೦೦೦ ಸೂಚನೆ ಕಾಲ ...{Loading}...
ಸೂಚನೆ: ಕಾಲ ಪಾಶಾಕರುಷದಲಿ ಭೂ
ಪಾಲನಿಂದ್ರಪ್ರಸ್ಥ ನಗರಿಯ
ಬೀಳುಕೊಂಡನು ಬಂದು ಹೊಕ್ಕನು ಹಸ್ತಿನಾಪುರವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಧರ್ಮರಾಯನು ರಾಜ ಕಾಲನ ಪಾಶದ ಆಕರ್ಷಣೆಯಿಂದ ಇಂದ್ರಪ್ರಸ್ಥನಗರಿಯಿಂದ ಬೀಳ್ಕೊಂಡು ಹಸ್ತಿನಾಪುರವನ್ನು ಬಂದು ಸೇರಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೂಚನೆ: ಕಾಲ ಪಾಶಾಕರುಷದಲಿ ಭೂ
ಪಾಲನಿಂದ್ರಪ್ರಸ್ಥ ನಗರಿಯ
ಬೀಳುಕೊಂಡನು ಬಂದು ಹೊಕ್ಕನು ಹಸ್ತಿನಾಪುರವ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ರಾಯನಿತ್ತಲು
ಮೇಲು ಮುಸುಕಿನ ಹೊತ್ತ ದುಗುಡದ ಹೊಗರ ಹೊಗೆ ಮೊಗದ
ತಾಳಿಗೆಯ ನಿದ್ರ್ರವದ ಮತ್ಸರ
ದೇಳಿಗೆಯಲಿಕ್ಕಡಿಯ ಮನದ ನೃ
ಪಾಲ ಹೊಕ್ಕನು ನಡುವಿರುಳು ನಿಜ ರಾಜಮಂದಿರವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಕೌರವ ರಾಜ ಮೇಲುಮುಸುಕು ಹಾಕಿ ಒಳಗೇ ದುಃಖವನ್ನು ಹೊತ್ತಿದ್ದಾನೆ. ಮುಖಕ್ಕೆ ಹೊಗೆ ಹಿಡಿದಿದೆ. ಕಳೆಯಿಲ್ಲ. ನಾಲಿಗೆ ಒಣಗಿ ಹೋಗಿದೆ. ಪಾಂಡವರ ಮೇಲಿನ ಮತ್ಸರ ಅಧಿಕಗೊಳುತ್ತಿದೆ. ಮನಸ್ಸು ಒಡೆದಿದೆ. ಈ ಅವಸ್ಥೆಯಲ್ಲಿ ಅವನು
ನಡುರಾತ್ರಿಯಲ್ಲಿ ಅರಮನೆಯನ್ನು ಪ್ರವೇಶಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ರಾಯನಿತ್ತಲು
ಮೇಲು ಮುಸುಕಿನ ಹೊತ್ತ ದುಗುಡದ ಹೊಗರ ಹೊಗೆ ಮೊಗದ
ತಾಳಿಗೆಯ ನಿದ್ರ್ರವದ ಮತ್ಸರ
ದೇಳಿಗೆಯಲಿಕ್ಕಡಿಯ ಮನದ ನೃ
ಪಾಲ ಹೊಕ್ಕನು ನಡುವಿರುಳು ನಿಜ ರಾಜಮಂದಿರವ ॥1॥
೦೦೨ ಆರತಿಯ ಗಣಿಕೆಯರ ...{Loading}...
ಆರತಿಯ ಗಣಿಕೆಯರ ಸುಳಿವು
ಪ್ಪಾರತಿಯ ದಾದಿಯರ ಪಾಯವ
ಧಾರು ಸೂಳಾಯತರ ಮಂಗಳ ವಚನದೈದೆಯರ
ದೂರದಲಿ ನಿಲಿಸಿದನು ಭಂಗದ
ಭಾರಣೆಯ ಬಿಸುಸುಯ್ಲ ಸೂರೆಯ
ಸೈರಣೆಯ ಸೀವಟದ ಸಿರಿಮಂಚದಲಿ ಪವಡಿಸಿದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಣಿಕೆಯರು ಆರತಿಯನ್ನು ಹಿಡಿದು ಬಂದರು. ದಾದಿಯರು ಉಪ್ಪಾರತಿಯನ್ನು ತಂದರು. ಸೂಳಾಯ್ತರು ಪಾಯವಧಾರು ಎಂದು ಹೇಳತೊಡಗಿದರು. ಮುತ್ತೈದೆಯರು ಮಂಗಳ ವಚನವನ್ನು ಹಾಡತೊಡಗಿದರು. ರಾಜ ಅವರೆಲ್ಲರನ್ನೂ ದೂರದಲ್ಲೇ ನಿಲ್ಲಿಸಿಬಿಟ್ಟ. ಅಪಮಾನದ ಹೊರೆಯನ್ನು ಹೊತ್ತು, ಮೇಲಿಂದ ಮೇಲೆ ಬಿಸಿಯುಸಿರನ್ನು ಬಿಡುತ್ತಾ, ಸೈರಣೆಗೆಟ್ಟು ಸಿರಿಮಂಚದ ಮೇಲೆ ಮಲಗಿ ಬಿಟ್ಟ.
ಪದಾರ್ಥ (ಕ.ಗ.ಪ)
ಉಪ್ಪಾರತಿ-ದೃಷ್ಟಿ ನಿವಾರಿಸುವುದಕ್ಕಾಗಿ, ಎತ್ತುವ ಉಪ್ಪಿನ ಆರತಿ, ಪಾಯವಧಾರು-ಹೆಜ್ಜೆ ಇಡುವಾಗ ಎಚ್ಚರಿಕೆ ಎಂಬ ಸ್ತುತಿ ಪಾಠಕರ ಮಾತು, ಐದೆ-ಮುತ್ತೈದೆ, ಸೀವಟ-ಮತ್ಸರ
ಮೂಲ ...{Loading}...
ಆರತಿಯ ಗಣಿಕೆಯರ ಸುಳಿವು
ಪ್ಪಾರತಿಯ ದಾದಿಯರ ಪಾಯವ
ಧಾರು ಸೂಳಾಯತರ ಮಂಗಳ ವಚನದೈದೆಯರ
ದೂರದಲಿ ನಿಲಿಸಿದನು ಭಂಗದ
ಭಾರಣೆಯ ಬಿಸುಸುಯ್ಲ ಸೂರೆಯ
ಸೈರಣೆಯ ಸೀವಟದ ಸಿರಿಮಂಚದಲಿ ಪವಡಿಸಿದ ॥2॥
೦೦೩ ಭಾನುಮತಿ ಬರೆ ...{Loading}...
ಭಾನುಮತಿ ಬರೆ ಮುರಿದ ಮುಸುಕಿನ
ಮೌನಿ ನೂಕಿದನಿರುಳನುದಯದ
ನೂನ ಮಂಗಳ ಪಟಹ ಶಂಖಧ್ವನಿಯ ಮಾಣಿಸಿದ
ಭಾನುವಿಂಗಘ್ರ್ಯಾದಿ ಕೃತ್ಯವ
ನೇನುವನು ಮನ್ನಿಸದೆ ಚಿತ್ತದೊ
ಳೇನ ನೆನೆದನೊ ಭೂಪನಿದ್ದನು ಖತಿಯ ಭಾರದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಾನುಮತಿ ಬಂದರೂ ಮುಸೆಕೆಳೆದುಕೊಂಡು ಮೌನವಾಗುಳಿದ. ರಾತ್ರಿಯನ್ನು ಹೇಗೋ ತಳ್ಳಿದ. ಉದಯಕಾಲದಲ್ಲಿ ಮಾಮೂಲಿನಂತೆ ನಡೆವ ಮಂಗಳ ಪಟಹ ಧ್ವನಿಯನ್ನೂ ಶಂಖ ವಾದ್ಯವನ್ನೂ ಬೇಡವೆಂದು ನಿಲ್ಲಿಸಿಬಿಟ್ಟ. ಸೂರ್ಯನಿಗೆ ಅಘ್ರ್ಯ ಕೊಡುವುದೇ ಮೊದಲಾದ ಪ್ರಾತರ್ವಿಧಿಗಳನ್ನೇನೂ ಮಾಡಲಿಲ್ಲ. ಅವನ ಮನಸ್ಸಿನಲ್ಲಿ ಏನು ಯೋಚನೆಯಿತ್ತೋ, ಅಂತೂ ರಾಜ ದುಃಖದ ಭಾರದಿಂದ ಕೂಡಿದ್ದ.
ಪದಾರ್ಥ (ಕ.ಗ.ಪ)
ಅನೂನ-ಕೊರತೆಯಿಲ್ಲದ, ಪಟಹ-ಒಂದು ಚರ್ಮ ವಾದ್ಯ
ಮೂಲ ...{Loading}...
ಭಾನುಮತಿ ಬರೆ ಮುರಿದ ಮುಸುಕಿನ
ಮೌನಿ ನೂಕಿದನಿರುಳನುದಯದ
ನೂನ ಮಂಗಳ ಪಟಹ ಶಂಖಧ್ವನಿಯ ಮಾಣಿಸಿದ
ಭಾನುವಿಂಗಘ್ರ್ಯಾದಿ ಕೃತ್ಯವ
ನೇನುವನು ಮನ್ನಿಸದೆ ಚಿತ್ತದೊ
ಳೇನ ನೆನೆದನೊ ಭೂಪನಿದ್ದನು ಖತಿಯ ಭಾರದಲಿ ॥3॥
೦೦೪ ಬೇಟೆ ನಿನ್ದುದು ...{Loading}...
ಬೇಟೆ ನಿಂದುದು ಗಜ ತುರಗದೇ
ರಾಟ ಮಾದುದು ಕೇಳಿ ಮೇಳದ
ತೋಟಿಯಲ್ಲಿಯದಲ್ಲಿ ಕವಡಿಕೆ ನೆತ್ತ ಮೊದಲಾದ
ನಾಟಕದ ಮೊಗರಂಬವೆನಿಪ ಕ
ವಾಟ ತೆರೆಯದು ಹೊಕ್ಕಸೂಯದ
ಕೋಟಲೆಯ ಕಡುಹೂಟ ಕವರಿತು ನೃಪನ ತನುಮನವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೇಟೆಯಾಡುವುದು ನಿಂತಿತು. ಆನೆ ಕುದುರೆ ಏರಿ ಹೋಗುವುದನ್ನು ನಿಲ್ಲಿಸಿದ. ಜೊತೆಗಾರರ ಕೂಟ, ತೋಟಿ, ಕವಡೆ, ಪಗಡೆ ಮೊದಲಾದ ಆಟಪಾಟಗಳು ಅಲ್ಲಿಯದು ಅಲ್ಲೇ ಉಳಿಯಿತು. ನಾಟಕದ ಮುಖವಾಡಗಳ ಬಾಗಿಲು ತೆರೆಯಲೇ ಇಲ್ಲ. ಹೃದಯಲ್ಲಿ ಹೊಕ್ಕಿದ್ದ ಮತ್ಸರದ ಕೋಟಲೆಯ ತೀವ್ರವಾದ ಹಂಚಿಕೆ ರಾಜನ ತನುಮನಗಳನ್ನು ಕವರಿಬಿಟ್ಟಿತು.
ಪದಾರ್ಥ (ಕ.ಗ.ಪ)
ಮಾದುದು-ನಿಂತಿತು, ಕವಡಿಕೆ-ಕವಡೆಯಾಟ, ಕಡುಹೂಟ-ತೀವ್ರತೆ
ಮೂಲ ...{Loading}...
ಬೇಟೆ ನಿಂದುದು ಗಜ ತುರಗದೇ
ರಾಟ ಮಾದುದು ಕೇಳಿ ಮೇಳದ
ತೋಟಿಯಲ್ಲಿಯದಲ್ಲಿ ಕವಡಿಕೆ ನೆತ್ತ ಮೊದಲಾದ
ನಾಟಕದ ಮೊಗರಂಬವೆನಿಪ ಕ
ವಾಟ ತೆರೆಯದು ಹೊಕ್ಕಸೂಯದ
ಕೋಟಲೆಯ ಕಡುಹೂಟ ಕವರಿತು ನೃಪನ ತನುಮನವ ॥4॥
೦೦೫ ದ್ರೋಣ ಭೀಷ್ಮಾದಿಗಳು ...{Loading}...
ದ್ರೋಣ ಭೀಷ್ಮಾದಿಗಳು ಸಮಯವ
ಕಾಣರುಳಿದ ಪಸಾಯ್ತ ಸಚಿವ
ಶ್ರೇಣಿ ಬಾಗಿಲ ಹೊರಗೆ ನಿಂದುದು ಮತ್ತೆ ಮನೆಗಳಲಿ
ಕಾಣೆನೊಳಪೈಕದ ಸುವೇಣಿಯ
ರಾಣಿಯರ ದುರ್ಮನದ ಬೆಳೆಸಿನ
ಕೇಣಿಯನು ಕೈಕೊಂಡನೊಬ್ಬನೆ ಕೌರವರರಾಯ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣ ಭೀಷ್ಮಾದಿಗಳಿಗೂ ಅವನನ್ನು ಕಾಣಲು ಅವಕಾಶವಿಲ್ಲ. ಇನ್ನುಳಿದ ಸಾಮಂತ ರಾಜರು ಸಚಿವರುಗಳೂ ಬಾಗಿಲ ಹೊರಗೇ ನಿಂತರು. ಕೆಲವರು ಮನೆಗಳಲ್ಲೇ ನಿಂತರು. ಅಂತಃಪುರದೊಳಗಿನ ಸುವೇಣಿಯರಾದ ರಾಣಿಯರೂ ಪತ್ತೆಯಿಲ್ಲ. ದುರ್ಮನದ ಬೆಳೆಯ
ಗುತ್ತಿಗೆಯನ್ನು ಪಡೆದು ಕೌರವರಾಜನೊಬ್ಬನೇ ಒಳಗೆ ಉಳಿದ.
ಪದಾರ್ಥ (ಕ.ಗ.ಪ)
ಒಳಪೈಕ-ಅಂತಃಪುರದೊಳಗಿನ, ಅಂತರಂಗದ, ಕೇಣಿ-ಮತ್ಸರ
ಮೂಲ ...{Loading}...
ದ್ರೋಣ ಭೀಷ್ಮಾದಿಗಳು ಸಮಯವ
ಕಾಣರುಳಿದ ಪಸಾಯ್ತ ಸಚಿವ
ಶ್ರೇಣಿ ಬಾಗಿಲ ಹೊರಗೆ ನಿಂದುದು ಮತ್ತೆ ಮನೆಗಳಲಿ
ಕಾಣೆನೊಳಪೈಕದ ಸುವೇಣಿಯ
ರಾಣಿಯರ ದುರ್ಮನದ ಬೆಳೆಸಿನ
ಕೇಣಿಯನು ಕೈಕೊಂಡನೊಬ್ಬನೆ ಕೌರವರರಾಯ ॥5॥
೦೦೬ ಸಮಯವಿಲ್ಲೋರನ್ತೆ ಮೌನ ...{Loading}...
ಸಮಯವಿಲ್ಲೋರಂತೆ ಮೌನ
ಭ್ರಮೆಯ ಬಿಗುಹಿನ ಕೇರಿಕೇರಿಯ
ಕುಮತಿಗಳ ಗುಜು ಗುಜಿನ ಗುಪ್ತದ ಮುಸುಕುಗೈದುಗಳ
ತಮ ತಮಗೆ ಬಿರುದುಗಳ ಗಣಿಕಾ
ರಮಣ ವೈರದ ಹೆಚ್ಚು ಕುಂದಿನ
ಸಮರ ಭಟರಿರಿದಾಡಿದರು ನಿರ್ನಾಮ ಭಾವದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದೇ ಸಮನೇ ಯಾರಿಗೂ ಒಳಹೋಗಲು ಅವಕಾಶವಿಲ್ಲ. ಎಲ್ಲೆಲ್ಲೂ ಮೌನ ಮತ್ತು ಬಿಗಿಗೊಂಡ ಭ್ರಮೆ. ಕೇರಿಕೇರಿಗಳಲ್ಲಿ ದುರ್ಮತಿಗಳ ಗುಜುಗುಜು ಪ್ರಾರಂಭವಾಯಿತು. ಪ್ರಸಿದ್ಧ ಗಣಿಕೆಯರ ಮತ್ತು ಅವರ ಪ್ರಿಯರ ವೈರ ಹೆಚ್ಚು ಕುಂದಿದ ಕಾರಣದಿಂದ ಸಮರಭಟರು ತಮ್ಮತಮ್ಮಲ್ಲೇ ನಿರ್ನಾಮ ಭಾವದಿಂದ ಇರಿದಾಡಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸಮಯವಿಲ್ಲೋರಂತೆ ಮೌನ
ಭ್ರಮೆಯ ಬಿಗುಹಿನ ಕೇರಿಕೇರಿಯ
ಕುಮತಿಗಳ ಗುಜು ಗುಜಿನ ಗುಪ್ತದ ಮುಸುಕುಗೈದುಗಳ
ತಮ ತಮಗೆ ಬಿರುದುಗಳ ಗಣಿಕಾ
ರಮಣ ವೈರದ ಹೆಚ್ಚು ಕುಂದಿನ
ಸಮರ ಭಟರಿರಿದಾಡಿದರು ನಿರ್ನಾಮ ಭಾವದಲಿ ॥6॥
೦೦೭ ಸ್ತ್ರೈಣ ಚೇಷ್ಟಿತನೆನ್ದು ...{Loading}...
ಸ್ತ್ರೈಣ ಚೇಷ್ಟಿತನೆಂದು ಕೆಲಬರು
ಕಾಣೆವರಸನನೆಂದು ಕೆಲರ
ಕ್ಷೀಣ ರೋಗಿತನೆಂದು ಕೆಲರು ವಿಷ ಪ್ರಯೋಗದಲಿ
ಪ್ರಾಣ ಶೋಷಿತನೆಂದು ಕೆಲಬರು
ಜಾಣಿನೂಹೆಯ ಜನದ ನೆನಹಿನ
ಸಾಣೆಯಲಿ ಸವೆಯಿತ್ತು ಕೌರವ ನೃಪನ ನಿರ್ದೇಶ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸ್ತ್ರೀ ಸಂಬಂಧದ ಕಾಟಕ್ಕೆ ಒಳಗಾಗಿದ್ದಾನೆ.” ಎಂದು ಕೆಲವರು “ಅರಸನನ್ನು ಕಾಣಲಿಲ್ಲವಲ್ಲ" ಎಂದು ಕೆಲವರು, ವಾಸಿಯಾಗದ
ರೋಗವಿರಬೇಕೆಂದು ಕೆಲವರು “ಎಲ್ಲೋ ವಿಷಪ್ರಯೋಗವಾಗಿದೆ. ಪ್ರಾಣಂತಿಕವಾಗಿರಬೇಕು" ಎಂದು ಕೆಲವರು ಹೀಗೆ ಒಬ್ಬೊಬ್ಬರೂ ತಮ್ಮ ಜಾಣತನದಿಂದ ಊಹಿಸತೊಡಗಿದರು. ಜನರ ನೆನಪಿನ ಸಾಣೆಯಲ್ಲಿ ಕೌರವರಾಜನ ಸ್ಥಿತಿ ಲಘುವಾಗತೊಡಗಿತು.
ಪದಾರ್ಥ (ಕ.ಗ.ಪ)
ಸ್ತ್ರೈಣ-ಸ್ತ್ರೀ ಸಂಬಂಧವಾದ,
ಅಕ್ಷೀಣ-ಕ್ಷೀಣಿಸದ
ಮೂಲ ...{Loading}...
ಸ್ತ್ರೈಣ ಚೇಷ್ಟಿತನೆಂದು ಕೆಲಬರು
ಕಾಣೆವರಸನನೆಂದು ಕೆಲರ
ಕ್ಷೀಣ ರೋಗಿತನೆಂದು ಕೆಲರು ವಿಷ ಪ್ರಯೋಗದಲಿ
ಪ್ರಾಣ ಶೋಷಿತನೆಂದು ಕೆಲಬರು
ಜಾಣಿನೂಹೆಯ ಜನದ ನೆನಹಿನ
ಸಾಣೆಯಲಿ ಸವೆಯಿತ್ತು ಕೌರವ ನೃಪನ ನಿರ್ದೇಶ ॥7॥
೦೦೮ ಅಕಟ ಕೌರವರಾಯ ...{Loading}...
ಅಕಟ ಕೌರವರಾಯ ರಾಜ
ನ್ಯಕ ಶಿರೋಮಣಿಯಿರಲು ಧರೆ ರಾ
ಜಕ ವಿಹೀನ ವಿಡಂಬವಾಯ್ತೇ ಶಿವ ಶಿವಾಯೆನುತ
ಸಕಲ ದಳ ನಾಯಕರು ಮಂತ್ರಿ
ಪ್ರಕರ ಚಿಂತಾಂಬುಧಿಯೊಳದ್ದಿರೆ
ಶಕುನಿ ಬಂದನು ಕೌರವೇಂದ್ರನ ರಾಜಮಂದಿರಕೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಕಟಾ ! ರಾಜರ ಶಿರೋಮಣಿಯಾದ ಸುಯೋಧನನಿರಲು ರಾಜ್ಯ ರಾಜವಿಹೀನವೆಂಬಂತೆ ಹಾಸ್ಯಾಸ್ಪದವಾಯಿತಲ್ಲ. ಶಿವ ಶಿವಾ ! ಎನ್ನುತ್ತಾ ಸಮಸ್ತ ಸೈನ್ಯ ನಾಯಕರು ಮಂತ್ರಿಸಮೂಹವೂ ಚಿಂತಾಸಾಗರದಲ್ಲಿ ಮುಳುಗಿದ್ದಾಗ ಕೌರವೇಂದ್ರನ ರಾಜಮಂದಿರಕ್ಕೆ ಶಕುನಿ ಬಂದ.
ಪದಾರ್ಥ (ಕ.ಗ.ಪ)
ಚಿಂತಾಂಬುಧಿ-ಚಿಂತೆಯೆಂಬ ಸಾಗರ
ಮೂಲ ...{Loading}...
ಅಕಟ ಕೌರವರಾಯ ರಾಜ
ನ್ಯಕ ಶಿರೋಮಣಿಯಿರಲು ಧರೆ ರಾ
ಜಕ ವಿಹೀನ ವಿಡಂಬವಾಯ್ತೇ ಶಿವ ಶಿವಾಯೆನುತ
ಸಕಲ ದಳ ನಾಯಕರು ಮಂತ್ರಿ
ಪ್ರಕರ ಚಿಂತಾಂಬುಧಿಯೊಳದ್ದಿರೆ
ಶಕುನಿ ಬಂದನು ಕೌರವೇಂದ್ರನ ರಾಜಮಂದಿರಕೆ ॥8॥
೦೦೯ ಕರೆದು ಬಾಗಿಲವರಿಗೆ ...{Loading}...
ಕರೆದು ಬಾಗಿಲವರಿಗೆ ತನ್ನಯ
ಬರವನರುಹಿಸಲವರು ರಾಯನ
ಹೊರೆಗೆ ಬಂದರು ನುಡಿದರಂಗೈ ತಳದ ಬಾಯ್ಗಳಲಿ
ಅರಸ ಬಿನ್ನಹ ಮಾವದೇವರು
ದರುಶನಾರ್ಥಿಗಳೆನಲು ಮನದಲಿ
ಕುರು ನೃಪತಿ ಚಿಂತಿಸುತ ಬರಹೇಳೆಂದು ನೇಮಿಸಿದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಗಿಲು ಕಾಯುವವರನ್ನು ಕರೆದು ತಾನು ಬಂದದ್ದನ್ನು ರಾಜನಿಗೆ ತಿಳಿಸಿ ಎನ್ನಲು ಅವರು ರಾಜನ ಬಳಿಗೆ ಬಂದು ತಮ್ಮ ಬಾಯ ಬಳಿ ಅಂಗೈ ಮರೆ ಮಾಡಿಕೊಂಡು “ಅರಸ, ಬಿನ್ನವಿಸಿಕೊಳ್ಳುತ್ತಿದ್ದೇವೆ. ತಮ್ಮ ಮಾವ ದೇವರು ತಮ್ಮ ದರ್ಶನಾರ್ಥವಾಗಿ ಬಂದಿದ್ದಾರೆ.” ಎನ್ನಲು ಕುರುರಾಜ ಚಿಂತಾಮಗ್ನನಾಗಿ ಬರಹೇಳು ಎಂದು ಆಜ್ಞಾಪಿಸಿದ.
ಪದಾರ್ಥ (ಕ.ಗ.ಪ)
ಹೊರೆಗೆ-ಸಮೀಪಕ್ಕೆ
ಮೂಲ ...{Loading}...
ಕರೆದು ಬಾಗಿಲವರಿಗೆ ತನ್ನಯ
ಬರವನರುಹಿಸಲವರು ರಾಯನ
ಹೊರೆಗೆ ಬಂದರು ನುಡಿದರಂಗೈ ತಳದ ಬಾಯ್ಗಳಲಿ
ಅರಸ ಬಿನ್ನಹ ಮಾವದೇವರು
ದರುಶನಾರ್ಥಿಗಳೆನಲು ಮನದಲಿ
ಕುರು ನೃಪತಿ ಚಿಂತಿಸುತ ಬರಹೇಳೆಂದು ನೇಮಿಸಿದ ॥9॥
೦೧೦ ಹೊಕ್ಕನೀತನು ಕೌರವೇನ್ದ್ರನ ...{Loading}...
ಹೊಕ್ಕನೀತನು ಕೌರವೇಂದ್ರನ
ನೆಕ್ಕಟಿಯೊಳಿರೆ ಕಂಡು ನುಡಿಸಿದ
ನಕ್ಕಜದ ರುಜೆಯೇನು ಮಾನಸವೋ ಶರೀರಜವೊ
ಮುಕ್ಕುಳಿಸಿಕೊಂಡಿರದಿರಾರಿಗೆ
ಸಿಕ್ಕಿದಿಯೊ ಸೀಮಂತಿನಿಯರಿಗೆ
ಮಕ್ಕಳಾಟಿಕೆ ಬೇಡ ನುಡಿ ಧೃತರಾಷ್ಟನಾಣೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿ ಒಳಕ್ಕೆ ಹೋದ. ಕೌರವನು ಏಕಾಂತವಾಗಿರುವುದನ್ನು ಕಂಡು ವಿಸ್ಮಿತನಾಗಿ “ಆಶ್ಚರ್ಯಕರ ರೋಗವೇನಯ್ಯಾ ನಿನಗೆ?
ಇದೇನು ಮಾನಸಿಕವಾದದ್ದೋ ಶಾರೀರಕವಾದದ್ದೋ? ಒಳಗೇ ಮುಚ್ಚಿಟ್ಟುಕೊಂಡಿರಬೇಡ. ಸ್ತ್ರೀಯರಾರಿಗಾದರೂ ಸಿಕ್ಕಿಬಿದ್ದೆಯೇನೋ
ಹುಡುಗಾಟ ಮಾಡಬೇಡ. ಇರುವ ವಿಷಯವನ್ನು ಹೇಳು. ಧೃತರಾಷ್ಟ್ರನ ಮೇಲೆ ಆಣೆ” ಎಂದ.
ಪದಾರ್ಥ (ಕ.ಗ.ಪ)
ಎಕ್ಕಟಿ-ಏಕಾಂತಕ್ಕೆ, ಅಕ್ಕಜ-ಆಶ್ಚರ್ಯ
ಮೂಲ ...{Loading}...
ಹೊಕ್ಕನೀತನು ಕೌರವೇಂದ್ರನ
ನೆಕ್ಕಟಿಯೊಳಿರೆ ಕಂಡು ನುಡಿಸಿದ
ನಕ್ಕಜದ ರುಜೆಯೇನು ಮಾನಸವೋ ಶರೀರಜವೊ
ಮುಕ್ಕುಳಿಸಿಕೊಂಡಿರದಿರಾರಿಗೆ
ಸಿಕ್ಕಿದಿಯೊ ಸೀಮಂತಿನಿಯರಿಗೆ
ಮಕ್ಕಳಾಟಿಕೆ ಬೇಡ ನುಡಿ ಧೃತರಾಷ್ಟನಾಣೆಂದ ॥10॥
೦೧೧ ಮಾವ ನೀವ್ ...{Loading}...
ಮಾವ ನೀವ್ ಮರುಳಾದಿರೇ ನನ
ಗಾವ ರುಜೆಯಿಲ್ಲಂಗನೆಯರುಪ
ಜೀವಿಯೇ ನೀವರಯಿರೇ ಹಿಂದೀಸು ಕಾಲದಲಿ
ನೋವು ಬೇರಿಲ್ಲೆನಗೆ ನಿಳಯಕೆ
ನೀವು ಬಿಜಯಂಗೈವುದಂತ
ರ್ಭಾವ ವಹ್ನಿಯನೇಕೆ ಬೆದಕುವಿರೆಂದನಾ ಭೂಪ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಉತ್ತರವಾಗಿ ದುರ್ಯೋಧನನು “ಮಾವಾ ! ನೀವು ಮರುಳಾದಿರಾ ! ನನಗೆ ಯಾವ ರೋಗವೂ ಇಲ್ಲ. ಅಂಗನೆಯರಿಗೆ ಆಸೆಪಟ್ಟು ಜೀವಿಸುವವನೇ ನಾನು ? ಇಷ್ಟು ಕಾಲವೂ ನನ್ನನ್ನು ನೋಡಿದ್ದೀರಲ್ಲ, ನಿಮಗೆ ತಿಳಿಯದೇ ? ನನಗೆ ಬೇರೆ ಯಾವ ನೋವೂ ಇಲ್ಲ. ನಿಮ್ಮ ಮನೆಗೆ ನೀವು ದಯಮಾಡಿಸಿ. ನನ್ನ ಹೃದಯದಲ್ಲಡಗಿರುವ ಬೆಂಕಿಯನ್ನೇಕೆ ಕೆದಕುವಿರಿ?” ಎಂದ.
ಪದಾರ್ಥ (ಕ.ಗ.ಪ)
ರುಜೆ-ಖಾಯಿಲೆ, ವಹ್ನಿ-ಬೆಂಕಿ
ಮೂಲ ...{Loading}...
ಮಾವ ನೀವ್ ಮರುಳಾದಿರೇ ನನ
ಗಾವ ರುಜೆಯಿಲ್ಲಂಗನೆಯರುಪ
ಜೀವಿಯೇ ನೀವರಯಿರೇ ಹಿಂದೀಸು ಕಾಲದಲಿ
ನೋವು ಬೇರಿಲ್ಲೆನಗೆ ನಿಳಯಕೆ
ನೀವು ಬಿಜಯಂಗೈವುದಂತ
ರ್ಭಾವ ವಹ್ನಿಯನೇಕೆ ಬೆದಕುವಿರೆಂದನಾ ಭೂಪ ॥11॥
೦೧೨ ಏನು ನಿನ್ನನ್ತಸ್ಥ ...{Loading}...
ಏನು ನಿನ್ನಂತಸ್ಥ ಹೃದಯ ಕೃ
ಶಾನು ಸಂಭವವೇಕೆ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ನೃಪನ
ಏನು ಭಯ ಬೇಡೆಂದೆನಲು ಯಮ
ಸೂನು ವೈಭವ ವಹ್ನಿದಗ್ಧ ಮ
ನೋನುಭಾವವನೇಕೆ ನುಡಿಸುವಿರೆಂದನಾ ಭೂಪ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿ ಕೇಳಿದ ”ಏನಯ್ಯಾ ನಿನ್ನ ಹೃದಯದಲ್ಲಿರುವುದು? ಹೃದಯದಲ್ಲೇಕೆ ಬೆಂಕಿ ಹುಟ್ಟಿತು? ಹೇಳು, ದುಃಖಿಸಬೇಡ. ಹೇಳು ನನ್ನಾಣೆ, ನೀನೇನೂ ಭಯಪಡಬೇಡ.” ಎಂದು ಸಮಾಧಾನ ಪಡಿಸಿದ. ಅದಕ್ಕೆ ಅವನು “ಯುಧಿಷ್ಠಿರನ ವೈಭವಾಗ್ನಿಯಿಂದ ನನ್ನ ಮನಸ್ಸು ದಹಿಸಿಹೋಗಿದೆ. ನನ್ನನ್ನೇಕೆ ಮಾತನಾಡಿಸುವಿರಿ?” ಎಂದ
ಪದಾರ್ಥ (ಕ.ಗ.ಪ)
ಮೂಲ ...{Loading}...
ಏನು ನಿನ್ನಂತಸ್ಥ ಹೃದಯ ಕೃ
ಶಾನು ಸಂಭವವೇಕೆ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ನೃಪನ
ಏನು ಭಯ ಬೇಡೆಂದೆನಲು ಯಮ
ಸೂನು ವೈಭವ ವಹ್ನಿದಗ್ಧ ಮ
ನೋನುಭಾವವನೇಕೆ ನುಡಿಸುವಿರೆಂದನಾ ಭೂಪ ॥12॥
೦೧೩ ಹೇಳು ಹೇಳೇನೇನು ...{Loading}...
ಹೇಳು ಹೇಳೇನೇನು ಪಾಂಡು ನೃ
ಪಾಲ ಪುತ್ರರ ವಿಭವ ವಹ್ನಿ
ಜ್ವಾಲೆಯಲಿ ಮನ ಬೆಂದುದೇ ಹರಹರ ವಿಚಿತ್ರವಲ
ಪಾಲಕನು ಧರ್ಮಜನು ಸಲೆ ಕ
ಟ್ಟಾಳುಗಳು ಭೀಮಾರ್ಜನರು ಬೆ
ಳ್ಳಾಳ ಹಬ್ಬುಗೆಯೈಸಲೇ ಪಾಂಡವರ ಸಿರಿಯೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೇಳು ಹೇಳು, ಏನೇನು ! ಪಾಂಡವರ ವೈಭವಾಗ್ನಿ ಜ್ವಾಲೆಯಲ್ಲಿ ನಿನ್ನ ಮನಸ್ಸು ದಹಿಸಿ ಹೋಯಿತೇ ? ಹರಹರ !
ವಿಚಿತ್ರವಾಯಿತಲ್ಲ ! ಪಾಲಕನಾಗಿರತಕ್ಕವನು ಧರ್ಮರಾಜ, ಭೀಮಾರ್ಜುನರು ಶೂರಯೋಧರು. ಹಾಗಾಗಿ ಪಾಂಡವರ ಸಂಪತ್ತು ಬೆಳ್ಳಾಳದಂತೆ ಹಬ್ಬಿದೆಯಲ್ಲವೇ ?
ಪದಾರ್ಥ (ಕ.ಗ.ಪ)
ಬೆಳ್ಳಾಳ ಹಬ್ಬುಗೆ-ಹುರುಳಿಲ್ಲದ ಉಬ್ಬಟೆ
ಮೂಲ ...{Loading}...
ಹೇಳು ಹೇಳೇನೇನು ಪಾಂಡು ನೃ
ಪಾಲ ಪುತ್ರರ ವಿಭವ ವಹ್ನಿ
ಜ್ವಾಲೆಯಲಿ ಮನ ಬೆಂದುದೇ ಹರಹರ ವಿಚಿತ್ರವಲ
ಪಾಲಕನು ಧರ್ಮಜನು ಸಲೆ ಕ
ಟ್ಟಾಳುಗಳು ಭೀಮಾರ್ಜನರು ಬೆ
ಳ್ಳಾಳ ಹಬ್ಬುಗೆಯೈಸಲೇ ಪಾಂಡವರ ಸಿರಿಯೆಂದ ॥13॥
೦೧೪ ಅವರು ಪಿತ್ರಾರ್ಜಿತದ ...{Loading}...
ಅವರು ಪಿತ್ರಾರ್ಜಿತದ ರಾಜ್ಯ
ಪ್ರವರ ಪಾತ್ರರು ನಿನ್ನಸೂಯೆಯ
ಕವಲು ಮನದ ಕುಠಾರ ಬುದ್ಧಿಯ ಕಲುಷ ಭಾವನೆಯ
ವಿವರಣೆಯನವರೆತ್ತ ಬಲ್ಲರು
ಶಿವಶಿವಾ ಭುವನೈಕ ಮಾನ್ಯರ
ನವಗಡಿಸಲಂಗೈಸಿದೈ ಮಾಣೆಂದನಾ ಶಕುನಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅವರು ಪಿತ್ರಾರ್ಜಿತವಾದ ರಾಜ್ಯಕ್ಕ್ಠೆ ಪಾತ್ರರು. ನಿನ್ನಲ್ಲಿ ಅಸೂಯೆ ಹುಟ್ಟಿರುವುದು, ಅದರಿಂದ ನಿನ್ನ ಮನಸ್ಸು
ಕವಲೊಡೆದಿರುವುದು, ಕೊಡಲಿಯ ಕಾವಿನಂತೆ ಆದ ನಿನ್ನ ದುಷ್ಟಬುದ್ಧಿ, ಕಲುಷಗೊಂಡಿರುವ ನಿನ್ನ ಭಾವನೆ ಈ ವಿವರಗಳನ್ನೆಲ್ಲ
ಅವರೆತ್ತ ಬಲ್ಲರು ! ಶಿವ ಶಿವಾ ! ಅವರು ಲೋಕೈಕ ಮಾನ್ಯರು, ಅವರನ್ನು ಕೇಡಿಗೆ ಗುರಿಪಡಿಸಲು ಯತ್ನಿಸಿದ್ದೀಯಲ್ಲ ! ಹಾಗೆಲ್ಲ ಮಾಡಬೇಡ” ಎಂದ ಶಕುನಿ
ಪದಾರ್ಥ (ಕ.ಗ.ಪ)
ಕುಠಾರಬುದ್ಧಿ-ಕೊಡಲಿಯಂತಹ ದುಷ್ಟ ಬುದ್ಧಿ, ಅವಗಡಿಸು-ಹಿಯ್ಯಾಳಿಸು, ಅಂಗೈಸು-ಯತ್ನಿಸು
ಮೂಲ ...{Loading}...
ಅವರು ಪಿತ್ರಾರ್ಜಿತದ ರಾಜ್ಯ
ಪ್ರವರ ಪಾತ್ರರು ನಿನ್ನಸೂಯೆಯ
ಕವಲು ಮನದ ಕುಠಾರ ಬುದ್ಧಿಯ ಕಲುಷ ಭಾವನೆಯ
ವಿವರಣೆಯನವರೆತ್ತ ಬಲ್ಲರು
ಶಿವಶಿವಾ ಭುವನೈಕ ಮಾನ್ಯರ
ನವಗಡಿಸಲಂಗೈಸಿದೈ ಮಾಣೆಂದನಾ ಶಕುನಿ ॥14॥
೦೧೫ ಲೇಸು ಬಿಜಯಙ್ಗೈಯಿ ...{Loading}...
ಲೇಸು ಬಿಜಯಂಗೈಯಿ ನೀವೆ
ನ್ನಾಸರಾಗ್ನಿಯನೇಕೆ ಕೆಣಕುವಿ
ರಾಸುರವಿದೇಕೆನ್ನೊಡನೆ ಸೈರಿಸುವುದುಪಹತಿಯ
ಈಸು ನುಡಿವರೆ ಮಾವಯೆನುತ ಮ
ಹೀಶ ಕಂಬನಿದುಂಬಿ ನೆನಹಿನ
ಬೇಸರಕೆ ಬಿಸುಸುಯ್ದು ಧೊಪ್ಪನೆ ಕೆಡದನವನಿಯಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಒಳ್ಳೆಯದಾಯಿತು, ನೀವು ದಯಮಾಡಿಸಿ, ನನ್ನ ಜುಗುಪ್ಸೆಯ ಬೆಂಕಿಯನ್ನೇಕೆ ಕೆದಕುತ್ತೀರಿ ? ನಿಮಗೆ ತೊಂದರೆಯೇಕೆ ನನ್ನಿಂದ. ನನ್ನಿಂದಾದ ಕಷ್ಟವನ್ನು ಸಹಿಸಿಕೊಳ್ಳಿ. ನೀವು ಹೀಗೆ ಮಾತಾಡುವುದೇ ಮಾವ !” ಎನ್ನುತ್ತಾ ಸುಯೋಧನ ಕಣ್ಣೀರು ತುಂಬಿ ಅಲ್ಲಿ ನಡೆದದ್ದೆಲ್ಲ ನೆನಪಿಗೆ ಬಂದ ಬೇಸರಕ್ಕೆ ನಿಟ್ಟುಸಿರು ಬಿಡುತ್ತಾ ಧೊಪ್ಪನೆ ನೆಲದ ಮೇಲೆ ಬಿದ್ದು ಬಿಟ್ಟ.
ಪದಾರ್ಥ (ಕ.ಗ.ಪ)
ಆಸರ-ಬೇಸರ, ಜುಗುಪ್ಸೆ
ಮೂಲ ...{Loading}...
ಲೇಸು ಬಿಜಯಂಗೈಯಿ ನೀವೆ
ನ್ನಾಸರಾಗ್ನಿಯನೇಕೆ ಕೆಣಕುವಿ
ರಾಸುರವಿದೇಕೆನ್ನೊಡನೆ ಸೈರಿಸುವುದುಪಹತಿಯ
ಈಸು ನುಡಿವರೆ ಮಾವಯೆನುತ ಮ
ಹೀಶ ಕಂಬನಿದುಂಬಿ ನೆನಹಿನ
ಬೇಸರಕೆ ಬಿಸುಸುಯ್ದು ಧೊಪ್ಪನೆ ಕೆಡದನವನಿಯಲಿ ॥15॥
೦೧೬ ಎತ್ತಿದನು ಕಣ್ಣೆವೆಯ ...{Loading}...
ಎತ್ತಿದನು ಕಣ್ಣೆವೆಯ ಕಿರುವನಿ
ಮುತ್ತುಗಳ ಕೇವಣಿಯ ಶಕುನಿ ನೃ
ಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
ಕಿತ್ತು ಬಿಸುಡುವೆನಹಿತರನು ನಿನ
ಗಿತ್ತೆನಿಂದ್ರಪ್ರಸ್ಥಪುರವನು
ಹೆತ್ತ ತಾಯ್ ಗಾಂಧಾರಿ ಸಂತೋಷಿಸಲಿ ಬಳಿಕೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಶಕುನಿಯ ಮನಸ್ಸು ಕರಗಿತು, ಕಣ್ಣೀರುಕ್ಕಿತು ಕಿರುಹನಿಯ ಮುತ್ತುಗಳ ಸಾಲಿದ್ದ ಕಣ್ಣೆವೆಯನ್ನು ತೆರೆದು ನೋಡಿದ. “ನೃಪೋತ್ತಮನೆ ಬಾ ಕಂದ, ಬಾ ಎಂದು ಅವನನ್ನು ಅಪ್ಪಿ ಶತ್ರುಗಳನ್ನು ಕಿತ್ತು ಬೀಸಾಡುತ್ತೇನೆ. ಇಂದೇ ನಿನಗೆ ಇಂದ್ರಪ್ರಸ್ಥನಗರಿಯನ್ನು ಕೊಟ್ಟೆ. ನಿನ್ನ ಹೆತ್ತ ತಾಯಿ ಗಾಂಧಾರಿ ಸಂತೋಷ ಪಡಲಿ" ಎಂದ.
ಪದಾರ್ಥ (ಕ.ಗ.ಪ)
ಕೇವಣಿ-ಸಾಲುಜೋಡಣೆ
ಮೂಲ ...{Loading}...
ಎತ್ತಿದನು ಕಣ್ಣೆವೆಯ ಕಿರುವನಿ
ಮುತ್ತುಗಳ ಕೇವಣಿಯ ಶಕುನಿ ನೃ
ಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
ಕಿತ್ತು ಬಿಸುಡುವೆನಹಿತರನು ನಿನ
ಗಿತ್ತೆನಿಂದ್ರಪ್ರಸ್ಥಪುರವನು
ಹೆತ್ತ ತಾಯ್ ಗಾಂಧಾರಿ ಸಂತೋಷಿಸಲಿ ಬಳಿಕೆಂದ ॥16॥
೦೧೭ ಮಾವ ಕೇಳತಿಬಲರು ...{Loading}...
ಮಾವ ಕೇಳತಿಬಲರು ಫಲಗುಣ
ಪಾವಮಾನಿಗಳೈವರಿಗೆ ತಾ
ಜೀವಸಖ ಗೋವಿಂದನನಿಬರ ಗೆಲವು ಗೋಚರವೆ
ಸಾವುದಲ್ಲದೆ ತನಗೆ ಬೇರಿ
ನ್ನಾವ ಪರಿಯಲಿ ಸಮತೆ ಸೇರದು
ಜೀವಿತವ್ಯವನಮರ ನಿಕರದೊಳರಸಿಕೊಳ್ಳೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಾವಾ ! ಕೇಳು, ಅರ್ಜುನ ಭೀಮಸೇನರು ಬಲಶಾಲಿಗಳು ಅವರೈವರಿಗೂ ಪ್ರಾಣಮಿತ್ರನಾದವನು ಕೃಷ್ಣ. ಅಷ್ಟು ಜನರನ್ನು ಗೆಲ್ಲಲು ಸಾಧ್ಯವಾದೀತೇ ? ಸಾವೊಂದಲ್ಲದೆ ನನಗೆ ಬೇರಾವ ರೀತಿಯಿಂದಲೂ ಸಮಾಧಾನ ದೊರೆಯದು. ಮುಂದೆ ನನ್ನ ಜೀವನವನ್ನು ದೇವತೆಗಳ ನಡುವೆ ಹುಡುಕಿಕೊಳ್ಳಿ.” ಎಂದು ದುರ್ಯೋಧನನು ಶಕುನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಪಾವಮಾನಿ-ಭೀಮ
ಮೂಲ ...{Loading}...
ಮಾವ ಕೇಳತಿಬಲರು ಫಲಗುಣ
ಪಾವಮಾನಿಗಳೈವರಿಗೆ ತಾ
ಜೀವಸಖ ಗೋವಿಂದನನಿಬರ ಗೆಲವು ಗೋಚರವೆ
ಸಾವುದಲ್ಲದೆ ತನಗೆ ಬೇರಿ
ನ್ನಾವ ಪರಿಯಲಿ ಸಮತೆ ಸೇರದು
ಜೀವಿತವ್ಯವನಮರ ನಿಕರದೊಳರಸಿಕೊಳ್ಳೆಂದ ॥17॥
೦೧೮ ಗೆಲುವೆ ನಾನಞ್ಜದಿರು ...{Loading}...
ಗೆಲುವೆ ನಾನಂಜದಿರು ಪಾಂಡವ
ರಳವಳವ ನಾನರಿವೆ ನೃಪನ
ಗ್ಗಳದ ಧರ್ಮಜ್ಞನು ವಿಶೇಷ ದ್ಯೂತಲೋಲುಪನು
ಗೆಲುವ ಮೋಡಿಯನರಿಯನಾತನ
ನೆಲೆಯ ಬಲ್ಲೆನು ಜೂಜುಗಾರರ
ಕುಲಶಿರೋಮಣಿ ತಾನೆಯೆಂದನು ಶಕುನಿ ಕೌರವಗೆ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿ ಅವನಿಗೆ ಭರವಸೆ ಕೊಡುತ್ತಾನೆ. ನಾನು ಗೆಲ್ಲುವೆನಯ್ಯಾ ! ನೀನೇನೂ ಹೆದರಬೇಡ. ಪಾಂಡವರ ಶಕ್ತಿಯನ್ನಳೆಯುವ ಬಗೆಯನ್ನು ನಾ ಬಲ್ಲೆ. ಧರ್ಮರಾಜ ಧರ್ಮಜ್ಞ ಸರಿ, ಆದರೆ ಅವನು ಜೂಜಿನಲ್ಲಿ ವಿಶೇಷ ಆಸಕ್ತಿಯುಳ್ಳವನು. ಆದರೆ ಗೆಲ್ಲುವ ಕುಶಲತೆಯನ್ನು ಅರಿಯ. ಅವನ ಮಟ್ಟವೇನೆಂಬುದನ್ನು ನಾನು ಬಲ್ಲೆ. ಜೂಜುಗಾರರ ಕುಲಕ್ಕೆ ಶಿರೋಮಣಿ ನಾನು.
ಪದಾರ್ಥ (ಕ.ಗ.ಪ)
ಅಳವಳವ-ಅಳಬಳ, ಶಕ್ತಿ, ಸಾಮಥ್ರ್ಯ
ಮೂಲ ...{Loading}...
ಗೆಲುವೆ ನಾನಂಜದಿರು ಪಾಂಡವ
ರಳವಳವ ನಾನರಿವೆ ನೃಪನ
ಗ್ಗಳದ ಧರ್ಮಜ್ಞನು ವಿಶೇಷ ದ್ಯೂತಲೋಲುಪನು
ಗೆಲುವ ಮೋಡಿಯನರಿಯನಾತನ
ನೆಲೆಯ ಬಲ್ಲೆನು ಜೂಜುಗಾರರ
ಕುಲಶಿರೋಮಣಿ ತಾನೆಯೆಂದನು ಶಕುನಿ ಕೌರವಗೆ ॥18॥
೦೧೯ ಕಪಟವನು ನೆರೆ ...{Loading}...
ಕಪಟವನು ನೆರೆ ಮಾಡಿ ಜೂಜಿನೊ
ಳುಪರಿಕಾರ್ಯವ ಜೈಸಿ ಕೊಡುವೆನು
ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ
ಅಪದೆಸೆಗೆ ಭಯಗೊಳ್ಳದಿರು ನಿ
ಷ್ಕೃಪೆಯಲಿರು ಗುರು ಭೀಷ್ಮ ವಿದುರಾ
ದ್ಯಪಸರರ ಕೈಕೊಳ್ಳದಿರು ನೀನೆಂದನಾ ಶಕುನಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೂಜಿನಲ್ಲಿ ಚೆನ್ನಾಗಿ ಮೋಸಮಾಡಿ ಅನಂತರದ ನಿನ್ನ ಕಾರ್ಯವನ್ನು ಗೆಲ್ಲಿಸಿಕೊಡುತ್ತೇನೆ. ನನ್ನಂತಹ ನಿಪುಣ ಲೋಕದಲ್ಲೇ ಇನ್ನೊಬ್ಬನಿಲ್ಲ. ಮೋಸದ ಅಪಖ್ಯಾತಿ ಬಂದೀತೆಂದು ಹೆದರಿಕೊಳ್ಳಬೇಡ. ನಿಷ್ಕರುಣೆಯಿಂದ ಇರು. ಗುರುದ್ರೋಣ, ಭೀಷ್ಮ, ವಿದುರರಂತಹ ದುಷ್ಟರ ಮಾತನ್ನು ನೀನು ಕೇಳಬೇಡ.
ಪದಾರ್ಥ (ಕ.ಗ.ಪ)
ಅಪಸರರು -ಇತರರು
ಮೂಲ ...{Loading}...
ಕಪಟವನು ನೆರೆ ಮಾಡಿ ಜೂಜಿನೊ
ಳುಪರಿಕಾರ್ಯವ ಜೈಸಿ ಕೊಡುವೆನು
ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ
ಅಪದೆಸೆಗೆ ಭಯಗೊಳ್ಳದಿರು ನಿ
ಷ್ಕೃಪೆಯಲಿರು ಗುರು ಭೀಷ್ಮ ವಿದುರಾ
ದ್ಯಪಸರರ ಕೈಕೊಳ್ಳದಿರು ನೀನೆಂದನಾ ಶಕುನಿ ॥19॥
೦೨೦ ಎನ್ನ ಬಹುಮಾನಾವಮಾನವು ...{Loading}...
ಎನ್ನ ಬಹುಮಾನಾವಮಾನವು
ನಿನ್ನದೈಸಲೆ ಮಾವ ನೀ ಸಂ
ಪನ್ನಕೃತ್ರಿಮವಿದ್ಯನಾದರೆ ತೊಡಚು ಸಾಕದನು
ಅನ್ನಿಗರಿಗರುಹದಿರು ನಮ್ಮವ
ರೆನ್ನದಿರು ವಿದುರಾದಿಗಳನುಪ
ಪನ್ನ ಮಂತ್ರವನರುಹು ಬೊಪ್ಪಂಗೆಂದನವನೀಶ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಾಧಾನಗೊಂಡ ದುರ್ಯೋಧನನು ಮಾವನಿಗೆ “ನನ್ನ ಬಹುಮಾನವಾಗಲಿ ಅಪಮಾನವಾಗಲಿ ನಿನಗೇ ಸೇರಿದುದಲ್ಲವೆ ಮಾವಾ! ಈ ಮೋಸವಿದ್ಯೆಯಲ್ಲಿ ನೀನು ನಿಪುಣನಾಗಿದ್ದರೆ ಅದನ್ನು ಪ್ರಯೋಗಿಸು ಸಾಕು. ಈ ವಿಷಯವನ್ನು ಬೇರೆಯವರಾರಿಗೂ ಹೇಳಬೇಡ ವಿದುರ ಮೊದಲಾದವರನ್ನು ನಮ್ಮವರೆಂದು ತಿಳಿಯಬೇಡ. ನಾವು ಆಲೋಚಿಸಿ ನಿರ್ಧರಿಸಿರುವ ಈ ಸಂಚನ್ನು ಅಪ್ಪನಿಗೆ ಹೇಳು” ಎಂದ.
ಪದಾರ್ಥ (ಕ.ಗ.ಪ)
ಅನ್ನಿಗರು-ಇತರರು
ಮೂಲ ...{Loading}...
ಎನ್ನ ಬಹುಮಾನಾವಮಾನವು
ನಿನ್ನದೈಸಲೆ ಮಾವ ನೀ ಸಂ
ಪನ್ನಕೃತ್ರಿಮವಿದ್ಯನಾದರೆ ತೊಡಚು ಸಾಕದನು
ಅನ್ನಿಗರಿಗರುಹದಿರು ನಮ್ಮವ
ರೆನ್ನದಿರು ವಿದುರಾದಿಗಳನುಪ
ಪನ್ನ ಮಂತ್ರವನರುಹು ಬೊಪ್ಪಂಗೆಂದನವನೀಶ ॥20॥
೦೨೧ ನೀನರುಹು ನಿಮ್ಮಯ್ಯ ...{Loading}...
ನೀನರುಹು ನಿಮ್ಮಯ್ಯ ಮನಗೊ
ಟ್ಟಾ ನರೇಂದ್ರರ ಕರೆಸಿ ಕೊಟ್ಟರೆ
ಮಾನನಿಧಿಯೇ ಸಕಲ ಧರೆಯನು ಸೇರಿಸುವೆ ನಿನಗೆ
ನೀನೆ ಹೋಗಿಯೆ ಎನ್ನ ಕಡು ದು
ಮ್ಮಾನವನು ಬೊಪ್ಪಂಗೆ ನುಡಿದರೆ
ತಾನೆ ಕರೆಸುವನರುಹುವೆನು ಜನಕಂಗೆ ನಿಜಮತವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಶಕುನಿ “ನೀನು ಹೋಗಿ ನಿಮ್ಮಯ್ಯನಿಗೆ ಹೇಳು. ಅವನು ಸಮ್ಮತಿಸಿ ಆ ಪಾಂಡವರನ್ನು ಕರೆಸಿಕೊಟ್ಟರೆ ಓ ಮಾನನಿಧಿಯೇ, ನಾನು ಸಕಲ ರಾಜ್ಯವನ್ನೂ ನಿನಗೆ ಸೇರಿಸಿಕೊಡುತ್ತೇನೆ ಎಂದ. ಅದಕ್ಕೆ ದುರ್ಯೋಧನನು ನೀನೇ ಹೋಗಿ ಅಪ್ಪನಿಗೆ ಈ ನನ್ನ ಕಡು ದುಃಖವನ್ನು ಹೇಳಿದರೆ ಅವನು ನನ್ನನ್ನು ಕರೆಸುವನು. ಆಗ ನಾನು ಅಪ್ಪನಿಗೆ ನನ್ನ ಮನದಲ್ಲಿರುವುದನ್ನು ಹೇಳುವೆನು” ಎಂದ.
ಪದಾರ್ಥ (ಕ.ಗ.ಪ)
ದುಮ್ಮಾನ-ದುಃಖ
ಪಾಠಾನ್ತರ (ಕ.ಗ.ಪ)
ನೀನೆ ಹೋಗಿಯೆ ನಿನ್ನ ಕಡು ದು
ಮ್ಮಾನವನು ಬೊಪ್ಪಂಗೆ ನುಡಿದರೆ
ತಾನೆ ಕರೆಸುವನರುಹುವೆನು ಜನಕಂಗೆ ನಿಜಮತವ ||21||
–>
ನೀನೆ ಹೋಗೀಗೆನ್ನ ಕಡುದು
ಮ್ಮಾನವನು ಬೊಪ್ಪಂಗೆ ನುಡಿದರೆ
ತಾನೆ ಕರೆಸುವನರುಹುವೆನು ಬಳಿಕೆಂದನಾ ನೃಪತಿ
ಮೂಲ ...{Loading}...
ನೀನರುಹು ನಿಮ್ಮಯ್ಯ ಮನಗೊ
ಟ್ಟಾ ನರೇಂದ್ರರ ಕರೆಸಿ ಕೊಟ್ಟರೆ
ಮಾನನಿಧಿಯೇ ಸಕಲ ಧರೆಯನು ಸೇರಿಸುವೆ ನಿನಗೆ
ನೀನೆ ಹೋಗಿಯೆ ಎನ್ನ ಕಡು ದು
ಮ್ಮಾನವನು ಬೊಪ್ಪಂಗೆ ನುಡಿದರೆ
ತಾನೆ ಕರೆಸುವನರುಹುವೆನು ಜನಕಂಗೆ ನಿಜಮತವ ॥21॥
೦೨೨ ಅಹುದು ಬಳಿಕೇನೆನುತ ...{Loading}...
ಅಹುದು ಬಳಿಕೇನೆನುತ ಬಂದನು
ಕುಹಕಮತಿ ಧೃತರಾಷ್ಟ್ರನರಮನೆ
ಗಿಹ ಸಮಯದಲಿ ಹೊಕ್ಕನಂದೇಕಾಂತ ಮಂದಿರವ
ಬಹಳ ಖೇದ ವ್ಯಸನದಲಿ ದು
ಸ್ಸಹ ಮನೋವ್ಯಥೆಯಲಿ ಕುಮಾರಕ
ನಿಹುದನರಿಯಿರೆ ನೀವೆನುತ ಬಿಸುಸುಯ್ದನಾ ಶಕುನಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೌದು, ಅದಕ್ಕೇನು ಆಗಲಿ ಎಂದು ಆ ಕುಹಕ ಬುದ್ಧಿಯ ಶಕುನಿ ಧೃತರಾಷ್ಟ್ರನ ಅರಮನೆಗೆ ಬಂದು ಸಮಯ ಕಾದು ಒಳಕ್ಕೆ
ಹೋಗಿ, ಏಕಾಂತ ಮಂದಿರದಲ್ಲಿ “ನಿಮ್ಮ ಕುಮಾರ ಬಹಳ ತೀವ್ರವಾದ ದುಃಖದಿಂದ, ಸಹಿಸಲಾಗದ ಮನೋವ್ಯಥೆಯಿಂದ ಕೂಡಿದ್ದಾನೆಂಬುದು ನಿಮಗೆ ತಿಳಿದಿದೆಯೇ ?” ಎಂದು ನಿಟ್ಟುಸಿರುಬಿಟ್ಟ.
ಪದಾರ್ಥ (ಕ.ಗ.ಪ)
ಖೇದ-ದುಃಖ
ಮೂಲ ...{Loading}...
ಅಹುದು ಬಳಿಕೇನೆನುತ ಬಂದನು
ಕುಹಕಮತಿ ಧೃತರಾಷ್ಟ್ರನರಮನೆ
ಗಿಹ ಸಮಯದಲಿ ಹೊಕ್ಕನಂದೇಕಾಂತ ಮಂದಿರವ
ಬಹಳ ಖೇದ ವ್ಯಸನದಲಿ ದು
ಸ್ಸಹ ಮನೋವ್ಯಥೆಯಲಿ ಕುಮಾರಕ
ನಿಹುದನರಿಯಿರೆ ನೀವೆನುತ ಬಿಸುಸುಯ್ದನಾ ಶಕುನಿ ॥22॥
೦೨೩ ಏನು ಶಕುನಿ ...{Loading}...
ಏನು ಶಕುನಿ ಮಗಂಗೆ ದುಗುಡವ
ದೇನು ಕಾರಣವಾರ ದೆಸೆಯಿಂ
ದೇನಸಾಧ್ಯವದೇನು ಭಯ ಮೇಣಾವುದಭಿಲಾಷೆ
ಏನುವನು ವಂಚಿಸದೆ ಹೇಳೆ
ನ್ನಾನೆಗೇಕೈ ಮರುಕವೆನೆ ನಿಜ
ಸೂನುವನು ನೀ ಕರೆಸಿ ಬೆಸಗೊಳ್ಳೆಂದನಾ ಶಕುನಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗನ ಆ ದುಃಸ್ಥಿತಿಯನ್ನು ಕೇಳಿದೊಡನೆ ಆತಂಕಗೊಂಡ ಧೃತರಾಷ್ಟ್ರ “ಏನು ಶಕುನಿ ಮಗಂಗೆ ದುಃಖ ? ಅದೇನು ಕಾರಣ ಬಂತು ? ಯಾರ ದೆಸೆಯಿಂದಾದದ್ದು? ಅಸಾಧ್ಯವಾದದ್ದೇನು? ಭಯವಾದದ್ದೇನು? ಏನು ಅವನ ಅಭಿಲಾಷೆ? ಏನನ್ನು ಮುಚ್ಚುಮರೆ ಮಾಡದೆ ಹೇಳು. ನನ್ನಾನೆಗೆ ಯಾಕಯ್ಯ ದುಃಖ ಬಂತು ? ಎಂದೆಲ್ಲ ಪ್ರಶ್ನಿಸಿದ.
ಪದಾರ್ಥ (ಕ.ಗ.ಪ)
ದುಗುಡ-ದುಃಖ
ಮೂಲ ...{Loading}...
ಏನು ಶಕುನಿ ಮಗಂಗೆ ದುಗುಡವ
ದೇನು ಕಾರಣವಾರ ದೆಸೆಯಿಂ
ದೇನಸಾಧ್ಯವದೇನು ಭಯ ಮೇಣಾವುದಭಿಲಾಷೆ
ಏನುವನು ವಂಚಿಸದೆ ಹೇಳೆ
ನ್ನಾನೆಗೇಕೈ ಮರುಕವೆನೆ ನಿಜ
ಸೂನುವನು ನೀ ಕರೆಸಿ ಬೆಸಗೊಳ್ಳೆಂದನಾ ಶಕುನಿ ॥23॥
೦೨೪ ಕರೆಸಿದನು ದುರಿಯೋಧನನನಾ ...{Loading}...
ಕರೆಸಿದನು ದುರಿಯೋಧನನನಾ
ದರಿಸಿ ಕಟ್ಟೇಕಾಂತದಲಿ ಮು
ವ್ವರು ವಿಚಾರಿಸಿದರು ನಿಜಾನ್ವಯ ಮೂಲ ನಾಶನವ
ಭರತಕುಲ ನಿರ್ವಾಹಕನೆ ಬಾ
ಕುರುಕುಲಾನ್ವಯದೀಪ ಬಾ ಎ
ನ್ನರಸ ಬಾ ಎನ್ನಾನೆ ಬಾಯೆಂದಪ್ಪಿದನು ಮಗನ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನು ದುರ್ಯೋಧನನ್ನು ಕರೆಸಿದ. ಅವನನ್ನು ಆದರಿಸಿ ಮೂವರೂ ಕಟ್ಟೇಕಾಂತಕ್ಕೆ ಹೋಗಿ, ತಮ್ಮ ವಂಶದ ಮೂಲ ವಿನಾಶಕ್ಕೆ ಕಾರಣವಾಗುವ ವಿಚಾರವನ್ನು ಕುರಿತು ಆಲೋಚಿಸಿದರು. “ಭರತ ಕುಲವನ್ನು ಉದ್ಧಾರಮಾಡುವವನೇ ಬಾ, ಕುರುವಂಶವನ್ನು ಬೆಳಗುವ ದೀಪವೆ ಬಾ, ನನ್ನ ರಾಜಾ ಬಾ, ನನ್ನ ಆನೆಯೇ ಬಾ” ಎಂದು ಅಪ್ಪಿಕೊಂಡು ಮುದ್ದಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರೆಸಿದನು ದುರಿಯೋಧನನನಾ
ದರಿಸಿ ಕಟ್ಟೇಕಾಂತದಲಿ ಮು
ವ್ವರು ವಿಚಾರಿಸಿದರು ನಿಜಾನ್ವಯ ಮೂಲ ನಾಶನವ
ಭರತಕುಲ ನಿರ್ವಾಹಕನೆ ಬಾ
ಕುರುಕುಲಾನ್ವಯದೀಪ ಬಾ ಎ
ನ್ನರಸ ಬಾ ಎನ್ನಾನೆ ಬಾಯೆಂದಪ್ಪಿದನು ಮಗನ ॥24॥
೦೨೫ ದುಗುಡವೇಕೈ ಮಗನೆ ...{Loading}...
ದುಗುಡವೇಕೈ ಮಗನೆ ಹಿರಿಯೋ
ಲಗವನೀಯೆ ಗಡೇಕೆ ವೈಹಾ
ಳಿಗಳ ಬೇಟೆಗಳವನಿಪಾಲ ವಿನೋದ ಕೇಳಿಗಳ
ಬಗೆಯೆ ಗಡ ಬಾಂಧವರ ಸಚಿವರ
ಹೊಗಿಸೆ ಗಡ ನಿನ್ನರಮನೆಯನೀ
ಹಗಲು ನಿನಗೇಕಾಯ್ತು ಕತ್ತಲೆಯೆಂದನಂಧನೃಪ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದುಃಖವೇಕಯ್ಯ ಮಗನೆ ? ದೊಡ್ಡ ಸಭೆಯನ್ನೇ ನಡೆಸುತ್ತಿಲ್ಲವಂತೆ ಏಕೆ? ಆನೆ ಕುದುರೆಗಳನ್ನೇರಿ ಎಲ್ಲೂ ಹೋಗುತ್ತಿಲ್ಲವಂತೆ ! ಬೇಟೆಗೆ ಹೋಗುತ್ತಿಲ್ಲವಂತೆ ! ರಾಜರ ವಿನೋದಕ್ರೀಡೆಗಳನ್ನು ಬಯಸುತ್ತಿಲ್ಲವಂತೆ !
ಬಂಧುಗಳನ್ನು ಸಚಿವರನ್ನೂ ನಿನ್ನ ಅರಮನೆಯೊಳಕ್ಕೆ ಸಂದರ್ಶನಕ್ಕೆ ಬರಮಾಡಿಕೊಳ್ಳುತ್ತಿಲ್ಲವಂತೆ ! ಈ ಹಗಲು ನಿನ್ನ ಭಾಗಕ್ಕೆ ಕತ್ತಲೇಕಾಯಿತು ? ಎಂದು ಧೃತರಾಷ್ಟ್ರ ದುರ್ಯೋಧನನನ್ನು ಕೇಳಿದ.
ಪದಾರ್ಥ (ಕ.ಗ.ಪ)
ವೈಹಾಳಿ-ಆನೆಕುದುರೆಗಳ ಏರಾಟ
ಮೂಲ ...{Loading}...
ದುಗುಡವೇಕೈ ಮಗನೆ ಹಿರಿಯೋ
ಲಗವನೀಯೆ ಗಡೇಕೆ ವೈಹಾ
ಳಿಗಳ ಬೇಟೆಗಳವನಿಪಾಲ ವಿನೋದ ಕೇಳಿಗಳ
ಬಗೆಯೆ ಗಡ ಬಾಂಧವರ ಸಚಿವರ
ಹೊಗಿಸೆ ಗಡ ನಿನ್ನರಮನೆಯನೀ
ಹಗಲು ನಿನಗೇಕಾಯ್ತು ಕತ್ತಲೆಯೆಂದನಂಧನೃಪ ॥25॥
೦೨೬ ಹೇಳಲಮ್ಮೆನು ನೀವು ...{Loading}...
ಹೇಳಲಮ್ಮೆನು ನೀವು ಧರ್ಮದ
ಕೂಳಿಯಲಿ ಸಿಲುಕಿದವರೆನ್ನನು
ಖೂಳನೆಂಬಿರಿ ಕಷ್ಟನೆಂಬಿರಸೂಯನೆಂಬಿರಲೆ
ಸಾಲ ಭಂಜಿಕೆಯಾಯ್ತು ತನ್ನಯ
ಬಾಳಿಕೆಯ ಬೇಳಂಬವೇತಕೆ
ಕೇಳುವಿರಿ ನೀವೆಂದು ಸುಯ್ದನು ತುಂಬಿ ಕಂಬನಿಯ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ದುರ್ಯೋಧನ “ನಾನು ಹೇಳಲಾರೆ. ನೀವು ಧರ್ಮದ ಕೂಳಿಯಲ್ಲಿ ಸಿಕ್ಕಿ ಕೊಂಡಿರುವವರು. ನಾನು ಇರುವ ವಿಷಯವನ್ನು ಹೇಳಿದರೆ ನನ್ನನ್ನು ಖೂಳನೆನ್ನುವಿರಿ. ಕಷ್ಟವೆನ್ನುವಿರಿ, ಅಸೂಯೆಯವನೆನ್ನುವರಿ ! ನನ್ನ ಬಾಳ ಬಯಕೆಯೆಲ್ಲ ಗೊಂಬೆಯಂತಾಯಿತು. ವೃಥಾ ನನ್ನನ್ನೇಕೆ ಕೇಳುವಿರಿ? ಎಂದು ಕಣ್ಣಿರು ತುಂಬಿಕೊಂಡು ನಿಟ್ಟುಸಿರು ಬಿಟ್ಟ.
ಪದಾರ್ಥ (ಕ.ಗ.ಪ)
ಕೂಳಿ-ಮೀನು ಹಿಡಿಯುವ ಬುಟ್ಟಿ
ಸಾಲ ಭಂಜಿಕೆ - ಬೊಂಬೆ / ವಿಗ್ರಹ
ಮೂಲ ...{Loading}...
ಹೇಳಲಮ್ಮೆನು ನೀವು ಧರ್ಮದ
ಕೂಳಿಯಲಿ ಸಿಲುಕಿದವರೆನ್ನನು
ಖೂಳನೆಂಬಿರಿ ಕಷ್ಟನೆಂಬಿರಸೂಯನೆಂಬಿರಲೆ
ಸಾಲ ಭಂಜಿಕೆಯಾಯ್ತು ತನ್ನಯ
ಬಾಳಿಕೆಯ ಬೇಳಂಬವೇತಕೆ
ಕೇಳುವಿರಿ ನೀವೆಂದು ಸುಯ್ದನು ತುಂಬಿ ಕಂಬನಿಯ ॥26॥
೦೨೭ ಮುನಿಚರಿತ್ರರು ನೀವು ...{Loading}...
ಮುನಿಚರಿತ್ರರು ನೀವು ರಾಜಸ
ತನದ ಮದದಲಿ ಲೋಕಯಾತ್ರೆಯ
ನನುಸರಿಸುವವರಾವು ನೀವೇ ಭೋಗ ನಿಸ್ಪೃಹರು
ಅನುದಿವಸ ರಾಗಿಗಳು ನಾವೆ
ಮ್ಮನುಮತವ ಪಾಲಿಸುವರಾರೆಂ
ದೆನುತ ಸುಯ್ದನು ಮರುಗಿ ಬೈದನು ತನ್ನ ದುಷ್ಕೃತವ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಋಷಿಯ ಚಾರಿತ್ರವುಳ್ಳವರು ನೀವು, ರಾಜಸ ಸ್ವಭಾವದಿಂದ ಮದವೇರಿ ಲೋಕದ ಜನರಂತೆ ನಡೆವುವರು ನಾವು. ನೀವು ಭೋಗದಲ್ಲಿ ನಿಸ್ಪೃಹರು, ಪ್ರತಿದಿನ ರಾಗದಿಂದ ಕೂಡಿರುವವರು ನಾವು. ನಮ್ಮ ಇಚ್ಛೆಯಂತೆ ನಡೆಯುವವರು ನಾವು. ಎಂದು ಮರುಗಿ ತನ್ನ ದುಷ್ಕರ್ಮವನ್ನೇ ಬೈದುಕೊಂಡು ನಿಟ್ಟುಸಿರು ಬಿಟ್ಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮುನಿಚರಿತ್ರರು ನೀವು ರಾಜಸ
ತನದ ಮದದಲಿ ಲೋಕಯಾತ್ರೆಯ
ನನುಸರಿಸುವವರಾವು ನೀವೇ ಭೋಗ ನಿಸ್ಪೃಹರು
ಅನುದಿವಸ ರಾಗಿಗಳು ನಾವೆ
ಮ್ಮನುಮತವ ಪಾಲಿಸುವರಾರೆಂ
ದೆನುತ ಸುಯ್ದನು ಮರುಗಿ ಬೈದನು ತನ್ನ ದುಷ್ಕೃತವ ॥27॥
೦೨೮ ಈಸು ಕಳವಳವೇನು ...{Loading}...
ಈಸು ಕಳವಳವೇನು ಚಿತ್ತದ
ಬೈಸಿಕೆಗೆ ಡೊಳ್ಳಾಸವೇಕೆ ವಿ
ಳಾಸಕೂಣೆಯವೇನು ಹೇಳಾ ನೆನಹಿನಭಿರುಚಿಯ
ವಾಸಿಗಳ ಪೈಸರವನೆನ್ನಲಿ
ಸೂಸಬಾರದೆ ನಿನ್ನ ಹರುಷಕೆ
ಪೈಸರವದೇನೆಂದು ಬೆಸಗೊಂಡನು ಸುಯೋಧನನ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟೊಂದು ಕಳವಳಕ್ಕೆ ಕಾರಣವೇನು ? ಮನಸ್ಸಿನ ದೃಢತೆ ತಗ್ಗಿತೇಕೆ? ವಿಲಾಸಕ್ಕೆ ಕೊರತೆಯೇಕುಂಟಾಯಿತು ? ನಿನ್ನ ಮನಸ್ಸಿನ ಆಸೆಯೇನೆಂಬುದನ್ನು ಹೇಳಯ್ಯ. ನಿನ್ನಾತ್ಮವಿಶ್ವಾಸ ಕಡಿಮೆಯಾಗಲು ಕಾರಣವೇನು? ನೀನು ನನ್ನಲ್ಲಿ ಹೇಳಬಾರದೆ ? ನಿನ್ನ ದುಃಖಕ್ಕೆ ಕಾರಣವೇನು ಎಂದು ಮಗನನ್ನು ಕೇಳಿದ.
ಪದಾರ್ಥ (ಕ.ಗ.ಪ)
ಬೈಸಿಕೆ-ಬೆಸುಗೆ, ಇಲ್ಲಿ ದೃಢತೆ.
ಡೊಳ್ಳಾಸ-ಮೋಸ, ವಂಚನೆ,
ಊಣೆಯ-ಕೊರತೆ,
ವಾಸಿ- ಆತ್ಮವಿಶ್ವಾಸ, ಛಲ
ಪೈಸರ-ಜಾರುವಿಕೆ, ಸೂಸು-ಪ್ರಕಟಿಸು
ಮೂಲ ...{Loading}...
ಈಸು ಕಳವಳವೇನು ಚಿತ್ತದ
ಬೈಸಿಕೆಗೆ ಡೊಳ್ಳಾಸವೇಕೆ ವಿ
ಳಾಸಕೂಣೆಯವೇನು ಹೇಳಾ ನೆನಹಿನಭಿರುಚಿಯ
ವಾಸಿಗಳ ಪೈಸರವನೆನ್ನಲಿ
ಸೂಸಬಾರದೆ ನಿನ್ನ ಹರುಷಕೆ
ಪೈಸರವದೇನೆಂದು ಬೆಸಗೊಂಡನು ಸುಯೋಧನನ ॥28॥
೦೨೯ ಏನನೆಮ್ಬೆನು ಬೊಪ್ಪ ...{Loading}...
ಏನನೆಂಬೆನು ಬೊಪ್ಪ ಕುಂತೀ
ಸೂನುಗಳ ಸಾಮಥ್ರ್ಯಪಣವನು
ದಾನವಾರಿಯ ಹಾಸುಹೊಕ್ಕಿನ ಸೌಖ್ಯ ಸಂಗತಿಯ
ತಾ ನಪುಂಸಕನಾದ ಪರಿಯನ
ದೇನ ವಿಸ್ತರಿಸುವೆನು ಲಜ್ಜಾ
ಮಾನಿನಿಗೆ ತನ್ನೊಕ್ಕತನವಿಂದಿಳಿದು ಹೋಯ್ತೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನೆಂದು ಹೇಳಲಿ ಅಪ್ಪಾ ! ಕುಂತಿಯ ಮಕ್ಕಳ ಸಾಮಥ್ರ್ಯವನ್ನು ಪಣವನ್ನು ಆ ದಾನವಾರಿಯು ಅವರೊಡನೆ ಹಾಸುಹೊಕ್ಕಾಗಿ ಬೆರೆತು ಅವರೆಲ್ಲ ಸುಖವಾಗಿರುವ ಸಂಗತಿಯನ್ನು ಅಲ್ಲದೆ ಅವರ ನಡುವೆ ನಾನು ನಪುಂಸಕನಂತಾದ ಸ್ಥಿತಿಯನ್ನು ನಾನು ಏನೆಂದು ವಿವರಿಸಲಿ ? ಎಂತಹ ಲಜ್ಜೆಗೆ ಗುರಿಯಾದೆನೆಂದರೆ ಈಗ ನಾನು ಲಜ್ಜಾಮಾನಿನಿಯೊಡನೆ ಕೂಡಿ ಬಾಳಲಾರದವನಾಗಿಬಿಟ್ಟಿದ್ದೇನೆ. (ನಾನು ಈಗ ನಾಚಿಕೆಯಿಲ್ಲದವನಾಗಿದ್ದೇನೆ.)
ಪದಾರ್ಥ (ಕ.ಗ.ಪ)
ಒಕ್ಕತನ-ಕೂಡಿಬಾಳುವಿಕೆ
ಮೂಲ ...{Loading}...
ಏನನೆಂಬೆನು ಬೊಪ್ಪ ಕುಂತೀ
ಸೂನುಗಳ ಸಾಮಥ್ರ್ಯಪಣವನು
ದಾನವಾರಿಯ ಹಾಸುಹೊಕ್ಕಿನ ಸೌಖ್ಯ ಸಂಗತಿಯ
ತಾ ನಪುಂಸಕನಾದ ಪರಿಯನ
ದೇನ ವಿಸ್ತರಿಸುವೆನು ಲಜ್ಜಾ
ಮಾನಿನಿಗೆ ತನ್ನೊಕ್ಕತನವಿಂದಿಳಿದು ಹೋಯ್ತೆಂದ ॥29॥
೦೩೦ ನೆಗೆದ ಬುಗುಟಿದೆ ...{Loading}...
ನೆಗೆದ ಬುಗುಟಿದೆ ಹಣೆಯಲವರೋ
ಲಗದ ಸಭೆಯಲಿ ನನೆದ ಸೀರೆಯ
ತೆಗೆಸಿ ಕೊಟ್ಟರು ತಮ್ಮ ಮಡಿವರ್ಗದ ನವಾಂಬರವ
ಬೆಗಡುಗೊಳಿಸಿದರೆನ್ನನವರೋ
ಲಗದ ಸೂಳೆಯರವರ ಸೂಳಿನ
ನಗೆಯ ನೆನೆ ನೆನೆದೆನ್ನ ಮನ ಜರ್ಝರಿತವಾಯ್ತೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೋಡು ನನ್ನ ಹಣೆಯ ಮೇಲೆ ಉಬ್ಬಿದ ಬುಗುಟಿದೆ, ಅವರ ಓಲಗದ ಸಭೆಯಲ್ಲಿ ನೆನೆದು ಹೋದ ನನ್ನ ವಸ್ತ್ರವನ್ನು ಬದಲಿಸಿ ಮಡಿಮಾಡಿದ ತಮ್ಮ ಹೊಸ ವಸ್ತ್ರಗಳನ್ನು ತಂದು ಉಡಿಸಿದರು. ಅವರ ಸಭೆಯಲ್ಲಿದ್ದ ವಾರಾಂಗನೆಯರು ನನ್ನನ್ನು ಬೆರಗುಗೊಳಿಸಿ ತಬ್ಬಿಬ್ಬಾಗುವಂತೆ ಮಾಡಿದರು. ಅವರು ಮತ್ತೆ ಮತ್ತೆ ನನ್ನನ್ನು ಅಪಹಾಸ್ಯಮಾಡಿ ನಗುತ್ತಿದ್ದ ನಗೆಯನ್ನು ನೆನೆದು ನನ್ನ ಮನಸ್ಸು ಜರ್ಜರಿತವಾಯಿತು ಎಂದ.
ಪದಾರ್ಥ (ಕ.ಗ.ಪ)
ಸೀರೆ-ಉಡುವ ವಸ್ತ್ರ,
ಬೆಗಡು-ಬೆರಗು
ಮೂಲ ...{Loading}...
ನೆಗೆದ ಬುಗುಟಿದೆ ಹಣೆಯಲವರೋ
ಲಗದ ಸಭೆಯಲಿ ನನೆದ ಸೀರೆಯ
ತೆಗೆಸಿ ಕೊಟ್ಟರು ತಮ್ಮ ಮಡಿವರ್ಗದ ನವಾಂಬರವ
ಬೆಗಡುಗೊಳಿಸಿದರೆನ್ನನವರೋ
ಲಗದ ಸೂಳೆಯರವರ ಸೂಳಿನ
ನಗೆಯ ನೆನೆ ನೆನೆದೆನ್ನ ಮನ ಜರ್ಝರಿತವಾಯ್ತೆಂದ ॥30॥
೦೩೧ ಇದಕೆ ಕಾರಣವೇನು ...{Loading}...
ಇದಕೆ ಕಾರಣವೇನು ಹಣೆ ನೊಂ
ದುದಕದೇನು ನಿಮಿತ್ತವೆನಲಾ
ಸದನದಲಿ ಮಯನಿತ್ತ ಸಭೆಯನು ದೇವರರಿಯಿರಲೆ
ಮುದದಿನಾ ಧರ್ಮಜನು ಘನ ಸಂ
ಪದದಲೋಲಗವಿತ್ತನಾ ದ್ರೌ
ಪದಿ ನಿಜಾನುಜ ಮಂತ್ರಿ ಸಚಿವ ಪಸಾಯಿತರು ಸಹಿತ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಇದಕ್ಕೆಲ್ಲ ಕಾರಣವೇನು ? ಹಣೆ ನೋವಾದುದಕ್ಕೆ ನಿಮಿತ್ತವೇನು” ಎಂದು ಕೇಳಿದ. ದುರ್ಯೋಧನ ನಡೆದ ಸಂಗತಿಯನ್ನು ಹೇಳಿಕೊಂಡ. “ಪಾಂಡವರಿಗೆ ಮಯನು ನಿರ್ಮಿಸಿಕೊಟ್ಟ ಸಭಾಭವನದ ವಿಷಯವನ್ನು ನೀವು ತಿಳಿದಿದ್ದೀರಲ್ಲವೇ ! ಧರ್ಮರಾಯನು ದ್ರೌಪದಿ ಹಾಗೂ ತನ್ನ ತಮ್ಮಂದಿರು, ಮಂತ್ರಿಗಳು ಸಚಿವರು ಸಾಮಂತರಾಜರೊಡಗೂಡಿ ಆ ಸಭೆಯಲ್ಲಿ
ಮಹಾವೈಭವದಿಂದ ಓಲಗ ಕೊಟ್ಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಇದಕೆ ಕಾರಣವೇನು ಹಣೆ ನೊಂ
ದುದಕದೇನು ನಿಮಿತ್ತವೆನಲಾ
ಸದನದಲಿ ಮಯನಿತ್ತ ಸಭೆಯನು ದೇವರರಿಯಿರಲೆ
ಮುದದಿನಾ ಧರ್ಮಜನು ಘನ ಸಂ
ಪದದಲೋಲಗವಿತ್ತನಾ ದ್ರೌ
ಪದಿ ನಿಜಾನುಜ ಮಂತ್ರಿ ಸಚಿವ ಪಸಾಯಿತರು ಸಹಿತ ॥31॥
೦೩೨ ಆ ಮಹಾಸಭೆ ...{Loading}...
ಆ ಮಹಾಸಭೆ ದೇವ ನಿರ್ಮಿತ
ರಾಮಣೀಯಕ ವಿವಿಧ ರತ್ನ
ಸ್ತೋಮ ತೇಜಃಪುಂಜ ಭಂಜಿತ ನಯನ ವೀಧಿಯಲಿ
ಸಾಮದಲಿ ನಮ್ಮನು ಯುಧಿಷ್ಠಿರ
ಭೂಮಿಪತಿ ಕರೆಸಿದನು ತನ್ನು
ದ್ದಾಮ ವಿಭವವನೆನಗೆ ತೋರಲು ತತ್ಸಭಾಸ್ಥಳಕೆ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಹಾಸಭೆ ದೇವನಿರ್ಮಿತವಾದುದು ರಮಣೀಯವಾದುದು ನಾನಾ ರತ್ನರಾಶಿಯಿಂದ ಮನೋಹರವಾಗಿತ್ತು. ಕಣ್ಣು ಸುಳಿದಲ್ಲೆಲ್ಲ ಅದರ ತೇಜಸ್ಸು ಕಣ್ಣನ್ನು ಕುಕ್ಕುತ್ತಿತ್ತು. ಯುಧಿಷ್ಠಿರನು ತನ್ನ ಮಹಾವೈಭವವನ್ನು ನಮಗೆ ತೋರಿಸಲೆಂದು. ನಮ್ಮನ್ನು ಸಾಮೋಪಾಯದಿಂದ ಆ ಮಹಾಸಭೆಗೆ ಕರೆಸಿದ್ದ.
ಪದಾರ್ಥ (ಕ.ಗ.ಪ)
ರಾಮಣೀಯಕ-ಮನೋಹರವಾದ
ಮೂಲ ...{Loading}...
ಆ ಮಹಾಸಭೆ ದೇವ ನಿರ್ಮಿತ
ರಾಮಣೀಯಕ ವಿವಿಧ ರತ್ನ
ಸ್ತೋಮ ತೇಜಃಪುಂಜ ಭಂಜಿತ ನಯನ ವೀಧಿಯಲಿ
ಸಾಮದಲಿ ನಮ್ಮನು ಯುಧಿಷ್ಠಿರ
ಭೂಮಿಪತಿ ಕರೆಸಿದನು ತನ್ನು
ದ್ದಾಮ ವಿಭವವನೆನಗೆ ತೋರಲು ತತ್ಸಭಾಸ್ಥಳಕೆ ॥32॥
೦೩೩ ಹರಹಿನಲಿ ಹಿರಿದಾಯ್ತು ...{Loading}...
ಹರಹಿನಲಿ ಹಿರಿದಾಯ್ತು ಕೆಂದಾ
ವರೆಯ ವನ ಬೇರೊಂದು ತಾಣದೊ
ಳುರವಣಿಯ ಬೆಳದಿಂಗಳೌಕಿದುದೊಂದು ತಾಣದಲಿ
ಹರಿವ ಯಮುನಾ ನದಿಯನಲ್ಲಿಗೆ
ತರಿಸಿದವರಾರೆನಲು ಮಣಿ ಬಂ
ಧುರದ ಬೆಳಗಿನ ಲಹರಿ ಮುರಿದುದು ತನ್ನ ಜಾಣುಮೆಯ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಕಡೆ ಕೆಂದಾವರೆಯ ವನ ವಿಸ್ತಾರವಾಗಿ ಶೋಭಿಸುತ್ತಿತ್ತು. ಇನ್ನೊಂದು ಕಡೆ ತುಂಬು ಬೆಳದಿಂಗಳು ನುಗ್ಗಿ ಬರುತ್ತಿತ್ತು. ಮತ್ತೊಂದು ಕಡೆ ನೋಡಿದರೆ ಹರಿಯುವ ಯಮುನಾ ನದಿಯನ್ನು ಇಲ್ಲಿಗೆ ತರಿಸಿದವರಾರು ಎಂಬಂತೆ ರತ್ನಗಳ ಮನೋಹರವಾದ
ಬೆಳಕಿನ ಅಲೆಗಳು ಇವುಗಳೆಲ್ಲ ನನ್ನ ಜಾಣ್ಮೆಯನ್ನು ಕೆಡಿಸಿಬಿಟ್ಟವು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹರಹಿನಲಿ ಹಿರಿದಾಯ್ತು ಕೆಂದಾ
ವರೆಯ ವನ ಬೇರೊಂದು ತಾಣದೊ
ಳುರವಣಿಯ ಬೆಳದಿಂಗಳೌಕಿದುದೊಂದು ತಾಣದಲಿ
ಹರಿವ ಯಮುನಾ ನದಿಯನಲ್ಲಿಗೆ
ತರಿಸಿದವರಾರೆನಲು ಮಣಿ ಬಂ
ಧುರದ ಬೆಳಗಿನ ಲಹರಿ ಮುರಿದುದು ತನ್ನ ಜಾಣುಮೆಯ ॥33॥
೦೩೪ ಹೊಕ್ಕ ಸಾಲಲಿ ...{Loading}...
ಹೊಕ್ಕ ಸಾಲಲಿ ಹೊಳೆವ ಮಣಿರುಚಿ
ಮುಕ್ಕಳಿಸಿದವು ಕಂಗಳನು ನಡೆ
ದಿಕ್ಕೆಲನ ನೋಡಿದರೆ ಮುರಿದೊಳಸರಿದವಾಲಿಗಳು
ಉಕ್ಕುವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ
ಡೊಕ್ಕರಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನು ಹೊಕ್ಕ ಸಾಲಿನಲ್ಲಿ ಹೊಳೆಯುತ್ತಿದ್ದ ರತ್ನಗಳ ಕಾಂತಿ ಆವರಿಸಿ ನನ್ನ ಕಣ್ಣುಗಳನ್ನು ಮುಕ್ಕಳಿಸಿದುವು. ಹಾಗೇ ಮುಂದುವರಿದು ಎರಡು ಪಕ್ಕಗಳನ್ನು ನೋಡಲು ಹೋದಾಗ ನೋಡಲಾಗದೆ ಕಣ್ಣುಗಳು ಒಳಕ್ಕೇ ಸರಿದುವು. ಸುತ್ತಮುತ್ತ ಉಕ್ಕುತ್ತಿದ್ದ ನಿರ್ಮಲ ಪ್ರಕಾಶದ ಎದುರು ನನ್ನ ಮನಸ್ಸು ದಾರಿತಪ್ಪಿತು. ನಾನಾ ಬಗೆಯ ರತ್ನಗಳ ಕಾಂತಿಯು ನನ್ನ ವಿವೇಕವನ್ನು ಬಡಿದು ಬೀಳಿಸಿತು.
ಪದಾರ್ಥ (ಕ.ಗ.ಪ)
ಇಕ್ಕೆಲ-ಎರಡೂ ಪಕ್ಕ
ಮೂಲ ...{Loading}...
ಹೊಕ್ಕ ಸಾಲಲಿ ಹೊಳೆವ ಮಣಿರುಚಿ
ಮುಕ್ಕಳಿಸಿದವು ಕಂಗಳನು ನಡೆ
ದಿಕ್ಕೆಲನ ನೋಡಿದರೆ ಮುರಿದೊಳಸರಿದವಾಲಿಗಳು
ಉಕ್ಕುವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ
ಡೊಕ್ಕರಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು ॥34॥
೦೩೫ ಹಿಡಿದವೆನ್ನೂಹೆಯನು ಮಣಿ ...{Loading}...
ಹಿಡಿದವೆನ್ನೂಹೆಯನು ಮಣಿ ರುಚಿ
ಯೆಡತರದೊಳಿಕ್ಕಿದವು ಭಿತ್ತಿಯ
ಬಿಡೆಯದಲಿ ಝಳುಪಿಸುವ ನೀಲದ ಲಳಿಯ ಲಹರಿಯಲಿ
ತಡಿಯ ಕಾಣೆನು ತಳಿತ ಕಾಂತಿಯ
ಕಡಲ ವಿಮಲ ಸ್ಪಟಿಕ ಜಲದಲಿ
ಮಿಡುಕಲಂಜಿದವಂಘ್ರಿಗಳು ನರನಾಥ ಕೇಳ್ ಎಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಣಿಗಳ ಕಾಂತಿ ನನ್ನ ಊಹೆಯನ್ನು ನಡುವೆಯೇ ಹಿಡಿದಿಕ್ಕಿತು. ಗೋಡೆಗಳ ನಡುವೆ ಝಳಪಿಸುತ್ತಿದ್ದ ನೀಲ ಮಣಿಗಳ
ಕಾಂತಿಯ ಅಲೆಗಳ ದೆಸೆಯಿಂದ ಅಲ್ಲೆಲ್ಲ ವ್ಯಾಪಿಸಿದ್ದ ಪ್ರಕಾಶದ ಕಡಲಿನ ತೀರವನ್ನು ಕಾಣಲಾಗದೆ ಹೋದೆ. ಹಾಗಾಗಿ ನಿರ್ಮಲವಾದ ಸ್ಫಟಿಕದಂತಹ ನೀರಿನಲ್ಲಿ ಹೆಜ್ಜೆಯಿಡಲು ನನ್ನ ಪಾದಗಳು ಅಂಜಿದುವು.
ಪದಾರ್ಥ (ಕ.ಗ.ಪ)
ಬಿಡಯದಲಿ-ನಡುವೆ ಅವಕಾಶವಿದ್ದಲ್ಲಿ, ಲಳಿಯ ಲಹರಿ-ಕಾಂತಿಯ ಅಲೆ, ಮಿಡುಕಲು-ಚಲಿಸಲು
ಮೂಲ ...{Loading}...
ಹಿಡಿದವೆನ್ನೂಹೆಯನು ಮಣಿ ರುಚಿ
ಯೆಡತರದೊಳಿಕ್ಕಿದವು ಭಿತ್ತಿಯ
ಬಿಡೆಯದಲಿ ಝಳುಪಿಸುವ ನೀಲದ ಲಳಿಯ ಲಹರಿಯಲಿ
ತಡಿಯ ಕಾಣೆನು ತಳಿತ ಕಾಂತಿಯ
ಕಡಲ ವಿಮಲ ಸ್ಪಟಿಕ ಜಲದಲಿ
ಮಿಡುಕಲಂಜಿದವಂಘ್ರಿಗಳು ನರನಾಥ ಕೇಳೆಂದ ॥35॥
೦೩೬ ಸ್ಥಳವೆ ಜಲರೂಪದಲಿ ...{Loading}...
ಸ್ಥಳವೆ ಜಲರೂಪದಲಿ ಜಲವೇ
ಸ್ಥಳದ ಪಾಡಿನಲಿದ್ದುದದು ಕೆಲ
ಬಲನ ಭಿತ್ತಿಯ ಕಂಬ ಕಂಬದ ನಡುವೆ ಭಿತ್ತಿಗಳು
ಹೊಳಹನೇ ಕಂಡೆನು ವಿವೇಕದ
ಕಳಿವು ಚಿತ್ತದ ಸೆರೆ ದುಹಾರದೊ
ಳಿಳಿದವಕ್ಷಿಗಳಿಂತು ಸೋತೆನು ತಂದೆ ಕೇಳ್ ಎಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ಥಳವೆ ಜಲರೂಪದಲ್ಲಿ, ಜಲವೆ ಸ್ಥಳರೂಪದಲ್ಲಿ ತೋರುತ್ತಿತ್ತು. ಅಕ್ಕಪಕ್ಕದ ಗೋಡೆಗಳ ನಡುವೆ ಕಂಬ ಇದ್ದ ಹಾಗೆ ಕಂಬಗಳ ನಡುವೆ ಗೋಡೆ ಇದ್ದ ಹಾಗೆ ಹೊಳೆಯುತ್ತಿತ್ತು. ಹಾಗಾಗಿ ಯಾವುದು ಕಂಬ ಯಾವುದು ಗೋಡೆ ತಿಳಿಯಲಾಗಲಿಲ್ಲ. ನನ್ನ ವಿವೇಕ ಕಳಚಿತು. ಚಿತ್ತ ಸೆರೆಯಾಯಿತು. ಈ ದುಹಾರದಲ್ಲಿ ನನ್ನ ಕಣ್ಣುಗಳು ಇಳಿದುವು. ಹಾಗಾಗಿ ಸೋತುಬಿಟ್ಟೆ ತಂದೆ.
ಪದಾರ್ಥ (ಕ.ಗ.ಪ)
ಭಿತ್ತಿ-ಗೋಡೆ, ದುಹಾರ-?
ಮೂಲ ...{Loading}...
ಸ್ಥಳವೆ ಜಲರೂಪದಲಿ ಜಲವೇ
ಸ್ಥಳದ ಪಾಡಿನಲಿದ್ದುದದು ಕೆಲ
ಬಲನ ಭಿತ್ತಿಯ ಕಂಬ ಕಂಬದ ನಡುವೆ ಭಿತ್ತಿಗಳು
ಹೊಳಹನೇ ಕಂಡೆನು ವಿವೇಕದ
ಕಳಿವು ಚಿತ್ತದ ಸೆರೆ ದುಹಾರದೊ
ಳಿಳಿದವಕ್ಷಿಗಳಿಂತು ಸೋತೆನು ತಂದೆ ಕೇಳೆಂದ ॥36॥
೦೩೭ ಮುನ್ದೆ ವಿಮಲ ...{Loading}...
ಮುಂದೆ ವಿಮಲ ಸ್ಫಟಿಕ ಭೂಮಿಯ
ದೊಂದು ಠಾವಿನೊಳೀಕ್ಷಿಸುತೆ ಕೊಳ
ನೆಂದು ಬಗೆದೆನು ನಿಂದು ಸಂವರಿಸಿದೆನು ಮುಂಜೆರಗ
ಅಂದು ದ್ರೌಪದಿ ಸಹಿತ ನಾರೀ
ವೃಂದ ಕೈಗಳ ಹೊಯ್ದು ಮಿಗೆ ಗೊ
ಳ್ಳೆಂದು ನಕ್ಕುದು ನೊಂದು ತಲೆವಾಗಿದೆನು ಲಜ್ಜೆಯಲಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ಒಂದೆಡೆಯಲ್ಲಿ ವಿಮಲ ಸ್ಫಟಿಕ ನೆಲವಿತ್ತು. ಅದನ್ನು ನೋಡಿ ಕೊಳವೆಂದು ಭ್ರಮಿಸಿ, ತಡೆದು ಮುಂಜೆರಗನ್ನು ಮೇಲೆತ್ತಿಕೊಂಡೆ. ಅದನ್ನು ನೋಡಿ ನಾರೀವೃಂದದೊಡನಿದ್ದ ದ್ರೌಪದಿ ಚಪ್ಪಾಳೆ ತಟ್ಟಿಕೊಂಡು ಗೊಳ್ಳೆಂದು ನಕ್ಕಳು. ನಾನು ಲಜ್ಜೆಯಿಂದ ತಲೆತಗ್ಗಿಸಿ ಬಿಟ್ಟೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮುಂದೆ ವಿಮಲ ಸ್ಫಟಿಕ ಭೂಮಿಯ
ದೊಂದು ಠಾವಿನೊಳೀಕ್ಷಿಸುತೆ ಕೊಳ
ನೆಂದು ಬಗೆದೆನು ನಿಂದು ಸಂವರಿಸಿದೆನು ಮುಂಜೆರಗ
ಅಂದು ದ್ರೌಪದಿ ಸಹಿತ ನಾರೀ
ವೃಂದ ಕೈಗಳ ಹೊಯ್ದು ಮಿಗೆ ಗೊ
ಳ್ಳೆಂದು ನಕ್ಕುದು ನೊಂದು ತಲೆವಾಗಿದೆನು ಲಜ್ಜೆಯಲಿ ॥37॥
೦೩೮ ಊಹೆಯಲಿ ತಡವರಿಸಿ ...{Loading}...
ಊಹೆಯಲಿ ತಡವರಿಸಿ ಹೆಜ್ಜೆಯ
ಗಾಹುಗತಕದೊಳಿಡುತ ಕಾಂತಿಯ
ಸೋಹೆಯರಿಯದೆ ಬೀದಿಯಲಿ ಕಂಡೆನು ಸರೋವರವ
ಆ ಹರಿಬವನು ಮುರಿವೆನೆಂದಿದ
ನೂಹಿಸದೆ ನಾ ಸ್ಫಟಿಕವೆಂದು
ತ್ಸಾಹಿಸಲು ನೀರಾಯ್ತು ನನೆದೆನು ನಾಭಿದಘ್ನದಲಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ಊಹೆಯಲ್ಲಿ ತಡವರಿಸಿ ಹೇಗೋ ಹೆಜ್ಜೆಯಿಡುತ್ತ ಮುಂದಕ್ಕೆ ಹೋದೆ. ಅಲ್ಲಿ ದಾರಿಯ ನಡುವೆ ಒಂದು ಸರೋವರವನ್ನು ಕಂಡೆ. ಆ ಕಾಂತಿಯ ಸುಳಿವನ್ನರಿಯದೆ ಅದನ್ನು ಸ್ಫಟಿಕದ ನೆಲವೆಂದೇ ಬಗೆದು, ಹಿಂದಾದ ಭಂಗವನ್ನು ಮುಚ್ಚುವೆನೆಂದು ಉತ್ಸಾಹದಿಂದ ಮುಂದುವರಿದೆ. ಅಲ್ಲಿ ನೀರಿತ್ತು. ಸೊಂಟದವರೆಗೂ ಮುಳುಗಿದೆ.
ಪದಾರ್ಥ (ಕ.ಗ.ಪ)
ಗಾಹುಗತಕ-ಭ್ರಮೆ, ಸೋಹೆ-ಸುಳಿವು, ಹರಿಬ-ಹಂಚಿಕೆ, ನಾಭಿದಘ್ನದಲಿ-ಹೊಕ್ಕಳವರೆಗೆ
ಮೂಲ ...{Loading}...
ಊಹೆಯಲಿ ತಡವರಿಸಿ ಹೆಜ್ಜೆಯ
ಗಾಹುಗತಕದೊಳಿಡುತ ಕಾಂತಿಯ
ಸೋಹೆಯರಿಯದೆ ಬೀದಿಯಲಿ ಕಂಡೆನು ಸರೋವರವ
ಆ ಹರಿಬವನು ಮುರಿವೆನೆಂದಿದ
ನೂಹಿಸದೆ ನಾ ಸ್ಫಟಿಕವೆಂದು
ತ್ಸಾಹಿಸಲು ನೀರಾಯ್ತು ನನೆದೆನು ನಾಭಿದಘ್ನದಲಿ ॥38॥
೦೩೯ ಮತ್ತೆ ಗೊಳ್ಳೆನ್ದುದು ...{Loading}...
ಮತ್ತೆ ಗೊಳ್ಳೆಂದುದು ನೃಪಾಲನ
ಮತ್ತ ಕಾಶಿನಿಯರು ಯುಧಿಷ್ಠಿರ
ನಿತ್ತ ದಿವ್ಯ ದುಕೂಲವನು ತಡಿಗಡರಿ ತೊಡಚಿದೆನು
ಬತ್ತಿತೆನ್ನಭಿಮಾನ ಜಲನಿಧಿ
ಮತ್ತೆ ಮಾರಿಯ ಮಸಕವನು ನೀ
ವ್ಚಿತ್ತವಿಸಿರೇ ಬೊಪ್ಪಯೆಂದನು ಕೌರವರ ರಾಯ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರನ ಅಂತಃಪುರದ ಸ್ತ್ರೀಯರು ಮತ್ತೆ ಗೊಳ್ಳೆಂದು ನಕ್ಕು ಹಾಸ್ಯ ಮಾಡಿದರು. ಆಗ ಧರ್ಮರಾಯ ತರಿಸಿಕೊಟ್ಟ ದಿವ್ಯ ರೇಷ್ಮೆ
ವಸ್ತ್ರಗಳನ್ನು ದಡಕ್ಕೆ ಏರಿ ಧರಿಸಿಕೊಂಡೆ. ನನ್ನ ಅಭಿಮಾನ ಸಾಗರವೇ ಬತ್ತಿಹೋಯಿತು. ಇನ್ನು ಆ ಮಾರಿಯ ಮಸಕ (ದ್ರೌಪದಿಯ ಆರ್ಭಟ) ಎಂತಹುದೆಂದು
ನೀವೇ ಯೋಚಿಸಿರಿ ಅಪ್ಪಾ !
ಪದಾರ್ಥ (ಕ.ಗ.ಪ)
ಮತ್ತಕಾಶಿನಿ-ಸುಂದರಿ, ದುಕೂಲ-ರೇಷ್ಮೆವಸ್ತ್ರ
ಮಸಕ- ಆರ್ಭಟ
ಮೂಲ ...{Loading}...
ಮತ್ತೆ ಗೊಳ್ಳೆಂದುದು ನೃಪಾಲನ
ಮತ್ತ ಕಾಶಿನಿಯರು ಯುಧಿಷ್ಠಿರ
ನಿತ್ತ ದಿವ್ಯ ದುಕೂಲವನು ತಡಿಗಡರಿ ತೊಡಚಿದೆನು
ಬತ್ತಿತೆನ್ನಭಿಮಾನ ಜಲನಿಧಿ
ಮತ್ತೆ ಮಾರಿಯ ಮಸಕವನು ನೀ
ವ್ಚಿತ್ತವಿಸಿರೇ ಬೊಪ್ಪಯೆಂದನು ಕೌರವರ ರಾಯ ॥39॥
೦೪೦ ನಮ್ಬಿಸಿದುದೊನ್ದೆಡೆಯ ...{Loading}...
ನಂಬಿಸಿದುದೊಂದೆಡೆಯ ಬಾಗಿಲು
ಬಿಂಬಿಸಿತು ಭಿತ್ತಿಯಲಿ ತತ್ಪ್ರತಿ
ಬಿಂಬವೆಂದಾನರಿಯದೊಡಹಾಯಿದೆನು ಚೌಕಿಗೆಯ
ಎಂಬೆನೇನನು ಹೊರಳಿ ನಗುವ ನಿ
ತಂಬಿನಿಯರನು ಭೀಮ ಪಾರ್ಥರ
ಡಂಬರವ ಕಂಡಸುವ ಹಿಡಿದೆನು ನೋಡಿಕೊಳ್ಳೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಕಡೆ ಗೋಡೆಯಲ್ಲಿ ಬಾಗಿಲು ಕಾಣಿಸಿತು. ಅದು ಎದುರಿನಲ್ಲಿದ್ದ ಬಾಗಿಲ ಪ್ರತಿಬಿಂಬ. ಆದರೆ ಅದೇ ನಿಜವಾದ ಬಾಗಿಲೆಂದು ನನ್ನನ್ನು ನಂಬಿಸಿತು. ಅಂಗಳವನ್ನು ದಾಟಿ ಆ ಬಾಗಿಲಲ್ಲಿ ನುಗ್ಗಿದೆ. ಆಗ ಹೊರಳಿ ಹೊರಳಿ ನಗುವ ಸ್ತ್ರೀಯರನ್ನು ಏನೆಂದು ಹೇಳಲಿ, ಭೀಮಪಾರ್ಥರ ಆಡಂಬರವನ್ನು ಏನೆಂದು ಹೇಳಲಿ. ನಾನು ಪ್ರಾಣವನ್ನು ಹಿಂಡಿಕೊಂಡೆ. ನನ್ನ ಸ್ಥಿತಿಯನ್ನು ನೀವೇ ನೋಡಿಕೊಳ್ಳಿ..
ಪದಾರ್ಥ (ಕ.ಗ.ಪ)
ಡಂಬರ-ಆಡಂಬರ
ಮೂಲ ...{Loading}...
ನಂಬಿಸಿದುದೊಂದೆಡೆಯ ಬಾಗಿಲು
ಬಿಂಬಿಸಿತು ಭಿತ್ತಿಯಲಿ ತತ್ಪ್ರತಿ
ಬಿಂಬವೆಂದಾನರಿಯದೊಡಹಾಯಿದೆನು ಚೌಕಿಗೆಯ
ಎಂಬೆನೇನನು ಹೊರಳಿ ನಗುವ ನಿ
ತಂಬಿನಿಯರನು ಭೀಮ ಪಾರ್ಥರ
ಡಂಬರವ ಕಂಡಸುವ ಹಿಡಿದೆನು ನೋಡಿಕೊಳ್ಳೆಂದ ॥40॥
೦೪೧ ನೊನ್ದುದೇ ಹಣೆ ...{Loading}...
ನೊಂದುದೇ ಹಣೆ ಮನದೊಳಗೆ ಕಡು
ನೊಂದೆನವದಿರ ನಗೆಗೆ ನಡೆದೆನು
ಮುಂದಣೋವರಿ ಬಾಗಿಲನು ಕಂಡೆನ್ನ ಮನದೊಳಗೆ
ಹಿಂದೆ ಹೇರಿದ ಭಂಗವೇ ಸಾ
ಕೆಂದು ಸುಪ್ರೌಢಿಯಲಿ ಬಾಗಿಲ
ನೊಂದು ಠಾವಿನೊಳರಸಿ ತಡವರಿಸಿದೆನು ಭಿತ್ತಿಗಳ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಣೆ ನೊಂದಿತೇ ? ಇಲ್ಲ. ಅವರು ಮಾಡಿದ ಅಪಹಾಸ್ಯಕ್ಕೆ ಮನಸ್ಸಿನಲ್ಲಿ ನೊಂದುಕೊಂಡೆ. ಮುಂದಕ್ಕೆ ನಡೆದೆ. ಒಳಕೋಣೆಯ ಬಾಗಿಲನ್ನು ನೋಡಿದೆ. ಹಿಂದೆ ಅನುಭವಿಸಿದ ಅಪಮಾನವೇ ಸಾಕೆಂದು ಮನಸ್ಸಿನಲ್ಲೇ ಯೋಚಿಸಿ ಅತಿ ಜಾಣ್ಮೆಯಿಂದ ಬಾಗಿಲಿರುವ ಸ್ಥಳವನ್ನು ನಿರ್ಧರಿಸಿ ನಡೆದರೆ ಗೋಡೆಗಳಿಗೆ ಡಿಕ್ಕಿಯಾದೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೊಂದುದೇ ಹಣೆ ಮನದೊಳಗೆ ಕಡು
ನೊಂದೆನವದಿರ ನಗೆಗೆ ನಡೆದೆನು
ಮುಂದಣೋವರಿ ಬಾಗಿಲನು ಕಂಡೆನ್ನ ಮನದೊಳಗೆ
ಹಿಂದೆ ಹೇರಿದ ಭಂಗವೇ ಸಾ
ಕೆಂದು ಸುಪ್ರೌಢಿಯಲಿ ಬಾಗಿಲ
ನೊಂದು ಠಾವಿನೊಳರಸಿ ತಡವರಿಸಿದೆನು ಭಿತ್ತಿಗಳ ॥41॥
೦೪೨ ನಗೆಗೆ ನಗೆ ...{Loading}...
ನಗೆಗೆ ನಗೆ ಕುಂಟಣಿ ವಿವೇಕದ
ಹೊಗೆಗೆ ಹೊಗೆ ಸಖಿಯಾದುದಲ್ಲಿಯ
ಹಗರಣುಗ ನಾನಾದೆನದು ನೋಟಕದ ಜನವಾಯ್ತು
ನಗುವವರ ಜರೆದನೆ ಯುಧಿಷ್ಠಿರ
ನಗೆಯ ಮರೆದನೆ ಬೊಪ್ಪ ನಿಮ್ಮಯ
ಮಗನವಸ್ಥಾರೂಪವಿದು ಚಿತ್ತವಿಸಿ ನೀವೆಂದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಗೆಗೆ ನಗೆ ಸಾಂಕ್ರಾಮಿಕವಾಗಿ ಹಬ್ಬಿತು. ವಿವೇಕದ ಹೊಗೆಗೆ ಹೊಗೆಯೇ ಗೆಳತಿಯಾಯಿತು. ನಾನು ಹಗರಣಿಗನಾದೆ. ಜನವೆಲ್ಲ ನೋಟಕರಾದರು. ನಗುವವರನ್ನು ಬೈದನೇ ಯುಧಿಷ್ಠಿರ? ತಾನೂ ನಗುವುದನ್ನು ಮರೆಯಲಿಲ್ಲ ಅವನು. ಅಪ್ಪಾ ! ನಿಮ್ಮ ಮಗನ ಅವಸ್ಥೆ ಹೀಗಾಯಿತು. ನೀವೇ ಯೋಚಿಸಿ ನೋಡಿ.
ಪದಾರ್ಥ (ಕ.ಗ.ಪ)
ಕುಂಟಣಿ-ತಲೆಹಿಡುಕಿ.
ಹಗರಣಿಗ-ನಾಟಕಪ್ರದರ್ಶನಕಾರ
ಮೂಲ ...{Loading}...
ನಗೆಗೆ ನಗೆ ಕುಂಟಣಿ ವಿವೇಕದ
ಹೊಗೆಗೆ ಹೊಗೆ ಸಖಿಯಾದುದಲ್ಲಿಯ
ಹಗರಣುಗ ನಾನಾದೆನದು ನೋಟಕದ ಜನವಾಯ್ತು
ನಗುವವರ ಜರೆದನೆ ಯುಧಿಷ್ಠಿರ
ನಗೆಯ ಮರೆದನೆ ಬೊಪ್ಪ ನಿಮ್ಮಯ
ಮಗನವಸ್ಥಾರೂಪವಿದು ಚಿತ್ತವಿಸಿ ನೀವೆಂದ ॥42॥
೦೪೩ ಒಡ್ಡವಿಸಿತೆನ್ನಾಟ ನಗೆಯೊಳ ...{Loading}...
ಒಡ್ಡವಿಸಿತೆನ್ನಾಟ ನಗೆಯೊಳ
ಗಡ್ಡ ಬಿದ್ದಳು ಪಾಂಡುಪುತ್ರರ
ಬೊಡ್ಡಿ ಬಿಂಕದಲವರು ಬಿರಿದರು ಭೀಮ ಫಲಗುಣರು
ಖಡ್ಡಿ ಗರುವೆನ್ನಿಂದ ರೋಷದ
ಗೊಡ್ಡು ನಾನಾದೆನು ವಿಘಾತಿಯ
ಬಡ್ಡಿಗಿನ್ನಕ ಬದುಕಿದೆನು ಧೃತರಾಷ್ಟ್ರ ಕೇಳ್ ಎಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನ್ನಾಟ ಪ್ರದರ್ಶನವಾಯಿತು. ಆ ಐವರು ಪಾಂಡುಪುತ್ರರ ಹಾದರಗಿತ್ತಿ ನಗೆಯೊಳಗೆ ಅಡ್ಡಬಿದ್ದಳು. ಭೀಮಾರ್ಜುನರು ಸಹ
ಗರ್ವದಿಂದ ಬೀಗಿದರು. (ಖಡ್ಡಿ ಗರುವೆನ್ನಿಂದ)? ನಾನು ರೋಷದ ಗೊಡ್ಡಾಗಿಬಿಟ್ಟೆ. ನಾನು ಅನುಭವಿಸಿದ ವಿಘಾತಿಗೆ ಬಡ್ಡಿಯನ್ನು
ತೀರಿಸಿಕೊಳ್ಳುವುದಕ್ಕಾಗಿ ಇದುವರೆಗೆ ಬದುಕಿದ್ದೇನೆ.
ಪದಾರ್ಥ (ಕ.ಗ.ಪ)
ಒಡ್ಡವಿಸಿತು-ಪ್ರದರ್ಶನವಾಯಿತು, ಬೊಡ್ಡಿ-(ಐವರಿಗೆ ಹೆಂಡತಿಯಾದ) ಆ ಹಾದರಗಿತ್ತಿ, ಖಡ್ಡಿಗರುವೆನ್ನಿಂದ-? ಅಲ್ಪವಾದದ್ದು ಮಹತ್ತಾಗಿಬಿಟ್ಟುದು ನನ್ನಿಂದಲೇ
ಮೂಲ ...{Loading}...
ಒಡ್ಡವಿಸಿತೆನ್ನಾಟ ನಗೆಯೊಳ
ಗಡ್ಡ ಬಿದ್ದಳು ಪಾಂಡುಪುತ್ರರ
ಬೊಡ್ಡಿ ಬಿಂಕದಲವರು ಬಿರಿದರು ಭೀಮ ಫಲಗುಣರು
ಖಡ್ಡಿ ಗರುವೆನ್ನಿಂದ ರೋಷದ
ಗೊಡ್ಡು ನಾನಾದೆನು ವಿಘಾತಿಯ
ಬಡ್ಡಿಗಿನ್ನಕ ಬದುಕಿದೆನು ಧೃತರಾಷ್ಟ್ರ ಕೇಳೆಂದ ॥43॥
೦೪೪ ಸಿಙ್ಗಿಯನು ಬಿತ್ತಿದೆನು ...{Loading}...
ಸಿಂಗಿಯನು ಬಿತ್ತಿದೆನು ಪಾಂಡವ
ರಂಗದಲಿ ತತ್ಫಲದ ಬೆಳಸಿನ
ಸಿಂಗಿಯಲಿ ತಾ ಸಾವೆನಲ್ಲದೊಡಗ್ನಿ ಕುಂಡದಲಿ
ಭಂಗಿಸುವೆನಾ ಫಲದೊಳೆನ್ನನು
ನುಂಗಬೇಹುದು ವಹ್ನಿ ಮೇಣೀ
ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ದೇಹದಲ್ಲಿ ಘೋರ ವಿಷವನ್ನು ಬಿತ್ತಿದೆ. ಅದು ಬೆಳೆದು ವಿಷದ ಫಲವನ್ನು ಕೊಡಲಿದೆ. ಅದರ ಸೇವನೆಯಿಂದ ನಾನು
ಸಾಯುತ್ತೇನೆ. ಅದರಿಂದಲ್ಲದಿದ್ದರೆ ಅಗ್ನಿಕುಂಡದಲ್ಲಿ ಬಿದ್ದು ಭಂಗಗೊಳ್ಳುತ್ತೇನೆ, ಆ ನನ್ನ ಕರ್ಮದ ಫಲವಾಗಿ ಅಗ್ನಿ ನನ್ನನ್ನು ನುಂಗಬೇಕು. ಇಲ್ಲದಿದ್ದರೆ ಈ ಗಂಗೆಯಲ್ಲಿ ಬಿದ್ದು ಸಾಯುತ್ತೇನೆ ಎಂದು ನಿಟ್ಟುಸಿರುಬಿಟ್ಟ.
ಪದಾರ್ಥ (ಕ.ಗ.ಪ)
ಸಿಂಗಿ-ವಿಷ
ಮೂಲ ...{Loading}...
ಸಿಂಗಿಯನು ಬಿತ್ತಿದೆನು ಪಾಂಡವ
ರಂಗದಲಿ ತತ್ಫಲದ ಬೆಳಸಿನ
ಸಿಂಗಿಯಲಿ ತಾ ಸಾವೆನಲ್ಲದೊಡಗ್ನಿ ಕುಂಡದಲಿ
ಭಂಗಿಸುವೆನಾ ಫಲದೊಳೆನ್ನನು
ನುಂಗಬೇಹುದು ವಹ್ನಿ ಮೇಣೀ
ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ ॥44॥
೦೪೫ ಆ ಯುಧಿಷ್ಠಿರ ...{Loading}...
ಆ ಯುಧಿಷ್ಠಿರ ಸಹಿತ ನೀನೇ
ರಾಯನಾಗಿರು ಮೇಣು ನಮ್ಮೀ
ತಾಯಿ ಸಂತಸಬಡಲಿ ದುಶ್ಶಾಸನನ ಪಟ್ಟದಲಿ
ರಾಯತನವೆಮಗಿಂದ್ರ ಲೋಕದ
ಲಾಯದಲಿ ದಿಟವೆಂದು ನುಡಿವರು
ಜೋಯಿಸರು ಸಾಕವರ ವಚನ ನಿರರ್ಥವಲ್ಲೆಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು “ಅಪ್ಪಾ ! ಆ ಯುಧಿಷ್ಠಿರನೊಡನೆ ಸೇರಿ ನೀನೇ ರಾಜನಾಗಿರು. ಅಥವಾ ದುಶ್ಶಾಸನನಿಗೆ ಪಟ್ಟಕಟ್ಟಿಬಿಡು, ನಮ್ಮ ಈ ತಾಯಿ ಸಂತೋಷಪಡಲಿ. ನನಗೆ ಇನ್ನು ಇಂದ್ರನ ಲೋಕದ ಕೊಟ್ಟಿಗೆಗಳಲ್ಲಿಯೇ ರಾಜತನ, ದಿಟ ಎಂದು ಜೋಯಿಸರು ನುಡಿದಿದ್ದಾರೆ, ಅದು ಸಾಕು ನನಗೆ ಅವರ ವಚನ ಎಂದೂ ಸುಳ್ಳಾಗದು." ಎಂದು ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಆ ಯುಧಿಷ್ಠಿರ ಸಹಿತ ನೀನೇ
ರಾಯನಾಗಿರು ಮೇಣು ನಮ್ಮೀ
ತಾಯಿ ಸಂತಸಬಡಲಿ ದುಶ್ಶಾಸನನ ಪಟ್ಟದಲಿ
ರಾಯತನವೆಮಗಿಂದ್ರ ಲೋಕದ
ಲಾಯದಲಿ ದಿಟವೆಂದು ನುಡಿವರು
ಜೋಯಿಸರು ಸಾಕವರ ವಚನ ನಿರರ್ಥವಲ್ಲೆಂದ ॥45॥
೦೪೬ ಪುರದಲೆಮ್ಬತ್ತೆಣ್ಟು ಸಾವಿರ ...{Loading}...
ಪುರದಲೆಂಬತ್ತೆಂಟು ಸಾವಿರ
ಧರಣಿಯಮರರು ನಿತ್ಯ ಪಡೆಯವ
ರರಸ ಕೇಳೈ ಹತ್ತು ಸಾವಿರ ಹೊನ್ನತಳಿಗೆಯಲಿ
ವರ ಯತೀಶರು ಹತ್ತು ಸಾವಿರ
ವರಮನೆಯಲುಂಬುದು ನೃಪಾಲಾ
ಧ್ವರದ ಸಿರಿಯನು ನೀವೆ ಕಂಡಿರೆಯೆಂದನಾ ಭೂಪ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಂದ್ರಪ್ರಸ್ಥ ಪುರದಲ್ಲಿ ಪ್ರತಿದಿನ ಪಡಿಯನ್ನು ಪಡೆಯುವವರು ಎಂಬತ್ತೆಂಟು ಸಾವಿರ ಬ್ರಾಹ್ಮಣರು. ಹತ್ತುಸಾವಿರ ಬ್ರಾಹ್ಮಣರು ಚಿನ್ನದ ತಟ್ಟೆಗಳಲ್ಲಿ ಊಟ ಮಾಡುತ್ತಾರೆ. ಹತ್ತು ಸಾವಿರ ಮಂದಿ ಯತೀಶ್ವರರು ಅರಮನೆಯೊಳಗೆ ಊಟಮಾಡುತ್ತಾರೆ. ರಾಜಸೂಯ ಯಾಗದ ವೈಭವವನ್ನು ನೀವೇ ಕಂಡಿದ್ದೀರಲ್ಲಾ !” ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಪುರದಲೆಂಬತ್ತೆಂಟು ಸಾವಿರ
ಧರಣಿಯಮರರು ನಿತ್ಯ ಪಡೆಯವ
ರರಸ ಕೇಳೈ ಹತ್ತು ಸಾವಿರ ಹೊನ್ನತಳಿಗೆಯಲಿ
ವರ ಯತೀಶರು ಹತ್ತು ಸಾವಿರ
ವರಮನೆಯಲುಂಬುದು ನೃಪಾಲಾ
ಧ್ವರದ ಸಿರಿಯನು ನೀವೆ ಕಂಡಿರೆಯೆಂದನಾ ಭೂಪ ॥46॥
೦೪೭ ಕೇಳಿದನು ಬಿಸುಸುಯ್ದನಕಟ ...{Loading}...
ಕೇಳಿದನು ಬಿಸುಸುಯ್ದನಕಟ ವಿ
ಕಾಳಿಸಿತೆ ಕೌರವನ ಬುದ್ಧಿ ವಿ
ಟಾಳ ಸಂಗತಿಯಾಯ್ತಲಾ ಪಿಸುಣಾರ ಕೆರಳಿಚದು
ಕೇಳು ಮಗನೇ ಧರ್ಮಪುತ್ರನ
ಮೇಲೆ ಮುನಿವರೆ ರಾಜಋಷಿ ನರ
ಪಾಲ ಮಾತ್ರವೆ ಶಿವ ಮಹಾದೇವೆಂದನಾ ಭೂಪ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಮಗನ ಮಾತನ್ನು ಕೇಳಿ ನಿಟ್ಟುಸಿರು ಬಿಟ್ಟ. ದುರ್ಯೋಧನನ ಬುದ್ಧಿ ವಿಕಳವಾಯಿತಲ್ಲ ! ಸಂಗತಿ
ಯಾಕೋ ತೀರಾ ಹೊಲಸಾಗಿಬಿಟ್ಟಿತು ! ಚಾಡಿಮಾತು ಯಾರನ್ನು ತಾನೇ ಕೆರಳಿಸುವುದಿಲ್ಲ ಎಂದುಕೊಂಡು ಮಗನಿಗೆ ತಿಳಿವಳಿಕೆ ಹೇಳಲು ಯತ್ನಿಸುತ್ತಾನೆ. “ಕೇಳು ಮಗನೇ ಧರ್ಮಪುತ್ರನಮೇಲೆ ಕೋಪಗೊಳ್ಳುತ್ತಾರೆಯೇ ? ಅವನು ಎಲ್ಲರಂತೆ ರಾಜ ಮಾತ್ರವೇ ಅಲ್ಲ, ರಾಜರ್ಷಿ ! ಮಹಾದೇವ !
ಪದಾರ್ಥ (ಕ.ಗ.ಪ)
ವಿಕಾಳಿಸು-ಘೋರವಾಗು, ವಿಟಾಳಿಸು-ಹೊಲಸಾಗು, ಪಿಸಣು-ಚಾಡಿಮಾತು
ಮೂಲ ...{Loading}...
ಕೇಳಿದನು ಬಿಸುಸುಯ್ದನಕಟ ವಿ
ಕಾಳಿಸಿತೆ ಕೌರವನ ಬುದ್ಧಿ ವಿ
ಟಾಳ ಸಂಗತಿಯಾಯ್ತಲಾ ಪಿಸುಣಾರ ಕೆರಳಿಚದು
ಕೇಳು ಮಗನೇ ಧರ್ಮಪುತ್ರನ
ಮೇಲೆ ಮುನಿವರೆ ರಾಜಋಷಿ ನರ
ಪಾಲ ಮಾತ್ರವೆ ಶಿವ ಮಹಾದೇವೆಂದನಾ ಭೂಪ ॥47॥
೦೪೮ ಸತಿಯರಲಿ ನಿಮ್ಮವ್ವೆ ...{Loading}...
ಸತಿಯರಲಿ ನಿಮ್ಮವ್ವೆ ಸುಪತಿ
ವ್ರತೆ ಮಹಾಖಳ ನೀನು ಬೀಜ
ಸ್ಥಿತಿಯಲೂಣಯವಿಲ್ಲ ನಿನ್ನಯ ಬುದ್ಧಿ ದೋಷವಿದು
ಕೃತಕವೋ ಸಹಜವೋ ನವೀನ
ಸ್ಥಿತಿಯ ಕಂಡೆನು ಶಿವ ಶಿವಾ ದು
ರ್ಮತಿಗಳಾವುದ ನೆನೆಯರೆಂದನು ಸುಯ್ದು ಧೃತರಾಷ್ಟ್ರ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸತಿಯರಲ್ಲಿ ನಿಮ್ಮ ಅವ್ವೆ ಒಳ್ಳೆಯ ಪತಿವ್ರತೆ, ನೀನು ಮಹಾ ನೀಚನಾದೆ. ಇದು ವಂಶಪಾರಂಪರ್ಯವಾಗಿ ಬಂದ ದೋಷವಲ್ಲ. ನಿನ್ನ ಬುದ್ಧಿಯದೇ ದೋಷ. ಕೃತಕವೋ ಸಹಜವೋ ಅಂತೂ ಹೊಸ ಸ್ಥಿತಿಯನ್ನು ಕಂಡಂತಾಯಿತು. ಶಿವ ಶಿವಾ ! ದುರ್ಮತಿಗಳು ಏನು ತಾನೇ ಯೋಚಿಸರು ಎನ್ನುತ್ತಾ ಧೃತರಾಷ್ಟ್ರ ನಿಟ್ಟುಸಿರು ಬಿಟ್ಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸತಿಯರಲಿ ನಿಮ್ಮವ್ವೆ ಸುಪತಿ
ವ್ರತೆ ಮಹಾಖಳ ನೀನು ಬೀಜ
ಸ್ಥಿತಿಯಲೂಣಯವಿಲ್ಲ ನಿನ್ನಯ ಬುದ್ಧಿ ದೋಷವಿದು
ಕೃತಕವೋ ಸಹಜವೋ ನವೀನ
ಸ್ಥಿತಿಯ ಕಂಡೆನು ಶಿವ ಶಿವಾ ದು
ರ್ಮತಿಗಳಾವುದ ನೆನೆಯರೆಂದನು ಸುಯ್ದು ಧೃತರಾಷ್ಟ್ರ ॥48॥
೦೪೯ ಪಾಣ್ಡುವಿನ ಮಕ್ಕಳುಗಳಾರಾ ...{Loading}...
ಪಾಂಡುವಿನ ಮಕ್ಕಳುಗಳಾರಾ
ಪಾಂಡುವಿನಲೆನ್ನಲಿ ಭೇದವ
ಕಂಡೆಲಾ ನೀನವರಿಗೇನಪ್ರಾಪ್ತವೇ ಧರಣಿ
ಉಂಡು ಬದುಕುವ ಬಹಳ ಭಾಗ್ಯರ
ಕಂಡಸೂಯಂಬಡುವ ಖಡ್ಡರ
ಭಂಡರೆನ್ನದೆ ಲೋಕ ನಿನಗಿದು ಸಾಮ್ಯವಲ್ಲೆಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಡುವಿನ ಮಕ್ಕಳು ಯಾರು ?
ಆ ಪಾಂಡುವಿನಲ್ಲಿಯೂ ನನ್ನಲ್ಲಿಯೂ ಭೇದವನ್ನು ಕಂಡೆಯಲ್ಲಾ ನೀನು ! ರಾಜ್ಯ ಅವರಿಗೆ ಪ್ರಾಪ್ತವಾಗಬೇಕಾಗಿದ್ದುದೇ ಅಲ್ಲವೆ ? ತಮ್ಮ ಪಾಡಿಗೆ ತಾವು ಉಂಡು ಬದುಕುವ ಬಹಳ ಭಾಗ್ಯವಂತರನ್ನು ಕಂಡು ಅಸೂಯೆ ಪಡುವಂತಹಹ ನೀಚರನ್ನು ಭಂಡರು ಎನ್ನುವುದಿಲ್ಲವೇ ಲೋಕ ? ನಿನಗಿದು ಯೋಗ್ಯವಲ್ಲ" ಎಂದು ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಖಡ್ಡರು-ನೀಚರು
ಮೂಲ ...{Loading}...
ಪಾಂಡುವಿನ ಮಕ್ಕಳುಗಳಾರಾ
ಪಾಂಡುವಿನಲೆನ್ನಲಿ ಭೇದವ
ಕಂಡೆಲಾ ನೀನವರಿಗೇನಪ್ರಾಪ್ತವೇ ಧರಣಿ
ಉಂಡು ಬದುಕುವ ಬಹಳ ಭಾಗ್ಯರ
ಕಂಡಸೂಯಂಬಡುವ ಖಡ್ಡರ
ಭಂಡರೆನ್ನದೆ ಲೋಕ ನಿನಗಿದು ಸಾಮ್ಯವಲ್ಲೆಂದ ॥49॥
೦೫೦ ಅಹುದು ಬೊಪ್ಪ ...{Loading}...
ಅಹುದು ಬೊಪ್ಪ ವೃತಾಭಿಮಾನದ
ಕುಹಕಿ ಹೋಗಲಿ ನಿಮ್ಮ ಚಿತ್ತಕೆ
ಬಹ ಕುಮಾರರ ಕೂಡಿ ನಡೆವುದು ಪಾಂಡುನಂದನರ
ಮಹಿಯ ಹಂಗಿಂಗೋಸುಗವೆ ಬಿ
ನ್ನಹವ ಮಾಡಿದೆನೆನಗೆ ಭಂಡಿನ
ರಹಣಿ ಬಂದುದು ಸಾಕಲೇ ಸೊಗಸಾಯ್ತು ಲೇಸೆಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೌದು ಅಪ್ಪಾ ! ವೃಥಾ ಸ್ವಾಭಿಮಾನದ ಕುಹಕಿ ನಾನು ! ನಿಮಗೆ ಪ್ರಿಯರೆನಿಸುವಂತಹ ಆ ಪಾಂಡುಪುತ್ರರೊಡನೆಯೇ ಕೂಡಿ ಬದುಕಿರಿ. ರಾಜ್ಯದ ಹಂಗಿಗೋಸ್ಕರವೇ ಬಿನ್ನಹ ಮಾಡಿಕೊಂಡ ನನಗೆ ಭಂಡತನದ ಬಾಳು ಬಂದಿತು. ಸಾಕಲ್ಲವೇ ? ಸೊಗಸಾಯ್ತು. ಒಳ್ಳೆಯದು ! ಎಂದ ದುರ್ಯೋಧನ.
ಪದಾರ್ಥ (ಕ.ಗ.ಪ)
ಬಂಡಿನ ರಹಣಿ - ಬಂಡತನದ ಹೊಂದಾಣಿಕೆ
ಮೂಲ ...{Loading}...
ಅಹುದು ಬೊಪ್ಪ ವೃತಾಭಿಮಾನದ
ಕುಹಕಿ ಹೋಗಲಿ ನಿಮ್ಮ ಚಿತ್ತಕೆ
ಬಹ ಕುಮಾರರ ಕೂಡಿ ನಡೆವುದು ಪಾಂಡುನಂದನರ
ಮಹಿಯ ಹಂಗಿಂಗೋಸುಗವೆ ಬಿ
ನ್ನಹವ ಮಾಡಿದೆನೆನಗೆ ಭಂಡಿನ
ರಹಣಿ ಬಂದುದು ಸಾಕಲೇ ಸೊಗಸಾಯ್ತು ಲೇಸೆಂದ ॥50॥
೦೫೧ ತಾಯೆ ನೇಮವಗೊಣ್ಡೆನಯ್ಯಂ ...{Loading}...
ತಾಯೆ ನೇಮವಗೊಂಡೆನಯ್ಯಂ
ಗಾ ಯುಧಿಷ್ಠಿರನಾತ್ಮಜನಲೇ
ವಾಯುಸುತ ನರ ನಕುಲ ಸಹದೇವರು ಕುಮಾರರಲೆ
ಈ ಯುಗದಲಿನ್ನವರ ಸಂತತಿ
ದಾಯ ಭಾಗಿಗಳಾಗಿ ಬದುಕಲಿ
ರಾಯರಿಲ್ಲಾ ಮತ್ತೆ ನಮ್ಮನು ರಕ್ಷಿಸುವರೆಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾಯೆ, ನಿನ್ನ ಅಪ್ಪಣೆಯನ್ನೂ ಪಡೆಯುತ್ತಿದ್ದೇನೆ. ಅಯ್ಯನಿಗೆ ಆ ಯುಧಿಷ್ಠಿರನೇ ಮಗನಲ್ಲವೇ ? ಭೀಮ, ಅರ್ಜುನ, ನಕುಲ, ಸಹದೇವರೇ ಕುಮಾರರಲ್ಲವೆ ? ಈ ಯುಗದಲ್ಲಿ ಇನ್ನು ಅವರ ಸಂತತಿಯೇ ಪಿತ್ರಾರ್ಜಿತವಾದ ಈ ರಾಜ್ಯಕ್ಕೆ ಭಾಗಿಗಳಾಗಿ ಬದುಕಲಿ. ಅವರೇ ತಾನೇ ನಮ್ಮನ್ನು ರಕ್ಷಿಸುವರು. ಬೇರೆ ಯಾವ ರಾಜರೂ ಅಲ್ಲವಲ್ಲ.” ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ತಾಯೆ ನೇಮವಗೊಂಡೆನಯ್ಯಂ
ಗಾ ಯುಧಿಷ್ಠಿರನಾತ್ಮಜನಲೇ
ವಾಯುಸುತ ನರ ನಕುಲ ಸಹದೇವರು ಕುಮಾರರಲೆ
ಈ ಯುಗದಲಿನ್ನವರ ಸಂತತಿ
ದಾಯ ಭಾಗಿಗಳಾಗಿ ಬದುಕಲಿ
ರಾಯರಿಲ್ಲಾ ಮತ್ತೆ ನಮ್ಮನು ರಕ್ಷಿಸುವರೆಂದ ॥51॥
೦೫೨ ಅರಸ ಧರ್ಮಿಷ್ಠನು ...{Loading}...
ಅರಸ ಧರ್ಮಿಷ್ಠನು ಯುಧಿಷ್ಠಿರ
ಧರಣಿಪತಿಯುತ್ತಮನು ಪವನಜ
ನರರು ವಿನಯಾನ್ವಿತರು ನೀವೇ ಪುತ್ರವತ್ಸಲರು
ಧರಣಿಗಾವಿನ್ನೈಸಲೇ ನೂ
ರ್ವರು ಕುಮಾರರು ಹೊರಗೆ ನಿಮ್ಮಯ
ಕರುಣವೇ ಸಾಮ್ರಾಜ್ಯ ನಮ್ಮನು ಬೀಳುಗೊಡಿರೆಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರ ರಾಜ ಧರ್ಮಿಷ್ಠ. ಯುಧಿಷ್ಠಿರ ರಾಜ ಅತ್ಯುತ್ತಮನಾದವನು. ಭೀಮ ಅರ್ಜುನರು ವಿನಯವಂತರು. ನೀವೇ ಪುತ್ರವಾತ್ಸಲ್ಯವುಳ್ಳವರು. ಇನ್ನು ನಾವು ನೂರ್ವರು ಕೌರವರು ಮಾತ್ರ ಈ ರಾಜ್ಯಕ್ಕೆ ಹೊರತಾದವರು. ನಿಮ್ಮ ಕರುಣೆಯೇ ನಮ್ಮ ಸಾಮ್ರಾಜ್ಯ. ನಮ್ಮನ್ನು ಬೀಳ್ಕೊಡಿರಿ” ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಸ ಧರ್ಮಿಷ್ಠನು ಯುಧಿಷ್ಠಿರ
ಧರಣಿಪತಿಯುತ್ತಮನು ಪವನಜ
ನರರು ವಿನಯಾನ್ವಿತರು ನೀವೇ ಪುತ್ರವತ್ಸಲರು
ಧರಣಿಗಾವಿನ್ನೈಸಲೇ ನೂ
ರ್ವರು ಕುಮಾರರು ಹೊರಗೆ ನಿಮ್ಮಯ
ಕರುಣವೇ ಸಾಮ್ರಾಜ್ಯ ನಮ್ಮನು ಬೀಳುಗೊಡಿರೆಂದ ॥52॥
೦೫೩ ಆಯ ಛಲವಭಿಮಾನ ...{Loading}...
ಆಯ ಛಲವಭಿಮಾನ ಹೋಗಲಿ
ಕಾಯಬೇಕೆಂಬರೆ ನೃಪಾಲರ
ಬಾಯ ತಂಬುಲ ತಿಂದು ಹೊರೆವೆವು ಬೆಂದ ಬಸುರುಗಳ
ಆಯ ಛಲವಾಚಂದ್ರತಾರಕ
ಕಾಯವಧ್ರುವವೆಂಬಡಿದಕೆ ಸ
ಹಾಯವಿದೆಲಾ ಕಾಲಕೂಟ ಕಠೋರ ನದಿಯೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಯ, ಛಲ, ಅಭಿಮಾನ ಹೋದರೂ ಹೋಗಲಿ. ಈ ದೇಹವನ್ನು ರಕ್ಷಿಸಿಕೊಳ್ಳಬೇಕೆನ್ನುವುದಾದರೆ ರಾಜರುಗಳ ಬಾಯ ತಂಬುಲವನ್ನು ತಿಂದು ಈ ಬೆಂದ ಬಸಿರುಗಳನ್ನು ಕಾಪಾಡಿಕೊಳ್ಳುತ್ತೇವೆ. ಕ್ಷತ್ರಿಯನಿಗೆ ಆಯ, ಛಲಗಳು ಚಂದ್ರ, ನಕ್ಷತ್ರಗಳಿರುವವರೆಗೂ ಇರುವಂತಹವೆಂದೂ ಈ ದೇಹ ಅಶಾಶ್ವತವಾದುದೆಂದೂ ಹೇಳುವಂತಿದ್ದರೆ ಈ ದೇಹತ್ಯಾಗಕ್ಕೆ ಸಹಾಯ ಇದ್ದೇ ಇದೆಯಲ್ಲಾ ಕಾಲಕೂಟದ ಕಠೋರ ನದಿ !
ಪದಾರ್ಥ (ಕ.ಗ.ಪ)
ಆಚಂದ್ರತಾರಕ-ಚಂದ್ರ ನಕ್ಷತ್ರಗಳಿರುವಷ್ಟು ಕಾಲ
ಅಧ್ರುವ - ಶಾಶ್ವತವಲ್ಲದ್ದು
ಮೂಲ ...{Loading}...
ಆಯ ಛಲವಭಿಮಾನ ಹೋಗಲಿ
ಕಾಯಬೇಕೆಂಬರೆ ನೃಪಾಲರ
ಬಾಯ ತಂಬುಲ ತಿಂದು ಹೊರೆವೆವು ಬೆಂದ ಬಸುರುಗಳ
ಆಯ ಛಲವಾಚಂದ್ರತಾರಕ
ಕಾಯವಧ್ರುವವೆಂಬಡಿದಕೆ ಸ
ಹಾಯವಿದೆಲಾ ಕಾಲಕೂಟ ಕಠೋರ ನದಿಯೆಂದ ॥53॥
೦೫೪ ಅರಸನಭ್ಯುದಯವನು ಭೀಮನ ...{Loading}...
ಅರಸನಭ್ಯುದಯವನು ಭೀಮನ
ಧರಧುರವನರ್ಜುನನ ಬಿಂಕವ
ನರಸಿಯಾಟೋಪವನು ಮಾದ್ರೀಸುತರ ಸಂಭ್ರಮವ
ಹೊರೆಯ ಧೃಷ್ಟದ್ಯುಮ್ನ ದ್ರುಪದಾ
ದ್ಯರ ವೃಥಾಡಂಬರವ ಕಂಡೆದೆ
ಬಿರಿದುದಳುಕಿದೆನಳುಕಿದೆನು ಸಂತವಿಸಲರಿದೆಂದ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರ್ಮರಾಜನ ಅಭ್ಯುದಯವನ್ನೂ ಭೀಮನ
ಆರ್ಭಟವನ್ನೂ ಅರ್ಜುನನ ಬಿಂಕವನ್ನೂ, ಅರಸಿಯಾದ ದ್ರೌಪದಿಯ ಆಡಂಬರವನ್ನೂ, ಮಾದ್ರೀಸುತರಾದ ನಕುಲಸಹದೇವರ
ಸಂಭ್ರಮವನ್ನೂ ಅವರ ಬಳಿಯಲ್ಲೇ ಇದ್ದ ದೃಷ್ಟಧ್ಯುಮ್ನ ದ್ರುಪದ ಮೊದಲಾದವರ ವ್ಯರ್ಥವಾದ ಆಡಂಬರವನ್ನೂ ಕಂಡು ನನ್ನ ಹೃದಯ ಬಿರಿಯಿತು. ಅಂಜಿದೆ ಅಂಜಿದೆ. ಸಂತೈಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ” ಎಂದು ದುರ್ಯೋಧನನು ನುಡಿದ.
ಪದಾರ್ಥ (ಕ.ಗ.ಪ)
ಧರಧುರ-ಆರ್ಭಟ
ಮೂಲ ...{Loading}...
ಅರಸನಭ್ಯುದಯವನು ಭೀಮನ
ಧರಧುರವನರ್ಜುನನ ಬಿಂಕವ
ನರಸಿಯಾಟೋಪವನು ಮಾದ್ರೀಸುತರ ಸಂಭ್ರಮವ
ಹೊರೆಯ ಧೃಷ್ಟದ್ಯುಮ್ನ ದ್ರುಪದಾ
ದ್ಯರ ವೃಥಾಡಂಬರವ ಕಂಡೆದೆ
ಬಿರಿದುದಳುಕಿದೆನಳುಕಿದೆನು ಸಂತವಿಸಲರಿದೆಂದ ॥54॥
೦೫೫ ಕರಗಿದಳು ಗಾನ್ಧಾರಿ ...{Loading}...
ಕರಗಿದಳು ಗಾಂಧಾರಿ ಕಂಬನಿ
ದುರುಗಲಲಿ ಧೃತರಾಷ್ಟ್ರನೆದೆ ಜ
ರ್ಝರಿತವಾದುದು ಮಗನ ಮಾತಿನ ಮುಸಲ ಹತಿಗಳಲಿ
ಸುರಿವ ನಯನಾಂಬುಗಳ ಮೂಗಿನ
ಬೆರಳ ತೂಗುವ ಮಕುಟದವನೀ
ಶ್ವರನು ಮೌನದೊಳಿದ್ದನೊಂದು ವಿಗಳಿಗೆ ಮಾತ್ರದಲಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಣ್ಣೀರು ತುಂಬಿ ಗಾಂಧಾರಿ ಕರಗಿಹೋದಳು. ಧೃತರಾಷ್ಟ್ರನ ಹೃದಯವು ಮಗನ ಮಾತುಗಳ ಒನಕೆಯ ಪೆಟ್ಟುಗಳಿಂದ
ಜರ್ಝರಿತವಾಯಿತು. ಅವನ ಕಣ್ಗಳಲ್ಲಿ ಸಹ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ಮೂಗಿನ ಮೇಲೆ ಬೆರಳಿಟ್ಟು ಕಿರೀಟದ ತಲೆಯನ್ನು ತೂಗುತ್ತಾ ಇದಕ್ಕೇನು ಮಾಡುವುದು ಎಂದು ಒಂದು ವಿಗಳಿಗೆ ಮಾತ್ರ ಚಿಂತಿಸುತ್ತಾ ಮೌನವಾಗಿದ್ದ.
ಪದಾರ್ಥ (ಕ.ಗ.ಪ)
ಮುಸಲಹತಿ-ಒನಕೆಯ ಪೆಟ್ಟು, ಮಕುಟ-ಕಿರೀಟ
ಮೂಲ ...{Loading}...
ಕರಗಿದಳು ಗಾಂಧಾರಿ ಕಂಬನಿ
ದುರುಗಲಲಿ ಧೃತರಾಷ್ಟ್ರನೆದೆ ಜ
ರ್ಝರಿತವಾದುದು ಮಗನ ಮಾತಿನ ಮುಸಲ ಹತಿಗಳಲಿ
ಸುರಿವ ನಯನಾಂಬುಗಳ ಮೂಗಿನ
ಬೆರಳ ತೂಗುವ ಮಕುಟದವನೀ
ಶ್ವರನು ಮೌನದೊಳಿದ್ದನೊಂದು ವಿಗಳಿಗೆ ಮಾತ್ರದಲಿ ॥55॥
೦೫೬ ಮಾತು ಸೊಗಸದಲಾ ...{Loading}...
ಮಾತು ಸೊಗಸದಲಾ ವೃಥಾ ನೀ
ವೇತಕೆನ್ನನು ಕರೆಸಿದಿರಿ ನಿ
ಮ್ಮಾತಗಳು ಭೀಮಾರ್ಜುನರು ಸಹಿತೀ ಮಹೀತಳವ
ತಾತ ನೀವಾಳುವುದು ತಾಯೆ ಸು
ನೀತನಾ ಧರ್ಮಜನು ಧರ್ಮ ವಿ
ಘಾತಕರು ನಾವೆಮ್ಮ ಕಳುಹುವುದೆನುತ ಹೊರವಂಟ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನ್ನ ಮಾತು ನಿಮಗೆ ಪ್ರಿಯವಾಗಲಿಲ್ಲವಲ್ಲವೇ ? ವೃಥಾ ನನ್ನನ್ನೇಕೆ ಕರೆಸಿದಿರಿ ? ಅಪ್ಪಾ, ನಿಮ್ಮವರಾದ ಭೀಮಾರ್ಜುನಾದಿಗಳೊಡನೆ ರಾಜ್ಯವನ್ನು ಆಳಿ. ಅಮ್ಮಾ, ಆ ಧರ್ಮರಾಯ ಮಹಾ ನೀತಿವಂತ. ನಾವೋ ಧರ್ಮವಿಘಾತಕರು. ಆದ್ದರಿಂದ ನಮ್ಮನ್ನು ಅಟ್ಟಿಬಿಡಿ" ಎಂದು ದುರ್ಯೋಧನ ಹೊರಟುಬಿಟ್ಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮಾತು ಸೊಗಸದಲಾ ವೃಥಾ ನೀ
ವೇತಕೆನ್ನನು ಕರೆಸಿದಿರಿ ನಿ
ಮ್ಮಾತಗಳು ಭೀಮಾರ್ಜುನರು ಸಹಿತೀ ಮಹೀತಳವ
ತಾತ ನೀವಾಳುವುದು ತಾಯೆ ಸು
ನೀತನಾ ಧರ್ಮಜನು ಧರ್ಮ ವಿ
ಘಾತಕರು ನಾವೆಮ್ಮ ಕಳುಹುವುದೆನುತ ಹೊರವಂಟ ॥56॥
೦೫೭ ಎಲೆಗೆ ಕರೆಯಾ ...{Loading}...
ಎಲೆಗೆ ಕರೆಯಾ ಪಾಪಿ ಕೌರವ
ಕುಲ ಕುಠಾರನ ನಿನ್ನ ಮಗನೊಡ
ನಳಿವೆನೈಸಲೆ ಪಾಂಡುಪುತ್ರರ ವೈರ ಬಂಧದಲಿ
ತಿಳುಹಿ ತಾಯೆನಲಾಕೆ ಶಕುನಿಯ
ಕಳುಹಿ ಕರೆಸಿದಡಾತ ಮರಳಿದ
ನಳಲುದೊರೆಯಲಿ ಮೂಡಿ ಮುಳುಗಿದನಂದು ಧೃತರಾಷ್ಟ್ರ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನು ತನ್ನ ಪತ್ನಿಗೆ “ಲೇ ಕರೆಯೇ ಆ ಪಾಪಿಯನ್ನು ಕೌರವಕುಲಕ್ಕೆ ಕೊಡಲಿಯಂತೆ ಇರುವವನನ್ನು ! ಪಾಂಡುಪುತ್ರರ ವೈರವನ್ನು ಕಟ್ಟಿಕೊಂಡು ನಿನ್ನ ಮಗನ ಜೊತೆಯಲ್ಲೇ ನಾನು ನಾಶವಾಗುತ್ತೇನೆ. ಅವನಿಗೆ ಬುದ್ಧಿ ಹೇಳಿ ಕರೆದುಕೊಂಡು ಬಾ ಎಂದ. ಗಾಂಧಾರಿ ಶಕುನಿಯನ್ನು ಕಳಿಸಿ ಮಗನನ್ನು ಕರೆತರಿಸಿದಳು. ಅವನು ಬಂದ. ಧರ್ಮಸಂಕಟಕ್ಕೊಳಗಾದ ಧೃತರಾಷ್ಟ್ರ ದುಃಖದ ತೊರೆಯಲ್ಲಿ ಮೂಡಿ ಮುಳುಗಿದ.
ಪದಾರ್ಥ (ಕ.ಗ.ಪ)
ಅಳಲುದೊರೆ-ದುಃಖದ ತೊರೆ
ಮೂಲ ...{Loading}...
ಎಲೆಗೆ ಕರೆಯಾ ಪಾಪಿ ಕೌರವ
ಕುಲ ಕುಠಾರನ ನಿನ್ನ ಮಗನೊಡ
ನಳಿವೆನೈಸಲೆ ಪಾಂಡುಪುತ್ರರ ವೈರ ಬಂಧದಲಿ
ತಿಳುಹಿ ತಾಯೆನಲಾಕೆ ಶಕುನಿಯ
ಕಳುಹಿ ಕರೆಸಿದಡಾತ ಮರಳಿದ
ನಳಲುದೊರೆಯಲಿ ಮೂಡಿ ಮುಳುಗಿದನಂದು ಧೃತರಾಷ್ಟ್ರ ॥57॥
೦೫೮ ಏನ ನೆನೆದೈ ...{Loading}...
ಏನ ನೆನೆದೈ ಮಗನೆ ಕುಂತೀ
ಸೂನುಗಳ ರಾಜ್ಯಾಪಹಾರದೊ
ಳೇನು ಬುದ್ಧಿ ವಿಳಾಸವಾವುದು ಕಾರ್ಯಗತಿ ನಿನಗೆ
ದಾನದಲಿ ಮೇಣ್ ಸಾಮದಲಿ ಭೇ
ದಾನುಮತದಲಿ ದಂಡದಲಿ ನೀ
ವೇನ ನಿಶ್ಚೈಸಿದಿರಿ ಹೇಳಿನ್ನಂಜಬೇಡೆಂದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನನ್ನು ಯೋಚಿಸಿದೆಯೋ ಮಗನೇ. ಕುಂತಿಯ ಮಕ್ಕಳ ರಾಜ್ಯವನ್ನು ಅಪಹರಿಸುವ ವಿಷಯದಲ್ಲಿ ನಿನ್ನ ಬುದ್ಧಿಯ ವಿಲಾಸವೇನು, ನಿನ್ನ ಕಾರ್ಯಗತಿಯೇನು ? ದಾನವನ್ನು ಬಳಸುವೆಯೋ, ಸಾಮವನ್ನು ಬಳಸುವೆಯೋ, ಭೇದವನ್ನು ಬಳಸುವೆಯೋ, ದಂಡವನ್ನು ಬಳಸುವೆಯೋ ? ನೀವು ಏನನ್ನು ನಿಶ್ಚಯಿಸಿದ್ದೀರಿ ? ಹೇಳಿ, ಅಂಜಬೇಡಿ ಎಂದ ಧೃತರಾಷ್ಟ್ರ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಏನ ನೆನೆದೈ ಮಗನೆ ಕುಂತೀ
ಸೂನುಗಳ ರಾಜ್ಯಾಪಹಾರದೊ
ಳೇನು ಬುದ್ಧಿ ವಿಳಾಸವಾವುದು ಕಾರ್ಯಗತಿ ನಿನಗೆ
ದಾನದಲಿ ಮೇಣ್ ಸಾಮದಲಿ ಭೇ
ದಾನುಮತದಲಿ ದಂಡದಲಿ ನೀ
ವೇನ ನಿಶ್ಚೈಸಿದಿರಿ ಹೇಳಿನ್ನಂಜಬೇಡೆಂದ ॥58॥
೦೫೯ ತಿನ್ದ ವಿಷವಳ್ಕಿದವು ...{Loading}...
ತಿಂದ ವಿಷವಳ್ಕಿದವು ಮಡುವಿನೊ
ಳಂದು ಬಿಸುಟರೆ ಮುಳುಗಿ ಸುಖದಲಿ
ಮಿಂದು ಹೊರವಂಟರು ಮಹಾಗ್ನಿಯ ಭವನ ಭಂಗದಲಿ
ಒಂದು ಕೂದಲು ಸೀಯದನಿಬರು
ಬಂದರಿವು ಮೊದಲಾದ ಕೃತ್ರಿಮ
ದಿಂದ ಪಾಂಡವರಳಿದುದಿಲ್ಲಿದಕೇನು ಹದನೆಂದ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ವಿಷವಿಕ್ಕಿದಾಗ ಅವರು ಅರಗಿಸಿಕೊಂಡರು. ಮಡುವಿನಲ್ಲಿ ಬಿಸುಟರೆ ಮುಳುಗಿದರೂ ಸುಖವಾಗಿ ಸ್ನಾನಮಾಡಿ ಎದ್ದು ಹೊರಕ್ಕೆ ಬಂದರು. ಅರಗಿನ ಮನೆಯಲ್ಲಿ ಮಹಾಗ್ನಿಯ ಭಂಗದಿಂದ ನಾಶಮಾಡಲೆತ್ನಿಸಿದಾಗ ಒಂದು ಕೂದಲೂ ಸೀಯದಂತೆ ಅಷ್ಟು ಮಂದಿಯೂ ಸುರಕ್ಷಿತವಾಗಿ ಉಳಿದರು. ಇವೇ ಮೊದಲಾದ ಮೋಸಗಳಿಂದ ಪಾಂಡವರು ನಾಶವಾಗುವುದಿಲ್ಲ. ಆದ್ದರಿಂದ ಇದಕ್ಕೇನು ಉಪಾಯ ಮಾಡುವಿರಿ-ಎಂದು ಕೇಳಿದ.
ಮೂಲ ...{Loading}...
ತಿಂದ ವಿಷವಳ್ಕಿದವು ಮಡುವಿನೊ
ಳಂದು ಬಿಸುಟರೆ ಮುಳುಗಿ ಸುಖದಲಿ
ಮಿಂದು ಹೊರವಂಟರು ಮಹಾಗ್ನಿಯ ಭವನ ಭಂಗದಲಿ
ಒಂದು ಕೂದಲು ಸೀಯದನಿಬರು
ಬಂದರಿವು ಮೊದಲಾದ ಕೃತ್ರಿಮ
ದಿಂದ ಪಾಂಡವರಳಿದುದಿಲ್ಲಿದಕೇನು ಹದನೆಂದ ॥59॥
೦೬೦ ನೀವು ಚಿತ್ತವಿಸಿದೊಡೆ ...{Loading}...
ನೀವು ಚಿತ್ತವಿಸಿದೊಡೆ ನೆತ್ತದೊ
ಳಾವು ಸೋಲಿಸಿ ಕೊಡುವೆವವರನು
ನೀವು ಕರೆಸುವುದಿಲ್ಲಿಗುಚಿತ ಪ್ರೀತಿವಚನದಲಿ
ನಾವು ಜಾಣರು ಜೀಯ ಜೂಜಿನ
ಜೀವ ಕಲೆಯಲಿ ಧರ್ಮ ಸುತನಿದ
ನಾವ ಹವಣೆಂದರಿಯನಾತನ ಜಯಿಸಬಹುದೆಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಮನಸ್ಸು ಮಾಡಿದರೆ ಪಗಡೆಯ ಜೂಜಿನಿಂದ ನಾವು ಅವರನ್ನು ಗೆದ್ದು ಕೊಡುತ್ತೇವೆ. ನೀವು ಯಥಾಯೋಗ್ಯ ಪ್ರೀತಿಯ ಮಾತುಗಳಿಂದ ಅವರನ್ನು ಇಲ್ಲಿಗೆ ಕರೆಸಿಕೊಡಿ. ಅಪ್ಪಾ ! ಜೂಜಿನ ಜೀವಕಲೆಯಲ್ಲಿ ನಾವು ಜಾಣರು, ಧರ್ಮರಾಜ ಅದು ಏನು ಎತ್ತ ಎಂಬುದನ್ನು ಅರಿಯ. ಅವನನ್ನು ನಾವು ಜಯಿಸಿಬಿಡಬಹುದು ಎಂದ ದುರ್ಯೋಧನ.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೀವು ಚಿತ್ತವಿಸಿದೊಡೆ ನೆತ್ತದೊ
ಳಾವು ಸೋಲಿಸಿ ಕೊಡುವೆವವರನು
ನೀವು ಕರೆಸುವುದಿಲ್ಲಿಗುಚಿತ ಪ್ರೀತಿವಚನದಲಿ
ನಾವು ಜಾಣರು ಜೀಯ ಜೂಜಿನ
ಜೀವ ಕಲೆಯಲಿ ಧರ್ಮ ಸುತನಿದ
ನಾವ ಹವಣೆಂದರಿಯನಾತನ ಜಯಿಸಬಹುದೆಂದ ॥60॥
೦೬೧ ಅಹುದು ತಪ್ಪೇನಿದುವೆ ...{Loading}...
ಅಹುದು ತಪ್ಪೇನಿದುವೆ ಸಾಧನ
ವಹುದು ವಿದುರನ ಬುದ್ಧಿಗಭಿಮತ
ವಹಡೆ ಕರೆಸುವೆವೈಸಲೇ ಬೆಸಸುವೆನು ವಿದುರಂಗೆ
ಕುಹಕವಾತನಲಿಲ್ಲ ನೋಡುವ
ನಿಹಪರತ್ರದ ಹಿತವನಿದ ನಿ
ರ್ವಹಿಸಿ ಕೊಡುವರೆ ಮಂತ್ರವೆಂದನು ಮಗಗೆ ಧೃತರಾಷ್ಟ್ರ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೌದು ಅದರಲ್ಲಿ ತಪ್ಪೇನು. ಇದೇ ಸರಿಯಾದ ಸಾಧನ. ವಿದುರನ ಬುದ್ಧಿಗೆ ಒಪ್ಪಿಗೆಯಾದರೆ ಕರೆಸೋಣ. ವಿದುರನಿಗೆ ಹೇಳುತ್ತೇನೆ. ಅವನಲ್ಲಿ ಕೆಟ್ಟ ಆಲೋಚನೆಯೇನಿಲ್ಲ. ಇಹ ಮತ್ತು ಪರ ಎರಡರ ಕ್ಷೇಮವನ್ನು ನೋಡುತ್ತಾನೆ. ಇದನ್ನು ನಿರ್ವಹಿಸಲು ಅವನೇ ಸರಿ. ಇದೇ ಸರಿಯಾದ ಮಂತ್ರಾಲೋಚನೆ ಎಂದ ಮಗನಿಗೆ ಧೃತರಾಷ್ಟ್ರ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅಹುದು ತಪ್ಪೇನಿದುವೆ ಸಾಧನ
ವಹುದು ವಿದುರನ ಬುದ್ಧಿಗಭಿಮತ
ವಹಡೆ ಕರೆಸುವೆವೈಸಲೇ ಬೆಸಸುವೆನು ವಿದುರಂಗೆ
ಕುಹಕವಾತನಲಿಲ್ಲ ನೋಡುವ
ನಿಹಪರತ್ರದ ಹಿತವನಿದ ನಿ
ರ್ವಹಿಸಿ ಕೊಡುವರೆ ಮಂತ್ರವೆಂದನು ಮಗಗೆ ಧೃತರಾಷ್ಟ್ರ ॥61॥
೦೬೨ ಖೂಳರಲಿ ಸತ್ಕಳೆಗಳನು ...{Loading}...
ಖೂಳರಲಿ ಸತ್ಕಳೆಗಳನು ನೆರೆ
ಕೇಳದವರಲಿ ಮಂತ್ರ ಬೀಜವ
ನಾಲಿಯಿಲ್ಲದವಂಗೆ ರೂಪು ವಿಲಾಸ ವಿಭ್ರಮವ
ಹೇಳುವಂತಿರೆ ನಿಮ್ಮ ವಿದುರನ
ಕೇಳಿಸಿದರಾ ಕಾರ್ಯಗತಿಗೆ ವಿ
ತಾಳವಾಗದೆ ಬೊಪ್ಪಯೆಂದನು ನಗುತ ಕುರುರಾಯ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀಚರಿಗೆ ಶ್ರೇಷ್ಠವಾದ ಕಲೆಗಳನ್ನು ಉಪದೇಶಿಸಿದರೆ,
ಕಿವುಡರಾದವರಿಗೆ ಬೀಜ ಮಂತ್ರವನ್ನು ಹೇಳಿದರೆ, ಕಣ್ಣಿಲ್ಲದವನಿಗೆ ರೂಪ ವಿಲಾಸ ವಿಭ್ರಮವನ್ನು ವರ್ಣಿಸಿದರೆ ಹೇಗೋ ಹಾಗೆ ವಿದುರನಿಗೆ ಈ ವಿಷಯವನ್ನು ತಿಳಿಸುವುದು. ಇದರಿಂದ ನಮ್ಮ ಕೆಲಸ ಕೆಟ್ಟು ಹೋಗುವುದಿಲ್ಲವೆ ಅಪ್ಪಾ !” ಎಂದು ದುರ್ಯೋಧನನು ನಗುತ್ತಾ ಹೇಳಿದ.
ಪದಾರ್ಥ (ಕ.ಗ.ಪ)
ವಿತಾಳವಾಗದೆ-ತಾಳ ತಪ್ಪಿ ಹೋಗುವುದಿಲ್ಲವೇ ? ಕೆಟ್ಟು ಹೋಗುವುದಿಲ್ಲವೇ ?
ಮೂಲ ...{Loading}...
ಖೂಳರಲಿ ಸತ್ಕಳೆಗಳನು ನೆರೆ
ಕೇಳದವರಲಿ ಮಂತ್ರ ಬೀಜವ
ನಾಲಿಯಿಲ್ಲದವಂಗೆ ರೂಪು ವಿಲಾಸ ವಿಭ್ರಮವ
ಹೇಳುವಂತಿರೆ ನಿಮ್ಮ ವಿದುರನ
ಕೇಳಿಸಿದರಾ ಕಾರ್ಯಗತಿಗೆ ವಿ
ತಾಳವಾಗದೆ ಬೊಪ್ಪಯೆಂದನು ನಗುತ ಕುರುರಾಯ ॥62॥
೦೬೩ ಅರುಹಿದರೆ ವಿದುರಙ್ಗೆ ...{Loading}...
ಅರುಹಿದರೆ ವಿದುರಂಗೆ ಕಾರ್ಯವ
ಮುರಿವನಾತನು ಬಳಿಕ ನಿಮ್ಮಯ
ಕಿರಿಯ ತಮ್ಮನ ಮಕ್ಕಳಿಗೆ ಕೊಡಿ ಹಸ್ತಿನಾಪುರವ
ಹರಕುಗಳು ನಾವ್ ನೂರು ಮಕ್ಕಳು
ಹೊರಗೆ ಬದುಕುವೆವೈಸಲೇ ನಿ
ಮ್ಮುರುವ ಮಕ್ಕಳುಗೂಡಿ ಸುಖದಲಿ ರಾಜ್ಯವಾಳೆಂದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನಿಗೆ ಹೇಳಿದರೆ ಅವನು ಕೆಲಸವನ್ನು ಹಾಳುಮಾಡುತ್ತಾನೆ. ನೀವು ಹಾಗೆ ಮಾಡುವಂತಿದ್ದರೆ ನಿಮ್ಮ ಕಿರಿಯ ತಮ್ಮನ
ಮಕ್ಕಳಿಗೇ ಹಸ್ತಿನಾಪುರವನ್ನು ಒಪ್ಪಿಸಿ ಬಿಡಿ. ಹರಕುಗಳಾದ ನಾವು ನೂರು ಜನ ಮಕ್ಕಳೂ ಹೊರಗೆ ಹೋಗಿ ಹೇಗೋ ಬದುಕಿಕೊಳ್ಳುತ್ತೇವೆ. ನಿಮ್ಮ ಆ ಉತ್ತಮವಾದ ಮಕ್ಕಳೊಡನೆ ಸೇರಿ ಸುಖವಾಗಿ ರಾಜ್ಯವಾಳಿಕೊಂಡು ಇರಿ ಎಂದ.
ಪದಾರ್ಥ (ಕ.ಗ.ಪ)
ಉರುವ-ಉತ್ತಮವಾದ
ಮೂಲ ...{Loading}...
ಅರುಹಿದರೆ ವಿದುರಂಗೆ ಕಾರ್ಯವ
ಮುರಿವನಾತನು ಬಳಿಕ ನಿಮ್ಮಯ
ಕಿರಿಯ ತಮ್ಮನ ಮಕ್ಕಳಿಗೆ ಕೊಡಿ ಹಸ್ತಿನಾಪುರವ
ಹರಕುಗಳು ನಾವ್ ನೂರು ಮಕ್ಕಳು
ಹೊರಗೆ ಬದುಕುವೆವೈಸಲೇ ನಿ
ಮ್ಮುರುವ ಮಕ್ಕಳುಗೂಡಿ ಸುಖದಲಿ ರಾಜ್ಯವಾಳೆಂದ ॥63॥
೦೬೪ ಪಾರಲೌಕಿಕದುಳಿವನೈಹಿಕ ದೋರೆ ...{Loading}...
ಪಾರಲೌಕಿಕದುಳಿವನೈಹಿಕ
ದೋರೆ ಪೋರೆಯನಿಂದು ಬಲ್ಲವ
ರಾರು ಹೇಳಾ ವಿದುರನಲ್ಲದೆ ನಮ್ಮ ಪೈಕದಲಿ
ಸಾರವಾತನ ಮಾತು ನಯ ವಿ
ಸ್ತಾರ ಸಹಿತಿಹುದಲ್ಲಿ ನಂಬುಗೆ
ದೂರವಿಲ್ಲೆನಗರಿಯೆ ನೀ ನಿಲ್ಲೆಂದನಂಧನೃಪ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಲೋಕಕ್ಕೆ ಸಂಬಂಧಿಸಿದುದರ ಉಳಿವನ್ನೂ ಇಹಲೋಕಕ್ಕೆ ಸಂಬಂಧಪಟ್ಟುದರ ಓರೆಕೋರೆಗಳನ್ನೂ ಬಲ್ಲವರು ನಮ್ಮ ಪೈಕಿ
ಬೇರೆ ಯಾರಿದ್ದಾರೆ ಹೇಳು. ವಿದುರನನ್ನು ಬಿಟ್ಟರೆ? ಅವನ ಮಾತು ಯಾವಾಗಲೂ ಸಾರವತ್ತಾದುದು. ನಯ ವಿಸ್ತಾರ ಸಹಿತವಾದುದು. ಅವನು ನನಗೆ ನಂಬಿಕೆಗೆ ದೂರವಾದವನಲ್ಲ. ವಿಶ್ವಾಸಪಾತ್ರ. ನಿನಗೆ ತಿಳಿಯದು. ನೀನು ಸುಮ್ಮನಿರು.
ಪದಾರ್ಥ (ಕ.ಗ.ಪ)
ಪೈಕದಲಿ-ಪೈಕಿಯಲ್ಲಿ
ಮೂಲ ...{Loading}...
ಪಾರಲೌಕಿಕದುಳಿವನೈಹಿಕ
ದೋರೆ ಪೋರೆಯನಿಂದು ಬಲ್ಲವ
ರಾರು ಹೇಳಾ ವಿದುರನಲ್ಲದೆ ನಮ್ಮ ಪೈಕದಲಿ
ಸಾರವಾತನ ಮಾತು ನಯ ವಿ
ಸ್ತಾರ ಸಹಿತಿಹುದಲ್ಲಿ ನಂಬುಗೆ
ದೂರವಿಲ್ಲೆನಗರಿಯೆ ನೀ ನಿಲ್ಲೆಂದನಂಧನೃಪ ॥64॥
೦೬೫ ತಿಳುಹಿ ವಿದುರನನವರ ...{Loading}...
ತಿಳುಹಿ ವಿದುರನನವರ ಕರೆಯಲು
ಕಳುಹುವೆನು ಯಮಸೂನು ನಿಮ್ಮಯ
ಬಲುಹಿನಲಿ ಬಳುಕುವನೆ ಭೀರ್ಮಾಜನರು ಕಿರುಕುಳರೆ
ತಿಳಿವೊಡೀತನ ಬುದ್ಧಿಯೇ ನಿ
ರ್ಮಲಿನವಹುದು ನಿಧಾನವಿದು ನೀ
ಕಳವಳಿಸದಿದ್ದರೆ ಮನೋರಥ ಸಿದ್ಧಿಯಹುದೆಂದ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನಿಗೆ ಸರಿಯಾಗಿ ಹೇಳಿ ಅವರನ್ನು ಕರೆಯಲು ಕಳಿಸುತ್ತೇನೆ. ಯುಧಿಷ್ಠಿರ ನಿಮ್ಮ ಶಕ್ತಿಗೆ ಬಗ್ಗುತ್ತಾನೆಯೇ ? ಭೀಮಾರ್ಜುನರೇನು ಕಿರುಕುಳರೇ ? ತಿಳಿಯುವುದಾದರೆ ಇವನ ಬುದ್ಧಿಯೇ ನಿರ್ಮಲವಾಗಿರುವುದು. ಇದು ನಿಶ್ಚಯ. ನೀನು ಕಳವಳಪಡದೇ ಇದ್ದರೆ ನಿನ್ನ ಮನದ ಇಚ್ಛೆ ನೆರವೇರುತ್ತದೆ ಎಂದ.
ಪದಾರ್ಥ (ಕ.ಗ.ಪ)
ಕಿರುಕುಳರೇ - ಸಾಮಾನ್ಯರೆ?
ಟಿಪ್ಪನೀ (ಕ.ಗ.ಪ)
ಕಿರುಕುಳ - ಸಣ್ಣಪ್ರಮಾಣದಲ್ಲಿ ತೆರಿಗೆ ಪಾವತಿಸುವ ಸಾಮಾನ್ಯ ವ್ಯಕ್ತಿ.
ಕುಳ ಎಂದರೆ ವಾಸ್ತವವಾಗಿ ಭೂಮಿಯ ಪ್ರಮಾಣ. ಅದಕ್ಕನುಗುಣವಾಗಿ ತೆರಿಗೆ ಪಾವತಿಸುವ ವ್ಯಕ್ತಿ. ಈ ರೀತಯಲ್ಲಿ ಭೂಮಿಯನ್ನು ಹೊಂದಿರುವವರನ್ನು ಕುಳ ಎಂದು ಕರೆಯಲಾಗುತ್ತದೆ. ಕಡೆಗೆ ಕಿರುಕುಳ ಎನ್ನುವುದು ಒಂದು ನುಡಿಗಟ್ಟಾಗಿ ಅಲ್ಪತನ, ಕ್ಷುದ್ರvನ ಮತ್ತು ಸಾಮಾನ್ಯತೆಗಳನ್ನು ಸೂಚಿಸುವ ಪದವಾಗಿಬಿಟ್ಟಿದೆ.
ಮೂಲ ...{Loading}...
ತಿಳುಹಿ ವಿದುರನನವರ ಕರೆಯಲು
ಕಳುಹುವೆನು ಯಮಸೂನು ನಿಮ್ಮಯ
ಬಲುಹಿನಲಿ ಬಳುಕುವನೆ ಭೀರ್ಮಾಜನರು ಕಿರುಕುಳರೆ
ತಿಳಿವೊಡೀತನ ಬುದ್ಧಿಯೇ ನಿ
ರ್ಮಲಿನವಹುದು ನಿಧಾನವಿದು ನೀ
ಕಳವಳಿಸದಿದ್ದರೆ ಮನೋರಥ ಸಿದ್ಧಿಯಹುದೆಂದ ॥65॥
೦೬೬ ನೀ ಕರುಣದಲಿ ...{Loading}...
ನೀ ಕರುಣದಲಿ ನಮ್ಮ ಸಲಹುವ
ಡಾ ಕುಮಾರರ ಕರೆಸಿಕೊಟ್ಟರೆ
ಸಾಕು ಮತ್ತೊಂದಿಹುದಲೇ ಪಾಂಚಾಲ ನಂದನೆಯ
ನೂಕಿ ಮುಂದಲೆವಿಡಿದು ತೊತ್ತಿರೊ
ಳಾಕೆಯನು ಕುಳ್ಳಿರಿಸಿದಂದು ವಿ
ಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಕರುಣೆಯಿಂದ ನಮ್ಮನ್ನು ಸಲಹುವೆಯಾದರೆ ಆ ಪಾಂಡುಕುಮಾರನನ್ನು ಕರೆಸಿಕೊಡು, ಅಷ್ಟು ಸಾಕು. ಇನ್ನೊಂದು ವಿಷಯ ಇದೆ. ಆ ಪಾಂಚಾಲನ ಮಗಳು ದ್ರೌಪದಿಯಿದ್ದಾಳಲ್ಲ ಅವಳ ಮುಂದೆಲೆಯನ್ನು ಹಿಡಿದು ನೂಕಿ ನಮ್ಮ ದಾಸಿಯರ ನಡುವೆ ಕುಳ್ಳಿರಿಸಿದಾಗಲೇ ನನ್ನ ದುಃಖ ಪರಿಹಾರವಾಗುವುದು. ಆ ದಿನವೇ ನಾನು ಕೃತಕೃತ್ಯನಾಗುವುದು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೀ ಕರುಣದಲಿ ನಮ್ಮ ಸಲಹುವ
ಡಾ ಕುಮಾರರ ಕರೆಸಿಕೊಟ್ಟರೆ
ಸಾಕು ಮತ್ತೊಂದಿಹುದಲೇ ಪಾಂಚಾಲ ನಂದನೆಯ
ನೂಕಿ ಮುಂದಲೆವಿಡಿದು ತೊತ್ತಿರೊ
ಳಾಕೆಯನು ಕುಳ್ಳಿರಿಸಿದಂದು ವಿ
ಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ ॥66॥
೦೬೭ ಪೋಗು ನೀನೆನ್ದವನ ...{Loading}...
ಪೋಗು ನೀನೆಂದವನ ಕಳುಹಿದ
ನಾಗ ಮನದೊಳಗಧಿಕ ಚಿಂತಾ
ಸಾಗರದೊಳೋರಂತೆ ಮುಳುಗಿದನಂದು ಧೃತರಾಷ್ಟ್ರ
ಈಗಳಿನ ಸವಿಗಳುಪಿ ಮೇಲಣ
ತಾಗನರಿಯನು ಕಂದನಿದಕಿ
ನ್ನೇಗುವೆನು ಗಾಂಧಾರಿ ನೀ ಹೇಳೆಂದನಾ ಭೂಪ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋಗು ನೀನು ಎಂದು ಮಗನನ್ನು ಕಳಿಸಿಬಿಟ್ಟ. ಧೃತರಾಷ್ಟ್ರ ಮನಸ್ಸಿನಲ್ಲಿ ಚಿಂತಾಸಾಗರದಲ್ಲಿ ಏಕಪ್ರಕಾರವಾಗಿ ಮುಳುಗಿಬಿಟ್ಟ. ತನ್ನ ಪತ್ನಿಯೊಡನೆ ತನ್ನ ಚಿಂತೆಯನ್ನು ತೋಡಿಕೊಂಡ. ನಮ್ಮ ಕಂದ ಈಗಿನ ಸವಿಗೆ ಆಸೆಪಟ್ಟು ಅನಂತರ ಪ್ರಾಪ್ತವಾಗುವುದನ್ನು ಅರಿಯ. ಇವನಿಗೆ ಏನು ಮಾಡಲಿ, ಗಾಂಧಾರಿ ಹೇಳು-ಎಂದ.
ಪದಾರ್ಥ (ಕ.ಗ.ಪ)
ಏಗುವೆನು-ಏನುಮಾಡುವೆನು
ಮೂಲ ...{Loading}...
ಪೋಗು ನೀನೆಂದವನ ಕಳುಹಿದ
ನಾಗ ಮನದೊಳಗಧಿಕ ಚಿಂತಾ
ಸಾಗರದೊಳೋರಂತೆ ಮುಳುಗಿದನಂದು ಧೃತರಾಷ್ಟ್ರ
ಈಗಳಿನ ಸವಿಗಳುಪಿ ಮೇಲಣ
ತಾಗನರಿಯನು ಕಂದನಿದಕಿ
ನ್ನೇಗುವೆನು ಗಾಂಧಾರಿ ನೀ ಹೇಳೆಂದನಾ ಭೂಪ ॥67॥
೦೬೮ ಅವರು ಕಪಟವನರಿಯರೀತನ ...{Loading}...
ಅವರು ಕಪಟವನರಿಯರೀತನ
ಹವಣ ನೀನೇ ಕಂಡೆ ಕರೆಸಿದ
ಡವರು ನಿಲ್ಲರು ಗೋರಿಯಲಿ ಬಳಿಸಂದ ಮೃಗದಂತೆ
ನವಗೆ ಬಹುದಪಕೀರ್ತಿಯೀಗಿ
ನ್ನವನ ಕುಹಕವ ಲೋಕವರಿಯದು
ಶಿವ ಶಿವಾಯೆಂದಳಲಿ ಮರುಗಿದನಂದು ಧೃತರಾಷ್ಟ್ರ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಕಪಟವನ್ನು ಅರಿಯರು. ಇವನ ಯೋಜನೆಯೇನೆಂದು ನೀನೇ ಕಂಡೆ. ಕರೆಸಿದರೆ ಅವರು ತಮ್ಮ ನೆಲೆಯಲ್ಲಿ ನಿಲ್ಲರು. ಗೋರಿಯ ಬೇಟೆಯಲ್ಲಿ ಮೃಗವು ಮೃದುಮಧುರವಾದ ಸಂಗೀತಕ್ಕೆ ಮರುಳಾಗಿ ಹೇಗೆ ಬೇಟೆಗಾರನ ವಶವಾಗಿಬಿಡುತ್ತದೋ ಹಾಗೆ ಇವನ ವಶವಾಗಿ ಬಿಡುತ್ತಾರೆ. ಅನಂತರ ನಮಗೆ ಅಪಕೀರ್ತಿ ಬರುತ್ತದೆ. ಈಗಿನ್ನೂ ಇವನ ದುರಾಲೋಚನೆಯನ್ನೂ ಲೋಕವರಿಯದು, ಶಿವ ಶಿವಾ ! ಎಂದು ಧೃತರಾಷ್ಟ್ರ ಮರುಕಗೊಂಡ.
ಪದಾರ್ಥ (ಕ.ಗ.ಪ)
ಗೋರಿ-(ಜಿಂಕೆಯನ್ನು ಮರುಳಗೊಳಿಸಿ ಬಲೆಗೆ ಬೀಳುವಂತೆ ಆಕರ್ಷಿಸಲು ಏರ್ಪಡಿಸುವ) ಮೃದು ಮಧುರವಾದ ಸಂಗೀತ
ಮೂಲ ...{Loading}...
ಅವರು ಕಪಟವನರಿಯರೀತನ
ಹವಣ ನೀನೇ ಕಂಡೆ ಕರೆಸಿದ
ಡವರು ನಿಲ್ಲರು ಗೋರಿಯಲಿ ಬಳಿಸಂದ ಮೃಗದಂತೆ
ನವಗೆ ಬಹುದಪಕೀರ್ತಿಯೀಗಿ
ನ್ನವನ ಕುಹಕವ ಲೋಕವರಿಯದು
ಶಿವ ಶಿವಾಯೆಂದಳಲಿ ಮರುಗಿದನಂದು ಧೃತರಾಷ್ಟ್ರ ॥68॥
೦೬೯ ಮುರಿವೆನೇ ಮುನಿದಿವರು ...{Loading}...
ಮುರಿವೆನೇ ಮುನಿದಿವರು ನೂರ್ವರು
ತೊರೆವರೆನ್ನನು ತೊಡಕಿಸುವನೇ
ತರಿದು ಬಿಸುಡುವರವರು ಕೌರವ ಶತಕವನು ಬಳಿಕ
ಹೊರಗೊಳಗೆ ಹದನಿದು ನಿಧಾನಿಸ
ಲರಿಯೆನೆನ್ನಸುವಿನಲಿ ಹೃದಯದ
ಸೆರೆ ಬಿಡದು ಶಿವ ಶಿವಯೆನುತ ಮರುಗಿದನು ಧೃತರಾಷ್ಟ್ರ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಗ ಮುಖ ತಿರುಗಿಸಿದರೆ ನನ್ನ ಮಕ್ಕಳು ನೂರ್ವರೂ ನನ್ನನ್ನು ತೊರೆದು ಹೊರಟು ಹೋಗುತ್ತಾರೆ. ಅವರೊಡನೆ ತೊಡಕಿಸಿಕೊಂಡರೆ(ಮುಂದುವರೆಸಿದರೆ) ಮುಂದೆ ಪಾಂಡವರು ನೂರ್ವರು ಕೌರವರನ್ನೂ ತರಿದು ಎಸೆದು ಬಿಡುತ್ತಾರೆ. ಹೊರಗೆ ಒಳಗೆ ಇರುವ ಪರಿಸ್ಥಿತಿಯಿದು. ಈ ಬಗ್ಗೆ ಆಲೋಚಿಸಲಾಗುತ್ತಿಲ್ಲ. ನನ್ನ ಪ್ರಾಣವೂ ಹೋಗದು. ಶಿವ ಶಿವಾ ! ಎನ್ನುತ್ತಾ ಧೃತರಾಷ್ಟ್ರ ಮರುಗಿದ.
ಪದಾರ್ಥ (ಕ.ಗ.ಪ)
ನಿಧಾನಿಸು-ಆಲೋಚಿಸು
ಮೂಲ ...{Loading}...
ಮುರಿವೆನೇ ಮುನಿದಿವರು ನೂರ್ವರು
ತೊರೆವರೆನ್ನನು ತೊಡಕಿಸುವನೇ
ತರಿದು ಬಿಸುಡುವರವರು ಕೌರವ ಶತಕವನು ಬಳಿಕ
ಹೊರಗೊಳಗೆ ಹದನಿದು ನಿಧಾನಿಸ
ಲರಿಯೆನೆನ್ನಸುವಿನಲಿ ಹೃದಯದ
ಸೆರೆ ಬಿಡದು ಶಿವ ಶಿವಯೆನುತ ಮರುಗಿದನು ಧೃತರಾಷ್ಟ್ರ ॥69॥
೦೭೦ ಏಕೆ ನಿಮಗೀ ...{Loading}...
ಏಕೆ ನಿಮಗೀ ಚಿಂತೆಯಿಂದೆರ
ಡೌಕಿದವು ದುಷ್ಕಾರ್ಯ ಸಂಧಿ ವಿ
ವೇಕ ನಿಕರದಲೊರೆದು ಮೋಹರಿಸೊಂದು ಬಾಹೆಯಲಿ
ಈ ಕುರುವ್ರಜ ನೂರ ಹಿಡಿ ಕುಂ
ತೀ ಕುಮಾರರ ಬಿಡು ತನೂಜರ
ನೂಕು ಹಿಡಿ ಪಾಂಡವರನೆಂದಳು ಪತಿಗೆ ಗಾಂಧಾರಿ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಏಕೆ ಹೀಗೆ ಚಿಂತಿಸುತ್ತಿರುವಿರಿ ? ಎರಡು ದುಷ್ಕಾರ್ಯಗಳು ಈಗ ಒತ್ತಿ ಬಂದಿವೆ. ಸಂಧಿ ವಿವೇಕಗಳಿಂದ ಒರೆಹಚ್ಚಿ ನೋಡಿ. ಯಾವುದಾದರೂ ಒಂದು ಪಕ್ಷಕ್ಕೆ ಸೇರಿಕೊಳ್ಳಿ.. ಈ ಕೌರವರು ನೂರ್ವರನ್ನು ಸ್ವೀಕರಿಸಿ ಕುಂತಿಯ ಮಕ್ಕಳನ್ನು ಬಿಡಿ, ಅಥವಾ ನಿಮ್ಮ ಮಕ್ಕಳು ನೂರ್ವರನ್ನೂ ನೂಕಿ ಪಾಂಡವರನ್ನು ಸ್ವೀಕರಿಸಿ” ಎಂದು ಗಾಂಧಾರಿ ನುಡಿದಳು.
ಪದಾರ್ಥ (ಕ.ಗ.ಪ)
ಔಕಿದವು - ಒತ್ತಿದವು
ನಿಕರ- ಸಮೂಹ
ಒರೆದು - ಪರೀಕ್ಷಿಸಿ
ಮೋಹರಿಸು - ಜೊತೆಗೂಡು
ಮೂಲ ...{Loading}...
ಏಕೆ ನಿಮಗೀ ಚಿಂತೆಯಿಂದೆರ
ಡೌಕಿದವು ದುಷ್ಕಾರ್ಯ ಸಂಧಿ ವಿ
ವೇಕ ನಿಕರದಲೊರೆದು ಮೋಹರಿಸೊಂದು ಬಾಹೆಯಲಿ
ಈ ಕುರುವ್ರಜ ನೂರ ಹಿಡಿ ಕುಂ
ತೀ ಕುಮಾರರ ಬಿಡು ತನೂಜರ
ನೂಕು ಹಿಡಿ ಪಾಂಡವರನೆಂದಳು ಪತಿಗೆ ಗಾಂಧಾರಿ ॥70॥
೦೭೧ ಐಸಲೇ ತಾನಾದುದಾಗಲಿ ...{Loading}...
ಐಸಲೇ ತಾನಾದುದಾಗಲಿ
ಲೇಸ ಕಾಣೆನು ನಿನ್ನ ಮಕ್ಕಳ
ವಾಸಿಗಳ ವಿಸ್ತಾರ ಮೆರೆಯಲಿ ಹಲವು ಮಾತೇನು
ಆ ಸಭೆಯ ಸರಿಸದ ಸಭಾ ವಿ
ನ್ಯಾಸ ಶಿಲ್ಪಿಗರಾರೆನುತ ಧರ
ಣೀಶ ಕರೆಸಿದನುರು ಸಭಾ ನಿರ್ಮಾಣ ಕೋವಿದರ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾನಾದದ್ದಾಗಲಿ. ಒಳ್ಳೆಯದನ್ನಂತೂ ನಾ ಕಾಣಲಾರೆ. ನಿನ್ನ ಮಕ್ಕಳ ಹಟವೇ ವಿಸ್ತಾರವಾಗಿ ಮೆರೆಯಲಿ. ಇನ್ನು ಹೆಚ್ಚು ಮಾತೇಕೆ ? ಆ ಮಯಸಭೆಗೆ ಸರಿಸಮವಾದ ಸಭಾಭವನವನ್ನು ನಿರ್ಮಿಸಬಲ್ಲಂತಹ ಶಿಲ್ಪಿಗಳು ಯಾರು” ಎಂದು ಆಲೋಚಿಸಿ ಧೃತರಾಷ್ಟ್ರನು ಸಭಾಭವನವನ್ನು ನಿರ್ಮಿಸುವ ಪರಿಣತರನ್ನು ಕರೆಸಿದ.
ಪದಾರ್ಥ (ಕ.ಗ.ಪ)
ವಾಸಿ-ಹಟ
ಮೂಲ ...{Loading}...
ಐಸಲೇ ತಾನಾದುದಾಗಲಿ
ಲೇಸ ಕಾಣೆನು ನಿನ್ನ ಮಕ್ಕಳ
ವಾಸಿಗಳ ವಿಸ್ತಾರ ಮೆರೆಯಲಿ ಹಲವು ಮಾತೇನು
ಆ ಸಭೆಯ ಸರಿಸದ ಸಭಾ ವಿ
ನ್ಯಾಸ ಶಿಲ್ಪಿಗರಾರೆನುತ ಧರ
ಣೀಶ ಕರೆಸಿದನುರು ಸಭಾ ನಿರ್ಮಾಣ ಕೋವಿದರ ॥71॥
೦೭೨ ತೆಗೆಸಿ ಭಣ್ಡಾರದಲಿ ...{Loading}...
ತೆಗೆಸಿ ಭಂಡಾರದಲಿ ಬಹು ವ
ಸ್ತುಗಳನಿತ್ತನು ತರು ಶಿಲಾ ಕೋ
ಟಿಗಳ ತರಿಸಿದನುರು ಸಹಸ್ರಸ್ತಂಭ ಡಂಬರವ
ಝಗ ಝಗಿಪ ಬಹು ಮೌಲ್ಯ ಮುಕ್ತಾ
ಳಿಗಳನುರುತರ ರಶ್ಮಿ ಲಹರಿ
ಸ್ಥಗಿತ ದಿಗು ಭಿತ್ತಿಗಳನನುಪಮ ರತ್ನರಾಶಿಗಳ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಂಡಾರದಿಂದ ಅನೇಕ ವಸ್ತುಗಳನ್ನು ತೆಗೆಸಿಕೊಟ್ಟ. ಕೋಟಿಗಟ್ಟಲೆ ಮರಗಳನ್ನೂ ಶಿಲೆಗಳನ್ನೂ ತರಿಸಿದ. ಸಾವಿರಾರು ಸ್ತಂಭಗಳ ರಾಶಿಯನ್ನೇ ತರಿಸಿ ಹಾಕಿದ. ಝಗಝಗಿಸುವ ಬಹುಮೌಲ್ಯದ ಮುತ್ತುಗಳನ್ನೂ, ಶ್ರೇಷ್ಠವಾದ ಕಿರಣಗಳ ಲಹರಿಯಿಂದ ದಿಗ್ಭಿತ್ತಿಗಳನ್ನು ಬೆಳಗುವಂತಹ ರತ್ನಗಳನ್ನೂ ರಾಶಿರಾಶಿಯಾಗಿ ತರಿಸಿಹಾಕಿದ.
ಪದಾರ್ಥ (ಕ.ಗ.ಪ)
ಡಂಬರ-ರಾಶಿ
ಮೂಲ ...{Loading}...
ತೆಗೆಸಿ ಭಂಡಾರದಲಿ ಬಹು ವ
ಸ್ತುಗಳನಿತ್ತನು ತರು ಶಿಲಾ ಕೋ
ಟಿಗಳ ತರಿಸಿದನುರು ಸಹಸ್ರಸ್ತಂಭ ಡಂಬರವ
ಝಗ ಝಗಿಪ ಬಹು ಮೌಲ್ಯ ಮುಕ್ತಾ
ಳಿಗಳನುರುತರ ರಶ್ಮಿ ಲಹರಿ
ಸ್ಥಗಿತ ದಿಗು ಭಿತ್ತಿಗಳನನುಪಮ ರತ್ನರಾಶಿಗಳ ॥72॥
೦೭೩ ಮಾಡಿತಗ್ಗದ ಸಭೆ ...{Loading}...
ಮಾಡಿತಗ್ಗದ ಸಭೆ ಸುಧರ್ಮೆಯ
ನೇಡಿಸುವ ಚೆಲುವಿನಲಿ ಪುರದಲಿ
ರೂಢಿಸಿತು ಬಳಿಕಂಧನೃಪನೇಕಾಂತ ಭವನದಲಿ
ಕೂಡಿಕೊಂಡು ಕುಲಾಪಘಾತದ
ಕೇಡಿಗರ ಕಲ್ಪನೆಯ ಕಲುಷದ
ಜೋಡಿಯನೆ ನಿಶ್ಚೈಸಿ ವಿದುರಂಗರುಹಿದನು ಕರೆಸಿ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವೇಂದ್ರನ ಸುಧರ್ಮಾಭವನವನ್ನು ಕೀಳೆನಿಸುವಂತಹ ಸೌಂದರ್ಯದಿಂದ ಹಸ್ತಿನಾವತಿಯಲ್ಲಿ ಸಭಾಭವನ ನಿರ್ಮಾಣವಾಯಿತು.
ಅನಂತರ ಧೃತರಾಷ್ಟ್ರ, ಕುಲಕ್ಕೇ ಅಪಘಾತವುಂಟುಮಾಡುವ ಕೇಡಿಗಳು ಕಲ್ಪಿಸಿಕೊಂಡಿದ್ದ ಕಲುಷದ ಜೊತೆ ಸೇರುವುದೆಂದೇ ಏಕಾಂತ ಭವನದಲ್ಲಿ ಸಮಾಲೋಚಿಸಿ ನಿರ್ಧಾರ ತೆಗೆದುಕೊಂಡು, ವಿದುರನನ್ನು ಕರೆಸಿ ಅವನಿಗೆ ಹೀಗೆ ಹೇಳಿದ.
ಪದಾರ್ಥ (ಕ.ಗ.ಪ)
ಏಡಿಸು-ಹಿಯ್ಯಾಳಿಸು, ತಿರಸ್ಕರಿಸು
ಮೂಲ ...{Loading}...
ಮಾಡಿತಗ್ಗದ ಸಭೆ ಸುಧರ್ಮೆಯ
ನೇಡಿಸುವ ಚೆಲುವಿನಲಿ ಪುರದಲಿ
ರೂಢಿಸಿತು ಬಳಿಕಂಧನೃಪನೇಕಾಂತ ಭವನದಲಿ
ಕೂಡಿಕೊಂಡು ಕುಲಾಪಘಾತದ
ಕೇಡಿಗರ ಕಲ್ಪನೆಯ ಕಲುಷದ
ಜೋಡಿಯನೆ ನಿಶ್ಚೈಸಿ ವಿದುರಂಗರುಹಿದನು ಕರೆಸಿ ॥73॥
೦೭೪ ವಿದುರ ಕೇಳೈ ...{Loading}...
ವಿದುರ ಕೇಳೈ ಪಾಂಡವರ ಸಂ
ಪದಕೆ ಸರಿಯೊ ಮಿಗಿಲೋ ಸಭೆ ತಾ
ನಿದು ವಿಶೇಷವಲಾ ಸಮಸ್ತ ಕ್ಷತ್ರ ವಿಭವದಲಿ
ಇದರೊಳೋಲಗವಿತ್ತು ಹರ್ಷಾ
ಸ್ಪದರು ಕುರು ನೃಪರಲಿ ಸುಖ ದ್ಯೂ
ತದಲಿ ರಮಿಸಲಿ ಕರೆದು ತಾ ಕುಂತೀ ಕುಮಾರಕರ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರ, ಕೇಳು. ಪಾಂಡವರ ಸಂಪತ್ತಿಗೆ ಸರಿಯೋ ಮಿಗಿಲೋ ಎಂಬಂತಿರುವ ಈ ನಮ್ಮ ಸಭೆ ವಿಶೇಷವಾಗಿದೆಯಲ್ಲವೇ ! ಸಮಸ್ತ ಕ್ಷತ್ರಿಯರೊಡಗೂಡಿ ವೈಭವದಿಂದ ಈ ಸಭೆಯಲ್ಲಿ ಓಲಗಕೊಟ್ಟು ಕುಂತೀ ಕುಮಾರರೂ ಹರ್ಷಾಸ್ಪದರಾಗಲಿ. ಕುರುನೃಪರೊಡನೆ ಸುಖದ್ಯೂತದಿಂದ ಸಂತೋಷಿಸಲಿ ಅವರನ್ನು ಕರೆದು ತಾ ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ವಿದುರ ಕೇಳೈ ಪಾಂಡವರ ಸಂ
ಪದಕೆ ಸರಿಯೊ ಮಿಗಿಲೋ ಸಭೆ ತಾ
ನಿದು ವಿಶೇಷವಲಾ ಸಮಸ್ತ ಕ್ಷತ್ರ ವಿಭವದಲಿ
ಇದರೊಳೋಲಗವಿತ್ತು ಹರ್ಷಾ
ಸ್ಪದರು ಕುರು ನೃಪರಲಿ ಸುಖ ದ್ಯೂ
ತದಲಿ ರಮಿಸಲಿ ಕರೆದು ತಾ ಕುಂತೀ ಕುಮಾರಕರ ॥74॥
೦೭೫ ಅವರ ವಿಭವವನವರ ...{Loading}...
ಅವರ ವಿಭವವನವರ ಯಾಗೋ
ತ್ಸವವನಿಂದ್ರಪ್ರಸ್ಥದಲಿ ಕಂ
ಡೆವು ಮನೋಹರವಾಯ್ತು ಬೆಳವಿಗೆ ಪಾಂಡುನಂದನರ
ಅವರು ಹಸ್ತಿನಪುರಿಗೆ ಬಂದು
ತ್ಸವದಲೀ ಸಭೆಯಲಿ ಸುಖದ್ಯೂ
ತವನು ರಮಿಸಲಿ ಸೇರಿ ಬದುಕಲಿ ಪಾಂಡುಸುತರೆಂದ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ವೈಭವವನ್ನೂ ಅವರ ರಾಜಸೂಯಯಾಗದ ಉತ್ಸವವನ್ನೂ ಇಂದ್ರಪ್ರಸ್ಥ ನಗರಿಯಲ್ಲಿ ನೋಡಿದೆವು. ಆ ಪಾಂಡುನಂದನರು ಗಳಿಸಿರುವ ಅಭಿವೃದ್ಧಿ ಮನೋಹರವಾಗಿತ್ತು. ಅವರು ಹಸ್ತಿನಾಪುರಕ್ಕೆ ಬಂದು ಈ ಸಭೆಯಲ್ಲಿ ನಡೆವ ಉತ್ಸವದಲ್ಲಿ ಭಾಗಿಗಳಾಗಿ ನಮ್ಮ ಮಕ್ಕಳೊಡನೆ ಸುಖದ್ಯೂತವನ್ನು ಆಡಿ ಸಂತೋಷಿಸಲಿ. ಎಲ್ಲರೂ ಒಟ್ಟುಗೂಡಿ ಬದುಕಲಿ. ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅವರ ವಿಭವವನವರ ಯಾಗೋ
ತ್ಸವವನಿಂದ್ರಪ್ರಸ್ಥದಲಿ ಕಂ
ಡೆವು ಮನೋಹರವಾಯ್ತು ಬೆಳವಿಗೆ ಪಾಂಡುನಂದನರ
ಅವರು ಹಸ್ತಿನಪುರಿಗೆ ಬಂದು
ತ್ಸವದಲೀ ಸಭೆಯಲಿ ಸುಖದ್ಯೂ
ತವನು ರಮಿಸಲಿ ಸೇರಿ ಬದುಕಲಿ ಪಾಂಡುಸುತರೆಂದ ॥75॥
೦೭೬ ಮಾತು ಹೊಲಸಿನ ...{Loading}...
ಮಾತು ಹೊಲಸಿನ ಗಂಧವಾಗಿದೆ
ಭೀತಿ ರಸದಲಿ ಮನ ಮುಳುಗಿತೀ
ಪ್ರೀತಿ ಮಾರಿಯ ಮುಸುಕನುಗಿವುದನಾರು ಕಲಿಸಿದರು
ಕೈತವದ ಕಣಿ ನಿನ್ನ ಮಗ ನೀ
ಸೋತೆಲಾ ಶಿವಶಿವ ಸುಖಾಂಗ
ದ್ಯೂತವೇ ಹಾ ಹಾಯೆನುತ ತಲೆದೂಗಿದನು ವಿದುರ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನ ಮಾತು ಕಿವಿಗೆ ಬಿದ್ದೊಡನೆ ಅವರ ಸಂಚು ಏನಿರಬಹುದೆಂಬುದು ವಿದುರನಿಗೆ ಗ್ರಹಿಕೆಯಾಯಿತು. ಅವನು ಹೇಳಿದ “ಮಾತು ದುರ್ಗಂಧವನ್ನು ಬೀರುತ್ತಿದೆ. ನನ್ನ ಮನಸ್ಸು ಭೀತಿ ರಸದಲ್ಲಿ ಮುಳುಗಿತು. ಈ ಪ್ರೀತಿಯ ಮುಖದ ಮಾರಿಯ ಮುಸುಕನ್ನು ತೆಗೆಯಲು ಕಲಿಸಿದವರಾರು ? ನಿನ್ನ ಮಗನೇ ಇರಬೇಕು. ಅವನೋ ಮೋಸದ ಗಣಿ ! ಅವನ ಮಾತಿಗೆ ನೀನು ಸೋತುಬಿಟ್ಟೆಯಲ್ಲಾ, ಶಿವ ಶಿವ ! ಸುಖಾಂಗದ್ಯೂತ ಎಂದೆಯೋ, ಅಯ್ಯೋ ಎನ್ನುತ್ತಾ ಅವನು ತಲೆಯಾಡಿಸಿದ.
ಪದಾರ್ಥ (ಕ.ಗ.ಪ)
ಕೈತವದ ಕಣಿ -ಮೋಸದ ಗಣಿ
ಮೂಲ ...{Loading}...
ಮಾತು ಹೊಲಸಿನ ಗಂಧವಾಗಿದೆ
ಭೀತಿ ರಸದಲಿ ಮನ ಮುಳುಗಿತೀ
ಪ್ರೀತಿ ಮಾರಿಯ ಮುಸುಕನುಗಿವುದನಾರು ಕಲಿಸಿದರು
ಕೈತವದ ಕಣಿ ನಿನ್ನ ಮಗ ನೀ
ಸೋತೆಲಾ ಶಿವಶಿವ ಸುಖಾಂಗ
ದ್ಯೂತವೇ ಹಾ ಹಾಯೆನುತ ತಲೆದೂಗಿದನು ವಿದುರ ॥76॥
೦೭೭ ಹಾ ಮರುಳೆ ...{Loading}...
ಹಾ ಮರುಳೆ ಕೆಣಕುವರೆ ಫಲಗುಣ
ಭೀಮರನು ಮಿಗೆ ಹೆಚ್ಚಿ ಬೆಳೆದು
ದ್ದಾಮ ಸಿರಿಯಿದು ಹಸ್ತಿನಾಪುರವಕಟ ಕೆಡಿಸಿದೆಲ
ಕೈ ಮಗುಚದೇ ವಿಭವವಿದು ನಿ
ರ್ನಾಮರಾರೋ ಬಿತ್ತಿದರು ಕುರು
ಭೂಮಿಯಲಿ ವಿಷ ಬೀಜವನು ಹಾಯೆನುತ ಬಿಸುಸುಯ್ದ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದುವರಿಸಿ - ಅಯ್ಯೋ ಮೂರ್ಖ, ಅರ್ಜುನ ಭೀಮರನ್ನು ಕೆಣಕುತ್ತಾರೆಯೇ ? ಈ ಹಸ್ತಿನಾಪುರ ಅತಿಶಯವಾಗಿ ವರ್ಧಿಸಿದ ಸಂಪತ್ತನ್ನು ಹೊಂದಿರುವಂತಹದು. ಅದನ್ನು ಕೆಡಿಸಿದಂತಾಯಿತಲ್ಲಾ ! ಈ ವೈಭವವೆಲ್ಲ ಕೈಮಗುಚಿಹೋಗುವುದಿಲ್ಲವೇ ? ಹೆಸರಿಲ್ಲದ ಯಾರೋ ಈ ಕುರುಭೂಮಿಯಲ್ಲಿ ವಿಷಬೀಜವನ್ನು ಬಿತ್ತಿದರಲ್ಲಾ. ಹಾ ! ಎಂದು ನಿಟ್ಟುಸಿರು ಬಿಟ್ಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹಾ ಮರುಳೆ ಕೆಣಕುವರೆ ಫಲಗುಣ
ಭೀಮರನು ಮಿಗೆ ಹೆಚ್ಚಿ ಬೆಳೆದು
ದ್ದಾಮ ಸಿರಿಯಿದು ಹಸ್ತಿನಾಪುರವಕಟ ಕೆಡಿಸಿದೆಲ
ಕೈ ಮಗುಚದೇ ವಿಭವವಿದು ನಿ
ರ್ನಾಮರಾರೋ ಬಿತ್ತಿದರು ಕುರು
ಭೂಮಿಯಲಿ ವಿಷ ಬೀಜವನು ಹಾಯೆನುತ ಬಿಸುಸುಯ್ದ ॥77॥
೦೭೮ ವಿದುರ ಬೆಮ್ಬೀಳದಿರು ...{Loading}...
ವಿದುರ ಬೆಂಬೀಳದಿರು ಬಿಂಕದ
ಹದನ ಬಲ್ಲೆನು ಭೀಮ ಪಾರ್ಥರ
ಮುದವ ಬಯಸುವೆ ಮುನಿಯಲಾಪೆನೆ ಹೇಳು ತನಯರಿಗೆ
ಇದು ಮಹಾಸಭೆಯಲ್ಲಿ ಮೇಳಾ
ಪದಲಿ ಕುರು ಪಾಂಡವರು ಸದ್ಯೂ
ತದಲಿ ರಮಿಸುವರೇನು ಹೊಲ್ಲೆಹವೆಂದನಂಧ ನೃಪ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರ ನೀನೇನೂ ಹಿಂಜರಿಯಬೇಡ. ಬೆಡಗಿನ ರೀತಿಯನ್ನು ಬಲ್ಲೆ. ನಾನು ಭೀಮ ಅರ್ಜುನರ ಸಂತೋಷವನ್ನೇ ಬಯಸುವವನು. ಆ ಮಕ್ಕಳನ್ನು ನಾನು ದ್ವೇಷಿಸುವೆನೇ ಹೇಳು ! ಏನೋ, ಈ ಮಹಾಸಭೆಯಲ್ಲಿ ಪಾಂಡವರು ಕೌರವರು ಜೊತೆ ಸೇರಲಿ. ಸುದ್ಯೂತದಲ್ಲಿ ಸಂತೋಷಿಸಲಿ. ಅದರಲ್ಲೇನು ದೋಷ ? ಎಂದ ಧೃತರಾಷ್ಟ್ರ.
ಪದಾರ್ಥ (ಕ.ಗ.ಪ)
ಮೂಲ ...{Loading}...
ವಿದುರ ಬೆಂಬೀಳದಿರು ಬಿಂಕದ
ಹದನ ಬಲ್ಲೆನು ಭೀಮ ಪಾರ್ಥರ
ಮುದವ ಬಯಸುವೆ ಮುನಿಯಲಾಪೆನೆ ಹೇಳು ತನಯರಿಗೆ
ಇದು ಮಹಾಸಭೆಯಲ್ಲಿ ಮೇಳಾ
ಪದಲಿ ಕುರು ಪಾಂಡವರು ಸದ್ಯೂ
ತದಲಿ ರಮಿಸುವರೇನು ಹೊಲ್ಲೆಹವೆಂದನಂಧ ನೃಪ ॥78॥
೦೭೯ ಮೊದಲಲಿದು ಸುದ್ಯೂತವವಸಾ ...{Loading}...
ಮೊದಲಲಿದು ಸುದ್ಯೂತವವಸಾ
ನದಲಿ ವಿಷಮ ದ್ಯೂತದಲಿ ನಿಲು
ವುದು ನಿವಾರಣವುಂಟೆ ಮರ್ಮವನಿರಿವ ಸಬಳದಲಿ
ತುದಿಗೆ ತಾನಿದಪಥ್ಯ ಕುರುವ
ರ್ಗದಲಿ ವಿನಾಶಕ ಬೀಜವದು ನಿಮ
ಗಿದರೊಳಗೆ ಸೊಗಸಾದುದೇ ಕೈಕೊಂಡೆ ನಾನೆಂದ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದರ ಪರಿಣಾಮವೇನಾದೀತೆಂದು ವಿದುರ ಬಲ್ಲ. “ಪ್ರಾರಂಭದಲ್ಲಿ ಇದು ಸುದ್ಯೂತವೇ. ಕೊನೆಯಲ್ಲಿ ವಿಷಮ ದ್ಯೂತವಾಗುತ್ತದೆ. ಈಟಿ ಮರ್ಮಕ್ಕೆ ನಾಟುವಾಗ ಅದರಿಂದ ನಿವಾರಣೆಯುಂಟೆ ? ಕೊನೆಗೆ ಈ ಸುದ್ಯೂತವೇ ಅಪಥ್ಯವಾಗುತ್ತದೆ. ಕೌರವರ ನಡುವೆ ವಿನಾಶಕರ ಬೀಜವಾಗುತ್ತದೆ. ನಿಮಗೆ ಇದು ಮೆಚ್ಚಿಕೆಯಾದರೆ ಹೇಳಿ. ನಾನು ಕೈಕೊಳ್ಳುತ್ತೇನೆ" ಎಂದ.
ಪದಾರ್ಥ (ಕ.ಗ.ಪ)
ಸಬಳ-ಈಟಿ
ಮೂಲ ...{Loading}...
ಮೊದಲಲಿದು ಸುದ್ಯೂತವವಸಾ
ನದಲಿ ವಿಷಮ ದ್ಯೂತದಲಿ ನಿಲು
ವುದು ನಿವಾರಣವುಂಟೆ ಮರ್ಮವನಿರಿವ ಸಬಳದಲಿ
ತುದಿಗೆ ತಾನಿದಪಥ್ಯ ಕುರುವ
ರ್ಗದಲಿ ವಿನಾಶಕ ಬೀಜವದು ನಿಮ
ಗಿದರೊಳಗೆ ಸೊಗಸಾದುದೇ ಕೈಕೊಂಡೆ ನಾನೆಂದ ॥79॥
೦೮೦ ಕರೆದು ತಾ ...{Loading}...
ಕರೆದು ತಾ ನೀನವರ ನಾನುಪ
ಚರಿಸುವಂದವ ನೋಡು ನಿನ್ನಯ
ಕರಣವೃತ್ತಿಗೆ ಕಠಿಣವಹವೇ ನಮ್ಮ ಮಾತುಗಳು
ದುರುಳರವರಿವರೆಂಬರದನಾ
ದರಿಸದಿರು ನೀ ಹೋಗು ಪಾಂಡವ
ಧರಣಿಪರನೊಡಗೊಂಡು ಬಾಯೆಂದಟ್ಟಿದನು ನೃಪತಿ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಅವರನ್ನು ಕರೆದುಕೊಂಡು ಬಾ “ಅವರನ್ನು ನಾನು ಹೇಗೆ ಉಪಚರಿಸುತ್ತೇನೆ. ಎಂಬುದನ್ನು ನೋಡು. ನಿನ್ನ ಅಂತಃಕರಣಕ್ಕೆ ನನ್ನ ಮಾತು ಕಠಿನವೆನಿಸಿತೇ ? ದುರುಳರಾದ ಅವರಿವರುಗಳ ಮಾತುಗಳಿಗೆ ಬೆಲೆ ಕೊಡಬೇಡ. ನೀನು ಹೋಗು ಆ ಪಾಂಡವ ಧರಣಿಪರನ್ನು ಕರೆದುಕೊಂಡು ಬಾ" ಎಂದು ಧೃತರಾಷ್ಟ್ರ ವಿದುರನನ್ನು ಕಳುಹಿಸಿಕೊಟ್ಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರೆದು ತಾ ನೀನವರ ನಾನುಪ
ಚರಿಸುವಂದವ ನೋಡು ನಿನ್ನಯ
ಕರಣವೃತ್ತಿಗೆ ಕಠಿಣವಹವೇ ನಮ್ಮ ಮಾತುಗಳು
ದುರುಳರವರಿವರೆಂಬರದನಾ
ದರಿಸದಿರು ನೀ ಹೋಗು ಪಾಂಡವ
ಧರಣಿಪರನೊಡಗೊಂಡು ಬಾಯೆಂದಟ್ಟಿದನು ನೃಪತಿ ॥80॥
೦೮೧ ಅರುಹಿದನು ಭೀಷ್ಮಙ್ಗೆ ...{Loading}...
ಅರುಹಿದನು ಭೀಷ್ಮಂಗೆ ಗುರು ಕೃಪ
ರರಿದರಿನ್ನಪಮೃತ್ಯುವೇನೆಂ
ದರಿಯದಿನ್ನುತ್ಸಾಹ ಶಕ್ತಿಗೆ ಮನವ ಮಾಡಿತಲ
ಹರಿದುದೇ ಕುರುವಂಶ ಲತೆ ಹೊ
ಕ್ಕಿರಿದನೇ ಧೃತರಾಷ್ಟ್ರ ನೀ ಬೇ
ಸರದಿರವರನು ಕರೆದು ತಾ ಹೋಗೆಂದರವರಂದು ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರ ಈ ವಿಷಯವನ್ನು ಭೀಷ್ಮನಿಗೆ ತಿಳಿಸಿದ. ದ್ರೋಣ ಕೃಪರಿಗೂ ತಿಳಿಯಿತು. ಮುಂದೆ ಏನಾದೀತೆಂಬುದನ್ನು ಲಕ್ಷ್ಯಮಾಡದೆ ಅಪಮೃತ್ಯುವು ಏನು ಎಂದರಿಯದೆ ಉತ್ಸಾಹ ಶಕ್ತಿಗೆ ಮನಸ್ಸು ಮಾಡಿತಲ್ಲ. ಕುರುವಂಶದ ಬಳ್ಳಿ ಕಡಿದು ಹೋಯಿತಲ್ಲಾ ! ಧೃತರಾಷ್ಟ್ರನೇ ನಡುವೆ ಪ್ರವೇಶಿಸಿ ಕತ್ತರಿಸಿ ಬಿಟ್ಟನಲ್ಲಾ ! ನೀನೇನೂ ಬೇಸರಗೊಳ್ಳಬೇಡ. ಇಂದು ಹೋಗಿ ಅವರನ್ನು ಕರೆದುಕೊಂಡು ಬಾ ಎಂದು ಅವರು ಹೇಳಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರುಹಿದನು ಭೀಷ್ಮಂಗೆ ಗುರು ಕೃಪ
ರರಿದರಿನ್ನಪಮೃತ್ಯುವೇನೆಂ
ದರಿಯದಿನ್ನುತ್ಸಾಹ ಶಕ್ತಿಗೆ ಮನವ ಮಾಡಿತಲ
ಹರಿದುದೇ ಕುರುವಂಶ ಲತೆ ಹೊ
ಕ್ಕಿರಿದನೇ ಧೃತರಾಷ್ಟ್ರ ನೀ ಬೇ
ಸರದಿರವರನು ಕರೆದು ತಾ ಹೋಗೆಂದರವರಂದು ॥81॥
೦೮೨ ಶುಭಮುಹೂರ್ತ ವಿಳಾಸಲಗ್ನದೊ ...{Loading}...
ಶುಭಮುಹೂರ್ತ ವಿಳಾಸಲಗ್ನದೊ
ಳಿಭ ಪುರಿಯ ಹೊರವಂಟು ಸುರಸ
ನ್ನಿಭನು ಬಂದನು ಹಲವು ಪಯಣದಲಿವರ ಪಟ್ಟಣಕೆ
ರಭಸ ಮಿಗಲಿದಿರ್ಗೊಂಡು ತಂದರು
ಸಭೆಗೆ ಮಾನ್ಯ ಯಥೋಪಚಾರ
ಪ್ರಭವ ಸತ್ಕಾರದಲಿ ಕೇಳ್ದರು ಕುಶಲ ಸಂಗತಿಯ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶುಭ ಮುಹುರ್ತದಲ್ಲಿ, ವಿಲಾಸಮಯ ಲಗ್ನದಲ್ಲಿ ದೇವಸಮಾನನಾದ ವಿದುರನು ಹಸ್ತಿನಾನಗರವನ್ನು ಬಿಟ್ಟು ಹೊರಟು ಹಲವು ದಿನಗಳ ಪ್ರಯಾಣದಿಂದ ಇಂದ್ರಪ್ರಸ್ಥ ನಗರಕ್ಕೆ ಬಂದ. ಪಾಂಡವರು ಹೆಚ್ಚಿದ ರಭಸದಲ್ಲಿ ಅವನನ್ನು ಇದಿರುಗೊಂಡು ಸಭೆಗೆ ಕರೆತಂದರು. ಆ ಮಾನ್ಯನಿಗೆ ಯಥೋಚಿತವಾಗಿ ಉಪಚರಿಸಿ, ಸತ್ಕಾರವನ್ನು ಮಾಡಿ ಕುಶಲ ಪ್ರಶ್ನೆಗಳನ್ನು ಕೇಳಿದರು.
ಪದಾರ್ಥ (ಕ.ಗ.ಪ)
ಸುರಸನ್ನಿಭ-ದೇವಸಮಾನವಾದ
ಮೂಲ ...{Loading}...
ಶುಭಮುಹೂರ್ತ ವಿಳಾಸಲಗ್ನದೊ
ಳಿಭ ಪುರಿಯ ಹೊರವಂಟು ಸುರಸ
ನ್ನಿಭನು ಬಂದನು ಹಲವು ಪಯಣದಲಿವರ ಪಟ್ಟಣಕೆ
ರಭಸ ಮಿಗಲಿದಿರ್ಗೊಂಡು ತಂದರು
ಸಭೆಗೆ ಮಾನ್ಯ ಯಥೋಪಚಾರ
ಪ್ರಭವ ಸತ್ಕಾರದಲಿ ಕೇಳ್ದರು ಕುಶಲ ಸಂಗತಿಯ ॥82॥
೦೮೩ ಧರಣಿಪತಿ ಗಾಙ್ಗೇಯ ...{Loading}...
ಧರಣಿಪತಿ ಗಾಂಗೇಯ ಗೌತಮ
ಗುರುತನುಜ ಗುರು ಕರ್ಣ ಸೌಬಲ
ಕುರುನೃಪತಿಯನುಜಾತ್ಮಜರು ಗಾಂಧಾರಿ ಭಾನುಮತಿ
ವರಸಚಿವ ಸಾಮಂತ ಪರಿಜನ
ಪುರಜನಂಗಳ ಕುಶಲವನು ವಿ
ಸ್ತರಿಸಿದನು ವಿದುರನು ಮಹೀಪತಿಗಾಪ್ತ ಬಾಂಧವರ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ರಾಜ, ಭೀಷ್ಮ, ಕೃಪ, ಅಶ್ವತ್ಥಾಮ, ದ್ರೋಣ, ಕರ್ಣ, ಶಕುನಿ, ದುರ್ಯೋಧನ ಅವನ ತಮ್ಮಂದಿರು ಮತ್ತು ಗಾಂಧಾರಿ, ಭಾನುಮತಿ, ಸಚಿವರುಗಳು, ಸಾಮಂತರು, ಪರಿಜನರು, ಪುರಜನರು ಆಪ್ತಬಾಂಧವರು ಎಲ್ಲರ ಕುಶಲವನ್ನು ವಿದುರ ವಿಸ್ತರಿಸಿ ಹೇಳಿದನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಧರಣಿಪತಿ ಗಾಂಗೇಯ ಗೌತಮ
ಗುರುತನುಜ ಗುರು ಕರ್ಣ ಸೌಬಲ
ಕುರುನೃಪತಿಯನುಜಾತ್ಮಜರು ಗಾಂಧಾರಿ ಭಾನುಮತಿ
ವರಸಚಿವ ಸಾಮಂತ ಪರಿಜನ
ಪುರಜನಂಗಳ ಕುಶಲವನು ವಿ
ಸ್ತರಿಸಿದನು ವಿದುರನು ಮಹೀಪತಿಗಾಪ್ತ ಬಾಂಧವರ ॥83॥
೦೮೪ ಪಾವುಡಙ್ಗಳನಿತ್ತು ಭೂಪನ ...{Loading}...
ಪಾವುಡಂಗಳನಿತ್ತು ಭೂಪನ
ನೋವಿದನು ನಾನಾ ಕಥಾ ಸಂ
ಭಾವನಾನಂತರದ ಮಜ್ಜನ ಭೋಜನಾದಿಗಳ
ಆ ವಿವಿಧ ಸತ್ಕಾರದಲಿ ದಿವ
ಸಾವಸಾನವ ಕಳೆದು ಬಳಿಕ ಸ
ಭಾ ವಳಯದಲಿ ಪಾಂಡುಸುತರಿಗೆ ನುಡಿದನಾ ವಿದುರ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಡುಗೊರೆಗಳನ್ನು ಕೊಟ್ಟು ಧರ್ಮರಾಜನನ್ನು ಪ್ರೀತಿಯಿಂದ ಕಂಡನು. ನಾನಾ ಸಂಗತಿಗಳನ್ನೆಲ್ಲ ಮಾತನಾಡಿಯಾದ ಮೇಲೆ ಮಜ್ಜನ ಭೋಜನಾದಿಗಳನ್ನು ಮಾಡಿದ. ಹಾಗೆ ವಿವಿಧ ಸತ್ಕಾರಗಳಲ್ಲಿಯೇ ಹಗಲೆಲ್ಲ ಕಳೆದು ಸಂಜೆಯ ನಂತರ ಸಭಾವಲಯದಲ್ಲಿ ಪಾಂಡವರಿಗೆ ವಿಷಯವನ್ನು ಹೇಳಿದ.
ಪದಾರ್ಥ (ಕ.ಗ.ಪ)
ಪಾವುಡ-ಉಡುಗೊರೆ
ಮೂಲ ...{Loading}...
ಪಾವುಡಂಗಳನಿತ್ತು ಭೂಪನ
ನೋವಿದನು ನಾನಾ ಕಥಾ ಸಂ
ಭಾವನಾನಂತರದ ಮಜ್ಜನ ಭೋಜನಾದಿಗಳ
ಆ ವಿವಿಧ ಸತ್ಕಾರದಲಿ ದಿವ
ಸಾವಸಾನವ ಕಳೆದು ಬಳಿಕ ಸ
ಭಾ ವಳಯದಲಿ ಪಾಂಡುಸುತರಿಗೆ ನುಡಿದನಾ ವಿದುರ ॥84॥
೦೮೫ ಧರಣಿಪತಿ ಬೆಸಸಿದನು ...{Loading}...
ಧರಣಿಪತಿ ಬೆಸಸಿದನು ನೀವೈ
ವರು ಕುಮಾರರು ರಾಜಸೂಯಾ
ಧ್ವರ ಮಹಾವ್ರತದೇಕ ಭುಕ್ತಾದಿಯಲಿ ಬಳಲಿದಿರಿ
ವರ ಸಭೆಯ ರಚಿಸಿದರು ಹಸ್ತಿನ
ಪುರಿಗೆ ಬಿಜಯಂಗೈದು ವಿಭವೋ
ತ್ಕರದ ವಿಮಳ ದ್ಯೂತದಲಿ ರಮಿಸುವುದು ನೀವೆಂದ ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರರಾಜ ಅಪ್ಪಣೆಕೊಡಿಸಿದ್ದಾನೆ. ನೀವೈದು ಜನ ಮಕ್ಕಳೂ ರಾಜಸೂಯ ಯಾಗದ ಮಹಾವ್ರತದ ಸಂದರ್ಭದಲ್ಲಿ ಒಪ್ಪೊತ್ತಿನ ಭೋಜನವೇ ಮೊದಲಾದ ಆಚರಣೆಯ ಕಾರಣದಿಂದ ಬಹಳ ಬಳಲಿದ್ದೀರಿ. ಅಲ್ಲಿ ಶ್ರೇಷ್ಠವಾದ ಸಭಾಭವನವನ್ನು ರಚಿಸಿದ್ದಾರೆ. ನೀವು ಹಸ್ತಿನಾಪುರಕ್ಕೆ ದಯಮಾಡಿ ವೈಭವದಿಂದ ವಿಮಲ ದ್ಯೂತದಲ್ಲಿ ತೊಡಗಿ ಆನಂದಿಸುವುದು” ಎಂದು ವಿದುರ ಹೇಳಿದ.
ಪದಾರ್ಥ (ಕ.ಗ.ಪ)
ಏಕ ಭುಕ್ತಿ - ದಿನದಲ್ಲಿ ಒಂದು ಹೊತ್ತು ಮಾತ್ರ ಊಟ ಮಾಡುವ ಪದ್ಧತಿ.
ಮೂಲ ...{Loading}...
ಧರಣಿಪತಿ ಬೆಸಸಿದನು ನೀವೈ
ವರು ಕುಮಾರರು ರಾಜಸೂಯಾ
ಧ್ವರ ಮಹಾವ್ರತದೇಕ ಭುಕ್ತಾದಿಯಲಿ ಬಳಲಿದಿರಿ
ವರ ಸಭೆಯ ರಚಿಸಿದರು ಹಸ್ತಿನ
ಪುರಿಗೆ ಬಿಜಯಂಗೈದು ವಿಭವೋ
ತ್ಕರದ ವಿಮಳ ದ್ಯೂತದಲಿ ರಮಿಸುವುದು ನೀವೆಂದ ॥85॥
೦೮೬ ನೋಡುವುದು ಬಾನ್ಧವರ ...{Loading}...
ನೋಡುವುದು ಬಾಂಧವರ ನಿಮ್ಮಡಿ
ಮಾಡುವುದು ಸೌಖ್ಯವನು ಭಯದಲಿ
ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ
ಜೋಡಿಸುವುದಗಲದಲಿ ಕೀರ್ತಿಯ
ಝಾಡಿಯನು ನಿಮ್ಮಭ್ಯುದಯ ಬಳಿ
ಕೇಡಿಸುವುದೈ ದುಂದುಮಾರ ದಿಲೀಪ ದಶರಥರ ॥86॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂಟರಿಷ್ಟರನ್ನೆಲ್ಲ ನೋಡಿ ಸುಖವನ್ನನುಭವಿಸುವುದು. ನಿಮ್ಮ ವೈಭವವನ್ನು ನೋಡಿಯೇ ಶತ್ರುರಾಜರಿಗೆ ಭಯವುಂಟಾಗಿ ಸಮರಭಯವೆಂಬ ಬೀಜವೇ ಬಾಡಿಹೋಗುತ್ತದೆ. ನಿಮ್ಮ ಕೀರ್ತಿಯ ಅತಿಶಯತೆ ವಿಸ್ತಾರವಾಗಿ ಹರಡುತ್ತದೆ. ಆಗ ನಿಮ್ಮ ಅಭ್ಯುದಯ
ದುಂದುಮಾರ, ದಿಲೀಪ, ದಶರಥರನ್ನೂ ಅಣಕಿಸುತ್ತದೆ ಎಂದಿದ್ದಾರೆ.
ಪಾಠಾನ್ತರ (ಕ.ಗ.ಪ)
ಕೇಡಿಸಯವದೆ - ಕೇಡಿಸುವುದೈ : ಸಭಾಪರ್ವ , ಮೈ.ವಿ.ವಿ. ಎಸ್.ಬಸಪ್ಪ
ಮೂಲ ...{Loading}...
ನೋಡುವುದು ಬಾಂಧವರ ನಿಮ್ಮಡಿ
ಮಾಡುವುದು ಸೌಖ್ಯವನು ಭಯದಲಿ
ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ
ಜೋಡಿಸುವುದಗಲದಲಿ ಕೀರ್ತಿಯ
ಝಾಡಿಯನು ನಿಮ್ಮಭ್ಯುದಯ ಬಳಿ
ಕೇಡಿಸುವುದೈ ದುಂದುಮಾರ ದಿಲೀಪ ದಶರಥರ ॥86॥
೦೮೭ ನಮ್ಬಿಸುವ ನಿಮ್ಮಯ್ಯನಿದ ...{Loading}...
ನಂಬಿಸುವ ನಿಮ್ಮಯ್ಯನಿದ ಬೇ
ಡೆಂಬವರು ಗುರು ಭೀಷ್ಮರುಳಿದವ
ರಂಬಿನೋಪಾದಿಯಲಿ ನಿಲುವರು ಪಲವು ಮಾತೇನು
ಶಂಬರರು ನೃಪ ಕರ್ಣ ಶಕುನಿಗ
ಳೆಂಬವರು ನಿಮ್ಮೊಡನೆ ವಚನಾ
ಡಂಬರವೆ ಬಹುದುಂಟೆ ಬಿಜಯಂಗೈಯಿ ನೀವೆಂದ ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿಮ್ಮಯ್ಯ ನಿಮ್ಮನ್ನು ಹೀಗೆ ನಂಬಿಸಿದರೆ ಗುರು ದ್ರೋಣರು, ಭೀಷ್ಮರು ನೀವು ಬರುವುದು ಬೇಡವೆನ್ನುತ್ತಾರೆ. ಉಳಿದವರೆಲ್ಲ ಅಂಬಿನ ಹಾಗೆ ನಿಲ್ಲುತ್ತಾರೆ. ( ಯಾವ ಪಕ್ಷವನ್ನೂ ಥಟ್ಟನೆ ಸೇರುವುದಿಲ್ಲ.) ಹೆಚ್ಚು ಮಾತಿನಿಂದ ಪ್ರಯೋಜನವೇನು ? ದುರ್ಯೋಧನ ರಾಜ, ಕರ್ಣ. ಶಕುನಿಗಳು ಶಂಬರರು. ಸುಮ್ಮನೆ ನಿಮ್ಮ ಬಳಿ ಮಾತಿನ ಆಡಂಬರವೇಕೆ ? ನೀವು ಬರುವುದುಂಟೆ, ದಯಮಾಡಿಸಿ” ಎಂದ ವಿದುರ.
ಪದಾರ್ಥ (ಕ.ಗ.ಪ)
ಶಂಬರರು-ಶಂಬರಾಸುರನಂಥವರು
ಅಂಬನೋಪಾದಿಯಲಿ -ಎರಡು ಕಡೆಗೂ ಬಾಗುವ ಹಾಗೆ, ಎಡಬಿಡಂಗಿಯಾಗಿ
ಮೂಲ ...{Loading}...
ನಂಬಿಸುವ ನಿಮ್ಮಯ್ಯನಿದ ಬೇ
ಡೆಂಬವರು ಗುರು ಭೀಷ್ಮರುಳಿದವ
ರಂಬಿನೋಪಾದಿಯಲಿ ನಿಲುವರು ಪಲವು ಮಾತೇನು
ಶಂಬರರು ನೃಪ ಕರ್ಣ ಶಕುನಿಗ
ಳೆಂಬವರು ನಿಮ್ಮೊಡನೆ ವಚನಾ
ಡಂಬರವೆ ಬಹುದುಂಟೆ ಬಿಜಯಂಗೈಯಿ ನೀವೆಂದ ॥87॥
೦೮೮ ಕರೆಸುವನು ಧೃತರಾಷ್ಟ್ರ ...{Loading}...
ಕರೆಸುವನು ಧೃತರಾಷ್ಟ್ರ ಗಡ ನ
ಮ್ಮರಸನಲಿ ಧೃತರಾಷ್ಟ್ರನಲಿ ನಮ
ಗೆರಡು ಮನವೇ ಭಾವಭೇದವೆ ಪಾಂಡು ಬೊಪ್ಪನಲಿ
ವರವೆ ದೊರಕಲಿ ಶಾಪವೇ ಮೇಣ್ಬ
ರಲಿ ಭಯವಿಲ್ಲೆಮಗೆ ಬೊಪ್ಪನ
ಕರಣ ಕೃತಿಗೆ ಹಸಾದವೆಂದನು ಧರ್ಮನಂದನನು ॥88॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರೆಸುತ್ತಿರುವವನು ಧೃತರಾಷ್ಟ್ರನಲ್ಲವೇ ? ನಮ್ಮ ತಂದೆಯಾದ ಪಾಂಡುರಾಜನಲ್ಲಿ ಹಾಗೂ ಧೃತರಾಷ್ಟ್ರನಲ್ಲಿ ಎರಡು ಬಗೆಯ ಮನಸ್ಸುಂಟೇ, ಭಾವಭೇದವುಂಟೇ ? ವರವೇ ದೊರಕಲಿ ಅಥವಾ ಶಾಪವೇ ಬರಲಿ ದೊಡ್ಡಪ್ಪ ಮಾಡುವ ಕೆಲಸಕ್ಕೆ ನಮ್ಮದು ಒಪ್ಪಿಗೆ” ಎಂದ ಧರ್ಮನಂದನ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರೆಸುವನು ಧೃತರಾಷ್ಟ್ರ ಗಡ ನ
ಮ್ಮರಸನಲಿ ಧೃತರಾಷ್ಟ್ರನಲಿ ನಮ
ಗೆರಡು ಮನವೇ ಭಾವಭೇದವೆ ಪಾಂಡು ಬೊಪ್ಪನಲಿ
ವರವೆ ದೊರಕಲಿ ಶಾಪವೇ ಮೇಣ್ಬ
ರಲಿ ಭಯವಿಲ್ಲೆಮಗೆ ಬೊಪ್ಪನ
ಕರಣ ಕೃತಿಗೆ ಹಸಾದವೆಂದನು ಧರ್ಮನಂದನನು ॥88॥
೦೮೯ ದ್ಯೂತ ಮೃಗಯಾವ್ಯಸನ ...{Loading}...
ದ್ಯೂತ ಮೃಗಯಾವ್ಯಸನ ಪೌರು
ಷ್ಯಾತಿಶಯ ಮಧುಪಾನ ಕಾಂತಾ
ಪ್ರೀತಿ ದಂಡ ವಿಘಾತಿ ದೂಷಣವರ್ಥ ಸಂಗತಿಯು
ಜಾತ ಸಪ್ತವ್ಯಸನವಿವು ಸಂ
ಪ್ರೀತಿಕರ ಮೊದಲಲಿ ವಿಪಾಕದೊ
ಳಾತು ಕೆಡಿಸುವ ಹದನನರಿದಿಹುದೆಂದನಾ ವಿದುರ ॥89॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ಯೂತ, ಬೇಟೆಯ ಗೀಳು, ಪೌರುಷ್ಯದ ಅತಿಶಯತೆ, ಮದ್ಯಪಾನ. ಸ್ತ್ರೀವ್ಯಾಮೋಹ, ದಂಡವಿಘಾತಿ, ಅರ್ಥದೂಷಣ ಸಂಗತಿ ಇವು ಸಪ್ತವ್ಯಸನಗಳು. ಮೊದಲಲ್ಲಿ ತುಂಬ ಪ್ರಿಯವಾಗಿರುತ್ತವೆ. ಕೊನೆಯಲ್ಲಿ ಹಾದಿ ಕೆಡಿಸಿಬಿಡುತ್ತವೆ ಈ ವಿಷಯವನ್ನು ಅರಿತಿರಬೇಕು ಎಂದು ವಿದುರ ಎಚ್ಚರಿಸಿದ.
ಪದಾರ್ಥ (ಕ.ಗ.ಪ)
ಮೃಗಯಾವ್ಯಸನ-ಬೇಟೆಯ ಚಟ,
ವಿಪಾಕದೊಳು-ಪಕ್ವವಾದ ಮೇಲೆ, ಕೊನೆಯಲ್ಲಿ,
ದಂಡ ವಿಘಾತಿ - ದುಂಡಾವರ್ತಿ, ಹಲ್ಲೆ ,
ಅರ್ಥದೂಷಣ - ಹಣವನ್ನು ದುರುಪಯೋಗ ಮಾಡುವುದು.
ಟಿಪ್ಪನೀ (ಕ.ಗ.ಪ)
ಸಪ್ತವಸ್ಯನ-ಜೂಜು, ಬೇಟೆ, ಹೆಂಡ, ಮಾಂಸ, ಸ್ತ್ರೀ ವ್ಯಸನ, ದಂಡ ವಿಘಾತಿ ಮತ್ತು ಅರ್ಥದೂಷಣ
ಮೂಲ ...{Loading}...
ದ್ಯೂತ ಮೃಗಯಾವ್ಯಸನ ಪೌರು
ಷ್ಯಾತಿಶಯ ಮಧುಪಾನ ಕಾಂತಾ
ಪ್ರೀತಿ ದಂಡ ವಿಘಾತಿ ದೂಷಣವರ್ಥ ಸಂಗತಿಯು
ಜಾತ ಸಪ್ತವ್ಯಸನವಿವು ಸಂ
ಪ್ರೀತಿಕರ ಮೊದಲಲಿ ವಿಪಾಕದೊ
ಳಾತು ಕೆಡಿಸುವ ಹದನನರಿದಿಹುದೆಂದನಾ ವಿದುರ ॥89॥
೦೯೦ ಖಳರು ಕೌರವರಕ್ಷಧೂರ್ತರ ...{Loading}...
ಖಳರು ಕೌರವರಕ್ಷಧೂರ್ತರ
ತಿಲಕ ಶಕುನಿ ವಿಕಾರಿಯಾ ದು
ಸ್ಸಳೆಯ ಪತಿ ದೌರ್ಜನ್ಯಮಖದೀಕ್ಷಿತನು ಕಲಿಕರ್ಣ
ಉಳಿದ ಭೀಷ್ಮ ದ್ರೋಣರೇ ನಿ
ಷ್ಫಲ ವಿಧಾನರು ನಿಮ್ಮ ಬೊಪ್ಪನ
ಬಳಕೆ ಕನ್ನಡಿ ನೋಡಿಕೊಳಿ ನೀವೆಂದನಾ ವಿದುರ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರು ನೀಚರು, ಪಗಡೆಯಾಟದಲ್ಲಿ ಮೋಸಗಾರರ ತಿಲಕ ಶಕುನಿ, ಆ ದುಶ್ಶಳೆಯ ಪತಿಯಾದ ಸೈಂಧವ ವಿಕಾರ ಸ್ವಭಾವದವನು. ದೌರ್ಜನ್ಯದ ಯಜ್ಞಕ್ಕೆ ದೀಕ್ಷೆ ಪಡೆದವನು ಕಲಿಕರ್ಣ. ಉಳಿದ ಭೀಷ್ಮ ದ್ರೋಣರಿಂದ ಯಾವ ಫಲವನ್ನೂ ನಿರೀಕ್ಷಿಸುವಂತಿಲ್ಲ. ನಿಮ್ಮ ಬೊಪ್ಪನ ವ್ಯವಹಾರ ಕನ್ನಡಿಯಾಗಿದೆ, ನೀವೇ ನೋಡಿಕೊಳ್ಳಿ. ಎಂದು ವಿದುರನು ಹೇಳಿದನು.
ಪದಾರ್ಥ (ಕ.ಗ.ಪ)
ಅಕ್ಷ ಧೂರ್ತರು-ಪಗಡೆಯಲ್ಲಿ ವಂಚಕರು
ಮೂಲ ...{Loading}...
ಖಳರು ಕೌರವರಕ್ಷಧೂರ್ತರ
ತಿಲಕ ಶಕುನಿ ವಿಕಾರಿಯಾ ದು
ಸ್ಸಳೆಯ ಪತಿ ದೌರ್ಜನ್ಯಮಖದೀಕ್ಷಿತನು ಕಲಿಕರ್ಣ
ಉಳಿದ ಭೀಷ್ಮ ದ್ರೋಣರೇ ನಿ
ಷ್ಫಲ ವಿಧಾನರು ನಿಮ್ಮ ಬೊಪ್ಪನ
ಬಳಕೆ ಕನ್ನಡಿ ನೋಡಿಕೊಳಿ ನೀವೆಂದನಾ ವಿದುರ ॥90॥
೦೯೧ ಪ್ರಕಟವದು ಸಲೆ ...{Loading}...
ಪ್ರಕಟವದು ಸಲೆ ಕರ್ಣ ಕೌರವ
ಶಕುನಿಗಳ ದುಶ್ಚೇಷ್ಟೆ ಭೀಷ್ಮಾ
ದ್ಯಕುಟಿಲರು ಸಲ್ಲರು ಸುಯೋಧನ ಮಂತ್ರ ಸಂಗತಿಗೆ
ಮುಕುರ ಪಥವೆಮ್ಮಯ್ಯನೆಂಬುದು
ವಿಕಳವಲ್ಲಲೆ ವಿದುರ ಪರಿ ಪಾ
ಲಕನಲೇ ಧೃತರಾಷ್ಟ್ರನಾತನ ನಂಬಿ ಬಹೆವೆಂದ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದು ಕರ್ಣ ಕೌರವ ಶಕುನಿಗಳ ದುಶ್ಚೇಷ್ಟೆ ಎಂಬುದು ಪ್ರಕಟವಾದ ವಿಷಯ. ಭೀಷ್ಮನೇ ಮೊದಲಾದವರು ಕುಟಿಲರಲ್ಲ. ಸುಯೋಧನನ ಮಂತ್ರಾಲೋಚನೆಗೆ ಅವರು ಸಲ್ಲುವುದಿಲ್ಲ. ನಮ್ಮಯ್ಯ ಕನ್ನಡಿಯಂತೆ ( ಪಾರದರ್ಶಕವಾದ ಮನಸ್ಸಿನವನು) ಎನ್ನುವುದು ತಪ್ಪಲ್ಲವಷ್ಟೆ ? ವಿದುರ, ರಕ್ಷಿಸುವವನಲ್ಲವೇ ಧೃತರಾಷ್ಟ್ರ ? ಅವನನ್ನೇ ನಂಬಿ ಬರುತ್ತೇವೆ ಎಂದ ಯುಧಿಷ್ಠಿರ.
ಪದಾರ್ಥ (ಕ.ಗ.ಪ)
ಮುಕುರ-ಕನ್ನಡಿ
ಮೂಲ ...{Loading}...
ಪ್ರಕಟವದು ಸಲೆ ಕರ್ಣ ಕೌರವ
ಶಕುನಿಗಳ ದುಶ್ಚೇಷ್ಟೆ ಭೀಷ್ಮಾ
ದ್ಯಕುಟಿಲರು ಸಲ್ಲರು ಸುಯೋಧನ ಮಂತ್ರ ಸಂಗತಿಗೆ
ಮುಕುರ ಪಥವೆಮ್ಮಯ್ಯನೆಂಬುದು
ವಿಕಳವಲ್ಲಲೆ ವಿದುರ ಪರಿ ಪಾ
ಲಕನಲೇ ಧೃತರಾಷ್ಟ್ರನಾತನ ನಂಬಿ ಬಹೆವೆಂದ ॥91॥
೦೯೨ ಕರೆಸಿ ನಿಮ್ಮಯ ...{Loading}...
ಕರೆಸಿ ನಿಮ್ಮಯ ಮಂತ್ರಿಜನ ಮು
ಖ್ಯರ ಪಸಾಯ್ತರ ಕೇಳುವುದು ಮನ
ದೊರೆಗೆ ತೂಕಕೆ ಬಹರೆ ಭೀಮಾದಿಗಳ ಮತವಿಡಿದು
ಅರಸ ನಿಶ್ಚೈಸುವುದೆನಲು ನೀ
ಮರುಳೆ ವಿದುರ ಭವದ್ವಚೋವಿ
ಸ್ತರಕೆ ಪಡಿಸಣವುಂಟೆ ಶಿವ ಶಿವಾಯೆಂದನಾ ಭೂಪ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನು " ನಿಮ್ಮ ಮಂತ್ರಿಜನರಲ್ಲಿ ಮುಖ್ಯರಾದವರನ್ನೂ ಸಾಮಂತ ರಾಜರುಗಳನ್ನೂ ಕರೆಸಿ ಸಮಾಲೋಚನೆ ನಡೆಸು. ನಿನ್ನ ಮನಸ್ಸಿನಲ್ಲಿ ಒರೆಹಚ್ಚಿ ನೋಡು, ತೂಕಮಾಡಿ ನೋಡು. ನಿನಗೆ ಸಮಾಧಾನವಾದರೆ ಭೀಮಾರ್ಜುನರ ಅಭಿಪ್ರಾಯವನ್ನು ಕೇಳಿ ಅನಂತರ ಬರುವ ವಿಷಯವನ್ನು ನಿರ್ಧರಿಸು" ಎಂದ. ಅದಕ್ಕೆ
ಯುಧಿಷ್ಠಿರ, “ವಿದುರಾ, ನೀನು ಮರುಳು. ನೀನು ವಿಶದವಾಗಿ ಹೇಳಿರುವ ಮಾತಿಗೆ ಇನ್ನು ಪರೀಕ್ಷೆ ಬೇಕೆ ಶಿವಶಿವಾ !” ಎಂದುಬಿಟ್ಟ.
ಪದಾರ್ಥ (ಕ.ಗ.ಪ)
ಪಸಾಯ್ತು-ಸಾಮಂತರಾಜ, ಭವತ್-ನಿನ್ನ,
ಪಡಿಸಣ-ಪರಿಶೀಲನೆ, ಪರೀಕ್ಷೆ
ಮೂಲ ...{Loading}...
ಕರೆಸಿ ನಿಮ್ಮಯ ಮಂತ್ರಿಜನ ಮು
ಖ್ಯರ ಪಸಾಯ್ತರ ಕೇಳುವುದು ಮನ
ದೊರೆಗೆ ತೂಕಕೆ ಬಹರೆ ಭೀಮಾದಿಗಳ ಮತವಿಡಿದು
ಅರಸ ನಿಶ್ಚೈಸುವುದೆನಲು ನೀ
ಮರುಳೆ ವಿದುರ ಭವದ್ವಚೋವಿ
ಸ್ತರಕೆ ಪಡಿಸಣವುಂಟೆ ಶಿವ ಶಿವಾಯೆಂದನಾ ಭೂಪ ॥92॥
೦೯೩ ಹೋಹುದೇನಭಿಮತವೆ ಧೂರ್ತ ...{Loading}...
ಹೋಹುದೇನಭಿಮತವೆ ಧೂರ್ತ
ವ್ಯೂಹವದು ಭೀಷ್ಮಾದಿ ಹಿರಿಯರು
ಸಾಹಸಿಗರಲ್ಲದೆ ರಹಸ್ಯಕೆ ಸಲ್ಲರವರುಗಳು
ಕಾಹುರರು ಕೌರವರು ಸಮರೋ
ತ್ಸಾಹಶಕ್ತಿಗೆ ಠಾವದಲ್ಲ
ವ್ಯಾಹತವೆ ಮತವೆಂದು ಭೀಮಾದಿಗಳ ಬೆಸಗೊಂಡ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
93., ಧರ್ಮರಾಯನು “ಹಸ್ತಿನಾವತಿಗೆ ಹೋಗುವುದೇನು ನಿಮಗೆ ಒಪ್ಪಿಗೆಯೇ? ಅದು ಮೋಸಗಾರರ ಕೂಟ. ಭೀಷ್ಮನೇ ಮೊದಲಾದವರು ಸಾಹಸಿಗಳೇ ಹೊರತು ಅವರುಗಳು ರಹಸ್ಯ ಸಮಾಲೋಚನೆಗಳಿಗೆ ಸಲ್ಲುವವರಲ್ಲ. ಕೌರವರು ಕಾಹುರರು. ನಮ್ಮ ಸಮರೋತ್ಸಾಹ ಶಕ್ತಿಗೆ ಅದು ಸ್ಥಳವಲ್ಲ. ನಿಮ್ಮ ಅಭಿಪ್ರಾಯ ವಿಧೇಯತೆಯಿಂದ ಸಮ್ಮತಿಸುವುದೇ ? ಎಂದು ಭೀಮಾದಿಗಳನ್ನು ಕೇಳಿದ.
ಪದಾರ್ಥ (ಕ.ಗ.ಪ)
ಕಾಹುರರು-ಉದ್ರೇಕಗೊಳ್ಳುವವರು, ಅವ್ಯಾಹತ-ನಡುವೆ ತಡೆಯಿಲ್ಲದೆ, ನಿರಂತರ
ಮೂಲ ...{Loading}...
ಹೋಹುದೇನಭಿಮತವೆ ಧೂರ್ತ
ವ್ಯೂಹವದು ಭೀಷ್ಮಾದಿ ಹಿರಿಯರು
ಸಾಹಸಿಗರಲ್ಲದೆ ರಹಸ್ಯಕೆ ಸಲ್ಲರವರುಗಳು
ಕಾಹುರರು ಕೌರವರು ಸಮರೋ
ತ್ಸಾಹಶಕ್ತಿಗೆ ಠಾವದಲ್ಲ
ವ್ಯಾಹತವೆ ಮತವೆಂದು ಭೀಮಾದಿಗಳ ಬೆಸಗೊಂಡ ॥93॥
೦೯೪ ಜೀಯ ಬಿನ್ನಹವಿನ್ದು ...{Loading}...
ಜೀಯ ಬಿನ್ನಹವಿಂದು ದೇಹ
ಚ್ಛಾಯೆಗುಂಟೇ ಬೇರೆ ಚೇಷ್ಟೆ ನ
ವಾಯಿಯೇ ನಮ್ಮಿನಿಬರಿಗೆ ರಾಜಾಭಿಮಾನದಲಿ
ನೋಯೆ ನೋವುದು ನಿಮ್ಮ ದೇಹದ
ಬೀಯದಲಿ ನಾವ್ ಬೀಯವಹುದೆ
ಮ್ಮಾಯತವು ಸ್ವಾತಂತ್ರ್ಯವೆಮಗಿಲ್ಲೆಂದನಾ ಭೀಮ ॥94॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಭೀಮನ ಉತ್ತರವಿದು “ಜೀಯ, ಬಿನ್ನಹ. ಇಂದು ಈ ದೇಹದ ನೆರಳಿಗೆ ದೇಹವನ್ನು ಬಿಟ್ಟು ಪ್ರತ್ಯೇಕವಾದ ಚಲನೆಯುಂಟೇ? ನಮ್ಮಿಷ್ಟು ಮಂದಿಗೂ ರಾಜನ ಅಭಿಮಾನದ ವಿಷಯದಲ್ಲಿ ಹೊಸ ನಡತೆಯೆಂಬುದಿದೆಯೇ ? ನೀವು ನೊಂದರೆ ನಾವು ನೋಯುವುದು. ನಿಮ್ಮ ದೇಹ ವಿನಾಶವಾದಲ್ಲಿ ನಾವೂ ವಿನಾಶವನ್ನು ಹೊಂದುವುದು, ಇದೇ ನಮಗೆ ಉಚಿತವಾದದ್ದು. ಬೇರೆ ಸ್ವಾತಂತ್ರ್ಯ ನಮಗಿಲ್ಲ.” ಎಂದ ಭೀಮ.
ಪದಾರ್ಥ (ಕ.ಗ.ಪ)
ನವಾಯಿ-ಹೊಸಬಗೆ
ಪಾಠಾನ್ತರ (ಕ.ಗ.ಪ)
ನಾಣ್ಬೀಯವಹುದೆ - ನಾವ್ ಬೀಯವಹುದೆ
ಸಭಾಪರ್ವ, ಮೈ.ವಿ.ವಿ.
ಶ್ರೀ ಸಿ. ಬಸಪ್ಪ
ಮೂಲ ...{Loading}...
ಜೀಯ ಬಿನ್ನಹವಿಂದು ದೇಹ
ಚ್ಛಾಯೆಗುಂಟೇ ಬೇರೆ ಚೇಷ್ಟೆ ನ
ವಾಯಿಯೇ ನಮ್ಮಿನಿಬರಿಗೆ ರಾಜಾಭಿಮಾನದಲಿ
ನೋಯೆ ನೋವುದು ನಿಮ್ಮ ದೇಹದ
ಬೀಯದಲಿ ನಾವ್ ಬೀಯವಹುದೆ
ಮ್ಮಾಯತವು ಸ್ವಾತಂತ್ರ್ಯವೆಮಗಿಲ್ಲೆಂದನಾ ಭೀಮ ॥94॥
೦೯೫ ಕರೆಸುವನು ಧೃತರಾಷ್ಟ್ರ ...{Loading}...
ಕರೆಸುವನು ಧೃತರಾಷ್ಟ್ರ ನಿಮ್ಮದು
ಕರೆವ ಮಣಿಹ ಸುಯೋಧನಾದ್ಯರ
ಮರುಳುಗಳ ಮಾತೇನು ಹಿತವರು ನೀವಲಾ ನನಗೆ
ಧರಣಿಯಿದು ಶಾಶ್ವತವೆ ತಂದೆಗೆ
ಹಿರಿಯನಾ ಧೃತರಾಷ್ಟ್ರನಾಜ್ಞೆಯ
ಶಿರದೊಳಾಂತೆನು ಬಹನೆನುತ ನಿಶ್ಚೈಸಿದನು ನೃಪತಿ ॥95॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ವಿದುರನಿಗೆ “ಕರೆಸುವವನು ಧೃತರಾಷ್ಟ್ರ. ಕರೆಯುವ ಕೆಲಸ ನಿಮ್ಮದು. ಸುಯೋಧನನೇ ಮೊದಲಾದ ಮರುಳುಗಳ ಮಾತು ಕಟ್ಟಿಕೊಂಡೇನು ? ನಮಗೆ ಹಿತವಂತರಾಗಿರುವವರು ನೀವಲ್ಲವೇ ?
ಈ ಧರಣಿಯೇನು ಶಾಶ್ವತವೇ ? ತಂದೆಗೂ ಹಿರಿಯನಾದವನು ಧೃತರಾಷ್ಟ್ರ. ಆದ್ದರಿಂದ ಆತನ ಆಜ್ಞೆಯನ್ನು ಶಿರಸಾವಹಿಸಿ ಬರುತ್ತೇನೆ."
ಎಂದು ತನ್ನ ನಿರ್ಧಾರವನ್ನು ತಿಳಿಸಿದ.
ಪದಾರ್ಥ (ಕ.ಗ.ಪ)
ಮಣಿಹ - ಕಾರ್ಯ
ಮೂಲ ...{Loading}...
ಕರೆಸುವನು ಧೃತರಾಷ್ಟ್ರ ನಿಮ್ಮದು
ಕರೆವ ಮಣಿಹ ಸುಯೋಧನಾದ್ಯರ
ಮರುಳುಗಳ ಮಾತೇನು ಹಿತವರು ನೀವಲಾ ನನಗೆ
ಧರಣಿಯಿದು ಶಾಶ್ವತವೆ ತಂದೆಗೆ
ಹಿರಿಯನಾ ಧೃತರಾಷ್ಟ್ರನಾಜ್ಞೆಯ
ಶಿರದೊಳಾಂತೆನು ಬಹನೆನುತ ನಿಶ್ಚೈಸಿದನು ನೃಪತಿ ॥95॥
೦೯೬ ಇರುಳ ನೂಕಿದರುದಯದಲಿ ...{Loading}...
ಇರುಳ ನೂಕಿದರುದಯದಲಿ ಭೂ
ಸುರರ ಕರೆಸಿದರಮಳ ಸಾಂವ
ತ್ಸರಿಕ ಸುಮುಹೂರ್ತದಲಿ ಹೊಯಿಸಿದರಂದು ಹೊರಗುಡಿಯ
ಪುರದ ಕಾಹನು ಸಚಿವ ಸಾವಂ
ತರಿಗೆ ನೇಮಿಸಿ ಸಕಲ ದಳ ಮೋ
ಹರದ ದೆಖ್ಖಾಳವನು ಕಂಡನು ಪುರವ ಹೊರವಂಟ ॥96॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾತ್ರಿಯನ್ನು ಕಳೆದರು. ಉದಯದಲ್ಲಿ ಭೂಸುರರನ್ನು ಕರೆಸಿದರು. ಪ್ರಕೃತ ಸಂವತ್ಸರದಲ್ಲಿ ಉತ್ಕೃಷ್ಟವಾದ ಮುಹೂರ್ತವನ್ನು ಗೊತ್ತುಪಡಿಸಿದರು. (ಪ್ರಯಾಣ ಸೂಚಕವಾಗಿ) ಹೊರಗಡೆ ಧ್ವಜಗಳನ್ನು ಹಾರಿಸಿದರು. ಇಂದ್ರಪ್ರಸ್ಥದ ರಕ್ಷಣೆಯನ್ನು ಸಚಿವರಿಗೆ ಸಾಮಂತರಿಗೆ ಒಪ್ಪಿಸಿದರು. ಸಕಲ
ಸೈನ್ಯವೂ ಒಂದೆಡೆ ಕೂಡಿರಲು ಅದರ ಅತಿಶಯತೆಯನ್ನು ಪರಿಶೀಲಿಸಿ ಯುಧಿಷ್ಠಿರ ಪುರದಿಂದ ಹೊರಟ.
ಪದಾರ್ಥ (ಕ.ಗ.ಪ)
ಕಾಹು-ರಕ್ಷಣೆ, ದೆಖ್ಖಾಳ-ಅತಿಶಯತೆ
ಹೊರಗುಡಿಯ ಹೊಯ್ಸಿದರು - ಹೊರಗಡೆ ಬಿಡಾರಗಳನ್ನು ನಿರ್ಮಿಸಿದರು.
ಮೂಲ ...{Loading}...
ಇರುಳ ನೂಕಿದರುದಯದಲಿ ಭೂ
ಸುರರ ಕರೆಸಿದರಮಳ ಸಾಂವ
ತ್ಸರಿಕ ಸುಮುಹೂರ್ತದಲಿ ಹೊಯಿಸಿದರಂದು ಹೊರಗುಡಿಯ
ಪುರದ ಕಾಹನು ಸಚಿವ ಸಾವಂ
ತರಿಗೆ ನೇಮಿಸಿ ಸಕಲ ದಳ ಮೋ
ಹರದ ದೆಖ್ಖಾಳವನು ಕಂಡನು ಪುರವ ಹೊರವಂಟ ॥96॥
೦೯೭ ಬಿಗಿದ ರೆಞ್ಚೆಯ ...{Loading}...
ಬಿಗಿದ ರೆಂಚೆಯ ಹೊಮ್ಮಿಣಿಯ ಹೊರ
ಜೆಗಳ ಜೋಡಿಯ ಪಕ್ಕಘಂಟೆಯ
ಝಗೆಯ ಮೊಗರಂಬದ ನವಾಯಿಯ ಮಣಿಯ ಜಲವಟೆಯ
ಬಿಗಿದ ಕೂರಂಕುಶದ ಮಾವಂ
ತಿಗನ ಸನ್ನೆಗೆ ಕುಸಿದ ದಂತಿಯ
ಹೆಗಲ ಹೊಂಗದ್ದುಗೆಗೆ ಬಿಜಯಂಗೈದನಾ ಭೂಪ ॥97॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಕ್ಷಣೆಗಾಗಿ ಮೈಮೇಲೆ ಹೊದಿಸಲ್ಪಡುವ ಅಲಂಕಾರದ ಗವಸಿನಿಂದ ಕೂಡಿದ, ಚಿನ್ನದ ಮೆರುಗಿನ ಹಗ್ಗಗಳಿಂದ ಬಿಗಿಯಲ್ಪಟ್ಟ, ಎರಡು ಪಕ್ಕಗಳಲ್ಲೂ ಒಂದೊಂದು ಗಂಟೆಯನ್ನು ತೂಗುಹಾಕಿಕೊಂಡಿರುವ, ಪಕ್ಕರೆಕ್ಕೆಗಳಿದ್ದವು. ವಿಶಿಷ್ಟವಾದ ಉಡುಪು ಧರಿಸಿದ, ಮುಖಕ್ಕೆ ಅಲಂಕಾರದ ಮುಖವಾಡವನ್ನು ಧರಿಸಿದ, ಹೊಸಬಗೆಯ ರತ್ನಖಚಿತ ಜಲವಟೆಯಿಂದ ಸಜ್ಜಾದ, ಜೋಡಿಸಲ್ಪಟ್ಟ ಮೊನಚಾದ ಅಂಕುಶವನ್ನು ಹೊಂದಿದ ಆನೆಯನ್ನು ಮಾವಟಿಗ ಯುಧಿಷ್ಠಿರನ ಮುಂದೆ ತಂದು ನಿಲ್ಲಿಸಿದ. ಅವನು ಕೊಟ್ಟ ಸಂಜ್ಞೆಗೆ ಆನೆ
ಕುಸಿದು ಕುಳಿತಿತು. ಯುಧಿಷ್ಠಿರ ಅದನ್ನು ಏರಿ, ಅದರ ಹೆಗಲ ಮೇಲಿದ್ದ ಚಿನ್ನದ ಸಿಂಹಾಸನದಲ್ಲಿ ಕುಳಿತ.
ಪದಾರ್ಥ (ಕ.ಗ.ಪ)
ರೆಂಚೆ- ಪಕ್ಕರೆಕ್ಕೆ,
ಹೊಮ್ಮಿಣಿ-ಚಿನ್ನದ ಬಣ್ಣದ ಹಗ್ಗ ,
ಹೊರಜೆ-ಹಗ್ಗ ,
ಝಗೆ-ನಿಲುವಂಗಿ. ಮೇಲಂಗಿ
ಮೊಗರಂಬ-ಹಣೆಯ ಮೇಲಿನ ಕವಚ ,
ನವಾಯಿ-ಹೊಸಬಗೆ ,
ಜಲವಟೆ-ಆಭರಣ
ಮೂಲ ...{Loading}...
ಬಿಗಿದ ರೆಂಚೆಯ ಹೊಮ್ಮಿಣಿಯ ಹೊರ
ಜೆಗಳ ಜೋಡಿಯ ಪಕ್ಕಘಂಟೆಯ
ಝಗೆಯ ಮೊಗರಂಬದ ನವಾಯಿಯ ಮಣಿಯ ಜಲವಟೆಯ
ಬಿಗಿದ ಕೂರಂಕುಶದ ಮಾವಂ
ತಿಗನ ಸನ್ನೆಗೆ ಕುಸಿದ ದಂತಿಯ
ಹೆಗಲ ಹೊಂಗದ್ದುಗೆಗೆ ಬಿಜಯಂಗೈದನಾ ಭೂಪ ॥97॥
೦೯೮ ತಳಿತವಿನನುದಯದಲಿ ತಾರಾ ...{Loading}...
ತಳಿತವಿನನುದಯದಲಿ ತಾರಾ
ವಳಿಗಳದ್ಭುತವೆನಲು ಮುಕ್ತಾ
ವಳಿಯ ಧವಳಚ್ಛತ್ರದೆಡಬಲಕೊಲೆವ ಚೌರಿಗಳ
ಕೆಲಬಲದ ಭೀಮಾರ್ಜುನರ ಗಜ
ದಳದ ಮುಂದೆ ಕುಮಾರ ವರ್ಗದ
ಸುಳಿವುಗಳ ಸೌರಂಭದಲಿ ಹೊರವಂಟನಾ ಭೂಪ ॥98॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯೋದಯದ ಸಮಯದಲ್ಲಿ ನಕ್ಷತ್ರಗಳು ಉದಿಸಿವೆಯಲ್ಲ. ಇದು ಅದ್ಭುತ ಎನ್ನುವಂತೆ ಯುಧಿಷ್ಠಿರನ ಹಿಂದೆ ಮುತ್ತುಗಳಿಂದ
ಕೇವಣಿಸಲ್ಪಟ್ಟ ಧವಳಚ್ಚತ್ರವನ್ನು ಎತ್ತಿ ಹಿಡಿದರು. ಅವನ ಎಡಬಲಗಳಲ್ಲಿ ಬಿಳಿಯ ಚಾಮರವನ್ನು ಬೀಸುತ್ತಿದ್ದಾರೆ. ಭೀಮಾರ್ಜುನರು ಎಡಬಲ ಪಕ್ಕಗಳಲ್ಲಿ ನಡೆದುಬರುತ್ತಿದ್ದಾರೆ. ಅನೆಯ ಸೈನ್ಯದ ಮುಂದೆ ಕುಮಾರವರ್ಗ ನಡೆದು ಹೋಗುತ್ತಿದೆ. ಈ ಬಗೆಯ ಸಂಭ್ರಮದಿಂದ ಯುಧಿಷ್ಠಿರ ಹಸ್ತಿನಾವತಿಗೆ ಪ್ರಯಾಣ ಹೊರಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ತಳಿತವಿನನುದಯದಲಿ ತಾರಾ
ವಳಿಗಳದ್ಭುತವೆನಲು ಮುಕ್ತಾ
ವಳಿಯ ಧವಳಚ್ಛತ್ರದೆಡಬಲಕೊಲೆವ ಚೌರಿಗಳ
ಕೆಲಬಲದ ಭೀಮಾರ್ಜುನರ ಗಜ
ದಳದ ಮುಂದೆ ಕುಮಾರ ವರ್ಗದ
ಸುಳಿವುಗಳ ಸೌರಂಭದಲಿ ಹೊರವಂಟನಾ ಭೂಪ ॥98॥
೦೯೯ ಮುನ್ದೆ ಮೋಹರ ...{Loading}...
ಮುಂದೆ ಮೋಹರ ತೆಗೆದು ನಡೆದುದು
ಸಂದಣಿಸಿ ನಕುಲಾದಿ ಭೂಪರು
ಹಿಂದೆ ಮಣಿ ಕೇವಣದ ದಡ್ಡಿಯ ಬಿಗಿದ ಬೀಯಗದ
ಗೊಂದಣದ ಹೆಮ್ಮಕ್ಕಳಿದ್ದೆಸೆ
ಯಂದಣದ ಸಂದಣಿಗಳಲಿ ನಡೆ
ತಂದವನಿಬರ ರಾಣಿವಾಸದ ದಂಡಿಗೆಗಳಂದು ॥99॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂಭಾಗದಲ್ಲಿ ಸೈನ್ಯ ನಡೆದುಕೊಂಡು ಹೊರಟಿತು. ನಕುಲನೇ ಮೊದಲಾದ ರಾಜರುಗಳು ಹಿಂದೆ ನಡೆದು ಬಂದರು. ಮಣಿಖಚಿತ ಪರದೆಗಳನ್ನು ಇಳಿಬಿಟ್ಟು ಬೀಗಗಳನ್ನು ಬಿಗಿದಿದ್ದ ಮೇನೆಗಳಲ್ಲಿ ಎರಡೂ ಪಕ್ಕಗಳಲ್ಲಿ ಹೆಂಗಸರು ಗುಂಪಾಗಿ ಬರುತ್ತಿದ್ದರು. ಜೊತೆಗೆ ರಾಣಿವಾಸದ ದಂಡಿಗೆಗಳೂ, ಅಂದರೆ ಪಲ್ಲಕ್ಕಿಗಳೂ ಗದ್ದಲದೊಡನೆ ಒಡಗೂಡಿ ಬರುತ್ತಿದ್ದುವು.
ಪದಾರ್ಥ (ಕ.ಗ.ಪ)
ಮಣಿಕೇವಣದ-ಮಣಿಯನ್ನು ಜೋಡಿಸಿದ , ದಡ್ಡಿ-ತೆರೆ , ಅಂದಣ- ಪಲ್ಲಕ್ಕಿ , ದಂಡಿಗೆ- ಪಲ್ಲಕ್ಕಿ ,
ಗೊಂದಣ - ಗುಂಪು
ಮೂಲ ...{Loading}...
ಮುಂದೆ ಮೋಹರ ತೆಗೆದು ನಡೆದುದು
ಸಂದಣಿಸಿ ನಕುಲಾದಿ ಭೂಪರು
ಹಿಂದೆ ಮಣಿ ಕೇವಣದ ದಡ್ಡಿಯ ಬಿಗಿದ ಬೀಯಗದ
ಗೊಂದಣದ ಹೆಮ್ಮಕ್ಕಳಿದ್ದೆಸೆ
ಯಂದಣದ ಸಂದಣಿಗಳಲಿ ನಡೆ
ತಂದವನಿಬರ ರಾಣಿವಾಸದ ದಂಡಿಗೆಗಳಂದು ॥99॥
೧೦೦ ಉಡಿಗೆಗಳ ದೇಸಿಯ ...{Loading}...
ಉಡಿಗೆಗಳ ದೇಸಿಯ ವಿಳಾಸದ
ತೊಡಿಗೆಗಳ ಮೌಳಿಯ ನವಾಯಿಯ
ಮುಡಿಗಳೆಡ ಬಲದೋರೆನೋಟದ ಬಳ್ಳಿ ಬೆಳಗುಗಳ
ಕಡು ಬೆಮರ ತನು ಪರಿಮಳದೊಳೆಡೆ
ವಿಡದ ಗಗನೋದರದ ಗರುವೆಯ
ರಡಸಿದರು ದ್ರುಪದಾತ್ಮಜೆಯ ದಂಡಿಗೆಯ ಬಳಸಿನಲಿ ॥100॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೆಲುವಾದ ಉಡಿಗೆಗಳನ್ನು ಧರಿಸಿದ, ವಿಲಾಸಮಯ, ಆಭರಣಗಳನ್ನು ತೊಟ್ಟ. ಹೊಸ ಹೊಸ ಬಗೆಯಲ್ಲಿ ಮುಡಿಗಳನ್ನು ರಚಿಸಿಕೊಂಡ, ಬಳ್ಳಿಮಿಂಚಿನಂತೆ ಎಡಬಲಗಳಿಗೆ ಕಣ್ಣನೋಟವನ್ನು ಬೀರುತ್ತಿರುವಂತಹ, ಅತಿ ಬೆವರಿನಿಂದ ಕೂಡಿದ ದೇಹ ಪರಿಮಳದಿಂದ, ತೆಳ್ಳನೆಯ ಉದರದ ಸೊಗಸುಗಾತಿಯರು ಒತ್ತೊತ್ತಾಗಿ ದ್ರೌಪದಿಯ ಪಲ್ಲಕ್ಕಿಯನ್ನು ಬಳಸಿಕೊಂಡು ಬರುತ್ತಿದ್ದರು.
ಪದಾರ್ಥ (ಕ.ಗ.ಪ)
ಗಗನೋದರ- ಬಡನಡುವಿನ ( ಗಗನ- ಶೂನ್ಯ )
ಮೂಲ ...{Loading}...
ಉಡಿಗೆಗಳ ದೇಸಿಯ ವಿಳಾಸದ
ತೊಡಿಗೆಗಳ ಮೌಳಿಯ ನವಾಯಿಯ
ಮುಡಿಗಳೆಡ ಬಲದೋರೆನೋಟದ ಬಳ್ಳಿ ಬೆಳಗುಗಳ
ಕಡು ಬೆಮರ ತನು ಪರಿಮಳದೊಳೆಡೆ
ವಿಡದ ಗಗನೋದರದ ಗರುವೆಯ
ರಡಸಿದರು ದ್ರುಪದಾತ್ಮಜೆಯ ದಂಡಿಗೆಯ ಬಳಸಿನಲಿ ॥100॥
೧೦೧ ಭೂರಿ ಭೇರೀ ...{Loading}...
ಭೂರಿ ಭೇರೀ ವಾದ್ಯರವ ಕೈ
ವಾರಿಗಳ ಕಳಕಳದೊಳಡಗಿತು
ನಾರಿಯರ ನೇವುರದ ಮೊಳಗಿನೊಳದ್ದುದಾ ರಭಸ
ಆರು ಹೊಗಳುವರಾ ವಿಭವ ವಿ
ಸ್ತಾರ ಪವಣನು ಪಯಣ ಗತಿಯಲಿ
ಭೂರಮಣನೈತಂದು ಹೊಕ್ಕನು ಹಸ್ತಿನಾಪುರವ ॥101॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊಡ್ಡ ದೊಡ್ಡ ಭೇರೀ ವಾದ್ಯಗಳ ಧ್ವನಿ ಸ್ತುತಿಪಾಠಕರ ಸ್ತುತಿಯ ಕಳಕಳದಲ್ಲಿ ಅಡಗಿಹೋಯಿತು. ನಾರಿಯರ ಕಾಲುಗೆಜ್ಜೆಗಳ
ಧ್ವನಿಯಲ್ಲಿ ಆ ಧ್ವನಿ ಅಡಗಿಹೋಯಿತು. ಆ ಪ್ರಯಾಣಗತಿಯಲ್ಲಿನ ಆ ವೈಭವದ ವಿಸ್ತಾರದ ಪ್ರಮಾಣಮನ್ನು ಯಾರು ವರ್ಣಿಸಿಯಾರು ?
ಧರ್ಮರಾಜ ಹಾಗೆ ಪಯಣಿಸಿ ಹಸ್ತಿನಾಪುರವನ್ನು ಬಂದು ಸೇರಿದ.
ಪದಾರ್ಥ (ಕ.ಗ.ಪ)
ಕೈವಾರಿ-ಸ್ತುತಿಪಾಠಕ,
ನೇವುರ-ನೂಪುರ, ಕಾಲುಗೆಜ್ಜೆ,
ಅದ್ದು-ಮುಳುಗು
ಪವಣನು - ಪ್ರಮಾಣವನ್ನು
ಪಾಠಾನ್ತರ (ಕ.ಗ.ಪ)
ಪಣವನು –>ಪವಣನು
ಸಭಾಪರ್ವ, ಮೈ.ವಿ.ವಿ.
ಶ್ರೀ ಸಿ.ಬಸಪ್ಪ
ಮೂಲ ...{Loading}...
ಭೂರಿ ಭೇರೀ ವಾದ್ಯರವ ಕೈ
ವಾರಿಗಳ ಕಳಕಳದೊಳಡಗಿತು
ನಾರಿಯರ ನೇವುರದ ಮೊಳಗಿನೊಳದ್ದುದಾ ರಭಸ
ಆರು ಹೊಗಳುವರಾ ವಿಭವ ವಿ
ಸ್ತಾರ ಪವಣನು ಪಯಣ ಗತಿಯಲಿ
ಭೂರಮಣನೈತಂದು ಹೊಕ್ಕನು ಹಸ್ತಿನಾಪುರವ ॥101॥