೦೬

೦೦೦ ಸೂಚನೆ ನಕುಲ ...{Loading}...

ಸೂಚನೆ: ನಕುಲ ಪಶ್ಚಿಮ ದೆಸೆಯ ಭೂಪಾ
ಲಕರ ಗೆಲಿದನು ನೆರೆದ ರತ್ನ
ಪ್ರಕರದಿಂದಳಕಾಪುರಿಗೆ ಮಿಗಿಲಾಯ್ತು ನೃಪನಗರ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಪಶ್ಚಿಮ ದೆಸೆಯ ಭೂಮೀ
ಪಾಲಕರ ಮೇಲೆತ್ತಿ ನಡೆದನು ನಕುಲನೊಲವಿನಲಿ
ಧಾಳಿ ಹರಿದುದು ಮರು ಯವನ ನೇ
ಪಾಳ ರೋಹಿತರೆಂದೆನಿಪ ಭೂ
ಪಾಲಕರ ಮುರಿದವರ ಸಪ್ತಾಂಗವ ವಿಭಾಡಿಸಿದ ॥1॥

೦೦೨ ಹೇಮಕನ ಸೈರಿಭಕನೆಮ್ಬ ...{Loading}...

ಹೇಮಕನ ಸೈರಿಭಕನೆಂಬ ಸ
ನಾಮರನು ಮುರಿದನು ಕಳಿಂಗದ
ಭೂಮಿಪರ ಸದೆದನು ತ್ರಿಗರ್ತರ ಶಿಬಿಯ ಸಂತತಿಯ
ಹೇಮ ಮಾತ್ರವನುಳುಹದವದಿರ
ಭೂಮಿಗಳನವರ್ಗಿತ್ತು ವಸ್ತು
ಸ್ತೋಮವನು ನೆರೆಹಿದನು ನಡೆದನು ಮುಂದೆ ಪಶ್ಚಿಮಕೆ ॥2॥

೦೦೩ ಮುರಿದನಗ್ಗದ ಚೇಕಿತಾನರ ...{Loading}...

ಮುರಿದನಗ್ಗದ ಚೇಕಿತಾನರ
ನೆರಗಿದನು ಬರ್ಬರ ತುರುಷ್ಕರ
ನೊರಗಿಸಿದನಾಹವದೊಳಾಭೀರಕರ ಬಾಹ್ಲಿಕರ
ಸೆರೆಯ ಹಿಡಿದನು ಪಾರ್ವತೇಯರ
ನುರುಕುಗೊಳಿಸಿದ ಜೀನರಂಬ
ಷ್ಠರನು ಸಿಂಧು ಸರಸ್ವತೀ ತೀರದ ಮಹೀಶ್ವರರ॥3॥

೦೦೪ ರಣದ ಸಙ್ಕೇತಗಳೊಳುತ್ಸವ ...{Loading}...

ರಣದ ಸಂಕೇತಗಳೊಳುತ್ಸವ
ರಣಸಮರ್ಥರ ಹಿಂಡಿದನು ಚಾ
ರಣರ ಖುರಸಾಣರನು ಪುಷ್ಕರ ವರ ನಿವಾಸಿಗಳ
ಹಣಿದನಲ್ಲಿಂದಿತ್ತ ಮಿಗೆ ಪಡು
ವಣ ದಿಗಂತದಲದಟರಸ ಪ
ಟ್ಟಣದವರ ಪಂಚನದ ಭೂಮಿಯ ಭೂಮಿಪರ ಗೆಲಿದ ॥4॥

೦೦೫ ಜ್ಯೋತಿಕರ ವಣ್ಣಕಟಕರ ...{Loading}...

ಜ್ಯೋತಿಕರ ವಣ್ಣಕಟಕರ ಕೃತ
ಯಾತಿಕರ ಯೌಧೇಯ ಸಂವೀ
ರಾತಿಶಯ ಬಡಹಾರರಮಳ ದ್ವಾರಪಾಲಕರ
ಘಾತಿಸಿದನವರುಗಳ ವಿತ್ತ
ವ್ರಾತವನು ಹೇರಿಸಿದನೆಡ ಬಲ
ದಾತಗಳನಪ್ಪಳಿಸಿ ತೆಗೆದನು ಸಕಲ ವಸ್ತುಗಳ ॥5॥

೦೦೬ ಮಾವನಲ್ಲಿಗೆ ಬನ್ದಡಾ ...{Loading}...

ಮಾವನಲ್ಲಿಗೆ ಬಂದಡಾ ಮಾ
ದ್ರಾವನೀಪತಿ ಶಲ್ಯ ಮಿಗೆ ಸಂ
ಭಾವಿಸಿದನೊಲಿದಿತ್ತನೀತಂಗಖಿಳ ವಸ್ತುಗಳ
ತೀವಿದರು ಭಂಡಿಯಲಿ ಮುಂದಣ
ಜಾವಟೆಯ ಚಪಳರಿಗೆ ಹರಿಯೆ ನೃ
ಪಾವಳಿಗಳಲ್ಲಲ್ಲಿ ತೆತ್ತರು ಕಂಡ ವಸ್ತುಗಳ ॥6॥

೦೦೭ ತಳಿತು ಬಿಟ್ಟುದು ...{Loading}...

ತಳಿತು ಬಿಟ್ಟುದು ಸೇನೆ ಪಡುವಣ
ಜಲಧಿಯ ಕರಾವಳಿಗಳಲಿ ಕೇ
ವಳಿಸಿದರು ಕೊಲ್ಲಣಿಗೆಯಲಿ ಕೊಂಡರು ಸುವಸ್ತುಗಳ
ಕಳಿವರಿದು ಹಿಮಗಿರಿಯ ಮೂಲೆಗೆ
ನಿಲುಕಿ ಸಕಲ ಮ್ಲೇಚ್ಛ ಭೂಪಾ
ವಳಿಯ ಭಂಗಿಸಿ ಹೇರಿಸಿದನೊಂಟೆಗಳಲಾ ಧನವ ॥7॥

೦೦೮ ಹೇರಿದವು ಬಹು ...{Loading}...

ಹೇರಿದವು ಬಹು ಧನವನೊಂಟೆಗ
ಳಾರು ಸಾವಿರ ಮಿಕ್ಕ ವಸ್ತುವ
ಹೇರಿದವುಯೆತ್ತುಗಳು ಹೂಡಿದ ಭಂಡಿ ಸಾವಿರವು
ಆರು ಲಕ್ಷ ತುರಂಗ ಉಷ್ಟ್ರಗ
ಳಾರು ಕೋಟಿಗಳಾನೆ ಗಣನೆಯ
ಮೀರಿದವು ಮೃಗ ಪಕ್ಷಿ ಕೋಣನ ಕುರಿಯ ಹಿಂಡುಗಳ ॥8॥

೦೦೯ ಮರಳಿತೀತನ ಸೇನೆ ...{Loading}...

ಮರಳಿತೀತನ ಸೇನೆ ಬಂದನು
ಪುರಕೆ ಕಂಡನು ಧರ್ಮಪುತ್ರನ
ಚರಣಕೆರಗಿದನಖಿಳ ವಸ್ತುವ ಬೇರೆ ತೋರಿಸಿದ
ಅರಸನುತ್ಸವವನು ವೃಕೋದರ
ನರ ನಕುಲ ಸಹದೇವನಂತಃ
ಪುರದ ಹರುಷದ ಸಿರಿಯನದನೇವಣ್ಣಿಸುವೆನೆಂದ ॥9॥

೦೧೦ ಕಳವು ಹುಸಿ ...{Loading}...

ಕಳವು ಹುಸಿ ಹಾದರ ವಿರೋಧ
ಸ್ಖಲಿತವಾರಡಿ ಬಂದಿ ದಳದುಳ
ಬೆಳಗವತೆಯನ್ಯಾಯ ಪರಿಭವ ಠಕ್ಕು ಡೊಳ್ಳಾಸ
ಹಳಿವು ವಂಚನೆ ಜಾತಿ ಸಂಕರ
ಕೊಲೆಯ ಡಾವರ ವಿಕೃತಿ ಮಾಯಾ
ವಳಿಗಳಡಗಿದವೀ ಯುಧಿಷ್ಠಿರ ನೃಪನ ರಾಜ್ಯದಲಿ ॥10॥

೦೧೧ ನೃಗನ ಭರತನ ...{Loading}...

ನೃಗನ ಭರತನ ದುಂದುಮಾರನ
ಸಗರನ ಪುರೂರವನನಾತನ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳು ವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಬಲ್ಲವನಾರೆನಲು ಸಲಹಿದನು ಭೂತಳವ ॥11॥

೦೧೨ ದ್ವಾಪರದ ಮರೆ ...{Loading}...

ದ್ವಾಪರದ ಮರೆ ಜವನಿಕೆಯಲೀ
ದ್ವಾಪರವೊ ಕೃತಯುಗವೊ ಧರ್ಮದ
ರೂಪು ನಾನಾ ಮುಖದಲವತರಿಸಿತೊ ದಿಗಂತದಲಿ
ಸ್ಥಾಪಿಸಿತು ವರ್ಣಾಶ್ರಮದ ಧ
ರ್ಮೋಪಚಯವೆರಡಂಘ್ರಿ ಮುರಿದು ವಿ
ರೂಪವಾದುದಧರ್ಮವೀ ಧರ್ಮಜನ ರಾಜ್ಯದಲಿ ॥12॥

೦೧೩ ಬಡಗಲುತ್ತರಕುರುಗಳಿತ್ತಲು ...{Loading}...

ಬಡಗಲುತ್ತರಕುರುಗಳಿತ್ತಲು
ಪಡುವಲುದಧಿ ವಿಭೀಷಣನ ಪುರ
ಗಡಿ ಕೃತಾಂತನ ದೆಸೆಗೆ ಮೂಡಲು ದಿನಪನುದಯಾದ್ರಿ
ಪೊಡವಿಯದರಲಿ ಯಮಜನಾಣೆಗೆ
ನಡುಗುವುದು ರಾಯಂಗೆ ತೆತ್ತುದು
ಗಡ ಸುವಸ್ತುವನೇನಸಾಧ್ಯವು ಕೃಷ್ಣನೊಲಿದರಿಗೆ ॥13॥

೦೧೪ ಕಳನ ಸವೆದರು ...{Loading}...

ಕಳನ ಸವೆದರು ಮೂರು ಯೋಜನ
ವಳಯದಲಿ ಪಡಿಯಗಳು ಕೋಟಾ
ವಳಯ ಸುಯ್ಧಾನದಲಿ ಹೊಯ್ದರು ರತ್ನ ಕಾಂಚನವ
ಕೆಲದೊಳೈಗಾವುದದೊಳಿಕ್ಕಿದ
ತಳಿಯ ಮಧ್ಯದೊಳಖಿಳ ವಸ್ತ್ರಾ
ವಳಿಯನೊಟ್ಟಿದರದರ ಕೆಲದಲಿ ರಾಯ ಕೇಳ್ ಎಂದ ॥14॥

೦೧೫ ಹತ್ತು ಯೋಜನ ...{Loading}...

ಹತ್ತು ಯೋಜನ ವಳಯದಲಿ ಮಿಗೆ
ಸುತ್ತು ಬೇಲಿಯ ಮಧ್ಯದಲಿ ಹಯ
ಮತ್ತಗಜ ರಥ ಗೋ ಮಹಿಷಿ ವರ ಸೈರಿಭದ ಚಯಕೆ
ಉತ್ತಮಾಂಗನೆಯರಿಗೆ ಭವನಗ
ಳಿತ್ತ ಬೇರಿರವಾಯ್ತು ನೃಪ ಯಾ
ಗೋತ್ತಮಕೆ ಪರುಠವಿಸಿದರು ಭೂಪಾಲ ಕೇಳ್ ಎಂದ ॥15॥

೦೧೬ ಬಳಿದ ಸೊದೆಗಳ ...{Loading}...

ಬಳಿದ ಸೊದೆಗಳ ಬಾವಿ ನೂರರ
ವಳಯ ತುಂಬಿತು ತೈಲ ಘೃತ ಮಧು
ಗಳಲಿ ವರ ಗುಡ ಶರ್ಕರಾದಿಯ ಕಣಜ ಕೋಟಿಗಳು
ಕಳವೆಯಕ್ಕಿಯ ಗೋಧಿ ಕಡಲೆಯ
ವಿಳಸ ರಾಶಿಯದೇಸು ಯೋಜನ
ದಳತೆಯಂದಾರರಿವರೆಂದನು ಮುನಿ ನೃಪಾಲಂಗೆ ॥16॥

೦೧೭ ನೆರೆದುದರ್ಥವನನ್ತವವನೀ ...{Loading}...

ನೆರೆದುದರ್ಥವನಂತವವನೀ
ಶ್ವರರು ವಶವಾದರು ಚತುಸ್ಸಾ
ಗರದ ಮಧ್ಯದಲಾಣೆ ಸಂದುದು ಧರ್ಮನಂದನನ
ಕರೆಸು ಬೇಹವರನು ಮಹೀಶಾ
ಧ್ವರಕೆ ಸಮಯವಿದೆಂದು ಪಾರಾ
ಶರಿಯು ಧೌಮ್ಯರು ಮಂತ್ರಶಾಲೆಯೊಳೆಂದರವನಿಪಗೆ ॥17॥

೦೧೮ ಹೋಗು ಫಲುಗುಣ ...{Loading}...

ಹೋಗು ಫಲುಗುಣ ಕಂಸ ಮಥನನ
ಬೇಗ ಬಿಜಯಂಗೈಸಿ ತಾ ನೃಪ
ಯಾಗವಾತನ ಹೊರೆ ಮದೀಯ ಜಯಾಭಿವೃದ್ಧಿಗಳು
ಆಗುಹೋಗಾತನದು ತಟ್ಟೆಯ
ವಾಗದೀ ಕ್ಷಣವೆನಲು ಮನದನು
ರಾಗದಲಿ ಕಲಿ ಪಾರ್ಥ ಬಂದನು ಕಂಡನಚ್ಯುತನ ॥18॥

೦೧೯ ಬಿನ್ನವಿಸಿದನು ದಿಗ್ವಿಜಯ ...{Loading}...

ಬಿನ್ನವಿಸಿದನು ದಿಗ್ವಿಜಯ ಸಂ
ಪನ್ನ ವಸ್ತು ವಿಧಾನವನು ಮೇ
ಲಿನ್ನು ದೇವರು ಬಲ್ಲಿರುತ್ತರ ಕಾರ್ಯಸಂಗತಿಯ
ನಿನ್ನ ಕೃಪೆಯಲಿ ರಾಜಮಖ ನಿ
ಷ್ಪನ್ನವಾದರೆ ಬೊಪ್ಪನಿಂದ್ರನ
ಮನ್ನಣೆಯ ಮೈ ಸೋಂಕಿನೋಲಗ ಸುಲಭವಹುದೆಂದ ॥19॥

೦೨೦ ಕರೆಸಿ ಯಾದವ ...{Loading}...

ಕರೆಸಿ ಯಾದವ ನಾಯಕರ ಸಂ
ಹರಣೆಯನು ನಿಜಪುರದ ಕಾಹಿಂ
ಗಿರಿಸಿ ಬಲದೇವಂಗೆ ನೇಮಿಸಿ ಸಕಲ ರಕ್ಷಣವ
ತರಿಸಿ ಭಂಡಾರದಲಿ ವಿವಿಧಾ
ಭರಣ ವಸನಾದಿಗಳ ಹೇರಿಸಿ
ಹರಿ ಧನಂಜಯನೊಡನೆ ಬಂದನು ಬಂಧುಜನ ಸಹಿತ ॥20॥

೦೨೧ ಇದಿರುವನ್ದನು ಧರ್ಮಸುತ ...{Loading}...

ಇದಿರುವಂದನು ಧರ್ಮಸುತ
ಪದ ಪಯೋಜದಲೆರಗಿದನು ನಿನ
ಗಿದು ವಿನೋದವಲೇ ವಿಮುಕ್ತಗೆ ಭಕ್ತ ಸಂಸ್ಕರಣ
ಕುದಿದು ಮರುಗಿದುವರಸಿ ನಿನ್ನಯ
ಪದವ ಕಾಣದೆ ಶ್ರುತಿಗಳೆಮ್ಮಯ
ಸದನವಖಿಳಾಮ್ನಾಯ ನಿಕರವನೇಡಿಸುವುದೆಂದ ॥21॥

೦೨೨ ನಗುತ ಸಾಕೇಳೆನ್ದು ...{Loading}...

ನಗುತ ಸಾಕೇಳ್ ಎಂದು ರಾಯನ
ತೆಗೆದು ತಳ್ಕಿಸಿ ಕೈಯ ತಳುಕಿನೊ
ಳಗಧರನು ನೃಪಸಭೆಗೆ ಬಿಜಯಂಗೈದನೊಲವಿನಲಿ
ಮುಗಿದ ಕರದಲಿ ವ್ಯಾಸ ಧೌಮ್ಯಾ
ದಿಗಳು ಮೈಯಿಕ್ಕಿದರಖಿಳ ಮಂ
ತ್ರಿಗಳು ಸಚಿವರು ನೆರುದುದಾಳೋಚನೆಯ ಭವನದಲಿ ॥22॥

೦೨೩ ಕಳುಹಿದನು ನಾನಾ ...{Loading}...

ಕಳುಹಿದನು ನಾನಾ ನೃಪರ ಮಂ
ಡಲಕೆ ದೂತರನಖಿಳ ಋಷಿ ಸಂ
ಕುಳಕೆ ಶಿಷ್ಟರ ಪರುಠವಿಸಿದನು ಹಸ್ತಿನಾಪುರಿಗೆ
ಕಳುಹಿದನು ನಕುಲನನು ಬಳಿಕಿ
ತ್ತಲು ನೃಪಾಧ್ವರಶಾಲೆಗಲ್ಲಿಯ
ನೆಲನ ಶೋಧಿಸೆ ಕರೆಸಿದರು ಬಹುವಿಧದ ಶಿಲ್ಪಿಗರ ॥23॥

೦೨೪ ಮಯನ ಮತದಲಿ ...{Loading}...

ಮಯನ ಮತದಲಿ ವಿಶ್ವಕರ್ಮನ
ನಯ ವಿವೇಕದಲಮಲ ಮಖ ಶಾ
ಲೆಯನು ನಿರ್ಮಿಸಿದರು ಸುಲಕ್ಷಣ ಶಾಸ್ತ್ರಸೂತ್ರದಲಿ
ನಿಯತ ಪತ್ನೀ ಶಾಲೆ ಜನವೇ
ದಿಯ ವರಾಂತರ್ವೇದಿ ಮಖವೇ
ದಿಯ ಬಹಿರ್ವೇದಿಗಳನಳವಡಿಸಿದರು ವಹಿಲದಲಿ ॥24॥

೦೨೫ ಬಿಗಿದ ಬಿಙ್ಗಾರಿಗಳ ...{Loading}...

ಬಿಗಿದ ಬಿಂಗಾರಿಗಳ ಮೇಲ್ಕ
ಟ್ಟುಗಳ ಮಣಿಮಯ ಸೂಸಕದ ಲೋ
ವೆಗಳ ಮುಖಮಂಟಪದ ಚೌರಿಯ ನವ ಫಲಾವಳಿಯ
ಹೊಗರ ನೀಲದ ಸರಿಯ ನೆಲಗ
ಟ್ಟುಗಳ ಚಪ್ಪರದೆಡೆಯೆಡೆಯ ಚೌ
ಕಿಗೆಯ ಚತುರಂಗದ ವಿಚಿತ್ರದ ರಚನೆ ಚೆಲುವಾಯ್ತು ॥25॥

೦೨೬ ಪುರದ ಹೊರವಳಯದಲಿ ...{Loading}...

ಪುರದ ಹೊರವಳಯದಲಿ ಯಮುನಾ
ವರನದಿಯ ತೀರದಲಿ ಧರಣೀ
ಶ್ವರರಿಗರಮನೆ ಮಾಡಿದರು ನವ ರತುನಮಯವಾಗಿ
ಸುರಪುರದ ಮಾರಾಂಕ ಭುಜಗೇ
ಶ್ವರನ ಭೋಗಾವತಿಯ ಶಿಲ್ಪದ
ಗುರುವೆನಿಸಿತೀ ನಗರ ನಾರಾಯಣನ ಕರುಣದಲಿ ॥26॥

+೦೬ ...{Loading}...