೦೫

೦೦೦ ಸೂ ಮುನಿನಿಕರ ...{Loading}...

ಸೂ. ಮುನಿನಿಕರ ಬಿನ್ನವಿಸೆ ಕರುಣಾ
ವನಧಿ ಶಂಭು ಕಿರಾತಮಯ ರೂ
ಪಿನಲಿ ಹೊಕ್ಕನು ವನದಲೆಚ್ಚನು ಮೂಕದಾನವನ

೦೦೧ ಮರಳಿದನು ದೇವೇನ್ದ್ರನತ್ತಲು ...{Loading}...

ಮರಳಿದನು ದೇವೇಂದ್ರನತ್ತಲು
ಹರನೊಡನೆ ಹೊರೆಯೇರಿದಂತಃ
ಕರಣ ಹಿಗ್ಗಿತು ಹುದುಗಿದನು ಬಹಿರಂಗ ಭಾವನೆಯ
ಧರಣಿ ಮೊದಲೆನೆ ಭೂತ ಪಂಚಕ
ಮರುತ ಪಂಚಕ ವಿಷಯವಿಂದ್ರಿಯ
ಕರಣವಿಪ್ಪತ್ತೈದು ತತ್ವಾತ್ಮಕನ ಚಿಂತಿಸಿದ ॥1॥

೦೦೨ ಮೇಲೆ ವಿದ್ಯಾರಾಗ ...{Loading}...

ಮೇಲೆ ವಿದ್ಯಾರಾಗ ನೀತಿಯ
ಕಾಲಕಲಯಾತ್ಮಕನ ಮಾಯೆಯ
ಮೇಲುಪೋಗಿನ ಶುದ್ಧವಿದ್ಯಾರೂಪನೀಶ್ವರನ
ಕೇಳು ನೃಪತಿ ಸದಾಶಿವನನು
ತ್ತಾಳ ಶಕ್ತಿಯನಖಿಲ ತತ್ವದ
ಮೌಳಿಮಣಿಯನಖಂಡ ಚಿನುಮಯ ಶಿವನ ಚಿಂತಿಸಿದ ॥2॥

೦೦೩ ಮೂರು ದಿನಕೊಮ್ಮೊಮ್ಮೆ ...{Loading}...

ಮೂರು ದಿನಕೊಮ್ಮೊಮ್ಮೆ ಫಲದಾ
ಹಾರದಲಿ ನೂಕಿದನು ತಿಂಗಳ
ನಾರು ದಿವಸಕೆ ಫಲವಗೊಂಡನು ತಿಂಗಳೆರಡರಲಿ
ಮೂರು ತಿಂಗಳ ಕಳೆದನಿಂತೀ
ರಾರು ದಿವಸಕೆ ಕಂದ ಮೂಲಾ
ಹಾರದಲಿ ತರಗೆಲೆಯಲಿರ್ದನು ನಾಲ್ಕು ಮಾಸದಲಿ ॥3॥

೦೦೪ ಬಳಿಕ ಪವನಾಹಾರದಲಿ ...{Loading}...

ಬಳಿಕ ಪವನಾಹಾರದಲಿ ನಿ
ಸ್ಖಲಿತ ಶಿವಪದ ಭಕ್ತಿ ಸುಧೆಯಲಿ
ತಳಿತ ರೋಮಾಂಚನದ ಕಂದದ ಕುಂದದವಯವದ
ಥಳಥಳಿಸುವಾನನದೆ ಸತ್ಯೋ
ಜ್ಜ್ವಲಿತ ಚಿತ್ತದ ಸುಪ್ರಭಾವದ
ಬಳವಿಗೆಯಲುತ್ಕೋಚವಾಯಿತು ತಪ ಧನಂಜಯನ ॥4॥

೦೦೫ ಯಮದಲುತ್ಸಾಹಿಸಿದ ನಿಯಮ ...{Loading}...

ಯಮದಲುತ್ಸಾಹಿಸಿದ ನಿಯಮ
ಶ್ರಮವ ಗೆಲಿದನು ಶಂಭುವಿನ ಪದ
ಕಮಲ ಬಯಸಿಕೆಯಾದುದೆತ್ತಿದ ಜೀವ ಪರಮನಲಿ
ಭ್ರಮಿಸುವಿಂದ್ರಿಯ ಗಣವನುಗಿದಾ
ಕ್ರಮಿಸಿ ಶಂಕರಭಾವದಲಿ ಸಂ
ಕ್ರಮಿಸಿ ಧರಿಸಿ ಸಮಾಧಿಯನು ತಳೆದಾತ್ಮಪರನಾದ ॥5॥

೦೦೬ ವಿಮಳಮತಿ ಕೇಳಿನ್ದ್ರಿಯಾರ್ಥ ...{Loading}...

ವಿಮಳಮತಿ ಕೇಳಿಂದ್ರಿಯಾರ್ಥ
ಭ್ರಮೆಯ ಜಾಗ್ರದವಸ್ಥೆಯಂತಃ
ಸ್ತಿಮಿರ ಕರಣ ಭ್ರಮೆಯಲುದಿತ ಸ್ವಪ್ನವೀಧಿಯಲಿ
ಗಮಿತ ತದ್ವಾಸನೆಯ ಬೀಜ
ಕ್ರಮ ಸುಷುಪ್ತ್ಯಾವಸ್ಥೆಯಲಿ ಸಂ
ಕ್ರಮಿಸದಗ್ಗದ ತುರ್ಯ ಶಿವನನು ಪಾರ್ಥ ಚಿಂತಿಸಿದ ॥6॥

೦೦೭ ತಾನೆ ಶಿವನೋ ...{Loading}...

ತಾನೆ ಶಿವನೋ ಮೇಣು ಶಿವನ
ಧ್ಯಾನ ತನಗದ್ವೈತದನುಸಂ
ಧಾನವಿದು ಜವನಿಕೆಯೊಜೀವಾತುಮನ ಜಂಜಡಕೆ
ಧ್ಯಾನವೋ ಮೇಣ್ ಧ್ಯೇಯವೋ ತ
ದ್ಧ್ಯಾನ ಕರ್ತುವೊ ತ್ರಿಪುಟಿರಹಿತನೊ
ತಾನು ಮೇಣೆನಲಾಯ್ತು ಚಿತ್ತದ ಶುದ್ಧಿಯರ್ಜುನನ ॥7॥

೦೦೮ ಮುನಿಯಿದೇನೈ ಚಿತ್ರವಾಯ್ತ ...{Loading}...

ಮುನಿಯಿದೇನೈ ಚಿತ್ರವಾಯ್ತ
ರ್ಜುನನ ಚಿತ್ತದೊಳೇನು ತಾಮಸ
ಜನಿತ ಕರ್ಮವೊ ಶುದ್ಧ ತತ್ವಜ್ಞಾನ ಜಲಧಿಯಲಿ
ಮನ ಮುಳುಗಿ ಮಗುಳೆದ್ದು ಶಿತಿ ಕಂ
ಠನಲಿ ಶಸ್ತ್ರಾಸ್ತ್ರವನು ಬೇಡಿದ
ನೆನಲು ಜನಮೇಜಯಗೆ ಮುನಿಯಿಂತೆಂದ ನಸುನಗುತ ॥8॥

೦೦೯ ಅರಸ ಕೇಳೈ ...{Loading}...

ಅರಸ ಕೇಳೈ ರಾಜಸಾಂತಃ
ಕರಣವದು ಕಾಮ್ಯೈಕ ಸಿದ್ಧಿ
ಸ್ಫುರಣೆಗೋಸುಗ ತಪವಲೇ ರಾಜ್ಯಾಭಿಲಾಷೆಯಲಿ
ಹರಚರಣನಿಕ್ಷಿಪ್ತ ಚೇತಃ
ಸ್ಫುರಣೆ ತತ್ಪರಿಯಂತ ಉಕ್ಕಿತು
ಪರಮವಸ್ತು ನಿಜಸ್ವಭಾವಕೆ ಚಿತ್ರವೇನೆಂದ ॥9॥

೦೧೦ ಮೇಲೆ ಮೇಲೀತನ ...{Loading}...

ಮೇಲೆ ಮೇಲೀತನ ತಪೋಗ್ನಿ
ಜ್ವಾಲೆ ಜಡಿದುದು ತಡೆದುದಭ್ರ
ಸ್ಥಾಳಿಯಲಿ ಸೈವರಿವ ಸೂರ್ಯಾಚಂದ್ರಮ ಪ್ರಭೆಯ
ಢಾಳಿಸುವ ಪರಿಧೌತ ಮೌನ ಕ
ರಾಳ ತೇಜೋಗರ್ಭ ತಪಧೂ
ಮಾಳಿಯಲಿ ಮೇಘಾಳಿ ಮಸಗಿದುದರಸ ಕೇಳ್ ಎಂದ ॥10॥

೦೧೧ ಆತನುಗ್ರತಪಃ ಪ್ರಭಾ ...{Loading}...

ಆತನುಗ್ರತಪಃ ಪ್ರಭಾ ವಿ
ಖ್ಯಾತಿ ವಿಗಡಿಸಿತಖಿಳ ಲೋಕ
ವ್ರಾತವನು ಸೋತವನು ಕೌರವನೋ ಯುಧಿಷ್ಠಿರನೊ
ಈತನೀಶ್ವರಶಸ್ತ್ರವನು ಕೈ
ಯಾತುಕೊಂಡರೆ ಬಳಿಕ ರಿಪು ನೃಪ
ಜಾತವಿದಿರೇ ಕೇಳು ಜನಮೇಜಯ ಮಹೀಪಾಲ ॥11॥

೦೧೨ ಏನನೆಮ್ಬೆನು ಪಾರ್ಥನುಗ್ರ ...{Loading}...

ಏನನೆಂಬೆನು ಪಾರ್ಥನುಗ್ರ ತ
ಪೋ ನಿದಾಘ ಜ್ವಾಲೆಯನು ಸಂ
ಧಾನವನು ತತ್ಪರಿಸರದ ಪಾವನ ತಪೋಧನರ
ಮೌನವುರೆ ಸೀದುದು ಜಪಾನು
ಷ್ಠಾನ ಬಿಡೆ ಬೆವರಿತು ಸಮಾಧಿ
ಧ್ಯಾನ ಸೀಕರಿಯಾಯ್ತು ಸಾರವಿಚಾರ ಶಮಸಹಿತ ॥12॥

೦೧೩ ಶ್ರುತಿಯ ಲುಳಿ ...{Loading}...

ಶ್ರುತಿಯ ಲುಳಿ ತಗ್ಗಿತು ವಿವೇಕ
ಸ್ಥಿತಿಗೆ ಪಲ್ಲಟವಾಯ್ತು ಮತ್ಸರ
ಮತಿಯ ಮೈಲಿಗೆ ಬಿದ್ದುದಾತ್ಮಜ್ಞಾನದೃಷ್ಟಿಯಲಿ
ಧೃತಿಯ ಹೊರಬಾಹೆಯಲಾಸೂಯಾ
ಸತಿಯ ತೋಹಿನ ಮನೆಯಲಿದ್ದರು
ಯತಿಗಳೀತನ ತಪದ ತೇಜದ ಹೊದರ ಹೊಯ್ಲಿನಲಿ ॥ 13 ॥*
ಕೋಪಪಂಟಿಸಿತಾಧಿ ಭೌತಿಕ
ತಾಪ ತಳಿತುದು ಹೃದಯದೀಶ್ವರ
ರೂಪವನು ಮುಚ್ಚಿದುದು ಮಾಯಾಮೋಹಮುದ್ರೆಯಲಿ|
ಶಾಪಭೀತರಹಂ ಮಮತ್ವ ಕೃ
ತಾಪರಾಧರು ವಿಕೃತಗುಣ ಯ
ಜ್ಞೋಪವೀತರು ಮಸಗಿದರು ಮುನಿಗಳು ತಪೋವನದ ॥13-1॥
ಕೋಪ ಪಂಟಿಸಿತಾದಿ ಭೌತಿಕ
ತಾಪ ತಳಿತುದು ಹೃದಯದೀಶ್ವರ
ರೂಪವನು ಮುಚ್ಚಿದುದು ಮಾಯಾ ಮೋಹಮುದ್ರೆಯಲಿ
ಶಾಪಭೀತರಹಂ ಮಮತ್ವ ಕೃ
ತಾಪರಾಧರು ವಿಕೃತಗುಣ ಯ
ಜ್ಞೋಪವೀತರು ಮಸಗಿದರು ಮುನಿಗಳು ತಪೋವನದ ॥13 ಅ ॥

೦೧೪ ಹಳಿವ ಹಾವಸೆ ...{Loading}...

ಹಳಿವ ಹಾವಸೆ ಮನದೊಳಿದ್ದರು
ಕೆಲರು ಕೆಲರೆಡೆಯಾಡುತಿರ್ದರು
ತಿಳಿವು ಮರವೆಗಳಲ್ಲಿ ಕೆಲರುಪಶಾಂತಿ ಭಾವದಲಿ
ಕೆಲರಿದೇನಿವಗಿಲ್ಲಿ ತೊಲಗಿಸಿ
ಕಳೆವುದೀತನನೆಂದು ತಮ್ಮೊಳು
ಕಳವಳಿಸುತೊಮ್ಮೊತ್ತವಾದುದು ಸಕಲ ಮುನಿನಿಕರ ॥14॥

೦೧೫ ಕೆದರಿದವು ಜಡೆಯಕ್ಷಮಾಲೆಗ ...{Loading}...

ಕೆದರಿದವು ಜಡೆಯಕ್ಷಮಾಲೆಗ
ಳುದುರಿದವು ಕರದಲಿ ಕಮಂಡಲ
ವದುರಿದವು ಹಳುವಾಯ್ತು ಹರಿಣಾಜಿನ ಮುನೀಶ್ವರರ
ಕದಡಿತಂಗವಿಭೂತಿ ಕಡುಗೋ
ಪದಲಿ ಹರಿದರು ಹರಗಿರಿಯ ಹ
ತ್ತಿದರು ಕಂಡರು ರಾಜಮೌಳಿಯ ರಾಜಮಂದಿರವ ॥15॥

೦೧೬ ಶಿವನ ಭವನವ ...{Loading}...

ಶಿವನ ಭವನವ ದೂರದಲಿ ಕಂ
ಡಿವರು ಮೈಯಿಕ್ಕಿದರು ವರಮುನಿ
ನಿವಹ ಬಂದುದು ಬಾಗಿಲವದಿರು ಬಿನ್ನಹದ ಹದನ
ವಿವರಿಸಲು ಕರೆಸಿದನು ಕರುಣಾ
ರ್ಣವನ ಕಂಡರು ಮೈಯ ಚಾಚಿದ
ರವನಿಯಲಿ ಜಯ ಜಯ ಮಹೇಶ ನಮಃಶಿವಾಯೆನುತ ॥16॥

೦೧೭ ಏಳಿರೈ ಸಾಕೇಳಿರೈ ...{Loading}...

ಏಳಿರೈ ಸಾಕೇಳಿರೈ ಸಾ
ಕೇಳಿ ಕುಳ್ಳಿರಿ ಬಂದ ಕಾರ್ಯವ
ಹೇಳಿಯೆನೆ ಮುನಿನಿಕರವೆದ್ದುದು ನೊಸಲ ಕೈಗಳಲಿ
ಹೇಳಿ ನೀವ್ ಹೇಳಿನ್ನು ಹಿರಿಯರು
ಹೇಳಿಯೆನುತೊಳಗೊಳಗೆ ಘೋಳಾ
ಘೋಳಿ ಮಸಗಿದುದೊಬ್ಬ ಮುನಿ ನಿಲಿಸಿದನು ಕಳಕಳವ ॥17॥

೦೧೮ ನೀಲಲೋಹಿತ ಚಿತ್ತವಿಸು ...{Loading}...

ನೀಲಲೋಹಿತ ಚಿತ್ತವಿಸು ಶಶಿ
ಮೌಳಿ ಬಿನ್ನಹ ನಿಗಮ ಮಹಿಳಾ
ಮೌಳಿಮಣಿ ನೀರಾಜಿತಾಂಘ್ರಿ ಸರೋಜನವಧಾನ
ಪಾಲಿಸುವುದಾರ್ತರನು ಪರಮ ಕೃ
ಪಾಳುನೀನತಿ ದೀನರಾವು ವಿ
ಟಾಳ ಸಂಗತಿಯಾದುದೆಮ್ಮಯ ಜಪತಪಸ್ಥಿತಿಗೆ ॥18॥

೦೧೯ ಶಾನ್ತಿಯೇ ಮನೆ ...{Loading}...

ಶಾಂತಿಯೇ ಮನೆ ನಿಮ್ಮ ಚರಣದ
ಚಿಂತೆಯೇ ಮನೆವಾರ್ತೆ ವರ ವೇ
ದಾಂತ ತತ್ವರಹಸ್ಯ ಮನನಾದಿಗಳು ಸರ್ವಸ್ವ
ದಾಂತಿಯೇ ಸುಖಭೋಗ ಮಾಯಾ
ಶ್ರಾಂತಿಯೇ ಮಾಹಾತ್ಮ್ಯೆಯಿವು ಋಷಿ
ಸಂತತಿಗೆ ವರ್ತನವಲೇ ವೈದಿಕ ವಿಧಾನದಲಿ ॥19॥

೦೨೦ ಹೋದ ಹೊಲಬಿಲ್ಲದರೊಳಗೆ ...{Loading}...

ಹೋದ ಹೊಲಬಿಲ್ಲದರೊಳಗೆ ದು
ರ್ಭೇದ ತಪವೇ ಹೊಗೆವುತದೆ ಹೊ
ಳ್ಳಾದವೆಮ್ಮ ಸಮಾಧಿ ಸೈರಣೆ ಶಮದಮಾದಿಗಳು
ಕಾದುದಾ ವನಭೂಮಿ ತರು ಗು
ಲ್ಮಾದಿಗಳು ಕಟ್ಟೊಣಗಲಾದವು
ತೀದುದೆಮ್ಮಯ ನಿತ್ಯವಿಧಿಯೊಬ್ಬನ ದೆಸೆಯಲಿಂದು ॥20॥

೦೨೧ ರಾಯನೋ ಮೇಣವನು ...{Loading}...

ರಾಯನೋ ಮೇಣವನು ರಾವುತ
ಪಾಯಕನೊ ಋಷಿಯಲ್ಲ ಋಷಿಗೇ
ಕಾಯುಧಂಗಳ ಗೊಡವೆ ನಮಗೇಕದರ ಬೂತಾಟ
ಸಾಯಕದ ಬತ್ತಳಿಗೆ ಚಾಪವ
ಡಾಯುಧದ ಕುಶೆವೆರಳ ಜಡೆಗಳ
ನಾಯತದಲನುಚಿತದ ಸಂಗದ ತಪಸಿಯಹನೆಂದ ॥21॥

೦೨೨ ಆಡಿದೊಡೆ ನಾವ್ ...{Loading}...

ಆಡಿದೊಡೆ ನಾವ್ ಮುನಿಗಸೂಯವ
ಮಾಡಿದವರುಗಳಿಂದು ನಿಮ್ಮಡಿ
ಗಾಡದಿದ್ದರೆ ಬಿಸಿಲ ರಾಶಿಯನುರಿದು ಸೂತಕವ
ಕೂಡಿತೆಮ್ಮಯ ನಿತ್ಯವಿಧಿ ತಪ
ಗೇಡಿಯನು ಬಿಡದೆಬ್ಬಿಸೆಮಗೆಡೆ
ಮಾಡಿಕೊಡಬೇಕೆಂದು ಮತ್ತೆರಗಿದರು ಶಿವಪದಕೆ ॥22॥

೦೨೩ ಮತ್ತೆ ನಮ್ಮನು ...{Loading}...

ಮತ್ತೆ ನಮ್ಮನು ಪಿಸುಣರೆಂದೇ
ಚಿತ್ತವಿಸಲಾಗದು ತಪೋವನ
ಹೊತ್ತುತಿದೆ ವಿಪರೀತ ತಪಸಿಯ ತೀವ್ರತೇಜದಲಿ
ಇತ್ತಲೊಂದು ತಪೋವನವನೆಮ
ಗಿತ್ತು ಕರುಣಿಸು ಮೇಣ್ ವಿಕಾರಿಯ
ನೆತ್ತಿ ಕಳೆ ಕಾರುಣ್ಯನಿಧಿಯೆಂದುದು ಮುನಿಸ್ತೋಮ ॥23॥

೦೨೪ ಕೇಳುತವನಾರೋಯೆನುತ ಶಶಿ ...{Loading}...

ಕೇಳುತವನಾರೋಯೆನುತ ಶಶಿ
ಮೌಳಿ ವಿಮಲಜ್ಞಾನ ದೃಷ್ಟಿಯೊ
ಳಾಳನರಿದನು ಮನದೊಳಗೆ ನಮ್ಮವನಲಾಯೆನುತ
ಬಾಲಹಿಮಕರಕಿರಣನೊಡನೆ ಸ
ಮೇಳವಹ ನಗೆ ಮಿನುಗೆ ಮುನಿಜನ
ಜಾಲವನು ನೋಡಿದನು ಕರೆದನು ಕೃಪೆಯ ತನಿಮಳೆಯ ॥24॥

೦೨೫ ಅರಿದೆ ನಾನಞ್ಜದಿರಿ ...{Loading}...

ಅರಿದೆ ನಾನಂಜದಿರಿ ಹುಯ್ಯಲ
ಬರಿದೆ ತಂದಿರಿ ನಿಮ್ಮ ಗೆಲವಿಂ
ಗೆರಗುವವನವನಲ್ಲ ಬೇರಿಹುದಾತನಂಗವಣೆ
ಅರುಹಲೇಕೆ ಭವತ್ತಪೋವನ
ನೆರೆ ನಿಮಗೆ ನಾನವನನೆಬ್ಬಿಸಿ
ತೆರಹ ಮಾಡಿಸಿಕೊಡುವೆನೆಂದನು ನಗುತ ಶಶಿಮೌಳಿ ॥25॥

೦೨೬ ಏಳಿ ನೀವಾಶ್ರಮಕೆ ...{Loading}...

ಏಳಿ ನೀವಾಶ್ರಮಕೆ ಪೋಗಿ ಚ
ಡಾಳಿಸದು ಮುನಿವರನ ತಪವಿ
ನ್ನೇಳಿದಿಟ ಭಯವಿಲ್ಲವೆಂದು ಕರಾಂಬುಜವ ನೆಗಹಿ
ಬೀಳುಗೊಟ್ಟನು ಸಕಲ ಮುನಿಜನ
ಜಾಲವನು ಕರೆ ಭೂತ ನಿಕರವ
ಮೇಳವಿಸಹೇಳೆಂದು ನಂದೀಶ್ವರಗೆ ನೇಮಿಸಿದ ॥26॥

೦೨೭ ಅರಸ ಕೇಳೈ ...{Loading}...

ಅರಸ ಕೇಳೈ ಬೇಂಟೆಯೆಂದೀ
ಶ್ವರನ ಕಟಕದೊಳೊದರಿದುದು ಡಂ
ಗುರದ ದನಿ ಡಾವರದೊಳೈದಿತು ನಿಖಿಳ ಭುವನವನು
ಪರಮ ಕರುಣಾಸಿಂಧು ಭಕ್ತನ
ಹೊರೆವ ಭರದಲಿ ಭೂರಿ ಮೃಗಯಾ
ಚರಣೆಗೋಸುಗ ಶಬರ ವರರೂಪದಲಿ ರಂಜಿಸಿದ ॥27॥

೦೨೮ ತೆಗೆದು ತಲೆಮಾಲೆಯನು ...{Loading}...

ತೆಗೆದು ತಲೆಮಾಲೆಯನು ಹಸುರಂ
ಗಿಗಳ ತೊಟ್ಟನು ಸುತ್ತುಬರೆ ಹೀ
ಲಿಗಳ ಹರಹಿನ ಪಾರಿವದ ಚಲ್ಲಣವನಳವಡಿಸಿ
ಬಿಗಿಜಡೆಯ ಶಶಿಮುಖಕೆ ಪತ್ರಾ
ಳಿಗಳ ಕಟ್ಟಿ ಕಿರಾತವೇಷದ
ವಿಗಡದೇವರ ದೇವ ಕೊಂಡನು ಚಾಪ ಮಾರ್ಗಣವ ॥28॥

೦೨೯ ದೇವನನುರೂಪದಲಿ ನಿನ್ದರು ...{Loading}...

ದೇವನನುರೂಪದಲಿ ನಿಂದರು
ದೇವಿಯರು ಗುಹ ಗಣಪತಿಗಳೆ
ಲ್ಲಾ ವಿನೋದವ ನೋಡಿ ಧರಿಸಿದರೊಲಿದು ಶಾಬರವ
ಆ ವಿಗಡ ನಂದೀಶ ವೀರಕ
ದೇವಲಕ ರೇಣುಕ ಮಹೋದರ
ದಾವಶಿಖಿಮುಖ ವೀರಭದ್ರಾದ್ಯಖಿಲ ಭೂತಗಣ ॥29॥

೦೩೦ ಅರಸ ಕೇಳೈ ...{Loading}...

ಅರಸ ಕೇಳೈ ಸಪ್ತಮಾತೃಕೆ
ಯರು ಮಹೋಪನಿಷನ್ನಿತಂಬಿನಿ
ಯರು ದಿಶಾದೇವಿಯರು ಶ್ರುತಿವಿದ್ಯಾದಿಶಕ್ತಿಯರು
ಉರಗಿಯರು ವಿದ್ಯಾಧರಿಯರ
ಪ್ಸರಿಯರೌಷಧ ಮಂತ್ರ ದೇವತೆ
ಯರು ಪುಳಿಂದಿಯರಾಯ್ತು ಪರಮೇಶ್ವರಿಯ ಬಳಸಿನಲಿ ॥30॥

೦೩೧ ಧೃತಿ ಮಹೋನ್ನತಿ ...{Loading}...

ಧೃತಿ ಮಹೋನ್ನತಿ ತುಷ್ಟಿಪುಷ್ಟಿ
ಸ್ಮೃತಿ ಸರಸ್ವತಿ ಸಂವಿಧಾಯಕಿ
ಮತಿ ಮನಸ್ವಿನಿ ಸಿದ್ಧಿ ಕೀರ್ತಿಖ್ಯಾತಿ ನಿಯತಮತಿ
ಗತಿ ಕಳಾಮಾನಿನಿ ಕಳಾವತಿ
ರತಿ ರಸಾವತಿ ಚಂಡಿ ಜಯೆ ಮಧು
ಮತಿಯೆನಿಪ ದೇವಿಯರು ಶಬರಿಯರಾಯ್ತು ನಿಮಿಷದಲಿ ॥31॥

೦೩೨ ಮಾರಿ ಚಾಮುಣ್ಡಿ ...{Loading}...

ಮಾರಿ ಚಾಮುಂಡಿ ಸ್ಮಶಾನಾ
ಕಾರವತಿ ವರ ಕಾಳರಾತ್ರಿ ಮ
ಹೀರಮಣಿ ಜಯಲಕ್ಷ್ಮಿ ಯೋಗಿನಿ ಯಜ್ಞ ದೇವಿಯರು
ವೀರಸಿರಿ ವನಲಕ್ಷ್ಮಿ ಶಾಕಿನಿ
ನಾರಿ ದೇವತೆ ಡಾಕಿನೀಮುಖಿ
ಭೂರಿ ಶಕ್ತಿಯರೈದೆ ಶಬರಿಯರಾಯ್ತು ನಿಮಿಷದಲಿ ॥32॥

೦೩೩ ಚಾಳಿಸಿದ ಹದವಿಲ್ಲುಗಳ ...{Loading}...

ಚಾಳಿಸಿದ ಹದವಿಲ್ಲುಗಳ ಬಡಿ
ಕೋಲುಗಳ ಸಂಕಲೆಯ ನಾಯ್ಗಳ
ಕೋಲುವಲೆಗಳ ಸಿಡಿವಲೆಯ ಮಿಡಿವಲೆಯ ಸೂವಲೆಯ
ಕಾಲುಗಣ್ಣಿಯ ಹೆಬ್ಬಲೆಯ ಬೆ
ಳ್ಳಾಲವಲೆಗಳ ಮಯಣದಂಟಿನ
ಮೇಲುಕೊಂಬಿನ ಬೇಟೆಗಾರರು ಬಳಸಿದರು ಶಿವನ ॥33॥

೦೩೪ ಶ್ರುತಿಗಳೂಳಿಗ ...{Loading}...

ಶ್ರುತಿಗಳೂಳಿಗ ತರ್ಕಶಾಸ್ತ್ರದ
ಗತಿಯ ಸೋಹಿನ ಮಂತ್ರಮಯ ಸಂ
ತತಿಯ ಸೊಂಪಿನ ವಿವಿಧ ಜಪ ಯಜ್ಞಾದಿಗಳ ಬಲೆಯ
ವ್ರತದ ಜಂತ್ರದ ಕಣ್ಣಿಗಳ ಸ
ತ್ಕೃತಿಯ ಕೋಲ್ಗುಂಡುಗಳ ಯೋಗ
ಸ್ಥಿತಿಯ ಸರಳಿನ ಶಬರರೈದಿತು ಶಿವನ ಬಳಸಿನಲಿ ॥34॥

೦೩೫ ಶ್ರವಣ ಮನನದ ...{Loading}...

ಶ್ರವಣ ಮನನದ ಬೀಸುವಲೆ ಶಾಂ
ಭವ ಸುವೇದಾ ದೀಕ್ಷೆಗಳ ಬಲು
ಗವಣೆಗಳ ಪಶುಪಾಶ ಬಂಧದ ಬೋಳೆಯಂಬುಗಳ
ನವ ವಿಧಾಮಲ ಭಕ್ತಿಗಳ ರಣ
ತವಕ ದೀಹದ ಹುಲ್ಲೆಗಳ ಮೃಗ
ಭವ ವಿದಾರಣ ಸುಭಟರೈದಿತು ಶಿವನ ನೇಮದಲಿ ॥35॥

೦೩೬ ಸೋಹಿದೊಡೆ ದೆಸೆದೆಸೆಗೆ ...{Loading}...

ಸೋಹಿದೊಡೆ ದೆಸೆದೆಸೆಗೆ ಹಾಯ್ದುದು
ಮೋಹತಮ ಡಂಭಾದಿ ಮೃಗತತಿ
ತೋಹಿನಲಿ ಬಿದ್ದುದು ಮಹಾಪಾತಕ ಮದೇಭಚಯ
ದ್ರೋಹ ದೀಹಾಮೃಗವಸೂಯ ವ
ರಾಹ ಸಂಕೀರ್ಣೋಪಪಾತಕ
ದೇಹವಳಿದವನಂತವದರೊಳು ಶಿವನ ಬೇಂಟೆಯಲಿ ॥36॥

೦೩೭ ಜಯ ಜಯೆನ್ದುದು ...{Loading}...

ಜಯ ಜಯೆಂದುದು ನಿಖಿಳ ಜಗ ಶ್ರುತಿ
ಚಯ ಛಡಾಳಿಸಿ ಹೊಗಳುತಿರ್ದುದು
ನಯನ ಗೋಚರವಾಯ್ತು ಸಾಕ್ಷಾತ್ಪರನು ಶಿವತತ್ವ
ಲಯದ ಜನನದ ಸುಳಿಯ ಸಂಸೃತಿ
ಮಯ ಸಮುದ್ರವ ಸುರಿದು ಸಲೆ ನಿ
ರ್ಭಯವು ಭಕುತರಿಗೆಂಬವೊಲು ಮಸಗಿತು ಮಹಾಸಬುದ ॥37॥

೦೩೮ ಹೇಳುವೊಡೆ ರೋಮಾಞ್ಚನವಲೇ ...{Loading}...

ಹೇಳುವೊಡೆ ರೋಮಾಂಚನವಲೇ
ಕೇಳು ನೃಪ ಕೈಲಾಸವಾಸಿಯ
ಲೀಲೆಯನು ನಿಜಭಕ್ತಜನ ಸಂದರ್ಶನಾರ್ಥವಲೆ
ಆಳು ನಡೆತಂದಿಂದ್ರ ಕೀಲದ
ಶೈಲವನು ಬೆರೆಸಿತು ಮಹಾದ್ಭುತ
ದೇಳಿಗೆಯನೇನೆಂಬೆನೈ ಕೈರಾತ ವಿಭ್ರಮವ ॥38॥

೦೩೯ ಇಮ್ಬಿನಲ್ಲಿಹ ಮೂಕ ...{Loading}...

ಇಂಬಿನಲ್ಲಿಹ ಮೂಕ ದಾನವ
ನೆಂಬನೊಬ್ಬನು ತನ್ಮಹಾದ್ರಿ ನಿ
ತಂಬ ವನದ ನಿಕುಂಜದಲಿ ನಿರ್ಭಯ ವಿಹಾರದಲಿ
ಚುಂಬಿಸಿತು ಬಲುರಭಸವೆನೆ ವಿಲ
ಯಾಂಬುಧಿಯ ಕಳಕಳವನಮರರ
ತಿಂಬೆನೀಕ್ಷಣವೆನುತ ಖಳನಾಲಿಸಿದನಾ ಧ್ವನಿಯ ॥39॥

೦೪೦ ಹನ್ದಿಯಾದನು ದನುಜನಾ ...{Loading}...

ಹಂದಿಯಾದನು ದನುಜನಾ ಗಿರಿ
ಕಂದರವ ಹೊರವಂಟು ಬೇಂಟೆಯ
ಮಂದಿಯೊಳಗಡಹಾಯ್ದನೆತ್ತಿದನಡ್ಡ ಬಿದ್ದವರ
ಹಂದಿಯೋ ತಡೆ ನಾಯಿಗಳ ಬಿಡಿ
ಹಿಂದೆ ಹಿಡಿ ಕೆಡೆ ಕುತ್ತು ಕೈಗೊ
ಳ್ಳೆಂದು ಗಜಬಜಿಸಿತ್ತು ಗಾವಳಿ ಗಹನ ಮಧ್ಯದಲಿ ॥40॥

೦೪೧ ಎಳೆವೆರೆಯನೌಡಿದ್ದ್ದ ರಾಹುವೊ ...{Loading}...

ಎಳೆವೆರೆಯನೌಡಿದ್ದ್ದ ರಾಹುವೊ
ಚಲನೆವಡೆರ್ದಿಂಜನಾದ್ರಿಯೋ
ಬೆಳೆದು ಬೀಳದ ಮೇಘವೋ ಕಾರೊಡಲ ಸೂಕರನೋ
ಮುಳಿದು ಘೂಡಿಘುಡಿಸುತ್ತ ಕಿಡಿಕಂ
ಗಳಲಿ ಕಾರ್ಬೊಗೆಯುಸಿರಿನಲಿ ಕೆ
ಕ್ಕಳಿಸಿದೆಕ್ಕ್ಕಲ ನೋಡುತಿರ್ದುದು ದೇವಸಂತತಿಯ ॥41॥

೦೪೨ ಕೂಡೆ ಕಟ್ಟಿತು ...{Loading}...

ಕೂಡೆ ಕಟ್ಟಿತು ಭೂತಗಣ ಧ್ವನಿ
ಮಾಡಿ ಜಡಿದಬ್ಬರಿಸಿ ಮೋರೆಯ
ನೀಡಿ ನಾಯ್ಗಳು ತುಡುಕಿದವು ತಿರುಗಿದೊಲೆ ಹಿಮ್ಮಡಿಯ
ಝಾಡಿಸುತ ಕವಿದೆತ್ತಲೊಂದೇ
ದಾಡೆ ಬರತುದು ನೂರು ಗಾಯವ
ನೋಡುತಿರ್ದುದು ಸೇನೆ ಕಂಡನು ಶೂಲಿ ಸೂಕರನ ॥42॥

೦೪೩ ಇಡುವ ಸೆಲ್ಲೆಹ ...{Loading}...

ಇಡುವ ಸೆಲ್ಲೆಹ ಬಲ್ಲೆಹದ ಹೆ
ಗ್ಗಿಡಿಯನುಗುಳುವ ಬಾಯ ಧಾರೆಯ
ನುಡಿದು ಹರಹಿ ಮಹೋಗ್ರತರ ಜಾಯಿಲನ ಜಂಗುಳಿಯ
ಕಡಿದು ಕೆಡಹಿ ಪುಳಿಂದ ಶಬರಿಯ
ರೆಡೆಗೆಡೆಯಲೊಡಹಾಯ್ದು ಮಿಗೆ ಘುಡಿ
ಘುಡಿಸಿ ಕವಿದೈತರಲು ಧೃತಿಗೆಟ್ಟುದು ಗಣಸ್ತೋಮ ॥43॥

೦೪೪ ಇದುವೆ ಸಮಯವಲಾಯೆನುತ ...{Loading}...

ಇದುವೆ ಸಮಯವಲಾಯೆನುತ ಹೂ
ಡಿದನು ಬಾಣವನುಗಿದು ಪೂರಾ
ಯದಲಿ ತೂಗಿ ಪಿನಾಕಿಯೆಚ್ಚನು ಮೂಕದಾನವನ
ಒದೆದು ಹಾಯ್ದುದು ಬಾಣಗರಿದೋ
ರಿದುದು ಬದಿಯಲಿ ಕೊಡಹಿ ಗೋಳಿಡು
ತದು ಧನಂಜಯನತ್ತ ಹೋದುದು ಹೊತ್ತಕಣೆ ಸಹಿತ ॥44॥

೦೪೫ ಬನ್ದು ಗಿರಿ ...{Loading}...

ಬಂದು ಗಿರಿ ಕಂದರದೊಳಿಹ ಮುನಿ
ವೃಂದದೊಳಗಡಹಾಯ್ದು ಕೆಡಹುತ
ಹಂದಿ ಮೋರೆಯ ನೆಗಹಿ ಮಲೆವುತ ಗಜರಿ ಗರ್ಜಿಸಿತು
ಮಂದಿ ಬೆದರುತ ಗೋಳಿಡುತಲಾ
ಇಂದುಧರನೇ ಬಲ್ಲ ಶಿವ ಶಿವ
ಯೆಂದು ಮೊರೆಯಿಡೆ ಕೇಳಿ ಕಂದೆರೆದೆದ್ದನಾ ಪಾರ್ಥ ॥45॥

೦೪೬ ಕಣ್ಡನರ್ಜುನನೀ ವರಾಹನ ...{Loading}...

ಕಂಡನರ್ಜುನನೀ ವರಾಹನ
ದಂಡಿ ಲೇಸಲ್ಲೆನುತ ಬಾಣವ
ಗಾಂಡಿವದೊಳಳವಡಿಸಿ ಬೊಬ್ಬಿರಿದೆಚ್ಚನಾ ಖಳನ
ದಿಂಡುಗೆಡೆದುದು ಕಾಲ ಕೊಡಹುತ
ಗಂಡಶೈಲದವೋಲು ಭೂತವ
ದಿಂಡುದರಿಯುವ ಹಂದಿ ಬಿದ್ದುದು ಪಾರ್ಥನಿದಿರಿನಲಿ ॥46॥

೦೪೭ ಬನ್ದನೀಶ್ವರ ನಾವು ...{Loading}...

ಬಂದನೀಶ್ವರ ನಾವು ಕೆಡಹಿದ
ಹಂದಿ ನಮ್ಮದು ತೆಗೆಯಿಯೆನೆ ನರ
ನೆಂದ ನಮ್ಮಂಬಿನಲಿ ಬಿದ್ದುದು ಸಾರು ನೀನೆನಲು
ಬಂದುದೇಕಾಮಿಷ ವಿರೋಧದ
ಕುಂದು ಪಾರ್ಥನ ಚಿತ್ತದಲಿ ಬಾ
ಲೇಂದುಧರನೆಂದೆತ್ತಬಲ್ಲನು ಕೆಣಕಿದನು ಶಿವನ ॥47॥

+೦೫ ...{Loading}...