೦೬

೦೦೦ ಸೂ ಸಮರದನುಸನ್ಧಾನದಲಿ ...{Loading}...

ಸೂ. ಸಮರದ್ ಅನುಸಂಧಾನದಲಿ ಸಂ
ಭ್ರಮಿಸಿ ಶೌರಿ ಸಮೀರ-ಸುತನಲಿ
ಸಮತೆಯನು+++(=ಯುಕ್ತತೆಯನು)+++ ಸೇರಿಸಿದನ್ ಅಂದು ಸಮಗ್ರ ಸೂಕ್ತಿಯಲಿ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಧರ್ಮಜನಹಿತ ಮಂತ್ರಿಯ
ಬೀಳುಕೊಟ್ಟನು ಬಂದನಸುರಾರಾತಿಯಿದ್ದೆಡೆಗೆ
ಮೇಲಣನುವಿನ್ನೇನು ಲಕ್ಷಿ ್ಮೀ
ಲೋಲ ಕರುಣಿಸು ಕೌರವಕ್ಷಿತಿ
ಪಾಲಕರಲೆಮಗೇನು ಘಟಿಸುವುದೆಂದು ನೃಪ ನುಡಿದ ॥1॥

೦೦೨ ಕ್ಷಮೆಗೆ ಸೇರುವರಲ್ಲ ...{Loading}...

ಕ್ಷಮೆಗೆ ಸೇರುವರಲ್ಲ ಮೂರ್ಖರು
ಕುಮತಿಗಳು ಮುಂದರಿಯದವರ
ಕ್ರಮವ ನೆಗಳಿದಡಳಿವುದನ್ವಯದಮಳ ಕೀರ್ತಿಗಳು
ನಮಗೆ ಹದನೇನಿನ್ನು ಸಂಧಿಯೊ
ಸಮರವೋ ಚಿತ್ತೈಸಬೇಹುದು
ಕಮಲಲೋಚನಯೆಂದು ಬಿನ್ನೆ ೈಸಿದನು ಯಮಸೂನು ॥2॥

೦೦೩ ಏನು ನಿನ್ನಭಿಮತವು ...{Loading}...

ಏನು ನಿನ್ನಭಿಮತವು ವರ ಸಂ
ಧಾನವೋ ಸಂಗ್ರಾಮವೋ ನಯ
ವೇನು ಮನದೋವರಿಯೊಳಿರಿಸದೆ ಹೇಳು ನಿಶ್ಚಯವ
ನೀನೊಲಿದ ಹದನಾವುದದನೊಲಿ
ದಾನು ಘಟಿಸುವೆನೆಂದು ಕುಂತೀ
ಸೂನುವನು ಬೆಸಗೊಂಡನಸುರ ವಿರೋಧಿ ನಸುನಗುತ ॥3॥

೦೦೪ ಅಳಿವವೊಡಲಿದು ಅವನಿ ...{Loading}...

ಅಳಿವವೊಡಲಿದು ಅವನಿ ಸಾಗರ
ವಳಿಯಲುಳಿವುದು ಕೀರ್ತಿ ಸೋದರ
ರೊಳಗೊಳಗೆ ಹೊಯಾ್ದಡಿ ಕೆಟ್ಟರುಯೆಂಬ ದುರಿಯಶದ
ಹಳಿವು ಹೊರುವುದು ದೇವ ಸುಡಲಾ
ನೆಲನನಾ ಕೌರವನ ಕೈಯಲಿ
ಕೆಲವು ನಗರಿಯ ಕೊಡಿಸಿ ನಮ್ಮನು ಸಂತವಿಡಿಯೆಂದ ॥4॥

೦೦೫ ವರ ಕುಶಸ್ಥಳವನು ...{Loading}...

ವರ ಕುಶಸ್ಥಳವನು ವೃಕಸ್ಥಳ
ಪುರವನಾವಂತಿಯನು ಕೌರವ
ಧರಣಿಪಾಲನಲೀಸಿ ಕೊಡುವುದು ವಾರಣವತವ
ಶರಧಿ ಮೇರೆಯೊಳೈದನೆಯ ಪುರ
ವರವನೊಲಿದುದ ಕೊಡಲಿ ಮನ ಮ
ತ್ಸರವ ಮರೆದೋಲೈಸುವೆವು ಧೃತರಾಷ್ಟ್ರನಂಘ್ರಿಗಳ ॥5॥

೦೦೬ ನೀವು ಬಿಜಯಙ್ಗೈದು ...{Loading}...

ನೀವು ಬಿಜಯಂಗೈದು ಸಂಧಿಯ
ನಾವ ಪರಿಯಲಿ ಘಟಿಸಿ ಕುರುಭೂ
ಪಾವಳಿಯೊಳೆಮ್ಮಿರವು ಸಂಭವಿಸುವವೊಲೆಸಗುವದು
ಲಾವಕರ ನುಡಿಗಳಲಿ ಕೆಡುವುದು
ಕೋವಿದರ ಮತವವರಮೇಲೆಮ
ಗಾವ ಮನಮುನಿಸಿಲ್ಲ ಸಂಧಿಯ ಘಟಿಸಿ ಸಾಕೆಂದ ॥6॥

೦೦೭ ಎನೆ ಮುರಾನ್ತಕನಳುಕಿ ...{Loading}...

ಎನೆ ಮುರಾಂತಕನಳುಕಿ ಯಮನಂ
ದನನ ನುಡಿ ಸಂಧಾನದಲಿ ಸಂ
ಜನಿಸಿತಾದೊಡೆ ಕಾಣೆನವನಿಯ ಹೊರೆಗೆ ಹರಿವುಗಳ
ಮನದೊಳನುಸಂಧಾನವಂತಕ
ತನುಜನಲಿ ತೊಳಸಾಯ್ತು ತೋಟಿಯ
ನೆನಹು ತಾನೇನೆನುತ ಚಿಂತಿಸುತಿರ್ದನಸುರಾರಿ ॥7॥

೦೦೮ ಎಲೆ ಕೃತಾನ್ತಜ ...{Loading}...

ಎಲೆ ಕೃತಾಂತಜ ವೈರಿ ಭೂಮಿಪ
ಕುಲ ಕೃತಾಂತ ಸರಾಗನಹೆ ನಿ
ರ್ಮಳಿನ ಧರ್ಮದಲಾ ಸುಯೋಧನನಧಿಕ ಕಲ್ಮಷನು
ನೆಲವ ಕೊಡಲರಿಯನು ವೃಥಾ ಕ
ಕ್ಕುಲಿತೆಯಲ್ಲದೆ ಕಾಣೆನಿದರಲಿ
ಫಲವನೆನುತಸುರಾರಿ ನುಡಿದನು ಧರ್ಮತನುಜಂಗೆ ॥8॥

೦೦೯ ಅರಸನಭಿಮತವಿನ್ದು ಸನ್ಧಿಗೆ ...{Loading}...

ಅರಸನಭಿಮತವಿಂದು ಸಂಧಿಗೆ
ಮರಳಿತೆಲೆ ಪವಮಾನಸುತ ನಿ
ನ್ನರಿತವಾವುದು ಮನವ ವಂಚಿಸಬೇಡ ಹೇಳೆನಲು
ಧರಣಿಪತಿ ತಪ್ಪುವನೆ ಕರ್ಕಶ
ಭರದ ಕದನದಲೇನು ಫಲ ಸೋ
ದರರ ವಧೆಗೊಡಬಡುವನಲ್ಲಸುರಾರಿ ಕೇಳ್ ಎಂದ ॥9॥

೦೧೦ ಹಗೆಯೊಳೆಮ್ಮವರೊಳಗೆ ಎದೆಗಿ ...{Loading}...

ಹಗೆಯೊಳೆಮ್ಮವರೊಳಗೆ ಎದೆಗಿ
ಚ್ಚುಗಳ ಖುಲ್ಲ ಕುಠಾರರಪನಂ
ಬುಗೆಯ ಬಳಸಿದರದು ಪುರಾಕೃತ ಕರ್ಮದವಶೇಷ
ಬಗೆಯೆನವಮಾನವನು ಕೌರವ
ರಗಡು ಮಾಡಿದರೆಂಬ ಚಿತ್ತದ
ದುಗುಡವಿಂದೆಮಗಿಲ್ಲ ಸಂಧಿಯ ರಚಿಸಿ ಸಾಕೆಂದ ॥10॥

೦೧೧ ಎಲೆ ಮಹಾದೇವಾಯ್ತು ...{Loading}...

ಎಲೆ ಮಹಾದೇವಾಯ್ತು ಹಾಲಾ
ಹಲ ಸುಧಾರಸ ಉಕ್ಕಿದುರಿಯ
ಗ್ಗಳದ ಶೀತಳವಾಯ್ತು ಸಿಡಿಲಾಟೋಪ ನಯವಾಯ್ತು
ಕೊಳುಗುಳಕೆ ಪವಮಾನನಂದನ
ನಳುಕಿದನು ಮಝ ಮಾಯೆ ಕುಂತೀ
ಲಲನೆ ಹೆತ್ತಳು ಸುತರನೆಂದನು ಶೌರಿ ನಸುನಗುತ ॥11॥

೦೧೨ ಈತನಭಿಮತವಿದು ಜಗದ್ವಿ ...{Loading}...

ಈತನಭಿಮತವಿದು ಜಗದ್ವಿ
ಖ್ಯಾತ ಸಾಹಸಿ ಪಾರ್ಥ ಹೇಳೈ
ಮಾತಿನಾಳಾಪವನು ಕೇಳುವೆ ಶ್ರುತಿರಸಾಯನವ
ಭೀತಿ ಬೇಡಿನ್ನೆನಲು ಬೇರೆಮ
ಗೇತರಭಿಮತವೇನ ಬೆಸಸಿದ
ಡಾತುಕೊಂಬೆನು ಶಿರದಲೆಂದನು ಪಾರ್ಥ ವಿನಯದಲಿ ॥12॥

೦೧೩ ನಕುಲ ನೀ ...{Loading}...

ನಕುಲ ನೀ ಹೇಳನುಮತವ ನಿ
ನ್ನುಕುತಿ ಸಮರವೊ ಸಾಮವೋ ಮೇಣ್
ಸುಕರ ಮಂತ್ರವನರುಹು ನೀನಿನ್ನಂಜಬೇಡೆನಲು
ಯುಕುತಿ ನಮಗಿನ್ನೇನುಭಯ ರಾ
ಜಕವ ಸಂತೈಸುವುದು ಬೇರೆ
ಮ್ಮುಕುತಿಯೆಲ್ಲಿಯದೆಂದನಾ ಮಾದ್ರೇಯನೊಲವಿನಲಿ ॥13॥

೦೧೪ ಆವುದಭಿಮತವೇನು ಹದ ...{Loading}...

ಆವುದಭಿಮತವೇನು ಹದ ಸಹ
ದೇವ ನೀ ಹೇಳೆನಲು ಬಿನ್ನಹ
ದೇವ ಸೇರದು ಸಂಧಿ ಸಂಗರವೆಮಗೆ ಸೇರುವುದು
ಆವ ವಿಧದಲಿ ಸಮರವನೆ ಸಂ
ಭಾವಿಸುವುದೆನೆ ನಗುತ ವರ ರಾ
ಜೀವನಾಭನು ಕಳುಹಿದನು ದ್ರೌಪದಿಯೆಡೆಗೆ ಚರರ ॥14॥

೦೧೫ ದೇವಿ ಚಿತ್ತೈಸುವುದು ...{Loading}...

ದೇವಿ ಚಿತ್ತೈಸುವುದು ವರವಸು
ದೇವನಂದನನಟ್ಟಿದನು ಸಂ
ಭಾವಿಸುವುದರಿರಾಯರಲಿ ಸಂಧಾನ ಸೌರಂಭ
ನೀವು ಬಿಜಯಂಗೈದು ಚಿತ್ತದೊ
ಳಾವ ಹದನಾ ಹದನನಾ ರಾ
ಜೀವನಾಭಾದಿಗಳಿಗರುಹುವುದೆಂದರಾ ಚರರು ॥15॥

೦೧೬ ಏನು ಹದನೇನೆಲವೊ ...{Loading}...

ಏನು ಹದನೇನೆಲವೊ ವರ ಸಂ
ಧಾನವೇ ಕೌರವರೊಳದು ಸು
ಮಾ್ಮನವೇ ಪತಿಗಳಿಗೆ ಪಾಪಿಗಳಿರಿದರೋ ಸತಿಯ
ದಾನವಾಂತಕನೆಸಗುವನೆ ತ
ಪ್ಪೇನು ತಪ್ಪೇನೆನುತ ನಸುಮಸು
ಳ್ದಾನನಾಂಬುಜದಬಲೆ ಬಂದಳು ಕೃಷ್ಣನೋಲಗಕೆ ॥16॥

೦೧೭ ಭ್ರೂಲತೆಯ ಸುರಚಾಪದುರುಕೇ ...{Loading}...

ಭ್ರೂಲತೆಯ ಸುರಚಾಪದುರುಕೇ
ಶಾಳಿಗಳ ಕಾರ್ಮುಗಿಲಪಾಂಗದ
ಸಾಲ ಕುಡಿಮಿಂಚುಗಳ ನೂಪುರರವದ ಮೊಳಗುಗಳ
ಆ ಲತಾಂಗಿಯ ಗಮನವೇ ಮಳೆ
ಗಾಲದಂತಿರೆ ಧಾರ್ತರಾಷ್ಟ್ರ ಕು
ಲಾಳಿ ನಿಲುವುದೆ ಪವನಜನ ಸಂಪ್ರತಿಯ ಸೇರುವೆಗೆ ॥17॥

೦೧೮ ಕವಿದ ಚಿತ್ರಾವಳಿಯ ...{Loading}...

ಕವಿದ ಚಿತ್ರಾವಳಿಯ ದಡ್ಡಿಯ
ವಿವಿಧ ಭಟರುಗ್ಗಡಣೆಯಲಿ ವರ
ಯುವತಿ ಬಂದಳು ಸಖಿಯರೊಯಾ್ಯರದಲಿ ನೃಪಸಭೆಗೆ
ನವ ಬಳಾಹಕದೊಳಗೆ ಮಿಂಚಿನ
ಗವಿಸಹಿತ ಮರಿಮೇಘವಾವಿ
ರ್ಭವಿಸಿತೆನೆ ದಂಡಿಗೆಯನಿಳಿದಳು ಹೊಕ್ಕಳೋಲಗವ ॥18॥

೦೧೯ ಎಲೆ ಸಮೀರಕುಮಾರ ...{Loading}...

ಎಲೆ ಸಮೀರಕುಮಾರ ಸಂಪ್ರತಿ
ಗೆಳಸಿದೈ ಕಲಿತನವ ನೀರೊಳು
ಕಲಕಿದೈ ಕೈವಾರವಾದುದೆ ಕೌರವೇಂದ್ರನಲಿ
ಕಲಿಸಿದೈ ಕೃಷ್ಣಂಗೆ ನೀತಿಯ
ಬಳಸಿದೈ ಬಹುಮತವ ನರಕದೊ
ಳಿಳಿಸಿದೈ ಶಶಿಕುಲವನೆಂದನಿಲಜನ ನೋಡಿದಳು ॥19॥

೦೨೦ ಬೇಡಲಟ್ಟುವನೇ ಮಹೀಪತಿ ...{Loading}...

ಬೇಡಲಟ್ಟುವನೇ ಮಹೀಪತಿ
ನಾಡೊಳೈದೂರುಗಳನವರಲಿ
ಮಾಡುವಾತನು ಕೃಷ್ಣನೇ ಸಂಧಾನವನು ನಿಮಗೆ
ಕೇಡಿಗನು ಕೌರವ ನೃಪಾಲನ
ಕೂಡಿ ಬದುಕುವ ಭೀಮಸೇನನೆ
ರೂಢಿಸಿತಲಾ ನಿಮ್ಮ ಸಿರಿ ಸೋದರರ ಸೇರುವೆಗೆ ॥20॥

೦೨೧ ಯತಿಗಳಾದಿರಿ ನೀವು ...{Loading}...

ಯತಿಗಳಾದಿರಿ ನೀವು ರೋಷ
ಚ್ಯುತರಲೇ ಬಳಿಕೇನು ಧರ್ಮ
ಜ್ಞತೆಯ ನೆಲೆಗಳನರಿದ ಮನವೆರಗುವುದೆ ಕಾಳಗಕೆ
ಕ್ಷಿತಿಯ ಪಾಲಿಸುವುದು ವಿರೋಧಿ
ವ್ಯತಿಕರವ ಬಿಡಿಸುವುದು ಕುಂತೀ
ಸುತರು ಕೌರವರೊಡನೆ ಸುಖದಲಿ ರಾಜ್ಯವಾಳುವುದು ॥21॥

೦೨೨ ಸೋಲ ಗೆಲವೇ ...{Loading}...

ಸೋಲ ಗೆಲವೇ ಕೌರವರ ಸಮ
ಪಾಳಿಯೊಳು ಸೋದರರು ನೀವ್ ಪಾಂ
ಚಾಲರಾವೇ ಹೊರಗು ನಿಮ್ಮೊಳು ಸಲುಗೆಯೇಕೆಮಗೆ
ಮೇಳವೇ ಸಿರಿ ಗಳಿಸಲರಿದು ಜ
ನಾಳಿ ಹೆಂಡಿರಪೂರ್ವವೇ ಕ್ಷಿತಿ
ಪಾಲಕರು ನೀವಾಗಲೆಮಗದು ಪರಮಪರಿಣಾಮ ॥22॥

೦೨೩ ಭೀಮ ಬಲವದರಾತಿ ...{Loading}...

ಭೀಮ ಬಲವದರಾತಿ ಸೇನಾ
ಭೀಮ ಕುರುಕುಲ ಕುಸುಮಮಾರ್ಗಣ
ಭೀಮ ಮರೆದೈ ಮಾನಿನಿಯ ಮಾನಾಪಹಾನಿಗಳ
ರಾಮನಬಲೆಗೆ ಕುದಿದ ಘನ ಸಂ
ಗ್ರಾಮವನು ನೀ ಕೇಳಿದರಿಯಾ
ಪ್ರೇಮದಲಿ ನೋಡೆನ್ನನೆಂದಳು ದ್ರೌಪದೀದೇವಿ ॥23॥

೦೨೪ ಧರೆಗೆ ಕಟ್ಟಭಿಮಾನ ...{Loading}...

ಧರೆಗೆ ಕಟ್ಟಭಿಮಾನ ಹೆಂಡಿರ
ಹರಿಬವಾ ಹರಿಬದಲಿ ಕೆಡುಹುವು
ದರಿಯನವಗಡಿಸಿದೊಡೆ ಸಾವರು ಪಂಥವುಳ್ಳವರು
ಸುರ ನರೋರಗರೊಳಗೆ ನಿಮ್ಮೆ ೈ
ವರಿಗೆ ಸರಿಯಿಲ್ಲಬಲೆಯೊಬ್ಬಳ
ಹರಿಬದಲಿ ಹಂಗಾದಿರೆಂಬಪದೆಸೆಗೆ ನೋನುವರೆ ॥24॥

೦೨೫ ಮುನ್ದಲೆಯ ಹಿಡಿದೆಳೆದು ...{Loading}...

ಮುಂದಲೆಯ ಹಿಡಿದೆಳೆದು ಸಭೆಯಲಿ
ತಂದು ಸೀರೆಯ ಸುಲಿದಡವದಿರ
ಮುಂದೆ ಮೌನದೊಳಿದ್ದರಲ್ಲದೆ ಪತಿಗಳುಸುರಿದರೆ
ಅಂದು ನೀ ಹಿಂದಿಕ್ಕಿ ಕೊಂಡುದ
ನಿಂದು ಮರೆದೈ ಸಂಧಿಗೋಸುಗ
ಮುಂದುವರಿದೈ ಕೃಷ್ಣಯೆಂದಳು ದ್ರೌಪದೀದೇವಿ ॥25॥

೦೨೬ ತನಯರೈವರು ವೀರ ...{Loading}...

ತನಯರೈವರು ವೀರ ಸಹದೇ
ವನು ಘಟೋತ್ಕಚನೀ ಸುಭದ್ರಾ
ತನಯನೆಮ್ಮಯ ತಂದೆ ಮೂರಕ್ಷೋಹಿಣಿಯ ಸೇನೆ
ಇನಿಬರೇ ಕಾದುವರು ದುಶ್ಶಾ
ಸನನ ರಕುತವ ಕುಡಿದು ಕುರುಕುಲ
ವನವ ಸುಡುವರು ನಿಮ್ಮ ಹಂಗೇಕೆಂದಳಿಂದುಮುಖಿ ॥26॥

೦೨೭ ವರಸತಿಯ ಬಿಸುಸುಯ್ಲ ...{Loading}...

ವರಸತಿಯ ಬಿಸುಸುಯ್ಲ ಗಾಳಿಯೊ
ಳುರಿ ಚಡಾಳಿಸೆ ರೋಷಮಯದು
ಬ್ಬರದೊಳೌಡೊತ್ತಿದನು ಹಿಡಿದನು ಖತಿಯನಹಿತರೊಳು
ತರುಣಿ ಸೈರಿಸು ಸೈರಿಸಿನ್ನೀ
ಸುರಿವ ಕಂಬನಿಗಳಿಗೆ ಶತ ಸಾ
ವಿರ ಮಡಿಯ ಕಂಬನಿಯ ಸುರಿಸುವೆ ಹಗೆಯ ಹೆಂಡಿರಲಿ ॥27॥

೦೨೮ ಉರಿ ಹೊಗುವ ...{Loading}...

ಉರಿ ಹೊಗುವ ಮೀಸೆಗಳ ಬೆರಳಲಿ
ಮುರುಹಿ ವಾಮದ ಕರದಿ ತರುಣಿಯ
ಕುರುಳ ಸಂತೈಸಿದನು ಕಿಡಿಕಿಡಿಯೋಗಿ ಖಾತಿಯಲಿ
ನರಕಮರ್ದನ ಕೇಳು ಕೌರವ
ನರಿಗಳಿದಿರೇ ಕೀಳುವೆನು ಕುಲ
ಗಿರಿಗಳನು ತೊಡೆವೆನು ಕೃತಾಂತನ ಭಾಳದಕ್ಕರವ ॥28॥

೦೨೯ ಯಮಸುತನ ಹರುವೆನ್ತುಟೆನ್ದಾ ...{Loading}...

ಯಮಸುತನ ಹರುವೆಂತುಟೆಂದಾ
ಕ್ರಮಕೆ ಮೊಗದಿರುಹಿದೆನು ಬಳಿಕೀ
ಕಮಲವದನೆಯ ಹರಿಬವೆನ್ನದು ಪತಿಗಳಿನಿಬರಲಿ
ಎಮಗೆ ಸಂಪ್ರತಿಗಿಲ್ಲ ಮನ ಘನ
ಸಮರವೇ ಸರ್ವಾರ್ಥ ಕೋಪ
ಶ್ರಮಕೆ ರಿಪುರುಧಿರಾಂಬು ಪಾನವೆ ವಿಪುಳ ಫಲವೆಂದ ॥29॥

೦೩೦ ಕೆಡಹಿ ರಿಪುವನು ...{Loading}...

ಕೆಡಹಿ ರಿಪುವನು ಕರುಳ ದಂಡೆಯ
ಮುಡಿಸುವೆನು ಮಾನಿನಿಗೆ ರಕುತವ
ಕುಡಿಯಲೆರೆವೆನು ಶಾಕಿನಿಯರಿಗೆ ತತ್ಸಹೋದರರ
ನಡೆದು ಸಂಧಿಯ ಮಾಡಿ ಮುರರಿಪು
ಕೊಡಿಸು ನಾಲ್ಕೂರುಗಳನಿವರಿಗೆ
ತಡೆಯದಾನೆರಡೂರ ಕೊಂಬೆನು ಕೌರವೇಂದ್ರನಲಿ ॥30॥

+೦೬ ...{Loading}...