೦೦೦ ಸೂ ಬಿಡು ...{Loading}...
ಸೂ. ಬಿಡು ನೆಲನ ಕೇಡುಗರ ಮಾತಿಂ
ಗೊಡಬಡದಿರಂತಕನ ನಗರಿಗೆ
ನಡೆಯಬೇಡೆಂದಸುರರಿಪು ಕೌರವನನುರೆ ಜರೆದ
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ರಾಜ್ಯವನ್ನು ಬಿಡು (ಪಾಂಡವರಿಗೆ ಕೊಡು) ಕೇಡನ್ನು ಬಯಸುವವರ ಮಾತಿಗೆ ಒಪ್ಪದಿರು, ಯಮನ ನಗರಕ್ಕೆ ಹೋಗಬೇಡ (ಸಾಯದಿರು) ಎಂದು ಕೃಷ್ಣನು ದುರ್ಯೋಧನನನ್ನು ಬಹಳವಾಗಿ ನಿಂದಿಸಿದ.
ಮೂಲ ...{Loading}...
ಸೂ. ಬಿಡು ನೆಲನ ಕೇಡುಗರ ಮಾತಿಂ
ಗೊಡಬಡದಿರಂತಕನ ನಗರಿಗೆ
ನಡೆಯಬೇಡೆಂದಸುರರಿಪು ಕೌರವನನುರೆ ಜರೆದ
೦೦೧ ಅವಧಿ ಸವೆದುದು ...{Loading}...
ಅವಧಿ ಸವೆದುದು ಪಾಂಡವರು ನಿ
ನ್ನವರು ವನವಾಸ ಪ್ರವಾಸದೊ
ಳವರು ನವೆದರು ಕೂಡಿಕೊಂಡಿಹುದಧಿಕ ಗುಣ ನಿನಗೆ
ಅವನಿಯರ್ಧವನೀವುದೀಯ
ದ್ರುವದ ಬಾಳಿಕೆಯೊಳಗೆ ಪುರುಷಾ
ರ್ಥವನು ಸಂಚಿಸೆ ಕಲಿಯಬೇಹುದು ಭೂಪ ಕೇಳ್ ಎಂದ ॥1॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ ಕೇಳು ! ಪಾಂಡವರು ನಿನ್ನವರು. ಅವರ ವನವಾಸದ ಗಡುವು ಮುಗಿಯಿತು. ವನವಾಸದ ತಿರುಗಾಟದಲ್ಲಿ ಸಂಕಟಪಟ್ಟರು. ಅವರನ್ನು ಕೂಡಿ ಕೊಂಡಿರುವುದು ನಿನಗೆ ದೊಡ್ಡ ಗುಣ. ಅರ್ಧ ರಾಜ್ಯವನ್ನು ಅವರಿಗೆ ನೀಡುವುದು. ಈ ಸ್ಥಿರವಲ್ಲದ ಬಾಳಿನಲ್ಲಿ ಪುರುಷಾರ್ಥವನ್ನು ಸಂಪಾದಿಸಲು ಕಲಿಯಬೇಕು ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಅವಧಿ-ಗಡುವು, ನವೆದರು-ಸಂಕಟಪಟ್ಟರು. ಅಧ್ರುವ-ಅಸ್ಥಿರ, ಸಂಚಿಸು-ಗಳಿಸು/ಪಡೆ, ಪುರುಷಾರ್ಥ- ಧರ್ಮ, ಅಥರ್, ಕಾಮ, ಮೋಕ್ಷ
ಮೂಲ ...{Loading}...
ಅವಧಿ ಸವೆದುದು ಪಾಂಡವರು ನಿ
ನ್ನವರು ವನವಾಸ ಪ್ರವಾಸದೊ
ಳವರು ನವೆದರು ಕೂಡಿಕೊಂಡಿಹುದಧಿಕ ಗುಣ ನಿನಗೆ
ಅವನಿಯರ್ಧವನೀವುದೀಯ
ದ್ರುವದ ಬಾಳಿಕೆಯೊಳಗೆ ಪುರುಷಾ
ರ್ಥವನು ಸಂಚಿಸೆ ಕಲಿಯಬೇಹುದು ಭೂಪ ಕೇಳೆಂದ ॥1॥
೦೦೨ ಅರಸುತನ ತನಗಧಿಕವಾಗುತ ...{Loading}...
ಅರಸುತನ ತನಗಧಿಕವಾಗುತ
ಬರಬರಲು ಕಣ್ಣಾಲಿಗಳು ತರ
ಹರಿಸಿ ಕಾಣವು ವರ್ತಮಾನದ ನೃಪರ ಬಳಕೆಯಿದು
ಸಿರಿಯ ಮದವೆಂಬಧಿಕ ತಾಮಸ
ದೊರಕಿದಕ್ಷಿಗೆ ನೀತಿಕಾರರ
ಪರಮವಚನಾಂಜನದಿ ಪ್ರಜ್ವಲಿಸುವುದು ನಯವೆಂದ ॥2॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸುತನವು ಹೆಚ್ಚಾದಂತೆ ಸೈರಿಸಿಕೊಳ್ಳಲಾಗದೆ ಕಣ್ಣು ಕಾಣದಂತಾಗುತ್ತದೆ. ಇದು ಪ್ರಸ್ತುತ ಸಮಯದ ಅರಸರ ನಡವಳಿಕೆ. ಸಂಪತ್ತಿನ ಸೊಕ್ಕು ಎಂಬ ಹೆಚ್ಚಿನ ಅಜ್ಞಾನದ ಅಂಧಕಾರವನ್ನುಂಟು ಮಾಡಿದ ಕಣ್ಣಿಗೆ ನೀತಿಕಾರರ ಉತ್ತಮ ಮಾತುಗಳೆಂಬ ಅಂಜನದಿಂದ ನಯವು ಪ್ರಜ್ವಲಿತವಾಗುತ್ತದೆ ಎಂದು ಹೇಳಿದನು,
ಪದಾರ್ಥ (ಕ.ಗ.ಪ)
ತರಹರಿಸಿ-ಸೈರಿಸಿ, ತಾಮಸ-ಅಜ್ಞಾನ, ನಯ-ನೀತಿ.
ಮೂಲ ...{Loading}...
ಅರಸುತನ ತನಗಧಿಕವಾಗುತ
ಬರಬರಲು ಕಣ್ಣಾಲಿಗಳು ತರ
ಹರಿಸಿ ಕಾಣವು ವರ್ತಮಾನದ ನೃಪರ ಬಳಕೆಯಿದು
ಸಿರಿಯ ಮದವೆಂಬಧಿಕ ತಾಮಸ
ದೊರಕಿದಕ್ಷಿಗೆ ನೀತಿಕಾರರ
ಪರಮವಚನಾಂಜನದಿ ಪ್ರಜ್ವಲಿಸುವುದು ನಯವೆಂದ ॥2॥
೦೦೩ ಕೋಶ ಬಲ ...{Loading}...
ಕೋಶ ಬಲ ತಳತಂತ್ರ ಹೆಚ್ಚಿದ
ದೇಶ ದುರ್ಗವಮಾತ್ಯ ಮಿತ್ರ ಮ
ಹೀಶ ಜನವೆಂಬುದು ಕಣಾ ಸಪ್ತಾಂಗ ಸನ್ನಾಹ
ಈಸು ನಿನಗುಂಟಿಲ್ಲಿ ಮಿತ್ರಮ
ಹೀಶರೆಂಬುದ ತೊರೆವೆ ಪಾಂಡವ
ರಾ ಸಹಾಯವು ಬರಲು ನಿನಗಿದಿರಿಲ್ಲ ಕೇಳ್ ಎಂದ ॥3॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಶಬಲ, ತಳತಂತ್ರ (ಕಾಲಾಳುಗಳು) ವಿಸ್ತಾರವಾದ ದೇಶ, ಕೋಟೆ, ಮಂತ್ರಿ, ಗೆಳೆಯ, ದೊರೆ, ಇವೆಲ್ಲವೂ ಸೇರಿ ಸಪ್ತಾಂಗವೆನಿಸುತ್ತದೆ. ಇವೆಲ್ಲವೂ ನಿನಗಿದೆ. ಗೆಳೆಯ, ರಾಜರೆಂಬುದನ್ನು ಕೈ ಬಿಡುತ್ತಿರುವೆ. ಪಾಂಡವರ ನೆರವು ನಿನಗೆ ಬರಲು ನಿನ್ನನ್ನು ಎದುರಿಸುವವರು ಯಾರೂ ಇರುವುದಿಲ್ಲ ಕೇಳು ಎಂದನು.
ಪದಾರ್ಥ (ಕ.ಗ.ಪ)
ಸನ್ನಾಹ-ಸಿದ್ಧತೆ, ಸಪ್ರಾಂಗ-ಏಳು ಅಂಗಗಳು (ಸ್ವಾಮಿ, ಅಮಾತ್ಯ, ಜನಪದ, ದುರ್ಗ ಕೋಶ, ಸೈನ್ಯ ಮತ್ತು ಮಿತ್ರ)
ಮೂಲ ...{Loading}...
ಕೋಶ ಬಲ ತಳತಂತ್ರ ಹೆಚ್ಚಿದ
ದೇಶ ದುರ್ಗವಮಾತ್ಯ ಮಿತ್ರ ಮ
ಹೀಶ ಜನವೆಂಬುದು ಕಣಾ ಸಪ್ತಾಂಗ ಸನ್ನಾಹ
ಈಸು ನಿನಗುಂಟಿಲ್ಲಿ ಮಿತ್ರಮ
ಹೀಶರೆಂಬುದ ತೊರೆವೆ ಪಾಂಡವ
ರಾ ಸಹಾಯವು ಬರಲು ನಿನಗಿದಿರಿಲ್ಲ ಕೇಳೆಂದ ॥3॥
೦೦೪ ಹೇಳಿದೀ ಸಪ್ತಾಙ್ಗದೊಳಗೊಂ ...{Loading}...
ಹೇಳಿದೀ ಸಪ್ತಾಂಗದೊಳಗೊಂ
ದೇಳಿ ದಿಟವಾಗಿರ್ದ ನೃಪತಿಯ
ಬಾಳಿಕೆಗೆ ಸಂದೇಹವರಿಯಾ ರಾಜನೀತಿಗಳ
ಹೇಳಲಮ್ಮುವರಿಲ್ಲ ಹಿರಿಯರು
ಹೇಳಿದೊಡೆ ನೀ ಕೇಳೆ ಕುರುಕುಲ
ಮೌಳಿ ನಯದಲಿ ನಡೆಯಕಟಯೆಂದಸುರರಿಪು ನುಡಿದ ॥4॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೇಳಿದ ಈ ಸಪ್ತಾಂಗದೊಳಗೆ ಒಂದರ ಬೆಳವಣಿಗೆ ಕೊರತೆಯಾದರೂ ಬಹುಕಾಲ ಬಾಳುವುದಕ್ಕೆ ಸಂದೇಹವಾಗುತ್ತದೆ; ರಾಜನೀತಿಗಳನ್ನು ಅರಿತಿಲ್ಲವೆ ? ನಿನಗೆ ಹೇಳುವ ಧೈರ್ಯವುಳ್ಳವರಿಲ್ಲ. ಹಿರಿಯರು ಹೇಳಿದರೆ ನೀನು ಕೇಳುವುದಿಲ್ಲ. ಅಯ್ಯೋ ! ಕುರುಕುಲ ಶ್ರೇಷ್ಠ್ಟನೇ! ನ್ಯಾಯದಲ್ಲಿ ನಡೆ ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಅಮ್ಮುವರು ಇಲ್ಲ - ಧೈರ್ಯವುಳ್ಳವರಿಲ್ಲ, ಸಮರ್ಥರಿಲ್ಲ
ಮೂಲ ...{Loading}...
ಹೇಳಿದೀ ಸಪ್ತಾಂಗದೊಳಗೊಂ
ದೇಳಿ ದಿಟವಾಗಿರ್ದ ನೃಪತಿಯ
ಬಾಳಿಕೆಗೆ ಸಂದೇಹವರಿಯಾ ರಾಜನೀತಿಗಳ
ಹೇಳಲಮ್ಮುವರಿಲ್ಲ ಹಿರಿಯರು
ಹೇಳಿದೊಡೆ ನೀ ಕೇಳೆ ಕುರುಕುಲ
ಮೌಳಿ ನಯದಲಿ ನಡೆಯಕಟಯೆಂದಸುರರಿಪು ನುಡಿದ ॥4॥
೦೦೫ ಸಾಮವೆಮ್ಬುದು ರಾಜನೀತಿಗೆ ...{Loading}...
ಸಾಮವೆಂಬುದು ರಾಜನೀತಿಗೆ
ತಾ ಮನೋಹರ ರೂಪು ಬದುಕುವ
ಭೂಮಿಪಾಲರನಂತ ವಿಭವಕೆ ಬೀಜ ಮಂತ್ರವಿದು
ಸಾಮ ತಪ್ಪಿದ ಬಳಿಕ ನೀತಿ ವಿ
ರಾಮವಾಗದೆ ಬಿಡದು ದಂಡದ
ಸೀಮೆಯೆಂಬುದುಪಾಯದಲಿ ಸಾಮಾನ್ಯ ತರವೆಂದ ॥5॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜಕೀಯ ಚತುರೋಪಾಯಗಳಲ್ಲಿ ಒಂದಾದ ಸಾಮನೀತಿಯು ಸೊಗಸಾದ ಆಕೃತಿ. ಸಾಮವು ಬಾಳುವ ರಾಜರಿಗೆ ಅನಂತ ವೈಭವದ ಬೀಜ ಮಂತ್ರ. ಸಾಮ ತಪ್ಪಿದರೆ ನೀತಿಯು ಅಂತ್ಯವಾಗದೇ ಇರದು. ದಂಡ ಪ್ರಯೋಗವೆಂಬ ಕ್ಷೇತ್ರವು ಅತಿ ಸಾಮಾನ್ಯವಾದ ಉಪಾಯವಾಗುತ್ತದೆ.
ಪದಾರ್ಥ (ಕ.ಗ.ಪ)
ವಿಭವ-ವೈಭವ, ವಿರಾಮ-ಅಂತ್ಯ, ರೂಪು-ಆಕೃತಿ.
ಮೂಲ ...{Loading}...
ಸಾಮವೆಂಬುದು ರಾಜನೀತಿಗೆ
ತಾ ಮನೋಹರ ರೂಪು ಬದುಕುವ
ಭೂಮಿಪಾಲರನಂತ ವಿಭವಕೆ ಬೀಜ ಮಂತ್ರವಿದು
ಸಾಮ ತಪ್ಪಿದ ಬಳಿಕ ನೀತಿ ವಿ
ರಾಮವಾಗದೆ ಬಿಡದು ದಂಡದ
ಸೀಮೆಯೆಂಬುದುಪಾಯದಲಿ ಸಾಮಾನ್ಯ ತರವೆಂದ ॥5॥
೦೦೬ ಮಾಡಿದಪರಾಧಙ್ಗಳನು ಮರೆ ...{Loading}...
ಮಾಡಿದಪರಾಧಂಗಳನು ಮರೆ
ದಾಡರತಿ ಮೋಹದಲಿ ದಿಟ ನೀ
ಗೂಡಿ ಬದುಕುವ ನುಡಿಯ ನುಡಿವರು ನಮ್ಮ ಮನ ಮೆಚ್ಚೆ
ಕಾಡಿನೊಳಗಾಡಿದರು ದುಃಖವ
ತೋಡಿದರು ನೀನವರಿಗುಚಿತವ
ಮಾಡಿ ನಾಡನು ಕೊಡುವುದೆಂದನು ದಾನವಧ್ವಂಸಿ ॥6॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಅವರಿಗೆ ಮಾಡಿದ ಅಪರಾಧಗಳನ್ನು ಮರೆತು ಸಹಾ ಅವರಾಡುದಿಲ್ಲ. ನಿನ್ನೊಡನೆ ಅವರು ಪ್ರೀತಿಯಿಂದಿರುತ್ತಾರೆ. ಸತ್ಯವಾಗಿಯೂ ನಮ್ಮ ಮನಮೆಚ್ಚುವಂತೆ ನಿನ್ನೊಡಗೂಡಿ ಬದುಕುವ ಮಾತನ್ನೇ ಆಡುತ್ತಾರೆ. ಕಾಡಿನಲ್ಲಿ ತಿರುಗಾಡಿದರು. ದುಃಖಪಟ್ಟರು. ನೀನು ಅವರಿಗೆ ಯೋಗ್ಯವಾದ ರೀತಿಯಲ್ಲಿ ರಾಜ್ಯವನ್ನು ಕೊಡಬೇಕೆಂದು ಕೃಷ್ಣನು ಹೇಳಿದನು.
ಮೂಲ ...{Loading}...
ಮಾಡಿದಪರಾಧಂಗಳನು ಮರೆ
ದಾಡರತಿ ಮೋಹದಲಿ ದಿಟ ನೀ
ಗೂಡಿ ಬದುಕುವ ನುಡಿಯ ನುಡಿವರು ನಮ್ಮ ಮನ ಮೆಚ್ಚೆ
ಕಾಡಿನೊಳಗಾಡಿದರು ದುಃಖವ
ತೋಡಿದರು ನೀನವರಿಗುಚಿತವ
ಮಾಡಿ ನಾಡನು ಕೊಡುವುದೆಂದನು ದಾನವಧ್ವಂಸಿ ॥6॥
೦೦೭ ವಿದುರನುತ್ಸವ ಕೃಪನ ...{Loading}...
ವಿದುರನುತ್ಸವ ಕೃಪನ ಸಮ್ಮದ
ನದಿಯ ಮಗನೊಲವಂಧನೃಪನ
ಭ್ಯುದಯ ಕೇಳ್ ಎಂದಸುರರಿಪು ನಯನುಡಿಯ ಗಡಣಿಸಲು
ಮದದ ಮೈಗಾಣಿಕೆಯ ಮನ ಲೇ
ಪದ ಮಹಾಖಳನಡ್ಡ ಮೊಗವಿಡ
ಲುದಧಿಯೊಳಗದ್ದಂತೆಯಿರ್ದುದು ರಾಯನಾಸ್ಥಾನ ॥7॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿ ಮಾಡಲು ವಿದುರನಿಗೆ ಸಂಭ್ರಮ, ಕೃಪನಿಗೆ ಹಿಗ್ಗು, ಭೀಷ್ಮರಿಗೆ ಪ್ರೀತಿ, ಧೃತರಾಷ್ಟ್ರನ ಏಳಿಗೆಗಳು ಆಗುತ್ತವೆ ಕೇಳು ಎಂದು ಕೃಷ್ಣನು ನಯವಾದ ಮಾತುಗಳ ಮಳೆ ಕರೆಯಲು, ಮೈ ತುಂಬಾ ಸೊಕ್ಕನ್ನೇ ತುಂಬಿಕೊಂಡಿದ್ದ ಆ ಮಹಾನೀಚನು ಮೋರೆಯನ್ನು ತಿರುವಿ ಹಾಕಲು ರಾಜಸಭೆ ಸಮುದ್ರದೊಳಗೆ ಮುಳುಗಿದಂತಿತ್ತು.
ಪದಾರ್ಥ (ಕ.ಗ.ಪ)
ಸಮ್ಮದ-ಹಿಗ್ಗು, ಅಭ್ಯುದಯ-ಏಳಿಗೆ, ಉದಧಿ-ಸಮುದ್ರ
ಮೂಲ ...{Loading}...
ವಿದುರನುತ್ಸವ ಕೃಪನ ಸಮ್ಮದ
ನದಿಯ ಮಗನೊಲವಂಧನೃಪನ
ಭ್ಯುದಯ ಕೇಳೆಂದಸುರರಿಪು ನಯನುಡಿಯ ಗಡಣಿಸಲು
ಮದದ ಮೈಗಾಣಿಕೆಯ ಮನ ಲೇ
ಪದ ಮಹಾಖಳನಡ್ಡ ಮೊಗವಿಡ
ಲುದಧಿಯೊಳಗದ್ದಂತೆಯಿರ್ದುದು ರಾಯನಾಸ್ಥಾನ ॥7॥
೦೦೮ ಅವರಿಗಿನ್ದ್ರಪ್ರಸ್ಥದಲಿ ರಾ ...{Loading}...
ಅವರಿಗಿಂದ್ರಪ್ರಸ್ಥದಲಿ ರಾ
ಜ್ಯವನು ಕುಳಸಹಿತಿತ್ತು ನೀ ಪಾಂ
ಡವ ಪ್ರತಿಷ್ಠಾಚಾರ್ಯನೆಂಬೀ ಬಿರುದ ಸಲಿಸಿದೊಡೆ
ಅವನಿಯಲಿ ನಿನ್ನೊಡನೆ ತಲೆಯೆ
ತ್ತುವ ನೃಪಾಲಕರಿಲ್ಲ ನುಡಿಗಳು
ಕಿವಿಗೆ ಕರ್ಕಶವೀಗಲಾದೊಡೆ ಮುಂದೆ ಲೇಸೆಂದ ॥8॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರಿಗೆ ಇಂದ್ರಪ್ರಸ್ಥದಲ್ಲಿ ರಾಜ್ಯವನ್ನು ಮತ್ತು ಅದರ ವರಮಾನವನ್ನೂ ಕೊಟ್ಟು ನೀನು ಪಾಂಡವರನ್ನು ನೆಲೆಗೊಳಿಸಿದ ಉನ್ನತ ವ್ಯಕ್ತಿ (ಪ್ರತಿಷ್ಠಾಪನಾಚಾರ್ಯ) ಎಂಬ ಬಿರುದನ್ನು ಧರಿಸಿದರೆ ಭೂಮಿಯಲ್ಲಿ ನಿನ್ನ ಎದುರು ತಲೆ ಎತ್ತಿ ನಿಲ್ಲುವ ರಾಜರು ಇರುವುದಿಲ್ಲ. ನನ್ನ ಈ ಮಾತುಗಳು ನಿನ್ನ ಕಿವಿಗೆ ಈಗ ಕಠೋರ ಎನಿಸಬಹುದಾದರೂ ಮುಂದೆ ಒಳ್ಳೆಯದಾಗುತ್ತದೆ ಎಂದನು.
ಪದಾರ್ಥ (ಕ.ಗ.ಪ)
ಕರ್ಕಶ-ಕಠೋರ/ಬಿರುಸು
ಕುಳ - ಆದಾಯ
ಮೂಲ ...{Loading}...
ಅವರಿಗಿಂದ್ರಪ್ರಸ್ಥದಲಿ ರಾ
ಜ್ಯವನು ಕುಳಸಹಿತಿತ್ತು ನೀ ಪಾಂ
ಡವ ಪ್ರತಿಷ್ಠಾಚಾರ್ಯನೆಂಬೀ ಬಿರುದ ಸಲಿಸಿದೊಡೆ
ಅವನಿಯಲಿ ನಿನ್ನೊಡನೆ ತಲೆಯೆ
ತ್ತುವ ನೃಪಾಲಕರಿಲ್ಲ ನುಡಿಗಳು
ಕಿವಿಗೆ ಕರ್ಕಶವೀಗಲಾದೊಡೆ ಮುಂದೆ ಲೇಸೆಂದ ॥8॥
೦೦೯ ಕಳಕಳಿಕೆ ತಗ್ಗಿದ ...{Loading}...
ಕಳಕಳಿಕೆ ತಗ್ಗಿದ ಸಭಾ ಸ್ಥಳ
ದೊಳಗೆ ಸಿಂಹಧ್ವನಿಯಲವನಿಪ
ಕುಲಕುಠಾರನು ಪರಶುರಾಮನು ನುಡಿದನರಸಂಗೆ
ಎಲೆ ಸುಯೋಧನ ಕೃಷ್ಣರಾಯನ
ಅಳಲಿಸುವರೇ ಲೋಭವೀ ವೆ
ಗ್ಗಳದ ನಿರ್ಬಂಧನವು ಪ್ರಾಜ್ಞರಿಗುಚಿತವಲ್ಲೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜಸಭೆಯಲ್ಲಿ ಕಳಕಳಿಕೆಯು ತಗ್ಗಿದ ನಂತರ ರಾಜಕುಲಕ್ಕೆ (ಕ್ಷತ್ರಿಯರಿಗೆ) ಕೊಡಲಿಯಂತಿದ್ದ ಪರಶುರಾಮನು ಸಿಂಹಧ್ವನಿಯಲ್ಲಿ ಅರಸನಿಗೆ ಹೇಳಿದನು. ‘ಎಲೆ ದುರ್ಯೋಧನ, ಕೃಷ್ಣನನ್ನು ನೋಯಿಸುವರೆ? ಈ ಅಧಿಕವಾದ ದುರಾಸೆ ಮತ್ತು ನಿರ್ಬಂಧ ಮಾಡುವುದು ತಿಳಿದವರಿಗೆ ಯೋಗ್ಯವಲ್ಲ’ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಕಳಕಳಿಕೆ - ಆಸ್ಥೆ /ಆಸಕ್ತಿ, ಕುಠಾರ-ಕೊಡಲಿ, ಲೋಭ-ದುರಾಸೆ, ವೆಗ್ಗಳ-ಹೆಚ್ಚಳ/ಅಧಿಕ, ಪ್ರಾಜ್ಞರು-ತಿಳಿದವರು/ಬುದ್ಧಿವಂತರು.
ನಿರ್ಬಂಧ - ಬಲವಂತವಾಗಿ ಅಭಿಪ್ರಾಯವನ್ನು ಹೇರುವುದು.
ಮೂಲ ...{Loading}...
ಕಳಕಳಿಕೆ ತಗ್ಗಿದ ಸಭಾ ಸ್ಥಳ
ದೊಳಗೆ ಸಿಂಹಧ್ವನಿಯಲವನಿಪ
ಕುಲಕುಠಾರನು ಪರಶುರಾಮನು ನುಡಿದನರಸಂಗೆ
ಎಲೆ ಸುಯೋಧನ ಕೃಷ್ಣರಾಯನ
ಅಳಲಿಸುವರೇ ಲೋಭವೀ ವೆ
ಗ್ಗಳದ ನಿರ್ಬಂಧನವು ಪ್ರಾಜ್ಞರಿಗುಚಿತವಲ್ಲೆಂದ ॥9॥
೦೧೦ ದಿವಿಜರಿದಿರಲ್ಲೆನ್ದು ಡಮ್ಭೋ ...{Loading}...
ದಿವಿಜರಿದಿರಲ್ಲೆಂದು ಡಂಭೋ
ದ್ಭವನು ನರ ನಾರಾಯಣಾಖ್ಯರ
ನವಗಡಿಸಿ ಮುರಿವಡೆದು ಕೆಟ್ಟನು ಗಾಢಗರ್ವದಲಿ
ಅವರೊಳರ್ಜುನ ನರನು ಯದು ಸಂ
ಭವನು ನಾರಾಯಣನು ಬಿಡು ಪಾಂ
ಡವರ ವೈರವನೆಂದು ಭಾರ್ಗವ ನುಡಿದನರಸಂಗೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳು ತನಗೆ ಎದುರಲ್ಲವೆಂದು (ಡಂಭಾಸುರನ ಮಗನು-ಡಂಭೋದ್ಭವನು) ನರನಾರಾಯಣ ಋಷಿಗಳ ಮೇಲೆ ಏರಿ ಬರಲು ತುಂಬಿದ ಸೊಕ್ಕಿನಿಂದ ಬಿದ್ದು ಕೆಟ್ಟನು. ಅವರಲ್ಲಿ ಅರ್ಜುನನೇ ನರನು. ಯದುಕುಲದಲ್ಲಿ ಜನಿಸಿದ ಕೃಷ್ಣನೇ ನಾರಾಯಣನು. ಪಾಂಡವರ ವೈರವನ್ನು ಬಿಡು, ಎಂದು ಪರಶುರಾಮನು ದುರ್ಯೋಧನನಿಗೆ ಹೇಳಿದನು.
ಟಿಪ್ಪನೀ (ಕ.ಗ.ಪ)
ಡಂಭೋದ್ಭವ - ದುರಭಿಮಾನಿ ಕ್ಷತ್ರಿಯ ತನಗೆ ಸರಿಸಮಾನರಾದ ಶಸ್ತ್ರಧಾರಿಗಳು ಲೋಕದಲ್ಲಿದ್ದಾರೆಯೆ ? ಎಂದು ಎಲ್ಲರನ್ನು ಕೇಳುತ್ತ ಯಾರನ್ನೂ ಲಕ್ಷಿಸದೆ ಇದ್ದನು. ಒಂದು ದಿನ ತಪಸ್ವೀ ಬ್ರಾಹ್ಮಣರು ‘ರಾಜನೇ ನಿನ್ನ ಮೀರಿಸಿದ ಇಬ್ಬರು ವೀರ ಪುರುಷ ಶ್ರೇಷ್ಠರಿದ್ದಾರೆ. ಅವರು ನರ-ನಾರಾಯಣರೆಂದು ಪ್ರಸಿದ್ಧ ಋಷಿಗಳು. ಗಂಧ ಮಾದನ ಪರ್ವತದಲ್ಲಿ ಅವರು ತಪಸ್ಸು ಮಾಡುತ್ತಿದ್ದಾರೆಂದು ಹೇಳಿದರು. ಡಂಭೋದ್ಭವ ಚತುರಂಗ ಸೈನ್ಯದೊಡನೆ ಅಲ್ಲಿಗೆ ಹೋಗಿ ಅವರೊಡನೆ ಯುದ್ಧವನ್ನು ಬಯಸಿದನು. ನರ-ನಾರಾಯಣರು ಎಷ್ಟು ಹೇಳಿದರು ಕೇಳಲಿಲ್ಲ ಕೊನೆಗೆ ನರ ಮುನಿಯು ಒಂದು ಕಡ್ಡಿಯನ್ನು ಐಷಿಕವೆಂಬ ಮಹಾ ಅಸ್ತ್ರ ಮಂತ್ರದಿಂದ ಅಭಿಮಂತ್ರಿಸಿ ಪ್ರಯೋಗಿಸಲು ಅದು ಅನೇಕ ಮಹಾಸ್ತ್ರಗಳಾಗಿ ರಾಜನ ಸೈನಿಕರ ಅಂಗಾಂಗಳನ್ನು ಭೇದಿಸಿ ಇಡೀ ಆಕಾಶವನ್ನೇ ಬಾಣಮಯ ಮಾಡಿತು. ಭಯ ಭ್ರಾಂತನಾದ ಡಂಭೋದ್ಭವ ತನ್ನ ಶಿರಸ್ಸನ್ನು ನರ ಮಹರ್ಷಿಯ ಪಾದಗಳ ಮೇಲಿಟ್ಟು ಶರಣಾದನು. ಮುಂದೆ ಮಹರ್ಷಿಯ ಉಪದೇಶದಂತೆ ಧರ್ಮಮಾರ್ಗದಲ್ಲಿ ನಡೆದನು.
ಮೂಲ ...{Loading}...
ದಿವಿಜರಿದಿರಲ್ಲೆಂದು ಡಂಭೋ
ದ್ಭವನು ನರ ನಾರಾಯಣಾಖ್ಯರ
ನವಗಡಿಸಿ ಮುರಿವಡೆದು ಕೆಟ್ಟನು ಗಾಢಗರ್ವದಲಿ
ಅವರೊಳರ್ಜುನ ನರನು ಯದು ಸಂ
ಭವನು ನಾರಾಯಣನು ಬಿಡು ಪಾಂ
ಡವರ ವೈರವನೆಂದು ಭಾರ್ಗವ ನುಡಿದನರಸಂಗೆ ॥10॥
೦೧೧ ತಪ್ಪಿ ನುಡಿಯನು ...{Loading}...
ತಪ್ಪಿ ನುಡಿಯನು ಪರಶುರಾಮನು
ದರ್ಪವಿದು ಲೇಸಲ್ಲ ಕೃಷ್ಣಂ
ಗೊಪ್ಪಿಸುವುದರ್ಧಾವನೀತಳವನು ಸರಾಗದಲಿ
ತಪ್ಪಿ ನುಡಿದೊಡೆ ಗರುಡ ದೇವನ
ದರ್ಪವನು ಹರಿ ಸೆಳೆದು ಬಿಸುಟನು
ಒಪ್ಪಿ ತಾಗದಿರೆಂದು ನುಡಿದನು ಕಣ್ವ ಮುನಿ ನಗುತ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಶುರಾಮನು ತಪ್ಪಿ ಹೇಳುವುದಿಲ್ಲ, ಈ ದರ್ಪವು ಒಳ್ಳೆಯದಲ್ಲ. ಅರ್ಧ ಭೂಮಿಯನ್ನು ಕೃಷ್ಣನಿಗೆ ಪ್ರೀತಿಯಿಂದ ಒಪ್ಪಿಸು. ತಪ್ಪಿದರೆ ಗರುಡನ ದರ್ಪವನ್ನು ವಿಷ್ಣುವು ಅಡಗಿಸಿಬಿಟ್ಟಂತೆ ಆಗುತ್ತದೆ. ಯುದ್ಧವನ್ನು ಬಿಡು, ಎಂದು ಕಣ್ವ ಮುನಿ ನಗುತ್ತ ಹೇಳಿದನು.
ಮೂಲ ...{Loading}...
ತಪ್ಪಿ ನುಡಿಯನು ಪರಶುರಾಮನು
ದರ್ಪವಿದು ಲೇಸಲ್ಲ ಕೃಷ್ಣಂ
ಗೊಪ್ಪಿಸುವುದರ್ಧಾವನೀತಳವನು ಸರಾಗದಲಿ
ತಪ್ಪಿ ನುಡಿದೊಡೆ ಗರುಡ ದೇವನ
ದರ್ಪವನು ಹರಿ ಸೆಳೆದು ಬಿಸುಟನು
ಒಪ್ಪಿ ತಾಗದಿರೆಂದು ನುಡಿದನು ಕಣ್ವ ಮುನಿ ನಗುತ ॥11॥
೦೧೨ ಅಹುದು ಕಣ್ವನ ...{Loading}...
ಅಹುದು ಕಣ್ವನ ಮಾತು ಕೃಷ್ಣನ
ಮಹಿಮೆ ಘನವಿದನರಿದು ಗರ್ವ
ಗ್ರಹ ಹಿಡಿದು ಮರುಳಾಗದಿರು ಮುನ್ನೊಬ್ಬ ಗಾಲವನು
ಬಹಳ ಗುರುದಕ್ಷಿಣೆಗೆ ತೊಳಲಿದು
ಮಹಿಯೊಳೆಲ್ಲಿಯು ಗಳಿಸದಿರಲವ
ನಹವ ಮುರಿದನು ಬಳಿಕ ವಿಶ್ವಾಮಿತ್ರಮುನಿ ಬಂದು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಣ್ವನ ಮಾತು ಸರಿ ಕೃಷ್ಣನ ಮಹಿಮೆ ಅಧಿಕವಾದುದು ಇದನ್ನು ತಿಳಿದು ಗರ್ವಗ್ರಹಕ್ಕೆ ತುತ್ತಾಗಿ ಹುಚ್ಚನಾಗಬೇಡ, ಹಿಂದೆ ಗಾಲವನು ಬೇಡವೆಂದರೂ ಬಿಡದೆ ಗುರುದಕ್ಷಿಣೆ ತೆಗೆದುಕೊಳ್ಳಲು ವಿಶ್ವಾಮಿತ್ರರನ್ನು ಪೀಡಿಸಲು ಅವರು ಕಠಿಣವಾದ ಗುರುದಕ್ಷಿಣೆಯನ್ನು ಬೇಡಿ ಅವನ ಅಹಂಕಾರವನ್ನು ಮುರಿದರು.
ಪಾಠಾನ್ತರ (ಕ.ಗ.ಪ)
ಮುನ್ನೊಬ್ಬ ಗಾವಿಲನು –>ಮುನ್ನೊಬ್ಬ ಗಾಲವನು
ಉದ್ಯೋಗಪರ್ವ, ಪ್ರಾಚ್ಯ ಅಧ್ಯಯನ ಸಂಸ್ಥೆ, ಕೃಷ್ಣಜೋಯಿಸರು.
ಟಿಪ್ಪನೀ (ಕ.ಗ.ಪ)
ಗಾಲವ : ವಿಶ್ವಾಮಿತ್ರಲ್ಲಿ ಶುಕ್ಲಯರ್ಜುವೇದವನ್ನು ಸಾಂಗವಾಗಿ ಅಧ್ಯಯನ ಮಾಡಿ ಹೋಗುವಾಗ ‘ಸ್ವಾಮಿ ! ನಾನು ಯಾವ ರೀತಿಯ ಗುರುದಕ್ಷಿಣೆಯನ್ನು ಸಮರ್ಪಿಸಬೇಕೆಂದು’ ವಿಶ್ವಾಮಿತ್ರನನ್ನು ಗಾಲವ ಕೇಳಿದ. ವಿಶ್ವಾಮಿತ್ರನು ‘ನಿನ್ನ ಶುಶ್ರೂಷೆಯಿಂದಲೇ ನಾನು ಸಂತುಷ್ಟನಾಗಿದ್ದೇನೆ ನನಗೆ ಬೇರೆ ಯಾವ ದಕ್ಷಿಣೆಯೂ ಬೇಡವೆಂದರೂ ಕೇಳದೆ ಪುನಃ ಪುನಃ ಬಲಾತ್ಕರಿಸಿದ. ಆದ್ದರಿಂದ ವಿಶ್ವಾಮಿತ್ರರು “ಮೈಯೆಲ್ಲವೂ ಬೆಳ್ಳಗೂ, ಒಂದು ಕಿವಿ ಕಪ್ಪಗೂ ಇರುವ 800 ಕುದುರೆಗಳನ್ನು ತಂದೊಪ್ಪಿಸು” ಎಂದರು. ಗಾಲವ ಇಂತಹ ಕುದುರೆಗಳನ್ನು ಸಂಪಾದಿಸುವುದಕ್ಕೆ ಎಷ್ಟೋ ಕಷ್ಟ ಪಟ್ಟು. ಕೊನೆಗೆ ವಿಷ್ಣುವನ್ನು ಕುರಿತು ತಪಸ್ಸು ಮಾಡಿ, ವಿಷ್ಣು ಇವನ ಬಳಿಗೆ ಗರುಡನನ್ನು ಕಳುಹಿಸಿ ಇವನ ಇಷ್ಟಾರ್ಥವನ್ನು ನೆರವೇರಿಸಲು ಹೇಳಿದನು.
ಮೂಲ ...{Loading}...
ಅಹುದು ಕಣ್ವನ ಮಾತು ಕೃಷ್ಣನ
ಮಹಿಮೆ ಘನವಿದನರಿದು ಗರ್ವ
ಗ್ರಹ ಹಿಡಿದು ಮರುಳಾಗದಿರು ಮುನ್ನೊಬ್ಬ ಗಾಲವನು
ಬಹಳ ಗುರುದಕ್ಷಿಣೆಗೆ ತೊಳಲಿದು
ಮಹಿಯೊಳೆಲ್ಲಿಯು ಗಳಿಸದಿರಲವ
ನಹವ ಮುರಿದನು ಬಳಿಕ ವಿಶ್ವಾಮಿತ್ರಮುನಿ ಬಂದು ॥12॥
೦೧೩ ನಿಮ್ಮ ಪೂರ್ವ ...{Loading}...
ನಿಮ್ಮ ಪೂರ್ವ ಯಯಾತಿ ನಾಕದೊ
ಳೆಮ್ಮ ವೋಲಾರುಂಟು ಜಗದಲಿ
ಧರ್ಮಪರನೆನೆ ಸುರರು ಹರಿದಿಕ್ಕಿದರು ಹೆಡತಲೆಗೆ
ಧರ್ಮಪಥ ಹುಲುವಟ್ಟೆಯೆನಿಸಿದ
ಹಮ್ಮಿನಲಿ ಕೆಡಬೇಡ ನೀತಿಯ
ನೆಮ್ಮಿದವ ಕೆಡನೆಂದು ನಾರದ ನುಡಿದನರಸಂಗೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ಪೂರ್ವಿಕನಾದ ಯಯಾತಿಯು ಸ್ವರ್ಗದಲ್ಲಿ ‘ನಮ್ಮಂತಹ ಧರ್ಮ ಪರರು ಜಗತ್ತಿನಲ್ಲಿ ಯಾರುಂಟು?’ ಎಂದು ಹೇಳಲು ದೇವತೆಗಳು ಅವನ ತಲೆ ಕುಕ್ಕಿ ತಳ್ಳಿದರು. ಧರ್ಮದ ದಾರಿ ಕ್ಷುಲ್ಲಕ ಮಾರ್ಗವೆಂದು ಅಹಂಕಾರದಲ್ಲಿ ಕೆಡಬೇಡ. ನೀತಿಯನ್ನು ನಂಬಿದವನು ಕೆಡುವುದಿಲ್ಲವೆಂದು ನಾರದರು ಅರಸನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಹುಲುªಟ್ಟೆ -ಕ್ಷುದ್ರಮಾರ್ಗ, ಹಮ್ಮು-ಸೊಕ್ಕು, ನೆಮ್ಮು-ನಂಬಿಗೆ.
ಮೂಲ ...{Loading}...
ನಿಮ್ಮ ಪೂರ್ವ ಯಯಾತಿ ನಾಕದೊ
ಳೆಮ್ಮ ವೋಲಾರುಂಟು ಜಗದಲಿ
ಧರ್ಮಪರನೆನೆ ಸುರರು ಹರಿದಿಕ್ಕಿದರು ಹೆಡತಲೆಗೆ
ಧರ್ಮಪಥ ಹುಲುವಟ್ಟೆಯೆನಿಸಿದ
ಹಮ್ಮಿನಲಿ ಕೆಡಬೇಡ ನೀತಿಯ
ನೆಮ್ಮಿದವ ಕೆಡನೆಂದು ನಾರದ ನುಡಿದನರಸಂಗೆ ॥13॥
೦೧೪ ಅವನಿಪತಿ ಕೇಳಾವು ...{Loading}...
ಅವನಿಪತಿ ಕೇಳಾವು ಪಾಂಡವ
ರವರು ಬನದಲಿ ಕಂದ ಮೂಲವ
ಸವಿದು ಕೊಂಬರು ಋಷಿಗಳಿಗೆ ಹಂಗೇಕೆ ಭೂಮಿಪರ
ಇವರದಾವನ ಪಕ್ಷಪಾತ
ವ್ಯವಹರಣೆಯವರಲ್ಲ ಕೇಳಿ
ನ್ನಿವರ ನುಡಿಗಳನೆಂದು ನುಡಿದನು ಮತ್ತೆ ಮುರವೈರಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನೇ ಕೇಳು ! ನಾವಾದರೋ ಪಾಂಡವರವರು. ಕಾಡಿನಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದುಕೊಂಡಿರುವ ಋಷಿಗಳಿಗೆ ರಾಜರ ದಾಕ್ಷಿಣ್ಯವೇಕೆ ? ಇವರು ಯಾವನ ಪಕ್ಷವನ್ನೂ ಹಿಡಿದು ವ್ಯವಹರಿಸುವವರಲ್ಲ. ಇವರ ಮಾತುಗಳನ್ನು ಕೇಳು ಎಂದು ಕೃಷ್ಣನು ಮತ್ತೆ ಮಾತನಾಡಿದನು.
ಪದಾರ್ಥ (ಕ.ಗ.ಪ)
ಸವಿದು-ತಿಂದು
ಮೂಲ ...{Loading}...
ಅವನಿಪತಿ ಕೇಳಾವು ಪಾಂಡವ
ರವರು ಬನದಲಿ ಕಂದ ಮೂಲವ
ಸವಿದು ಕೊಂಬರು ಋಷಿಗಳಿಗೆ ಹಂಗೇಕೆ ಭೂಮಿಪರ
ಇವರದಾವನ ಪಕ್ಷಪಾತ
ವ್ಯವಹರಣೆಯವರಲ್ಲ ಕೇಳಿ
ನ್ನಿವರ ನುಡಿಗಳನೆಂದು ನುಡಿದನು ಮತ್ತೆ ಮುರವೈರಿ ॥14॥
೦೧೫ ಬೆರಳ ಮೀಸೆಯೊಳಿಡುತ ...{Loading}...
ಬೆರಳ ಮೀಸೆಯೊಳಿಡುತ ಕಿರು ನಗೆ
ವೆರಸಿ ಕರ್ಣಾದಿಗಳ ವದನವ
ತಿರುಗಿ ನೋಡುತ ಹರಿಯ ನುಡಿಗಳ ಕಿವುಡುಗೇಳುತ್ತ
ಮರುಳುತನದಾಳಾಪವೇತಕೆ
ಮುರಹರನೆ ಪಾಂಡವರ ಹಂಬಲ
ಮರೆದು ಕಳೆ ಕರಣಕ್ಕೆ ಖಾತಿಯ ಬಳಸಬೇಡೆಂದ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಬೆರಳನ್ನು ಮೀಸೆಯಲ್ಲಿಡುತ್ತ ಅಲ್ಪ ನಗುವನ್ನು ಬೆರೆಸಿ, ಕರ್ಣನೇ ಮೊದಲಾದವರ ಮುಖವನ್ನು ತಿರುಗಿ ನೋಡುತ್ತ ಕೃಷ್ಣನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೇ ಹುಚ್ಚುತನದ ಮಾತೇಕೆ? ಕೃಷ್ಣಾ! ಪಾಂಡವರ ಚಿಂತೆಯನ್ನು ಮರೆತು ಬಿಡು ನನ್ನ ಮನಸ್ಸಿಗೆ ಸಿಟ್ಟನ್ನು ತರಬೇಡ", ಎಂದನು.
ಪದಾರ್ಥ (ಕ.ಗ.ಪ)
ವದನ-ಮೋರೆ/ಮುಖ, ಖಾತಿ-ಸಿಟ್ಟು, ಆಳಾಪ-ಬಡಬಡಿಕೆ
ಮೂಲ ...{Loading}...
ಬೆರಳ ಮೀಸೆಯೊಳಿಡುತ ಕಿರು ನಗೆ
ವೆರಸಿ ಕರ್ಣಾದಿಗಳ ವದನವ
ತಿರುಗಿ ನೋಡುತ ಹರಿಯ ನುಡಿಗಳ ಕಿವುಡುಗೇಳುತ್ತ
ಮರುಳುತನದಾಳಾಪವೇತಕೆ
ಮುರಹರನೆ ಪಾಂಡವರ ಹಂಬಲ
ಮರೆದು ಕಳೆ ಕರಣಕ್ಕೆ ಖಾತಿಯ ಬಳಸಬೇಡೆಂದ ॥15॥
೦೧೬ ಅವರು ನಮ್ಮೊಳು ...{Loading}...
ಅವರು ನಮ್ಮೊಳು ಸರಸವಾಡುವ
ಹವಣದಲ್ಲದೆ ರಾಜ ಕಾರ್ಯವ
ನೆವಗೆ ಯೋಚಿಸಿ ಕಳುಹಿದಂದವ ಮೆಚ್ಚೆ ನಾನಿದನು
ಬವರ ಬೇಕೇ ಬೇಡಿ ಕೊಂಬುದು
ಅವನಿಗಿವನಿಯ ಮಾತ ನೀನಾ
ಡುವರೆ ಪಾಂಡವರೇಕೆ ನೀವೇಕೆಂದು ಖಳ ನುಡಿದ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರು ನಮ್ಮೊಡನೆ ಚೆಲ್ಲಾಟವಾಡುವುದಲ್ಲದೇ. ರಾಜಕಾರ್ಯವನ್ನು ನಮಗೆ ಯೋಚಿಸಿ ಕಳುಹಿಸಿದ ರೀತಿಯನ್ನು ನಾನು ಮೆಚ್ಚುವುದಿಲ್ಲ. ಯುದ್ಧ ಬೇಕೆ ? ಬೇಡಿಕೊಳ್ಳುವುದು. ಭೂಮಿ-ಗೀಮಿಯ ಮಾತು ನೀನು ಆಡುವುದಾದರೆ ಪಾಂಡವರು ಏತಕ್ಕೆ ? ನೀವೇಕೆ? ಎಂದು ಧೂರ್ತನು ನುಡಿದನು.
ಪದಾರ್ಥ (ಕ.ಗ.ಪ)
ಹವಣ-ರೀತಿ, ಬವರ-ಕಾಳಗ
ಮೂಲ ...{Loading}...
ಅವರು ನಮ್ಮೊಳು ಸರಸವಾಡುವ
ಹವಣದಲ್ಲದೆ ರಾಜ ಕಾರ್ಯವ
ನೆವಗೆ ಯೋಚಿಸಿ ಕಳುಹಿದಂದವ ಮೆಚ್ಚೆ ನಾನಿದನು
ಬವರ ಬೇಕೇ ಬೇಡಿ ಕೊಂಬುದು
ಅವನಿಗಿವನಿಯ ಮಾತ ನೀನಾ
ಡುವರೆ ಪಾಂಡವರೇಕೆ ನೀವೇಕೆಂದು ಖಳ ನುಡಿದ ॥16॥
೦೧೭ ಮಾವ ಮೊದಲು ...{Loading}...
ಮಾವ ಮೊದಲು ಸಹಾಯ ಮಧ್ಯದೊ
ಳಾ ವಿರಾಟನ ಸಖ್ಯ ಕಡೆಯಲಿ
ನೀವು ಮಮ ಪ್ರಾಣಾಹಿ ಯೆಂಬಿರಿ ನಿಮ್ಮ ಪಾಂಡವರ
ನಾವು ಕಡೆಯಲಿ ಹೊರಗು ನಮಗಿ
ನ್ನಾವ ಭೂಪರ ಸಖ್ಯವಿದ್ದುದು
ದೇವ ನಾಚಿಸಬೇಡ ಸಂಧಿಯ ಮಾತ ಮರೆಯೆಂದ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರಿಗೆ ಮೊದಲಿಗೆ ಮಾವ ದ್ರುಪದ ರಾಜನ ಸಹಾಯವಿದೆ. ನಡುವೆ ವಿರಾಟನ ಗೆಳೆತನ, ಕಡೆಗೆ ನೀವು ‘ಪಾಂಡವರು ನನ್ನ ಪ್ರಾಣ’ ವೆನ್ನುವಿರಿ. ನಾವೇ ಕಡೆಯಲ್ಲಿ ಹೊರಗಿನವರು. ನಮಗೆ ಇನ್ನಾವ ರಾಜರ ಗೆಳೆತನಿವಿದೆ ? ದೇವನೇ ನಾಚಿಸಬೇಡ ಸಂಧಿಯ ಮಾತನ್ನು ಮರೆ ಎಂದನು.
ಪದಾರ್ಥ (ಕ.ಗ.ಪ)
ಸಖ್ಯ-ಗೆಳೆತನ
ಮೂಲ ...{Loading}...
ಮಾವ ಮೊದಲು ಸಹಾಯ ಮಧ್ಯದೊ
ಳಾ ವಿರಾಟನ ಸಖ್ಯ ಕಡೆಯಲಿ
ನೀವು ಮಮ ಪ್ರಾಣಾಹಿ ಯೆಂಬಿರಿ ನಿಮ್ಮ ಪಾಂಡವರ
ನಾವು ಕಡೆಯಲಿ ಹೊರಗು ನಮಗಿ
ನ್ನಾವ ಭೂಪರ ಸಖ್ಯವಿದ್ದುದು
ದೇವ ನಾಚಿಸಬೇಡ ಸಂಧಿಯ ಮಾತ ಮರೆಯೆಂದ ॥17॥
೦೧೮ ಮಾಡು ಸನ್ಧಿಯನೆಮ್ಮ ...{Loading}...
ಮಾಡು ಸಂಧಿಯನೆಮ್ಮ ವಚನಕೆ
ಕೋಡದಿರು ಸವಿವಾತುಗಳ ನಿನ
ಗಾಡುವವರಿಗೆ ಚಿತ್ತಗೊಡದಿರು ಹಿಸುಣ ಹೊಗಿಸದಿರು
ನಾಡನಾಲಗೆ ಗೆಳೆಯರೆಂಬುದ
ಮಾಡದಿರು ಪಾಂಡವ ನೃಪಾಲರ
ಕೂಡುವಾಳಿಕೆ ಪಥ್ಯ ಕೇಳ್ ಎಂದಸುರರಿಪು ನುಡಿದ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಧಿಯನ್ನು ಮಾಡು ನಮ್ಮ ಮಾತುಗಳಿಗೆ ಕೊಂಕಾಡಬೇಡ. ನಿನಗೆ ರುಚಿಸುವಂತಹ ಮಾತನಾಡುವವರಿಗೆ ಮನಸ್ಸು ಕೊಡದಿರು. ಚಾಡಿಕೋರರನ್ನು ಹೊಗಿಸಿಕೊಳ್ಳದಿರು. ಕ್ಷುದ್ರರ ನಾಲಿಗೆಯ ಸಹವಾಸ ಮಾಡದಿರು. ಪಾಂಡವ ರಾಜರೊಡನೆ ಕೂಡಿ ಬಾಳುವುದು ನಿನಗೆ ಹಿತವಾದುದು ಎಂದನು.
ಪದಾರ್ಥ (ಕ.ಗ.ಪ)
ಕೋಡು-ಕೊಂಕು, ಹಿಸುಣ-ಚಾಡಿ, ಪಥ್ಯ-ಹಿತ
ಮೂಲ ...{Loading}...
ಮಾಡು ಸಂಧಿಯನೆಮ್ಮ ವಚನಕೆ
ಕೋಡದಿರು ಸವಿವಾತುಗಳ ನಿನ
ಗಾಡುವವರಿಗೆ ಚಿತ್ತಗೊಡದಿರು ಹಿಸುಣ ಹೊಗಿಸದಿರು
ನಾಡನಾಲಗೆ ಗೆಳೆಯರೆಂಬುದ
ಮಾಡದಿರು ಪಾಂಡವ ನೃಪಾಲರ
ಕೂಡುವಾಳಿಕೆ ಪಥ್ಯ ಕೇಳೆಂದಸುರರಿಪು ನುಡಿದ ॥18॥
೦೧೯ ನೀತಿಗಾಲಯ ನಿಮ್ಮ ...{Loading}...
ನೀತಿಗಾಲಯ ನಿಮ್ಮ ಕುಲ ವಿ
ಖ್ಯಾತವದು ನೆಲೆ ಸಕಲ ಸೌಖ್ಯ
ವ್ರಾತಕಿದು ಸದ್ಬೀಜವೆನಿಸಿತು ಕೌರವಾನ್ವಯವು
ಭೂತಳದ ಲೋಲುಪತೆಯೊಳು ಕುಲ
ಘಾತಕನು ನೀನೆಂಬ ಕೀರ್ತಿಗೆ
ಯೋತು ನೆಲೆಯಾಗದಿರು ಬೇಡಿದೆವೆಂದು ಹರಿ ನುಡಿದ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
19.’ ಕೌರವ ವಂಶವು ಸುಖ, ಸಂತೋಷಗಳಿಗೆ ಮೂಲವಾಗಿದೆ. ನೀತಿಗೆ ನಿಮ್ಮ ವಂಶವು ನೆಲೆಯಾಗಿದೆ. ಸಕಲ ಸುಖ-ಸಂತೋಷ ಸಮೂಹಗಳಿಗೆ ಇದು ಒಳ್ಳೆಯ ಮೂಲಸ್ಥಾನವಾಗಿದೆ. ಭೂಮಿಯ ದುರಾಸೆಯಿಂದ ನೀನು ಕುಲಘಾತಕನಾದೆ ಎಂಬ ಅಪಕೀರ್ತಿಯನ್ನು ಒಲಿದು ನಿಲ್ಲದಿರು ಎಂದು ಬೇಡಿಕೊಳ್ಳುತ್ತೇನೆ’ ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ವ್ರಾತ-ಗುಂಪು, ಅನ್ವಯ-ವಂಶ, ಲೋಲುಪತೆ-ದುರಾಸೆ
ಮೂಲ ...{Loading}...
ನೀತಿಗಾಲಯ ನಿಮ್ಮ ಕುಲ ವಿ
ಖ್ಯಾತವದು ನೆಲೆ ಸಕಲ ಸೌಖ್ಯ
ವ್ರಾತಕಿದು ಸದ್ಬೀಜವೆನಿಸಿತು ಕೌರವಾನ್ವಯವು
ಭೂತಳದ ಲೋಲುಪತೆಯೊಳು ಕುಲ
ಘಾತಕನು ನೀನೆಂಬ ಕೀರ್ತಿಗೆ
ಯೋತು ನೆಲೆಯಾಗದಿರು ಬೇಡಿದೆವೆಂದು ಹರಿ ನುಡಿದ ॥19॥
೦೨೦ ಧರೆಯ ನೃಪರಿಗೆ ...{Loading}...
ಧರೆಯ ನೃಪರಿಗೆ ಹಸ್ತಿನಾಪುರ
ದರಮನೆಯ ಬಾಗಿಲಲಿ ಸಮಯವು
ದೊರಕಲಂತದು ಪುಣ್ಯವೆಂಬೀ ಸಾರ್ವಭೌಮತೆಯ
ಸಿರಿಗೆ ಪಾಂಡವರನ್ಯರಾದೊಡೆ
ಮೆರೆಯಲರಿವುದೆ ನಿಮ್ಮ ಸಿರಿ ಕಾ
ತರಿಗತನವನು ಮಾಣು ಕೇಳ್ ಎಂದಸುರರಿಪು ನುಡಿದ ॥20॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗತ್ತಿನ ಅರಸರಿಗೆ ಹಸ್ತಿನಾಪುರದ ಅರಮನೆಯ ಬಾಗಿಲಿನಲ್ಲಿ ಪ್ರವೇಶ ಅವಕಾಶವು ಸಿಕ್ಕರೆ ಅದು ಪುಣ್ಯವೆಂದು ಭಾವಿಸುವ ಸಾರ್ವಭೌಮತ್ವ ನಿಮ್ಮದು. ಅಂತಹ ಶ್ರೀಮಂತಿಕೆಗೆ ಪಾಂಡವರು ಬೇರೆಯಾದರೆ ನಿಮ್ಮ ಸಂಪತ್ತು ಕೀರ್ತಿ, ಖ್ಯಾತಿ ಹೊಂದುವುದೆ ? ಎಲ್ಲವೂ ತನಗೆ ಬೇಕೆಂಬ ನಿನ್ನ ಸ್ವಭಾವವನ್ನು ಬಿಡು. ನನ್ನ ಮಾತನ್ನು ಕೇಳು ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಕಾತರಿಗತನ-ದುರಾಸೆ
ಮೂಲ ...{Loading}...
ಧರೆಯ ನೃಪರಿಗೆ ಹಸ್ತಿನಾಪುರ
ದರಮನೆಯ ಬಾಗಿಲಲಿ ಸಮಯವು
ದೊರಕಲಂತದು ಪುಣ್ಯವೆಂಬೀ ಸಾರ್ವಭೌಮತೆಯ
ಸಿರಿಗೆ ಪಾಂಡವರನ್ಯರಾದೊಡೆ
ಮೆರೆಯಲರಿವುದೆ ನಿಮ್ಮ ಸಿರಿ ಕಾ
ತರಿಗತನವನು ಮಾಣು ಕೇಳೆಂದಸುರರಿಪು ನುಡಿದ ॥20॥
೦೨೧ ಯಮಜ ನಿನಗೊಳ್ಳಿದನು ...{Loading}...
ಯಮಜ ನಿನಗೊಳ್ಳಿದನು ಪಾರ್ಥನ
ಮಮತೆ ನಿನ್ನಲಿ ಹಿರಿದು ಭೀಮನ
ತಮದ ನುಡಿ ಹಿಂಗಿದವು ನಕುಲನು ನಿನ್ನೊಳೆರಡರಿಯ
ತಮತಮಗೆ ತಮ್ಮೆ ೈವರೂ ನಿ
ನ್ನಮಲ ವಚನವ ಹಾರಿಹರು ಉ
ಭ್ರಮಿತತನವನು ಮಾಡದಿರು ಸೋದರರ ಸಲಹೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ನಿನಗೆ ಒಳ್ಳೆಯವನಾಗಿದ್ದಾನೆ. ಪಾರ್ಥನಿಗೆ ನಿನ್ನಲ್ಲಿ ಮಮತೆ ಹೆಚ್ಚಾಗಿದೆ, ಭೀಮನ ಕೋಪದ ಮಾತುಗಳು ಕೊನೆಗೊಂಡಿವೆ. ನಕುಲನು ನಿನ್ನಲ್ಲಿ ಯಾವ ಭೇದ ಭಾವವನ್ನೂ ಕಾಣನು. ಈ ಐದೂ ಜನರು ತಮ ತಮಗೆ ನಿನ್ನಿಂದ ಶುಭದ ಮಾತನ್ನು ನಿರೀಕ್ಷಿಸುತ್ತಾರೆ. ಅಧಿಕ ಭ್ರಮೆಗೊಳಗಾಗದಿರು. ನಿನ್ನ ತಮ್ಮಂದಿರನ್ನು ರಕ್ಷಿಸು ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ತಮ-ಸಿಟ್ಟು ,
ಹಾರು-ಬಯಸು
ಮೂಲ ...{Loading}...
ಯಮಜ ನಿನಗೊಳ್ಳಿದನು ಪಾರ್ಥನ
ಮಮತೆ ನಿನ್ನಲಿ ಹಿರಿದು ಭೀಮನ
ತಮದ ನುಡಿ ಹಿಂಗಿದವು ನಕುಲನು ನಿನ್ನೊಳೆರಡರಿಯ
ತಮತಮಗೆ ತಮ್ಮೈವರೂ ನಿ
ನ್ನಮಲ ವಚನವ ಹಾರಿಹರು ಉ
ಭ್ರಮಿತತನವನು ಮಾಡದಿರು ಸೋದರರ ಸಲಹೆಂದ ॥21॥
೦೨೨ ಧರ್ಮಜನ ಕಡು ...{Loading}...
ಧರ್ಮಜನ ಕಡು ಮೋಹವೆಂಬುದು
ನಿಮ್ಮ ಚಿತ್ತದೊಳಿರಲಿ ಭೀಮನ
ಹಮ್ಮು ತಮ್ಮೊಳಗಿರಲಿ ಫಲುಗುಣನೊಲವದಂತಿರಲಿ
ನಮ್ಮ ಭೂಮಿಯೊಳರೆಯ ಬೇಡುವ
ರೆಮ್ಮ ಬಂಧುಗಳಲ್ಲ ಸಂಧಿಗೆ
ತಮ್ಮನೊಡಬಡನೆಂದು ದುಶ್ಶಾಸನನ ನೋಡಿದನು ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಅಧಿಕ ಪ್ರೀತಿ ನಿಮ್ಮ ಮನದಲ್ಲಿಯೇ ಇರಲಿ. ಭೀಮನ ಸೊಕ್ಕು ನಿಮ್ಮಲ್ಲಿರಲಿ. ಅರ್ಜುನನ ಪ್ರೀತಿ, ಅದು ಹಾಗಿರಲಿ. ನಮ್ಮ ಭೂಮಿಯೊಳಗೆ ಅರ್ಧವನ್ನು ಬೇಡುವರು ನಮ್ಮ ಬಂಧುಗಳಲ್ಲ. ಒಪ್ಪಂದಕ್ಕೆ ತಮ್ಮನು ಒಪ್ಪುವುದಿಲ್ಲವೆಂದು ದುಶ್ಯಾಸನನನ್ನು ನೋಡಿದನು.
ಪದಾರ್ಥ (ಕ.ಗ.ಪ)
ಹಮ್ಮ-ಸೊಕ್ಕು/ಅಹಂಕಾರ
ಮೂಲ ...{Loading}...
ಧರ್ಮಜನ ಕಡು ಮೋಹವೆಂಬುದು
ನಿಮ್ಮ ಚಿತ್ತದೊಳಿರಲಿ ಭೀಮನ
ಹಮ್ಮು ತಮ್ಮೊಳಗಿರಲಿ ಫಲುಗುಣನೊಲವದಂತಿರಲಿ
ನಮ್ಮ ಭೂಮಿಯೊಳರೆಯ ಬೇಡುವ
ರೆಮ್ಮ ಬಂಧುಗಳಲ್ಲ ಸಂಧಿಗೆ
ತಮ್ಮನೊಡಬಡನೆಂದು ದುಶ್ಶಾಸನನ ನೋಡಿದನು ॥22॥
೦೨೩ ಬನ್ಧುಕೃತ್ಯದ ಮಾತು ...{Loading}...
ಬಂಧುಕೃತ್ಯದ ಮಾತು ಸೂರ್ಯಂ
ಗಂಧಕಾರವು ಸೇರುವುದೆ ನಿ
ರ್ಬಂಧದಲಿ ನೀವೇಕೆ ನುಡಿವಿರಿ ರಾಜ ಕಾರಿಯವ
ಸಂಧಿಯಾಗದು ಪಾಂಡವರ ಸಂ
ಬಂಧ ನಮಗೇಕೆನುತ ಕರುಣಾ
ಸಿಂಧುವಿನ ಮೊಗ ನೋಡಿ ದುಶ್ಶಾಸನನು ಗರ್ಜಿಸಿದ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನಿಗೆ ಅಂಧಕಾರವು ಸೇರುವುದೆ ? ಪಾಂಡವರೊಡನೆ ಬಂಧು - ಬಾಂಧವರ ಸಂಬಂಧ ಮಾತೇಕೆ ? ರಾಜಕಾರಣದ ಮಾತನ್ನು ನೀವೇಕೆ ಒತ್ತಾಯದಿಂದಾಡುವಿರಿ ? ಒಪ್ಪಂದವು ಕೂಡದು. ಪಾಂಡವರ ಸಂಬಂಧ ನಮಗೇಕೆ ಎನ್ನತ್ತ ಕರುಣಾಸಮುದ್ರನಾದ ಕೃಷ್ಣನ ಮುಖವನ್ನು ನೋಡುತ್ತ ದುಶ್ಯಾಸನನು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಅಂಧಕಾರ-ಕತ್ತಲೆ, ನಿರ್ಬಂಧ-ಒತ್ತಾಯ
ಸಿಂಧು-ಸಮುದ್ರ
ಮೂಲ ...{Loading}...
ಬಂಧುಕೃತ್ಯದ ಮಾತು ಸೂರ್ಯಂ
ಗಂಧಕಾರವು ಸೇರುವುದೆ ನಿ
ರ್ಬಂಧದಲಿ ನೀವೇಕೆ ನುಡಿವಿರಿ ರಾಜ ಕಾರಿಯವ
ಸಂಧಿಯಾಗದು ಪಾಂಡವರ ಸಂ
ಬಂಧ ನಮಗೇಕೆನುತ ಕರುಣಾ
ಸಿಂಧುವಿನ ಮೊಗ ನೋಡಿ ದುಶ್ಶಾಸನನು ಗರ್ಜಿಸಿದ ॥23॥
೦೨೪ ಕೆಡಿಸದಿರು ಧೃತರಾಷ್ಟ್ರ ...{Loading}...
ಕೆಡಿಸದಿರು ಧೃತರಾಷ್ಟ್ರ ಕುಲದಲಿ
ಕೊಡಲಿಯನು ನೀ ಹಡೆದು ವಂಶವ
ಕೆಡಿಸಿ ಕಳೆದೊಡೆ ಹಾನಿ ವೃದ್ಧಿಗಳೆಲ್ಲ ನಿನಗಹುದು
ನುಡಿಗೆ ಸನುಮತರಾಗಿ ತಾ ಕುಲ
ಗಡಿಯನಿವ ಮುಂದರಿಯ ನೀವಿಂ
ತೊಡಬಡಿಸಿ ಪಾಂಡವರ ಸ್ವಾಮ್ಯವನೀಸಿ ಕೊಡಿಯೆಂದ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ! ಹಾಳು ಮಾಡಬೇಡ. ಕುಲಕ್ಕೆ ಕೊಡಲಿಯಂತಿರುವ ಮಗನನ್ನು ಹೆತ್ತು ವಂಶವನ್ನು ಹಾಳುಮಾಡಿ, ನಾಶ ಮಾಡಿದರೆ ಅದರ ಪಾಪ-ಪುಣ್ಯಗಳೆಲ್ಲವೂ ನಿನ್ನದಾಗುತ್ತವೆ. ಮಾತಿಗೆ ಸಮ್ಮತಿಸಿರಿ. ಈ ಕುಲನಾಶಕನು ಮುಂದಿನದನ್ನು ತಿಳಿಯನು ನೀವು ಹೀಗೆ ಅವನನ್ನು ಒಪ್ಪಿಸಿ ಪಾಂಡವರ ಪಾಲನ್ನು ಕೊಡಿಸಿಕೊಡಿ ಎಂದನು ಕೃಷ್ಣ.
ಪದಾರ್ಥ (ಕ.ಗ.ಪ)
ಸನುಮತ-ಸಮ್ಮತಿ/ಒಪ್ಪಿಗೆ,
ಹಾನಿವೃದ್ಧಿ-ಪಾಪ-ಪುಣ್ಯ.
ಮೂಲ ...{Loading}...
ಕೆಡಿಸದಿರು ಧೃತರಾಷ್ಟ್ರ ಕುಲದಲಿ
ಕೊಡಲಿಯನು ನೀ ಹಡೆದು ವಂಶವ
ಕೆಡಿಸಿ ಕಳೆದೊಡೆ ಹಾನಿ ವೃದ್ಧಿಗಳೆಲ್ಲ ನಿನಗಹುದು
ನುಡಿಗೆ ಸನುಮತರಾಗಿ ತಾ ಕುಲ
ಗಡಿಯನಿವ ಮುಂದರಿಯ ನೀವಿಂ
ತೊಡಬಡಿಸಿ ಪಾಂಡವರ ಸ್ವಾಮ್ಯವನೀಸಿ ಕೊಡಿಯೆಂದ ॥24॥
೦೨೫ ಈ ಹರಿಯ ...{Loading}...
ಈ ಹರಿಯ ನುಡಿಗೇಳು ದೈವದ
ಮೋಹ ತಪ್ಪಿದ ಬಳಿಕ ಸುಭಟರ
ಸಾಹಸಿಕೆ ಹುರುಳಿಲ್ಲ ನಂಬದಿರೆಮ್ಮ ಬಲುಹುಗಳ
ಬಾಹಿರವ ನೀನಾಡದಿರು ವೈ
ದೇಹಿಯನು ಸೆರೆವೊಯ್ದ ಸ್ವಾಮಿ
ದ್ರೋಹಿಯನು ಹೋಲದಿರು ಕೌರವಯೆಂದನಾ ಭೀಷ್ಮ ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು, ದುರ್ಯೋಧನ ! ಈ ಕೃಷ್ಣನ ಮಾತುಗಳನ್ನು ಕೇಳು. ದೇವರ ಕೃಪೆ ತಪ್ಪಿದ ಮೇಲೆ ಶೂರರ ಸಾಹಸ ಸಾಮಾಥ್ರ್ಯಗಳಲ್ಲಿ ಸತ್ವವಿಲ್ಲ, ನಮ್ಮ ಶಕ್ತಿ ಸಾಮಥ್ರ್ಯಗಳನ್ನು ನಂಬಬೇಡ. ಸಲ್ಲದ ಮಾತುಗಳನ್ನನಾಡಬೇಡ. ಸೀತೆಯನ್ನು ಸೆರೆ ಹಿಡಿದುಕೊಂಡು ಹೋದ ಸ್ವಾಮಿದ್ರೋಹಿ ರಾವಣನನ್ನು ಅನುಸರಿಸಬೇಡ ಎಂದರು.
ಪದಾರ್ಥ (ಕ.ಗ.ಪ)
ಹುರುಳು-ಸತ್ವ, ಬಾಹಿರ-ಸಲ್ಲದ
ಮೂಲ ...{Loading}...
ಈ ಹರಿಯ ನುಡಿಗೇಳು ದೈವದ
ಮೋಹ ತಪ್ಪಿದ ಬಳಿಕ ಸುಭಟರ
ಸಾಹಸಿಕೆ ಹುರುಳಿಲ್ಲ ನಂಬದಿರೆಮ್ಮ ಬಲುಹುಗಳ
ಬಾಹಿರವ ನೀನಾಡದಿರು ವೈ
ದೇಹಿಯನು ಸೆರೆವೊಯ್ದ ಸ್ವಾಮಿ
ದ್ರೋಹಿಯನು ಹೋಲದಿರು ಕೌರವಯೆಂದನಾ ಭೀಷ್ಮ ॥25॥
೦೨೬ ನೆಲನ ಬೇಡುವ ...{Loading}...
ನೆಲನ ಬೇಡುವ ಪಾಂಡವರ ಭುಜ
ಬಲದೊಳಗೆ ಕುಂದಿಲ್ಲ ನೀತಿಯ
ತಿಳುಹಲೈತಂದಸುರರಿಪು ಸಾಮಾನ್ಯ ಬಳನಲ್ಲ
ಇಳೆಯೊಳರ್ಧವನೊಪ್ಪುಗೊಡು ಯದು
ಕುಲಲಲಾಮನ ನೇಮವನು ನೀ
ಸಲಿಸು ಕೆಡಿಸದಿರೀ ವಿಳಾಸವನೆಂದನಾ ದ್ರೋಣ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆಲವನ್ನು ಬೇಡುವ ಪಾಂಡವರ ತೊಳ್ಬಲದೊಳಗೆ ಕೊರತೆಯಿಲ್ಲ. ನೀತಿಯನ್ನು ತಿಳಿಸಲು ಬಂದ ಕೃಷ್ಣನು ಸಾಮಾನ್ಯನಲ್ಲ. ಭೂಮಿಯಲ್ಲಿ ಅರ್ಧವನ್ನು ಅವರಿಗೊಪ್ಪಿಸು. ಯದುಕುಲಶ್ರೇಷ್ಠನಾದ ಕೃಷ್ಣನ ಮಾತನ್ನು ನಡೆಸು. ಈ ವೈಭವವನ್ನು ಕೆಡಿಸಿಕೊಳ್ಳಬೇಡ ಎಂದರು ದ್ರೋಣರು.
ಪದಾರ್ಥ (ಕ.ಗ.ಪ)
ಲಲಾಮ-ಶ್ರೇಷ್ಠ, ವಿಳಾಸ-ವೈಭವ
ಮೂಲ ...{Loading}...
ನೆಲನ ಬೇಡುವ ಪಾಂಡವರ ಭುಜ
ಬಲದೊಳಗೆ ಕುಂದಿಲ್ಲ ನೀತಿಯ
ತಿಳುಹಲೈತಂದಸುರರಿಪು ಸಾಮಾನ್ಯ ಬಳನಲ್ಲ
ಇಳೆಯೊಳರ್ಧವನೊಪ್ಪುಗೊಡು ಯದು
ಕುಲಲಲಾಮನ ನೇಮವನು ನೀ
ಸಲಿಸು ಕೆಡಿಸದಿರೀ ವಿಳಾಸವನೆಂದನಾ ದ್ರೋಣ ॥26॥
೦೨೭ ಹಲವು ಹೊಲ್ಲೆಹಗಳನು ...{Loading}...
ಹಲವು ಹೊಲ್ಲೆಹಗಳನು ಪಾಂಡವ
ರೊಳಗೆ ನೆನೆದೆನು ಮುಚ್ಚು ಮರೆಯೇ
ನಿಳೆಯ ಲೋಭದ ಬಗೆಗೆ ನೆಗಳಿದೆ ರಾಜಕಾರಿಯವ
ನೆಲನ ಕೊಂಡೆನು ಜೂಜುಗಾರರ
ವಿಲಗದಲಿ ಪಾಂಡವರ್ಗೆ ಪುನರಪಿ
ಹಳುವವೇ ಶರಣಲ್ಲದಿಲ್ಲೆಲೆ ಕೃಷ್ಣ ಕೇಳ್ ಎಂದ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರಿಗೆ ಹಲವು ರೀತಿಯಲ್ಲಿ ಕೆಟ್ಟದ್ದನ್ನು ಮಾಡಲು ನಾನು ಯೋಚಿಸಿದೆನು. ಇದರಲ್ಲಿ ಮುಚ್ಚು ಮರೆಯೇನು? ಭೂಮಿಯ ಮೇಲಿನ ಆಸೆಯಿಂದಲೇ ಎಲ್ಲ ರಾಜಕಾರ್ಯವನ್ನು ಮಾಡಿದೆನು. ಜೂಜಿನ ತೊಂದರೆಯನ್ನೊಡ್ಡಿ ನೆಲವನ್ನು ಕಿತ್ತು ಕೊಂಡೆ. ಕೃಷ್ಣಾ ! ಕೇಳು. ಪಾಂಡವರಿಗೆ ಮತ್ತೆ ಕಾಡೇ ಗತಿಯಲ್ಲದೆ ಬೇರೆ ಗತಿಯಿಲ್ಲ ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಹೊಲ್ಲೆಹ-ಕೆಟ್ಟಕೆಲಸ, ಲೋಭ-ಆಸೆ, ನೆಗಳು-ಮಾಡು, ಹಳುವ -ಕಾಡು, ವಿಲಗ-ತೊಂದರೆ
ಮೂಲ ...{Loading}...
ಹಲವು ಹೊಲ್ಲೆಹಗಳನು ಪಾಂಡವ
ರೊಳಗೆ ನೆನೆದೆನು ಮುಚ್ಚು ಮರೆಯೇ
ನಿಳೆಯ ಲೋಭದ ಬಗೆಗೆ ನೆಗಳಿದೆ ರಾಜಕಾರಿಯವ
ನೆಲನ ಕೊಂಡೆನು ಜೂಜುಗಾರರ
ವಿಲಗದಲಿ ಪಾಂಡವರ್ಗೆ ಪುನರಪಿ
ಹಳುವವೇ ಶರಣಲ್ಲದಿಲ್ಲೆಲೆ ಕೃಷ್ಣ ಕೇಳೆಂದ ॥27॥
೦೨೮ ತಾಗುವಪಕೀರತಿಗೆ ಹೇಸುವ ...{Loading}...
ತಾಗುವಪಕೀರತಿಗೆ ಹೇಸುವ
ರಾಗಿ ಸತ್ಯವನುಳುಹಿ ಹಳುವವ
ಭೋಗಿಸಿದೊಡದು ಕುಲಕೆ ಕುಂದೇ ಪಾಂಡು ತನಯರಿಗೆ
ನೀಗಿದರು ವನವಾಸವನು ಸರಿ
ಭಾಗದವನಿಯ ಕೊಂಬ ಛಲವನು
ಹೋಗ ಬಿಡುವನೆ ಭೀಮನೆಂದನು ನಗುತ ಮುರವೈರಿ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಪಕೀರ್ತಿ ಬರುವುದೆಂದು, ಸತ್ಯವನ್ನುಳಿಸಬೇಕೆಂದು ಅರಣ್ಯವಾಸವನ್ನು ಅನುಭವಿಸಿದರೆ ಅದು ಪಾಂಡುವಿನ ಮಕ್ಕಳಿಗೆ, ವಂಶಕ್ಕೆ ಕೊರತೆಯೆ? ಅವರು ವನವಾಸವನ್ನು ಪೂರೈಸಿದ್ದಾರೆ. ತಮ್ಮ ಪಾಲಿನ ಅರ್ಧ ಭಾಗವನ್ನು ಪಡೆಯಬೇಕೆಂಬ ಹಠವನ್ನು ಭೀಮಸೇನನು ಬಿಡುವನೆ ? ಎಂದು ಕೃಷ್ಣನು ನಗುತ್ತಾ ಹೇಳಿದನು.
ಪದಾರ್ಥ (ಕ.ಗ.ಪ)
ಅವನಿ-ಭೂಮಿ
ಮೂಲ ...{Loading}...
ತಾಗುವಪಕೀರತಿಗೆ ಹೇಸುವ
ರಾಗಿ ಸತ್ಯವನುಳುಹಿ ಹಳುವವ
ಭೋಗಿಸಿದೊಡದು ಕುಲಕೆ ಕುಂದೇ ಪಾಂಡು ತನಯರಿಗೆ
ನೀಗಿದರು ವನವಾಸವನು ಸರಿ
ಭಾಗದವನಿಯ ಕೊಂಬ ಛಲವನು
ಹೋಗ ಬಿಡುವನೆ ಭೀಮನೆಂದನು ನಗುತ ಮುರವೈರಿ ॥28॥
೦೨೯ ಕೊಡು ವೃಕಸ್ಥಳವನು ...{Loading}...
ಕೊಡು ವೃಕಸ್ಥಳವನು ಕುಶಸ್ಥಳ
ಪೊಡವಿಯಾವಂತಿಯನು ಕುಳವನು
ಕೊಡಿಸಿ ಕಳೆ ಸಿರಿಕರಣದವರಲಿ ವಾರಣಾವತವ
ಕೊಡು ನಿನಗೆ ಮನ ಬಂದುದೊಂದನು
ನಡೆಸಿ ಕೊಡುವೆನು ಪಾಂಡವರನವ
ಗಡೆಯತನ ಬೇಡಿನ್ನು ಕೇಳ್ ಎಂದಸುರರಿಪು ನುಡಿದ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ಮಾತನ್ನು ಮುಂದುವರಿಸುತ್ತ, ವೃಕಸ್ಥಳ, ಕುಶಸ್ಥಳ ಆವಂತಿಯನ್ನು ಕೊಡು ವಾರಣಾವತವನ್ನು ಶಾನುಭೋಗರ ಮೂಲಕ ತೆರಿಗೆ ಸಹಿತವಾಗಿ ಕೊಡಿಸಿ ನಿನ್ನ ಮನಸ್ಸಿಗೆ ಬಂದ ಮತ್ತೊಂದು ಊರನ್ನು ಕೊಡು. ಪಾಂಡವರನ್ನು ನಿನ್ನ ಮನದಂತೆ ನಡೆಸಿಕೊಡುತ್ತೇನೆ. ಕಡೆಗಣಿಸುವುದು ಬೇಡ, ಕೇಳು ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಸಿರಿಕರಣದವರು-ಶಾನುಭೋಗರು, ಅವಗಡೆಯತನ-ಕಡೆಗಣಿಸುವುದು/ತೊಂದರೆ
ಮೂಲ ...{Loading}...
ಕೊಡು ವೃಕಸ್ಥಳವನು ಕುಶಸ್ಥಳ
ಪೊಡವಿಯಾವಂತಿಯನು ಕುಳವನು
ಕೊಡಿಸಿ ಕಳೆ ಸಿರಿಕರಣದವರಲಿ ವಾರಣಾವತವ
ಕೊಡು ನಿನಗೆ ಮನ ಬಂದುದೊಂದನು
ನಡೆಸಿ ಕೊಡುವೆನು ಪಾಂಡವರನವ
ಗಡೆಯತನ ಬೇಡಿನ್ನು ಕೇಳೆಂದಸುರರಿಪು ನುಡಿದ ॥29॥
೦೩೦ ಪರಮಪುರುಷನು ಕೃಷ್ಣರಾಯನು ...{Loading}...
ಪರಮಪುರುಷನು ಕೃಷ್ಣರಾಯನು
ಕುರುಕುಲದ ಹಿರಿಯನು ನದೀಸುತ
ಪರಮಧನಸಮಚಾಪವಿದ್ಯನು ದ್ರೋಣನದರಿಂದ
ಧರಣಿಪತಿ ಬಲುಹುಳ್ಳವರು ನಿ
ನ್ನರಮನೆಯಲುಂಟೇ ವಿಚಾರಿಸು
ಮರುಳುತನ ಬೇಡಿವರ ನುಡಿಗಳುಯೆಂದನಾ ವಿದುರ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ವಿದುರನು, ‘ಕೃಷ್ಣನು ಪುರುಷೋತ್ತಮನು, ಭೀಷ್ಮರು ಕುರುಕುಲದ ಹಿರಿಯರು. ದ್ರೋಣನು ಶ್ರೇಷ್ಠ ಬಿಲ್ಲು ವಿದ್ಯಗಾರನು. ಆದ್ದರಿಂದ ಇವರಿಗಿಂತ ಅಧಿಕ ಬಲ್ಲವುಳ್ಳವರು ನಿನ್ನ ಅರಮನೆಯಲ್ಲಿ ಇರುವರೆ ? ವಿಚಾರಿಸು. ಇವರ ಮಾತುಗಳನ್ನು ಕೇಳು ಹುಚ್ಚುತನಬೇಡ,’ ಎಂದನು.
ಪದಾರ್ಥ (ಕ.ಗ.ಪ)
ಚಾಪ-ಬಿಲ್ಲು
ಮೂಲ ...{Loading}...
ಪರಮಪುರುಷನು ಕೃಷ್ಣರಾಯನು
ಕುರುಕುಲದ ಹಿರಿಯನು ನದೀಸುತ
ಪರಮಧನಸಮಚಾಪವಿದ್ಯನು ದ್ರೋಣನದರಿಂದ
ಧರಣಿಪತಿ ಬಲುಹುಳ್ಳವರು ನಿ
ನ್ನರಮನೆಯಲುಂಟೇ ವಿಚಾರಿಸು
ಮರುಳುತನ ಬೇಡಿವರ ನುಡಿಗಳುಯೆಂದನಾ ವಿದುರ ॥30॥
೦೩೧ ಬೇಡಿದೊನ್ದೊನ್ದೂರು ನಮ್ಮಯ ...{Loading}...
ಬೇಡಿದೊಂದೊಂದೂರು ನಮ್ಮಯ
ನಾಡ ತಲೆಮಂಡೆಗಳು ರಾಜ್ಯದ
ರೂಢಿ ಐದೂರುಗಳ ಬಳವಿಗೆ ಹಸ್ತಿನಾನಗರ
ಬೇಡಲರಿವನು ಮಾನನಿಧಿ ಕೊಂ
ಡಾಡಲೇತಕೆ ಧರೆಯನೀರಡಿ
ಮಾಡಿಕೊಂಡ ಮಹಾತ್ಮ ನಿನಗಂಜುವೆನು ನಾನೆಂದ ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಬೇಡಿದ ಒಂದೊಂದು ಊರೂ ನಮ್ಮ ನಾಡಿನ ಪ್ರಮುಖ ನಗರಗಳು ಇದು. ರಾಜ್ಯದ ಬಳಕೆಯಲ್ಲಿರುವುದು. ಈ ಐದೂರುಗಳನ್ನು ಬಳಸಿಕೊಂಡು ಹಸ್ತಿನಾನಗರವು ಇದೆ. ಮಾನಶ್ರೇಷ್ಠ ಬೇಡುವುದರಲ್ಲಿ ತಿಳಿದವನು. ಹೊಗಳುವುದೇಕೆ ? ಭೂಮಿಯನ್ನೇ ಎರಡು ಹೆಜ್ಜೆಗಳಲ್ಲಿ ಅಳೆದ ಮಹಾತ್ಮ ನೀನು ನಿನಗೆ ನಾನು ಭಯಪಡುತ್ತೇನೆ ಎಂದು ದುರ್ಯೋಧನನು ಕೃಷ್ಣನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ತಲೆಮಂಡೆ-ಶಿರಪ್ರಾಯ, ಬಳವಿಗೆ-ಏಳಿಗೆ, ಈರಡಿ-ಎರಡು ಹೆಜ್ಜೆ
ಮೂಲ ...{Loading}...
ಬೇಡಿದೊಂದೊಂದೂರು ನಮ್ಮಯ
ನಾಡ ತಲೆಮಂಡೆಗಳು ರಾಜ್ಯದ
ರೂಢಿ ಐದೂರುಗಳ ಬಳವಿಗೆ ಹಸ್ತಿನಾನಗರ
ಬೇಡಲರಿವನು ಮಾನನಿಧಿ ಕೊಂ
ಡಾಡಲೇತಕೆ ಧರೆಯನೀರಡಿ
ಮಾಡಿಕೊಂಡ ಮಹಾತ್ಮ ನಿನಗಂಜುವೆನು ನಾನೆಂದ ॥31॥
೦೩೨ ಕರೆದು ಮೂರಡಿ ...{Loading}...
ಕರೆದು ಮೂರಡಿ ನೆಲನ ಧಾರೆಯ
ನೆರದ ಬಲಿ ತಳಕಿಳಿದನೆನ್ನೀ
ಧರೆಯೊಳೈದೂರುಗಳನಿತ್ತೆನಗಾವ ಪದವಹುದು
ಪರಮಪುರುಷನು ನೀನು ನಿನಗಾ
ಶರಣು ಹೊಕ್ಕೆನು ಬಂದ ಪಥದಲಿ
ಮರಳಿ ಬಿಜಯಂಗೈವುದೆಂದನು ನಗುತ ಕುರುರಾಯ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರೆದು ಮೂರಡಿಯ ನೆಲವನ್ನು ನಿನಗೆ ಧಾರೆ ಎರೆದ ಬಲಿಯನ್ನು ಪಾತಾಳಕ್ಕೆ ಇಳಿಸಿದೆ. ಇನ್ನೂ ಈ ಭೂಮಿಯಲ್ಲಿ ಐದು ಊರುಗಳನ್ನು ಕೊಟ್ಟ ನನಗೆ ಯಾವ ಸ್ಥಿತಿ ಇರುವುದು ? ನೀನು ಪರಮ ಪುರುಷ. ನಿನಗೆ ಶರಣು ಹೋಗುತ್ತೇನೆ. ಬಂದ ದಾರಿಯಲ್ಲಿಯೇ ದಯಮಾಡಿಸಬೇಕೆಂದು ದುರ್ಯೋಧನನು ನಗುತ್ತ ಹೇಳಿದನು.
ಪದಾರ್ಥ (ಕ.ಗ.ಪ)
ಪಥ-ದಾರಿ
ಮೂಲ ...{Loading}...
ಕರೆದು ಮೂರಡಿ ನೆಲನ ಧಾರೆಯ
ನೆರದ ಬಲಿ ತಳಕಿಳಿದನೆನ್ನೀ
ಧರೆಯೊಳೈದೂರುಗಳನಿತ್ತೆನಗಾವ ಪದವಹುದು
ಪರಮಪುರುಷನು ನೀನು ನಿನಗಾ
ಶರಣು ಹೊಕ್ಕೆನು ಬಂದ ಪಥದಲಿ
ಮರಳಿ ಬಿಜಯಂಗೈವುದೆಂದನು ನಗುತ ಕುರುರಾಯ ॥32॥
೦೩೩ ಸಲಲಿ ನೀ ...{Loading}...
ಸಲಲಿ ನೀ ಪಾಂಡವರೊಳೆತ್ತಿದ
ಛಲದ ಬಳವಿಗೆಯಕಟ ನಿಮ್ಮಯ
ಬಳಗ ಬದುಕಲಿ ಮತ್ತೆ ನವೆಯಲಿ ಧರ್ಮನಂದನನು
ಜಲಧಿ ಮೇರೆಯ ಮಹಿಯಳೊಂದೇ
ಸ್ಥಳವನೈವರಿಗೀವುದೆನೆ ಕಳ
ವಳಿಗನವಗಡಿಸಿದನು ಜಡಿದನು ದನುಜವೈರಿಯನು ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಪಾಂಡವರೊಳು ತಾಳಿರುವ ಛಲದ ಏಳಿಗೆಯು ನಿನಗೆ ಸಲ್ಲಲಿ. ನಿಮ್ಮ ಬಳಗವು ಬದುಕಲಿ ಧರ್ಮರಾಜನು ಮತ್ತೆ ಕೊರಗಲಿ. ಸಮುದ್ರವನ್ನು ಸುತ್ತುವರಿದ ಈ ಭೂಮಿಯೊಳಗೆ ಐವರಿಗೂ ಸೇರಿ ಒಂದೇ ಊರನ್ನು ಕೊಡು ಎನ್ನಲು ದುರ್ಯೋಧನನು ಕಳವಳದಿಂದ ಕೃಷ್ಣನನ್ನು ಗದರಿಸಿದನು.
ಪದಾರ್ಥ (ಕ.ಗ.ಪ)
ಬಳವಿಗೆ-ಏಳಿಗೆ, ಜಡಿ-ಗದರಿಸು/ಬೆದರಿಸು.
ಮೂಲ ...{Loading}...
ಸಲಲಿ ನೀ ಪಾಂಡವರೊಳೆತ್ತಿದ
ಛಲದ ಬಳವಿಗೆಯಕಟ ನಿಮ್ಮಯ
ಬಳಗ ಬದುಕಲಿ ಮತ್ತೆ ನವೆಯಲಿ ಧರ್ಮನಂದನನು
ಜಲಧಿ ಮೇರೆಯ ಮಹಿಯಳೊಂದೇ
ಸ್ಥಳವನೈವರಿಗೀವುದೆನೆ ಕಳ
ವಳಿಗನವಗಡಿಸಿದನು ಜಡಿದನು ದನುಜವೈರಿಯನು ॥33॥
೦೩೪ ನೆಲದೊಳರ್ಧವನೀವುದಿಲ್ಲಾ ...{Loading}...
ನೆಲದೊಳರ್ಧವನೀವುದಿಲ್ಲಾ
ಸ್ಥಳವನೈದನು ಮುನ್ನ ಕೊಡೆನೆ
ನ್ನಿಳೆಯ ಭಾಗವನೀಸಕೊಟ್ಟಡೆ ನಿನ್ನ ಮೇಲಾಣೆ
ನೆಲನ ಕಡೆಯಲಿ ಮುಳ್ಳುಮೊನೆಯು
ಚ್ಚಳಿಪ ಧರಣಿಯನಿತ್ತೆನಾದೊಡೆ
ಬಳಿಕ ನೀ ನಗು ಹೋಗು ಕದನವ ಕೊಂಡು ಬಾಯೆಂದ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯೊಳಗೆ ಅರ್ಧವನ್ನು ಕೊಡುವುದಿಲ್ಲ. ಐದೂ ಊರುಗಳನ್ನು ಮೊದಲೇ ಕೊಡುವುದಿಲ್ಲ. ನಮ್ಮ ರಾಜ್ಯದ ಭಾಗವನ್ನು ಸ್ವಲ್ಪವಾದರೂ ಕೊಟ್ಟರೆ ನಿನ್ನ ಮೇಲಿನಾಣೆ. ಕೊನೆಯಲ್ಲಿ ಮುಳ್ಳಿನ ಮೊನೆಯನ್ನೂರುವಷ್ಟು ಭೂಮಿಯನ್ನು ಕೊಟ್ಟೆನೆಂದರೂ ಆಮೇಲೆ ನೀನು ನಗು. ಹೋಗು ಯುದ್ಧವನ್ನು ನಿರ್ಧರಿಸಿ ಬಾ ಎಂದನು.
ಪದಾರ್ಥ (ಕ.ಗ.ಪ)
ಉಚ್ಛಳಿತ-ಮೇಲೇರುವ, ಮೊನೆ-ತುದಿ
ಮೂಲ ...{Loading}...
ನೆಲದೊಳರ್ಧವನೀವುದಿಲ್ಲಾ
ಸ್ಥಳವನೈದನು ಮುನ್ನ ಕೊಡೆನೆ
ನ್ನಿಳೆಯ ಭಾಗವನೀಸಕೊಟ್ಟಡೆ ನಿನ್ನ ಮೇಲಾಣೆ
ನೆಲನ ಕಡೆಯಲಿ ಮುಳ್ಳುಮೊನೆಯು
ಚ್ಚಳಿಪ ಧರಣಿಯನಿತ್ತೆನಾದೊಡೆ
ಬಳಿಕ ನೀ ನಗು ಹೋಗು ಕದನವ ಕೊಂಡು ಬಾಯೆಂದ ॥34॥
೦೩೫ ದನವ ಕಾದುದು ...{Loading}...
ದನವ ಕಾದುದು ತೀರ್ದುದೇ ಬನ
ಬನಕೆ ತೊಳಲ್ವುದು ಕಡೆಯನೈದಿತೆ
ಮುನಿಗಳೊಳು ಬೊಗಳುಗಳನೆರಗಿಸಿ ಕೊಂಬುದದ ಬಿಸುಟು
ವನನಿಧಿಯನೆಡೆಗೊಂಡು ನಡು ಹಾ
ವಿನಲಿ ಹಕ್ಕೆಯ ಬಿಸುಟು ನಮ್ಮೊಳು
ಮನಕತವ ನೀ ತಿಳುಹಲೋಸುಗ ಬಹರೆ ಹೇಳೆಂದ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದನ ಕಾಯುವುದು ತೀರಿತೆ. ವನವನಗಳಿಗೆ ಅಲೆದಾಡುವುದು ಕೊನೆಯಾಯಿತೆ ? ಮುನಿಗಳನ್ನು ಬಾಯಿಬಡುಕರನ್ನು ಕಾಲಿಗೆ ಬೀಳಿಸಿಕೊಳ್ಳುವುದು ಬಿಟ್ಟು ಕ್ಷೀರಸಾಗರವನ್ನಾಶ್ರಯಿಸಿ ಶೇಷಶಾಯಿಯಾಗಿ ಇರುವುದು ಬಿಟ್ಟು ನಮ್ಮಲ್ಲಿ ಕಳವಳವನ್ನುಂಟು ಮಾಡಲು ಬರುವರೆ ? ಹೇಳು ಎಂದನು.
ಪದಾರ್ಥ (ಕ.ಗ.ಪ)
ವನ-ನೀರು, ಹಕ್ಕೆ-ಹಾಸಿಗೆ, ಮನಕತ-ಕಳವಳ
ಮೂಲ ...{Loading}...
ದನವ ಕಾದುದು ತೀರ್ದುದೇ ಬನ
ಬನಕೆ ತೊಳಲ್ವುದು ಕಡೆಯನೈದಿತೆ
ಮುನಿಗಳೊಳು ಬೊಗಳುಗಳನೆರಗಿಸಿ ಕೊಂಬುದದ ಬಿಸುಟು
ವನನಿಧಿಯನೆಡೆಗೊಂಡು ನಡು ಹಾ
ವಿನಲಿ ಹಕ್ಕೆಯ ಬಿಸುಟು ನಮ್ಮೊಳು
ಮನಕತವ ನೀ ತಿಳುಹಲೋಸುಗ ಬಹರೆ ಹೇಳೆಂದ ॥35॥
೦೩೬ ಖತಿಯ ಹಿಡಿದನು ...{Loading}...
ಖತಿಯ ಹಿಡಿದನು ಶೌರಿ ಮಣಿಯದ
ಮತಗುಡದ ಫಣಿಕೇತನನ ಕಂ
ಡತುಲಬಲ ಗುರು ಸಿಂಧುತನಯಾದಿಗಳ ಮೊಗ ನೋಡಿ
ವ್ಯತಿಕರವನಿವ ಬಯಸಿ ಮಿಗೆ ಬೇ
ಡುತಿರೆ ಕದನವ ನೆನೆಯೆ ಭೂಪನ
ಸತಿಯ ಕಿವಿಯೊಳಗೋಲೆಯಸ್ಥಿರವರಿವೆ ತಾನೆಂದ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಕೋಪಗೊಂಡನು. ತನಗೆ ಬಾಗದ, ತನ್ನ ಅಭಿಪ್ರಾಯಕ್ಕೆ ಒಪ್ಪದ ದುರ್ಯೋಧನನನ್ನು ಕಂಡು ಅಸಮಾನ ಶೂರರಾದ ಗುರುದ್ರೋಣ, ಭೀಷ್ಮರೇ ಮೊದಲಾದವರ ಮುಖವನ್ನು ನೋಡಿ. ಇವನು ಆಪತ್ತನ್ನು ಬಯಸಿ ಅಧಿಕವಾಗಿ ಯುದ್ಧವನ್ನೇ ಬೇಡುತ್ತಿರುವುದನ್ನು ನೆನೆದರೆ ಇವನ ಹೆಂಡತಿಯ ಕಿವಿಯ ಓಲೆಗಳು ಅಸ್ಥಿರವಾಗಿವೆ ಎಂದು ನಾನು ತಿಳಿದಿರುವೆನೆಂದನು.
ಪದಾರ್ಥ (ಕ.ಗ.ಪ)
ಮಣಿಯದ-ಬಾಗದ, ಮತಗುಡ-ಅಭಿಪ್ರಾಯಕ್ಕೆ ಒಪ್ಪದ, ಅತುಲ-ಅಸಮಾನ, ವ್ಯತಿಕರ-ಆಪತ್ತು
ಮೂಲ ...{Loading}...
ಖತಿಯ ಹಿಡಿದನು ಶೌರಿ ಮಣಿಯದ
ಮತಗುಡದ ಫಣಿಕೇತನನ ಕಂ
ಡತುಲಬಲ ಗುರು ಸಿಂಧುತನಯಾದಿಗಳ ಮೊಗ ನೋಡಿ
ವ್ಯತಿಕರವನಿವ ಬಯಸಿ ಮಿಗೆ ಬೇ
ಡುತಿರೆ ಕದನವ ನೆನೆಯೆ ಭೂಪನ
ಸತಿಯ ಕಿವಿಯೊಳಗೋಲೆಯಸ್ಥಿರವರಿವೆ ತಾನೆಂದ ॥36॥
೦೩೭ ಕಡೆಗೆ ಧೃತರಾಷ್ಟ್ರಾವನೀಶನು ...{Loading}...
ಕಡೆಗೆ ಧೃತರಾಷ್ಟ್ರಾವನೀಶನು
ಮಡದಿ ಸಹಿತಲನಾಥನಾಗಿಯೆ
ಕೆಡುವನೆಂಬುದ ಬಲ್ಲೆನಾ ಪಾಂಡವರ ರಾಜ್ಯದಲಿ
ಪಡಿಗೆ ಪವಮಾನಜನ ಸಮಯವ
ಹಡೆಯದಿಹ ತರುವಾಯಲೀತನು
ನಡೆಸಿ ಕೊಡುವನು ತಪ್ಪದಕಟಕಟೆಂದನಾ ವಿದುರ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊನೆಗೆ ಧೃತರಾಷ್ಟ್ರನು ಗಾಂಧಾರಿ ಸಹಿತ ಅನಾಥನಾಗಿಯೆ ಹಾಳಾಗುತ್ತಾನೆ ಎಂದು ನಾನು ಬಲ್ಲೆನು. ಆ ಪಾಂಡವರ ರಾಜ್ಯದಲ್ಲಿ ಒಂದು ಪಡಿ ಅಕ್ಕಿಗೆ ಭೀಮಸೇನನ್ನು ಕಾಯುವಂತೆ ಈತನು ಮಾಡುವನು. ಅಯ್ಯೋ ಇದು ತಪ್ಪದು ಎಂದು ವಿದುರನು ನೊಂದನು.
ಪದಾರ್ಥ (ಕ.ಗ.ಪ)
ಪಡಿ-ಆಹಾರ ಅಳೆಯುವ ಪ್ರಮಾಣ
ಮೂಲ ...{Loading}...
ಕಡೆಗೆ ಧೃತರಾಷ್ಟ್ರಾವನೀಶನು
ಮಡದಿ ಸಹಿತಲನಾಥನಾಗಿಯೆ
ಕೆಡುವನೆಂಬುದ ಬಲ್ಲೆನಾ ಪಾಂಡವರ ರಾಜ್ಯದಲಿ
ಪಡಿಗೆ ಪವಮಾನಜನ ಸಮಯವ
ಹಡೆಯದಿಹ ತರುವಾಯಲೀತನು
ನಡೆಸಿ ಕೊಡುವನು ತಪ್ಪದಕಟಕಟೆಂದನಾ ವಿದುರ ॥37॥
೦೩೮ ಮನದ ಸಙ್ಕೇತದಲಿ ...{Loading}...
ಮನದ ಸಂಕೇತದಲಿ ದುರಿಯೋ
ಧನನ ಕಟ್ಟಲು ವಿದುರ ಗಂಗಾ
ತನಯ ಧೃತರಾಷ್ಟ್ರಾವನಿಪರಾಳೋಚಿಸಿದ ಹದನ
ಮನದೊಳರಿದನು ಬಳಿಕ ದುಶ್ಶಾ
ಸನನು ದುರಿಯೋಧನಗೆಯಿನಿಬರ
ನೆನಹ ಬಿನ್ನಹ ಮಾಡಿದನು ಖಾತಿಯಲಿ ಕಳವಳಿಸಿ ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನನ್ನು ಕಟ್ಟಿಹಾಕಲು ವಿದುರ, ಭೀಷ್ಮ, ಧೃತರಾಷ್ಟ್ರ ರಾಜನು ಮನದಲ್ಲಿ ಆಲೋಚಿಸಿದ ರೀತಿಯನ್ನು ತನ್ನ ಮನದೊಳಗೆ ತಿಳಿದುಕೊಂಡ ದುಶ್ಯಾಸನನು ಕೋಪದಿಂದ ಅವರ ಆಲೋಚನೆಗಳನ್ನು ದುರ್ಯೋಧನನಿಗೆ ಕಳವಳದಿಂದ ವಿಜ್ಞಾಪಿಸಿದನು.
ಪದಾರ್ಥ (ಕ.ಗ.ಪ)
ಸಂಕೇತ-ಸನ್ನೆ, ಹದನ-ರೀತಿ, ಖಾತಿ-ಸಿಟ್ಟು
ಮೂಲ ...{Loading}...
ಮನದ ಸಂಕೇತದಲಿ ದುರಿಯೋ
ಧನನ ಕಟ್ಟಲು ವಿದುರ ಗಂಗಾ
ತನಯ ಧೃತರಾಷ್ಟ್ರಾವನಿಪರಾಳೋಚಿಸಿದ ಹದನ
ಮನದೊಳರಿದನು ಬಳಿಕ ದುಶ್ಶಾ
ಸನನು ದುರಿಯೋಧನಗೆಯಿನಿಬರ
ನೆನಹ ಬಿನ್ನಹ ಮಾಡಿದನು ಖಾತಿಯಲಿ ಕಳವಳಿಸಿ ॥38॥
೦೩೯ ಹೆತ್ತವರು ಮರುಳಹರೆ ...{Loading}...
ಹೆತ್ತವರು ಮರುಳಹರೆ ನಾವಿ
ನ್ನೆತ್ತ ತಿರುಗುವೆವಣ್ಣ ದೇವರೆ
ಚಿತ್ತವಿಸಿದಿರೆ ರಾಜಕಾರ್ಯದ ಹದ ವಿಸಂಚಿಸಿತು
ಮುತ್ತಯನ ಕಿರಿಯಯ್ಯನಯ್ಯನ
ಚಿತ್ತ ಕೊಂಕಿತು ಸಾಕು ನಿಂದೆಗೆ
ನುತ್ತಲಗ್ರಜ ಸಹಿತಲೋಲಗದಿಂದ ಹೊರವಂಟ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆತ್ತವರು ಹುಚ್ಚರಾದರೆ ! ಅಣ್ಣ ದೇವ ನಾವು ಎತ್ತ ತಿರುಗುವೆವು. ರಾಜಕಾರ್ಯದ ಹದವು ಕೆಟ್ಟಿತು. ಮುತ್ತಯ್ಯ ಭೀಷ್ಮ, ಕಿರಿಯ ತಂದೆ ವಿದುರ, ತಂದೆ ಧೃತರಾಷ್ಟ್ರ ಇವರುಗಳ ಮನಸು ಡೊಂಕಾಯಿತು. ನಿಂದಿಸುವುದಿನ್ನು ಸಾಕು ಎನುತ್ತ ಅಣ್ಣನೊಡನೆ ದುಶ್ಯಾಸನನು ಸಭೆಯಿಂದ ಹೊರಟನು.
ಪದಾರ್ಥ (ಕ.ಗ.ಪ)
ಹದ-ರೀತಿ, ವಿಸಂಚಿಸು-ಕೇಡು, ಅಗ್ರಜ-ಅಣ್ಣ
ಮೂಲ ...{Loading}...
ಹೆತ್ತವರು ಮರುಳಹರೆ ನಾವಿ
ನ್ನೆತ್ತ ತಿರುಗುವೆವಣ್ಣ ದೇವರೆ
ಚಿತ್ತವಿಸಿದಿರೆ ರಾಜಕಾರ್ಯದ ಹದ ವಿಸಂಚಿಸಿತು
ಮುತ್ತಯನ ಕಿರಿಯಯ್ಯನಯ್ಯನ
ಚಿತ್ತ ಕೊಂಕಿತು ಸಾಕು ನಿಂದೆಗೆ
ನುತ್ತಲಗ್ರಜ ಸಹಿತಲೋಲಗದಿಂದ ಹೊರವಂಟ ॥39॥
೦೪೦ ಮುನಿದು ದುರಿಯೋಧನನು ...{Loading}...
ಮುನಿದು ದುರಿಯೋಧನನು ದುಶ್ಶಾ
ಸನನು ಕೆಲದರಮನೆಯೊಳಾಳೋ
ಚನೆಯ ಮಾಡಿದರಂದು ಸೌಬಲ ಕರ್ಣರೊಡಗೂಡಿ
ದನುಜವೈರಿ ಕುಮಂತ್ರದಲಿ ಬೊ
ಪ್ಪನೊಳು ಖಾತಿಯನಿಕ್ಕಿದನು ಕೈ
ಮನದ ಕಲಿಗಳು ಕಟ್ಟಿ ಕೃಷ್ಣನನೆಂದು ಗಜಬಜಿಸೆ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ದುಶ್ಯಾಸನರು ಕೋಪಿಸಿಕೊಂಡು, ಶಕುನಿ ಕರ್ಣರೊಡನೆ ಸೇರಿ ಅರಮನೆಯಲ್ಲಿ ಆಲೋಚನೆ ಮಾಡಿದರು. ಕೃಷ್ಣನು ಕುತಂತ್ರದಿಂದ ಅಪ್ಪನಿಗೆ ನಮ್ಮ ಮೇಲೆ ಕೋಪ ಬರುವಂತೆ ಮಾಡಿದನು. ಕೈಮನದ ವೀರರು ಕೃಷ್ಣನನ್ನು ಕಟ್ಟಿರೆಂದು ಗದ್ದಲವನ್ನು ಮಾಡಿದರು.
ಪದಾರ್ಥ (ಕ.ಗ.ಪ)
ಬೊಪ್ಪ-ಅಪ್ಪ, ಸೌಬಲ-ಶಕುನಿ
ಮೂಲ ...{Loading}...
ಮುನಿದು ದುರಿಯೋಧನನು ದುಶ್ಶಾ
ಸನನು ಕೆಲದರಮನೆಯೊಳಾಳೋ
ಚನೆಯ ಮಾಡಿದರಂದು ಸೌಬಲ ಕರ್ಣರೊಡಗೂಡಿ
ದನುಜವೈರಿ ಕುಮಂತ್ರದಲಿ ಬೊ
ಪ್ಪನೊಳು ಖಾತಿಯನಿಕ್ಕಿದನು ಕೈ
ಮನದ ಕಲಿಗಳು ಕಟ್ಟಿ ಕೃಷ್ಣನನೆಂದು ಗಜಬಜಿಸೆ ॥40॥
೦೪೧ ಎರಡು ಬಲವನು ...{Loading}...
ಎರಡು ಬಲವನು ಮಸೆದು ಕೊಲಿಸುವ
ಭರವೆ ಯಾದವನದು ನಿಧಾನಿಸ
ಲರಿ ನಮಗೆ ಮುರವೈರಿಯಲ್ಲದೆ ಪಾಂಡು ನಂದನರೆ
ತರಿಸಿ ಹುರಿ ನೇಣುಗಳನೀತನ
ಕರವೆರಡನೊಡೆಬಿಗಿದಡವದಿರು
ಕೆರಳಿ ಮಾಡುವುದಾವುದೆಂದನು ಕೌರವರ ರಾಯ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ-ಪಾಂಡವರ ಎರಡೂ ಬಲವನ್ನು ಹೋರಾಡುವಂತೆ ಮಾಡಿ ಕೊಲ್ಲಿಸುವ ಭಾರವು ಈ ಯಾದವ ಕೃಷ್ಣನದು. ತಿಳಿದುನೋಡಲು ನಮಗೆ ಶತ್ರು ಈ ಕೃಷ್ಣನಲ್ಲದೇ ಪಾಂಡುಪುತ್ರರೆ ? ಹುರಿಹಗ್ಗಗಳನ್ನು ತರಿಸಿ ಇವನ ಎರಡೂ ಕೈಗಳನ್ನು ಕಟ್ಟಿದರೆ ಆ ಪಾಂಡವರು ಕೆರಳಿ ಏನು ಮಾಡುವರು ? ಎಂದು ದುರ್ಯೋಧನನು ಕೇಳಿದನು.
ಪದಾರ್ಥ (ಕ.ಗ.ಪ)
ಮಸೆ-ಘರ್ಷಣೆ, ಭರ-ತಂತ್ರ, ನಿಧಾನಿಸು-ವಿಚಾರಿಸು
ಮೂಲ ...{Loading}...
ಎರಡು ಬಲವನು ಮಸೆದು ಕೊಲಿಸುವ
ಭರವೆ ಯಾದವನದು ನಿಧಾನಿಸ
ಲರಿ ನಮಗೆ ಮುರವೈರಿಯಲ್ಲದೆ ಪಾಂಡು ನಂದನರೆ
ತರಿಸಿ ಹುರಿ ನೇಣುಗಳನೀತನ
ಕರವೆರಡನೊಡೆಬಿಗಿದಡವದಿರು
ಕೆರಳಿ ಮಾಡುವುದಾವುದೆಂದನು ಕೌರವರ ರಾಯ ॥41॥
೦೪೨ ಗಾಳಿಯುಪಶಮಿಸಿದೊಡೆ ವಹ್ನಿ ...{Loading}...
ಗಾಳಿಯುಪಶಮಿಸಿದೊಡೆ ವಹ್ನಿ
ಜ್ವಾಲೆ ತಾನೇ ನಿಲುವುದೀತನ
ತೋಳ ಬಿಗಿದೊಡೆ ಬಳಿಕ ಮನಗುಂದುವರು ಪಾಂಡವರು
ಮೇಳವಿಸಿ ನೇಣುಗಳನೆನುತ ನೃ
ಪಾಲನವದಿರು ಗಜಬಜಿಸುವುದ
ನಾಲಿಸುತ ಸಾತ್ಯಕಿಯೊಡನೆ ಕೃತವರ್ಮನರುಹಿದನು ॥42॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಳಿಯು ನಿಂತರೆ ಬೆಂಕಿಯ ಉರಿಯು ತಾನೇ ನಿಲ್ಲುವುದು. ಇವನ ತೋಳುಗಳನ್ನು ಕಟ್ಟಿದರೆ ತದನಂತರ ಪಾಂಡವರು ಧೈರ್ಯಗೆಡುವರು. ಹಗ್ಗಗಳನ್ನು ಸಿದ್ಧಮಾಡಿರಿ ಎನ್ನುತ್ತ ಅರಸನ ಕಡೆಯವರು ಗದ್ದಲ ಎಬ್ಬಿಸುವುದನ್ನು ಕೇಳುತ್ತ ಕೃತವರ್ಮನು ಸಾತ್ಯಕಿಗೆ ತಿಳಿಸಿದನು.
ಪದಾರ್ಥ (ಕ.ಗ.ಪ)
ಉಪಶಮಿಸು-ನಿಲ್ಲು
ಮೂಲ ...{Loading}...
ಗಾಳಿಯುಪಶಮಿಸಿದೊಡೆ ವಹ್ನಿ
ಜ್ವಾಲೆ ತಾನೇ ನಿಲುವುದೀತನ
ತೋಳ ಬಿಗಿದೊಡೆ ಬಳಿಕ ಮನಗುಂದುವರು ಪಾಂಡವರು
ಮೇಳವಿಸಿ ನೇಣುಗಳನೆನುತ ನೃ
ಪಾಲನವದಿರು ಗಜಬಜಿಸುವುದ
ನಾಲಿಸುತ ಸಾತ್ಯಕಿಯೊಡನೆ ಕೃತವರ್ಮನರುಹಿದನು ॥42॥
೦೪೩ ಆಳು ಕುದುರೆಯ ...{Loading}...
ಆಳು ಕುದುರೆಯ ಬಾಗಿಲಿಗೆ ಬರ
ಹೇಳು ಕೈದುವ ಕೊಂಡು ವೀರಭ
ಟಾಳಿ ಹತ್ತಿರೆ ನಿಲಲಿ ಕೈವೀಸಿದರೆ ಕವಿಕವಿದು
ಬೀಳ ಬಡಿವುದು ಹೊಕ್ಕು ದಂಡಿನ
ಮೇಲೆ ದಂಡನು ಕಡಿದು ಕುರು ಭೂ
ಪಾಲಕನ ನೊರೆ ನೆತ್ತರಲಿ ನಾದುವುದು ಮೇದಿನಿಯ ॥43॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಾಳುಗಳಿಗೆ, ರಾವುತರಿಗೆ, ಬಾಗಿಲ ಹತ್ತಿರ ಬರುವುದಕ್ಕೆ ಹೇಳು ಆಯುಧ ಹಿಡಿದು ವೀರಭಟರುಗಳು ಹತ್ತಿರ ನಿಲ್ಲಲಿ. ಕೈಬೀಸಿದರೆ ಮುಗಿಬಿದ್ದು ಹೊಕ್ಕು ದಂಡಿನ ಮೇಲೆ ದಂಡನ್ನು ಕೆಡವಬೇಕು. ಕೌರವರಾಜರನ್ನು ರಕ್ತದ ನೊರೆಯ ಸಹಿತ ಭೂಮಿಯಲ್ಲಿ ಒದ್ದೆಯಾಗುವಂತೆ ಮಾಡಬೇಕು.
ಪದಾರ್ಥ (ಕ.ಗ.ಪ)
ಕವಿ-ಮುತ್ತು, ಮೇದನಿ-ನೆಲ/ಭೂಮಿ
ಮೂಲ ...{Loading}...
ಆಳು ಕುದುರೆಯ ಬಾಗಿಲಿಗೆ ಬರ
ಹೇಳು ಕೈದುವ ಕೊಂಡು ವೀರಭ
ಟಾಳಿ ಹತ್ತಿರೆ ನಿಲಲಿ ಕೈವೀಸಿದರೆ ಕವಿಕವಿದು
ಬೀಳ ಬಡಿವುದು ಹೊಕ್ಕು ದಂಡಿನ
ಮೇಲೆ ದಂಡನು ಕಡಿದು ಕುರು ಭೂ
ಪಾಲಕನ ನೊರೆ ನೆತ್ತರಲಿ ನಾದುವುದು ಮೇದಿನಿಯ ॥43॥
೦೪೪ ಎನ್ದು ಸುಭಟರಿಗರುಹಿ ...{Loading}...
ಎಂದು ಸುಭಟರಿಗರುಹಿ ಸಾತ್ಯಕಿ
ಬಂದು ಕೃಷ್ಣನ ಕಿವಿಯ ಹತ್ತಿರೆ
ನಿಂದು ವದನವ ಚಾಚಿ ಬಿನ್ನಹ ಮಾಡಿದನು ನಗುತ
ಮಂದಮತಿಗಳು ತಪ್ಪಿದರು ಮನ
ಗುಂದಲಾಗದು ಜೀಯ ಚಿತ್ತೈ
ಸೆಂದಡಸುರಾರಾತಿ ನಗುತವೆ ಭೀಷ್ಮಗಿಂತೆಂದ ॥44॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿಯು ಹೀಗೆ ವೀರಭಟರಿಗೆ ತಿಳಿಸಿ, ಕೃಷ್ಣನ ಕಿವಿಯ ಹತ್ತಿರ ಬಂದು, ನಿಂತು ಮುಖವನ್ನು ಚಾಚಿ ನಗುತ್ತ ವಿಜ್ಞಾಪಿಸಿದನು. ಒಡೆಯ ! ದಡ್ಡರು ತಪ್ಪಿದರು. ಚಿತ್ತೈಸು. ಮನಸ್ಸಿಗೆ ಕುಂದಲಾಗದು ಎಂದಾಗ ಕೃಷ್ಣನು ನಗುತ್ತ ಭೀಷ್ಮನಿಗೆ ಹೀಗೆ ಹೇಳಿದನು.
ಪದಾರ್ಥ (ಕ.ಗ.ಪ)
ಅಸುರಾರಾತಿ-ರಾಕ್ಷಸರ ವೈರಿ (ಕೃಷ್ಣ), ವದನ-ಮುಖ
ಮೂಲ ...{Loading}...
ಎಂದು ಸುಭಟರಿಗರುಹಿ ಸಾತ್ಯಕಿ
ಬಂದು ಕೃಷ್ಣನ ಕಿವಿಯ ಹತ್ತಿರೆ
ನಿಂದು ವದನವ ಚಾಚಿ ಬಿನ್ನಹ ಮಾಡಿದನು ನಗುತ
ಮಂದಮತಿಗಳು ತಪ್ಪಿದರು ಮನ
ಗುಂದಲಾಗದು ಜೀಯ ಚಿತ್ತೈ
ಸೆಂದಡಸುರಾರಾತಿ ನಗುತವೆ ಭೀಷ್ಮಗಿಂತೆಂದ ॥44॥
೦೪೫ ಪರಿಣತ ಪ್ರೌಡಿಗಳಿಗನ್ತಃ ...{Loading}...
ಪರಿಣತ ಪ್ರೌಡಿಗಳಿಗಂತಃ
ಕರಣ ನನೆವುದು ಸುಜನರಿಗೆ ನಿ
ಷ್ಠುರತೆಗಲ್ಲದೆ ಮನವನೀಯದು ಮಹಿಯ ಮೂಢಜನ
ಕರಗುವುದು ಶಶಿಕಾಂತ ಚಂದ್ರನ
ಕಿರಣ ತಾಗಲು ವಜ್ರಹತಿ ಗ
ಬ್ಬರಿಸಿದಲ್ಲದೆ ಗಿರಿಗಳೊಡೆಯವು ಭೀಷ್ಮ ಕೇಳ್ ಎಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೀಷ್ಮನೇ ಕೇಳು ! ಪರಿಣತರಿಗೆ, ಪ್ರಬುದ್ಧರಿಗೆ ಸಜ್ಜನರಿಗೆ ಅಂತಃಕರಣವು ಕರಗುವುದು. ಭೂಮಿಯ ಮೂರ್ಖ ಜನರು ನಿಷ್ಠುರತೆಗಲ್ಲದೇ ಅನ್ಯತಃ ಮನವನ್ನು ಕೊಡಲಾರರು. ಚಂದ್ರನ ಕಿರಣ ತಾಗಲು ಚಂದ್ರಕಾಂತ ಶಿಲೆ ಕರಗುವುದು. ಆದರೆ ಬೆಟ್ಟಗಳು ವಜ್ರಾಯುಧದ ಹೊಡೆತಕ್ಕೆ ಮಾತ್ರ ಒಡೆಯುತ್ತವೆ’ ಎಂದನು.
ಪದಾರ್ಥ (ಕ.ಗ.ಪ)
ಪರಿಣತ-ನುರಿತ/ತಿಳಿದ, ಪ್ರೌಢಿ-ಬುದ್ಧಿವಂತ, ಶಶಿಕಾಂತ-ಚಂದ್ರಶಿಲೆ
ಮೂಲ ...{Loading}...
ಪರಿಣತ ಪ್ರೌಡಿಗಳಿಗಂತಃ
ಕರಣ ನನೆವುದು ಸುಜನರಿಗೆ ನಿ
ಷ್ಠುರತೆಗಲ್ಲದೆ ಮನವನೀಯದು ಮಹಿಯ ಮೂಢಜನ
ಕರಗುವುದು ಶಶಿಕಾಂತ ಚಂದ್ರನ
ಕಿರಣ ತಾಗಲು ವಜ್ರಹತಿ ಗ
ಬ್ಬರಿಸಿದಲ್ಲದೆ ಗಿರಿಗಳೊಡೆಯವು ಭೀಷ್ಮ ಕೇಳೆಂದ ॥45॥
೦೪೬ ದೂತರನು ಕಟ್ಟುವುದು ...{Loading}...
ದೂತರನು ಕಟ್ಟುವುದು ರಾಯರಿ
ಗೇತರುಚಿತವು ನಮ್ಮ ಕಟ್ಟಲು
ಕಾತರಿಸುತಿದೆ ನಿಮ್ಮ ಮೊಮ್ಮಂದಿರನು ನೀ ಕರೆಸಿ
ಮಾತನಾಡಿಸಿ ನೋಡು ನಮಗೀ
ಭೀತಿ ತಾನಿಲ್ಲೆನಲು ಗಂಗಾ
ಜಾತ ಧೃತರಾಷ್ಟ್ರಂಗೆ ನುಡಿದನು ಕೌರವನ ಹದನ ॥46॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೂತರನ್ನು ಕಟ್ಟುವುದು ರಾಜರಿಗೆ ಯಾವ ರೀತಿಯಲ್ಲಿ ಯೋಗ್ಯವಾಗಿದೆ ? ನಮ್ಮನ್ನು ಕಟ್ಟಲು ಹಂಬಲಿಸುತ್ತಿರುವ ನಿಮ್ಮ ಮೊಮ್ಮಕ್ಕಳನ್ನು ನೀನು ಕರೆಸಿ ಮಾತನಾಡಿಸಿ ನೋಡು. ನಮಗೆ ಯಾವ ರೀತಿಯ ಹೆದರಿಕೆಯೂ ಇಲ್ಲ, ಎನ್ನಲು ಭೀಷ್ಮನು ಧೃತರಾಷ್ಟ್ರನಿಗೆ ದುರ್ಯೋದನನ ರೀತಿಯನ್ನು ಹೇಳಿದನು.
ಪದಾರ್ಥ (ಕ.ಗ.ಪ)
ಭೀತಿ-ಭಯ
ಮೂಲ ...{Loading}...
ದೂತರನು ಕಟ್ಟುವುದು ರಾಯರಿ
ಗೇತರುಚಿತವು ನಮ್ಮ ಕಟ್ಟಲು
ಕಾತರಿಸುತಿದೆ ನಿಮ್ಮ ಮೊಮ್ಮಂದಿರನು ನೀ ಕರೆಸಿ
ಮಾತನಾಡಿಸಿ ನೋಡು ನಮಗೀ
ಭೀತಿ ತಾನಿಲ್ಲೆನಲು ಗಂಗಾ
ಜಾತ ಧೃತರಾಷ್ಟ್ರಂಗೆ ನುಡಿದನು ಕೌರವನ ಹದನ ॥46॥
೦೪೭ ಅವನಿಪತಿ ಕೇಳಿದನು ...{Loading}...
ಅವನಿಪತಿ ಕೇಳಿದನು ಕನಲಿದು
ಶಿವ ಶಿವೆಂದನು ವಿದುರ ಕರೆ ಕೌ
ರವನು ಮಗನೇ ಮೃತ್ಯುವಲ್ಲಾ ಭರತ ಸಂತತಿಗೆ
ಅವಳ ಬರಹೇಳಿತ್ತ ಮಗನಾ
ಟವನು ನೋಡಲಿ ಹೆತ್ತ ಮೋಹದ
ಹವಣುಗಳ ಬೆಸಗೊಂಬ ಗಾಂಧಾರಿಯನು ಕರೆಯೆಂದ ॥47॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನು ಕೇಳಿದನು : ಸಿಟ್ಟಿನಿಂದ ‘ಶಿವಶಿವ’ ಎಂದನು. ‘ವಿದುರ ! ಕರೆ ದುರ್ಯೋಧನನು ಮಗನೇ ? ಭರತ ವಂಶಕ್ಕೆ ಮೃತ್ಯುವಲ್ಲವೆ ? ಅವಳನ್ನು (ಗಾಂಧಾರಿಯನ್ನು) ಇತ್ತ ಬರಹೇಳು. ಮಗನ ಆಟವನ್ನು ನೋಡಲಿ, ಹೆತ್ತ ಮೋಹದ ರೀತಿಯನ್ನು ಹೇಳಿಕೊಳ್ಳುವ ಗಾಂಧಾರಿಯನ್ನು ಕರೆ’ ಎಂದನು.
ಪದಾರ್ಥ (ಕ.ಗ.ಪ)
ಕನಲಿ-ಸಿಟ್ಟಾಗಿ, ಹವಣು-ರೀತಿ, ಸಂತತಿ-ವಂಶ
ಮೂಲ ...{Loading}...
ಅವನಿಪತಿ ಕೇಳಿದನು ಕನಲಿದು
ಶಿವ ಶಿವೆಂದನು ವಿದುರ ಕರೆ ಕೌ
ರವನು ಮಗನೇ ಮೃತ್ಯುವಲ್ಲಾ ಭರತ ಸಂತತಿಗೆ
ಅವಳ ಬರಹೇಳಿತ್ತ ಮಗನಾ
ಟವನು ನೋಡಲಿ ಹೆತ್ತ ಮೋಹದ
ಹವಣುಗಳ ಬೆಸಗೊಂಬ ಗಾಂಧಾರಿಯನು ಕರೆಯೆಂದ ॥47॥
೦೪೮ ಜನಪನಾಏ್ಞÉಯ ಮೇಲೆ ...{Loading}...
ಜನಪನಾಜ್ಞೆಯ ಮೇಲೆ ದುರಿಯೋ
ಧನನ ತಂದರು ಸಭೆಗೆ ಮತ್ತೀ
ವನಜಮುಖಿಗಿದನೆಂದೊಡಾ ಗಾಂಧಾರಿ ನಡೆತಂದು
ದನುಜವೈರಿಯ ಕಟ್ಟುವೈ ಕೃ
ಷ್ಣನನು ಬಿಗಿವೈ ದಿಟ ಮಗನೆ ಹೆ
ತ್ತೆನಗೆ ಹರುಷವನಿತ್ತೆಯೆಂದಳು ಮುಳಿದು ಗಾಂಧಾರಿ ॥48॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನ ಆಜ್ಞೆಯಂತೆ ದುರ್ಯೋಧನನನ್ನು ಸಭೆಗೆ ಕರೆ ತಂದರು ಮತ್ತು ಕಮಲ ಮುಖಿ ಗಾಂಧಾರಿಗೆ ಇದನ್ನು ಹೇಳಿದೊಡನೆ ಗಾಂಧಾರಿ ಬಂದು, ‘ರಾಕ್ಷಸ ವೈರಿಯ ಕಟ್ಟುವೆಯ ? ಕೃಷ್ಣನನ್ನು ಬಿಗಿಯುತ್ತೀಯ ? ಹೌದು ! ಮಗನೆ, ! ಹೆತ್ತ ನನಗೆ ಸಂತೋಷವನ್ನುಂಟು ಮಾಡಿದೆ’ ಎಂದು ಸಿಟ್ಟಿನಿಂದ ಅಂದಳು.
ಪದಾರ್ಥ (ಕ.ಗ.ಪ)
ವನಜ-ಕಮಲ, ಮುಳಿ-ಸಿಟ್ಟಾಗು
ಮೂಲ ...{Loading}...
ಜನಪನಾಜ್ಞೆಯ ಮೇಲೆ ದುರಿಯೋ
ಧನನ ತಂದರು ಸಭೆಗೆ ಮತ್ತೀ
ವನಜಮುಖಿಗಿದನೆಂದೊಡಾ ಗಾಂಧಾರಿ ನಡೆತಂದು
ದನುಜವೈರಿಯ ಕಟ್ಟುವೈ ಕೃ
ಷ್ಣನನು ಬಿಗಿವೈ ದಿಟ ಮಗನೆ ಹೆ
ತ್ತೆನಗೆ ಹರುಷವನಿತ್ತೆಯೆಂದಳು ಮುಳಿದು ಗಾಂಧಾರಿ ॥48॥
೦೪೯ ನೆಟ್ಟನೆಲೆ ಧೃತರಾಷ್ಟ್ರ ...{Loading}...
ನೆಟ್ಟನೆಲೆ ಧೃತರಾಷ್ಟ್ರ ನೃಪ ನೀ
ನಿಟ್ಟ ಕಿಚ್ಚಿದು ಪಾಪಿ ಮಗನನು
ಹುಟ್ಟಿದಂದೇ ಬಿಸುಡದಾದೆವು ಬಾಳುಗೇಡಿಯನು
ಕಟ್ಟುವನು ಗಡ ಕೃಷ್ಣನನು ಮೈ
ಮುಟ್ಟುವನು ಗಡ ಗಗನವನು ಬಲು
ದಿಟ್ಟತನ ತಾನೇನು ಹೇಳುವೆನೆಂದಳಿಂದುಮುಖಿ ॥49॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಧೃತರಾಷ್ಟ್ರ ! ಓಮ್ಮೆಲೆ ನೀನಿಟ್ಟ ಬೆಂಕಿ ಇದು. ಬಾಳಿಗೆ ಕೆಡುಕಾದವನನ್ನು. ಪಾಪಿ ಮಗನನ್ನು ಹುಟ್ಟಿದಂದೇ ಎಸೆಯದಾದೆವು. ಕೃಷ್ಣನನ್ನು ಕಟ್ಟುವನೆ ? ಭಲೆ ! ಆಕಾಶದ ಮೈಯ ಮುಟ್ಟುವನು ಭಲೆ ; ಅತಿ ಧೈರ್ಯವಂತನು ನಾನೇನು ಹೇಳಲಿ ಎಂದಳು ಚಂದ್ರಮುಖಿಯಾದ ಗಾಂಧಾರಿ.
ಪದಾರ್ಥ (ಕ.ಗ.ಪ)
ಕಿಚ್ಚು-ಕೊಳ್ಳಿ
ಮೂಲ ...{Loading}...
ನೆಟ್ಟನೆಲೆ ಧೃತರಾಷ್ಟ್ರ ನೃಪ ನೀ
ನಿಟ್ಟ ಕಿಚ್ಚಿದು ಪಾಪಿ ಮಗನನು
ಹುಟ್ಟಿದಂದೇ ಬಿಸುಡದಾದೆವು ಬಾಳುಗೇಡಿಯನು
ಕಟ್ಟುವನು ಗಡ ಕೃಷ್ಣನನು ಮೈ
ಮುಟ್ಟುವನು ಗಡ ಗಗನವನು ಬಲು
ದಿಟ್ಟತನ ತಾನೇನು ಹೇಳುವೆನೆಂದಳಿಂದುಮುಖಿ ॥49॥
೦೫೦ ದುರುಳ ಮಗನೇ ...{Loading}...
ದುರುಳ ಮಗನೇ ಕೃಷ್ಣ ರಾಯರ
ಕೆರಳಿಚುವರೇ ಯಾದವರು ನಮ
ಗೆರವಿಗರೆ ವಸುದೇವನಲಿ ತಾ ಭೇದವೇ ನಿನಗೆ
ದುರುಳತನವಿದು ಬೇಡ ಖುಲ್ಲರ
ನೆರವಿಯೊಳಗಾಡಿದೊಡೆ ತಪ್ಪದು
ನರಕವೆಂದನು ಕುರುಪತಿಗೆ ಧೃತರಾಷ್ಟ್ರ ಭೂಪಾಲ ॥50॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಟ್ಟ ಮಗನೇ ! ಕೃಷ್ಣನನ್ನು ಕೆರಳಿಸುವರೆ ? ಯಾದವರು ನಮಗೆ ದೂರದವರೆ ? ವಸುದೇವನಲ್ಲಿ ನೀನು ಭೇದವನ್ನು ಕಾಣುತ್ತೀಯೆ ? ಈ ಕೆಟ್ಟತನ ಬೇಡ. ಅಲ್ಪರ ಗುಂಪಿನಲ್ಲಿ ಸೇರಿ ಆಡಿದರೆ ನರಕವು ತಪ್ಪದು ಎಂದು ದುರ್ಯೋಧನನಿಗೆ ಧೃತರಾಷ್ಟ್ರನು ಹೇಳಿದನು.
ಪದಾರ್ಥ (ಕ.ಗ.ಪ)
ಎರವಿಗ-ಬೇರೆಯವ, ಖುಲ್ಲ-ನೀಚ, ನೆರವಿ-ಹಿಂಡು
ಮೂಲ ...{Loading}...
ದುರುಳ ಮಗನೇ ಕೃಷ್ಣ ರಾಯರ
ಕೆರಳಿಚುವರೇ ಯಾದವರು ನಮ
ಗೆರವಿಗರೆ ವಸುದೇವನಲಿ ತಾ ಭೇದವೇ ನಿನಗೆ
ದುರುಳತನವಿದು ಬೇಡ ಖುಲ್ಲರ
ನೆರವಿಯೊಳಗಾಡಿದೊಡೆ ತಪ್ಪದು
ನರಕವೆಂದನು ಕುರುಪತಿಗೆ ಧೃತರಾಷ್ಟ್ರ ಭೂಪಾಲ ॥50॥
೦೫೧ ಎಲೆ ಮರುಳೆ ...{Loading}...
ಎಲೆ ಮರುಳೆ ಧೃತರಾಷ್ಟ್ರ ನಂಜಿನ
ಬಳಗವೀತನ ಬಂಧುಕೃತ್ಯದ
ಬಳಕೆಯಲಿ ನೀ ನಿನ್ನ ಕಂದನ ಬೇಡಿಕೊಳಲೇಕೈ
ಮುಳಿದು ಬಗಳುವ ನಾಯÉ್ಗು ಚಂದ್ರಮ
ನಳುಕುವನೆ ನರಿಯೊರಲಿದೊಡೆ ಕಳ
ವಳವಹುದೆ ಸಿಂಹಕ್ಕೆಯೆಂದನು ಖಾತಿಯಲಿ ವಿದುರ ॥51॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ, ಹುಚ್ಚ ! ಧೃತರಾಷ್ಟ್ರ, ಈತನ ಬಳಗವು ವಿಷದ ಬಳಗ, ಬಂಧುಗಳ ಸಂಬಂಧದ ರೂಢಿಯಲ್ಲಿ ನೀನು ನಿನ್ನ ಮಗನನ್ನು ಏಕೆ ಬೇಡಿಕೊಳ್ಳುವೆ ? ಕೋಪಿಸಿಕೊಂಡು ಬೊಗಳುವ ನಾಯಿಗೆ ಚಂದ್ರನು ಹೆದರುವನೆ ? ನರಿಯು ಅರಚಿದರೆ ಸಿಂಹಕ್ಕೆ ಕಳವಳವೆ ? ಎಂದು ವಿದುರನು ಕೋಪದಿಂದ ಹೇಳಿದನು.
ಪದಾರ್ಥ (ಕ.ಗ.ಪ)
ನಂಜು-ವಿಷ
ಮೂಲ ...{Loading}...
ಎಲೆ ಮರುಳೆ ಧೃತರಾಷ್ಟ್ರ ನಂಜಿನ
ಬಳಗವೀತನ ಬಂಧುಕೃತ್ಯದ
ಬಳಕೆಯಲಿ ನೀ ನಿನ್ನ ಕಂದನ ಬೇಡಿಕೊಳಲೇಕೈ
ಮುಳಿದು ಬಗಳುವ ನಾಯÉ್ಗು ಚಂದ್ರಮ
ನಳುಕುವನೆ ನರಿಯೊರಲಿದೊಡೆ ಕಳ
ವಳವಹುದೆ ಸಿಂಹಕ್ಕೆಯೆಂದನು ಖಾತಿಯಲಿ ವಿದುರ ॥51॥
೦೫೨ ನೊರಜು ಹೊಕ್ಕೊಡೆ ...{Loading}...
ನೊರಜು ಹೊಕ್ಕೊಡೆ ಕಲಕುವುದೆ ಸಾ
ಗರದ ಜಲ ನೊಣವೆರಗಿದೊಡೆ ಕುಲ
ಗಿರಿಗಳಲ್ಲಾಡುವವೆ ಕೇಳ್ ಧೃತರಾಷ್ಟ್ರ ಭೂಪತಿಯೆ
ತೆರಳಲರಿವನೆ ಕೊಬ್ಬಿದೊಳ್ಳೆಯ
ಮರಿಗೆ ಗರುಡನು ನಿನ್ನ ಮಕ್ಕಳ
ದುರುಳತನಕಂಜುವನೆ ಮುರರಿಪುಯೆಂದನಾ ವಿದುರ ॥52॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಣ್ಣ ಸೊಳ್ಳೆಯೊಂದು ಸಾಗರವ ಪ್ರವೇಶಿಸಿದರೆ ಸಾಗರದ ನೀರು ಕದಡುವುದೆ ? ನೊಣವು ಮುತ್ತಿದರೆ ಕುಲಗಿರಿಗಳು ಅಲ್ಲಾಡುತ್ತವೆಯೆ? ಧೃತರಾಷ್ಟ್ರ ಮಹಾರಾಜಾ ! ಕೇಳು. ಕೊಬ್ಬಿದ ನೀರುಹಾವಿಗೆ ಗರುಡನು ಹೆದರುತ್ತಾನೆಯೆ ? ನಿನ್ನ ಮಕ್ಕಳ ಕೆಟ್ಟ ತನಕ್ಕೆ ಕೃಷ್ಣನು ಭಯ ಪಡುವನೆ ? ಎಂದು ವಿದುರನು ಕೇಳಿದನು.
ಪದಾರ್ಥ (ಕ.ಗ.ಪ)
ಒಳ್ಳೆ-ನೀರಹಾವು
ಮೂಲ ...{Loading}...
ನೊರಜು ಹೊಕ್ಕೊಡೆ ಕಲಕುವುದೆ ಸಾ
ಗರದ ಜಲ ನೊಣವೆರಗಿದೊಡೆ ಕುಲ
ಗಿರಿಗಳಲ್ಲಾಡುವವೆ ಕೇಳ್ ಧೃತರಾಷ್ಟ್ರ ಭೂಪತಿಯೆ
ತೆರಳಲರಿವನೆ ಕೊಬ್ಬಿದೊಳ್ಳೆಯ
ಮರಿಗೆ ಗರುಡನು ನಿನ್ನ ಮಕ್ಕಳ
ದುರುಳತನಕಂಜುವನೆ ಮುರರಿಪುಯೆಂದನಾ ವಿದುರ ॥52॥
೦೫೩ ಲೋಕ ಮೈ ...{Loading}...
ಲೋಕ ಮೈ ಮರೆವಂದು ಜಲಧಿಗ
ಳೌಕಿ ಹಳಚುವ ಹೊತ್ತು ತಾನಿಹ
ನೇಕಮೇವಾದ್ವಿತಿಯ ಪರಮೇಕೈಕಹಂಯೆಂದು
ಏಕಮಾತ್ಮಾಯೆಂದು ವೇದಾ
ನೀಕ ಕೈವಾರಿಸಲು ಮೆರೆವ ನಿ
ರಾಕೃತಿಯ ಪರಬೊಮ್ಮ ರೂಪಿನ ತಾತ ನೋಡೀತ ॥53॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಕವು ಮುಳುಗಿದ್ದಾಗ, ಸಮುದ್ರವು ಘರ್ಷಣೆಗೊಂಡು ಅಪ್ಪಳಿಸುತ್ತಿದ್ದಾಗ ಮತ್ತೊಬ್ಬರಿಲ್ಲದೆ ತಾನೊಬ್ಬನೇ ಒಬ್ಬನಾಗಿದ್ದೇನೆಂದು ಇರುವವನು. ಒಂದೇ ಆತ್ಮವೆಂದು ವೇದಗಳ ಸಮೂಹವು ಹೊಗಳುತ್ತಿರಲು ನಿರಾಕಾರ ರೂಪಿನಿಂದ ಮೆರೆಯುವ ಪರಬ್ರಹ್ಮರೂಪಿನ ತಾತನಿವನು ನೋಡು.
ಪದಾರ್ಥ (ಕ.ಗ.ಪ)
ಹಳಚು-ಅಪ್ಪಳಿಸು, ಕೈವಾರಿಸಲು-ಹೊಗಳಲು.
ತಾತ - ತಂದೆ
ಮೂಲ ...{Loading}...
ಲೋಕ ಮೈ ಮರೆವಂದು ಜಲಧಿಗ
ಳೌಕಿ ಹಳಚುವ ಹೊತ್ತು ತಾನಿಹ
ನೇಕಮೇವಾದ್ವಿತಿಯ ಪರಮೇಕೈಕಹಂಯೆಂದು
ಏಕಮಾತ್ಮಾಯೆಂದು ವೇದಾ
ನೀಕ ಕೈವಾರಿಸಲು ಮೆರೆವ ನಿ
ರಾಕೃತಿಯ ಪರಬೊಮ್ಮ ರೂಪಿನ ತಾತ ನೋಡೀತ ॥53॥
೦೫೪ ಈತನಾ ಮಧು ...{Loading}...
ಈತನಾ ಮಧು ಕೈಟಭನ ಮುರಿ
ದಾತ ಜಲಧಿಯೊಳಿಳಿದು ವೇದವ
ನೀತ ತಂದನು ಜಯನ ವಿಜಯನ ದೈತ್ಯಜನ್ಮವನು
ಈತನೊದೆದನು ಪೌಂಡ್ರಕನನಂ
ದೀತ ಕೊಂದನು ಹಂಸ ಡಿಬಿಕರ
ನೀತನೊರಸಿದನರಸ ಚಿತ್ತೈಸೆಂದನಾ ವಿದುರ ॥54॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಧು-ಕೈಟಭರನ್ನು ಕೊಂದವನು ಇವನೇ. ಸಮುದ್ರದಲ್ಲಿ ಇಳಿದು ವೇದವನ್ನು ಇವನೇ ತಂದನು. ಜಯ-ವಿಜಯರ ದೈತ್ಯ ಜನ್ಮವನು ಈತನೆ ತೊಡೆದು ಹಾಕಿದನು. ಅಂದು ಪೌಂಡ್ರಕನನ್ನು ಇವನು ಕೊಂದನು. ಹಂಸ-ಡಿಬಿಕರನ್ನು ಸಾಯಿಸಿದನು. ಅರಸ ಗಮನವಿಟ್ಟು ಕೇಳು ಎಂದು ವಿದುರನು ಹೇಳಿದನು.
ಟಿಪ್ಪನೀ (ಕ.ಗ.ಪ)
ಹಂಸ-ಡಿಬಿಕರು : ಹಂಸ ಮತ್ತು ಡಿಬಿಕರು ಜರಾಸಂಧನಿಗೆ ಆಪ್ತರಾಗಿದ್ದವರು. ರಾಕ್ಷಸ ಸೋದರರು. ಸಾಳ್ವ ದೊರೆ ಬ್ರಹ್ಮದತ್ತನ ಮಕ್ಕಳು ಹಂಸನು ಕರೂಷ ದೇಶದ ಅರಸ. ಖಬಿಕ ಜರಾಸಂಧನ ಪ್ರಧಾಮಮಂತ್ರಿಯಗಿದ್ದ. ರಾಜಸೂಯಾರಂಭ ಪರ್ವದಲ್ಲಿ ಇವರ ಬಗೆಗೆ ವಿಶೇಷ ಉಲ್ಲೇಖಗಳಿವೆ.
ಮೂಲ ...{Loading}...
ಈತನಾ ಮಧು ಕೈಟಭನ ಮುರಿ
ದಾತ ಜಲಧಿಯೊಳಿಳಿದು ವೇದವ
ನೀತ ತಂದನು ಜಯನ ವಿಜಯನ ದೈತ್ಯಜನ್ಮವನು
ಈತನೊದೆದನು ಪೌಂಡ್ರಕನನಂ
ದೀತ ಕೊಂದನು ಹಂಸ ಡಿಬಿಕರ
ನೀತನೊರಸಿದನರಸ ಚಿತ್ತೈಸೆಂದನಾ ವಿದುರ ॥54॥
೦೫೫ ಸಲಿಲಮಯವಾದಖಿಳ ಭುವನಾ ...{Loading}...
ಸಲಿಲಮಯವಾದಖಿಳ ಭುವನಾ
ವಳಿಗಳೊಳಗೆ ವಿರಿಂಚಿಯಾಳುತ
ಮುಳುಗುತೈತಂದಾಲದೆಲೆ ಮಂಚದಲಿ ಪವಡಿಸಿದ
ಹೊಳವು ನೀನಾರೆಂದು ಜಠರದೊ
ಳಿಳಿಯಲಾ ಬ್ರಹ್ಮಾಂಡ ಶತದಲಿ
ಹೊಲಬುಗೆಡೆ ಹೊಕ್ಕುಳಲಿ ಬ್ರಹ್ಮನನೀತನುಗುಳಿದನು ॥55॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀರಿನಲ್ಲಿ ಮುಳುಗಿದ ಸಮಸ್ತಲೋಕದೊಳಗೆ ಬ್ರಹ್ಮನು ತೇಲುತ್ತ, ಮುಳುಗುತ್ತ ಆಲದೆಲೆಯ ಹಾಸಿಗೆಯಲ್ಲಿ ಮಲಗಿದ ಪ್ರಕಾಶದ ಆಕೃತಿಯನ್ನು ಕಂಡು ‘ನೀನುಯಾರು’ ಎಂದು ಕೇಳುತ್ತ ಅವನ ಹೊಟ್ಟೆಯಲ್ಲಿ ಹೊಗಲು ಆ ನೂರು ಬ್ರಹ್ಮಾಂಡಗಳಲ್ಲಿ ದಾರಿಗೆಡಲು ಆ ಬ್ರಹ್ಮನನ್ನು ಈತನು ಹೊಕ್ಕಳಿನಿಂದ ಹೊರಹಾಕಿದನು.
ಟಿಪ್ಪನೀ (ಕ.ಗ.ಪ)
ವರಾಹ- ವಿಷ್ಣುವಿನ ಮೂರನೇ ಅವತಾರ ಹಿರಣ್ಯಾಕ್ಷನನ್ನು ಸಂಹರಿಸುವುದಕ್ಕಾಗಿ ವಿಷ್ಣು ಈ ಅವತಾರವನ್ನು ಕೈಗೊಂಡ.
ಸಮುದ್ರದಲ್ಲಿ ಇಳಿದು ವೇದವನ್ನು ತಂದವನು-ವಿಷ್ಣುವು ತನ್ನ ಹತ್ತು ಅವತಾರಗಳಲ್ಲಿ ಮೊದಲು ಮತ್ಸ್ಯಾವತಾರವನ್ನು ತಾಳಿದಾಗ ಸೋಮಕನೆಂಬ ರಾಕ್ಷಸನು ವೇದವನ್ನು ಅಪಹರಿಸಿ ಸಾಗರದೊಳಗೆ ಅಡಗಿದ್ದಾಗ ವಿಷ್ಣುವು ಮತ್ಸ್ಯನಾಗಿ ಸಮುದ್ರದೊಳ ಹೊಕ್ಕು ಮರಳಿ ವೇದಗಳನ್ನು ಹೊರಗೆ ತಂದನು.
ಮೂಲ ...{Loading}...
ಸಲಿಲಮಯವಾದಖಿಳ ಭುವನಾ
ವಳಿಗಳೊಳಗೆ ವಿರಿಂಚಿಯಾಳುತ
ಮುಳುಗುತೈತಂದಾಲದೆಲೆ ಮಂಚದಲಿ ಪವಡಿಸಿದ
ಹೊಳವು ನೀನಾರೆಂದು ಜಠರದೊ
ಳಿಳಿಯಲಾ ಬ್ರಹ್ಮಾಂಡ ಶತದಲಿ
ಹೊಲಬುಗೆಡೆ ಹೊಕ್ಕುಳಲಿ ಬ್ರಹ್ಮನನೀತನುಗುಳಿದನು ॥55॥
೦೫೬ ಸೂಚಿಸುವ ಶ್ರುತಿನಿಚಯ ...{Loading}...
ಸೂಚಿಸುವ ಶ್ರುತಿನಿಚಯ ಬರಬರ
ನಾಚಿದವು ವೇದಾಂತನಿಚಯದ
ವಾಚನೆಗಳಳವಳಿದು ನಿಂದವು ನಿಜವ ಕಾಣಿಸದೆ
ಆಚರಿಸಲಳವಲ್ಲ ಮುನಿಗಳ
ಗೋಚರಕೆ ಮನಗುಡದ ಹರಿಯನು
ನೀಚರರಿಯದೆ ಬಿಗಿಯಲಳವಡಿಸಿದರು ನೇಣುಗಳ ॥56॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿಳಿಸುವ ವೇದರಾಶಿಗಳು ಮುಂದೆ ನಾಚಿದವು. ವೇದಾಂತ ಸಮೂಹದ ಪಾಂಡಿತ್ಯವು ಸತ್ಯವನ್ನು ತಿಳಿಯದೆ ನಿಂದವು. ಆಚರಿಸಲು ಸಾಧ್ಯವಿಲ್ಲದ ಮುನಿಗಳಿಗೆ ಕಾಣದ ಕೃಷ್ಣನನ್ನು ನೀಚರು ತಿಳಿಯದೇ ಬಿಗಿಯುವುದಕ್ಕಾಗಿ ನೇಣುಗಳನ್ನು ಸಜ್ಜುಗೊಳಿಸಿದರು.
ಪದಾರ್ಥ (ಕ.ಗ.ಪ)
ನಿಚಯ-ಗುಂಪು, ಬರಬರ-ಕ್ರಮೇಣ, ಅಳವಳಿ-ಬಲಗುಂದು.
ಮೂಲ ...{Loading}...
ಸೂಚಿಸುವ ಶ್ರುತಿನಿಚಯ ಬರಬರ
ನಾಚಿದವು ವೇದಾಂತನಿಚಯದ
ವಾಚನೆಗಳಳವಳಿದು ನಿಂದವು ನಿಜವ ಕಾಣಿಸದೆ
ಆಚರಿಸಲಳವಲ್ಲ ಮುನಿಗಳ
ಗೋಚರಕೆ ಮನಗುಡದ ಹರಿಯನು
ನೀಚರರಿಯದೆ ಬಿಗಿಯಲಳವಡಿಸಿದರು ನೇಣುಗಳ ॥56॥
೦೫೭ ವಿದುರನಿನ್ತೆನುತಿರಲು ...{Loading}...
ವಿದುರನ್ ಇಂತ್ ಎನುತಿರಲು ಮಿಂಚಿನ
ಹೊದರು+++(=ಸಮೂಹ)+++ ಹುರಿ-ಗೊಂಡ್ ಅಂತೆ ರವಿ-ಶತ
ಉದುರಿದವು ಮೈ-ಮುರಿದು ನಿಂದ್ ಅಡೆ ದೇವರ್ ಅಂಗದಲಿ
ಸದೆದುದ್+++(=ಬಡೆದುದ್)+++ ಆಸ್ಥಾನವನು ಘನ ತೇ-
ಜದ ಲಹರಿ ಲೀಲೆಯಲಿ ಹರಿ ತೋ-
ರಿದನು ನಿರುಪಮ ವಿಶ್ವ-ರೂಪವನ್ ಆ ಮಹಾ ಸಭೆಗೆ ॥57॥+++(5)+++
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನು ಹೇಳುತ್ತಿರಲು ಕೃಷ್ಣನು ಮೈಮುರಿದು ನಿಂತರೆ ಮಿಂಚಿನ ರಾಶಿ ಹೊಸೆದು ಬಂದಂತೆ ನೂರು ಸೂರ್ಯರು ಒಟ್ಟಾಗಿ ಹೊರಬಂದರು ಆ ದೇವನ ಮೈಯಿಂದ ! ಆ ಮಹಾತೇಜಸ್ಸು ಆಸ್ಥಾನವನ್ನು ತುಂಬಿತು. ಹೀಗೆ ಹರಿಯು ಲೀಲಾಮಯನಾಗಿ ತನ್ನ ವಿಶ್ವರೂಪವನ್ನು ಸಭೆಗೆ ತೋರಿಸಿದನು.
ಪದಾರ್ಥ (ಕ.ಗ.ಪ)
ಹೊದರು-ರಾಶಿ, ಲಹರಿ-ಅಲೆ, ನಿರುಪಮ-ಹೋಲಿಕೆಯಿಲ್ಲದ
ಮೂಲ ...{Loading}...
ವಿದುರನಿಂತೆನುತಿರಲು ಮಿಂಚಿನ
ಹೊದರು ಹುರಿಗೊಂಡಂತೆ ರವಿಶತ
ಉದುರಿದವು ಮೈಮುರಿದು ನಿಂದಡೆ ದೇವರಂಗದಲಿ
ಸದೆದುದಾಸ್ಥಾನವನು ಘನ ತೇ
ಜದ ಲಹರಿ ಲೀಲೆಯಲಿ ಹರಿ ತೋ
ರಿದನು ನಿರುಪಮ ವಿಶ್ವರೂಪವನಾ ಮಹಾ ಸಭೆಗೆ ॥57॥
೦೫೮ ಚರಣದುಙ್ಗುಟದಲ್ಲಿ ದೇವರು ...{Loading}...
ಚರಣದ್ ಉಂಗುಟದಲ್ಲಿ ದೇವರು
ತುರುಗಿದರು+++(=ತುಂಬಿದರು)+++, ನೊಸಲಿನಲಿ+++(=ಹಣೆಯಲ್ಲಿ)+++ ಕಮಲಜ-
ನ್, ಉರದಲ್ ಅಗ್ಗದ ರುದ್ರನ್, ಆಸ್ಯದೊಳ್ ಅಗ್ನಿ ವಾಯುಗಳು
ಬೆರಳಲ್ ಇಂದ್ರಾದಿಗಳು ನಯನಾಂ-
ಬು-ರುಹದಲಿ ರವಿ, ನಾಭಿಯಲ್ ಅಭವ+++(→ಶಿವ??)+++
ವರ-ಭುಜಾಗ್ರದೊಳ್ ಅಖಿಳ ದಿಗು-ಪಾಲಕರು ರಂಜಿಸಿತು ॥58॥+++(5)+++
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಹೆಬ್ಬೆರಳಿನಲ್ಲಿ ದೇವರುಗಳು ತುಂಬಿದರು. ಹಣೆಯಲ್ಲಿ ಬ್ರಹ್ಮ, ಎದೆಯಲ್ಲಿ ಶ್ರೇಷ್ಠನಾದ ರುದ್ರ, ಮೂಗಿನ ಹೊರಳೆಯಲ್ಲಿ ಅಗ್ನಿ ವಾಯುಗಳು. ಬೆರಳುಗಳಲ್ಲಿ ಇಂದ್ರರೇ ಮೊದಲಾದವರು, ಕಣ್ಣಿನ ಕಮಲದಲ್ಲಿ ಸೂರ್ಯ, ಹೊಕ್ಕಳಿನಲ್ಲಿ ಶಿವ, ಭುಜದ ತುದಿಯಲ್ಲಿ ಸಮಸ್ತ ದಿಕ್ಪಾಲಕರು ಪ್ರಕಾಶಿಸಿದರು.
ಪದಾರ್ಥ (ಕ.ಗ.ಪ)
ತುರುಗು-ತುಂಬು, ನೊಸಲು-ಹಣೆ, ಕಮಲಜ-ಬ್ರಹ್ಮ, ಉರ-ಎದೆ, ನಾಸ್ಯ-ಮೂಗು, ಅಂಬುರುಹ-ಕಮಲ, ನಾಭಿ-ಹೊಕ್ಕಳು
ಮೂಲ ...{Loading}...
ಚರಣದುಂಗುಟದಲ್ಲಿ ದೇವರು
ತುರುಗಿದರು ನೊಸಲಿನಲಿ ಕಮಲಜ
ನುರದಲಗ್ಗದ ರುದ್ರ ನಾಸ್ಯದೊಳಗ್ನಿ ವಾಯುಗಳು
ಬೆರಳಲಿಂದ್ರಾದಿಗಳು ನಯನಾಂ
ಬುರುಹದಲಿ ರವಿ ನಾಭಿಯಲಭವ
ವರ ಭುಜಾಗ್ರದೊಳಖಿಳ ದಿಗುಪಾಲಕರು ರಂಜಿಸಿತು ॥58॥
೦೫೯ ಸುರರು ಖಚರರು ...{Loading}...
ಸುರರು ಖ-ಚರರು ಕಿನ್ನರರು ಕಿಂ-
ಪುರುಷರ್ ಅನುಪಮ-ಸಿದ್ಧ–ವಿದ್ಯಾ-
ಧರರು ವಸುಗಳು ಮನುಗಳ್ ಆದಿತ್ಯರು ಭುಜಂಗಮರು
ಗರುಡ-ಗಂಧರ್ವಾಶ್ವಿನೀ-ದೇ
ವರು ಸುವಿಶ್ವೇ-ದೇವರ್ ಅಖಿಳಾ-
ಪ್ಸರೆಯರ್ ಎಸೆದರು ರೋಮ-ರೋಮದ ಕುಳಿಯ+++(=ಗರ್ತದ)+++ ಚೌಕದಲಿ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುರರು, ಖಚರರು, ಕಿನ್ನರರು, ಕಿಂಪುರುಷರು ಹೋಲಿಕೆಯಿಲ್ಲದ ಶ್ರೇಷ್ಠರಾದ ಸಿದ್ಧ ವಿದ್ಯಾಧರರು, ವಸುಗಳು ಮನುಗಳು, ಆದಿತ್ಯರು ನಾಗರು ಗರುಡ-ಗಂಧರ್ವರು, ಅಶ್ವಿನಿದೇವತೆಗಳು, ವಿಶ್ವೇದೇವರುಗಳು ಸಮಸ್ತ ಅಪ್ಸರೆಯರು ಮೈಯ ಕೂದಲುಗಳ ಕುಳಿಯಲ್ಲಿ ಕಾಣಿಸಿದರು.
ಮೂಲ ...{Loading}...
ಸುರರು ಖಚರರು ಕಿನ್ನರರು ಕಿಂ
ಪುರುಷರನುಪಮ ಸಿದ್ಧ ವಿದ್ಯಾ
ಧರರು ವಸುಗಳು ಮನುಗಳಾದಿತ್ಯರು ಭುಜಂಗಮರು
ಗರುಡ ಗಂಧರ್ವಾಶ್ವಿನೀ ದೇ
ವರು ಸುವಿಶ್ವೇದೇವರಖಿಳಾ
ಪ್ಸರೆಯರೆಸೆದರು ರೋಮ ರೋಮದ ಕುಳಿಯಚೌಕದಲಿ ॥59॥
೦೬೦ ಬಲದ ಭುಜದಲಿ ...{Loading}...
ಬಲದ ಭುಜದಲಿ ಪಾರ್ಥನ್, ಎಡದಲಿ
ಹಲಧರನು, ಚರಣದಲಿ ಧರ್ಮ-ಜ,
ಕಲಿ ವೃಕೋದರ, ನಕುಲ-ಸಹದೇವಾದಿ ಯಾದವರು
ಲಲಿತ ಕಾಂತಿಯೊಳ್ ಅಖಿಳ ತಾರಾ-
ವಳಿಗಳ್ ಅಮಲಗ್ರಹವಿರಲು ತೊಳ
ತೊಳಗಿ ಮೆರೆದನು ವಿಶ್ವರೂಪ ವಿಹಾರಿ ಮುರವೈರಿ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲತೋಳಿನಲ್ಲಿ ಅರ್ಜುನನು, ಎಡದಲ್ಲಿ ಬಲರಾಮನು ಪಾದದಲ್ಲಿ ಧರ್ಮರಾಜನು, ವೀರಭೀಮ, ನಕುಲ, ಸಹದೇವನೆ ಮೊದಲಾದ ಯಾದವರು, ಮನೋಹರವಾದ ಚೆಲುವಿನಿಂದ ಕೂಡಿದ ಸಮಸ್ತ ನಕ್ಷತ್ರ ಸಮೂಹ, ನಿರ್ಮಲವಾದ ಗ್ರಹಗಳು ಇರಲು ವಿಶ್ವರೂಪ ವಿಹಾರಿ ಕೃಷ್ಣನು ಪ್ರಕಾಶದಿಂದ ಬೆಳಗಿ ಶೋಭಿಸಿದನು.
ಪದಾರ್ಥ (ಕ.ಗ.ಪ)
ಹಲಧರ-ಬಲರಾಮ, ಲಲಿತ-ಚೆಲುವ, ಕಾಂತಿ-ಬೆಳಕು, ತಾರಾವಳಿ-ನಕ್ಷತ್ರಗಳ ಸಮೂಹ
ಮೂಲ ...{Loading}...
ಬಲದ ಭುಜದಲಿ ಪಾರ್ಥನೆಡದಲಿ
ಹಲಧರನು ಚರಣದಲಿ ಧರ್ಮಜ
ಕಲಿ ವೃಕೋದರ ನಕುಲ ಸಹದೇವಾದಿ ಯಾದವರು
ಲಲಿತ ಕಾಂತಿಯೊಳಖಿಳ ತಾರಾ
ವಳಿಗಳಮಲಗ್ರಹವಿರಲು ತೊಳ
ತೊಳಗಿ ಮೆರೆದನು ವಿಶ್ವರೂಪ ವಿಹಾರಿ ಮುರವೈರಿ ॥60॥
೦೬೧ ಕಿವಿಗಳಲಿ ಕಙ್ಗಳಲಿ ...{Loading}...
ಕಿವಿಗಳಲಿ ಕಂಗಳಲಿ ನಾಸಾ
ವಿವರದಲಿ ಹೊಗೆ ಮಸಗಿ ದಳ್ಳುರಿ
ತಿವಿದುದಾಕಾಶವನು ಕವಿದುದು ಕಾಂತಿ ದೆಸೆದೆಸೆಗೆ
ರವಿಯ ತಗಡೆನೆ ತಳಿತವಾಯುಧ
ನಿವಹ ಸಾಸಿರಭುಜದ ಬಹುಳತೆ
ಯವಗಡಿಸಿ ವೈಕುಂಠನೆಸೆದನು ವಿಶ್ವರೂಪದಲಿ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಿವಿಗಳಲ್ಲಿ, ಕಣ್ಣುಗಳಲ್ಲಿ, ಮೂಗಿನ ಹೊಳ್ಳೆಗಳಲ್ಲಿ ಹೊಗೆ ತುಂಬಿ ದೊಡ್ಡ ಉರಿ ಆಕಾಶವನ್ನು ತಿವಿಯಿತು. ದಿಕ್ಕು ದಿಕ್ಕುಗಳಿಗೆ ಬೆಳಕು ಹರಡಿತು. ಸೂರ್ಯನ ತಗಡೋ ಎನ್ನುವಂತೆ ಸಾವಿರ ತೋಳುಗಳ ವಿಸ್ತಾರದಲ್ಲಿ ಆಯುಧಗಳು ಹೊಳೆದವು. ವಿಷ್ಣು ಸ್ವರೂಪಿ ಕೃಷ್ಣನು ವಿಶ್ವರೂಪದಲ್ಲಿ ಶೋಭಿಸಿದನು.
ಪದಾರ್ಥ (ಕ.ಗ.ಪ)
ಮಸಗು-ಹರಡು/ತುಂಬು, ದಳ್ಳುರಿ-ದೊಡ್ಡ ಉರಿ, ನಿವಹ-ರಾಶಿ, ವೈಕುಂಠ-ವಿಷ್ಣು.
ಮೂಲ ...{Loading}...
ಕಿವಿಗಳಲಿ ಕಂಗಳಲಿ ನಾಸಾ
ವಿವರದಲಿ ಹೊಗೆ ಮಸಗಿ ದಳ್ಳುರಿ
ತಿವಿದುದಾಕಾಶವನು ಕವಿದುದು ಕಾಂತಿ ದೆಸೆದೆಸೆಗೆ
ರವಿಯ ತಗಡೆನೆ ತಳಿತವಾಯುಧ
ನಿವಹ ಸಾಸಿರಭುಜದ ಬಹುಳತೆ
ಯವಗಡಿಸಿ ವೈಕುಂಠನೆಸೆದನು ವಿಶ್ವರೂಪದಲಿ ॥61॥
೦೬೨ ಅರಳಮಳೆ ಸೂಸಿದುವು ...{Loading}...
ಅರಳಮಳೆ ಸೂಸಿದುವು ದುಂದುಭಿ
ಮೊರೆದುದಾಕಾಶದಲಿ ಮುದದಲಿ
ಧರಣಿ ಬಿದಿರಿತು ತನುವನುಕ್ಕಿದುದಬುಧಿ ದೆಸೆದೆಸೆಗೆ
ಕರಿ ಕಮಠರುಬ್ಬಾಳುತನ ಮಿ
ಕ್ಕಿರೆ ಮಹಾದ್ಭುತವಾಯ್ತು ಕಂಡುದು
ಹರಿಯ ರೂಪವನೊಬ್ಬ ಕೌರವನಲ್ಲದುಳಿದವರು ॥62॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೂಮಳೆ ಸುರಿದವು ಆಕಾಶದಲ್ಲಿ ಸಂತೋಷದಿಂದ ನಗಾರಿ ಬಾರಿಸಿತು. ಭೂಮಿ ನಡುಗಿತು. ಸಮುದ್ರವು ದಿಕ್ಕು ದಿಕ್ಕಿಗೂ ಮೈ ಉಕ್ಕಿಸಿತು. ಭೂಮಿಯನ್ನು ಹೊತ್ತ ದಿಗ್ಗಜಗಳ ಕಮಠರ (ಆಮೆಯ) ಏರಿಳಿತವು ಹೆಚ್ಚುತ್ತಿರಲು ಮಹಾ ವಿಸ್ಮಯವಾಯಿತು. ಕೃಷ್ಣನ ವಿಶ್ವರೂಪವು ದುರ್ಯೋಧನನ ಹೊರತು ಉಳಿದವರೆಲ್ಲರಿಗೂ ಕಂಡಿತು.
ಪದಾರ್ಥ (ಕ.ಗ.ಪ)
ಅರಳು-ಹೂವು, ಬಿದಿರು-ನಡುಗು, ಕಮಠ-ಆಮೆ, ಉಬ್ಬಾಳುತನ-ಅಬ್ಬರ
ಮೂಲ ...{Loading}...
ಅರಳಮಳೆ ಸೂಸಿದುವು ದುಂದುಭಿ
ಮೊರೆದುದಾಕಾಶದಲಿ ಮುದದಲಿ
ಧರಣಿ ಬಿದಿರಿತು ತನುವನುಕ್ಕಿದುದಬುಧಿ ದೆಸೆದೆಸೆಗೆ
ಕರಿ ಕಮಠರುಬ್ಬಾಳುತನ ಮಿ
ಕ್ಕಿರೆ ಮಹಾದ್ಭುತವಾಯ್ತು ಕಂಡುದು
ಹರಿಯ ರೂಪವನೊಬ್ಬ ಕೌರವನಲ್ಲದುಳಿದವರು ॥62॥
೦೬೩ ತಳುಕನುಗಿದೀಡಾಡಿ ಪರಿಣತ ...{Loading}...
ತಳುಕನುಗಿದೀಡಾಡಿ ಪರಿಣತ
ಪುಳಕದಲಿ ನನೆನನೆದು ಹರುಷದ
ಜಲಧಿಯಲಿ ಮನ ಮುಳುಗಿ ಭಕುತಿಯ ಭಾರದಲಿ ಕುಸಿದು
ಅಳುಕಿ ತಮತಮಗೆದ್ದು ಮುನಿ ಸಂ
ಕುಲ ಸಹಿತ ಗಾಂಗೇಯ ಕೃಪ ನಿ
ರ್ಮಲ ವಿದುರ ಗುರು ಸಂಜಯಾದಿಗಳೆರಗಿದರು ಪದಕೆ ॥63॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನದ ದ್ವಂದ್ವಗಳನ್ನು ಹೊರಗಿಟ್ಟು -ಕಿತ್ತೆಸೆದು, ತುಂಬು ರೋಮಾಂಚನದಿಂದ ಒದ್ದೆಯಾಗಿ ಹರುಷ ಸಮುದ್ರದಲ್ಲಿ ಮುಳುಗಿ ಭಕ್ತಿಯ ಭಾರದಲ್ಲಿ ಕುಸಿದು ತಮ್ಮತಮ್ಮಲ್ಲಿಯೆ ಭಯಗೊಂಡು ಮುನಿ ಸಮೂಹದೊಡನೆ ಭೀಷ್ಮ, ಕೃಪ, ನಿರ್ಮಲವ್ಯಕ್ತಿಯಾದ ವಿದುರ, ಗುರು ದ್ರೋಣ ಸಂಜಯ ಮುಂತಾದವರು ಕೃಷ್ಣನ ಪಾದಗಳಿಗೆ ನಮಸ್ಕರಿಸಿದರು.
ಪದಾರ್ಥ (ಕ.ಗ.ಪ)
ತಳುಕು-ನಿಯಮ, ಸಂಕುಲ-ಸಮೂಹ, ಎರಗು-ನಮಸ್ಕರಿಸು.
ಮೂಲ ...{Loading}...
ತಳುಕನುಗಿದೀಡಾಡಿ ಪರಿಣತ
ಪುಳಕದಲಿ ನನೆನನೆದು ಹರುಷದ
ಜಲಧಿಯಲಿ ಮನ ಮುಳುಗಿ ಭಕುತಿಯ ಭಾರದಲಿ ಕುಸಿದು
ಅಳುಕಿ ತಮತಮಗೆದ್ದು ಮುನಿ ಸಂ
ಕುಲ ಸಹಿತ ಗಾಂಗೇಯ ಕೃಪ ನಿ
ರ್ಮಲ ವಿದುರ ಗುರು ಸಂಜಯಾದಿಗಳೆರಗಿದರು ಪದಕೆ ॥63॥
೦೬೪ ಒಳಗೆ ಹೊಳೆದನು ...{Loading}...
ಒಳಗೆ ಹೊಳೆದನು ಬಾಹ್ಯದಲಿ ಪ್ರ
ಜ್ವಲಿಸಿದನು ತಾನಲ್ಲದನ್ಯರ
ಬಳಕೆ ಬೇರೊಂದಿಲ್ಲದಂತಿರೆ ಕೂಡೆ ತೋರಿದನು
ಒಳಗೆ ಬಿಗಿವೆವೊ ಹೊರಗೆ ಕೃಷ್ಣನ
ಸಿಲುಕಿಸುವೆವೋ ತಿಳಿಯೆ ಕೃಷ್ಣರು
ಹಲಬರಿಹರಾರಾರ ಕಟ್ಟುವೆವೆಂದರಾ ಖಳರು ॥64॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂತರಂಗದಲ್ಲಿ ಹೊಳೆದನು, ಹೊರಗಿನ ಕಣ್ಣುಗಳಿಗೆ ಪ್ರಜ್ವಲಿಸಿದನು. ರೂಢಿಗೆ ತಾನಲ್ಲದೆ ಜೀವಿಗಳ ಬದುಕಿಗೆ ಬೇರೊಂದಿಲ್ಲವೆಂಬಂತೆ ತೋರಿದನು. ಕೃಷ್ಣನನ್ನು ಒಳಗೆ ಬಿಗಿಯುವೆವೊ ಹೊರಗೆ ಕಟ್ಟುವೆವೋ ತಿಳಿಯದಾಯಿತು. ಕೃಷ್ಣರು ಅನೇಕರು ಇದ್ದಾರೆ. ಯಾರನ್ನು ಕಟ್ಟಬೇಕು ? ಎಂದು ನೀಚರು ಅಂದರು.
ಪದಾರ್ಥ (ಕ.ಗ.ಪ)
ಬಾಹ್ಯ-ಹೊರಗೆ, ಹಲಬರು-ಅನೇಕ ಜನರು
ಮೂಲ ...{Loading}...
ಒಳಗೆ ಹೊಳೆದನು ಬಾಹ್ಯದಲಿ ಪ್ರ
ಜ್ವಲಿಸಿದನು ತಾನಲ್ಲದನ್ಯರ
ಬಳಕೆ ಬೇರೊಂದಿಲ್ಲದಂತಿರೆ ಕೂಡೆ ತೋರಿದನು
ಒಳಗೆ ಬಿಗಿವೆವೊ ಹೊರಗೆ ಕೃಷ್ಣನ
ಸಿಲುಕಿಸುವೆವೋ ತಿಳಿಯೆ ಕೃಷ್ಣರು
ಹಲಬರಿಹರಾರಾರ ಕಟ್ಟುವೆವೆಂದರಾ ಖಳರು ॥64॥
೦೬೫ ಅನುಪಮಾದ್ವಯದಲ್ಲಿ ಮುಳ್ಳಿನ ...{Loading}...
ಅನುಪಮಾದ್ವಯದಲ್ಲಿ ಮುಳ್ಳಿನ
ಮೊನೆಗೆ ಮೋಹುವರಿಲ್ಲ ತೆರಹೆಂ
ಬಿನಿತು ಪರಿಪೂರ್ಣದಲಿ ಸಭೆಯಾಣುಮಾತ್ರ ರೂಪದಲಿ
ಮನದ ಬಗೆ ಮುಟ್ಟದ ಮಹಾ ಮಹಿ
ಮನನು ಕಟ್ಟುವೆವೆಂತೆನುತ ತನ
ತನಗೆ ಕರ್ಣಾದಿಗಳು ಕೈಗಳ ಕದಪ ತೂಗಿದರು ॥65॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಳ್ಳಿನ ತುದಿಗೆ ಸಹ ಸ್ಥಳವಿಲ್ಲದಂತೆ ಪರಿಪೂರ್ಣನಾಗಿ ಹೋಲಿಕೆಗೆ ಸಲ್ಲದ, ಎರಡಿಲ್ಲದ, ಹೋಲಿಕೆಗೆ ಮೀರಿದವನು ಸಭೆಯಲ್ಲಿ ಅಣು ಮಾತ್ರದಲ್ಲಿದ್ದು, ಮನಸ್ಸಿನ ಕಲ್ಪನೆಗೆ ಯಾವ ರೀತಿಯಲ್ಲಿಯೂ ಸಿಕ್ಕದ ಮಹಾ ಮಹಿಮನನ್ನು ಹೇಗೆ ಕಟ್ಟುವೆವು ಎನ್ನುತ ಕರ್ಣ ಮೊದಲಾದವರು ತಮ್ಮ ತಮ್ಮಲ್ಲಿಯೇ ಗಲ್ಲದ ಮೇಲೆ ಕೈಯಿಟ್ಟು ತಲೆದೂಗಿದರು.
ಪದಾರ್ಥ (ಕ.ಗ.ಪ)
ಅನುಪಮ-ಹೋಲಿಕೆ ಇಲ್ಲದ, ಮೋಹು-ತುಂಬಿಕೊಳ್ಳುವ, ಅದ್ವಯ-ಎರಡಿಲ್ಲದ, ತೆರಹ-ಬಯಲು, ಕದಪ-ಗಲ್ಲ
ಮೂಲ ...{Loading}...
ಅನುಪಮಾದ್ವಯದಲ್ಲಿ ಮುಳ್ಳಿನ
ಮೊನೆಗೆ ಮೋಹುವರಿಲ್ಲ ತೆರಹೆಂ
ಬಿನಿತು ಪರಿಪೂರ್ಣದಲಿ ಸಭೆಯಾಣುಮಾತ್ರ ರೂಪದಲಿ
ಮನದ ಬಗೆ ಮುಟ್ಟದ ಮಹಾ ಮಹಿ
ಮನನು ಕಟ್ಟುವೆವೆಂತೆನುತ ತನ
ತನಗೆ ಕರ್ಣಾದಿಗಳು ಕೈಗಳ ಕದಪ ತೂಗಿದರು ॥65॥
೦೬೬ ವಿಮಳ ಕರುಣಾಸಿನ್ಧು ...{Loading}...
ವಿಮಳ ಕರುಣಾಸಿಂಧು ನೀನನು
ಪಮ ಚರಿತ್ರನು ನಿಮ್ಮಡಿಯ ಪದ
ಕಮಲ ದರುಶನದಿಂದ ಹಿಂಗಿದವಘದ ರಾಶಿಗಳು
ಸಮತೆಯಲಿ ನೀ ನೋಡು ಶರಣರ
ಮಮತೆ ಬೇಹುದು ಜೀಯ ಲಕ್ಷಿ ್ಮೀ
ರಮಣ ಕೃಪೆ ಮಾಡೆನುತ ಮೈಯಿಕ್ಕಿದಳು ಗಾಂಧಾರಿ ॥66॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿರ್ಮಲ ಕರುಣಾ ಸಮುದ್ರನೆ ನೀನು ಹೋಲಿಕೆಗೆ ಮೀರಿದ ಚಾರಿತ್ರನು. ನಿಮ್ಮ ಪಾದ ಕಮಲ ದರ್ಶನದಿಂದ ಪಾಪ ರಾಶಿಗಳು ಕಳೆದವು. ಸಮಾನತೆಯಿಂದ ನೋಡು, ಭಕ್ತರಲ್ಲಿ ಪ್ರೀತಿಯನ್ನು ನೀಡು, ಸ್ವಾಮಿ ಲಕ್ಷ್ಮೀ ರಮಣ ಕೃಪೆಮಾಡು’ ಎನ್ನುತ್ತ ಗಾಂಧಾರಿ ಪ್ರಣಾಮವನ್ನು ಮಾಡಿದಳು.
ಪದಾರ್ಥ (ಕ.ಗ.ಪ)
ಅಘ-ಪಾಪ, ಶರಣ-ಭಕ್ತ, ಮಮತೆ-ಪ್ರೀತಿ.
ಮೂಲ ...{Loading}...
ವಿಮಳ ಕರುಣಾಸಿಂಧು ನೀನನು
ಪಮ ಚರಿತ್ರನು ನಿಮ್ಮಡಿಯ ಪದ
ಕಮಲ ದರುಶನದಿಂದ ಹಿಂಗಿದವಘದ ರಾಶಿಗಳು
ಸಮತೆಯಲಿ ನೀ ನೋಡು ಶರಣರ
ಮಮತೆ ಬೇಹುದು ಜೀಯ ಲಕ್ಷಿ ್ಮೀ
ರಮಣ ಕೃಪೆ ಮಾಡೆನುತ ಮೈಯಿಕ್ಕಿದಳು ಗಾಂಧಾರಿ ॥66॥
೦೬೭ ಮಾನ ನಿನ್ನದು ...{Loading}...
ಮಾನ ನಿನ್ನದು ಭಕುತ ಜನದಪ
ಮಾನ ನಿನ್ನದು ನಿನ್ನ ಶರಣರ
ಹಾನಿ ವೃದ್ಧಿಗಳೆಲ್ಲ ನಿನ್ನದು ಬೇರೆ ಗತಿಯುಂಟೆ
ಆನತರ ತೇಜೋಭಿಮಾನವ
ನೀನೊಲಿದು ಸಲಹೆಂದು ಮುದದಲಿ
ಭಾನುಮತಿ ಮೈಯಿಕ್ಕಿದಳು ಮುರಹರನ ಚರಣದಲಿ ॥67॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಕ್ತ ಜನರ ಮಾನ-ಅಪಮಾನಗಳು ನಿನ್ನದು, ನಿನ್ನ ಭಕ್ತರ ಉನ್ನತಿ ಅವನತಿಗಳು ನಿನ್ನದು. ಬೇರೆ ಗತಿಯುಂಟೆ ? ನಿನಗೆ ನಮಸ್ಕರಿಸಿದವರ ಘನತೆ-ಅಭಿಮಾನಗಳನ್ನು ನೀನು ಮೆಚ್ಚಿ ಕಾಪಾಡೆಂದು ಸಂತೋಷದಿಂದ ಭಾನುಮತಿ ಕೃಷ್ಣನ ಪಾದಗಳಲ್ಲಿ ನಮಸ್ಕರಿಸಿದಳು.
ಪದಾರ್ಥ (ಕ.ಗ.ಪ)
ಹಾನಿ-ನಷ್ಟ, ವೃದ್ಧಿ-ಲಾಭ, ತೇಜ-ಘನತೆ, ಆನತ-ನಮಸ್ಕರಿಸಿದ.
ಮೂಲ ...{Loading}...
ಮಾನ ನಿನ್ನದು ಭಕುತ ಜನದಪ
ಮಾನ ನಿನ್ನದು ನಿನ್ನ ಶರಣರ
ಹಾನಿ ವೃದ್ಧಿಗಳೆಲ್ಲ ನಿನ್ನದು ಬೇರೆ ಗತಿಯುಂಟೆ
ಆನತರ ತೇಜೋಭಿಮಾನವ
ನೀನೊಲಿದು ಸಲಹೆಂದು ಮುದದಲಿ
ಭಾನುಮತಿ ಮೈಯಿಕ್ಕಿದಳು ಮುರಹರನ ಚರಣದಲಿ ॥67॥
೦೬೮ ಕಙ್ಗಳನು ಕರುಣಿಸಿದನನ್ಧ ...{Loading}...
ಕಂಗಳನು ಕರುಣಿಸಿದನಂಧ ನೃ
ಪಂಗೆ ಬಳಿಕೀ ಕೃಷ್ಣರಾಯನ
ಮಂಗಳ ಶ್ರೀಮೂರ್ತಿಯನು ಮನದಣಿಯೆ ತಾ ನೋಡಿ
ಕಂಗಳಡಗಲಿ ದೇವ ನಿಮ್ಮೀ
ಯಂಗವಟ್ಟವ ಕಂಡು ಬಳಿಕೀ
ಕಂಗಳಿತರವ ಕಾಣಲಾಗದು ಕೃಪೆಯ ಮಾಡೆಂದ ॥68॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಹುಟ್ಟು ಕುರುಡನಾದ ಧೃತರಾಷ್ಟ್ರನಿಗೆ ಕಣ್ಣುಗಳನ್ನು ದಯಪಾಲಿಸಿದನು. ಆಮೇಲೆ ಕೃಷ್ಣನ ಮಂಗಳ ಮೂರ್ತಿಯನ್ನು ಮನಸ್ಸು ತೃಪ್ತಿಯಾಗುವಂತೆ ನೋಡಿ, ‘ದೇವ ನಿಮ್ಮ ಈ ಮೈಯ ಸೌಂದರ್ಯವನ್ನು ಕಂಡ ಮೇಲೆ ಈ ಕಣ್ಣುಗಳು ಬೇರೆ ಯಾವುದನ್ನೂ ಕಾಣಬಾರದು. ನನ್ನ ಕಣ್ಣುಗಳು ಅಡಗಲಿ. ದೇವ, ದಯೆ ತೋರು ಎಂದು ಧೃತರಾಷ್ಟ್ರನು ಪ್ರಾರ್ಥಿಸಿದನು’.
ಪದಾರ್ಥ (ಕ.ಗ.ಪ)
ಅಂಗವಟ್ಟ-ಮೈಯ ಸೌಂದರ್ಯ
ಮೂಲ ...{Loading}...
ಕಂಗಳನು ಕರುಣಿಸಿದನಂಧ ನೃ
ಪಂಗೆ ಬಳಿಕೀ ಕೃಷ್ಣರಾಯನ
ಮಂಗಳ ಶ್ರೀಮೂರ್ತಿಯನು ಮನದಣಿಯೆ ತಾ ನೋಡಿ
ಕಂಗಳಡಗಲಿ ದೇವ ನಿಮ್ಮೀ
ಯಂಗವಟ್ಟವ ಕಂಡು ಬಳಿಕೀ
ಕಂಗಳಿತರವ ಕಾಣಲಾಗದು ಕೃಪೆಯ ಮಾಡೆಂದ ॥68॥
೦೬೯ ತಾತ ಹೆದರದಿರೀ ...{Loading}...
ತಾತ ಹೆದರದಿರೀ ಮುಕುಂದನ
ಕೈತವಕೆ ಬೆಚ್ಚದಿರು ಸಂಧಿಯ
ಮಾತು ತಾನಿದು ಹೃದಯವೇ ಬೆಸಗೊಳ್ಳಿ ಮುರಹರನ
ಈತನಂತರ್ಯಾಮಿ ಜೀವ
ವ್ರಾತದಲಿ ಜನಜನಿತವಿದು ಜಗ
ವೀತನಾಜ್ಞೆಯೊಳೊಲವುದೆಂದನು ಕೌರವರ ರಾಯ ॥69॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆ ಹೆದರದಿರು, ಕೃಷ್ಣನ ಮೋಸಕ್ಕೆ ಬೆದರದಿರು. ಸಂಧಿಯ ಮಾತು ಅವನ ಹೃದಯದಿಂದ ಬಂದುದೆ ? ಕೃಷ್ಣನನ್ನು ಕೇಳಿರಿ. ಸಕಲ ಜೀವರಾಶಿಗಳಲ್ಲಿ ಇವನು ಅಂತರ್ಯಾಮಿ. ಇದು ಎಲ್ಲ ಜನರಿಗೂ ತಿಳಿದಿರುವುದು. ಜಗತ್ತು ಈತನ ಆಜ್ಞೆಯಲ್ಲಿಯೇ ಚಲಿಸುವುದು ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಕೈತವ-ಮೋಸ, ಅಂತರ್ಯಾಮಿ-ಒಳಗಿರುವವನು, ವ್ರಾತ-ಗುಂಪು
ಮೂಲ ...{Loading}...
ತಾತ ಹೆದರದಿರೀ ಮುಕುಂದನ
ಕೈತವಕೆ ಬೆಚ್ಚದಿರು ಸಂಧಿಯ
ಮಾತು ತಾನಿದು ಹೃದಯವೇ ಬೆಸಗೊಳ್ಳಿ ಮುರಹರನ
ಈತನಂತರ್ಯಾಮಿ ಜೀವ
ವ್ರಾತದಲಿ ಜನಜನಿತವಿದು ಜಗ
ವೀತನಾಜ್ಞೆಯೊಳೊಲವುದೆಂದನು ಕೌರವರ ರಾಯ ॥69॥
೦೭೦ ಸಙ್ಗಿಯೆನಿಸನು ಜಗವ ...{Loading}...
ಸಂಗಿಯೆನಿಸನು ಜಗವ ಹುಟ್ಟಿಸಿ
ನುಂಗಿದೊಡೆ ನಿಷ್ಕರುಣಿಯೆನಿಸನು
ಅಂಗರಕ್ಷÉಯ ಮಾಡಿ ಮೋಹಿತನಲ್ಲ ಮೂಜಗಕೆ
ಜಂಗಮಸ್ಥಾವರಕೆ ಚೈತ
ನ್ಯಾಂಗರಕ್ಷನು ಘನಕೆ ಘನ ಅಣು
ವಿಂಗೆ ತಾನಣುವೆನಿಪ ಪರತರವಸ್ತು ನೋಡೀತ ॥70॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗತ್ತನ್ನು ಸೃಷ್ಟಿಸಿ ಆಸಕ್ತನೆನಿಸನು. ಅದನ್ನು ನಾಶವಾಗಿಸಿ ಕರುಣೆಯಿಲ್ಲದವನು ಎನಿಸನು. ಮೈಗೆ ರಕ್ಷಣೆಯನ್ನು ನೀಡಿ ಮನಸೋತವನಲ್ಲ. ಮೂರು ಲೋಕಕ್ಕೆ, ಜೀವ, ಜಡ, ಚೇತನಗಳಿಗೆ ಕಾವಲುಗಾರನು. ಮಹತ್ತಿಗೆ ಮಹತ್ತಾಗಿ, ಅಣುವಿಗೆ ಅಣುವಾಗಿರುವ ಇವನು ಶ್ರೇಷ್ಠನು ನೋಡು, ಎಂದನು ದುರ್ಯೋಧನ.
ಪದಾರ್ಥ (ಕ.ಗ.ಪ)
ಸಂಗಿ-ಆಸಕ್ತಿ, ಪರತರ-ಶ್ರೇಷ್ಠ
ಮೂಲ ...{Loading}...
ಸಂಗಿಯೆನಿಸನು ಜಗವ ಹುಟ್ಟಿಸಿ
ನುಂಗಿದೊಡೆ ನಿಷ್ಕರುಣಿಯೆನಿಸನು
ಅಂಗರಕ್ಷÉಯ ಮಾಡಿ ಮೋಹಿತನಲ್ಲ ಮೂಜಗಕೆ
ಜಂಗಮಸ್ಥಾವರಕೆ ಚೈತ
ನ್ಯಾಂಗರಕ್ಷನು ಘನಕೆ ಘನ ಅಣು
ವಿಂಗೆ ತಾನಣುವೆನಿಪ ಪರತರವಸ್ತು ನೋಡೀತ ॥70॥
೦೭೧ ಎನ್ನ ಹೃದಯದೊಳಿರ್ದು ...{Loading}...
ಎನ್ನ ಹೃದಯದೊಳಿರ್ದು ಮುರಿವನು
ಗನ್ನದಲಿ ಸಂಧಿಯನು ರಿಪುಗಳೊ
ಳಿನ್ನು ತನ್ನವರವರೊಳಿರ್ದಾ ನುಡಿವನೀ ಹದನ
ಭಿನ್ನನಂತಿರೆ ತೋರಿ ಭಿನ್ನಾ
ಭಿನ್ನನೆನಿಸಿಯೆ ಮೆರೆವ ತಿಳಿಯಲ
ಭಿನ್ನನೈ ಮುರವೈರಿ ನಾವಿನ್ನಂಜಲೇಕೆಂದ ॥71॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನ್ನ ಹೃದಯದಲ್ಲಿ ಇದ್ದು ಮೋಸದಲ್ಲಿ ಸಂಧಿಯನ್ನು ಮುರಿಯುವನು. ನನ್ನ ಶತ್ರುಗಳಾದ ತನ್ನವರಲ್ಲಿದ್ದು ಈ ರೀತಿ ಮಾತನಾಡುತ್ತಾನೆ. ಬೇರೆಯವನಂತೆ ಕಂಡು ಅಭಿನ್ನನೆನಿಸಿ ಮೆರೆಯುತ್ತಾನೆ. ವಿಚಾರಿಸಲು ಕೃಷ್ಣನು ಒಬ್ಬನೇ ಬೇರೆಯಲ್ಲ ! ನಾವಿನ್ನು ಏಕೆ ಭಯಪಡಬೇಕು ಎಂದನು.
ಪದಾರ್ಥ (ಕ.ಗ.ಪ)
ಭಿನ್ನ-ಬೇರೆ, ಗನ್ನ-ಮೋಸ
ಮೂಲ ...{Loading}...
ಎನ್ನ ಹೃದಯದೊಳಿರ್ದು ಮುರಿವನು
ಗನ್ನದಲಿ ಸಂಧಿಯನು ರಿಪುಗಳೊ
ಳಿನ್ನು ತನ್ನವರವರೊಳಿರ್ದಾ ನುಡಿವನೀ ಹದನ
ಭಿನ್ನನಂತಿರೆ ತೋರಿ ಭಿನ್ನಾ
ಭಿನ್ನನೆನಿಸಿಯೆ ಮೆರೆವ ತಿಳಿಯಲ
ಭಿನ್ನನೈ ಮುರವೈರಿ ನಾವಿನ್ನಂಜಲೇಕೆಂದ ॥71॥
೦೭೨ ಹಳಚುವುವು ಹಾಹೆಗಳು ...{Loading}...
ಹಳಚುವುವು ಹಾಹೆಗಳು ಸೂತ್ರವ
ನಲುಗಿದೊಡೆ ತತ್ಪುಣ್ಯ ಪಾಪಾ
ವಳಿಗಳಾ ಹಾಹೆಗಳಿಗುಂಟೇ ಸೂತ್ರಧರನಿರಲು
ಕೊಲುವನನ್ಯರನನ್ಯರಿಂದವೆ
ಕೊಲಿಸುವನು ಕಮಲಾಕ್ಷನಲ್ಲದೆ
ಉಳಿದ ಜೀವವ್ರಾತಕೀ ಸ್ವಾತಂತ್ರ ್ಯವಿಲ್ಲೆಂದ ॥72॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಾರವನ್ನು ಅಲುಗಿಸಿದರೆ ಗೊಂಬೆಗಳು ಹೊಡೆದಾಡುವುವು. ಸೂತ್ರಧಾರನಿರುವಾಗ ಆ ಬೊಂಬೆಗಳಿಗೆ ಪಾಪ-ಪುಣ್ಯಗಳ ಸಂಬಂಧವುಂಟೆ ? ಒಬ್ಬರನ್ನು ಕೊಲ್ಲುವನು. ಮತ್ತೊಬ್ಬರಿಂದ ಕೊಲ್ಲಿಸುವನು. ಕಮಲಾಕ್ಷನಾದ ಕೃಷ್ಣನಿಗಲ್ಲದೆ ಉಳಿದ ಜೀವರಾಶಿಗಳಿಗೆ ಈ ಸ್ವಾತಂತ್ರ್ಯವಿಲ್ಲ, ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಹಳಚು-ಹೊಡೆದಾಡು, ಹಾಹೆ-ಗೊಂಬೆ
ಮೂಲ ...{Loading}...
ಹಳಚುವುವು ಹಾಹೆಗಳು ಸೂತ್ರವ
ನಲುಗಿದೊಡೆ ತತ್ಪುಣ್ಯ ಪಾಪಾ
ವಳಿಗಳಾ ಹಾಹೆಗಳಿಗುಂಟೇ ಸೂತ್ರಧರನಿರಲು
ಕೊಲುವನನ್ಯರನನ್ಯರಿಂದವೆ
ಕೊಲಿಸುವನು ಕಮಲಾಕ್ಷನಲ್ಲದೆ
ಉಳಿದ ಜೀವವ್ರಾತಕೀ ಸ್ವಾತಂತ್ರ ್ಯವಿಲ್ಲೆಂದ ॥72॥
೦೭೩ ಇಳಿದನವನಿಗೆ ಧಾರುಣಿಯ ...{Loading}...
ಇಳಿದನವನಿಗೆ ಧಾರುಣಿಯ ಹೊರೆ
ಗಳೆಯಲೋಸುಗವಿಲ್ಲಿ ನಮ್ಮೊಳ
ಗೊಳಗೆ ವೈರವ ಬಿತ್ತಿ ಬರಿಕೈವನು ಮಹಾಬಲವ
ಛಲಕೆ ಮಣಿಯದೆ ರಾವಣಾದಿಗ
ಳಳಿದರಿದಲಾ ಕೀರ್ತಿಕಾಯ ವಿ
ದಳಿವುದಗ್ಗದ ಕೀರ್ತಿಯುಳಿವುದು ಅಂಜಲೇಕೆಂದ ॥73॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಕೃಷ್ಣನು) ಭೂಭಾರವನ್ನು ಕಡಿಮೆ ಮಾಡುವುದಕ್ಕಾಗಿ ಈ ಭೂಮಿಯಲ್ಲಿ ಅವತರಿಸಿದನು. ನಮ್ಮಲ್ಲಿ ವೈರವನ್ನು ಹುಟ್ಟುಹಾಕಿ ಮಹಾಸೈನ್ಯವನ್ನು ನಾಶ ಮಾಡುತ್ತಾನೆ. ಹಠಕ್ಕೆ ಬಗ್ಗದೆ ರಾವಣನೇ ಮೊದಲಾದವರು ಅಳಿದರು. ಕೀರ್ತಿಕಾಯಗಳಲ್ಲಿ ದೇಹವು ನಾಶವಾಗುವುದು. ಶ್ರೇಷ್ಠವಾದ ಕೀರ್ತಿಯೊಂದೇ ಉಳಿಯುವುದು ಭಯವೇಕೆ ? ಎಂದನು.
ಪದಾರ್ಥ (ಕ.ಗ.ಪ)
ಅವನಿ-ಭೂಮಿ, ಧಾರುಣಿ-ಭೂಮಿ, ಬರಿಕೈ-ಬರಿದು ಮಾಡು
ಮೂಲ ...{Loading}...
ಇಳಿದನವನಿಗೆ ಧಾರುಣಿಯ ಹೊರೆ
ಗಳೆಯಲೋಸುಗವಿಲ್ಲಿ ನಮ್ಮೊಳ
ಗೊಳಗೆ ವೈರವ ಬಿತ್ತಿ ಬರಿಕೈವನು ಮಹಾಬಲವ
ಛಲಕೆ ಮಣಿಯದೆ ರಾವಣಾದಿಗ
ಳಳಿದರಿದಲಾ ಕೀರ್ತಿಕಾಯ ವಿ
ದಳಿವುದಗ್ಗದ ಕೀರ್ತಿಯುಳಿವುದು ಅಂಜಲೇಕೆಂದ ॥73॥
೦೭೪ ನಾವು ಸನ್ಧಿಯನೊಲಿವೆವೆಮ್ಮಯ ...{Loading}...
ನಾವು ಸಂಧಿಯನೊಲಿವೆವೆಮ್ಮಯ
ಭಾವದಲಿ ಹುಳುಕಿಲ್ಲ ಸಂಪ್ರತಿ
ದೇವನಭಿಮತವಲ್ಲ ಬಲ್ಲೆನು ಮುರಹರನ ಬರವ
ನೀವು ಮೇಗರೆಯರಿತದವರೀ
ರಾವಣಾರಿಯ ಬಗೆಯ ಬಲ್ಲೆನು
ಸಾವೆನೀತನ ಕೈಯ ಬಾಯಲಿ ಭೀತಿ ಬೇಡೆಂದ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾವು ಸಂಧಿಯನ್ನು ಒಪ್ಪುತ್ತೇವೆ. ನಮ್ಮ ಅಭಿಪ್ರಾಯದಲ್ಲಿ ದೋಷವಿಲ್ಲ, ಆದರೆ ಒಪ್ಪಂದವು ದೇವನ ಅಭಿಪ್ರಾಯವಲ್ಲ. ಕೃಷ್ಣನು ಬಂದ ಕಾರಣವನ್ನು ತಿಳಿದಿರುವೆ. ನೀವು ಅಧಿಕವಾಗಿ ಬಲ್ಲವರು. ಈ ರಾವಣ ವೈರಿಯ ರೀತಿಯನ್ನು ನಾನು ಬಲ್ಲೆ, ಇವನ ಕೈಯ ಬಾಯಲ್ಲಿ ಸಾಯುವೆನು, ಭಯಬೇಡ ಎಂದನು.
ಪದಾರ್ಥ (ಕ.ಗ.ಪ)
ಸಂಪ್ರತಿ-ಸಂಧಿ, ಮೇಗರೆ-ಮೇಲಿನ
ಮೂಲ ...{Loading}...
ನಾವು ಸಂಧಿಯನೊಲಿವೆವೆಮ್ಮಯ
ಭಾವದಲಿ ಹುಳುಕಿಲ್ಲ ಸಂಪ್ರತಿ
ದೇವನಭಿಮತವಲ್ಲ ಬಲ್ಲೆನು ಮುರಹರನ ಬರವ
ನೀವು ಮೇಗರೆಯರಿತದವರೀ
ರಾವಣಾರಿಯ ಬಗೆಯ ಬಲ್ಲೆನು
ಸಾವೆನೀತನ ಕೈಯ ಬಾಯಲಿ ಭೀತಿ ಬೇಡೆಂದ ॥74॥
೦೭೫ ಮಣಿದು ಬದುಕುವನಲ್ಲ ...{Loading}...
ಮಣಿದು ಬದುಕುವನಲ್ಲ ಹಗೆಯಲಿ
ಸೆಣಸಿ ಬಿಡುವವನಲ್ಲ ದಿಡ ಧಾ
ರುಣಿಯ ಸಿರಿಗಳುಪುವವನಲ್ಲಳುಕಿಲ್ಲ ಕಾಯದಲಿ
ರಣ ಮಹೋತ್ಸವವೆಮ್ಮ ಮತ ಕೈ
ದಣಿಯೆ ಹೊಯಾ್ದಡುವೆನು ಕೃಷ್ಣನ
ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುವಿನ ಮುಂದೆ ಬಗ್ಗಿ ಬದುಕುವನು ನಾನಲ್ಲ. ಹೋರಾಡದೇ ಬಿಡುವನಲ್ಲ. ಸತ್ಯವಾಗಿಯೂ ಭೂಮಿಯ ಸಂಪತ್ತಿಗೆ ಅತಿ ಆಸೆ ಪಡುವನಲ್ಲ, ಈ ದೇಹದ ಬಗ್ಗೆ ಭಯವಿಲ್ಲ. ರಣ ಮಹೋತ್ಸವದ ಕಾಳಗವೇ ನಮ್ಮ ಅಭಿಪ್ರಾಯ. ಈ ಕೈ ಸೋಲುವವರೆಗೂ ಹೋರಾಡುವೆನು. ಕೃಷ್ಣನನ್ನು ಕೆಣಕದೆ ಬೇಗ ಮುಕ್ತಿಯು ಇಲ್ಲವೆಂದನು.
ಪದಾರ್ಥ (ಕ.ಗ.ಪ)
ಸೆಣಸು-ಹೋರಾಡು, ಅಳುಪು-ಅತಿಯಾಸೆ, ವಹಿಲ-ಬೇಗ, ಕೈವಲ್ಯ-ಮುಕ್ತಿ, ದಣಿವು-ಆಯಾಸ
ಮೂಲ ...{Loading}...
ಮಣಿದು ಬದುಕುವನಲ್ಲ ಹಗೆಯಲಿ
ಸೆಣಸಿ ಬಿಡುವವನಲ್ಲ ದಿಡ ಧಾ
ರುಣಿಯ ಸಿರಿಗಳುಪುವವನಲ್ಲಳುಕಿಲ್ಲ ಕಾಯದಲಿ
ರಣ ಮಹೋತ್ಸವವೆಮ್ಮ ಮತ ಕೈ
ದಣಿಯೆ ಹೊಯಾ್ದಡುವೆನು ಕೃಷ್ಣನ
ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ ॥75॥
೦೭೬ ಎನಲು ನಸುನಗುತಸುರರಿಪು ...{Loading}...
ಎನಲು ನಸುನಗುತಸುರರಿಪು ಮು
ನ್ನಿನ ಮನುಷ್ಯಾಕಾರವನು ಮಗು
ಳನುಕರಿಸಿ ಧೃತರಾಷ್ಟ್ರ ಭೀಷ್ಮರಿಗೆಂದನೀ ಹದನ
ಘನ ಸುಯೋಧನ ಪಾಂಡುವಿನ ನಂ
ದನರೊಳಾದ ವಿವಾದ ನಮಗೇ
ಕೆನುತ ರಾಜಾಲಯವನಸುರಧ್ವಂಸಿ ಹೊರವಂಟ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಹೀಗೆ ಹೇಳಲು ಕೃಷ್ಣನು ನಗುತ್ತ ಮೊದಲಿನ ಮನುಷ್ಯಾಕಾರವನ್ನು ಪಡೆದು ಧೃತರಾಷ್ಟ್ರ, ಭೀಷ್ಮರಿಗೆ ಈ ರೀತಿ ಹೇಳಿದನು. ಶಕ್ತಿವಂತರಾದ ದುರ್ಯೋಧನ-ಪಾಂಡುಪುತ್ರರಲ್ಲಿ ಆದ ವಿವಾದ ನಮಗೇಕೆ ಎನ್ನುತ್ತ ಕೃಷ್ಣನ ಅರಮನೆಯಿಂದ ಹೊರಟನು.
ಪದಾರ್ಥ (ಕ.ಗ.ಪ)
ಮಗುಳ್-ಮತ್ತೆ, ವಿವಾದ-ಜಗಳ, ಅಸುರ ಧ್ವಂಸಿ-ಕೃಷ್ಣ
ಮೂಲ ...{Loading}...
ಎನಲು ನಸುನಗುತಸುರರಿಪು ಮು
ನ್ನಿನ ಮನುಷ್ಯಾಕಾರವನು ಮಗು
ಳನುಕರಿಸಿ ಧೃತರಾಷ್ಟ್ರ ಭೀಷ್ಮರಿಗೆಂದನೀ ಹದನ
ಘನ ಸುಯೋಧನ ಪಾಂಡುವಿನ ನಂ
ದನರೊಳಾದ ವಿವಾದ ನಮಗೇ
ಕೆನುತ ರಾಜಾಲಯವನಸುರಧ್ವಂಸಿ ಹೊರವಂಟ ॥76॥
೦೭೭ ಬನ್ದು ವಿದುರನ ...{Loading}...
ಬಂದು ವಿದುರನ ಮನೆಗೆ ದೇವ ಮು
ಕುಂದ ಕುಂತಿಯ ಕರೆದು ನಿನ್ನಯ
ಕಂದರೈವರ ಮೇಲೆ ಕೌರವ ನೃಪನ ಖತಿ ಹಿರಿದು
ಇಂದು ಮುರಿದುದು ಸಂಧಿ ನಿನ್ನಯ
ಕಂದ ಕರ್ಣನ ಬೇಡಿಕೊಳು ನೀ
ನೆಂದು ನೇಮಿಸಿ ಮರಳಿದನು ಮುರವೈರಿ ಹರುಷದಲಿ ॥77॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ ಮುಕುಂದನಾದ ಕೃಷ್ಣನು ವಿದುರನ ಮನೆಗೆ ಬಂದು ಕುಂತಿಯನ್ನು ಕರೆದು ‘ನಿನ್ನ ಐವರು ಮಕ್ಕಳ ಮೇಲೆ ಕೌರವ ರಾಜನ ಕೋಪ ದೊಡ್ಡದು. ಇಂದು ಸಂಧಿ ಮುರಿಯಿತು. ನೀನು ನಿನ್ನ ಮಗ ಕರ್ಣನನ್ನು ಬೇಡಿಕೋ’ ಎಂದು ಹೇಳಿ, ಕೃಷ್ಣನು ಸಂತೋಷದಿಂದ ಹಿಂತಿರುಗಿದನು.
ಪದಾರ್ಥ (ಕ.ಗ.ಪ)
ಮರಳಿದನು-ಹಿಂತಿರುಗಿದನು
ಮೂಲ ...{Loading}...
ಬಂದು ವಿದುರನ ಮನೆಗೆ ದೇವ ಮು
ಕುಂದ ಕುಂತಿಯ ಕರೆದು ನಿನ್ನಯ
ಕಂದರೈವರ ಮೇಲೆ ಕೌರವ ನೃಪನ ಖತಿ ಹಿರಿದು
ಇಂದು ಮುರಿದುದು ಸಂಧಿ ನಿನ್ನಯ
ಕಂದ ಕರ್ಣನ ಬೇಡಿಕೊಳು ನೀ
ನೆಂದು ನೇಮಿಸಿ ಮರಳಿದನು ಮುರವೈರಿ ಹರುಷದಲಿ ॥77॥
೦೭೮ ವಿದುರ ಭಾರದ್ವಾಜ ...{Loading}...
ವಿದುರ ಭಾರದ್ವಾಜ ಗೌತಮ
ನದಿಯಮಗ ಧೃತರಾಷ್ಟ್ರನಾತನ
ಸುದತಿ ಕರ್ಣ ವಿಕರ್ಣ ಶಲ್ಯ ಸುಬಾಹು ಗುರುಸುತರು
ವದನದುತ್ಸವವಡಗಿ ಕೃಷ್ಣನ
ಪದವನೋಲೈಸುತ್ತ ಬರೆ ಕರು
ಣದಲಿ ಮುರಹರನವರನುಚಿತೋಕ್ತಿಯಲಿ ಬೀಳ್ಕೊಟ್ಟ ॥78॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರ, ದ್ರೋಣ, ಕೃಪ, ಭೀಷ್ಮ, ಧೃತರಾಷ್ಟ್ರ, ಆತನ ಹೆಂಡತಿ ಗಾಂಧಾರಿ, ಕರ್ಣ, ವಿಕರ್ಣ, ಶಲ್ಯ, ಸುಬಾಹು, ಅಶ್ವತ್ಥಾಮರು ಮುಖದಲ್ಲಿನ ಉತ್ಸಾಹವನ್ನು ಕಳೆದುಕೊಂಡು ಕೃಷ್ಣನ ಹೆಜ್ಜೆಗಳನ್ನೇ ಹಿಂಬಾಲಿಸುತ್ತ ಬರಲು ಕರುಣೆಯಿಂದ ಕೃಷ್ಣನು ಅವರನ್ನು ಸಂದರ್ಭೋಚಿತ ಮಾತುಗಳಿಂದ ಬೀಳ್ಕೊಟ್ಟನು.
ಪದಾರ್ಥ (ಕ.ಗ.ಪ)
ಸುದತಿ-ಮಡದಿ, ವದನ-ಮುಖ
ಮೂಲ ...{Loading}...
ವಿದುರ ಭಾರದ್ವಾಜ ಗೌತಮ
ನದಿಯಮಗ ಧೃತರಾಷ್ಟ್ರನಾತನ
ಸುದತಿ ಕರ್ಣ ವಿಕರ್ಣ ಶಲ್ಯ ಸುಬಾಹು ಗುರುಸುತರು
ವದನದುತ್ಸವವಡಗಿ ಕೃಷ್ಣನ
ಪದವನೋಲೈಸುತ್ತ ಬರೆ ಕರು
ಣದಲಿ ಮುರಹರನವರನುಚಿತೋಕ್ತಿಯಲಿ ಬೀಳ್ಕೊಟ್ಟ ॥78॥
೦೭೯ ನಯದೊಳೇಕಾನ್ತದಲಿ ಸಲೆ ...{Loading}...
ನಯದೊಳೇಕಾಂತದಲಿ ಸಲೆ ತೋ
ರಿಯೆ ನುಡಿವುದವನಾಶೆಯನು ನೀವ್
ಬಯಸಲಾಗದು ಹಿತವನೇ ಮಾಡುವುದು ಕುರುಕುಲಕೆ
ನಿಯತವಿದು ಪಾಂಡವರೊಡನೆ ಸಂ
ಧಿಯೆ ಸರಸ ಸಮರಾಂಗವೀಯ
ನ್ವಯಕೆ ನಿರ್ಣಯವೆಂದು ನೀವಾತಂಗೆ ಹೇಳುವುದು ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಪಾಯದಲ್ಲಿ ದುರ್ಯೋಧನನನ್ನು ಏಕಾಂತದಲ್ಲಿ ಕಂಡು ವಿಸ್ತಾರವಾಗಿ ಹೇಳುವುದು. ಅವನ ಆಸೆಯನ್ನು ನೀವು ಬಯಸಬಾರದು, ಕುರುಕುಲಕ್ಕೆ ಹಿತವನ್ನೇ ಮಾಡುವುದು, ಪಾಂಡವರೊಡನೆ ಸಂಧಿಯನ್ನು ಮಾಡಿದರೆ ಸಂತೋಷ. ಯುದ್ಧವು ಈ ವಂಶದ ನಾಶಕ್ಕೆ ನಿರ್ಣಯವು. ಇದು ನಿಶ್ಚಯವೆಂದು ನೀವು ಅವನಿಗೆ ತಿಳಿಯಹೇಳುವುದು.
ಪದಾರ್ಥ (ಕ.ಗ.ಪ)
ಸಲೆ-ವಿಸ್ತಾರವಾಗಿ, ನಿಯತ-ನಿಶ್ಚಯ, ಸರಸ-ಸಂತೋಷ
ಮೂಲ ...{Loading}...
ನಯದೊಳೇಕಾಂತದಲಿ ಸಲೆ ತೋ
ರಿಯೆ ನುಡಿವುದವನಾಶೆಯನು ನೀವ್
ಬಯಸಲಾಗದು ಹಿತವನೇ ಮಾಡುವುದು ಕುರುಕುಲಕೆ
ನಿಯತವಿದು ಪಾಂಡವರೊಡನೆ ಸಂ
ಧಿಯೆ ಸರಸ ಸಮರಾಂಗವೀಯ
ನ್ವಯಕೆ ನಿರ್ಣಯವೆಂದು ನೀವಾತಂಗೆ ಹೇಳುವುದು ॥79॥
೦೮೦ ಎನ್ದು ಗಾಙ್ಗೇಯಾದಿಗಳನರ ...{Loading}...
ಎಂದು ಗಾಂಗೇಯಾದಿಗಳನರ
ವಿಂದನಾಭನು ಬೀಳುಕೊಟ್ಟನು
ನಿಂದು ತಾ ರವಿಸುತನ ಕರೆದನು ರಥದ ಹೊರೆಗಾಗಿ
ಬಂದು ಕಿರಿದೆಡೆಗಾಗಿ ಕಳುಹುವು
ದೆಂದು ನೇಮಿಸಿ ಬಳಿಕ ತಾಪಸ
ವೃಂದವನು ಕಾರುಣ್ಯನಿಧಿ ಕಳುಹಿದ ತಪೋವನಕೆ ॥80॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತ ಭೀಷ್ಮರೇ ಮೊದಲಾದವರನ್ನು ಕೃಷ್ಣನು ಬೀಳು ಕೊಟ್ಟನು, ತಾನು ನಿಂತು ಕರ್ಣನನ್ನು ರಥದ ಬಳಿಗೆ ಕರೆದನು. ಸ್ವಲ್ಪದೂರ ಬಂದು ಕಳುಹಿಸಿಕೊಡಬೇಕೆಂದು ಹೇಳಿ ಅನಂತರ ತಪಸ್ವಿಗಳ ಸಮೂಹವನ್ನು ಕಾರುಣ್ಯ ನಿಧಿ ತಪೋವನಕ್ಕೆ ಕಳುಹಿಸಿದನು.
ಪದಾರ್ಥ (ಕ.ಗ.ಪ)
ಹೊರಗೆ-ಬಳಿಗೆ
ಮೂಲ ...{Loading}...
ಎಂದು ಗಾಂಗೇಯಾದಿಗಳನರ
ವಿಂದನಾಭನು ಬೀಳುಕೊಟ್ಟನು
ನಿಂದು ತಾ ರವಿಸುತನ ಕರೆದನು ರಥದ ಹೊರೆಗಾಗಿ
ಬಂದು ಕಿರಿದೆಡೆಗಾಗಿ ಕಳುಹುವು
ದೆಂದು ನೇಮಿಸಿ ಬಳಿಕ ತಾಪಸ
ವೃಂದವನು ಕಾರುಣ್ಯನಿಧಿ ಕಳುಹಿದ ತಪೋವನಕೆ ॥80॥