೦೮

೦೦೦ ಸೂಚನೆ ರಾಜಸೂಯದೊಳಗ್ರ ...{Loading}...

ಸೂಚನೆ: ರಾಜಸೂಯದೊಳಗ್ರ ಪೂಜಾ
ರಾಜಿತನ ಶ್ರುತಿ ಮೌಳಿ ಮಣಿಯ ವಿ
ರಾಜಿತನ ಶಿಶುಪಾಲ ಜರೆದನು ಪೂರ್ವವೈರದಲಿ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಮುನಿಮಧ್ಯದಲಿ ನಿಮ್ಮ ನೃ
ಪಾಲ ಭೀಷ್ಮಂಗೆಂದನತಿ ಗಂಭೀರ ನಾದದಲಿ
ಭಾಳ ನೇತ್ರಗೆ ಪಡಿಯೆನಿಪ ಭೂ
ಪಾಲರಿದರೊಳಗಗ್ರ ಪೂಜ್ಯನ
ಹೇಳೆನಲು ಗಾಂಗೇಯ ನುಡಿದನು ವೇದ ಸನುಮತವ ॥1॥

೦೦೨ ಆರು ತಾರಾಗ್ರಹದ ...{Loading}...

ಆರು ತಾರಾಗ್ರಹದ ಮಧ್ಯದೊ
ಳಾರು ದಿನಕರನುಳಿಯೆ ಬಳಿಕಾ
ರಾರು ಸುರ ನಿಕರದಲಿ ಸೇವ್ಯರು ಶೂಲಧರನುಳಿಯೆ
ಆರು ನಿರ್ಜರ ನಿವಹದಲಿ ಜಂ
ಭಾರಿಯಲ್ಲದೆ ಮಾನನೀಯರ
ದಾರು ಜಗದಲಿ ಕೃಷ್ಣನಲ್ಲದೆ ಪೂಜ್ಯತಮರೆಂದ ॥2॥

೦೦೩ ಗಿರಿಗಳಲಿ ಹೇಮಾದ್ರಿ ...{Loading}...

ಗಿರಿಗಳಲಿ ಹೇಮಾದ್ರಿ ಘನಸಾ
ಗರದೊಳಗೆ ದುಗ್ಧಾಬ್ಧಿ ದೇವಾ
ಸುರ ನರೋರಗ ನಿಕರದಲಿ ನಾರಾಯಣನೆ ಮಿಗಿಲು
ಅರಸ ಸಂಶಯವೇಕೆ ಕೃಷ್ಣನ
ಚರಣವನು ತೊಳೆ ರಾಜಸೂಯಾ
ಧ್ವರಕೆ ಪೂಜಾಪಾತ್ರನೀ ಹರಿಯೆಂದನಾ ಭೀಷ್ಮ ॥3॥

೦೦೪ ವ್ಯಾಸ ನಾರದ ...{Loading}...

ವ್ಯಾಸ ನಾರದ ರೋಮಶಾದಿಗ
ಳೀ ಸಮಸ್ತ ಮುನೀಂದ್ರರಿದೆ ಯೀ
ಕೇಶವನು ಪೂಜಾರುಹನೆಯೆಂದಿವರ ಬೆಸಗೊಳ್ಳೈ
ಲೇಸನಾಡಿದೆ ಭೀಷ್ಮ ಬಳಿಕೇ
ನೀ ಸಮಸ್ತ ಚರಾಚರದೊಳೀ
ವಾಸುದೇವನೆ ಪೂಜ್ಯನೆಂದುದು ಸಕಲ ಮುನಿ ನಿಕರ ॥4॥

೦೦೫ ತರಿಸಿದನು ನವ ...{Loading}...

ತರಿಸಿದನು ನವ ಹೇಮಮಣಿ ಭಾ
ಸುರದ ಮಂಚದ ಮೇಲೆ ಲಲಿತಾ
ಸ್ತರಣದಡಿಕಿಲುವಾಸಗಳ ನಿರ್ಮಳ ನಿಕಾರಗಳ
ಮೆರೆದುದೆಳ ಬೆಳುದಿಂಗಳಿನ ಮೋ
ಹರದ ಮಾರೊಡ್ಡೆನಿಸಿ ಭೂಮೀ
ಶ್ವರ ಸಭಾ ಮಧ್ಯದಲಿ ಧರಣೀಪಾಲ ಕೇಳ್ ಎಂದ ॥5॥

೦೦೬ ವಿನಯದಲಿ ಸಹದೇವ ...{Loading}...

ವಿನಯದಲಿ ಸಹದೇವ ಕೈಗೊ
ಟ್ಟನುಪಮನ ತಂದನು ಪಿತಾಮಹ
ಜನಕ ಪಾಯವಧಾರು ಗಂಗಾಜನಕನವಧಾರು
ದನುಜರಿಪುವವಧಾನವವಧಾ
ನೆನುತ ವಿಮಳ ಮಹಾಘ್ರ್ಯ ಸಿಂಹಾ
ಸನಕೆ ಬಿಜಯಂಗೈಸಿದರು ಕುಳ್ಳಿರ್ದನಸುರಾರಿ ॥6॥

೦೦೭ ತನ್ದು ಮಣಿಮಯ ...{Loading}...

ತಂದು ಮಣಿಮಯ ಪಡಿಗದಲಿ ಗೋ
ವಿಂದನಂಘ್ರಿಯತೊಳೆದು ಗಂಗೆಯ
ತಂದೆವೀಗಳೆ ತಾವೆನುತ ತಮ್ಮುತ್ತಮಾಂಗದಲಿ
ವಂದಿಸುತ ವೈದಿಕದ ಪರಿವಿಡಿ
ಯಿಂದ ಮಧುಪರ್ಕಾದಿ ಪೂಜೆಗ
ಳಿಂದ ಸತ್ಕರಿಸಿದರು ಸಚರಾಚರ ಜಗತ್ಪತಿಯ ॥7॥

೦೦೮ ಆಯೆನುತ ಮನವುಕ್ಕಿ ...{Loading}...

ಆಯೆನುತ ಮನವುಕ್ಕಿ ಮುನಿಗಳು
ಘೇಯೆನಲು ನಿರ್ಜರರ ಭೇರಿ ನ
ವಾಯಿಯಲಿ ಮೊಳಗಿದದವು ಸುರಿದವು ಮುಗುಳ ತನಿಮಳೆಯ
ರಾಯನಧ್ವರ ಕರ್ಮ ಸತ್ಫಲ
ವಾಯಿತೀ ಭೂಪತಿ ಕೃತಾರ್ಥನ
ಲಾಯೆನುತ ಸಭೆ ಹೊಗಳಿತಂದು ಸಮುದ್ರ ಘೋಷದಲಿ ॥8॥

೦೦೯ ಈ ಮಹಾಧ್ವರ ...{Loading}...

ಈ ಮಹಾಧ್ವರ ಕರ್ಮವೇ ಸು
ತ್ರಾಮನವರಿಗೆ ಹವ್ಯ ಸಿದ್ಧಿ ಮ
ಹಾ ಮಹೀಸುರ ಮುನಿ ನಿಕರದೇಕತ್ರ ಸಮ್ಮಿಳಿತ
ಈ ಮಹೀಶರ ಬರವಿದೆಲ್ಲರೊ
ಳೀ ಮುಕುಂದನ ಪೂಜೆಗಿದುವೆ ಸ
ಭಾ ಮನೋಹರವೆಂದು ಮಾರ್ಕಂಡೇಯ ಮುನಿ ನುಡಿದ ॥9॥

೦೧೦ ಅವನಿಯಮರರ ಕಳಕಳವ ...{Loading}...

ಅವನಿಯಮರರ ಕಳಕಳವ ಪಾಂ
ಡವರ ಸುಮ್ಮಾನವನು ನೃಪ ಕೌ
ರವರ ಮಾತ್ಸರ್ಯೋಪಲಾಲಿತ ಹರುಷ ವಿಭ್ರಮವ
ಅವನಿಪಾಲರು ಕಂಡರೀಯು
ತ್ಸವವ ಕಂಡಿರೆ ನೀವೆನುತ ತ
ಮ್ಮವರೊಳೊಬ್ಬರನೊಬ್ಬ್ಬರುರೆ ನೋಡಿದರು ಬೆರಗಾಗಿ ॥10॥

೦೧೧ ಕೆಲರು ಪಾಣ್ಡವ ...{Loading}...

ಕೆಲರು ಪಾಂಡವ ಮೈತ್ರಿಯಲಿ ಕೆಲ
ಕೆಲರು ಕೃಷ್ಣನ ಬಲುಮೆಯಲಿ ಕೆಲ
ಕೆಲರು ಧೀರತ್ವದಲಿ ಕೆಲರನುಚಿತದ ಭೀತಿಯಲಿ
ಕೆಲರಿದೇಕವಗೆಂದು ಧರಣೀ
ವಳಯದವನಿಪರಿದ್ದರವರೊಳು
ಖಳಶಿರೋಮಣಿ ಮಸಗಿದನು ಭೂಪಾಲ ಕೇಳ್ ಎಂದ ॥11॥

೦೧೨ ಹೊತ್ತಿತೆದೆ ಹೇರಾಳ ...{Loading}...

ಹೊತ್ತಿತೆದೆ ಹೇರಾಳ ತಮದಲಿ
ಕೆತ್ತಿದವು ಮೀಸೆಗಳು ಕಂಗಳು
ಹೊತ್ತವರುಣಚ್ಛವಿಯನುಬ್ಬರಿಸಿದುದು ಗೋನಾಳಿ
ಕೆತ್ತುದರಿವಿನ ಕದ ಕಟಾಕ್ಷಿಸಿ
ಮಿತ್ತು ವೊಲಿದಳು ರೋಷ ಮಿಗೆ ಹೊಗ
ರೆತ್ತಿತೈ ಶಿಶುಪಾಲವೀರನ ವಚನಮಯ ಖಡುಗ ॥12॥

೦೧೩ ಏನೆಲವೊ ಸಹದೇವ ...{Loading}...

ಏನೆಲವೊ ಸಹದೇವ ವಸುಧೆಯ
ಮಾನನಿಧಿಗಳ ಮುಂದೆ ನಂದನ
ಸೂನುವಿಗೆ ಸಿಂಹಾಸನದ ಮೇಲಘ್ರ್ಯಸತ್ಕೃತಿಯೆ
ನೀನರಿಯದವ ನಿಮ್ಮ ಯಾಗಕೆ
ಹಾನಿಯಲ್ಲಾ ನಿಮ್ಮ ಹಿರಿಯರಿ
ದೇನ ನೆಗಳಿದರಕಟ ಖೂಳರು ಪಾಂಡುಸುತರೆಂದ ॥13॥

೦೧೪ ಯದುಗಳಿವದಿರು ಮುನ್ನ ...{Loading}...

ಯದುಗಳಿವದಿರು ಮುನ್ನ ರಾಜ್ಯಾ
ಸ್ಪದದ ಸಿಂಹಾಸನಕೆ ಬಾಹಿರ
ರದರೊಳೀತನ ಖೋಡಿಯನು ಜಗವೆಲ್ಲ ಬಲ್ಲುದಲೆ
ಇದು ಮಹಾಧ್ವರವಿಲ್ಲಿ ನೆರೆದಿ
ದ್ದುದು ಮಹಾ ಕ್ಷತ್ರಿಯರು ಗೋವರ
ಸದೆಗನಿಲ್ಲಿಗೆ ಶ್ರೇಷ್ಠನೇ ಸಹದೇವ ಕೇಳ್ ಎಂದ ॥14॥

೦೧೫ ತ್ರಿದಶರಿಗೆ ಸರಿತೂಕ ...{Loading}...

ತ್ರಿದಶರಿಗೆ ಸರಿತೂಕ ಸಾಮ
ಥ್ರ್ಯದಲಿ ಶುದ್ಧ ಶ್ರೌತ ಸನ್ಮಾ
ರ್ಗದಲಿ ಶಿವಶಿವ ರಾಜ ಋಷಿಗಳಲಾ ಮಹೀತಳಕೆ
ಉದಯದಿನನಂದದಲಿ ನೃಪರಿ
ರ್ದುದು ಸತೇಜವೃಜರು ಗೋವರ
ಸದೆಗನಿಲ್ಲಿಗೆ ಶಿಷ್ಟನೇ ಸಹದೇವ ಹೇಳೆಂದ ॥15॥

೦೧೬ ಬಾಲಕನು ಸಹದೇವನೀತನು ...{Loading}...

ಬಾಲಕನು ಸಹದೇವನೀತನು
ಹೇಳನಿಲ್ಲಿಯ ಹೆಚ್ಚು ಕುಂದು ನೃ
ಪಾಲ ನಿನ್ನದು ಧರ್ಮ ತತ್ವ ರಹಸ್ಯ ಸಂಗತಿಯ
ಕೇಳುವೆಗಳವು ಬೇರೆ ಚರಿತದ
ಪಾಳಿ ತಾನದು ಬೇರೆಲಾ ಪಶು
ಪಾಲರೀಯಧ್ವರಕೆ ಪೂಜ್ಯರೆ ಶಿವಶಿವಾಯೆಂದ ॥16॥

೦೧೭ ತರಳರಿವದಿರು ಪಾಣ್ಡುಸುತರಂ ...{Loading}...

ತರಳರಿವದಿರು ಪಾಂಡುಸುತರಂ
ತಿರಲಿ ನೀ ಸುಪ್ರೌಢನೆಂದಾ
ದರಿಸಿದೈ ವಸುದೇವ ಸುತನಲಿ ಶಿಷ್ಟಯೋಗ್ಯತೆಯ
ಧರಣಿಪಾಲರ ಮಧ್ಯದಲಿ ಭಾ
ಸ್ಕರನು ಗಡ ತುರು ಪಳ್ಳಿಕಾರರ
ಪುರದ ಭಾಸ್ಕರನೀತನಲ್ಲಾ ಭೀಷ್ಮ ಹೇಳೆಂದ ॥17॥

೦೧೮ ಶಿವನ ಸರಿ ...{Loading}...

ಶಿವನ ಸರಿ ಮಂಚದಲಿ ಸರಸಿಜ
ಭವನ ಸಮ ಗದ್ದುಗೆಗಳಲಿ ವಾ
ಸವನ ತೊಡೆ ಸೋಂಕಿನಲಿ ಕುಳ್ಳಿಹರೀ ಮಹೀಶ್ವರರು
ಇವರ ಸರಿಸಕೆ ಸಲ್ಲದೀ ಯಾ
ದವನನುದ್ದದಲಿರಿಸಿ ಬಹುಮಾ
ನವನು ಮಾಡಿದೆ ಭೀಷ್ಮ ಯಜ್ಞವನಳಿದೆ ನೀನೆಂದ ॥18॥

೦೧೯ ಸಕಲ ಶಾಸ್ತ್ರಶ್ರವಣ ...{Loading}...

ಸಕಲ ಶಾಸ್ತ್ರಶ್ರವಣ ವೇದ
ಪ್ರಕರ ಧರ್ಮ ವಿಚಾರ ಪೌರಾ
ಣಿಕ ಕಥಾ ಪ್ರಾಗಲ್ಬ್ಯವಿನಿತರ ಸಾರ ಸಂಗತಿಯ
ಅಕಟ ನೀರಲಿ ನೆರಹಿ ಪಶು ಪಾ
ಲಕನ ಪೂಜಾ ಸಾಧಾನಾರ್ಥ
ಪ್ರಕಟನಾದೈ ಭೀಷ್ಮ ಮೂರ್ಖಾಧಮನು ನೀನೆಂದು ॥19॥

೦೨೦ ಹಿರಿಯನೆನ್ದನೀತನಲಿ ಪೂಜಾ ...{Loading}...

ಹಿರಿಯನೆಂದನೀತನಲಿ ಪೂಜಾ
ವರಣವೇ ವಸುದೇವನೀ ಮುರ
ಹರನ ಪಿತನಿದ್ದಂತೆ ಮೇಣೀ ದ್ರುಪದ ಭೂಪತಿಯ
ವರಿಸಿ ನೀವಾಚಾರ್ಯನೆಂದಾ
ದರಿಸುವರೆ ರಾಯರಿಗೆ ಅಸ್ತ್ರದ
ಗುರುವಲಾ ದ್ರೋಣಂಗೆ ಪೂಜೆಯ ಮಾಡಿರೇಕೆಂದ ॥20॥

೦೨೧ ಈತನಿಲ್ಲಿ ಸದಸ್ಯನೇ ...{Loading}...

ಈತನಿಲ್ಲಿ ಸದಸ್ಯನೇ ವಿ
ಖ್ಯಾತ ವೇದ ವ್ಯಾಸಋತ್ವಿ
ಗ್ಭೂತನಾಥಂಗಗ್ರ ಪೂಜೆಯನೇಕೆ ಮಾಡಿಸರಿ
ಈತ ನಿಮಗೆ ಪಿತಾಮಹನೆ ಗಂ
ಗಾತನುಜನೈದನೆ ವಿಶೇಷಕೆ
ಗೌತಮನಲಾ ಕೃಪನ ಮನ್ನಿಸಿರೇಕೆ ನೀವೆಂದ ॥21॥

೦೨೨ ವೀರರಿಗೆ ಕೊಡಬೇಹುದೇ ...{Loading}...

ವೀರರಿಗೆ ಕೊಡಬೇಹುದೇ ರಣ
ಧೀರನಶ್ವತ್ಥಾಮನೈದನೆ
ಸಾರನಲ್ಲಾ ಚಾಪಧರರೊಳಗೇಕಲವ್ಯ ನೃಪ
ಪೌರವೇಯರೊಳಧಿಕ ಬಾಹ್ಲಿಕ
ಗಾರು ಸರಿ ಕೊಡಿರೇಕೆ ಕೃಷ್ಣನಿ
ದಾರೊಳಗಾರೆಂದಗ್ರಪೂಜೆಯ ಕೊಟ್ಟಿರಕಟೆಂದ ॥22॥

೦೨೩ ನರನ ಸಖನೀ ...{Loading}...

ನರನ ಸಖನೀ ಕೃಷ್ಣನೆಂದಾ
ದರಿಸುವರೆ ಗಂಧರ್ವ ನಿಮ್ಮೀ
ನರನ ಸಖನಲ್ಲಾ ವಿರೋಧಿಯೆ ಚಿತ್ರರಥ ನಿಮಗೆ
ಅರಸನಲ್ಲಾ ದ್ರುಮನು ವರ ಕಿಂ
ಪುರುಷ ಮಾನ್ಯನು ನಿಮ್ಮ ಯಜ್ಞದೊ
ಳುರುಳುಕರಿಗಲ್ಲದೆ ವಿಶಿಷ್ಟರಿಗಿಲ್ಲ ಗತಿಯೆಂದ ॥23॥

೦೨೪ ಮಾನ್ಯರಿಗೆ ಮನ್ನಣೆಯಹರೆ ...{Loading}...

ಮಾನ್ಯರಿಗೆ ಮನ್ನಣೆಯಹರೆ ಸಾ
ಮಾನ್ಯನೇ ಭಗದತ್ತ ನಿಮಗೇ
ನನ್ಯನೇ ಸೌಬಲೇಯ ಜಯದ್ರಥನೇಕೆ ಮನ್ನಿಸರಿ
ಶೂನ್ಯ ವಿಭವವೆ ಮಗಧಸೂನು ಸು
ಮಾನ್ಯನಲ್ಲಾ ದಂತವಕ್ರ ವ
ದಾನ್ಯಭಟ್ಟನು ಕೃಷ್ಣನಿಲ್ಲಿಗೆ ಯೋಗ್ಯನಹನೆಂದ ॥24॥

೦೨೫ ಉರುವ ನೃಪನಲ್ಲಾ ...{Loading}...

ಉರುವ ನೃಪನಲ್ಲಾ ಸುದಕ್ಷಿಣ
ನರಿಯರೇ ಮಾಳವನನೀತನ
ಮರೆದಿರೇ ಸಾಲ್ವನನು ಭೀಷ್ಮಕ ರುಗ್ಮ ಭೂಪತಿಯ
ಮೊರೆಯ ಮರೆದಿರೆ ಶಲ್ಯ ಭೂಪತಿ
ಹೊರಗಲಾ ವರ ರಾಜಸೂಯಕೆ
ಕರುವ ಕಾವವನಲ್ಲದುಳಿದರುಯೋಗ್ಯರಲ್ಲೆಂದ ॥25॥

೦೨೬ ಭೂರಿ ಭೂರಿಶ್ರವರು ...{Loading}...

ಭೂರಿ ಭೂರಿಶ್ರವರು ನಿಮ್ಮೊಳ
ಗಾರ ಹೊಯ್ದರು ಸೋಮದತ್ತ ಮ
ಹೀರಮಣನತಿ ಮಾನ್ಯನಲ್ಲಾ ಅಗ್ರ ಪೂಜೆಯಲಿ
ಸಾರಧರ್ಮವಿದೆಂದು ಬಂದೆವಿ
ದಾರು ಬಲ್ಲರು ಹಳ್ಳಿಕಾರರ
ನಾರಿಯರ ನೆರೆ ಮಿಂಡನಲ್ಲದೆ ಯೋಗ್ಯರಿಲ್ಲೆಂದು ॥26॥

೦೨೭ ವಿನ್ದನನುವಿನ್ದಾ ಮಹೀಶರು ...{Loading}...

ವಿಂದನನುವಿಂದಾ ಮಹೀಶರು
ಬಂದಿರೈ ಕಾಂಭೋಜನೃಪನೈ
ತಂದೆಲಾ ಗಾಂಧಾರ ಶಕುನಿ ಬೃಹದ್ರಥಾದಿಗಳು
ಬಂದಿರಿಲ್ಲಿಗೆ ಧರ್ಮಸಾಧನ
ವೆಂದು ಬಯಸಿದಿರಿವರ ಯಾಗಕೆ
ನಂದಗೋಪನ ಮಕ್ಕಳಲ್ಲದೆ ಯೋಗ್ಯರಿಲ್ಲೆಂದ ॥27॥

೦೨೮ ಈ ಋಷಿಗಳೀ ...{Loading}...

ಈ ಋಷಿಗಳೀ ಮಂತ್ರವೀ ಸಂ
ಭಾರವೀ ಪೌರಾಣ ಕಥೆಯೀ
ಭೂರಿ ಭೋಜನವೀ ಮಹಾ ಗೋ ರತ್ನ ಧನ ಧಾನ್ಯ
ಸಾರತರ ವೇದೋಕ್ತಮಾರ್ಗ ವಿ
ಚಾರವಿದ್ದುದು ಹೊರಗೆ ಗೋಪೀ
ಜಾರ ಸತ್ಕೃತಿಯೊಳಗೆ ವಿಷವಿದನರಿದುದಿಲ್ಲೆಂದ ॥28॥

೦೨೯ ಸ್ನಾತಕವ್ರತಿಯಲ್ಲ ಋತ್ವಿಜ ...{Loading}...

ಸ್ನಾತಕವ್ರತಿಯಲ್ಲ ಋತ್ವಿಜ
ನೀತನಲ್ಲಾಚಾರ್ಯನಲ್ಲ ಮ
ಹೀತಳಾಧಿಪನಲ್ಲ ಗುರುವಲ್ಲಸುರರಿಪು ನಿಮಗೆ
ಈತನೇ ಪ್ರಿಯನೆಂದು ಕೃಷ್ಣಂ
ಗೋತು ಕೊಡುವರೆ ಬೇರೆ ಕೊಡುವುದು
ಭೂತಳೇಶರ ಮುಂದೆ ಮನ್ನಿಪುದುಚಿತವಲ್ಲೆಂದ ॥29॥

೦೩೦ ರಾಯ ನಿನಗಾವಿನ್ದು ...{Loading}...

ರಾಯ ನಿನಗಾವಿಂದು ದಿಟ ಸಿ
ದ್ಧಾಯವನು ನಾವ್ತೆತ್ತೆವಲ್ಲದೆ
ವಾಯುಜನ ಫಲುಗುಣನ ಬಿಲ್ಲಿನ ಬಲುಮೆಗಂಜಿದೆವೆ
ರಾಯ ಠಕ್ಕಿನ ನಿಧಿಯ ಠೌಳಿಯ
ಮಾಯಕಾರನ ತಂದು ಮನ್ನಿಸಿ
ರಾಯರಭಿಮಾನವ ವಿಭಾಡಿಸಿಕೊಂಡೆ ನೀನೆಂದ ॥30॥

೦೩೧ ಧರ್ಮಮಯವೀ ಯಜ್ಞ ...{Loading}...

ಧರ್ಮಮಯವೀ ಯಜ್ಞ ನೀನೇ
ಧರ್ಮಸುತನೆಂದಿದ್ದೆವಿಲ್ಲಿ ವಿ
ಕವರ್iವಾಯಿತಸೂಯವೆ ಶಿವನಾಣೆ ಜಗವರಿಯೆ
ಧರ್ಮವೇ ಅಪ್ರಾಪ್ತ ಕಾರ್ಯದ
ಕರ್ಮವೀ ನೃಪನಿಕರ ಮೆಚ್ಚಲ
ಧರ್ಮಸುತನೆಂದಾಯ್ತು ನಿನ್ನಭಿಧಾನವಿಂದಿನಲಿ ॥31॥

೦೩೨ ಆಯಿತಿದು ಜಡ ...{Loading}...

ಆಯಿತಿದು ಜಡ ಧರ್ಮಜನು ಗಾಂ
ಗೇಯ ಜಡನೀ ತಾಗುದಟ್ಟಿನ
ದಾಯವರಿಯದೆ ನಿನ್ನ ಕರೆದರೆ ಕೃಷ್ಣ ಬೆರೆತೆಯಲ
ರಾಯ ರತುನದ ನಡುವೆ ನೀನನು
ನಾಯಕವೊ ನಾಯಕವೊ ಮೇಣುಪ
ನಾಯಕವೊ ನೀನಾವನೆಂದನು ಜರೆದು ಮುರಹರನ ॥32॥

೦೩೩ ಈ ಋಷಿಗಳೇ ...{Loading}...

ಈ ಋಷಿಗಳೇ ಬಣಗುಗಳು ಬಡ
ಹಾರುವರು ದಕ್ಷಿಣೆ ಸುಭೋಜನ
ಪೂರವಾದರೆ ಸಾಕು ಮಾನ್ಯರ ವಾಸಿವಟ್ಟದಲಿ
ಹೋರುವವರಿವರಲ್ಲ ನೆರೆದೀ
ವೀರ ನೃಪರಭಿಮಾನಿಗಳು ನೆರೆ
ಸೈರಿಸಿದರಿದು ನಿನಗೆ ಸದರವೆ ಕೃಷ್ಣ ಹೇಳೆಂದ ॥33॥

೦೩೪ ಅರಿಯದವರಾದರಿಸಿದರೆ ನೀ ...{Loading}...

ಅರಿಯದವರಾದರಿಸಿದರೆ ನೀ
ನರಿಯ ಬೇಡವೆ ನಿನ್ನ ಕುಂದಿನ
ಕೊರತೆಗಳನಾರರಿಯರೀ ಭೂಪಾಲ ಮಧ್ಯದಲಿ
ಕುರುಬರೂರಲಿ ಗಾಜು ಮಾಣಿಕ
ವರಿಯದವರಿಗೆ ಕೃಷ್ಣ ನೀ ಕಡು
ಬೆರೆತಲಾ ನೆರೆ ಮರೆದೆಲಾ ನಿನ್ನಂತರವನೆಂದ ॥34॥

೦೩೫ ಕುಲದಲಧಿಕರು ರಾಜ್ಯದಲಿ ...{Loading}...

ಕುಲದಲಧಿಕರು ರಾಜ್ಯದಲಿ ವೆ
ಗ್ಗಳರು ಭುಜಸತ್ವದಲಿ ಸೇನಾ
ಬಲದಲುತ್ತಮರಿವರ ಭಂಗಿಸಿ ನಿನಗೆ ಮನ್ನಣೆಯೆ
ಕುಲವು ಯದುಕುಲ ರಾಜ್ಯವೇ ಕಡ
ಲೊಳ ಕುರುವ ನಿನ್ನೋಟಗುಳಿತನ
ದಳವ ಮಾಗಧ ಕಾಲಯವನರು ಬಲ್ಲರವರೆಂದ ॥35॥

೦೩೬ ಬೇವಿನಾರವೆಯೊಳಗೆ ಕಳಹಂ ...{Loading}...

ಬೇವಿನಾರವೆಯೊಳಗೆ ಕಳಹಂ
ಸಾವಳಿಗೆ ರಮ್ಯವೆ ಜಪಾಕುಸು
ಮಾವಳಿಗಳಲಿಮಧುಕರನ ಮೋಹರಕೆ ಮನ್ನಣೆಯೆ
ಈ ವಿಕಾರದ ಯಜ್ಞದಲಿ ರಾ
ಜಾವಳಿಗೆ ಮನ್ನಣೆಯೆ ಶಿವಶಿವ
ನೀವು ಗೋಪೀಜಾರರಿಲ್ಲಿಗೆ ಶಿಷ್ಟರಹಿರೆಂದ ॥36॥

೦೩೭ ಜರಡುಮಖವೀ ಮಖಕೆ ...{Loading}...

ಜರಡುಮಖವೀ ಮಖಕೆ ಹೋಲುವ
ಧರಣಿಪತಿಯೀ ಮಖಕೆ ಧರಣೀ
ಶ್ವರಗೆ ಪಾಸಟಿ ಭೀಷ್ಮನೀ ಮಖಭೂಪ ಭೀಷ್ಮರಿಗೆ
ಸರಿಸನಾದನು ಕೃಷ್ಣನೀ ಮಖ
ಧರಣಿಪತಿ ಭೀಷ್ಮಂಗೆ ಕೃಷ್ಣಗೆ
ಸರಿಯ ಕಾಣೆನು ನಿಮ್ಮೊಳೊಬ್ಬರಿಗೊಬ್ಬರೆಣೆಯೆಂದ ॥37॥

೦೩೮ ಸೀಳಿವನ ಹೆಡತಲೆಯೊಳಗೆ ...{Loading}...

ಸೀಳಿವನ ಹೆಡತಲೆಯೊಳಗೆ ತೆಗೆ
ನಾಲಗೆಯನೆಲೆ ಕುನ್ನಿಗಳಿರಿದ
ಕೇಳುವರೆ ಪತಿನಿಂದೆಯನು ಪಾತಕಕೆ ಗುರುವಲ್ಲ
ಏಳೆನುತ ಕೃತವರ್ಮ ಸಾಂಬ ನೃ
ಪಾಲ ಮೊದಲಾದಖಿಳ ಯಾದವ
ಜಾಲವೆದ್ದುದು ಬಿಗಿದ ಬಿಲುಗಳ ಸೆಳೆದಡಾಯುಧದಿ ॥38॥

೦೩೯ ಕದಡಿತಖಿಳಾಸ್ಥಾನ ಹೋಯೆಂ ...{Loading}...

ಕದಡಿತಖಿಳಾಸ್ಥಾನ ಹೋಯೆಂ
ದೊದರಿ ಋಷಿಗಳ ತಾಳಿಗೆಗಳೊಣ
ಗಿದವು ಹಲ್ಲಣಿಸಿದವು ರಥ ಮಾತಂಗ ವಾಜಿಗಳು
ಕೆದರಿತೀಚೆಯ ದೆಸೆ ಸುನೀತನ
ಸದೆದು ತೆಗೆ ಸುಂಟಿಗೆಯನೆನುತಲಿ
ಯದು ನೃಪಾಲರು ಗಜಬಜಿಸಲೆಡೆವೊಕ್ಕನಾ ಭೀಷ್ಮ ॥39॥

೦೪೦ ನಿಲಿಸಿದನು ಕಳಕಳವನೀ ...{Loading}...

ನಿಲಿಸಿದನು ಕಳಕಳವನೀ ಯದು
ಬಲವ ತೆಗೆದನು ಮತ್ತೆ ಮೌನದ
ಜಲಧಿಯಾಸ್ಥಾನದಿದಿರಲಿ ನಿಂದು ಸಹದೇವ
ಎಲೆ ಸುನೀತ ವೃಥಾ ವಿರೋಧ
ಸ್ಖಲಿತನಾದೆ ಮುರಾರಿ ಮಾನ್ಯರ
ತಿಲಕನೀತನ ಪೂಜೆ ಯಾಗಕೆ ಕಳಸವಾಯ್ತೆಂದ ॥40॥

೦೪೧ ಧರಣಿಪತಿಯೇ ಸಕಲ ...{Loading}...

ಧರಣಿಪತಿಯೇ ಸಕಲ ಧರ್ಮದ
ಪರಮಸೀಮೆ ಮುಕುಂದನೇ ಮಾ
ನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ
ಸುರನದೀ ನಂದನನು ಸಾಕ್ಷಾ
ತ್ಪರಮಶಿವನೀ ಯಜ್ಞ ಲೋಕೋ
ತ್ತರದ ಮಖವಿದು ನಿನ್ನ ಕುಮತಿಗೆ ಸಾಧ್ಯವಲ್ಲೆಂದ ॥41॥

೦೪೨ ನಿನ್ನನೆನ್ನೆನು ಚೈದ್ಯ ...{Loading}...

ನಿನ್ನನೆನ್ನೆನು ಚೈದ್ಯ ಕೃಷ್ಣನ
ಮನ್ನಣೆಗೆ ಸೆಣಸುವರಿಗಿದೆ ತೊಡ
ರೆನ್ನ ಪಾದದಲೆನುತ ಧರಣಿಯನೊದೆದನಂಘ್ರಿಯಲಿ
ಇನ್ನ ನೀನು ಸುಲೋಚನಾಂಧಕ
ನಿನ್ನೊಡನೆ ಫಲವೇನು ಕದನಕೆ
ಬನ್ನಿ ಮಿಡುಕುಳ್ಳವರೆನುತ ಗಜರಿದನು ಸಹದೇವ ॥42॥

೦೪೩ ನುಡಿಯದದು ಮೌನಗ್ರಹದ ...{Loading}...

ನುಡಿಯದದು ಮೌನಗ್ರಹದ ಹೆಡ
ಗುಡಿಯಲಿದ್ದುದು ರಾಯ ಕುಲವವ
ಗಡೆಯನೆದ್ದನು ಸಿಂಹ ಪೀಠದಿ ನೋಡಿ ಕೆಲಬಲನ
ಕಡೆಯ ಝಣಝಣ ರವ ಮಸಗಲಿವ
ನೊಡನೆ ಹೊರವಂಟುದು ನೃಪಾಲಕ
ರೊಡಮುರುಚಿದರುಹಿಡಿವ ಸಚಿವ ಪಸಾಯ್ತ ಮಂತ್ರಿಗಳ ॥43॥

೦೪೪ ಶಿವಶಿವಾ ತಪ್ಪಾಯ್ತು ...{Loading}...

ಶಿವಶಿವಾ ತಪ್ಪಾಯ್ತು ನಮ್ಮು
ತ್ಸವಕೆ ಬಂದವನಿಪನ ಗುಣದೋ
ಷವನು ನಾವೀಕ್ಷಿಸುವುದನುಚಿತವೆಂದು ವಿನಯದಲಿ
ಅವನಿಪತಿ ಬೆಂಬತ್ತಿ ಗಮನಕೆ
ತವಕಿಸುವ ಶಿಶುಪಾಲಕನ ಹಿಡಿ
ದವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ ॥44॥

೦೪೫ ಅರಿಯರೇ ಮುನಿ ...{Loading}...

ಅರಿಯರೇ ಮುನಿ ಮುಖ್ಯರೀತನ
ನುರುವ ದೈವವಿದೆಂದು ನೀ ಕ
ಟ್ಟಿರಿತಗಾರನೆ ರಾಯರಿದೆಲಾ ಸಕಲ ಗುಣಯುತರು
ಕರುಬತನದಲಿ ನೀನಕಟ ತೆರ
ನರಿಯದೆಂಬರೆ ಬಾರೆನುತ ಮುಂ
ಜೆರಗ ಹಿಡಿದೆಳೆದವನ ತಂದನು ಭೂಪ ಜನ ಸಹಿತ ॥45॥

೦೪೬ ಎಲೆ ಮರುಳೆ ...{Loading}...

ಎಲೆ ಮರುಳೆ ಭೂಪಾಲ ನೊರಜಿನ
ಕಳಕಳಕೆ ಕರಿ ಬೆಚ್ಚುವುದೆ ಮಂ
ಡಳಿಯ ಮರಿ ಮಿಡುಕಿದರೆ ಕಳವಳಿಸುವುದೆ ಕಲಿ ಸಿಂಹ
ಗಿಳಿಯ ಮುರುಕಕೆ ಗಿಡಗನುಗಿದ
ವ್ವಳಿಸುವುದೆ ಹರಿಗಿವನು ಗಣ್ಯನೆ
ಗಳಹನಿವನೊಡನಾವುದನುನಯವೆಂದನಾ ಭೀಷ್ಮ ॥46॥

೦೪೭ ಗರುವ ಗರುವನನಖಿಳ ...{Loading}...

ಗರುವ ಗರುವನನಖಿಳ ವಿದ್ಯಾ
ಪರಿಣತನ ಪರಿಣತನು ವೀರನು
ಧುರದ ವೀರನನರಿವನಿಂತಿದು ಲೋಕವಿಖ್ಯಾತ
ಗರುವನ¯್ಲ ಸುನೀತ ವಿದ್ಯಾ
ಪರಿಣತನು ತಾನಲ್ಲ ಘನಸಂ
ಗರದೊಳಿವನಾಳಲ್ಲ ಕೃಷ್ಣನನರಿವನೆಂತೆಂದ ॥47॥

೦೪೮ ಅರಸನರಸನು ಕಾದಿ ...{Loading}...

ಅರಸನರಸನು ಕಾದಿ ಹಿಡಿದಾ
ದರಿಸಿ ಬಿಟ್ಟು ತದೀಯ ರಾಜ್ಯದೊ
ಳಿರಿಸಿದರೆ ಗುರುವಾತನಾತಂಗಿದುವೆ ಶ್ರುತಿಸಿದ್ಧ
ಅರಸುಗಳನನಿಬರನು ಸೋಲಿಸಿ
ಮರಳಿ ರಾಜ್ಯದೊಳಿರಿಸನೇ ಮುರ
ಹರನು ಗುರುವಲ್ಲಾ ಮಹೀಶರಿಗೆಂದನಾ ಭೀಷ್ಮ ॥48॥

೦೪೯ ಮಗಧಸುತನೀ ಸಾಲ್ವ ...{Loading}...

ಮಗಧಸುತನೀ ಸಾಲ್ವ ಹಂಸನ
ಮಗ ನಿಶುಂಭನ ಸೂನು ನರಕನ
ಮಗನು ಪೌಂಡ್ರಿಕ ದಂತವಕ್ರನ ತನುಜರಿವರೆಲ್ಲ
ಹಗೆಯ ಮಾಡಿ ಮುರಾಂತಕನ ಕಾ
ಳಗದೊಳೆಲ್ಲರನಿಕ್ಕಿ ಪಟ್ಟವ
ಬಿಗಿಸಿಕೊಂಡವರಲ್ಲವೇ ಹೇಳೆಂದನಾ ಭೀಷ್ಮ ॥49॥

೦೫೦ ಜ್ಞಾನವೃದ್ಧರು ವಿಪ್ರರಲಿ ...{Loading}...

ಜ್ಞಾನವೃದ್ಧರು ವಿಪ್ರರಲಿ ಸ
ನ್ಮಾನನೀಯರು ಶೌರ್ಯವೃದ್ಧರು
ಮಾನವೇಂದ್ರರೊಳಧಿಕವಿದು ಪೌರಾಣ ಸಿದ್ಧವಲೆ
ಜ್ಞಾನವೃದ್ಧನು ಕೃಷ್ಣನಾಹವ
ದೀನನೇ ಘನ ಶೌರ್ಯನೆಂಬುದ
ತಾನರಿಯನೇ ಚೈದ್ಯ ಭೂಪತಿಯೆಂದನಾ ಭೀಷ್ಮ ॥50॥

೦೫೧ ಏನ ಹೇಳ್ವುದು ...{Loading}...

ಏನ ಹೇಳ್ವುದು ಧರ್ಮತತ್ವ ನಿ
ಧಾನದಲಿ ಮುನಿ ಮುಖ್ಯರಿವರ
ಜ್ಞಾನಿಗಳು ಶಿಶುಪಾಲ ತತ್ವಜ್ಞಾನ ಪಂಡಿತನು
ಆ ನಿಶಾಟರು ಮೆಚ್ಚರಗ್ಗದ
ಭಾನುರಶ್ಮಿಯನಂಧಕಾರ
ಜ್ಞಾನನಿಷ್ಠರು ನಿಪುಣರೈಸಲೆಯೆಂದನಾ ಭೀಷ್ಮ ॥51॥

೦೫೩ ಕರುಣಿಸೈ ಗಾಙ್ಗೇಯ ...{Loading}...

ಕರುಣಿಸೈ ಗಾಂಗೇಯ ಕೃಷ್ಣನ
ಚರಿತವನು ಶಿಶುಪಾಲ ಭೂಪನ
ಕರಣವೃತ್ತಿಯ ಕದಡು ತಿಳಿಯಲಿ ದೈವ ದೂರನಲೆ
ದುರುಳನಿವನ ದುರುಕ್ತಿಗಳ ಕೇ
ಳ್ದರಿಗೆ ಪ್ರಾಯಶ್ಚಿತ್ತವಿದು ವಿ
ಸ್ತರಿಸ ಬೇಹುದು ಸಕಲ ಜನಮತವೆಂದನಾ ಭೂಪ ॥53॥

೦೫೪ ಕೇಳು ಧರ್ಮಜ ...{Loading}...

ಕೇಳು ಧರ್ಮಜ ಸಕಲ ಋಷಿಗಳು
ಕೇಳಿರೈ ನೆರೆದವನಿಪಾಲರು
ಕೇಳಿರೈ ನೆರೆದಖಿಳ ಜನ ಚಿತ್ತಾವಧಾನದಲಿ
ಶ್ರೀಲತಾಂಗಿಯ ವಲ್ಲಭನ ಸ್ತುತಿ
ಮೌಳಿಮೌಕ್ತಿಕಪಾದಪೀಠನ
ಲೀಲೆಯನು ಚಿತ್ತವಿಸಿ ಗದುಗಿನ ವೀರನರಯಣನ ॥54॥

+೦೮ ...{Loading}...