೧೩

೦೦೦ ಸೂ ಅಡವಿಯಲಿ ...{Loading}...

ಸೂ. ಅಡವಿಯಲಿ ಫಣಿಭೋಗದಲಿ ಬಿಗಿ
ವಡೆದು ಬಳಲಿದ ಭೀಮಸೇನನ
ಬಿಡಿಸಿದನು ಯಮಸೂನು ಧರ್ಮಕಥಾ ಪ್ರಸಂಗದಲಿ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಪಾಶುಪತಾಸ್ತ್ರ ವೇದದ
ಪಾಳಿಯುಚ್ಚರಣೆಯಲಿ ತತ್ಪ್ರಣವ ಸ್ವರೂಪವೆನೆ
ಮೇಳವಿಸಿತರುಣಾಂಶು ಪೂರ್ವ ದಿ
ಶಾ ಲತಾಂಗಿಯ ಮಂಡನೋಚಿತ
ಮೌಳಿಮಾಣಿಕವೆನಲು ಮೆರೆದುದು ಬಿಂಬ ದಿನಮಣಿಯ ॥1॥

೦೦೨ ಅರಸನುಪ್ಪವಡಿಸಿದನೆದ್ದನು ವರ ...{Loading}...

ಅರಸನುಪ್ಪವಡಿಸಿದನೆದ್ದನು
ವರ ವೃಕೋದರನರ್ಜುನನ ದೃಗು
ಸರಸಿರುಹವರಳಿದವು ಮಾದ್ರೀಸುತರು ಮೈಮುರಿದು
ಹರಿಯ ನೆನೆದರು ನಿದ್ರೆ ತಿಳಿದುದು
ಪರಿಜನಕೆ ಮುನಿನಿಕರವೆದ್ದುದು
ತರಣಿ ಸಂಧ್ಯಾಸಮಯ ಸತ್ಕೃತಿ ಜಪ ಸಮಾಧಿಯಲಿ ॥2॥

೦೦೩ ಮುನಿಜನಕೆ ಕೈಮುಗಿದು ...{Loading}...

ಮುನಿಜನಕೆ ಕೈಮುಗಿದು ಯಮ ನಂ
ದನನ ಚರಣಕ್ಕೆರಗಿ ಶಂಭುವ
ನೆನೆದು ಗವಸಣಿಗೆಯಲಿ ತೆಗೆದನು ಗರುವ ಗಾಂಡಿವವ
ಜನಪ ಕೇಳೈ ಕೊಪ್ಪಿನಲಿ ಸಿಂ
ಜಿನಿಯ ಸಿಕ್ಕಿದನಳ್ಳಿರಿದು ಮಾ
ರ್ದನಿ ದಿಗಂತರವೊದರಲೊದರಿಸಿದನು ಮಹಾ ಧನುವ ॥3॥

೦೦೪ ಘೋರತರ ಲಯಭೈರವನ ...{Loading}...

ಘೋರತರ ಲಯಭೈರವನ ಹುಂ
ಕಾರವೋ ಸಂಹಾರ ಸುತಿಯೋಂ
ಕಾರವೋ ಕಲ್ಪಾಂತ ತಾಂಡವ ವೇದಪಂಡಿತನ
ಆರುಭಟೆಯೋ ಮೇಣ್ ತ್ರಿವಿಕ್ರಮ
ವೀರಪದಭಿನ್ನಾಬ್ಜಜಾಂಡ ಕ
ಠೋರ ರವಮೆನೆ ಮೆರೆದುದರ್ಜುನ ಚಾಪ ಟಂಕಾರ ॥4॥

೦೦೫ ಏನಿದದ್ಭುತ ರವವೆನುತ ...{Loading}...

ಏನಿದದ್ಭುತ ರವವೆನುತ ವೈ
ಮಾನಿಕರು ನಡನಡುಗಿದರು ಗ
ರ್ವಾನುನಯ ಗತವಾಯ್ತಲೇ ಸುರಪುರದ ಗರುವರಿಗೆ
ಆ ನಿರುತಿ ಯಮ ವರುಣ ವಾಯು ಕೃ
ಶಾನು ಧನದ ಮಹೇಶರೈತರ
ಲಾನೆಯಲಿ ಹೊರವಂಟನಂಬರ ಗತಿಯಲಮರೇಂದ್ರ ॥5॥

೦೦೬ ನೆರೆದುದಭ್ರದೊಳಮರ ಗಣ ...{Loading}...

ನೆರೆದುದಭ್ರದೊಳಮರ ಗಣ ಮುನಿ
ವರರು ಸಹಿತ ಯುಧಿಷ್ಠಿರಾದಿಗ
ಳೆರಡುವಂಕವ ಹೊದ್ದಿದರು ಹರಿತನಯನೆಡಬಲವ
ತರುನಿಕರ ಗಿರಿನಿಚಯವಲ್ಲಿಯ
ಪರಿಜನವು ತರುಬಿದುದು ನನಗಿದ
ನರಸ ಬಣ್ಣಿಸಲಳವೆ ನರನ ಮಹಾಸ್ತ್ರ ನಾಟಕವ ॥6॥

೦೦೭ ಮೊದಲೊಳನಲ ಮಹಾಸ್ತ್ರವನು ...{Loading}...

ಮೊದಲೊಳನಲ ಮಹಾಸ್ತ್ರವನು ಹೂ
ಡಿದನು ಹೊಗೆದುದು ಭುವನ ದಿಕ್ಕುಗ
ಳೊದರಿದವು ಪಂಟಿಸಿತು ರವಿರಥ ಗಗನ ಮಾರ್ಗದಲಿ
ಉದಧಿ ಉದಧಿಯ ತೆರೆಯ ಗಂಟಿ
ಕ್ಕಿದವು ಹರ ಹರ ಹೇಳಬಾರದ
ಹೊದರು ಹೊದಿಸಿತು ಕೀಳುಮೇಲಿನ ಜಗದ ಹಂತಿಗಳ ॥7॥

೦೦೮ ಅಹಹ ಬೆನ್ದುದು ...{Loading}...

ಅಹಹ ಬೆಂದುದು ಭುವನವಿದು ವಿ
ಗ್ರಹದ ಸಮಯವೆ ತಮ್ಮ ಲೀಲೆಗೆ
ಕುಹಕಮತಿಗಳು ತಂದರೈ ತ್ರೈಜಗಕೆ ತಲ್ಲಣವ
ರಹವಿದೇನೆಂದಭ್ರ ತಳದಿಂ
ಮಹಿಗೆ ಬಂದನು ದೇವಮುನಿ ದು
ಸ್ಸಹವಿದೇನೈ ಪಾರ್ಥ ಹೋ ಹೋ ಸಾಕು ಸಾಕೆಂದ ॥8॥

೦೦೯ ತೊಡಚದಿರು ಬೊಮ್ಮಾಸ್ತ್ರವಿದು ...{Loading}...

ತೊಡಚದಿರು ಬೊಮ್ಮಾಸ್ತ್ರವಿದು ಬಾ
ಯ್ಗಡಿಗನಿದು ನಿಮಿಷದಲಿ ಭುವನವ
ನುಡುಗಿ ತಣಿಯದಿದೊಂದು ಮತ್ತೀ ಶಾಂಭವಾದಿಗಳ
ತೊಡಚಿದೊಡೆ ಸಂಹಾರ ಸಮಯವ
ನೆಡೆಯನನುಭವಿಸುವುದು ಜಗವಿದು
ಕೆಡಿಸದಿರು ಕೆಡಿಸದಿರು ತೆಗೆ ತೆಗೆಯೆಂದನಾ ಮುನಿಪ ॥9॥

೦೧೦ ಲಕ್ಷ್ಯವಿಲ್ಲದೆ ತೊಡಚುವರೆ ...{Loading}...

ಲಕ್ಷ್ಯವಿಲ್ಲದೆ ತೊಡಚುವರೆ ನಿ
ರ್ಲಕ್ಷ್ಯಶರವೇ ನೀನುಪಾರ್ಜಿಸಿ
ದಕ್ಷಯವಲೇ ಪಾರ್ಥ ಗಣನೆಯ ಗುತ್ತಿನಂಬುಗಳೆ
ಶಿಕ್ಷೆರಕ್ಷೆಗೆ ಬಾಣವೊಂದೇ
ಲಕ್ಷ್ಯವಿದು ನೀನರಿಯದುದಕೆ ವಿ
ಲಕ್ಷ್ಯನಾದೆನು ನಾನೆನುತ ಮುನಿ ನುಡಿದನರ್ಜುನಗೆ ॥10॥

೦೧೧ ಹರಮಹಾಸ್ತ್ರಾದಿಗಳ ಲೀಲೆಯ ...{Loading}...

ಹರಮಹಾಸ್ತ್ರಾದಿಗಳ ಲೀಲೆಯ
ನರಸ ನೋಡಲು ಬೇಹುದಾದರೆ
ಬೆರಸುವುದು ತತ್ಸಮಯ ಸೈರಿಸು ನೃಪನ ಕಣುಮನವ
ಹೊರೆವ ಹೇರಾಳದ ಮಹಾ ಸಂ
ಗರವಹುದು ಮುಂದಣ ಕಥಾ ವಿ
ಸ್ತರವ ವಿರಚಿಸಬಾರದನುಚಿತವೆಂದನಾ ಮುನಿಪ ॥11॥

೦೧೨ ಅರಸ ಕೇಳೈ ...{Loading}...

ಅರಸ ಕೇಳೈ ನಾರದನ ನುಡಿ
ಗುರುತರವಲೇ ಪಾರ್ಥನಾ ಬಿಲು
ದಿರುವ ಮಗುಳಿಳುಹಿದನು ಮುನಿಪನ ಮಾತ ಮನ್ನಿಸುತ
ಹರದುದಮರರ ಮೇಲೆ ನೋಡುವ
ನೆರವಿ ದಿಗುಪಾಲಕರು ನಿಜ ಮಂ
ದಿರಕೆ ಸರಿದರು ದೇವಮುನಿ ಹಾಯಿದನು ಗಗನದಲಿ ॥12॥

೦೧೩ ಇವರು ಕಾಮ್ಯಕ ...{Loading}...

ಇವರು ಕಾಮ್ಯಕ ಕಾನನವನನು
ಭವಿಸಿ ಬಳಿಕಲ್ಲಿಂದ ಹೊರವಂ
ಟವಗಡೆಯ ಪರ್ವತಕೆ ಬಂದರು ಯಾಮುನಾಹ್ವಯದ
ದಿವಿಜರಿಪು ಹೈಡಿಂಬನಾ ತುದಿ
ಗವರನೇರಿಸಿದನು ತದಗ್ರದೊ
ಳವನಿಪತಿ ಕೆಲದಿವಸವಿದ್ದಲ್ಲಿಂದ ಹೊರವಂಟ ॥13॥

೦೧೪ ಅರಸ ಕೇಳೈ ...{Loading}...

ಅರಸ ಕೇಳೈ ಕಾರ್ತಿಕೇಯನ
ವರ ಮಹಾಶ್ರಮಕೈದಿದನು ಮುನಿ
ವರರು ಸಹಿತೊಲವಿನಲಿ ನೂಕಿದನೊಂದು ವತ್ಸರವ
ಧರಣಿಪತಿ ಬೃಹದಶ್ವನಾಶ್ರಮ
ವರಕೆ ಬಂದನು ತೀರ್ಥಸೇವಾ
ಪರಮ ಪಾವನಕರಣನಿರ್ದನು ಪರ್ಣಶಾಲೆಯಲಿ ॥14॥

೦೧೫ ಬನ್ದನೊಬ್ಬನು ಪವನಸುತನ ...{Loading}...

ಬಂದನೊಬ್ಬನು ಪವನಸುತನ ಪು
ಳಿಂದನಟವೀ ತಟದ ಖಗಮೃಗ
ವೃಂದದಿಕ್ಕೆಯ ಹಕ್ಕೆಯಾಡುಂಬೊಲದ ಸೋಹೆಗಳ
ನಿಂದ ನೆಲೆ ನೀರ್ದಾಣ ಹೆಜ್ಜೆಗ
ಳಿಂದ ಭೇದಿಸಿ ಜೀಯ ಚಿತ್ತವಿ
ಸೆಂದು ಬಿನ್ನಹ ಮಾಡಿದನು ಕಲಿ ಭೀಮಸೇನಂಗೆ ॥15॥

೦೧೬ ಇದೆ ಮಹಾ ...{Loading}...

ಇದೆ ಮಹಾ ಕಾಂತಾರವತಿ ದೂ
ರದಲಿ ವೃಕ ಶಾರ್ದೂಲ ಕೇಸರಿ
ಕದಲಿ ಕಳಭ ಕ್ರೋಢ ಖಿಳಿ ಲೂಲಾಯ ಸಾರಂಗ
ಮದದ ರಹಿಯಲಿ ಮಾನಿಸರು ಸೋಂ
ಕಿದೊಡೆ ಸೆಡೆಯವು ಹೊಲನ ಹೊದರಿ
ಕ್ಕಿದವು ದೀಹದ ಹಿಂಡಿನಂತಿರೆ ಜೀಯ ಚಿತ್ತೈಸು ॥16॥

೦೧೭ ಮೇಹುಗಾಡಿನೊಳವರ ಮೈ ...{Loading}...

ಮೇಹುಗಾಡಿನೊಳವರ ಮೈ ಮಿಗೆ
ಸೋಹಿದರೆ ಸುವ್ವಲೆಯ ಸುಬ್ಬಲೆ
ಯಾಹವದಲೇ ತೋಳ ತೆಕ್ಕೆಯ ತೋಟಿ ತೀರುವಡೆ
ತೋಹಿನಲಿ ತೊದಳಾಗಿ ಗೋರಿಯ
ಗಾಹಿನಲಿ ಗುರಿ ಗಡಬಡಿಸೆ ಬಲು
ಸಾಹಸಕ್ಕಂಜುವೆವೆ ನೀನೇಳೆಂದನಾ ಶಬರ ॥17॥

೦೧೮ ಕಣ್ಡ ಮೃಗ ...{Loading}...

ಕಂಡ ಮೃಗ ಮೈದೆಗೆಯದಿಕ್ಕೆಯ
ಹಿಂಡು ಹೊಳಹಿನ ಹುಲಿಯ ಮೇಕೆಯ
ಮಿಂಡವಂದಿಯ ಲಾವಣಿಗೆಯ ಲುಲಾಯ ಲಾಲನೆಯ
ತೊಂಡು ಮೊಲನ ತೊಡಂಕು ನವಿಲಿನ
ಖಂಡೆಯದ ಮೊಳನೆಡದ ಖಡ್ಗದ
ಹಿಂಡುಗಳ ತೋರಿಸುವೆನೇಳೆಂದನಿಲಜಗೆ ನುಡಿದ ॥18॥

೦೧೯ ಅಙ್ಗ ಚಿತ್ತವನಿತ್ತನಾ ...{Loading}...

ಅಂಗ ಚಿತ್ತವನಿತ್ತನಾ ಶಬ
ರಂಗೆ ಬಲೆಗಳ ತೆಗೆಸಿದನು ಹಸು
ರಂಗಿಯನು ತೊಟ್ಟನು ಚಡಾಳಿಸಿ ಪದದೊಳೆಕ್ಕಡವ
ಸಿಂಗ ಶರಭವನಳವಿಗೊಡಲವ
ರಂಗುಲಿಯಲಡುಪಾಯ ಲೌಡಿಯ
ಜಂಗುಳಿಯ ಜೋಡಿಸಿದನಂದು ಜವಾಯ್ಲ ಜಾಯಿಲನ ॥19॥

೦೨೦ ಮಡಿದ ಕೊಡಕೆಗಳೊಡ್ಡಿದುರದೊ ...{Loading}...

ಮಡಿದ ಕೊಡಕೆಗಳೊಡ್ಡಿದುರದೊ
ಪ್ಪಿಡಿಯ ನಡುವಿನ ಕೊಂಕಿದುಗುರಿನ
ನಿಡುವೊಡಲ ನಿರ್ಮಾಂಸ ಜಂಘೆಯ ಕೆಂಪಿನಾಲಿಗಳ
ಸಿಡಿಲುಗಳ ಗರ್ಜನೆಯ ಗಗನವ
ತುಡುಕುವಾಗುಳಿಕೆಗಳ ಮೊರಹಿನ
ಮಿಡುಕುಗಳ ನಾಯ್ ನೂಕಿದವು ಹಾಸದ ವಿಳಾಸದಲಿ ॥20॥

೦೨೧ ಹೆಸರ ನಾಯ್ಗಳು ...{Loading}...

ಹೆಸರ ನಾಯ್ಗಳು ಹಾಸ ಹರಿದು
ಬ್ಬಸದಲೂಳದವೊದರಿ ಹಿಡಿಮೃಗ
ಮಸಗಿದವು ಹದವಿಲುಗಳೊದೆದವು ಹೆದೆಯ ಹರವಿನಲಿ
ನುಸುಳಿದವು ಮೊಲನುರಿಯ ಹೊಗೆಗಳ
ದೆಸೆವಿಡಿದು ಕೆದರಿದವು ಹೊಲದಲಿ
ಹಸುಬ ಹರಡೆಗಳೇನನೆಂಬೆನು ಶಕುನ ಸೂಚಕವ ॥21॥

೦೨೨ ಬಗೆಯನಪಶಕುನವ ಮೃಗವ್ಯದ ...{Loading}...

ಬಗೆಯನಪಶಕುನವ ಮೃಗವ್ಯದ
ಸೊಗಸಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮವಿಚಾರ ವಿಸ್ತಾರ
ಹೊಗರೊಗುವ ಹೊಂಗರಿಯ ಬಿಲು ಸರ
ಳುಗಳ ಹೊದೆಗಳ ನಡೆದುದಡವಿಯ
ಬೆಗಡುಗೊಳಿಸುತ ಮುಂದೆ ಮುಂದೆ ಪುಳಿಂದ ಸಂದೋಹ ॥22॥

೦೨೩ ಬಣ್ಡಿಗಳ ಬೆಳ್ಳಾರವಲೆಗಳ ...{Loading}...

ಬಂಡಿಗಳ ಬೆಳ್ಳಾರವಲೆಗಳ
ಖಂಡವಲೆಗಳ ತಡಿಕೆವಲೆಗಳ
ಗುಂಡುವಲೆಗಳ ಬೀಸುವಲೆಗಳ ಕಾಲುಗಣ್ಣಿಗಳ
ದಂಡಿವಲೆಗಳ ತೊಡಕುವಲೆಗಳ
ಹಿಂಡುವಲೆಗಳ ಮಯಣದಂಟಿನ
ಮಂಡವಿಗೆ ಬಲೆಗಳ ಕಿರಾತರು ಕೆದರಿತಗಲದಲಿ ॥23॥

೦೨೪ ಏನನೆಮ್ಬೆನು ಜೀಯ ...{Loading}...

ಏನನೆಂಬೆನು ಜೀಯ ಹೊಕ್ಕನು
ಕಾನನವನನಿಲಜನು ಶಬರ ವಿ
ತಾನವಿಕ್ಕಿದ ವೇಡೆಗಳ ಬೆಳ್ಳಾರ ಸುತ್ತುಗಳ
ಕಾನನವನಳಿವಿನ ಶಿಲೋಚ್ಚಯ
ಸಾನುವಿನ ಗಹ್ವರದ ಗಂಡ
ಸ್ಥಾನ ದೀರ್ಘದ್ರೋಣಿಗಳಲರಸಿದರು ಮೃಗಕುಲವ ॥24॥

೦೨೫ ಬೊಬ್ಬೆಗಳ ಪಟಹದ ...{Loading}...

ಬೊಬ್ಬೆಗಳ ಪಟಹದ ಮೃದಂಗದ
ಸರ್ಬ ಲಗ್ಗೆಯ ಸೋಹಿನಲಿ ಸುಳಿ
ವಬ್ಬರಕೆ ಹಿಂಡೊಡೆದು ಹಾಯ್ದವು ಸೂಸಿದವು ದೆಸೆಗೆ
ತೆಬ್ಬಿದವು ಬೆಳ್ಳಾರವಲೆ ಹರಿ
ದುಬ್ಬಿ ಹಾಯ್ದೊಡೆ ವೇಡೆಯವರಿಗೆ
ಹಬ್ಬವಾಯ್ತೆನೇಂಬೆನಗಣಿತ ಮೃಗ ನಿಪಾತನವ ॥25॥

೦೨೬ ಹೊಕ್ಕು ತಿವಿದರು ...{Loading}...

ಹೊಕ್ಕು ತಿವಿದರು ಸಬಳದಲಿ ಜಡಿ
ವೆಕ್ಕಲನನಳವಿಯಲಿ ಹರಿಣವ
ನಿಕ್ಕಿದರು ನಾರಾಚದಲಿ ಸೈವರಿದು ಸೈರಿಭನ
ಸೊಕ್ಕಿದರು ಸುರಗಿಯಲಿ ಹೊದರಲಿ
ಹೊಕ್ಕು ಹುಲಿಗಳ ಕೆಣಕಿ ಖಡ್ಗದ
ಲಿಕ್ಕಡಿಯ ತೋರಿದರು ತೂರಿದರಖಿಳ ಮೃಗಕುಳವ ॥26॥

೦೨೭ ಕಳಚಿ ಹಾಸವನುಬ್ಬರಿಸಲ ...{Loading}...

ಕಳಚಿ ಹಾಸವನುಬ್ಬರಿಸಲ
ವ್ವಳಿಸಿ ಕಂಠೀರವನ ಮೋರೆಗೆ
ನಿಲುಕಿದವು ಕದುಬಿದವು ಹಾಯ್ದವು ಹಣುಗಿ ತುಡುಕಿದವು
ಸೆಳೆದವುಡಿದುಕ್ಕುಳಿಸಿತೆಡಬಲ
ಬಳಸಿದವು ಮೇಲ್ವಾಯ್ದು ನಿಂದು
ಚ್ಚಳಿಸಿದವು ಕುಸುಬಿದವು ಕುನ್ನಿಗಳಖಿಳಮೃಗಕುಲವ ॥27॥

೦೨೮ ಗಾಯವಡೆದೆಕ್ಕಲನ ರಭಸದ ...{Loading}...

ಗಾಯವಡೆದೆಕ್ಕಲನ ರಭಸದ
ಜಾಯಿಲಂಗಳ ಗರ್ಜನೆಯ ಪೂ
ರಾಯದೇರಿನ ಕರಡಿ ಕಾಡಾನೆಗಳ ಕಳವಳದ
ನೋಯಲೊರಲುವ ಶರಭ ಸಿಂಹ ಲು
ಲಾಯ ವೃಕ ಶಾರ್ದೂಲ ಶಶ ಗೋ
ಮಾಯು ಮೊದಲಾದಖಿಳ ಮೃಗರವ ತುಂಬಿತಂಬರವ ॥28॥

೦೨೯ ಮುಳುದೊಡಕಿನೊಳು ಕೂದಲೊನ್ದೇ ...{Loading}...

ಮುಳುದೊಡಕಿನೊಳು ಕೂದಲೊಂದೇ
ಸಿಲುಕಿ ನಿಂದವು ಚಮರಿಮೃಗ ಮರಿ
ಗಳಿಗೆ ಮೊಲೆಗೊಡುತಿರುಕಿನಲಿ ಹುದುಗಿದವು ಹುಲ್ಲೆಗಳು
ಎಳೆವರಿಯನಡಗಲಿಸಿ ನಿಂದವು
ಮಲೆತು ಸಿಂಹದ ಮಿಥುನ ಹಿಂಡಿನ
ಕಳಭವನು ಹಿಂದಿಕ್ಕಿ ವನಕರಿ ತೂಳಿದವು ಪಡೆಯ ॥29॥

೦೩೦ ಪಡೆ ಬೆದರೆ ...{Loading}...

ಪಡೆ ಬೆದರೆ ಪಡಿತಳಿಸಿ ಪವನಜ
ಹಿಡಿದು ಬೀಸಿದನಾನೆಗಳನವ
ಗಡಿಸಿ ಸಿಂಹವ ಸೀಳಿದನು ಹಾಯ್ದೆತ್ತುವೆಕ್ಕಲನ
ಮಡದಲುರೆ ಗಟ್ಟಿಸಿದ ಮುಷ್ಟಿಯೊ
ಳಡಸಿ ತಿವಿದನು ಹುಲಿಯ ಕರಡಿಯ
ಕೊಡಹಿದನು ಕೊಂದನು ವನಾಂತದೊಳಖಿಳ ಮೃಗಕುಲವ ॥30॥

೦೩೧ ಈತನುರುಬೆಗೆ ಬೆದರಿತುರು ...{Loading}...

ಈತನುರುಬೆಗೆ ಬೆದರಿತುರು ಸಂ
ಘಾತದಲಿ ಹೆಬ್ಬಂದಿಯೊಂದು ವಿ
ಘಾತದಲಿ ಹಾಯ್ದುದು ಕಿರಾತ ವ್ರಜವನೊಡೆದುಳಿದು
ಈತನರೆಯಟ್ಟಿದನು ಶಬರ
ವ್ರಾತವುಳಿದುದು ಹಿಂದೆ ಭೀಮನ
ಭೀತಿಯಲಿ ಹೊಕ್ಕುದು ಮಹಾ ಗಿರಿಗಹನಗಹ್ವರವ ॥31॥

೦೩೨ ಮುಡುಹು ಸೋಙ್ಕಿದಡುಲಿದು ...{Loading}...

ಮುಡುಹು ಸೋಂಕಿದಡುಲಿದು ಹೆಮ್ಮರ
ನುಡಿದು ಬಿದ್ದುದು ಪಾದ ಘಾತದೊ
ಳಡಿಗಡಿಗೆ ನೆಗ್ಗಿದುದು ನೆಲನುಬ್ಬರದ ಬೊಬ್ಬೆಯಲಿ
ಜಡಿದುದಬುಜಭವಾಂಡವೆನಲವ
ಗಡೆಯ ಭೀಮನ ಕಳಕಳಕೆ ಕಿವಿ
ಯೊಡೆದು ತಿಳಿದುದು ನಿದ್ರೆ ಮುರಿದಿಕ್ಕೆಯ ಮಹೋರಗನ ॥32॥

೦೩೩ ತೆಕ್ಕೆ ಸಡಲಿತು ...{Loading}...

ತೆಕ್ಕೆ ಸಡಲಿತು ತರಗೆಲೆಯ ಹೊದ
ರಿಕ್ಕಲಿಸೆ ಮೈ ಮುರಿಯಲನಿಲಜ
ನೆಕ್ಕತುಳದಲಿ ಮೇಲೆ ಹಾಯ್ದನು ಕಾಣದಹಿಪತಿಯ
ಸಿಕ್ಕಿದವು ಹೆದ್ದೊಡೆಗಳುರಗನ
ತೆಕ್ಕೆಯಲಿ ಡೆಂಡಣಿಸಿ ಫಣಿಪತಿ
ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಪೇರುರವ ॥33॥

೦೩೪ ಭಟ ಮರಳಿ ...{Loading}...

ಭಟ ಮರಳಿ ಸಂತೈಸಿಕೊಂಡಟ
ಮಟಿಸಿ ಗದೆಯಲಿ ಹೊಯ್ದು ಬಿಗುಹಿನ
ಕಟಕವನು ಬಿಚ್ಚಿದನು ಹೆಚ್ಚಿದನೌಕಿ ಬೊಬ್ಬಿಡುತ
ಪುಟಿದ ಕಂತುಕದಂತೆ ಫಣಿ ಲಟ
ಕಟಿಸಲೌಕಿತು ಗಿಡಗನೆರಕೆಯ
ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ ॥34॥

೦೩೫ ಜಾಡಿಸಲು ಜಾಡಿಸಲು ...{Loading}...

ಜಾಡಿಸಲು ಜಾಡಿಸಲು ಬಿಗುಹತಿ
ಗಾಢಿಸಿತು ಕೊಡಹಿದೊಡೆ ಮಿಗೆ ಮೈ
ಗೂಡಿ ಬಿಗಿದುದು ಭುಜಗವಳಯದ ಮಂದರಾದ್ರಿಯೆನೆ
ರೂಢಿಸಿದ ಭುಜಬಲದ ಸಿರಿಯ
ಕ್ಕಾಡಿತೇ ತನಗೆನುತ ಖಾಡಾ
ಖಾಡಿಯಲಿ ಕಾತರಿಸಿ ಕಳವಳಿಸಿದನು ಕಲಿಭೀಮ ॥35॥

೦೩೬ ಅರಸ ಕೇಳಿತ್ತಲು ...{Loading}...

ಅರಸ ಕೇಳಿತ್ತಲು ಮಹೀಶನ
ಹೊರೆಯಲಾಯ್ತುತ್ಪಾತಶತ ನಿ
ಷ್ಠುರವಿದೇನೋ ದೈವಕೃತ ಫಲವಾವುದಿದಕೆನುತ
ಕರೆಸಿ ಧೌಮ್ಯಂಗರುಹಲಿದು ನ
ಮ್ಮರಸುಗಳಿಗಪಘಾತ ಸೂಚಕ
ವರಿದಿದರ ನಿರ್ವಾಹವೆಂದೊಡೆ ನೃಪತಿ ಚಿಂತಿಸಿದ ॥36॥

೦೩೭ ಭೀಮನಾವೆಡೆಯೆನೆ ಕಿರಾತ ...{Loading}...

ಭೀಮನಾವೆಡೆಯೆನೆ ಕಿರಾತ
ಸ್ತೋಮ ಸಹಿತ ಮೃಗವ್ಯ ಕೇಳೀ
ಕಾಮನೈದಿದನೆನಲು ನೃಪ ಹೊರವಂಟನಾಶ್ರಮವ
ಭೂಮಿಸುರರೊಡನೈದಿ ಬರೆ ಸಂ
ಗ್ರಾಮಧೀರನ ಹೆಜ್ಜೆವಿಡಿದು ಮ
ಹೀ ಮನೋಹರನರಸಿ ಹೊಕ್ಕನು ಘೋರ ಕಾನನವ ॥37॥

೦೩೮ ಹುದುಗಿದಗ್ಗದ ಸತ್ವ ...{Loading}...

ಹುದುಗಿದಗ್ಗದ ಸತ್ವ ದುಸ್ಸಹ
ಸದ ನಿರೂಢಶ್ವಾಸಮಯ ಗದು
ಗದಿತ ಕಂಠದ ತಳಿತಭಂಗದ ತಿರುಗುವಾಲಿಗಳ
ಹೆದರೆದೆಯ ಹೊಳ್ಳಾದ ದರ್ಪದ
ಕೆದರುಗೇಶದ ಕೆಲಕೆ ಜಾರಿದ
ಗದೆಯ ಗರುವಾಯಳಿದ ಭೀಮನ ಕಂಡನಾ ಭೂಪ ॥38॥

೦೩೯ ಅಕಟ ಹಿನ್ದನುಭವಿಸಿದೆನು ...{Loading}...

ಅಕಟ ಹಿಂದನುಭವಿಸಿದೆನು ಕಂ
ಟಕ ಹಲವನೀ ಪರಿಯ ಬಲು ಕಂ
ಟಕ ಮಹಾ ಕರ್ದಮದೊಳದ್ದಿತೆ ವಿಧಿ ಮಹಾದೇವ
ವಿಕಟ ನಾಗಾಯತ ಮದತ್ತ್ರಾ
ಣಕನ ಸಾಹಸವಡಗಿತೇ ವನ
ನಿಕಟ ಭುಜಗಾಟೋಪ ಠೌಳಿಯೊಳೆನುತ ಬಿಸುಸುಯ್ದ ॥39॥

೦೪೦ ಏನು ಕುನ್ತೀಸುತಗಪಾಯವಿ ...{Loading}...

ಏನು ಕುಂತೀಸುತಗಪಾಯವಿ
ದೇನು ಫಣಿಬಂಧನ ವಿಧಾನವಿ
ದೇನು ನಿನಗೆ ವಿನೋದವೋ ತ್ರಾಣಾಪಜಯ ವಿಧಿಯೊ
ಏನಿದಕೆ ಕರ್ತವ್ಯ ನಮಗೀ
ಹೀನ ದೆಸೆಗೆ ನಿಮಿತ್ತ ದುಷ್ಕೃತ
ವೇನು ಶಿವ ಶಿವಯೆನುತ ನುಡಿಸಿದನನಿಲನಂದನನ ॥40॥

೦೪೧ ನೋಡಿದನು ಕನ್ದೆರೆದು ...{Loading}...

ನೋಡಿದನು ಕಂದೆರೆದು ಕಂಠಕೆ
ಹೂಡಿದುರಗನ ಘೋರ ಬಂಧದ
ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
ಖೇಡನಾದನಜಾತರಿಪು ಮಾ
ತಾಡಿಸಿದನಹಿಪತಿಯನೆಲೆ ನಾ
ಡಾಡಿಗಳ ನಾಟಕದ ಫಣಿಯಲ್ಲಾರು ನೀನೆಂದ ॥41॥

೦೪೨ ಅನಿಲಸುತನಪರಾಧಿಯೋ ನೀ ...{Loading}...

ಅನಿಲಸುತನಪರಾಧಿಯೋ ನೀ
ವಿನಯ ಹೀನನೊ ಮೇಣು ಪರ ಪೀ
ಡನ ವೃಥಾ ದುಷ್ಕರ್ಮ ಸಂಗ್ರಹ ಬೇಹುದೇ ನಿನಗೆ
ದನುಜನೋ ಗಂಧರ್ವನೋ ಯ
ಕ್ಷನೊ ಸರೀಸೃಪರೂಪ ದಿವಿಜೇಂ
ದ್ರನೊ ನಿಧಾನಿಸಲರಿಯೆ ನೀನಾರೆಂದನವನೀಶ ॥42॥

೦೪೩ ಕೇಳಿದನು ಫಣಿ ...{Loading}...

ಕೇಳಿದನು ಫಣಿ ಭೀಮಸೇನನ
ಮೌಳಿ ತಲ್ಪದ ತಲೆಯ ಹೊಳಹಿನ
ನಾಲಗೆಯ ಚೂರಣದ ಝಡಿತೆಗೆ ಚಲಿಸುವಾಲಿಗಳ
ಮೇಲು ಮೊಗದಲಿ ನೃಪನ ನುಡಿಗಳ
ನಾಲಿಸುತ ನುಡಿದನು ಕರಾಳಾ
ಭೀಳ ದಂಷ್ಟ್ರಾಂತರ ವಿಸಂಸ್ಥುಳ ಜಿಹ್ವೆಗಳ ಜಡಿದು ॥43॥

೦೪೪ ಏನಹನು ನಿನಗೀತ ...{Loading}...

ಏನಹನು ನಿನಗೀತ ನೀನಾ
ರೇನು ನಿನ್ನಭಿಧಾನ ವಿಪ್ರನ
ಸೂನುವೋ ಕ್ಷತ್ರಿಯನೊ ವೈಶ್ಯನೊ ಶೂದ್ರಸಂಭವನೊ
ಏನು ನಿನಗೀ ವನಕೆ ಬರವು ನಿ
ದಾನವನು ಹೇಳೆನಲು ಕುಂತೀ
ಸೂನು ನುಡಿದನು ತನ್ನ ಪೂರ್ವಾಪರದ ಸಂಗತಿಯ ॥44॥

೦೪೫ ಸೋಮವಂಶ ಪರಮ್ಪರೆಯೊಳು ...{Loading}...

ಸೋಮವಂಶ ಪರಂಪರೆಯೊಳು
ದ್ದಾಮ ಪಾಂಡು ಕ್ಷಿತಿಪನುದಿಸಿದ
ನಾ ಮಹೀಶನ ಸುತ ಯುಧಿಷ್ಠಿರನೆಂಬುದಭಿಧಾನ
ಭೀಮನೀತನು ಪಾರ್ಥ ನಕುಲ ಸ
ನಾಮ ಸಹದೇವಾಖ್ಯ ಪಾಂಡವ
ನಾಮಧೇಯರು ನಾವೆಯೆಂದನು ಭೂಪನಾ ಫಣಿಗೆ ॥45॥

೦೪೬ ಬೀತುದಖಿಳೈಶ್ವರ್ಯ ಕಪಟ ...{Loading}...

ಬೀತುದಖಿಳೈಶ್ವರ್ಯ ಕಪಟ
ದ್ಯೂತದಲಿ ಕೌರವರು ಕೊಂಡರು
ಭೂತಳವನೆಮಗಾಯ್ತು ಬಳಿಕಟವೀ ಪರಿಭ್ರಮಣ
ಈತನೆನ್ನೊಡಹುಟ್ಟಿದನು ನೀ
ನೀತನನು ಬಿಡಬಹುದೆ ಬಿಡು ವಿ
ಖ್ಯಾತರಿಗೆ ಪರಪೀಡೆ ಧರ್ಮ ವಿನಾಶಕರವೆಂದ ॥46॥

೦೪೭ ಆದೊಡೆಲೆ ಧರಣೀಶ ...{Loading}...

ಆದೊಡೆಲೆ ಧರಣೀಶ ಧರ್ಮವ
ನಾದರಿಸುವೈ ಧರ್ಮವೆಂಬುದು
ವೇದ ಮಾರ್ಗವಲೇ ಸುಧರ್ಮದ ಸಾರ ಸಂಗತಿಯ
ಕೈದುವುಳ್ಳೊಡೆ ಕಾದು ನಿನ್ನಯ
ಸೋದರನ ಬಿಡುವೆನು ಮನಃಪರಿ
ಖೇದವನು ಬಿಸುಟೆನ್ನು ಧರ್ಮರಹಸ್ಯ ವಿಸ್ತರವ ॥47॥

೦೪೮ ಉಸುರಬಹುದೇ ಧರ್ಮತತ್ವ ...{Loading}...

ಉಸುರಬಹುದೇ ಧರ್ಮತತ್ವ
ಪ್ರಸರಣವಿದೇನೆಂದು ನೀ ಶಂ
ಕಿಸಲು ವೇದಸ್ಮೃತಿಪುರಾಣತ್ರಾಣ ತುಟ್ಟಿಸದೆ
ಎಸೆವ ವಿಪ್ರರ ಮತಿಗೆ ಸಂಭಾ
ವಿಸುವ ಧರ್ಮವನರುಹುವೆನು ನೀ
ಬೆಸಗೊಳೆಂದನು ಧರ್ಮಸುತ ನಹುಷಂಗೆ ವಿನಯದಲಿ ॥48॥

೦೪೯ ಎಸೆವ ವಿಪ್ರರ ...{Loading}...

ಎಸೆವ ವಿಪ್ರರ ಮತಿಗೆ ಸಂಭಾ
ವಿಸುವ ಧರ್ಮ ಸ್ಥಿತಿಯನಭಿವ
ರ್ಣಿಸುವೆನೆಂದೈ ಭೂಪತಿಯೆ ಭೂದೇವಕುಲದೊಳಗೆ
ಎಸೆವ ವಿಪ್ರನದಾರು ಪರಿಶೋ
ಭಿಸುವುದೈ ಬ್ರಾಹ್ಮಣ್ಯವೇತರ
ದೆಸೆಯೊಳಿದನೇ ಮುನ್ನ ಹೇಳೆನೆ ಭೂಪನಿಂತೆಂದ ॥49॥

೦೫೦ ಉರಗ ಕೇಳ್ ...{Loading}...

ಉರಗ ಕೇಳ್ ಪಿತೃಮಾತೃ ವಂಶೋ
ತ್ಕರ ವಿಶುದ್ಧ ಸದಾಗ್ನಿ ಹೋತ್ರದ
ಭರದಮಸ್ವಾಧ್ಯಾಯ ಸತ್ಯವಹಿಂಸೆ ಪರಿತೋಷ
ವರ ಗುಣಂಗಳಿವಾವನಲಿ ಗೋ
ಚರಿಸಿದಾತನೆ ವಿಪ್ರನೆಂಬರು
ಹಿರಿಯರೆಂದನು ಧರ್ಮಸುತ ನಹುಷಂಗೆ ವಿನಯದಲಿ ॥50॥

೦೫೧ ಆಯಿತಿದು ಮತವಾವುದೈ ...{Loading}...

ಆಯಿತಿದು ಮತವಾವುದೈ ಸ್ವಾ
ಧ್ಯಾಯವೆಂಬುದದೇನು ಸತ್ಯದ
ಕಾಯವಾವುದಹಿಂಸೆ ಪರಿತೋಷಂಗಳಿಂದೇನು
ರಾಯ ಹೇಳಿವರರಿವ ನಿಜಗುಣ
ದಾಯತವನೆನೆ ಧರ್ಮವತಿ ರಮ
ಣೀಯವೆನೆ ನಹುಷಂಗೆ ವಿವರಿಸಿದನು ಮಹೀಪಾಲ ॥51॥

೦೫೨ ನಿಯತವೀ ಶ್ರೋತ್ರಾದಿ ...{Loading}...

ನಿಯತವೀ ಶ್ರೋತ್ರಾದಿ ಪಂಚೇಂ
ದ್ರಿಯದ ನಿಗ್ರಹ ದಮವೆನಿಪ್ಪುದು
ಭಯವನಿತರರಿಗಾಚರಿಸದಿಹುದೇಯಹಿಂಸೆ ಕಣ
ನಯವಿದನೆ ಚಿತ್ತೈಸು ಲೋಕ
ತ್ರಯವನೊಂದೇ ಸತ್ಯದಿಂದವೆ
ಜಯಿಸಬಹುದಾ ಸತ್ಯವುಳ್ಳೊಡೆ ವಿಪ್ರನವನೆಂದ ॥52॥

೦೫೩ ಸತ್ಯವೇ ಸ್ವಾಧ್ಯಾಯ ...{Loading}...

ಸತ್ಯವೇ ಸ್ವಾಧ್ಯಾಯ ಸತ್ಯವೆ
ನಿತ್ಯಕರ್ಮ ವಿಧಾನವೊಂದೇ
ಸತ್ಯವೇ ಜಪ ಹೋಮಯಜ್ಞ ವಿಧಾನ ದಾನ ತಪ
ಸತ್ಯವುಳ್ಳೊಡೆ ಶೂದ್ರನವನಿಂ
ದತ್ಯಧಿಕನಾ ದ್ವಿಜರೊಳಗೆ ವರ
ಸತ್ಯಹೀನನೆ ಹೀನಜಾತಿಗನೆಂದನಾ ಭೂಪ ॥53॥

೦೫೪ ಧೀರನಾವನು ದಿಟ್ಟನಾರು ...{Loading}...

ಧೀರನಾವನು ದಿಟ್ಟನಾರು ವಿ
ಕಾರಿ ಯಾರು ವಿನೀತನಾರಾ
ಚಾರ ಹೀನನದಾರು ಸುವ್ರತಿ ಯಾರು ಶಠನಾರು
ಕ್ರೂರನಾರತಿಕಷ್ಟನಾರು ವಿ
ಚಾರಿ ಯಾರು ವಿಮುಕ್ತನಾರು ವಿ
ದೂರನಾರಿಹಪರಕೆ ಭೂಮೀಪಾಲ ಹೇಳೆಂದ ॥54॥

೦೫೫ ನಾರಿಯರ ಕಡೆಗಣ್ಣ ...{Loading}...

ನಾರಿಯರ ಕಡೆಗಣ್ಣ ಹೊಯ್ಲಿನ
ಧಾರೆಗಳುಕದನಾವನಾತನೆ
ಧೀರನಾತನೆ ದಿಟ್ಟನಬಲೆಯರುಬ್ಬುಗವಳದಲಿ
ಮೇರೆದಪ್ಪುವನೇ ವಿಕಾರಿ ವಿ
ಚಾರಪರನೆ ವಿನೀತನನ್ಯಾ
ಚಾರಯುತನಾಚಾರ ಹೀನನು ಫಣಿಪ ಕೇಳ್ ಎಂದ ॥55॥

೦೫೬ ಕೃತಕವಲ್ಲ ದ್ವನ್ದ್ವಸಹನೇ ...{Loading}...

ಕೃತಕವಲ್ಲ ದ್ವಂದ್ವಸಹನೇ
ವ್ರತಿ ಮುಮುಕ್ಷು ವಿಚಾರಯುಕ್ತನು
ಕೃತಕನೇ ಶಠನಪ್ರಗಲ್ಭ ಕೃತಘ್ನನೇ ಕ್ರೂರ
ಕ್ಷಿತಿಗೆ ಲೋಭಿಯೆ ಕಷ್ಟನಾತ್ಮಾ
ರತನೆ ಮುಕ್ತನು ವೇದ ಮಾರ್ಗ
ಚ್ಯುತನೆ ಲೋಕದ್ವಯಕೆ ದೂರನು ಫಣಿಪ ಕೇಳ್ ಎಂದ ॥56॥

೦೫೭ ಆರು ಭಣ್ಡರು ...{Loading}...

ಆರು ಭಂಡರು ಸುಜನ ನಿಂದ್ಯರ
ದಾರು ಹಾಲಾಹಲ ಸ್ವರೂಪರ
ದಾರು ಸಾಹಸಿ ಯಾರು ಸಜ್ಜನನಾರು ಶುಚಿ ಯಾರು
ಆರು ಹಗೆ ಸಖನಾರು ಸೇವ್ಯನ
ದಾರು ದುರ್ಲಭನಾರು ದುಸ್ಸಹ
ನಾರು ದುರ್ಮತಿ ಯಾರು ಧರ್ಮಜ ತಿಳಿಯ ಹೇಳೆಂದ ॥57॥

೦೫೮ ವ್ಯಸನಿ ನಿನ್ದ್ಯನು ...{Loading}...

ವ್ಯಸನಿ ನಿಂದ್ಯನು ರಣದೊಳೊಡೆಯನ
ಬಿಸುಟು ಹೋಹನೆ ಭಂಡನತಿ ಸಾ
ಹಸಿಕನೇ ಸೇವಕನು ಮಿತ್ರದ್ರೋಹಿಯೇ ವಿಷವು
ಪಿಸುಣನೇ ಹಗೆ ಪರಸತಿಗೆ ಮನ
ಮಿಸುಕದವನೇ ಶುಚಿ ಪರಾರ್ಥ
ವ್ಯಸನಿಯೇ ಸಜ್ಜನನು ಸರ್ಪಾಧೀಶ ಕೇಳ್ ಎಂದ ॥58॥

೦೫೯ ವಿನುತ ಪರತತ್ವಜ್ಞನತಿ ...{Loading}...

ವಿನುತ ಪರತತ್ವಜ್ಞನತಿ ಸೇ
ವ್ಯನು ಸುದುರ್ಲಭನೇ ಜಿತೇಂದ್ರಿಯ
ನನುಗುಣನೆ ಸಖನಾರು ಸೈರಿಸದವನೆ ದುಸ್ಸಹನು
ಮನುಜರಲಿ ದುರ್ಮತಿಯಲಾ ದು
ರ್ಜನರಿಗಾಶ್ರಯವೆಂದು ತೋರಿದು
ದೆನಗೆ ನಿನಗಭಿಮತವೆ ಕೈಕೊಳ್ಳೆಂದನಾ ಭೂಪ ॥59॥

೦೬೦ ಅಹುದಲೇ ಬಳಿಕೇನು ...{Loading}...

ಅಹುದಲೇ ಬಳಿಕೇನು ವಿದ್ಯಾ
ಮಹಿಮೆ ದಾನ ತಪೋಗುಣಕೆ ಸ
ನ್ನಿಹಿತನೀ ಧರ್ಮದಲಿ ಸತ್ಯಾಚಾರ ಶೀಲದಲಿ
ಕುಹಕಿಯಲ್ಲ ವಿರೋಧಿಯಲ್ಲತಿ
ಸಹಸಿಯೈ ಸಾರಜ್ಞನಲ್ಲೆನ
ಬಹುದೆ ನಿನ್ನುಕುತಿಗಳನೆಂದನು ನಹುಷನರಸಂಗೆ ॥60॥

೦೬೧ ಅರಸ ಕೇಳೈ ...{Loading}...

ಅರಸ ಕೇಳೈ ಕ್ಷಾತ್ರತೇಜವ
ಹೊರೆವುದೇ ಬ್ರಾಹ್ಮಣ್ಯ ಶಕ್ತಿ
ಸ್ಫುರಣೆ ನೀನೀ ಬ್ರಹ್ಮವರ್ಗದ ಸಾರಸೌಖ್ಯದಲಿ
ಮೆರೆದೆಲಾ ವಿಪ್ರಾವಮಾನವೆ
ಸಿರಿಗೆ ನಂಜು ಕಣಾ ಮಹೀಸುರ
ವರರುಪಾಸನೆ ನಿನಗೆ ನೀ ಕೃತಕೃತ್ಯನಹೆಯೆಂದ ॥61॥

೦೬೨ ನೂರು ಯಜ್ಞದ ...{Loading}...

ನೂರು ಯಜ್ಞದ ಹೊಯ್‍ಹೊರೆಗೆ ಹರಿ
ದೇರಿದೆನು ಸುರಪತಿಯ ಪೀಠವ
ನೋರುಗುಡಿಸಿತು ಪದವಿಯದು ವಿಪ್ರಾವಮಾನದಲಿ
ಮಾರು ಮಾತೇನೈ ಮಹೀಸುರ
ರೇರಿಸಿದರೇರುವುದು ಮುನಿದರೆ
ಹಾರಿಸುವರೈ ನೂರು ಯಜ್ಞವನೆಂದನಾ ನಹುಷ ॥62॥

೦೬೩ ಎನ್ನ ವೃತ್ತಾನ್ತದ ...{Loading}...

ಎನ್ನ ವೃತ್ತಾಂತದ ನಿಧಾನವ
ಮುನ್ನವೇ ಬೆಸ ಗೊಳಲು ಹೇಳಿದೆ
ನಿನ್ನು ನಿನ್ನಭಿಧಾನವನು ನೀನಾವನೆಂಬುದನು
ಇನ್ನು ಕೇಳುವೆನೆನಲು ನಿಮ್ಮಲಿ
ಮುನ್ನಿನವರ ಯಯಾತಿಯಯ್ಯನು
ನನ್ನ ನಾಮವೆ ನಹುಷನೆಂಬುದು ನೃಪತಿ ಕೇಳ್ ಎಂದ ॥63॥

೦೬೪ ಮಾಡಿದೆನು ಮಖಶತವನದು ...{Loading}...

ಮಾಡಿದೆನು ಮಖಶತವನದು ಹೋ
ಗಾಡಿತಿಂದ್ರನನಲ್ಲಿ ತನಗೆಡೆ
ಮಾಡಿತರಮನೆ ಕಂಡುದಾ ತೆತ್ತೀಸ ಕೋಟಿಗಳು
ನಾಡು ಬೀಡೆನಗಾಯ್ತು ವಶ ಖಯ
ಖೋಡಿಯಿಲ್ಲದೆ ಶಕ್ರಪದದಲಿ
ಜಾಡಿಸುವೆನದನೇನ ಹೇಳುವೆನೆನುತ ಬಿಸುಸುಯ್ದ ॥64॥

೦೬೫ ಅರಸ ಕೇಳೈ ...{Loading}...

ಅರಸ ಕೇಳೈ ರಂಭೆಯೂರ್ವಶಿ
ವರ ತಿಲೋತ್ತಮೆ ಗೌರಿ ಮೇನಕೆ
ಸುರಸೆ ಸುವದನೆ ಮಂಜುಘೋಷೆ ಸುಕೇಶಿ ಮೊದಲಾದ
ಸುರಸತಿಯರೆನ್ನರಮನೆಯ ತೊ
ತ್ತಿರುಗಳಾದರು ಮೂರು ಲಕ್ಷದ
ಹೊರಗೆ ಮೂವತ್ತಾರು ಸಾವಿರವೆಂದನಾ ನಹುಷ ॥65॥

೦೬೬ ಈಸು ನಾರಿಯರಿರಲು ...{Loading}...

ಈಸು ನಾರಿಯರಿರಲು ಬಯಲಭಿ
ಲಾಷೆ ದಿವಿಜೇಶ್ವರನ ರಾಣೀ
ವಾಸದಲಿ ಗರಿಗಟ್ಟಿ ತಂದುದು ತನ್ನನೀ ವಿಧಿಗೆ
ಮೀಸಲಿನ ಮಾನಿನಿಯರಲಿ ಮನ
ದಾಸೆ ಮನುಜರ ಮುರಿವುದಕೆ ನಾ
ನೈಸಲೇ ದೃಷ್ಟಾಂತವೆಂದನು ನಹುಷನರಸಂಗೆ ॥66॥

೦೬೭ ಆಧಿ ಬಿದ್ದುದು ...{Loading}...

ಆಧಿ ಬಿದ್ದುದು ಶಚಿಯ ಮೆಲಣ
ವೇಧೆಯಲಿ ವಿಟಬುದ್ಧಿ ಸಿರಿಗುಪ
ರೋಧವೈ ಸಲೆ ಸತಿಯುಪಾಯವ ಮಾಡಿ ಋಷಿಗಳಿಗೆ
ಬೋಧಿಸಿದಡವರೆನ್ನ ವಾಹನ
ಸಾಧನವೆಯಾದರು ಮುನೀಂದ್ರ ವಿ
ರೋಧವಾಯ್ತೆನಗಲ್ಲಿ ಶಪಿಸಿದನಂದಗಸ್ತ್ಯಮುನಿ ॥67॥

೦೬೮ ಸರ್ಪಗತಿ ಸರ್ಪತ್ವವೆನೆ ...{Loading}...

ಸರ್ಪಗತಿ ಸರ್ಪತ್ವವೆನೆ ಫಡ
ಸರ್ಪ ನೀನಾಗೆಂದರೆನ್ನಯ
ದರ್ಪವನು ಕೆಡೆನೂಕಿ ಬಿದ್ದೆನು ಮುನಿಯ ಚರಣದಲಿ
ಸರ್ಪತನದನುಭವಕೆ ಕಡೆಯೆಂ
ದಪ್ಪುದೆನೆ ಧರ್ಮಜನ ವರ ವಾ
ಗ್ದರ್ಪಣದಲಹುದೆಂದನಿಂದಿದು ಘಟಿಸಿತೆನಗೆಂದ ॥68॥

೦೬೯ ಎನುತ ದಿವ್ಯಾವಯವ ...{Loading}...

ಎನುತ ದಿವ್ಯಾವಯವ ಕಾಂತಿಯ
ಮಿನುಗು ಮೋಹರದೇಳ್ಗೆ ಮೂಡಿದ
ವನಿಮಿಷಾಂಗದಲುರಗ ಕಾಯದ ಕೋಹಳೆಯನುಗಿದು
ಜನಪ ನಿನ್ನೊಡಹುಟ್ಟಿದನ ಕೊ
ಳ್ಳೆನುತ ಹೇಮ ವಿಮಾನದಲಿ ಸುರ
ವನಿತೆಯರ ವಂಗಡದಲೆಸೆದನು ನಹುಷನಭ್ರದಲಿ ॥69॥

೦೭೦ ದುಗುಡದಲಿ ಬರೆ ...{Loading}...

ದುಗುಡದಲಿ ಬರೆ ಭೀಮಸೇನನ
ತೆಗೆದು ಬಿಗಿಯಪ್ಪಿದನು ಖೇದದ
ಹೊಗರಿದೇಕೆ ವೃಥಾ ಮನೋವ್ಯಥೆಯೇನು ತಾಳದಿರು
ಜಗವರಿಯೆ ನಮ್ಮನ್ವಯದ ಪೂ
ರ್ವಿಗನಲಾ ನಹುಷಂಗೆ ಬಂದು
ಬ್ಬೆಗದ ಹದನಿದು ನಮ್ಮ ಪಾಡೇನೆಂದನಾ ಭೂಪ ॥70॥

೦೭೧ ನಿನ್ನ ದೆಸೆಯಿನ್ದಾಯ್ತಲೇ ...{Loading}...

ನಿನ್ನ ದೆಸೆಯಿಂದಾಯ್ತಲೇ ಪ್ರತಿ
ಪನ್ನ ಶಾಪ ವಿಮೋಕ್ಷವಿದರಲಿ
ನಿನ್ನ ದರ್ಪಕೆ ಹಾನಿಯೇ ಹೇರಾಳ ಸುಕೃತವಿದು
ತನ್ನರಿಷ್ಟವನೀಕ್ಷಿಸದೆ ಪರ
ರುನ್ನತಿಯ ಬಯಸುವರು ಸಜ್ಜನ
ರಿನ್ನು ಸಾಕೆಂದೊರಸಿದನು ಪವನಜನ ಕಂಬನಿಯ ॥71॥

೦೭೨ ತಿಳುಹಿ ತನ್ದನು ...{Loading}...

ತಿಳುಹಿ ತಂದನು ಸಕಲ ಮುನಿಸಂ
ಕುಲ ಸಹಿತ ತನ್ನಾಶ್ರಮಕೆ ಕೋ
ಮಲೆಯ ಕೈಯಿಂದೊರಸಿದನು ಭೀಮನ ಮನೋವ್ಯಥೆಯ
ಹಳಿವು ನಮಗೆಲ್ಲಿಯದಪಾಯದ
ಜಲಧಿಗಳು ಬತ್ತುವುವು ಯದುಕುಲ
ತಿಲಕ ಗದುಗಿನ ವೀರ ನಾರಾಯಣನ ಕರುಣದಲಿ ॥72॥

+೧೩ ...{Loading}...