೦೨

೦೦೦ ಸೂ ಬನ್ದು ...{Loading}...

ಸೂ. ಬಂದು ಕಂಡನು ಸಂಜಯನು ಯಮ
ನಂದನನನಲ್ಲಿಂದ ಮರಳಿದು
ಬಂದು ಕೌರವ ನೃಪತಿಗರುಹಿದನವರ ಮಾತುಗಳ

೦೦೧ ಎಲೆ ಪರೀಕ್ಷಿತ ...{Loading}...

ಎಲೆ ಪರೀಕ್ಷಿತ ತನಯ ಕೇಳು
ಮ್ಮಳಿಸಿದನು ಯಮಸೂನು ಮುರರಿಪು
ಫಲುಗುಣಗೆ ಮೈಗೊಡುವನೋ ಕೌರವರಿಗೊಳಗಹನೊ
ತಿಳಿಯಲರಿದೆನುತಿರಲು ಬಲಗ
ಣ್ಣಲುಗಿತಿದಿರೊಳು ಕೈಯಗುಡಿಯಲಿ
ಸುಳಿದನೊಬ್ಬನು ಬಹಳ ಮಾರ್ಗಶ್ರಮದ ಭಾರದಲಿ ॥1॥

೦೦೨ ಇದಿರುಗೊಳ್ಳೇಳರಸ ಕಟ್ಟಿಸು ...{Loading}...

ಇದಿರುಗೊಳ್ಳೇಳರಸ ಕಟ್ಟಿಸು
ಮುದದಿ ಗುಡಿಯನು ರಣದೊಳಹಿತರ
ಸದೆದೆ ಹೋಗಿನ್ನೇನು ಸರಿಯೇ ಸುರರು ಗಿರರುಗಳು
ಪದವನರಸಿದರಾಳಿಗೊಂಡನು
ಸದಮಲಶ್ರುತಿ ತತಿಯನೆಂಬ
ಗ್ಗದ ಮಹಾ ಪರದೈವ ಬಿಜಯಂಗೈವುತಿದೆಯೆಂದ ॥2॥

೦೦೩ ಕಥೆಯೆ ನಿನ್ನೊಡ ...{Loading}...

ಕಥೆಯೆ ನಿನ್ನೊಡ ಹುಟ್ಟಿದನ ಸಾ
ರಥಿತನವ ಕೈಕೊಂಡನಿನ್ನೀ
ಪೃಥಿವಿ ನಿನ್ನಯ ರಾಣಿವಾಸವು ಚಿಂತೆ ಬೇಡಿದಕೆ
ವ್ಯಥಿತವಾಯಿತು ವೈರಿಬಲ ಸಂ
ಪ್ರಥಿತ ಸಾಹಸನಾದೆ ನೀನೆನೆ
ಶಿಥಿಲ ಸಂಶಯನಂಗಚಿತ್ತವನಿತ್ತನಾತಂಗೆ ॥3॥

೦೦೪ ಉಕ್ಕಿ ವಿಸಟಮ್ಬರಿವ ...{Loading}...

ಉಕ್ಕಿ ವಿಸಟಂಬರಿವ ಹರುಷದ
ತೆಕ್ಕೆಯಲಿ ಕೈಗೊಡುವ ನೃಪತಿಗ
ಳಿಕ್ಕಲಿಸೆ ಹೊರವಂಟನರಸನು ಸಕಲದಳ ಸಹಿತ
ಮಿಕ್ಕು ಬರೆ ಬರೆ ಕೃಷ್ಣನನು ಕಂ
ಡೊಕ್ಕನೊಡಲನು ಚರಣದಲಿ ಸಾ
ಕಕ್ಕಜವಿದೇನೆನುತ ನೆಗಹಿದನಂದು ಧರ್ಮಜನ ॥4॥

೦೦೫ ಪರಕೆ ಪರತರ ...{Loading}...

ಪರಕೆ ಪರತರ ವಸ್ತುವನು ಗೋ
ಚರಿಸಿದೆವಲೈ ಮುನಿಜನಂಗಳ
ವರ ಸಮಾಧಿಗೆ ಸಮಯವಿಲ್ಲದ ದೇವ ನಮಗೊಲಿದೈ
ಕರುಣಿ ಬಿಜಯಂಗೈದೆಯೆನೆ ಮುರ
ಹರನು ನಗುತಿಂತೆಂದ ನಾವೀ
ನರನ ಸಾರಥಿಯಲ್ಲದೆಲ್ಲಿಯ ವಸ್ತು ತಾನೆಂದ ॥5॥

೦೦೬ ಬಯಲಿಗೆಮ್ಮನು ನಾಚಿಸದೆ ...{Loading}...

ಬಯಲಿಗೆಮ್ಮನು ನಾಚಿಸದೆ ಪಾ
ಳೆಯಕೆ ನಡೆಯೆಂದಸುರರಿಪು ಸೇ
ನೆಯನು ಕೈವೀಸಿದನು ಬಂದನು ರಾಜಮಂದಿರಕೆ
ನಿಯತವಿತ್ತಲು ಕೇಳು ಜನಮೇ
ಜಯ ಮಹೀಪತಿ ಧರ್ಮಸುತನೋ
ಲೆಯ ಹದನನರಿದಂತೆ ಶಲ್ಯ ನೃಪಾಲ ಹೊರವಂಟ ॥6॥

೦೦೭ ಮೇಳವಿಸಿ ಹೊರವಣ್ಟನಗಣಿತ ...{Loading}...

ಮೇಳವಿಸಿ ಹೊರವಂಟನಗಣಿತ
ದಾಳು ಕುದುರೆಯ ಕೂಡಿ ಬರುತಿರೆ
ಕೇಳಿದನು ಕುರುರಾಯನಾ ಮಾದ್ರಾಧಿಪನ ಬರವ
ಆಳೊಳಗ್ಗಳನದಟ ಶಲ್ಯ ನೃ
ಪಾಲಕನ ತಿರುಹಿದೊಡೆ ಗೆಲುವುದು
ಕಾಳಗವು ನಮಗೆಂದು ನಿಶ್ಚೈಸಿದನು ಮಂತ್ರದಲಿ ॥7॥

೦೦೮ ಎನ್ದಖಿಳ ವಸ್ತುಗಳ ...{Loading}...

ಎಂದಖಿಳ ವಸ್ತುಗಳ ಜೋಡಿಸಿ
ಮುಂದೆ ಪಾಳೆಯ ಬಿಡುವ ಠಾವಿನೊ
ಳಂದ ಮಿಗೆ ಮಾಡಿದನು ಗುಡಿ ಗೂಡಾರ ಚೌಕಿಗೆಯ
ಒಂದು ಯೋಜನದಗಲದಲಿ ಹಯ
ವೃಂದ ಗಜಶಾಲೆಗಳ ಪರುಠವ
ದಿಂದ ರಚಿಸಿದ ಕೂಳು ಖಾಣವನಖಿಳ ಮೋಹರಕೆ ॥8॥

೦೦೯ ಬನ್ದು ಬಿಡುವನ್ನೆಬರ ...{Loading}...

ಬಂದು ಬಿಡುವನ್ನೆಬರ ಮುನ್ನಿನ
ಮಂದಿರವ ಹೊಗುವಂತೆ ಶಲ್ಯನ
ಮಂದಿ ಸಂತೋಷದ ಸಮುದ್ರದಿ ಮೂಡಿ ಮುಳುಗಾಡಿ
ಮುಂದೆ ನಡೆಯಲು ಮತ್ತೆ ಮುನ್ನಿನ
ಚಂದದಿಂ ಮನೆ ಮನೆಗಳನು ಸುಖ
ದಿಂದಿರಲು ರಚಿಸಿದನು ಕುರುಪತಿ ಪಯಣ ಪಯಣದಲಿ ॥9॥

೦೧೦ ಆರು ನಯದಲಿ ...{Loading}...

ಆರು ನಯದಲಿ ನಮ್ಮಖಿಳ ದಳ
ಭಾರವನು ಸಲೆ ತಡೆದವನು ಕುರು
ವೀರನೋ ಯಮನಂದನನೊ ಮಿಗಲಾಗಿ ಮೆಚ್ಚಿದೆನು
ಆರು ಮಾಡಲಿಯವರು ಬಂದರೆ
ಹಾರಲೇಕೆನ್ನೊಡಲ ತೆರುವೆನು
ವೀರ ಮೈದೋರಲಿಯೆನುತ ಹೊಯಿಸಿದನು ಡಂಗುರವ ॥10॥

೦೧೧ ನಗುತ ಕೌರವ ...{Loading}...

ನಗುತ ಕೌರವ ರಾಯನಿವರೋ
ಲಗಕೆ ಬರಲಿದಿರೆದ್ದು ಮುದದಲಿ
ತೆಗೆದು ಬಿಗಿಯಪ್ಪಿದನು ಕುಶಲವನೈಯÉ್ದು ಬೆಸಗೊಂಡ
ಮಗನೆ ನೀನೇ ರಚಿಸಿದಾತನು
ಬಗೆ ದಣಿಯೆ ಬೇಡುವುದು ತಾ ಹಂ
ಗಿಗನು ನಿನಗೆನೆ ಮಾವ ಬಿನ್ನಹ ಮರಳಿ ನೀವೆಂದ 11

೦೧೨ ಎನಗೆ ಬೆಮ್ಬಲವಾಗಿ ...{Loading}...

ಎನಗೆ ಬೆಂಬಲವಾಗಿ ಕುಂತೀ
ತನಯರನು ಬಿಡಿ ಮರಳಿ ನೀವ್ ಹ
ಸ್ತಿನಪುರಿಗೆ ತನಗಿತ್ತ ವರವೆನೆ ಶಲ್ಯ ಮನವಳುಕಿ
ತನಯ ಕೈಕೊಂಡೆನು ಯುಧಿಷ್ಠಿರ
ಜನಪನಳಿಯನು ನೀನು ಲೋಗನೆ
ಯೆನಗೆ ನೀವಿತ್ತಂಡ ಸರಿ ನಿಮ್ಮತ್ತ ಬಹೆನೆಂದ ॥12॥

೦೧೩ ಅಗಲಿದೆನು ಹಲಕಾಲವೈವರ ...{Loading}...

ಅಗಲಿದೆನು ಹಲಕಾಲವೈವರ
ಮೊಗವನೀಕ್ಷಿಸಿ ಮರಳುವೆನು ಬಂ
ಧುಗಳ ದರುಶನ ಫಲವಲಾ ಸಂಸಾರ ತರುವಿಂಗೆ
ಮಗನೆ ಸೇನೆಯ ಕೊಂಡು ವಾರಣ
ನಗರಿಗೈದುವುದೆಂದು ಭೂಪನ
ಮಗುಳಿಚಿದನಾ ಶಲ್ಯ ಬಂದನು ಪಾಂಡವರ ಹೊರೆಗೆ ॥13॥

೦೧೪ ಇದಿರುಗೊಣ್ಡರು ಕಾಣಿಕೆಯನಿ ...{Loading}...

ಇದಿರುಗೊಂಡರು ಕಾಣಿಕೆಯನಿ
ಕ್ಕಿದರು ತೆಗೆದಪ್ಪಿದರು ಹಲ ಕಾ
ಲದಲಿ ಹೂಳಿದ ಹರುಷವನು ಕೈಗೊಳಗು ಮಾಡಿದರು
ಮುದದಿನೆಲ್ಲರ ಕುಶಲವನು ಕೇ
ಳಿದನು ದುರಿಯೋಧನಗೆ ಸಿಲುಕಿದ
ಹದನನೆಲ್ಲವ ಹೇಳಿದನು ನಿರ್ವಿಣ್ಣಮನನಾಗಿ ॥14॥

೦೧೫ ಆದಡೇನೆಲೆ ಕನ್ದ ...{Loading}...

ಆದಡೇನೆಲೆ ಕಂದ ತಪ್ಪದು
ಮೇದಿನಿಯ ಸಿರಿ ನಿನಗೆ ಸತ್ಯವ
ಕಾದು ಹದಿಮೂರಬುದ ನವೆದಿರಿ ಮುಂದೆ ಲೇಸಹುದು
ಕಾದಿ ವೃತ್ರಾಸುರನ ಮುರಿದಪ
ವಾದದಲಿ ಸಿರಿ ಹೋಗಿ ದುಃಖಿತ
ನಾದನಿಂದ್ರನು ಮತ್ತೆ ಬದುಕಿದ ಶಚಿಯ ದೆಸೆಯಿಂದ ॥15॥

೦೧೬ ನಹುಷನನು ಕೆಡೆನೂಕಿ ...{Loading}...

ನಹುಷನನು ಕೆಡೆನೂಕಿ ಋಷಿಗಳ
ಮಹಿಮೆಯಲಿ ಸಾಮಾ್ರಜ್ಯದಲಿ ಸ
ನ್ನಿಹಿತನಾದನು ಮತ್ತೆ ದಿವಿಜರ ರಾಯನೊಳಗಾಗಿ
ಅಹಿತರವಗಡಿಸಿದೊಡೆ ಕುಸಿದನು
ಬಹಳ ಲೇಸನು ಬಳಿಕ ಕಂಡನು
ಮಹಿ ನಿನಗೆ ಬೆಸಕೈದು ಬದುಕುವಿರೆಂದನಾ ಶಲ್ಯ ॥16॥

೦೧೭ ಆದೊಡಾ ಕರ್ಣಙ್ಗೆ ...{Loading}...

ಆದೊಡಾ ಕರ್ಣಂಗೆ ಸಾರಥಿ
ಯಾದಿರಾದೊಡೆ ಸಮರ ಮುಖದಲಿ
ವಾದ ತೇಜೋವಧೆಯ ಮಾಡುವುದವನನವಗಡಿಸಿ
ಕಾದಿ ಕೊಡುವುದು ನಾವು ಗೆಲುವವೊ
ಲಾದರಿಸುವುದು ನಮ್ಮನೆಂದಾ
ಮೇದಿನೀಪತಿ ಶಲ್ಯನನು ಸತ್ಕರಿಸಿ ಕಳುಹಿದನು ॥17॥

೦೧೮ ಬೀಳುಗೊಣ್ಡನು ಶಲ್ಯನಿತ್ತಲು ...{Loading}...

ಬೀಳುಗೊಂಡನು ಶಲ್ಯನಿತ್ತಲು
ಹೇಳುವರ ಮತಿ ಮುರಿಯೆ ನೋಟಕ
ರಾಲಿ ಝೊಮ್ಮಿಡೆ ಕಾದುವರ ಮನ ಮೂರು ಕವಲಾಗೆ
ಜಾಳಿಗೆಯ ಹೊಗರಲಗಿನುರಿಯ ಚ
ಡಾಳ ನಭದಲಿ ಝಗಝಗಿಸೆ ಹೇ
ರಾಳದೊಡ್ಡವಣೆಯಲಿ ಬರುತಿರ್ದುದು ನೃಪವ್ರಾತ ॥18॥

೦೧೯ ದೆಸೆಗಳೆಣ್ಟರ ಮೂಲೆ ...{Loading}...

ದೆಸೆಗಳೆಂಟರ ಮೂಲೆ ಬಿರಿಯಲು
ಪಸರಿಸಿತು ಹಳೆ ಬೊಮ್ಮಗಹುದೇ
ಹೊಸ ವಿಧಾತ್ರನ ಸೃಷ್ಟಿಯಿದು ಹೆಸರೇನು ಹೊಗಳುವರೆ
ಕುಸಿಯನೇ ಕೂರುಮನು ಭಾರಕೆ
ನಸಿಯನೇ ನಾಗೇಂದ್ರನಾನೆಗ
ಳುಸುರು ಹದುಳವೆ ನೋಡೆನಲು ಬಂದುದು ನೃಪವ್ರಾತ ॥19॥

೦೨೦ ಚೋಳ ಪಾಣ್ಡ್ಯರು ...{Loading}...

ಚೋಳ ಪಾಂಡ್ಯರು ಕೇರಳರು ಶಿಶು
ಪಾಲ ನಂದನ ಧೃಷ್ಟಕೇತು ಕ
ರಾಳ ಮಾಗಧ ಚೀನ ಭೋಟಕ ಕರ್ಪರಾದಿಗಳು
ಮೇಲೆ ಮೇಲೈತಂದು ಭೀಮಂ
ಗಾಳುದೋರಿದರಿತ್ತ ಕುರು ಭೂ
ಪಾಲಕನ ಕೂಡಿದರು ಭಗದತ್ತಾದಿ ಭೂಭುಜರು ॥20॥

೦೨೧ ದ್ರುಪದ ರಾಜ ...{Loading}...

ದ್ರುಪದ ರಾಜ ಪುರೋಹಿತನು ಕುರು
ನೃಪನನಿತ್ತಲು ಬಂದು ಕಂಡನು
ವಿಪುಳಮತಿ ಮಾತಾಡಿದನು ನಿಜ ರಾಜಕಾರಿಯವ
ಕೃಪಣತನದಲಿ ಕೌರವನು ಗುರು
ಕೃಪನ ಭೀಷ್ಮನ ಮತವನೊಲ್ಲದೆ
ಚಪಳ ಕರ್ಣನ ಕೂಡಿ ನಿಶ್ಚೈಸಿದನು ಕಾಳಗವ ॥21॥

೦೨೨ ನೆನೆದ ಮತವನು ...{Loading}...

ನೆನೆದ ಮತವನು ತನ್ನ ತಂದೆಯ
ಮನದ ಮಚ್ಚದೊಳೊರೆದು ಕರ್ಣನ
ನೆನಹಿನಲಿ ಪುಟವಿಟ್ಟು ಶಕುನಿಯ ನೀತಿಯಲಿ ನಿಗುಚಿ
ಅನುಜ ಮತದಲಿ ವಿಸ್ತರಿಸಿ ಮೈ
ದುನನ ನುಡಿಯಲಿ ಬಣ್ಣವಿಟ್ಟನು
ಜನಪನಪಕೀರ್ತ್ಯಂಗನೆಗೆ ತೊಡಿಸಿದನು ಭೂಷಣವ ॥22॥

೦೨೩ ಹರುಷದಲಿ ಸಞ್ಜಯನನಾಗಳೆ ...{Loading}...

ಹರುಷದಲಿ ಸಂಜಯನನಾಗಳೆ
ಕರೆಸಿ ಕುರುಪತಿ ಬುದ್ಧಿಗಲಿಸಿದ
ನರಿನೃಪರ ಪಾಳಯಕೆ ಹೋಹುದು ನುಡಿವುದುರವಣಿಸಿ
ಧರೆಯ ಬೇಡಿಸಿ ಕಳುಹಿದಿರಿ ಸಂ
ಗರದೊಳಸಿ ಧಾರೆಯಲಿ ಕೊಡುವೆವು
ಬರಿದೆ ಕೊಟ್ಟೊಡಧರ್ಮವೆಂಬುದು ಧರ್ಮಪುತ್ರಂಗೆ ॥23॥

೦೨೪ ಬೀಳುಕೊಣ್ಡನು ಮನ್ತ್ರಿ ...{Loading}...

ಬೀಳುಕೊಂಡನು ಮಂತ್ರಿ ಪಯಣದ
ಮೇಲೆ ಪಯಣವನೆಯ್ದಿ ಪಾಂಡು ನೃ
ಪಾಲಕರ ಪಾಳೆಯಕೆ ಬಂದನು ರಾಯಗರುಹಿಸಲು
ಕೇಳಿ ಬೀಡಾರವನು ಬೀಯವ
ಹೇಳಿಸಿದನಾ ಮರುದಿವಸದೊ
ಡ್ಡೋಲಗವ ರಚಿಸಿದನು ಕುಂತೀಸುತನು ಠೀವಿಯಲಿ ॥24॥

೦೨೫ ಹರಿ ವಿರಾಟ ...{Loading}...

ಹರಿ ವಿರಾಟ ದ್ರುಪದ ಕೈಕೆಯ
ರಿರವು ಬಲವಂಕದಲಿ ವಾಮದ
ಲಿರೆ ವೃಕೋದರ ಫಲುಗುಣಾದಿಗಳಖಿಳ ಮಂತ್ರಿಗಳು
ತರುಣಿಯರು ಪರಿಮಳದ ಜಂಗಮ
ಭರಣಿಯರು ಮನುಮಥ ವಿರಿಂಚನ
ತರುಣಿಯರು ಕುಳ್ಳಿರ್ದರರಸನ ಹಿಂದೆ ಮೋಹರಿಸಿ ॥25॥

೦೨೬ ಕರಣಿಕರು ಮಾನ್ತ್ರಿಕರು ...{Loading}...

ಕರಣಿಕರು ಮಾಂತ್ರಿಕರು ವೈದ್ಯರು
ಸರಸ ಕವಿಗಳು ತಾರ್ಕಿಕರು ವರ
ಭರತ ನಿಪುಣರು ಗಾಯಕರು ಪಾಠಕರು ವಾಗ್ಮಿಗಳು
ಕರಿತುರಗ ಶಿಕ್ಷಕರು ಲಕ್ಷಣ
ಪರಿಣತರು ಕೋವಿದರು ಸಾವಂ
ತರರು ಪರಿಹಾಸಕರು ವೈತಾಳಿಕರು ರಂಜಿಸಿತು ॥26॥

೦೨೭ ಮಾವುತರು ಚಿತ್ರಕರು ...{Loading}...

ಮಾವುತರು ಚಿತ್ರಕರು ಮಲ್ಲರು
ರಾವುತರು ಶಿಲ್ಪಿಗರು ಮಾಯಾ
ಕೋವಿದರು ಕರ್ಣಾಂಘ್ರಿವಿಕಳರು ಮೂಕ ವಾಮನರು
ದ್ರಾವಕರು ಜೂಜಾಳಿಗಳು ವರ
ದಾವಣಿಯರು ವಿದೇಶಿಗಳು ಮೃಗ
ಜೀವಿಗಳು ಶಾಕುನಿಕರೆಸೆದರು ರಾಜ ಸಭೆಯೊಳಗೆ ॥27॥

೦೨೮ ಸಾಲ ಮಕುಟದ ...{Loading}...

ಸಾಲ ಮಕುಟದ ರತ್ನ ರಶ್ಮಿಯ
ದಾಳಿಗೊಂಡುದು ತಮವನಿನ್ನಾ
ಮೇಲುಪೋಗಿನ ಕಿತ್ತ ಖಡ್ಗಕೆ ಪ್ರಭೆಯ ಹಂಗೇಕೆ
ಮೇಲೆ ಕೈದೀವಿಗೆಗಳಧಿಕ
ಜ್ವಾಲೆಯದು ಪುನರುಕ್ತವೆನೆ ಭೂ
ಪಾಲನೋಲಗವೆಸೆದುದಿಂದ್ರನ ಸಭೆಗೆ ವೆಗ್ಗಳಿಸಿ ॥28॥

೦೨೯ ಕಳಕಳವೆ ಫಡ ...{Loading}...

ಕಳಕಳವೆ ಫಡ ಮಾಣು ಮಾಣೆಂ
ದುಲಿಯೆ ಕಂಚುಕಿ ನಿಕರವಂಗೈ
ತಳದ ಬಾಯಲಿ ರಾಯರಿರ್ದರು ಮಣಿದ ಮಕುಟದಲಿ
ನಳಿನನಾಭನು ನಗುತ ಪರ ಮಂ
ಡಲದ ಶಿಷ್ಟನು ಬರಲಿಯೆನೆ ಬಾ
ಗಿಲಲಿ ಕೈದುವ ಕೊಂಡು ಹೊಗಿಸಿದರಂದು ಸಂಜಯನ ॥29॥

೦೩೦ ಬನ್ದು ಕಾಣಿಕೆಗೊಟ್ಟು ...{Loading}...

ಬಂದು ಕಾಣಿಕೆಗೊಟ್ಟು ಹರುಷದ
ಲಂದು ಮೈಯಿಕ್ಕಿದನು ಭಯದಲಿ
ನಿಂದು ನೋಡಿದನೆಡದಬಲದ ಮಹಾ ಮಹೀಶ್ವರರ
ಸಂದ ಯಮನೋ ನಿರುತಿಯೋ ಪೌ
ರಂದರನೊ ಪಾವಕನೊ ವರುಣನೊ
ಮಂದಿಯಿದು ಮಾನಸರೆ ಮಾಮಾಯೆನುತ ಬೆರಗಾದ ॥30॥

೦೩೧ ಸುಳಿದಲೆಯ ಕೆಮ್ಮೀಸೆಗಳ ...{Loading}...

ಸುಳಿದಲೆಯ ಕೆಮ್ಮೀಸೆಗಳ ಮಿಗೆ
ಬೆಳೆದ ಮುಡುಹುಗಳೊಡ್ಡಿದುರದು
ಚ್ಚಳಿತ ರೋಮದ ನೊಸಲ ಡೋರಿಯ ತಲೆಯ ಕಲಿ ಮುಖದ
ಬಲಿದ ಹುಬ್ಬಿನ ತೋರ ತೋಳಿನ
ಹೊಳೆವಡಾಯುಧ ಮೊಗದ ಹೊಗರಿನ
ಕಲಿಮನದ ಕದನ ಪ್ರಚಂಡರ ಕಂಡು ಬೆರಗಾದ ॥31॥

೦೩೨ ಹಳುವದಲಿ ಹನ್ನೆರಡು ...{Loading}...

ಹಳುವದಲಿ ಹನ್ನೆರಡು ವರುಷವು
ತೊಳಲಿದರು ಸಿರಿ ಹೋಗಿ ನಿಮಿಷಕೆ
ನೆಲದ ರಾಯರು ನೆರೆದು ಜೀಯೆನುತಿದೆ ಮಹಾದೇವ
ನಳಿನನಾಭನ ಕರುಣದಳತೆಗೆ
ನಿಲುಕದಿಹುದೇನುಂಟು ಮುರರಿಪು
ಮುನಿದೊಡಾವನ ಮುರಿಯನೆಂದನು ತನ್ನ ಮನದೊಳಗೆ ॥32॥

೦೩೩ ಇಳುಹಿದನು ಮಹಿಯಲಿ ...{Loading}...

ಇಳುಹಿದನು ಮಹಿಯಲಿ ಮಹೀಪತಿ
ಕಳುಹಿದುಡುಗೊರೆಗಳನು ಭೂಪತಿ
ತಿಲಕ ಧರ್ಮಜನೊಪ್ಪುಗೊಂಡನು ನೃಪನ ಪಾವುಡವ
ಒಲವು ಬೊಪ್ಪನಲುಂಟಲಾ ಮ
ಕ್ಕಳನು ಮರೆಯನು ಲೇಸು ಸಂಜಯ
ತಿಳುಹು ತಾತನ ಕುಶಲವನು ಗಾಂಧಾರಿ ದೇವಿಯರ ॥33॥

೦೩೪ ಗುರು ಪಿತಾಮಹ ...{Loading}...

ಗುರು ಪಿತಾಮಹ ಗೌತಮರ ಸ
ಚ್ಚರಣಕಮಲಂಗಳಿಗೆ ಕುಶಲವೆ
ಗುರುಸುತನು ಸುಕ್ಷೇಮಿಯೇ ಕುರುರಾಯನಿರವೆಂತು
ಕುರುಪತಿಯ ಸೋದರರು ಮಕ್ಕಳು
ಸರಸಿಜಾನನೆ ಭಾನುಮತಿ ಮಿ
ಕ್ಕರಸಿಯರು ಕರ್ಣಾದಿಗಳು ನಿರ್ವೃತರೆ ಹೇಳೆಂದ ॥34॥

೦೩೫ ಸುಖಿಗಳಿನಿಬರು ಜೀಯ ...{Loading}...

ಸುಖಿಗಳಿನಿಬರು ಜೀಯ ನಿಮ್ಮಯ
ನಿಖಿಳ ಬಾಂಧವರನು ಸಹೋದರ
ಸಖ ಸುತಾದಿಗಳನು ಪುರೋಹಿತ ಪೌರ ಪುರಜನದ
ಮಖ ಸಮುದ್ಭವೆ ಮೊದಲು ಪಂಕಜ
ಮುಖಿಯರನು ಬೆಸಗೊಂಡು ಕಳುಹಿದ
ರಖಿಳ ಕುರು ನಂದನರು ಭೀಷ್ಮ ದ್ರೋಣ ಕೃಪರೆಂದ ॥35॥

೦೩೬ ಮುನ್ನ ಭೀಷ್ಮ ...{Loading}...

ಮುನ್ನ ಭೀಷ್ಮ ದ್ರೋಣ ಗೌತಮ
ರುನ್ನತದ ಕಾರುಣ್ಯದಲಿ ಸಂ
ಪನ್ನ ಸಾಹಸರಾದೆವಾಚರಿಸಿದೆವು ಧರ್ಮವನು
ಇನ್ನು ಧೃತರಾಷ್ಟ್ರಾವನೀಶನು
ತನ್ನ ಮಕ್ಕಳ ಬಾಂಧವ ಪ್ರತಿ
ಪನ್ನತೆಯ ನೆರೆ ಕಾಬನೆಂದನು ಧರ್ಮಸುತ ನಗುತ ॥36॥

೦೩೭ ಏನು ಬನ್ದಿಹ ...{Loading}...

ಏನು ಬಂದಿಹ ಹದನು ನಿಮ್ಮವ
ರೇನನೆಂದರು ಕುರುಕುಲೇಶ್ವರ
ನೇನನೆಕ್ಕಟಿ ಬುದ್ಧಿಗಲಿಸಿದನವರ ಮಾತುಗಳ
ಏನುವನು ನೀನುಳುಹದಿರು ವಿನ
ಯಾನುಗತವಾಗಿರಲಿ ಮೇಣ್ ಶೌ
ರ್ಯಾನುಗತವಾಗಿರಲಿ ಬಿನ್ನವಿಸೆಂದನಸುರಾರಿ ॥37॥

೦೩೮ ನಾಡ ಬೇಡುವರೆಮ್ಮೊಡನೆ ...{Loading}...

ನಾಡ ಬೇಡುವರೆಮ್ಮೊಡನೆ ಹೊ
ಯಾ್ದಡುವದು ಸಂಪ್ರತಿಗೆ ಚಿತ್ತವ
ಮಾಡಲಾಗದು ಸಂಧಿ ವೀರ ಕ್ಷತ್ರಿಯರ ಮತವೆ
ಬೇಡುವರೆ ಪಾರ್ಥಿವರು ತಾವದ
ನಾಡಬಾರದು ತಮ್ಮ ಜನನವ
ನೋಡಿ ನುಡಿವರು ಪಾಂಡುಸುತರಲ್ಲೆಂದು ಹೇಳೆಂದ ॥38॥

೦೩೯ ಮೊದಲಲಮಳ ಬ್ರಹ್ಮಚರ್ಯವು ...{Loading}...

ಮೊದಲಲಮಳ ಬ್ರಹ್ಮಚರ್ಯವು
ಮದುವೆಯಾದುದು ಬಳಿಕ ವನವಾ
ಸದಲಿ ವಾನಪ್ರಸ್ಥವೆಂಬಾಶ್ರಮವನಳವಡಿಸಿ
ತುದಿಗೆ ತಾ ಸನ್ಯಾಸವನು ಮಾ
ಡಿದನು ಮಗುಳಳುಪಿದೊಡೆ ರಾಜ್ಯದ
ಪದವಿಗನುಚಿತವಾಯ್ತು ಯಮಜಂಗೆಂದು ಹೇಳೆಂದ ॥39॥

೦೪೦ ತಳಿತ ಜವ್ವನದುಬ್ಬುಗಳ ...{Loading}...

ತಳಿತ ಜವ್ವನದುಬ್ಬುಗಳ ಕಳ
ವಳಿಗರರ್ಜುನ ಭೀಮರೆಂಬವ
ರೊಳಗೆ ವೈರವ ಬಿತ್ತಿ ಬೆಳಸುವ ಕೃಷ್ಣ ಹಗೆ ತಮಗೆ
ಉಳಿದ ದ್ರುಪದ ವಿರಾಟರೆಂಬೀ
ಹುಳುಗಳವರಂತೋರೆಗೆಡೆದರು
ತಿಳಿಯೆ ತಾನೇ ಕಡೆಗೆ ಕೆಡದಿರನೆಂದು ಹೇಳೆಂದ ॥40॥

೦೪೧ ಸಾಕು ಕೌರವ ...{Loading}...

ಸಾಕು ಕೌರವ ನಾಯ ಮಾತನ
ದೇಕೆ ಚಿತ್ತೈಸುವಿರಿ ದೂತನ
ನೂಕು ನೂಕು ಕುಠಾರ ದುರ್ಯೋಧನನನೊಡೆ ಹೊಯಿದು
ಶಾಕಿನಿಯರನು ರಕುತ ವಾರಿಯೊ
ಳೋಕುಳಿಯನಾಡಿಸುವೆ ನಿಲು ತಡ
ವೇಕೆನುತ ಘುಡುಘುಡಿಸಿ ಕಿಡಿಕಿಡಿಯಾದನಾ ಭೀಮ ॥41॥

೦೪೨ ಬೆಸಸುವುದು ಹಿನ್ದಾದ ...{Loading}...

ಬೆಸಸುವುದು ಹಿಂದಾದ ಜೂಜಿನೊ
ಳೆಸೆವ ಜಾಡ್ಯವೆ ಸಾಕು ಧರ್ಮದ
ದೆಸೆಗೆ ನೀವಿನ್ನುತ್ತರಾಯಿ ಸುಯೋಧನನ ಕುಲವ
ದೆಸೆದೆಸೆಯ ದೈವಂಗಳಿಗೆ ಹೆಸ
ರಿಸುವರೆಮ್ಮನು ಕಳುಹೆನುತ ಗ
ರ್ಜಿಸಿದರಂದಭಿಮನ್ಯು ಸಾತ್ಯಕಿ ಭೀಮ ನಂದನರು ॥42॥

೦೪೩ ಕದಡಿತಾಯಾಸ್ಥಾನ ಕಲ್ಪಾಂ ...{Loading}...

ಕದಡಿತಾಯಾಸ್ಥಾನ ಕಲ್ಪಾಂ
ತದ ಮಹಾಸಿಡಿಲಂತೆ ವೀರರು
ಕೆದರಿ ತಮತಮಗೆದ್ದು ನುಡಿದರು ಕಂಡೆಯವ ಜಡಿದು
ಉದಿರಹೊಯÉ್ವುವು ಹಲುಗಳನು ಕಿ
ಬ್ಬದಿಯಲುಗಿವೆವು ಕರುಳನಹಿತರ
ತಿದಿಯ ಸುಲಿವೆವು ಬೆಸಸು ನೇಮವನೆಂದರತಿರಥರು ॥43॥

೦೪೪ ಆತನಿನ್ದೇನಹುದು ಹೊಲ್ಲೆಹ ...{Loading}...

ಆತನಿಂದೇನಹುದು ಹೊಲ್ಲೆಹ
ವಾತನಿಂದೇನಹುದು ಲೇಸುಗ
ಳಾತನಿಂದೇ ಬರಲಿ ಹಿಂದಣ ಕಾನನಾಯಸದ
ಯಾತನೆಯ ಸೈರಿಸಿದ ನಮಗಿ
ನ್ನಾತ ನುಡಿದೊಡೆ ಹಾನಿಯೇ ನೀವ್
ಕಾತರಿಸದಿರಿಯೆಂದು ಸಂತೈಸಿದನು ಯಮಸೂನು ॥44॥

೦೪೫ ಕಳುಹಿದನು ಬೀಡಾರಕವನಿಪ ...{Loading}...

ಕಳುಹಿದನು ಬೀಡಾರಕವನಿಪ
ತಿಲಕನಾ ಸಂಜಯನನಲ್ಲಿಂ
ಬಳಿಕ ಮರುದಿನ ಕೃಷ್ಣ ಪಾರ್ಥರು ಸಂಜಯನ ಕರೆಸಿ
ಬಲುಹು ಮೆಲುಹಿನ ನುಡಿಗಳಿಂದವೆ
ತಿಳುಹಿದರು ಬಳಿಕಿತ್ತಲೋಲಗ
ದೊಳಗೆ ದೂತನ ಕರೆಸಿ ಬೀಳ್ಕೊಟ್ಟನು ಯುಧಿಷ್ಠಿರನು ॥45॥

೦೪೬ ಜನಕನನು ಗಾನ್ಧಾರಿ ...{Loading}...

ಜನಕನನು ಗಾಂಧಾರಿ ದುರಿಯೋ
ಧನನನವರೊಡಹುಟ್ಟಿದರನಂ
ಗನೆಯರನು ದುಸ್ಸಳೆಯ ಸೈಂಧವ ಕರ್ಣ ಶಕುನಿಗಳ
ವಿನುತ ಬಾಹ್ಲಿಕ ಶಲ್ಯ ಭಗದ
ತ್ತನ ನದೀಸುತ ಗುರು ಕೃಪರ ಗುರು
ತನುಜರನು ವಂದಿಸಿದರುಚಿತದಲೆಂದು ಹೇಳೆಂದ ॥46॥

೦೪೭ ವರ ಪುರೋಹಿತರನು ...{Loading}...

ವರ ಪುರೋಹಿತರನು ಸುಸಾವಂ
ತರನು ವೈದ್ಯರ ವಿದುರನನು ಮ
ತ್ತರಮನೆಯ ವಿಶ್ವಾಸಿಗಳನೋಲಗದ ಗಣಿಕೆಯರ
ಕರಿಹಯಾಧ್ಯಕ್ಷರನು ಪಡಿಹಾ
ರರನು ಬಾಹತ್ತರ ನಿಯೋಗದ
ಪರಿಜನದ ಕುಶಲವನು ಕೇಳಿದನೆಂದು ಹೇಳೆಂದ ॥47॥

೦೪೮ ಹೊನ್ನಿನಲಿ ಮಧುರೋಕ್ತಿಯಲಿ ...{Loading}...

ಹೊನ್ನಿನಲಿ ಮಧುರೋಕ್ತಿಯಲಿ ವಿವಿ
ಧಾನ್ನವುಡುಗೊರೆಗಳಲಿ ದೂತನ
ಮನ್ನಿಸಿದನವನೀಶನುಚಿತದಲವನ ಬೀಳ್ಕೊಟ್ಟು
ಪನ್ನಗನ ಸಿರಿಮಂಚದಾತನು
ಬೆನ್ನಲಿರಲೀ ಪಾಂಡುತನಯರಿ
ಗಿನ್ನು ಮಂಗಳವೆನುತ ಸಂಜಯ ಬಂದನಿಭಪುರಿಗೆ ॥48॥

+೦೨ ...{Loading}...