೧೪

೦೦೦ ಸೂ ಕರುಣಿ ...{Loading}...

ಸೂ. ಕರುಣಿ ಬಿಜಯಂಗೈದು ಪಾಂಡವ
ಧರಣಿಪನ ಸಂತೈಸಿ ಯಾದವ
ರರಸನಿದ್ದನು ಸಕಲ ಮುನಿಜನ ಸಹಿತ ವನದೊಳಗೆ

೦೦೧ ಚಿತ್ತವಿಸು ಜನಮೇಜಯ ...{Loading}...

ಚಿತ್ತವಿಸು ಜನಮೇಜಯ ಕ್ಷಿತಿ
ಪೋತ್ತಮನೆ ಧರ್ಮಜನು ಮುಖದಲಿ
ಕೆತ್ತ ದುಗುಡವ ಬಿಡಿಸಿ ಭೀಮನ ತಂದನಾಶ್ರಮಕೆ
ಮತ್ತಕಾಶಿನಿ ಧೌಮ್ಯ ನಿಖಿಲ ಮ
ಹೋತ್ತಮರು ಪೀಯೂಷ ಮಧುರ ರ
ಸೋತ್ತರದ ನುಡಿಗಳಲಿ ನಾದಿದರನಿಲಜನ ಮನವ ॥1॥

೦೦೨ ಮುಗಿಲು ಬೆಳೆತುದು ...{Loading}...

ಮುಗಿಲು ಬೆಳೆತುದು ಬರಿಯ ಗಡಬಡೆ
ಗಗನಕುಳಿದುದು ಕೊಂಡ ನೆಲನನು
ತೆಗೆದು ನಿಂದುದು ಮೋಡಿಯಂಕದವೊಲು ನದೀನಿವಹ
ನಗುವ ಕೊಳನಭ್ಯಾಗತೆಯ ಹಂ
ಸೆಗಳು ಮೆರೆದವು ಮೊರೆವ ತುಂಬಿಯ
ಸುಗುಡತನ ತಾವರೆಯೊಳೆಸೆದುದು ಶರದ ಸಮಯದಲಿ ॥2॥

೦೦೩ ಸವೆದುದೀ ವನವಿಲ್ಲಿ ...{Loading}...

ಸವೆದುದೀ ವನವಿಲ್ಲಿ ಫಲ ಮೃಗ
ನಿವಹ ಬೀತುದು ನಮ್ಮ ಕಾಲಾ
ಟವನು ಸೈರಿಸಿ ನಿಲುವ ವನವನು ಕಾಣೆ ನಾನೆನುತ
ನಮಗೆ ಮಗುಳಾ ಕಾಮ್ಯಕದ ವನ
ಭವನವೈಸಲೆಯೆಂದು ಮುನಿಜನ
ನಿವಹ ಸಹಿತವನೀಶ ಕಾಮ್ಯಕ ವನಕೆ ನಡೆತಂದ ॥3॥

೦೦೪ ಆ ಶರತ್ಕಾಲವನು ...{Loading}...

ಆ ಶರತ್ಕಾಲವನು ತದ್ವನ
ವಾಸದಲಿ ನೂಕಿದನು ಘನ ಪರಿ
ತೋಷ ಸೂಚಕ ಶಕುನವಂಗಸ್ಫುರಣೆ ಮೊದಲಾದ
ಮೀಸಲಳಿಯದ ಹರುಷ ರಸದಾ
ವೇಶದಲಿ ಮನವುಕ್ಕಿ ಹಿಗ್ಗಿದ
ನೀ ಶಕುನ ಸುಮ್ಮಾನವಿದಕೇನಹುದು ಫಲವೆಂದ ॥4॥

೦೦೫ ಇದಕೆ ಕೃಷ್ಣಾಗಮನವೇ ...{Loading}...

ಇದಕೆ ಕೃಷ್ಣಾಗಮನವೇ ಫಲ
ದುದಯವೈಸಲೆಯೆನುತಲಿರೆ ಬಂ
ದಿದಿರೆ ನಿಂದನು ದೂತನಮಲ ದ್ವಾರಕಾಪುರದ
ಇದೆ ಕೃಪಾನಿಧಿ ಬಂದನಸುರಾ
ಭ್ಯುದಯ ಘಾತಕ ಬಂದ ರಿಪುಬಲ
ಮದನ ಮದಹರ ಬಂದನಿದೆಯೆಂದನು ಮಹೀಪತಿಗೆ ॥5॥

೦೦೬ ಸೂಚಿಸಿದವೇ ಶಕುನ ...{Loading}...

ಸೂಚಿಸಿದವೇ ಶಕುನ ಪುನರಪಿ
ಗೋಚರಿಸಿತೇ ಗರುವನಿಧಿ ನಾ
ವಾಚರಿಸಿತೇನೋ ಶಿವಾ ಭವ ಭವ ಸಹಸ್ರದಲಿ
ನಾಚಿದವು ನಿಗಮಂಗಳಾವನ
ಸೂಚಿಸುವುವೆಮ್ಮೊಳಗೆ ಕೃಪೆಯಲ
ರೋಚಕವನಾ ದೈವ ಮಾಡದೆನುತ್ತ ಹೊರವಂಟ ॥6॥

೦೦೭ ಹಳುವವನು ಹೊರವಣ್ಟು ...{Loading}...

ಹಳುವವನು ಹೊರವಂಟು ಗರುಡನ
ಹಳವಿಗೆಯ ದೂರದಲಿ ಕಂಡನು
ತುಳುಕಿದವು ಸಂತೋಷಜಲ ನಿಟ್ಟೆಸಳುಗಂಗಳಲಿ
ತಳಿತ ರೋಮಾಂಚದಲಿ ಸಮ್ಮುದ
ಪುಳಕದಲಿ ಪೂರಾಯದುಬ್ಬಿನ
ಲಿಳೆಯೊಡೆಯ ಮೈಯಿಕ್ಕುತೈದಿದನಖಿಳ ಜನಸಹಿತ ॥7॥

೦೦೮ ಇಳಿದು ದಣ್ಡಿಗೆಯಿನ್ದ ...{Loading}...

ಇಳಿದು ದಂಡಿಗೆಯಿಂದ ಕರುಣಾ
ಜಲಧಿ ಬಂದನು ಕಾಲು ನಡೆಯಲಿ
ಸೆಳೆದು ಬಿಗಿಯಪ್ಪಿದನಿದೇನಾಸುರವಿದೇನೆನುತ
ಬಳಿಕ ಭೀಮಾರ್ಜುನರ ಯಮಳರ
ನೊಲಿದು ಮನ್ನಿಸಿ ಸತಿಯ ಲೋಚನ
ಜಲವ ಸೆರಗಿನೊಳೊರಸಿ ಸಂತೈಸಿದನು ಬಾಲಕಿಯ ॥8॥

೦೦೯ ಕುಶಲವೇ ಕುರುರಾಯನೂಳಿಗ ...{Loading}...

ಕುಶಲವೇ ಕುರುರಾಯನೂಳಿಗ
ವೆಸಗದಲೆ ನಿಮ್ಮತ್ತಲವಧಿಯ
ದೆಸೆ ಸಮೀಪವೆ ತೊಳಲಿದಿರೆಲಾ ವನವನಾಂತದಲಿ
ಪಶುಪತಿಯು ಹಿಡಿವಂಬು ಕೈವ
ರ್ತಿಸಿತು ಗಡ ಪಾರ್ಥಂಗೆ ನಮಗಿಂ
ದೊಸಗೆಯಾಯಿತು ಪುಣ್ಯವೆಂದನು ಹರಿ ಯುಧಿಷ್ಠಿರಗೆ ॥9॥

೦೧೦ ಆಗಲೀ ವೈಷ್ಣವಕೆ ...{Loading}...

ಆಗಲೀ ವೈಷ್ಣವಕೆ ನಮ್ಮಯ
ತಾಗು ಥಟ್ಟಿನ ರಕ್ಷೆ ತೊಡಚಿದು
ದಾಗಳಿದ್ದುದು ಪಾಶುಪತ ಶರವದರ ಬಳಿವಿಡಿದು
ಈಗಳೊಸಗೆಯೆ ಯೆಮ್ಮ ಪಂಚಕ
ದಾಗು ಹೋಗನು ಹೊತ್ತು ನಡೆಸಿದ
ಡಾಗಳಾಯ್ತೆಮಗೊಸಗೆಯೆಂದನು ನೃಪತಿ ವಿನಯದಲಿ ॥10॥

೦೧೧ ತೊಳಲಿದೆವಲಾ ಕೃಷ್ಣ ...{Loading}...

ತೊಳಲಿದೆವಲಾ ಕೃಷ್ಣ ತಪ್ಪದೆ
ಹಳುವ ಹಳುವವನಮರ ಪುರದಲಿ
ಕೆಲವು ದಿನವಿರಲರ್ಜುನಂಗಾಯ್ತೂರ್ವಶಿಯ ಶಾಪ
ಖಳರನಲ್ಲಿ ನಿವಾತಕವಚರ
ಗೆಲಿದು ಬಂದನು ಪಾರ್ಥನದರೊಳು
ಕೆಲಬರಸುರರ ಕಾದಿ ಕೊಂದನು ಭೀಮನಡವಿಯಲಿ ॥11॥

೦೧೨ ಇನ್ತು ತಲೆಯೊತ್ತುತ ...{Loading}...

ಇಂತು ತಲೆಯೊತ್ತುತ ಮಹಾ ವಿಪಿ
ನಾಂತರವ ತೊಳಲಿದೆವು ಬಳಿಕ ವ
ನಾಂತರದೊಳಗಿಂದಾದುದೂಳಿಗ ನಹುಷ ನೃಪತಿಯಲಿ
ಭ್ರಾಂತಿಯೈ ಸಲೆ ಭೀಮನುರಗಾ
ಕ್ರಾಂತನಾದನು ಧರ್ಮಕಥೆಯಲಿ
ಸಂತವಾಯ್ತು ವಿಶಾಪವಾದನು ನಹುಷನಾ ಕ್ಷಣಕೆ ॥12॥

೦೧೩ ಮರಳಿ ಕಾಮ್ಯಕ ...{Loading}...

ಮರಳಿ ಕಾಮ್ಯಕ ವನದ ದಳಮಂ
ದಿರವನೇ ನೆಲೆ ಮಾಡಿದೆವು ವಿ
ಸ್ತರಣವಿದು ಹಿಂದಾದ ವಿಪಿನಾಂತರ ಪರಿಭ್ರಮದ
ಕರುಣಿ ನಿಮ್ಮಡಿದಾವರೆಯ ಸಿರಿ
ದರುಶನದಿನಾಯಾಸ ಪಾರಂ
ಪರೆಗೆ ಬಿಡುಗಡೆಯೆನುತ ಮೈಯಿಕ್ಕಿದನು ಯಮಸೂನು ॥13॥|

೦೧೪ ರಾಯ ಕೇಳಾಕ್ಷಣಕೆ ...{Loading}...

ರಾಯ ಕೇಳಾಕ್ಷಣಕೆ ಮಾರ್ಕಂ
ಡೇಯ ನಾರದರಿಳಿದರಬುಜ ದ
ಳಾಯತಾಕ್ಷಂಗೆರಗಿದರು ಭಯಭರಿತ ಭಕ್ತಿಯಲಿ
ತಾಯಿ ಕರುಗಳ ಬಿಡದವೊಲು ನಿ
ರ್ದಾಯದಲಿ ನಿಜಭಕ್ತಸಂಗದ
ಮಾಯೆ ಬಿಡದೈ ನಿನ್ನನೆಂದರು ಹೊರಳಿ ಚರಣದಲಿ ॥14॥

೦೧೫ ತಪದಲುರಿದು ಸಮಾಧಿ ...{Loading}...

ತಪದಲುರಿದು ಸಮಾಧಿ ಯೋಗದ
ಲುಪಶಮದಲುಬ್ಬೆದ್ದು ಹೋಮದ
ಜಪದ ಜಂಜಡದೊಳಗೆ ಸಿಲುಕಿ ಜನಾರ್ದನನ ಮರೆವ
ಅಪಸದರು ನಾವ್ ಕರ್ಮ ನಿಷ್ಠೆಯ
ಕೃಪಣರೆವಗೆಯು ತನ್ನ ತೋರುವ
ಕೃಪೆಯ ನೋಡೈ ಭೂಪಯೆನುತೀಕ್ಷಿಸಿದರಚ್ಯುತನ ॥15॥

೦೧೬ ಈಯಘಾಟದ ದೈವವಿದು ...{Loading}...

ಈಯಘಾಟದ ದೈವವಿದು ನಿ
ರ್ದಾಯದಲಿ ನಿಮ್ಮೊಳಗೆ ಸೇರಿತು
ರಾಯರಿದ್ದರು ಹಿಂದೆ ಭರತ ಭಗೀರಥಾದಿಗಳು
ಆಯಿತೇನವರಿಗೆ ಸರೋಜದ
ಳಯತಾಕ್ಷನ ಚರಣ ಸೇವೆ ನಿ
ರಾಯಸದ ಸಹವಾಸ ಭೋಜನವೆಂದನಾ ನೃಪನ ॥16॥

೦೧೭ ವರುಷ ಹದಿನಾರರಲಿ ...{Loading}...

ವರುಷ ಹದಿನಾರರಲಿ ಮೃತ್ಯುವ
ಪರುಟವಿಸಿದುದು ಕರ್ಮಗತಿ ಮುರ
ಹರನ ಸೇವೆಯ ಮಾಡಿ ಸವೆದೆನು ಸರ್ವಭಾವದಲಿ
ಕರುಣಿ ಬಿಜಯಂಗೈದು ಮೃತ್ಯುವಿ
ನುರಿವ ಗಂಟಲೊಳಿಳಿವ ತನ್ನನು
ಬರಸೆಳೆದನೆಂದಮಳ ಮಾರ್ಕಂಡೇಯ ಮುನಿ ನುಡಿದ ॥17॥

೦೧೮ ಓಕರಿಸಿದಳು ಮೃತ್ಯುವೆನ್ನನು ...{Loading}...

ಓಕರಿಸಿದಳು ಮೃತ್ಯುವೆನ್ನನು
ಲೋಕದಲಿ ಹೊರಗೆಂದು ಯಮನ ನಿ
ರಾಕರಣೆಗಳ ಜೀವ ಜಾತಿಯೊಳಲ್ಲವಿವನೆಂದು
ಲೋಕದಲಿ ಡಂಗುರವ ಹೊಯ್ಸಿದ
ನೀ ಕಮಲನಾಭನೆ ಕಣಾ ಕರು
ಣೈಕನಿಧಿ ನಿಮಗೊಲಿದನೆಂದನು ಮುನಿ ಯುಧಿಷ್ಠಿರಗೆ ॥18॥

೦೧೯ ಧರಣಿಪತಿ ಕೇಳ್ ...{Loading}...

ಧರಣಿಪತಿ ಕೇಳ್ ಪ್ರಳಯದಲಿ ಸಾ
ಗರದ ತೆರೆ ಮುಂಡಾಡಿದವು ಸಾ
ಗರದ ತೆರೆಯಲಿ ಸಕಲ ಜಲಧಿಗಳೇಕ ರೂಪದಲಿ
ಧರೆಯ ಮುಳುಗಿಸಿ ಮೇಲೆ ಮೇಲು
ಬ್ಬರಿಸಿ ಜಗದಡಿಕಿಲಿನ ಜೋಡಿಯ
ಜರುಹಿದವು ನೀರೇರಿತಗ್ಗದ ಸತ್ಯಲೋಕದಲಿ ॥19॥

೦೨೦ ಜಗದ ಜೀವರ ...{Loading}...

ಜಗದ ಜೀವರ ಕರ್ಮ ಬೀಜಾ
ಳಿಗಳ ಭೈತ್ರವ ತನ್ನ ಬಾಲಕೆ
ಬಿಗಿದು ನೀರಲಿ ನುಸುಳಿದನು ಮತ್ಸ್ಯಾವತಾರದಲಿ
ಬಗೆಯಲಾ ಹರಿಯೀತನೇ ದೃ
ಗ್ಯುಗಕೆ ಗೋಚರನಾದನರಸುವ
ನಿಗಮವೀತನ ಹಜ್ಜೆಗಾಣವು ರಾಯ ಕೇಳ್ ಎಂದ ॥20॥

೦೨೧ ಮರಳಿ ಹೂಡಿದನಿವನು ...{Loading}...

ಮರಳಿ ಹೂಡಿದನಿವನು ಜಗದ್ವಿ
ಸ್ತರಣವನು ಮಾಯಾ ಮಹೋದಧಿ
ಹೊರೆದನುನ್ನತ ಸತ್ವದಲಿ ಮೇಲಾದ ಲೋಚನದ
ಉರಿಯಲದ್ದುವನಿದನು ಲೀಲಾ
ಚರಿತವಿದು ಕೃಷ್ಣಂಗೆ ನಿನ್ನಯ
ಸಿರಿಯೆ ಸಿರಿ ಬಡತನವೆ ಬಡತನವೆಂದನಾ ಮುನಿಪ ॥21॥

೦೨೨ ಅರಸ ಕೇಳ್ ...{Loading}...

ಅರಸ ಕೇಳ್ ಕಲ್ಪಾಂತದಲಿ ಬಿಡೆ
ಬಿರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲನಿಧಿ ಜಲದೊಳೊಂದಾಯ್ತೇನನುಸುರುವೆನು
ಹರಿ ವಿನೋದದೊಳಾಲದೆಲೆಯಲಿ
ಸಿರಿ ಸಹಿತ ಪವಡಿಸಿದನಿನ ಶಶಿ
ಕಿರಣವಿಲ್ಲ ಮಹಾಂಧಕಾರ ಸಭಾರವಾಯ್ತೆಂದ ॥22॥

೦೨೩ ಈ ನೆಲನನೀ ...{Loading}...

ಈ ನೆಲನನೀ ಚಂದ್ರ ಸೂರ್ಯ ಕೃ
ಶಾನು ತೇಜವನೀ ಸಮೀರಣ
ನೂನ ಭುವನವ ಕಾಣೆನೊಂದೇ ಸಲಿಲ ಸೃಷ್ಟಿಯಲಿ
ಏನ ಹೇಳುವೆನೆನ್ನ ಚಿತ್ತ
ಗ್ಲಾನಿಯನು ಬಲುತೆರೆಯ ಹೊಯ್ಲಿನೊ
ಳಾನು ಮುಳುಗುತ್ತೇಳುತಿದ್ದೆನು ರಾಯ ಕೇಳ್ ಎಂದ ॥23॥

೦೨೪ ಹೇಳಲೇನದ ಮೃತ್ಯುವಿನ ...{Loading}...

ಹೇಳಲೇನದ ಮೃತ್ಯುವಿನ ಗೋ
ನಾಳಿಯೊಳಗಂದಿಳಿಯಲೊಲ್ಲದೆ
ಕಾಳು ಮಾಡಿದೆನೇ ಮುರಾರಿಯ ಭಜಿಸಿ ಭಕ್ತಿಯಲಿ
ಬಾಲಕನೊಳವಗುಣವನಕಟಾ
ತಾಳಬಹುದೇ ತಾಯೆ ಮೃತ್ಯುವ
ತಾಳಿಗೆಯ ತೆಗೆದೆನ್ನನೊಳಕೊಳ್ಳೆಂದು ಹಲುಬಿದೆನು ॥24॥

೦೨೫ ನೀರು ಹೊಕ್ಕುದು ...{Loading}...

ನೀರು ಹೊಕ್ಕುದು ನೂಕಿ ವಿವಿಧ
ದ್ವಾರದಲಿ ಬೆಂಡೇಳ್ವೆನೊಮ್ಮತಿ
ದೂರ ಮುಳುಗುವೆನಡ್ಡ ಬೀಳ್ವೆನು ತೆರೆಯ ಹೊಯ್ಲಿನಲಿ
ಮಾರಿಗುಬ್ಬಸವೆನ್ನ ಮರಣವ
ನಾರು ಕಂಡರು ಹೇಸಿ ನನ್ನನು
ದೂರ ಬಿಸುಟಳು ಮೃತ್ಯು ಬಳಲಿದೆ ನಿಂತು ಹಲಕಾಲ ॥25॥

೦೨೬ ಮುಳುಗುತೇಳುತ ಬರುತ ...{Loading}...

ಮುಳುಗುತೇಳುತ ಬರುತ ವಟ ಕುಜ
ದೆಲೆಯಲೀತನ ಕಂಡೆನೈ ನಾ
ನೆಳತಟಕೆ ಬಿದ್ದಂತೆ ತೆರೆಯೆಡತರಕೆ ತನಿಗೆಡೆದು
ಜಲಜಸಂಭವನಾ ಜಲವ ಮು
ಕ್ಕುಳಿಸುತುಗುಳುತ ನಾಲ್ಕು ಮುಖದಲಿ
ನಿಲುಕಿ ನಿಗುರುತ ನಿಲುತ ಬಂದನು ಕಂಡನೀ ಹರಿಯ ॥26॥

೦೨೭ ಆರು ನೀನೆನುತಾತನೀತನ ...{Loading}...

ಆರು ನೀನೆನುತಾತನೀತನ
ಸಾರಿದನು ಬೆಸಗೊಳಲು ಜಗದಾ
ಧಾರಕನು ಜಗದುದರ ಹರಿ ತಾನೆಂದೊಡಜ ನಗುತ
ಭೂರಿ ಜಗವೆನ್ನುದರದಲಿ ನೀ
ನಾರು ಜಗಕೆಂದೆನುತ ಗರುವ ವಿ
ಕಾರದಲಿ ಪರಮೇಷ್ಠಿ ನಿಜತೇಜನಪಚಾರಿಸಿದ ॥27॥

೦೨೮ ಆದುವೇ ನಿನ್ನುದರದಲಿ ...{Loading}...

ಆದುವೇ ನಿನ್ನುದರದಲಿ ಜಗ
ವಾದೊಡೀಕ್ಷಿಪೆನೆನುತಲೀ ಕಮ
ಲೋದರನು ಕಮಲಜನ ಜಠರವ ಹೊಕ್ಕು ಹೊರವಂಟು
ಭೇದಿಸಿದೆ ನಾನೆನ್ನ ಜಠರದೊ
ಳಾದ ಲೋಕವನೆಣಿಸಿ ಬಾಯೆನ
ಲಾ ದುರಾಗ್ರಹಿಯಿಳಿದನಸುರಾಂತಕನ ಜಠರದಲಿ ॥28॥

೦೨೯ ಹೊಲಬುದಪ್ಪಿದನಲ್ಲಿ ಭುವನಾ ...{Loading}...

ಹೊಲಬುದಪ್ಪಿದನಲ್ಲಿ ಭುವನಾ
ವಳಿಗಳಿದ್ದವು ಕೋಟಿ ರುದ್ರಾ
ವಳಿಗಳಿದ್ದರು ಕೋಟಿ ಪರಮೇಷ್ಠಿಗಳು ಶತಕೋಟಿ
ಹುಲು ನೊರಜು ಸಾಗರದ ಸಲಿಲವ
ನಳೆವವೊಲು ನೊಣ ಹಾರಿ ಗಗನದ
ತಲೆಗಡೆಯ ಕಾಣಿಸುವದೆಂಬವೊಲಾಯ್ತು ಕೇಳ್ ಎಂದ ॥29॥

೦೩೦ ಹಲವು ಯುಗ ...{Loading}...

ಹಲವು ಯುಗ ಪರಿಯಂತರಲ್ಲಿಯೆ
ತೊಳಲಿ ಕಡೆಗಾಣದೆ ಕೃಪಾಳುವ
ನೊಲಿದು ಹೊಗಳಿದನಜನು ವೇದಸಹಸ್ರ ಸೂಕ್ತದಲಿ
ಬಳಿಕ ಕಾರುಣ್ಯದಲಿ ನಾಭೀ
ನಳಿನದಲಿ ತೆಗೆದನು ವಿರಿಂಚಿಗೆ
ನಳಿನಸಂಭವನೆಂಬ ಹೆಸರಾಯ್ತಂದು ಮೊದಲಾಗಿ ॥30॥

೦೩೧ ಆ ಮಹಾ ...{Loading}...

ಆ ಮಹಾ ಜಲಕಗ್ನಿ ಮುಖದಲಿ
ಹೋಮವಾಯ್ತು ತದಗ್ನಿಯಡಗಿದು
ದಾ ಮರುತ್ತಿನಲಾ ಬಹಳ ಬಹಿರಾವರಣ ಪವನ
ವ್ಯೋಮದಲಿ ತದಹಮ್ಮಹತ್ತು ವಿ
ರಾಮವಾ ಪ್ರಕೃತಿಯಲಿ ಮಾಯಾ
ಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ ॥31॥

೦೩೨ ಏಸು ದಿನವೀ ...{Loading}...

ಏಸು ದಿನವೀ ಜಗದ ಬಾಳುವೆ
ಯೇಸು ದಿನವೀ ಪ್ರಳಯಮಯ ಪರಿ
ಭಾಸಮಾನ ಬ್ರಹ್ಮತೇಜೋರೂಪವೇಸು ದಿನ
ಆ ಸದಾನಂದೈಕ ರಸಕೆ ಪ
ರಾಸಿತಾವಿದ್ಯಾಪ್ರಪಂಚವಿ
ಲಾಸವಾಯ್ತು ವಿಭಾಗಸೃಷ್ಟಿವಿಧಾನಚಿಂತೆಯಲಿ ॥32॥

೦೩೩ ಏಕಮೇವಾದ್ವಿತಿಯಮೆಮ್ಬ ನಿ ...{Loading}...

ಏಕಮೇವಾದ್ವಿತಿಯಮೆಂಬ ನಿ
ರಾಕುಳಿತ ತೇಜೋನಿಧಿಗೆ ಮಾ
ಯಾ ಕಳತ್ರದೊಳಾಯ್ತು ನಿಜಗುಣ ಭೇದವವರಿಂದ
ಆ ಕಮಲಭವನೀ ಮುಕುಂದ ಪಿ
ನಾಕಿಯೆಂಬಭಿಧಾನದೊಳ್ ತ್ರಿಗು
ಣಾಕೃತಿಯ ಕೈಕೊಂಡನುರು ಲೀಲಾ ವಿನೋದದಲಿ ॥33॥

೦೩೪ ಆ ರಜೋಗುಣಕಬುಜಭವನಧಿ ...{Loading}...

ಆ ರಜೋಗುಣಕಬುಜಭವನಧಿ
ಕಾರಿ ತನ್ನ ಶರೀರದರ್ಧವ
ನಾರಿಯನು ಮಾಡಿದನು ಶತರೂಪಾಭಿಧಾನದಲಿ
ಸೇರಿಸಿದನರ್ಧದಲಿ ಮನುವನು
ದಾರ ಚರಿತನು ಸಕಲ ಧರ್ಮದ
ಸಾರವನು ವಿಸ್ತರಿಸಿದನು ಮನು ಭುವನವಿಭುವಾಗಿ ॥34॥

೦೩೫ ಭೃಗು ಪುಲಸ್ತ್ಯ ...{Loading}...

ಭೃಗು ಪುಲಸ್ತ್ಯ ವಸಿಷ್ಠ ದಕ್ಷಾ
ದಿಗಳೆನಿಪ್ಪ ನವವ್ರಜೇಶ್ವರ
ರೊಗುಮಿಗೆಯ ಮಾಡಿದನು ಸೃಷ್ಟಿಗೆ ಬೇರೆ ಬೇರವರ
ಜಗದ ಜೋಡಣೆಯಾಯ್ತು ಭೂತಾ
ಳಿಗೆ ಚತುರ್ವಿಧ ಸೃಷ್ಟಿಯೊಡ್ಡಣೆ
ನಿಗಮ ಮತದಲಿ ಹೂಡಿತವನೀಪಾಲ ಕೇಳ್ ಎಂದ ॥35॥

೦೩೬ ಆದಿಯಲಿ ಕೃತಯುಗ ...{Loading}...

ಆದಿಯಲಿ ಕೃತಯುಗ ಹರಿಶ್ಚಂ
ದ್ರಾದಿಗಳು ಸೂರ್ಯಾನ್ವಯಕೆ ಬುಧ
ನಾದಿ ನಿಮ್ಮನ್ವಯಕೆ ಬಳಿಕ ಪುರೂರವ ಕ್ಷಿತಿಪ
ಮೇದಿನಿಯನಾ ಯುಗದಲವರೋ
ಪಾದಿ ಸಲಹಿದರಿಲ್ಲ ಬೆಳಗಿತು
ವೇದ ಬೋಧಿತ ಧರ್ಮ ಸೂರ್ಯಪ್ರಭೆಗೆ ಮಿಗಿಲಾಗಿ ॥36॥

೦೩೭ ಆ ಯುಗದ ...{Loading}...

ಆ ಯುಗದ ತರುವಾಯಲಾ ತ್ರೇ
ತಾಯುಗವಲೇ ಬಳಿಕ ಧರ್ಮದ ಲಾ
ಯದಲಿ ಕಟ್ಟಿದರಧರ್ಮವನೊಂದು ಪಾದದಲಿ
ರಾಯ ಕೇಳೈ ದ್ವಾಪರದಲಿ ದೃ
ಢಾಯದಲಿ ತಾ ಧರ್ಮವೆರಡಡಿ
ಬೀಯವಾದುದು ನಿಂದುದೆನಿಸಿತು ನಿನ್ನ ದೆಸೆಯಿಂದ ॥37॥

೦೩೮ ಕಲಿಯ ರಾಜ್ಯದಲೊನ್ದು ...{Loading}...

ಕಲಿಯ ರಾಜ್ಯದಲೊಂದು ಪಾದದ
ಸಲುಗೆ ಧರ್ಮಕ್ಕಹುದು ಗಡ ವೆ
ಗ್ಗಳೆಯವದರೊಳಸತ್ಯ ಧರ್ಮದ್ರೋಹ ಮಾತ್ಸರ್ಯ
ಕಳವು ಹಿಂಸೆಯನೀತಿ ಲೋಭ
ಸ್ಖಲಿತವಾರಡಿ ಠಕ್ಕು ವಂಚನೆ
ಹಳಿವು ಹಾದರಗವತೆಯೆಂಬಿವರುಬ್ಬು ಹಿರಿದೆಂದ ॥38॥

೦೩೯ ಈಯಧರ್ಮವ ಪತಿಕರಿಸಿ ...{Loading}...

ಈಯಧರ್ಮವ ಪತಿಕರಿಸಿ ತ
ನ್ನಾಯತಕೆ ಭೂತಳವ ತಂದು ನಿ
ರಾಯಸದಲೇ ಬಳಸುತಿರ್ದನು ದುಂದುವೆಂಬಸುರ
ರಾಯ ಕೇಳಾ ದೈತ್ಯನನು ತ
ನ್ನಾಯಧಕೆ ಬಲಿಗೊಟ್ಟು ಬಳಿಕ
ಸ್ಥಾಯಿ ಧರ್ಮವ ಬಲಿದು ಕೊಟ್ಟನು ದುಂದುಮಾರನೃಪ ॥39॥

೦೪೦ ಆ ನೃಪನ ...{Loading}...

ಆ ನೃಪನ ರಾಜ್ಯದಲಿ ಯಜ್ಞ ವಿ
ಧಾನ ವೈದಿಕವಿಧಿ ಕೃತಾನು
ಷ್ಠಾನ ಯಮ ನಿಯಮಾದಿ ಯೋಗವಿಶಿಷ್ಟ ನೀತಿಯಲಿ
ದೀನ ಭಾವವನುಳಿದು ಯಾಚ್ನಾ
ಹೀನ ವೃತ್ತಿಯ ಬಿಸುಟು ಲೋಕದ
ಭಾನು ತೇಜದಲೆಸೆದುದಂದು ಮಹೀಸುರವ್ರಾತ ॥40॥

೦೪೧ ರಣದೊಳಹಿತರ ಶಿರದ ...{Loading}...

ರಣದೊಳಹಿತರ ಶಿರದ ಮಿದುಳೌ
ತಣವು ಶಸ್ತ್ರಕೆ ವಿತ್ತ ಭೂಸುರ
ಗಣಕೆ ವರಯವ್ವನದ ವಿಭ್ರಮ ನಿಜಸತೀಜನಕೆ
ಗುಣ ಮನುಷ್ಯವ್ರಜಕೆ ಪರಿ ರ
ಕ್ಷಣವಶೇಪ ವ್ರಜಕೆನಲು ಧಾ
ರುಣಿಪತಿಗಳೊಪ್ಪಿದರು ಕೃತಯುಗದಾದಿ ಕಾಲದಲಿ ॥41॥

೦೪೨ ಪ್ರೌಢನೇ ವ್ಯವಹರಿಸಲಗ್ಗದ ...{Loading}...

ಪ್ರೌಢನೇ ವ್ಯವಹರಿಸಲಗ್ಗದ
ಮೂಢನೇ ಬರಲೊಂದೆ ಸತ್ಯ ನಿ
ರೂಢಿಯಲಿ ವಾಣಿಜ್ಯ ಸುವ್ಯವಹಾರ ಮಾರ್ಗದಲಿ
ಗಾಢ ವಿಕ್ರಯ ಸಕ್ರಯದೊಳೇ
ಗೂಢಕರು ಮೂಲೈಕ ಲಾಭ ನಿ
ರೂಢ ಪರರೊಪ್ಪಿದರು ವೈಶ್ಯರು ಧರ್ಮಕಾಲದಲಿ ॥42॥

೦೪೩ ನಿಜಕೃಷಿ ವ್ಯವಸಾಯದಲಿ ...{Loading}...

ನಿಜಕೃಷಿ ವ್ಯವಸಾಯದಲಿ ತ
ದ್ದ್ವಿಜ ಕುಲದ ಶುಶ್ರೂಷೆಯಲಿ ಪಾ
ದಜರು ಕೃತ ಕೃತ್ಯರು ಚತುರ್ವರ್ಣದಲಿ ಮಾರ್ಗವಿದು
ನಿಜನಿಜಾಂಗದ ಧರ್ಮಗತಿಯಲಿ
ಮಜಡರಾದರೆ ಮನುಜರಾದವ
ರಜನ ಪರಮಾಯುಷ್ಯ ಪರಿಯಂತಿಹರು ನರಕದಲಿ ॥43॥

೦೪೪ ನಯವಿದನೆ ಕೇಳ್ ...{Loading}...

ನಯವಿದನೆ ಕೇಳ್ ವೇದ ಶಾಸ್ತ್ರಾ
ಧ್ಯಯನದಲಿ ಪಿತೃಮಾತೃ ಶುಶ್ರೂ
ಷೆಯಲಿ ಗುರು ಪರಿಚರ್ಯದಲಿ ವಿಮಲಾಗ್ನಿ ಕಾರ್ಯದಲಿ
ನಿಯತ ಮೌನವ್ರತದ ಸಂಗ
ಪ್ರಿಯದ ಶೌಚಾಸ್ತೇಯದಿಂದ್ರಿಯ
ಜಯದ ವಿಮಲ ಬ್ರಹ್ಮಚರ್ಯಾಶ್ರಮದ ಗತಿಯೆಂದ ॥44॥

೦೪೫ ದೇವ ಗುರು ...{Loading}...

ದೇವ ಗುರು ಪಿತೃ ವಹ್ನಿ ಶುಶ್ರೂ
ಷಾವಧಾನ ನಿರಂತ ಷಟ್ಕ
ರ್ಮಾವಲಂಬ ನಿಜೋನ್ನತಾಲಾಭೈಕ ಸಂತೋಷ
ಪಾವನವ್ರತ ನಿಜ ಪುರಂಧ್ರೀ
ಸೇವೆ ಸತ್ಯಾಸ್ತೇಯ ಶೌಚ ಗು
ಣಾವಳಿಗಳುಳ್ಳಾತ ಗೃಹಪತಿಯೆಂದನಾ ಮುನಿಪ ॥45॥

೦೪೬ ವನ ವನದೊಳಾಶ್ರಮದೊಳಗೆ ...{Loading}...

ವನ ವನದೊಳಾಶ್ರಮದೊಳಗೆ ಕುಲ
ವನಿತೆ ಸಹಿತಮಲಾಗ್ನಿ ಹೋತ್ರದ
ನೆನಹು ತಪ್ಪದೆ ಕಂದಮೂಲ ಫಲಾಶನಂಗಳಲಿ
ವಿನಯ ಯಜ್ಞ ತಪೋವ್ರತಾದಿಗ
ಳನಿತರಲಿ ನಿಷ್ಠಾತ್ಮನಾದೊಡೆ
ವಿನುತ ವಾನಪ್ರಸ್ಥನೆಂಬರು ರಾಯ ಕೇಳ್ ಎಂದ ॥46॥

೦೪೭ ಮದನನಮ್ಬನು ಮುರಿದು ...{Loading}...

ಮದನನಂಬನು ಮುರಿದು ರೋಷವ
ಕದನದಲಿ ಸೋಲಿಸಿದು ಲೋಭವ
ನೊದೆದು ಮೋಹವ ನೂಕಿಯುಳಿದಾ ಮದವ ಮತ್ಸರದ
ಎದೆಯಲಂಕವ ಬರೆದು ವೈರಾ
ಗ್ಯದ ಸುಸಮ್ಯಗ್‍ಜ್ಞಾನ ಯೋಗದ
ಪದದ ಬೆಳೆ ಸಿರಿವಂತನೇ ಯತಿಯೆಂದನಾ ಮುನಿಪ ॥47॥

೦೪೮ ಧರಣಿಪತಿ ಕೇಳ್ ...{Loading}...

ಧರಣಿಪತಿ ಕೇಳ್ ಜಾತಿ ವರ್ಗದ
ಪರಮ ಧರ್ಮದ ಸಾರವಿದನಾ
ಚರಿಸಿ ಸಿದ್ಧಿಯನೈದಿದನ ಪಿತೃಮಾತೃ ಭಕ್ತಿಯಲಿ
ಒರೆಗೆ ಬಣ್ಣಕೆ ಬೆರಸಿ ವೇದೋ
ಚ್ಚರಿತ ಧರ್ಮವನರುಹಿದನು ಭೂ
ಸುರಗೆ ಧರ್ಮವ್ಯಾಧನೆಂಬನ ಕಥೆಯ ಕೇಳ್ ಎಂದ ॥48॥

+೧೪ ...{Loading}...