೦೦೦ ಸೂ ಹರನ ...{Loading}...
ಸೂ. ಹರನ ಪಾಶುಪತಾಸ್ತ್ರ ಲಾಭೋ
ತ್ಕರುಷ ಹರ್ಷೋತ್ಸವದಲಿಂದ್ರನ
ಪುರವ ಹೊಕ್ಕನು ಪಾರ್ಥನೆಸೆದನು ಶಕ್ರತೇಜದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಪರಮೇಶ್ವರನಿಂದ ಪಾಶುಪತಾಸ್ತ್ರವನ್ನು ಸಂಪಾದಿಸಿದ ಸಂತೋಷದಲ್ಲಿ ಅರ್ಜುನನು ಇಂದ್ರತೇಜಸ್ಸಿನಿಂದ ದೇವೇಂದ್ರನ ನಗರವನ್ನು ಪ್ರದೇಶಿಸಿದನು.
ಪದಾರ್ಥ (ಕ.ಗ.ಪ)
ಶಕ್ರ - ಇಂದ್ರ
ಮೂಲ ...{Loading}...
ಸೂ. ಹರನ ಪಾಶುಪತಾಸ್ತ್ರ ಲಾಭೋ
ತ್ಕರುಷ ಹರ್ಷೋತ್ಸವದಲಿಂದ್ರನ
ಪುರವ ಹೊಕ್ಕನು ಪಾರ್ಥನೆಸೆದನು ಶಕ್ರತೇಜದಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ವರ ಕೈಲಾಸವಾಸಿಯ
ಬೀಳುಗೊಂಡನು ತದ್ವಿಯೋಗದಲಿಂದ್ರಕೀಲದಲಿ
ಮೇಲುದುಗುಡದಲಸ್ತ್ರ ಲಾಭವ
ನಾಲಿಸದೆ ಶಂಕರ ಪದಾಂಬುಜ
ದೋಲಗದ ಸಿರಿ ತಪ್ಪಿತೆನುತುಮ್ಮಳಿಸಿದನು ಪಾರ್ಥ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಭೂಪನೆ ಕೇಳು. ಶಿವನನ್ನು ಬೀಳ್ಕೊಟ್ಟ ಅರ್ಜುನನು ಅಸ್ತ್ರಲಾಭವಾದದ್ದನ್ನು ಮರೆತು ಇಂದ್ರಕೀಲ ಪರ್ವತದಲ್ಲಿ ಶಿವಸಾನ್ನಿಧ್ಯ ಸೌಖ್ಯ ತಪ್ಪಿ ಹೋಯಿತಲ್ಲಾ ಎಂದು ವಿಯೋಗ ದುಃಖದಿಂದ ಉಮ್ಮಳಿಸಿದನು.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ವರ ಕೈಲಾಸವಾಸಿಯ
ಬೀಳುಗೊಂಡನು ತದ್ವಿಯೋಗದಲಿಂದ್ರಕೀಲದಲಿ
ಮೇಲುದುಗುಡದಲಸ್ತ್ರ ಲಾಭವ
ನಾಲಿಸದೆ ಶಂಕರ ಪದಾಂಬುಜ
ದೋಲಗದ ಸಿರಿ ತಪ್ಪಿತೆನುತುಮ್ಮಳಿಸಿದನು ಪಾರ್ಥ ॥1॥
೦೦೨ ಮರುಳ ದೇವಾರ್ಚನೆಯೊ ...{Loading}...
ಮರುಳ ದೇವಾರ್ಚನೆಯೊ ಕನಸಿನ
ಸಿರಿಯೊ ಶಿಶುವಿನ ಕೈಯ ರತ್ನವೊ
ಹರಿಯ ಹೂಮಾಲೆಯೊ ಮದೀಯ ವಿವೇಕ ವಿಭ್ರಮವೊ
ಹರನನೀ ಚರ್ಮಾಕ್ಷಿಯಲಿ ಗೋ
ಚರಿಸೆ ಬೇಡಿದುದಂಬು ಮತ್ರ್ಯದೊ
ಳಿರವು ಮಝ ಭಾಪೆನ್ನ ಪುಣ್ಯವೆನುತ್ತ ಬಿಸುಸುಯ್ದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಯ್ಯೋ ನನ್ನ ಪುಣ್ಯವೆ ! ಹುಚ್ಚನ ದೇವಪೂಜೆಯೋ ! ಸ್ವಪ್ನದ ಭಾಗ್ಯವೊ ! ಮಗುವಿನ ಕೈಯ ಮಾಣಿಕ್ಯವೊ ! ಕಪಿಯ ಕೈಯ ಪುಷ್ಪಮಾಲಿಕೆಯೊ ! ನನ್ನ ವಿವೇಕದ ವಿಭ್ರಮೆಯೊ ! ಪರಶಿವನನ್ನು ನನ್ನ ಕಣ್ಣಿನಲ್ಲಿ ಕಂಡಾಗಲೂ ಅಸ್ತ್ರವನ್ನು ಬೇಡಿ ಭೂಮಿಯಲ್ಲಿರುವ ವರವನ್ನು ಪಡೆದೆನಲ್ಲಾ ?’ ಎಂದು ನಿಟ್ಟುಸಿರಿಟ್ಟನು.
ಪದಾರ್ಥ (ಕ.ಗ.ಪ)
ಮರುಳ - ಹುಚ್ಚ
ಮೂಲ ...{Loading}...
ಮರುಳ ದೇವಾರ್ಚನೆಯೊ ಕನಸಿನ
ಸಿರಿಯೊ ಶಿಶುವಿನ ಕೈಯ ರತ್ನವೊ
ಹರಿಯ ಹೂಮಾಲೆಯೊ ಮದೀಯ ವಿವೇಕ ವಿಭ್ರಮವೊ
ಹರನನೀ ಚರ್ಮಾಕ್ಷಿಯಲಿ ಗೋ
ಚರಿಸೆ ಬೇಡಿದುದಂಬು ಮತ್ರ್ಯದೊ
ಳಿರವು ಮಝ ಭಾಪೆನ್ನ ಪುಣ್ಯವೆನುತ್ತ ಬಿಸುಸುಯ್ದ ॥2॥
೦೦೩ ಅರಸ ಕೇಳದ್ಭುತವನಿತ್ತಲು ...{Loading}...
ಅರಸ ಕೇಳದ್ಭುತವನಿತ್ತಲು
ಚರಮ ದಿಗ್ಭಾಗದಲಖಿಳ ಜಲ
ಚರ ನಿಕಾಯದ ಮುಂಗುಡಿಯಲಿಕ್ಕೆಲದ ಫಣಿಕುಲದ
ವರ ನದೀ ನದ ಕೋಟಿಗಳ ಸಾ
ಗರದ ಪರಿವಾರದಲಿ ಬಂದನು
ವರುಣನಮರೇಂದ್ರನ ಕುಮಾರನ ಕಾಂಬ ತವಕದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಲಾಲಿಸು. ಇಂದ್ರಸುತನನ್ನು ನೋಡುವ ಉತ್ಸಾಹದಿಂದ ಈ ಕಡೆ ಪಶ್ಚಿಮಭಾಗದ ಅಧಿಪತಿಯಾದ ವರುಣದೇವನು ಜಲಚರ, ನಾಗಕುಲ, ನದಿ-ನದ-ಸಾಗರ ಪರಿವಾರದಿಂದ ಕೂಡಿಕೊಂಡು ಆಗಮಿಸಿದನು.
ಪದಾರ್ಥ (ಕ.ಗ.ಪ)
ನದ - ಗಂಡುನದಿ
ಮೂಲ ...{Loading}...
ಅರಸ ಕೇಳದ್ಭುತವನಿತ್ತಲು
ಚರಮ ದಿಗ್ಭಾಗದಲಖಿಳ ಜಲ
ಚರ ನಿಕಾಯದ ಮುಂಗುಡಿಯಲಿಕ್ಕೆಲದ ಫಣಿಕುಲದ
ವರ ನದೀ ನದ ಕೋಟಿಗಳ ಸಾ
ಗರದ ಪರಿವಾರದಲಿ ಬಂದನು
ವರುಣನಮರೇಂದ್ರನ ಕುಮಾರನ ಕಾಂಬ ತವಕದಲಿ ॥3॥
೦೦೪ ವಿಕಟ ರಾಕ್ಷಸ ...{Loading}...
ವಿಕಟ ರಾಕ್ಷಸ ಯಕ್ಷಜನ ಗು
ಹ್ಯಕರು ಕಿನ್ನರಗಣ ಸಹಿತ ಪು
ಷ್ಪಕದಲೈತಂದನು ಧನೇಶ್ವರನಾ ತಪೋವನಕೆ
ಸಕಲ ಪಿತೃಗಣ ಸಹಿತ ದೂತ
ಪ್ರಕರ ಧರ್ಮಾಧ್ಯಕ್ಷರೊಡನಂ
ತಕನು ಬೆರಸಿದನಿಂದ್ರಕೀಲ ಮಹಾವನಾಂತರವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ತಪೋವನಕ್ಕೆ ಯಕ್ಷ-ರಾಕ್ಷಸ-ಗುಹ್ಯಕ-ಕಿನ್ನರಗಣ ಸಹಿತ ಪುಷ್ಪಕ ವಿಮಾನದಲ್ಲಿ ಕುಬೇರನು ಬಂದನು. ಹಾಗೆಯೇ ಸರ್ವಪಿತೃಗಳಿಂದ ಕೂಡಿಕೊಂಡು ಧರ್ಮಾಧ್ಯಕ್ಷರೊಂದಿಗೆ ಯಮರಾಜನೂ ಆಗಮಿಸಿದನು.
ಪದಾರ್ಥ (ಕ.ಗ.ಪ)
ಧನೇಶ್ವರ - ಕುಬೇರ
ಅಂತಕ - ಯಮ
ಮೂಲ ...{Loading}...
ವಿಕಟ ರಾಕ್ಷಸ ಯಕ್ಷಜನ ಗು
ಹ್ಯಕರು ಕಿನ್ನರಗಣ ಸಹಿತ ಪು
ಷ್ಪಕದಲೈತಂದನು ಧನೇಶ್ವರನಾ ತಪೋವನಕೆ
ಸಕಲ ಪಿತೃಗಣ ಸಹಿತ ದೂತ
ಪ್ರಕರ ಧರ್ಮಾಧ್ಯಕ್ಷರೊಡನಂ
ತಕನು ಬೆರಸಿದನಿಂದ್ರಕೀಲ ಮಹಾವನಾಂತರವ ॥4॥
೦೦೫ ಹಿಡಿಯ ಸಾಲಿನ ...{Loading}...
ಹಿಡಿಯ ಸಾಲಿನ ಸತ್ತಿಗೆಯ ಬಲ
ಕೆಡಕೆ ಕೆದರುವ ಸೀಗುರಿಯ ಮುಂ
ಗುಡಿಯ ವಿದ್ಯಾಧರ ಮಹೋರಗ ಯಕ್ಷ ರಾಕ್ಷಸರ
ಜಡಿವ ಕಹಳಾರವದ ನೆಲನು
ಗ್ಗಡಣೆಗಳ ಕೈವಾರಿಗಳ ಗಡ
ಬಡೆಯ ಗರುವಾಯಿಯಲಿ ಗಗನದಿನಿಳಿದನಮರೇಂದ್ರ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸತ್ತಿಗೆಯ ಸಾಲು, ಎಡ,ಬಲದಲ್ಲಿ ಚಾಮರಗಳು, ವಿದ್ಯಾಧರ ಉರಗ ಯಕ್ಷ ರಾಕ್ಷಸರು ಮೊಳಗಿಸುತ್ತಿರುವ ಕಹಳೆಗಳ ನಾದ, ಬಹುಪರಾಕು ಎಂಬ ಉದ್ಘೋಷಗಳ ಸಂಭ್ರಮದಲ್ಲಿ ದೇವೇಂದ್ರನು ಅಂಬರದಿಂದ ಕೆಳಗಿಳಿದು ಬಂದನು.
ಪದಾರ್ಥ (ಕ.ಗ.ಪ)
ಸತ್ತಿಗೆ - ಛತ್ರ
ಸೀಗುರಿ - ಚಾಮರ
ಕೈವಾರಿ - ಹೊಗಳು ಭಟ
ಗರುವಾಯಿ - ಸಂಭ್ರಮ, ಸೊಗಸು
ಮೂಲ ...{Loading}...
ಹಿಡಿಯ ಸಾಲಿನ ಸತ್ತಿಗೆಯ ಬಲ
ಕೆಡಕೆ ಕೆದರುವ ಸೀಗುರಿಯ ಮುಂ
ಗುಡಿಯ ವಿದ್ಯಾಧರ ಮಹೋರಗ ಯಕ್ಷ ರಾಕ್ಷಸರ
ಜಡಿವ ಕಹಳಾರವದ ನೆಲನು
ಗ್ಗಡಣೆಗಳ ಕೈವಾರಿಗಳ ಗಡ
ಬಡೆಯ ಗರುವಾಯಿಯಲಿ ಗಗನದಿನಿಳಿದನಮರೇಂದ್ರ ॥5॥
೦೦೬ ಕಣ್ಡನನಿಬರ ಬರವನೊಲಿದಿದಿ ...{Loading}...
ಕಂಡನನಿಬರ ಬರವನೊಲಿದಿದಿ
ರ್ಗೊಂಡನವರವರುಚಿತದಲಿ ಮುಂ
ಕೊಂಡು ಮನ್ನಿಸಿ ಮನವ ಪಡೆದನು ಲೋಕಪಾಲಕರ
ಖಂಡಪರಶುವಿನಸ್ತ್ರವನು ಕೈ
ಕೊಂಡೆ ನಿನಗೇನರಿದು ನೀನು
ದ್ದಂಡ ಬಲನೆಂದನಿಬರುಪಚರಿಸಿದರು ಫಲುಗುಣನ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರೆಲ್ಲರನ್ನು ಕಂಡ ಅರ್ಜುನನು ಅವರನ್ನು ಯುಕ್ತ ರೀತಿಯಿಂದ ಸ್ವಾಗತಿಸಿ ಮನ್ನಿಸಿದನು. ಅವರುಗಳಾದರೋ ‘ಪರಶಿವನಿಂದ ಪರಮಾಸ್ತ್ರವನ್ನು ಪಡೆದ ನೀನೇ ಪರಾಕ್ರಮಿಯು’ ಎಂದು ಅರ್ಜುನನನ್ನು ಹೊಗಳಿದರು.
ಮೂಲ ...{Loading}...
ಕಂಡನನಿಬರ ಬರವನೊಲಿದಿದಿ
ರ್ಗೊಂಡನವರವರುಚಿತದಲಿ ಮುಂ
ಕೊಂಡು ಮನ್ನಿಸಿ ಮನವ ಪಡೆದನು ಲೋಕಪಾಲಕರ
ಖಂಡಪರಶುವಿನಸ್ತ್ರವನು ಕೈ
ಕೊಂಡೆ ನಿನಗೇನರಿದು ನೀನು
ದ್ದಂಡ ಬಲನೆಂದನಿಬರುಪಚರಿಸಿದರು ಫಲುಗುಣನ ॥6॥
೦೦೭ ಆ ಮಹಾಸ್ತ್ರಕೆ ...{Loading}...
ಆ ಮಹಾಸ್ತ್ರಕೆ ಬಳುವಳಿಯ ಕೊ
ಳ್ಳೀ ಮದೀಯಾಸ್ತ್ರವನೆನುತ ಸು
ತ್ರಾಮನಿತ್ತನು ದಿವ್ಯಬಾಣವನಿಂದ್ರ ಸಂಜ್ಞಕವ
ಸಾಮವರ್ತಿಕ ದಂಡ ವಾರುಣ
ತಾಮಸದ ಸಮ್ಮೋಹನವಿದೆಂ
ದಾ ಮಹಾಂತಕ ವರುಣ ಧನದರು ಕೊಟ್ಟರಂಬುಗಳ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವೇಂದ್ರನಾದರೋ ಆ ಮಹಾಸ್ತ್ರಕ್ಕೆ ಬಳುವಳಿಯಾಗಿ ‘ಇಂದ್ರಸಂಜ್ಞ’ ವೆಂಬ ದಿವ್ಯಬಾಣವನ್ನು ನೀಡಿದನು. ಯಮ, ವರುಣ, ಕುಬೇರರು ಕ್ರಮವಾಗಿ ದಂಡ, ವಾರುಣಾಸ್ತ್ರ, ಸಮ್ಮೋಹನಾಸ್ತ್ರಗಳನ್ನು ಅವನಿಗೆ ಕೊಟ್ಟರು.
ಪದಾರ್ಥ (ಕ.ಗ.ಪ)
ಸುತ್ರಾಮ - ಇಂದ್ರ
ಧನದ -ಕುಬೇರ
ಮೂಲ ...{Loading}...
ಆ ಮಹಾಸ್ತ್ರಕೆ ಬಳುವಳಿಯ ಕೊ
ಳ್ಳೀ ಮದೀಯಾಸ್ತ್ರವನೆನುತ ಸು
ತ್ರಾಮನಿತ್ತನು ದಿವ್ಯಬಾಣವನಿಂದ್ರ ಸಂಜ್ಞಕವ
ಸಾಮವರ್ತಿಕ ದಂಡ ವಾರುಣ
ತಾಮಸದ ಸಮ್ಮೋಹನವಿದೆಂ
ದಾ ಮಹಾಂತಕ ವರುಣ ಧನದರು ಕೊಟ್ಟರಂಬುಗಳ ॥7॥
೦೦೮ ಎಲೆ ಧನಞ್ಜಯ ...{Loading}...
ಎಲೆ ಧನಂಜಯ ನಿನಗಿದೇನ
ಗ್ಗಳದ ಶರವೇ ನಿನ್ನ ಭಕ್ತಿಗೆ
ಸಿಲುಕಿದನು ಶಿವನಾತ ನಂಬಿದೆ ನಿನ್ನ ಸೀಮೆಯಲಿ
ಸುಲಭ ನಿನಗಿಂದಮಳ ಲಕ್ಷ್ಮೀ
ನಿಲಯ ನೀನೇ ಪೂರ್ವದಲಿ ನಿ
ರ್ಮಲಿನ ನರಋಷಿಯೆಂದು ಹರಿ ತೆಗೆದಪ್ಪಿದನು ಮಗನ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲಾ ಅರ್ಜುನ, ನಿನಗೆ ಈ ಶರಗಳು ಮಿಗಿಲೆ ? ಪರಮೇಶ್ವರನೇ ನಿನ್ನ ಭಕ್ತಿಗೆ ಮೆಚ್ಚಿದ್ದಾನೆ. ನಿನಗೆ ಶ್ರೀಮನ್ನಾರಾಯಣನೇ ಸುಲಭವಾಗಿ ದೊರಕುವವನು. ಹಿಂದೆ ನೀನು ನರನೆಂಬ ಋಷಿ”. ಎಂದು ಮಗನನ್ನು ಇಂದ್ರನು ಆಲಿಂಗಿಸಿದನು.
ಮೂಲ ...{Loading}...
ಎಲೆ ಧನಂಜಯ ನಿನಗಿದೇನ
ಗ್ಗಳದ ಶರವೇ ನಿನ್ನ ಭಕ್ತಿಗೆ
ಸಿಲುಕಿದನು ಶಿವನಾತ ನಂಬಿದೆ ನಿನ್ನ ಸೀಮೆಯಲಿ
ಸುಲಭ ನಿನಗಿಂದಮಳ ಲಕ್ಷ್ಮೀ
ನಿಲಯ ನೀನೇ ಪೂರ್ವದಲಿ ನಿ
ರ್ಮಲಿನ ನರಋಷಿಯೆಂದು ಹರಿ ತೆಗೆದಪ್ಪಿದನು ಮಗನ ॥8॥
೦೦೯ ಕೃತ ತಪಸ್ಸಿಮ್ ...{Loading}...
ಕೃತ ತಪಸ್ಸಿಂ ಭಿನ್ನ ಖೇದ
ಕ್ಷತ ಶರೀರ ವ್ಯಥೆಯನಮರಾ
ವತಿಯೊಳಗೆ ಕಳೆ ರಥಸಹಿತ ಕಳಹುವೆನು ಮಾತಲಿಯ
ಕ್ರತುಶತದ ಕೈಗಾಣಿಕೆಯ ದೀ
ಕ್ಷಿತರ ಸಿರಿಯಂತರವ ಮನವಾ
ರತೆಯದೆಂತುಂಟೊ ಕಾಣಬೇಹುದು ಪಾರ್ಥ ನೀನೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದುವರೆಗೆ ನೀನು ಮಾಡಿದ ತಪಸ್ಸಿನಿಂದ ಉಂಟಾದ ದೇಹಬಾಧೆಗಳ ನೋವನ್ನು ಅಮರಾವತಿಯಲ್ಲಿ ಕಳೆ. ರಥದೊಡನೆ ಮಾತಳಿಯನ್ನು ಕಳುಹಿಸುತ್ತೇನೆ. ನೂರು ಯಾಗಗಳನ್ನು ಮಾಡಿದವರ ಭಾಗ್ಯ ವಿಶೇಷಗಳನ್ನು ನೋಡುವಿಯಂತೆ” ಎಂದನು
ಪದಾರ್ಥ (ಕ.ಗ.ಪ)
ಮನೆವಾರತೆ - ಭಾಗ್ಯ ವಿಶೇಷ
ಮೂಲ ...{Loading}...
ಕೃತ ತಪಸ್ಸಿಂ ಭಿನ್ನ ಖೇದ
ಕ್ಷತ ಶರೀರ ವ್ಯಥೆಯನಮರಾ
ವತಿಯೊಳಗೆ ಕಳೆ ರಥಸಹಿತ ಕಳಹುವೆನು ಮಾತಲಿಯ
ಕ್ರತುಶತದ ಕೈಗಾಣಿಕೆಯ ದೀ
ಕ್ಷಿತರ ಸಿರಿಯಂತರವ ಮನವಾ
ರತೆಯದೆಂತುಂಟೊ ಕಾಣಬೇಹುದು ಪಾರ್ಥ ನೀನೆಂದ ॥9॥
೦೧೦ ಹೈ ಹಸಾದವು ...{Loading}...
ಹೈ ಹಸಾದವು ನೂರು ಯಜ್ಞದ
ಮೇಹುನಾಡನು ಮೆಟ್ಟಲೆಮ್ಮೀ
ಹೂಹೆಗಳಿಗಳವಡುವದೊಲ್ಲವೆ ನಿಮ್ಮ ಕರುಣದಲಿ
ಐಹಿಕದಲಾಮುಷ್ಮಿಕದ ಸ
ನ್ನಾಹ ಸಂಭವಿಸುವುದೆ ನಿಷ್ಪ್ರ
ತ್ಯೂಹವೆಂದೆರಗಿದನು ಫಲುಗುಣನಿಂದ್ರನಂಘ್ರಿಯಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅನುಜ್ಞೆ, ನೂರು ಯಾಗ ಮಾಡಿದವರು ಅನುಭವಿಸುವ ಸ್ವರ್ಗವನ್ನು ನಿಮ್ಮ ಕರುಣೆಯಿಂದ ನಾನು ಈ ದೇಹದಲ್ಲಿಯೇ ಪ್ರವೇಶಿಸುವಂತಾಯಿತು. ಇಹಜೀವನದಲ್ಲೇ ಆಮುಷ್ಮಿಕ ಜೀವನದ ಸುಖವು ನಿರಾತಂಕವಾಗಿ ದೊರಕುವುದು.” ಎಂದು ಇಂದ್ರನ ಪಾದಗಳಿಗೆ ಅರ್ಜುನನು ಅಭಿವಂದಿಸಿದನು.
ಪದಾರ್ಥ (ಕ.ಗ.ಪ)
ಐಹಿಕ - ಭೌತಿಕ
ಆಮುಷ್ಮಿಕ - ಪರಲೋಕಕ್ಕೆ ಸಂಬಂಧಿಸಿದ
ನಿಷ್ಪ್ರತ್ಯೂಹ -ನಿರಾತಂಕ
ಮೂಲ ...{Loading}...
ಹೈ ಹಸಾದವು ನೂರು ಯಜ್ಞದ
ಮೇಹುನಾಡನು ಮೆಟ್ಟಲೆಮ್ಮೀ
ಹೂಹೆಗಳಿಗಳವಡುವದೊಲ್ಲವೆ ನಿಮ್ಮ ಕರುಣದಲಿ
ಐಹಿಕದಲಾಮುಷ್ಮಿಕದ ಸ
ನ್ನಾಹ ಸಂಭವಿಸುವುದೆ ನಿಷ್ಪ್ರ
ತ್ಯೂಹವೆಂದೆರಗಿದನು ಫಲುಗುಣನಿಂದ್ರನಂಘ್ರಿಯಲಿ ॥10॥
೦೧೧ ಬೀಳುಗೊಟ್ಟನು ನರನನೀ ...{Loading}...
ಬೀಳುಗೊಟ್ಟನು ನರನನೀ ದಿ
ಕ್ಪಾಲರಂತರ್ಧಾನದೊಡನೆ ಸ
ಮೇಳರಾದರು ಶಕ್ರಸಾರಥಿ ಸುಳಿದನಭ್ರದಲಿ
ಜಾಳಿಗೆಯ ಮಣಿವೆಳಗುಗಳ ವೈ
ಹಾಳಿಗಳ ವೈಡೂರ್ಯದೀಪ್ತಿ ನಿ
ವಾಳಿಗಳ ಸುಪತಾಕೆ ಬೆಳಗುವ ಹೇಮರಥ ಸಹಿತ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನನ್ನು ಇಂದ್ರ ಬೀಳ್ಕೊಟ್ಟು ದಿಕ್ಪಾಲರೊಂದಿಗೆ ಅಂತರ್ಧಾನನಾದನು. ಕೂಡಲೇ ಇಂದ್ರನ ಸಾರಥಿಯಾದ ಮಾತಳಿಯು ವೈಡೂರ್ಯ ಮಣಿಕಾಂತಿಯಿಂದ ಕಂಗೊಳಿಸುವ ಸುವರ್ಣರಥದಲ್ಲಿ ಆಕಾಶದಲ್ಲಿ ಕಾಣಿಸಿಕೊಂಡನು.
ಮೂಲ ...{Loading}...
ಬೀಳುಗೊಟ್ಟನು ನರನನೀ ದಿ
ಕ್ಪಾಲರಂತರ್ಧಾನದೊಡನೆ ಸ
ಮೇಳರಾದರು ಶಕ್ರಸಾರಥಿ ಸುಳಿದನಭ್ರದಲಿ
ಜಾಳಿಗೆಯ ಮಣಿವೆಳಗುಗಳ ವೈ
ಹಾಳಿಗಳ ವೈಡೂರ್ಯದೀಪ್ತಿ ನಿ
ವಾಳಿಗಳ ಸುಪತಾಕೆ ಬೆಳಗುವ ಹೇಮರಥ ಸಹಿತ ॥11॥
೦೧೨ ಅರಸ ಕೇಳೈ ...{Loading}...
ಅರಸ ಕೇಳೈ ಹತ್ತುಸಾವಿರ
ತುರಗ ನಿಕರದ ಲಳಿಯ ದಿವ್ಯಾಂ
ಬರದ ಸಿಂಧದ ಸಾಲ ಸತ್ತಿಗೆಗಳ ಪತಾಕೆಗಳ
ಖರರುಚಿಯ ಮಾರಾಂಕವೋ ಸುರ
ಗಿರಿಯ ಸೋದರವೋ ಮೃಗಾಂಕನ
ಮರುದಲೆಯೊ ಮೇಣೆನಲು ರಥ ಹೊಳೆದಿಳಿದುದಂಬರದಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹತ್ತು ಸಾವಿರ ಕುದುರೆಗಳನ್ನು ಕಟ್ಟಿಕೊಂಡು ಛತ್ರ ಪತಾಕೆಗಳಿಂದ ಕಂಗೊಳಿಸಿದ ಇಂದ್ರರಥವು ಸೂರ್ಯತೇಜದ ಪ್ರತಿಸ್ಪರ್ಧಿಯೋ, ಮೇರುಪರ್ವತದ ತಮ್ಮನೋ, ಚಂದ್ರನ ಪ್ರತಿಬಿಂಬವೋ ಎಂಬಂತೆ ಆಕಾಶದಲ್ಲಿ ಪ್ರಕಾಶಿಸುತ್ತ ಆಕಾಶದಿಂದ ಇಳಿಯಿತು.
ಪದಾರ್ಥ (ಕ.ಗ.ಪ)
ಮರುದಲೆ -ಪ್ರತಿಬಿಂಬ
ಖರರುಚಿ - ಸೂರ್ಯ
ಮೃಗಾಂಕ - ಚಂದ್ರ
ಮಾರಾಂಕ - ಪ್ರತಿಸ್ಪರ್ಧಿ
ಮೂಲ ...{Loading}...
ಅರಸ ಕೇಳೈ ಹತ್ತುಸಾವಿರ
ತುರಗ ನಿಕರದ ಲಳಿಯ ದಿವ್ಯಾಂ
ಬರದ ಸಿಂಧದ ಸಾಲ ಸತ್ತಿಗೆಗಳ ಪತಾಕೆಗಳ
ಖರರುಚಿಯ ಮಾರಾಂಕವೋ ಸುರ
ಗಿರಿಯ ಸೋದರವೋ ಮೃಗಾಂಕನ
ಮರುದಲೆಯೊ ಮೇಣೆನಲು ರಥ ಹೊಳೆದಿಳಿದುದಂಬರದಿ ॥12॥
೦೧೩ ಏನಿದಚ್ಚರಿ ಮೇಲೆ ...{Loading}...
ಏನಿದಚ್ಚರಿ ಮೇಲೆ ಮೇಲೆ ನ
ವೀನ ದರ್ಶನವೆನ್ನ ಪುಣ್ಯ
ಸ್ಥಾನವೈ ಸಲೆಯೆನುತ ನರನಿದಿರಾದನಾ ರಥಕೆ
ನೀನಹೈ ಕಲಿ ಪಾರ್ಥನೆಂಬ ಮ
ಹಾ ನರೇಶ್ವರನೆನುತ ಮಿಗೆ ಸ
ನ್ಮಾನಿಸುತ ಸುರಪತಿಯ ಸಾರಥಿ ನಿಲಿಸಿದನು ರಥವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಏನಿದು ಆಶ್ಚರ್ಯ ! ಮತ್ತೆ ಮತ್ತೆ ಹೊಸ ದರ್ಶನ ! ಇದು ನನ್ನ ಭಾಗ್ಯ ವಿಶೇಷವೇ ಸರಿ’. ಎಂದು ಅರ್ಜುನನು ರಥದ ಎದುರು ಬಂದನು. ‘ನೀನು ವೀರನಾದ ಅರ್ಜುನನೇ ? ಎಂದು ಹೊಗಳುತ್ತಾ ಇಂದ್ರನ ಸಾರಥಿ ರಥವನ್ನು ನಿಲ್ಲಿಸಿದನು.
ಮೂಲ ...{Loading}...
ಏನಿದಚ್ಚರಿ ಮೇಲೆ ಮೇಲೆ ನ
ವೀನ ದರ್ಶನವೆನ್ನ ಪುಣ್ಯ
ಸ್ಥಾನವೈ ಸಲೆಯೆನುತ ನರನಿದಿರಾದನಾ ರಥಕೆ
ನೀನಹೈ ಕಲಿ ಪಾರ್ಥನೆಂಬ ಮ
ಹಾ ನರೇಶ್ವರನೆನುತ ಮಿಗೆ ಸ
ನ್ಮಾನಿಸುತ ಸುರಪತಿಯ ಸಾರಥಿ ನಿಲಿಸಿದನು ರಥವ ॥13॥
೦೧೪ ಲಲಿತ ಹೇಷಾ ...{Loading}...
ಲಲಿತ ಹೇಷಾ ಧ್ವನಿಯ ಹಯ ಮಂ
ಡಲದ ಮೌಳಿಯ ಮೇಲು ದಾಯದ
ಲುಳಿಯ ಚೀತ್ಕೃತಿ ರವದ ಪಲಪಲ ತೆರದ ಫಳಹರದ
ಚಲತುರಗ ಖುರಹತಿಯ ರಭಸೋ
ಚ್ಚಲಿತ ಧೂಳೀ ಧೂಸರದ ರಥ
ದೊಳಗೆ ನಿಂದಾ ಶಕ್ರಸಾರಥಿ ನುಡಿಸಿದನು ನರನ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇಗವಾಗಿ ಬಂದ ಕುದುರೆಗಳ ಕಾಲಗೊರಸಿನ ಸಪ್ಪಳಗಳಿಂದ ಕೂಡಿದ ಮತ್ತು ಅವುಗಳ ಮಧುರವಾದ ಹೇಷಾರವದೊಡನೆ ಧೂಳಿನಿಂದ ಆವೃತವಾದ ರಥದಲ್ಲಿ ಮಾತಳಿಯು ನಿಂತು ಅರ್ಜುನನನ್ನು ಮಾತಾಡಿಸಿದನು.
ಮೂಲ ...{Loading}...
ಲಲಿತ ಹೇಷಾ ಧ್ವನಿಯ ಹಯ ಮಂ
ಡಲದ ಮೌಳಿಯ ಮೇಲು ದಾಯದ
ಲುಳಿಯ ಚೀತ್ಕೃತಿ ರವದ ಪಲಪಲ ತೆರದ ಫಳಹರದ
ಚಲತುರಗ ಖುರಹತಿಯ ರಭಸೋ
ಚ್ಚಲಿತ ಧೂಳೀ ಧೂಸರದ ರಥ
ದೊಳಗೆ ನಿಂದಾ ಶಕ್ರಸಾರಥಿ ನುಡಿಸಿದನು ನರನ ॥14॥
೦೧೫ ಏಳು ಫಲುಗುಣ ...{Loading}...
ಏಳು ಫಲುಗುಣ ಹರಿ ವರೂಥದ
ಮೇಲೆ ಬಿಜಯಂಗೈವ ಬಹಳ ಫ
ಲಾಳಿಯಿದೆಲಾ ನಿನ್ನ ಪುಣ್ಯದ್ರುಮದ ಬೇರೊಡೆದು
ಸಾಲಕುರಿದರಿಹಿಗಳ ಕರ್ಮದ
ಕೂಲಿಗರ ಜಡ ಜಂಝ ಪೂಗರ
ಜಾಲ ಸಿರಿಯನಿಮಿಷರ ಪುರಿ ವಶವಾಯ್ತು ನಿನಗೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನ, ಏಳು ನಿನ್ನ ಪೂರ್ವಪುಣ್ಯದಿಂದ ಇಂದ್ರನ ರಥವನ್ನೇರುವ ಸೌಭಾಗ್ಯ ನಿನಗೆ ಬಂದೊದಗಿದೆ. ಯಜ್ಞಗಳನ್ನು ಮತ್ತು ಕಠಿಣ ತಪಸ್ಸುಗಳನ್ನು ಆಚರಿಸಿದವರಿಗೆ ದೊರೆಯುವ ಸಿರಿ ಮತ್ತು ದೇವತೆಗಳ ಪಟ್ಟಣ ನಿನಗೆ ಪ್ರಾಪ್ತವಾಯಿತು”. ಎಂದನು.
ಪದಾರ್ಥ (ಕ.ಗ.ಪ)
ಸಾಲಕುರಿದರಿಹಿ - ಕುರಿಗಳನ್ನು ಬಲಿಕೊಟ್ಟು ಯಜ್ಞಗಳನ್ನು ಮಾಡಿದವರು
ಮೂಲ ...{Loading}...
ಏಳು ಫಲುಗುಣ ಹರಿ ವರೂಥದ
ಮೇಲೆ ಬಿಜಯಂಗೈವ ಬಹಳ ಫ
ಲಾಳಿಯಿದೆಲಾ ನಿನ್ನ ಪುಣ್ಯದ್ರುಮದ ಬೇರೊಡೆದು
ಸಾಲಕುರಿದರಿಹಿಗಳ ಕರ್ಮದ
ಕೂಲಿಗರ ಜಡ ಜಂಝ ಪೂಗರ
ಜಾಲ ಸಿರಿಯನಿಮಿಷರ ಪುರಿ ವಶವಾಯ್ತು ನಿನಗೆಂದ ॥15॥
೦೧೬ ಬಲ್ಲರಾರದನಶ್ವಮೇಧದ ಮಲ್ಲರನು ...{Loading}...
ಬಲ್ಲರಾರದನಶ್ವಮೇಧದ
ಮಲ್ಲರನು ಕೃತ ರಾಜಸೂಯರು
ಬಲ್ಲರೇ ಕಡೆಬೀಡ ಕೋಟೆಯ ಗುಡಿಯ ಬೊಡ್ಡಿಯರ
ಎಲ್ಲಿಯಮರಾವತಿ ನರಾಧಮ
ರೆಲ್ಲಿ ನಾವೀಶ್ವರನ ಕರುಣದ
ಭುಲ್ಲವಣೆಯಲಿ ಭಾಗ್ಯನೆಂದನು ನಗುತ ಕಲಿಪಾರ್ಥ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಶ್ವಮೇಧ, ರಾಜಸೂಯಾದಿಗಳನ್ನು ಮಾಡಿದವರೂ ಅಮರಾವತಿಯ ಕೋಟೆಯ ಕಡೆಯ ಬೀದಿಯ ನಿಕೃಷ್ಟ ಸುಂದರಿಯರನ್ನು ಪಡೆಯುವುದೇ ಸಂದೇಹವಾಗಿದೆ. ಅಮರಾವತಿಯೆಲ್ಲಿ? ಸಾಮಾನ್ಯ ಮನುಷ್ಯರೆಲ್ಲಿ? ಈಶ್ವರನ ಅನುಗ್ರಹದಿಂದ ನಾನೇ ಭಾಗ್ಯಶಾಲಿ” ಎಂದು ಅರ್ಜುನನು ನಗುತ್ತಾ ಹೇಳಿದನು.
ಮೂಲ ...{Loading}...
ಬಲ್ಲರಾರದನಶ್ವಮೇಧದ
ಮಲ್ಲರನು ಕೃತ ರಾಜಸೂಯರು
ಬಲ್ಲರೇ ಕಡೆಬೀಡ ಕೋಟೆಯ ಗುಡಿಯ ಬೊಡ್ಡಿಯರ
ಎಲ್ಲಿಯಮರಾವತಿ ನರಾಧಮ
ರೆಲ್ಲಿ ನಾವೀಶ್ವರನ ಕರುಣದ
ಭುಲ್ಲವಣೆಯಲಿ ಭಾಗ್ಯನೆಂದನು ನಗುತ ಕಲಿಪಾರ್ಥ ॥16॥
೦೧೭ ಎನುತ ತೇರಿನೊಳೊನ್ದು ...{Loading}...
ಎನುತ ತೇರಿನೊಳೊಂದು ಕಾಲಿ
ಟ್ಟನು ಧನಂಜಯನಿಂದ್ರಕೀಲದ
ವನಕೆ ಕೈಮುಗಿದೆರಗಿ ನುಡಿದನು ಮಧುರ ವಚನದಲಿ
ಮುನಿಜನವೆ ಪರ್ವತವೆ ಪಂಕಜ
ವನವೆ ತರು ಲತೆ ಗುಲ್ಮ ಖಗ ಮೃಗ
ವನಚರವೆ ನಾ ಹೋಗಿಬಹೆನೇ ನಿಮ್ಮನುಜ್ಞೆಯಲಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತಾ ಇಂದ್ರರಥದ ಮೇಲೆ ಕಾಲಿರಿಸುತ್ತಾ ಇಂದ್ರಕೀಲವನಕ್ಕೆ ಕೈಮುಗಿದು, ಮುನಿನಿಕರ, ಪರ್ವತ, ತಾವರೆಕೊಳ, ಗಿಡಮರಬಳ್ಳಿ ಪೊದರು, ಪಕ್ಷಿ ಪ್ರಾಣಿಗಳಿಗೆಲ್ಲಾ ’ ನಿಮ್ಮ ಅನುಜ್ಞೆಯಿಂದ ನಾನು ಹೋಗಿ ಬರಲೇ ’ ಎಂದು ಮಧುರ ನುಡಿಗಳಿಂದ ಅರ್ಜುನನು ಕೇಳಿದನು.
ಪಾಠಾನ್ತರ (ಕ.ಗ.ಪ)
ವನಕೆ ಕೈಮುಗಿದರೆಗಿದನು -ವನಕೆ ಕೈಮುಗಿದೆರಗಿ ನುಡಿದನು
ಕುಮಾರವ್ಯಾಸ ಭಾರತ ಸಂಗ್ರಹ - : ಸಂ: ಎಂ ವಿ ಸೀ
ಮೂಲ ...{Loading}...
ಎನುತ ತೇರಿನೊಳೊಂದು ಕಾಲಿ
ಟ್ಟನು ಧನಂಜಯನಿಂದ್ರಕೀಲದ
ವನಕೆ ಕೈಮುಗಿದೆರಗಿ ನುಡಿದನು ಮಧುರ ವಚನದಲಿ
ಮುನಿಜನವೆ ಪರ್ವತವೆ ಪಂಕಜ
ವನವೆ ತರು ಲತೆ ಗುಲ್ಮ ಖಗ ಮೃಗ
ವನಚರವೆ ನಾ ಹೋಗಿಬಹೆನೇ ನಿಮ್ಮನುಜ್ಞೆಯಲಿ ॥17॥
೦೧೮ ಎನ್ದು ರಥವೇರಿದನು ...{Loading}...
ಎಂದು ರಥವೇರಿದನು ಪಾರ್ಥ ಪು
ರಂದರನ ಸಾರಥಿ ಗುಣೌಘವ
ನೊಂದು ನಾಲಗೆಯಿಂದ ಹೊಗಳಿದನಾ ಧನಂಜಯನ
ಗೊಂದಣದ ವಾಘೆಗಳನೆಲ್ಲವ
ನೊಂದುಗೂಡಿ ಕಿರೀಟಿ ದೃಢವಾ
ಗೆಂದು ಮಾತಲಿ ಚಪ್ಪರಿಸಿದನು ಚಪಲ ವಾಜಿಗಳ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆನ್ನುತ್ತಾ ರಥವೇರಲು, ಇಂದ್ರನ ಸಾರಥಿಯು ಅರ್ಜುನನ ಗುಣವಿಶೇಷಗಳನ್ನು ಹೊಗಳುತ್ತಾ, “ಅರ್ಜುನ, ದೃಢವಾಗಿ ಕುಳಿತುಕೋ” ಎಂದು ಹೇಳುತ್ತ್ತಾ ವಾಘೆಗಳನ್ನು ಹಿಡಿದು ಕುದುರೆಗಳನ್ನು ಚಪ್ಪರಿಸಿದನು.
ಪದಾರ್ಥ (ಕ.ಗ.ಪ)
ವಾಘೆ - ಲಗಾಮು.
ಮೂಲ ...{Loading}...
ಎಂದು ರಥವೇರಿದನು ಪಾರ್ಥ ಪು
ರಂದರನ ಸಾರಥಿ ಗುಣೌಘವ
ನೊಂದು ನಾಲಗೆಯಿಂದ ಹೊಗಳಿದನಾ ಧನಂಜಯನ
ಗೊಂದಣದ ವಾಘೆಗಳನೆಲ್ಲವ
ನೊಂದುಗೂಡಿ ಕಿರೀಟಿ ದೃಢವಾ
ಗೆಂದು ಮಾತಲಿ ಚಪ್ಪರಿಸಿದನು ಚಪಲ ವಾಜಿಗಳ ॥18॥
೦೧೯ ಆವ ಜವವೇನೆಮ್ಬ ...{Loading}...
ಆವ ಜವವೇನೆಂಬ ಗತಿ ಮೇ
ಣಾವ ದೃಢ ವೇಗಾಯ್ಲತನ ತಾ
ನಾವ ಸೂಟಿಯದಾರು ಬಲ್ಲರು ವಹಿಲ ವಿವರಣವ
ತೀವಿತಾಕಾಶವನು ಹೇಷಾ
ರಾವ ಸೂತನ ಹುಂಕೃತಿ ಧ್ವನಿ
ಯೀ ವಿಗಡ ರಥಚಕ್ರಚೀತ್ಕೃತಿ ಚಪಲ ನಿರ್ಘೋಷ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಶ್ಚರ್ಯಕರವಾದ ವೇಗದಿಂದ ರಥವು ಆಕಾಶಕ್ಕೆ ಏರಿತು. ಕುದುರೆಗಳ ಹೇಷಾರವ, ಸೂತನಾದ ಮಾತಲಿಯ ಹೂಂಕಾರಧ್ವನಿ, ರxದ ಗಡುಸಾದ ಚಕ್ರಗಳ ಚೀತ್ಕೃತಿ ಇವು ಆಕಾಶವನ್ನು ತುಂಬಿದವು.
ಮೂಲ ...{Loading}...
ಆವ ಜವವೇನೆಂಬ ಗತಿ ಮೇ
ಣಾವ ದೃಢ ವೇಗಾಯ್ಲತನ ತಾ
ನಾವ ಸೂಟಿಯದಾರು ಬಲ್ಲರು ವಹಿಲ ವಿವರಣವ
ತೀವಿತಾಕಾಶವನು ಹೇಷಾ
ರಾವ ಸೂತನ ಹುಂಕೃತಿ ಧ್ವನಿ
ಯೀ ವಿಗಡ ರಥಚಕ್ರಚೀತ್ಕೃತಿ ಚಪಲ ನಿರ್ಘೋಷ ॥19॥
೦೨೦ ತೇರು ಮೇಲಕ್ಕಡರೆ ...{Loading}...
ತೇರು ಮೇಲಕ್ಕಡರೆ ನುಡಿದನು
ಸಾರಥಿಗೆ ಕಲಿ ಪಾರ್ಥ ವಿವರಿಸು
ಧಾರುಣಿಯ ಪರ್ವತ ಸಮುದ್ರದ್ವೀಪ ನದನದಿಯ
ತೋರುವೀ ಲೋಕಂಗಳಳತೆಯ
ಸೂರಿಯನ ರಥಗತಿಯನೆಸೆವಾ
ಮೇರುವನು ಪಸರಿಸಿದ ಗಿರಿಗಳ ತಿಳಿಯ ಹೇಳೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥವು ಮೇಲೆ ಹೋಗಲು, ಅರ್ಜುನನು “ಭೂಮಿ, ಪರ್ವತ, ಸಮುದ್ರ, ದ್ವೀಪ, ನದ ನದಿಗಳು, ಕಾಣುವ ಲೋಕಗಳು, ಸೂರ್ಯನ ರಥಗತಿ ಸುತ್ತುವ ಮೇರುಪರ್ವತ ಇತ್ಯಾದಿಗಳನ್ನು ವಿವರಿಸು” ಎಂದು ಸಾರಥಿಯೊಡನೆ ಕೇಳಿದನು.
ಮೂಲ ...{Loading}...
ತೇರು ಮೇಲಕ್ಕಡರೆ ನುಡಿದನು
ಸಾರಥಿಗೆ ಕಲಿ ಪಾರ್ಥ ವಿವರಿಸು
ಧಾರುಣಿಯ ಪರ್ವತ ಸಮುದ್ರದ್ವೀಪ ನದನದಿಯ
ತೋರುವೀ ಲೋಕಂಗಳಳತೆಯ
ಸೂರಿಯನ ರಥಗತಿಯನೆಸೆವಾ
ಮೇರುವನು ಪಸರಿಸಿದ ಗಿರಿಗಳ ತಿಳಿಯ ಹೇಳೆಂದ ॥20॥
೦೨೧ ಧರೆಯನಾನ್ತವರಾರು ಧಾರುಣಿ ...{Loading}...
ಧರೆಯನಾಂತವರಾರು ಧಾರುಣಿ
ಯಿರವದೇತರ ಮೇಲೆ ದಿಗ್ದೇ
ವರ ಪುರಂಗಳವೆಲ್ಲಿಹವು ಬೊಮ್ಮಾಂಡವೆನಿತಗಲ
ಉರುತರ ಗ್ರಹರಾಶಿಯಾ ಧ್ರುವ
ನಿರವು ಮೇಲೆನಿತೆನಿತು ಯೋಜನ
ವರುಹೆನಲು ಪಾರ್ಥಂಗೆ ಮಾತಲಿ ನಗುತ ವಿವರಿಸಿದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯನ್ನು ಧರಿಸಿದವರು ಯಾರು ? ಅದು ಯಾವುದರ ಮೇಲಿದೆ ? ದಿಕ್ಪಾಲಕರ ಪಟ್ಟಣಗಳು ಎಲ್ಲಿವೆ ? ಬ್ರಹ್ಮಾಂಡದ ಅಗಲ ಎಷ್ಟು ? ಗ್ರಹರಾಶಿಗಳು ಹಾಗೂ ಧ್ರುವನಕ್ಷತ್ರ ಎಷ್ಟು ಯೋಜನ ಮೇಲಕ್ಕಿವೆ ? ಎಂದು ಅರ್ಜುನನು ಕೇಳಲು ಮಾತಲಿ ಅದಕ್ಕೆ ನಗುತ್ತಾ ಉತ್ತರಿಸಿದನು.
ಮೂಲ ...{Loading}...
ಧರೆಯನಾಂತವರಾರು ಧಾರುಣಿ
ಯಿರವದೇತರ ಮೇಲೆ ದಿಗ್ದೇ
ವರ ಪುರಂಗಳವೆಲ್ಲಿಹವು ಬೊಮ್ಮಾಂಡವೆನಿತಗಲ
ಉರುತರ ಗ್ರಹರಾಶಿಯಾ ಧ್ರುವ
ನಿರವು ಮೇಲೆನಿತೆನಿತು ಯೋಜನ
ವರುಹೆನಲು ಪಾರ್ಥಂಗೆ ಮಾತಲಿ ನಗುತ ವಿವರಿಸಿದ ॥21॥
೦೨೨ ಕೇಳು ನೀನೆಲೆ ...{Loading}...
ಕೇಳು ನೀನೆಲೆ ಪಾರ್ಥ ತಾರಾ
ಮಾಲೆಗಳ ವಿವರವನು ರವಿರಥ
ಕಾಲಚಕ್ರವನೈದಿ ಗಗನಾಂಗಣದಿ ಚರಿಯಿಪುದ
ಲೀಲೆಯಿಂದಬುಜೋದರನು ಸಲೆ
ಪಾಲಿಸುವ ಲೋಕಗಳನೆಂದವ
ಶೂಲಿಯಂಘ್ರಿಯ ನೆನೆದು ಹೇಳಿದ ಭುವನ ಕೋಶವನು ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥ ಕೇಳು, ನಕ್ಷತ್ರಮಾಲೆ, ಸೂರ್ಯರಥದ ಗತಿ, ಪದ್ಮನಾಭನು ಜಗತ್ತನ್ನು ಪಾಲಿಸುವುದು ಇತ್ಯಾದಿ ಸಮಸ್ತ ವಿಷಯಗಳನ್ನು ಶಿವನ ಪದವನ್ನು ನೆನೆದು ಮಾತಳಿಯು ವಿವರಿಸಿದನು.
ಮೂಲ ...{Loading}...
ಕೇಳು ನೀನೆಲೆ ಪಾರ್ಥ ತಾರಾ
ಮಾಲೆಗಳ ವಿವರವನು ರವಿರಥ
ಕಾಲಚಕ್ರವನೈದಿ ಗಗನಾಂಗಣದಿ ಚರಿಯಿಪುದ
ಲೀಲೆಯಿಂದಬುಜೋದರನು ಸಲೆ
ಪಾಲಿಸುವ ಲೋಕಗಳನೆಂದವ
ಶೂಲಿಯಂಘ್ರಿಯ ನೆನೆದು ಹೇಳಿದ ಭುವನ ಕೋಶವನು ॥22॥
೦೨೩ ಕೆಳಗಣಣ್ಡ ಕಟಾಹ ...{Loading}...
ಕೆಳಗಣಂಡ ಕಟಾಹ ತೊಡಗಿಯೆ
ಜಲವು ತುಂಬಿಹುದದರ ಘಾತವು
ತಿಳಿಯಲಿಪ್ಪತ್ತೈದು ಕೋಟಿಯ ಪವಣ ಪಡೆದಿಹುದು
ಇಳೆಯದರ ಮೇಲೊಂದು ಕೋಟಿಯ
ದಳದಲಿಹುದಲ್ಲಿಂದ ಮೇಲಣ
ದಳತೆಯದು ಚವ್ವೀಸ ಕೋಟಿಯಜಾಂಡ ಪರಿಯಂತ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಳಗೆ ಅಂಡಕಟಾಹದಲ್ಲಿ ನೀರು ತುಂಬಿದೆ. ಅದರ ಪ್ರಮಾಣವು ಇಪ್ಪತ್ತೈದು ಕೋಟಿ ಪವಣಿನಷ್ಟಿದೆ. ಇದರ ಮೇಲೆ ಒಂದು ಕೋಟಿಯ ದಳದಲ್ಲಿ ಭೂಮಿಯಿದೆ. ಅಲ್ಲಿಂದ ಮೇಲೆ ಬ್ರಹ್ಮಾಂಡದವರೆಗೆ ಇಪ್ಪತ್ತನಾಲ್ಕು ಕೋಟಿ ಪವಣಿನಷ್ಟು ದೂರವಿದೆ.
ಪದಾರ್ಥ (ಕ.ಗ.ಪ)
ಪವಣ - ಪ್ರಮಾಣ, ಅಳತೆಯ ಮಾನ
ಮೂಲ ...{Loading}...
ಕೆಳಗಣಂಡ ಕಟಾಹ ತೊಡಗಿಯೆ
ಜಲವು ತುಂಬಿಹುದದರ ಘಾತವು
ತಿಳಿಯಲಿಪ್ಪತ್ತೈದು ಕೋಟಿಯ ಪವಣ ಪಡೆದಿಹುದು
ಇಳೆಯದರ ಮೇಲೊಂದು ಕೋಟಿಯ
ದಳದಲಿಹುದಲ್ಲಿಂದ ಮೇಲಣ
ದಳತೆಯದು ಚವ್ವೀಸ ಕೋಟಿಯಜಾಂಡ ಪರಿಯಂತ ॥23॥
೦೨೪ ಹತ್ತಿರೆಯಲಿಹುದತಳವಲ್ಲಿಂ ...{Loading}...
ಹತ್ತಿರೆಯಲಿಹುದತಳವಲ್ಲಿಂ
ದತ್ತ ವಿತಳ ಸುತಳ ತಳಾತಳ
ದೊತ್ತಿನ ಮಹಾತಳ ರಸಾತಳ ಕೆಳಗೆ ಪಾತಾಳ
ಬಿತ್ತರದ ಲೋಕಂಗಳೇಳು ಧ
ರಿತ್ರಿಯೊಳಗೊಂದೊಂದರಂತರ
ಹತ್ತು ಹತ್ತು ಸಹಸ್ರ ಯೋಜನ ಪಾರ್ಥ ಕೇಳ್ ಎಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ, ಪಾತಾಳ, ಹೀಗೆ ಕೆಳಗೆ ಏಳು ಲೋಕಗಳು ಇದ್ದು ಅವುಗಳ ಪ್ರತಿಯೊಂದರ ಅಂತರ ಹತ್ತು ಸಾವಿರ ಯೋಜನವಾಗಿದೆ ಎಂದನು.
ಮೂಲ ...{Loading}...
ಹತ್ತಿರೆಯಲಿಹುದತಳವಲ್ಲಿಂ
ದತ್ತ ವಿತಳ ಸುತಳ ತಳಾತಳ
ದೊತ್ತಿನ ಮಹಾತಳ ರಸಾತಳ ಕೆಳಗೆ ಪಾತಾಳ
ಬಿತ್ತರದ ಲೋಕಂಗಳೇಳು ಧ
ರಿತ್ರಿಯೊಳಗೊಂದೊಂದರಂತರ
ಹತ್ತು ಹತ್ತು ಸಹಸ್ರ ಯೋಜನ ಪಾರ್ಥ ಕೇಳೆಂದ ॥24॥
೦೨೫ ಉತ್ತಮವು ಭೂಲೋಕವಲ್ಲಿಂ ...{Loading}...
ಉತ್ತಮವು ಭೂಲೋಕವಲ್ಲಿಂ
ದತ್ತ ಭುವ ಸುವ ಲೋಕದಲ್ಲಿಂ
ದತ್ತ ಮಹಜನ ಲೋಕವಲ್ಲಿಂದತ್ತ ತಪಲೋಕ
ಉತ್ತಮೋತ್ತಮವಿವಕೆ ಮೇಲಣ
ಸತ್ಯಲೋಕಾದಿಗಳ ನೋಡಿ ಧ
ರಿತ್ರಿಯಲಿ ಬಲುಗಾಹಕೊಟ್ಟನು ಲೋಕಪಾಲಕರ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇಲೆ ಭೂಲೋಕವು ಉತ್ತಮ, ಭುವಲೋಕ, ಸುವಲೋಕ, ಮಹಲೋಕ, ಜನಲೋಕ, ತಪೋಲೋಕಗಳ ಮೇಲೆ ಸತ್ಯಲೋಕವು ಉತ್ತಮೋತ್ತಮವೆನಿಸುತ್ತದೆ. ಇವುಗಳ ಪಾಲನೆಗಾಗಿ ಲೋಕಪಾಲರನ್ನು ನೇಮಿಸಲಾಗಿದೆ.
ಮೂಲ ...{Loading}...
ಉತ್ತಮವು ಭೂಲೋಕವಲ್ಲಿಂ
ದತ್ತ ಭುವ ಸುವ ಲೋಕದಲ್ಲಿಂ
ದತ್ತ ಮಹಜನ ಲೋಕವಲ್ಲಿಂದತ್ತ ತಪಲೋಕ
ಉತ್ತಮೋತ್ತಮವಿವಕೆ ಮೇಲಣ
ಸತ್ಯಲೋಕಾದಿಗಳ ನೋಡಿ ಧ
ರಿತ್ರಿಯಲಿ ಬಲುಗಾಹಕೊಟ್ಟನು ಲೋಕಪಾಲಕರ ॥25॥
೦೨೬ ತರವಿಡಿದ ಮೇಲಣ ...{Loading}...
ತರವಿಡಿದ ಮೇಲಣ ಜಗಂಗಳು
ತರಣಿ ಮಂಡಲ ತೊಡಗಿಯತಿ ವಿ
ಸ್ತರವೆನಿಸಿ ಬೊಮ್ಮಾಂಡ ಪರಿಯಂತಡಕಿಲಾಗಿಹವು
ಮರುತನಾಧಾರದಲಿ ಲಕ್ಷ್ಮೀ
ಕರವೆನಿಸಿ ದೇವರುಗಳಿಂದವೆ
ಭರಿತವಾಗಿಹವವರ ಮಹಿಮೆಯ ಹೇಳಲರಿದೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯಮಂಡಲದಿಂದ ತೊಡಗಿ ಬ್ರಹ್ಮಾಂಡ ವಿಸ್ತಾರದವರೆಗೆ ಜಗತ್ತಿನ ಸೃಷ್ಟಿಯಿದೆ. ವಾಯುವಿನ ಆಧಾರದಿಂದ, ಮಂಗಳಕರವಾಗಿರುವ ಈ ಲೋಕ ದೇವತೆಗಳ ಮಹಿಮೆಯಿಂದ ಕೂಡಿದೆ, ಅದನ್ನು ಹೇಳಲು ಸಾಧ್ಯವಿಲ್ಲ ಎಂದನು.
ಮೂಲ ...{Loading}...
ತರವಿಡಿದ ಮೇಲಣ ಜಗಂಗಳು
ತರಣಿ ಮಂಡಲ ತೊಡಗಿಯತಿ ವಿ
ಸ್ತರವೆನಿಸಿ ಬೊಮ್ಮಾಂಡ ಪರಿಯಂತಡಕಿಲಾಗಿಹವು
ಮರುತನಾಧಾರದಲಿ ಲಕ್ಷ್ಮೀ
ಕರವೆನಿಸಿ ದೇವರುಗಳಿಂದವೆ
ಭರಿತವಾಗಿಹವವರ ಮಹಿಮೆಯ ಹೇಳಲರಿದೆಂದ ॥26॥
೦೨೭ ಧಾರುಣಿಯನಹಿ ತಾಳ್ದನಾತನ ...{Loading}...
ಧಾರುಣಿಯನಹಿ ತಾಳ್ದನಾತನ
ವೀರ ಕಮಠನು ಹೊತ್ತನನಿತರ
ಭಾರವನು ನಿಜಶಕ್ತಿ ಧರಿಸಿಹಳೊಂದು ಲೀಲೆಯಲಿ
ತೋರ ಗಿರಿಗಳವೆರಸಿದಿಳೆ ತಾ
ನೀರೊಳದ್ದುವದೆಂದು ಸಲೆ ಮದ
ವಾರಣಂಗಳು ಧರಿಸಿಕೊಂಡಿಹವೆಂಟು ದಿಕ್ಕಿನಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯನ್ನು ಆದಿಶೇಷನು ಹೊತ್ತುಕೊಂಡಿದ್ದಾನೆ. ಅದನ್ನು ಕೂರ್ಮನು ಹೊತ್ತಿದ್ದಾನೆ. ಈ ಭಾರವನ್ನು ಆದಿಶಕ್ತಿಯು ತನ್ನ ಒಂದು ಲೀಲೆಯಿಂದ ಧರಿಸಿದ್ದಾಳೆ. ದೊಡ್ಡ ಪರ್ವತಗಳನ್ನು ಒಳಗೊಂಡ ಭೂಮಿಯು ನೀರಿನಲ್ಲಿ ಮುಳುಗುವುದೆಂದು ಮದಗಜಗಳು ಭೂಮಿಯನ್ನು ಎಂಟು ದಿಕ್ಕುಗಳಲ್ಲಿಯೂ ಹೊತ್ತುಕೊಂಡಿವೆ.
ಪದಾರ್ಥ (ಕ.ಗ.ಪ)
ಅಹಿ -ಸರ್ಪ
ಕಮಠ - ಕೂರ್ಮ, ಆಮೆ
ತೋರ -ದೊಡ್ಡದಾದ, ದಪ್ಪನಾದ
ವಾರಣ - ಆನೆ
ಮೂಲ ...{Loading}...
ಧಾರುಣಿಯನಹಿ ತಾಳ್ದನಾತನ
ವೀರ ಕಮಠನು ಹೊತ್ತನನಿತರ
ಭಾರವನು ನಿಜಶಕ್ತಿ ಧರಿಸಿಹಳೊಂದು ಲೀಲೆಯಲಿ
ತೋರ ಗಿರಿಗಳವೆರಸಿದಿಳೆ ತಾ
ನೀರೊಳದ್ದುವದೆಂದು ಸಲೆ ಮದ
ವಾರಣಂಗಳು ಧರಿಸಿಕೊಂಡಿಹವೆಂಟು ದಿಕ್ಕಿನಲಿ ॥27॥
೦೨೮ ಧರಣಿ ತಾನೈವತ್ತು ...{Loading}...
ಧರಣಿ ತಾನೈವತ್ತು ಕೋಟಿಯ
ಹರಹು ಸಪ್ತಸಮುದ್ರ ಹೊರಗಾ
ವರಿಸಿ ಜಂಬೂದ್ವೀಪ ನಡುವಿಹುದಲ್ಲಿ ಭದ್ರಾಶ್ವ
ವರುಷ ಭಾರತ ಕೇತುಮಾಲವು
ಕುರುವರುಷವಿವು ಪತ್ರವಾ ಸುರ
ಗಿರಿಯ ಹೊರಗಾಗಿಹವು ಕರ್ಣಿಕೆಯಂತೆ ಕನಕಾದ್ರಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಂಡಲವು ಐವತ್ತು ಕೋಟಿ ವಿಸ್ತಾರವಾದುದು. ಸಪ್ತ ಸಮುದ್ರಗಳ ಹೊರಗೆ ಜಂಬೂದ್ವೀಪವಿದೆ. ಅದರ ಮಧ್ಯೆ ಕರ್ಣಿಕೆಯಂತೆ ಇರುವ ಮೇರುಪರ್ವತದ ಸುತ್ತಲೂ ಕಮಲದ ದಳಗಳಂತೆ ಭದ್ರಾಶ್ವ, ಭಾರತ, ಕೇತುಮಾಲ, ಕುರುಗಳೆಂಬ ವರುಷಗಳಿವೆ.
ಪದಾರ್ಥ (ಕ.ಗ.ಪ)
ಕರ್ಣಿಕೆ - ಕಮಲದ ಬೀಜಕೋಶ
ಟಿಪ್ಪನೀ (ಕ.ಗ.ಪ)
ಸಪ್ತಸಮುದ್ರ - ಲವಣ ಸಮುದ್ರ (ಉಪ್ಪು), ಇಕ್ಷು ಸಮುದ್ರ (ಕಬ್ಬಿನ ಹಾಲು), ಸುರಾಸಮುದ್ರ (ಮದ್ಯ), ಸರ್ಪಿಸ್ ಸಮುದ್ರ(ತುಪ್ಪ) , ದಧಿ ಸಮುದ್ರ (ಮೊಸರು), ಕ್ಷೀರಸಮುದ್ರ(ಹಾಲು) ಮತ್ತು ಜಲ ಸಮುದ್ರ ( ಸಿಹಿನೀರು)
ಮೂಲ ...{Loading}...
ಧರಣಿ ತಾನೈವತ್ತು ಕೋಟಿಯ
ಹರಹು ಸಪ್ತಸಮುದ್ರ ಹೊರಗಾ
ವರಿಸಿ ಜಂಬೂದ್ವೀಪ ನಡುವಿಹುದಲ್ಲಿ ಭದ್ರಾಶ್ವ
ವರುಷ ಭಾರತ ಕೇತುಮಾಲವು
ಕುರುವರುಷವಿವು ಪತ್ರವಾ ಸುರ
ಗಿರಿಯ ಹೊರಗಾಗಿಹವು ಕರ್ಣಿಕೆಯಂತೆ ಕನಕಾದ್ರಿ ॥28॥
೦೨೯ ಲಕ್ಕದೊಳು ಹದಿನಾರು ...{Loading}...
ಲಕ್ಕದೊಳು ಹದಿನಾರು ಸಾವಿರ
ಮಿಕ್ಕ ವಸುಧೆಯೊಳಾಳುಗೊಂಡುದು
ಮಿಕ್ಕ ಚೌರಾಶೀತಿ ಸಾಸಿರ ಯೋಜನದ ನಿಲವು
ಲೆಕ್ಕಿಸಲು ಗಿರಿಶಿಖರದಗಲವ
ದಕ್ಕು ಮೂವತ್ತೆರಡು ಸಾವಿರ
ದಿಕ್ಕಿ ನೊಡೆಯರಿಗೆಂಟು ಪಟ್ಟಣವದರ ಮೇಲಿಹವು ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯಲ್ಲಿ ಒಂದು ಲಕ್ಷದ ಹದಿನಾರು ಸಾವಿರ ಯೋಜನ ಅಳತೆಯಲ್ಲಿ ಜನರು ನೆಲೆಸಿದ್ದಾರೆ. ಮಿಕ್ಕ ಎಂಬತ್ನಾಲ್ಕು ಸಾವಿರ ಯೋಜನದ ಅಳತೆಯಲ್ಲಿ ಗಿರಿಶಿಖರಗಳಿವೆ. ಮೂವತ್ತೆರಡು ಸಾವಿರ ಯೋಜನದಲ್ಲಿ ಎಂಟು ದಿಕ್ಪಾಲಕರ ಪಟ್ಟಣಗಳಿವೆ.
ಮೂಲ ...{Loading}...
ಲಕ್ಕದೊಳು ಹದಿನಾರು ಸಾವಿರ
ಮಿಕ್ಕ ವಸುಧೆಯೊಳಾಳುಗೊಂಡುದು
ಮಿಕ್ಕ ಚೌರಾಶೀತಿ ಸಾಸಿರ ಯೋಜನದ ನಿಲವು
ಲೆಕ್ಕಿಸಲು ಗಿರಿಶಿಖರದಗಲವ
ದಕ್ಕು ಮೂವತ್ತೆರಡು ಸಾವಿರ
ದಿಕ್ಕಿ ನೊಡೆಯರಿಗೆಂಟು ಪಟ್ಟಣವದರ ಮೇಲಿಹವು ॥29॥
೦೩೦ ನಡುವೆ ಚತುರಾನನನ ...{Loading}...
ನಡುವೆ ಚತುರಾನನನ ಪಟ್ಟಣ
ದೆಡೆದೆರವು ಹದಿನಾರು ಸಾವಿರ
ಕಡು ಚೆಲುವಿನಿಂದೆಸೆವ ಮಿಸುನಿಯ ಕೋಟೆ ನವರತ್ನ
ಎಡೆಗೆಡೆಗೆ ಕೇವಣಿಸಿದಂಗಡಿ
ಗಡಣೆಯಿಲ್ಲದ ಹಮ್ರ್ಯ ನಿಚಯಕೆ
ಪಡಿ ಚತುರ್ದಶ ಭುವನದೊಳಗಿಲ್ಲೆನಿಸಿ ಮೆರೆದಿಹುದು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವುಗಳ ನಡುವೆ ಬ್ರಹ್ಮದೇವರ ನಗರವಿದೆ. ಇದರ ವಿಸ್ತಾರ ಹದಿನಾರು ಸಾವಿರ ಯೋಜನಗಳು. ನವರತ್ನಮಯವಾದ ಚಿನ್ನದ ಕೋಟೆ. ಅಕ್ಕಪಕ್ಕದಲ್ಲಿ ಇರುವ ಅಂಗಢಗಳು ಮತ್ತು ವಿರಳವಾಗಿರುವ ಭವ್ಯಸೌಧಗಳಿಂದ ಕಂಗೊಳಿಸುವ ಈ ನಗರವು ಹದಿನಾಲ್ಕು ಲೋಕಗಳಲ್ಲೇ ಅನುಪಮವಾದುದು.
ಪದಾರ್ಥ (ಕ.ಗ.ಪ)
ಮಿಸುನಿ-ಚಿನ್ನ
ಹಮ್ರ್ಯ - ಭವ್ಯಸೌಧ
ಚತುರ್ದಶ - ಹದಿನಾಲ್ಕು
ಮೂಲ ...{Loading}...
ನಡುವೆ ಚತುರಾನನನ ಪಟ್ಟಣ
ದೆಡೆದೆರವು ಹದಿನಾರು ಸಾವಿರ
ಕಡು ಚೆಲುವಿನಿಂದೆಸೆವ ಮಿಸುನಿಯ ಕೋಟೆ ನವರತ್ನ
ಎಡೆಗೆಡೆಗೆ ಕೇವಣಿಸಿದಂಗಡಿ
ಗಡಣೆಯಿಲ್ಲದ ಹಮ್ರ್ಯ ನಿಚಯಕೆ
ಪಡಿ ಚತುರ್ದಶ ಭುವನದೊಳಗಿಲ್ಲೆನಿಸಿ ಮೆರೆದಿಹುದು ॥30॥
೦೩೧ ಹರಳುಗಳ ಕೇವಣದ ...{Loading}...
ಹರಳುಗಳ ಕೇವಣದ ಮಂಗಳ
ತರವೆನಿಪ ತೊಡಿಗೆಗಳ ದಿವ್ಯಾಂ
ಬರದಿ ಬೆಳಗುವ ತನುಲತೆಯ ನವಮಣಿಯ ಮೌಳಿಗಳ
ತರಳ ಲೋಚನದಿಂದುವದನದ
ಪರಮ ಸೌಭಾಗ್ಯದ ವಿಲಾಸದ
ಪರಿಜನಂಗಳು ಕಮಲಭವಪುರದಲ್ಲಿ ನೆಲಸಿಹರು ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂಗಳಮಯವಾದ ಆಭರಣಗಳನ್ನು ಧರಿಸಿ, ದಿವ್ಯ ವಸ್ತ್ರಭೂಷಿತರಾಗಿ, ಚಂಚಲವಾದ ಕಣ್ಣುಗಳಿರುವ, ಚಂದ್ರಮುಖದ ಸುಲಕ್ಷಣಾನ್ವಿತರಾದ ಭಾಗ್ಯವಂತ ಜನರು ಬ್ರಹ್ಮನ ನಗರದಲ್ಲಿ ವಾಸವಾಗಿದ್ದಾರೆ.
ಪದಾರ್ಥ (ಕ.ಗ.ಪ)
ಕಮಲಭವಪುರ - ಬ್ರಹ್ಮಪುರ
ಮೂಲ ...{Loading}...
ಹರಳುಗಳ ಕೇವಣದ ಮಂಗಳ
ತರವೆನಿಪ ತೊಡಿಗೆಗಳ ದಿವ್ಯಾಂ
ಬರದಿ ಬೆಳಗುವ ತನುಲತೆಯ ನವಮಣಿಯ ಮೌಳಿಗಳ
ತರಳ ಲೋಚನದಿಂದುವದನದ
ಪರಮ ಸೌಭಾಗ್ಯದ ವಿಲಾಸದ
ಪರಿಜನಂಗಳು ಕಮಲಭವಪುರದಲ್ಲಿ ನೆಲಸಿಹರು ॥31॥
೦೩೨ ಹಲವುನೆಲೆ ಚೆಲುವಿಕೆಗೆ ...{Loading}...
ಹಲವುನೆಲೆ ಚೆಲುವಿಕೆಗೆ ಸಲೆ ಹೊಂ
ಗಲಶ ಲೋಕಕೆ ವಿಲಸ ಹೇಮದ
ಕೆಲಸ ಗತಿಯಲಿ ಚೆಲುವೆನಿಸಿದುಪ್ಪರಿಗೆ ನೋಳ್ಪರಿಗೆ
ಹೊಳಹಿನಲಿ ಥಳಥಳಿಸುತಿಹುದದು
ನಳಿನಪೀಠನ ಭವನ ನಭದಿಂ
ದಿಳಿದ ಗಂಗೆಯ ಧಾರೆ ಮೆರೆದುದು ಪುರದ ಬಾಹೆಯಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊನ್ನಿನ ಕಳಸದಿಂದ ಚೆಲುವಾದ ಉಪ್ಪರಿಗೆಗಳಿಂದ, ಥಳಥಳ ಹೊಳೆಯುವ ಸೌಧಗಳಿಂದ ಶೋಭಿಸುತ್ತಿರುವ, ಹತ್ತಿರದಲ್ಲೇ ಆಕಾಶದಿಂದಿಳಿದು ಬಂದ ಗಂಗಾನದಿಯಿಂದಾಗಿ ಬ್ರಹ್ಮದೇವರ ನಗರಿಯು ಇನ್ನಷ್ಟು ಕಂಗೊಳಿಸುತ್ತಿದೆ.
ಮೂಲ ...{Loading}...
ಹಲವುನೆಲೆ ಚೆಲುವಿಕೆಗೆ ಸಲೆ ಹೊಂ
ಗಲಶ ಲೋಕಕೆ ವಿಲಸ ಹೇಮದ
ಕೆಲಸ ಗತಿಯಲಿ ಚೆಲುವೆನಿಸಿದುಪ್ಪರಿಗೆ ನೋಳ್ಪರಿಗೆ
ಹೊಳಹಿನಲಿ ಥಳಥಳಿಸುತಿಹುದದು
ನಳಿನಪೀಠನ ಭವನ ನಭದಿಂ
ದಿಳಿದ ಗಂಗೆಯ ಧಾರೆ ಮೆರೆದುದು ಪುರದ ಬಾಹೆಯಲಿ ॥32॥
೦೩೩ ಮೇರೆಯಿಲ್ಲದ ದೇವ ...{Loading}...
ಮೇರೆಯಿಲ್ಲದ ದೇವ ತತಿಗಳ
ಭಾರದಿಂ ಜಗ ಜರಿವುದೆಂದಾ
ಮೇರುವಿಂಗಾನಿಸಿದ ರಜತ ಸ್ತಂಭವೋ ಮೇಣು
ಸಾರತರ ಸುಕೃತವನು ಸಂಚಿಸಿ
ಧೀರರೈದುವ ಸತ್ಯಲೋಕದ
ದಾರಿಯೆಂಬಂದದಲಿ ಗಂಗೆಯ ಧಾರೆ ಮೆರೆದಿಹುದು ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಸಂಖ್ಯಾತ ದೇವ ಸಮೂಹದ ಭಾರದಿಂದ ಸತ್ಯಲೋಕವು ಜಾರದಿರಲೆಂದು ಮೇರುಪರ್ವತಕ್ಕೆ ಆನಿಸಿ ನಿರ್ಮಿಸಿದ ಬೆಳ್ಳಿಯ ಕಂಬವೋ ಅಥವಾ ಸಕಲ ಪುಣ್ಯ ಸಂಚಯನದಿಂದ ಸತ್ಯಲೋಕಕ್ಕೆ ಹೋಗುವವರ ದಾರಿಯೋ ಎಂಬಂತೆ ಗಂಗಧಾರೆಯು ಕಂಗೊಳಿಸುತ್ತಿದೆ.
ಪದಾರ್ಥ (ಕ.ಗ.ಪ)
ತತಿ - ಸಮೂಹ
ಆನಿಸು - ಒರಗಿಸು
ಧೀರ - ಸನ್ನಡತೆಯುಳ್ಳವ
ಮೂಲ ...{Loading}...
ಮೇರೆಯಿಲ್ಲದ ದೇವ ತತಿಗಳ
ಭಾರದಿಂ ಜಗ ಜರಿವುದೆಂದಾ
ಮೇರುವಿಂಗಾನಿಸಿದ ರಜತ ಸ್ತಂಭವೋ ಮೇಣು
ಸಾರತರ ಸುಕೃತವನು ಸಂಚಿಸಿ
ಧೀರರೈದುವ ಸತ್ಯಲೋಕದ
ದಾರಿಯೆಂಬಂದದಲಿ ಗಂಗೆಯ ಧಾರೆ ಮೆರೆದಿಹುದು ॥33॥
೦೩೪ ನರಸುರರು ಮೊದಲಾದ ...{Loading}...
ನರಸುರರು ಮೊದಲಾದ ಸಚರಾ
ಚರದ ಜೀವರಘಂಗಳನು ಸಂ
ಹರಿಸಲೋಸುಗ ಸತ್ಯಲೋಕದಿನಿಳಿದು ಬಹ ಗಂಗೆ
ಧರೆ ಧರಿಸಲರಿದೆಂದು ಕನಕದ
ಗಿರಿಯ ಶಿಖರದ ನಡುವೆ ಬರುತಿಹ
ಪರಮ ಪಾವನೆ ತಿರುಗಿ ಹರಿದಳು ನಾಲ್ಕು ಮುಖವಾಗಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನುಷ್ಯರು, ದೇವತೆಗಳೇ ಮೊದಲಾದ ಚರಾಚರ ಜೀವಿಗಳು ತಮ್ಮ ಪಾಪನಾಶಮಾಡಿಕೊಳ್ಳಲೆಂದು ಗಂಗಾದೇವಿಯು ಸತ್ಯಲೋಕದಿಂದ ಕೆಳಗೆ ಇಳಿದು ಬರುತ್ತಿದ್ದಾಳೆ. ಭೂಮಿಯು ತನ್ನನ್ನು ಧರಿಸಲಾರದೆಂದು ಮೇರುಪರ್ವತದ ಶಿಖರದ ಮಧ್ಯೆ ಅವಳು ನಾಲ್ಕು ಮುಖವಾಗಿ ಹರಿಯುತ್ತಿದ್ದಾಳೆ.
ಪದಾರ್ಥ (ಕ.ಗ.ಪ)
ಕನಕ ಗಿರಿ - ಮೇರುಪರ್ವತ
ಮೂಲ ...{Loading}...
ನರಸುರರು ಮೊದಲಾದ ಸಚರಾ
ಚರದ ಜೀವರಘಂಗಳನು ಸಂ
ಹರಿಸಲೋಸುಗ ಸತ್ಯಲೋಕದಿನಿಳಿದು ಬಹ ಗಂಗೆ
ಧರೆ ಧರಿಸಲರಿದೆಂದು ಕನಕದ
ಗಿರಿಯ ಶಿಖರದ ನಡುವೆ ಬರುತಿಹ
ಪರಮ ಪಾವನೆ ತಿರುಗಿ ಹರಿದಳು ನಾಲ್ಕು ಮುಖವಾಗಿ ॥34॥
೦೩೫ ಅಳಕನನ್ದೆ ಸುಚಕ್ಷು ...{Loading}...
ಅಳಕನಂದೆ ಸುಚಕ್ಷು ನಿರ್ಮ¯
ಜಲದ ಭದ್ರೆಯು ಸತ್ಯೆಯೆಂಬಿವು
ತಿಳಿಯೆ ದಕ್ಷಿಣವಾದಿಯಾಗಿ ಪ್ರದಕ್ಷಿಣಾರ್ಧದಲಿ
ಸುಳಿದು ಮೇರುವಿನಿಂದ ಕುಲಗಿರಿ
ಗಿಳಿದು ಜಾಹ್ನವಿ ನಾಲ್ಕು ದಿಕ್ಕಿನ
ಜಲನಿಧಿಯ ಬೆರೆಸಿದಳು ಕೇಳ್ ಜಗದಘವನಪಹರಿಸಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಳಕನಂದೆ, ಸುಚಕ್ಷು, ನಿರ್ಮಲಜಲದ ಭದ್ರೆ, ಸತ್ಯೆ, ಎಂಬ ನಾಲ್ಕು ನದಿಗಳಾಗಿ ದಕ್ಷಿಣಮುಖವಾಗಿ ಅರ್ಧ ಪ್ರದಕ್ಷಿಣಾಕಾರದಲ್ಲಿ ಹರಿದು ಮೇರುಪರ್ವತದಿಂದ ಕುಲಪರ್ವತಕ್ಕೆ ಇಳಿದು ಪ್ರಪಂಚದ ಪಾಪವನ್ನು ಪರಿಹರಿಸಿ ಗಂಗೆಯು ನಾಲ್ಕು ಕಡೆಯ ಸಮುದ್ರವನ್ನು ಸೇರುತ್ತಾಳೆ.
ಮೂಲ ...{Loading}...
ಅಳಕನಂದೆ ಸುಚಕ್ಷು ನಿರ್ಮ¯
ಜಲದ ಭದ್ರೆಯು ಸತ್ಯೆಯೆಂಬಿವು
ತಿಳಿಯೆ ದಕ್ಷಿಣವಾದಿಯಾಗಿ ಪ್ರದಕ್ಷಿಣಾರ್ಧದಲಿ
ಸುಳಿದು ಮೇರುವಿನಿಂದ ಕುಲಗಿರಿ
ಗಿಳಿದು ಜಾಹ್ನವಿ ನಾಲ್ಕು ದಿಕ್ಕಿನ
ಜಲನಿಧಿಯ ಬೆರೆಸಿದಳು ಕೇಳ್ ಜಗದಘವನಪಹರಿಸಿ ॥35॥
೦೩೬ ಸುರಗಿರಿಯ ಮೊದಲಲ್ಲಿ ...{Loading}...
ಸುರಗಿರಿಯ ಮೊದಲಲ್ಲಿ ಕೀಲಕ
ಗಿರಿಯು ನಾಲ್ಕವರಲ್ಲಿ ಕೇಸರ
ಸರಸಿ ನಾಲ್ಕರುಣೋದೆ ಭದ್ರೆ ಸಿತೋದೆ ಮಾನಸದ
ಹೊರಗೆ ನಾಲ್ಕುದ್ಯಾನ ಕೀಲಕ
ಗಿರಿಯುದಯವೈವತ್ತು ಯೋಜನ
ಹರಹು ತಾನು ಸಹಸ್ರಯೋಜನವದರ ಶಿಖರದಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇರುಗಿರಿಯ ಮೊದಲಿಗೆ ನಾಲ್ಕು ಕೀಲಕ ಪರ್ವತಗಳಿವೆ. ಅವುಗಳಲ್ಲಿ ಅರುಣೋದೆ, ಭದ್ರೆ, ಸಿತೋದೆ, ಮಾನಸಗಳೆಂಬ ನಾಲ್ಕು ಕೇಸರ ಸರೋವರಗಳಿವೆ. ಕೀಲಕ ಗಿರಿಯ ಹೊರಗೆ ನಾಲ್ಕು ಉದ್ಯಾನಗಳಿವೆ. ಕೀಲಕ ಪರ್ವತ ಶಿಖರದವರೆಗೆ ಐವತ್ತು ಯೋಜನವಿದ್ದು, ಅದರ ವಿಸ್ತಾರ ಸಾವಿರ ಯೋಜನದಷ್ಟಿದೆ.
ಮೂಲ ...{Loading}...
ಸುರಗಿರಿಯ ಮೊದಲಲ್ಲಿ ಕೀಲಕ
ಗಿರಿಯು ನಾಲ್ಕವರಲ್ಲಿ ಕೇಸರ
ಸರಸಿ ನಾಲ್ಕರುಣೋದೆ ಭದ್ರೆ ಸಿತೋದೆ ಮಾನಸದ
ಹೊರಗೆ ನಾಲ್ಕುದ್ಯಾನ ಕೀಲಕ
ಗಿರಿಯುದಯವೈವತ್ತು ಯೋಜನ
ಹರಹು ತಾನು ಸಹಸ್ರಯೋಜನವದರ ಶಿಖರದಲಿ ॥36॥
೦೩೭ ಸುರಪತಿಯ ದಿಕ್ಕಿನಲಿ ...{Loading}...
ಸುರಪತಿಯ ದಿಕ್ಕಿನಲಿ ಬೆಳೆದಿಹು
ದರಳಿ ಜಂಬೂವೃಕ್ಷ ತೆಂಕಲು
ಹಿರಿದೆನಿಪ ತನಿವಣ್ಣ ರಸ ನದಿಯಾಗಿ ಹರಿದಿಹುದು
ವರುಣನಿಹ ದೆಸೆಯಲಿ ಕದಂಬವು
ಹರಸಖನ ದಿಕ್ಕಿನಲಿ ವಟಕುಜ
ಸುರರಿಗಾಶ್ರಯವೆನಿಸಿ ಕೀಲಕ ಗಿರಿಯ ಮೇಲಿಹುದು ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದರ ತುದಿಯ ಮೂಡಣ ದಿಕ್ಕಿನಲ್ಲಿ ಅರಳಿ ವೃಕ್ಷವಿದೆ. ದಕ್ಷಿಣದಲ್ಲಿ ಜಂಬೂಫಲದ ಮರವಿದ್ದು, ಅದರ ಹಣ್ಣಿನ ರಸವುಕ್ಕಿ ನದಿಯಾಗಿ ಹರಿಯುತ್ತದೆ. ಪಶ್ಚಿಮದಲ್ಲಿ ಕದಂಬವೃಕ್ಷವೂ, ಉತ್ತರದಲ್ಲಿ ವಟವೃಕ್ಷವೂ ಇದ್ದು ದೇವತೆಗಳಿಗೆ ಆಶ್ರಯವಾಗಿದೆ.
ಮೂಲ ...{Loading}...
ಸುರಪತಿಯ ದಿಕ್ಕಿನಲಿ ಬೆಳೆದಿಹು
ದರಳಿ ಜಂಬೂವೃಕ್ಷ ತೆಂಕಲು
ಹಿರಿದೆನಿಪ ತನಿವಣ್ಣ ರಸ ನದಿಯಾಗಿ ಹರಿದಿಹುದು
ವರುಣನಿಹ ದೆಸೆಯಲಿ ಕದಂಬವು
ಹರಸಖನ ದಿಕ್ಕಿನಲಿ ವಟಕುಜ
ಸುರರಿಗಾಶ್ರಯವೆನಿಸಿ ಕೀಲಕ ಗಿರಿಯ ಮೇಲಿಹುದು ॥37॥
೦೩೮ ಮನ್ದರಾಚಲ ಮೂಡ ...{Loading}...
ಮಂದರಾಚಲ ಮೂಡ ತೆಂಕಲು
ಗಂಧಮಾದನ ವಿಮಳ ಪಶ್ಚಿಮ
ದಿಂದ ಬಡಗ ಸುಪಾಶ್ರ್ವವೆಂಬಿವು ಕೀಲಕಾದ್ರಿಗಳು
ನಂದನವು ಬಡಗಣದು ಪಡುವಣ
ಚಂದವಹ ವೈಭ್ರಾಜ ತೆಂಕಲು
ಗಂಧಮಾದನ ಚೈತ್ರರಥ ಮೂಡಣದು ಕೇಳ್ ಎಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೂರ್ವದಲ್ಲಿ ಮಂದರ, ದಕ್ಷಿಣದಲ್ಲಿ ಗಂಧ ಮಾದನ, ಪಶ್ಚಿಮದಲ್ಲಿ ವಿಮಲ, ಉತ್ತರದಲ್ಲಿ ಸುಪಾಶ್ರ್ವ ಎಂಬ ಪರ್ವತಗಳಿವೆ. ಹಾಗೆಯೇ ಉತ್ತರದಲ್ಲಿ ನಂದನ, ಪಶ್ಚಿಮದಲ್ಲಿ ವೈಭ್ರಾಜ, ದಕ್ಷಿಣದಲ್ಲಿ ಗಂಧಮಾದನ, ಪೂರ್ವದಲ್ಲಿ ಚೈತ್ರರಥಗಳೆಂಬ ವನಗಳಿವೆ.
ಮೂಲ ...{Loading}...
ಮಂದರಾಚಲ ಮೂಡ ತೆಂಕಲು
ಗಂಧಮಾದನ ವಿಮಳ ಪಶ್ಚಿಮ
ದಿಂದ ಬಡಗ ಸುಪಾಶ್ರ್ವವೆಂಬಿವು ಕೀಲಕಾದ್ರಿಗಳು
ನಂದನವು ಬಡಗಣದು ಪಡುವಣ
ಚಂದವಹ ವೈಭ್ರಾಜ ತೆಂಕಲು
ಗಂಧಮಾದನ ಚೈತ್ರರಥ ಮೂಡಣದು ಕೇಳೆಂದ ॥38॥
೦೩೯ ಸೀತಳಾನ್ತಕ ಕುಣ್ಡ ...{Loading}...
ಸೀತಳಾಂತಕ ಕುಂಡ ಮಳಯ ಕು
ರಾತಿ ವೈರಂತಕವು ಮೂಡಲು
ನೀತಿವಿದನೆ ತ್ರಿಕೂಟ ಶಿಶಿರಪತಂಗರುಚಿ ನಿಷಧ
ಖ್ಯಾತವಿವು ತೆಂಕಣದು ಕಪಿಲನ
ಜಾತಿವಾರಿಧಿ ಗಂಧಮಾದನ
ತಾತವಿವು ಸುಖವಾಸ ಮಿಗೆ ವೈಡೂರ್ಯ ಪಶ್ಚಿಮದಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೂರ್ವದಲ್ಲಿ ಸೀತಳಾಂತಕ, ಕುಂಡ, ಮಲಯ, ವೈರಂತಕ ಪರ್ವತಗಳೂ, ತೆಂಕು ದಿಕ್ಕಿನಲ್ಲಿ ತ್ರಿಕೂಟ, ಶಿಶಿರ, ಪತಂಗರುಚಿ, ನಿಷಧ ಪರ್ವತಗಳೂ, ಪಶ್ಚಿಮದಲ್ಲಿ ಕಪಿಲ ಗಂಧಮಾದನ, ವೈಡೂರ್ಯ ಪರ್ವತಗಳೂ ಇವೆ.
ಮೂಲ ...{Loading}...
ಸೀತಳಾಂತಕ ಕುಂಡ ಮಳಯ ಕು
ರಾತಿ ವೈರಂತಕವು ಮೂಡಲು
ನೀತಿವಿದನೆ ತ್ರಿಕೂಟ ಶಿಶಿರಪತಂಗರುಚಿ ನಿಷಧ
ಖ್ಯಾತವಿವು ತೆಂಕಣದು ಕಪಿಲನ
ಜಾತಿವಾರಿಧಿ ಗಂಧಮಾದನ
ತಾತವಿವು ಸುಖವಾಸ ಮಿಗೆ ವೈಡೂರ್ಯ ಪಶ್ಚಿಮದಿ ॥39॥
೦೪೦ ನಾಗ ಕಾಲಾಞ್ಜನವು ...{Loading}...
ನಾಗ ಕಾಲಾಂಜನವು ಹಂಸನು
ಮೇಗೆ ವೃಷಭನು ಶಂಖ ಕೂಟವ
ನೀಗಳೀಕ್ಷಿಸು ಬಡಗ ಲೆಕ್ಕಕೆ ನಾಲ್ಕುವನು ಬಳಿಕ
ಮೇಗೆ ಕೇಳೀರೈದು ದೆಸೆಗಳ
ಲಾ ಗಿರಿಯ ಹೊರಗಿಹರು ಸುರಜನ
ಯೋಗಿಸಿದ್ಧ ನಿಷೇವಿತರು ತಾವಾಗಿ ವಿಭವದಲಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರದಲ್ಲಿ ನಾಗಕಾಲಾಂಜನ, ಹಂಸ, ವೃಷಭ, ಶಂಖಕೂಟಗಳೆಂಬ ನಾಲ್ಕು ಪರ್ವತಗಳಿವೆ. ಈ ಮೇರುವಿನ ಹೊರಗೆ ದಶದಿಕ್ಕುಗಳಲ್ಲಿ ಯೋಗಿಗಳು, ಸಿದ್ಧಪುರುಷರು, ಸೇವ್ಯರು ನೆಲೆನಿಂತಿದ್ದಾರೆ.
ಪದಾರ್ಥ (ಕ.ಗ.ಪ)
ನಿಷೇವಿತರು - ಸೇವ್ಯರು
ಮೂಲ ...{Loading}...
ನಾಗ ಕಾಲಾಂಜನವು ಹಂಸನು
ಮೇಗೆ ವೃಷಭನು ಶಂಖ ಕೂಟವ
ನೀಗಳೀಕ್ಷಿಸು ಬಡಗ ಲೆಕ್ಕಕೆ ನಾಲ್ಕುವನು ಬಳಿಕ
ಮೇಗೆ ಕೇಳೀರೈದು ದೆಸೆಗಳ
ಲಾ ಗಿರಿಯ ಹೊರಗಿಹರು ಸುರಜನ
ಯೋಗಿಸಿದ್ಧ ನಿಷೇವಿತರು ತಾವಾಗಿ ವಿಭವದಲಿ ॥40॥
೦೪೧ ಧಾರುಣಿಯ ನಡುವಳಸಿ ...{Loading}...
ಧಾರುಣಿಯ ನಡುವಳಸಿ ಬೆಳೆದಿಹ
ಮೇರು ಗಿರಿಯನು ಬಳಸಿ ವೃತ್ತಾ
ಕಾರವಾಗೆಸೆದಿಹುದು ಜಂಬೂದ್ವೀಪ ನವಖಂಡ
ಮೇರೆಯಾಗಿಹ ಗಿರಿಕುಲಂಗಳ
ತೋರದಗಲವನುನ್ನತಂಗಳ
ಸಾರಹೃದಯನೆ ನಿನಗೆ ಕಲಿಮಲದೂರ ತಿಳುಹುವೆನು ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯ ಮಧ್ಯದಲ್ಲಿರುವ ಮೇರುಗಿರಿಯನ್ನು ಬಳಸಿ ಜಂಬೂದ್ವೀಪ ನವಖಂಡಗಳು ವೃತ್ತಾಕಾರವಾಗಿವೆ. ಇವುಗಳ ಮೇರೆಯಾಗಿರುವ ಕುಲಪರ್ವತಗಳ ಅಗಲ-ಎತ್ತರಗಳನ್ನು ಸಜ್ಜನನಾದ ನಿನಗೆ ತಿಳಿಸುತ್ತೇನೆ.
ಪದಾರ್ಥ (ಕ.ಗ.ಪ)
ಕಲಿಮಲ - ಪಾಪ, ಕಶ್ಮಲ
ಟಿಪ್ಪನೀ (ಕ.ಗ.ಪ)
ನವಖಂಡ -ಕುರು, ಹಿರಣ್ಮಯ, ರಮ್ಯಕ, ಇಳಾವೃತ, ಹರಿವರುಷ, ಕಿಂಪುರುಷ, ಭಾರತ, ಉತ್ತರ, ಕೇತುಮಾಲಾ
ಮೂಲ ...{Loading}...
ಧಾರುಣಿಯ ನಡುವಳಸಿ ಬೆಳೆದಿಹ
ಮೇರು ಗಿರಿಯನು ಬಳಸಿ ವೃತ್ತಾ
ಕಾರವಾಗೆಸೆದಿಹುದು ಜಂಬೂದ್ವೀಪ ನವಖಂಡ
ಮೇರೆಯಾಗಿಹ ಗಿರಿಕುಲಂಗಳ
ತೋರದಗಲವನುನ್ನತಂಗಳ
ಸಾರಹೃದಯನೆ ನಿನಗೆ ಕಲಿಮಲದೂರ ತಿಳುಹುವೆನು ॥41॥
೦೪೨ ಕುರು ಹಿರಣ್ಮಯ ...{Loading}...
ಕುರು ಹಿರಣ್ಮಯ ರಮ್ಯಕವು ಸುರ
ಗಿರಿಯನೊಳಕೊಂಡಿಪ್ಪಿಳಾವೃತ
ಹರಿವರುಷ ಕಿಂಪುರುಷ ಭಾರತವುತ್ತರಾದಿಗಳು
ಪಿರಿಯ ಶೃಂಗಶ್ವೇತ ನೀಲದ
ಗಿರಿ ನಿಷಧವಾ ಹೇಮ ಕೂಟದ
ಗಿರಿ ಹಿಮಾಲಯವಾಗಪರಜಲಧಿಯನು ಮುಟ್ಟಿಹವು ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇರುಪರ್ವತದಲ್ಲಿ ಕುರು, ಹಿರಣ್ಮಯ, ರಮ್ಯಕ, ಇಳಾವೃತ, ಹರಿವರುಷ, ಕಿಂಪುರುಷ, ಭಾರತ, ಉತ್ತರಗಳೆಂಬ ವರುಷಗಳಿವೆ. ಅವುಗಳಲ್ಲಿ ಶೃಂಗ ಶ್ವೇತ, ನೀಲಗಿರಿ, ನಿಷಧ, ಹೇಮಕೂಟ, ಹಿಮಾಲಯಗಳೆಂಬ ಪರ್ವತಗಳು ಅಪರ ಸಮುದ್ರದವರೆಗೆ ನೆಲೆಸಿವೆ.
ಪದಾರ್ಥ (ಕ.ಗ.ಪ)
ಹಿಮಾಲಯವಾಗಪರಜಲಧಿ - ಹಿಮಾಲಯ ಪರ್ವತ ಮೊದಲಾಗಿ ಎಲ್ಲ ಪರ್ವತಗಳೂ ಪಶ್ಚಿಮ ಸಮುದ್ರ ಕಡೆಯಾಗಿ ಮಟ್ಟಿವೆ.
ಮೂಲ ...{Loading}...
ಕುರು ಹಿರಣ್ಮಯ ರಮ್ಯಕವು ಸುರ
ಗಿರಿಯನೊಳಕೊಂಡಿಪ್ಪಿಳಾವೃತ
ಹರಿವರುಷ ಕಿಂಪುರುಷ ಭಾರತವುತ್ತರಾದಿಗಳು
ಪಿರಿಯ ಶೃಂಗಶ್ವೇತ ನೀಲದ
ಗಿರಿ ನಿಷಧವಾ ಹೇಮ ಕೂಟದ
ಗಿರಿ ಹಿಮಾಲಯವಾಗಪರಜಲಧಿಯನು ಮುಟ್ಟಿಹವು ॥42॥
೦೪೩ ಸುರಗಿರಿಯ ಬಳಸಿಪ್ಪಿಳಾವೃತ ...{Loading}...
ಸುರಗಿರಿಯ ಬಳಸಿಪ್ಪಿಳಾವೃತ
ವರುಷದಿಂದವೆ ಮೂಡಲೊಪ್ಪುವ
ಪಿರಿಯ ಗಿರಿ ಮಾಲ್ಯವತ ಜಲನಿಧಿ ತನಕ ಭದ್ರಾಶ್ವ
ವರುಷ ಪಡುವಣ ಗಂಧಮಾದನ
ಗಿರಿ ತೊಡಗಿಯಾ ಪಶ್ಚಿಮಾಶಾ
ಶರಧಿ ಪರಿಯಂತಿಪ್ಪ ವರುಷವು ಕೇತುಮಾಲವದು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇರುಪರ್ವತವನ್ನು ಬಳಸಿರುವ ಇಳಾವೃತ ವರುಷದ ಪೂರ್ವದಲ್ಲಿ ಮಾಲ್ಯವತವೆಂಬ ಪರ್ವತವಿದ್ದು, ಸಮುದ್ರಪರ್ಯಂತ ಅದು ಹರಡಿದೆ. ಭದ್ರಾಶ್ವ ವರುಷದ ಪಶ್ಚಿಮದಲ್ಲಿ ಗಂಧಮಾದನದಿಂದ ತೊಡಗಿ ಪಶ್ಚಿಮ ಸಮುದ್ರದವರೆಗಿರುವುದು ಕೇತುಮಾಲ ವರ್ಷವೆನಿಸಿದೆ.
ಮೂಲ ...{Loading}...
ಸುರಗಿರಿಯ ಬಳಸಿಪ್ಪಿಳಾವೃತ
ವರುಷದಿಂದವೆ ಮೂಡಲೊಪ್ಪುವ
ಪಿರಿಯ ಗಿರಿ ಮಾಲ್ಯವತ ಜಲನಿಧಿ ತನಕ ಭದ್ರಾಶ್ವ
ವರುಷ ಪಡುವಣ ಗಂಧಮಾದನ
ಗಿರಿ ತೊಡಗಿಯಾ ಪಶ್ಚಿಮಾಶಾ
ಶರಧಿ ಪರಿಯಂತಿಪ್ಪ ವರುಷವು ಕೇತುಮಾಲವದು ॥43॥
೦೪೪ ವರುಷ ಮಧ್ಯದ ...{Loading}...
ವರುಷ ಮಧ್ಯದ ಪರ್ವತಂಗಳ
ಹರಹು ತಾನೆರಡೆರಡು ಸಾವಿರ
ವರುಷ ನವನವ ನವಸಹಸ್ರವ ದಾರು ಮಧ್ಯದಲಿ
ವರುಷವದು ಮೂವತ್ತ ನಾಲ್ಕರ
ಪರಿಗಣಿತ ಮೂಡಣದು ಪಡುವಣ
ದೆರಡು ತಾನದರಂತೆ ಮೆರೆವುದು ಹೊರಗೆ ಲವಣಾಬ್ಧಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವರ್ಷಗಳ ಪರ್ವತಗಳ ವಿಸ್ತಾರ ಎರಡು ಸಾವಿರ ಯೋಜನ. ವರ್ಷಗಳ ಅಂತರ ಒಂಬತ್ತು ಸಾವಿರ ಯೋಜನ. ಪೂರ್ವದಿಂದ ಪಶ್ಚಿಮದವರೆಗಿನ ಒಟ್ಟು ವಿಸ್ತಾರ ಮೂವತ್ತನಾಲ್ಕು ಯೋಜನ. ಹೊರಗೆ ಇದರ ಇಮ್ಮಡಿಯಷ್ಟು ವಿಸ್ತಾರದ ಉಪ್ಪಿನ ಸಮುದ್ರವಿದೆ (?)
ಮೂಲ ...{Loading}...
ವರುಷ ಮಧ್ಯದ ಪರ್ವತಂಗಳ
ಹರಹು ತಾನೆರಡೆರಡು ಸಾವಿರ
ವರುಷ ನವನವ ನವಸಹಸ್ರವ ದಾರು ಮಧ್ಯದಲಿ
ವರುಷವದು ಮೂವತ್ತ ನಾಲ್ಕರ
ಪರಿಗಣಿತ ಮೂಡಣದು ಪಡುವಣ
ದೆರಡು ತಾನದರಂತೆ ಮೆರೆವುದು ಹೊರಗೆ ಲವಣಾಬ್ಧಿ ॥44॥
೦೪೫ ದೇವ ಕೂಟದ ...{Loading}...
ದೇವ ಕೂಟದ ಜಠರವೆಂಬಿವು
ಭಾವಿಸಲು ಮಾಲ್ಯವತದಿಕ್ಕೆಲ
ನಾ ವಿಧದಿ ಕೈಲಾಸ ಪರ್ವತ ಗಂಧಮಾದನವು
ಕೋವಿದನೆ ಕೇಳ್ ಭೂಮಿ ವಲಯದೊ
ಳಾ ವಿಶಾಲದ ಪಾರಿಯಾತ್ರದ
ದೇವಯೋಗ್ಯದ ಗಿರಿಗಳಿಕ್ಕೆಲ ನಿಷಧ ಪರ್ವತಕೆ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವಕೂಟದ ಮಧ್ಯಭಾಗದಲ್ಲಿರುವ ಮಾಲ್ಯವತದ ಇಕ್ಕೆಲಗಳಲ್ಲಿ, ಕೈಲಾಸ, ಗಂಧಮಾದನ ಪರ್ವತಗಳೂ ಇವೆ. ಭೂಪ್ರದೇಶದ ವಿಸ್ತಾರದಲ್ಲಿ ನಿಷಧ ಪರ್ವತದ ಇಕ್ಕೆಲಗಳಲ್ಲಿ ದೇವಯೋಗ್ಯ ಗಿರಿಗಳಿವೆ.
ಮೂಲ ...{Loading}...
ದೇವ ಕೂಟದ ಜಠರವೆಂಬಿವು
ಭಾವಿಸಲು ಮಾಲ್ಯವತದಿಕ್ಕೆಲ
ನಾ ವಿಧದಿ ಕೈಲಾಸ ಪರ್ವತ ಗಂಧಮಾದನವು
ಕೋವಿದನೆ ಕೇಳ್ ಭೂಮಿ ವಲಯದೊ
ಳಾ ವಿಶಾಲದ ಪಾರಿಯಾತ್ರದ
ದೇವಯೋಗ್ಯದ ಗಿರಿಗಳಿಕ್ಕೆಲ ನಿಷಧ ಪರ್ವತಕೆ ॥45॥
೦೪೬ ನೀಲ ಗಿರಿಯಿಕ್ಕೆಲಕೆ ...{Loading}...
ನೀಲ ಗಿರಿಯಿಕ್ಕೆಲಕೆ ವಾರಿಧಿ
ಮೇಲೆ ನಿಷ್ಪ್ರತಿ ಶೃಂಗವಿವು ಮೈ
ನೀಳದಲಿ ಪೂರ್ವಾಪರದ ಜಲನಿಧಿಯ ಮುಟ್ಟಿಹವು
ಹೇಳಿದೆಂಟುಪ ಪರ್ವತಾಗ್ರ ವಿ
ಶಾಲ ತಾನೆಂಬತ್ತು ಯೋಜನ
ಕೇಳಿಳಾವೃತ ವೇಲೆಯಾಗಿಹ ಗಿರಿಯ ಲೆಕ್ಕವನು ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೂರ್ವ ಪಶ್ಚಿಮಗಳಲ್ಲಿ ಸಾಗರವನ್ನು ಮುಟ್ಟುವಷ್ಟು ವಿಸ್ತಾರವಾಗಿ ಹಬ್ಬಿರುವ ನೀಲಗಿರಿಯ ಮೇಲೆ ಎಣೆಯಿಲ್ಲದ ಶಿಖರವಿದೆ. ಇಳಾವೃತದ ಮೇಲಿರುವ ಈ ಎಂಟು ಉಪಪರ್ವತಗಳ ವಿಸ್ತಾರವೇ ಎಂಬತ್ತು ಯೋಜನ.
ಮೂಲ ...{Loading}...
ನೀಲ ಗಿರಿಯಿಕ್ಕೆಲಕೆ ವಾರಿಧಿ
ಮೇಲೆ ನಿಷ್ಪ್ರತಿ ಶೃಂಗವಿವು ಮೈ
ನೀಳದಲಿ ಪೂರ್ವಾಪರದ ಜಲನಿಧಿಯ ಮುಟ್ಟಿಹವು
ಹೇಳಿದೆಂಟುಪ ಪರ್ವತಾಗ್ರ ವಿ
ಶಾಲ ತಾನೆಂಬತ್ತು ಯೋಜನ
ಕೇಳಿಳಾವೃತ ವೇಲೆಯಾಗಿಹ ಗಿರಿಯ ಲೆಕ್ಕವನು ॥46॥
೦೪೭ ವರುಷದೊಡೆಯನಿಳಾವೃತಕೆ ಸಂ ...{Loading}...
ವರುಷದೊಡೆಯನಿಳಾವೃತಕೆ ಸಂ
ಕರುಷಣನು ಭದ್ರಾಶ್ವದೊಳು ಹಯ
ಶಿರನು ಹರಿವರುಷಕ್ಕೆ ನರಹರಿ ಕೇತುಮಾಲದಲಿ
ಸಿರಿಯರಸ ರಮ್ಯಕಕೆ ಮತ್ಸ್ಯನು
ಪಿರಿಯ ಕಮ್ಮಠ ಹಿರಣ್ಮಯಕೆ ಕುರು
ವರುಷದಲ್ಲಿ ಮಹಾವರಾಹನು ಪಾರ್ಥ ಕೇಳ್ ಎಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಳಾವೃತ ವರ್ಷಕ್ಕೆ ಸಂಕರ್ಷಣ, ಅಧಿಪತಿಯು ಭದ್ರಾಶ್ವಕ್ಕೆ ಹಯಗ್ರೀವ, ಹರಿವರ್ಷಕ್ಕೆ ನರಸಿಂಹ, ಕೇತುಮಾಲಕ್ಕೆ ನಾರಾಯಣ ಇವರು ಅಧಿಪತಿಗಳು. ಹಾಗೆಯೇ ರಮ್ಯಕ ಹಿರಣ್ಮಯ, ಕುರು ವರುಷಗಳಿಗೆ ಮತ್ಸ್ಯ, ಕೂರ್ಮ, ವರಾಹರು ಅಧಿಪತಿಗಳು” ಎಂದು ಪಾರ್ಥನಿಗೆ ಹೇಳಿದನು.
ಮೂಲ ...{Loading}...
ವರುಷದೊಡೆಯನಿಳಾವೃತಕೆ ಸಂ
ಕರುಷಣನು ಭದ್ರಾಶ್ವದೊಳು ಹಯ
ಶಿರನು ಹರಿವರುಷಕ್ಕೆ ನರಹರಿ ಕೇತುಮಾಲದಲಿ
ಸಿರಿಯರಸ ರಮ್ಯಕಕೆ ಮತ್ಸ್ಯನು
ಪಿರಿಯ ಕಮ್ಮಠ ಹಿರಣ್ಮಯಕೆ ಕುರು
ವರುಷದಲ್ಲಿ ಮಹಾವರಾಹನು ಪಾರ್ಥ ಕೇಳೆಂದ ॥47॥
೦೪೮ ರಾಮ ಕಿಮ್ಪುರುಷಕ್ಕೆ ...{Loading}...
ರಾಮ ಕಿಂಪುರುಷಕ್ಕೆ ಭಾರತ
ಭೂಮಿ ನರ ನಾರಾಯಣನು ತಿಳಿ
ನಾಮಧಾರಕ ಹನುಮ ವಸುಧಾದೇವಿ ನಾರದನು
ಆ ಮನು ಜಗಚ್ಚಕ್ಷು ಲಕ್ಷ್ಮೀ
ಪ್ರೇಮದಿಂ ಪ್ರಹ್ಲಾದ ನಿಜ ನಿ
ಸ್ಸೀಮ ಭದ್ರಶ್ರವ ಸದಾಶಿವನಿವರು ಪಾಲಕರು ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಿಂಪುರುಷಕ್ಕೆ ರಾಮನೂ, ಭಾರತಕ್ಕೆ ನರನಾರಾಯಣರೂ ಅಧಿಪತಿಗಳು. ಹನುಮಂತ, ಭೂದೇವಿ, ನಾರದ, ಮನು, ಲಕ್ಷ್ಮೀದೇವಿ, ಪ್ರಹ್ಲಾದ, ಭದ್ರಶ್ರವ, ಸದಾಶಿವ - ಇವರು ಈ ವರ್ಷಗಳ ಪಾಲಕರು.
ಮೂಲ ...{Loading}...
ರಾಮ ಕಿಂಪುರುಷಕ್ಕೆ ಭಾರತ
ಭೂಮಿ ನರ ನಾರಾಯಣನು ತಿಳಿ
ನಾಮಧಾರಕ ಹನುಮ ವಸುಧಾದೇವಿ ನಾರದನು
ಆ ಮನು ಜಗಚ್ಚಕ್ಷು ಲಕ್ಷ್ಮೀ
ಪ್ರೇಮದಿಂ ಪ್ರಹ್ಲಾದ ನಿಜ ನಿ
ಸ್ಸೀಮ ಭದ್ರಶ್ರವ ಸದಾಶಿವನಿವರು ಪಾಲಕರು ॥48॥
೦೪೯ ವರುಷವನು ಗಿರಿಗಳನು ...{Loading}...
ವರುಷವನು ಗಿರಿಗಳನು ಬಳಸಿಹ
ಪಿರಿಯ ಲವಣಸಮುದ್ರ ತದನಂ
ತರದಿ ದ್ವೀಪಪ್ಲಕ್ಷಯಿಕ್ಷು ಸಮುದ್ರವಲ್ಲಿಂದ
ಇರಲು ಶಾಲ್ಮಲವದರ ಹೊರಗಣ
ಸುರೆಯ ಶರಧಿಯನೊಂದನೊಂದಾ
ವರಿಸಿ ಪರಿಭಾವಿಸಲು ತದ್ದ್ವಿಗುಣಂಗಳಾಗಿಹವು ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ವರುಷಗಳನ್ನು, ಪರ್ವತಗಳನ್ನು ಬಳಸಿ ಲವಣ ಸಮುದ್ರ, ಅದರಾಚೆ ಪ್ಲಕ್ಷದ್ವೀಪ, ಇಕ್ಷು ಸಮುದ್ರ, ಅನಂತರ ಶಾಲ್ಮಲ ದ್ವೀಪ, ಸುರೆಯ ಸಮುದ್ರಗಳಿವೆ. ಇವು ಒಂದಕ್ಕಿಂತ ಇನ್ನೊಂದು ಇಮ್ಮಡಿ ವಿಸ್ತಾರವಾಗಿವೆ.
ಮೂಲ ...{Loading}...
ವರುಷವನು ಗಿರಿಗಳನು ಬಳಸಿಹ
ಪಿರಿಯ ಲವಣಸಮುದ್ರ ತದನಂ
ತರದಿ ದ್ವೀಪಪ್ಲಕ್ಷಯಿಕ್ಷು ಸಮುದ್ರವಲ್ಲಿಂದ
ಇರಲು ಶಾಲ್ಮಲವದರ ಹೊರಗಣ
ಸುರೆಯ ಶರಧಿಯನೊಂದನೊಂದಾ
ವರಿಸಿ ಪರಿಭಾವಿಸಲು ತದ್ದ್ವಿಗುಣಂಗಳಾಗಿಹವು ॥49॥
೦೫೦ ತಿಳಿವೊಡಾ ಸುರೆಯಿನ್ದ ...{Loading}...
ತಿಳಿವೊಡಾ ಸುರೆಯಿಂದ ಕುಶಘೃತ
ಜಲಧಿ ಕ್ರೌಂಚ ದ್ವೀಪವೆಂಬಿವ
ರಳತೆಗಿಮ್ಮಡಿಯಾಗಿ ದಧಿಯ ಸಮುದ್ರವಲ್ಲಿಂದ
ಇಳೆಯ ಮೇಲೆಸೆದಿಪ್ಪ ಶಾಕದ
ಬಳಿಯ ದುಗ್ಧವಿದೊಂದನೊಂದನು
ಬಳಸಿಕೊಂಡಿಹವಬುಜನಾಭನ ನಿಳಯವದ ನೋಡ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುರೆಯ ಸಮುದ್ರದಾಚೆ ಕುಶಸಮುದ್ರ, ಘೃತಸಮುದ್ರ, ಕ್ರೌಂಚದ್ವೀಪಗಳಿವೆ. ಇವುಗಳ ಎರಡರಷ್ಟಿರುವ ದಧಿ ಸಮುದ್ರ
ಶಾಕದ್ವೀಪಗಳಿವೆ. ಅಲ್ಲಿಂದ ಮೇಲಿರುವ ಪ್ರದೇಶದಲ್ಲಿ ಶ್ರೀಹರಿಯ ನಿವಾಸವಾದ ಕ್ಷೀರಸಾಗರವಿದೆ.
ಮೂಲ ...{Loading}...
ತಿಳಿವೊಡಾ ಸುರೆಯಿಂದ ಕುಶಘೃತ
ಜಲಧಿ ಕ್ರೌಂಚ ದ್ವೀಪವೆಂಬಿವ
ರಳತೆಗಿಮ್ಮಡಿಯಾಗಿ ದಧಿಯ ಸಮುದ್ರವಲ್ಲಿಂದ
ಇಳೆಯ ಮೇಲೆಸೆದಿಪ್ಪ ಶಾಕದ
ಬಳಿಯ ದುಗ್ಧವಿದೊಂದನೊಂದನು
ಬಳಸಿಕೊಂಡಿಹವಬುಜನಾಭನ ನಿಳಯವದ ನೋಡ ॥50॥
೦೫೧ ಚೆಲುವಿಕೆಗೆ ನೆಲೆಯೆನಿಸಿ ...{Loading}...
ಚೆಲುವಿಕೆಗೆ ನೆಲೆಯೆನಿಸಿ ಮೆರೆವುದು
ಪ್ರಳಯವೆಂದೂಯಿಲ್ಲ ಲಕ್ಷ್ಮೀ
ನಿಳಯನಿಹನನವರತ ಸುಳಿಯವು ಮೃತ್ಯು ಮಾಯೆಗಳು
ಬಳಕೆ ಸಲ್ಲದು ಕಲಿಯ ಕಾಲದ
ಹೊಲಬು ಹೊದ್ದದು ಹರಿಯ ರೂಪನು
ತಳೆದ ಪುರವನು ಕ್ಷೀರವಾರಿಧಿ ಬಳಸಿಕೊಂಡಿಹುದು ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀ ಹರಿಯ ನಿವಾಸವಾದರೋ ತುಂಬಾ ಸೊಗಸಾಗಿದ್ದು ಪ್ರಳಯರಹಿತವಾಗಿ ಮೃತ್ಯುಮಾಯೆಗಳಿಗೆ ಒಳಗಾಗದೆ, ಕಲಿ ಪ್ರವೇಶವಿಲ್ಲದೆ ಮೆರೆಯುತ್ತಿದೆ. ಹರಿಯ ವಾಸಸ್ಥಾನವಾದ ಈ ನಗರವನ್ನು ಕ್ಷೀರಸಾಗರ ಸುತ್ತುವರಿದಿದೆ.
ಟಿಪ್ಪನೀ (ಕ.ಗ.ಪ)
ಪ್ರಳಯವೆಂದೂಯಿಲ್ಲ - ಅಪರೂಪದ ಪ್ರಯೋಗ
ಮೂಲ ...{Loading}...
ಚೆಲುವಿಕೆಗೆ ನೆಲೆಯೆನಿಸಿ ಮೆರೆವುದು
ಪ್ರಳಯವೆಂದೂಯಿಲ್ಲ ಲಕ್ಷ್ಮೀ
ನಿಳಯನಿಹನನವರತ ಸುಳಿಯವು ಮೃತ್ಯು ಮಾಯೆಗಳು
ಬಳಕೆ ಸಲ್ಲದು ಕಲಿಯ ಕಾಲದ
ಹೊಲಬು ಹೊದ್ದದು ಹರಿಯ ರೂಪನು
ತಳೆದ ಪುರವನು ಕ್ಷೀರವಾರಿಧಿ ಬಳಸಿಕೊಂಡಿಹುದು ॥51॥
೦೫೨ ಯೋಗಿಗಳ ನೆಲೆವೀಡು ...{Loading}...
ಯೋಗಿಗಳ ನೆಲೆವೀಡು ಬೊಮ್ಮದ
ಸಾಗರವು ಸನಕಾದಿ ಮುನಿಗಳ
ಭೋಗಭೂಮಿಯನಂತವೆನಿಸಿರ್ದುಪನಿಷತ್ತುಗಳ
ಆಗರವು ಮೂಲೋಕ ದರ್ಪಣ
ವಾಗಿ ದುಗ್ಧೋದಧಿಯೊಳೆಸೆವುದು
ಶ್ರೀಗಧೀಶನ ನಗರ ನೋಡೆಲೆ ಪಾರ್ಥ ನೀನೆಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಬ್ರಹ್ಮನು ಇರುವ ಕ್ಷೀರಸಾಗರವು ಯೋಗಿಗಳ ನೆಲೆವೀಡೆನಿಸಿ, ಸನಕಾದಿ ಮುನಿಗಳ ಸ್ವರ್ಗವೆಂದೆನಿಸಿ, ಅನಂತ ಎನಿಸಿದ ಉಪನಿಷತ್ತುಗಳ ಆಕರವೆನಿಸಿ ಮೂರು ಲೋಕಗಳ ಕನ್ನಡಿಯಂತೆ ಶ್ರೀಹರಿಯ ನಗರವು ಕ್ಷೀರಸಮುದ್ರದ ಮಧ್ಯೆ ಕಂಗೊಳಿಸುತ್ತಿದೆ. ಪಾರ್ಥನೇ ನೋಡು.
ಪದಾರ್ಥ (ಕ.ಗ.ಪ)
ಭೋಗಭೂಮಿ - ಸ್ವರ್ಗ
ಮೂಲ ...{Loading}...
ಯೋಗಿಗಳ ನೆಲೆವೀಡು ಬೊಮ್ಮದ
ಸಾಗರವು ಸನಕಾದಿ ಮುನಿಗಳ
ಭೋಗಭೂಮಿಯನಂತವೆನಿಸಿರ್ದುಪನಿಷತ್ತುಗಳ
ಆಗರವು ಮೂಲೋಕ ದರ್ಪಣ
ವಾಗಿ ದುಗ್ಧೋದಧಿಯೊಳೆಸೆವುದು
ಶ್ರೀಗಧೀಶನ ನಗರ ನೋಡೆಲೆ ಪಾರ್ಥ ನೀನೆಂದ ॥52॥
೦೫೩ ನಳಿನನಾಭನ ದುಗ್ಧ ...{Loading}...
ನಳಿನನಾಭನ ದುಗ್ಧ ಶರಧಿಯ
ಬಳಸಿಕೊಂಡಿಹ ಪುಷ್ಕರದ ಹೊರ
ವಳಯದಲಿ ಮೆರೆದಿಪ್ಪುದಾ ಸ್ವಾದೋದ ವಾರಾಶಿ
ಇಳೆಗೆ ಕೋಟೆಯನಿಕ್ಕಿದಂತಿರೆ
ಬೆಳೆದ ಲೋಕಾಲೋಕ ಪರ್ವತ
ತಿಳಿವಡಲ್ಲಿಂದತ್ತ ತಿಮಿರವಜಾಂಡ ಪರಿಯಂತ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪದ್ಮನಾಭನು ವಾಸವಾಗಿರುವ ಕ್ಷೀರಸಮುದ್ರದ ಹೊರವಲಯದಲ್ಲಿ ಸವಿಯಾದ ನೀರಿನ ಸಮುದ್ರವಿದೆ. ಲೋಕಾಲೋಕ ಎಂಬ ಪರ್ವತ ಭೂಮಿಗೆ ಕೋಟೆಯನ್ನು ಕಟ್ಟಿದ ಹಾಗೆ ಇದೆ. ಆ ಬಳಿಕ ಬ್ರಹ್ಮಾಂಡ ಪರ್ಯಂತವೂ ಕತ್ತಲೆ ಆವರಿಸಿದೆ.
ಪದಾರ್ಥ (ಕ.ಗ.ಪ)
ಲೋಕಾಲೋಕ ಪರ್ವತ - ಚಕ್ರವಾಳ ಪರ್ವತ , ಭೂಮಿಯನ್ನು ಆವರಿಸಿರುವ ಒಂದು ಪರ್ವತ.
ಮೂಲ ...{Loading}...
ನಳಿನನಾಭನ ದುಗ್ಧ ಶರಧಿಯ
ಬಳಸಿಕೊಂಡಿಹ ಪುಷ್ಕರದ ಹೊರ
ವಳಯದಲಿ ಮೆರೆದಿಪ್ಪುದಾ ಸ್ವಾದೋದ ವಾರಾಶಿ
ಇಳೆಗೆ ಕೋಟೆಯನಿಕ್ಕಿದಂತಿರೆ
ಬೆಳೆದ ಲೋಕಾಲೋಕ ಪರ್ವತ
ತಿಳಿವಡಲ್ಲಿಂದತ್ತ ತಿಮಿರವಜಾಂಡ ಪರಿಯಂತ ॥53॥
೦೫೪ ಲಕ್ಕ ಜಮ್ಬೂದ್ವೀಪವಾ ...{Loading}...
ಲಕ್ಕ ಜಂಬೂದ್ವೀಪವಾ ಪರಿ
ಲಕ್ಕ ಲವಣ ಸಮುದ್ರ ನಾಲುಕು
ಲಕ್ಕ ದ್ವೀಪ ಪ್ಲಕ್ಷವಿಕ್ಷು ಸಮುದ್ರವೊಂದಾಗಿ
ಲಕ್ಕವೆಂಟು ಸುಶಾಲ್ಮಲಿಯು ಸುರೆ
ಲಕ್ಕ ಷೋಡಶ ಕುಶ ಘೃತಂಗಳು
ಲಕ್ಕ ಮೂವತ್ತೆರಡು ಕ್ರೌಂಚ ದ್ವೀಪ ದಧಿಗೂಡಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಂಬೂದ್ವೀಪವು ಒಂದು ಲಕ್ಷ ಯೋಜನ, ಲವಣ ಸಮುದ್ರ ಎರಡು ಲಕ್ಷ ಯೋಜನ, ಪ್ಲಕ್ಷದ್ವೀಪ ಇಕ್ಷು ಸಮುದ್ರಗಳು ನಾಲ್ಕು ಲಕ್ಷ ಯೋಜನ, ಶಾಲ್ಮಲಿ ದ್ವೀಪ ಸುರಾಸಮುದ್ರಗಳು ಎಂಟು ಲಕ್ಷ ಯೋಜನ, ಕುಶ ದ್ವೀಪ ಘೃತ ಸಮುದ್ರಗಳು ಹದಿನಾರು ಲಕ್ಷ ಯೋಜನ, ಕ್ರೌಂಚದ್ವೀಪ ದಧಿ ಸಮುದ್ರಗಳು ಮೂವತ್ತೆರಡು ಲಕ್ಷಯೋಜನ ವಿಸ್ತಾರವಾಗಿವೆ.
ಮೂಲ ...{Loading}...
ಲಕ್ಕ ಜಂಬೂದ್ವೀಪವಾ ಪರಿ
ಲಕ್ಕ ಲವಣ ಸಮುದ್ರ ನಾಲುಕು
ಲಕ್ಕ ದ್ವೀಪ ಪ್ಲಕ್ಷವಿಕ್ಷು ಸಮುದ್ರವೊಂದಾಗಿ
ಲಕ್ಕವೆಂಟು ಸುಶಾಲ್ಮಲಿಯು ಸುರೆ
ಲಕ್ಕ ಷೋಡಶ ಕುಶ ಘೃತಂಗಳು
ಲಕ್ಕ ಮೂವತ್ತೆರಡು ಕ್ರೌಂಚ ದ್ವೀಪ ದಧಿಗೂಡಿ ॥54॥
೦೫೫ ಲಕ್ಕ ತಾನರವತ್ತು ...{Loading}...
ಲಕ್ಕ ತಾನರವತ್ತು ನಾಲ್ಕಾ
ಗಿಕ್ಕು ಶಾಕ ಕ್ಷೀರ ಕೋಟಿಯ
ಲಕ್ಕವಿಪ್ಪತ್ತೆಂಟು ಪುಷ್ಕರ ಸುಜಲವೊಂದಾಗಿ
ಮಿಕ್ಕ ಕೋಟಿ ದ್ವಯದ ಮೇಲಣ
ಲಕ್ಕವೈವತ್ತಾರು ಯೋಜನ
ವಕ್ಕು ಹೇಮದ ಭೂಮಿ ಲೋಕಾಲೋಕ ಗಿರಿಸಹಿತ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಾಕದ್ವೀಪ ಕ್ಷೀರಸಮುದ್ರಗಳು ಅರುವತ್ತನಾಲ್ಕು ಲಕ್ಷಯೋಜನ. ಪುಷ್ಕರದ್ವೀಪ ಸವಿನೀರಿನ ಸಾಗರಗಳು ಒಂದು ಕೋಟಿ ಇಪ್ಪತ್ತೆಂಟು ಲಕ್ಷ ಯೋಜನ. ಅನಂತರ ಲೋಕಾಲೋಕಗಿರಿಯನ್ನೂ ಒಳಗೊಂಡಂತೆ ಹೇಮ ಭೂಮಿಯು ಎರಡು ಕೋಟಿ ಐವತ್ತಾರು ಲಕ್ಷ ಯೋಜನ ವಿಸ್ತಾರವಾಗಿದೆ.
ಮೂಲ ...{Loading}...
ಲಕ್ಕ ತಾನರವತ್ತು ನಾಲ್ಕಾ
ಗಿಕ್ಕು ಶಾಕ ಕ್ಷೀರ ಕೋಟಿಯ
ಲಕ್ಕವಿಪ್ಪತ್ತೆಂಟು ಪುಷ್ಕರ ಸುಜಲವೊಂದಾಗಿ
ಮಿಕ್ಕ ಕೋಟಿ ದ್ವಯದ ಮೇಲಣ
ಲಕ್ಕವೈವತ್ತಾರು ಯೋಜನ
ವಕ್ಕು ಹೇಮದ ಭೂಮಿ ಲೋಕಾಲೋಕ ಗಿರಿಸಹಿತ ॥55॥
೦೫೬ ಹತ್ತು ಲಕ್ಕವು ...{Loading}...
ಹತ್ತು ಲಕ್ಕವು ಹೀನವಾಗಿ
ಪ್ಪತ್ತು ಕೋಟಿ ತಮಂಧದುರ್ವರೆ
ಸುತ್ತವರೆ ಬೆಳೆದಿಹುದು ಗರ್ಭೋದಕದ ಪರಿಯಂತ
ಇತ್ತ ಸುರಗಿರಿಯಿಂದ ಹಿಂದಿ
ಪ್ಪತ್ತು ಕೋಟಿಯ ಕೂಡಿ ನೋಡೆ ಧ
ರಿತ್ರಿ ತಾನೈವತ್ತು ಕೋಟಿಯ ಲೆಕ್ಕ ನೋಡೆಂದ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹತ್ತೊಂಬತ್ತು ಕೋಟಿ ತೊಂಬತ್ತು ಲಕ್ಷ ಯೋಜನದಷ್ಟು ವಿಸ್ತಾರವಾಗಿರುವ ಕತ್ತಲೆಯು ಭೂಮಿಯ ಸುತ್ತಲೂ ಮೂಲಜಲದವರೆಗೆ ಹರಡಿದೆ. ಈ ಕಡೆ ಮೇರು ಪರ್ವತದಿಂದ ಇಪ್ಪತ್ತು ಕೋಟಿ ಯೋಜನ ಕೂಡಿ ನೋಡಿದರೆ, ಪ್ರಪಂಚವು (ಭೂಮಿಯು ?) ಒಟ್ಟು ಐವತ್ತು ಕೋಟಿ ಯೋಜನದಷ್ಟು ವಿಸ್ತಾರವಾಗಿದೆ.
ಪದಾರ್ಥ (ಕ.ಗ.ಪ)
ಗರ್ಭೋದಕ - ?
ಟಿಪ್ಪನೀ (ಕ.ಗ.ಪ)
ಸೃಷ್ಟಿಲೋಕದ ವಿವರಣೆಗೆ ಬ್ರಹ್ಮಾಂಡ ಪುರಾಣವನ್ನು ನೋಡಿ.
ಮೂಲ ...{Loading}...
ಹತ್ತು ಲಕ್ಕವು ಹೀನವಾಗಿ
ಪ್ಪತ್ತು ಕೋಟಿ ತಮಂಧದುರ್ವರೆ
ಸುತ್ತವರೆ ಬೆಳೆದಿಹುದು ಗರ್ಭೋದಕದ ಪರಿಯಂತ
ಇತ್ತ ಸುರಗಿರಿಯಿಂದ ಹಿಂದಿ
ಪ್ಪತ್ತು ಕೋಟಿಯ ಕೂಡಿ ನೋಡೆ ಧ
ರಿತ್ರಿ ತಾನೈವತ್ತು ಕೋಟಿಯ ಲೆಕ್ಕ ನೋಡೆಂದ ॥56॥
೦೫೭ ವರುಷವೊಮ್ಬತ್ತಾಗಿಹುದು ವಿ ...{Loading}...
ವರುಷವೊಂಬತ್ತಾಗಿಹುದು ವಿ
ಸ್ತರದ ಜಂಬೂ ದ್ವೀಪವೊಂದೇ
ವರುಷವೇಳಾಗಿಹವು ತಾ ಶತಸಂಖ್ಯೆಯಾ ದ್ವೀಪ
ನಿರುತ ಕಡೆಯ ದ್ವೀಪವೆಂಬುದು
ವರುಷವೆರಡಾಗಿರಲು ಮಾನಸ
ಗಿರಿಯದರ ಮೇಲಿಹುದು ಚಕ್ರದ ಕಂಬಿಯಂದದಲಿ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂಬತ್ತು ವರುಷಗಳಿವೆ. ಜಂಬೂದ್ವೀಪ ಏಳು ವರುಷಗಳನ್ನೂ, ನೂರು ಸಂಖ್ಯೆಯ ದ್ವೀಪಗಳನ್ನೂ ಹೊಂದಿದೆ. ಕಡೆಯಲ್ಲಿರುವ ದ್ವೀಪದಲ್ಲಿ ಎರಡು ವರುಷಗಳಿದ್ದು, ಮಾನಸ ಪರ್ವತವು ಅದರ ಮೇಲೆ ಚಕ್ರದ ಕಂಬಿಯಂತೆ ನಿಂತಿದೆ.
(?)
ಟಿಪ್ಪನೀ (ಕ.ಗ.ಪ)
ಸಪ್ತದ್ವೀಪಗಳು - ಇಡೀ ಪ್ರಪಂಚವನ್ನು ದ್ವೀಪಗಳ ಕಕ್ಷೆಯಲ್ಲಿ ತರುವ ಅಂಗವಾಗಿ ಈ ಬತೆಯ ವಿಭಜನೆ ನಮ್ಮಲ್ಲಿದೆ. ಮಹಾಭಾರತವೂ ಇದನ್ನು ಗುರುತಿಸಿ ಸಪ್ತದ್ವೀಪ ಎಂದು ಕರೆದಿದೆ. ಸೂರ್ಯನ ರಥದ ನೇಮಿಯ ಮಾರ್ಗಗಳೇ ಸಪ್ತದ್ವೀಪಗಳ ಎಂದು ಹೇಳುತ್ತಾರೆ. ಸೂರ್ಯನು ಮೇರುಪರ್ವತದ ಸುತ್ತ ತಿರುಗುತ್ತ ಪಶ್ಚಿಮವನ್ನು ಸೇರುವಾಗ ರಥನೇಮಿ ಸೃಷ್ಟಿಸುವ ಮಾರ್ಗಗಳೇ ಭೂ ಸಂಧಿಗಳು ಹಾಗೂ ಸಪ್ತಸಮುದ್ರಗಳು. ‘ಲವಣೇಕ್ಷು ಸುಧಾ ಸರ್ಪಿದಧಿಕ್ಷೀರ ಜಲಾರ್ಣವಾ’ ಎಂಬ ಸೂತ್ರವೇ ಇದೆಯಲ್ಲ.
ದ್ವೀಪ–ಸಮುದ್ರ–ಪ್ರದೇಶ
ಜಂಬೂದ್ವೀಪ–ಲವಣಸಮುದ್ರ–ಭರತಖಂಡವು ಈ ಪ್ರದೇಶದಲ್ಲಿದೆ
ಪ್ಲಕ್ಷದ್ವೀಪ–ಇಕ್ಷುಸಮುದ್ರ–ರಷಿಯದ ಆಕ್ಸಸ್ ನದಿಯ ಪ್ರದೇಶ
ಕುಶದ್ವೀಪ–ಘೃತಸಮುದ್ರ–ಅಥವಾ ಇರಿತ್ರಿಯನ್ ಸಮುದ್ರ. ಇಂದಿನ ಪರ್ಷಿಯಾ ಕೊಲ್ಲಿ
ಕ್ರೌಂಚದ್ವೀಪ–ದಧಿಸಮುದ್ರ–ಜಕಾರ್ತಾದ ಉತ್ತರದಲ್ಲಿ
ಶಾಕದ್ವೀಪ–ಕ್ಷೀರಸಮುದ್ರ–ಕ್ಯಸ್ಪಿಯನ್ ಸಮುದ್ರಪ್ರದೇಶ(ಷಿರ್ವಾಸ್ ಸಮುದ್ರ)
ಶಾಲ್ಮಲ ದ್ವೀಪ–ಸುರಾಸಮುದ್ರ–ಸರೈಸ್ ಸಮುದ್ರ ಪ್ರದೇಶ
ಪುಷ್ಕರ ದ್ವೀಪ–ಸ್ವಾದುಸಮುದ್ರ–ಛಾದುಸ್ ನದಿಭಾಗ, ಮಂಗೋಲಿಯಾದಲ್ಲಿದೆ.
ಇದು ಜಗತ್ತಿನ ಎಲ್ಲ ಜಲ, ದ್ವೀಪ, ಭೂ ಪ್ರದೇಶಗಳ ಸಮಗ್ರ ವಿವರಣೆ ಎಂದು ಹೇಳುವಂತಿಲ್ಲ. ಆ ಕಾಲಕ್ಕೆ ಜನಜನಿತವಾಗಿದ್ದ ಕಲ್ಪನೆಗೆ ಮಹಾಭಾರತವು ಒಂದು ರೂಪ ಕೊಡಲು ಪ್ರಯತ್ನಿಸಿದೆ ಎಂದು ತಿಳಿಯಬೇಕು. ಬೇರೆ ಬೇರೆ ಪುರಾಣಗಳಲ್ಲಿ ಸ್ವಲ್ಪ ವ್ಯತ್ಯಾಸವೂ ಉಂಟು.ಎಲ್ಲ ಪುರಾಣಗಳಲ್ಲಿ ನಳೋಪಾಖ್ಯಾನದಲ್ಲಿ ದೇವಿ ಭಾಗವತದಲ್ಲಿ ಮತ್ತು ಮಹಾಭಾರತದ ಅನುಶಾಸನ ಅನುಗೀತಪರ್ವಗಳಲ್ಲಿ ವ್ಯಾಪಕವಾಗಿ ಬಳಸಿರುವ ಹೆಸರು ಜಂಬೂದ್ವೀಪ. ಮಹಾಭಾರತದ ಒಂದು ಅವಾಂತರ ಪರ್ವದ ಹೆಸರೇ ‘ಜಂಬೂಖಂಡ ವಿನಿರ್ಮಾಣ ಪರ್ವ’.
ಆದುದರಿಂದ ಈ ಬಗೆಗೆ ತಿಳಿದುಕೊಳ್ಳುವುದು ಸೂಕ್ತ. ಜಂಬೂ, ಪ್ಲಕ್ಷ, ಶಾಲ್ಮಲಿ, ಕುಶಕ್ರೌಂಚ, ಶಾಕ ಮತ್ತು ಪುಷ್ಕರಗಳೇ ಸಪ್ತದ್ವೀಪಗಳು. ಭರತವರ್ಷವು ಈ ಜಂಬೂ ದ್ವೀಪದಲ್ಲಿದೆ. ಸುದರ್ಶನ ಎಂಬ ಭಾರಿಯ ಜಂಬೂ ವೃಕ್ಷದಿಂದ ಜಂಬೂ ದ್ವೀಪ ಎಂಬ ಹೆಸರು ಬಂದಿದೆ. ಈ ಹಣ್ಣಿನ ರಸ ಹರಿಯುವ ಜಂಬೂನದಿ ಮತ್ತು ಇದರಲ್ಲಿರುವ ಜಾಬೂನದ (ಚಿನ್ನದ ನಿಕ್ಷೇಪ) ಗಳು ಸ್ಮರಣೀಯವಾಗಿª.,
ಈ ಪ್ರದೇಶಧಲ್ಲಿ ಮಾವು ಕದಂಬ ಆಲದ ಮರಗಳೂ ಹೆಚ್ಚು ಸಂಖ್ಯೆಯಲ್ಲಿವೆ. ಈ ಜಂಬೂ ದ್ವೀಪವು ಒಂದುಲಕ್ಷ ಯೋಜನ ವಿಸ್ತಾರವಾದದ್ದೆಂದು ಭಾರತ ಹೇಳುತ್ತದೆ. ಎಂಟು ದೀಘ್ ಪರ್ವತ ಶ್ರೇಣಿಗಳು ಇದ್ದು ಪ್ರದೇಶವು ಒಂಭತ್ತು ದೇಶಗಳಾಗಿ ವಿಂಗಡನೆಗೊಂಡಿದೆ. ಇದರ ಉತ್ತರ, ದಕ್ಷಿಣ ಭಾಗಗಳು ಬಿಲ್ಲಿನ ಆಕಾರದಲ್ಲಿವೆ. ಸಮತಲ ಪ್ರದೇಶೌನ್ನು ಇಲಾವರ್ತ ಎಂದು ಕರೆಯುತ್ತಾರೆ.
ಇಲಾವರ್ತದ ದಕ್ಷಿಣಕ್ಕೆ ಮೂರು ಪರ್ವತಗಳು-ಹೇಮಕೂಟ, ಹಿಮಾಲಯ ಮತ್ತು ನಿಷಾದ. ಮೂರು ದೇಶಗಳು ಹರಿವರ್ಷ, ಕಿಂಪುರುಷ ವರ್ಷ ಮತ್ತು ಭಾರತ ವರ್ಷ. ಇಲ್ಲಿ ಮೇರುಪರ್ವತವಿದೆ. ಈ ಪರ್ವತದ ಮೇಲೆ ದೇವತೆಗಳು ಗಂಧರ್ವರು ಅಸುರರು ಮತ್ತು ಅಪ್ಸರೆಯರು ವಾಸ ಮಾಡುತ್ತಾರೆ.
ಈ ಮೇರುವಿನ ಶಿಖರ ಭಾಗದಲ್ಲಿ ಶುಕ್ರಾಚಾರ್ಯರೊಂದಿಗೆ ರಾಕ್ಷಸರಿದ್ದಾರೆ. ಉತ್ತರಕ್ಕೆ ಕರ್ಣಿಕಾರ ವನವಿದೆ. ಇಲ್ಲಿ ಪಶುಪತಿ ಉಮೆಯ ಸಂಗಡ ವಾಸಿಸುತ್ತಾನೆ. ಉತ್ತರ ಹೇಮಕೂಟದಲ್ಲಿ ಕುಬೇರನಿದ್ದಾನೆ. ಕೈಲಾಸದ ಉತ್ತರಕ್ಕೆ ಮೈನಾಕ ಪರ್ವತಪ್ರದೇಶ. ಅದರ ಉತ್ತgಕ್ಕೆ ಹಿರಣ್ಯವರ್ಷ. ಅಲ್ಲಿ ಬಿಂದು ಪ್ರದೇಶ. ಅದರ ಉತ್ತರಕ್ಕೆ ಹಿರಣ್ಯ ವರ್ಷ. ಅಲ್ಲಿ ಬಿಂದು ಸರೋವರವಿದೆ. ಗಂಗೆಯ ದರ್ಶನ ಪಡೆಯಲು ಭಗೀರಥನು ತಪಸ್ಸು ಮಾಡಿದ್ದು ಇಲ್ಲೇ. ಈ ಬಇಂದು ಸರೋವರದ ಬಳಿ ಗಂಗೆಯು ಏಳು ಸೀಳಾಗಿ ಹರಿಯುತ್ತಾಳೆ. ಇವಕ್ಕೆ ವಷ್ಟೋಕಸಾರ ನಲಿನೀ, ಸರಸ್ವತೀ, ಜಂಬೂ, ಸೀತಾ, ಗಂಗಾ ಮತ್ತು ಸಿಂಧೂ ಎಂಬ ಹೆಸರುಗಳಿವೆ. ಈ ಪರ್ವ ಪ್ರದೇಶದ ಮೇಲ್ಭಾಗದ ಬಯಲಲ್ಲಿ ನಾಲ್ಕು ಸರೋವರಗಳಿವೆ. ಕ್ಷೀರ, ಮಧು, ಇಕ್ಷು ಮತ್ತು ಸಿಹಿ ನೀರಿನ ಸರೋವರಗಳು ಎಂದು ಅವುಗಳನ್ನು ಕರೆಯುತ್ತಾರೆ.
ಇವುಗಳ ಬದಿಯಲ್ಲಿ ನಂದನ ಚೈತ್ರರಥ, ವೈಭ್ರಾಜ ಮತ್ತು ಸರ್ವಭದ್ರಕ ಎಂಬ ನಾಲ್ಕು ಸುಂದರ ಉದ್ಯಾನಗಳಿವೆ. ಈ ನಾಲ್ಕು ಉದ್ಯಾನಗಳ ಹೆಸರುಗಳು ನಮ್ಮ ಕಾವ್ಯ ಪುರಾಣಗಳಲ್ಲಿ ಉಕ್ತವಾಗಿವೆ.
ಮೂಲ ...{Loading}...
ವರುಷವೊಂಬತ್ತಾಗಿಹುದು ವಿ
ಸ್ತರದ ಜಂಬೂ ದ್ವೀಪವೊಂದೇ
ವರುಷವೇಳಾಗಿಹವು ತಾ ಶತಸಂಖ್ಯೆಯಾ ದ್ವೀಪ
ನಿರುತ ಕಡೆಯ ದ್ವೀಪವೆಂಬುದು
ವರುಷವೆರಡಾಗಿರಲು ಮಾನಸ
ಗಿರಿಯದರ ಮೇಲಿಹುದು ಚಕ್ರದ ಕಂಬಿಯಂದದಲಿ ॥57॥
೦೫೮ ವರುಷವೆರಡಾಗೊಪ್ಪುತಿಹ ಪು ...{Loading}...
ವರುಷವೆರಡಾಗೊಪ್ಪುತಿಹ ಪು
ಷ್ಕರದ ನಡುವಣ ಮಾನಸೋತ್ತರ
ಗಿರಿಯುದಯವೈವತ್ತು ಸಾವಿರ ಹರಹು ತದ್ದ್ವಿಗುಣ
ಪಿರಿದು ಪುಣ್ಯಶ್ಲೋಕ ಕೇಳಾ
ಗಿರಿಯ ಶಿಖರದ ಮೇಲೆ ದಿಗ್ದೇ
ವರ ಪುರಂಗಳು ಸಿರಿಗೆ ನೆಲೆವನೆಯೆನಿಸಿ ಮೆರೆದಿಹವು ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡನೆಯ ವರುಷವಾಗಿರುವ ಪುಷ್ಕರದ ನಡುವೆ ಮಾನಸೋತ್ತರವೆಂಬ ಪರ್ವತವಿದೆ. ಅದರ ಅಗಲ ಐವತ್ತು ಸಾವಿರ ಯೋಜನ ಹಾಗೂ ಎತ್ತರ ಇದರ ಇಮ್ಮಡಿಯಷ್ಟು. ಪುಣ್ಯಾತ್ಮನೇ. ಲಾಲಿಸು. ಆ ಪರ್ವತಾಗ್ರದ ಮೇಲೆ ದಿಕ್ಪಾಲಕರ ಪುರಗಳು ಮೆರೆಯುತ್ತಿವೆ.
ಮೂಲ ...{Loading}...
ವರುಷವೆರಡಾಗೊಪ್ಪುತಿಹ ಪು
ಷ್ಕರದ ನಡುವಣ ಮಾನಸೋತ್ತರ
ಗಿರಿಯುದಯವೈವತ್ತು ಸಾವಿರ ಹರಹು ತದ್ದ್ವಿಗುಣ
ಪಿರಿದು ಪುಣ್ಯಶ್ಲೋಕ ಕೇಳಾ
ಗಿರಿಯ ಶಿಖರದ ಮೇಲೆ ದಿಗ್ದೇ
ವರ ಪುರಂಗಳು ಸಿರಿಗೆ ನೆಲೆವನೆಯೆನಿಸಿ ಮೆರೆದಿಹವು ॥58॥
೦೫೯ ಸುರಪನದುವೇ ಸ್ವರ್ಗ ...{Loading}...
ಸುರಪನದುವೇ ಸ್ವರ್ಗ ಸಾರವು
ನಿರುತದಲಿ ಸಂಯಮನಿಯೆಂಬಾ
ಪುರವು ಕಾಲನ ನಗರಿ ತೆಂಕಲು ಪಶ್ಚಿಮಾದ್ರಿಯಲಿ
ವರುಣನದು ಶುದ್ಧಿಮತಿ ಯಕ್ಷೇ
ಶ್ವರಗೆ ಸೇವಾಕಾಂತಿಮತಿ ಶಿಖಿ
ನಿರುತಿ ಮರುದೀಶಾನ್ಯರಿಗೆಯವರವರ ನಾಮದಲಿ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೂರ್ವದಲ್ಲಿ ದೇವೇಂದ್ರನ ಸ್ವರ್ಗ, ದಕ್ಷಿಣದಲ್ಲಿ ಯಮನ ಸಂಯಮನಿ, ಪಶ್ಚಿಮದಲ್ಲಿ ವರುಣನ ಶುದ್ಧಿಮತಿ, ಉತ್ತರದಲ್ಲಿ ಕುಬೇರನ ಕಾಂತಿಮತಿ ಎಂಬ ಪಟ್ಟಣಗಳೂ ಅಗ್ನಿ, ನಿರುತಿ, ವಾಯು, ಈಶಾನರಿಗೆ ಅವರವರ ಹೆಸರಿನ ನಗರಗಳೂ ಇವೆ.
ಮೂಲ ...{Loading}...
ಸುರಪನದುವೇ ಸ್ವರ್ಗ ಸಾರವು
ನಿರುತದಲಿ ಸಂಯಮನಿಯೆಂಬಾ
ಪುರವು ಕಾಲನ ನಗರಿ ತೆಂಕಲು ಪಶ್ಚಿಮಾದ್ರಿಯಲಿ
ವರುಣನದು ಶುದ್ಧಿಮತಿ ಯಕ್ಷೇ
ಶ್ವರಗೆ ಸೇವಾಕಾಂತಿಮತಿ ಶಿಖಿ
ನಿರುತಿ ಮರುದೀಶಾನ್ಯರಿಗೆಯವರವರ ನಾಮದಲಿ ॥59॥
೦೬೦ ಉರಗ ನಾಳಾಮ್ಬುಜ ...{Loading}...
ಉರಗ ನಾಳಾಂಬುಜ ಕುಸುಮವೀ
ಧರಣಿ ಕರ್ಣಿಕೆ ಮೇರುಗಿರಿ ಕೇ
ಸರ ನಗಂಗಳು ಬಳಸಿ ಕೇಸರದಂತೆ ಸೊಗಯಿಪವು
ಸರಸಿರುಹಸಂಭವನು ಮಧ್ಯದೊ
ಳಿರಲು ಭೂತಲವೈದೆ ಮೆರೆವುದು
ಸಿರಿ ಮಹಾವಿಷ್ಣುವಿನ ನಾಭೀಕಮಲದಂದದಲಿ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಭೂಮಿಯು ಹಾವಿನಂತಹ ನಾಳವಿರುವ ಕಮಲದ ಹೂವು. ಅದರ ಕರ್ಣಿಕೆಯೆ ಮೇರುಪರ್ವತ ಕೇಸರಗಳೇ ಪರ್ವತಗಳು. ಚತುರ್ಮುಖ ಬ್ರಹ್ಮನು ಮಧ್ಯದಲ್ಲಿ ಇರಲು ಈ ಭೂಮಿಯು ಮಹಾವಿಷ್ಣುವಿನ ನಾಭಿಕಮಲದಂತೆ ಕಂಗೊಳಿಸುವುದು.
ಪದಾರ್ಥ (ಕ.ಗ.ಪ)
ಕರ್ಣಿಕೆ - ಕೇಸರದಂಡ
ಮೂಲ ...{Loading}...
ಉರಗ ನಾಳಾಂಬುಜ ಕುಸುಮವೀ
ಧರಣಿ ಕರ್ಣಿಕೆ ಮೇರುಗಿರಿ ಕೇ
ಸರ ನಗಂಗಳು ಬಳಸಿ ಕೇಸರದಂತೆ ಸೊಗಯಿಪವು
ಸರಸಿರುಹಸಂಭವನು ಮಧ್ಯದೊ
ಳಿರಲು ಭೂತಲವೈದೆ ಮೆರೆವುದು
ಸಿರಿ ಮಹಾವಿಷ್ಣುವಿನ ನಾಭೀಕಮಲದಂದದಲಿ ॥60॥
೦೬೧ ಧರೆಯ ವರುಷ ...{Loading}...
ಧರೆಯ ವರುಷ ದ್ವೀಪ ಗಿರಿಗಳ
ಶರಧಿಗಳ ಸುರ ಶೈಲದಗ್ರದ
ಹರನ ಚತುರಾನನನ ಪಟ್ಟಣದಿರವ ತಿಳುಹಿದೆನು
ಸರಸಿರುಹ ಬಂಧುವಿನ ರಥವಿಹ
ಪರಿಯ ಚರಿಸುವ ಪಥವ ತಾರೆಗ
ಳಿರವ ನೀ ಕೇಳ್ ಎಂದು ಮಾತಲಿ ನುಡಿದನರ್ಜುನಗೆ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಂಡಲದ ವರುಷ, ದ್ವೀಪ, ಪರ್ವತ, ಸಮುದ್ರ, ಮೇರು ಪರ್ವತದ ಶಿಖರದ ತುದಿಯಲ್ಲಿರುವ ಬ್ರಹ್ಮನ ನಗರ -ಇವುಗಳೆಲ್ಲದರ ವಿವರವನ್ನು ಹೇಳಿದೆನು. ಈಗ ಸೂರ್ಯನ ರಥದ ಪಥ, ನಕ್ಷತ್ರ ಮಂಡಲಗಳ ವಿವರವನ್ನು ಕೇಳು ಎಂದು ಮಾತಳಿಯು ಅರ್ಜುನನಿಗೆ ಹೇಳಿದನು.
ಮೂಲ ...{Loading}...
ಧರೆಯ ವರುಷ ದ್ವೀಪ ಗಿರಿಗಳ
ಶರಧಿಗಳ ಸುರ ಶೈಲದಗ್ರದ
ಹರನ ಚತುರಾನನನ ಪಟ್ಟಣದಿರವ ತಿಳುಹಿದೆನು
ಸರಸಿರುಹ ಬಂಧುವಿನ ರಥವಿಹ
ಪರಿಯ ಚರಿಸುವ ಪಥವ ತಾರೆಗ
ಳಿರವ ನೀ ಕೇಳೆಂದು ಮಾತಲಿ ನುಡಿದನರ್ಜುನಗೆ ॥61॥
೦೬೨ ಗಾಲಿ ಮಾನಸ ...{Loading}...
ಗಾಲಿ ಮಾನಸ ಗಿರಿಯ ಶಿಖರದ
ಮೇಲೆ ತಿರುಗುವುದೊಂದು ಕಡೆ ಸುರ
ಶೈಲದಲಿ ಬಿಗಿದಚ್ಚು ಕೋಟಿಯ ಮೇಲೆಯೈವತ್ತು
ಏಳು ಲಕ್ಕದ ನೀಳ ರಥದ ವಿ
ಶಾಲವದು ಮುವ್ವತ್ತು ಸಾವಿರ
ಮೇಲೆ ಧ್ರುವ ಮಂಡಲಕೆ ಬಿಗಿದಿಹುದನಿಲ ಪಾಶದಲಿ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯರಥದ ಚಕ್ರದ ಅಚ್ಚು ಒಂದು ಕಡೆ ಮಾನಸ ಪರ್ವತ ಶಿಖರದ ಮೇಲೆ, ಮತ್ತೊಂದು ಕಡೆ ಮೇರು ಪರ್ವತದ ಮೇಲೆ ಇದೆ. ಅದರ ಉದ್ದವು ಒಂದು ಕೋಟಿ ಐವತ್ತೇಳು ಲಕ್ಷ ಯೋಜನ ಮತ್ತು ಅಗಲ ಮೂವತ್ತು ಸಾವಿರ ಯೋಜನವಾಗಿದ್ದು ಅನಿಲಪಾಶದಿಂದ ಧ್ರುವಮಂಡಲಕ್ಕೆ ಬಂಧಿಸಲ್ಪಟ್ಟಿದೆ.
ಮೂಲ ...{Loading}...
ಗಾಲಿ ಮಾನಸ ಗಿರಿಯ ಶಿಖರದ
ಮೇಲೆ ತಿರುಗುವುದೊಂದು ಕಡೆ ಸುರ
ಶೈಲದಲಿ ಬಿಗಿದಚ್ಚು ಕೋಟಿಯ ಮೇಲೆಯೈವತ್ತು
ಏಳು ಲಕ್ಕದ ನೀಳ ರಥದ ವಿ
ಶಾಲವದು ಮುವ್ವತ್ತು ಸಾವಿರ
ಮೇಲೆ ಧ್ರುವ ಮಂಡಲಕೆ ಬಿಗಿದಿಹುದನಿಲ ಪಾಶದಲಿ ॥62॥
೦೬೩ ಹರಿಯ ಗಾಲಿಯ ...{Loading}...
ಹರಿಯ ಗಾಲಿಯ ನಾಭಿ ಮೂರ
ಚ್ಚರಿಯ ಚಾತುರ್ಮಾಸಗಳು ಘನ
ತರದ ಷಡುಋತು ಬಳೆ ಷಡಂಗವೆ ನೇಮಿ ಚತುರಯುಗ
ತರವಿಡಿದ ಸಂವತ್ಸರವು ಘನ
ತರದ ಸರಿವತ್ಸರವಿದಾ ವ
ತ್ಸರವು ವಿದ್ವತ್ಸರವು ವತ್ಸರವೆನಿಪ ಮೊಳೆಯಾಯ್ತು ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯರಥದ ನಾಭಿಯೇ ಚಳಿಗಾಲ ಮಳೆಗಾಲ ಬೇಸಗೆ ಕಾಲವೆಂಬ ಮೂರು ಅಚ್ಚರಿಗಳುಳ್ಳ ನಾಲ್ಕು ಮಾಸಗಳ ಆವರ್ತ. ಅದಕ್ಕೆ ಆರುಋತುಗಳೇ ಬಳೆ. (ಷಡಂಗವೆ ನೇಮಿ ?) ನಾಲ್ಕು ಯುಗಕ್ಕೆ ವಿಸ್ತರಿಸಿದ ಸಂವತ್ಸರಸಂಖ್ಯೆಗಳೆಲ್ಲಾ ಅದರ ಮೊಳೆಗಳು.
ಟಿಪ್ಪನೀ (ಕ.ಗ.ಪ)
ಕಾಲದ ಈ ವಿಭಾಗಗಳು ರಥದ ಚಕ್ರದ ಭಾಗಗಳಂತೆ ವರ್ಣಿತವಾಗಿವೆ.
ಮೂಲ ...{Loading}...
ಹರಿಯ ಗಾಲಿಯ ನಾಭಿ ಮೂರ
ಚ್ಚರಿಯ ಚಾತುರ್ಮಾಸಗಳು ಘನ
ತರದ ಷಡುಋತು ಬಳೆ ಷಡಂಗವೆ ನೇಮಿ ಚತುರಯುಗ
ತರವಿಡಿದ ಸಂವತ್ಸರವು ಘನ
ತರದ ಸರಿವತ್ಸರವಿದಾ ವ
ತ್ಸರವು ವಿದ್ವತ್ಸರವು ವತ್ಸರವೆನಿಪ ಮೊಳೆಯಾಯ್ತು ॥63॥
೦೬೪ ಉರಗ ನಾಳದ ...{Loading}...
ಉರಗ ನಾಳದ ಹೊರಜೆ ನವ ಸಾ
ವಿರದ ಕುರಿಗುಣಿಯೀಸುಗಳ ತಾ
ವೆರಡು ಮಡಿ ತೊಂಬತ್ತುವೊಂದು ಸಹಸ್ರದರ್ಧವದು
ಪರಿಯ ನೊಗನದರನಿತು ಸಂಖ್ಯೆಗೆ
ಸರಿಯೆನಿಪ ಮೇಲಚ್ಚು ಮಂಗಳ
ತರವೆನಿಪ ನವರತ್ನ ರಚನೆಯ ಚಿತ್ರರಥವೆಂದ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರಥದಲ್ಲಿ ಸರ್ಪವೆಂಬ ಹಗ್ಗ ( ವಾಘೆ) ಒಂಬತ್ತು ಸಾವಿರ ಕುರಿಗುಣಿಗಳೆಂಬ ಈಚುಗಳಿವೆ. ತೊಂಬತ್ತೊಂದು ಸಾವಿರರದರ್ಧದಷ್ಟು ನೊಗ, ಅಷ್ಟೇ ಸಂಖ್ಯೆಯ ಮೇಲಚ್ಚುಗಳಿಂದ ಕೂಡಿದ ನವರತ್ನಮಯವಾದ ಚಿತ್ರರಥವಿದು.
ಪದಾರ್ಥ (ಕ.ಗ.ಪ)
ಕುರಿಗುಣಿ- ?
ಟಿಪ್ಪನೀ (ಕ.ಗ.ಪ)
?
ಮೂಲ ...{Loading}...
ಉರಗ ನಾಳದ ಹೊರಜೆ ನವ ಸಾ
ವಿರದ ಕುರಿಗುಣಿಯೀಸುಗಳ ತಾ
ವೆರಡು ಮಡಿ ತೊಂಬತ್ತುವೊಂದು ಸಹಸ್ರದರ್ಧವದು
ಪರಿಯ ನೊಗನದರನಿತು ಸಂಖ್ಯೆಗೆ
ಸರಿಯೆನಿಪ ಮೇಲಚ್ಚು ಮಂಗಳ
ತರವೆನಿಪ ನವರತ್ನ ರಚನೆಯ ಚಿತ್ರರಥವೆಂದ ॥64॥
೦೬೫ ಕರಸಹಸ್ರನ ರಥಕೆ ...{Loading}...
ಕರಸಹಸ್ರನ ರಥಕೆ ಹೂಡಿದ
ತುರಗ ಛಂದೋಮಯವು ಸಾರಥಿ
ಯರುಣ ಕಾಲವೆ ಗಾಲಿ ನವಕೋಟಿಯನು ಚರಿಯಿಸುಗು
ವರ ವರೂಥದ ಮಧ್ಯದಲಿ ವಿ
ಸ್ತರದ ಮಣಿಪೀಠದಲಿ ಮಿಗೆ ದಿನ
ಕರನು ಗ್ರಹಭವನಕ್ಕೆ ಸಲೆಯಾಧಾರವಾಗಿಹನು ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸೂರ್ಯ ರಥದ ಕುದುರೆಗಳೇ ಛಂದಸ್ಸುಗಳು. ಅರುಣನೇ ಸಾರಥಿ. ಕಾಲವೇ ಚಕ್ರ. ಒಂಬತ್ತು ಕೋಟಿ ಯೋಜನ ದೂರವನ್ನು (?)ಇದು ಸಂಚರಿಸುತ್ತದೆ. ಈ ರಥದ ಮಧ್ಯದಲ್ಲಿರುವ ಮಣಿಪೀಠದಲ್ಲಿ ಸೂರ್ಯದೇವನು ಕುಳಿತು ಗ್ರಹಮಂಡಲಕ್ಕೆ ಆಧಾರನಾಗಿರುತ್ತಾನೆ.
ಟಿಪ್ಪನೀ (ಕ.ಗ.ಪ)
ಏಳು ಛಂದಸ್ಸುಗಳು - ಗಾಯತ್ರೀ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್, ಪಙÂ್ಕ
- ಶ್ರೀವತ್ಸ ನಿಘಂಟು
ಮೂಲ ...{Loading}...
ಕರಸಹಸ್ರನ ರಥಕೆ ಹೂಡಿದ
ತುರಗ ಛಂದೋಮಯವು ಸಾರಥಿ
ಯರುಣ ಕಾಲವೆ ಗಾಲಿ ನವಕೋಟಿಯನು ಚರಿಯಿಸುಗು
ವರ ವರೂಥದ ಮಧ್ಯದಲಿ ವಿ
ಸ್ತರದ ಮಣಿಪೀಠದಲಿ ಮಿಗೆ ದಿನ
ಕರನು ಗ್ರಹಭವನಕ್ಕೆ ಸಲೆಯಾಧಾರವಾಗಿಹನು ॥65॥
೦೬೬ ಹರಿ ತರಣಿಗಿನ್ದುವಿಗೆ ...{Loading}...
ಹರಿ ತರಣಿಗಿಂದುವಿಗೆ ಕರ್ಕಟ
ಧರಣಿಜಂಗಜ ವೃಶ್ಚಿಕವು ಹಿಮ
ಕರನ ತನಯಗೆ ಮಿಥುನ ಕನ್ಯೆ ಬೃಹಸ್ಪತಿಗೆ ಚಾಪ
ಪಿರಿಯ ಝಷತುಲೆ ವೃಷಭದಾನವ
ಗುರುವಿನವು ಮೃಗಕುಂಭ ಮಂದಂ
ಗಿರವು ನಿಜಗೃಹ ರಾಹುಕೇತುಗಳವರ ಕೂಡಿಹರು ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಂಹವು ಸೂರ್ಯನಿಗೆ, ಕರ್ಕಾಟಕವು ಚಂದ್ರನಿಗೆ, ಮೇಷ ವೃಶ್ಚಿಕಗಳು ಕುಜನಿಗೆ, ಮಿಥುನ ಕನ್ಯೆಗಳು ಬುಧನಿಗೆ, ಧನು-ಮೀನಗಳು ಗುರುವಿಗೆ, ತುಲಾ-ವೃಷಭಗಳು ಶುಕ್ರನಿಗೆ, ಮಕರ ಕುಂಭಗಳು ಶನಿಗೆ ಸ್ವಂತಗೃಹಗಳಾಗಿವೆ. ರಾಹುಕೇತುಗಳು ಇವರನ್ನು ಕೂಡಿಕೊಂಡಿರುತ್ತಾರೆ.
ಪದಾರ್ಥ (ಕ.ಗ.ಪ)
ಝಷ - ಮೀನು
ಅಜ - ಮೇಷ
ದಾನವಗುರು - ಶುಕ್ರ
ಮೃಗ - ಮಕರರಾಶಿ
ಮಂದ - ಶನಿ
ಮೂಲ ...{Loading}...
ಹರಿ ತರಣಿಗಿಂದುವಿಗೆ ಕರ್ಕಟ
ಧರಣಿಜಂಗಜ ವೃಶ್ಚಿಕವು ಹಿಮ
ಕರನ ತನಯಗೆ ಮಿಥುನ ಕನ್ಯೆ ಬೃಹಸ್ಪತಿಗೆ ಚಾಪ
ಪಿರಿಯ ಝಷತುಲೆ ವೃಷಭದಾನವ
ಗುರುವಿನವು ಮೃಗಕುಂಭ ಮಂದಂ
ಗಿರವು ನಿಜಗೃಹ ರಾಹುಕೇತುಗಳವರ ಕೂಡಿಹರು ॥66॥
೦೬೭ ಲಕ್ಕ ಉರ್ವಿಗೆ ...{Loading}...
ಲಕ್ಕ ಉರ್ವಿಗೆ ರವಿಯ ಪಥ ಶಶಿ
ಲಕ್ಕವೆರಡು ತ್ರಿಲಕ್ಕ ಯೋಜನ
ಲೆಕ್ಕಿಸಲು ನಕ್ಷತ್ರ ಬುಧನಿಹನೈದು ಲಕ್ಕದಲಿ
ಲಕ್ಕವೇಳಾ ಶುಕ್ರಕುಜ ನವ
ಲಕ್ಕ ಗುರು ಹನ್ನೊಂದು ಲಕ್ಕವು
ಮಿಕ್ಕ ವಸುಧಾತಳಕೆ ಶನಿ ಹದಿಮೂರುವರೆ ಲಕ್ಕ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಗೆ ಸೂರ್ಯಪಥವು ಒಂದು ಲಕ್ಷಯೋಜನ ದೂರವಿದೆ. ಚಂದ್ರನು ಎರಡು ಲಕ್ಷ ಯೋಜನ, ನಕ್ಷತ್ರ ಲೋಕ ಮೂರು ಲಕ್ಷ ಯೋಜನ, ಬುಧನು ಐದು ಲಕ್ಷ ಯೋಜನ ಶುಕ್ರ, ಏಳು ಲಕ್ಷ ಯೋಜನ, ಮಂಗಳನು ಒಂಬತ್ತು ಲಕ್ಷಯೋಜನ, ಗುರುವು ಹನ್ನೊಂದು ಲಕ್ಷ ಯೋಜನ, ಶನಿಯು ಹದಿಮೂರೂವರೆ ಲಕ್ಷ ಯೋಜನ ದೂರದಲ್ಲಿದ್ದಾರೆ.
ಮೂಲ ...{Loading}...
ಲಕ್ಕ ಉರ್ವಿಗೆ ರವಿಯ ಪಥ ಶಶಿ
ಲಕ್ಕವೆರಡು ತ್ರಿಲಕ್ಕ ಯೋಜನ
ಲೆಕ್ಕಿಸಲು ನಕ್ಷತ್ರ ಬುಧನಿಹನೈದು ಲಕ್ಕದಲಿ
ಲಕ್ಕವೇಳಾ ಶುಕ್ರಕುಜ ನವ
ಲಕ್ಕ ಗುರು ಹನ್ನೊಂದು ಲಕ್ಕವು
ಮಿಕ್ಕ ವಸುಧಾತಳಕೆ ಶನಿ ಹದಿಮೂರುವರೆ ಲಕ್ಕ ॥67॥
೦೬೮ ವಿದಿತವಿನ್ತಿದು ಸಪ್ತಋಷಿಗಳ ...{Loading}...
ವಿದಿತವಿಂತಿದು ಸಪ್ತಋಷಿಗಳ
ಸದನವದು ಹದಿನಾಲ್ಕು ಲಕ್ಕವು
ಮುದದಿ ನೆಲಸಿಹ ಧ್ರುವನು ತಾ ಹದಿನೈದು ಲಕ್ಕದಲಿ
ಅದರ ಮೇಲಿಹ ವಿಷ್ಣುಪದದಲಿ
ಸದಮಳಾತ್ಮಕ ಶಿಂಶುಮಾರನು
ಪದುಳದಲಿ ಸಕಲಕ್ಕೆ ಸಲೆಯಾಧಾರವಾಗಿಹನು ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಪ್ತರ್ಷಿಮಂಡಲವು ಹದಿನಾಲ್ಕು ಲಕ್ಷ ಯೋಜನದಲ್ಲಿದೆ. ಧ್ರುವನಕ್ಷತ್ರವು ಹದಿನೈದು ಲಕ್ಷಯೋಜನದಲ್ಲಿದೆ. ಅದರ ಮೇಲಿರುವ ವಿಷ್ಣುಪದದಲ್ಲಿ ಶಿಂಶುಮಾರವು ಇದ್ದು ಎಲ್ಲದಕ್ಕೂ ಆಧಾರವಾಗಿದೆ.
ಪದಾರ್ಥ (ಕ.ಗ.ಪ)
ಶಿಂಶುಮಾರ - ಒಂದು ನಕ್ಷತ್ರಪುಂಜ
ಮೂಲ ...{Loading}...
ವಿದಿತವಿಂತಿದು ಸಪ್ತಋಷಿಗಳ
ಸದನವದು ಹದಿನಾಲ್ಕು ಲಕ್ಕವು
ಮುದದಿ ನೆಲಸಿಹ ಧ್ರುವನು ತಾ ಹದಿನೈದು ಲಕ್ಕದಲಿ
ಅದರ ಮೇಲಿಹ ವಿಷ್ಣುಪದದಲಿ
ಸದಮಳಾತ್ಮಕ ಶಿಂಶುಮಾರನು
ಪದುಳದಲಿ ಸಕಲಕ್ಕೆ ಸಲೆಯಾಧಾರವಾಗಿಹನು ॥68॥
೦೬೯ ವರ ಕುಮಾರಕ ...{Loading}...
ವರ ಕುಮಾರಕ ನೀನು ಕೇಳೈ
ಪಿರಿಯ ಲೋಕಾಲೋಕವೆಂದಾ
ಗಿರಿಯ ಬಳಸಿದ ಕಾಳಗತ್ತಲೆಯೊಳಗೆ ಮೆರೆದಿಪ್ಪ
ಧರೆಯೊಳರುಣ ದ್ವೀಪವದರೊಳು
ನೆರೆದ ಮಂದೇಹರುಗಳೆಂದ
ಚ್ಚರಿಯದಲಿ ಸರಸಿರುಹದಾಸನನಿಂದ ಜನಿಸಿದರು ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಮಾರಕನೇ ಕೇಳು. ವಿಸ್ತಾರವಾದ ಲೋಕಾಲೋಕವೆಂಬ, ಪರ್ವತಗಳಾಚೆಗೆ ಇರುವ ಕತ್ತಲೆಯ ಲೋಕದಲ್ಲಿ ಅರುಣವೆಂಬ ದ್ವೀಪವಿದೆ. ಅದರಲ್ಲಿ ಬ್ರಹ್ಮದೇವನಿಂದ ಮಂದೇಹರೆಂಬ ರಾಕ್ಷಸರು ಜನಿಸಿದರು.
ಪದಾರ್ಥ (ಕ.ಗ.ಪ)
ಸರಸಿರುಹದಾಸನ - ಬ್ರಹ್ಮ
ಮೂಲ ...{Loading}...
ವರ ಕುಮಾರಕ ನೀನು ಕೇಳೈ
ಪಿರಿಯ ಲೋಕಾಲೋಕವೆಂದಾ
ಗಿರಿಯ ಬಳಸಿದ ಕಾಳಗತ್ತಲೆಯೊಳಗೆ ಮೆರೆದಿಪ್ಪ
ಧರೆಯೊಳರುಣ ದ್ವೀಪವದರೊಳು
ನೆರೆದ ಮಂದೇಹರುಗಳೆಂದ
ಚ್ಚರಿಯದಲಿ ಸರಸಿರುಹದಾಸನನಿಂದ ಜನಿಸಿದರು ॥69॥
೦೭೦ ಹರಿಹರ ವಿರಿಞ್ಚಿಗಳು ...{Loading}...
ಹರಿಹರ ವಿರಿಂಚಿಗಳು ಮೊದಲಾ
ದುರುವ ದೇವರುಗಳೊಳು ಮತ್ತಾ
ತರವಿಡಿದ ಹದಿನಾಲ್ಕು ಜಗದೊಳಗುಳ್ಳ ದೇವರಲಿ
ತರಣಿಯತಿ ಬಲವಂತನೆಂಬುದ
ನರಿದು ಮಂದೇಹಾಸುರರು ಸಾ
ಸಿರ ಕರದ ದಿನನಾಥನೊಳು ಕಾಳಗವ ಬಯಸಿಹರು ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಿಹರ ಬ್ರಹ್ಮಾದಿಗಳಲ್ಲಿ, ಹದಿನಾಲ್ಕು ಲೋಕದ ದೇವತೆಗಳೆಲ್ಲರಲ್ಲಿ ಸೂರ್ಯನೇ ಬಲಶಾಲಿಯೆಂಬುದನ್ನು ತಿಳಿದು ಮಂದೇಹರೆಂಬ ರಾಕ್ಷಸರು ಅವನಲ್ಲಿ ಯುದ್ಧವನ್ನು ಬಯಸಿದರು.
ಪದಾರ್ಥ (ಕ.ಗ.ಪ)
ದಿನನಾಥ - ಸೂರ್ಯ
ವಿರಿಂಚಿ - ಬ್ರಹ್ಮ
ಮೂಲ ...{Loading}...
ಹರಿಹರ ವಿರಿಂಚಿಗಳು ಮೊದಲಾ
ದುರುವ ದೇವರುಗಳೊಳು ಮತ್ತಾ
ತರವಿಡಿದ ಹದಿನಾಲ್ಕು ಜಗದೊಳಗುಳ್ಳ ದೇವರಲಿ
ತರಣಿಯತಿ ಬಲವಂತನೆಂಬುದ
ನರಿದು ಮಂದೇಹಾಸುರರು ಸಾ
ಸಿರ ಕರದ ದಿನನಾಥನೊಳು ಕಾಳಗವ ಬಯಸಿಹರು ॥70॥
೦೭೧ ಪರಿಕಿಸಲು ಪರಮಾತ್ಮ ...{Loading}...
ಪರಿಕಿಸಲು ಪರಮಾತ್ಮ ದಿನಕರ
ಹರಿಹರ ವಿರಿಂಚಿಗಳು ಸೂರ್ಯನ
ನೆರೆದು ಸುತಿ ಕೈವಾರಿಸುತ್ತಿರೆ ಘನ ಮಹಾಮಹಿಮ
ಕಿರಣದುರಿಯ ಮಹಾ ಪ್ರತಾಪನು
ತರಣಿಯೆಂದಾತನೊಳು ಕಾದಲು
ಸರಸಿರುಹಸಂಭವನ ಮೆಚ್ಚಿಸಿ ವರವ ಪಡೆದಿಹರು ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಿಹರ ಬ್ರಹ್ಮಾದಿಗಳು ಸೂರ್ಯನನ್ನು ಮಹಾಮಹಿಮನೆಂದು ಸ್ತುತಿಸುವುದನ್ನು ತಿಳಿದು ಮಂದೇಹಾಸುರರು ಅವನೊಂದಿಗೆ ಕಾದಾಡುವುದಕ್ಕಾಗಿ ಬ್ರಹ್ಮದೇವನನ್ನು ತಪಸ್ಸಿನಿಂದ ಮೆಚ್ಚಿಸಿ ವರವನ್ನು ಪಡೆದರು.
ಮೂಲ ...{Loading}...
ಪರಿಕಿಸಲು ಪರಮಾತ್ಮ ದಿನಕರ
ಹರಿಹರ ವಿರಿಂಚಿಗಳು ಸೂರ್ಯನ
ನೆರೆದು ಸುತಿ ಕೈವಾರಿಸುತ್ತಿರೆ ಘನ ಮಹಾಮಹಿಮ
ಕಿರಣದುರಿಯ ಮಹಾ ಪ್ರತಾಪನು
ತರಣಿಯೆಂದಾತನೊಳು ಕಾದಲು
ಸರಸಿರುಹಸಂಭವನ ಮೆಚ್ಚಿಸಿ ವರವ ಪಡೆದಿಹರು ॥71॥
೦೭೨ ಕಾಲವೆಮ್ಬುದು ರವಿಯ ...{Loading}...
ಕಾಲವೆಂಬುದು ರವಿಯ ಗಾಲಿಯ
ಕಾಲ ಗತಿಯೈಸಲೆ ಕೃತಾಂತಗೆ
ಲೀಲೆ ಸೃಷ್ಟಿಗೆ ಲಯವು ಸಚರಾಚರಗಳೆಂಬಿವನು
ಕಾಲ ಚಕ್ರದ ಖಚರ ಗತಿಯಲಿ
ಕಾಳಗತ್ತಲೆಯನು ನಿವಾರಿಸಿ
ಪಾಲಿಸುವ ಲೋಕಂಗಳಿನಿತುವ ಪಾರ್ಥ ನೋಡೆಂದ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸೂರ್ಯರಥದ ಚಕ್ರಗತಿಯೇ ಕಾಲನು. ಚರಾಚರಗಳನ್ನು ಕಾಲಚಕ್ರದ ಗತಿಯಲ್ಲಿ ತಿರುಗಿಸಿ, ಅಂಧಕಾರವನ್ನು ನಿವಾರಿಸಿ, ಎಲ್ಲ ಲೋಕಗಳನ್ನು ಪಾಲಿಸುವುದು, ಸೃಷ್ಟಿಲಯಗಳನ್ನು ನಿರ್ವಹಿಸುವುದು ಎಲ್ಲವೂ ಅವನ ಲೀಲೆಯಾಗಿದೆ’ ಎಂದು ಪಾರ್ಥನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಕೃತಾಂತ -?
ಮೂಲ ...{Loading}...
ಕಾಲವೆಂಬುದು ರವಿಯ ಗಾಲಿಯ
ಕಾಲ ಗತಿಯೈಸಲೆ ಕೃತಾಂತಗೆ
ಲೀಲೆ ಸೃಷ್ಟಿಗೆ ಲಯವು ಸಚರಾಚರಗಳೆಂಬಿವನು
ಕಾಲ ಚಕ್ರದ ಖಚರ ಗತಿಯಲಿ
ಕಾಳಗತ್ತಲೆಯನು ನಿವಾರಿಸಿ
ಪಾಲಿಸುವ ಲೋಕಂಗಳಿನಿತುವ ಪಾರ್ಥ ನೋಡೆಂದ ॥72॥
೦೭೩ ಅವನಿಪತಿ ಕೇಳಿನ್ದ್ರ ...{Loading}...
ಅವನಿಪತಿ ಕೇಳಿಂದ್ರ ಸಾರಥಿ
ವಿವರಿಸಿದನರ್ಜುನಗೆ ಭೂಮಿಯ
ಭುವನ ಕೋಶದ ಸನ್ನಿವೇಶವನದ್ರಿ ಜಲಧಿಗಳ
ಇವು ಕುಲಾದ್ರಿಗಳಿವು ಪಯೋಧಿಗ
ಳಿವು ಮಹಾ ದ್ವೀಪಂಗಳಿವು ಮಾ
ನವರ ಧರಣೀ ಸ್ವರ್ಗ ಮೇಲಿನ್ನಿತ್ತ ನೋಡೆಂದ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಂಡಲದ ಸನ್ನಿವೇಶಗಳು, ಪರ್ವತ ಸಮುದ್ರಗಳ ವಿವರ ಇತ್ಯಾದಿಗಳನ್ನು ಮಾತಳಿಯು ಅರ್ಜುನನಿಗೆ ವಿವರಿಸಿದನು. ಕುಲಪರ್ವತಗಳು, ಕ್ಷೀರಸಾಗರ, ಮಹಾದ್ವೀಪ, ಮನುಷ್ಯರ ಲೋಕ, ಸ್ವರ್ಗ ಇವುಗಳನ್ನೆಲ್ಲ ತೋರಿಸಿ ಈ ಕಡೆ ನೋಡು ಎಂದನು.
ಮೂಲ ...{Loading}...
ಅವನಿಪತಿ ಕೇಳಿಂದ್ರ ಸಾರಥಿ
ವಿವರಿಸಿದನರ್ಜುನಗೆ ಭೂಮಿಯ
ಭುವನ ಕೋಶದ ಸನ್ನಿವೇಶವನದ್ರಿ ಜಲಧಿಗಳ
ಇವು ಕುಲಾದ್ರಿಗಳಿವು ಪಯೋಧಿಗ
ಳಿವು ಮಹಾ ದ್ವೀಪಂಗಳಿವು ಮಾ
ನವರ ಧರಣೀ ಸ್ವರ್ಗ ಮೇಲಿನ್ನಿತ್ತ ನೋಡೆಂದ ॥73॥
೦೭೪ ಈ ವಿಮಾನದ ...{Loading}...
ಈ ವಿಮಾನದ ಸಾಲ ಸಂದಣಿ
ತೀವಿಕೊಂಡಿದೆ ಗಗನ ತಳದಲಿ
ದೇವಕನ್ಯಾ ಶತಸಹಸ್ರದ ಖೇಳಮೇಳದಲಿ
ಭೂವಳಯದಲಿ ಸುಕೃತಿಗಳು ನಾ
ನಾ ವಿಧದ ಜಪ ಯಜ್ಞ ದಾನ ತ
ಪೋ ವಿಧಾನದಲೊದಗಿದವರನು ಪಾರ್ಥ ನೋಡೆಂದ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಗಗನತಳದಲ್ಲಿರುವ ರಾಜಗೃಹಗಳ ಸಮೂಹವನ್ನು ನೋಡು. ಅಲ್ಲಿ ಅಸಂಖ್ಯ ದೇವಕನ್ಯೆಯರು ನೆರೆದಿದ್ದಾರೆ. ಭೂಮಿಯಲ್ಲಿ ನಾನಾವಿಧವಾದ ಜಪಯಜ್ಞ ದಾನ ತಪಗಳನ್ನು ಮಾಡಿದ ಪುಣ್ಯಾತ್ಮರು ಅಲ್ಲಿದ್ದಾರೆಂದು ಪಾರ್ಥನಿಗೆ ತೋರಿಸಿದನು.
ಪದಾರ್ಥ (ಕ.ಗ.ಪ)
ವಿಮಾನ - ರಾಜಗೃಹ, ಅರಮನೆ
ಮೂಲ ...{Loading}...
ಈ ವಿಮಾನದ ಸಾಲ ಸಂದಣಿ
ತೀವಿಕೊಂಡಿದೆ ಗಗನ ತಳದಲಿ
ದೇವಕನ್ಯಾ ಶತಸಹಸ್ರದ ಖೇಳಮೇಳದಲಿ
ಭೂವಳಯದಲಿ ಸುಕೃತಿಗಳು ನಾ
ನಾ ವಿಧದ ಜಪ ಯಜ್ಞ ದಾನ ತ
ಪೋ ವಿಧಾನದಲೊದಗಿದವರನು ಪಾರ್ಥ ನೋಡೆಂದ ॥74॥
೦೭೫ ಭೂತ ದಯೆಯಲಿ ...{Loading}...
ಭೂತ ದಯೆಯಲಿ ನಡೆವನೀ ತೋ
ರ್ಪಾತ ನಿರ್ಮಳ ಸತ್ಯಭಾಷಿತ
ನೀತ ತೀರ್ಥವಿಹಾರಿ ಸಜ್ಜನನೀತ ಗುಣಿಯೀತ
ಈತ ನಿರ್ಮತ್ಸರನಸೂಯಾ
ತೀತನಿವನತಿ ವಿಪ್ರ ಪೂಜಕ
ನೀತ ಮಾತಾಪಿತರ ಭಕ್ತನು ಪಾರ್ಥ ನೋಡೆಂದ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನು ಜೀವದಯಾಪರನು. ಇವನು ಸತ್ಯವಂತನು. ಇವನು ತೀರ್ಥಾಟನೆ ಮಾಡಿದ ಸಜ್ಜನನು. ಇವನು ಮಾತ್ಸರ್ಯವಿಲ್ಲದವನು, ಇವನು ಅಸೂಯೆಯಿಲ್ಲದವನು. ಇವನು ಬ್ರಾಹ್ಮಣರನ್ನು ಪೂಜಿಸಿದವನು. ಇವನು ತಂದೆ ತಾಯಿಗಳ ಭಕ್ತನು ಎಂದು ಪಾರ್ಥನಿಗೆ ತೋರಿಸಿದನು.
ಮೂಲ ...{Loading}...
ಭೂತ ದಯೆಯಲಿ ನಡೆವನೀ ತೋ
ರ್ಪಾತ ನಿರ್ಮಳ ಸತ್ಯಭಾಷಿತ
ನೀತ ತೀರ್ಥವಿಹಾರಿ ಸಜ್ಜನನೀತ ಗುಣಿಯೀತ
ಈತ ನಿರ್ಮತ್ಸರನಸೂಯಾ
ತೀತನಿವನತಿ ವಿಪ್ರ ಪೂಜಕ
ನೀತ ಮಾತಾಪಿತರ ಭಕ್ತನು ಪಾರ್ಥ ನೋಡೆಂದ ॥75॥
೦೭೬ ಈತನಿನ್ದ್ರಿಯ ವಿಜಯಿ ...{Loading}...
ಈತನಿಂದ್ರಿಯ ವಿಜಯಿ ಸತ್ಕೃತ
ನೀತನಿವ ವೇದಾಧ್ಯಯನ ಪರ
ನೀತ ಪರಹಿತನಿವ ಯಥಾ ಲಾಭೈಕ ಸಂತೋಷಿ
ಈತ ಶುಚಿ ರುಜುವೀತ ನಿಸ್ಪೃಹ
ನೀತ ನಿರ್ಭಯನೀತ ನಿರ್ಮಳ
ನೀತ ರಾಗದ್ವೇಷರಹಿತನು ಪಾರ್ಥ ನೋಡೆಂದ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನು ಇಂದ್ರಿಯ ನಿಗ್ರಹಿ. ಇವನು ಪುಣ್ಯಕಾರ್ಯಗಳನ್ನು ಮಾಡಿರುವವನು. ಇವನು ವೇದಾಧ್ಯಯನ ಮಾಡಿದವನು. ಇವನು ಬೇರೊಬ್ಬರಿಗೆ ಹಿತಗೈದವನು. ಇವನು ಎಷ್ಟು ಲಾಭ ಬಂದಿದೆಯೋ ಅಷ್ಟರಲ್ಲೇ ತೃಪ್ತಿಗೊಂಡವನು. ಇವನು ಪರಿಶುದ್ಧನು. ನಿಸ್ಪೃಹನು, ನಿರ್ಭಯನು, ನಿರ್ಮಳನು. ಇವನು ರಾಗದ್ವೇಷಗಳನ್ನು ಮೀರಿದವನು ಎಂದು ಪಾರ್ಥನಿಗೆ ತೋರಿಸಿದನು.
ಮೂಲ ...{Loading}...
ಈತನಿಂದ್ರಿಯ ವಿಜಯಿ ಸತ್ಕೃತ
ನೀತನಿವ ವೇದಾಧ್ಯಯನ ಪರ
ನೀತ ಪರಹಿತನಿವ ಯಥಾ ಲಾಭೈಕ ಸಂತೋಷಿ
ಈತ ಶುಚಿ ರುಜುವೀತ ನಿಸ್ಪೃಹ
ನೀತ ನಿರ್ಭಯನೀತ ನಿರ್ಮಳ
ನೀತ ರಾಗದ್ವೇಷರಹಿತನು ಪಾರ್ಥ ನೋಡೆಂದ ॥76॥
೦೭೭ ಇತ್ತ ನೋಡೈ ...{Loading}...
ಇತ್ತ ನೋಡೈ ಸ್ವಾಮಿ ಕಾರ್ಯಕೆ
ತೆತ್ತನೊಡಲನು ವರ ರಣಾಗ್ರದೊ
ಳಿತ್ತಲೈದನೆ ಭೂಮಿ ಕನ್ಯಾ ಗೋಧನಾವಳಿಯ
ಇತ್ತವನು ಸತ್ಪುತ್ರನನು ತಾ
ಹೆತ್ತವನು ಗೋ ವಿಪ್ರ ಬಾಧೆಗೆ
ಸತ್ತವನಲೆಲೆ ಪಾರ್ಥ ನೋಡುತ್ತಮ ವಿಮಾನದಲಿ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸ್ವಾಮಿಕಾರ್ಯಕ್ಕಾಗಿ ದೇಹವನ್ನೇ ಕೊಟ್ಟವನು ಇವನು. ಯುದ್ಧರಂಗದಲ್ಲಿ ಪ್ರಾಣಬಿಟ್ಟವನು ಇವನು. ಭೂದಾನ, ಕನ್ಯಾದಾನ, ಗೋದಾನಗಳನ್ನು ಮಾಡಿದವನು ಇವನು. ಸತ್ಪುತ್ರನನ್ನು ಪಡೆದವನು ಇವನು. ಗೋಬ್ರಾಹ್ಮಣ ರಕ್ಷಣೆಗಾಗಿ ಪ್ರಾಣತೆತ್ತವನು ಇವನು. ಉತ್ತಮವಾದ ಈ ರಾಜಗೃಹಗಳಲ್ಲಿರುವರನ್ನೆಲ್ಲ ನೋಡು, ಎಂದನು.
ಮೂಲ ...{Loading}...
ಇತ್ತ ನೋಡೈ ಸ್ವಾಮಿ ಕಾರ್ಯಕೆ
ತೆತ್ತನೊಡಲನು ವರ ರಣಾಗ್ರದೊ
ಳಿತ್ತಲೈದನೆ ಭೂಮಿ ಕನ್ಯಾ ಗೋಧನಾವಳಿಯ
ಇತ್ತವನು ಸತ್ಪುತ್ರನನು ತಾ
ಹೆತ್ತವನು ಗೋ ವಿಪ್ರ ಬಾಧೆಗೆ
ಸತ್ತವನಲೆಲೆ ಪಾರ್ಥ ನೋಡುತ್ತಮ ವಿಮಾನದಲಿ ॥77॥
೦೭೮ ಮೇಲೆ ಮೇಲೈದರೆ ...{Loading}...
ಮೇಲೆ ಮೇಲೈದರೆ ಸುತಾರಾ
ಮಾಲೆಗಳವೊಲು ರಾಜಸೂಯದ
ಮೇಲು ಯಜ್ಞದ ವಾಜಿಮೇಧದ ಭೂರಿ ಸುಕೃತಿಗಳು
ಕಾಳಗದೊಳರಿ ಸುಭಟ ಸಿತಕರ
ವಾಲ ಧಾರಾತೀರ್ಥಸೇವಿ ನೃ
ಪಾಲರೈದರೆ ದೀಪ್ಯಮಾನ ವಿಮಾನ ಮಧ್ಯದಲಿ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇಲುಮೇಲಕ್ಕೆ ಬರುತ್ತಿರಲು ನಕ್ಷತ್ರಮಾಲೆಗಳಂತೆ, ರಾಜಸೂಯ ಅಶ್ವಮೇಧ ಮುಂತಾದ ಪುಣ್ಯ ಕಾರ್ಯಕೈಗೊಂಡವರು, ಯುದ್ಧದಲ್ಲಿ ವೈರಿಗಳ ಖಡ್ಗಧಾರೆಗೆ ಬಲಿಯಾದ ರಾಜರು ಪ್ರಕಾಶಮಾನವಾದ ಈ ರಾಜಗೃಹಗಳಲ್ಲಿರುವುದನ್ನು ತೋರಿಸಿದನು.
ಮೂಲ ...{Loading}...
ಮೇಲೆ ಮೇಲೈದರೆ ಸುತಾರಾ
ಮಾಲೆಗಳವೊಲು ರಾಜಸೂಯದ
ಮೇಲು ಯಜ್ಞದ ವಾಜಿಮೇಧದ ಭೂರಿ ಸುಕೃತಿಗಳು
ಕಾಳಗದೊಳರಿ ಸುಭಟ ಸಿತಕರ
ವಾಲ ಧಾರಾತೀರ್ಥಸೇವಿ ನೃ
ಪಾಲರೈದರೆ ದೀಪ್ಯಮಾನ ವಿಮಾನ ಮಧ್ಯದಲಿ ॥78॥
೦೭೯ ಈತ ಭರತನು ...{Loading}...
ಈತ ಭರತನು ದೂರದಲಿ ತೋ
ರ್ಪಾತನು ಹರಿಶ್ಚಂದ್ರ ನಳ ನೃಗ
ರೀತಗಳು ಪುರು ಕುತ್ಸನೀತ ಮರುತ್ತ ನೃಪನೀತ
ಈತ ಹೈಹಯ ದುಂದುಮಾರಕ
ನೀತ ನಹುಷ ದಿಳೀಪ ದಶರಥ
ನೀತ ರಘು ತಾನೀತ ಶಂತನು ಪಾರ್ಥ ನೋಡೆಂದ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇವನೇ ಭರತಚಕ್ರವರ್ತಿ. ದೂರದಲ್ಲಿರುವವನೇ ಹರಿಶ್ಚಂದ್ರ, ನಳ, ನೃಗ, ಪುರುಕುತ್ಸ, ಮರುತ್ತ, ಹೈಹಯ, ದುಂದುಮಾರ, ನಹುಷ, ದಿಲೀಪ, ದಶರಥ, ರಘು, ಶಂತನುವೇ ಮೊದಲಾದ ನೃಪತಿಗಳನ್ನು ನೋಡು” ಎಂದನು.
ಮೂಲ ...{Loading}...
ಈತ ಭರತನು ದೂರದಲಿ ತೋ
ರ್ಪಾತನು ಹರಿಶ್ಚಂದ್ರ ನಳ ನೃಗ
ರೀತಗಳು ಪುರು ಕುತ್ಸನೀತ ಮರುತ್ತ ನೃಪನೀತ
ಈತ ಹೈಹಯ ದುಂದುಮಾರಕ
ನೀತ ನಹುಷ ದಿಳೀಪ ದಶರಥ
ನೀತ ರಘು ತಾನೀತ ಶಂತನು ಪಾರ್ಥ ನೋಡೆಂದ ॥79॥
೦೮೦ ಇದೆಯಸಙ್ಖ್ಯಾತ ಕ್ಷಿತೀಶ್ವರ ...{Loading}...
ಇದೆಯಸಂಖ್ಯಾತ ಕ್ಷಿತೀಶ್ವರ
ರುದಿತ ಕೃತಪುಣ್ಯೋಪಚಯ ಭೋ
ಗದಲಿ ಭಾರತ ವರುಷ ನಿಮ್ಮದು ಪುಣ್ಯಭೂಮಿ ಕಣ
ಇದರೊಳಗೆ ಜಪ ಯಜ್ಞದಾನಾ
ಭ್ಯುದಯ ವೈದಿಕ ಕರ್ಮನಿಷ್ಠರ
ಪದವಿಗಳ ಪರುಠವಣೆಯನು ಕಲಿಪಾರ್ಥ ನೋಡೆಂದ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅನೇಕ ಭೂಪಾಲಕರು ಮಾಡಿದ ಪುಣ್ಯದಿಂದ ಕೂಡಿದ ಭರತ ವರುಷ ನಿಮ್ಮದು. ಇದರಲ್ಲಿ ಜಪ, ಯಜ್ಞ, ದಾನ, ವೇದ ಪಾರಾಯಣಗಳನ್ನು ಮಾಡಿ ಪದವಿ ಸಂಪಾದಿಸಿದವರ ಭಾಗ್ಯವನ್ನು ನೋಡು” ಎಂದು ಪಾರ್ಥನಿಗೆ ತೋರಿಸಿದನು.
ಮೂಲ ...{Loading}...
ಇದೆಯಸಂಖ್ಯಾತ ಕ್ಷಿತೀಶ್ವರ
ರುದಿತ ಕೃತಪುಣ್ಯೋಪಚಯ ಭೋ
ಗದಲಿ ಭಾರತ ವರುಷ ನಿಮ್ಮದು ಪುಣ್ಯಭೂಮಿ ಕಣ
ಇದರೊಳಗೆ ಜಪ ಯಜ್ಞದಾನಾ
ಭ್ಯುದಯ ವೈದಿಕ ಕರ್ಮನಿಷ್ಠರ
ಪದವಿಗಳ ಪರುಠವಣೆಯನು ಕಲಿಪಾರ್ಥ ನೋಡೆಂದ ॥80॥
೦೮೧ ಹೊಳೆವುತಿದೆ ದೂರದಲಿ ...{Loading}...
ಹೊಳೆವುತಿದೆ ದೂರದಲಿ ರಜತಾ
ಚಲವ ಕಂಡಂದದಲಿ ಕೆಲದಲಿ
ಬಲವಿರೋಧಿಯ ಪಟ್ಟದಾನೆ ಸುರೇಂದ್ರ ನಂದನನೆ
ನಿಳಯವದೆನೆ ಸುದೂರದಲಿ ತಳ
ತಳಿಸುವಮಲ ಮುನಿಪ್ರಭಾ ಪರಿ
ವಳಯ ರಶ್ಮಿ ನಿಬದ್ಧವಮರಾವತಿಯ ನೋಡೆಂದ ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಇಂದ್ರನ ಪಟ್ಟದಾನೆಯೇ, ಅರ್ಜುನನೆ, ಅಗೋ ನೋಡು ದೂರದಲ್ಲಿ ಬೆಳ್ಳಿ ಬೆಟ್ಟದಂತೆ ಕಂಗೊಳಿಸುತ್ತಿರುವುದೇ ಇಂದ್ರನ ಅರಮನೆ. ಮುನಿಪ್ರಭಾಕಿರಣದಂತೆ ಪ್ರಕಾಶಿಸುವ ಅಮರಾವತಿಯೇ ಇಂದ್ರನ ನಗರಿ" ಎಂದು ತೋರಿಸಿದನು.
ಮೂಲ ...{Loading}...
ಹೊಳೆವುತಿದೆ ದೂರದಲಿ ರಜತಾ
ಚಲವ ಕಂಡಂದದಲಿ ಕೆಲದಲಿ
ಬಲವಿರೋಧಿಯ ಪಟ್ಟದಾನೆ ಸುರೇಂದ್ರ ನಂದನನೆ
ನಿಳಯವದೆನೆ ಸುದೂರದಲಿ ತಳ
ತಳಿಸುವಮಲ ಮುನಿಪ್ರಭಾ ಪರಿ
ವಳಯ ರಶ್ಮಿ ನಿಬದ್ಧವಮರಾವತಿಯ ನೋಡೆಂದ ॥81॥
೦೮೨ ಹೊಕ್ಕನಮರಾವತಿಯನರ್ಜುನ ...{Loading}...
ಹೊಕ್ಕನಮರಾವತಿಯನರ್ಜುನ
ನೆಕ್ಕ ಸರದಲುಪಾರ್ಜಿಸಿದ ಪು
ಣ್ಯಕ್ಕೆ ಸರಿಯೇ ನಳ ನಹುಷ ಭರತಾದಿ ಭೂಮಿಪರು
ಉಕ್ಕಿದವು ಪರಿಮಳದ ತೇಜದ
ತೆಕ್ಕೆಗಳು ಲಾವಣ್ಯ ಲಹರಿಯ
ಸೊಕ್ಕುಗಳ ಸುರ ಸೂಳೆಗೇರಿಗಳೊಳಗೆ ನಡೆತಂದ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಅಮರಾವತಿಯನ್ನು ಪ್ರವೇಶಿಸಿದನು. ಇವನು ಏಕಪ್ರಕಾರವಾಗಿ ಗಳಿಸಿದ ಪುಣ್ಯಕ್ಕೆ ನಳನಹುಷ ಭರತಾದಿ ಚಕ್ರವರ್ತಿಗಳು ಸಮಾನರೇ? ಸುತ್ತ ಸುವಾಸನೆಯನ್ನು ಬೀರುತ್ತಿರುವ ಸೌಂದರ್ಯವತಿಯರಾದ ಅಪ್ಸರೆಯರ ಕೇರಿಯಲ್ಲಿ ಪಾರ್ಥನು ನಡೆತಂದನು.
ಮೂಲ ...{Loading}...
ಹೊಕ್ಕನಮರಾವತಿಯನರ್ಜುನ
ನೆಕ್ಕ ಸರದಲುಪಾರ್ಜಿಸಿದ ಪು
ಣ್ಯಕ್ಕೆ ಸರಿಯೇ ನಳ ನಹುಷ ಭರತಾದಿ ಭೂಮಿಪರು
ಉಕ್ಕಿದವು ಪರಿಮಳದ ತೇಜದ
ತೆಕ್ಕೆಗಳು ಲಾವಣ್ಯ ಲಹರಿಯ
ಸೊಕ್ಕುಗಳ ಸುರ ಸೂಳೆಗೇರಿಗಳೊಳಗೆ ನಡೆತಂದ ॥82॥
೦೮೩ ಇಳಿದು ರಥವನು ...{Loading}...
ಇಳಿದು ರಥವನು ದಿವಿಜರಾಯನ
ನಿಳಯವನು ಹೊಕ್ಕನು ಕಿರೀಟಿಯ
ನಳವಿಯಲಿ ಕಂಡಿದಿರು ಬಂದನು ನಗುತ ಶತಮನ್ಯು
ಸೆಳೆದು ಬಿಗಿಯಪ್ಪಿದನು ಕರದಲಿ
ತುಳುಕಿ ಕರವನು ತಂದು ತನ್ನಯ
ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥವನ್ನು ಇಳಿದು ಅರ್ಜುನನು ದೇವೇಂದ್ರನ ಅರಮನೆಯನ್ನು ಪ್ರವೇಶಿಸಿದನು. ಅವನನ್ನು ಕಂಡು ಇಂದ್ರನು ಎದುರು ಬಂದು ಬರಸೆಳೆದು ಆಲಿಂಗಿಸಿದನು. ಕೈಹಿಡಿದು ಕರೆತಂದು ತನ್ನ ಸಿಂಹಾಸನದ ಮೇಲೆ ಪಕ್ಕದಲ್ಲೇ ಕುಳ್ಳಿರಿಸಿಕೊಂಡನು.
ಪದಾರ್ಥ (ಕ.ಗ.ಪ)
ಶತಮನ್ಯು - ನೂರು ಯಾಗಗಳನ್ನು ಮಾಡಿದವನು, ಇಂದ್ರ
ಮೂಲ ...{Loading}...
ಇಳಿದು ರಥವನು ದಿವಿಜರಾಯನ
ನಿಳಯವನು ಹೊಕ್ಕನು ಕಿರೀಟಿಯ
ನಳವಿಯಲಿ ಕಂಡಿದಿರು ಬಂದನು ನಗುತ ಶತಮನ್ಯು
ಸೆಳೆದು ಬಿಗಿಯಪ್ಪಿದನು ಕರದಲಿ
ತುಳುಕಿ ಕರವನು ತಂದು ತನ್ನಯ
ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ ॥83॥
೦೮೪ ನೂರು ಪಶುಗೆಡಹಿಗೆ ...{Loading}...
ನೂರು ಪಶುಗೆಡಹಿಗೆ ಸುರೇಂದ್ರನು
ಮಾರುವನು ಗದ್ದುಗೆಯ ಬರಿದೇ
ಸೂರೆಗೊಂಡನು ಸುರಪತಿಯ ಸಿಂಹಾಸನದ ಸಿರಿಯ
ಮೂರು ಯುಗದರಸುಗಳೊಳೀತಗೆ
ತೋರಲೆಣೆಯಿಲ್ಲೆನಲು ಶಕ್ರನ
ನೂರು ಮಡಿ ತೇಜದಲಿ ತೊಳ ತೊಳಗಿದನು ಕಲಿಪಾರ್ಥ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೂರು ಅಶ್ವಮೇಧಕ್ಕೆ ಇಂದ್ರನು ತನ್ನ ಸಿಂಹಾಸನವನ್ನೇ ನೀಡುತ್ತಾನೆ. ಆದರೆ ಅರ್ಜುನನಾದರೋ ಅದೇನೂ ಇಲ್ಲದೆಯೇ ಆ ಪದವಿಯನ್ನು ಸೂರೆಗೊಂಡು ಸಿಂಹಾಸನದ ಮೇಲೆ ಕುಳಿತನು. ಇವನಿಗೆ ಸಮಾನರಾದವರು ಮೂರು ಯುಗಗಳ ಅರಸರ ಪೈಕಿ ಯಾರೂ ಇಲ್ಲ ! ಇಂದ್ರನಿಗೆ ನೂರು ಮಡಿ ತೇಜಸ್ಸಿನಿಂದ ಅರ್ಜುನನು ಬೆಳಗಿದನು.
ಪದಾರ್ಥ (ಕ.ಗ.ಪ)
ಪಶುಗೆಡಹಿ - ಅಶ್ವಮೇಧ ಯಾಗವನ್ನು ಮಾಡಿದವನು.
ಮೂಲ ...{Loading}...
ನೂರು ಪಶುಗೆಡಹಿಗೆ ಸುರೇಂದ್ರನು
ಮಾರುವನು ಗದ್ದುಗೆಯ ಬರಿದೇ
ಸೂರೆಗೊಂಡನು ಸುರಪತಿಯ ಸಿಂಹಾಸನದ ಸಿರಿಯ
ಮೂರು ಯುಗದರಸುಗಳೊಳೀತಗೆ
ತೋರಲೆಣೆಯಿಲ್ಲೆನಲು ಶಕ್ರನ
ನೂರು ಮಡಿ ತೇಜದಲಿ ತೊಳ ತೊಳಗಿದನು ಕಲಿಪಾರ್ಥ ॥84॥
೦೮೫ ನುಸಿಗಳಿವದಿರು ...{Loading}...
ನುಸಿಗಳಿವದಿರು ಮತ್ರ್ಯರೆಂಬವ
ರೊಸಗೆಯಮರಾವತಿಯೊಳೇನಿದು
ಹೊಸತಲಾ ಬಂದಾತನಾರೋ ಪೂತುರೇಯೆನುತ
ವಸುಗಳಾದಿತ್ಯರು ಭುಜಂಗಮ
ವಿಸರ ಗಂಧರ್ವಾದಿ ದೇವ
ಪ್ರಸರ ಬಂದುದು ಕಾಣಿಕೆಗೆ ಪುರುಹೂತ ನಂದನನ ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ರ್ಯಲೋಕದ ಮನುಷ್ಯರು ನುಸಿಗಳು ಎಂಬ ಪ್ರತೀತಿಯ ನಡುವೆ ಇದೇನು ಹೊಸ ಸುದ್ದಿ ! ಇಲ್ಲಿಗೆ ಬಂದವನು ಯಾರಿವನು ? ಭಾಪುರೇ ! ಎನ್ನುತ್ತಾ, ವಸು, ಆದಿತ್ಯ, ಭುಜಂಗ, ಗಂಧರ್ವರೊಂದಿಗೆ ದೇವತೆಗಳ ಸಮೂಹವೇ ಅರ್ಜುನನ ದರ್ಶನಕ್ಕೆ ಬಂದಿತು.
ಮೂಲ ...{Loading}...
ನುಸಿಗಳಿವದಿರು ಮತ್ರ್ಯರೆಂಬವ
ರೊಸಗೆಯಮರಾವತಿಯೊಳೇನಿದು
ಹೊಸತಲಾ ಬಂದಾತನಾರೋ ಪೂತುರೇಯೆನುತ
ವಸುಗಳಾದಿತ್ಯರು ಭುಜಂಗಮ
ವಿಸರ ಗಂಧರ್ವಾದಿ ದೇವ
ಪ್ರಸರ ಬಂದುದು ಕಾಣಿಕೆಗೆ ಪುರುಹೂತ ನಂದನನ ॥85॥
೦೮೬ ಅನ್ದಿನುತ್ಸವದಮರ ನಿಕರದ ...{Loading}...
ಅಂದಿನುತ್ಸವದಮರ ನಿಕರದ
ಸಂದಣಿಯನೇನೆಂಬೆನಿಂದ್ರನ
ಮಂದಿರದೊಳೊತ್ತೊತ್ತೆಯಾದುದು ಜನದ ದೊಂಬಿಯಲಿ
ಮಂದಿ ತೊಲಗಲಿ ತೆರಹುಗೊಡು ಹೊಯ್
ಮುಂದಣವರನು ಗಜಬಜವ ಮಾ
ಣೆಂದು ಗರ್ಜಿಸಿತಿಂದ್ರನಾಸ್ಥಾನದಲಿ ಸುರನಿಕರ ॥86॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದಿನ ಸೇರಿದ ಸುರಸಮೂಹವನ್ನು ಏನು ಹೇಳಲಿ ?ಇಂದ್ರನ ಆಸ್ಥಾನವು ಜನರಿಂದ ತುಂಬಿತುಳುಕುತ್ತಿತ್ತು. “ದಾರಿ ಬಿಡಿ, ತೊಲಗಿ, ಹೋಯ್, ಗದ್ದಲ ನಿಲ್ಲಿಸಿ” ಎಂದು ದೇವತೆಗಳ ಗಡಣ ಇಂದ್ರನ ಆಸ್ಥಾನದಲ್ಲಿ ಗಟ್ಟಿಯಾಗಿ ಗರ್ಜಿಸಿತು.
ಮೂಲ ...{Loading}...
ಅಂದಿನುತ್ಸವದಮರ ನಿಕರದ
ಸಂದಣಿಯನೇನೆಂಬೆನಿಂದ್ರನ
ಮಂದಿರದೊಳೊತ್ತೊತ್ತೆಯಾದುದು ಜನದ ದೊಂಬಿಯಲಿ
ಮಂದಿ ತೊಲಗಲಿ ತೆರಹುಗೊಡು ಹೊಯ್
ಮುಂದಣವರನು ಗಜಬಜವ ಮಾ
ಣೆಂದು ಗರ್ಜಿಸಿತಿಂದ್ರನಾಸ್ಥಾನದಲಿ ಸುರನಿಕರ ॥86॥
೦೮೭ ನೂಕು ಬಾಗಿಲ ...{Loading}...
ನೂಕು ಬಾಗಿಲ ಚಾಚು ಬಣಗು ದಿ
ವೌಕಸರ ನಿಲಿಸಲ್ಪ ಪುಣ್ಯರ
ನೇಕೆ ಹೊಗಿಸಿದೆ ಬಹಳ ದಾನ ತಪೋವಿವರ್ಜಿತರ
ಓಕುಳಿಯ ನೆವದಿಂದ ತೆಕ್ಕೆಯ
ಬಾಕುಳಿಗಳುರವಣಿಸಿತೇ ತಮ
ಗೇಕೆ ರಂಭಾದಿಗಳ ಸೋಂಕೆಂದುದು ಸುರಸ್ತೋಮ ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೂಕು, ಬಾಗಿಲು ಹಾಕು, ಯಃಕಶ್ಚಿತ್ ದೇವತೆಗಳನ್ನು ನಿಲ್ಲಿಸು, ದಾನ-ತಪಸ್ಸುಗಳನ್ನು ಮಾಡದೇ ಇರುವ ಅಲ್ಪ ಪುಣ್ಯರನ್ನು ಏಕೆ ಒಳಬಿಟ್ಟೆ ? ಈ ಜನರು ಓಕುಳಿಯ ನೆವದಿಂದ ಅಪ್ಸರೆಯರನ್ನು ಆಲಂಗಿಸುವ ಆಸೆಯಿಂದ ಬಂದಿದ್ದಾರೆಯೆ? ಇವರಿಗೆ ರಂಭಾದಿ ಅಪ್ಸರೆಯರ ಹಂಗೇಕೆ ?” ಎಂದು ಸುರಸಮೂಹವು ಹೇಳಿತು.
ಮೂಲ ...{Loading}...
ನೂಕು ಬಾಗಿಲ ಚಾಚು ಬಣಗು ದಿ
ವೌಕಸರ ನಿಲಿಸಲ್ಪ ಪುಣ್ಯರ
ನೇಕೆ ಹೊಗಿಸಿದೆ ಬಹಳ ದಾನ ತಪೋವಿವರ್ಜಿತರ
ಓಕುಳಿಯ ನೆವದಿಂದ ತೆಕ್ಕೆಯ
ಬಾಕುಳಿಗಳುರವಣಿಸಿತೇ ತಮ
ಗೇಕೆ ರಂಭಾದಿಗಳ ಸೋಂಕೆಂದುದು ಸುರಸ್ತೋಮ ॥87॥
೦೮೮ ತೊಲಗಿಸೋ ಮನ್ದಿಯನು ...{Loading}...
ತೊಲಗಿಸೋ ಮಂದಿಯನು ತೆಗೆ ಬಾ
ಗಿಲನೆನಲು ಕವಿದುದು ಸುರೇಂದ್ರನ
ಲಲನೆಯರು ಲಾವಣ್ಯ ಲಹರಿಯ ಲಲಿತ ವಿಭ್ರಮದ
ಸುಳಿಗುರುಳ ನಿಟ್ಟೆಸಳುಗಂಗಳ
ಹೊಳೆವ ಕದಪಿನ ನುಣ್ಗೊರಳ ಬಲು
ಮೊಲೆಯ ಮೋಹರ ನೂಕಿತಮರೀ ವಾರನಾರಿಯರ ॥88॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಾಗಿಲು ತೆಗೆ, ಮಂದಿಯನ್ನು ಹೊರಗೆ ಕಳುಹಿಸು” ಎಂದೆನ್ನಲು ಮುಂಗುರುಳುಗಳು, ಎಸಳು ಕಂಗಳು, ಹೊಳೆಯುವ ಕೆನ್ನೆ, ಮೃದುವಾದ ಕೊರಳು, ಪೀನಸ್ತನಗಳಿಂದ ಶೋಭಿಸುವ ಸುರತರುಣಿಯರ ಸಂದೋಹವೇ ಅಲ್ಲಿ ಬಂದು ಸೇರಿತು.
ಮೂಲ ...{Loading}...
ತೊಲಗಿಸೋ ಮಂದಿಯನು ತೆಗೆ ಬಾ
ಗಿಲನೆನಲು ಕವಿದುದು ಸುರೇಂದ್ರನ
ಲಲನೆಯರು ಲಾವಣ್ಯ ಲಹರಿಯ ಲಲಿತ ವಿಭ್ರಮದ
ಸುಳಿಗುರುಳ ನಿಟ್ಟೆಸಳುಗಂಗಳ
ಹೊಳೆವ ಕದಪಿನ ನುಣ್ಗೊರಳ ಬಲು
ಮೊಲೆಯ ಮೋಹರ ನೂಕಿತಮರೀ ವಾರನಾರಿಯರ ॥88॥
೦೮೯ ಉಗಿದರೋ ಕತ್ತುರಿಯ ...{Loading}...
ಉಗಿದರೋ ಕತ್ತುರಿಯ ತವಲಾ
ಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳಸಾರ ಪೂರವಿಸೆ
ಹೊಗರಲಗು ಹೊಳಹುಗಳ ಕಡೆಗ
ಣ್ಣುಗಳ ಬಲುಗರುವಾಯಿ ಮುಸುಕಿನ
ಬಿಗುಹುಗಳ ಬಿರಿದಂಕಕಾತಿಯರಿಂದ್ರನೋಲಗದ ॥89॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಸ್ತೂರಿ ಕರ್ಪೂರಗಳ ಭರಣಿಯ ಮುಚ್ಚಳವನ್ನು ತೆಗೆದು ಬಿಸುಟರೋ ಎಂಬಂತೆ ಬಾಗಿಲು ತೆಗೆದ ಕೂಡಲೇ ದಿವ್ಯ ಸುಗಂಧವು ಸೂಸಿತು. ಖಡ್ಗದ ಅಲಗುಗಳ ರೀತಿಯಲ್ಲಿ ಹೊಳೆಯುತ್ತಿರುವ ತಮ್ಮ ಕಡೆಗಣ್ಣೋಟದ ಕಾಂತಿಯನ್ನುಳ್ಳ .ಇಂದ್ರನ ಆಸ್ಥಾನದ ಬಿಂಕಗಾತಿಯರು ಗುಂಪಾಗಿ ಬಂದರು.
ಪದಾರ್ಥ (ಕ.ಗ.ಪ)
ತವಲಾಯಿ-ಕರ್ಪೂರ ,
ಗರುವಾಯಿ-ಹೆಮ್ಮೆ
ಮೂಲ ...{Loading}...
ಉಗಿದರೋ ಕತ್ತುರಿಯ ತವಲಾ
ಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳಸಾರ ಪೂರವಿಸೆ
ಹೊಗರಲಗು ಹೊಳಹುಗಳ ಕಡೆಗ
ಣ್ಣುಗಳ ಬಲುಗರುವಾಯಿ ಮುಸುಕಿನ
ಬಿಗುಹುಗಳ ಬಿರಿದಂಕಕಾತಿಯರಿಂದ್ರನೋಲಗದ ॥89॥
೦೯೦ ನೇವುರದ ನುಣ್ದನಿಯ ...{Loading}...
ನೇವುರದ ನುಣ್ದನಿಯ ಕಾಂಚಿಯ
ಕೇವಣದ ಕಿಂಕಿಣಿಯ ರಭಸದ
ನೇವಣಗಳುಲುಹುಗಳ ಮೌಳಿಯ ಮುರಿದ ಮುಸುಕುಗಳ
ಭಾವದುಬ್ಬಿನ ಚೆಲ್ಲೆಗಂಗಳ
ಡಾವರದ ಡೊಳ್ಳಾಸಕಾತಿಯ
ರಾ ವಿಬುಧಪತಿಯೋಲಗವ ಹೊಕ್ಕರು ನವಾಯಿಯಲಿ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೂಪುರ, ಕಾಂಚಿಧಾಮ, ನೇವಳಗಳ ಜಲ್ಲುಜಲ್ಲೆಂಬ ಸದ್ದುಗಳಿಂದೊಡಗೂಡಿದ, ತಲೆಯ ಮೇಲೆ ಮುಸುಕನ್ನು ಹೊಂದಿದ್ದ ಚಂಚಲಾಕ್ಷಿಯರಾದ ಅಪ್ಸರಸ್ತ್ರೀಯರು ಇಂದ್ರನ ಆಸ್ಥಾನವನ್ನು ಠೀವಿಯಿಂದ ಪ್ರವೇಶಿಸಿದರು.
ಪದಾರ್ಥ (ಕ.ಗ.ಪ)
ನೇವುರ-ನೂಪುರ
ಕಾಂಚಿ - ಡಾಬು
ಡೊಳ್ಳಾಸಕಾತಿ - ಬೆಡಗಿ
ವಿಬುಧಪತಿ - ದೇವೇಂದ್ರ
ಮೂಲ ...{Loading}...
ನೇವುರದ ನುಣ್ದನಿಯ ಕಾಂಚಿಯ
ಕೇವಣದ ಕಿಂಕಿಣಿಯ ರಭಸದ
ನೇವಣಗಳುಲುಹುಗಳ ಮೌಳಿಯ ಮುರಿದ ಮುಸುಕುಗಳ
ಭಾವದುಬ್ಬಿನ ಚೆಲ್ಲೆಗಂಗಳ
ಡಾವರದ ಡೊಳ್ಳಾಸಕಾತಿಯ
ರಾ ವಿಬುಧಪತಿಯೋಲಗವ ಹೊಕ್ಕರು ನವಾಯಿಯಲಿ ॥90॥
೦೯೧ ವರ ತಿಲೋತ್ತಮೆ ...{Loading}...
ವರ ತಿಲೋತ್ತಮೆ ರಂಭೆ ಮಧುರ
ಸ್ವರೆ ಘೃತಾಚಿ ಸುಕೇಶಿ ಗೌರೀ
ಶ್ವರಿ ವರೂಥಿನಿ ಪೂರ್ವಚಿತ್ತಿ ಸುಲೇಖೆ ಚಿತ್ತರಥಿ
ಸುರಭಿಗಂಧಿನಿ ಚಾರುಮುಖಿ ಸೌಂ
ದರಿಯನಿಧಿಯೂರ್ವಶಿ ಸುಲೋಚನೆ
ಸುರಸೆಯೆನಿಪಂಗನೆಯರೈದಿತು ಕೋಟಿ ಸಂಖ್ಯೆಯಲಿ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿಲೋತ್ತಮೆ, ರಂಭೆ, ಘೃತಾಚಿ, ಸುಕೇಶಿ, ಗೌರಿ, ಈಶ್ವರಿ, ವರೂಥಿನಿ, ಪೂರ್ವಚಿತ್ತಿ, ಸುಲೇಖೆ, ಚಿತ್ತರಥಿ, ಊರ್ವಶಿ, ಸುಲೋಚನೆ, ಸುರಸೆ ಮುಂತಾದ ಅನೇಕಾನೇಕ ಅಪ್ಸರೆಯರು ಬಂದರು.
ಟಿಪ್ಪನೀ (ಕ.ಗ.ಪ)
ಘೃತಾಚಿ - ಋಷಿ ಕಶ್ಯಪ ಮತ್ತು ದಕ್ಷಪುತ್ರಿ ಪ್ರಾದೆ ಎಂಬ ದಂಪತಿಗಳ ಮಗಳೇ ಘೃತಾಚಿ. ಇವಳು ಆರು ಜನ ಪ್ರಸಿದ್ದ ಅಪ್ಸರ ಸ್ತ್ರೀಯರಲ್ಲಿ ಒಬ್ಬಳು. ಕುಬೇರ, ಇಂದ್ರ ಆಸ್ಥಾನದಲ್ಲಿ ನರ್ತಕಿಯೂ ಆಗಿದ್ದಳು. ಪ್ರಮತಿ ಎಂಬ ಮಹಾರಾಜನ ಪತ್ನಿಯಾಗಿ ರುರು ಎಂಬ ಲೋಕ ಪ್ರಸಿದ್ಧ ಪುತ್ರನನ್ನು ಪಡೆದಳು. ಅರ್ಜುನನ ಜನ್ಮೋತ್ಸವದ ದಿನ ಬಂದು ನರ್ತಿಸಿದ ಅಪ್ಷರೆಯರಲ್ಲಿ ಒಬ್ಬಳು ಎಂದು ಹೇಳಲಾಗಿದೆ. ಮಹಾಭಾರತವೇ ಅಲ್ಲದೆ ರಾಮಾಯಣ ಬ್ರಹ್ಮವೈವರ್ತ ಪುರಾಣಗಳಲ್ಲಿಯೂ ಈಕೆಯ ಪ್ರಸಕ್ತಿಯಿದೆ.
ಶುಕ: ವ್ಯಾಸನ ಪುತ್ರ ಮತ್ತು ಶಿಷ್ಯ. ವ್ಯಾಸರಿಂದ ಶುಕೀರೂಪದಿಂದ ಬಂದ ಘೃತಾಚಿ ಎಂಬ ಅಪ್ಸರಸಿಯಲ್ಲಿ ಜನಿಸಿದವ. ತಂದೆಯ ಬಳಿ ವಿದ್ಯಾಭ್ಯಾಸ ಮಾಡಿ, ಧರ್ಮರಹಸ್ಯಗಳನ್ನು, ಭಾಗವತವನ್ನು ಕೇಳಿ ತಿಳಿದುಕೊಂಡು ಪರೀಕ್ಷಿದ್ರಾಜನಿಗೆ ಹೇಳಿದ
ತಿಲೋತ್ತಮೆ - ಹೆಣ್ಣಿನ ಸೌಂದರ್ಯವನ್ನು ‘ಕೊಲ್ಲುವ ಸೌಂದರ್ಯ’ ಎಂದು ವರ್ಣಿಸುವ ಸಂಪ್ರದಾಯ ಇಂಗ್ಲೀಷಿನಲ್ಲಿದೆ. ತಿಲೋತ್ತಮೆಯ ವಿಷಯ್ಕಕೆ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ. ಸುಂದೋಪಸುಂದರೆಂಬ ರಾಕ್ಷಸ ಸೋದರನನ್ನು ಕೊಲ್ಲಲೆಂದೇ ಹುಟ್ಟಿದ ರೂಪವತಿ ಅವಳು. ಸುಂದೋಪ ಸುಂದರ ಕಾಟವನ್ನು ತಡೆಯಲಾರದೆ ದೇವಗಣ ಬ್ರಹ್ಮನ ಬಳಿಗೆ ಬಂದಾಗ ಮೊದಲು ಬ್ರಹ್ಮನು ಮುತ್ತು ಹವಳಗಳ ಸಾರವನ್ನು ತೆಗೆದುಕೊಂಡು ಒಂದು ಮಾದರಿಯನ್ನು ಸಿದ್ಧಪಡಿಸಿದನಂತೆ. ಅನಂತರ ವಿಶ್ವಕರ್ಮನನ್ನು ಕರೆದು ಈ ಮಾದರಿಯಂತೆ ಲೋಕದಲ್ಲಿರುವ ಸಮಸ್ತ ವಸ್ತುಗಳ ರೂಪಸಾರವನ್ನುಕೂಡಿಸಿ ‘ತಿಲೋತ್ತಮೆ’ಯನ್ನು ಸೃಷ್ಟಿಸುವಂತೆ ಹೇಳಿದನಂತೆ. (ಸೃಜ್ಯತಾಂ ಪ್ರಾರ್ಥನೀಯೇಹ ಪ್ರಮದೇತಿ ಮಹಾತಪೌಃ) ಅನಂತರ ಕಶ್ಯಪ-ಪ್ರಧಾ ದಂಪತಿಗಳ ಮಗುವಾಗಿ ತಿಲೋತ್ತಮೆ ಹುಟ್ಟಿದಳಂತೆ. ವಿಶ್ವಕರ್ಮ-ಅರಿಷ್ಮಾದೇವಿಯರ ಮಗಳು ತಿಲೋತ್ತಮೆ ಎಂಬ ಮಾತೂ ಇದೆ. ಆದಿಪರ್ವದ 65ನೇ ಅಧ್ಯಾಯ ಈ ವಿಷಯವನ್ನು ತಿಳಿಸುತ್ತದೆ. 211ನೆಯ ಪರ್ವದಲ್ಲಿ ಇದರ ವಿವರಗಳಿವೆ.
ಸಂದೋಪಸುಂದರರಿರಲಿ, ಸಮಸ್ತ ದೇವಗಣವೇ ಇವಳ ರೂಪಕ್ಕೆ ಮರುಳಾದ ಬಗೆಯನ್ನು ಈ ಅಧ್ಯಾಯ ವಿವರಿಸುತ್ತದೆ. ತಿಲೋತ್ತಮೆ ಬ್ರಹ್ಮನ ಸಭೆಗೆ ಬಂದು ನಮಸ್ಕಾರ ಮಾಡಿದಳಂತೆ. ದೇವಗಣದ ಎದುರಿಗೆ ಸುಳಿದಾಡಿದಳಂತೆ! ಮಹೇಶ್ವರನೂ ಬ್ರಹ್ಮನ ದಕ್ಷಿಣ ಭಾಗದಲ್ಲಿ ಕುಳಿತಿದ್ದ. ತಿಲೋತ್ತಮೆ ಓಡಾಡಿದ ಕಡೆಗೆಲ್ಲ ನೋಡುವ ಶಿವನ ಚಪಲದಿಂದಾಗಿ ಅವನಿಗೆ ಮೂರು ಹೊಸಮುಖಗಳು ಹುಟ್ಟಿಕೊಂಡವಂತೆ! ಇಂದ್ರರಾಜನಿಗೆ ಮೈಯೆಲ್ಲ ಕಣ್ಣಾಗಿ ಅವನು ಸಹಸ್ರನೇತ್ರನಾದನಂತೆ! ಬ್ರಹ್ಮನಿಂದ ಮೊದಲುಗೊಂಡು ಸಮಸ ್ತಋಷಿಗಣದವರೆಗೆ ಎಲ್ಲರ ಕಣ್ಣುಗಳೂ ತಿಲೋತ್ತಮೆಯ ಕಡೆಗೆ ತಿರುಗಿದ್ದವಂತೆ! ಕೊನೆಗೆ ಒಂದು ಸುತ್ತು ಹಾಕಿ ತಿಲೋತ್ತಮೆ ಬ್ರಹ್ಮನ ಬಳಿಗೆ ಬಂದಾಗ ‘ದೇವಕಾರ್ಯವನ್ನು ಮಾಡಿ ಬಾ’ ಎಂಬ ಆದೇಶ ಬಂದಿತು.
ತಿಲೋತ್ತಮೆ ತಾನಾಗಿ ಸುಂದೋಸುಂದರಿಯರ ಬಳಿಗೆ ಬಂದದ್ದು, ತ್ರಿಲೋಕಗಳಲ್ಲಿ ಅಜೇಯರಾಗಿದ್ದ ಈ ರಾಕ್ಷಸ ಸೋದರರು ಈಕೆಯ ರೂಪದ ಬಲೆಗೆ ಬಿದ್ದು ವಿವೇಚನೆ ಕಳೆದುಕೊಂಡು ಅವಳನ್ನು ಮದುವೆಯಾಗಬಯಸಿದ್ದು, ‘ನಿಮ್ಮಿಬ್ಬರಲ್ಲಿ ಯಾರು ಮಹಾಬಲಶಾಲಿಯೋ ಅವನನ್ನೇ ಮದುವೆಯಾಗುತ್ತೇನೆ’ ಎಂದು ತಿಲೋತ್ತಮೆ ಘೋಷಿಸಿದ್ದು, ರೂಪದ ಹಿಂದಿದ್ದ ಕೃತ್ರಿಮ ಭಾವವನ್ನು ತೋರುವುದಕ್ಕಾಗಿ ಪರಸ್ಪರ ಗದಾಯುದ್ಧದಲ್ಲಿ ತೊಡಗಿದ್ದು, ಕೊನೆಗೆ ಒಬ್ಬರಿಂದೊಬ್ಬರು ಹತಿಗೆ ಒಳಗಾಗಿ ಇಬ್ಬರೂ ಪ್ರಾಣವನ್ನು ಬಿಟ್ಟಿದ್ದು ಇವೆಲ್ಲ ಎಲ್ಲರಿಗೂ ತಿಳಿದಿರುವ ಪುರಾಣಕಥೆಯೇ ಆಗಿದೆ.
‘‘ಅಹಂ ಪೂರ್ವಮಹಂ ಪೂರ್ವಮಿತಿ ಅನ್ಯೋನಂ ನಿಜಘ್ನತುಃ ತೌಗದಾಭಿ ಹತೌ ಭೀಮೌ ಪೇತ ತುರ್ಧರಣೀತಲೇ’’ ಎಂದು ವ್ಯಾಸರು ಇವರಿಬ್ಬರ ಇತಿಶ್ರೀಯರನ್ನು ಹಾಡಿದ್ದಾರೆ.
ಅನಂತರ ಆಕೆ ದೇವೇಂದ್ರನ ಅಪ್ಷರ ಗಣದಲ್ಲಿ ಒಬ್ಬಳಾಗಿ ಉಳಿದದ್ದು ಇತಿಹಾಸದ ಸಂಗತಿ.
ಮೂಲ ...{Loading}...
ವರ ತಿಲೋತ್ತಮೆ ರಂಭೆ ಮಧುರ
ಸ್ವರೆ ಘೃತಾಚಿ ಸುಕೇಶಿ ಗೌರೀ
ಶ್ವರಿ ವರೂಥಿನಿ ಪೂರ್ವಚಿತ್ತಿ ಸುಲೇಖೆ ಚಿತ್ತರಥಿ
ಸುರಭಿಗಂಧಿನಿ ಚಾರುಮುಖಿ ಸೌಂ
ದರಿಯನಿಧಿಯೂರ್ವಶಿ ಸುಲೋಚನೆ
ಸುರಸೆಯೆನಿಪಂಗನೆಯರೈದಿತು ಕೋಟಿ ಸಂಖ್ಯೆಯಲಿ ॥91॥
೦೯೨ ಏನನೆಮ್ಬೆನು ಜೀಯ ...{Loading}...
ಏನನೆಂಬೆನು ಜೀಯ ಶಕ್ರಾ
ಸ್ಥಾನವಲ್ಲಾ ದಿವ್ಯವಾದ್ಯ ಸು
ಗಾನ ನರ್ತನ ವಿಮಳ ತೂರ್ಯತ್ರಯದ ಮೇಳವದ
ಆ ನಿತಂಬಿನಿಯರ ಸುರೇಖಾ
ಸ್ಥಾನಕದ ನಿರುಗೆಯ ಸುಢಾಳದ
ನೂನ ಸಮ್ಮೋಹನದ ತೂಕದ ಭಾವಭಂಗಿಗಳ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಡೆಯನಾದ ದೇವೇಂದ್ರನ ಆಸ್ಥಾನದಲ್ಲಿ ದಿವ್ಯವಾದ ವಾದ್ಯಗಳು, ಗಾನ ನರ್ತನಾದಿಗಳು, ಸುರವನಿತೆಯರ ಸಮ್ಮೋಹನದ ವಿವಿಧ ಭಾವಭಂಗಿಗಳು, ನ್ಯೂನತೆಯಿಲ್ಲದ ಸೌಂದರ್ಯ ಮುಂತಾದ ವೈಭವಗಳನ್ನು ಏನೆಂದು ವರ್ಣಿಸಲಿ ?
ಮೂಲ ...{Loading}...
ಏನನೆಂಬೆನು ಜೀಯ ಶಕ್ರಾ
ಸ್ಥಾನವಲ್ಲಾ ದಿವ್ಯವಾದ್ಯ ಸು
ಗಾನ ನರ್ತನ ವಿಮಳ ತೂರ್ಯತ್ರಯದ ಮೇಳವದ
ಆ ನಿತಂಬಿನಿಯರ ಸುರೇಖಾ
ಸ್ಥಾನಕದ ನಿರುಗೆಯ ಸುಢಾಳದ
ನೂನ ಸಮ್ಮೋಹನದ ತೂಕದ ಭಾವಭಂಗಿಗಳ ॥92॥
೦೯೩ ರಸದ ಸಂಸ್ಥಾಪನೆಯ ...{Loading}...
ರಸದ ಸಂಸ್ಥಾಪನೆಯ ಭಾವದ
ಬೆಸುಗೆಗಳ ಹಸ್ತಾಭಿನಯ ದೃ
ಕ್ಪ್ರಸರಣದವರ ಸಾತ್ವಿಕಾಂಗಿಕ ಸುಗತಿ ವಿಭ್ರಮದ
ವಿಷಮ ಸಮಕರಣದ ಕಳಾಪದ
ಕುಸುರಿಗಳ ವರಲಾಸ್ಯ ತಾಂಡವ
ವೆಸೆದುದೈ ರಂಭಾದಿ ನರ್ತಕಿಯರಲಿ ಹೊಸತೆನಿಸಿ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಂಭೆಯೇ ಮೊದಲಾದ ನರ್ತಕಿಯರು ರಸ-ಭಾವಗಳಿಂದ ಕೂಡಿದ ಹಸ್ತಾಭಿನಯ, ನೇತ್ರಚಲನೆ, ಸಾತ್ವಿಕವಾದ ಆಂಗಿಕಾಭಿನಯ, ಸಮ-ವಿಷಮ ಕರಣಗಳು, ಲಾಸ್ಯ-ತಾಂಡವದ ನಾಟ್ಯ ಕಲಾಪ ಮುಂತಾದವುಗಳನ್ನು ವಿನೂತನವಾಗಿ ಮಾಡಿತೋರಿಸಿದರು.
ಮೂಲ ...{Loading}...
ರಸದ ಸಂಸ್ಥಾಪನೆಯ ಭಾವದ
ಬೆಸುಗೆಗಳ ಹಸ್ತಾಭಿನಯ ದೃ
ಕ್ಪ್ರಸರಣದವರ ಸಾತ್ವಿಕಾಂಗಿಕ ಸುಗತಿ ವಿಭ್ರಮದ
ವಿಷಮ ಸಮಕರಣದ ಕಳಾಪದ
ಕುಸುರಿಗಳ ವರಲಾಸ್ಯ ತಾಂಡವ
ವೆಸೆದುದೈ ರಂಭಾದಿ ನರ್ತಕಿಯರಲಿ ಹೊಸತೆನಿಸಿ ॥93॥
೦೯೪ ಗಾನ ರಸದಲಿ ...{Loading}...
ಗಾನ ರಸದಲಿ ಮುಳುಗಿತಮರಾ
ಸ್ಥಾನವೆತ್ತಣ ವಾದ್ಯ ನರ್ತನ
ಗಾನ ನರ್ತನವೆನಲು ಸಮ್ಮೋಹಿಸಿತು ಘನವಾದ್ಯ
ಗಾನ ವಾದ್ಯವಿದೆತ್ತ ನೃತ್ಯರ
ಸಾನುಭವ ಭಾರವಿಸಿತನ್ಯೋ
ನ್ಯಾನು ರಂಜಕವಾಯ್ತು ತೂರ್ಯತ್ರಯದ ಮೇಳಾಪ ॥94॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳ ಆಸ್ಥಾನವು ಗಾನರಸದಲ್ಲಿ ಮುಳುಗಿತು. ವಾದ್ಯನರ್ತನ-ಗಾನನರ್ತನಗಳಲ್ಲಿ ಸ್ಪರ್ಧೆ ಏರ್ಪಟ್ಟು ವಾದ್ಯನರ್ತನ ಮೇಲುವರಿಯಿತು. ಗಾನ ವಾದ್ಯಗಳಿಗಿಂತಲೂ ನೃತ್ಯ ರಸಾನುಭವವೇ ಮಿಗಿಲಾದಂತೆ ತೂರ್ಯತ್ರಯದ ರಂಜನೆ ಉಂಟಾಯಿತು.
ಪದಾರ್ಥ (ಕ.ಗ.ಪ)
ತೂರ್ಯತ್ರಯ - ನೃತ್ಯ ಗೀತ, ವಾದ್ಯಗಳ ಮೇಳ
ಮೂಲ ...{Loading}...
ಗಾನ ರಸದಲಿ ಮುಳುಗಿತಮರಾ
ಸ್ಥಾನವೆತ್ತಣ ವಾದ್ಯ ನರ್ತನ
ಗಾನ ನರ್ತನವೆನಲು ಸಮ್ಮೋಹಿಸಿತು ಘನವಾದ್ಯ
ಗಾನ ವಾದ್ಯವಿದೆತ್ತ ನೃತ್ಯರ
ಸಾನುಭವ ಭಾರವಿಸಿತನ್ಯೋ
ನ್ಯಾನು ರಂಜಕವಾಯ್ತು ತೂರ್ಯತ್ರಯದ ಮೇಳಾಪ ॥94॥
೦೯೫ ಈಯಮಾನುಷ ನೃತ್ಯ ...{Loading}...
ಈಯಮಾನುಷ ನೃತ್ಯ ವಾದ್ಯ ಸು
ಗೇಯ ರಸದಲಿ ಮುಳುಗಿ ಕರಣದ
ಲಾಯ ತೊಡಕದೆ ಪಾರ್ಥನಿದ್ದನು ಧೈರ್ಯಶಿಖರದಲಿ
ಈ ಯುವತಿ ತಾನಾವಳೋ ಕುಸು
ಮಾಯುಧನ ಖಂಡೆಯವಲಾ ಮಝ
ಮಾಯೆಯೆನುತೂರ್ವಶಿಯನೆವೆಯಿಕ್ಕದೆ ನಿರೀಕ್ಷಿಸಿದ ॥95॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳ ನೃತ್ಯ-ವಾದ್ಯ-ಗಾನಗಳ ರಸಾಭಿಷೇಚನದಲ್ಲಿ ಮುಳುಗಿದ ಅರ್ಜುನನಾದರೋ, ಚಿತ್ತಸ್ಥಿರತೆಯಿಂದ ಧೈರ್ಯವಾಗಿಯೇ ಕುಳಿತಿದ್ದನು. ಮನ್ಮಥನ ಕೈಯ ಆಯುಧದಂತಿರುವ, ಈ ಯುವತಿ ಯಾರಿರಬಹುದು ಓಹೋ ಮಾಯೆಯಲ್ಲವೆ ! ಎಂದುಕೊಳ್ಳುತ್ತಾ ಊರ್ವಶಿಯನ್ನು ಎವೆಯಿಕ್ಕದೆ ನೋಡಿದನು.
ಮೂಲ ...{Loading}...
ಈಯಮಾನುಷ ನೃತ್ಯ ವಾದ್ಯ ಸು
ಗೇಯ ರಸದಲಿ ಮುಳುಗಿ ಕರಣದ
ಲಾಯ ತೊಡಕದೆ ಪಾರ್ಥನಿದ್ದನು ಧೈರ್ಯಶಿಖರದಲಿ
ಈ ಯುವತಿ ತಾನಾವಳೋ ಕುಸು
ಮಾಯುಧನ ಖಂಡೆಯವಲಾ ಮಝ
ಮಾಯೆಯೆನುತೂರ್ವಶಿಯನೆವೆಯಿಕ್ಕದೆ ನಿರೀಕ್ಷಿಸಿದ ॥95॥
೦೯೬ ಪಾರುಖಾಣೆಯವಿತ್ತನಾ ಜಂ ...{Loading}...
ಪಾರುಖಾಣೆಯವಿತ್ತನಾ ಜಂ
ಭಾರಿಯೂರ್ವಶಿ ರಂಭೆ ಮೇನಕೆ
ಗೌರಿ ಮೊದಲಾದಖಿಳ ಪಾತ್ರಕೆ ಪರಮ ಹರುಷದಲಿ
ನಾರಿಯರು ನಿಖಿಳಾಮರರು ಬೀ
ಡಾರಕೈದಿತು ಹರೆದುದೋಲಗ
ವಾರತಿಯ ಹರಿವಾಣ ಸುಳಿದುದು ಸಾಲು ಸೊಡರುಗಳ ॥96॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಊರ್ವಶಿ, ರಂಭೆ, ಮೇನಕೆ ಗೌರಿಯೇ ಮೊದಲಾದ ನರ್ತಕಿಯರಿಗೆ ದೇವೇಂದ್ರನು ಸೂಕ್ತ ಉಡುಗೊರೆಗಳನ್ನಿತ್ತನು. ಸಂತೋಷದಿಂದ ಎಲ್ಲ ಸುರಸ್ತ್ರೀಯರೂ, ದೇವತೆಗಳೂ ತಮ್ಮ ಮನೆಗಳಿಗೆ ಹಿಂದಿರುಗಿದರು. ಓಲಗವು ಮುಗಿಯುತ್ತಿದ್ದಂತೆ ಸಾಲುದೀಪದ ಮಂಗಳಾರತಿಯನ್ನು ಬೆಳಗಲಾಯಿತು.
ಪದಾರ್ಥ (ಕ.ಗ.ಪ)
ಪಾರುಖಾಣೆಯ-ಉಡುಗೊರೆ
ಮೂಲ ...{Loading}...
ಪಾರುಖಾಣೆಯವಿತ್ತನಾ ಜಂ
ಭಾರಿಯೂರ್ವಶಿ ರಂಭೆ ಮೇನಕೆ
ಗೌರಿ ಮೊದಲಾದಖಿಳ ಪಾತ್ರಕೆ ಪರಮ ಹರುಷದಲಿ
ನಾರಿಯರು ನಿಖಿಳಾಮರರು ಬೀ
ಡಾರಕೈದಿತು ಹರೆದುದೋಲಗ
ವಾರತಿಯ ಹರಿವಾಣ ಸುಳಿದುದು ಸಾಲು ಸೊಡರುಗಳ ॥96॥
೦೯೭ ಅರಸ ಕೇಳಾರೋಗಿಸಿದರಿ ...{Loading}...
ಅರಸ ಕೇಳಾರೋಗಿಸಿದರಿ
ಬ್ಬರು ಸಮೇಳದಲಿದ್ದು ಬೇರೊಂ
ದರಮನೆಗೆ ಕಳುಹಿದನು ಪವಡಿಸುವೊಡೆ ನಿಜಾತ್ಮಜನ
ಸುರಪನಿತ್ತಲು ಚಿತ್ರಸೇನನ
ಕರೆಸಿದನು ಫಲುಗುಣನ ಭಾವವ
ನರುಹಿದನು ನಮ್ಮೂರ್ವಶಿಯ ಕಳುಹೆಂದು ನೇಮಿಸಿದ ॥97॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವೇಂದ್ರನೂ ಅರ್ಜುನನೂ ಜೊತೆಯಾಗಿಯೇ ಭೋಜನವನ್ನು ಮುಗಿಸಿದರು. ಮಲಗುವುದಕ್ಕಾಗಿ ಅರ್ಜುನನನ್ನು ಬೇರೊಂದು ಅರಮನೆಗೆ ಕಳುಹಿಸಿದನು. ಅನಂತರ ಚಿತ್ರಸೇನನನ್ನು ಕರೆಸಿ, ಅರ್ಜುನನ ಅಭಿಲಾಷೆಯನ್ನು ಈಡೇರಿಸಲು ಊರ್ವಶಿಯನ್ನು ಕಳುಹಿಸು ಎಂದು ಆಜ್ಞೆ ಮಾಡಿದನು.
ಮೂಲ ...{Loading}...
ಅರಸ ಕೇಳಾರೋಗಿಸಿದರಿ
ಬ್ಬರು ಸಮೇಳದಲಿದ್ದು ಬೇರೊಂ
ದರಮನೆಗೆ ಕಳುಹಿದನು ಪವಡಿಸುವೊಡೆ ನಿಜಾತ್ಮಜನ
ಸುರಪನಿತ್ತಲು ಚಿತ್ರಸೇನನ
ಕರೆಸಿದನು ಫಲುಗುಣನ ಭಾವವ
ನರುಹಿದನು ನಮ್ಮೂರ್ವಶಿಯ ಕಳುಹೆಂದು ನೇಮಿಸಿದ ॥97॥
೦೯೮ ಇನಿಬರಿರೆ ರಮ್ಭಾದಿ ...{Loading}...
ಇನಿಬರಿರೆ ರಂಭಾದಿ ಸೀಮಂ
ತಿನಿಯರೊಳಗೂರ್ವಶಿಯೊಳಾದುದು
ಮನ ಧನಂಜಯನೀಕ್ಷಿಸಿದನನಿಮೇಷ ದೃಷ್ಟಿಯಲಿ
ವನಿತೆಯನು ಕಳುಹೇಳು ನೀನೆಂ
ದೆನೆ ಹಸಾದವೆನುತ್ತ ದೇವಾಂ
ಗನೆಯ ಭವನಕೆ ಬಂದನೀತನು ಹರಿಯ ನೇಮದಲಿ ॥98॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಂಭೆಯೇ ಮೊದಲಾದ ಅಪ್ಸರೆಯರಲ್ಲಿ ಊರ್ವಶಿಯ ಮೇಲೆ ಅರ್ಜುನನಿಗೆ ಅಪೇಕ್ಷೆಯುಂಟಾಗಿದೆ ಎಂಬುದನ್ನು ಅವನುÉವೆಯಿಕ್ಕದೆ ಅವಳನ್ನು ನೋಡುತ್ತಿದ್ದದನ್ನು ಗಮನಿಸಿ ಅರಿತಿದ್ದೇನೆ. ಆದುದರಿಂದ ಅವಳನ್ನು ಅರ್ಜುನನಿದ್ದಲ್ಲಿಗೆ ಕಳುಹಿಸು ಎಂದು ಹೇಳಲು, ಚಿತ್ರಸೇನನು ಅಪ್ಪಣೆ ಎಂದು ಊರ್ವಶಿಯ ಮನೆಗೆ ಬಂದನು.
ಪದಾರ್ಥ (ಕ.ಗ.ಪ)
ಅನಿಮೇಷ - ರೆಪ್ಪೆ ಬಡಿಯದ, ಎವೆಯಿಕ್ಕದ
ಮೂಲ ...{Loading}...
ಇನಿಬರಿರೆ ರಂಭಾದಿ ಸೀಮಂ
ತಿನಿಯರೊಳಗೂರ್ವಶಿಯೊಳಾದುದು
ಮನ ಧನಂಜಯನೀಕ್ಷಿಸಿದನನಿಮೇಷ ದೃಷ್ಟಿಯಲಿ
ವನಿತೆಯನು ಕಳುಹೇಳು ನೀನೆಂ
ದೆನೆ ಹಸಾದವೆನುತ್ತ ದೇವಾಂ
ಗನೆಯ ಭವನಕೆ ಬಂದನೀತನು ಹರಿಯ ನೇಮದಲಿ ॥98॥
೦೯೯ ತಾಯೆ ಚಿತ್ತೈಸರಮನೆಯ ...{Loading}...
ತಾಯೆ ಚಿತ್ತೈಸರಮನೆಯ ಸೂ
ಳಾಯಿತನು ಬಂದೈದನೆನೆ ಕಮ
ಲಾಯತಾಂಬಕಿ ಚಿತ್ರಸೇನನ ಕರೆಸಿದಳು ನಗುತ
ತಾಯೆನುತ ವಸ್ತ್ರಾಭರಣದ ಪ
ಸಾಯವಿತ್ತಳು ಪರಿಮಳದ ತವ
ಲಾಯಿಗಳ ನೂಕಿದಳು ವರ ಕತ್ತುರಿಯ ಕರ್ಪುರದ ॥99॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಮ್ಮಾ… ಅವಧರಿಸು. ಅರಮನೆಯ ಚಾಕರಿಯವನು ಬಂದಿದ್ದೇನೆ’ ಎನ್ನಲು ಊರ್ವಶಿ ಚಿತ್ರಸೇನನನ್ನು ಒಳಗೆ ಕರೆದಳು. ವಸ್ತ್ರ, ಆಭರಣಗಳನ್ನೂ ಉಡುಗೊರೆಯಾಗಿ ನೀಡಿ, ಕಸ್ತೂರಿ, ಕರ್ಪೂರ ಸುಗಂಧ ದ್ರವ್ಯಗಳನ್ನಿತ್ತಳು.
ಪದಾರ್ಥ (ಕ.ಗ.ಪ)
ಪಸಾಯ-ಉಡುಗೊರೆ
ಮೂಲ ...{Loading}...
ತಾಯೆ ಚಿತ್ತೈಸರಮನೆಯ ಸೂ
ಳಾಯಿತನು ಬಂದೈದನೆನೆ ಕಮ
ಲಾಯತಾಂಬಕಿ ಚಿತ್ರಸೇನನ ಕರೆಸಿದಳು ನಗುತ
ತಾಯೆನುತ ವಸ್ತ್ರಾಭರಣದ ಪ
ಸಾಯವಿತ್ತಳು ಪರಿಮಳದ ತವ
ಲಾಯಿಗಳ ನೂಕಿದಳು ವರ ಕತ್ತುರಿಯ ಕರ್ಪುರದ ॥99॥
೧೦೦ ಅಣಕವಲ್ಲಿದು ರಾಯನಟ್ಟಿದ ...{Loading}...
ಅಣಕವಲ್ಲಿದು ರಾಯನಟ್ಟಿದ
ಮಣಿಹವೋ ನಿಜಕಾರ್ಯ ಗತಿಗಳ
ಕುಣಿಕೆಯೋ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ
ಗುಣಭರಿತ ಹೇಳೆನಲು ನಸುನಗೆ
ಕುಣಿಯೆ ಮುಖದಲಿ ಮಾನಿನಿಗೆ ವೆಂ
ಟಣಿಸಿ ಲಜ್ಜಾಭರದಿ ನುಡಿದನು ದೂತನೀ ಮಾತ ॥100॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸದ್ಗುಣಿಯೇ ! ನಿನಗೆ ನನ್ನಲ್ಲಿ ಏನು ಕೆಲಸ ? ಇದು ಅಣಕವಲ್ಲ ತಾನೇ ? ಇಂದ್ರನೇ ಕಳುಹಿಸಿದನೆ ? ಕಾರ್ಯಭಾರದ ತಂತ್ರವೆ ? ಹೇಳು’ ಎಂದು ಊರ್ವಶಿಯು ಕೇಳಲು ಚಿತ್ರಸೇನನು ನಗುಮುಖದಿಂದ ನಾಚಿಕೆಯಿಂದ ಸಂಗತಿಯನ್ನು ತಿಳಿಸಿದನು.
ಮೂಲ ...{Loading}...
ಅಣಕವಲ್ಲಿದು ರಾಯನಟ್ಟಿದ
ಮಣಿಹವೋ ನಿಜಕಾರ್ಯ ಗತಿಗಳ
ಕುಣಿಕೆಯೋ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ
ಗುಣಭರಿತ ಹೇಳೆನಲು ನಸುನಗೆ
ಕುಣಿಯೆ ಮುಖದಲಿ ಮಾನಿನಿಗೆ ವೆಂ
ಟಣಿಸಿ ಲಜ್ಜಾಭರದಿ ನುಡಿದನು ದೂತನೀ ಮಾತ ॥100॥
೧೦೧ ಎಮಗೆ ಮಗನರ್ಜುನನು ...{Loading}...
ಎಮಗೆ ಮಗನರ್ಜುನನು ನೀನಿಂ
ದೆಮಗೆ ಸೊಸೆಯಹುದಾತನಂತ
ಸ್ತಿಮಿರವನು ಕಳೆ ನಿನ್ನ ಕುಚಯುಗ ಕಾಂತಿ ಲಹರಿಯಲಿ
ಕಮಲಮುಖಿ ನೀ ಕಮಲವಾತನು
ಭ್ರಮರ ನೀ ಸುರವನದ ಸಿರಿಮಧು
ಸಮಯವರ್ಜುನನೆಂದು ಬೆಸಸಿದನಮರಪತಿಯೆಂದ ॥101॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನನಗೆ ಅರ್ಜುನನು ಮಗನು. ಈ ದಿನ ನೀನು ನನಗೆ ಸೊಸೆಯಾಗಬೇಕು. ಅರ್ಜುನನ ಅಂತರಂಗದ ಕತ್ತಲೆಯನ್ನು ನಿನ್ನ ಸ್ತನಕಾಂತಿಯಿಂದ ನೀಗು. ಕಮಲಮುಖಿ, ನೀನು ಕಮಲ, ಅವನು ಭ್ರಮರ.. ನೀನು ಈ ಸುರವನದ ಸಿರಿ, ಅವನು ಮಧುಸಮಯ. ಅವನು.’ ಎಂದು ದೇವೇಂದ್ರನಾಜ್ಞೆಯಾಗಿದೆ ಎಂಬುದನ್ನು ಹೇಳಿದನು.
ಮೂಲ ...{Loading}...
ಎಮಗೆ ಮಗನರ್ಜುನನು ನೀನಿಂ
ದೆಮಗೆ ಸೊಸೆಯಹುದಾತನಂತ
ಸ್ತಿಮಿರವನು ಕಳೆ ನಿನ್ನ ಕುಚಯುಗ ಕಾಂತಿ ಲಹರಿಯಲಿ
ಕಮಲಮುಖಿ ನೀ ಕಮಲವಾತನು
ಭ್ರಮರ ನೀ ಸುರವನದ ಸಿರಿಮಧು
ಸಮಯವರ್ಜುನನೆಂದು ಬೆಸಸಿದನಮರಪತಿಯೆಂದ ॥101॥
೧೦೨ ಕೇಳುತವೆ ರೋಮಾಞ್ಚ ...{Loading}...
ಕೇಳುತವೆ ರೋಮಾಂಚ ಲಜ್ಜೆಯ
ಜೋಳಿಯೆದ್ದುದು ಝೋಂಪಿಸಿತು ಪುಳ
ಕಾಳಿ ಭಯವನು ಪಂಟಿಸಿದುದನುರಾಗದಭಿಮಾನ
ಮೇಲೆ ಮೇಲಭಿಲಾಷೆ ಧೈರ್ಯವ
ಚಾಳವಿಸೆ ಪರಿತೋಷಪೂರಣ
ದೇಳುಮುಳುಗಾಯ್ತುತ್ತರಕೆ ನಸು ಬಾಗಿದಳು ಶಿರವ ॥102॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಾತುಗಳನ್ನು ಕೇಳುತ್ತಲೇ ಊರ್ವಶಿಗೆ ರೋಮಾಂಚನ ಉಂಟಾಗಿ ನಾಚಿಕೆಯ ಜೊಂಪು ಆವರಿಸಿತು. ಆ ಪುಳಕದಿಂದ ಭಯವುಂಟಾಗಿ, ಪ್ರೀತಿ ಅಭಿಮಾನಗಳ ಮೇರೆ ಉಕ್ಕಿ ಧೈರ್ಯವನ್ನು ತಂದವು. ಈ ಸುಖ ಸಂತೋಷದ ಏಳುಬೀಳುಗಳನ್ನು ಅನುಭವಿಸುತ್ತಲೇ ಉತ್ತರಿಸಲು ಪ್ರಯತ್ನಿಸುತ್ತ ಅವನತಮುಖಿಯಾದಳು.
ಮೂಲ ...{Loading}...
ಕೇಳುತವೆ ರೋಮಾಂಚ ಲಜ್ಜೆಯ
ಜೋಳಿಯೆದ್ದುದು ಝೋಂಪಿಸಿತು ಪುಳ
ಕಾಳಿ ಭಯವನು ಪಂಟಿಸಿದುದನುರಾಗದಭಿಮಾನ
ಮೇಲೆ ಮೇಲಭಿಲಾಷೆ ಧೈರ್ಯವ
ಚಾಳವಿಸೆ ಪರಿತೋಷಪೂರಣ
ದೇಳುಮುಳುಗಾಯ್ತುತ್ತರಕೆ ನಸು ಬಾಗಿದಳು ಶಿರವ ॥102॥
೧೦೩ ಆತನುತ್ತಮ ನಾಯಕನು ...{Loading}...
ಆತನುತ್ತಮ ನಾಯಕನು ವಿ
ಖ್ಯಾತೆ ನೀ ಸುರಲೋಕದಲಿ ಲ
ಜ್ಜಾತಿಶಯವೇಕಿಲ್ಲಿ ನಾವೇ ನಿಮ್ಮ ಪರಿವಾರ
ಸೋತಡೆಯು ದಿಟ ಭಂಗವಲ್ಲ ಪು
ರಾತನದ ನಳ ನಹುಷ ಭರತ ಯ
ಯಾತಿ ನೃಪರೊಳಗೀತನಗ್ಗಳನಬಲೆ ಕೇಳ್ ಎಂದ ॥103॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಚಿತ್ರಸೇನನು ‘ಅವನಾದರೋ ಉತ್ತಮ ವೀರನು. ನೀನಾದರೋ ಸುರಲೋಕದಲ್ಲೇ ಪ್ರಸಿದ್ಧಿ ಪಡೆದವಳು. ಇಲ್ಲಿ ನಾವೆಲ್ಲರೂ ನಿನ್ನ ಪರಿವಾರವೇ ಆಗಿರುವಾಗ ನಾಚಿಕೆ ಏಕೆ ? ಅವನು ಹಿಂದಿನ ನಳ ನಹುಷ ಭರತ ಯಯಾತಿಯೇ ಮೊದಲಾದ ಮಹಾರಾಜರುಗಳ ಪರಂಪರೆಯಲ್ಲಿ ಶ್ರೇಷ್ಠನು. ಹಾಗಾಗಿ ಸೋತರೂ ಅದು ಅವಮಾನವಲ್ಲ’ ಎಂದು ಹೇಳಿದನು.
ಮೂಲ ...{Loading}...
ಆತನುತ್ತಮ ನಾಯಕನು ವಿ
ಖ್ಯಾತೆ ನೀ ಸುರಲೋಕದಲಿ ಲ
ಜ್ಜಾತಿಶಯವೇಕಿಲ್ಲಿ ನಾವೇ ನಿಮ್ಮ ಪರಿವಾರ
ಸೋತಡೆಯು ದಿಟ ಭಂಗವಲ್ಲ ಪು
ರಾತನದ ನಳ ನಹುಷ ಭರತ ಯ
ಯಾತಿ ನೃಪರೊಳಗೀತನಗ್ಗಳನಬಲೆ ಕೇಳೆಂದ ॥103॥
೧೦೪ ರಾಯನಟ್ಟಿದ ನೇಮ ...{Loading}...
ರಾಯನಟ್ಟಿದ ನೇಮ ಗಡ ಕಮ
ನೀಯವಲ್ಲಾ ನಿನ್ನ ನುಡಿ ರಮ
ಣೀಯತರವಿದು ನಿನ್ನ ರಚನೆ ಮಹಾನುಭಾವವಲೆ
ಆಯಿತಿದು ನೀ ಹೋಗೆನುತಲಬು
ಜಾಯತಾಕ್ಷಿ ಮಹೋತ್ಸವದಿ ನಾ
ರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ ॥104॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಒಡೆಯನ ಆಜ್ಞೆ. ನಿನ್ನ ವಾಕ್ಯ ರಚನೆ ತುಂಬಾ ಸೊಗಸಾಗಿದೆ; ಮಹಾನುಭಾವನೇ, ಆಯಿತು, ನೀನು ಹೋಗು’ ಎನ್ನುತ್ತಾ ಊರ್ವಶಿಯು ಸಂತೋಷಭಾವದಿಂದ ತನ್ನ ಮನಃಪಟಲದಲ್ಲಿ ಕೃಷ್ಣನ ಮೈದುನನಾದ ಅರ್ಜುನನ ಚಿತ್ರವನ್ನು ಬರೆದಳು.
ಮೂಲ ...{Loading}...
ರಾಯನಟ್ಟಿದ ನೇಮ ಗಡ ಕಮ
ನೀಯವಲ್ಲಾ ನಿನ್ನ ನುಡಿ ರಮ
ಣೀಯತರವಿದು ನಿನ್ನ ರಚನೆ ಮಹಾನುಭಾವವಲೆ
ಆಯಿತಿದು ನೀ ಹೋಗೆನುತಲಬು
ಜಾಯತಾಕ್ಷಿ ಮಹೋತ್ಸವದಿ ನಾ
ರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ ॥104॥