೦೦೦ ಸೂ ರಾಯನರಸಿಯ ...{Loading}...
ಸೂ. ರಾಯನರಸಿಯ ಹಿಡಿದೆಳೆವ ರಿಪು
ರಾಯ ದಳವನು ಮುರಿದು ಫಲುಗುಣ
ವಾಯುಜರು ಪರಿಭವಿಸಿ ಬಿಟ್ಟರು ಕಲಿ ಜಯದ್ರಥನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಅರ್ಜುನ ಭೀಮಸೇನರು, ದ್ರೌಪದಿಯನ್ನು ಹಿಡಿದೆಳೆದ ಜಯದ್ರಥನನ್ನು ಭಂಗಿಸಿ ಅವನ ಸೇನೆಯನ್ನು ಸೋಲಿಸಿ ಅವನನ್ನು ಬಿಟ್ಟರು.
ಮೂಲ ...{Loading}...
ಸೂ. ರಾಯನರಸಿಯ ಹಿಡಿದೆಳೆವ ರಿಪು
ರಾಯ ದಳವನು ಮುರಿದು ಫಲುಗುಣ
ವಾಯುಜರು ಪರಿಭವಿಸಿ ಬಿಟ್ಟರು ಕಲಿ ಜಯದ್ರಥನ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಲೆಕ್ಕಕೆ ಸಂದುದಟವೀ
ಪಾಳಿ ಪರಿಯಟಣ ಪ್ರಬಂಧಕೆ ವರುಷ ಹನ್ನೊಂದು
ಮೇಲೆ ಮೇಲೌಕುವ ವಿಪತ್ಕ
ಲ್ಲೋಲ ಕೋಳಾಹಲಿತ ಕಲುಷ ಕ
ರಾಳ ಕಾಲಾಂಬುಧಿಯನೀಸಾಡಿದರು ಬೇಸರದೆ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು. ಪಾಂಡವರ ವನವಾಸ ಪರ್ಯಟಣೆಯಲ್ಲಿ ಹನ್ನೊಂದು ವರ್ಷ ಕಳೆಯಿತು. ಒಂದರ ಮೇಲೊಂದರಂತೆ ಬರುವ ವಿಪತ್ತುಗಳೆಂಬ ಸಾಗರಗಳನ್ನು ಅವರು ಬೇಸರಿಸದೆ ದಾಟಿದರು.
ಪದಾರ್ಥ (ಕ.ಗ.ಪ)
ಪರಿಯಟಣ - ಸಂಚಾರ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಲೆಕ್ಕಕೆ ಸಂದುದಟವೀ
ಪಾಳಿ ಪರಿಯಟಣ ಪ್ರಬಂಧಕೆ ವರುಷ ಹನ್ನೊಂದು
ಮೇಲೆ ಮೇಲೌಕುವ ವಿಪತ್ಕ
ಲ್ಲೋಲ ಕೋಳಾಹಲಿತ ಕಲುಷ ಕ
ರಾಳ ಕಾಲಾಂಬುಧಿಯನೀಸಾಡಿದರು ಬೇಸರದೆ ॥1॥
೦೦೨ ಸಿನ್ಧು ದೇಶಕೆ ...{Loading}...
ಸಿಂಧು ದೇಶಕೆ ಬಂದನವನಿಪ
ಬಂಧ ಕೃತಿಯಲಿ ಬಳಿಕ ಬಿಡುಗಡೆ
ಯಂಧಭೂಪತಿಯಳಿಯ ಕೇಳಿದನಾ ಜಯದ್ರಥನು
ಅಂಧತೆಯನೇನೆಂಬೆನೈ ಪ್ರತಿ
ಬಂಧಕರು ಬೇಡೆನಲು ನಯದಭಿ
ಸಂಧಿಯಲಿ ಸೀವರಿಸಿ ಸಂವರಿಸಿದನು ಸೈನಿಕವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಸಂಚಾರ ಮಾಡುತ್ತಾ ಸಿಂಧು ದೇಶದ ಒಂದು ಕಾಡಿಗೆ ಬಂದನು. . ದುರ್ಯೋಧನನ ಬಂಧನ ಮತ್ತು ಬಿಡುಗಡೆಯ ಸಂಗತಿಯನ್ನು ಕುರುಡನಾದ ಧೃತರಾಷ್ಟ್ರನ ಅಳಿಯನಾದ ಜಯದ್ರಥನು ಕೇಳಿ ತಿಳಿದನು. ಅವನ ಕುರುಡುತನವನ್ನು ಏನು ಹೇಳಲಿ ? ಹೋರಾಟ ಬೇಡವೆಂದರೂ, ಅವರ ಮಾತನ್ನು ನಯವಾಗಿ ಉಪೇಕ್ಷಿಸಿ ಸೇನೆಯನ್ನು ಸೇರಿಸಿಯೇ ಬಿಟ್ಟನು.
ಪದಾರ್ಥ (ಕ.ಗ.ಪ)
ಸೀವರಿಸು - ಉಪೇಕ್ಷಿಸು
ಸಂವರಿಸು - ಸೇರಿಸು
ಮೂಲ ...{Loading}...
ಸಿಂಧು ದೇಶಕೆ ಬಂದನವನಿಪ
ಬಂಧ ಕೃತಿಯಲಿ ಬಳಿಕ ಬಿಡುಗಡೆ
ಯಂಧಭೂಪತಿಯಳಿಯ ಕೇಳಿದನಾ ಜಯದ್ರಥನು
ಅಂಧತೆಯನೇನೆಂಬೆನೈ ಪ್ರತಿ
ಬಂಧಕರು ಬೇಡೆನಲು ನಯದಭಿ
ಸಂಧಿಯಲಿ ಸೀವರಿಸಿ ಸಂವರಿಸಿದನು ಸೈನಿಕವ ॥2॥
೦೦೩ ನೆರಹಿದನು ಹದಿನಾರು ...{Loading}...
ನೆರಹಿದನು ಹದಿನಾರು ಸಾವಿರ
ಕರಿಘಟೆಯನೈವತ್ತು ಸಾವಿರ
ತುರಗವನು ಹದಿನಾಲ್ಕು ಸಾವಿರ ಕನಕಮಯ ರಥವ
ಚರಣಚೌಪಟರೈದು ಲಕ್ಷವ
ಬರಿಸಿದನು ಬಹುವಾದ್ಯ ರವ ದಿಗು
ಶಿರವೊಡೆಯೆ ಸೂಳೈಸೆ ಮೇಳೈಸಿದನು ಮೋಹರವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹದಿನಾರು ಸಾವಿರ ಆನೆಗಳು, ಐವತ್ತು ಸಾವಿರ ಕುದುರೆಗಳು, ಹದಿನಾಲ್ಕು ಸಾವಿರ ರಥಗಳು ಹಾಗೂ ಐದು ಲಕ್ಷ ಸೇನಾಳುಗಳನ್ನು ಸೇರಿಸಿ ದಿಕ್ಕುಗಳೇ ಶಿರವೇ ಒಡೆಯುವಂತೆ ಬಹುವಾದ್ಯ ಧ್ವನಿಗಳು ಮೊಳಗುತ್ತಿರಲು ಸೇನೆಯನ್ನು ಸಂಯೋಜಿಸಿದನು.
ಮೂಲ ...{Loading}...
ನೆರಹಿದನು ಹದಿನಾರು ಸಾವಿರ
ಕರಿಘಟೆಯನೈವತ್ತು ಸಾವಿರ
ತುರಗವನು ಹದಿನಾಲ್ಕು ಸಾವಿರ ಕನಕಮಯ ರಥವ
ಚರಣಚೌಪಟರೈದು ಲಕ್ಷವ
ಬರಿಸಿದನು ಬಹುವಾದ್ಯ ರವ ದಿಗು
ಶಿರವೊಡೆಯೆ ಸೂಳೈಸೆ ಮೇಳೈಸಿದನು ಮೋಹರವ ॥3॥
೦೦೪ ಜೀಯ ಭಾಸ್ಕರ ...{Loading}...
ಜೀಯ ಭಾಸ್ಕರ ಭೌಮರಶುಭ
ಸ್ಥಾಯಿಗಳು ಗುರು ಮಂದರಭಿಭವ
ದಾಯಿಗಳು ವಿಪರೀತ ದೆಸೆ ಬುಧ ಶುಕ್ರ ರಾಹುಗಳ
ಯಾಯಿಗಳಿಗಪಜಯ ನಿವಾಸ
ಸ್ಥಾಯಿಗೊಳ್ಳಿತು ಚಿತ್ತವಿಸಿಯೆನೆ
ಜೋಯಿಸರ ಜವಿವಲೆಗೆ ಸಿಲುಕೆನೆನುತ್ತ ಹೊರವಂಟ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯಕುಜರು ಅಶುಭಸ್ಥಾನದಲ್ಲೂ, ಗುರು ಶನಿಗಳು ವಿಪತ್ಕಾರಿಗಳಾಗಿಯೂ ಬುಧ ಶುಕ್ರ ರಾಹುಗಳು ವಿಪರೀತ ದೆಸೆಯಲ್ಲಿ ಇರುವುದರಿಂದಲೂ ನಿಮಗೆ ಅಪಜಯವುಂಟಾಗುತ್ತದೆ ಎಂದು ಜ್ಯೋತಿಷಿಗಳು ಹೇಳಿದರೂ ಅವರ ಮಾತಿನ ಬಲೆಗೆ ನಾನು ಸಿಲುಕುವುದಿಲ್ಲ ಎಂದು ಸೈಂಧವನು ಹೊರಟನು.
ಪದಾರ್ಥ (ಕ.ಗ.ಪ)
ಜವಿವಲೆ - ಒಂದು ಬಗೆಯ ಬಲೆ
ಮೂಲ ...{Loading}...
ಜೀಯ ಭಾಸ್ಕರ ಭೌಮರಶುಭ
ಸ್ಥಾಯಿಗಳು ಗುರು ಮಂದರಭಿಭವ
ದಾಯಿಗಳು ವಿಪರೀತ ದೆಸೆ ಬುಧ ಶುಕ್ರ ರಾಹುಗಳ
ಯಾಯಿಗಳಿಗಪಜಯ ನಿವಾಸ
ಸ್ಥಾಯಿಗೊಳ್ಳಿತು ಚಿತ್ತವಿಸಿಯೆನೆ
ಜೋಯಿಸರ ಜವಿವಲೆಗೆ ಸಿಲುಕೆನೆನುತ್ತ ಹೊರವಂಟ ॥4॥
೦೦೫ ಉರಿ ಹೊಗೆಯ ...{Loading}...
ಉರಿ ಹೊಗೆಯ ದಿಕ್ಕಿನಲಿ ಹಕ್ಕಿಗ
ಳೊರಲಿದವು ಗೋಮಾಯು ರವವ
ಬ್ಬರಿಸಿದುದು ದೆಸೆ ದೆಸೆಗಳಲಿ ಸೂಚಿಸಿತು ರಣಭಯವ
ದುರುಳನದ ಕೈಕೊಂಬನೇ ಕುರು
ನರಪತಿಯ ತತ್ಸಂಪ್ರದಾಯದ
ಗರುಡಿಕಾರನಲಾ ಚತುಷ್ಟಯ ದುಷ್ಟಮಂತ್ರಿಗಳ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ್ನೇಯ ದಿಕ್ಕಿನಲ್ಲಿ ಹಕ್ಕಿಗಳು ಕೂಗಿದವು. ದಿಕ್ಕು ದಿಕ್ಕುಗಳಲ್ಲಿ ನರಿಗಳು ಊಳಿಟ್ಟು ಕದನ ಭೀತಿಯನ್ನು ಸೂಚಿಸಿದವು. ಕೌರವನ ದುಷ್ಟಚತುಷ್ಟಯ ಸಚಿವರ ಸಾಂಪ್ರದಾಯಿಕ ಗರಡಿಯಲ್ಲಿ ಪಳಗಿದ ಇವನು ಈ ಶಕುನಗಳನ್ನು ಲೆಕ್ಕಿಸಿಯಾನೆ?
ಪದಾರ್ಥ (ಕ.ಗ.ಪ)
ಗೋಮಾಯು-ನರಿ
ಮೂಲ ...{Loading}...
ಉರಿ ಹೊಗೆಯ ದಿಕ್ಕಿನಲಿ ಹಕ್ಕಿಗ
ಳೊರಲಿದವು ಗೋಮಾಯು ರವವ
ಬ್ಬರಿಸಿದುದು ದೆಸೆ ದೆಸೆಗಳಲಿ ಸೂಚಿಸಿತು ರಣಭಯವ
ದುರುಳನದ ಕೈಕೊಂಬನೇ ಕುರು
ನರಪತಿಯ ತತ್ಸಂಪ್ರದಾಯದ
ಗರುಡಿಕಾರನಲಾ ಚತುಷ್ಟಯ ದುಷ್ಟಮಂತ್ರಿಗಳ ॥5॥
೦೦೬ ಭರದ ಪಯಣದ ...{Loading}...
ಭರದ ಪಯಣದ ಮೇಲೆ ಪಯಣದ
ಲುರವಣಿಸಿ ನಡೆತಂದು ಪಾಂಡವ
ರರಸನಿಹ ವಿಮಲಾಶ್ರಮದ ವಿಪಿನೋಪಕಂಠದಲಿ
ಹರಹಿದವು ಗುಡಿ ಗಜ ಹಯದ ಮಂ
ದಿರ ರಚನೆ ರಹಿಯಾಯ್ತು ಬಿಟ್ಟನು
ಕುರುನೃಪಾಲನ ಮೈದುನನು ಭೂಪಾಲ ಕೇಳ್ ಎಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಕೇಳು, ದುರ್ಯೋಧನನ ಮೈದುನನಾದ ಸೈಂಧವನು ತೀವ್ರಗತಿಯಲ್ಲಿ ದೀರ್ಘ ಪ್ರಯಾಣವನ್ನು ಮಾಡಿ, ಧರ್ಮರಾಯನ ಆಶ್ರಮವಿರುವ ಕಾಡಿನ ತುದಿಗೆ ಬಂದು , ಆನೆ ಕುದುರೆಗಳಿಗೆ ಲಾಯವನ್ನು ಕಟ್ಟಿ, ಬೀಡು ಬಿಟ್ಟನು. ಎಂದು ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ವಿಪಿನೋಪಕಂಠ - ಕಾಡಿನ ಅಂಚು
ಮೂಲ ...{Loading}...
ಭರದ ಪಯಣದ ಮೇಲೆ ಪಯಣದ
ಲುರವಣಿಸಿ ನಡೆತಂದು ಪಾಂಡವ
ರರಸನಿಹ ವಿಮಲಾಶ್ರಮದ ವಿಪಿನೋಪಕಂಠದಲಿ
ಹರಹಿದವು ಗುಡಿ ಗಜ ಹಯದ ಮಂ
ದಿರ ರಚನೆ ರಹಿಯಾಯ್ತು ಬಿಟ್ಟನು
ಕುರುನೃಪಾಲನ ಮೈದುನನು ಭೂಪಾಲ ಕೇಳೆಂದ ॥6॥
೦೦೭ ಏನ ನೆನೆದನೊ ...{Loading}...
ಏನ ನೆನೆದನೊ ದುಷ್ಟಮಂತ್ರ ವಿ
ತಾನ ದೀಕ್ಷಿತ ಕಳುಹಿದನು ಮದ
ನಾನುರಾಗದಲಾಭರಣವನುಲೇಪನಾದಿಗಳ
ಸಾನುನಯದಲಿ ಪಾಂಡುಪುತ್ರರ
ಮಾನಿನಿಗೆ ಕೊಡಿ ನಿರ್ಜನದೊಳಬು
ಜಾನನೆಯ ಸೇರಿಸುವುದೆಮಗೆಂದಟ್ಟಿದನು ಚರರ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರಾಲೋಚನೆಯ ಯಜ್ಞ ದೀಕ್ಷಿತನಾದ ಅವನು ಯಾವ ದುಷ್ಟ ಆಲೋಚನೆಯನ್ನು ಮಾಡಿದನೋ ? ಕಾಮಾತುರನಾಗಿ ಸೈಂಧವನು ಆಭರಣ ಸುಗಂಧ ದ್ರವ್ಯಗಳನ್ನು ಚಾರರಿಗೆ ನೀಡಿ ಅವುಗಳನ್ನು ಯಾರೂ ಇಲ್ಲದ ಸಮಯದಲ್ಲಿ ಅನುನಯಪೂರ್ವಕವಾಗಿ ದ್ರೌಪದಿಗೆ ನೀಡಬೇಕೆಂದೂ ಮತ್ತು ಅವಳನ್ನು ತನ್ನ ಬಳಿ ಬರುವಂತೆ ಮಾಡಬೇಕೆಂದೂ ಹೇಳಿ ಕಳುಹಿಸಿದನು.
ಮೂಲ ...{Loading}...
ಏನ ನೆನೆದನೊ ದುಷ್ಟಮಂತ್ರ ವಿ
ತಾನ ದೀಕ್ಷಿತ ಕಳುಹಿದನು ಮದ
ನಾನುರಾಗದಲಾಭರಣವನುಲೇಪನಾದಿಗಳ
ಸಾನುನಯದಲಿ ಪಾಂಡುಪುತ್ರರ
ಮಾನಿನಿಗೆ ಕೊಡಿ ನಿರ್ಜನದೊಳಬು
ಜಾನನೆಯ ಸೇರಿಸುವುದೆಮಗೆಂದಟ್ಟಿದನು ಚರರ ॥7॥
೦೦೮ ಬನದೊಳಡಗಿದರವರು ಕುನ್ತೀ ...{Loading}...
ಬನದೊಳಡಗಿದರವರು ಕುಂತೀ
ತನುಜರೈವರು ಬೇಂಟೆಯಾಡಲು
ನೆನೆದು ಧೌಮ್ಯನನಬುಜಮುಖಿಯಾಶ್ರಮದ ಕಾಹಿನಲಿ
ಮುನಿಜನಂಗಳ ನಿಲಿಸಿ ಕೊಂಡರು
ಧನುವ ಬೆಂಬತ್ತಳಿಕೆಗಳ ನೃಪ
ಜನ ಲಲಾಮರು ಬನಬನದೊಳರಸಿದರು ಮೃಗಕುಲವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಚಾರರು ವನದೊಳಗೆ ಅಡಗಿಕೊಂಡರು. ಇತ್ತ ದ್ರೌಪದಿ ಮತ್ತು ಧೌಮ್ಯರನ್ನು ಮುನಿಗಳ ರಕ್ಷಣೆಯಲ್ಲಿ ಬಿಟ್ಟು ಪಾಂಡವರು ಬೇಟೆಯಾಡುವುದಕ್ಕಾಗಿ ಬಿಲ್ಲು ಬತ್ತಳಿಕೆಗಳನ್ನು ಧರಿಸಿ ವನಗಳೊಳಗೆ ಮೃಗಗಳನ್ನು ಹುಡುಕುತ್ತಾ ಹೊರಟರು.
ಮೂಲ ...{Loading}...
ಬನದೊಳಡಗಿದರವರು ಕುಂತೀ
ತನುಜರೈವರು ಬೇಂಟೆಯಾಡಲು
ನೆನೆದು ಧೌಮ್ಯನನಬುಜಮುಖಿಯಾಶ್ರಮದ ಕಾಹಿನಲಿ
ಮುನಿಜನಂಗಳ ನಿಲಿಸಿ ಕೊಂಡರು
ಧನುವ ಬೆಂಬತ್ತಳಿಕೆಗಳ ನೃಪ
ಜನ ಲಲಾಮರು ಬನಬನದೊಳರಸಿದರು ಮೃಗಕುಲವ ॥8॥
೦೦೯ ಹೋದರವರತ್ತಲು ವಿಕಾರ ...{Loading}...
ಹೋದರವರತ್ತಲು ವಿಕಾರ ವಿ
ನೋದ ಶೀಲನ ಶಿಷ್ಯರುಬ್ಬಟೆ
ಬೀದಿವರಿದುದು ಪರ್ಣಶಾಲೆಗೆ ಬಂದರಂಗನೆಯ
ಆದರಿಸಿ ಮುನಿಜನವನೊಯ್ಯನೆ
ಕೈದುಗಳ ಹೊರಗಿರಿಸಿ ದೂರದ
ಲಾ ದುರಾತ್ಮರು ಕಂಡು ಮೈಯಿಕ್ಕಿದರು ಮಾನಿನಿಗೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಆ ಕಡೆ ಹೋದ ಮೇಲೆ, ದುಷ್ಟ ಸೈಂಧವನ ಶಿಷ್ಯರ ಸಾಹಸ ಮೊದಲಾಯಿತು. ಅವರು ಪರ್ಣಕುಟೀರಕ್ಕೆ ಬಂದು ದ್ರೌಪದಿ ಮತ್ತು ಮುನಿಗಳೊಂದಿಗೆ ಆದರದಿಂದಲೇ ಮಾತಾಡಿದರು. ಆಯುಧಗಳನ್ನು ಹೊರಗಿಟ್ಟ ಅವರು ದೂರದಿಂದಲೇ ದ್ರೌಪದಿಗೆ ವಂದಿಸಿದರು.
ಮೂಲ ...{Loading}...
ಹೋದರವರತ್ತಲು ವಿಕಾರ ವಿ
ನೋದ ಶೀಲನ ಶಿಷ್ಯರುಬ್ಬಟೆ
ಬೀದಿವರಿದುದು ಪರ್ಣಶಾಲೆಗೆ ಬಂದರಂಗನೆಯ
ಆದರಿಸಿ ಮುನಿಜನವನೊಯ್ಯನೆ
ಕೈದುಗಳ ಹೊರಗಿರಿಸಿ ದೂರದ
ಲಾ ದುರಾತ್ಮರು ಕಂಡು ಮೈಯಿಕ್ಕಿದರು ಮಾನಿನಿಗೆ ॥9॥
೦೧೦ ದೇವಿ ಚಿತ್ತೈಸುವುದು ...{Loading}...
ದೇವಿ ಚಿತ್ತೈಸುವುದು ನಿಮ್ಮಯ
ಭಾವ ಕೌರವನೃಪನ ಮೈದುನ
ಭಾವಿಸಲು ದುಸ್ಸಳೆಯ ರಮಣನು ಕಲಿ ಜಯದ್ರಥನು
ಈ ವಿವಿಧ ರತ್ನಾಭರಣ ಪ
ಟ್ಟಾವಳಿಯನನುಲೇಪನಾದಿಯ
ಪಾವುಡವನವಧರಿಸ ಬೇಕೆಂದಿಳುಹಿದರು ಮುಂದೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೇವಿ, ಲಾಲಿಸು. ನಿಮ್ಮ ಭಾವನಾದ ಕೌರವನಿಗೆ ದುಶ್ಶಲೆ ತಂಗಿ. ಅವಳ ಗಂಡನಾದ ವೀರಜಯದ್ರಥನು ಈ ಅನೇಕ ವಿಧವಾದ ರತ್ನಾಭರಣಗಳನ್ನು ಸುಗಂಧದ್ರವ್ಯಗಳನ್ನು ವಸನ ವಿಶೇಷಗಳನ್ನು ಸ್ವೀಕರಿಸಬೇಕೆಂದು ಕಳುಹಿಸಿದ್ದಾನೆ ಎಂದು ಅವುಗಳನ್ನು ಮುಂದಿಟ್ಟರು.
ಪದಾರ್ಥ (ಕ.ಗ.ಪ)
ಪಾವುಡ-ವಸ್ತ್ರ
ಮೂಲ ...{Loading}...
ದೇವಿ ಚಿತ್ತೈಸುವುದು ನಿಮ್ಮಯ
ಭಾವ ಕೌರವನೃಪನ ಮೈದುನ
ಭಾವಿಸಲು ದುಸ್ಸಳೆಯ ರಮಣನು ಕಲಿ ಜಯದ್ರಥನು
ಈ ವಿವಿಧ ರತ್ನಾಭರಣ ಪ
ಟ್ಟಾವಳಿಯನನುಲೇಪನಾದಿಯ
ಪಾವುಡವನವಧರಿಸ ಬೇಕೆಂದಿಳುಹಿದರು ಮುಂದೆ ॥10॥
೦೧೧ ಎಸೆವಳೇ ದುಸ್ಸಳೆ ...{Loading}...
ಎಸೆವಳೇ ದುಸ್ಸಳೆ ಜಯದ್ರಥ
ಕುಶಲನೇ ಪಾವುಡವ ನೀವೊ
ಪ್ಪಿಸುವುದೊಡೆಯರ ಮುಂದೆ ಬಿಜಯಂಗೈವರೀ ಕ್ಷಣಕೆ
ಶಿಶುಗಳಾವೆಮಗೀ ಸ್ವತಂತ್ರತೆ
ಯೆಸಕವೆಲ್ಲಿಯದಕಟ ವಸ್ತು
ಪ್ರಸರವೆಮಗೇಕೆನುತ ನುಡಿದಳು ನಗುತ ನಳಿನಾಕ್ಷಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದುಶ್ಶಲೆ ಕ್ಷೇಮವೇ ? ಜಯದ್ರಥ ಕುಶಲವೇ ? ನೀವು ಈ ವಸ್ತ್ರಾಭರಣಗಳನ್ನು ಅರಸರಿಗೆ ಸಮರ್ಪಿಸಿ. ಅವರು ಇಷ್ಟರಲ್ಲೇ ಬರುತ್ತಾರೆ. ಮಕ್ಕಳಂತಿರುವ ನಮಗೆ ಸ್ವಾತಂತ್ರ್ಯವೆಲ್ಲಿ ? ಅಕಟಾ, ಈ ವಸ್ತುಗಳಾದರೂ ನಮಗೆ ಏಕೆ ? ಎಂದು ದ್ರೌಪದಿ ನಗುತ್ತಾ ಹೇಳಿದಳು.
ಮೂಲ ...{Loading}...
ಎಸೆವಳೇ ದುಸ್ಸಳೆ ಜಯದ್ರಥ
ಕುಶಲನೇ ಪಾವುಡವ ನೀವೊ
ಪ್ಪಿಸುವುದೊಡೆಯರ ಮುಂದೆ ಬಿಜಯಂಗೈವರೀ ಕ್ಷಣಕೆ
ಶಿಶುಗಳಾವೆಮಗೀ ಸ್ವತಂತ್ರತೆ
ಯೆಸಕವೆಲ್ಲಿಯದಕಟ ವಸ್ತು
ಪ್ರಸರವೆಮಗೇಕೆನುತ ನುಡಿದಳು ನಗುತ ನಳಿನಾಕ್ಷಿ ॥11॥
೦೧೨ ನಾರ ಸೀರೆಯನುಡುವೆನೆಮಗಾ ...{Loading}...
ನಾರ ಸೀರೆಯನುಡುವೆನೆಮಗಾ
ಹಾರವೇ ಫಲ ಮೂಲತತಿ ಶೃಂ
ಗಾರವೆಮಗೆ ಪತಿವ್ರತಾ ಗುಣವಲ್ಲದಿತರರಲಿ
ಸೇರುವುದೆ ಮನವಿದನು ಪಾಂಡು ಕು
ಮಾರರಿಗೆ ತೋರಿಸುವುದೈ ಬೀ
ಡಾರವನು ಬಿಡಿ ಬೇರೆ ವನದೊಳಗೆಂದಳಿಂದುಮುಖಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಮಗೆ ಉಡುವುದಕ್ಕೆ ನಾರುಸೀರೆ ಸಾಕು. ಆಹಾರಕ್ಕೆ ಗಡ್ಡೆ ಗೆಣಸು ಇದೆ. ಪತಿವ್ರತಾ ಗುಣವೇ ನಮಗೆ ಭೂಷಣ. ಇದಲ್ಲದೆ ಬೇರೆಯದರಲ್ಲಿ ಮನಸ್ಸು ಸೇರದು. ಇದೆಲ್ಲವನ್ನೂ ಪಾಂಡವರಿಗೆ ತೋರಿಸಿ, ಬೇರೆ ವನದಲ್ಲಿ ಬಿಡಾರ ಹೂಡಿ’ ಎಂದಳು.
ಮೂಲ ...{Loading}...
ನಾರ ಸೀರೆಯನುಡುವೆನೆಮಗಾ
ಹಾರವೇ ಫಲ ಮೂಲತತಿ ಶೃಂ
ಗಾರವೆಮಗೆ ಪತಿವ್ರತಾ ಗುಣವಲ್ಲದಿತರರಲಿ
ಸೇರುವುದೆ ಮನವಿದನು ಪಾಂಡು ಕು
ಮಾರರಿಗೆ ತೋರಿಸುವುದೈ ಬೀ
ಡಾರವನು ಬಿಡಿ ಬೇರೆ ವನದೊಳಗೆಂದಳಿಂದುಮುಖಿ ॥12॥
೦೧೩ ತಾಯೆ ನೀವಿವನೊಪ್ಪುಗೊಮ್ಬುದು ...{Loading}...
ತಾಯೆ ನೀವಿವನೊಪ್ಪುಗೊಂಬುದು
ರಾಯ ಬಡವನೆ ಮತ್ತೆ ಪಾಂಡವ
ರಾಯರಿಗೆ ಪಾವುಡವನಟ್ಟುವನಿದನುಪೇಕ್ಷಿಸದೆ
ಆಯತಾಂಬಕಿ ತೆಗೆಸಿಯೆನೆ ನುಡಿ
ರಾಯಸವಿದೇಕೆನುತ ದೂತರ
ನಾ ಯುವತಿ ಜರಿದೊಳಗೆ ಹೊಕ್ಕಳು ತಳಿರ ಮಂಟಪವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತಾಯಿ, ಇವುಗಳನ್ನು ನೀವು ಸ್ವೀಕರಿಸಬೇಕು. ಸೈಂಧವನು ಬಡವನಲ್ಲ, ಪಾಂಡವರಿಗೂ ಬಟ್ಟೆಗಳನ್ನು ಕಳುಹಿಸುತ್ತಾನೆ. ಇದನ್ನು ನಿರ್ಲಕ್ಷ್ಯ ಮಾಡದೆ ಸ್ವೀಕರಿಸಿ’ ಎಂದೆನ್ನಲು, ದ್ರೌಪದಿಯು “ಈ ಮಾತಿನ ನಿರೂಪ ಬೇಕಾಗಿಲ್ಲ” ಎಂದು ಚರರನ್ನು ಬೈದು ಎಲೆ ಮನೆಯ ಒಳಹೊಕ್ಕಳು.
ಮೂಲ ...{Loading}...
ತಾಯೆ ನೀವಿವನೊಪ್ಪುಗೊಂಬುದು
ರಾಯ ಬಡವನೆ ಮತ್ತೆ ಪಾಂಡವ
ರಾಯರಿಗೆ ಪಾವುಡವನಟ್ಟುವನಿದನುಪೇಕ್ಷಿಸದೆ
ಆಯತಾಂಬಕಿ ತೆಗೆಸಿಯೆನೆ ನುಡಿ
ರಾಯಸವಿದೇಕೆನುತ ದೂತರ
ನಾ ಯುವತಿ ಜರಿದೊಳಗೆ ಹೊಕ್ಕಳು ತಳಿರ ಮಂಟಪವ ॥13॥
೦೧೪ ಮುಸುಳಿತಿವದಿರ ಮೋರೆ ...{Loading}...
ಮುಸುಳಿತಿವದಿರ ಮೋರೆ ಕಾರ್ಯದ
ಬೆಸುಗೆ ಹತ್ತದೆ ಸತಿಯ ನುಡಿಯಲಿ
ರಸವ ಕಾಣದೆ ಭೀತಿಯಲಿ ಮರಳಿದರು ಪಾಳಯಕೆ
ಉಸುರಲಮ್ಮೆವು ಜೀಯ ಸೋಲಳು
ಶಶಿವದನೆ ಗುಣ ಸಾಮದಲಿ ಸಾ
ಧಿಸುವುದರಿದೆನೆ ತಾನೆ ನೋಡುವೆನೆನುತ ಹೊರವಂಟ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರ ಮುಖ ಕಂದಿತು. ಕೆಲಸ ಮುರಿಯಿತು. ದ್ರೌಪದಿಯ ಮಾತಿನಲ್ಲಿರುವ ಗಡಸುತನ ತಿಳಿದು ಭಯದಿಂದ ಪಾಳಯಕ್ಕೆ ಹಿಂದಿರುಗಿದರು - ‘ಜೀಯ, ಹೇಳಲಾರೆವು. ದ್ರೌಪದಿಯು ಸೋಲುವವಳಲ್ಲ. ಉಪಾಯದಿಂದ ಕಾರ್ಯಸಾಧಿಸಬೇಕು. ನಮ್ಮಿಂದಾಗದು’ ಎಂದೆನ್ನಲು, ಸೈಂಧವನು ತಾನೇ ಯತ್ನಿಸುತ್ತೇನೆಂದು ಹೊರಟನು.
ಮೂಲ ...{Loading}...
ಮುಸುಳಿತಿವದಿರ ಮೋರೆ ಕಾರ್ಯದ
ಬೆಸುಗೆ ಹತ್ತದೆ ಸತಿಯ ನುಡಿಯಲಿ
ರಸವ ಕಾಣದೆ ಭೀತಿಯಲಿ ಮರಳಿದರು ಪಾಳಯಕೆ
ಉಸುರಲಮ್ಮೆವು ಜೀಯ ಸೋಲಳು
ಶಶಿವದನೆ ಗುಣ ಸಾಮದಲಿ ಸಾ
ಧಿಸುವುದರಿದೆನೆ ತಾನೆ ನೋಡುವೆನೆನುತ ಹೊರವಂಟ ॥14॥
೦೧೫ ಹೆಗಲ ಹಿರಿಯುಬ್ಬಣ ...{Loading}...
ಹೆಗಲ ಹಿರಿಯುಬ್ಬಣ ಕಠಾರಿಯ
ಬಿಗಿದುಡಿಗೆ ರತ್ನಾಭರಣ ಝಗ
ಝಗಿಸೆ ಝಣಝಣ ರವದ ರಭಸದ ಖಡಿಯ ತತಿ ಮೆರೆಯೆ
ಒಗುವ ಸಾಧು ಜವಾಜಿ ಕತ್ತುರಿ
ಯಗರು ಪರಿಮಳದಂಗವಟ್ಟದ
ವಿಗಡ ಹೊಕ್ಕನು ವನವನಾ ಪಾಂಚಾಲಿಯಾಶ್ರಮವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಗಲಿಗೆ ಉಬ್ಬಣಾಯುಧ, ಕಠಾರಿಗಳನ್ನು ಇಟ್ಟು ರತ್ನಾಭರಣಗಳನ್ನು ಧರಿಸಿ, ದಿವ್ಯವಾದ ಉಡುಗೆ ಉಟ್ಟುಕೊಂಡು, ಜವಾಜಿ ಕಸ್ತೂರಿ ಅಗರುಗಳನ್ನು ಲೇಪಿಸಿಕೊಂಡು ಜಯದ್ರಥನು ದ್ರೌಪದಿಯಿರುವ ಆಶ್ರಮವನ್ನು ಹೊಕ್ಕನು.
ಪದಾರ್ಥ (ಕ.ಗ.ಪ)
ಉಬ್ಬಣ-ಲಾಳವಿಂಡಿ, ಒಂದು ಬಗೆಯ ಆಯುಧ
ಮೂಲ ...{Loading}...
ಹೆಗಲ ಹಿರಿಯುಬ್ಬಣ ಕಠಾರಿಯ
ಬಿಗಿದುಡಿಗೆ ರತ್ನಾಭರಣ ಝಗ
ಝಗಿಸೆ ಝಣಝಣ ರವದ ರಭಸದ ಖಡಿಯ ತತಿ ಮೆರೆಯೆ
ಒಗುವ ಸಾಧು ಜವಾಜಿ ಕತ್ತುರಿ
ಯಗರು ಪರಿಮಳದಂಗವಟ್ಟದ
ವಿಗಡ ಹೊಕ್ಕನು ವನವನಾ ಪಾಂಚಾಲಿಯಾಶ್ರಮವ ॥15॥
೦೧೬ ತೊಲಗಿದುದು ಮುನಿ ...{Loading}...
ತೊಲಗಿದುದು ಮುನಿ ನಿಕರವೀತನ
ಸುಳಿವು ಕಂಡು ಸುತೇಜದಲಿ ಖಳ
ತಿಲಕ ಬಂದನು ಪರ್ಣಶಾಲೆಯ ಮುಖದ ಮಂಟಪಕೆ
ಲಲನೆಯೊಳಹೊಗಲೊಡನೆ ಹೊಕ್ಕನು
ನಳಿನಮುಖಿ ಬಂದವ ಜಯದ್ರಥ
ನಳುಕಲೇಕೌ ದ್ರೌಪದಿಯೆ ನೀನೆನುತ ಮಂಡಿಸಿದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನು ಪರ್ಣಶಾಲೆಯ ಮುಖಮಂಟಪಕ್ಕೆ ಬರಲು, ಮುನಿಗಳೆಲ್ಲರೂ ಅಲ್ಲಿಂದ ಕಾಲ್ತೆಗೆದರು. ದ್ರೌಪದಿಯು ಮನೆಯೊಳಗೆ ಹೊಕ್ಕಳು. ಆಗ ಸೈಂಧವನು ತಾನೂ ಅವಳನ್ನು ಹಿಂಬಾಲಿಸಿ - ‘ಕಮಲಮುಖಿ, ಬಂದವನು ಜಯದ್ರಥ. ನಿನಗೇಕೆ ಅಂಜಿಕೆ ?’ ಎಂದು ಅಲ್ಲೇ ಕುಳಿತನು.
ಮೂಲ ...{Loading}...
ತೊಲಗಿದುದು ಮುನಿ ನಿಕರವೀತನ
ಸುಳಿವು ಕಂಡು ಸುತೇಜದಲಿ ಖಳ
ತಿಲಕ ಬಂದನು ಪರ್ಣಶಾಲೆಯ ಮುಖದ ಮಂಟಪಕೆ
ಲಲನೆಯೊಳಹೊಗಲೊಡನೆ ಹೊಕ್ಕನು
ನಳಿನಮುಖಿ ಬಂದವ ಜಯದ್ರಥ
ನಳುಕಲೇಕೌ ದ್ರೌಪದಿಯೆ ನೀನೆನುತ ಮಂಡಿಸಿದ ॥16॥
೦೧೭ ಬೆದರಲೇತಕೆ ನಮ್ಮ ...{Loading}...
ಬೆದರಲೇತಕೆ ನಮ್ಮ ನಾದಿನಿ
ಮದವಳಿಗ ನೀನಾದರೊಡಹು
ಟ್ಟಿದನು ನೀನಹೆಯೆನಗೆ ನಿನ್ನಲಿ ಬೇರೆ ಭಯವೇನು
ಸದನವಿದು ಪತಿಶೂನ್ಯ ತಾನೆಂ
ಬುದು ಪತಿವ್ರತೆಯಲ್ಲಿಯನುಚಿತ
ವಿದು ವಿಚಾರವ ಬಲ್ಲೆ ನೀನೆಂದಳು ಸರೋಜಮುಖಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ದ್ರೌಪದಿಯು-‘ಹೆದರಿಕೆ ಏಕೆ ? ನಮ್ಮ ನಾದಿನಿಯಾದ ದುಶ್ಶಲೆಯ ಗಂಡನಲ್ಲವೇ? ನೀನು ಹಾಗಾಗಿ ನನಗೆ ಸಹೋದರನು. ಭಯವಿಲ್ಲ. ಆದರೆ ಈ ಮನೆಯಲ್ಲಿ ನನ್ನ ಗಂಡಂದಿರಿಲ್ಲ. ಪತಿವ್ರತೆಯರಿಗೆ ಇದು ಉಚಿತವಲ್ಲವೆಂಬುದನ್ನು ನೀನೇ ಬಲ್ಲೆ’ ಎಂದಳು.
ಮೂಲ ...{Loading}...
ಬೆದರಲೇತಕೆ ನಮ್ಮ ನಾದಿನಿ
ಮದವಳಿಗ ನೀನಾದರೊಡಹು
ಟ್ಟಿದನು ನೀನಹೆಯೆನಗೆ ನಿನ್ನಲಿ ಬೇರೆ ಭಯವೇನು
ಸದನವಿದು ಪತಿಶೂನ್ಯ ತಾನೆಂ
ಬುದು ಪತಿವ್ರತೆಯಲ್ಲಿಯನುಚಿತ
ವಿದು ವಿಚಾರವ ಬಲ್ಲೆ ನೀನೆಂದಳು ಸರೋಜಮುಖಿ ॥17॥
೦೧೮ ಅಹಹ ಪಾತಿವ್ರತ್ಯವತಿ ...{Loading}...
ಅಹಹ ಪಾತಿವ್ರತ್ಯವತಿ ಸ
ನ್ನಿಹಿತವಲ್ಲಾ ನಿನಗೆ ಹಲಬರ
ಮಹಿಳೆ ಸತಿಯೆನಿಸುವರೆ ಸೂಳೆಯರೇಕಪುರುಷರಲಿ
ವಿಹರಿಸುವರೇ ಲೋಕಧರ್ಮದ
ರಹಣಿ ರಹಿಸುವುದೈಸಲೇ ನಮ
ಗಿಹುದು ಮತವಲ್ಲದೊಡೆ ಮಾಣಲೆನುತ್ತ ಮುರಿದೆದ್ದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಹಹ, ಪಾತಿವ್ರತ್ಯ ನಿನ್ನಲ್ಲಿದೆಯೇ ? ಹಲವರು ಗಂಡಂದಿರಿರುವಾಕೆ ಸತಿಯೆನಿಸುತ್ತಾಳೆಯೆ ? ವೇಶ್ಯೆಯರು ಏಕ ಪುರುಷನೊಂದಿಗೆ ಇರುತ್ತಾರೆಯೆ ? ಇದು ಲೋಕಪದ್ಧತಿ. ಇದಕ್ಕೆ ಒಪ್ಪಿಗೆ ಇಲ್ಲವೆಂದಾದರೆ ಬಿಡು’ ಎಂದು ಸೈಂಧವನು ಮೈಮುರಿದೆದ್ದನು.
ಪದಾರ್ಥ (ಕ.ಗ.ಪ)
ರಹಣಿ-ರೀತಿ
ಮೂಲ ...{Loading}...
ಅಹಹ ಪಾತಿವ್ರತ್ಯವತಿ ಸ
ನ್ನಿಹಿತವಲ್ಲಾ ನಿನಗೆ ಹಲಬರ
ಮಹಿಳೆ ಸತಿಯೆನಿಸುವರೆ ಸೂಳೆಯರೇಕಪುರುಷರಲಿ
ವಿಹರಿಸುವರೇ ಲೋಕಧರ್ಮದ
ರಹಣಿ ರಹಿಸುವುದೈಸಲೇ ನಮ
ಗಿಹುದು ಮತವಲ್ಲದೊಡೆ ಮಾಣಲೆನುತ್ತ ಮುರಿದೆದ್ದ ॥18॥
೦೧೯ ತರಳೆ ಮಿಗೆ ...{Loading}...
ತರಳೆ ಮಿಗೆ ತಲ್ಲಣಿಸಿ ತಳಿರೋ
ವರಿಯ ಹೊಗುತಿರಲಟ್ಟಿ ಮೇಲುದ
ಬರಸೆಳೆದು ತುರುಬಿಂಗೆ ಹಾಯ್ದನು ಹಿಡಿದು ಕುಸುಬಿದನು
ಒರಲಿದಳು ಹಾ ಭೀಮ ಹಾ ನೃಪ
ವರ ಧನಂಜಯ ಹಾಯೆನುತ ಕಾ
ತರಿಸೆ ಕಮಲಾನನೆಯ ಕಂಠವನೌಚಿ ಹೊರವಂಟ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯು ತಲ್ಲಣಗೊಂಡು ಎಲೆಮನೆಯ ಒಳನುಗ್ಗಲು, ಅವಳನ್ನು ಬೆನ್ನಟ್ಟಿ ಸೆರಗನ್ನು ಸೆಳೆದು ಮುಡಿಗೆ ಕೈಹಾಕಿ ಎಳೆದನು. ಆಗ ಅವಳು ‘ಅಯ್ಯೋ. ಭೀಮಾ, ಯುಧಿಷ್ಠಿರಾ, ಅರ್ಜುನಾ, ಹಾ….. ’ ಎಂದು ಕೂಗಲು, ಸೈಂಧವನು ಅವಳ ಕೊರಳನ್ನು ಒತ್ತಿ ಹಿಡಿದು ಹೊರಟನು.
ಮೂಲ ...{Loading}...
ತರಳೆ ಮಿಗೆ ತಲ್ಲಣಿಸಿ ತಳಿರೋ
ವರಿಯ ಹೊಗುತಿರಲಟ್ಟಿ ಮೇಲುದ
ಬರಸೆಳೆದು ತುರುಬಿಂಗೆ ಹಾಯ್ದನು ಹಿಡಿದು ಕುಸುಬಿದನು
ಒರಲಿದಳು ಹಾ ಭೀಮ ಹಾ ನೃಪ
ವರ ಧನಂಜಯ ಹಾಯೆನುತ ಕಾ
ತರಿಸೆ ಕಮಲಾನನೆಯ ಕಂಠವನೌಚಿ ಹೊರವಂಟ ॥19॥
೦೨೦ ರಾಣಿವಾಸವಲಾ ಯುಧಿಷ್ಠಿರ ...{Loading}...
ರಾಣಿವಾಸವಲಾ ಯುಧಿಷ್ಠಿರ
ನಾಣೆ ಬಿಡು ಬಿಡೆನುತ್ತ ಸುಜನ
ಶ್ರೇಣಿಯಡ್ಡೈಸಿದೊಡೆ ಬೀಸಿದನವನು ಖಂಡೆಯವ
ರಾಣಿ ನಡೆ ನಡೆ ನಮಗೆ ಪಾಂಡವ
ರಾಣೆಯಿಟ್ಟರು ಮುನಿಗಳಿಲ್ಲಿಹ
ಜಾಣು ತಪ್ಪುವುದೆನುತ ಹೊರವಂಡಿಸಿದನಾಶ್ರಮವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇವಳು ರಾಣಿ. ಧರ್ಮರಾಯನ ಆಣೆಯಾಗಿಯೂ ಈಕೆಯನ್ನು ಬಿಡು’. ಎಂದು ಮುನಿಗಳು ಅಡ್ಡಗಟ್ಟಲು, ಸೈಂಧವನು ಖಡ್ಗವನ್ನು ಬೀಸಿದನು. ‘ರಾಣಿ, ನಡೆ ಪಾಂಡವರ ಆಣೆಯಿಡುವ ಋಷಿಗಳಿಲ್ಲಿದ್ದಾರೆ. ಇಲ್ಲಿದ್ದರೆ ಉಪಾಯ ಹಾಳಾಗುತ್ತದೆ’ ಎಂದು ಆಶ್ರಮದಿಂದ ಹೊರಗೆ ಹೊರಟನು.
ಮೂಲ ...{Loading}...
ರಾಣಿವಾಸವಲಾ ಯುಧಿಷ್ಠಿರ
ನಾಣೆ ಬಿಡು ಬಿಡೆನುತ್ತ ಸುಜನ
ಶ್ರೇಣಿಯಡ್ಡೈಸಿದೊಡೆ ಬೀಸಿದನವನು ಖಂಡೆಯವ
ರಾಣಿ ನಡೆ ನಡೆ ನಮಗೆ ಪಾಂಡವ
ರಾಣೆಯಿಟ್ಟರು ಮುನಿಗಳಿಲ್ಲಿಹ
ಜಾಣು ತಪ್ಪುವುದೆನುತ ಹೊರವಂಡಿಸಿದನಾಶ್ರಮವ ॥20॥
೦೨೧ ಒಡನೆ ಬನ್ದನು ...{Loading}...
ಒಡನೆ ಬಂದನು ಧೌಮ್ಯಮುನಿಯಡಿ
ಯಿಡುತ ಘನ ರಕ್ಷೋಘ್ನ ಸೂಕ್ತವ
ನಡಿಗಡಿಗೆ ಜಪಿಸುತ ಜಯದ್ರಥ ಬೇಡ ಬೇಡೆನುತ
ಮಿಡುಕದೈತರಲೌಕಿ ಹೊಕ್ಕನು
ಪಡೆಯ ಮಧ್ಯದ ರಥವನೇರಿಸಿ
ನಡೆದನವ ಸೂಟಿಯಲಿ ತಾಟಿಸಿ ರಥದ ವಾಜಿಗಳ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕೂಡಲೇ ಧೌಮ್ಯ ಮುನಿಗಳು ರಕ್ಷೋಘ್ನ ಸೂಕ್ತವನ್ನು ಜಪಿಸುತ್ತಾ ಅಲ್ಲಿಗೆ ಬಂದರು. ‘ಜಯದ್ರಥ, ಹೀಗೆ ಮಾಡಬೇಡ’ ಎಂದು ಅವರು ಹೇಳಿದರೂ, ಸೈಂಧವನು ಅದಕ್ಕೆ ಕಿವಿಗೊಡದೆ ಸೇನೆಯ ಮಧ್ಯದಲ್ಲಿರುವ ರಥವನ್ನೇರಿ, ಕುದುರೆಗಳ ಬೆನ್ನು ಚಪ್ಪರಿಸಿ ನಡೆದೇ ಬಿಟ್ಟನು.
ಮೂಲ ...{Loading}...
ಒಡನೆ ಬಂದನು ಧೌಮ್ಯಮುನಿಯಡಿ
ಯಿಡುತ ಘನ ರಕ್ಷೋಘ್ನ ಸೂಕ್ತವ
ನಡಿಗಡಿಗೆ ಜಪಿಸುತ ಜಯದ್ರಥ ಬೇಡ ಬೇಡೆನುತ
ಮಿಡುಕದೈತರಲೌಕಿ ಹೊಕ್ಕನು
ಪಡೆಯ ಮಧ್ಯದ ರಥವನೇರಿಸಿ
ನಡೆದನವ ಸೂಟಿಯಲಿ ತಾಟಿಸಿ ರಥದ ವಾಜಿಗಳ ॥21॥
೦೨೨ ಚೆಲ್ಲಿತೀ ಮುನಿಯೂಥ ...{Loading}...
ಚೆಲ್ಲಿತೀ ಮುನಿಯೂಥ ದೆಸೆದೆಸೆ
ಗೆಲ್ಲ ಹರಿದುದು ಬಾಯ ಮೊರೆಗಳ
ಪಲ್ಲವದ ಪಾಣಿಗಳ ಸೂಸುವ ಸಮಿಧೆ ಬರ್ಹಿಗಳ
ತಲ್ಲಣದ ತೋಪಿನ ವಿಷಾದದ
ವಲ್ಲರಿಯ ಹೂದೊಡಬೆಗಳ ಹೊ
ಯ್ವಳ್ಳೆಗಳ ಮುನಿಜನವ ಕಂಡರು ಪಾಂಡುನಂದನರು ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಋಷಿಗಳ ಗುಂಪು ಚೆಲ್ಲಾಪಿಲ್ಲಿಯಾಯಿತು. ಅದರ ಆರ್ತನಾದ ದಿಕ್ಕುದಿಕ್ಕುಗಳಿಗೆ ವ್ಯಾಪಿಸಿತು. ಅವರು ಹಿಡಿದಿದ್ದ ಸಮಿಧೆ, ದರ್ಭೆಗಳು, ಹೂಬಳ್ಳಿಗಳು ಅಸ್ತವ್ಯಸ್ತವಾದವು. ತೀವ್ರವಾಗಿ ತಲ್ಲಣಿಸುತ್ತಿದ್ದ, ವಿಷಾದದಿಂದ ತುಂಬಿದ್ದ , ಮೇಲುಸಿರು ಬಿಡುತ್ತಿದ್ದ ಮುನಿಜನರನ್ನು ಪಾಂಡವರು ನೋಡಿದರು.
ಮೂಲ ...{Loading}...
ಚೆಲ್ಲಿತೀ ಮುನಿಯೂಥ ದೆಸೆದೆಸೆ
ಗೆಲ್ಲ ಹರಿದುದು ಬಾಯ ಮೊರೆಗಳ
ಪಲ್ಲವದ ಪಾಣಿಗಳ ಸೂಸುವ ಸಮಿಧೆ ಬರ್ಹಿಗಳ
ತಲ್ಲಣದ ತೋಪಿನ ವಿಷಾದದ
ವಲ್ಲರಿಯ ಹೂದೊಡಬೆಗಳ ಹೊ
ಯ್ವಳ್ಳೆಗಳ ಮುನಿಜನವ ಕಂಡರು ಪಾಂಡುನಂದನರು ॥22॥
೦೨೩ ಏನು ಗಜಬಜ ...{Loading}...
ಏನು ಗಜಬಜ ಋಷಿ ಜನಂಗಳಿ
ಗೇನಪಾಯವೊ ನಮ್ಮ ಬನದಲಿ
ದಾನವರ ದುರ್ಘಟದ ದುರ್ನಯವಲ್ಲಲಾಯೆನುತ
ಆ ನರೆಂದ್ರ ಮನೋಹರದ ಮೃಗ
ಯಾ ನಿರೂಢಿಯ ಬಿಸುಟು ಬಂದನಿ
ದೇನಿದೇನೂಳಿಗವೆನುತ ಬೆಸಗೊಂಡನವರುಗಳ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಏನಿದು ಗಲಾಟೆ ? ಮುನಿಗಳಿಗೆ ಏನು ಅಪಾಯ ಉಂಟಾಯಿತು ? ನಮ್ಮ ಆಶ್ರಮದಲ್ಲಿ ರಾಕ್ಷಸರ ಉಪಟಳ ಇಲ್ಲ ತಾನೇ ?’ ಎಂದು ಧರ್ಮರಾಜನು ಮನೋಲ್ಲಾಸಕರವಾದ ಮೃಗ ಬೇಟೆಯನ್ನು ತ್ಯಜಿಸಿ ಬಂದು, ‘ಏನು ? ಏನಾಯ್ತು ?’ ಎಂದು ಅವರನ್ನು ಕೇಳಿದನು.
ಮೂಲ ...{Loading}...
ಏನು ಗಜಬಜ ಋಷಿ ಜನಂಗಳಿ
ಗೇನಪಾಯವೊ ನಮ್ಮ ಬನದಲಿ
ದಾನವರ ದುರ್ಘಟದ ದುರ್ನಯವಲ್ಲಲಾಯೆನುತ
ಆ ನರೆಂದ್ರ ಮನೋಹರದ ಮೃಗ
ಯಾ ನಿರೂಢಿಯ ಬಿಸುಟು ಬಂದನಿ
ದೇನಿದೇನೂಳಿಗವೆನುತ ಬೆಸಗೊಂಡನವರುಗಳ ॥23॥
೦೨೪ ಹೇಳಲಮ್ಮೆವು ಜೀಯ ...{Loading}...
ಹೇಳಲಮ್ಮೆವು ಜೀಯ ಸಿಂಧು ನೃ
ಪಾಲ ದಶಮುಖನಾದನಾ ಪಾಂ
ಚಾಲೆ ಜಾನಕಿಯಾದಳಿಂದಿನ ರಾಜಕಾರ್ಯವಿದು
ಮೇಲೆ ರಾಘವತನದ ತೋಟಿಯ
ತೋಳ ಬಿಂಕವು ನಿಮ್ಮದೆನೆ ನರ
ಪಾಲನಾಜ್ಞೆಯಲಂದು ಹರಿದರು ಭೀಮ ಫಲುಗುಣರು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸ್ವಾಮಿ, ಹೇಳುವುದು ಹೇಗೆ ? ಸೈಂಧವನು ರಾವಣನಾದನು. ದ್ರೌಪದಿ ಸೀತೆಯಾದಳು. ಈಗ ಕ್ಷತ್ರಿಯರ ಕರ್ತವ್ಯಕ್ಕೆ ತೊಡಗಿ ನೀವು ರಾಮಚಂದ್ರನಾಗಬೇಕು. ಪರಾಕ್ರಮವನ್ನು ನೀವು ತೋರಿಸಬೇಕು’ ಎನ್ನಲು ಧರ್ಮಜನು ಭೀಮಾರ್ಜುನರಿಗೆ ಆದೇಶವಿತ್ತನು. ಭೀಮ ಮತ್ತು ಪಾರ್ಥರು ಹೊರಟರು.
ಮೂಲ ...{Loading}...
ಹೇಳಲಮ್ಮೆವು ಜೀಯ ಸಿಂಧು ನೃ
ಪಾಲ ದಶಮುಖನಾದನಾ ಪಾಂ
ಚಾಲೆ ಜಾನಕಿಯಾದಳಿಂದಿನ ರಾಜಕಾರ್ಯವಿದು
ಮೇಲೆ ರಾಘವತನದ ತೋಟಿಯ
ತೋಳ ಬಿಂಕವು ನಿಮ್ಮದೆನೆ ನರ
ಪಾಲನಾಜ್ಞೆಯಲಂದು ಹರಿದರು ಭೀಮ ಫಲುಗುಣರು ॥24॥
೦೨೫ ಐದುವರೆ ರಿಪು ...{Loading}...
ಐದುವರೆ ರಿಪು ಮರಣ ಸಿದ್ಧಿಯ
ಕೈದು ಮನೆಯಲ್ಲಿಹುದು ಬೇಂಟೆಯ
ಕೈದು ಕೈಯಲಿ ಸಮಯವಿಲ್ಲ ಮಹಾಸ್ತ್ರಕರ್ಷಣಕೆ
ಮೈದುನನ ಮೈಸರಸಕೀ ಹುಲು
ಗೈದು ಸಾಲದೆ ತಂಗಿ ದುಸ್ಸಳೆ
ಯೈದೆತನ ಬಯಲಾಯ್ತೆನುತ ಬೆಂಬತ್ತಿದರು ಖಳನ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ವೈರಿಯನ್ನು ಕೊಲ್ಲಬಲ್ಲ ಆಯುಧ ಮನೆಯಲ್ಲಿದೆ ಹೋಗುವುದು ಹೇಗೆ ? ಕೇವಲ ಬೇಟೆಯ ಆಯುಧಗಳಿವೆ. ಮಹಾಸ್ತ್ರಗಳನ್ನು ಧರಿಸಲು ಕಾಲಾವಕಾಶವಿಲ್ಲ. ಈ ಮೈದುನನೊಡನೆ ಹೋರಾಡಲು ಯಃಕಶ್ಚಿತ್ ಆಯುಧವೇ ಸಾಕು. ತಂಗಿಯಾದ ದುಶ್ಶಲೆಯ ಮುತ್ತೈದೆತನ ಮುಗಿಯಿತು’ ಎಂದು ಅವರು ಸೈಂಧವನನ್ನು ಬೆನ್ನಟ್ಟಿದರು.
ಮೂಲ ...{Loading}...
ಐದುವರೆ ರಿಪು ಮರಣ ಸಿದ್ಧಿಯ
ಕೈದು ಮನೆಯಲ್ಲಿಹುದು ಬೇಂಟೆಯ
ಕೈದು ಕೈಯಲಿ ಸಮಯವಿಲ್ಲ ಮಹಾಸ್ತ್ರಕರ್ಷಣಕೆ
ಮೈದುನನ ಮೈಸರಸಕೀ ಹುಲು
ಗೈದು ಸಾಲದೆ ತಂಗಿ ದುಸ್ಸಳೆ
ಯೈದೆತನ ಬಯಲಾಯ್ತೆನುತ ಬೆಂಬತ್ತಿದರು ಖಳನ ॥25॥
೦೨೬ ಕಣ್ಡರಡವಿಯಲವನನೆಲವೋ ಭಣ್ಡ ...{Loading}...
ಕಂಡರಡವಿಯಲವನನೆಲವೋ
ಭಂಡ ಫಡ ಹೋಗದಿರೆನುತ ಕೈ
ಕೊಂಡು ಸುರಿದರು ಸರಳನಾ ಪಿಂಗಳಿಯ ಸೇನೆಯಲಿ
ಭಂಡರಿವದಿರು ತಾವು ಕಡುಹಿನ
ಖಂಡೆಯದ ಸಿರಿವಂತರಿವರು
ದ್ದಂಡ ಭಟರೆನುತಾ ಜಯದ್ರಥ ನಿಲಿಸಿದನು ಬಲವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಣ್ಯದಲ್ಲಿ ಅವನನ್ನು ಕಂಡು ‘ಎಲಾ ಭಂಡನೇ, ಓಡಬೇಡ ? ಎಂದು ಹಿಂತಿರುಗುತ್ತ್ತಿದ್ದ ಸೈನ್ಯದ ಮೇಲೆ ಬಾಣಗಳನ್ನು ಪ್ರಯೋಗಿಸಿದರು. ಆಗ ಸೈಂಧವನು - ಇವರು ಭಂಡರು, ಮಹಾಶೂರರು ’ ಎಂದು ತನ್ನ ಸೇನೆಯನ್ನು ನಿಲ್ಲಿಸಿದನು.
ಮೂಲ ...{Loading}...
ಕಂಡರಡವಿಯಲವನನೆಲವೋ
ಭಂಡ ಫಡ ಹೋಗದಿರೆನುತ ಕೈ
ಕೊಂಡು ಸುರಿದರು ಸರಳನಾ ಪಿಂಗಳಿಯ ಸೇನೆಯಲಿ
ಭಂಡರಿವದಿರು ತಾವು ಕಡುಹಿನ
ಖಂಡೆಯದ ಸಿರಿವಂತರಿವರು
ದ್ದಂಡ ಭಟರೆನುತಾ ಜಯದ್ರಥ ನಿಲಿಸಿದನು ಬಲವ ॥26॥
೦೨೭ ಸೆರೆ ಸಹಿತ ...{Loading}...
ಸೆರೆ ಸಹಿತ ತಾನೈದುವೆನು ನಿಜ
ಪುರವ ನೀವಾನುವುದು ಭೀಮನ
ನಿರಿವುದರ್ಜುನನೊಡನೆ ನಿಮಗುಗ್ಗಡದ ಸಮರವಿದು
ಇರಿತಕಂಜದ ಸ್ವಾಮಿಕಾರ್ಯದ
ಹೊರಿಗೆಯುಳ್ಳ ನವಾಯ ಬಿರುದಿನ
ಮುರುಕವುಳ್ಳ ಭಟಾಳಿ ನಿಲುವುದು ತಡೆವುದರಿ ಭಟರ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾನು ದ್ರೌಪದಿಯೊಂದಿಗೆ ನನ್ನ ಪಟ್ಟಣಕ್ಕೆ ಹೋಗುತ್ತೇನೆ. ನೀವು ಭೀಮಾರ್ಜುನರನ್ನು ತಡೆದು ಹೋರಾಡಿ ನಿಮಗೆ ಈ ಕದನ ಒಂದು ಪರೀಕ್ಷೆ. ಸ್ವಾಮಿಭಕ್ತಿಯುಳ್ಳ ನೀವು ಸಾಹಸದಿಂದ ವೈರಿಗಳೊಂದಿಗೆ ಹೋರಾಡುವುದು’ ಎಂದು ಸೈಂಧವನು ಸೇನಾಭಟರಿಗೆ ಹೇಳಿದನು.
ಮೂಲ ...{Loading}...
ಸೆರೆ ಸಹಿತ ತಾನೈದುವೆನು ನಿಜ
ಪುರವ ನೀವಾನುವುದು ಭೀಮನ
ನಿರಿವುದರ್ಜುನನೊಡನೆ ನಿಮಗುಗ್ಗಡದ ಸಮರವಿದು
ಇರಿತಕಂಜದ ಸ್ವಾಮಿಕಾರ್ಯದ
ಹೊರಿಗೆಯುಳ್ಳ ನವಾಯ ಬಿರುದಿನ
ಮುರುಕವುಳ್ಳ ಭಟಾಳಿ ನಿಲುವುದು ತಡೆವುದರಿ ಭಟರ ॥27॥
೦೨೮ ಎನ್ದು ವಾಘೆಯ ...{Loading}...
ಎಂದು ವಾಘೆಯ ಕೊಂಡು ರಥವನು
ಮುಂದೆ ದುವ್ವಾಳಿಸಿದನಿತ್ತಲು
ಹಿಂದೆ ನಿಂದುದು ಗಜರಥಾಶ್ವ ಪದಾತಿ ಚತುರಂಗ
ಇಂದುವದನೆಯ ತೇರು ಹಾಯ್ದುದೆ
ಮುಂದೆ ಹೊಳ್ಳುಗರಡ್ಡವಿಸಿದರೆ
ಹಿಂದೆ ಹೊಲ್ಲೆಹವೇನೆನುತ ಹೊಕ್ಕೆಚ್ಚನಾ ಪಾರ್ಥ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆಂದು ಅವನು ಕುದುರೆಗಳ ವಾಘೆಯವನ್ನು ಹಿಡಿದು ರಥವನ್ನು ಮುಂದೆ ಓಡಿಸಿದನು. ಅವನ ಚತುರಂಗ ಸೈನ್ಯ ಅಲ್ಲೇ ನಿಂತಿತು. ‘ದ್ರೌಪದಿಯನ್ನು ಹೊತ್ತ ರಥ ಮುಂದೆ ಹೋಯಿತೆ, ಸೈನಿಕರು ಇಲ್ಲೇ ನಿಂತು ಕಾದಾಡುವರೆ, ತಪ್ಪೇನು? ’ ಎಂದುಕೊಂಡು ಅರ್ಜುನನು ಬಾಣ ಪ್ರಯೋಗವನ್ನು ಮಾಡಿದನು.
ಪದಾರ್ಥ (ಕ.ಗ.ಪ)
ಹೊಲ್ಲೆಹ-ತಪ್ಪು
ಮೂಲ ...{Loading}...
ಎಂದು ವಾಘೆಯ ಕೊಂಡು ರಥವನು
ಮುಂದೆ ದುವ್ವಾಳಿಸಿದನಿತ್ತಲು
ಹಿಂದೆ ನಿಂದುದು ಗಜರಥಾಶ್ವ ಪದಾತಿ ಚತುರಂಗ
ಇಂದುವದನೆಯ ತೇರು ಹಾಯ್ದುದೆ
ಮುಂದೆ ಹೊಳ್ಳುಗರಡ್ಡವಿಸಿದರೆ
ಹಿಂದೆ ಹೊಲ್ಲೆಹವೇನೆನುತ ಹೊಕ್ಕೆಚ್ಚನಾ ಪಾರ್ಥ ॥28॥
೦೨೯ ಮುರಿದು ಮರನನು ...{Loading}...
ಮುರಿದು ಮರನನು ಭೀಮನಹಿತರ
ತುರುಬಿದನು ಮಲೆತಾನೆಗಳ ಹೊ
ಕ್ಕೆರಗಿದನು ತುರುಗಿದನು ಭಟರಭ್ರದವಿಮಾನದಲಿ
ಜುರಿತಡಗಿನಿಂಡೆಗಳ ಮಿದುಳಿನ
ನಿರಿಗರುಳ ನೆಣವಸೆಯ ಜಿನಿಯಲಿ
ಮೆರೆದುದಾ ಮರನಲ್ಲಿ ತಳಿತುದು ಹೂತುದೆಂಬಂತೆ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನು ಮರವನ್ನು ಮುರಿದು ಶತ್ರುಗಳ ಮೇಲೆರಗಿದನು. ಆನೆಗಳನ್ನೆದುರಿಸಿ ಬೀಳಿಸಿದನು. ಸೇನಾಭಟರನ್ನು ಕತ್ತರಿಸಿ ಆಕಾಶಕ್ಕೆಸೆದನು. ಆ ಸೈನಿಕರ ಮೆದುಳು, ಕರುಳು, ಮೇದಸ್ಸು ಮರಕ್ಕೆ ಅಂಟಿಕೊಂಡು, ಆ ಮರವು ಹೂ ಬಿಟ್ಟಂತೆ ಭಾಸವಾಯಿತು.
ಪದಾರ್ಥ (ಕ.ಗ.ಪ)
ನೆಣ-ಮೇದಸ್ಸು
ಅಡಗು - ಮಾಂಸ
ಮೂಲ ...{Loading}...
ಮುರಿದು ಮರನನು ಭೀಮನಹಿತರ
ತುರುಬಿದನು ಮಲೆತಾನೆಗಳ ಹೊ
ಕ್ಕೆರಗಿದನು ತುರುಗಿದನು ಭಟರಭ್ರದವಿಮಾನದಲಿ
ಜುರಿತಡಗಿನಿಂಡೆಗಳ ಮಿದುಳಿನ
ನಿರಿಗರುಳ ನೆಣವಸೆಯ ಜಿನಿಯಲಿ
ಮೆರೆದುದಾ ಮರನಲ್ಲಿ ತಳಿತುದು ಹೂತುದೆಂಬಂತೆ ॥29॥
೦೩೦ ಸಾಯೆಸಾವತಿಬಲರನೆಲ್ಲರ ...{Loading}...
ಸಾಯೆಸಾವತಿಬಲರನೆಲ್ಲರ
ಕಾಯಲಿರಿಸಿದ ಭಟರ ತಲೆಗಳು
ಬೀಯವಾದವು ಮತ್ತೆ ರಪಣವ ತೋರಿಸಾ ರಣಕೆ
ರಾಯರಂಗವನೆತ್ತ ಬಲ್ಲೆ ನಿ
ಜಾಯುಧವ ಹಿಡಿ ನಿನ್ನ ಬಿರುದಿನ
ಬಾಯಲೆರೆವುದು ಮಧುವನೆನುತುರವಣಿಸಿದನು ಭೀಮ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಮೃತ್ಯವಿಗೆ ಒಡ್ಡಿದ ನಿನ್ನ ಭಟರ ತಲೆಗಳು ನಾಶವಾದವು. ಈಗ ಯುದ್ದವನ್ನು ಯಾರ ಮೇಲೆ ಮಾಡಬೇಕೆಂದು ತಿಳಿಸು. ಕ್ಷತ್ರಿಯರ ರೀತಿಯನ್ನು ನೀನೇನು ಬಲ್ಲೆ? ಆಯುಧವನ್ನು ತೊಡು, ನಿನ್ನ ಹಿರಿಮೆಯನ್ನು ಹೇಳಿಕೊಳ್ಳುವ ಬಾಯಿಗೆ ಮಧುವನ್ನೆರೆಯುತ್ತೇನೆ ಎಂದು ಭೀಮನು ಮುಂದೊತ್ತಿದನು.
ಮೂಲ ...{Loading}...
ಸಾಯೆಸಾವತಿಬಲರನೆಲ್ಲರ
ಕಾಯಲಿರಿಸಿದ ಭಟರ ತಲೆಗಳು
ಬೀಯವಾದವು ಮತ್ತೆ ರಪಣವ ತೋರಿಸಾ ರಣಕೆ
ರಾಯರಂಗವನೆತ್ತ ಬಲ್ಲೆ ನಿ
ಜಾಯುಧವ ಹಿಡಿ ನಿನ್ನ ಬಿರುದಿನ
ಬಾಯಲೆರೆವುದು ಮಧುವನೆನುತುರವಣಿಸಿದನು ಭೀಮ ॥30॥
೦೩೧ ಧನುವ ಕೊಣ್ಡನು ...{Loading}...
ಧನುವ ಕೊಂಡನು ಸರಳ ಸಾರದ
ಲನಿಲಜನ ಮುಸುಕಿದನು ಪಾರ್ಥನ
ಮೊನೆಗಣೆಯ ತರಿದೊಟ್ಟಿ ಬೊಬ್ಬಿರಿದನು ಜಯದ್ರಥನು
ತನತನಗೆ ಸೈಂಧವನ ಬೆಂಗಾ
ಹಿನ ಭಟರು ಭಾರಣೆಯಲೊದಗಿದ
ರನಿಬರನು ನಿಮಿಷಾರ್ಧದಲಿ ನಿರ್ಣೈಸಿದನು ಪಾರ್ಥ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಯದ್ರಥನು ಬಿಲ್ಲನ್ನು ಹಿಡಿದು ಭೀಮಾರ್ಜುನರ ಮೇಲೆ ಬಾಣಗಳನ್ನು ಪ್ರಯೋಗಿಸಿದನು. ಜಯದ್ರಥನ ಬೆಂಗಾವಲಿಗಾಗಿ ಬಂದ ಅನೇಕ ಪಟುಭಟರನ್ನು ಪಾರ್ಥನು ಕ್ಷಣಾರ್ಧದಲ್ಲಿ ಸದೆಬಡಿದನು.
ಮೂಲ ...{Loading}...
ಧನುವ ಕೊಂಡನು ಸರಳ ಸಾರದ
ಲನಿಲಜನ ಮುಸುಕಿದನು ಪಾರ್ಥನ
ಮೊನೆಗಣೆಯ ತರಿದೊಟ್ಟಿ ಬೊಬ್ಬಿರಿದನು ಜಯದ್ರಥನು
ತನತನಗೆ ಸೈಂಧವನ ಬೆಂಗಾ
ಹಿನ ಭಟರು ಭಾರಣೆಯಲೊದಗಿದ
ರನಿಬರನು ನಿಮಿಷಾರ್ಧದಲಿ ನಿರ್ಣೈಸಿದನು ಪಾರ್ಥ ॥31॥
೦೩೨ ಅಞ್ಜದಿರು ಕಮಳಾಕ್ಷಿ ...{Loading}...
ಅಂಜದಿರು ಕಮಳಾಕ್ಷಿ ಧೌಮ್ಯ ನಿ
ರಂಜನನು ನಿನಗಿಂದು ಸುತಿ ಪವಿ
ಪಂಜರವಲಾಯೆನುತ ಹಾಯ್ದನು ಪವನಸುತ ರಥಕೆ
ಕುಂಜರನು ಕೈಯಿಕ್ಕೆ ನಿಲುಕದೆ
ಕಂಜವನವನಿಲಜನ ಜಾಡಿಯ
ಜಂಜಡಕೆ ದಿಟ್ಟನೆ ಜಯದ್ರಥನರಸ ಕೇಳ್ ಎಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕಮಲಾಕ್ಷಿ, ಹೆದರಬೇಡ. ಧೌಮ್ಯಮುನಿಗಳ ಸೂಕ್ತವು ನಿನಗೆ ವಜ್ರ ಪಂಜರವಾಗಿದೆ’ ಎಂದು ಹೇಳಿ ಭೀಮನು ಸೈಂಧವನ ರಥಕ್ಕೆ ಹಾರಿದನು. ಆನೆಯು ಸೊಂಡಿಲಿಗೆ ಕೊಳದ ಕಮಲವು ಸಿಲುಕುವುದಿಲ್ಲವೆ ? ಭೀಮನ ಪರಾಕ್ರಮವನ್ನು ಸೈಂಧವ ಎದುರಿಸಬಲ್ಲನೆ ? ಎಂದು ಜನಮೇಜಯನಿಗೆ ವೈಶಂಪಾಯನನು ಹೇಳಿದನು.
ಮೂಲ ...{Loading}...
ಅಂಜದಿರು ಕಮಳಾಕ್ಷಿ ಧೌಮ್ಯ ನಿ
ರಂಜನನು ನಿನಗಿಂದು ಸುತಿ ಪವಿ
ಪಂಜರವಲಾಯೆನುತ ಹಾಯ್ದನು ಪವನಸುತ ರಥಕೆ
ಕುಂಜರನು ಕೈಯಿಕ್ಕೆ ನಿಲುಕದೆ
ಕಂಜವನವನಿಲಜನ ಜಾಡಿಯ
ಜಂಜಡಕೆ ದಿಟ್ಟನೆ ಜಯದ್ರಥನರಸ ಕೇಳೆಂದ ॥32॥
೦೩೩ ಸೆಳೆದೊಡಾಯುಧವಾತನೀತನ ...{Loading}...
ಸೆಳೆದೊಡಾಯುಧವಾತನೀತನ
ನಿಲುಕಿ ಹೊಯ್ದನು ದಂಡೆಯಿಂದದ
ಕಳಚಿ ಮಾರುತಿ ಹೊಕ್ಕಡವ ಚಿಮ್ಮಿದನು ಚೀಲಯವ
ಖಳನ ಬಾಹುವನೊದೆದು ತುರುಬಿಗೆ
ನಿಲುಕಿ ಕುಸುಬಿದನವನ ಗೋಣಿನ
ಲಲಗ ಹೂಡಲು ಕಂಡನರ್ಜುನನಾ ವೃಕೋದರನ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಯದ್ರಥನು ಆಯುಧವನ್ನು ಸೆಳೆಯಲು, ಭೀಮನು ಅವನನ್ನು ಹೊಯ್ದನು. ಆಗ ಸೈಂಧವನು ಹಾರಿ ತಪ್ಪಿಸಿಕೊಳ್ಳಲು, ಭೀಮನು ಅವನ ಭುಜವನ್ನು ಒದೆದು, ತಲೆಗೂದಲನ್ನು ಎಳೆದು, ಕೊರಳಿಗೆ ಕತ್ತಿಯನ್ನು ಹೂಡಿದನು. ಆಗ ಅರ್ಜುನನು ಭೀಮನಿಗೆ ಹೀಗೆಂದನು.
ಮೂಲ ...{Loading}...
ಸೆಳೆದೊಡಾಯುಧವಾತನೀತನ
ನಿಲುಕಿ ಹೊಯ್ದನು ದಂಡೆಯಿಂದದ
ಕಳಚಿ ಮಾರುತಿ ಹೊಕ್ಕಡವ ಚಿಮ್ಮಿದನು ಚೀಲಯವ
ಖಳನ ಬಾಹುವನೊದೆದು ತುರುಬಿಗೆ
ನಿಲುಕಿ ಕುಸುಬಿದನವನ ಗೋಣಿನ
ಲಲಗ ಹೂಡಲು ಕಂಡನರ್ಜುನನಾ ವೃಕೋದರನ ॥33॥
೦೩೪ ಭೀಮ ಬಿಡಿಸದಿರವನ ...{Loading}...
ಭೀಮ ಬಿಡಿಸದಿರವನ ಗಂಟಲ
ನೀ ಮದಾಂಧನನೊಯ್ದು ಕೆಡಹುವ
ಭೂಮಿಪತಿಯಂಘ್ರಿಯಲಿ ಕಾಯಲಿ ಮುನಿದು ಮೇಣ್ಕೊಲಲಿ
ತಾಮಸನ ಬಿಗಿಯೆನಲು ನಗುತು
ದ್ದಾಮನೆಂದನು ಕೊಲುವೆನೆಂದೇ
ಕಾಮಿಸಿದೆನೈ ಪಾರ್ಥ ಕೆಡದೇಯೆನ್ನ ಸಂಕಲ್ಪ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೀಮನೇ, ಅವನ ಕತ್ತನ್ನು ಕತ್ತರಿಸಬೇಡ. ಈ ದುಷ್ಟನನ್ನು ಎಳೆದೊಯ್ದು ಅಣ್ಣನ ಪಾದದಡಿಗೆ ಕೆಡಹೋಣ. ಅವನು ಕಾಪಾಡಲಿ ಇಲ್ಲವೇ ಕೊಲ್ಲಲಿ, ಈ ಪಾಪಿಯನ್ನು ಕಟ್ಟಿಹಾಕು’ ಎಂದು ಹೇಳಲು, ಭೀಮನು ನಗುತ್ತಾ ‘ಇವನನ್ನು ಕೊಲ್ಲಬೇಕೆಂದೇ ಸಂಕಲ್ಪಿಸಿದ್ದೆ. ನನ್ನ ಸಂಕಲ್ಪ ಕೆಡುವುದಿಲ್ಲವೇ’ ಎಂದು ಉತ್ತರಿಸಿದನು.
ಮೂಲ ...{Loading}...
ಭೀಮ ಬಿಡಿಸದಿರವನ ಗಂಟಲ
ನೀ ಮದಾಂಧನನೊಯ್ದು ಕೆಡಹುವ
ಭೂಮಿಪತಿಯಂಘ್ರಿಯಲಿ ಕಾಯಲಿ ಮುನಿದು ಮೇಣ್ಕೊಲಲಿ
ತಾಮಸನ ಬಿಗಿಯೆನಲು ನಗುತು
ದ್ದಾಮನೆಂದನು ಕೊಲುವೆನೆಂದೇ
ಕಾಮಿಸಿದೆನೈ ಪಾರ್ಥ ಕೆಡದೇಯೆನ್ನ ಸಂಕಲ್ಪ ॥34॥
೦೩೫ ನೆನೆಯದಿರು ಸಙ್ಕಲ್ಪ ...{Loading}...
ನೆನೆಯದಿರು ಸಂಕಲ್ಪ ಹಾನಿಯ
ನನುಚಿತಕೆ ಮನ ತಾರದಿರು ಮಾ
ನಿನಿಯಿರಲಿ ರಥದಿಂದ ಕುನ್ನಿಯ ಕೆಡಹು ಧಾರುಣಿಗೆ
ಮುನಿಪನೇರಲಿ ರಥದ ವಾಜಿಯ
ನನುಗೊಳಿಸಿ ಸಾರಥ್ಯದಲಿ ಬರ
ಲೆನುತ ಭೀಮನ ಮನದ ಖತಿಯನು ಬಿಡಿಸಿದನು ಪಾರ್ಥ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿನ್ನ ಸಂಕಲ್ಪ ಹಾಳಾಗುತ್ತದೆ ಎಂದು ಭಾವಿಸಬೇಡ. ಅನುಚಿತವಾದುದನ್ನು ಮಾಡಬೇಡ. ದ್ರೌಪದಿ ರಥದಲ್ಲಿಯೇ ಇರಲಿ. ಈ ನಾಯಿಯನ್ನು ರಥದಿಂದ ನೆಲಕ್ಕೆ ದೂಡು. ಧೌಮ್ಯರು ರಥವನ್ನೇರಿ ಸಾರಥ್ಯವಹಿಸಿ, ಕುದುರೆಗಳನ್ನು ಅಣಿಗೊಳಿಸಿ ಬರಲಿ’ ಎಂದು ಅರ್ಜುನನು ಭೀಮನ ಸಿಟ್ಟನ್ನು ಉಪಶಮಿಸಿದನು.
ಮೂಲ ...{Loading}...
ನೆನೆಯದಿರು ಸಂಕಲ್ಪ ಹಾನಿಯ
ನನುಚಿತಕೆ ಮನ ತಾರದಿರು ಮಾ
ನಿನಿಯಿರಲಿ ರಥದಿಂದ ಕುನ್ನಿಯ ಕೆಡಹು ಧಾರುಣಿಗೆ
ಮುನಿಪನೇರಲಿ ರಥದ ವಾಜಿಯ
ನನುಗೊಳಿಸಿ ಸಾರಥ್ಯದಲಿ ಬರ
ಲೆನುತ ಭೀಮನ ಮನದ ಖತಿಯನು ಬಿಡಿಸಿದನು ಪಾರ್ಥ ॥35॥
೦೩೬ ವೈರಿ ಬಾಹುದ್ವಯವ ...{Loading}...
ವೈರಿ ಬಾಹುದ್ವಯವ ಬದ್ದುಗೆ
ದಾರದಲಿ ಕಟ್ಟಿದನು ನಾರೀ
ಚೋರ ನಡೆ ನಡೆಯೆನುತ ತಿವಿದನು ಬಿಲ್ಲ ಕೊಪ್ಪಿನಲಿ
ಕೌರವೇಂದ್ರನ ಮತವೊ ನಿನ್ನ ವಿ
ಕಾರವೋ ಹೆಂಗಳ್ಳ ವಿದ್ಯೆಯ
ನಾರು ಕಲಿಸಿದರೆನುತ ತಂದರು ಧರ್ಮಜನ ಹೊರೆಗೆ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುವಿನ ಕೈಗಳೆರಡನ್ನೂ ನಡುಪಟ್ಟಯಿಂದ ಕಟ್ಟಿಹಾಕಿ ‘ನಾರೀಚೋರ ನಡೆನಡೆ, ಎಂದು ಹೇಳುತ್ತಾ ಬಿಲ್ಲಕೊಪ್ಪಿನಿಂದ ತಿವಿದನು. ಇದು ಕೌರವನ ಕುಯುಕ್ತಿಯೋ, ಅಥವಾ ನಿನ್ನ ವಿಕೃತಿಯೋ ? ಸ್ತ್ರೀಯನ್ನು ಅಪಹರಿಸುವ ವಿದ್ಯೆಯನ್ನು ಯಾರು ನಿನಗೆ ಕಲಿಸಿದರು ?’ ಎಂದು ಹೇಳುತ್ತಾ ಧರ್ಮಜನಿದ್ದಲ್ಲಿಗೆ ಅವನನ್ನು ತಂದರು.
ಪದಾರ್ಥ (ಕ.ಗ.ಪ)
ಬದ್ದುಗೆ - ನಡುಪಟ್ಟಿ
ಮೂಲ ...{Loading}...
ವೈರಿ ಬಾಹುದ್ವಯವ ಬದ್ದುಗೆ
ದಾರದಲಿ ಕಟ್ಟಿದನು ನಾರೀ
ಚೋರ ನಡೆ ನಡೆಯೆನುತ ತಿವಿದನು ಬಿಲ್ಲ ಕೊಪ್ಪಿನಲಿ
ಕೌರವೇಂದ್ರನ ಮತವೊ ನಿನ್ನ ವಿ
ಕಾರವೋ ಹೆಂಗಳ್ಳ ವಿದ್ಯೆಯ
ನಾರು ಕಲಿಸಿದರೆನುತ ತಂದರು ಧರ್ಮಜನ ಹೊರೆಗೆ ॥36॥
೦೩೭ ಸಿನ್ಧು ಭೂಪನಲಾ ...{Loading}...
ಸಿಂಧು ಭೂಪನಲಾ ಭುಜಾಗ್ರದ
ಬಂಧನವ ಬಿಡು ಭೀಮ ಶಿವ ಶಿವ
ನೊಂದನೈ ನಿಷ್ಕರುಣಿಗಳು ನೀವೆಂದನವನೀಶ
ಕೊಂದು ಬಿಸುಡುವ ನೇಮ ಕಂದ
ರ್ಪಾಂಧಕನನುಳುಹುವೊಡೆ ತನಗಿ
ನ್ನಿಂಧನವ ಮಾಡಿಸುವುದೈಸಲೆಯೆಂದನಾ ಭೀಮ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೋ ಇವನು ಜಯದ್ರಥನೇ ! ಇವನ ತೋಳುಗಳಿಗೆ ಕಟ್ಟಿದ ಸೆರೆಯನ್ನು ಬಿಡು. ಭೀಮ, ನೀವು ನಿಷ್ಕರುಣಿಗಳು. ಅವನು ಎಷ್ಟೊಂದು ನೊಂದಿರಬಹುದು. ಶಿವಶಿವಾ’ ಎಂದು ಧರ್ಮರಾಜ ಹೇಳಿದನು. ‘ಇವನನ್ನು ಕೊಲ್ಲಬೇಕೆಂಬ ಪ್ರತಿಜ್ಞೆ ನನ್ನದು. ಈ ಕಾಮಾಂಧನನ್ನು ಉಳಿಸಿದರೆ ನಾನೇ ಹಾರಲು ಅಗ್ನಿಯನ್ನು ಸಿದ್ಧಗೊಳಿಸಬೇಕಷ್ಟೆ’ ಎಂದು ಭೀಮನು ಹೇಳಿದನು.
ಪದಾರ್ಥ (ಕ.ಗ.ಪ)
ಇಂಧನ - ಬೆಂಕಿ
ಮೂಲ ...{Loading}...
ಸಿಂಧು ಭೂಪನಲಾ ಭುಜಾಗ್ರದ
ಬಂಧನವ ಬಿಡು ಭೀಮ ಶಿವ ಶಿವ
ನೊಂದನೈ ನಿಷ್ಕರುಣಿಗಳು ನೀವೆಂದನವನೀಶ
ಕೊಂದು ಬಿಸುಡುವ ನೇಮ ಕಂದ
ರ್ಪಾಂಧಕನನುಳುಹುವೊಡೆ ತನಗಿ
ನ್ನಿಂಧನವ ಮಾಡಿಸುವುದೈಸಲೆಯೆಂದನಾ ಭೀಮ ॥37॥
೦೩೮ ಹದನಿದೊಳ್ಳಿತು ತಙ್ಗಿ ...{Loading}...
ಹದನಿದೊಳ್ಳಿತು ತಂಗಿ ವೈಧ
ವ್ಯದಲಿ ನವೆಯಳೆ ಸುಬಲ ನಂದನೆ
ಯುದರ ಕುಂತೀದೇವಿಯುದರಕೆ ಭಿನ್ನ ಭಾವನೆಯೆ
ಕದನದಲಿ ಹಿಡಿವಡೆದವರ ಕೊಲು
ವುದು ನರೇಂದ್ರರ ಧರ್ಮವಲ್ಲಿ
ನ್ನಿದರ ಮೇಲಾವರಿಯೆವೆಂದನು ಧರ್ಮನಂದನನು ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇದು ಒಳ್ಳೆಯದು. ತಂಗಿಗೆ ವೈಧವ್ಯ ಬರುವುದಿಲ್ಲವೆ ? ಗಾಂಧಾರೀ ಮತ್ತು ಕುಂತಿದೇವಿಯರ ಗರ್ಭ ಒಂದೇ ತಾನೇ ? ಯುದ್ಧದಲ್ಲಿ ಸೆರೆ ಸಿಕ್ಕವರನ್ನು ಕೊಲ್ಲುವುದು ರಾಜಧರ್ಮವಲ್ಲ. ಇದಕ್ಕಿಂತ ಹೆಚ್ಚು ನನಗೆ ತಿಳಿಯದು’ ಎಂದು ಯುಧಿಷ್ಠಿರನು ಹೇಳಿದನು.
ಟಿಪ್ಪನೀ (ಕ.ಗ.ಪ)
ಸುಬಲ - ಸುಬಲನು ಗಾಂಧಾರಿಯ ಮತ್ತು ಶಕುನಿಯ ತಂದೆ. ಗಾಂಧಾರ ರಾಜ್ಯದ ಒಡೆಯ. ಕುರುವಂಶದ ಯದುವಿನ ಸೋದರನಾದ ಉರ್ವಸುವಿನ ವಂಶದವನು. ಸಿಂಧೂ ನದಿಯಿಂದ ಕಾಬೂಲ್ವರೆಗಿನ ವಿಸ್ತಾರವಾದ ಸಾಮ್ರಾಜ್ಯಕ್ಕೆ ಒಡೆಯಾಗಿದ್ದ. ಪುರುಷಪುರ (ಅಥವಾ ಈಗಿನ ಪೆಷಾವರ್) ಈತನ ರಾಜಧಾನಿಯಾಗಿತ್ತು. ಇವನ ಒಬ್ಬಳೇ ಮಗಳು ಗಾಂಧಾರಿ ಧರ್ಮಚಾರಿಣಿಯಾಗಿದ್ದಳು. ಶಿವನನ್ನು ಕುರಿತು ತಪಸ್ಸು ಮಾಡಿ ನೂರು ಮಕ್ಕಳಾಗುವಂತೆ ವರವನ್ನು ಪಡೆದುಕೊಂಡಿದ್ದಳು. ತನ್ನ ಸೋದರ ಧೃತರಾಷ್ಟ್ರನಿಗೆ ಹೆಣ್ಣು ಹುಡುಕುತ್ತಿದ್ದ ಭೀಷ್ಮನು ಗಾಂಧಾರಿಯನ್ನು ವಿವಾಹ ಮಾಡಿಕೊಡಬೇಕೆಂದು ಸುಬಲ ಮಹಾರಾಜನಿಗೆ ಹೇಳಿ ಕಳುಹಿಸಿದ. ಆಗ ಸುಬಲ ರಾಜನ ಮನಸ್ಸಿನಲ್ಲಿ ಎದ್ದ ನಾನಾ ಭಾವಗಳನ್ನು ವ್ಯಾಸರು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.
ಅಚಕ್ಷುರಿತಿ ತತ್ರಾಸೀತ್ ಸುಬಲಸ್ಯ ವಿಚಾರಣಾ
ಕುಲಂಖ್ಯಾತಿಂಚ ವೃತ್ತಂಚ ಬುದ್ಧ್ಯಾತು ಪ್ರಸಮೀಕ್ಷ್ಯಸಃ
ದದೌತಾಂ ಧೃತರಾಷ್ಟ್ರಾಯ ಗಾಂಧಾರೀಂ ಧರ್ಮಚಾರಿಣೀಂ.
ಧೃತರಾಷ್ಟ್ರನಿಗೆ ಕಣ್ಣಿಲ್ಲ ಎಂಬ ಸಂಗತಿ ತಿಳಿದು ಮಗಳ ಭವಿಷ್ಯ ಹಾಳಾಗಬಾರದೆಂಬ ಕಾರಣಕ್ಕೆ ಈ ಸಂಬಂಧವನ್ನು ತಿರಸ್ಕರಿಸುವ ಮನಸ್ಸು ಆತನಿಗೆ. ಆದರೆ ಸೂಕ್ತ ವರನನ್ನು ಹುಡುಕುವಾಗ ಹೆಣ್ಣು ಹೆತ್ತವರು ಗಂಡಿನ ಕುಲಖ್ಯಾತಿ ಮತ್ತು ಶೀಲಗಳಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ. ಹಾಗೆ ನೋಡಿದಾಗ ಕೌರವರದು ತನ್ನದೇ ವಂಶದಿಂದ ಕವಲಾಗಿರುವ ಒಂದು ಶ್ರೇಷ್ಠ ವಂಶ ಈ ವಂಶದ ಕೀತಿ ಜಗತ್ತಿಗೇ ಹರಡಿಕೊಂಡಿದೆ. ಆದ್ದರಿಂದ ಪ್ರಬಲ ರಾಜನು ಅಳಿಯನಾದರೆ ರಾಜಕೀಯವಾಗಿಯೂ ತನ್ನ ಕೆಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಕೊನೆಯದಾಗಿ ಶೀಲ. ಯದು, ಪೂರು, ಕುರು ಈ ಮೂರು ವಂಶ ಶಾಖೆಗಳು ಶೀಲದಲ್ಲಿ ಉನ್ನತಿಯನ್ನು ಸಾಧಿಸಿದ ಕುಲಗಳಲ್ಲವೆ?
ಭೀಷ್ಮನ ಶ್ರೀರಕ್ಷೆಯಿರುವ ಕುರುಕುಲಕ್ಕೆ ಎಂದಿಗೂ ಕೇಡಿಲ್ಲವಲ್ಲ್ಲ. ಹೀಗೆ ನಾಲ್ಕಾರು ದಿಕ್ಕುಗಳಿಂದ ಯೋಚಿಸಿ ಕೊನೆಗೆ ಮದುವೆಗೆ ಒಪ್ಪಿಗೆ ಕೊಟ್ಟ. ತಂದೆಯ ಮಾತನ್ನು ಮೀರಲಾರದ ಪರಮಸಾಧ್ವಿ ಏಕೈಕ ಮಗಳು ಗಾಂಧಾರಿ ಗಂಡನಿಗೆ ಇಲ್ಲದ ನೇತ್ರ ಸಂಪತ್ತು ತನಗೂ ಬೇಡವೆಂದು ತನ್ನ ಕಣ್ನಿಗೂ ಬಟ್ಟೆ ಕಟ್ಟಿಕೊಂಡಳು. (ಬಬಂಧ ನೇತ್ರೇ ಸ್ವೇ ರಾಜನ್ ಪತಿವ್ರತ ಪರಾಯಣಾ…..).
ಶಕುನಿ ಮಗ. ಗಾಂಧಾರಿ ಒಬ್ಬಳೇ ಮಗಳು ಎಂದು ಕೆಲವು ಪಾಠಗಳಲ್ಲಿ ಆದಿಪರ್ವದ 103ನೇ ಅಧ್ಯಾಯ ಸ್ಪಷ್ಟವಾಗಿ ಹೇಳುತ್ತದೆ. ಆದರೆ ಕೆಲವು ಪಾಠಗಳಲ್ಲಿ ಮತ್ತು ಕೆಲವು ಕೋಶಗಳಲ್ಲಿ ಸುಬಲನಿಗೆ ಗಾಂಧಾರಿಯೇ ಅಲ್ಲದೆ ಸತ್ಯವ್ರತೆ, ಸತ್ಯಸೇನೆ, ಸುದೇಷ್ಣೆ, ಸಂಹಿತೆ, ತೇಜಶ್ರವೆ, ಸುಶ್ರವೆ, ನಿಕೃತಿ ಶುಭಾ, ಶಂಬರೆ ಮತ್ತು ದಶಾರ್ಣ ಎಂಬ ಹತ್ತು ಹೆಣ್ಣು ಮಕ್ಕಳಿದ್ದಾರೆಂದು ಸುಬಲನು ಗಾಂಧಾರಿಯ ಜೊತೆಗೆ ಇವರನ್ನೆಲ್ಲ ಧೃತರಾಷ್ಟ್ರನಿಗೆ ಮದುವೆ ಮಾಡಿಕೊಟ್ಟನೆಂದೂ ಹೇಳಲಾಗಿದೆ.
ಮೂಲ ...{Loading}...
ಹದನಿದೊಳ್ಳಿತು ತಂಗಿ ವೈಧ
ವ್ಯದಲಿ ನವೆಯಳೆ ಸುಬಲ ನಂದನೆ
ಯುದರ ಕುಂತೀದೇವಿಯುದರಕೆ ಭಿನ್ನ ಭಾವನೆಯೆ
ಕದನದಲಿ ಹಿಡಿವಡೆದವರ ಕೊಲು
ವುದು ನರೇಂದ್ರರ ಧರ್ಮವಲ್ಲಿ
ನ್ನಿದರ ಮೇಲಾವರಿಯೆವೆಂದನು ಧರ್ಮನಂದನನು ॥38॥
೦೩೯ ಈತನಳಿಯದೆ ಮತ್ಪ್ರತಿಜ್ಞಾ ...{Loading}...
ಈತನಳಿಯದೆ ಮತ್ಪ್ರತಿಜ್ಞಾ
ಖ್ಯಾತಿ ಮಸುಳದೆ ತಿದ್ದುವನುವನು
ಭೂತಳಾಧಿಪ ನೀವು ಬೆಸಸುವುದೆನಲು ಮುನಿಜನವ
ಆತ ನೋಡಿದನಾವುದಿದಕನು
ನೀತಿಯೆನೆ ಧೌಮ್ಯಾದಿ ಸುಜನ
ವ್ರಾತ ನಿಶ್ಚೈಸಿದರು ಮನದಲಿ ಧರ್ಮ ನಿರ್ಣಯವ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನು ಸಾಯದೆ ನನ್ನ ಶಪಥ ಈಡೇರುವುದಿಲ್ಲ. ಇದಕ್ಕೆ ಪರಿಹಾರೋಪಾಯವನ್ನು ಹೇಳಬೇಕೆಂದು ಧೌಮ್ಯರೇ ಮೊದಲಾದ ಮುನಿಗಳನ್ನು ಕೇಳಿದರು. ಆಗ ಧೌಮ್ಯರು ಇದಕ್ಕೆ ಪರಿಹಾರವನ್ನು ಯೋಚಿಸಿ, ಮನಸ್ಸಿನಲ್ಲಿ ಧರ್ಮವನ್ನು ನಿರ್ಣಯಿಸಿದರು.
ಮೂಲ ...{Loading}...
ಈತನಳಿಯದೆ ಮತ್ಪ್ರತಿಜ್ಞಾ
ಖ್ಯಾತಿ ಮಸುಳದೆ ತಿದ್ದುವನುವನು
ಭೂತಳಾಧಿಪ ನೀವು ಬೆಸಸುವುದೆನಲು ಮುನಿಜನವ
ಆತ ನೋಡಿದನಾವುದಿದಕನು
ನೀತಿಯೆನೆ ಧೌಮ್ಯಾದಿ ಸುಜನ
ವ್ರಾತ ನಿಶ್ಚೈಸಿದರು ಮನದಲಿ ಧರ್ಮ ನಿರ್ಣಯವ ॥39॥
೦೪೦ ಮಾನಧನರಿಗೆ ವಧೆಯೆನಿಪುದಭಿ ...{Loading}...
ಮಾನಧನರಿಗೆ ವಧೆಯೆನಿಪುದಭಿ
ಮಾನಭಂಜನವಿವನು ಕಟ್ಟಭಿ
ಮಾನಿ ಭಂಗಿಸಿ ಬಿಟ್ಟೊಡೀತಂಗಿದುವೆ ಮರಣವಲ
ಈ ನುಡಿಯ ಸಲಿಸಿದೊಡೆ ಇವನಪ
ಮಾನಹತನಿದು ಧರ್ಮ ನಿಶ್ಚಯ
ವೇನು ಸಂಶಯವಿಲ್ಲೆನುತ ನುಡಿದುದು ಮುನಿಸ್ತೋಮ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಾನವಂತರಿಗೆ ಅವಮಾನವೆ ವಧೆಗೆ ಸಮಾನವೆನಿಸುತ್ತದೆ. ಇವನು ಮಹಾ ಅಭಿಮಾನಧನನಾಗಿರುವುದರಿಂದ, ಅದನ್ನು ಭಂಗಿಸಿದರೆ ಅದೇ ಮರಣ ಸಮಾನವೆನಿಸುತ್ತದೆ. ಹೀಗೆ ಮಾಡಿದರೆ ಅವಮಾನದಿಂದಲೇ ಹತನಾಗುತ್ತಾನೆ. ಇದು ಧರ್ಮವೆನಿಸುತ್ತದೆ. ಏನೂ ಸಂಶಯವಿಲ್ಲ” ಎಂದು ಮುನಿಸ್ತೋಮ ಹೇಳಿತು.
ಮೂಲ ...{Loading}...
ಮಾನಧನರಿಗೆ ವಧೆಯೆನಿಪುದಭಿ
ಮಾನಭಂಜನವಿವನು ಕಟ್ಟಭಿ
ಮಾನಿ ಭಂಗಿಸಿ ಬಿಟ್ಟೊಡೀತಂಗಿದುವೆ ಮರಣವಲ
ಈ ನುಡಿಯ ಸಲಿಸಿದೊಡೆ ಇವನಪ
ಮಾನಹತನಿದು ಧರ್ಮ ನಿಶ್ಚಯ
ವೇನು ಸಂಶಯವಿಲ್ಲೆನುತ ನುಡಿದುದು ಮುನಿಸ್ತೋಮ ॥40॥
೦೪೧ ಅಹುದೆನುತ ಕಲಿಭೀಮ ...{Loading}...
ಅಹುದೆನುತ ಕಲಿಭೀಮ ಮಾಡಿದ
ರಹವನದನೇನೆಂಬೆನೈ ಕೂ
ರಿಹ ಕಠಾರಿಯ ಹಣಿಗೆಯಲಿ ಬಾಚಿದನು ಸಿರಿಮುಡಿಯ
ಅಹಿತ ಶಿರವಿದಲಾಯೆನುತ ಗೃಹ
ಮಹಿಳೆಯರು ವಿಹಿತಾಂಗುಲಿಯ ಸಂ
ಪ್ರಹರಣದಿ ಪರಿಭವಿಸಿದರು ಘೊಳ್ಳೆನಲು ನಿಖಿಳಜನ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೌದು ಎನ್ನುತ್ತಾ ಭೀಮಸೇನನು ಕೈಗೊಂಡ ಕೃತ್ಯವನ್ನು ಏನು ಹೇಳಲಿ ? ಹರಿತವಾದ ಖಡ್ಗದಲ್ಲಿ ಸೈಂಧವನ ತಲೆಯನ್ನು ಹಣಿಗೆಯಲ್ಲಿ ಬಾಚಿದಂತೆ ಬಾಚಿದನು. ಗೃಹಿಣಿಯರು ಅವನ ಬೋಳಾದ ತಲೆಯ ಮೇಲೆ ಬೆರಳಿನ ಹಿಂಭಾಗದಿಂದ ಮೊಟಕಿದಾಗ ಅಲ್ಲಿದ್ದ ಜನರೆಲ್ಲರೂ ಗೊಳ್ಳೆಂದು ನಕ್ಕರು.
ಮೂಲ ...{Loading}...
ಅಹುದೆನುತ ಕಲಿಭೀಮ ಮಾಡಿದ
ರಹವನದನೇನೆಂಬೆನೈ ಕೂ
ರಿಹ ಕಠಾರಿಯ ಹಣಿಗೆಯಲಿ ಬಾಚಿದನು ಸಿರಿಮುಡಿಯ
ಅಹಿತ ಶಿರವಿದಲಾಯೆನುತ ಗೃಹ
ಮಹಿಳೆಯರು ವಿಹಿತಾಂಗುಲಿಯ ಸಂ
ಪ್ರಹರಣದಿ ಪರಿಭವಿಸಿದರು ಘೊಳ್ಳೆನಲು ನಿಖಿಳಜನ ॥41॥
೦೪೨ ಬಿಟ್ಟರೀತನ ತೋಳ ...{Loading}...
ಬಿಟ್ಟರೀತನ ತೋಳ ಹಿಂಗೈ
ಗಟ್ಟುಗಳನೆಲೆ ಕುನ್ನಿ ಹೋಗೆನೆ
ಕೆಟ್ಟ ಕೇಡದನೇನ ಹೇಳುವೆನಾ ಜಯದ್ರಥನ
ಬೆಟ್ಟದಿಂದುರುಳುವೆನೊ ಹಾಸರೆ
ಗಟ್ಟಿ ಹೊಗುವೆನೊ ಮಡುವನೆನುತಡಿ
ಯಿಟ್ಟನಂತಃಕಲುಷಚಿತ್ತ ದುರಂತ ಚಿಂತೆಯಲಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನ ಸೆರೆಯನ್ನು ಬಿಟ್ಟು, ಹಿಂಗೈಕಟ್ಟುಗಳನ್ನು ಕಳಚಿ ‘ಎಲಾ ನಾಯಿ ಹೋಗು’ ಎನ್ನಲು, ಜಯದ್ರಥನ ದುರವಸ್ಥೆಯನ್ನು ಏನು ಹೇಳಲಿ?’ ಬೆಟ್ಟದಿಂದ ಕೆಳಗೆ ಹಾರಲೇ ? ಕಲ್ಲನ್ನು ಕಟ್ಟಿಕೊಂಡು ಮಡುವಿಗೆ ಬೀಳಲೇ ?’ ಎಂದುಕೊಂಡು ಕಲ್ಮಷ ಹೃದಯಿಯಾದ ಸೈಂಧವನು ದುರಂತಮಯವಾದ ಚಿಂತೆಯಲ್ಲಿ ಹೆಜ್ಜೆಹಾಕಿದನು.
ಪದಾರ್ಥ (ಕ.ಗ.ಪ)
ಹಾಸರೆ-ಕಲ್ಲಿನ ಚಪ್ಪಡಿ
ಮೂಲ ...{Loading}...
ಬಿಟ್ಟರೀತನ ತೋಳ ಹಿಂಗೈ
ಗಟ್ಟುಗಳನೆಲೆ ಕುನ್ನಿ ಹೋಗೆನೆ
ಕೆಟ್ಟ ಕೇಡದನೇನ ಹೇಳುವೆನಾ ಜಯದ್ರಥನ
ಬೆಟ್ಟದಿಂದುರುಳುವೆನೊ ಹಾಸರೆ
ಗಟ್ಟಿ ಹೊಗುವೆನೊ ಮಡುವನೆನುತಡಿ
ಯಿಟ್ಟನಂತಃಕಲುಷಚಿತ್ತ ದುರಂತ ಚಿಂತೆಯಲಿ ॥42॥
೦೪೩ ಚಿನ್ತಿಸಿದೊಡೇನಹುದು ...{Loading}...
ಚಿಂತಿಸಿದೊಡೇನಹುದು ಹೊಗುವೆನು
ಕಂತುಮಥನನ ಮರೆಯನಿವದಿರಿ
ಗಂತಕನು ತಾನಹೆನು ಗೆಲುವೆನು ಬಳಿಕ ಬವರದಲಿ
ಭ್ರಾಂತಿಯೇ ಬಿಡು ತನ್ನನೆನುತ ಪು
ರಾಂತಕ ಧ್ಯಾನದಲಿ ವಿಮಲ
ಸ್ವಾಂತನೇಕಾಗ್ರದಲಿ ಭಜಿಸಿದನಿಂದುಶೇಖರನ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಚಿಂತೆಗೈದು ಫಲವಿಲ್ಲ. ಪರಶಿವನನ್ನೇ ಮೊರೆ ಹೋಗುತ್ತೇನೆ. ಈ ಪಾಂಡವರಿಗೆ ಯಮಸ್ವರೂಪಿ ತಾನೇ ಆಗಿ ಅವರನ್ನು ಯುದ್ಧದಲ್ಲಿ ಗೆಲ್ಲುತ್ತೇನೆ. ಈ ಭ್ರಾಂತಿಬಿಡಲಿ’ ಎಂದು ಸೈಂಧವನು ಚಂದ್ರಶೇಖರ ಶಿವನನ್ನು ಏಕಾಗ್ರತೆಯಿಂದ ಧ್ಯಾನಿಸುತ್ತಿದ್ದನು.
ಮೂಲ ...{Loading}...
ಚಿಂತಿಸಿದೊಡೇನಹುದು ಹೊಗುವೆನು
ಕಂತುಮಥನನ ಮರೆಯನಿವದಿರಿ
ಗಂತಕನು ತಾನಹೆನು ಗೆಲುವೆನು ಬಳಿಕ ಬವರದಲಿ
ಭ್ರಾಂತಿಯೇ ಬಿಡು ತನ್ನನೆನುತ ಪು
ರಾಂತಕ ಧ್ಯಾನದಲಿ ವಿಮಲ
ಸ್ವಾಂತನೇಕಾಗ್ರದಲಿ ಭಜಿಸಿದನಿಂದುಶೇಖರನ ॥43॥
೦೪೪ ಇವನ ನಿಷ್ಠೆಗೆ ...{Loading}...
ಇವನ ನಿಷ್ಠೆಗೆ ಮೆಚ್ಚಿ ಗೌರೀ
ಧವನು ಮೈದೋರಿದನು ರಾಜ
ಪ್ರವರ ಕೊಟ್ಟೆನು ಬೇಡು ಸಾಕು ಭವನ್ಮನೋರಥವ
ವಿವರಿಸೆನೆ ಕಂದೆರೆದು ಮುಂದಿಹ
ಶಿವನ ಕಂಡನು ಮೈಯ ಚಾಚಿದ
ನವನಿಯಲಿ ಜಯ ಜಯ ಮಹೇಶ ನಮಃಶಿವಾಯೆನುತ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈಂಧವನ ಭಕ್ತಿಗೆ ಪರಶಿವನು ಮೆಚ್ಚಿ ಮೈದೋರಿದನು. ‘ರಾಜಶ್ರೇಷ್ಠ, ನಿನಗೇನು ಬೇಕೋ ಅದನ್ನು ಬೇಡು, ಅನುಗ್ರಹಿಸುತ್ತೇನೆ’ ಎನ್ನಲು ಸೈಂಧವನು ಕಣ್ಣು ತೆರೆದು ತನ್ನ ಮುಂದಿರುವ ಪರಮೇಶ್ವರನನ್ನು ಕಂಡು, ಜಯ ಜಯ ಮಹೇಶ್ವರ, ನಮಃ ಶಿವಾಯ’ ಎಂದು ಸಾಷ್ಟಾಂಗ ವಂದಿಸಿದನು.
ಮೂಲ ...{Loading}...
ಇವನ ನಿಷ್ಠೆಗೆ ಮೆಚ್ಚಿ ಗೌರೀ
ಧವನು ಮೈದೋರಿದನು ರಾಜ
ಪ್ರವರ ಕೊಟ್ಟೆನು ಬೇಡು ಸಾಕು ಭವನ್ಮನೋರಥವ
ವಿವರಿಸೆನೆ ಕಂದೆರೆದು ಮುಂದಿಹ
ಶಿವನ ಕಂಡನು ಮೈಯ ಚಾಚಿದ
ನವನಿಯಲಿ ಜಯ ಜಯ ಮಹೇಶ ನಮಃಶಿವಾಯೆನುತ ॥44॥
೦೪೫ ವರದನಾದೈ ಶಮ್ಭು ...{Loading}...
ವರದನಾದೈ ಶಂಭು ಕರುಣಾ
ಕರ ಹಸಾದವು ಪಾಂಡುಸುತರೈ
ವರನು ದಿನವೊಂದರಲಿ ಗೆಲುವುದು ತನಗಭೀಷ್ಟವಿದು
ಕರುಣಿಸೈ ತನಗೆನಲು ನಕ್ಕನು
ಗಿರಿಸುತೆಯ ಮೊಗ ನೋಡಿ ಭಾರಿಯ
ವರವ ವಿವರಿಸಿದನು ಜಯದ್ರಥನೆಂದನಿಂದುಧರ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಶಂಭು, ಪ್ರಸನ್ನನಾದೆಯಾ ? ಕರುಣಾಕರನೇ, ಐವರು ಪಾಂಡವರನ್ನೂ ಒಂದೇ ದಿನದಲ್ಲಿ ನಾನು ಗೆಲ್ಲುವಂತೆ ನನಗೆ ವರವನ್ನು ಕೊಡು’ ಎಂದು ಸೈಂಧವನು ಕೇಳಲು, ಪಾರ್ವತಿಯ ಮುಖವನ್ನು ನೋಡಿ ಶಿವನು ‘ವರವಿಶೇಷವೊಂದನ್ನು ಜಯದ್ರಥನು ಕೇಳಿದ್ದಾನೆ’ ಎಂದನು.
ಮೂಲ ...{Loading}...
ವರದನಾದೈ ಶಂಭು ಕರುಣಾ
ಕರ ಹಸಾದವು ಪಾಂಡುಸುತರೈ
ವರನು ದಿನವೊಂದರಲಿ ಗೆಲುವುದು ತನಗಭೀಷ್ಟವಿದು
ಕರುಣಿಸೈ ತನಗೆನಲು ನಕ್ಕನು
ಗಿರಿಸುತೆಯ ಮೊಗ ನೋಡಿ ಭಾರಿಯ
ವರವ ವಿವರಿಸಿದನು ಜಯದ್ರಥನೆಂದನಿಂದುಧರ ॥45॥
೦೪೬ ಪಾಶುಪತಶರವೆನ್ನ ಸತ್ವ ...{Loading}...
ಪಾಶುಪತಶರವೆನ್ನ ಸತ್ವ ವಿ
ಳಾಸವದೆ ಫಲುಗುಣನ ಕೈಯಲಿ
ವಾಸವಾಬ್ಜಭವಾದಿ ಬಿರುದರ ಬಗೆಯದಾಹವಕೆ
ಆ ಸುಭಟನೊಬ್ಬನನುಳಿಯೆ ಮಿ
ಕ್ಕೇಸು ಪಾಂಡವರುಗಳನೊಂದೇ
ವಾಸರದಲವಗಡಿಸು ಹೋಗೆಂದನು ಮಖದ್ವಂಸಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪಾಶುಪತಾಸ್ತ್ರವನ್ನು ಈಗಾಗಲೇ ಪಾರ್ಥನು ಪಡೆದಿದ್ದಾನೆ. ಇಂದ್ರ ಬ್ರಹ್ಮಾದಿಗಳನ್ನೂ ಅದು ಲೆಕ್ಕಿಸುವುದಿಲ್ಲ. ಯುದ್ಧದಲ್ಲಿ ಅವನೊಬ್ಬನನ್ನು ಬಿಟ್ಟು, ಉಳಿದೆಲ್ಲ ಪಾಂಡವರನ್ನು ಒಂದು ದಿವಸದ ಮಟ್ಟಿಗೆ ನೀನು ಸೋಲಿಸಬಲ್ಲೆ ಹೋಗು’ ಎಂದು ಶಿವನು ಹೇಳಿದನು.
ಮೂಲ ...{Loading}...
ಪಾಶುಪತಶರವೆನ್ನ ಸತ್ವ ವಿ
ಳಾಸವದೆ ಫಲುಗುಣನ ಕೈಯಲಿ
ವಾಸವಾಬ್ಜಭವಾದಿ ಬಿರುದರ ಬಗೆಯದಾಹವಕೆ
ಆ ಸುಭಟನೊಬ್ಬನನುಳಿಯೆ ಮಿ
ಕ್ಕೇಸು ಪಾಂಡವರುಗಳನೊಂದೇ
ವಾಸರದಲವಗಡಿಸು ಹೋಗೆಂದನು ಮಖದ್ವಂಸಿ ॥46॥
೦೪೭ ಸಾಕು ಜೀಯ ...{Loading}...
ಸಾಕು ಜೀಯ ಹಸಾದವೆಂದವಿ
ವೇಕನಿಧಿ ಬೀಳ್ಕೊಂಡನೀಶನ
ನೀ ಕುಮಾರರು ವನದೊಳಿದ್ದರು ಖತಿಯ ಭಾರದಲಿ
ನೂಕು ನೂಕಾಡುವ ವಿಪತ್ತಿನ
ವೈಕೃತಿಗೆ ನಾನೊಬ್ಬನೇ ದಿಟ
ವಾಕೆವಾಳನೆ ಶಿವ ಶಿವಾಯೆಂದರಸ ಬಿಸುಸುಯ್ದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪ್ರಭು, ಧನ್ಯನಾದೆ’ ಎಂದು ಹೇಳಿ ಅವಿವೇಕನಿಧಿಯಾದ ಸೈಂಧವನು ಪರಶಿವನಲ್ಲಿಂದ ಹೊರಟನು. ಪಾಂಡವರು ದುಃಖದಿಂದ ಅರಣ್ಯದಲ್ಲಿದ್ದರು. ಧರ್ಮಜನು ‘ಈ ವಿವಿಧ ಆಪತ್ತುಗಳನ್ನು ನಾನೊಬ್ಬನೇ ಎದುರಿಸಬೇಕಾಯಿತಲ್ಲಾ, ಶಿವಶಿವಾ’ ಎಂದು ನಿಟ್ಟುಸಿರಿಟ್ಟನು.
ಪದಾರ್ಥ (ಕ.ಗ.ಪ)
ಆಕೆವಾಳ-ಶೂರ
ಮೂಲ ...{Loading}...
ಸಾಕು ಜೀಯ ಹಸಾದವೆಂದವಿ
ವೇಕನಿಧಿ ಬೀಳ್ಕೊಂಡನೀಶನ
ನೀ ಕುಮಾರರು ವನದೊಳಿದ್ದರು ಖತಿಯ ಭಾರದಲಿ
ನೂಕು ನೂಕಾಡುವ ವಿಪತ್ತಿನ
ವೈಕೃತಿಗೆ ನಾನೊಬ್ಬನೇ ದಿಟ
ವಾಕೆವಾಳನೆ ಶಿವ ಶಿವಾಯೆಂದರಸ ಬಿಸುಸುಯ್ದ ॥47॥
೦೪೮ ಬನ್ದ ಮಾರ್ಕಣ್ಡೇಯ ...{Loading}...
ಬಂದ ಮಾರ್ಕಂಡೇಯ ಮುನಿಗಭಿ
ವಂದಿಸಿದನೀ ಬ್ರಹ್ಮ ಸೃಷ್ಟಿಯ
ಲಿಂದು ತಾನಲ್ಲದೆ ಸುಧಾಕರ ಸೂರ್ಯವಂಶದಲಿ
ಹಿಂದೆ ನಡೆದವರಾರು ಪರಿಭವ
ದಿಂದ ನಮ್ಮಂದದಲಿ ವಿಪಿನದೊ
ಳಿಂದುಮುಖಿಯರು ಭಂಗಪಟ್ಟರೆಯೆನುತ ಬಿಸುಸುಯ್ದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಬಂದ ಮಾರ್ಕಂಡೇಯ ಮುನಿಗಳಿಗೆ ವಂದಿಸಿ - ‘ಈ ಬ್ರಹ್ಮ ಸೃಷ್ಟಿಯಲ್ಲಿ ಚಂದ್ರವಂಶ - ಸೂರ್ಯವಂಶಗಳಲ್ಲಿ ನಾನಲ್ಲದೆ ಹಿಂದೆ ಹೀಗೆ ಸೋಲನ್ನು ಅನುಭವಿಸಿದವರುಂಟೆ ? ಹೆಂಡಿರನ್ನು ಅರಣ್ಯದಲ್ಲಿ ತೊಳಲಾಡಿಸಿದವರುಂಟೆ ?’ ಎಂದು ಧರ್ಮರಾಯನು ಕೇಳಿದನು.
ಮೂಲ ...{Loading}...
ಬಂದ ಮಾರ್ಕಂಡೇಯ ಮುನಿಗಭಿ
ವಂದಿಸಿದನೀ ಬ್ರಹ್ಮ ಸೃಷ್ಟಿಯ
ಲಿಂದು ತಾನಲ್ಲದೆ ಸುಧಾಕರ ಸೂರ್ಯವಂಶದಲಿ
ಹಿಂದೆ ನಡೆದವರಾರು ಪರಿಭವ
ದಿಂದ ನಮ್ಮಂದದಲಿ ವಿಪಿನದೊ
ಳಿಂದುಮುಖಿಯರು ಭಂಗಪಟ್ಟರೆಯೆನುತ ಬಿಸುಸುಯ್ದ ॥48॥
೦೪೯ ಎನಲು ನಕ್ಕನು ...{Loading}...
ಎನಲು ನಕ್ಕನು ಮುನಿಪನವನಿಪ
ಜನ ಶಿರೋಮಣಿ ಕೇಳು ನಿಮ್ಮೀ
ವನದೊಳಬುಜಾನನೆಯ ಕೊಂಡೋಡಲು ಜಯದ್ರಥನು
ಅನುಜರಾಗಳೆ ಹರಿದು ಮರಳಿಚಿ
ವನಜಮುಖಿಯನು ತಂದರವನನು
ನೆನೆಯಬಾರದ ವಿಧಿಯ ಮಾಡಿದರೆಂದನಾ ಮುನಿಪ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆನ್ನಲು ಮುನಿಯು ನಕ್ಕು ಹೇಳಿದನು - ‘ಅರಸ, ಕೇಳು. ನಿಮ್ಮ ಮಡದಿಯನ್ನು ಜಯದ್ರಥನು ಕದ್ದು ಅರಣ್ಯದಲ್ಲಿ ಓಡಲು, ನಿನ್ನ ತಮ್ಮಂದಿರು ಅವನನ್ನು ಹಿಂಬಾಲಿಸಿ ಅವಳನ್ನು ಮರಳಿ ತಂದರು. ಆ ದುಷ್ಟನಿಗೆ ಮತ್ತೆ ನೆನಪಿಸಿಕೊಳ್ಳಲಾರದಂತ ಶಿಕ್ಷೆಯನ್ನು ನೀಡಿದರು.’
ಮೂಲ ...{Loading}...
ಎನಲು ನಕ್ಕನು ಮುನಿಪನವನಿಪ
ಜನ ಶಿರೋಮಣಿ ಕೇಳು ನಿಮ್ಮೀ
ವನದೊಳಬುಜಾನನೆಯ ಕೊಂಡೋಡಲು ಜಯದ್ರಥನು
ಅನುಜರಾಗಳೆ ಹರಿದು ಮರಳಿಚಿ
ವನಜಮುಖಿಯನು ತಂದರವನನು
ನೆನೆಯಬಾರದ ವಿಧಿಯ ಮಾಡಿದರೆಂದನಾ ಮುನಿಪ ॥49॥
೦೫೦ ಅರಸ ಮುನಿಯದಿರಾವ ...{Loading}...
ಅರಸ ಮುನಿಯದಿರಾವ ಪಾಡಿನ
ನರಪತಿಗಳೈ ನೀವು ವಿಶ್ವಂ
ಭರಿಯ ಘನತೆಯ ಕೇಳಿದರಿಯಾ ಕೈಟಭಾಂತಕನ
ವರ ಮುನಿಯ ಶಾಪವನು ತಾನೇ
ಧರಿಸಿ ನರರೂಪಿನಲಿ ನವೆದುದ
ನರಸ ಬಣ್ಣಿಸಲೆನ್ನ ಹವಣಲ್ಲೆಂದನಾ ಮುನಿಪ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೊರೆಯೆ, ಬೇಸರಿಸಬೇಡ. ನೀವು ಎಷ್ಟರಮಟ್ಟಿಗಿನ ಅರಸರು ? ಭಗವಂತನಾದ ಶ್ರೀಮನ್ನಾರಾಯಣನೇ ಮುನಿಶಾಪದಿಂದ ಮನುಷ್ಯನಾಗಿ ಅವತರಿಸಿ ಸಂಕಟವನ್ನು ಅನುಭವಿಸಿದುದನ್ನು ವಿವರಿಸಲು ನನ್ನಿಂದ ಸಾಧ್ಯವಾಗದು’ ಎಂದನು.
ಟಿಪ್ಪನೀ (ಕ.ಗ.ಪ)
ಕೈಟಭ -
ಮೂಲ ...{Loading}...
ಅರಸ ಮುನಿಯದಿರಾವ ಪಾಡಿನ
ನರಪತಿಗಳೈ ನೀವು ವಿಶ್ವಂ
ಭರಿಯ ಘನತೆಯ ಕೇಳಿದರಿಯಾ ಕೈಟಭಾಂತಕನ
ವರ ಮುನಿಯ ಶಾಪವನು ತಾನೇ
ಧರಿಸಿ ನರರೂಪಿನಲಿ ನವೆದುದ
ನರಸ ಬಣ್ಣಿಸಲೆನ್ನ ಹವಣಲ್ಲೆಂದನಾ ಮುನಿಪ ॥50॥
೦೫೧ ಅಡವಿಯಲಿ ತೊಳಲಿದನು ...{Loading}...
ಅಡವಿಯಲಿ ತೊಳಲಿದನು ರಾಮನ
ಮಡದಿಯನು ರಕ್ಕಸನು ಕದ್ದನು
ನಡೆದು ಬಳಿಕರಸಿದನು ರಾಣೀವಾಸವನು ಕೂಡೆ
ಕಡಲ ಮಧ್ಯದ ಖಳನೊಡನೆ ಕೈ
ಹೊಡೆದುದಲ್ಲಿಗೆ ತೆತ್ತಿಗರು ನಾ
ಡಡವಿಗೋಡಗವಾಳು ಕುದುರೆಗಳಸುರ ವಿಗ್ರಹಕೆ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀರಾಮಚಂದ್ರನು ಅರಣ್ಯದಲ್ಲಿರುವಾಗ, ಅವನ ಹೆಂಡತಿಯನ್ನು ರಾವಣಾಸುರನು ಕದ್ದು ರಾಣೀವಾಸಕ್ಕೆ ಸೇರಿಸಿದನು. ಶ್ರೀರಾಮನು ಚಿಂತಿಸುತ್ತಾ ಹುಡುಕಾಡಿದನು. ಕೊನೆಗೆ ಲಂಕಾದ್ವೀಪದಲ್ಲಿದ್ದ ಆ ರಾಕ್ಷಸನೊಂದಿಗೆ ಅರಣ್ಯದ ಕಪಿಗಳನ್ನೇ ಬಳಸಿಕೊಂಡು ಹೋರಾಡ ಬೇಕಾಯಿತು.
ಪಾಠಾನ್ತರ (ಕ.ಗ.ಪ)
ಕೆಡಿಸಿ - ನಡೆದು
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಅಡವಿಯಲಿ ತೊಳಲಿದನು ರಾಮನ
ಮಡದಿಯನು ರಕ್ಕಸನು ಕದ್ದನು
ನಡೆದು ಬಳಿಕರಸಿದನು ರಾಣೀವಾಸವನು ಕೂಡೆ
ಕಡಲ ಮಧ್ಯದ ಖಳನೊಡನೆ ಕೈ
ಹೊಡೆದುದಲ್ಲಿಗೆ ತೆತ್ತಿಗರು ನಾ
ಡಡವಿಗೋಡಗವಾಳು ಕುದುರೆಗಳಸುರ ವಿಗ್ರಹಕೆ ॥51॥
೦೫೨ ಸಾಗರದ ತೆರೆಗಳಲಿ ...{Loading}...
ಸಾಗರದ ತೆರೆಗಳಲಿ ಗಿರಿಗಳ
ತೂಗಿ ಸೇನೆಯ ನಡೆಸಿ ದಶಮುಖ
ನಾಗ ಕೆಡಿಸಿದು ರಾಮ ರಮಣಿಯ ಬಿಡಿಸಿದಾಯಸವ
ಈಗಳೀ ನರರೇನನಾನುವ
ರಾ ಗರುವ ರಘುರಾಯ ವಜ್ರಕೆ
ಬೇಗಡೆಯ ವಿಧಿ ಮಾಡಿತೆಂದನು ಮುನಿ ನೃಪಾಲಂಗೆ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರದ ತೆರೆಗಳಿಗೆ ಪರ್ವತಗಳನ್ನೇ ಇಟ್ಟು, ಸೇತುವೆಯನ್ನು ರಚಿಸಿದನು. ಅದರಲ್ಲಿ ಕಪಿಸೇನೆಯನ್ನು ನಡೆಸಿ, ರಾವಣನನ್ನು ಕೊಂದು ಶ್ರೀರಾಮನು ತನ್ನ ಹೆಂಡತಿಯ ಸಂಕಟವನ್ನು ಪರಿಹರಿಸಿದನು. ಈಗಿನ ಮಾನವರ ಪರಿ ಎಂತಹುದು ? ಆ ವಜ್ರಸದೃಶನಾದ ಶ್ರೀರಾಮಚಂದ್ರನಿಗೆ ವಿಧಿಯು ಪಡಬಾರದ ಕಷ್ಟಗಳನ್ನು ತಂದೊಡ್ಡಿತು.’ ಎಂದು ಮುನಿಯು ಧರ್ಮರಾಯನಿಗೆ ವಿವರಿಸಿದನು.
ಮೂಲ ...{Loading}...
ಸಾಗರದ ತೆರೆಗಳಲಿ ಗಿರಿಗಳ
ತೂಗಿ ಸೇನೆಯ ನಡೆಸಿ ದಶಮುಖ
ನಾಗ ಕೆಡಿಸಿದು ರಾಮ ರಮಣಿಯ ಬಿಡಿಸಿದಾಯಸವ
ಈಗಳೀ ನರರೇನನಾನುವ
ರಾ ಗರುವ ರಘುರಾಯ ವಜ್ರಕೆ
ಬೇಗಡೆಯ ವಿಧಿ ಮಾಡಿತೆಂದನು ಮುನಿ ನೃಪಾಲಂಗೆ ॥52॥
೦೫೩ ಎನ್ದು ರಾಮಾಯಣವ ...{Loading}...
ಎಂದು ರಾಮಾಯಣವ ವಿಸ್ತರ
ದಿಂದ ಹೇಳಿದು ಸಂತವಿಟ್ಟನು
ಕಂದು ಕಸರಿಕೆಯಡಗಿತಾ ಧರ್ಮಜನ ಚಿತ್ತದಲಿ
ಸಂದಣಿಸೆ ತನುಪುಳಕ ಪರಮಾ
ನಂದ ರಸಮಯ ನಯನಜಲ ಭರ
ದಿಂದಲೆಸೆದರು ವೀರನಾರಾಯಣನ ಕರುಣದಲಿ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಮಾರ್ಕಂಡೇಯನು ರಾಮಾಯಣದ ಕಥೆಯನ್ನು ವಿಸ್ತಾರವಾಗಿ ಹೇಳಲು, ಧರ್ಮಜನ ಮನಸ್ಸಿನ ನೋವು ಮರೆಯಾಗಿ ಸಮಾಧಾನ ಉಂಟಾಯಿತು. ವೀರ ನಾರಾಯಣನ ಕೃಪೆಯಿಂದ ಅವರೆಲ್ಲರೂ ಸುಖಸಂತೋಷದಿಂದ ಇದ್ದರು.
ಮೂಲ ...{Loading}...
ಎಂದು ರಾಮಾಯಣವ ವಿಸ್ತರ
ದಿಂದ ಹೇಳಿದು ಸಂತವಿಟ್ಟನು
ಕಂದು ಕಸರಿಕೆಯಡಗಿತಾ ಧರ್ಮಜನ ಚಿತ್ತದಲಿ
ಸಂದಣಿಸೆ ತನುಪುಳಕ ಪರಮಾ
ನಂದ ರಸಮಯ ನಯನಜಲ ಭರ
ದಿಂದಲೆಸೆದರು ವೀರನಾರಾಯಣನ ಕರುಣದಲಿ ॥53॥