೦೦೦ ಸೂ ಮುನಿಗಳುಪ ...{Loading}...
ಸೂ. ಮುನಿಗಳುಪ ಕಥೆಯಲಿ ಯುಧಿಷ್ಠಿರ
ಜನಪತಿಯ ಸಂತೈಸಿ ಕಾಮ್ಯಕ
ವನದಿನಸುರಾರಾತಿ ಬಂದನು ದ್ವಾರಕಾಪುರಿಗೆ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕಾಮ್ಯಕವನದಲ್ಲಿ ಋಷಿಗಳು ಹೇಳಿದ ಉಪಕಥೆಯನ್ನು ಕೇಳುತ್ತಾ, ಧರ್ಮರಾಜನನ್ನು ಸಂತೈಸಿ, ಶ್ರೀಕೃಷ್ಣನು ದ್ವಾರಕಾ ಪುರಕ್ಕೆ ಹಿಂತಿರುಗಿದನು.
ಮೂಲ ...{Loading}...
ಸೂ. ಮುನಿಗಳುಪ ಕಥೆಯಲಿ ಯುಧಿಷ್ಠಿರ
ಜನಪತಿಯ ಸಂತೈಸಿ ಕಾಮ್ಯಕ
ವನದಿನಸುರಾರಾತಿ ಬಂದನು ದ್ವಾರಕಾಪುರಿಗೆ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಮಾರ್ಕಂಡೇಯ ಮುನಿಪತಿ
ಹೇಳಿದನು ವೇದೋಕ್ತ ಧರ್ಮದ ಸಾರ ಸಂಗತಿಯ
ಶೀಲಗುಣ ಸಚ್ಚರಿತನಲಿ ಸಂ
ಮೇಳವಿಸಿ ಮುದ್ಗಲ್ಯವಂಶ ವಿ
ಶಾಲನೊಬ್ಬನು ವಿಪ್ರನಿರ್ದನು ಬೊಮ್ಮಚರಿಯದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು. ವೇದೋಕ್ತ ಧರ್ಮವಿಚಾರಗಳನ್ನು ಮಾರ್ಕಂಡೇಯ ಮುನಿಯು ಧರ್ಮಜನಿಗೆ ಹೇಳಿದನು. ಮುದ್ಗಲವಂಶದಲ್ಲಿ ಒಬ್ಬ ಬ್ರಾಹ್ಮಣನು ಶೀಲ ಸದ್ಗುಣ ಸಚ್ಚಾರಿತ್ರ್ಯಗಳಿಂದೊಡಗೂಡಿ ಬ್ರಹ್ಮಚರ್ಯದಲ್ಲಿದ್ದನು.
ಪದಾರ್ಥ (ಕ.ಗ.ಪ)
ಬೊಮ್ಮಚರಿಯ - ಬ್ರಹ್ಮಚರ್ಯ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಮಾರ್ಕಂಡೇಯ ಮುನಿಪತಿ
ಹೇಳಿದನು ವೇದೋಕ್ತ ಧರ್ಮದ ಸಾರ ಸಂಗತಿಯ
ಶೀಲಗುಣ ಸಚ್ಚರಿತನಲಿ ಸಂ
ಮೇಳವಿಸಿ ಮುದ್ಗಲ್ಯವಂಶ ವಿ
ಶಾಲನೊಬ್ಬನು ವಿಪ್ರನಿರ್ದನು ಬೊಮ್ಮಚರಿಯದಲಿ ॥1॥
೦೦೨ ಧರಣಿಪತಿ ಕೇಳಾ ...{Loading}...
ಧರಣಿಪತಿ ಕೇಳಾ ಮಹೀಸುರ
ವರನು ವೇದಾಧ್ಯಯನ ಪರನನ
ವರತ ವಿದ್ಯಾಭ್ಯಾಸಶೀಲನು ವನದಲೊಂದು ದಿನ
ಮರದ ಮೊದಲಲಿ ವೇದ ಪಾಠದ
ಲಿರೆ ಮಹೀರುಹದಗ್ರದಲಿ ಸಂ
ಚರಿಸುತಿಹ ಖಗವಿಷ್ಠೆ ಬಿದ್ದುದು ಮೇಲೆ ಭೂಸುರನ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನೇ ಕೇಳು ಆ ಬ್ರಾಹ್ಮಣನು ಕಾಡಿನಲ್ಲಿ ಒಂದು ಮರದ ಕೆಳಗೆ ಕುಳಿತು ವೇದಾಧ್ಯಯನಪರನಾಗಿರಲು, ಮರದ ತುದಿಯಿಂದ ಹಕ್ಕಿಯೊಂದರ ಹಿಕ್ಕೆ ಅವನ ಮೇಲೆ ಬಿದ್ದಿತು.
ಪದಾರ್ಥ (ಕ.ಗ.ಪ)
ಖಗವಿಷ್ಟೆ - ಹಕ್ಕಿಯ ಹಿಕ್ಕೆ
ಮೂಲ ...{Loading}...
ಧರಣಿಪತಿ ಕೇಳಾ ಮಹೀಸುರ
ವರನು ವೇದಾಧ್ಯಯನ ಪರನನ
ವರತ ವಿದ್ಯಾಭ್ಯಾಸಶೀಲನು ವನದಲೊಂದು ದಿನ
ಮರದ ಮೊದಲಲಿ ವೇದ ಪಾಠದ
ಲಿರೆ ಮಹೀರುಹದಗ್ರದಲಿ ಸಂ
ಚರಿಸುತಿಹ ಖಗವಿಷ್ಠೆ ಬಿದ್ದುದು ಮೇಲೆ ಭೂಸುರನ ॥2॥
೦೦೩ ಮೇಲೆ ನೋಡಿದಡಧಿಕ ...{Loading}...
ಮೇಲೆ ನೋಡಿದಡಧಿಕ ರೋಷ
ಜ್ವಾಲೆಯಲಿ ಗರಿ ಸೀದು ಧರಣಿಯ
ಮೇಲೆ ಬಿದ್ದುದು ವಿಹಗವೀತನ ಮುಂದೆ ತನು ಬೆಂದು
ಲೀಲೆಯಲಿ ಭೂದೇವನಲ್ಲಿಂ
ಮೇಲೆ ಭಿಕ್ಷಾಟನಕೆ ಭೂಸುರ
ರಾಲಯದ ಹಂತಿಯಲಿ ಹೊಕ್ಕನು ರಾಯ ಕೇಳ್ ಎಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದರಿಂದ ಸಿಟ್ಟುಗೊಂಡ ಅವನು ಮೇಲೆ ನೋಡಿದಾಗ, ಆ ಪಕ್ಷಿಯು ಅವನ ಕೋಪದ ಬೆಂಕಿಯಿಂದ ಸುಟ್ಟು ಕೆಳಗೆ ಬಿದ್ದಿತು. ಇದಾದ ಬಳಿಕ ಆ ಬ್ರಾಹ್ಮಣನು ಭಿಕ್ಷಾಟನೆಗಾಗಿ ಬ್ರಾಹ್ಮಣರ ಬೀದಿಯನ್ನು ಹೊಕ್ಕನು.
ಪದಾರ್ಥ (ಕ.ಗ.ಪ)
ಹಂತಿ - ಸಾಲು
ಮೂಲ ...{Loading}...
ಮೇಲೆ ನೋಡಿದಡಧಿಕ ರೋಷ
ಜ್ವಾಲೆಯಲಿ ಗರಿ ಸೀದು ಧರಣಿಯ
ಮೇಲೆ ಬಿದ್ದುದು ವಿಹಗವೀತನ ಮುಂದೆ ತನು ಬೆಂದು
ಲೀಲೆಯಲಿ ಭೂದೇವನಲ್ಲಿಂ
ಮೇಲೆ ಭಿಕ್ಷಾಟನಕೆ ಭೂಸುರ
ರಾಲಯದ ಹಂತಿಯಲಿ ಹೊಕ್ಕನು ರಾಯ ಕೇಳೆಂದ ॥3॥
೦೦೪ ಒನ್ದು ಮನೆಯಲಿ ...{Loading}...
ಒಂದು ಮನೆಯಲಿ ಭಿಕ್ಷಕೋಸುಗ
ನಿಂದನಾ ಮನೆಯಾಕೆ ಭಿಕ್ಷವ
ತಂದಪೆನು ನಿಲ್ಲೆನುತ ಪತಿ ಪರಿಚರ್ಯೆಯನು ಮಾಡಿ
ತಂದು ಭಿಕ್ಷವ ಹಿಡಿಯೆನಲ್ ದ್ವಿಜ
ನಂದು ಮುನಿದೀಕ್ಷಿಸಿದೊಡಾ ಸತಿ
ಯೆಂದಳೆಲೆ ಮರುಳೇ ಕುಜಾಗ್ರದ ವಿಹಗನಲ್ಲೆಂದು ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆ ಅವನು ಬಂದು ಒಂದು ಮನೆಯ ಮುಂದೆ ಭಿಕ್ಷೆಗಾಗಿ ನಿಲ್ಲಲು, ಆ ಮನೆಯಾಕೆಯು ‘ಸ್ವಲ್ಪ ತಾಳು, ಭಿಕ್ಷೆಯನ್ನು ತರುತ್ತೇನೆ’ ಎಂದು ಹೇಳಿ ಒಳಗೆ ಹೋಗಿ ತನ್ನ ಪತಿ ಸೇವೆಯನ್ನು ಮಾಡಿ ಬಳಿಕ ಭಿಕ್ಷೆಯನ್ನು ನೀಡಿದಳು. ಆಗ ಆ ವಿಪ್ರನು ಸಿಟ್ಟಿನಿಂದ ನೋಡಲು, ಗೃಹಿಣಿಯು ‘ಎಲೆ ಮರುಳನೇ, ನಾನೇನು ಮರದ ಮೇಲಿನ ಪಕ್ಷಿಯಲ್ಲ’ ಎಂದಳು.
ಮೂಲ ...{Loading}...
ಒಂದು ಮನೆಯಲಿ ಭಿಕ್ಷಕೋಸುಗ
ನಿಂದನಾ ಮನೆಯಾಕೆ ಭಿಕ್ಷವ
ತಂದಪೆನು ನಿಲ್ಲೆನುತ ಪತಿ ಪರಿಚರ್ಯೆಯನು ಮಾಡಿ
ತಂದು ಭಿಕ್ಷವ ಹಿಡಿಯೆನಲ್ ದ್ವಿಜ
ನಂದು ಮುನಿದೀಕ್ಷಿಸಿದೊಡಾ ಸತಿ
ಯೆಂದಳೆಲೆ ಮರುಳೇ ಕುಜಾಗ್ರದ ವಿಹಗನಲ್ಲೆಂದು ॥4॥
೦೦೫ ಬೆರಗಿನೊಳು ...{Loading}...
ಬೆರಗಿನೊಳು ದ್ವಿಜನಿರ್ದನಿದನೆಂ
ತರಿತಳೆನುತೆಲೆ ವಿಪ್ರ ನಿಗಮವ
ನರಿಯೆ ಧರ್ಮರಹಸ್ಯ ತತ್ವದ ಸಾರ ಸಂಗತಿಯ
ಅರಿದು ಪತಿಪರಿಚರ್ಯದಲಿ ಕೈ
ಮರೆಯದಾರಾಗಲಿ ಸುಧರ್ಮದೊ
ಳೆರಕವುಳ್ಳೊಡೆ ಧನ್ಯರೆಂದಳು ಕಾಂತೆ ಭೂಸುರಗೆ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಕೆಗೆ ಈ ವಿಚಾರ ಹೇಗೆ ತಿಳಿಯಿತೆಂದು ವಿಪ್ರನಿಗೆ ಆಶ್ಚರ್ಯವಾಯಿತು. ಆಗ ಆಕೆ - ‘ಎಲೆ ವಿಪ್ರನೆ, ವೇದವನ್ನು ನಾನು ತಿಳಿದಿಲ್ಲ. ಆದರೆ ಧರ್ಮ ರಹಸ್ಯ ತತ್ತ್ವಜ್ಞಾನವನ್ನು ತಿಳಿದು ಪತಿಸೇವೆಯಲ್ಲಿ ತನ್ಮಯಳಾಗಿರುತ್ತೇನೆ. ಧರ್ಮದಲ್ಲಿ ಯಾರೇ ಆಗಲಿ, ಪ್ರೀತಿ ಹೊಂದಿದ್ದರೆ ಅವರೇ ಧನ್ಯರು’ ಎಂದು ಬ್ರಾಹ್ಮಣನಿಗೆ ಹೇಳಿದಳು.
ಮೂಲ ...{Loading}...
ಬೆರಗಿನೊಳು ದ್ವಿಜನಿರ್ದನಿದನೆಂ
ತರಿತಳೆನುತೆಲೆ ವಿಪ್ರ ನಿಗಮವ
ನರಿಯೆ ಧರ್ಮರಹಸ್ಯ ತತ್ವದ ಸಾರ ಸಂಗತಿಯ
ಅರಿದು ಪತಿಪರಿಚರ್ಯದಲಿ ಕೈ
ಮರೆಯದಾರಾಗಲಿ ಸುಧರ್ಮದೊ
ಳೆರಕವುಳ್ಳೊಡೆ ಧನ್ಯರೆಂದಳು ಕಾಂತೆ ಭೂಸುರಗೆ ॥5॥
೦೦೬ ಇಲ್ಲಿಗಿದೆ ನಾಲ್ಕೈದು ...{Loading}...
ಇಲ್ಲಿಗಿದೆ ನಾಲ್ಕೈದು ಯೋಜನ
ದಲ್ಲಿ ಪಟ್ಟಣವದರೊಳೊಬ್ಬನು
ಬಲ್ಲನಗ್ಗದ ಧರ್ಮಮುದ್ರಾಘಟನ ವಿಘಟನವ
ಅಲ್ಲಿಗೈದುವುದಾತನಲಿ ನೀ
ನೆಲ್ಲವನು ತಿಳಿ ನಿನ್ನ ಚಿತ್ತದೊ
ಳಿಲ್ಲಲೇ ಪರಿಪಾಕವೆಂದುಪದೇಶಿಸಿದಳಬಲೆ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇಲ್ಲಿಗೆ ನಾಲ್ಕೈದು ಯೋಜನ ದೂರದಲ್ಲಿರುವ ಪಟ್ಟಣದಲ್ಲಿ ಒಬ್ಬನು ಧರ್ಮದ ಸೂಕ್ಷ್ಮಸಂಗತಿಯನ್ನು ತಿಳಿದವನಿದ್ದಾನೆ. ಚಿತ್ತಪರಿಪಾಕವಿಲ್ಲದ ನೀನು ಅಲ್ಲಿಗೆ ಹೋಗಿ ಎಲ್ಲವನ್ನು ತಿಳಿದುಕೊ’ ಎಂದು ಅವಳು ಉಪದೇಶಿಸಿದಳು.
ಪದಾರ್ಥ (ಕ.ಗ.ಪ)
ವಿಘಟನ - ನಾಶ
ಮೂಲ ...{Loading}...
ಇಲ್ಲಿಗಿದೆ ನಾಲ್ಕೈದು ಯೋಜನ
ದಲ್ಲಿ ಪಟ್ಟಣವದರೊಳೊಬ್ಬನು
ಬಲ್ಲನಗ್ಗದ ಧರ್ಮಮುದ್ರಾಘಟನ ವಿಘಟನವ
ಅಲ್ಲಿಗೈದುವುದಾತನಲಿ ನೀ
ನೆಲ್ಲವನು ತಿಳಿ ನಿನ್ನ ಚಿತ್ತದೊ
ಳಿಲ್ಲಲೇ ಪರಿಪಾಕವೆಂದುಪದೇಶಿಸಿದಳಬಲೆ ॥6॥
೦೦೭ ಹೆಸರು ಧರ್ಮವ್ಯಾಧನಾತನ ...{Loading}...
ಹೆಸರು ಧರ್ಮವ್ಯಾಧನಾತನ
ದೆಸೆಯೊಳರಿ ಹೋಗೆನಲು ಬಂದನು
ವಸುಧೆಯಮರನು ನಗರಿಗಾ ಸತಿ ಕೊಟ್ಟ ಕುರುಹಿನಲಿ
ಹಸಿದು ಬೀದಿಗಳೊಳಗೆ ತೊಳಲಿದು
ಗಸಣಿಗೊಳುತ ಪುರಾಂತದಲಿ ಕ
ರ್ಕಶ ಪುಳಿಂದರ ಕೇರಿಯಿರೆ ಕಂಡಲ್ಲಿಗೈತಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನ ಹೆಸರು ಧರ್ಮವ್ಯಾಧನೆಂದು. ಅವನಲ್ಲಿಗೆ ಹೋಗಿ ತಿಳಿದುಕೊ ಎನ್ನಲು, ಆ ಬ್ರಾಹ್ಮಣನು ಅವನಿರುವ ಪಟ್ಟಣಕ್ಕೆ ಬಂದನು. ಗೃಹಿಣಿಯು ಹೇಳಿದ ಗುರುತಿನ ಪ್ರಕಾರ ಬೀದಿಗಳನ್ನು ಹುಡುಕುತ್ತಾ, ಹಸಿವಿನಿಂದ ತೊಳಲಿ, ಕೊನೆಗೆ ಬೇಡರ ಕೇರಿಯನ್ನು ಕಂಡು ಅಲ್ಲಿಗೆ ಬಂದನು.
ಪದಾರ್ಥ (ಕ.ಗ.ಪ)
ಗಸಣಿ - ಚಿಂತೆ
ಮೂಲ ...{Loading}...
ಹೆಸರು ಧರ್ಮವ್ಯಾಧನಾತನ
ದೆಸೆಯೊಳರಿ ಹೋಗೆನಲು ಬಂದನು
ವಸುಧೆಯಮರನು ನಗರಿಗಾ ಸತಿ ಕೊಟ್ಟ ಕುರುಹಿನಲಿ
ಹಸಿದು ಬೀದಿಗಳೊಳಗೆ ತೊಳಲಿದು
ಗಸಣಿಗೊಳುತ ಪುರಾಂತದಲಿ ಕ
ರ್ಕಶ ಪುಳಿಂದರ ಕೇರಿಯಿರೆ ಕಂಡಲ್ಲಿಗೈತಂದ ॥7॥
೦೦೮ ಬಸೆ ನೆಣನ ...{Loading}...
ಬಸೆ ನೆಣನ ಸುಂಟಿಗೆಯ ಹರಹಿದ
ಹಸಿಯ ತೊಗಲಿನ ತಳಿತ ಖಂಡದ
ಹಸರದುರುಗಲ ಕಾಳಿಜದ ಜಂಗಡೆಯ ಗಳಗೆಗಳ
ಬಸೆಯ ಹರವಿಯ ಸಾಲ ತೊರಳೆಗೆ
ಬೆಸಳಿಗೆಯ ಕುರಿದಲೆಯ ಹಂತಿಯ
ಕುಸುರಿದೆಲುವಿನ ಕೋದ ಮೀನಂಗಡಿಯಲೈತಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಬ್ಬು , ಮೇದಸ್ಸು, ಮಾಂಸ, ಹರಡಿದ ಹಸಿ ಚರ್ಮ, ಕತ್ತರಿಸಿ ಹರಡಿದ ಮಾಂಸಖಂಡಗಳು, ಪಿತ್ತಾಶಯ ಮತ್ತು ಮಾಂಸಗಳ ಬುಟ್ಟಿ , ಮಾಂಸವನ್ನು ತುಂಬಿದ್ದ ಮಡಕೆಗಳ ಸಾಲು, ಗುಲ್ಮಗಳನ್ನು ಇಟ್ಟಿದ್ದ ಬಾಣಲೆಗಳು ಕುರಿಗಳ ತಲೆಗಳ ಸಾಲು ಜೋಡಿಸಿಟ್ಟ ಎಲುಬುಗಳು ಮತ್ತು, ಮೀನಿನ ಅಂಗಡಿಗಳ ಮುಂದೆ ಬಂದನು.
ಪದಾರ್ಥ (ಕ.ಗ.ಪ)
ಬಸೆ - ಕೊಬ್ಬು
ನೆಣ - ಮೇದಸ್ಸು
ಸುಂಟಿಗೆ - ಮಾಂಸ
ಕಾಳಿಜ - ಪಿತ್ತಾಶಯ
ಜಂಗಡೆ -ಮಾಂಸ
ಗಳಗೆ - ಬುಟ್ಟಿ
ತೊರಳೆ - ಗುಲ್ಮ
ಬೆಸಳಿಗೆ - ಬಾಣಲೆ
ಕೋದ - ಜೋಡಿಸಿದ
ಮೂಲ ...{Loading}...
ಬಸೆ ನೆಣನ ಸುಂಟಿಗೆಯ ಹರಹಿದ
ಹಸಿಯ ತೊಗಲಿನ ತಳಿತ ಖಂಡದ
ಹಸರದುರುಗಲ ಕಾಳಿಜದ ಜಂಗಡೆಯ ಗಳಗೆಗಳ
ಬಸೆಯ ಹರವಿಯ ಸಾಲ ತೊರಳೆಗೆ
ಬೆಸಳಿಗೆಯ ಕುರಿದಲೆಯ ಹಂತಿಯ
ಕುಸುರಿದೆಲುವಿನ ಕೋದ ಮೀನಂಗಡಿಯಲೈತಂದ ॥8॥
೦೦೯ ಬರಬರಲು ದೂರದಲಿ ...{Loading}...
ಬರಬರಲು ದೂರದಲಿ ವಿಪ್ರನ
ಬರವ ಕಂಡಿದಿರಾಗಿ ಬಂದುಪ
ಚರಿಸಿದನು ಬಂದೈ ಪತಿವ್ರತೆಯೆನ್ನ ದೂರಿದಳೆ
ಧರಣಿಯಮರೋತ್ತಮರಿಗಿದು ಸಂ
ಚರಣೆ ಯೋಗ್ಯ ಸ್ಥಾನವಲ್ಲಾ
ದರಿಸುವೊಡೆ ಬಾಯೆನುತ ತನ್ನಾಲಯಕೆ ಕೊಂಡೊಯ್ದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೂರದಲ್ಲಿ ಬರುತ್ತಿರುವ ಬ್ರಾಹ್ಮಣನನ್ನು ಕಂಡು, ಆ ವ್ಯಾಧನು ಎದುರು ಬಂದು ಉಪಚರಿಸುತ್ತಾ ‘ಬಂದಿರಾ, ಆ ಪತಿವ್ರತೆ ನನ್ನನ್ನು ದೂರಿದಳೆ ? ಬ್ರಾಹ್ಮಣರಿಗೆ ಇದು ಸಂಚಾರ ಯೋಗ್ಯ ಪ್ರದೇಶವಲ್ಲ. ಆತಿಥ್ಯ ಸ್ವೀಕರಿಸುವುದಾದಲ್ಲಿ ನಮ್ಮ ಮನೆಗೆ ಬನ್ನಿ’ ಎಂದು ಕರೆದುಕೊಂಡು ಹೋದನು.
ಮೂಲ ...{Loading}...
ಬರಬರಲು ದೂರದಲಿ ವಿಪ್ರನ
ಬರವ ಕಂಡಿದಿರಾಗಿ ಬಂದುಪ
ಚರಿಸಿದನು ಬಂದೈ ಪತಿವ್ರತೆಯೆನ್ನ ದೂರಿದಳೆ
ಧರಣಿಯಮರೋತ್ತಮರಿಗಿದು ಸಂ
ಚರಣೆ ಯೋಗ್ಯ ಸ್ಥಾನವಲ್ಲಾ
ದರಿಸುವೊಡೆ ಬಾಯೆನುತ ತನ್ನಾಲಯಕೆ ಕೊಂಡೊಯ್ದ ॥9॥
೦೧೦ ಒಳಗೆ ಮಞ್ಚದ ...{Loading}...
ಒಳಗೆ ಮಂಚದ ಮೇಲೆ ನಡುಗುವ
ತಲೆಯ ತೆರಳಿದ ಮೈಯ್ಯ ಬೆಳುಪಿನ
ತಲೆನವಿರ ತಗ್ಗಿದ ಶರೀರದ ನೆಗ್ಗಿದವಯವದ
ತಳಿತ ಸೆರೆಗಳ ತಾರಿದಾನನ
ದಿಳಿದ ಹುಬ್ಬಿನ ಹುದಿದ ಕಣ್ಗಳ
ಚಲಿತ ವಚನದ ವೃದ್ಧರನು ತೋರಿದನು ಮುನಿಸುತಗೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನೆಯೊಳಗೆ ಮಂಚದ ಮೇಲೆ ನಡುಗುತ್ತಿರುವ ತಲೆಯ, ಕಂಪಿಸುತ್ತಿರುವ ದೇಹದ , ಬೆಳ್ಳಗಾಗಿರುವ ಕೂದಲಿನ, ಬಾಗಿರುವ ಬೆನ್ನಿನ , ಕ್ಷೀಣವಾಗಿರುವ ಅಂಗಾಂಗಗಳ, ನರಗಳು ಉಬ್ಬಿರುವ ಕೊರಳಿನ, ಕಾಂತಿಹೀನವಾಗಿರುವ ಮುಖದ, ಹುಬ್ಬು ಜೋತುಬಿದ್ದಿರುವ ಹುಬ್ಬಿನ , ಗುಳಿ ಬಿದ್ದಿರುವ ಕಣ್ಣುಗಳ ನಡುಗುತ್ತಿರುವ ಸ್ವರದ ವೃದ್ಧರನ್ನು ಮುನಿಸುತನಿಗೆ ತೋರಿಸಿದನು.
ಮೂಲ ...{Loading}...
ಒಳಗೆ ಮಂಚದ ಮೇಲೆ ನಡುಗುವ
ತಲೆಯ ತೆರಳಿದ ಮೈಯ್ಯ ಬೆಳುಪಿನ
ತಲೆನವಿರ ತಗ್ಗಿದ ಶರೀರದ ನೆಗ್ಗಿದವಯವದ
ತಳಿತ ಸೆರೆಗಳ ತಾರಿದಾನನ
ದಿಳಿದ ಹುಬ್ಬಿನ ಹುದಿದ ಕಣ್ಗಳ
ಚಲಿತ ವಚನದ ವೃದ್ಧರನು ತೋರಿದನು ಮುನಿಸುತಗೆ ॥10॥
೦೧೧ ಇವರು ಮಾತಾಪಿತೃಗಳೆನ್ನಯ ...{Loading}...
ಇವರು ಮಾತಾಪಿತೃಗಳೆನ್ನಯ
ಯುವತಿಯಿವಳಿವನೆನ್ನ ಮಗನಿಂ
ತಿವರ ರಕ್ಷೆಗೆ ಬೇಂಟೆಯಾಡುವೆನಡವಿಯಡವಿಯಲಿ
ಕವಲುಗೋಲಲಿ ಮೃಗಗಣವ ಕೊಂ
ದವನು ತಹೆನಂಗಡಿಯಲವ ಮಾ
ರುವೆನು ಲೋಭವನಿಲ್ಲಿ ಮಾಡೆನು ವಿಪ್ರ ಕೇಳ್ ಎಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇವರು ನನ್ನ ತಂದೆತಾಯಿಗಳು. ಇವಳು ನನ್ನ ಹೆಂಡತಿ . ಇವನು ನನ್ನ ಮಗನು. ಇವರನ್ನು ಸಾಕುವುದಕ್ಕಾಗಿ ನಾನು ಕಾಡಿನಲ್ಲಿ ಬೇಟೆಯಾಡುತ್ತೇನೆ. ಕವಲುಬಾಣಗಳಲ್ಲಿ ಪ್ರಾಣಿಗಳನ್ನು ಕೊಂದು ತಂದು ಈ ಅಂಗಡಿಯಲ್ಲಿ ಮಾರುತ್ತೇನೆ. ಇದರಲ್ಲಿ ನಾನು ಲೋಭವನ್ನು ಮಾಡುವುದಿಲ್ಲ’ ಎಂದನು.
ಮೂಲ ...{Loading}...
ಇವರು ಮಾತಾಪಿತೃಗಳೆನ್ನಯ
ಯುವತಿಯಿವಳಿವನೆನ್ನ ಮಗನಿಂ
ತಿವರ ರಕ್ಷೆಗೆ ಬೇಂಟೆಯಾಡುವೆನಡವಿಯಡವಿಯಲಿ
ಕವಲುಗೋಲಲಿ ಮೃಗಗಣವ ಕೊಂ
ದವನು ತಹೆನಂಗಡಿಯಲವ ಮಾ
ರುವೆನು ಲೋಭವನಿಲ್ಲಿ ಮಾಡೆನು ವಿಪ್ರ ಕೇಳೆಂದ ॥11॥
೦೧೨ ದೊರಕಿದನಿತಾ ದ್ರವ್ಯದಲಿ ...{Loading}...
ದೊರಕಿದನಿತಾ ದ್ರವ್ಯದಲಿ ವಿ
ಸ್ತರಿಸುವೆನು ಸಕುಟುಂಬವಿದನೇ
ಹೊರೆವೆನಾರ್ಜಿಸುವೆನು ಕುಟುಂಬಕೆ ತಕ್ಕನಿತು ಧನವ
ನಿರುತವಿದು ಮಾತಾಪಿತರ ಪರಿ
ಚರಿಯದಲಿ ರಾಗಾದಿ ದೋಷಾ
ಚರಣವದು ಮನ ವಚನ ಕಾಯದಲಿಲ್ಲ ತನಗೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಷ್ಟು ದ್ರವ್ಯ ದೊರಕುತ್ತದೆಯೋ ಅಷ್ಟರಲ್ಲಿ ಕುಟುಂಬವನ್ನು ಪಾಲಿಸುತ್ತೇನೆ. ಕುಟುಂಬಕ್ಕೆ ಬೇಕಾದಷ್ಟು ಹಣವನ್ನು ಮಾತ್ರ ಸಂಪಾದಿಸುತ್ತೇನೆ. ಇದು ಸತ್ಯ. ತಂದೆ ತಾಯಂದಿರ ಸೇವೆಯಲ್ಲಿ ನಾನು ಮನೋ ವಾಕ್ ಕಾಯಗಳಲ್ಲಿ ರಾಗದ್ವೇಷವೇ ಮೊದಲಾದವನ್ನು ಕೈಗೊಳ್ಳದೆ ಇರುತ್ತೇನೆ’ ಎಂದನು.
ಮೂಲ ...{Loading}...
ದೊರಕಿದನಿತಾ ದ್ರವ್ಯದಲಿ ವಿ
ಸ್ತರಿಸುವೆನು ಸಕುಟುಂಬವಿದನೇ
ಹೊರೆವೆನಾರ್ಜಿಸುವೆನು ಕುಟುಂಬಕೆ ತಕ್ಕನಿತು ಧನವ
ನಿರುತವಿದು ಮಾತಾಪಿತರ ಪರಿ
ಚರಿಯದಲಿ ರಾಗಾದಿ ದೋಷಾ
ಚರಣವದು ಮನ ವಚನ ಕಾಯದಲಿಲ್ಲ ತನಗೆಂದ ॥12॥
೦೧೩ ಭೂತ ಹಿಂಸೆಯಿದಲ್ಲ ...{Loading}...
ಭೂತ ಹಿಂಸೆಯಿದಲ್ಲ ನಮಗಿದು
ಮಾತೃಪಿತೃ ರಕ್ಷಾರ್ಥವೆಮ್ಮಯ
ಜಾತಿ ಧರ್ಮವು ಮಾಂಸ ವಿಕ್ರಯ ಮೃಗವಧಾದಿಗಳು
ಜಾತಿಧರ್ಮತ್ಯಾಗ ಕರ್ಮ ವಿ
ಜಾತಿ ಧರ್ಮಗ್ರಹಣವೇ ವಿ
ಖ್ಯಾತ ಕುಂಭೀಪಾಕಸಾಧನ ವಿಪ್ರ ಕೇಳ್ ಎಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಜೀವಹಿಂಸೆಯಲ್ಲ. ನಮಗೆ ಇದು ತಾಯ್ತಂದೆಯರ ಪಾಲನೆ. ನಮಗೆ ಮೃಗಗಳನ್ನು ಕೊಂದು ಮಾಂಸವನ್ನು ಮಾರುವುದು ಜಾತಿಧರ್ಮವೇ ಆಗಿದೆ. ನಮ್ಮ ಜಾತಿಯ ಧರ್ಮವನ್ನು ತ್ಯಜಿಸಿ, ಬೇರೆ ಜಾತಿಯ ಕರ್ಮದಲ್ಲಿ ತೊಡಗುವುದು ನರಕಕ್ಕೆ ಕಾರಣ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಕುಂಭೀಪಾಕ - ಜೀವಹಿಂಸೆ ಮಾಡಿದವರು ಹೋಗುವ ನರಕ
ಹೇತು - ಕಾರಣ
ಮೂಲ ...{Loading}...
ಭೂತ ಹಿಂಸೆಯಿದಲ್ಲ ನಮಗಿದು
ಮಾತೃಪಿತೃ ರಕ್ಷಾರ್ಥವೆಮ್ಮಯ
ಜಾತಿ ಧರ್ಮವು ಮಾಂಸ ವಿಕ್ರಯ ಮೃಗವಧಾದಿಗಳು
ಜಾತಿಧರ್ಮತ್ಯಾಗ ಕರ್ಮ ವಿ
ಜಾತಿ ಧರ್ಮಗ್ರಹಣವೇ ವಿ
ಖ್ಯಾತ ಕುಂಭೀಪಾಕಸಾಧನ ವಿಪ್ರ ಕೇಳೆಂದ ॥13॥
೦೧೪ ವಿತಥ ಭಾಷಿತವನ್ಯವಿತ್ತಾ ...{Loading}...
ವಿತಥ ಭಾಷಿತವನ್ಯವಿತ್ತಾ
ಹೃತಿ ಪರ ವ್ಯಾಪಾದವಾತ್ಮ
ಸ್ತುತಿ ಪರಸ್ತ್ರೀವ್ಯಸನವತ್ಯಾಚಾರ ಬಕವೃತ್ತಿ
ಕೃತ ವಿನಾಶನ ಡಂಭ ಹಿಂಸಾ
ರತಿ ನಿಜಾನ್ವಯ ಧರ್ಮ ಕರ್ಮ
ಚ್ಯುತಿಗಳಿವು ದೋಷಾಂಕುರಂಗಳು ವಿಪ್ರ ಕೇಳ್ ಎಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸುಳ್ಳು ಹೇಳುವುದು, ಅನ್ಯರ ಧನವನ್ನು ಅಪಹರಿಸುವುದು, ದ್ರೋಹಚಿಂತನೆ, ಆತ್ಮ ಪ್ರಶಂಸೆ, ಪರನಾರೀ ವ್ಯಾಮೋಹ, ಅತ್ಯಾಚಾರ, ಮೋಸದಿಂದ ಇನ್ನೊಬ್ಬರನ್ನು ಹಿಂಸಿಸುವುದು, ಡಂಭಾಚಾರ, ಹಿಂಸೆ, ಇವುಗಳೆಲ್ಲಾ ನಮ್ಮ ಸ್ವಧರ್ಮದ ವಿನಾಶಕ್ಕೆ ಕಾರಣವಾಗಿ ದೋಷಕಾರಿಯೆನಿಸುತ್ತವೆ’ ಎಂದನು.
ಪದಾರ್ಥ (ಕ.ಗ.ಪ)
ವ್ಯಾಪಾದ - ದ್ರೋಹಚಿಂತನೆ, ಹಿಂಸಾ ಬುದ್ಧಿ
ಮೂಲ ...{Loading}...
ವಿತಥ ಭಾಷಿತವನ್ಯವಿತ್ತಾ
ಹೃತಿ ಪರ ವ್ಯಾಪಾದವಾತ್ಮ
ಸ್ತುತಿ ಪರಸ್ತ್ರೀವ್ಯಸನವತ್ಯಾಚಾರ ಬಕವೃತ್ತಿ
ಕೃತ ವಿನಾಶನ ಡಂಭ ಹಿಂಸಾ
ರತಿ ನಿಜಾನ್ವಯ ಧರ್ಮ ಕರ್ಮ
ಚ್ಯುತಿಗಳಿವು ದೋಷಾಂಕುರಂಗಳು ವಿಪ್ರ ಕೇಳೆಂದ ॥14॥
೦೧೫ ಸಾಙ್ಗ ವೇದಾಧ್ಯಯನ ...{Loading}...
ಸಾಂಗ ವೇದಾಧ್ಯಯನ ಸಜ್ಜನ
ಸಂಗ ಶಾಸ್ತ್ರ ಶ್ರವಣ ತೃಷ್ಣಾ
ಭಂಗ ಯಜನಾಧ್ಯಾನ ಮೌನವ್ರತ ಸದಾಚಾರ
ಮಾಂಗಲಿಕ ಕರ್ಮಾಭಿಯೋಗ ಕು
ಲಾಂಗನಾ ರತಿಯಾತ್ಮಚಿಂತೆ ಪ
ರಾಂಗನಾ ವೈಮುಖ್ಯವಿವು ಸದ್ಧರ್ಮ ಗತಿಯೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ವೇದಾಧ್ಯಯನ, ಸಜ್ಜನಸಂಗ, ಶಾಸ್ತ್ರ ಶ್ರವಣ, ಯಾಗ, ಧ್ಯಾನ, ಮೌನವ್ರತ, ಸದಾಚಾರ, ಮಂಗಲಕಾರ್ಯ ಪ್ರಸಕ್ತಿ, ಧರ್ಮಪತ್ನಿಯಲ್ಲಿ ಅನುರಕ್ತಿ, ಪರನಾರಿಯರಲ್ಲಿ ವಿಮುಖತೆ ಇವುಗಳು ಸದ್ಧರ್ಮಗತಿಗಳು’ ಎಂದನು.
ಪದಾರ್ಥ (ಕ.ಗ.ಪ)
ಮಾಂಗಲಿಕ - ಮಂಗಳಕರವಾದ
ಮೂಲ ...{Loading}...
ಸಾಂಗ ವೇದಾಧ್ಯಯನ ಸಜ್ಜನ
ಸಂಗ ಶಾಸ್ತ್ರ ಶ್ರವಣ ತೃಷ್ಣಾ
ಭಂಗ ಯಜನಾಧ್ಯಾನ ಮೌನವ್ರತ ಸದಾಚಾರ
ಮಾಂಗಲಿಕ ಕರ್ಮಾಭಿಯೋಗ ಕು
ಲಾಂಗನಾ ರತಿಯಾತ್ಮಚಿಂತೆ ಪ
ರಾಂಗನಾ ವೈಮುಖ್ಯವಿವು ಸದ್ಧರ್ಮ ಗತಿಯೆಂದ ॥15॥
೦೧೬ ಧನಮದವ ಸತ್ಕುಲ ...{Loading}...
ಧನಮದವ ಸತ್ಕುಲ ಮದವ ಯೌ
ವನ ಮದವ ವಿದ್ಯಾಮದವ ಪರಿ
ಜನ ಮದವ ವೈಭವ ಮದವನಾಚಾರಪದ ಮದವ
ಮನನದಿಂ ಶ್ರವಣದಿ ನಿಧಿ ಧ್ಯಾ
ಸನದಿನಿವಗಳನೊತ್ತಿ ವಿದ್ಯಾ
ವಿನಯ ಸೌಶೀಲ್ಯದಲಿ ನಡೆವುದು ವಿಪ್ರ ಕೇಳ್ ಎಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ವಿಪ್ರನೇ, ಧನಮದ, ಕುಲಮದ, ಯೌವನಮದ, ವಿದ್ಯಾಮದ, ಸೇವಕಜನ ಮದ, ವೈಭವ ಮದ, ಸಂಸ್ಕೃತಿ ಮದ ಇವುಗಳನ್ನು ಶ್ರವಣ-ಮನನ-ನಿಧಿಧ್ಯಾಸನಗಳಿಂದ ನಿಯಂತ್ರಿಸಿ, ವಿದ್ಯಾವಿನಯ ಸನ್ನಡತೆಗಳಲ್ಲಿ ನಡೆಯಬೇಕು’ ಎಂದನು.
ಪದಾರ್ಥ (ಕ.ಗ.ಪ)
ನಿಧಿಧ್ಯಾಸನ - ಏಕಾಗ್ರತೆ
ಮೂಲ ...{Loading}...
ಧನಮದವ ಸತ್ಕುಲ ಮದವ ಯೌ
ವನ ಮದವ ವಿದ್ಯಾಮದವ ಪರಿ
ಜನ ಮದವ ವೈಭವ ಮದವನಾಚಾರಪದ ಮದವ
ಮನನದಿಂ ಶ್ರವಣದಿ ನಿಧಿ ಧ್ಯಾ
ಸನದಿನಿವಗಳನೊತ್ತಿ ವಿದ್ಯಾ
ವಿನಯ ಸೌಶೀಲ್ಯದಲಿ ನಡೆವುದು ವಿಪ್ರ ಕೇಳೆಂದ ॥16॥
೦೧೭ ನೀವು ಜಾತಿಯೊಳಧಿಕತರರಿಂ ...{Loading}...
ನೀವು ಜಾತಿಯೊಳಧಿಕತರರಿಂ
ದಾವು ಜಾತಿವಿಹೀನರಾಗಿಯೆ
ಭಾವಶುದ್ಧಿಯಲೇ ಸ್ವಧರ್ಮಾಚಾರ ಮಾರ್ಗದಲಿ
ಆವುದೂಣೆಯವಿಲ್ಲವೀ ದ್ವಿಜ
ದೇವ ಗುರು ಪರಿಚರ್ಯದಲಿ ಸಂ
ಭಾವಿತರು ನಾವಾದೆವೆಮ್ಮನು ನೋಡಿ ನಡೆಯೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀವು ಜಾತಿಯಲ್ಲಿ ಉತ್ತಮರು, ನಾವು ಹೀನರು. ಆದರೆ ಪರಿಶುದ್ಧ ಭಾವನೆಯಿಂದ, ಸ್ವಧರ್ಮದ ಅನುಸರಣೆಯಿಂದ, ಯಾವುದೇ ನ್ಯೂನತೆಯಿಲ್ಲದೆ ವಿಪ್ರ-ದೇವ-ಗುರು ಸೇವೆಯಿಂದ ನಾವು ಸಂಭಾವಿತರಾಗಿದ್ದೇವೆ. ನಮ್ಮನ್ನು ನೋಡಿ ಅನುಸರಿಸಿ’ ಎಂದನು.
ಪದಾರ್ಥ (ಕ.ಗ.ಪ)
ಊಣೆಯ - ಕೊರತೆ
ಮೂಲ ...{Loading}...
ನೀವು ಜಾತಿಯೊಳಧಿಕತರರಿಂ
ದಾವು ಜಾತಿವಿಹೀನರಾಗಿಯೆ
ಭಾವಶುದ್ಧಿಯಲೇ ಸ್ವಧರ್ಮಾಚಾರ ಮಾರ್ಗದಲಿ
ಆವುದೂಣೆಯವಿಲ್ಲವೀ ದ್ವಿಜ
ದೇವ ಗುರು ಪರಿಚರ್ಯದಲಿ ಸಂ
ಭಾವಿತರು ನಾವಾದೆವೆಮ್ಮನು ನೋಡಿ ನಡೆಯೆಂದ ॥17॥
೦೧೮ ಈ ಪರಿಯಲುರು ...{Loading}...
ಈ ಪರಿಯಲುರು ಧರ್ಮ ಕಥನಾ
ಳಾಪದಲಿ ಮುನಿಸುತಗೆ ಸಂದೇ
ಹಾಪನೋದವ ಗೈದು ತಿಳುಹಿದನಾ ಮಹೀಸುರನ
ಭೂಪ ಕೇಳೈ ಕ್ಷತ್ರಧರ್ಮ ಕ
ಳಾಪದಲಿ ನಿನಗಿಲ್ಲ ಕೊರತೆ ಕೃ
ತಾಪರಾಧರು ಕೌರವರು ನಿರ್ನಾಮರಹರೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯಾಧನು ‘ಈ ರೀತಿಯಲ್ಲಿ ಧರ್ಮಕಥಾ ಪ್ರಸಂಗವನ್ನು ಹೇಳಿ ಮುನಿಸುತನ ಸಂದೇಹವನ್ನು ನಿವಾರಿಸಿದನು. ಎಲೈ ಭೂಪತಿಯೇ, ಕ್ಷತ್ರಿಯ ಧರ್ಮ ಪರಿಪಾಲನೆಯಲ್ಲಿ ನಿನಗೆ ಕೊರತೆಯಿಲ್ಲ. ಕೌರವರೇ ಅಪರಾಧಿಗಳು. ಅವರು ನಿರ್ನಾಮರಾಗುತ್ತಾರೆ" ಎಂದನು.
ಪದಾರ್ಥ (ಕ.ಗ.ಪ)
ಅಪನೋದ - ಪರಿಹಾರ
ಮೂಲ ...{Loading}...
ಈ ಪರಿಯಲುರು ಧರ್ಮ ಕಥನಾ
ಳಾಪದಲಿ ಮುನಿಸುತಗೆ ಸಂದೇ
ಹಾಪನೋದವ ಗೈದು ತಿಳುಹಿದನಾ ಮಹೀಸುರನ
ಭೂಪ ಕೇಳೈ ಕ್ಷತ್ರಧರ್ಮ ಕ
ಳಾಪದಲಿ ನಿನಗಿಲ್ಲ ಕೊರತೆ ಕೃ
ತಾಪರಾಧರು ಕೌರವರು ನಿರ್ನಾಮರಹರೆಂದ ॥18॥
೦೧೯ ಬಾಹುಬಲ ಬಲವಲ್ಲ ...{Loading}...
ಬಾಹುಬಲ ಬಲವಲ್ಲ ದೈವ
ದ್ರೋಹಿಗಳಿಗೆ ಸುಧರ್ಮನಿಷ್ಠರ
ಸಾಹಸವು ಕಿರಿದಾದೊಡೆಯು ಕೊಯ್ವರು ವಿರೋಧಿಗಳ
ಆ ಹರಾತ್ಮಜ ಹಸುಳೆತನದ
ವ್ಯೂಹದಲಿ ತಾರಕನನಿಕ್ಕನೆ
ಯಾಹವದ ಜಯಸಿರಿಯು ಧರ್ಮದ ಬೆನ್ನಲಿಹುದೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೈವದ್ರೋಹಿಗಳಿಗೆ ಬಾಹುಶಕ್ತಿ ಸಾಮಥ್ರ್ಯವಲ್ಲ. ಧರ್ಮಾತ್ಮರು ನಿಃಶಕ್ತರಾದರೂ ಶತ್ರುಗಳನ್ನು ಅವರು ನಾಶಮಾಡಬಲ್ಲರು. ಪರಮೇಶ್ವರನ ಪುತ್ರನಾದ ಕಾರ್ತಿಕೇಯನು ಬಾಲಕನಾಗಿದ್ದಾಗಲೇ ತಾರಕಾಸುರನನ್ನು ಸಂಹರಿಸಲಿಲ್ಲವೆ ? ಯುದ್ಧದಲ್ಲಿ ವಿಜಯಲಕ್ಷ್ಮಿಯು ಧರ್ಮದ ಆಧಾರದಲ್ಲಿದೆ ಎಂದನು.
ಪದಾರ್ಥ (ಕ.ಗ.ಪ)
ವ್ಯೂಹ - ಕೈವಾಡ , ಲೀಲೆ
ಮೂಲ ...{Loading}...
ಬಾಹುಬಲ ಬಲವಲ್ಲ ದೈವ
ದ್ರೋಹಿಗಳಿಗೆ ಸುಧರ್ಮನಿಷ್ಠರ
ಸಾಹಸವು ಕಿರಿದಾದೊಡೆಯು ಕೊಯ್ವರು ವಿರೋಧಿಗಳ
ಆ ಹರಾತ್ಮಜ ಹಸುಳೆತನದ
ವ್ಯೂಹದಲಿ ತಾರಕನನಿಕ್ಕನೆ
ಯಾಹವದ ಜಯಸಿರಿಯು ಧರ್ಮದ ಬೆನ್ನಲಿಹುದೆಂದ ॥19॥
೦೨೦ ಎನ್ದು ಮಾರ್ಕಣ್ಡೇಯ ...{Loading}...
ಎಂದು ಮಾರ್ಕಂಡೇಯ ಮುನಿ ಯಮ
ನಂದನನನಿತಿಹಾಸ ಕಥೆಗಳ
ಲಂದವಿಟ್ಟನು ಚಿತ್ತವನು ಖಯಖೋಡಿಗಳ ಕಳೆದು
ಕಂದು ಕಸರಿಕೆಯೇಕೆ ನಿಮಗೆ ಮು
ಕುಂದನೊಲವಿದೆ ಬಯಕೆ ಬೇರೇ
ಕೆಂದು ಮಾರ್ಕಂಡೇಯ ನಾರದರಡರಿದರು ನಭವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಇತಿಹಾಸ ಕಥೆಗಳನ್ನು ಹೇಳಿ ಮಾರ್ಕಂಡೇಯ ಮುನಿಯು ಧರ್ಮರಾಯನ ಮನಸ್ಸಿನ ಭಯವನ್ನು ಕಳೆದು ಸಂತೋಷವನ್ನುಂಟು ಮಾಡಿದನು. ‘ನಿಮಗೆ ಮುಕುಂದನ ದಯೆಯಿರುವಾಗ ಭಯವೇಕೆ ? ಬೇರೇನೂ ಯೋಚಿಸಬೇಡಿ’ ಎಂದು ಹೇಳಿ ಮಾರ್ಕಂಡೇಯ ನಾರದ ಮುನಿಗಳು ಆಕಾಶಮಾರ್ಗವಾಗಿ ಹೊರಟರು.
ಪದಾರ್ಥ (ಕ.ಗ.ಪ)
ಖಯಖೋಡಿ - ಹಿಂಜರಿಕೆ, ಭಯ
ಕಸರಿಕೆ - ಬೇಸರಿಕೆ
ಮೂಲ ...{Loading}...
ಎಂದು ಮಾರ್ಕಂಡೇಯ ಮುನಿ ಯಮ
ನಂದನನನಿತಿಹಾಸ ಕಥೆಗಳ
ಲಂದವಿಟ್ಟನು ಚಿತ್ತವನು ಖಯಖೋಡಿಗಳ ಕಳೆದು
ಕಂದು ಕಸರಿಕೆಯೇಕೆ ನಿಮಗೆ ಮು
ಕುಂದನೊಲವಿದೆ ಬಯಕೆ ಬೇರೇ
ಕೆಂದು ಮಾರ್ಕಂಡೇಯ ನಾರದರಡರಿದರು ನಭವ ॥20॥
೦೨೧ ಅರಸ ಕೇಳೈ ...{Loading}...
ಅರಸ ಕೇಳೈ ದ್ರೌಪದಿಗೆ ಹರಿ
ಯರಸಿ ನುಡಿದಳು ಸತ್ಯಭಾಮಾ
ಸರಸಿಜಾನನೆ ನಗೆನುಡಿಯ ಸಮ್ಮೇಳ ಖೇಳದಲಿ
ಅರಸಿ ಕೌತುಕವೆನಗೆ ನೀನೈ
ವರಿಗೆ ಸತಿ ವಲ್ಲಭರ ಚಿತ್ತಾ
ಕರುಷಣವು ನಿನಗೆಂತು ಸೇರಿಹುದೇಕ ಭಾವದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಲಾಲಿಸು. ಶ್ರೀಹರಿಯ ಪತ್ನಿಯಾದ ಸತ್ಯಭಾಮೆಯು ನಗುತ್ತಾ, ಲಘುವಾಗಿ ದ್ರೌಪದಿಯೊಂದಿಗೆ - ‘ಅರಸಿ, ನೀನು ಐದು ಮಂದಿಗೆ ಹೆಂಡತಿಯೆನಿಸಿ ಎಲ್ಲರ ಮನಸ್ಸನ್ನು ಹೇಗೆ ಸೆಳೆಯುತ್ತೀಯಾ ? ಈ ಆಕರ್ಷಣೆ ಒಂದೇ ಭಾವದಿಂದ ಹೇಗೆ ನಿನ್ನಲ್ಲಿ ಸೇರಿದೆ ? ಎಂದು ಛೇಡಿಸಿ ಕೇಳಿದಳು.
ಮೂಲ ...{Loading}...
ಅರಸ ಕೇಳೈ ದ್ರೌಪದಿಗೆ ಹರಿ
ಯರಸಿ ನುಡಿದಳು ಸತ್ಯಭಾಮಾ
ಸರಸಿಜಾನನೆ ನಗೆನುಡಿಯ ಸಮ್ಮೇಳ ಖೇಳದಲಿ
ಅರಸಿ ಕೌತುಕವೆನಗೆ ನೀನೈ
ವರಿಗೆ ಸತಿ ವಲ್ಲಭರ ಚಿತ್ತಾ
ಕರುಷಣವು ನಿನಗೆಂತು ಸೇರಿಹುದೇಕ ಭಾವದಲಿ ॥21॥
೦೨೨ ಮನ್ತ್ರಸಿದ್ಧಿಯೊ ಮೇಣು ...{Loading}...
ಮಂತ್ರಸಿದ್ಧಿಯೊ ಮೇಣು ಶಾಬರ
ಯಂತ್ರರಕ್ಷೆಯೊ ಮೇಣ್ ವರೌಷಧ
ತಂತ್ರತಿಲಕವೊ ರಮಣರಿವರೈವರ ವಶೀಕರಣ
ಯಂತ್ರಮಯ ಹೂಹೆಗಳು ನೃಪರೀ
ಯಂತ್ರಸೂತ್ರದ ಕುಣಿಕೆ ನಿನ್ನ ನಿ
ಯಂತ್ರಣವ ಹೇಳೌ ನಿಧಾನವನೆಂದಳಿಂದುಮುಖಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇದು ಮಂತ್ರಸಿದ್ಧಿಯೊ ? ಅಥವಾ ಕಾಡಿನ ಬೇಟೆಗಾರರ ಯಂತ್ರರಕ್ಷೆಯೊ ? ಅಥವಾ ಔಷಧ ತಂತ್ರವೊ ? ಐವರು ಗಂಡಂದಿರನ್ನು ಯಂತ್ರದ ಗೊಂಬೆಗಳಂತೆ ಮಾಡಿ ವಶೀಕರಿಸಿ, ಅದರ ಕುಣಿಕೆಯನ್ನು ಹಿಡಿದು ನಿಯಂತ್ರಿಸುವ ಈ ವಿಧಾನವನ್ನು ಹೇಳು’ ಎಂದಳು.
ಪದಾರ್ಥ (ಕ.ಗ.ಪ)
ಶಾಬರ - ಬೇಟೆಗಾರರ. ಶಬರರ
ಹೂಹೆ - ಗೊಂಬೆ
ಮೂಲ ...{Loading}...
ಮಂತ್ರಸಿದ್ಧಿಯೊ ಮೇಣು ಶಾಬರ
ಯಂತ್ರರಕ್ಷೆಯೊ ಮೇಣ್ ವರೌಷಧ
ತಂತ್ರತಿಲಕವೊ ರಮಣರಿವರೈವರ ವಶೀಕರಣ
ಯಂತ್ರಮಯ ಹೂಹೆಗಳು ನೃಪರೀ
ಯಂತ್ರಸೂತ್ರದ ಕುಣಿಕೆ ನಿನ್ನ ನಿ
ಯಂತ್ರಣವ ಹೇಳೌ ನಿಧಾನವನೆಂದಳಿಂದುಮುಖಿ ॥22॥
೦೨೩ ದೇವಿಯೆನ್ದಳು ಸತ್ಯಭಾಮಾ ...{Loading}...
ದೇವಿಯೆಂದಳು ಸತ್ಯಭಾಮಾ
ದೇವಿಯರು ಮುಗುದೆಯರಲಾ ನಾ
ನಾವ ಮಂತ್ರದ ತಂತ್ರ ತೊಡಕಿನ ತೋಟಿಯುಳ್ಳವಳು
ಭಾವಶುದ್ಧಿಯಲೈವರನು ಸಂ
ಭಾವಿಸುವೆನವರವರ ಚಿತ್ತದ
ಭಾವವರಿದುಪಚರಿಸುವೆನು ಚತುರತೆಯ ಚಾಳಿಯಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ದ್ರೌಪದೀದೇವಿ ‘ಸತ್ಯಭಾಮಾದೇವಿ, ನೀವು ಮುಗ್ಧೆಯರು. ನನಗೆ ಯಾವ ಮಂತ್ರತಂತ್ರದ ಕೌಶಲದ ಚಿಂತೆ, ತೊಳಲಾಟಗಳು ಇಲ್ಲ. ಕೇವಲ ಭಾವಭಕ್ತಿಯಿಂದ, ಐದೂ ಜನರನ್ನು ಗೌರವಿಸುತ್ತೇನೆ ಮತ್ತು ಅವರವರ ಮನಸ್ಸನ್ನು ಅರ್ಥಮಾಡಿಕೊಂಡು ಚಾತುರ್ಯದಿಂದ ಉಪಚರಿಸುತ್ತೇನೆ ಅಷ್ಟೆ’ ಎಂದಳು.
ಪದಾರ್ಥ (ಕ.ಗ.ಪ)
ತೋಟಿ - ತೊಳಲಾಟ
ಮೂಲ ...{Loading}...
ದೇವಿಯೆಂದಳು ಸತ್ಯಭಾಮಾ
ದೇವಿಯರು ಮುಗುದೆಯರಲಾ ನಾ
ನಾವ ಮಂತ್ರದ ತಂತ್ರ ತೊಡಕಿನ ತೋಟಿಯುಳ್ಳವಳು
ಭಾವಶುದ್ಧಿಯಲೈವರನು ಸಂ
ಭಾವಿಸುವೆನವರವರ ಚಿತ್ತದ
ಭಾವವರಿದುಪಚರಿಸುವೆನು ಚತುರತೆಯ ಚಾಳಿಯಲಿ ॥23॥
೦೨೪ ಒಲವರಿದು ಹತ್ತುವದು ...{Loading}...
ಒಲವರಿದು ಹತ್ತುವದು ಚಿತ್ತದ
ನೆಲೆಯರಿದು ನೆಮ್ಮುವುದು ಮುರಿವಿನ
ಹೊಳವರಿದು ಹಿಂಗುವುದು ಹೊಗುವದು ಮನದೊಳೊಲವರಿದು
ಸುಳಿವರಿದು ಸೋಂಕುವುದು ತವಕಕೆ
ಬಲಿದು ಮುನಿವುದು ಸವಿಯ ಬೇಟವ
ಬೆಳಸಿ ಬೆಸವುದು ಬಗೆಯಲೆಂದಳು ನಳಿನಮುಖಿ ನಗುತ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಒಲವನ್ನು ತಿಳಿದು ಹತ್ತಿರ ಹೋಗುವುದು. ಮನಸ್ಸನ್ನು ಅರ್ಥೈಸಿಕೊಂಡು ಪ್ರೀತಿಸುವುದು. ಸಿಟ್ಟಿನ ಸೂಕ್ಷ್ಮವನ್ನು ತಿಳಿದು ದೂರವಿರುವುದು. ಮನದ ಹದವನ್ನು ತಿಳಿದು ಜೊತೆಗೂಡುವುದು. ಸುಳಿವು ತಿಳಿದು ಸ್ಪರ್ಶಿಸುವುದು. ಕಾತರವನ್ನುಂಟುಮಾಡಿ ಹುಸಿಮುನಿಸು ತೋರುವುದು. ಸವಿಯಾದ ಪ್ರೀತಿಯನ್ನು ಹೆಚ್ಚುಮಾಡಿ ಮನಸ್ಸನ್ನು ಹೊಂದಿಸಿಕೊಳ್ಳುವುದು.’ ಎಂದು ದ್ರೌಪದಿ ನಗುತ್ತಾ ಹೇಳಿದಳು.
ಮೂಲ ...{Loading}...
ಒಲವರಿದು ಹತ್ತುವದು ಚಿತ್ತದ
ನೆಲೆಯರಿದು ನೆಮ್ಮುವುದು ಮುರಿವಿನ
ಹೊಳವರಿದು ಹಿಂಗುವುದು ಹೊಗುವದು ಮನದೊಳೊಲವರಿದು
ಸುಳಿವರಿದು ಸೋಂಕುವುದು ತವಕಕೆ
ಬಲಿದು ಮುನಿವುದು ಸವಿಯ ಬೇಟವ
ಬೆಳಸಿ ಬೆಸವುದು ಬಗೆಯಲೆಂದಳು ನಳಿನಮುಖಿ ನಗುತ ॥24॥
೦೨೫ ರಸಿಕ ಹರಿ ...{Loading}...
ರಸಿಕ ಹರಿ ಹದಿನಾರು ಸಾವಿರ
ಶಶಿಮುಖಿಯರಲಿ ಬೇಟ ಜಾಣಿನ
ದೆಸಕ ದಿಮ್ಮಿತು ಬಗೆಯ ಭಂಗವ್ಯಾಪ್ತಿ ಕೃಷ್ಣನಲಿ
ನುಸುಳು ನೆಲೆ ಡಿಳ್ಳಾಯ್ತ ಪೈಸರ
ಬೆಸುಗೆ ಬಿಗುಹುಳುಕೊತ್ತು ಕಲೆಗಳ
ರಸದ ಪಸರವನರಿಯಬಾರದು ವಿಗಡ ವಿಟರುಗಳ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಹರಿಯು ರಸಿಕನು. ಹದಿನಾರು ಸಾವಿರ ಸ್ತ್ರೀಯರೊಂದಿಗೆ ತೋರುವ ಅವನ ಜಾಣತನ ದೊಡ್ಡದು. ಅವನ ವಂಚಕತನ ಮತ್ತು ಕಾಮಕಲಾಭಿಜ್ಞತೆಯ ವಿಸ್ತಾರವನ್ನು ತಿಳಿಯಲಾಗದು.
ಪದಾರ್ಥ (ಕ.ಗ.ಪ)
ಜಾಣು -ಜಾಣತನ
ಡಿಳ್ಳಾಯ್ತ- ವಂಚಕತನ , ಮೋಸ ಮಾಡುವ ಗುಣ
ದಿಮ್ಮಿತು - ದೊಡ್ಡದು
ಮೂಲ ...{Loading}...
ರಸಿಕ ಹರಿ ಹದಿನಾರು ಸಾವಿರ
ಶಶಿಮುಖಿಯರಲಿ ಬೇಟ ಜಾಣಿನ
ದೆಸಕ ದಿಮ್ಮಿತು ಬಗೆಯ ಭಂಗವ್ಯಾಪ್ತಿ ಕೃಷ್ಣನಲಿ
ನುಸುಳು ನೆಲೆ ಡಿಳ್ಳಾಯ್ತ ಪೈಸರ
ಬೆಸುಗೆ ಬಿಗುಹುಳುಕೊತ್ತು ಕಲೆಗಳ
ರಸದ ಪಸರವನರಿಯಬಾರದು ವಿಗಡ ವಿಟರುಗಳ ॥25॥
೦೨೬ ನೀವು ಮುಗುದೆಯರತಿ ...{Loading}...
ನೀವು ಮುಗುದೆಯರತಿ ವಿದಗ್ಧನು
ದೇವಕೀಸುತನೆನ್ನವರು ಧ
ರ್ಮಾವಲಂಬರು ದಿಟ್ಟರಲ್ಲ ಮನೋಜ ಲೀಲೆಯಲಿ
ನೀವು ಸೊಬಗಿನ ನಿಧಿಯಲೇ ಶತ
ಸಾವಿರದ ಸತಿಯರಲಿ ಕೃಷ್ಣನ
ಜೀವವಶ್ರಮ ರತಿಯರೆಂದಳು ನಗುತ ತರಳಾಕ್ಷಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಮುಗ್ಧೆಯರು. ಶ್ರೀಹರಿಯು ಬುದ್ಧಿವಂತನು. ನನ್ನ ಪತಿಗಳಾದರೋ ಧರ್ಮಭೀರುಗಳು. ಅವರು ಕಾಮಕೇಳಿಯಲ್ಲಿ ಧೈರ್ಯವಂತರಲ್ಲ. ನೀವು ಸೊಬಗಿನ ನಿಧಿ. ಅಸಂಖ್ಯ ಸ್ತ್ರೀಯರಿದ್ದರೂ ಕೃಷ್ಣನು ನಿಮ್ಮಲ್ಲಿಯೇ ವಿಶ್ರಾಂತಿಯನ್ನು ಪಡೆಯುತ್ತಾನೆ.
ಮೂಲ ...{Loading}...
ನೀವು ಮುಗುದೆಯರತಿ ವಿದಗ್ಧನು
ದೇವಕೀಸುತನೆನ್ನವರು ಧ
ರ್ಮಾವಲಂಬರು ದಿಟ್ಟರಲ್ಲ ಮನೋಜ ಲೀಲೆಯಲಿ
ನೀವು ಸೊಬಗಿನ ನಿಧಿಯಲೇ ಶತ
ಸಾವಿರದ ಸತಿಯರಲಿ ಕೃಷ್ಣನ
ಜೀವವಶ್ರಮ ರತಿಯರೆಂದಳು ನಗುತ ತರಳಾಕ್ಷಿ ॥26॥
೦೨೭ ಅರಸ ಕೇಳೈ ...{Loading}...
ಅರಸ ಕೇಳೈ ಸತ್ಯಭಾಮಾ
ಸರಸಿಜಾನನೆ ದ್ರುಪದ ಸುತೆಯರು
ಸರಸ ಮೇಳದಲೊಪ್ಪಿದರು ಚದುರೋಕ್ತಿ ಲೀಲೆಯಲಿ
ಹರಿ ಯುಧಿಷ್ಠಿರ ಭೀಮ ಪಾರ್ಥರು
ವರ ಮುನಿಗಳಿತಿಹಾಸಮಯ ಬಂ
ಧುರ ಕಥಾ ಕೇಳಿಯಲಿ ಕಳೆದರು ಹಲವು ದಿವಸಗಳ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ, ಕೇಳು. ಹೀಗೆ ಸತ್ಯಭಾಮೆ ಮತ್ತು ದ್ರೌಪದಿಯರು ಸರಸ ಸಂಭಾಷಣೆಯ ಸಂತೋಷದಲ್ಲಿ ಮುಳುಗಿದರು. ಶ್ರೀಹರಿ, ಧರ್ಮರಾಯ, ಭೀಮಾರ್ಜುನರು ಮುನಿಗಳೊಂದಿಗೆ ಇತಿಹಾಸ ಕಥಾನಕಗಳನ್ನು ಕೇಳುತ್ತಾ ಅನೇಕ ದಿವಸಗಳನ್ನು ಕಳೆದರು.
ಮೂಲ ...{Loading}...
ಅರಸ ಕೇಳೈ ಸತ್ಯಭಾಮಾ
ಸರಸಿಜಾನನೆ ದ್ರುಪದ ಸುತೆಯರು
ಸರಸ ಮೇಳದಲೊಪ್ಪಿದರು ಚದುರೋಕ್ತಿ ಲೀಲೆಯಲಿ
ಹರಿ ಯುಧಿಷ್ಠಿರ ಭೀಮ ಪಾರ್ಥರು
ವರ ಮುನಿಗಳಿತಿಹಾಸಮಯ ಬಂ
ಧುರ ಕಥಾ ಕೇಳಿಯಲಿ ಕಳೆದರು ಹಲವು ದಿವಸಗಳ ॥27॥
೦೨೮ ಹಗೆಗಳಮರಾರಿಗಳು ನಮ್ಮಯ ...{Loading}...
ಹಗೆಗಳಮರಾರಿಗಳು ನಮ್ಮಯ
ನಗರಿ ಶೂನ್ಯಾಸನದಲಿದ್ದುದು
ವಿಗಡ ರಾಮಾದಿಗಳು ವಿಷಯಂಗಳ ವಿನೋದಿಗಳು
ಅಗಲಲಾರೆನು ನಿಮ್ಮ ವನದೋ
ಲಗಕೆ ಬಿಡೆಯವ ಕಾಣೆನೆಂದನು
ನಗುತ ಕರುಣಾಸಿಂಧು ಯಮನಂದನನ ಮೊಗ ನೋಡಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಕ್ಷಸರು ನಮ್ಮ ವೈರಿಗಳು. ನಮ್ಮ ನಗರದ ಸಿಂಹಾಸನವು ಶೂನ್ಯವಾಗಿದೆ. ಬಲರಾಮಾದಿಗಳು ವಿಷಯ ಸುಖದ ವಿನೋದದಲ್ಲಿರುವವರು. ನಿಮ್ಮನ್ನು ಬಿಟ್ಟಿರಲಾರೆನು. ನಿಮ್ಮ ಅರಣ್ಯದ ಓಲಗಕ್ಕೆ ಹೋಲಿಕೆಯಿಲ್ಲ ಎಂದು ಶ್ರೀಕೃಷ್ಣನು ಧರ್ಮರಾಜನ ಮುಖ ನೋಡಿ ಹೇಳಿದನು.
ಮೂಲ ...{Loading}...
ಹಗೆಗಳಮರಾರಿಗಳು ನಮ್ಮಯ
ನಗರಿ ಶೂನ್ಯಾಸನದಲಿದ್ದುದು
ವಿಗಡ ರಾಮಾದಿಗಳು ವಿಷಯಂಗಳ ವಿನೋದಿಗಳು
ಅಗಲಲಾರೆನು ನಿಮ್ಮ ವನದೋ
ಲಗಕೆ ಬಿಡೆಯವ ಕಾಣೆನೆಂದನು
ನಗುತ ಕರುಣಾಸಿಂಧು ಯಮನಂದನನ ಮೊಗ ನೋಡಿ ॥28॥
೦೨೯ ನುಡಿದ ಕಾಲಾವಧಿಗೆ ...{Loading}...
ನುಡಿದ ಕಾಲಾವಧಿಗೆ ಜರೆ ತೆರೆ
ಯಡಗಿದವು ಜಾಣಿನಲಿ ¸ಧತ್ಯವ
ನಡೆಸಿದಿರಿ ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ
ಕಡುಮನದ ಕರ್ಣಾದಿಗಳು ಕೈ
ದುಡುಕಿದೊಡೆ ಕೈಗಾಯ್ದು ಧರ್ಮದ
ತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮೊದಲು ಒಪ್ಪಿಕೊಂಡ ಅವಧಿಯಲ್ಲಿ ಅನೇಕ ವಿಘ್ನಗಳು ನಿವಾರಣೆಯಾದವು. ಉಪಾಯದಿಂದ ಸತ್ಯವನ್ನು ಕಾಪಾಡಿದಿರಿ. ಕಡೆಯ ಕಾಲಕ್ಕೆ ಈ ಉನ್ನತಿಯನ್ನು ಹಾಳು ಮಾಡಿಕೊಳ್ಳಬೇಡಿ. ದುಷ್ಟರಾದ ಕರ್ಣನೇ ಮೊದಲಾದವರು, ಕೈದುಡುಕಿ ಮೇಲೆ ಬಂದಾಗ ಅವರನ್ನು ಸೋಲಿಸಿ, ಧರ್ಮದ ಆಸರೆಯಿಂದ ವಿಜಯಪಥದಲ್ಲಿ ನೀವು ವೇಗವಾಗಿ ಹೋಗುತ್ತೀರಿ. ’ ಎಂದನು.
ಪದಾರ್ಥ (ಕ.ಗ.ಪ)
ಅಧ್ವ - ದಾರಿ
ಜಂಘಾಲ - ವೇಗವಾಗಿ ಓಡುವವನು
ಮೂಲ ...{Loading}...
ನುಡಿದ ಕಾಲಾವಧಿಗೆ ಜರೆ ತೆರೆ
ಯಡಗಿದವು ಜಾಣಿನಲಿ ¸ಧತ್ಯವ
ನಡೆಸಿದಿರಿ ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ
ಕಡುಮನದ ಕರ್ಣಾದಿಗಳು ಕೈ
ದುಡುಕಿದೊಡೆ ಕೈಗಾಯ್ದು ಧರ್ಮದ
ತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ ॥29॥
೦೩೦ ಮರೆಯಲಿಹ ಕಾಲದಲಿ ...{Loading}...
ಮರೆಯಲಿಹ ಕಾಲದಲಿ ಬಲಿದೆ
ಚ್ಚರದಿಹುದು ಬೇಕಾದೊಡೆಮಗೆ
ಚ್ಚರಿಸಿ ಕಾರ್ಯಸ್ಥಿತಿಯನೇ ಚರಿಸುವುದು ನಿಮ್ಮೊಳಗೆ
ಅರಿದಿಹುದು ನೀನೆಂದು ರಾಯಂ
ಗರುಹಿ ಭೀಮಾದಿಗಳಿಗುಚಿತವ
ನೆರೆ ನುಡಿದು ದುರುಪದಿಯ ಮನ್ನಿಸಿ ಮರಳಿದನು ಪುರಕೆ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಜ್ಞಾತವಾಸದ ಅವಧಿಯಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು. ಬೇಕಾದರೆ ನಮಗೆ ತಿಳಿಸಿ, ನಿಮ್ಮ ಕರ್ತವ್ಯವನ್ನು ಪಾಲಿಸುವುದು. ಇದನ್ನೆಲ್ಲಾ ನೀನು ತಿಳಿದಿರಬೇಕು ’ ಎಂದು, ಶ್ರೀಕೃಷ್ಣನು ಧರ್ಮಜನಿಗೆ ಸೂಚಿಸಿ, ಭೀಮಾದಿಗಳಿಗೆ ಸೂಕ್ತವಾದುದನ್ನು ಹೇಳಿ ದ್ರೌಪದಿಯನ್ನು ಸಂತೈಸಿ, ದ್ವಾರಕಾಪುರಿಗೆ ತೆರಳಿದನು.
ಮೂಲ ...{Loading}...
ಮರೆಯಲಿಹ ಕಾಲದಲಿ ಬಲಿದೆ
ಚ್ಚರದಿಹುದು ಬೇಕಾದೊಡೆಮಗೆ
ಚ್ಚರಿಸಿ ಕಾರ್ಯಸ್ಥಿತಿಯನೇ ಚರಿಸುವುದು ನಿಮ್ಮೊಳಗೆ
ಅರಿದಿಹುದು ನೀನೆಂದು ರಾಯಂ
ಗರುಹಿ ಭೀಮಾದಿಗಳಿಗುಚಿತವ
ನೆರೆ ನುಡಿದು ದುರುಪದಿಯ ಮನ್ನಿಸಿ ಮರಳಿದನು ಪುರಕೆ ॥30॥
೦೩೧ ಅರಸಿ ಹರಿಯಾಮ್ನಾಯತತಿ ...{Loading}...
ಅರಸಿ ಹರಿಯಾಮ್ನಾಯತತಿ ಕು
ಕ್ಕರಿಸಿದವು ಮುನಿಗಳ ಸಮಾಧಿಗೆ
ಕರುಬುವವರಾವಲ್ಲ ಕಾಣರು ನಖದ ಕೊನೆಗಳನು
ಅರಸ ತಾನೇ ಹರಿಹರಿದು ತ
ನ್ನೆರಕದವರನು ಬಿಡದೆ ಸಲಹುವ
ಕರುಣವೆಂತುಟೊ ರಾಯ ಗದುಗಿನ ವೀರನರಯಣನ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದಗಳು ಶ್ರೀಹರಿಯನ್ನು ಹುಡುಕಿ ಸೋತು ಹೋದವು. ಋಷಿಮುನಿಗಳ ಯೋಗಸಮಾಧಿಗೆ ನಾವು ಮತ್ಸರಿಸುವುದಿಲ್ಲ. ಜನಮೇಜಯನೇ ಹರಿಯ ಕಾಲಿನುಗುರಿನ ಕೊನೆಯನ್ನು ನೋಡಲೂ ಅವರಿಂದ ಸಾಧ್ಯವಾಗಲಿಲ್ಲ . ಈ ಕೃಷ್ಣನು ತಾನೇ ಓಡೋಡಿ ಬಂದು, ತನಗೆ ಇಷ್ಟವಾದವರನ್ನು ಬೆಂಬಿಡದೆ ಕಾಪಾಡುವ ಕರುಣೆ ಸಾಮಾನ್ಯವೇ ?
ಮೂಲ ...{Loading}...
ಅರಸಿ ಹರಿಯಾಮ್ನಾಯತತಿ ಕು
ಕ್ಕರಿಸಿದವು ಮುನಿಗಳ ಸಮಾಧಿಗೆ
ಕರುಬುವವರಾವಲ್ಲ ಕಾಣರು ನಖದ ಕೊನೆಗಳನು
ಅರಸ ತಾನೇ ಹರಿಹರಿದು ತ
ನ್ನೆರಕದವರನು ಬಿಡದೆ ಸಲಹುವ
ಕರುಣವೆಂತುಟೊ ರಾಯ ಗದುಗಿನ ವೀರನರಯಣನ ॥31॥