್ಲಿ ಉಂಟಾಯಿತೆಂಬಂತೆ, ರಥದ ಚಕ್ರದಿಂದ ಶತ್ರು ಸೈನ್ಯವನ್ನು ಹೊಡೆಯಲು ಅಧಿಕವಾದ ಸೇನೆಯು ಮುಗ್ಗರಿಸಿ ಬಿದ್ದಿತು. ಬಿರುದಾಂಕಿತರಾದವರು ಸಹ ಅಭಿಮನ್ಯುವನ್ನು ಎದುರಿಸಲು ಆಗಲಿಲ್ಲ. ಆರು ಜನ ರಥಿಕರ ಉತ್ಸಾಹ ಹಿಮ್ಮೆಟ್ಟಿತು. ರಾಜರುಗಳ ಗುರುವಾದ ದ್ರೋಣಾಚಾರ್ಯರನ್ನು ಅಲ್ಲಿ ಕಂಡವರಿಲ್ಲ ಎಂದು ದುರ್ಯೋಧನ ಚಿಂತಿಸಿದ.
ಪದಾರ್ಥ (ಕ.ಗ.ಪ)
ಧುರ-ರಣರಂಗ
ಮೂಲ ...{Loading}...
ಹರಿಯ ಚಕ್ರದ ಸತ್ವವೀತನ
ಧುರದೊಳಾಯ್ತೆನೆ ರಥದ ಚಕ್ರದೊ
ಳರಿಬಲವನಿಡೆ ಮುಗ್ಗಿ ಕೆಡೆದುದು ಬಹಳ ತಳತಂತ್ರ
ಬಿರುದರಾನುವರಿಲ್ಲ ಷಡುರಥ
ರುರವಣಿಯು ಹಿಂದಾಯ್ತು ರಾಯರ
ಗುರುವ ಕಂಡವರಿಲ್ಲೆನುತ ಕುರುರಾಯ ಚಿಂತಿಸಿದ ॥56॥
೦೫೭ ಮನದ ಖತಿ ...{Loading}...
ಮನದ ಖತಿ ಹೊಗರೇರೆ ದುಶ್ಶಾ
ಸನನ ಮಗನಿದಿರಾಗಿ ಖಡುಗದ
ಮೊನೆಯ ಚೂರಿಸಿ ದಂಡವಲಗೆಯ ತೊಡೆಯೊಳೊದರಿಸುತ
ತನಗೆ ಮೃತ್ಯುವ ಕರೆವವೋಲ
ರ್ಜನ ಕುಮಾರನ ಕರೆದು ಹಳಚಿದ
ನನಿಮಿಷಾವಳಿ ಪೂತು ಪಾಯ್ಕೆನೆ ಹೆಣಗಿದರು ಭಟರು ॥57॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನಸ್ಸಿನ ಕೋಪ ಹೆಚ್ಚಾಗಲು ದುಶ್ಶಾಸನನ ಮಗನು ಅಭಿಮನ್ಯುವಿಗೆ ಇದಿರಾಗಿ ಖಡ್ಗದ ತುದಿಯನ್ನು ತೋರಿಸುತ್ತಾ ಗುರಾಣಿಯನ್ನು ತೊಡೆಗೆ ತಟ್ಟುತ್ತಾ ತನಗೆ ಮೃತ್ಯವನ್ನು ಆಹ್ವಾನಿಸಿಕೊಳ್ಳುವಂತೆ ಅಭಿಮನ್ಯುವನ್ನು ಕರೆದು ಯುದ್ಧವನ್ನು ಪ್ರಾರಂಭಿಸಿದನು. ದೇವತೆಗಳು ಭಲೇ, ಶಹಭಾಷ್ ಎನ್ನಲು ಇಬ್ಬರು ವೀರರೂ ಹೋರಾಡಿದರು.
ಪದಾರ್ಥ (ಕ.ಗ.ಪ)
ದಂಡವಲಗೆ-ಗುರಾಣಿ
ಮೂಲ ...{Loading}...
ಮನದ ಖತಿ ಹೊಗರೇರೆ ದುಶ್ಶಾ
ಸನನ ಮಗನಿದಿರಾಗಿ ಖಡುಗದ
ಮೊನೆಯ ಚೂರಿಸಿ ದಂಡವಲಗೆಯ ತೊಡೆಯೊಳೊದರಿಸುತ
ತನಗೆ ಮೃತ್ಯುವ ಕರೆವವೋಲ
ರ್ಜನ ಕುಮಾರನ ಕರೆದು ಹಳಚಿದ
ನನಿಮಿಷಾವಳಿ ಪೂತು ಪಾಯ್ಕೆನೆ ಹೆಣಗಿದರು ಭಟರು ॥57॥
೦೫೮ ಗಾಲಿ ತೀರಿದವೆನ್ದು ...{Loading}...
ಗಾಲಿ ತೀರಿದವೆಂದು ಬಂದನೆ
ಕಾಳೆಗಕೆ ತಪ್ಪೇನೆನುತ ಕರ
ವಾಳಿನಾತನ ಬಗೆಯದೊಳಹೊಕ್ಕೆರಗಿದನು ಶಿರವ
ಮೇಲುವಲಗೆಯಲಣೆದು ಹಾಯ್ದನು
ಬಾಲಕನ ಘಾಯವನು ನಸು ನಗು
ತೇಳಿಸುತ ದಂಡೆಯಲಿ ಕಳೆದನು ತಿವಿದನವನುರವ ॥58॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನು ಯುದ್ಧ ಮಾಡುತ್ತಿದ್ದ ಚಕ್ರವೂ ಇಲ್ಲವಾಯಿತೆಂದು ನನ್ನೊಂದಿಗೆ ಯುದ್ಧಕ್ಕೆ ಬಂದನೇ ! ತಪ್ಪೇನು ಎನ್ನುತ್ತ ಕೈಯಲ್ಲಿ ಆಯುಧವನ್ನು ಹಿಡಿದ ಅವನನ್ನು ಲೆಕ್ಕಿಸದೇ ಮುಂದೆ ನುಗ್ಗಿ ಅವನ ತಲೆಗೆ ತನ್ನ ತಲೆಯಿಂದ ಡಿಕ್ಕಿ ಹೊಡೆದನು. ಮೇಲುಭಾಗದಿಂದ ಹಾರಿ ಆ ಬಾಲಕನಿಗಾದ (ದುಶ್ಶಾಸನನ ಮಗನ) ಗಾಯಕ್ಕಾಗಿ ಅವನನ್ನು ಅಪಹಾಸ್ಯ ಮಾಡುತ್ತಾ ತನ್ನ ಮೊಂಡುಗೈಯಿಂದಲೇ ಹೊಡೆದು ಅವನ ಎದೆಯನ್ನು ತಿವಿದನು.
ಪದಾರ್ಥ (ಕ.ಗ.ಪ)
ಅಣೆದು-ಹೊಡೆದು,
ಮೂಲ ...{Loading}...
ಗಾಲಿ ತೀರಿದವೆಂದು ಬಂದನೆ
ಕಾಳೆಗಕೆ ತಪ್ಪೇನೆನುತ ಕರ
ವಾಳಿನಾತನ ಬಗೆಯದೊಳಹೊಕ್ಕೆರಗಿದನು ಶಿರವ
ಮೇಲುವಲಗೆಯಲಣೆದು ಹಾಯ್ದನು
ಬಾಲಕನ ಘಾಯವನು ನಸು ನಗು
ತೇಳಿಸುತ ದಂಡೆಯಲಿ ಕಳೆದನು ತಿವಿದನವನುರವ ॥58॥
೦೫೯ ಕರಹತಿಗೆ ಧಡಧಡಿಸಿ ...{Loading}...
ಕರಹತಿಗೆ ಧಡಧಡಿಸಿ ತಿರ್ರನೆ
ತಿರುಗಿ ಬೀಳುತ ಧೈರ್ಯದಲಿ ಹೊಡ
ಕರಿಸಿ ಹೊರಬಿನೊಳೆದ್ದು ಹೊಯ್ದನು ಪಾರ್ಥನಂದನನ
ಅರಿ ಕೃಪಾಣದ ಘಾಯವನು ತರ
ಹರಿಸಲರಿಯದೆ ಬೀಳುತಹಿತನ
ನೆರಗಿದನು ಬಳಿಕವನಿಗೊರಗಿದರಾ ಕುಮಾರಕರು ॥59॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೈಯಿನ ಹೊಡೆತಕ್ಕೆ ನಡುಗಿ ತಿರ್ರನೆ ತಿರುಗಿ ನೆಲದ ಮೇಲೆ ಬಿದ್ದು ಮತ್ತೆ ಧೈರ್ಯವನ್ನು ತಾಳಿ ಮೇಲೆದ್ದು, ಉತ್ಸಾಹದಿಂದ ಅಭಿಮನ್ಯುವಿಗೆ ದುಶ್ಶಾಸನನ ಮಗನು ಹೊಡೆದನು, ಶತ್ರುವಿನ ಕತ್ತಿಯ ಏಟಿನ ಗಾಯವನ್ನು ತಡೆದುಕೊಳ್ಳಲಾಗದೆ ಅಭಿಮನ್ಯು ಕೆಳಗೆ ಬೀಳುವಾಗಲೇ ತನ್ನ ಶತ್ರುವಿನ ಮೇಲೆ (ದುಶ್ಶಾಸನನ ಮಗನ ಮೇಲೆ) ಎರಗಿದನು. ನಂತರ ಆ ಇಬ್ಬರೂ ನೆಲದ ಮೇಲೆ ಬಿದ್ದರು.
ಪದಾರ್ಥ (ಕ.ಗ.ಪ)
ಕರಹತಿಗೆ-ಕೈಯ ಏಟಿಗೆ, ಹೊರಬಿನೊಳು-ಉತ್ಸಾಹದಲ್ಲಿ,
ಮೂಲ ...{Loading}...
ಕರಹತಿಗೆ ಧಡಧಡಿಸಿ ತಿರ್ರನೆ
ತಿರುಗಿ ಬೀಳುತ ಧೈರ್ಯದಲಿ ಹೊಡ
ಕರಿಸಿ ಹೊರಬಿನೊಳೆದ್ದು ಹೊಯ್ದನು ಪಾರ್ಥನಂದನನ
ಅರಿ ಕೃಪಾಣದ ಘಾಯವನು ತರ
ಹರಿಸಲರಿಯದೆ ಬೀಳುತಹಿತನ
ನೆರಗಿದನು ಬಳಿಕವನಿಗೊರಗಿದರಾ ಕುಮಾರಕರು ॥59॥
೦೬೦ ಕಾಳುಕಿಚ್ಚೆದ್ದಡವಿಯನು ಕುಡಿ ...{Loading}...
ಕಾಳುಕಿಚ್ಚೆದ್ದಡವಿಯನು ಕುಡಿ
ನಾಲಗೆಯೊಳಳವಡಿಸಿ ದಳ್ಳುರಿ
ಜ್ವಾಲೆ ತಗ್ಗಿದವೋಲು ಗಗನದ ಮುಗಿಲ ಮೋಹರವ
ದಾಳಿಯಲಿಯರೆಯಟ್ಟಿ ಸುಂಟರು
ಗಾಳಿಯುರವಣೆ ನಿಂದವೊಲು ಸುರ
ಪಾಲ ತನಯನ ತನಯನಸ್ತಮಿಸಿದನು ರಣದೊಳಗೆ ॥60॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಣ್ಯದಲ್ಲಿ ಬೆಂಕಿ ಎದ್ದು ಇಡೀ ಕಾಡನ್ನೇ ತನ್ನ ತುದಿ ನಾಲಗೆಯಲ್ಲಿ ಸೇರಿಸಿಕೊಂಡು (ಸುಟ್ಟು ಹಾಕಿ) ದಳ್ಳುರಿಯ ಜ್ವಾಲೆಯು ಶಾಂತವಾಗುವ ಹಾಗೆ, ಆಕಾಶದಲ್ಲಿರುವ ಭಾರಿ ಮೋಡಗಳನ್ನು ಅಟ್ಟಿಸಿಕೊಂಡು ಓಡಿಸಿದ ನಂತರ ಸುಂಟರಗಾಳಿಯ ಆಟೋಪ ನಿಂತಂತೆ, ದೇವೇಂದ್ರನ ಮಗನ ಮಗನಾದ ಅಭಿಮನ್ಯುವು ರಣಭೂಮಿಯಲ್ಲಿ ಅಸ್ತಂಗತನಾದನು.
ಮೂಲ ...{Loading}...
ಕಾಳುಕಿಚ್ಚೆದ್ದಡವಿಯನು ಕುಡಿ
ನಾಲಗೆಯೊಳಳವಡಿಸಿ ದಳ್ಳುರಿ
ಜ್ವಾಲೆ ತಗ್ಗಿದವೋಲು ಗಗನದ ಮುಗಿಲ ಮೋಹರವ
ದಾಳಿಯಲಿಯರೆಯಟ್ಟಿ ಸುಂಟರು
ಗಾಳಿಯುರವಣೆ ನಿಂದವೊಲು ಸುರ
ಪಾಲ ತನಯನ ತನಯನಸ್ತಮಿಸಿದನು ರಣದೊಳಗೆ ॥60॥
೦೬೧ ತೋಳ ತಲೆಗಿಮ್ಬಿನಲಿ ...{Loading}...
ತೋಳ ತಲೆಗಿಂಬಿನಲಿ ಕೈದುಗ
ಳೋಳಿಗಳ ಹಾಸಿನಲಿ ತನ್ನಯ
ಕಾಲ ದೆಸೆಯಲಿ ಕೆಡೆದ ಕೌರವ ಸುತರು ನೂರ್ವರಲಿ
ಬಾಲಕನು ಬಳಲಿದನು ಸಮರದ
ಲೀಲೆಯಲಿ ಕುಣಿಕುಣಿದು ಬಸವಳಿ
ದಾಳುಗಳ ದೇವನು ಮಹಾಹವದೊಳಗೆ ಪವಡಿಸಿದ ॥61॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ತೋಳಿನ ತಲೆದಿಂಬಿನಲ್ಲಿ, ಆಯುಧಗಳ ಸಮೂಹದ ಹಾಸಿಗೆಯಲ್ಲಿ, ತನ್ನ ಕಾಲಿನ ಸಮೀಪ ನೂರು ಜನ ಕೌರವರ ಮಕ್ಕಳು ಬಿದ್ದಿರಲು ಅಭಿಮನ್ಯು ಪವಡಿಸಿದ. ಶಕ್ತಿಗುಂದಿ ಯುದ್ಧದ ಲೀಲೆಯಲ್ಲಿ ಕುಣಿಕುಣಿದು ವೀರಭಟರುಗಳಿಗೆಲ್ಲರಿಗೂ ದೇವನಂತೆ ಇರುವ ಅಭಿಮನ್ಯುವು ಬಸವಳಿದು ಮಹಾಯುದ್ಧದಲ್ಲಿ ಮಲಗಿದ.
ಪದಾರ್ಥ (ಕ.ಗ.ಪ)
ಓಳಿ-ಗುಂಪು,
ಮೂಲ ...{Loading}...
ತೋಳ ತಲೆಗಿಂಬಿನಲಿ ಕೈದುಗ
ಳೋಳಿಗಳ ಹಾಸಿನಲಿ ತನ್ನಯ
ಕಾಲ ದೆಸೆಯಲಿ ಕೆಡೆದ ಕೌರವ ಸುತರು ನೂರ್ವರಲಿ
ಬಾಲಕನು ಬಳಲಿದನು ಸಮರದ
ಲೀಲೆಯಲಿ ಕುಣಿಕುಣಿದು ಬಸವಳಿ
ದಾಳುಗಳ ದೇವನು ಮಹಾಹವದೊಳಗೆ ಪವಡಿಸಿದ ॥61॥
೦೬೨ ಬಿಗಿದ ಹುಬ್ಬಿನ ...{Loading}...
ಬಿಗಿದ ಹುಬ್ಬಿನ ಬಿಟ್ಟ ಕಂಗಳ
ಹೊಗರು ಮೋರೆಯ ಹಿಣಿಲ ಮಂಡೆಯ
ಜಿಗಿಯ ರಕುತದ ಜೋರಿನೊಡಲಿನ ತುರುಗಿದಂಬುಗಳ
ಹೆಗಲ ಕೊಯ್ಲಿನ ತಗ್ಗಿನಲಿ ಸೈ
ನೆಗೆದ ರೋಮದ ವಿಕ್ರಮಾಗ್ನಿಯ
ತಗಹು ಬಿಡದಭಿಮನ್ಯು ಮೆರೆದನು ಶಸ್ತ್ರ ಶಯನದಲಿ ॥62॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಗಿದ ಹುಬ್ಬಿನ, ತೆರೆದ ಕಣ್ಣುಗಳ, ಹೊಳೆಯುವ ಮುಖದ, ತುರುಬನ್ನುಳ್ಳ ತಲೆಯ, ಸೋರುತ್ತಿರುವ ರಕ್ತದ ಹರಿವಿನ, ಬಾಣಗಳು ತುಂಬಿದ್ದ ದೇಹದ, ಕತ್ತರಿಸಲ್ಪಟ್ಟ ಹೆಗಲಿನ (ಕೈಗಳ) ನಿಮಿರಿನಿಂತಿದ್ದ ಕೂದಲುಗಳ, ವಿಕ್ರಮಾಗ್ನಿಯ ಸ್ನೇಹವನ್ನು ಬಿಡದೇ, ಅಭಿಮನ್ಯುವು ಶಸ್ತ್ರಗಳ ಮೇಲೆ ಮಲಗಿ ಶೋಭಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಹೊಗರು-ಕಾಂತಿ, ಹಿಣಿಲ-ಜಡೆಯ-ಕೂದಲಿನ, ತಗಹು-ಬಿಗಿ
ಮೂಲ ...{Loading}...
ಬಿಗಿದ ಹುಬ್ಬಿನ ಬಿಟ್ಟ ಕಂಗಳ
ಹೊಗರು ಮೋರೆಯ ಹಿಣಿಲ ಮಂಡೆಯ
ಜಿಗಿಯ ರಕುತದ ಜೋರಿನೊಡಲಿನ ತುರುಗಿದಂಬುಗಳ
ಹೆಗಲ ಕೊಯ್ಲಿನ ತಗ್ಗಿನಲಿ ಸೈ
ನೆಗೆದ ರೋಮದ ವಿಕ್ರಮಾಗ್ನಿಯ
ತಗಹು ಬಿಡದಭಿಮನ್ಯು ಮೆರೆದನು ಶಸ್ತ್ರ ಶಯನದಲಿ ॥62॥
೦೬೩ ಸಾವ ಹರಯವೆ ...{Loading}...
ಸಾವ ಹರಯವೆ ಎನುತ ಗಗನದ
ದೇವತತಿ ಮರುಗಿತ್ತು ಶಕ್ರನ
ಸಾವಿರಾಲಿಯೊಳೊರತೆ ಮಸಗಿತು ಪೌತ್ರ ಶೋಕದಲಿ
ತಾವು ಷಡುರಥರೊಬ್ಬ ಹಸುಳೆಯ
ಹೇವವಿಲ್ಲದೆ ಕೊಂದರೋ ಸುಡ
ಲಾವ ವೀರರು ಕೌರವಾದಿಗಳೆಂದುದಮರಗಣ ॥63॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವಿಗೆ ಸಾಯುವ ವಯಸ್ಸೇ ಎನ್ನುತ್ತಾ ಆಕಾಶದಲ್ಲಿದ್ದ ದೇವತಾ ಸಮೂಹವು ದುಃಖಿಸುತ್ತಿತ್ತು. ಇಂದ್ರನ ಸಾವಿರಕಣ್ಣುಗಳಲ್ಲಿಯೂ, ಮೊಮ್ಮಗನ ಸಾವಿನ ಶೋಕದಿಂದ ನೀರು ಜಿನುಗಿತು. ಆರು ಜನ ಅತಿರಥರು ಒಬ್ಬ ಬಾಲಕನನ್ನು ನಾಚಿಕೆಯಿಲ್ಲದೇ ಕೊಂದಿದ್ದಾರೆ; ಇವರನ್ನು ಸುಡಲಿ. ಕೌರವಾದಿಗಳು ಯಾವ ವೀರರು ಎಂದು ದೇವತಾ ಸಮೂಹವು ಹೇಳಿತು.
ಮೂಲ ...{Loading}...
ಸಾವ ಹರಯವೆ ಎನುತ ಗಗನದ
ದೇವತತಿ ಮರುಗಿತ್ತು ಶಕ್ರನ
ಸಾವಿರಾಲಿಯೊಳೊರತೆ ಮಸಗಿತು ಪೌತ್ರ ಶೋಕದಲಿ
ತಾವು ಷಡುರಥರೊಬ್ಬ ಹಸುಳೆಯ
ಹೇವವಿಲ್ಲದೆ ಕೊಂದರೋ ಸುಡ
ಲಾವ ವೀರರು ಕೌರವಾದಿಗಳೆಂದುದಮರಗಣ ॥63॥
೦೬೪ ಮಗುವು ವೇಷವ ...{Loading}...
ಮಗುವು ವೇಷವ ಧರಿಸಿ ದೂರದ
ಲಗಲಿ ಹೋಗಲು ತನ್ನ ಚಿತ್ತಕೆ
ಢಗೆಯ ಡಾವರವಾಯ್ತು ತನಗೊಳಗಾಯ್ತು ಪರಿತಾಪ
ಮಗನ ಮರಣದಲೆಂತು ಜೀವವ
ಬಗೆವಳಕಟ ಸುಭದ್ರೆಯೆನುತವೆ
ದೃಗುಜಲವ ಬೆರಳಿಂದ ಮಿಡಿದರು ಗೌರಿದೇವಿಯರು ॥64॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಮಗುವು ವೇಷವನ್ನು ಧರಿಸಿ ದೂರದ ಸ್ಥಳಕ್ಕೆ ಹೋದಾಗ ಮನಸ್ಸಿಗೆ ಅಪಾರ ದುಃಖವಾಯಿತು. ಮನಸ್ಸಿನೊಳಗಾದ ಶೋಕವನ್ನು ತಡೆದುಕೊಳ್ಳಲಾಗಲಿಲ್ಲ. ಇನ್ನು ಮಗನನ್ನು ಕಳೆದುಕೊಂಡ ಸುಭದ್ರೆಯು ಹೇಗೆ ಜೀವವನ್ನಿಟ್ಟುಕೊಂಡು ಬಾಳುತ್ತಾಳೋ ! ಎಂದುಕೊಂಡು ಪಾರ್ವತಿ ದೇವಿಯರು ಬೆರಳಿಂದ ತಮ್ಮ ಕಣ್ಣೀರನ್ನು ಮಿಡಿದರು.
ಮೂಲ ...{Loading}...
ಮಗುವು ವೇಷವ ಧರಿಸಿ ದೂರದ
ಲಗಲಿ ಹೋಗಲು ತನ್ನ ಚಿತ್ತಕೆ
ಢಗೆಯ ಡಾವರವಾಯ್ತು ತನಗೊಳಗಾಯ್ತು ಪರಿತಾಪ
ಮಗನ ಮರಣದಲೆಂತು ಜೀವವ
ಬಗೆವಳಕಟ ಸುಭದ್ರೆಯೆನುತವೆ
ದೃಗುಜಲವ ಬೆರಳಿಂದ ಮಿಡಿದರು ಗೌರಿದೇವಿಯರು ॥64॥
೦೬೫ ಹಲವು ಗಜಗಳು ...{Loading}...
ಹಲವು ಗಜಗಳು ಸಿಂಹ ಶಿಶುವನು
ಗೆಲಿದ ಪರಿಯಂತಾಯ್ತು ಹಾವಿನ
ಬಳಗ ಗರುಡನ ಮರಿಯ ಮುರಿದವೊಲಾಯಿತಕಟೆನುತ
ಅಳಲಿದುದು ಸುರ ಕಟಕವವನಿಯೊ
ಳಿಳಿದರಪ್ಸರ ಗಣಿಕೆಯರು ಕೋ
ಮಳನ ತಂದರು ವಾಸವನ ಸಿಂಹಾಸನದ ಹೊರೆಗೆ ॥65॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನೇಕ ಆನೆಗಳು ಸೇರಿ ಒಂದು ಸಿಂಹದ ಮರಿಯನ್ನು ಜಯಿಸಿದ ಹಾಗೆ ಆಯಿತು. ಹಾವಿನ ಗುಂಪು ಗರುಡನ ಮರಿಯನ್ನು ಕೊಂದಂತಾಯಿತು ಎಂದು ದೇವಲೋಕದ ಜನ ದುಃಖಿಸಿದರು. ದೇವಲೋಕದ ಅಪ್ಸರೆಯರು ಭೂಮಿಗೆ ಇಳಿದು ಬಂದು ಕುಮಾರನಾದ ಅಭಿಮನ್ಯುವನ್ನು ದೇವೇಂದ್ರನ ಸಿಂಹಾಸನದ ಸಮೀಪಕ್ಕೆ ಕೊಂಡೊಯ್ದರು.
ಮೂಲ ...{Loading}...
ಹಲವು ಗಜಗಳು ಸಿಂಹ ಶಿಶುವನು
ಗೆಲಿದ ಪರಿಯಂತಾಯ್ತು ಹಾವಿನ
ಬಳಗ ಗರುಡನ ಮರಿಯ ಮುರಿದವೊಲಾಯಿತಕಟೆನುತ
ಅಳಲಿದುದು ಸುರ ಕಟಕವವನಿಯೊ
ಳಿಳಿದರಪ್ಸರ ಗಣಿಕೆಯರು ಕೋ
ಮಳನ ತಂದರು ವಾಸವನ ಸಿಂಹಾಸನದ ಹೊರೆಗೆ ॥65॥
೦೬೬ ಧುರದ ಪ್ರಳಯಕೃತಾನ್ತನನು ...{Loading}...
ಧುರದ ಪ್ರಳಯಕೃತಾಂತನನು ಪರಿ
ಹರಿಸಿದೆವು ಮೃತ್ಯುವಿನ ಪಾಶದ
ಕೊರಳ ಬಳಚಿದೆವೆನುತ ಕೌರವಬಲದ ನಾಯಕರು
ಶಿರವ ತಡಹುತ ತಮ್ಮ ಶಿಬಿರಕೆ
ತಿರುಗಿದರು ಬಾಲಕನನೀಕ್ಷಿಸ
ಲರಿದು ತನಗೆಂಬಂತೆ ರವಿ ಜಾರಿದನು ಪಶ್ಚಿಮಕೆ ॥66॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಪ್ರಳಯಕಾಲದ ಯಮನಂತಿದ್ದ ಅಭಿಮನ್ಯುವನ್ನು ಸಂಹರಿಸಿದೆವು. ಮೃತ್ಯುವಿನ ಪಾಶದಿಂದ ನಮ್ಮ ಕೊರಳುಗಳನ್ನು ರಕ್ಷಿಸಿಕೊಂಡೆವು. ಎನ್ನುತ್ತಾ ಕೌರವ ನಾಯಕರು ತಮ್ಮ ತಲೆಯನ್ನು ಸವರಿಕೊಳ್ಳುತ್ತಾ (ಉಳಿದ ತಲೆಯನ್ನು ಅಭಿಮಾನದಿಂದ ಸವರುತ್ತಾ) ತಮ್ಮ ತಮ್ಮ ಶಿಬಿರಗಳಿಗೆ ಹಿಂದಿರುಗಿದರು. ಈ ಬಾಲಕನನ್ನು ನೋಡಲು ತನಗೆ ಸಾಧ್ಯವಿಲ್ಲವೆಂಬಂತೆ ಸೂರ್ಯನು ಪಶ್ಚಿಮ ಸಮುದ್ರಕ್ಕೆ ಜಾರಿದ (ಸೂರ್ಯಾಸ್ತವಾಯಿತು).
ಮೂಲ ...{Loading}...
ಧುರದ ಪ್ರಳಯಕೃತಾಂತನನು ಪರಿ
ಹರಿಸಿದೆವು ಮೃತ್ಯುವಿನ ಪಾಶದ
ಕೊರಳ ಬಳಚಿದೆವೆನುತ ಕೌರವಬಲದ ನಾಯಕರು
ಶಿರವ ತಡಹುತ ತಮ್ಮ ಶಿಬಿರಕೆ
ತಿರುಗಿದರು ಬಾಲಕನನೀಕ್ಷಿಸ
ಲರಿದು ತನಗೆಂಬಂತೆ ರವಿ ಜಾರಿದನು ಪಶ್ಚಿಮಕೆ ॥66॥
೦೬೭ ಸೋಲವರಿಗಳಿಗೆನ್ದು ಹರುಷವ ...{Loading}...
ಸೋಲವರಿಗಳಿಗೆಂದು ಹರುಷವ
ತಾಳದಿರು ಧೃತರಾಷ್ಟ್ರ ಕೃಷ್ಣನ
ಸೋಲವದು ಪಾಂಡವರು ಸೋತವರಲ್ಲ ನಂಬುವುದು
ಸೋಲವಿದು ನಾಳಿನಲಿ ಪ್ರಳಯದ
ಕಾಲ ಕೌರವಕುಲಕೆ ದಿಟವಿದು
ಸೋಲವುಂಟೇ ವೀರ ನಾರಾಯಣನ ಭಕ್ತರಿಗೆ ॥67॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳಾದ ಪಾಂಡವರಿಗೆ ಸೋಲಾಯಿತೆಂದು ಸಂತೋಷಗೊಳ್ಳ ಬೇಡ ಧೃತರಾಷ್ಟ್ರ ! ಅದು ಕೃಷ್ಣನ ಸೋಲು. ಪಾಂಡವರು ಸೋತವರಲ್ಲ. ಇದನ್ನು ನಂಬು. ಇಂದಿನ ಈ ಸೋಲು ನಾಳೆ ಕೌರವ ವಂಶಕ್ಕೆ ಪ್ರಳಯ ಕಾಲ. ಇದು ನಿಜ. ವೀರ ನಾರಾಯಣನ ಭಕ್ತರಿಗೆ ಸೋಲೆಂಬುದುಂಟೆ ? ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ದಿಟ-ಸತ್ಯ
ಕೃಷ್ಣನ ಸೋಲವದು…- ಕೃಷ್ಣ ವ್ಯವಸ್ಥೆಗೊಳಿಸಿರುವ ಸೋಲು
ಮೂಲ ...{Loading}...
ಸೋಲವರಿಗಳಿಗೆಂದು ಹರುಷವ
ತಾಳದಿರು ಧೃತರಾಷ್ಟ್ರ ಕೃಷ್ಣನ
ಸೋಲವದು ಪಾಂಡವರು ಸೋತವರಲ್ಲ ನಂಬುವುದು
ಸೋಲವಿದು ನಾಳಿನಲಿ ಪ್ರಳಯದ
ಕಾಲ ಕೌರವಕುಲಕೆ ದಿಟವಿದು
ಸೋಲವುಂಟೇ ವೀರ ನಾರಾಯಣನ ಭಕ್ತರಿಗೆ ॥67॥