೦೦೦ ಸೂ ಅವನಿಯದಿರಿತು ...{Loading}...
ಸೂ. ಅವನಿಯದಿರಿತು ಗಗನ ತಾರಾ
ನಿವಹವನು ಬಿದಿರಿತ್ತು ವರ ಪಾಂ
ಡವರು ಕಣನೊಳು ವೆಂಠಣಿಸಿದರು ಕಮಠ ಟೆಂಠಣಿಸೆ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಭೂಮಿ ನಡುಗಿತು ಆಕಾಶವು ನಕ್ಷತ್ರಗಳ ಗುಂಪನ್ನು ಅದುರಿಸಿತು. ಭೂಮಿಯನ್ನು ಹೊತ್ತ ಕಮಠನು ನಡುಗುವಂತೆ ಪಾಂಡವರು ರಣರಂಗದಲ್ಲಿ ಹರಡಿದರು.
ಪದಾರ್ಥ (ಕ.ಗ.ಪ)
ಅವನಿ-ಭೂಮಿ, ನಿವಹ-ಗುಂಪು, ವೆಂಠಣಿಸು-ಹರಡು, ಟೆಂಟಣಿಸು-ನಡುಗು, ಕಮಠ-ಆಮೆ, ಕಣ-ರಣರಂಗ
ಮೂಲ ...{Loading}...
ಸೂ. ಅವನಿಯದಿರಿತು ಗಗನ ತಾರಾ
ನಿವಹವನು ಬಿದಿರಿತ್ತು ವರ ಪಾಂ
ಡವರು ಕಣನೊಳು ವೆಂಠಣಿಸಿದರು ಕಮಠ ಟೆಂಠಣಿಸೆ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಂಧಿಯ ಮುರಿದು ಲಕ್ಷಿ ್ಮೀ
ಲೋಲನೈತರುತಿವರ ಹೊರೆಗಟ್ಟಿದನು ಸಾತ್ಯಕಿಯ
ಕೇಳಿದನು ಮುರಹರನ ಬರವನು
ಮೌಳಿಮಸ್ತಕದಖಿಳ ಧರಣೀ
ಪಾಲರೊಡನಿದಿರಾಗಿ ಬಂದನು ಧರ್ಮನಂದನನು ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜನೇ ಕೇಳು. ಸಂಧಿಯನ್ನು ಮುರಿದು ಕೃಷ್ಣನು ಬರುತ್ತಿರಲು ಪಾಂಡವರ ಬಳಿಗೆ ಸಾತ್ಯಕಿಯನ್ನು ಕಳುಹಿಸಿದನು. ಕೃಷ್ಣನ ಆಗಮನವನ್ನು ಕೇಳಿ ಕಿರೀಟಧಾರಿಗಳಾದ ಸಮಸ್ತ ರಾಜ ಶ್ರೇಷ್ಠರೊಡನೆ ಧರ್ಮರಾಜನು ಅವನನ್ನು ಎದುರುಗೊಳ್ಳಲು ಬಂದನು.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಂಧಿಯ ಮುರಿದು ಲಕ್ಷಿ ್ಮೀ
ಲೋಲನೈತರುತಿವರ ಹೊರೆಗಟ್ಟಿದನು ಸಾತ್ಯಕಿಯ
ಕೇಳಿದನು ಮುರಹರನ ಬರವನು
ಮೌಳಿಮಸ್ತಕದಖಿಳ ಧರಣೀ
ಪಾಲರೊಡನಿದಿರಾಗಿ ಬಂದನು ಧರ್ಮನಂದನನು ॥1॥
೦೦೨ ದೂರದಲಿ ದುಮಾ್ಮನಿಸಿದ ...{Loading}...
ದೂರದಲಿ ದುಮಾ್ಮನಿಸಿದ ವದ
ನಾರವಿಂದವ ಕಂಡು ಸಂಧಿಗೆ
ಸೇರರವದಿರು ಬಲಿದುದಾಹವವೀತನಂಗದಲಿ
ಶೌರಿಗಾಯ್ತವಮಾನವಿದೆಲೇ
ಮಾರಿಗುತ್ಸವವೆನುತ ಬಂದನು
ಮಾರುತನ ಮಗನಸುರಮರ್ದನನಿಂಗಿತವನರಿದು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೂರದಿಂದಲೆ ವ್ಯಸನ-ಚಿಂತೆಗಳಿಂದ ಕೂಡಿದ ಮುಖ ಕಮಲವನ್ನು ನೋಡಿ, ಕೌರವರು ಸಂಧಿಗೆ ಒಪ್ಪಿಲ್ಲ. ಇವನನ್ನು ನೋಡಿದರೆ ಯುದ್ಧವೇ ಆಗುವಂತಿದೆ. ಇದು ಕೃಷ್ಣನಿಗೆ ಆದ ಅವಮಾನವು ಎನ್ನುತ್ತ ಬಂದನು. ಕೃಷ್ಣನ ಆಶಯವನ್ನು ತಿಳಿದು ಮಾರಿಗೆ ಹಬ್ಬವೆನ್ನುತ್ತ ವಾಯುಪುತ್ರ ಭೀಮನು ಬಂದನು.
ಪದಾರ್ಥ (ಕ.ಗ.ಪ)
ದುಮ್ಮಾನ-ವ್ಯಸನ/ಚಿಂತೆ, ಆಹವ-ಕಾಳಗ/ಯುದ್ಧ, ಅಸುರಮರ್ಧನ-ಶ್ರೀಕೃಷ್ಣ, ಅರವಿಂದ-ಕಮಲ, ಆಹವ-ಕಾಳಗ
ಮೂಲ ...{Loading}...
ದೂರದಲಿ ದುಮಾ್ಮನಿಸಿದ ವದ
ನಾರವಿಂದವ ಕಂಡು ಸಂಧಿಗೆ
ಸೇರರವದಿರು ಬಲಿದುದಾಹವವೀತನಂಗದಲಿ
ಶೌರಿಗಾಯ್ತವಮಾನವಿದೆಲೇ
ಮಾರಿಗುತ್ಸವವೆನುತ ಬಂದನು
ಮಾರುತನ ಮಗನಸುರಮರ್ದನನಿಂಗಿತವನರಿದು ॥2॥
೦೦೩ ದರುಶನವ ನೀಡಿದರು ...{Loading}...
ದರುಶನವ ನೀಡಿದರು ಕೃಷ್ಣನ
ಚರಣದಲಿ ಮೈಯಿಕ್ಕಿದರು ಮಿ
ಕ್ಕರಸುಗಳು ದ್ರುಪದಾದಿ ನಾಯಕರೆರಗಿದರು ಪದಕೆ
ಪರಮಬಾಂಧವರೆಲ್ಲ ಜೀವಂ
ತರೆ ನದೀಸುತ ವಿದುರ ಗುರು ನೃಪ
ಗುರುತನುಜ ಧೃತರಾಷ್ಟ್ರಯೆಂದನು ಧರ್ಮನಂದನನು ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಕಾಣಿಸಿಕೊಂಡರು, ಕೃಷ್ಣನ ಪಾದಗಳಲ್ಲಿ ನಮಸ್ಕರಿಸಿದರು. ಮಿಕ್ಕ ಅರಸರು ದ್ರುಪದನೇ ಮೊದಲಾದ ನಾಯಕರು ಪಾದಗಳಿಗೆ ನಮಸ್ಕರಿಸಿದರು. ಭೀಷ್ಮ, ವಿದುರ, ದ್ರೋಣ, ದುರ್ಯೋಧನ, ಅಶ್ವತ್ಥಾಮ, ಧೃತರಾಷ್ಟ್ರ ಮುಂತಾದ ಪರಮ ಬಾಂಧವರೆಲ್ಲರೂ ಕ್ಷೇಮವಾಗಿರುವರೇ ? ಎಂದು ಧರ್ಮರಾಜನು ಕೇಳಿದನು.
ಮೂಲ ...{Loading}...
ದರುಶನವ ನೀಡಿದರು ಕೃಷ್ಣನ
ಚರಣದಲಿ ಮೈಯಿಕ್ಕಿದರು ಮಿ
ಕ್ಕರಸುಗಳು ದ್ರುಪದಾದಿ ನಾಯಕರೆರಗಿದರು ಪದಕೆ
ಪರಮಬಾಂಧವರೆಲ್ಲ ಜೀವಂ
ತರೆ ನದೀಸುತ ವಿದುರ ಗುರು ನೃಪ
ಗುರುತನುಜ ಧೃತರಾಷ್ಟ್ರಯೆಂದನು ಧರ್ಮನಂದನನು ॥3॥
೦೦೪ ಭೂಮಿಪತಿ ನಿಜಬಾನ್ಧವರು ...{Loading}...
ಭೂಮಿಪತಿ ನಿಜಬಾಂಧವರು ಸು
ಕ್ಷೇಮಿಗಳು ತಾವೆಲ್ಲ ನಿಮ್ಮೀ
ಕ್ಷೇಮ ಕುಶಲವ ಕೇಳಿದರು ಕಳುಹಿದರು ಹರಕೆಗಳ
ಆ ಮಹಾ ಸಂಗ್ರಾಮ ಮುಖದಲಿ
ತೋಮರದ ಕಾಣಿಕೆಗಳಲಿ ಸು
ಪ್ರೇಮವನು ಬೆಸಸುವುದು ದುರಿಯೋಧನನ ಮತವೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆ ಮತ್ತು ಅವನ ಬಂಧುಗಳು ಕ್ಷೇಮದಿಂದಿದ್ದಾರೆ. ಅವರೆಲ್ಲ ನಿಮ್ಮ ಕುಶಲ ಸಮಾಚಾರಗಳನ್ನು ಕೇಳಿದರು. ತಮ್ಮ ಆಶೀರ್ವಾದವನ್ನು ತಿಳಿಸಿದರು. ಮುಂದಿನ ಮಹಾಯುದ್ಧದಲ್ಲಿ ಆಯುಧಗಳ ಕಾಣಿಕೆಗಳೊಡನೆ ಶುಭ ಪ್ರೇಮವನ್ನು ಹೇಳುವುದು ದುರ್ಯೋಧನನ ಅಭಿಪ್ರಾಯವೆಂದನು.
ಪದಾರ್ಥ (ಕ.ಗ.ಪ)
ಸಂಗ್ರಾಮ-ಯುದ್ಧ, ತೋಮರು-ಶಸ್ತ್ರಾಸ್ತ್ರ, ಬೆಸಸು-ಹೇಳು
ಮೂಲ ...{Loading}...
ಭೂಮಿಪತಿ ನಿಜಬಾಂಧವರು ಸು
ಕ್ಷೇಮಿಗಳು ತಾವೆಲ್ಲ ನಿಮ್ಮೀ
ಕ್ಷೇಮ ಕುಶಲವ ಕೇಳಿದರು ಕಳುಹಿದರು ಹರಕೆಗಳ
ಆ ಮಹಾ ಸಂಗ್ರಾಮ ಮುಖದಲಿ
ತೋಮರದ ಕಾಣಿಕೆಗಳಲಿ ಸು
ಪ್ರೇಮವನು ಬೆಸಸುವುದು ದುರಿಯೋಧನನ ಮತವೆಂದ ॥4॥
೦೦೫ ಭೂಮಿಯೊಳಗರ್ಧವನು ಬೇಡಿದೊ ...{Loading}...
ಭೂಮಿಯೊಳಗರ್ಧವನು ಬೇಡಿದೊ
ಡಾ ಮಹೀಪತಿಯೈವರಿಗೆ ಸಂ
ಗ್ರಾಮಭೂಮಿಯನೈದೆ ಕೊಟ್ಟನು ನಿಮ್ಮೊಳಪ್ರಿಯನು
ಸಾಮದಲಿ ಸೊಗಸಿಲ್ಲ ನೀವ್ ನಿ
ಸ್ಸೀಮರಾದೊಡೆ ಜೋಡಿಸುವುದು
ದ್ದಾಮ ಕುರುಭೂಮಿಯಲಿ ಕುಳವರಿದವರ ಪತಿಕರಿಸಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಧ ರಾಜ್ಯವನ್ನು ಬೇಡಿದರೆ ಆ ದೊರೆಯು ಐದೂ ಜನರಿಗೆ ಯುದ್ಧ ಭೂಮಿಯನ್ನೇ ಕೊಟ್ಟನು. ನಿಮ್ಮಲ್ಲಿ ಅವನಿಗೆ ಪ್ರೀತಿಯಿಲ್ಲ. ಸಾಮವನ್ನು ಒಪ್ಪುವುದಿಲ್ಲ. ನೀವು ಚತುರರಾದರೆ ಕುಳಗಳನ್ನು ತಿಳಿದು ಶ್ರೇಷ್ಠವಾದ ಕುರುಭೂಮಿಯಲ್ಲಿ ನಿಮ್ಮವರನ್ನು ಕೂಡಿಕೊಂಡು ಯುದ್ಧಕ್ಕೆ ಸಿದ್ಧವಾಗುವುದು.
ಪದಾರ್ಥ (ಕ.ಗ.ಪ)
ನಿಸ್ಸೀಮ-ಚತುರ, ಉದ್ಧಾಮ-ಶ್ರೇಷ್ಠ, ಜೋಡಿಸು-ಕೂಡಿಸು, ಪತಿಕರಿಸು-ಒಪ್ಪು
ಮೂಲ ...{Loading}...
ಭೂಮಿಯೊಳಗರ್ಧವನು ಬೇಡಿದೊ
ಡಾ ಮಹೀಪತಿಯೈವರಿಗೆ ಸಂ
ಗ್ರಾಮಭೂಮಿಯನೈದೆ ಕೊಟ್ಟನು ನಿಮ್ಮೊಳಪ್ರಿಯನು
ಸಾಮದಲಿ ಸೊಗಸಿಲ್ಲ ನೀವ್ ನಿ
ಸ್ಸೀಮರಾದೊಡೆ ಜೋಡಿಸುವುದು
ದ್ದಾಮ ಕುರುಭೂಮಿಯಲಿ ಕುಳವರಿದವರ ಪತಿಕರಿಸಿ ॥5॥
೦೦೬ ಮುನಿದೊಡೆಯು ನಿಮ್ಮೊಳಗೆ ...{Loading}...
ಮುನಿದೊಡೆಯು ನಿಮ್ಮೊಳಗೆ ನೀವೇ
ಮನಕತವ ಮಾಡುವಿರಿಯಗ್ರಜ
ರನುಜರಲಿ ಕದಡಾದೊಡುಪಶಮಿಸುವಿರಿ ನಿಮ್ಮೊಳಗೆ
ಎನಗೆ ನಿಮ್ಮಯ ದೂಸರಿಂದಾ
ಯ್ತಿನಿತು ಸಭೆಯಲಿ ಮಾನ ಹಾನಿಗ
ಳೆನಲು ನೊಂದನು ಧರ್ಮಸುತನಿಂತೆಂದ ನಸುಗುತ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಪಿಸಿಕೊಂಡರೆ ನಿಮ್ಮೊಳಗೆ ನೀವೇ ಮನಸ್ಸಿನಲ್ಲಿ ದುಃಖವನ್ನು ಅನುಭವಿಸುವಿರಿ. ಅಣ್ಣತಮ್ಮಂದಿರಲ್ಲಿ ಗೊಂದಲವಾದರೆ ನಿಮ್ಮೊಳಗೆ ಶಾಂತರಾಗುತ್ತೀರಿ. ನಿಮ್ಮ ಕಾರಣದಿಂದಾಗಿ ನನಗೆ ಸಭೆಯಲ್ಲಿ ಎಷ್ಟೊಂದು ಮಾನಹಾನಿಯಾಯಿತು ಎಂದು ಕೃಷ್ಣನು ಹೇಳಲು ಧರ್ಮರಾಜನು ನೊಂದನು ಮತ್ತು ಸ್ವಲ್ಪ ನಗುತ್ತ ಹೀಗೆ ಹೇಳಿದನು.
ಪದಾರ್ಥ (ಕ.ಗ.ಪ)
ಮನಕತ-ಮನಸ್ಸಿನ ದುಃಖ, ಕದಡು-ಗೊಂದಲ, ದೊಸರು-ಕಾರಣ
ಮೂಲ ...{Loading}...
ಮುನಿದೊಡೆಯು ನಿಮ್ಮೊಳಗೆ ನೀವೇ
ಮನಕತವ ಮಾಡುವಿರಿಯಗ್ರಜ
ರನುಜರಲಿ ಕದಡಾದೊಡುಪಶಮಿಸುವಿರಿ ನಿಮ್ಮೊಳಗೆ
ಎನಗೆ ನಿಮ್ಮಯ ದೂಸರಿಂದಾ
ಯ್ತಿನಿತು ಸಭೆಯಲಿ ಮಾನ ಹಾನಿಗ
ಳೆನಲು ನೊಂದನು ಧರ್ಮಸುತನಿಂತೆಂದ ನಸುಗುತ ॥6॥
೦೦೭ ಮುಳಿದು ಸುರಗಿಯನುಗಿದು ...{Loading}...
ಮುಳಿದು ಸುರಗಿಯನುಗಿದು ಗಗನಕೆ
ನಿಲುಕಿ ಮಾಡುವದೇನು ನಿಮ್ಮಡಿ
ಗಳಿಗೆ ತಪ್ಪಿದ ತರಳರಖಿಳ ವ್ಯಾಪ್ತಿಗೇಗುವರು
ಖಳರು ಮಾಡಿದ ಖತಿಯನೆನ್ನೊಳು
ತಿಳಿದು ಮರೆಯಲುಬೇಕು ಕರುಣಾ
ಜಲಧಿ ನೀನೆಂದಂಘ್ರಿಗಳ ಹಿಡಿದನು ಯುಧಿಷ್ಠಿರನು ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಪಿಸಿಕೊಂಡು ಕತ್ತಿಯನ್ನು ಹಿರಿದು ಆಕಾಶಕ್ಕೆ ಚಾಚಿ ಮಾಡುವುದೇನು? ನಿಮ್ಮ ಪಾದಗಳಿಗೆ ಅವರು ತಪ್ಪಿದರು. ನೀಚರು ನಿಮ್ಮ ಸಮಸ್ತ ವ್ಯಾಪ್ತಿಗೆ ಏನು ಮಾಡಬಲ್ಲರು? ಆ ದುಷ್ಟರು ಮಾಡಿದ ದುಃಖವನ್ನು ನನ್ನಿಂದಾಯಿತೆಂದು ತಿಳಿದು ಮರೆಯಬೇಕು. ನೀನು ಕರುಣಾಸಮುದ್ರ ಎಂದು ಕೃಷ್ಣನ ಪಾದಗಳನ್ನು ಯುಧಿಷ್ಠಿರನು ಹಿಡಿದುಕೊಂಡನು.
ಪದಾರ್ಥ (ಕ.ಗ.ಪ)
ಮುಳಿದು-ಸಿಟ್ಟಾಗಿ, ಸುರಗಿ-ಕೈಕತ್ತಿ, ತರಳ-ಬುದ್ಧಿಗೇಡಿ, ಏಗು-ಮಾಡು
ಮೂಲ ...{Loading}...
ಮುಳಿದು ಸುರಗಿಯನುಗಿದು ಗಗನಕೆ
ನಿಲುಕಿ ಮಾಡುವದೇನು ನಿಮ್ಮಡಿ
ಗಳಿಗೆ ತಪ್ಪಿದ ತರಳರಖಿಳ ವ್ಯಾಪ್ತಿಗೇಗುವರು
ಖಳರು ಮಾಡಿದ ಖತಿಯನೆನ್ನೊಳು
ತಿಳಿದು ಮರೆಯಲುಬೇಕು ಕರುಣಾ
ಜಲಧಿ ನೀನೆಂದಂಘ್ರಿಗಳ ಹಿಡಿದನು ಯುಧಿಷ್ಠಿರನು ॥7॥
೦೦೮ ಬರಿದೆ ಕಾಡದಿರೇಳು ...{Loading}...
ಬರಿದೆ ಕಾಡದಿರೇಳು ಮನದಲಿ
ಮರೆದೆವಾಗಳೆ ಕೌರವನು ಮುಂ
ದರಿಯದವಗಡಿಸಿದನು ಹೋಗಲಿ ನಿಮ್ಮ ದೂರೇಕೆ
ನೆರವಣಿಗೆಯುಂಟಾದಡಿಂದಿನ
ಮರುದಿವಸ ಸಂಗ್ರಾಮ ಸೈರಿಸ
ಲರಿಯರವದಿರು ನಡೆ ಕುರುಕ್ಷೇತ್ರಕ್ಕೆ ಬೇಗದಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಮ್ಮನೆ ಕಾಡಬೇಡ / ಪೀಡಿಸಬೇಡ. ಅಗಲೇ ಅದನ್ನು ಮನಸ್ಸಿನಿಂದ ಮರೆತೆನು. ಕೌರವನು ಮುಂದಿನದನ್ನು ತಿಳಿಯದೆ ತೊಂದರೆಯನ್ನು ಮಾಡಿಕೊಂಡನು. ಅದಕ್ಕೆ ನಿಮ್ಮ ನಿಂದನೆ ಏಕೆ ? ಎಲ್ಲ ಸಿದ್ಧತೆಯೂ ಪೂರ್ಣವಾಗಿದ್ದರೆ ನಾಳೆಯೇ ಯುದ್ಧವಾಗಲಿ. ಅವರು ಸಹಿಸಿಕೊಳ್ಳಲಾರರು, ಕುರುಕ್ಷೇತ್ರಕ್ಕೆ ಬೇಗ ಹೊರಡು ಎಂದನು.
ಪದಾರ್ಥ (ಕ.ಗ.ಪ)
ನೆರವಣಿಗೆ-ಪೂರ್ಣ
ಮೂಲ ...{Loading}...
ಬರಿದೆ ಕಾಡದಿರೇಳು ಮನದಲಿ
ಮರೆದೆವಾಗಳೆ ಕೌರವನು ಮುಂ
ದರಿಯದವಗಡಿಸಿದನು ಹೋಗಲಿ ನಿಮ್ಮ ದೂರೇಕೆ
ನೆರವಣಿಗೆಯುಂಟಾದಡಿಂದಿನ
ಮರುದಿವಸ ಸಂಗ್ರಾಮ ಸೈರಿಸ
ಲರಿಯರವದಿರು ನಡೆ ಕುರುಕ್ಷೇತ್ರಕ್ಕೆ ಬೇಗದಲಿ ॥8॥
೦೦೯ ಹಾನಿಯನು ನೀ ...{Loading}...
ಹಾನಿಯನು ನೀ ಹೊತ್ತು ಭೃತ್ಯರ
ಮಾನವನು ಪತಿಕರಿಸಬೇಹುದು
ತಾನೊಡೆಯನಾದಂಗೆ ಗುಣವೆಮ್ಮೊಡೆಯ ನೀನಾಗಿ
ಮಾನಭಂಗವ ಧರಿಸಿಯೆಮ್ಮಭಿ
ಮಾನವನು ನೀನುಳುಹಿದೈ ಸಂ
ಧಾನವನು ಸೇರಿಸದೆ ಸಲಹಿದೆಯೆಂದನಾ ಭೀಮ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಡೆಯನಾದವನು ತೊಂದರೆಯನ್ನು ಹೊತ್ತುಕೊಂಡು ಸೇವಕನ ಗೌರವವನ್ನು ಕಾಪಾಡಬೇಕು. ಮಾನಭಂಗವನ್ನು ನೀನು ಹೊತ್ತು ನಮ್ಮ ಅಭಿಮಾನವನ್ನು ಉಳಿಸಿದೆ. ಒಪ್ಪಂದವನ್ನು ಸಾಧಿಸದೆ ನಮ್ಮನ್ನು ರಕ್ಷಿಸಿದೆ, ಎಂದು ಭೀಮನು ಹೇಳಿದನು.
ಪದಾರ್ಥ (ಕ.ಗ.ಪ)
ಭೃತ್ಯ-ಸೇವಕ, ಪತಿಕರಿಸು-ಅಂಗೀಕರಿಸು
ಮೂಲ ...{Loading}...
ಹಾನಿಯನು ನೀ ಹೊತ್ತು ಭೃತ್ಯರ
ಮಾನವನು ಪತಿಕರಿಸಬೇಹುದು
ತಾನೊಡೆಯನಾದಂಗೆ ಗುಣವೆಮ್ಮೊಡೆಯ ನೀನಾಗಿ
ಮಾನಭಂಗವ ಧರಿಸಿಯೆಮ್ಮಭಿ
ಮಾನವನು ನೀನುಳುಹಿದೈ ಸಂ
ಧಾನವನು ಸೇರಿಸದೆ ಸಲಹಿದೆಯೆಂದನಾ ಭೀಮ ॥9॥
೦೧೦ ಮಾರಿಯರಕೆಗಳಡಗದನ್ತಕ ನೂರು ...{Loading}...
ಮಾರಿಯರಕೆಗಳಡಗದಂತಕ
ನೂರು ತುಂಬದೆ ಶಾಕಿನಿಯರೊಡ
ಲೋರೆ ನನೆಯದೆ ಡಾಕಿನಿಯರಿಗೆ ಡೊಳ್ಳು ಸಾಲಿಡದೆ
ಕೌರವನ ತನಿಗರುಳ ದಂಡೆಯ
ತೋರಣದ ಬಾಗಿಲಿನ ವಿಭವದಿ
ವಾರಣಾಹ್ವಯನಗರಿಯನು ಹೊಗದಿಹೆನೆ ಹೇಳೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೃತ್ಯು ದೇವತೆಯ ಹರಕೆ ತೀರದೆ ? ನರಕವು ತುಂಬದೆ? ಶಾಕಿನಿಯ ಒಡಲು ನೆನೆಯದಿರುವುದೆ ? ಡಾಕಿನಿಯರ ಹೊಟ್ಟೆಗೆ ಸಾಕಾಗದೆ ? ಕೌರವನ ಸವಿ ಕರುಳ ಮಾಲೆಯ, ತೋರಣದ ಬಾಗಿಲಿನ ವೈಭವದಿಂದ ಹಸ್ತಿನಾವತಿಯ ನಗರವನ್ನು ಪ್ರವೇಶಿಸದೇ ಇರುವೆನೆ ? ಹೇಳು ಎಂದು ಭೀಮಸೇನನು ಕೇಳಿದನು.
ಪದಾರ್ಥ (ಕ.ಗ.ಪ)
ಮಾರಿ-ಮೃತ್ಯುದೇವತೆ, ಓರೆ- ? ಸಾಲು-ಸಾಕಾಗು, ತನಿ-ಸವಿ
ಮೂಲ ...{Loading}...
ಮಾರಿಯರಕೆಗಳಡಗದಂತಕ
ನೂರು ತುಂಬದೆ ಶಾಕಿನಿಯರೊಡ
ಲೋರೆ ನನೆಯದೆ ಡಾಕಿನಿಯರಿಗೆ ಡೊಳ್ಳು ಸಾಲಿಡದೆ
ಕೌರವನ ತನಿಗರುಳ ದಂಡೆಯ
ತೋರಣದ ಬಾಗಿಲಿನ ವಿಭವದಿ
ವಾರಣಾಹ್ವಯನಗರಿಯನು ಹೊಗದಿಹೆನೆ ಹೇಳೆಂದ ॥10॥
೦೧೧ ತೋರು ನಡೆ ...{Loading}...
ತೋರು ನಡೆ ಗಜಬಜಿಸಲೇಕಿ
ನ್ನಾರು ತಿಂಗಳೆ ನಾಳೆ ಪಯಣಕೆ
ಸಾರಿಸೇಳೆಂದವರುಪಪ್ಲವ್ಯಕ್ಕೆ ನಡೆತಂದು
ಬೇರೆ ಬೇರವನೀಶರಿಗೆ ಪಡಿ
ಹಾರವನು ಕಳುಹಿದರು ಕೃಷ್ಣನ
ದೂರು ಬರಲಳವಡಿಸಿದರು ಸಂಗ್ರಾಮ ಸಾಧನವ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಡೆ ತೋರಿಸು. ಗದ್ದಲವೇಕೆ ? ಇನ್ನು ಆರು ತಿಂಗಳೆ ? ನಾಳೆ ಪ್ರಯಾಣವೆಂದು ಘೋಷಿಸು. ಏಳು ಎಂದು ಉಪಪ್ಲವ್ಯ ನಗರಕ್ಕೆ ಬಂದು ಬೇರೆ ಬೇರೆ ರಾಜರಿಗೆ ದೂತರನ್ನು ಕಳುಹಿಸಿದರು. ಕೃಷ್ಣನಿಂದ ವಿಷಯ ತಿಳಿದು ಅವರುಗಳು ಯುದ್ಧಕ್ಕೆ ಬೇಕಾದ ಸಾಮಗ್ರಿಗಳನ್ನು ಹೊಂದಿಸಿದರು.
ಪದಾರ್ಥ (ಕ.ಗ.ಪ)
ಗಜಬಜಿಸು-ಗದ್ದಲ, ಸಾರಿಸು-ಘೋಷಿಸು, ಸಾಧನ-ಸಾಮಗ್ರಿ
ಮೂಲ ...{Loading}...
ತೋರು ನಡೆ ಗಜಬಜಿಸಲೇಕಿ
ನ್ನಾರು ತಿಂಗಳೆ ನಾಳೆ ಪಯಣಕೆ
ಸಾರಿಸೇಳೆಂದವರುಪಪ್ಲವ್ಯಕ್ಕೆ ನಡೆತಂದು
ಬೇರೆ ಬೇರವನೀಶರಿಗೆ ಪಡಿ
ಹಾರವನು ಕಳುಹಿದರು ಕೃಷ್ಣನ
ದೂರು ಬರಲಳವಡಿಸಿದರು ಸಂಗ್ರಾಮ ಸಾಧನವ ॥11॥
೦೧೨ ಗುಡಿಯ ಮಣ್ಡವಿಗೆಗಳ ...{Loading}...
ಗುಡಿಯ ಮಂಡವಿಗೆಗಳ ಹೊರಿಗೆಗ
ಳೊಡನೊಡನೆ ಸಂಭ್ರಮಿಸಿದವು ಬರ
ಸಿಡಿಲು ಬೊಬ್ಬಿಡುವಂತೆ ಮಸೆದವು ಕೂಡೆ ಕೈದುಗಳು
ದಡಿಯ ಬಲಿಸುವ ಗುಳವ ರೆಂಚೆಯ
ಗಡಣಿಸುವ ಬಲುಗೀಲಗಾಲಿಯ
ತೊಡಿಸುವುತ್ಸಹವಾಯ್ತವರ ಪಾಂಡವರ ಬೀಡಿನಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾವುಟವು ಗುಡಾರಗಳು ರಾಶಿರಾಶಿಯಾಗಿ ಸಂಭ್ರಮದಿಂದ ಕಂಡವು. ಬರ ಸಿಡಿಲು ಆರ್ಭಟಿಸುವಂತೆ ಆಯುಧಗಳು ಜೊತೆಗೆ ಘರ್ಷಿಸಿದವು. ಕೋಲುಗಳನ್ನು ಕಟ್ಟುವ ಕುದುರೆ, ಆನೆಗಳ ಹಕ್ಕರಿಗೆ ಪಟ್ಟಿಗಳನ್ನು, ಜೀನುಗಳನ್ನು ಜೋಡಿಸುವ, ದೊಡ್ಡ ಕೀಲುಗಾಲಿಗಳನ್ನು ಸಿದ್ಧಗೊಳಿಸುವ ಉತ್ಸಾಹವು ಪಾಂಡವರ ಬೀಡಾರದಲ್ಲಿ ನಡೆಯಿತು.
ಪದಾರ್ಥ (ಕ.ಗ.ಪ)
ಗುಡಿ-ಬಾವುಟ, ಮಂಡವಿಗೆ-ಗುಡಾರ, ಬೊಬ್ಬೆ-ಆರ್ಭಟ, ಮಸೆ-ಘರ್ಷಿಸು, ದಡಿ-ಕೋಲು, ಗುಳ-ರೆಂಚೆ-ಆನೆಕುದುರೆಗಳ ಪಟ್ಟಿ
ಮೂಲ ...{Loading}...
ಗುಡಿಯ ಮಂಡವಿಗೆಗಳ ಹೊರಿಗೆಗ
ಳೊಡನೊಡನೆ ಸಂಭ್ರಮಿಸಿದವು ಬರ
ಸಿಡಿಲು ಬೊಬ್ಬಿಡುವಂತೆ ಮಸೆದವು ಕೂಡೆ ಕೈದುಗಳು
ದಡಿಯ ಬಲಿಸುವ ಗುಳವ ರೆಂಚೆಯ
ಗಡಣಿಸುವ ಬಲುಗೀಲಗಾಲಿಯ
ತೊಡಿಸುವುತ್ಸಹವಾಯ್ತವರ ಪಾಂಡವರ ಬೀಡಿನಲಿ ॥12॥
೦೧೩ ಹಿಳುಕ ತಿದ್ದುವ ...{Loading}...
ಹಿಳುಕ ತಿದ್ದುವ ಬಿಲ್ಲ ಬಾಗಿನ
ಹೊಳಹನೊಯಾ್ಯರಿಸುವ ಮಾರ್ತಿರು
ಗಳನು ಜೋಡಿಸುವಖಿಳ ಕೈದುವ ಮಸೆವ ಮಂಡಲಿಯ
ಕಳಕಳಿಕೆ ಬಲುಹಾಯ್ತು ರಾವುತ
ರಲಿ ಗಜಾರೋಹಕರ ರಥಿಕಾ
ವಳಿಯಲವರವರಂಗದಲಿ ಸಂವರಣೆಯೊಪ್ಪಿದವು ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣಗಳ ಗರಿಯನ್ನು ತಿದ್ದುವುದು, ಬಿಲ್ಲು ಬಾಗಿನ ಹೊಳಪನ್ನು ಚೆಂದದಿಂದ ಕಾಣುವಂತೆ ಮಾಡುವ, ಬಿಲ್ಲಿನ ಮರು ಹೆದೆಗಳನ್ನು ಜೋಡಿಸುವ, ಎಲ್ಲ ಆಯುಧಗಳನ್ನು ಹರಿತ ಮಾಡುವ ಗುಂಪಿನ ಆಸ್ಥೆ-ಆಸಕ್ತಿಗಳು ಹೆಚ್ಚಾದವು. ರಾವುತರು (ಕುದುರೆಯ ಸವಾರರು) ಮಾವುತರು, ರಥಿಕರ ಗುಂಪುಗಳಲ್ಲಿ ಅವರವರ ಭಾಗದಲ್ಲಿ ಸಿದ್ಧತೆಗಳು ಮೆರೆದವು.
ಪದಾರ್ಥ (ಕ.ಗ.ಪ)
ಹಿಳುಕು-ಬಾಣದ ಗರಿ, ಮಾರ್ತಿರು-ಬಿಲ್ಲಿನ ಹೆದೆ, ಮಂಡಲಿ-ಗುಂಪು, ಸಂವರಣೆ-ಸಿದ್ಧತೆ, ಒಪ್ಪು-ಮೆರೆ
ಮೂಲ ...{Loading}...
ಹಿಳುಕ ತಿದ್ದುವ ಬಿಲ್ಲ ಬಾಗಿನ
ಹೊಳಹನೊಯಾ್ಯರಿಸುವ ಮಾರ್ತಿರು
ಗಳನು ಜೋಡಿಸುವಖಿಳ ಕೈದುವ ಮಸೆವ ಮಂಡಲಿಯ
ಕಳಕಳಿಕೆ ಬಲುಹಾಯ್ತು ರಾವುತ
ರಲಿ ಗಜಾರೋಹಕರ ರಥಿಕಾ
ವಳಿಯಲವರವರಂಗದಲಿ ಸಂವರಣೆಯೊಪ್ಪಿದವು ॥13॥
೦೧೪ ಜೋಳಿ ಹರಿದುದು ...{Loading}...
ಜೋಳಿ ಹರಿದುದು ದೆಸೆದೆಸೆಗೆ ಭೂ
ಪಾಲರಿಗೆ ರಾಯಸದ ಹದನನು
ಕೇಳಿದಾಗಳೆ ಕವಿದು ಬಂದರು ತಮ್ಮ ದಳಸಹಿತ
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳವಂದಿನ ಮರುದಿವಸ ವೈ
ಹಾಳಿಯನು ಹೊರವಂಟರನಿಬರು ದೈತ್ಯರಿಪು ಸಹಿತ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಿಕ್ಕು ದಿಕ್ಕುಗಳ ರಾಜರಿಗೆ ಸಂದೇಶ ಹೊರಟಿತು. ಸಂದೇಶದ ವಿಷಯ ತಿಳಿದು ಕೂಡಲೆ ರಾಜರು ತಮ್ಮ ಸೈನ್ಯಗಳ ಸಹಿತ ಬಂದರು. ಸನ್ನೆಯಾದೊಡನೆ ನಗಾರಿಗಳು ಬಾರಿಸಿದವು. ಅಂದಿನ ಮರುದಿವಸ ಎಲ್ಲರೂ ಕೃಷ್ಣನೊಡನೆ ಪ್ರಯಾಣ ಹೊರಟರು.
ಪದಾರ್ಥ (ಕ.ಗ.ಪ)
ಸೂಳವಿಸು-ಸಾರು, ನಿಸ್ಸಾಳ-ನಗಾರಿ, ರಾಯಸ-ಸಂದೇಶ
ಮೂಲ ...{Loading}...
ಜೋಳಿ ಹರಿದುದು ದೆಸೆದೆಸೆಗೆ ಭೂ
ಪಾಲರಿಗೆ ರಾಯಸದ ಹದನನು
ಕೇಳಿದಾಗಳೆ ಕವಿದು ಬಂದರು ತಮ್ಮ ದಳಸಹಿತ
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳವಂದಿನ ಮರುದಿವಸ ವೈ
ಹಾಳಿಯನು ಹೊರವಂಟರನಿಬರು ದೈತ್ಯರಿಪು ಸಹಿತ ॥14॥
೦೧೫ ಎಲೆಲೆ ನೆಲ ...{Loading}...
ಎಲೆಲೆ ನೆಲ ಬೆಸಲಾದುದೋ ಬಲು
ದಳದ ತೆರಳಿಕೆ ತೀವಿತವನಿಯ
ತಳಪಟದ ಹಬ್ಬುಗೆಯೊಳಬ್ಬರಿಸಿದವು ಬೊಬ್ಬೆಗಳು
ತಲೆವೊರೆಯ ತೂಕದಲಿ ಫಣಿಪತಿ
ಬಳುಕತೊಡಗಿದ ತರಣಿ ಸೇನೋ
ಚ್ಚಲಿತ ಧೂಳಿಯ ಝಗೆಯಲದ್ಭುತವಾಯ್ತು ದೆಖ್ಖಾಳ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆಲೆ ! ನೆಲವು ಹೆತ್ತಿತೊ ಎನ್ನುವಂತೆ ದೊಡ್ಡ ಸೈನವು ಹೊರಡಲು ಭೂಮಿ ತುಂಬಿತು. ಸೈನ್ಯವು ಹರಡಿ ಆರ್ಭಟದಿಂದ ಅಬ್ಬರಿಸಿದವು. ತಲೆ ಹೊರೆಯ ಭಾರದಿಂದ ಶೇಷನು ಅಲ್ಲಾಡತೊಡಗಿದನು. ಸೇನೆಯ ಕಾಲ್ತುಳಿತದಿಂದ ಎದ್ದ ದೂಳು ಕೆಂಪು ನಿಲವಂಗಿಯಂತೆ ಸೂರ್ಯನೂ ತೂಗಾಡಿದನು. ದೃಶ್ಯವು ಅದ್ಭುತವಾಯಿತು.
ಪದಾರ್ಥ (ಕ.ಗ.ಪ)
ಬೆಸಲು-ಹೆರಿಗೆ, ತಳಪಟ-ಸೈನ್ಯ, ತೀವ್ರ-ತುಂಬು, ಉಚ್ಛಲಿತ-ಎದ್ದ, ಹಬ್ಬುಗೆ-ಹರಡಿದ, ದೆಖ್ಖಾಳ-ದೃಶ್ಯ
ಮೂಲ ...{Loading}...
ಎಲೆಲೆ ನೆಲ ಬೆಸಲಾದುದೋ ಬಲು
ದಳದ ತೆರಳಿಕೆ ತೀವಿತವನಿಯ
ತಳಪಟದ ಹಬ್ಬುಗೆಯೊಳಬ್ಬರಿಸಿದವು ಬೊಬ್ಬೆಗಳು
ತಲೆವೊರೆಯ ತೂಕದಲಿ ಫಣಿಪತಿ
ಬಳುಕತೊಡಗಿದ ತರಣಿ ಸೇನೋ
ಚ್ಚಲಿತ ಧೂಳಿಯ ಝಗೆಯಲದ್ಭುತವಾಯ್ತು ದೆಖ್ಖಾಳ ॥15॥
೦೧೬ ಹಿಣಿಲ ಹಾಹೆಯ ...{Loading}...
ಹಿಣಿಲ ಹಾಹೆಯ ಬಿರುದುಗಳ ಡಾ
ವಣಿಯ ನಾಯಕವಾಡಿಗಳ ಸಂ
ದಣಿಯ ಸುಕರದ ಕೈದುಗಳ ವರ ವೀರ ನೂಪುರದ
ಕುಣಿವ ಸುರಗಿಯ ಪಳಹರದ ಡೊಂ
ಕಣಿಯ ಭೇದಿಪ ಖಡ್ಗ ಬಿಲು ಬಲು
ಗಣೆಯ ಸಂಖ್ಯೆಯ ಕೈದುಗಳ ಕಾಲಾಳ ನೋಡಿದರು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನವಿಲುಗರಿ ಬೊಂಬೆಯ ಬಿರುದು ಹೊಂದಿದ ಸಾಲು - ಹಗ್ಗವನ್ನು ಹಿಡಿದ ನಾಯಕರ ಗುಂಪು. ಕೈಗಳಲ್ಲಿ ಆಯುಧವನ್ನಿಟ್ಟುಕೊಂಡು, ಗೆಜ್ಜೆಗಳನ್ನು ಕಟ್ಟಿಕೊಂಡು ಕುಣಿಯುತ್ತಿರುವ ವೀರರು ಬಾವುಟ, ಈಟಿಯನ್ನು ಸೀಳುವ ಕತ್ತಿಗಳು ಬಿಲ್ಲು ಬಾಣಗಳು ಅಸಂಖ್ಯಾತ ಆಯುಧಗಳನ್ನು ಕಾಲಾಳುಗಳನ್ನು ಸೇನಾನಾಯಕರು ನೋಡಿದರು.
ಪದಾರ್ಥ (ಕ.ಗ.ಪ)
ಹಿಣಿಲು-ನವಿಲುಗರಿ, ಹಾಹೆ-ಗೊಂಬೆ, ಡಾವಣಿ-ಹಗ್ಗ, ಸುರಗಿ-ಚೂರಿ, ಪಳಹರ-ಬಾವುಟ, ಡೊಂಕಣಿ-ಈಟಿ, ಕಣೆ-ಬಾಣ
ಮೂಲ ...{Loading}...
ಹಿಣಿಲ ಹಾಹೆಯ ಬಿರುದುಗಳ ಡಾ
ವಣಿಯ ನಾಯಕವಾಡಿಗಳ ಸಂ
ದಣಿಯ ಸುಕರದ ಕೈದುಗಳ ವರ ವೀರ ನೂಪುರದ
ಕುಣಿವ ಸುರಗಿಯ ಪಳಹರದ ಡೊಂ
ಕಣಿಯ ಭೇದಿಪ ಖಡ್ಗ ಬಿಲು ಬಲು
ಗಣೆಯ ಸಂಖ್ಯೆಯ ಕೈದುಗಳ ಕಾಲಾಳ ನೋಡಿದರು ॥16॥
೦೧೭ ಥಳಥಳಿಪ ಸೂನಿಗೆಯ ...{Loading}...
ಥಳಥಳಿಪ ಸೂನಿಗೆಯ ಮುಮ್ಮೊನೆ
ಗಳ ರಥಾಂಗದ ಮೇಲು ಪಸರದ
ಪಳಹರದ ಖುರಗತಿಯ ಜೋಡ ಜವಾಯ್ಲ ಕುದುರೆಗಳ
ಬಲದ ಬದ್ದರದೊಟ್ಟಿದಂಬಿನ
ಹೊಳೆವ ಹೊದೆಗಳ ಸೂತರುರವಣೆ
ಗಳ ಸುರೇಖೆಯ ಗತಿಯ ವಾಜಿಯ ರಥವ ನೋಡಿದರು ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಥಳಥಳ ಹೊಳೆಯುತ್ತಿರುವ ಮುಂತುದಿಯನ್ನುಳ್ಳ ಮಾರಕಾಸ್ತ್ರಗಳನ್ನು, ರಥದ ಚಕ್ರದ ಮೇಲಿನ ಹೊದಿಕೆಯ ಮೇಲೆ ಹಾರಾಡುತ್ತಿರುವ ಧ್ವಜಗಳನ್ನು, ಗೊರಸಿನ ಸದ್ದು ಮಾಡುತ್ತ ವೇಗದಲ್ಲಿ ಹೋಗುವ ಜೋಡಿ ಕುದುರೆಗಳನ್ನು, ದಂಡಿನ ಆನೆಗಳನ್ನು, ತುಂಬಿದ ಬಾಣಗಳನ್ನು, ಹೊಳೆಯುವ ಬತ್ತಳಿಕೆಯನ್ನು, ಸೂತ (ಸಾರಥಿಗಳ)ರ ಸಂಭ್ರಮದಲ್ಲಿ ಸಾಲಾಗಿ ನಡೆಯುವ ಕುದುರೆಗಳ ರಥಗಳನ್ನು ನೋಡಿದರು.
ಪದಾರ್ಥ (ಕ.ಗ.ಪ)
ಸೂನಿಗೆ-ಮಾರಕಾಸ್ತ್ರ, ಪಸರ-ಹೊದಿಕೆ, ಖುರಗಡಿ-ಗೊರಸಿನ ನಡಿಗೆ, ಬದ್ದರ-ಆನೆ, ಜವಾಯ್ಲು-ವೇಗ, ವಾಜಿ-ಕುದುರೆ, ಉರವಣಿಸು-ಸಂಭ್ರಮಿಸು
ಮೂಲ ...{Loading}...
ಥಳಥಳಿಪ ಸೂನಿಗೆಯ ಮುಮ್ಮೊನೆ
ಗಳ ರಥಾಂಗದ ಮೇಲು ಪಸರದ
ಪಳಹರದ ಖುರಗತಿಯ ಜೋಡ ಜವಾಯ್ಲ ಕುದುರೆಗಳ
ಬಲದ ಬದ್ದರದೊಟ್ಟಿದಂಬಿನ
ಹೊಳೆವ ಹೊದೆಗಳ ಸೂತರುರವಣೆ
ಗಳ ಸುರೇಖೆಯ ಗತಿಯ ವಾಜಿಯ ರಥವ ನೋಡಿದರು ॥17॥
೦೧೮ ಅಳವಿಗೊಟ್ಟೊಡೆ ರವಿಯ ...{Loading}...
ಅಳವಿಗೊಟ್ಟೊಡೆ ರವಿಯ ತುರಗವ
ನುಳುಹಿ ಮುಂಚುವ ಗತಿಯ ನೊಸಲಲಿ
ಹೊಳೆವ ಕನ್ನಡಿಗಳ ಖುರಾಂತದ ಜೋಡು ಚೆಲುವುಗಳ
ಬಿಳಿಯ ಚೌರಿಯ ಝಲ್ಲರಿಯ ಹ
ತ್ತಳದ ರಾವ್ತರ ಸರಿಸದಲಿ ನೆಲ
ನಲುಗೆ ನಿಗುರುವ ನಿಲುವ ನಿರುತದ ಹಯವ ನೋಡಿದರು ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಕಾಶ ಕೊಟ್ಟರೆ ಸೂರ್ಯನ ರಥದ ಕುದುರೆಗಳನ್ನು ಹಿಂದಿಕ್ಕಿ ಮುಂದಕ್ಕೆ ಓಡುವ, ಹಣೆಯಲ್ಲಿ ಹೊಳೆಯುವ ಕನ್ನಡಿಗಳ ಖುರಪುಟದಲ್ಲಿ ಚೆಲುವಿನ ಜೋಡುಗಳ ಬಿಳಿಯ ಚೌರಿಯ ಗೊಂಡೆಗಳ ಚಾವಟಿಯನ್ನು ಹಿಡಿದಿರುವ ಕುದುರೆ ಸವಾರರ ಉತ್ಸಾಹದಲ್ಲಿ ನೆಲ ನಡುಗಲು ಸೆಟೆದು ನಿಲ್ಲುವ ದಿಟವಾದ ಕುದುರೆಗಳನ್ನು ನೋಡಿದರು.
ಪದಾರ್ಥ (ಕ.ಗ.ಪ)
ಅಳವಿ-ಅವಕಾಶ, ಖುರಾಂತ-ಗೊರಸಿನ ತುದಿ, ಝಲ್ಲರಿ-ಗೊಂಡೆಯ, ಹತ್ತಳ-ಚಾವಳಿ, ನಿರುತ-ದಿಟ/ಸತ್ಯ
ಮೂಲ ...{Loading}...
ಅಳವಿಗೊಟ್ಟೊಡೆ ರವಿಯ ತುರಗವ
ನುಳುಹಿ ಮುಂಚುವ ಗತಿಯ ನೊಸಲಲಿ
ಹೊಳೆವ ಕನ್ನಡಿಗಳ ಖುರಾಂತದ ಜೋಡು ಚೆಲುವುಗಳ
ಬಿಳಿಯ ಚೌರಿಯ ಝಲ್ಲರಿಯ ಹ
ತ್ತಳದ ರಾವ್ತರ ಸರಿಸದಲಿ ನೆಲ
ನಲುಗೆ ನಿಗುರುವ ನಿಲುವ ನಿರುತದ ಹಯವ ನೋಡಿದರು ॥18॥
೦೧೯ ಶೈಲದೆಡಬಲದೊರತೆಯೆನೆ ಸುಕ ...{Loading}...
ಶೈಲದೆಡಬಲದೊರತೆಯೆನೆ ಸುಕ
ಪೋಲದಲಿ ದಾರಿಡುವ ಮದಜಲ
ಧಾರೆಗಳ ಬರಿಕೈಯ ಲೌಡಿಯ ವಜ್ರಮುಷ್ಟಿಗಳ
ನಾಳಿವಿಲುಗಳ ರಾಯ ಜೋಧರ
ಮೇಳವಣೆಗಳ ಚಿತ್ರಗತಿ ಶುಂ
ಡಾಲವನು ನೋಡಿದರು ಗಜಸೇನಾಸಮುದ್ರದಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಟ್ಟದ ಎಡಬಲಗಳಲ್ಲಿ ಗಲ್ಲದ ಮೇಲೆ ಹರಿಯುತ್ತಿರುವ ನೀರಿನಂತೆ ಮದಜಲಧಾರೆಗಳು ಸೊಂಡಿಲಿನಲ್ಲಿ ಒತ್ತಿಹಿಡಿದ ಅಂಕುಶದ, ರಾಜಯೋಧರ ಮುಷ್ಟಿಯಲ್ಲಿ ನಾಶಮಾಡುವ ಬಿಲ್ಲುಗಳನ್ನು ಚಿತ್ರ ವಿಚಿತ್ರವಾಗಿ ಸೊಂಡಿಲನ್ನು ಅಲ್ಲಾಡಿಸುತ್ತ ನೃತ್ಯ ಮಾಡುವ ಆನೆಗಳನ್ನು ಗಜಸೇನಾ ಸಮುದ್ರದಲ್ಲಿ ನೋಡಿದರು.
ಪದಾರ್ಥ (ಕ.ಗ.ಪ)
ಶೈಲ-ಬೆಟ್ಟ, ಲೌಡಿ-ಅಂಕುಶ, ಶುಂಡಾಲ-ಆನೆ, ಚೋಧರ-ಯೋಧ
ಮೂಲ ...{Loading}...
ಶೈಲದೆಡಬಲದೊರತೆಯೆನೆ ಸುಕ
ಪೋಲದಲಿ ದಾರಿಡುವ ಮದಜಲ
ಧಾರೆಗಳ ಬರಿಕೈಯ ಲೌಡಿಯ ವಜ್ರಮುಷ್ಟಿಗಳ
ನಾಳಿವಿಲುಗಳ ರಾಯ ಜೋಧರ
ಮೇಳವಣೆಗಳ ಚಿತ್ರಗತಿ ಶುಂ
ಡಾಲವನು ನೋಡಿದರು ಗಜಸೇನಾಸಮುದ್ರದಲಿ ॥19॥
೦೨೦ ಅವನಿಪಾಲರ ಮಕುಟ ...{Loading}...
ಅವನಿಪಾಲರ ಮಕುಟ ಮಣಿಗಣ
ನಿವಹವೆತ್ತಿದ ಖಡ್ಗ ಪರಶುಗ
ಳವಿರಳದ ತೆರೆಗಳ ಪತಾಕಾವಳಿಯ ಬೆಳುನೊರೆಯ
ವಿವಿಧ ಗಜ ಹಯ ಜಲಚರೌಘದ
ಪವನಜನ ಕೈಸನ್ನೆಗಳ ಘನ
ಪವನ ಹತಿಯಲಿ ಲಹರಿ ಮಸಗಿತು ಬಹಳ ಬಲಜಲಧಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಪಾಲಕರ ರತ್ನದ ಕಿರೀಟಗಳ ಸಮೂಹªÅ, ಅವರು ಎತ್ತಿ ಹಿಡಿದ ಕತ್ತಿ ಕೊಡಲಿಗಳು ಸಮುದ್ರದ ತೆರೆಗಳು. ಅಧಿಕವಾದ ಅಲೆಗಳ ಬಾವುಟಗಳ ಸಮೂಹವು ಬಿಳಿನೊರೆ. ಅನೇಕ ಆನೆ, ಕುದುರೆಗಳೇ ಜಲಚರ ಪ್ರಾಣಿಗಳ ಗುಂಪು. ಹೀಗೆ ಮಹಾ ಸಮುದ್ರದಂತೆ ಕಾಣುತ್ತಿದ್ದ ಮಹಾಸೈನ್ಯಕ್ಕೆ ಭೀಮಸೇನ ಕೈ ಘಾತವು ಬೀಸುವ ಗಾಳಿಯಂತಿದ್ದು ತೆರೆಗಳನ್ನು ಹುಟ್ಟಿಸಿದಂತಾಗಿ ಸೈನ್ಯವೆಂಬ ಸಮುದ್ರವು ಮೊರೆಯುತ್ತಿತ್ತು.
ಪದಾರ್ಥ (ಕ.ಗ.ಪ)
ನಿವಹ-ಸಮೂಹ, ಔಘ-ಗುಂಪು, ಅವಿರಳ-ಒತ್ತೊತ್ತಾದ
ಮೂಲ ...{Loading}...
ಅವನಿಪಾಲರ ಮಕುಟ ಮಣಿಗಣ
ನಿವಹವೆತ್ತಿದ ಖಡ್ಗ ಪರಶುಗ
ಳವಿರಳದ ತೆರೆಗಳ ಪತಾಕಾವಳಿಯ ಬೆಳುನೊರೆಯ
ವಿವಿಧ ಗಜ ಹಯ ಜಲಚರೌಘದ
ಪವನಜನ ಕೈಸನ್ನೆಗಳ ಘನ
ಪವನ ಹತಿಯಲಿ ಲಹರಿ ಮಸಗಿತು ಬಹಳ ಬಲಜಲಧಿ ॥20॥
೦೨೧ ಹರಿ ಯುಧಿಷ್ಠಿರರೊನ್ದು ...{Loading}...
ಹರಿ ಯುಧಿಷ್ಠಿರರೊಂದು ಗಜ ಕಂ
ಧರದೊಳಿರ್ದರು ನಿಖಿಳ ಸೇನೆಯ
ತೆರಳಿಕೆಯ ತೋರಿಸುತ ಬಂದರು ಭೀಮ ಫಲುಗುಣರು
ಬಿರುದ ಧೃಷ್ಟದ್ಯುಮ್ನ ಮೊದಲಾ
ಗಿರೆ ಶಿಖಂಡಿಯು ಸಹಿತ ದ್ರುಪದನು
ಭರ ಮಿಗಿಲು ತೋರಿದನು ಮೂರಕ್ಷೋಣಿ ಸೇನೆಯನು ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಮತ್ತು ಯುಧಿಷ್ಠಿರನು ಒಂದು ಆನೆಯ ಹೆಗಲ ಮೇಲಿದ್ದರು. ಎಲ್ಲ ಸೈನ್ಯವೂ ಗುಂಪುಗೂಡಿ ಮುಂದೆ ಹೋಗುತ್ತಿರುವುದನ್ನು ಭೀಮ, ಅರ್ಜುನರು ತೋರಿಸುತ್ತ ಬಂದರು. ಬಿರುದಾಂಕಿತ ಧೃಷ್ಟದ್ಯುಮ್ನನು ಮೊದಲಿರಲು ಶಿಖಂಡಿಯೊಡನೆ ದ್ರುಪದರಾಜನು ತಮ್ಮ ಹೆಚ್ಚಿನ ವೇಗದ ಮೂರು ಅಕ್ಷೋಹಿಣಿ ಸೈನ್ಯವನ್ನು ತೋರಿಸಿದನು.
ಪದಾರ್ಥ (ಕ.ಗ.ಪ)
ಕಂಧರ-ಹೆಗಲು, ಭರ-ವೇಗ
ಮೂಲ ...{Loading}...
ಹರಿ ಯುಧಿಷ್ಠಿರರೊಂದು ಗಜ ಕಂ
ಧರದೊಳಿರ್ದರು ನಿಖಿಳ ಸೇನೆಯ
ತೆರಳಿಕೆಯ ತೋರಿಸುತ ಬಂದರು ಭೀಮ ಫಲುಗುಣರು
ಬಿರುದ ಧೃಷ್ಟದ್ಯುಮ್ನ ಮೊದಲಾ
ಗಿರೆ ಶಿಖಂಡಿಯು ಸಹಿತ ದ್ರುಪದನು
ಭರ ಮಿಗಿಲು ತೋರಿದನು ಮೂರಕ್ಷೋಣಿ ಸೇನೆಯನು ॥21॥
೦೨೨ ವರ ಯುಧಾಮನ್ಯುತ್ತಮೌಞ್ಜಸ ...{Loading}...
ವರ ಯುಧಾಮನ್ಯುತ್ತಮೌಂಜಸ
ನುರು ಶಿಖಂಡಿ ಸುಚೇಕಿತಾನರು
ಧುರಧುರಂಧರ ವೀರ ಪಾಂಚಾಲಕ್ಷಿತೀಶ್ವರರು
ತುರುಕರನು ಸಾಹಣ ಸಮುದ್ರರ
ಮರುಯವನ ಖುರಸಾಣ ಕಾಶೀ
ಶ್ವರರ ಥಟ್ಟನು ತೋರಿದನು ಪಾಂಚಾಲ ಭೂಪಾಲ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠರಾದ ಯುಧಾಮನ್ಯು, ಉತ್ತಮೌಂಜಸರು, ಶ್ರೇಷ್ಠ ಶಿಖಂಡಿ ಚೇಕಿತಾನ, ಯುದ್ಧ ವೀರರಾದ ಪಾಂಚಾಲ ಭೂಪಾಲಕರು, ತುರುಕರು, ಸಾಹಣ ಸಮುದ್ರರನ್ನು, ಮರುಯವನ, ಖುರಸಾಣ, ಕಾಶೀರಾಜರ ಸೈನ್ಯವನ್ನು ದ್ರುಪದ ರಾಜನು ತೋರಿಸಿದನು.
ಟಿಪ್ಪನೀ (ಕ.ಗ.ಪ)
ಯಧಾಮನ್ಯು - ಪಾಂಚಾಲ ದೇಶದ ಅರಸು ಪಾಂಡವ ಪಕ್ಷಪಾತಿ, ಉತ್ತಮೌಂಜಸ-ದ್ರುಪದರಾಜನಮಗ, ಶಿಖಂಡಿ-ದ್ರುಪದನ ಹಿರಿಯ ಮಗ, ಹೆಣ್ಣಾಗಿ ಜನಿಸಿ ಬಳಿಕ ಗಂಡಾದ, ಚೇಕಿತಾನ-ಯದುವಂಶದ ಶೂರಾಗ್ರೇಸರ.
ಸಾಹಣ -ಸೇವುಣರು
ಸಮುದ್ರರು - ಬಲ್ಲಾಳರು
ಖುರಸಾಣ - ಇರಾನ್ ನವರು
ಮೂಲ ...{Loading}...
ವರ ಯುಧಾಮನ್ಯುತ್ತಮೌಂಜಸ
ನುರು ಶಿಖಂಡಿ ಸುಚೇಕಿತಾನರು
ಧುರಧುರಂಧರ ವೀರ ಪಾಂಚಾಲಕ್ಷಿತೀಶ್ವರರು
ತುರುಕರನು ಸಾಹಣ ಸಮುದ್ರರ
ಮರುಯವನ ಖುರಸಾಣ ಕಾಶೀ
ಶ್ವರರ ಥಟ್ಟನು ತೋರಿದನು ಪಾಂಚಾಲ ಭೂಪಾಲ ॥22॥
೦೨೩ ವರ ವಿರಾಟನು ...{Loading}...
ವರ ವಿರಾಟನು ಶಂಖ ನೃಪನು
ತ್ತರ ಶತದ್ಯುಮ್ನಕನು ಶತಚಂ
ದ್ರರು ಶತಾನೀಕರು ಶತಾಯುಧರೆನಿಪ ನೃಪವರರು
ತುರಗ ಗಜರಥ ಪಾಯದಳ ಸಾ
ಗರದ ಸೌರಂಭದಲಿ ನಿಜ ಸಂ
ವರಣೆಯನು ತೋರಿದರು ತಮ್ಮಕ್ಷೋಹಿಣೀ ದಳವ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉನ್ನತ ವಿರಾಟನು ಶಂಖ ದೊರೆ, ಉತ್ತರ, ಶತದ್ಯುಮ್ನಕ, ಶತಚಂದ್ರ ಶತಾನಿಕ, ಶತಾಯುಧರೆನ್ನಿಸುವ ರಾಜರುಗಳು ಕುದುರೆ, ಆನೆ, ರಥ ಕಾಲಾಳುಗಳ ಸಾಗರದ ಸಂಭ್ರಮದಲ್ಲಿದ್ದ ತಮ್ಮ ಅಕ್ಷೋಹಿಣಿ ಸೈನ್ಯದ ಸಿದ್ಧತೆಯನ್ನು ತೋರಿಸಿದನು.
ಟಿಪ್ಪನೀ (ಕ.ಗ.ಪ)
ಶಂಖ, ಉತ್ತರ ವಿರಾಟನ ಮಕ್ಕಳು, ಇತರರು ವಿರಾಟನ ಸೋದರರು.
ಮೂಲ ...{Loading}...
ವರ ವಿರಾಟನು ಶಂಖ ನೃಪನು
ತ್ತರ ಶತದ್ಯುಮ್ನಕನು ಶತಚಂ
ದ್ರರು ಶತಾನೀಕರು ಶತಾಯುಧರೆನಿಪ ನೃಪವರರು
ತುರಗ ಗಜರಥ ಪಾಯದಳ ಸಾ
ಗರದ ಸೌರಂಭದಲಿ ನಿಜ ಸಂ
ವರಣೆಯನು ತೋರಿದರು ತಮ್ಮಕ್ಷೋಹಿಣೀ ದಳವ ॥23॥
೦೨೪ ಜಯಸಮರ ಸಾಮಗ್ರಬಲ ...{Loading}...
ಜಯಸಮರ ಸಾಮಗ್ರಬಲ ಕೈ
ಕೆಯ ನೃಪಾಲರು ತಮ್ಮೊಳಕ್ಷೋ
ಣಿಯನು ತೋರಿದರೈವರಿಭಕಂದರದ ಭೂಪತಿಗೆ
ಭಯವಿಹೀನನು ಪಾಂಡ್ಯ ನೃಪ ಸೃಂ
ಜಯರು ಸೋಮಕ ಭೂಪರಕ್ಷೋ
ಣಿಯನು ತೋರಿದರವನಿ ಕುಸಿದುದು ದಳದ ಪದಹತಿಗೆ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಜಯವನ್ನು ತರುವ ಸಮಗ್ರ ಸೈನ್ಯವು ಕೇಕೆಯ ಅರಸರು, ತಮ್ಮ ಅಕ್ಷೋಹಿಣಿ ಸೈನ್ಯವನ್ನು ಪಾಂಡವರೈವರಿಗೆ, ಆನೆಯ ಮೇಲಿದ್ದ ಧರ್ಮರಾಯನಿಗೆ ತಮ್ಮ ಒಂದು ಅಕ್ಷೋಹಿಣಿ ಸೈನ್ಯವನ್ನು ಕೋರಿದರು ಸೈನ್ಯದ ಕಾಲ್ತುಳಿತಕ್ಕೆ ಭೂಮಿ ಕುಸಿಯಿತು.
ಟಿಪ್ಪನೀ (ಕ.ಗ.ಪ)
ಕೇಕಯ-ವಿರಾಟನ ಮಾವನ ದೇಶದ ರಾಜ
ಪಾಂಡ್ಯ : ದ್ರಾವಿಡ ದೇಶದ ಪ್ರವೀರನೆಂಬ ಅರಸ
ಸೃಂಜಯ : ಶೈಬರಾಜನಮಗ
ಸೋಮಕ : ಚಂದ್ರ ವಂಶದ ಪಾಂಚಾಲರಾಜ. ಸಹದೇವನೆಂಬುವನ ಮಗ
ಮೂಲ ...{Loading}...
ಜಯಸಮರ ಸಾಮಗ್ರಬಲ ಕೈ
ಕೆಯ ನೃಪಾಲರು ತಮ್ಮೊಳಕ್ಷೋ
ಣಿಯನು ತೋರಿದರೈವರಿಭಕಂದರದ ಭೂಪತಿಗೆ
ಭಯವಿಹೀನನು ಪಾಂಡ್ಯ ನೃಪ ಸೃಂ
ಜಯರು ಸೋಮಕ ಭೂಪರಕ್ಷೋ
ಣಿಯನು ತೋರಿದರವನಿ ಕುಸಿದುದು ದಳದ ಪದಹತಿಗೆ ॥24॥
೦೨೫ ಚೈದ್ಯ ದೇಶದ ...{Loading}...
ಚೈದ್ಯ ದೇಶದ ಧೃಷ್ಟಕೇತು ಬ
ಲೋದಧಿಯನಕ್ಷೋಹಿಣಿಯ ಮೊದ
ಲಾದುದೆನೆ ತೋರಿದನು ಕುಂತೀಭೋಜನಕ್ಷೋಣಿ
ಆದವೇಳಕ್ಷೋಣಿ ಬಲ ಬೇ
ರಾದ ನಾಯಕವಾಡಿಯಲಿ ಹಿರಿ
ದಾದುದಾಹವ ಸೇನೆ ಗೋಚರವಲ್ಲ ಗಣನೆಯಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೈದ್ಯ ದೇಶದ ದೃಷ್ಟಕೇತು ತನ್ನ ಅಕ್ಷೋಹಿಣಿ ಸೈನ್ಯ ಸಮುದ್ರವು ಮೊದಲಾಗಿರುವುದನ್ನು ತೋರಿಸಿದನು. ಕುಂತೀಭೋಜನು ಒಂದು ಅಕ್ಷೋಹಿಣಿ ಸೈನ್ಯವನ್ನು ತೋರಿಸಿದನು. ಈ ರೀತಿ ಒಟ್ಟು ಏಳು ಅಕ್ಷೋಹಿಣಿ ಸೈನ್ಯಗಳಾದವು. ಬೇರೆ ಬೇರೆ ಸೇನಾಧಿಪತಿಗಳ ಬಿಡಾರದಲ್ಲಿದ ಹಿರಿದಾದ ಸೇನೆಗಳು ಲೆಕ್ಕಕ್ಕೆ ಕಾಣಿಸುತ್ತಿರಲಿಲ್ಲ.
ಪದಾರ್ಥ (ಕ.ಗ.ಪ)
ಅಕ್ಷೋಹಿಣಿ : 21870 ಆನೆ, 21870 ರಥಗಳು, 65610 ಕುದುರೆಗಳು, 109350 ಕಾಲಾಳುಗಳಿರುವ ಸೈನ್ಯ.
ಟಿಪ್ಪನೀ (ಕ.ಗ.ಪ)
ದೃಷ್ಟಕೇತು : ಚೇದಿದೇಶದ ಶಿಶುಪಾಲನ ಮಗ, ಕೃಷ್ಣ ಶಿಶುಪಾಲನನ್ನು ಕೊಂದ ನಂತರ ಪಾಂಡವರ ಪಕ್ಷವನ್ನು ಸೇರಿದ.
ಕುಂತಿಭೋಜ : ಕುಂತೀ ದೇಶದ ಅರಸು, ಕುಂತಿಯ ಸಾಕು ತಂದೆ.
ಮೂಲ ...{Loading}...
ಚೈದ್ಯ ದೇಶದ ಧೃಷ್ಟಕೇತು ಬ
ಲೋದಧಿಯನಕ್ಷೋಹಿಣಿಯ ಮೊದ
ಲಾದುದೆನೆ ತೋರಿದನು ಕುಂತೀಭೋಜನಕ್ಷೋಣಿ
ಆದವೇಳಕ್ಷೋಣಿ ಬಲ ಬೇ
ರಾದ ನಾಯಕವಾಡಿಯಲಿ ಹಿರಿ
ದಾದುದಾಹವ ಸೇನೆ ಗೋಚರವಲ್ಲ ಗಣನೆಯಲಿ ॥25॥
೦೨೬ ಕ್ಷತ್ರಧರ್ಮನು ನೀಲನು ...{Loading}...
ಕ್ಷತ್ರಧರ್ಮನು ನೀಲನು ಬೃಹ
ತ್ಕ ್ಷತ್ರ ಶೌರಿಯ ತನುಜ ವತ್ಸಜ
ಚಿತ್ರವರ್ಮ ಹಿರಣ್ಯವರ್ಮನು ಚಾರು ಚೇಷ್ಟಕನು
ಶತ್ರುಮಥನನು ವಿಂಧ್ಯಗಿರಿಯ ಸು
ಹೋತ್ರರನ್ವಯದವರು ಪಾಂಡವ
ಮಿತ್ರರೊದಗಿತು ಕೇಳು ಜನಮೇಜಯ ಮಹೀಪಾಲ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಭೂಪಾಲನೇ ಕೇಳು ! ಕ್ಷತ್ರ ಧರ್ಮನೀಲ, ಬೃಹತ್ಕ್ಷತ್ರ ಶೌರಿಯ ಮಗ ವತ್ಸಜ, ಚಿತ್ರವರ್ಮ ಹಿರಣ್ಯವರ್ಮ, ಚಾರು ಚೇಷ್ಟಕ, ಶತ್ರು ಮಥನ ವಿಂಧ್ಯಗಿರಿಯ ಸುಹೋತ್ರ ವಂಶದವರು ಪಾಂಡವ ಮಿತ್ರರು ಯುದ್ಧಕ್ಕೆ ನೆರವಾದರು.
ಟಿಪ್ಪನೀ (ಕ.ಗ.ಪ)
ಹಿರಣ್ಯವರ್ಮ - ದಶಾರ್ಣದ ರಾಜ ಹಿರಣ್ಯವರ್ಮ ಅಥವಾ ಹೇಮವರ್ಮ. ಇವನು ಪಾಂಚಾಲ ರಾಜನು ಮಗಳಾದ ಶಿಖಂಡಿಯನ್ನು ಗಂಡಿನಂತೆಯೇ ಬೆಳೆಸಿದ್ದರಿಂದ ನಿಜವಾಗಿ ಗಂಡುಸೆಂದೇ ಭಾವಿಸಿ ಮದುವೆಯ ಮಾತುಕತೆ ನಡೆಸಿದ. ಒಂದು ಶುಭಮುಹೂರ್ತದಲ್ಲಿ ಮಗಳನ್ನು ವೈಭವದಿಂದ ಶಿಖಂಡಿಗೆ ಮದುವೆ ಮಾಡಿಕೊಟ್ಟ. ಚಿಕ್ಕಂದಿನಿಂದಲೂ ಶಿಖಂಡಿ ಗಂಡುಡುಗೆಯಲ್ಲೇ ಬೆಳೆದಿದ್ದುದರಿಂದ ಯಾರಿಗೂ ಅನುಮಾನ ಉಂಟಾಗಲಿಲ್ಲ. ಇವಳು ಖಂಡಿತ ಗಂಡಾಗುತ್ತಾಳೆಂದು ಈಶ್ವರನೇ ಹೇಳಿದ್ದರಿಂದ ತಂದೆತಾಯಿಗಳೂ ಯೋಚನೆ ಮಾಡಲಿಲ್ಲ. ಮದುವೆಯಾದ ನಂತರ ದಂಪತಿಗಳು ಕಾಂಪಿಲ್ಯನಗರಕ್ಕೆ ಬಂದರು. ಆ ರಾತ್ರಿ ಕನ್ಯೆಗೆ ಇವನು ಗಂಡಸರಲ್ಲ ಎಂಬ ಸತ್ಯಸಂಗತಿ ತಿಳಿಯಿತು. ಇದನ್ನು ತನ್ನ ಅಂತರಂಗದ ಸಖಿಯರಿಗೆ ಮಾತ್ರ ಗುಟ್ಟಾಗಿ ಹೇಳಿದಳೇ ಹೊರತು ಬೇರಾರಿಗೂ ಹೇಳಲಿಲ್ಲ. ಅತ್ತೆಮಾವಂದಿರ ಬಳಿ ದೂರು ಕೂಡ ಹೇಳಲಿಲ್ಲ. ಸುಮ್ಮನಿದ್ದುಬಿಟ್ಟಳು. ಆದರೆ ಸಖಿಯರು ಇಂಥ ಮಹತ್ವದ ವಿಷಯವನ್ನು ತಮ್ಮಲ್ಲೇ ಇಟ್ಟುಕೊಳ್ಳಲಾರದೆ ಹಿರಣ್ಯವರ್ಮನಿಗೂ ತಿಳಿಸಿಬಿಟ್ಟರು. ಹಿರಣ್ಯವರ್ಮ ಕಿಡಿಕಿಡಿಯಾದ. ಒಬ್ಬ ದೂತನನ್ನು ಪಾಂಚಾಲರಾಜನ ಬಳಿಗೆ ಕಳಿಸಿ ನಿಜಸಂಗತಿಯನ್ನು ತಿಳಿಸುವಂತೆ ಕೋರಿದ. ಅವನು ತರುವ ಸುದ್ದಿ ತಾನು ಕೇಳಿದ ಸುದ್ದಿಯೇ ಆಗಿದ್ದರೆ ಪಾಂಚಾಲರಾಜ್ಯದ ಮೇಲೆ ಸೇನಾಸಮೇತನಾಗಿ ಬಂದು ದಾಳಿ ನಡೆಸುವುದಾಗಿ ತಿಳಿಸಿದ. ತನ್ನ ಹೇಳಿಕೆಯಂತೆ ಸೇನಾ ಸಮೇತನಾಗಿ ಕಾಂಪಿಲ್ಯನಗರಕ್ಕೆ ಮುತ್ತಿಗೆಯನ್ನೂ ಹಾಕಿದ. ಆದರೆ ಆ ವೇಳೆಗೆ ಅದೃಷ್ಟ ಚಕ್ರವು ಶಿಖಂಡಿಯ ಕಡೆಗೆ ತಿರುಗಿತ್ತು. ಆತ್ಮಹತ್ಯೆ ಮಾಡಿಕೊಳ್ಳಲೆಂದು ಕಾಡಿಗೆ ಹೋದ ಶಿಖಂಡಿ ಸ್ಥೂಲಕರ್ಣನೆಂಬ ಯಕ್ಷನ ಕೃಪೆಯಿಂದ ನಿಜವಾಗಿ ಪುರುಷತ್ವವನ್ನು ಪಡೆದು ಹಿಂದಿರುಗಿದ್ದ. ಹಿರಣ್ಯವರ್ಮನ ಮಗಳು ಮರುದಿನ ಬೆಳಗ್ಗೆ ತಂದೆಯ ಬಳಿಗೆ ಬಂದು ಶಿಖಂಡಿಯು ನಿಜವಾಗಿ ಗಂಡಸು ಎಂದು ಹೇಳಿದಳು. ಹಿರಣ್ಯವರ್ಮನಿಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ಮಗಳಿಗಿಂತ ಹೆಚ್ಚಿನ ಸಾಕ್ಷಿ ಬೇಕೆ? ಅವಳ ಹೇಳಿಕೆಯನ್ನು ಒಪ್ಪಿಕೊಂಡು ಮಗಳು-ಅಳಿಯನನ್ನು ಹರಸಿ ಸೇನಾಸಮೇತನಾಗಿ ತನ್ನ ಊರಿಗೆ ಮರಳಿದ. ಬೀಸುವ ದೊಣ್ಣೆಯೂ ತಪ್ಪಿತು. ಮುಂದೆ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಶಿಖಂಡಿ ಗಂಡಸಾಗಿಯೇ ಉಳಿಯುವ ಪ್ರಸಂಗಬಂದು ಮಾವನ ಅಸಮಾಧಾನ ಕರಗಿ ಹೋಯಿತು. ಶಿಖಂಡಿಯ ಅದೃಷ್ಟ ಚೆನ್ನಾಗಿತ್ತು. ಆದ್ದರಿಂದ ಮಾವನ ಕಾರ್ಯಾಚರಣೆಯಿಂದ ಪಾರಾದ. ತಂದೆ ತಾಯಿಗಳಿಗೂ ಕೈ ಹಿಡಿದ ಹೆಂಡತಿಗೂ ಸಂತೋಷವನ್ನು ತಂದ. ಹಿರಣ್ಯವರ್ಮನ ಆನಂದಕ್ಕೆ ಪಾರವೇ ಇರಲಿಲ್ಲ.
ಮೂಲ ...{Loading}...
ಕ್ಷತ್ರಧರ್ಮನು ನೀಲನು ಬೃಹ
ತ್ಕ ್ಷತ್ರ ಶೌರಿಯ ತನುಜ ವತ್ಸಜ
ಚಿತ್ರವರ್ಮ ಹಿರಣ್ಯವರ್ಮನು ಚಾರು ಚೇಷ್ಟಕನು
ಶತ್ರುಮಥನನು ವಿಂಧ್ಯಗಿರಿಯ ಸು
ಹೋತ್ರರನ್ವಯದವರು ಪಾಂಡವ
ಮಿತ್ರರೊದಗಿತು ಕೇಳು ಜನಮೇಜಯ ಮಹೀಪಾಲ ॥26॥
೦೨೭ ವೀರ ಪಾರ್ಥನಿಗಿರುಳು ...{Loading}...
ವೀರ ಪಾರ್ಥನಿಗಿರುಳು ಸೋತಂ
ಗಾರವರ್ಮನು ಗಗನಚರ ಪರಿ
ವಾರ ಬಹಳದಿ ಬಂದು ಕಂಡನು ಕಲಿಯುಧಿಷ್ಠಿರನ
ಕೌರವೇಂದ್ರನ ನೋಯಿಸಿದ ಧುರ
ಧೀರ ಸಾಹಸ ಚಿತ್ರಸೇನನು
ದಾರ ಗುಣನಿಧಿ ಬಂದು ಕಂಡನು ಮಿತ್ರ ಭಾವದಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರ ಅರ್ಜುನನಿಗೆ ರಾತ್ರಿ ಸೋತ ಅಂಗಾರವರ್ಮನು ಆಕಾಶದಲ್ಲಿ ತನ್ನೊಡನೆ ಸಂಚರಿಸುವ ಅಧಿಕ ಪರಿವಾರವನ್ನು ಕೂಡಿಕೊಂಡು ಬಂದನು. ವೀರ ಯುಧಿಷ್ಠಿರನನ್ನು ಕಂಡನು. ಕೌರವ ರಾಜನಾದ ದುರ್ಯೋಧನನನ್ನು ನೋಯಿಸಿದ ಯುದ್ಧವೀರನೂ, ಸಾಹಸಿಯೂ ಆದ ಚಿತ್ರಸೇನನು ಉದಾರ ಗುಣವಂತನು ಸ್ನೇಹ ಭಾವದಿಂದ ಬಂದು ಯುಧಿಷ್ಠಿರನನ್ನು ಕಂಡನು.
ಟಿಪ್ಪನೀ (ಕ.ಗ.ಪ)
ಅಂಗಾರವರ್ಮ - ಪಾಂಡವರು ತಮ್ಮ ಅಭ್ಯುದಯಕ್ಕೆ ಧೌಮ್ಯರನ್ನು ಕುಲಪುರೋಹಿತರನ್ನಾಗಿ ಮಾಡಿಕೊಡುವಂತೆ ಸಲಹೆಯಿತ್ತ ಕೀರ್ತಿ ಅಂಗಾರಪರ್ಣನಿಗೆ ಸಲ್ಲುತ್ತದೆ. ಚಿತ್ರರಥನೆಂದೂ ಇವನನ್ನು ಕರೆಯುತ್ತಾರೆ. ಇವನ ತೋಟಕ್ಕೂ ಇದೇ ಹೆಸರಿದೆ. ಅಂಗಾರಪರ್ಣ ಒಬ್ಬ ಗಂಧರ್ವರಾಜ. ಕಶ್ಯಪ ಪ್ರಜಾಪತಿ ಹಾಗೂ ಮುನಿ ಈತನ ತಂದೆ-ತಾಯಿಗಳು ಆದಿಪರ್ವದ ಅರವತ್ತೈದನೆಯ ಅಧ್ಯಾಯದಲ್ಲಿ ಈತನ ಬಗೆಗೆ ವಿವರಗಳಿವೆ.
ಮೂಲ ...{Loading}...
ವೀರ ಪಾರ್ಥನಿಗಿರುಳು ಸೋತಂ
ಗಾರವರ್ಮನು ಗಗನಚರ ಪರಿ
ವಾರ ಬಹಳದಿ ಬಂದು ಕಂಡನು ಕಲಿಯುಧಿಷ್ಠಿರನ
ಕೌರವೇಂದ್ರನ ನೋಯಿಸಿದ ಧುರ
ಧೀರ ಸಾಹಸ ಚಿತ್ರಸೇನನು
ದಾರ ಗುಣನಿಧಿ ಬಂದು ಕಂಡನು ಮಿತ್ರ ಭಾವದಲಿ ॥27॥
೦೨೮ ಕಾರಿರುಳ ಪಟ್ಟಣಕೆ ...{Loading}...
ಕಾರಿರುಳ ಪಟ್ಟಣಕೆ ಚಂದ್ರನ
ತೋರಣವ ಬಿಗಿದಂತೆ ದಾಡೆಗ
ಳೋರಣದ ಹೊಳಹುಗಳ ಹೊಗರಿಡುವೊಡಲ ಕಪ್ಪುಗಳ
ಭಾರಿ ದೇಹನು ಭಟಭಯಂಕರ
ತೋರಹತ್ತನು ದೈತ್ಯಕುಲ ಪರಿ
ವಾರ ಬಹಳದಿ ಬಂದು ಕಂಡನು ಕಲಿಘಟೋತ್ಕಚನು ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಗ್ಗತ್ತಲೆ ಕವಿದ ರಾತ್ರಿಯ ಪಟ್ಟಣಕ್ಕೆ ಚಂದ್ರನ ತೋರಣವನ್ನು ಕಟ್ಟಿದಂತೆ ಒಪ್ಪಾದ ಹಲ್ಲುಗಳ ಹೊಳಹುಗಳು ಬೆಳಕು ಬೀರುವಂತೆ ಕಪ್ಪು ಮೈಯ ಭಾರಿಯ ದೇಹದ ಭಯಂಕರ ವೀರನೂ ಆದ ಕಡುಗಲಿ ಘಟೋತ್ಕಚನು ತನ್ನ ದೈತ್ಯ ಕುಲದ ಅಧಿಕ ಪರಿವಾರವನ್ನು ಕೂಡಿಕೊಂಡು ಧರ್ಮರಾಜನನ್ನು ಕಂಡನು.
ಪದಾರ್ಥ (ಕ.ಗ.ಪ)
ಓರಣ-ಒಪ್ಪ, ತೋರಹತ್ತ-ಕಡುಗಲಿ, ಕಾರಿರುಳು-ಕಗ್ಗತ್ತಲೆಯರಾತ್ರಿ.
ಟಿಪ್ಪನೀ (ಕ.ಗ.ಪ)
ಘಟೋತ್ಕಚ: ಭೀಮನಿಂದ ಹಿಡಿಂಬೆಯಲ್ಲಿ ಹುಟ್ಟಿದವನು
ಮೂಲ ...{Loading}...
ಕಾರಿರುಳ ಪಟ್ಟಣಕೆ ಚಂದ್ರನ
ತೋರಣವ ಬಿಗಿದಂತೆ ದಾಡೆಗ
ಳೋರಣದ ಹೊಳಹುಗಳ ಹೊಗರಿಡುವೊಡಲ ಕಪ್ಪುಗಳ
ಭಾರಿ ದೇಹನು ಭಟಭಯಂಕರ
ತೋರಹತ್ತನು ದೈತ್ಯಕುಲ ಪರಿ
ವಾರ ಬಹಳದಿ ಬಂದು ಕಂಡನು ಕಲಿಘಟೋತ್ಕಚನು ॥28॥
೦೨೯ ಬಲದ ದೆಖ್ಖಾಳವನು ...{Loading}...
ಬಲದ ದೆಖ್ಖಾಳವನು ನೋಡಿದ
ರೊಲವಿನಲಿ ನಿಜಸೇನೆ ಸಹಿತತಿ
ಬಲರುಪಪ್ಲವ್ಯಕ್ಕೆ ಬಂದರು ಹೊಕ್ಕರಾಲಯವ
ಬಳಿಕ ಸುಮುಹೂರ್ತದಲಿ ಹೊರಗುಡಿ
ಗಳನು ಹಾಯ್ಕಿದರಂದು ಯದುಕುಲ
ತಿಲಕ ಗದುಗಿನ ವೀರ ನಾರಾಯಣನ ನೇಮದಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದ ದೃಶ್ಯವನ್ನು ಹಿಗ್ಗಿನಿಂದ ಪಾಂಡವರು ನೋಡಿದರು. ತಮ್ಮ ಸೈನ್ಯದೊಡನೆ ಅತಿ ಬಲಿಷ್ಠರಾದ ಪಾಂಡವರು ಉಪಪ್ಲಾವ್ಯನಗರಕ್ಕೆ ಬಂದು ತಮ್ಮ ಬಿಡಾರಗಳನ್ನು ಪ್ರವೇಶಿಸಿದರು. ಮುಂದೆ ಒಳ್ಳೆಯ ಮುಹೂರ್ತದಲ್ಲಿ ಹೊರಗೆ ಬಿಡಾರಗಳನ್ನು ಯದುಕುಲಶ್ರೇಷ್ಠನಾದ ಗದುಗಿನ ವೀರನಾರಾಯಣ ಸ್ವರೂಪಿ ಕೃಷ್ಣನ ಆದೇಶದಂತೆ ಹಾಕಿದರು.
ಪದಾರ್ಥ (ಕ.ಗ.ಪ)
ದೆಖ್ಖಾಳ-ವೈಭವ, ಗುಡಿ-ಬಿಡಾರ
ಮೂಲ ...{Loading}...
ಬಲದ ದೆಖ್ಖಾಳವನು ನೋಡಿದ
ರೊಲವಿನಲಿ ನಿಜಸೇನೆ ಸಹಿತತಿ
ಬಲರುಪಪ್ಲವ್ಯಕ್ಕೆ ಬಂದರು ಹೊಕ್ಕರಾಲಯವ
ಬಳಿಕ ಸುಮುಹೂರ್ತದಲಿ ಹೊರಗುಡಿ
ಗಳನು ಹಾಯ್ಕಿದರಂದು ಯದುಕುಲ
ತಿಲಕ ಗದುಗಿನ ವೀರ ನಾರಾಯಣನ ನೇಮದಲಿ ॥29॥
೦೩೦ ಪರಿಮಿತಕೆ ತನ್ನಾಪ್ತ ...{Loading}...
ಪರಿಮಿತಕೆ ತನ್ನಾಪ್ತ ಸಚಿವರ
ಕರೆಸಿಕೊಂಡನು ಕೃಷ್ಣರಾಯಂ
ಗರಸ ಬಿನ್ನಹ ಮಾಡಿದನು ನೃಪಕಾರ್ಯ ಸಂಗತಿಯ
ಧುರಕೆ ಸೇನಾನಾಥರಿಲ್ಲದೆ
ನೆರೆದ ಬಲ ಸಾಲಿರುಹೆ ಮುರಿದೊಡೆ
ಹರೆವವೊಲು ಹುರುಳಿಲ್ಲ ದಳಪತಿ ಯಾವನಹನೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನು ತನ್ನ ಆಪ್ತ ಸಚಿವರನ್ನು ಆಪ್ತ ಸಮಾಲೋಚನೆಗೆ ಕರೆಸಿಕೊಂಡನು. ಅರಸನು ಕೃಷ್ಣನಿಗೆ ರಾಜ ಕಾರ್ಯದ ಸಂಗತಿಯನ್ನು ವಿಜ್ಞಾಪಿಸಿದನು. ಯುದ್ಧಕ್ಕೆ ಸೇನಾಧಿಪತಿಯು ಇಲ್ಲದಿದ್ದರೆ, ಸೇರಿರುವ ಸೈನ್ಯವು ಸಾಲುಗಟ್ಟಿನಲ್ಲಿರುವ ಇರುವೆಯು ಚದುರಿದರೆ ಚೆಲ್ಲಾಪಿಲ್ಲಿಯಾಗಿ ಹರಡಿಕೊಳ್ಳುವಂತೆ ಸತ್ವವಿಲ್ಲದಂತೆ ಆಗುವುದು. ನಮ್ಮ ಸೇನೆಗೆ ಸೇನಾಪತಿ ಯಾರು ? ಎಂದು ಕೇಳಿದನು.
ಪದಾರ್ಥ (ಕ.ಗ.ಪ)
ಧುರ-ಯುದ್ಧ, ಹುರುಳು-ಸತ್ವ, ಪರಿಮಿತ-ಆಪ್ತ ವಲಯ
ಮೂಲ ...{Loading}...
ಪರಿಮಿತಕೆ ತನ್ನಾಪ್ತ ಸಚಿವರ
ಕರೆಸಿಕೊಂಡನು ಕೃಷ್ಣರಾಯಂ
ಗರಸ ಬಿನ್ನಹ ಮಾಡಿದನು ನೃಪಕಾರ್ಯ ಸಂಗತಿಯ
ಧುರಕೆ ಸೇನಾನಾಥರಿಲ್ಲದೆ
ನೆರೆದ ಬಲ ಸಾಲಿರುಹೆ ಮುರಿದೊಡೆ
ಹರೆವವೊಲು ಹುರುಳಿಲ್ಲ ದಳಪತಿ ಯಾವನಹನೆಂದ ॥30॥
೦೩೧ ದ್ರುಪದನಾಗಲಿಯೆನ್ದು ...{Loading}...
ದ್ರುಪದನಾಗಲಿಯೆಂದು ಕೆಲಬರು
ವಿಪುಳ ಬಲದ ವಿರಾಟನಾಗಲಿ
ನೃಪ ಶಿಖಂಡಿಯೆಯೆಂದು ಕೆಲಬರು ಭೀಮಸುತನೆಂದು
ಅಪರಿಮಿತ ಮತವಾಗೆ ಸಮರ
ವ್ಯಪಗತಾರಿ ಸುರೇಂದ್ರಸುತನೀ
ದ್ರುಪದಸುತ ಸೇನಾಧಿಪತಿಯಹುದೆಮ್ಮ ಮತವೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರು ದ್ರುಪದನಾಗಲಿ ಎಂದರು. ಕೆಲವರು ತುಂಬು ಬಲದ ವಿರಾಟನಿರಲಿ ಎಂದರು. ಶಿಖಂಡಿ ಎಂದು ಕೆಲವರೂ ಮತ್ತು ಕೆಲವರು ಭೀಮನ ಮಗ ಘಟೋತ್ಕಚನೆಂದೂ ಮಿತಿಯಿಲ್ಲದಂತೆ ಅಭಿಪ್ರಾಯವನ್ನು ಸೂಚಿಸಲು ಶತ್ರುಗಳನ್ನು ಹಿಮ್ಮೆಟ್ಟಿಸುವ ಅರ್ಜುನನು ದ್ರುಪದನ ಮಗ ಧೃಷ್ಟದ್ಯುಮ್ನನು ನಮ್ಮ ಸೇನಾಧಿಪತಿಯಾಗಲಿ. ಇದು ನಮ್ಮ ಅಭಿಪ್ರಾಯವೆಂದನು.
ಪದಾರ್ಥ (ಕ.ಗ.ಪ)
ವ್ಯಪಗತ-ಶತ್ರುಗಳನ್ನು ಹಿಮ್ಮೆಟ್ಟಿಸುವವನು.
ಮೂಲ ...{Loading}...
ದ್ರುಪದನಾಗಲಿಯೆಂದು ಕೆಲಬರು
ವಿಪುಳ ಬಲದ ವಿರಾಟನಾಗಲಿ
ನೃಪ ಶಿಖಂಡಿಯೆಯೆಂದು ಕೆಲಬರು ಭೀಮಸುತನೆಂದು
ಅಪರಿಮಿತ ಮತವಾಗೆ ಸಮರ
ವ್ಯಪಗತಾರಿ ಸುರೇಂದ್ರಸುತನೀ
ದ್ರುಪದಸುತ ಸೇನಾಧಿಪತಿಯಹುದೆಮ್ಮ ಮತವೆಂದ ॥31॥
೦೩೨ ಬಿಮ್ಬವನು ಬೇರಿರಿಸಿ ...{Loading}...
ಬಿಂಬವನು ಬೇರಿರಿಸಿ ಬಹುಮತ
ವೆಂಬ ಬಿಸಿಲಲಿ ರಾಜ ನಯವೆಂ
ದೆಂಬ ನೈದಿಲು ನಲವುಗೆಟ್ಟುದು ಕೃಷ್ಣ ಹೇಳೆನಲು
ಎಂಬುದೇನಿನ್ನಿಲ್ಲಿ ಸುಭಟ ಕ
ದಂಬದಧಿಪತಿತನಕೆ ಫಲುಗುಣ
ನೆಂಬ ಮಾತೆಮ್ಮಭಿಮತವು ಭೂಪಾಲ ಕೇಳ್ ಎಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂಲ ವಿಷಯವನ್ನು ಬೇರೆ ಇಟ್ಟು ಬಹುಮತವೆಂಬ ಬಿಸಿಲಿನಲ್ಲಿ ರಾಜನೀತಿ ಎಂಬ ಕಮಲವು ಬಾಡಿಹೋಗಿದೆ. ಕೃಷ್ಣ ಹೇಳು ಎನ್ನಲು, ಇಲ್ಲಿ ಹೇಳುವುದು ಏನಿದೆ ? ಸೈನಿಕರ ಸಮೂಹಕ್ಕೆ ಅಧಿಪತಿಯಾಗಲು ಅರ್ಜುನನ ಮಾತಿಗೆ ನನ್ನ ಒಪ್ಪಿಗೆಯೂ ಇದೆ. ಮಹಾರಾಜ ಕೇಳು ಎಂದನು.
ಪದಾರ್ಥ (ಕ.ಗ.ಪ)
ನೈದಿಲ-ಕಮಲ, ಕದಂಬ-ಸೈನ್ಯ
ಮೂಲ ...{Loading}...
ಬಿಂಬವನು ಬೇರಿರಿಸಿ ಬಹುಮತ
ವೆಂಬ ಬಿಸಿಲಲಿ ರಾಜ ನಯವೆಂ
ದೆಂಬ ನೈದಿಲು ನಲವುಗೆಟ್ಟುದು ಕೃಷ್ಣ ಹೇಳೆನಲು
ಎಂಬುದೇನಿನ್ನಿಲ್ಲಿ ಸುಭಟ ಕ
ದಂಬದಧಿಪತಿತನಕೆ ಫಲುಗುಣ
ನೆಂಬ ಮಾತೆಮ್ಮಭಿಮತವು ಭೂಪಾಲ ಕೇಳೆಂದ ॥32॥
೦೩೩ ಕರೆಸಿ ಧೃಷ್ಟದ್ಯುಮ್ನನನು ...{Loading}...
ಕರೆಸಿ ಧೃಷ್ಟದ್ಯುಮ್ನನನು ಸಂ
ಗರದ ಸೇನಾಪತ್ಯವನು ವಿ
ಸ್ತರಿಸಲಳವಡಿಸಿದರು ಸುಮುಹೂರ್ತದ ಸರಾಗದಲಿ
ಪುರದೊಳಗೆ ಗುಡಿ ನೆಗಹಿದವು ಭೂ
ಸುರರ ವಿಮಳಾಮಾ್ನಯ ರವ ವಿ
ಸ್ತರಿಸಲಳವಡಿಸಿದರು ಮಂಗಳ ವಿಹಿತ ವಸ್ತುಗಳ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃಷ್ಟದ್ಯುಮ್ನನನ್ನು ಕರೆಸಿ ಪ್ರೀತಿಯಿಂದ ಯುದ್ಧದ ಸೇನಾಧಿಪತ್ಯವನ್ನು ಕಟ್ಟಲು ಸುಮುಹೂರ್ತದಲ್ಲಿ ಏರ್ಪಾಡು ಮಾಡಿದರು. ಊರಿನಲ್ಲಿ ಧ್ವಜಗಳು ಹಾರಾಡಿದವು. ಬ್ರಾಹ್ಮಣರ ಶುದ್ಧ ವೇದ ಘೋಷ ಮಂತ್ರಗಳು ಹರಡುತ್ತಿದ್ದಂತೆ ಮಂಗಳ ಯೋಗ್ಯವಾದ ವಸ್ತುಗಳನ್ನು ಹೊಂದಿಸಿದರು.
ಪದಾರ್ಥ (ಕ.ಗ.ಪ)
ಸರಾಗ-ಪ್ರೀತಿ, ಗುಡಿ-ಬಾವುಟ, ಆಮ್ನಾಯ-ವೇದ, ವಿಹಿತ-ಯೋಗ್ಯ
ಮೂಲ ...{Loading}...
ಕರೆಸಿ ಧೃಷ್ಟದ್ಯುಮ್ನನನು ಸಂ
ಗರದ ಸೇನಾಪತ್ಯವನು ವಿ
ಸ್ತರಿಸಲಳವಡಿಸಿದರು ಸುಮುಹೂರ್ತದ ಸರಾಗದಲಿ
ಪುರದೊಳಗೆ ಗುಡಿ ನೆಗಹಿದವು ಭೂ
ಸುರರ ವಿಮಳಾಮಾ್ನಯ ರವ ವಿ
ಸ್ತರಿಸಲಳವಡಿಸಿದರು ಮಂಗಳ ವಿಹಿತ ವಸ್ತುಗಳ ॥33॥
೦೩೪ ಸೂಳವಿಸಿದವು ಕಟಕದಲಿ ...{Loading}...
ಸೂಳವಿಸಿದವು ಕಟಕದಲಿ ನಿ
ಸ್ಸಾಳ ಕೋಟಿಗಳಳ್ಳಿರಿಯೆ ಹೆ
ಗ್ಗಾಳೆಗಳು ಸಾರಿದವು ಭಟರುಬ್ಬಟೆಯ ಬಿರುದುಗಳ
ಲೋಲನಯನೆಯರಾರತಿಯ ಸಮ
ಸಾಲು ಸಂದಣಿಸಿದವು ವರ ಪಾಂ
ಚಾಲತನಯಂಗೆಸಗಿದರು ಮೂರ್ಧಾಭಿಷೇಚನವ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಂಡಿನಲ್ಲಿ ನಗಾರಿಯು ಬಾರಿಸಿದವು. ಅವು ಬೊಬ್ಬಿರಿಯಲು, ದೊಡ್ಡ ಕಹಳೆಗಳು ಕೂಗಿದವು. ವೀರರ ಸಾಹಸದ ಬಿರುದುಗಳನ್ನು ಘೋಷಿಸಿದರು. ಹೆಂಗಸರು ಹಿಡಿದ ಆರತಿಯ ಸಾಲುಗಳು ಗುಂಪು ಕೂಡಿತು. ಪಾಂಚಾಲ ರಾಜನ ಮಗನಾದ ಧೃಷ್ಟದ್ಯುಮ್ನನಿಗೆ ಸೇನಾಪತ್ಯಾಭಿಷೇಕವನ್ನು ಮಾಡಿದರು.
ಪದಾರ್ಥ (ಕ.ಗ.ಪ)
ಸೂಳವಿಸು-ಬಾರಿಸು, ಕಟಕ-ಸೈನ್ಯ/ದಂಡು, ನಿಸ್ಸಾಳ-ನಗಾರಿ, ಅಳ್ಳಿರಿ-ತುಂಬು, ಮೂರ್ಧಾಭಿಷೇಚನ-ತಲೆಯ ಸ್ನಾನ
ಮೂಲ ...{Loading}...
ಸೂಳವಿಸಿದವು ಕಟಕದಲಿ ನಿ
ಸ್ಸಾಳ ಕೋಟಿಗಳಳ್ಳಿರಿಯೆ ಹೆ
ಗ್ಗಾಳೆಗಳು ಸಾರಿದವು ಭಟರುಬ್ಬಟೆಯ ಬಿರುದುಗಳ
ಲೋಲನಯನೆಯರಾರತಿಯ ಸಮ
ಸಾಲು ಸಂದಣಿಸಿದವು ವರ ಪಾಂ
ಚಾಲತನಯಂಗೆಸಗಿದರು ಮೂರ್ಧಾಭಿಷೇಚನವ ॥34॥
೦೩೫ ದರುಶನವನಿತ್ತಖಿಳ ಧರಣೀ ...{Loading}...
ದರುಶನವನಿತ್ತಖಿಳ ಧರಣೀ
ಶ್ವರರು ಕಂಡರು ಸೂತ ಮಾಗಧ
ವರ ವಿಬುಧ ವೈತಾಳಿಕರ ಕಾರ್ಪಣ್ಯವಡಗಿದವು
ಧುರಕೆ ಧೃಷ್ಟದ್ಯುಮ್ನನಾಜ್ಞೆಯೊ
ಳಿರವು ನಿಮಗೆಂದೈದೆ ಭೂಪಾ
ಲರ ನಿವಾಸಂಗಳಲಿ ಹೊಯಿದರು ಚರರು ಡಂಗುರವ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸ್ತ ದೊರೆಗಳು ಬಂದು ದರ್ಶನವನ್ನಿತ್ತರು. ಸೂತರ, ಹೊಗಳುಭಟ್ಟರ, ಸ್ತುತಿಪಾಠಕರ ಕಷ್ಟ ಕಾರ್ಪಣ್ಯಗಳು ನಿವಾರಣೆಯಾದವು. ಧೃಷ್ಟದ್ಯುಮ್ನನ ಆಜ್ಞೆಯಲ್ಲಿ ಯುದ್ಧಕ್ಕೆ ನಡೆಯಬೇಕೆಂದು ರಾಜರ ಬಿಡಾರಗಳಲ್ಲಿ ಸೇವಕರು ಡಂಗುರ ಸಾರಿದರು.
ಪದಾರ್ಥ (ಕ.ಗ.ಪ)
ಮಾಗಧ-ಹೊಗಳುಭಟ್ಟ, ವಿಬುಧ-ಪಂಡಿತ, ವೈತಾಳಿಕ-ಸ್ತುತಿಪಾಠಕ
ಮೂಲ ...{Loading}...
ದರುಶನವನಿತ್ತಖಿಳ ಧರಣೀ
ಶ್ವರರು ಕಂಡರು ಸೂತ ಮಾಗಧ
ವರ ವಿಬುಧ ವೈತಾಳಿಕರ ಕಾರ್ಪಣ್ಯವಡಗಿದವು
ಧುರಕೆ ಧೃಷ್ಟದ್ಯುಮ್ನನಾಜ್ಞೆಯೊ
ಳಿರವು ನಿಮಗೆಂದೈದೆ ಭೂಪಾ
ಲರ ನಿವಾಸಂಗಳಲಿ ಹೊಯಿದರು ಚರರು ಡಂಗುರವ ॥35॥
೦೩೬ ರೂಢಿಸಿದ ಸುಮುಹೂರ್ತದಲಿ ...{Loading}...
ರೂಢಿಸಿದ ಸುಮುಹೂರ್ತದಲಿ ಹೊರ
ಬೀಡಬಿಟ್ಟರು ರಣಕೆ ಪಯಣವ
ಮಾಡಲೋಸುಗ ಸಾರಿದರು ನೃಪ ಪಾಳಯಂಗಳಲಿ
ಕೂಡಿತಾಹವ ಸೈನ್ಯ ಸಾಗರ
ವೀಡಿರಿದು ನಡೆಗೊಂಡುದಭ್ರದ
ರೂಢಿಗಳ ಜೋಡಿಗಳ ಜೋಕೆಯ ಘನ ತರಂಗದಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಸಿದ್ಧಿಯಾದ ಮುಹೂರ್ತದಲ್ಲಿ ಯುದ್ಧಕ್ಕೆ ಹೊರಡಲು ಊರ ಹೊರಗೆ ಬೀಡು ಬಿಟ್ಟರು, ಯುದ್ಧಕ್ಕೆ ಪ್ರಯಾಣ ಮಾಡಬೇಕೆಂದು ರಾಜರ ಪಾಳಯಗಳಲ್ಲಿ ಸಾರಿದರು. ಯುದ್ಧದ ಸೈನ್ಯ ಸಾಗರವು ಕೂಡಿತು. ಕಿಕ್ಕಿರಿದು ನಡೆಯಿತು. ಮೋಡದ ಸಾಲುಗಳು ಆಕಾಶದಲ್ಲಿ ಅಲೆ ಅಲೆಯಾಗಿ ಚಲಿಸುವಂತೆ ದಂಡು ಸಾಲಾಗಿ ನಡೆಯಿತು.
ಪದಾರ್ಥ (ಕ.ಗ.ಪ)
ರೂಢಿಸಿದ-ಹೆಸರಾಂತ, ಆಹವ-ಯುದ್ಧ, ಅಭ್ರ-ಮುಗಿಲು
ಮೂಲ ...{Loading}...
ರೂಢಿಸಿದ ಸುಮುಹೂರ್ತದಲಿ ಹೊರ
ಬೀಡಬಿಟ್ಟರು ರಣಕೆ ಪಯಣವ
ಮಾಡಲೋಸುಗ ಸಾರಿದರು ನೃಪ ಪಾಳಯಂಗಳಲಿ
ಕೂಡಿತಾಹವ ಸೈನ್ಯ ಸಾಗರ
ವೀಡಿರಿದು ನಡೆಗೊಂಡುದಭ್ರದ
ರೂಢಿಗಳ ಜೋಡಿಗಳ ಜೋಕೆಯ ಘನ ತರಂಗದಲಿ ॥36॥
೦೩೭ ಹರಿಯ ಚರಣಕ್ಕೆರಗಿ ...{Loading}...
ಹರಿಯ ಚರಣಕ್ಕೆರಗಿ ವಿಜಯದ
ಹರಕೆಗಳ ಕೈಕೊಂಡು ರಥವನು
ತುರಗ ಗಜವನು ಗಡಣ ಮಿಗಲಡರಿದರು ಪಾಂಡವರು
ಗರುಡ ಸಿಂಧವ ನೆಗಹಿ ದಾರುಕ
ನಿರದೆ ರಥವನು ಸುಳಿಸೆ ಘನ ಮೋ
ಹರದ ಮಧ್ಯದೊಳಸುರಧೂಳೀಪಟನು ಹೊರವಂಟ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಪಾದಗಳಿಗೆ ನಮಸ್ಕರಿಸಿ ವಿಜಯದ ಹರಕೆಯನ್ನು ಪಡೆದು ಪಾಂಡವರು ಕುದುರೆ, ಆನೆಗಳನ್ನು ಕೂಡಿಕೊಂಡು ರಥವನ್ನೇರಿದರು. ಗರುಡಧ್ವಜವನ್ನು ಏರಿಸಿ ದಾರುಕನು ರಥವನು ತರಲು, ದೈತ್ಯರನ್ನು ಧೂಳೀಪಟ ಮಾಡುವ ಕೃಷ್ಣನು ಬಹಳ ಸೈನ್ಯದ ಮಧ್ಯದಲ್ಲಿ ಹೊರಟನು.
ಪದಾರ್ಥ (ಕ.ಗ.ಪ)
ಸಿಂಧ-ಬಾವುಟ, ಮೋಹರ-ದಂಡು, ದಾರುಕ-ಕೃಷ್ಣನ ಸಾರಥಿ
ಮೂಲ ...{Loading}...
ಹರಿಯ ಚರಣಕ್ಕೆರಗಿ ವಿಜಯದ
ಹರಕೆಗಳ ಕೈಕೊಂಡು ರಥವನು
ತುರಗ ಗಜವನು ಗಡಣ ಮಿಗಲಡರಿದರು ಪಾಂಡವರು
ಗರುಡ ಸಿಂಧವ ನೆಗಹಿ ದಾರುಕ
ನಿರದೆ ರಥವನು ಸುಳಿಸೆ ಘನ ಮೋ
ಹರದ ಮಧ್ಯದೊಳಸುರಧೂಳೀಪಟನು ಹೊರವಂಟ ॥37॥
೦೩೮ ಮುನ್ದೆ ಹರಿರಥ ...{Loading}...
ಮುಂದೆ ಹರಿರಥ ನಡೆಯಲಾತನ
ಹಿಂದೆ ಧರ್ಮಜನೆಡ ಬಲದಲಾ
ನಂದನರು ಕೆಲಬಲದಲಾ ಭೀಮಾರ್ಜುನಾದಿಗಳು
ಸಂದಣಿಸಿದುದು ಸೇನೆ ಸೈರಿಸಿ
ನಿಂದನಾದೊಡೆ ಫಣಿಗೆ ಸರಿಯಿ
ಲ್ಲೆಂದು ಸುರಕುಲವುಲಿಯೆ ನಡೆದುದು ಪಾಂಡುಸುತಸೇನೆ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ಕೃಷ್ಣನ ರಥವು ನಡೆಯಲು ಅವನ ಹಿಂದೆ ಧರ್ಮರಾಜನು, ಎಡ-ಬಲಗಳಲ್ಲಿ ಮಕ್ಕಳು, ಪಕ್ಕದಲ್ಲಿ ಭೀಮ ಅರ್ಜುನ ಮೊದಲಾದವರು ನಡೆದರು. ಸೇನೆಯು ಒಂದುಗೂಡಿತು, ಇದೆಲ್ಲವನ್ನೂ ಸಹಿಸಿಕೊಂಡು ನಿಂತ ಶೇಷನಿಗೆ ಯಾರೂ ಸಮಾನರಿಲ್ಲ ಎಂದು ದೇವಕುಲವು ಹೇಳುತ್ತಿರಲು ಪಾಂಡವಸೈನ್ಯವು ಹೊರಟಿತು.
ಪದಾರ್ಥ (ಕ.ಗ.ಪ)
ಸಂದಣಿಸಿದುದು-ಸೇರಿದವು, ವುಲಿ-ಹೇಳು/ಕೂಗು, ಫಣಿ-ಸರ್ಪ(ಇಲ್ಲಿ ಆದಿಶೇಷ)
ಮೂಲ ...{Loading}...
ಮುಂದೆ ಹರಿರಥ ನಡೆಯಲಾತನ
ಹಿಂದೆ ಧರ್ಮಜನೆಡ ಬಲದಲಾ
ನಂದನರು ಕೆಲಬಲದಲಾ ಭೀಮಾರ್ಜುನಾದಿಗಳು
ಸಂದಣಿಸಿದುದು ಸೇನೆ ಸೈರಿಸಿ
ನಿಂದನಾದೊಡೆ ಫಣಿಗೆ ಸರಿಯಿ
ಲ್ಲೆಂದು ಸುರಕುಲವುಲಿಯೆ ನಡೆದುದು ಪಾಂಡುಸುತಸೇನೆ ॥38॥
೦೩೯ ಸಿಡಿಲು ಸಿಗುರೆದ್ದನ್ತೆ ...{Loading}...
ಸಿಡಿಲು ಸಿಗುರೆದ್ದಂತೆ ಭಾರಿಸಿ
ಜಡಿವ ಕೈದುಗಳುಗಿದವಬುಧಿಯ
ಕೆಡುದೆರೆಯ ಲಹರಿಯವೊಲುರವಣಿಸಿದವು ಬೊಬ್ಬೆಗಳು
ನಡುಗಿತವನಿಯಜಾಂಡ ಖರ್ಪರ
ವೊಡೆಯಲವನಿಯ ಲಗ್ಗೆ ಸೂಳಿನ
ಹೊಡೆಗುಳಿನೊಳಬ್ಬರಿಸಿದವು ನಿಸ್ಸಾಳ ಕೋಟಿಗಳು ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ಸಾಹದಿಂದ ಝಳುಪಿಸಿದ ಖಡ್ಗಗಳಿಂದ ಹಾರಿದ ಕಿಡಿಗಳು ಸಿಡಿಲಿನ ಚೆಕ್ಕೆಗಳಂತೆ ಹಾರಾಡಿದವು. ರಣವಾದ್ಯಗಳ ಆರ್ಭಟವು ಪ್ರಳಯಕಾಲ ಸಮುದ್ರದಂತೆ ಭೋರ್ಗೆರೆಯಿತು. ಕಹಳೆ-ಕೊಂಬುಗಳು ಏಕಪ್ರಕಾರವಾಗಿ ಆರ್ಭಟಿಸಲು, ಸೈನ್ಯವು ಭೂಮಿಯನ್ನು ವ್ಯಾಪಿಸಲು ನೆಲ ನಡುಗಿತು. ಬ್ರಹ್ಮಾಂಡದ ಕೊಪ್ಪರಿಗೆಯು ಒಡೆದಂತಾಯಿತು.
ಪದಾರ್ಥ (ಕ.ಗ.ಪ)
ಸಿಗುರು-ಚೆಕ್ಕೆ, ಅಜಾಂಡ-ಬ್ರಹ್ಮಾಂಡ, ಖರ್ಪರ-ಕೊಪ್ಪರಿಗೆ
ಮೂಲ ...{Loading}...
ಸಿಡಿಲು ಸಿಗುರೆದ್ದಂತೆ ಭಾರಿಸಿ
ಜಡಿವ ಕೈದುಗಳುಗಿದವಬುಧಿಯ
ಕೆಡುದೆರೆಯ ಲಹರಿಯವೊಲುರವಣಿಸಿದವು ಬೊಬ್ಬೆಗಳು
ನಡುಗಿತವನಿಯಜಾಂಡ ಖರ್ಪರ
ವೊಡೆಯಲವನಿಯ ಲಗ್ಗೆ ಸೂಳಿನ
ಹೊಡೆಗುಳಿನೊಳಬ್ಬರಿಸಿದವು ನಿಸ್ಸಾಳ ಕೋಟಿಗಳು ॥39॥
೦೪೦ ಪ್ರಳಯ ಜಲನಿಧಿಯನ್ತೆ ...{Loading}...
ಪ್ರಳಯ ಜಲನಿಧಿಯಂತೆ ದಳ ಬರ
ಲಿಳೆ ಕುಸಿಯೆ ಕಮಠಂಗೆ ಮೇಲುಸು
ರುಲಿಯೆ ದಿಗುದಂತಿಗಳು ಮೊಣಕಾಲೂರಿ ಮನಗುಂದೆ
ಬಲಮಹಾಂಬುಧಿ ಬಲುಗಡಲ ಮು
ಕ್ಕುಳಿಸಿ ನಡೆದುದು ಕಡು ಭರದ ಕಾ
ಲ್ದುಳಿಯ ಕದನಾಳಾಪಕರ ಕಾಹುರತೆ ಹೊಸತಾಯ್ತು ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಳಯಕಾಲದ ಸಮುದ್ರದಂತೆ ಸೈನ್ಯವು ಬರಲು ಭೂಮಿಯು ಕುಸಿಯಿತು. ಕೂರ್ಮನಿಗೆ ಮೇಲಿಂದ ಮೇಲೆ ಉಸಿರು ಬಂದಿತು. ದಿಗ್ಗಜಗಳು ಮೊಣಕಾಲನ್ನೂರಿ ಮನಗುಂದಿದವು. ಸೈನ್ಯ ಮಹಾಸಾಗರವು ಸಮುದ್ರವನ್ನು ಮುಕ್ಕುಳಿಸಿ ನಡೆಯಿತು. ಹೆಚ್ಚಿನ ಒತ್ತಡದ ಕಾಲಿನ ತುಳಿತಕ್ಕೆ ಯುದ್ಧವನ್ನು ಮಾಡುವವರ ಗದ್ದಲದ ಅಬ್ಬರವು ಹೊಸದಾಯಿತು.
ಪದಾರ್ಥ (ಕ.ಗ.ಪ)
ಕಮಠ-ಆಮೆ, ಆಳಾಪ-ಗದ್ದಲ, ಕಾಹುರತೆ-ಅಬ್ಬರ
ಮೂಲ ...{Loading}...
ಪ್ರಳಯ ಜಲನಿಧಿಯಂತೆ ದಳ ಬರ
ಲಿಳೆ ಕುಸಿಯೆ ಕಮಠಂಗೆ ಮೇಲುಸು
ರುಲಿಯೆ ದಿಗುದಂತಿಗಳು ಮೊಣಕಾಲೂರಿ ಮನಗುಂದೆ
ಬಲಮಹಾಂಬುಧಿ ಬಲುಗಡಲ ಮು
ಕ್ಕುಳಿಸಿ ನಡೆದುದು ಕಡು ಭರದ ಕಾ
ಲ್ದುಳಿಯ ಕದನಾಳಾಪಕರ ಕಾಹುರತೆ ಹೊಸತಾಯ್ತು ॥40॥
೦೪೧ ಗಜದ ಬೃಂಹಿತರವದ ...{Loading}...
ಗಜದ ಬೃಂಹಿತರವದ ವಾಜಿ
ವ್ರಜದ ಹೇಷಧ್ವನಿಯ ತೇರಿನ
ವಿಜಯ ಚೀತ್ಕೃತಿ ರವದ ಬಿಲು ಟಂಕಾರ ಕಳಕಳದ
ಗಜಬಜಿಕೆ ಗಾಢಿಸಿತು ಬೊಬ್ಬೆಯ
ಗಜರುಗಳ ಗರ್ಜನೆಗೆ ನಡುಗಿತು
ತ್ರಿಜಗವೆನಲೈದಿದರು ಪಯಣದ ಮೇಲೆ ಪಯಣದಲಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಯ ಕೂಗಿನ ಧ್ವನಿ (ಘೀಂಕಾರ) ಕುದುರೆಯ ಹಿಂಡಿನ ಕೆನೆತ, ತೇರಿನ ವಿಜಯದ ಚೀರಾಟ, ಬಿಲ್ಲಿನ ಠೇಂಕಾರಗಳ ಗದ್ದಲ ಹೆಚ್ಚಾಯಿತು. ಚೀರಾಟ, ಗರ್ಜನೆಗಳಿಗೆ ಮೂರು ಲೋಕವು ನಡುಗಿತು. ದಂಡು ಪ್ರಯಾಣದ ಮೇಲೆ ಪ್ರಯಾಣವನ್ನು ಮಾಡಿತು.
ಪದಾರ್ಥ (ಕ.ಗ.ಪ)
ಬೃಂಹಿತ-ಘೀಂಕಾರ, ಹೇಷ-ಕೆನೆತ, ವಾಜಿವ್ರಜ-ಕುದುರೆ ಹಿಂಡು, ಗಾಹಿಸು-ಹೆಚ್ಚಾಗು, ಗಜರು-ಗರ್ಜನೆ, ಬೊಬ್ಬೆ-ಚೀರಾಟ
ಮೂಲ ...{Loading}...
ಗಜದ ಬೃಂಹಿತರವದ ವಾಜಿ
ವ್ರಜದ ಹೇಷಧ್ವನಿಯ ತೇರಿನ
ವಿಜಯ ಚೀತ್ಕೃತಿ ರವದ ಬಿಲು ಟಂಕಾರ ಕಳಕಳದ
ಗಜಬಜಿಕೆ ಗಾಢಿಸಿತು ಬೊಬ್ಬೆಯ
ಗಜರುಗಳ ಗರ್ಜನೆಗೆ ನಡುಗಿತು
ತ್ರಿಜಗವೆನಲೈದಿದರು ಪಯಣದ ಮೇಲೆ ಪಯಣದಲಿ ॥41॥
೦೪೨ ಅರರೆ ನಡೆದುದು ...{Loading}...
ಅರರೆ ನಡೆದುದು ರಾಯ ಕಟಕದ
ತೆರಳಿಕೆಯ ಸೌರಂಭವಿಳೆಗ
ಚ್ಚರಿಯ ಬೀರಿತು ವರ ಕುರುಕ್ಷೇತ್ರಕ್ಕೆ ಗಮಿಸಿದರು
ಅರಿವಿಜಯಿಗಳು ನೆಲನ ಗೆಲಿದರು
ಹರಿಯ ನೇಮದಲೆಡೆಯರಿದು ಬಲ
ಶರಧಿ ಬಿಟ್ಟುದು ಕಳನ ಪಶ್ಚಿಮ ದೆಸೆಯ ಪಸರದಲಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರರೇ ! ರಾಜನ ಸೈನ್ಯವು ನಡೆಯಿತು, ಅದರ ಸಂಭ್ರಮವು ಭೂಮಿಗೆ ಆಶ್ಚರ್ಯವನ್ನು ತುಂಬಿತು. ಶ್ರೇಷ್ಠವಾದ ಕುರುಕ್ಷೇತ್ರಭೂಮಿಗೆ ಬಂದರು. ಶತ್ರುಗಳನ್ನು ಗೆಲ್ಲುವವರು ನೆಲವನ್ನು ಗೆದ್ದರು. ಕೃಷ್ಣನ ನೇಮದಲ್ಲಿ ತಾವು ನಿಲ್ಲಬೇಕಾದ ಸ್ಥಳಗಳನ್ನು ತಿಳಿದು, ಸೈನ್ಯ ಸಮುದ್ರವು ರಣಭೂಮಿಯ ಪಶ್ಚಿಮ ದಿಕ್ಕಿನ ಬಯಲಿನಲ್ಲಿ ಬೀಡು ಬಿಟ್ಟಿತು.
ಪದಾರ್ಥ (ಕ.ಗ.ಪ)
ಕಟಕ-ಸೈನ್ಯ, ಸೌರಂಭ-ಸಂಭ್ರಮ, ಪಸರ-ಬಯಲು
ಮೂಲ ...{Loading}...
ಅರರೆ ನಡೆದುದು ರಾಯ ಕಟಕದ
ತೆರಳಿಕೆಯ ಸೌರಂಭವಿಳೆಗ
ಚ್ಚರಿಯ ಬೀರಿತು ವರ ಕುರುಕ್ಷೇತ್ರಕ್ಕೆ ಗಮಿಸಿದರು
ಅರಿವಿಜಯಿಗಳು ನೆಲನ ಗೆಲಿದರು
ಹರಿಯ ನೇಮದಲೆಡೆಯರಿದು ಬಲ
ಶರಧಿ ಬಿಟ್ಟುದು ಕಳನ ಪಶ್ಚಿಮ ದೆಸೆಯ ಪಸರದಲಿ ॥42॥
೦೪೩ ಸೂಳವಿಸಿದವು ಸನ್ನೆಯಲಿ ...{Loading}...
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಲಗ್ಗೆಗಳಡಗಿದವು ಕಿರು
ಗಾಳೆ ಸನ್ನೆಯಲೂದಿದವು ಮಾಣಿಸಿದವಬ್ಬರವ
ಕೇಳು ಜನಮೇಜಯ ಧರಿತ್ರೀ
ಪಾಲ ಮಾರ್ಗಶ್ರಮದ ಸೇನಾ
ಜಾಲ ಸೈವೆರಗಾಗಿ ನಿಂದುದು ಕಳನ ಮಧ್ಯದಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸನ್ನೆಯಾದೊಡನೆ ನಗಾರಿಗಳು ಬಾರಿಸಿದವು. ಕೋಲಾಹಲವು ಅಡಗಿತು. ಕಿರುಕಹಳೆಗಳು ಸನ್ನೆಯಲ್ಲಿ ಊದಿದವು. ಅಬ್ಬರವು ತಗ್ಗಿತು. ಜನಮೇಜಯ ಮಹಾರಾಜ ಕೇಳು ! ಸೈನ್ಯದ ಗುಂಪು ನಡೆದು ಬಂದ ಆಯಾಸದಿಂದ ಬೆಕ್ಕಸ ಬೆರಗಾಗಿ ರಣರಂಗದ ಮಧ್ಯದಲ್ಲಿ ನಿಂತಿತು.
ಪದಾರ್ಥ (ಕ.ಗ.ಪ)
ಲಗ್ಗೆ-ಕೋಲಾಹಲ, ಶ್ರಮ-ಆಯಾಸ, ಸೈವೆರಗು-ಬೆಕ್ಕಸಬೆರಗು, ಜಾಲ-ಹಿಂಡು/ಗುಂಪು, ಕಳ-ರಣರಂಗ
ಮೂಲ ...{Loading}...
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಲಗ್ಗೆಗಳಡಗಿದವು ಕಿರು
ಗಾಳೆ ಸನ್ನೆಯಲೂದಿದವು ಮಾಣಿಸಿದವಬ್ಬರವ
ಕೇಳು ಜನಮೇಜಯ ಧರಿತ್ರೀ
ಪಾಲ ಮಾರ್ಗಶ್ರಮದ ಸೇನಾ
ಜಾಲ ಸೈವೆರಗಾಗಿ ನಿಂದುದು ಕಳನ ಮಧ್ಯದಲಿ ॥43॥
೦೪೪ ಮೇಲುಗುಡಿಗಳ ಭದ್ರದುಪ್ಪರ ...{Loading}...
ಮೇಲುಗುಡಿಗಳ ಭದ್ರದುಪ್ಪರ
ಶಾಲೆಗಳ ಮಂಡವಿಗೆಗಳ ಬ
ಲ್ಲಾಳದಡ್ಡಿಯ ಚಂಪೆಯದ ಗೂಡಾರದೋವರಿಯ
ಸಾಲು ಕಳಸದ ಮೇಲುಗಟ್ಟಿನ
ಕೀಲಣದ ಹೊಂಗೆಲಸದಲಿ ರಾ
ಜಾಲಯವನನುಕರಿಸಿದರು ಕುಂತೀ ಕುಮಾರರಿಗೆ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇಲೆ, ಎತ್ತರದಲ್ಲಿನ ಬಾವುಟಗಳ ಭದ್ರವಾದ ಮಹಡಿಯ ಮಂಟಪಗಳಲ್ಲಿ ವೀರಾಳುಗಳ ಚಂಪೆಯ ಗೂಡಾರಗಳ ಒಳ ಮನೆಯ ಸಾಲುಗಳು ಹೊಂದಿದ್ದು ಕಳಸವನ್ನು ಮೇಲುಗಟ್ಟಿಸಿ ಚಿನ್ನದ ಕೆಲಸವನ್ನು ಮಾಡಿದ ಅರಮನೆಗಳನ್ನು ಕುಂತೀ ಕುಮಾರರಿಗೆ ಸಿದ್ಧಮಾಡಿದರು.
ಪದಾರ್ಥ (ಕ.ಗ.ಪ)
ಭದ್ರದುಪ್ಪರ ಶಾಲೆ-ಗಟ್ಟಿಯಾದ ಮಹಡಿಯ ಮನೆ, ಓವರಿ-ಒಳಮನೆ, ಚಂಪೆಯ-ಒಂದು ಮಾದರಿ ಗೂಡಾರ, ಕೀಲಣ-ಜೋಡಣೆ
ಮೂಲ ...{Loading}...
ಮೇಲುಗುಡಿಗಳ ಭದ್ರದುಪ್ಪರ
ಶಾಲೆಗಳ ಮಂಡವಿಗೆಗಳ ಬ
ಲ್ಲಾಳದಡ್ಡಿಯ ಚಂಪೆಯದ ಗೂಡಾರದೋವರಿಯ
ಸಾಲು ಕಳಸದ ಮೇಲುಗಟ್ಟಿನ
ಕೀಲಣದ ಹೊಂಗೆಲಸದಲಿ ರಾ
ಜಾಲಯವನನುಕರಿಸಿದರು ಕುಂತೀ ಕುಮಾರರಿಗೆ ॥44॥
೦೪೫ ಅರಮನೆಯ ಕೆಲದಲಿ ...{Loading}...
ಅರಮನೆಯ ಕೆಲದಲಿ ಮುರಾಂತಕ
ನರಮನೆಗಳಾ ಕೆಲದೊಳರ್ಜುನ
ನಿರವು ಹಿಂದಣ ಭಾಗದಲಿ ನಕುಲಂಗೆ ಗೂಡಾರ
ಅರಿಭಯಂಕರ ಭೀಮಸೇನನ
ನಿರುಪಮಾಲಯವೆಡದ ಕಡೆಯಲಿ
ಸರಿಸದಲಿ ಸೂತ್ರಿಸಿತು ಸಹದೇವಂಗೆ ನೃಪಭವನ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಮನೆಯ ಪಕ್ಕದಲ್ಲಿ ಕೃಷ್ಣನ ಅರಮನೆ. ಅದರ ಪಕ್ಕದಲ್ಲಿ ಅರ್ಜುನನ ಸ್ಥಳ ಹಿಂಭಾಗದಲ್ಲಿ ನಕುಲನಿಗೆ ಬಿಡಾರ ಶತ್ರುಗಳಿಗೆ ಭಯಂಕರನಾಗಿರುವ ಭೀಮಸೇನನಿಗೆ ಹೋಲಿಕೆಗೆ ಸಿಗದ ಮನೆ. ಎಡದ ಭಾಗದಲ್ಲಿ ಅದಕ್ಕೆ ಸರಿಸಮಾನವಾಗಿ ಸಹದೇವನಿಗೆ ರಾಜಭವನ ನಿರ್ಮಾಣವಾಯಿತು.
ಪದಾರ್ಥ (ಕ.ಗ.ಪ)
ನಿರುಪಮ-ಹೋಲಿಸಲಾಗದ, ಸರಿಸ-ಸರಿಸಮಾನವಾಗಿ
ಮೂಲ ...{Loading}...
ಅರಮನೆಯ ಕೆಲದಲಿ ಮುರಾಂತಕ
ನರಮನೆಗಳಾ ಕೆಲದೊಳರ್ಜುನ
ನಿರವು ಹಿಂದಣ ಭಾಗದಲಿ ನಕುಲಂಗೆ ಗೂಡಾರ
ಅರಿಭಯಂಕರ ಭೀಮಸೇನನ
ನಿರುಪಮಾಲಯವೆಡದ ಕಡೆಯಲಿ
ಸರಿಸದಲಿ ಸೂತ್ರಿಸಿತು ಸಹದೇವಂಗೆ ನೃಪಭವನ ॥45॥
೦೪೬ ವೀರ ಪಾಣ್ಡವರೈವರರಸು ...{Loading}...
ವೀರ ಪಾಂಡವರೈವರರಸು ಕು
ಮಾರ ವರ್ಗದ ಮಂಡವಿಗೆ ಗೂ
ಡಾರಗಳನೊಳಕೊಂಡು ಬಿಗಿದವು ತಳಿಯ ಕಟ್ಟುಗಳು
ವಾರಣದ ಸಾಲುಗಳ ಸುತ್ತಲು
ಭಾರಿಸಿತು ಪಾಂಚಾಲ ಮತ್ಸ ್ಯರ
ಭೂರಿ ಬಲಬಿಟ್ಟುದು ಮಹೀಶನ ಗುಡಿಯ ಬಳಸಿನಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರಪಾಂಡವರ ಐದು ಜನ ಅರಸು ಮಕ್ಕಳ ಗೂಡಾರಗಳನ್ನೊಳಗೊಂಡು ತಳಿರುತೋರಣಗಳನ್ನು ಕಟ್ಟಿದರು. ಆನೆಗಳು ಸಾಲಿನ ಸುತ್ತಲೂ ಸಂದಣಿಸಿತು. ಪಾಂಚಾಲ ಮತ್ಸ್ಯರ ಅಧಿಕವಾದ ಸೈನ್ಯವು ಧರ್ಮರಾಜನ ನಿವಾಸದ ಸುತ್ತಲೂ ಬೀಡು ಬಿಟ್ಟಿತು.
ಪದಾರ್ಥ (ಕ.ಗ.ಪ)
ವಾರಣ-ಆನೆ, ಭೂರಿ-ಅಧಿಕ, ಬಳಸು-ಸುತ್ತು
ಮೂಲ ...{Loading}...
ವೀರ ಪಾಂಡವರೈವರರಸು ಕು
ಮಾರ ವರ್ಗದ ಮಂಡವಿಗೆ ಗೂ
ಡಾರಗಳನೊಳಕೊಂಡು ಬಿಗಿದವು ತಳಿಯ ಕಟ್ಟುಗಳು
ವಾರಣದ ಸಾಲುಗಳ ಸುತ್ತಲು
ಭಾರಿಸಿತು ಪಾಂಚಾಲ ಮತ್ಸ ್ಯರ
ಭೂರಿ ಬಲಬಿಟ್ಟುದು ಮಹೀಶನ ಗುಡಿಯ ಬಳಸಿನಲಿ ॥46॥
೦೪೭ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಬೀಡಿನ ತೆಕ್ಕೆ ಬಿಗಿದುದು
ಪಾಳೆಯದ ಬಲುಹೊದಕೆ ಹೊರವಳಯದಲಿ ಕಲುಗೋಟೆ
ಮೇಲೆ ಪಡಿಯಗಳಾಶ್ರಯಿಕೆ ಮುಳು
ವೇಲಿ ದೀಹದ ಸಿಂಹ ಶರಭ
ವ್ಯಾಳ ಶಾರ್ದೂಲಾವಳಿಯ ಸುಯಿಧಾನವೊಪ್ಪಿದವು ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಲವು ಪಾಳಯಗಳ ಸಮೂಹವು ಪಾಳಯದ ರಕ್ಷಣಾ ಆವರಣದ ರೀತಿಯನ್ನು ಜನಮೇಜಯ ಮಹಾರಾಜ ಕೇಳು ! ಹೊರಭಾಗದಲ್ಲಿ ಕಲ್ಲಿನ ಕೋಟೆ. ಮುಂದೆ ಕಂದಕಗಳು, ಅದಕ್ಕೆ ಮುಳ್ಳು ಬೇಲಿ. ಜೊತೆಗೆ ಬೇಟೆಯ ಸಿಂಹ, ಶರಭ ಕ್ರೂರ ಹುಲಿಗಳು ಗುಂಪಿನಲ್ಲಿ ರಕ್ಷಣೆಗೆ ಇದ್ದವು.
ಪದಾರ್ಥ (ಕ.ಗ.ಪ)
ವ್ಯಾಳ-ಸರ್ಪ, ಶಾರ್ದೂಲ-ಹುಲಿ, ಸುಯಿದಾನ-ರಕ್ಷಣೆ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಬೀಡಿನ ತೆಕ್ಕೆ ಬಿಗಿದುದು
ಪಾಳೆಯದ ಬಲುಹೊದಕೆ ಹೊರವಳಯದಲಿ ಕಲುಗೋಟೆ
ಮೇಲೆ ಪಡಿಯಗಳಾಶ್ರಯಿಕೆ ಮುಳು
ವೇಲಿ ದೀಹದ ಸಿಂಹ ಶರಭ
ವ್ಯಾಳ ಶಾರ್ದೂಲಾವಳಿಯ ಸುಯಿಧಾನವೊಪ್ಪಿದವು ॥47॥
೦೪೮ ಎರಡು ಬಾಗಿಲ ...{Loading}...
ಎರಡು ಬಾಗಿಲ ಸೂತ್ರದಲಿ ವಿ
ಸ್ತರಿಸಿದಂಗಡಿ ಸೋಮವೀಧಿಯ
ತರಣಿವೀಧಿಯಲವರವರ ಪಾಳೆಯಕೆ ಮುರಿವುಗಳ
ಸುರರು ಸೃಷ್ಟಿಸಬಾರದಿನ್ನೀ
ನರರುಗಳ ಪಾಡೇನು ಕೌಂತೇ
ಯರ ಸಮಗ್ರದ ಬೀಡು ಕುರುಭೂಮಿಯಲಿ ರಂಜಿಸಿತು ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡು ಬಾಗಿಲ ನಿಯಮದಲ್ಲಿ (ಒಳಗೆ-ಹೊರಗೆ) ಹರಡಿದ ಅಂಗಡಿಗಳು ಸೂರ್ಯ ಬೀದಿ, ಚಂದ್ರ ಬೀದಿಯಲ್ಲಿ ಅವರವರ ಪಾಳಯಕ್ಕೆ ತಿರುವುಗಳು. ದೇವತೆಗಳೂ ಇದನ್ನು ಸೃಷ್ಟಿಸಲಾರರು. ಇನ್ನು ಮಾನವರ ಪಾಡೇನು? ಕುಂತಿಯ ಮಕ್ಕಳ ಸಂಪೂರ್ಣವಾದ ತಂಗುದಾಣವು ಕುರುಕ್ಷೇತ್ರದಲ್ಲಿ ಈ ರೀತಿ ಅಲಂಕೃತವಾಯಿತು.
ಪದಾರ್ಥ (ಕ.ಗ.ಪ)
ಸೋಮ-ಚಂದ್ರ, ತರಣಿ-ಸೂರ್ಯ, ಮುರಿವು-ತಿರುವು
ಟಿಪ್ಪನೀ (ಕ.ಗ.ಪ)
ಸೂರ್ಯ ಬೀದಿ - ನಗರದಲ್ಲಿ ಪೂರ್ವಪಶ್ಚಿಮವಾಗಿ ಇರುವ ಬೀದಿ.
ಚಂದ್ರ ಬೀದಿ - ನಗರದಲ್ಲಿ ದಕ್ಷಿಣೋತ್ತರವಾಗಿರುವುದು ಚಂದ್ರಬೀದಿ.
ಮೂಲ ...{Loading}...
ಎರಡು ಬಾಗಿಲ ಸೂತ್ರದಲಿ ವಿ
ಸ್ತರಿಸಿದಂಗಡಿ ಸೋಮವೀಧಿಯ
ತರಣಿವೀಧಿಯಲವರವರ ಪಾಳೆಯಕೆ ಮುರಿವುಗಳ
ಸುರರು ಸೃಷ್ಟಿಸಬಾರದಿನ್ನೀ
ನರರುಗಳ ಪಾಡೇನು ಕೌಂತೇ
ಯರ ಸಮಗ್ರದ ಬೀಡು ಕುರುಭೂಮಿಯಲಿ ರಂಜಿಸಿತು ॥48॥
೦೪೯ ಬಲದ ಮುಙ್ಗುಡಿ ...{Loading}...
ಬಲದ ಮುಂಗುಡಿ ಭೀಮನದು ಪಿಂ
ಗಳಿಯಲಾತನ ಕಾಹು ಬೀಡಿನ
ವಳಯದಾರೈಕೆಗಳು ಸಾತ್ಯಕಿ ಪಾರ್ಥ ನಕುಲರಿಗೆ
ಬಲಮಹಾಂಬುಧಿಯೊಳಗಿರುಳ ತರ
ವಳಿಕೆ ಹೈಡಿಂಬಂಗೆ ಪಾಂಡವ
ರುಳಿವು ಗದುಗಿನ ವೀರನಾರಾಯಣನ ಸುಯಿದಾನ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದ ಮುಂಭಾಗ ಭೀಮನದು. ಹಿಂಬದಿಯಲ್ಲಿ ಅವನ ಕಾವಲು ಪಡೆ. ಬೀಡಾರದ ಸುತ್ತಲಿನ ರಕ್ಷಣೆ ಸಾತ್ಯಕಿ, ಅರ್ಜುನ ನಕುಲರದು. ಸೈನಸಾಗರದಲ್ಲಿ ರಾತ್ರಿಯ ಕಾವಲು ಘಟೋತ್ಕಚನಿಗೆ. ಪಾಂಡವರ ಉಳಿವು ಗದುಗಿನ ವೀರ ನಾರಾಯಣ ಸ್ವರೂಪಿಯಾದ ಶ್ರೀಕೃಷ್ಣನ ರಕ್ಷಣೆಯಿಂದ.
ಪದಾರ್ಥ (ಕ.ಗ.ಪ)
ಮುಂಗುಡಿ-ಮುಂಬರಿ, ಪಿಂಗಳ-ಹಿಂದಿನ, ಕಾಹು-ಕಾವಲು, ಮಹಾಂಬುಧಿ-ಹೆಗ್ಗಡಲು, ತರವಳಿಕೆ-ಕಾವಲು
ಮೂಲ ...{Loading}...
ಬಲದ ಮುಂಗುಡಿ ಭೀಮನದು ಪಿಂ
ಗಳಿಯಲಾತನ ಕಾಹು ಬೀಡಿನ
ವಳಯದಾರೈಕೆಗಳು ಸಾತ್ಯಕಿ ಪಾರ್ಥ ನಕುಲರಿಗೆ
ಬಲಮಹಾಂಬುಧಿಯೊಳಗಿರುಳ ತರ
ವಳಿಕೆ ಹೈಡಿಂಬಂಗೆ ಪಾಂಡವ
ರುಳಿವು ಗದುಗಿನ ವೀರನಾರಾಯಣನ ಸುಯಿದಾನ ॥49॥
೦೫೦ ಇತಿ ಶ್ರೀಮದಚಿನ್ತ್ಯ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಉದ್ಯೋಗಪರ್ವಂ ಸಮಾಪ್ತಮಾದುದು.
ಸರ್ವ-ಟೀಕೆಗಳು ...{Loading}...
ಮೂಲ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಉದ್ಯೋಗಪರ್ವಂ ಸಮಾಪ್ತಮಾದುದು.