೦೫

೦೦೦ ಸೂ ವೀರ ...{Loading}...

ಸೂ. ವೀರ ಪಾಂಡವರದಟನಾ ಧನು
ಜಾರಿ ಹೇಳಿದ ವಚನರಚನೆಯ
ಕೌರವಗೆ ಬಂದರುಹೆ ಕೋಪಿಸಿ ಸಂಜಯನ ಜರೆದ

೦೦೧ ಬೀಳಿಕೊಣ್ಡುದು ರಜನಿ ...{Loading}...

ಬೀಳಿಕೊಂಡುದು ರಜನಿ ಕುರು ಭೂ
ಪಾಲನುಪ್ಪವಡಿಸಿದನೋಲಗ
ಶಾಲೆಯಲಿ ನೆರಹಿದನು ಸಭ್ಯರನಾಪ್ತ ಮಂತ್ರಿಗಳ
ಕೇಳುವೆವು ಕರೆ ಸಂಜಯನನವ
ರೋಲಗದ ಮೈಸಿರಿಯನೆಂದು ನೃ
ಪಾಲನಟ್ಟಿದ ದೂತರೊಡನೈತಂದರೋಲಗಕೆ ॥1॥

೦೦೨ ಬನ್ದು ಮೈಯಿಕ್ಕಿದನು ...{Loading}...

ಬಂದು ಮೈಯಿಕ್ಕಿದನು ಕುರು ನೃಪ
ವೃಂದವನು ಗಾಂಧಾರಿಯನು ಯಮ
ನಂದನನು ಬೆಸಗೊಂಡು ಕಳುಹಿದನುಚಿತ ವಚನದಲಿ
ಎಂದು ಬಳಿಕಿನ ರಾಜ ಕಾರ್ಯವ
ನಂದು ಬಿನ್ನೆ ೈಸಿದನು ಚಿತ್ತೈ
ಸೆಂದು ಧೃತರಾಷ್ಟ್ರಂಗೆ ದುರ್ಯೋಧನಗೆ ಕೈಮುಗಿದು ॥2॥

೦೦೩ ಜೀಯ ಬಿನ್ನಹವಿನ್ದು ...{Loading}...

ಜೀಯ ಬಿನ್ನಹವಿಂದು ಪಾಂಡವ
ರಾಯನೈಶ್ವರ್ಯವನು ಸಾವಿರ
ಬಾಯ ಸರ್ಪನು ಹೊಗಳಲಳವಲ್ಲೆನ್ನ ಪಾಡೇನು
ನಾಯಕರ ಕಡುಹುಗಳನವರವ
ರಾಯತವನನಿಬರಿಗೆ ಕಮಲದ
ಳಾಯತಾಕ್ಷನ ಕರುಣದಳತೆ ವಿಚಿತ್ರ ತರವೆಂದ ॥3॥

೦೦೪ ಓಲಗದೊಳುಬ್ಬೆದ್ದು ನುಡಿಯಲಿ ...{Loading}...

ಓಲಗದೊಳುಬ್ಬೆದ್ದು ನುಡಿಯಲಿ
ಹೂಳಿ ತಮತಮಗೆನ್ನ ಜರೆದರು
ಕಾಳಗಕೆ ಕೈಗಟ್ಟಿ ಹಿಂಡೆದ್ದೊದರಿತವನಿಪರು
ಮೇಲೆ ಸಂತೈಸಿದನು ಧರ್ಮನೃ
ಪಾಲನಲ್ಲಿಂ ಬಳಿಕ ಮುರಹರ
ನಾಲಯಕೆ ಪರಿಮಿತದೊಳರ್ಜುನನೆನ್ನ ಕರೆಸಿದನು ॥4॥

೦೦೫ ದೇವನಿದ್ದನು ಸತ್ಯಭಾಮಾ ...{Loading}...

ದೇವನಿದ್ದನು ಸತ್ಯಭಾಮಾ
ದೇವಿಯರ ನಸುಮಲಗಿಯರ್ಜುನ
ದೇವನಂಕದ ಮೇಲೆ ಸಿರಿಪದಪಂಕಜವ ನೀಡಿ
ನಾವು ಬರಲೆಮಗುಚಿತದಲಿ ಸಂ
ಭಾವನೆಯ ಮಾಡಿದರು ನಮಗಿ
ನ್ನಾವುದನು ನೇಮಿಸಿದಿರೆನಲಿಂತೆಂದನಸುರಾರಿ ॥5॥

೦೦೬ ಎಮಗೆ ಸರಿಯಿತ್ತಣ್ಡದಲ್ಲಿಯ ...{Loading}...

ಎಮಗೆ ಸರಿಯಿತ್ತಂಡದಲ್ಲಿಯ
ಮಮತೆ ಬೇರೊಬ್ಬರಲಿ ಪಕ್ಷ
ಭ್ರಮೆಯ ಮಾಡೆವು ಹಿತವ ಬಯಸುವೆವೆರಡು ಸಂತತಿಗೆ
ಕಮಲಮುಖಿ ಸುಲಿವಡೆದು ಲಕ್ಷಿ ್ಮೀ
ರಮಣ ಲಕ್ಷಿ ್ಮೀ ರಮಣ ಲಕ್ಷಿ ್ಮೀ
ರಮಣಯೆಂದೊರಲಿದೊಡೆ ಸಂಜಯ ನೊಂದೆ ನಾನೆಂದ ॥6॥

೦೦೭ ಕಾವುದೈ ಗೋವಿನ್ದ ...{Loading}...

ಕಾವುದೈ ಗೋವಿಂದ ಸಲಹೈ
ದೇವಕೀಸುತ ಗಂಡರೈವರ
ಭಾವ ಬೆಟ್ಟಿತು ನೀನಲೈ ದೇಸಿಗರ ದೈವವಲೈ
ದೇವ ಕೆಟ್ಟೆನು ಕೆಟ್ಟೆನೈ ಕರು
ಣಾವಲಂಬನದಿಂದ ತಡೆಯೈ
ಜೀವನವನೆಂದೊರಲಿದಳು ಹಂಗಿಗನು ತಾನೆಂದ ॥7॥

೦೦೮ ಭಣ್ಟನಹೆ ಬಕುತರಿಗೆ ...{Loading}...

ಭಂಟನಹೆ ಬಕುತರಿಗೆ ನೆನೆವರು
ನಂಟರೆಮಗೊಲಿದಂತೆ ಹೊಗಳಿದ
ರೆಂಟು ಮಡಿ ಹಿಗ್ಗುವೆವು ಮೆಚ್ಚೆವು ತರ್ಕ ಸಾಧಕರ
ಉಂಟು ಪಾಂಡವರೈವರಲಿ ಬಲು
ನಂಟತನ ಮರೆಯೇತಕೈವರ
ಕಂಟಕರು ನಮಗಾದ ಕಂಟಕರೆಂದು ಹರಿ ನುಡಿದ ॥8॥

೦೦೯ ನೆನೆವುದೆನ್ದನು ಪಾರ್ಥನಾ ...{Loading}...

ನೆನೆವುದೆಂದನು ಪಾರ್ಥನಾ ಕಾ
ನನದೊಳಗೆ ಗಂಧರ್ವರಲಿ ಬಂ
ಧನವನೀ ಗೋಗ್ರಹಣದಲಿ ಮಾಡಿದ ಪಲಾಯನವ
ವನಜವದನೆಯ ಬಯಸಿದೊಡೆ ಬಿ
ಲ್ಲಿನಲಿ ಬಲಿವಡೆದುದನು ಕೌರವ
ಜನಪ ಮರೆದಿರಲಾಗದೆಂದರಸಂಗೆ ಹೇಳೆಂದ ॥9॥

೦೧೦ ಧೀರಭೀಮನ ಗದೆಯ ...{Loading}...

ಧೀರಭೀಮನ ಗದೆಯ ಹೊಯ್ಲಿನ
ಭಾರಣೆಯ ನಮ್ಮತುಳ ಚಾಪದ
ಸಾರ ಶಸ್ತ್ರಾವಳಿಯ ಮಳೆಗಾಲದ ಮಹಾದ್ಭುತವ
ವೀರ ನಕುಲನ ಸಾತ್ಯಕಿಯ ಬಲು
ಕೂರಸಿಯ ಸಹದೇವ ಮತ್ಸ ್ಯರು
ದಾರತೆಯ ನಿಮ್ಮರಸ ನೆನೆದಿಹುದೆಂದನಾ ಪಾರ್ಥ ॥10॥

೦೧೧ ಹಿನ್ದೆ ಜೂಜಿನ ...{Loading}...

ಹಿಂದೆ ಜೂಜಿನ ಸಭೆಯೊಳಗೆ ನಾ
ವೆಂದ ಮಾತುಗಳುಂಟು ತಾವದ
ಮುಂದೆ ನೋಡಲಿ ಕರ್ಣ ಶಕುನಿ ಸುಯೋಧನಾದಿಗಳು
ಇಂದು ನೆನೆವುದು ದೇಶ ಕಾಲವ
ಹಿಂದುಗಳೆಯದೆ ಬೇಗ ಮಾಡುವು
ದೆಂದು ಬಿನ್ನಹ ಮಾಡಹೇಳಿದನರ್ಜುನನು ನಿಮಗೆ ॥11॥

೦೧೨ ತೊಡೆಗಳಿಗೆ ಸುಕ್ಷೇಮವೇ ...{Loading}...

ತೊಡೆಗಳಿಗೆ ಸುಕ್ಷೇಮವೇ ನಿ
ನ್ನೊಡೆಯನವನೊಡಹುಟ್ಟಿದನ ಮೈ
ಜಡಿದುದೇ ಪಾಲಿಸದಡನಿಬರಿಗಹುದು ರಕ್ತ ಜಲ
ಒಡನೆ ಹುಟ್ಟಿದ ನೂರ್ವರು ಮೈ
ಗೆಡರಲೇ ಬೆಸಗೊಂಬುದಂಜದಿ
ರೊಡೆಯರಿಗೆ ಹೊಣೆಗೊಂಡೆ ಹೇಳೆಂದಟ್ಟಿದನು ಭೀಮ ॥12॥

೦೧೩ ಸಾಕು ಸಞ್ಜಯ ...{Loading}...

ಸಾಕು ಸಂಜಯ ಗಳಹದಿರು ಫಡ
ನೂಕಿವನನಾರಲ್ಲಿಗಟ್ಟಿದ
ರಾ ಕುಠಾರರ ಬಯಲ ಗೃಹ ಗರ್ಜನೆಯ ಗರ ಹೊಡೆದು
ತೇಕಿ ತಲೆಕೆಳಕಾದನೀಯವಿ
ವೇಕಸಾಗರನೆಲೆ ನೃಪತಿ ಜಗ
ದೇಕ ವೀರನು ಕರ್ಣ ತಾನಿರೆ ಸಂಧಿಯೇಕೆಂದ ॥13॥

೦೧೪ ಮನ್ದಿಯಲಿ ಮೈಮರೆದು ...{Loading}...

ಮಂದಿಯಲಿ ಮೈಮರೆದು ಬಾಹಿರ
ನೆಂದ ಮಾತನು ರಾಜಸಭೆಯಲಿ
ತಂದು ಹರಹುವನಿವನು ಶಿಷ್ಟನೆ ಜಗದ ಭಂಡನಲ
ಇಂದುಮೌಳಿಯನೊಂದು ಬಾರಿಗೆ
ಹಿಂದು ಮುಂದನು ಮಾಡುವೆನು ತಾ
ಮಂದಿ ಕುಂತೀ ಮಕ್ಕಳಿದಿರೇ ತನಗೆ ಹೇಳೆಂದ ॥14॥

೦೧೫ ಭಣ್ಡನೇ ಸಞ್ಜಯನು ...{Loading}...

ಭಂಡನೇ ಸಂಜಯನು ಲೋಕದ
ಭಂಡ ನೀನೆಲೆ ಕರ್ಣ ನಿನಗಾ
ಪಾಂಡವರ ಪರಿಯಂತವೇ ನಿನಗವರ ಸೇನೆಯಲಿ
ಗಂಡನೊಬ್ಬನು ಸಾಕು ಕೆದರುವೆ
ಗಂಡು ಗರ್ವದ ಮಾತ ನಿನ್ನನು
ದಿಂಡುದರಿವನು ಮುನಿದಡರ್ಜುನನೆಂದನಾ ಭೀಷ್ಮ ॥15॥

೦೧೬ ಖುಲ್ಲನಿವನೀ ಕರ್ಣನವರಲಿ ...{Loading}...

ಖುಲ್ಲನಿವನೀ ಕರ್ಣನವರಲಿ
ಬಲ್ಲಿದನು ತಾನೆಂದು ದಿಟವಿವ
ನಲ್ಲಿ ನಂಬುಗೆ ಮಾಡದಿರು ಮರುಳೇ ಮಹೀಪತಿಯೆ
ಇಲ್ಲ ನೋಡರ್ಜುನಗೆ ಪಡಿ ನರ
ರಲ್ಲಿ ನಿರ್ಜರರಲ್ಲಿ ಪನ್ನಗ
ರಲ್ಲಿ ಕೈವಾರಿಗಳೆ ನಾವಿನ್ನೆಂದನಾ ಭೀಷ್ಮ ॥16॥

೦೧೭ ಮುರಿಯದಿರು ...{Loading}...

ಮುರಿಯದಿರು ಗಾಂಗೇಯನೆಂದುದೆ
ಪರಮ ಮಂತ್ರವು ಪಾರ್ಥನನು ಸಂ
ಗರದೊಳಾನುವರಿಲ್ಲ ಕೇಳಮರಾಸುರಾಳಿಯಲಿ
ದುರುಳರಾಡುವ ಹೊಳ್ಳುನುಡಿಗಳು
ಗರುವರಭಿಮತವಲ್ಲ ಸಂಧಿಗೆ
ಕೊರಳುಗೊಳಿಸುವುದುಚಿತವೆಂದನು ದ್ರೋಣನರಸಂಗೆ ॥17॥

೦೧೮ ಹುರುಳುಗೆಡಿಸುವಿರಾವು ...{Loading}...

ಹುರುಳುಗೆಡಿಸುವಿರಾವು ನುಡಿದೊಡೆ
ಕರಗಿ ಕುಂತೀ ಮಕ್ಕಳೆಂದೊಡೆ
ಹರಹಿ ಕೊಂಬಿರಿ ಡಿಂಬವೆಮ್ಮಲಿ ಜೀವವವದಿರಲಿ
ಭರತ ಸಂತತಿಯಲ್ಲಿ ಕೆಲಬರು
ಸುರರು ಕೆಲಬರು ನರರೆ ಸಾಕಂ
ತಿರಲಿ ಸಮರದೊಳೆಮ್ಮ ನೋಡೆಂದನು ಸುಯೋಧನನು ॥18॥

೦೧೯ ಬೇಡ ಮಗನೇ ...{Loading}...

ಬೇಡ ಮಗನೇ ಕೃಷ್ಣರಾಯನು
ರೂಢಿಸಿದ ಕಟ್ಟಾಳು ಕೆಲ ಕೆಲ
ರಾಡುವರು ಸಾಕ್ಷಾತು ಲಕ್ಷಿ ್ಮೀಕಾಂತ ಹರಿಯೆಂದು
ಕೂಡಿಕೊಂಡಿಹನವರನಾತನು
ಕೇಡನವರಿಗೆ ಹೊದ್ದಲೀಯನು
ನಾಡನೊಪ್ಪಿಸು ಮಗನೆಯೆಂದನು ಬೆದರಿ ಧೃತರಾಷ್ಟ್ರ ॥19॥

೦೨೦ ಮರುಳುಗಳಲಾ ಬೊಪ್ಪನವರೀ ...{Loading}...

ಮರುಳುಗಳಲಾ ಬೊಪ್ಪನವರೀ
ಮುರಹರನು ಹರಿಯೆಂದು ಮುನ್ನದ
ನರಿದಿಹೆನು ನೀವಂಜದಿರಿ ನಿಮಗಾಗದವಸಾನ
ಗುರು ನದೀಸುತ ಮುಖ್ಯರಿರಲೀ
ಕುರುಕುಲಕೆ ಕೇಡಹುದೆ ಕೊಲುವೊಡೆ
ಸುರಪತಿಯ ಸುತನಳವೆಯೆಂದನು ಕೌರವರರಾಯ ॥20॥

೦೨೧ ಭಾರ ಹೆಚ್ಚಿದೊಡರಲಿ ...{Loading}...

ಭಾರ ಹೆಚ್ಚಿದೊಡರಲಿ ಭೂಮಿ
ನಾರಿ ಬಿನ್ನಹ ಮಾಡಿದೊಡೆ ದೈ
ತ್ಯಾರಿ ಬಿಜಯಂಗೈದನವನಿಗೆ ಮನುಜ ವೇಷದಲಿ
ಭೂರಿ ದನುಜರನೊರಸಿದನು ಕೈ
ಯಾರ ಬಳಿಕರ್ಜುನನ ಕೈಯಲಿ
ಕೌರವರ ಕೊಲಿಸುವನು ನಾವಿನ್ನಂಜಲೇಕೆಂದ ॥21॥

೦೨೨ ಕಾವನಾತನೆ ಕೊಲುವನಾತನೆ ...{Loading}...

ಕಾವನಾತನೆ ಕೊಲುವನಾತನೆ
ಸಾವೆನಾತನ ಕೈಯ ಬಾಯಲಿ
ನೀವು ಪಾಂಡವರೊಡನೆ ಸುಖದಲಿ ರಾಜ್ಯವಾಳುವುದು
ಸಾವ ನಾನಂಜದೊಡೆ ಬದುಕುವ
ನೀವು ಚಿಂತಿಸಲೇಕೆ ನಿಮ್ಮನು
ಕಾವನೈ ಕರುಣದಲಿ ಗದುಗಿನ ವೀರನಾರಯಣ ॥22॥

+೦೫ ...{Loading}...