೦೪

೦೦೦ ಸೂಚನೆ ಯಾಗಸಿದ್ಧಿಗೆ ...{Loading}...

ಸೂಚನೆ: ಯಾಗಸಿದ್ಧಿಗೆ ನಡೆದು ಪೂರ್ವ ವಿ
ಭಾಗದಲಿ ಭೂಮಿಪರ ಕೈಯಲಿ
ಸಾಗರೋಪಮ ಧನವ ಮೇಳೈಸಿದನು ಕಲಿ ಭೀಮ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಯಮ ನಂದನನ ಭಾಗ್ಯದ
ಹೋಲಿಕೆಗೆ ಬಹರುಂಟೆ ನಳ ನಹುಷಾದಿ ರಾಯರಲಿ
ಆಳು ನಡೆದುದು ಭೀಮಸೇನನ
ಧಾಳಿಯಿದೆಯೆನೆ ತೆತ್ತುದವನೀ
ಪಾಲಕರು ತಂತಮ್ಮ ನಿಜ ವಿತ್ತಾನುರೂಪದಲಿ ॥1॥

೦೦೨ ನಡೆದು ಶೋಧಿಸಿ ...{Loading}...

ನಡೆದು ಶೋಧಿಸಿ ರೋಚಮಾನನ
ಹಿಡಿದು ಬಿಟ್ಟನು ಸರ್ವ ವಿತ್ತವ
ನಡಕಿತನಿಲಜನಾಳು ಮುಂದಣ ಚೇದಿ ದೇಶದಲಿ
ಘುಡಿ ಘುಡಿಸೆ ನಿಸ್ಸಾಳವೀ ಗಡ
ಬಡೆಯಿದೇನೆನೆ ಭೀಮಸೇನನ
ಪಡೆಯೆನಲು ಶಿಶುಪಾಲ ಬಂದನು ಕಂಡನುಚಿತದಲಿ ॥2॥

೦೦೩ ಏನು ಬನ್ದೆಯಪೂರ್ವವೆನೆ ...{Loading}...

ಏನು ಬಂದೆಯಪೂರ್ವವೆನೆ ಯಾ
ಗಾನುರಾಗವನರುಪಲತಿ ಸು
ಮ್ಮಾನದಲಿ ಶಿಶುಪಾಲ ಹೇರಿಸಿದನು ಮಹಾಧನವ
ಮಾನಿಸರ ಕಳುಹಿದರೆ ಸಾಲದೆ
ನೀನಿದೇಕೆಂದುಚಿತದಲಿ ಸ
ನ್ಮಾನಿಸುತ ನಿಲಿಸಿದನು ತಿಂಗಳು ಪವನ ನಂದನನ ॥3॥

೦೦೪ ನಡೆದು ಮುನ್ದೆ ...{Loading}...

ನಡೆದು ಮುಂದೆ ಕಳಿಂಗ ದೇಶದೊ
ಳಡಸಿ ಬಿಟ್ಟನು ಶೋಣಿವಂತನ
ಹಿಡಿದು ಕಪ್ಪವ ಕೊಂಡು ಸದೆದನು ಕೋಸಲೇಶ್ವರನ
ಅಡಕಿತಲ್ಲಿಯ ಧನ ಪಯೋಧಿಯ
ಕಡೆಯ ಕೋಟೆಯ ಮುರಿಯಲವನೆದೆ
ಯೊಡೆದು ದೀರ್ಘಪ್ರಜ್ಞನಿತ್ತನು ಬೇಹ ವಸ್ತುಗಳ ॥4॥

೦೦೫ ಆಳು ನಡೆದುದು ...{Loading}...

ಆಳು ನಡೆದುದು ಚೂಣಿಯಲಿ ಗೋ
ಪಾಲನೆಂಬನ ಮುರಿಯೆ ತೆತ್ತುದ
ಹೇಳಲರಿಯೆನು ಸಂಖ್ಯೆಯನು ಮುಂದತ್ತ ಪಾಲಕನ
ಜಾಳಿಸಿದನಾ ಕಾಶಿ ರಾಜನ
ಧಾಳಿಯಲಿ ಕೊಂದನು ಸುಪಾಶ್ರ್ವನ
ಮೇಲೆ ನಡೆದನು ಗಯನ ಮತ್ಸ್ಯನ ಗೆಲಿದನಾ ಭೀಮ ॥5॥

೦೦೬ ನಡೆದು ಮುನ್ದೆ ...{Loading}...

ನಡೆದು ಮುಂದೆ ವಿದೇಹನನು ಸದೆ
ಬಡಿದು ಮತ್ತೆ ಕಿರಾತ ಬಲವವ
ಗಡಿಸಿ ಕಾದಿತನಂತವದರೊಳಗೇಳು ಮಾನಿಸರು
ಒಡೆಯರವದಿರ ವಂಗಡವ ಹುಡಿ
ಹುಡಿಯ ಮಾಡಿ ನಿಷಾದ ವರ್ಗವ
ಕೆಡಹಿ ನಿಷಧನ ಹೊಯ್ದು ಸೆಳೆದನು ಸಕಲ ವಸ್ತುಗಳ ॥6॥

೦೦೭ ಮಲೆತು ಕಾದಿದ ...{Loading}...

ಮಲೆತು ಕಾದಿದ ದಂಡ ಧಾರನ
ಗೆಲಿದು ಮಗಧೇಶ ಗಿರಿವ್ರಜ
ದೊಳಗೆ ಪಾಳೆಯ ಬಿಟ್ಟುದವನಿದಿರಾಗಿ ನಡೆತಂದು
ದಳವ ಹೇಳಿದನಾತನಲ್ಲಿಂ
ದಿಳಿದು ಕರ್ಣನ ಗೆಲಿದು ಕಪ್ಪವ
ಸೆಳೆದು ಕೊಂಡದ್ರಿಯಲಿ ಸದೆದನು ಬಹಳ ವನಚರರ ॥7॥

೦೦೮ ಸೂರೆಗೊಣ್ಡಲ್ಲಿನ್ದ ನಡೆದನು ...{Loading}...

ಸೂರೆಗೊಂಡಲ್ಲಿಂದ ನಡೆದನು
ಮೀರಿ ಗಂಗಾಸಂಗಮವ ಕೈ
ಮೀರಲರಿಯದೆ ಸಂಧಿಗವನೀಶ್ವರರು ವಶವಾಯ್ತು
ಹೇರಿಸಿದನನುಪಮದ ವಸ್ತುವ
ನಾರು ಸಾವಿರ ಭಂಡಿಯಲಿ ನಡೆ
ದೇರಿ ಹೊಯ್ದನು ವಾಸುದೇವನ ಪೌಂಡ್ರಕಾಹ್ವಯನ ॥8॥

೦೦೯ ಪುರವರವನಲ್ಲಿನ್ದ ಮೌಲ್ಯದ ...{Loading}...

ಪುರವರವನಲ್ಲಿಂದ ಮೌಲ್ಯದ
ತೆರಳಿಕೆಯ ಮಾಡಿದನು ಮೂಡಲು
ಹರಿದು ಮುರಿದು ಸಮುದ್ರಸೇನನ ಸರ್ವಗವತೆಯಲಿ
ತೆರಳಿಕೆಯಲ್ಲಿಂದಿಂದ್ರ ಸೇನನ
ನೊರೆಸಿ ಭಂಡಾರವನು ಹೇರಿಸಿ
ಮರಳಿ ವಂಗನನಪ್ಪಳಿಸಿದನು ಲುಬ್ಧಕರು ಸಹಿತ ॥9॥

೦೧೦ ಸಾರಲೋಹಿತನೆಮ್ಬ ಸಾಗರ ...{Loading}...

ಸಾರಲೋಹಿತನೆಂಬ ಸಾಗರ
ತೀರವಾಸಿಗಳೊಳಕುರುವದ ವಿ
ಕಾರ ಚೋನೆಗ ಚೀನ ಬೋಟಕರನು ನಿವಾಸಿಗಳ
ಓರೆ ಬಾಗಿನ ಕುರುವ ಕೊಳ್ಳದ
ಗೌರಿಕರನಪ್ಪಳಿಸಿ ಮಲೆಯ ವಿ
ಹಾರಿಗಳ ಬರಿಗೈದು ತುಂಬಿಸಿದನು ಸುವಸ್ತುಗಳ ॥10॥

೦೧೧ ಧಾಳಿ ಹರಿದುದು ...{Loading}...

ಧಾಳಿ ಹರಿದುದು ಪಂಚ ಗೌಳವ
ರಾಳವೊಡ್ಡಿಯರಾಂಧ್ರ ಜಾಳಾಂ
ದ್ರಾಳಿಗಳನಪ್ಪಳಿಸಿ ಹೂಡಿಸಿದನು ಮಹಾಧನವ
ಮೇಲು ದುರ್ಗದ ಪಾರ್ವತೇಯರಿ
ಗಾಳು ಹರಿದುದು ಸಂದುಗೊಂದಿಯ
ಶೈಲ ಗುಹೆಗಳೊಳರಸಿ ಹಿಡಿದನು ಬಹಳ ಧನಯುತರ ॥11॥

೦೧೨ ಅರಸಿದನು ನಾವೆಗಳಲಬ್ದಿಯ ...{Loading}...

ಅರಸಿದನು ನಾವೆಗಳಲಬ್ದಿಯ
ಕುರುವದಲಿ ಕೊಬ್ಬಿದ ಧನಾಢ್ಯರ
ಮುರಿದು ಮರಳಿದು ಕೆಲಬಲದಲಾ ದ್ವೀಪ ಪಾಲಕರ
ಸೆರೆವಿಡಿದು ತನಿ ಸೂರೆಯಲಿ ಪಡೆ
ನೆರೆ ದಣಿಯಲಾ ಮ್ಲೇಚ್ಛ ವರ್ಗವ
ತರಿದು ಶೋಧಿಸಿ ತೆಗೆದನಲ್ಲಿಯ ಸಾರ ವಸ್ತುಗಳ ॥12॥

೦೧೩ ಆ ಮಹಾ ...{Loading}...

ಆ ಮಹಾ ಭೋಟಕ ಮಹಾಹ್ವಯ
ಧಾಮದಲಿ ದಸ್ಯುಗಳನತಿ ನಿ
ಸ್ಸೀಮ ಯವನ ಕರೂಷರನು ತಾಗಿದನು ವಹಿಲದಲಿ
ಹೇಮ ಮುಕ್ತಾ ರಜತ ಚಂದನ
ರಾಮಣೀಯಕ ವಸ್ತು ನಿಚಯದ
ಸೀಮೆಗಳ ನಾನರಿಯೆನಳವಡಿಸಿದನು ಕಲಿಭೀಮ ॥13॥

೦೧೪ ಮರಳೆಯನಿಲಜನಾ ಮಹಾದ್ಭುತ ...{Loading}...

ಮರಳೆಯನಿಲಜನಾ ಮಹಾದ್ಭುತ
ತರದ ವಸ್ತುವನಾನಲಾಪುದೆ
ಧರಣಿಯೆನೆ ಸಂದಣಿಸಿದವಸಂಖ್ಯಾತ ರಥಯೂಥ
ಅರಸುಗಳ ಸಹಿತೀ ಮಹಾಬಲ
ವೆರಸಿ ಬಂದನು ಭೀಮನಣ್ಣನ
ಚರಣಕೆರಗಿದನರ್ಜುನನ ತಕ್ಕೈಸಿದನು ನಗುತ ॥14॥

+೦೪ ...{Loading}...