೧೯

೦೦೦ ಸೂ ಆ ...{Loading}...

ಸೂ. ಆ ಸುರಾರಿವಿರೋಧಿ ಪುರದಲಿ
ವಾಸವಾತ್ಮಜ ಮದುವೆಯಾಗಿ ವಿ
ಲಾಸದಲಿ ಹೊಕ್ಕನು ಸುಭದ್ರಾ ಸಹಿತ ನಿಜಪುರವ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ನಾರದಮುನಿ ನರೇಂದ್ರನ
ಬೀಳುಕೊಂಡನು ಚಪಲಗತಿಯಲಿ ಚಿಗಿದನಂಬರಕೆ
ಮೇಲೆ ಬಳಿಕೊಂದವಗಡವನೇ
ವೇಳುವೆನು ಪಾರ್ಥಂಗೆ ಬಂದುದ
ಕಾಲಗತಿಯೈಸಲೆ ವಿದೇಶ ಭ್ರಮಣವಾಯ್ತೆಂದ ॥1॥

೦೦೨ ನರನ ವಳಿತದೊಳೊನ್ದು ...{Loading}...

ನರನ ವಳಿತದೊಳೊಂದು ಸಮಯದೊ
ಳಿರುಳು ತಸ್ಕರ ಬಾಧೆಯಲಿ ಭೂ
ಸುರರು ಬಾಯ್ಬಿಡುತೈದೆಯಿಂದ್ರಪ್ರಸ್ಥ ಪುರವರವ
ಮೊರೆಯಬಾಯ್ಗಳ ಹುಲ್ಲು ಕೈಗಳ
ಹರಿದ ಮೈಗಳ ಸೆಕೆಯ ಸುಯ್ಗಳ
ತರದ ಬೈಗಳ ಕಳಕಳವ ಕೇಳಿದನು ಕಲಿಪಾರ್ಥ ॥2॥

೦೦೩ ಕರೆಸಿ ವಿಪ್ರರ ...{Loading}...

ಕರೆಸಿ ವಿಪ್ರರ ಬಾಧೆಗಳನಾ
ದರಿಸಿ ಕೇಳಿದು ಸಂತವಿಸಿ ಪರಿ
ಹರಿಸಿ ಕೊಡುವೆನು ದುಷ್ಟ ಪಾಟಚ್ಚರಪರಿಪ್ಲವವ
ಮರಳಿ ನೀವೆಂದವರ ಬೀಳ್ಕೊಂ
ಡರಿ ನಿವಾರಣ ಬಂದನಗ್ಗದ
ಶರಧನುವ ಕೊಳಲೆಂದು ರಾಯನ ಸೆಜ್ಜೆಯರಮನೆಗೆ ॥3॥

೦೦೪ ಸಮಯವೇನೆನೆ ಜೀಯ ...{Loading}...

ಸಮಯವೇನೆನೆ ಜೀಯ ರಾಯನು
ರಮಣಿಯೊಡನೇಕಾಂತವೆನಲ
ಸ್ತಮಿತ ಹರುಷನು ನಿಂದು ನೆನೆದನು ತನ್ನ ಮನದೊಳಗೆ
ಅಮರಮುನಿ ಮತವೊಂದು ಮಂಚದ
ರಮಣಿ ರಮಣರ ದರುಶನವಿದ
ಕ್ರಮವೆನಿಪುದೀ ವಚನ ಸಂಘಟಿಸಿತ್ತು ತನಗೆಂದ ॥4॥

೦೦೫ ಈಗಲೀ ವಿಪ್ರರಲಿ ...{Loading}...

ಈಗಲೀ ವಿಪ್ರರಲಿ ಖಳರಭಿ
ಯೋಗವಾರ್ತಾಶ್ರವಣ ಬಹು ದುರಿ
ತಾಗಮವು ತನಗಾವುದೋ ಕರ್ತವ್ಯವೆಂದೆನುತ
ಈಗಲೀ ಸಂದಿಗ್ಧ ಸಮಯ
ತ್ಯಾಗ ಧರ್ಮ ವಿರೋಧ ಕೃತ್ಯವಿ
ಭಾಗವಾವುದೊ ಶಾಸ್ತ್ರದೃಷ್ಟಿಯೊಳೆಂದು ಚಿಂತಿಸಿದ ॥5॥

೦೦೬ ಎರಡು ಪಾತಕವಿವೆ ...{Loading}...

ಎರಡು ಪಾತಕವಿವೆ ಬಲಾಬಲ
ವೆರಡರೊಳು ಸಾಮಾನ್ಯ ಪಕ್ಷಾಂ
ತರ ವಿಶೇಷವದಾವುದದರೊಳಗೆಂದು ಚಿತ್ತದಲಿ
ಒರೆದೊರೆದು ನೋಡಿದನು ತೂಕವ
ಬರೆಸಿ ಕಾಹಿನ ಕಂದುಕುಂದನು
ಪರಿಕಿಸುತ ನಿಶ್ಚೈಸಿ ತಿಳಿದನು ತನ್ನ ಮನದೊಳಗೆ ॥6॥

೦೦೭ ಅರಸನರಸಿಯರೊನ್ದು ಮಞ್ಚದೊ ...{Loading}...

ಅರಸನರಸಿಯರೊಂದು ಮಂಚದೊ
ಳಿರಲು ಕಂಡರೆ ಭೂಪ್ರದಕ್ಷಿಣ
ವರುಷವೊಂದರೊಳಿದಕೆ ಪ್ರಾಯಶ್ಚಿತ್ತ ವಿಧಿಯುಂಟು
ಧರಣಿಯಮರರುಪಪ್ಲವವ ಪರಿ
ಹರಿಸದಿರಲಾ ಪಾತಕಕೆ ಸಂ
ಹರಣವುಂಟೇ ಶಾಸ್ತ್ರದೃಷ್ಟಿಯೊಳೆಂದು ಚಿಂತಿಸಿದ ॥7॥

೦೦೮ ಎನುತ ನರನೊಳಹೊಕ್ಕು ...{Loading}...

ಎನುತ ನರನೊಳಹೊಕ್ಕು ತನ್ನಯ
ಧನು ಶರಂಗಳ ಕೊಂಡು ನುಡಿದನು
ಮುನಿವಚನ ಸಂಘಟಿತ ನೃಪದಂಪತಿ ವಿಲೋಕನದ
ಘನ ದುರಿತ ನಿಷ್ಕೃತಿಗೆ ವರುಷದೊ
ಳೆನಗೆ ದೇಶಭ್ರಮಣವಾಯ್ತೆಲೆ
ಜನಪ ಚಿಂತಿಸಬೇಡೆನುತ ಹೊರವಂಟನಾ ಪಾರ್ಥ ॥8॥

೦೦೯ ಇರಿದು ಕಳ್ಳರವಳ್ಳಿಗಳ ...{Loading}...

ಇರಿದು ಕಳ್ಳರವಳ್ಳಿಗಳ ಕುರಿ
ದರಿದು ಭೂಸುರರೂರುಗಳ ಸೆರೆ
ತುರುಗಳನು ತಂದಿತ್ತನರ್ಜುನನಾ ಮಹೀಸುರರ
ತುರುಗಿದಾಶೀರ್ವಾದ ಮಳೆಗಳು
ಕರೆಯೆ ಹೆಚ್ಚಿದ ವೀರಕೀರ್ತಿಯ
ತೊರೆಗಳೊಳು ತೇಕಾಡುತಿರ್ದುದು ಸಕಲ ಜನನಿಕರ ॥9॥

೦೧೦ ಧಾರುಣೀಪತಿ ಕೇಳು ...{Loading}...

ಧಾರುಣೀಪತಿ ಕೇಳು ಗಂಗಾ
ತೀರಕೈದಿದನರ್ಜುನನು ಭಾ
ಗೀರಥೀ ಸ್ನಾನಾವಗಾಹ ವಿಶುದ್ಧ ವಿಗ್ರಹನ
ದೂರದಲಿ ಕಂಡುರಗ ರಾಜಕು
ಮಾರಿ ವರಸಿದಳೊಲವಿನಲಿ ಜಂ
ಭಾರಿತನಯನನಿಳುಹಿದಳು ಪಾತಾಳಮಂದಿರಕೆ ॥10॥

೦೧೧ ವಿಭವದಲಿ ವಾಸುಕಿಯ ...{Loading}...

ವಿಭವದಲಿ ವಾಸುಕಿಯ ತಂಗಿಯ
ನುಭಯ ವಂಶ ವಿಶುದ್ಧೆಯನು ಹರಿ
ನಿಭನು ಪಾಣಿಗ್ರಹಣವನು ಮಾಡಿದನು ವೊಲವಿನಲಿ
ಅಭಿಮತ ಕ್ರೀಡಾವಿನೋದದ
ರಭಸದಲಿ ದಿನ ಸವೆಯೆ ಗರ್ಭ
ಪ್ರಭವವಾಯ್ತು ಕುಮಾರ ಜನಿಸಿದನುರಗನಾರಿಯಲಿ ॥11॥

೦೧೨ ಸುತನಿರಾವಾನೆನಿಸಿ ತೊಳಗಿದ ...{Loading}...

ಸುತನಿರಾವಾನೆನಿಸಿ ತೊಳಗಿದ
ನತಿ ಬಹಳ ಬಲನಾತನನು ನಿಜ
ಸತಿಯನಲ್ಲಿಯೆ ನಿಲಿಸಿ ಕಳುಹಿಸಿಕೊಂಡನುಚಿತದಲಿ
ಕ್ಷಿತಿಗೆ ಬಂದನು ಜಾಹ್ನವೀ ಸಂ
ಗತ ಸಮುದ್ರದ ತೀರದಲಿ ಸೇ
ವಿತ ಸಕಲ ತೀರ್ಥೌಘನೈದಿದನಿಂದ್ರ ದಿಙ್ಮುಖವ ॥12॥

೦೧೩ ಅರಸ ಕೇಳುತ್ತರದ ...{Loading}...

ಅರಸ ಕೇಳುತ್ತರದ ಪೂರ್ವದ
ಪರಮ ತೀರ್ಥವ್ರಾತವನು ವಿ
ಸ್ತರಿಸಿ ಸಾಗರ ತೀರದಲಿ ದಕ್ಷಿಣ ದಿಶಾವರಕೆ
ತಿರುಗಿದನು ತತ್ಪಂಚ ಗೋದಾ
ವರಿಯ ತೀರಕೆ ತುಂಗಭದ್ರಾ
ವರ ನದಿಯನುತ್ತರಿಸಿ ಕಾಂಚೀನಗರಕೈತಂದ ॥13॥

೦೧೪ ಆ ನಗರದಧಿದೈವ ...{Loading}...

ಆ ನಗರದಧಿದೈವ ನಿಕರಕೆ
ತಾ ನಮಿಸಿ ತತ್ಸಕಲ ತೀರ್ಥ
ಸ್ನಾನ ಕರ್ಮವ ರಚಿಸಿ ಬಂದನು ಜಲಧಿ ತೀರದಲಿ
ವಾನರರ ಭುಜಬಲಸಮಾಖ್ಯಾ
ನೂನಶಾಸನವನು ಸುರಾರಿ ವಿ
ತಾನ ರವಿ ರಾಹುವನು ಕಂಡನು ಸೇತುಬಂಧನವ ॥14॥

೦೧೫ ವರ ಧನುಷ್ಕೋಟಿಯಲಿ ...{Loading}...

ವರ ಧನುಷ್ಕೋಟಿಯಲಿ ಮಿಂದೀ
ಶ್ವರ ಪದಾಂಬುಜಕೆರಗಿ ತತ್ಪರಿ
ಸರದ ಪಂಚ ತಟಾಕದಲಿ ಘನ ಮಕರರೂಪದಲಿ
ಸುರವಧುಗಳಿರಲವರ ಶಾಪವ
ಪರಿಹರಿಸಿ ತತ್ತೀರ್ಥಸೇವಾ
ಪರಮಪಾವನಕರಣನಾದನು ಭೂಪ ಕೇಳ್ ಎಂದ ॥15॥

೦೧೬ ಈತನನು ಕಣ್ಡರಿದು ...{Loading}...

ಈತನನು ಕಂಡರಿದು ಪಾಂಡ್ಯಮ
ಹೀತಳಾಧಿಪ ನಿಜ ಕುಮಾರಿಯ
ನೀತಗಿತ್ತನು ಬಭ್ರುವಾಹನನಾದನಾಕೆಯಲಿ
ಈತ ಕಳುಹಿಸಿಕೊಂಡು ದೈತ್ಯಾ
ರಾತಿಗೆರಗಿಯನಂತಶಯನ
ಖ್ಯಾತಿ ವಿಭವವನೀಕ್ಷಿಸುತ ಹರುಷದಲಿ ನಡೆತಂದ ॥16॥

೦೧೭ ನದಿ ನದವನುತ್ತರಿಸಿ ...{Loading}...

ನದಿ ನದವನುತ್ತರಿಸಿ ಹರಿ ಹರ
ಪದಯುಗಳಕಭಿನಮಿಸಿ ತದ್ದೇ
ಶದ ಸುತೀರ್ಥಕ್ಷೇತ್ರವೆನಿತುಳ್ಳನಿತನಾದರಿಸಿ
ಮುದದ ಮುರವಿನ ಹಂಸೆಗಳ ತನಿ
ಮದದ ಚಾತಕವಕ್ಕಿಗಳ ಮೇ
ಘದ ಸಘಾಡದ ಮೇಳವವ ನೋಡುತ್ತ ನಡೆತಂದ ॥17॥

೦೧೮ ಒಡ್ಡು ಮೆರೆದುದು ...{Loading}...

ಒಡ್ಡು ಮೆರೆದುದು ಮೇಘಘಟೆ ಬಿಸಿ
ಲೊಡ್ಡು ಮುರಿದುದು ಚಂದ್ರಸೂರ್ಯರ
ನಡ್ಡವಿಸಿ ಹಿಡಿಯಾಳ ಹಿಡಿದವು ಮುಗಿಲ ಚೂಣಿಗಳು
ಖಡ್ಡಿ ತಡೆವುದೆ ಕಡಲನುಡುಗಣ
ದೊಡ್ಡ ಕಾಣೆನು ಮುಗಿಲ ಬೆನಕಗೆ
ಲಡ್ಡುಗೆಗಳಾದವು ಸಮಸ್ತಗ್ರಹ ಸುತಾರೆಗಳು ॥18॥

೦೧೯ ಆಳಕರೆ ಕಟಕವನು ...{Loading}...

ಆಳಕರೆ ಕಟಕವನು ಸೂರ್ಯನ
ಮೇಲೆ ಬರಹೇಳೆಂಬ ಮೇಘ ನೃ
ಪಾಲಕನ ಡಂಗುರವೊ ಮೊಳಗುವ ಸಿಡಿಲಿನಬ್ಬರವೊ
ಆಲಿಕಲ್ಗಳೊ ಮುಗಿಲ ಮುಂಗುಡಿ
ಯಾಳ ಹೊಯ್ಲಲಿ ಬೀಳ್ವ ತಾರಾ
ಮಾಲೆಗಳೊ ಜೀಮೂತಲತೆ ಲಂಬಿಸಿದುದಂಬರವ ॥19॥

೦೨೦ ಮಿಞ್ಚಿದವು ದೆಸೆಗಳಲಿ ...{Loading}...

ಮಿಂಚಿದವು ದೆಸೆಗಳಲಿ ಗಮನಕೆ
ಮುಂಚಿದವು ಹಂಸೆಗಳು ನಭದಲಿ
ಹೊಂಚಿದುದು ಜೀವನಕೆ ಜೀವನ ವಿರಹಿ ನಿಕುರುಂಬ
ಪಂಚಪತಿಯರೊ ಮೇಣಿವರು ಪತಿ
ವಂಚಕಿಯರೋ ಗ್ರೀಷ್ಮಕಾಲದ
ಪಂಚತೆಯೊಳಾಲಿಂಗಿಸಿತು ದಿಗ್ವಧುಗಳಂಬುದವ ॥20॥

೦೨೧ ಜನಪ ಕೇಳೈ ...{Loading}...

ಜನಪ ಕೇಳೈ ಕಾರ್ಮುಗಿಲ ಮುಂ
ಬನಿಗಳೊಳು ವಹಿಲದಲಿ ಕೇರಳ
ಜನಪದದ ತೌಳವದ ಕೊಂಕಣ ವಿಷಮವೀಧಿಯಲಿ
ಜಿನುಗಿನಲಿ ಬಹುಮಳೆಗಳಲಿ ನೆನೆ
ನೆನೆದು ಸಾಗರ ತೀರದಲಿ ಬಂ
ದನು ಕಿರೀಟಿ ವಿಚಾರಿಸುತ ಮುರಹರನ ಪಟ್ಟಣವ ॥21॥

೦೨೨ ಪುರವ ಹೊರವಣ್ಟೆಣ್ಟು ...{Loading}...

ಪುರವ ಹೊರವಂಟೆಂಟು ತಿಂಗಳು
ಪರಿಹರಿಸಿತೀ ಕೃಷúರಾಯನ
ಪುರದೊಳಗೆ ನೂಕುವೆನು ವರ್ಷಾಕಾಲ ವಿಭ್ರಮವ
ವರುಷವೊಂದು ಸಮಾಪ್ತಿ ಬಳಿಕಿನೊ
ಳರಸನಂಘ್ರಿ ವಿಲೋಕನಾ ವಿ
ಸ್ತರಣವಹುದೆಂದಾತ ನಿಶ್ಚೈಸಿದನು ಮನದೊಳಗೆ ॥22॥

೦೨೩ ಅರಸ ಕೇಳ್ ...{Loading}...

ಅರಸ ಕೇಳ್ ಸಂನ್ಯಾಸಿ ವೇಷದ
ಪರಿಕರವನಳವಡಿಸಿ ಶೌರಿಯ
ಪುರದ ಹೊರ ಬಾಹೆಯಲಿ ಹೆಚ್ಚಿದ ಬನದ ಮಧ್ಯದಲಿ
ಇರುಳು ಕಗ್ಗತ್ತಲೆಯೊಳೌಕುವ
ಸರಿವಳೆಗೆ ಸಲೆ ಸೇಡುಗೊಳುತು
ಬ್ಬರಿಸಿ ಕೃಷ್ಣನ ನೆನೆವುತಿದ್ದನು ಮರನ ಹೊಳ್ಳಿನಲಿ ॥23॥

೦೨೪ ದೇವನತ್ತಲು ಸತ್ಯಭಾಮಾ ...{Loading}...

ದೇವನತ್ತಲು ಸತ್ಯಭಾಮಾ
ದೇವಿಯರ ಮೇಳದಲಿಯಿರುತಿ
ರ್ದೀ ವಿಲಾಸವ ನೆನೆದು ನಕ್ಕನು ಶಕ್ರನಂದನನ
ಆವಳೋ ನೆನಹಿನಲಿ ಸುಳಿದಳು
ಭಾವದಲಿ ಸುಮ್ಮಾನವೇನೆನೆ
ದೇವಿ ಬೇರೊಂದಿಲ್ಲ ಮನ ನಿನ್ನಾಣೆ ಕೇಳ್ ಎಂದ ॥24॥

೦೨೫ ನರನ ನೀ ...{Loading}...

ನರನ ನೀ ಕೇಳ್ದರಿಯಲಾ ಸೋ
ದರದ ಮೈದುನನೆನಗೆ ಕುಂತಿಯ
ವರ ಕುಮಾರಕನಾತನೀ ದ್ವಾರಾವತಿಯ ಹೊರಗೆ
ಮರದ ಹೊಳ್ಳೊಳು ಹೊಕ್ಕು ಸಿಕ್ಕಿದ
ನರಿಯವೊಲೈದಾನೆ ನಾನುಪ
ಚರಿಸಿ ಬಹೆನೆಂದೆನುತ ಮಂಚವನಿಳಿದನಸುರಾರಿ ॥25॥

೦೨೬ ಅರಸಿ ಕೇಳೀ ...{Loading}...

ಅರಸಿ ಕೇಳೀ ಬಂದ ಪಾರ್ಥನ
ಕರೆದುಪಾಯಾಂತರದೊಳೀವೆನು
ಸರಸಿಜಾನನೆಯನು ಸುಭದ್ರೆಯನಿಂದು ತಪ್ಪಿದರೆ
ಕರೆಸಿ ದುರ್ಯೋಧನಗೆ ಕೊಡಿಸುವ
ಭರವು ಬಲಭದ್ರನದು ಪಾರ್ಥನ
ಬರವು ಲೇಸಾಯ್ತೆನುತ ಹೊರವಂಟನು ನಿಜಾಲಯವ ॥26॥

೦೨೭ ಬನ್ದನಲ್ಲಿಗೆ ಫಲುಗುಣನ ...{Loading}...

ಬಂದನಲ್ಲಿಗೆ ಫಲುಗುಣನ ಕಂ
ಡೆಂದನೀ ಶೈಲದ ಸಮೀಪದೊ
ಳಿಂದು ನಿಲು ಬಲಭದ್ರನೈತಹನುಚಿತ ವಚನದಲಿ
ಮಂದಿರಕೆ ಬರ ಹೇಳಿದರೆ ಬಾ
ಮುಂದೆ ನಿನ್ನಿಷ್ಟಾರ್ಥ ಸಿದ್ಧಿಪು
ದೆಂದು ಪಾರ್ಥನ ಸಂತವಿಸಿ ಮರಳಿದನು ಮುರವೈರಿ ॥27॥

೦೨೮ ಪರಮಹಂಸನ ಸುಳಿವು ...{Loading}...

ಪರಮಹಂಸನ ಸುಳಿವು ಸಾಕ್ಷಾ
ತ್ಸರಸಿಜಾಕ್ಷನ ಲೀಲೆ ಗಡ ನ
ಮ್ಮರಸನಭ್ಯುದಯ ಪ್ರಪಂಚವಿದೆಂದು ನಗರದಲಿ
ಹರಹಿದನು ಹರಿ ವಾರ್ತೆಯನು ತಾ
ನರಿಯದಂತಿರೆ ಬಳಿಕ ನೀಲಾಂ
ಬರನು ಬಹಳೋತ್ಸವದೊಳೈದಿದನಾತನಿದ್ದೆಡೆಗೆ ॥28॥

೦೨೯ ವನ್ದಿಸಿದನಾ ಮುನಿಪತಿಯನಭಿ ...{Loading}...

ವಂದಿಸಿದನಾ ಮುನಿಪತಿಯನಭಿ
ವಂದಿತಾಶೀರ್ವಾದ ಸಂಗತಿ
ಯಿಂದ ವಿವರಿಸಿದನು ಚತುರ್ದಶವಿದ್ಯೆಗಳ ಗತಿಯ
ನಿಂದು ಮೂಗಿನ ಬೆರಳಿನಲಿ ಸಾ
ನಂದ ಮಿಗೆ ಬೆರಗಾಗಿ ನಮ್ಮಯ
ಮಂದಿರಕೆ ನೀವ್ ಬಿಜಯ ಮಾಡುವುದೆನುತ ಕೈಮುಗಿದ ॥29॥

೦೩೦ ನಾವು ಭಿಕ್ಷುಕರೆಮಗೆ ...{Loading}...

ನಾವು ಭಿಕ್ಷುಕರೆಮಗೆ ರಾಜಗೃ
ಹಾವಲಂಬನವೇಕೆ ಶೈಲ ವ
ನಾವಳಿಗಳಲಿ ವರ ನದೀತೀರದಲಿ ವಾಸಿಪೆವು
ಭಾವಿತ ಪ್ರಾರಬ್ಧಕರ್ಮ ಫ
ಲಾವಳಿಯನುಪಭೋಗಿಸುತ ದೇ
ಹಾವಸಾನವನೀಕ್ಷಿಸುತ್ತಿಹೆವೆಂದನಾ ಪಾರ್ಥ ॥30॥

೦೩೧ ಅಹುದು ನೀವೇಕಾನ್ತಭವನದೊ ...{Loading}...

ಅಹುದು ನೀವೇಕಾಂತಭವನದೊ
ಳಿಹುದು ಚಾತುರ್ಮಾಸವಿದು ಸಂ
ನಿಹಿತವಾಯ್ತದ ನೂಕಿ ಬಿಜಯಂಗೈವುದಿಚ್ಛೆಯಲಿ
ವಿಹಿತ ಚರಿತರು ನೀವಲಾ ನಿ
ರ್ವಹಿಸುವೆನು ಶುಶ್ರೂಷೆಯನು ಕಿಂ
ಗಹನ ಮಾಡದಿರೆಂದು ತಂದನು ಯತಿಯನರಮನೆಗೆ ॥31॥

೦೩೨ ಇವರನರಮನೆಯೊಳಗೆ ಕನ್ಯಾ ...{Loading}...

ಇವರನರಮನೆಯೊಳಗೆ ಕನ್ಯಾ
ಭವನ ಮಧ್ಯದೊಳಿರಿಸಿ ಬಳಿಕಿನೊ
ಳಿವರ ಶುಶ್ರೂಷೆಗೆ ಸುಭದ್ರಾದೇವಿಯನು ಕರೆಸಿ
ಇವರಪೂರ್ವ ಮಹಾತ್ಮಕರು ನೀ
ನಿವರ ದೇವಾರ್ಚನೆ ಸಮಾಧಿ
ಪ್ರವರದಲಿ ಬೆಸಸಿದನು ಮಾಡುವುದೆಂದು ನೇಮಿಸಿದ ॥32॥

೦೩೩ ಹೊರಗೆ ಕೃಷ್ಣನ ...{Loading}...

ಹೊರಗೆ ಕೃಷ್ಣನ ಕರೆದಿವೆಲ್ಲವ
ನರುಹಿದಡೆ ಮರುಳಾಡಿದನು ಮೈ
ಮರೆದು ತಂಗಿಯನೊಯ್ದು ಬಿಸುಟಿರೆ ಬಣಗು ತಿರುಕನಲಿ
ಅರಸು ಮಗಳನು ತೊತ್ತುಗೆಲಸಕೆ
ಪರುಠವಿಸಿದರೆ ಶಿವಶಿವಾ ನಾ
ವರಿಯೆವಲ್ಲಿಯ ಲೇಸು ಹೊಲ್ಲೆಹವೆಮ್ಮದಲ್ಲೆಂದ ॥33॥

೦೩೪ ಮರುಳೆ ನೀ ...{Loading}...

ಮರುಳೆ ನೀ ಹೋಗಾರನೇನೆಂ
ದರಿಯೆ ಯತಿ ಸರ್ವಜ್ಞನೀತನು
ತಿರುಕನೇ ಸಾಕ್ಷಾತು ಲಕ್ಷ್ಮೀಕಾಂತ ಸನ್ನಿಭನು
ಬರಲಿ ಮಾಣಲಿ ಹಾನಿ ವೃದ್ಧಿಯ
ಹರಿಬವೆನ್ನದು ಯತಿ ಮಹಾತ್ಮರ
ನರಿಯದವರೇ ನಾವೆನುತ ಗಜರಿದನು ಬಲರಾಮ ॥34॥

೦೩೫ ಆದರೊಳ್ಳಿತು ತಙ್ಗಿ ...{Loading}...

ಆದರೊಳ್ಳಿತು ತಂಗಿ ಬೆಸಗೈ
ದಾದರಿಸಲೀ ಯತಿಪತಿಯ ನಿಮ
ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ
ಹೋದೆವಿದೆ ಮೌನದೊಳೆನುತ್ತಬು
ಜೋದರನು ಹಿಂಗಿದನು ಹರಿಯ ವಿ
ನೋದ ರಚನೆಯನೇನನೆಂಬೆನು ಭೂಪ ಕೇಳ್ ಎಂದ ॥35॥

೦೩೬ ಬಾಲಕಿಗೆ ಸನ್ನ್ಯಾಸಿ ...{Loading}...

ಬಾಲಕಿಗೆ ಸಂನ್ಯಾಸಿ ದೇವರ
ಮೇಲೆ ಮನವಾಯ್ತವರಿಗೀಕೆಯ
ಮೇಲೆ ನೆಲಸಿತು ಚಿತ್ತ ಕಾಣೆನು ಜಪ ಸಮಾಧಿಗಳ
ಮೇಳವಿಸಿತನ್ಯೋನ್ಯ ರಾಗ ಛ
ಡಾಳಿಸಿದುದಭಿಲಾಷೆ ಕಾಮನ
ಬೇಳುವೆಗೆ ಬೆಂಡಾದುದಿಬ್ಬರ ಧೈರ್ಯವಡಿಗಡಿಗೆ ॥36॥

೦೩೭ ಮಿಡುಕುವುದು ಬಾಯ್ ...{Loading}...

ಮಿಡುಕುವುದು ಬಾಯ್ ಚಿತ್ತವವಳಲಿ
ತೊಡಕಿಹುದು ಜಪಮಾಲೆ ಬೆರಳಲಿ
ನಡೆವುತಿಹುದಕ್ಷಿಗಳು ಮುಕ್ಕುಳಿಸಿಹವು ಮಾನಿನಿಯ
ಮೃಡನ ಪೂಜೆಗೆ ಕೈ ಸುಭದ್ರೆಯ
ಹಿಡಿಹಿನಲಿ ಮನ ವರಸಮಾಧಿಯ
ತೊಡಹು ಹೊರಗೊಳಗಿಂದುಮುಖಿ ನರನಾಥ ಕೇಳ್ ಎಂದ ॥37॥

೦೩೮ ಜಾರಿದುದು ಮಳೆಗಾಲವತಿ ...{Loading}...

ಜಾರಿದುದು ಮಳೆಗಾಲವತಿ ಬೆಳು
ಪೇರಿದವು ಮುಗಿಲುಗಳು ಕತ್ತಲೆ
ಸೂರೆವೋದುದು ಹಗಲಿರುಳು ರವಿಶಶಿಗಳುಪಟಲಕೆ
ತಾರಿದವು ನದಿ ನದಗಳಭ್ರಕೆ
ಹಾರಿದವು ಕಳಹಂಸೆಗಳು ತಲೆ
ದೋರಿದವು ತಾವರೆಗಳೆನೆ ಬಂದುದು ಶರತ್ಸಮಯ ॥38॥

೦೩೯ ಸುದತಿಯನು ಶುಭದಿವಸ ...{Loading}...

ಸುದತಿಯನು ಶುಭದಿವಸ ಸುಮೂಹೂ
ರ್ತದೊಳಿರುಳು ವೈವಾಹವನು ಮಾ
ಡಿದರು ಹರಿ ವಸುದೇವ ದೇವಕಿಯುಗ್ರಸೇನ ನೃಪ
ಮದುವೆಯಾಯಿತು ಬಲನರಿಯದಂ
ದದಲಿ ಹೂಡಿದ ರಥವನೇರಿಸಿ
ಮದವಳಿಗೆ ಸಹಿತರ್ಜುನನ ಕಳುಹಿದನು ಮುರವೈರಿ ॥39॥

೦೪೦ ಪುರವ ಹೊರವಣ್ಟವರು ...{Loading}...

ಪುರವ ಹೊರವಂಟವರು ಬರಲ
ಬ್ಬರಣೆಯಾಯ್ತರಮನೆಯೊಳಗೆ ಸಂ
ಕರುಷಣಂಗರುಹಿದರು ಸಂನ್ಯಾಸಿಯ ಸಮಾಧಿಗಳ
ಅರಸು ಮಗಳನು ಕೊಂಡು ಹಾಯ್ದನೆ
ತಿರುಕ ಮುನಿ ಮಝಭಾಪು ಸುಭಟರ
ಕರೆ ಮುರಾರಿಯ ಮಾತು ತಾಗಿತೆನುತ್ತ ಗರ್ಜಿಸಿದ ॥40॥

೦೪೧ ಹೇಳೆವೇ ನಾವ್ ...{Loading}...

ಹೇಳೆವೇ ನಾವ್ ಮುನ್ನ ನೀವ್ ನೀ
ಲಾಳಕಿಯ ಕೆಡಿಸಿದಿರಲಾ ನೀ
ವಾಳ ನೆರಹಿದಡಿನ್ನು ಮಾಡುವುದೇನು ಕಡು ಮುಳಿದು
ಚಾಳಿಸಿದುದಪಕೀರ್ತಿಯಕಟ ವಿ
ಕಾಳಿಸಿತು ಯದುವಂಶವೆನೆ ಕರ
ವಾಳ ಜಡಿದೈದಿದನು ಹಲಧರನರ್ಜುನನ ರಥವ ॥41॥

೦೪೨ ಮುಸುಕಿದನು ನಾರಾಚದಲಿ ...{Loading}...

ಮುಸುಕಿದನು ನಾರಾಚದಲಿ ನಿ
ಪ್ಪಸರದಲಿ ಹಲಧರನ ಸೇನೆಯ
ಕುಸುರಿದರಿದನು ಕೊಂದನಗಣಿತ ಬಲವನಾ ಪಾರ್ಥ
ಎಸೆವನೇ ಸಂನ್ಯಾಸಿ ಮಾಡಿದ
ಹುಸಿಯುಪನ್ಯಾಸಕ್ಕೆ ಕೊಯ್ವೆನು
ರಸನೆಯನು ದೇವಕಿಯ ಮೇಲಾಣೆನುತ ಗರ್ಜಿಸಿದ ॥42॥

೦೪೩ ಬಳಿಕ ಹರಿದನು ...{Loading}...

ಬಳಿಕ ಹರಿದನು ಕೃಷ್ಣನೀತನ
ಕೆಲಕೆ ಕರೆದನು ಬಹಳ ರೋಷವ
ನಿಲಿಸಿರೇ ಸಾಕಿನ್ನು ವಸುದೇವಂಗೆ ದೇವಕಿಗೆ
ಮುಳಿವುದೀತನ ದೋಷವಲ್ಲಿದ
ತಿಳಿದೆವಾವರ್ಜುನನು ಗಡ ನಾ
ವಳುಕಲಿನ್ನೇಕೆನುತ ಬೋಧಿಸಿದನು ಹಲಾಯುಧನ ॥43॥

೦೪೪ ಅಕಟ ದುರ್ಯೋಧನಗೆ ...{Loading}...

ಅಕಟ ದುರ್ಯೋಧನಗೆ ತಪ್ಪಿಸಿ
ಸಕಲ ಯಾದವರಿಲ್ಲಿಗೈದರೆ
ವಿಕಳಮತಿ ನಾನೈಸಲೇ ಕೃಷ್ಣನ ಕುಮಂತ್ರವಿದು
ಅಕುಟಿಲಾಂತಃಕರಣತನ ಬಾ
ಧಕವಲೇ ಗರುವರಿಗೆನುತ ಸ
ಭ್ರುಕುಟಿ ರೌದ್ರಾನನನು ಮುರಿದನು ಪುರಕೆ ಬಲರಾಮ ॥44॥

೦೪೫ ಹರಿಸಹಿತ ಬಲರಾಮನತ್ತಲು ...{Loading}...

ಹರಿಸಹಿತ ಬಲರಾಮನತ್ತಲು
ತಿರುಗಿದನು ಪವಮಾನ ಜವದಲಿ
ಪುರಕೆ ಬಂದನು ಪಾರ್ಥ ಪಯಣದ ಮೇಲೆ ಪಯಣದಲಿ
ಪುರದ ಬಹಿರೋದ್ಯಾನದಲಿ ಸಂ
ವರಿಸಿ ರಥವನು ನಿಲಿಸಿ ನೆಳಲಲಿ
ಪರಿಗತ ಶ್ರಮನಾಗಿ ನಗುತ ಸುಭದ್ರೆಗಿಂತೆಂದ ॥45॥

೦೪೬ ಅರಮನೆಗೆ ನಡೆ ...{Loading}...

ಅರಮನೆಗೆ ನಡೆ ದ್ರುಪದ ನಂದನೆ
ಕರೆಸಿದರೆ ನೀ ಹೋಗು ನಿರುತವ
ನರುಹದಿರು ತುರುಗಾಹಿಗಳ ಮಗಳೆಂದು ನುಡಿ ಸಾಕು
ಅರಸಿ ಮಿಗೆ ಮನ್ನಿಸುವಳಲ್ಲಿರು
ಕರೆಸಿ ಕೊಂಬೆನು ಬಳಿಕಲೆಂದೀ
ಸರಸಿಜಾಕ್ಷಿಯ ಕಳುಹಿದನು ನಿಜ ರಾಜಮಂದಿರಕೆ ॥46॥

೦೪೭ ಬನ್ದಳಬಲೆ ಸಮಸ್ತಪುರಜನ ...{Loading}...

ಬಂದಳಬಲೆ ಸಮಸ್ತಪುರಜನ
ವಿಂದುವದನೆಯ ನೋಡುತಿದ್ದುದು
ಮಂದಿ ಕವಿದುದು ಮನುಜೆಯೇ ಸುರಲೋಕ ವಧುವೆನುತ
ಮಂದಿರಕೆ ಬರೆ ಬಾಗಿಲವದಿರು
ನಿಂದರಲ್ಲಿಯದಲ್ಲಿ ಬಳಿಕರ
ವಿಂದಮುಖಿಯರು ಕಂಡು ದ್ರೌಪದಿಗರುಹಿದರು ಹದನ ॥47॥

೦೪೮ ಕರೆಸಿ ಕಾಣಿಸಿಕೊಣ್ಡು ...{Loading}...

ಕರೆಸಿ ಕಾಣಿಸಿಕೊಂಡು ಪಾಂಡವ
ರರಸಿ ಬೆಸಗೊಳಲೀಕೆ ಪಾರ್ಥನ
ಪರುಠವದ ಮಾತುಗಳನೆಂದಳು ನಗೆಯ ಮೊಳೆ ಮಿನುಗೆ
ಸುರ ಭುಜಂಗಮ ವಧುವೊ ನೀ ಮೇ
ಣರಸು ಮಗಳೋ ತಂಗಿ ನೀ ಗೊ
ಲ್ಲರ ಮಗಳೆ ಪುಸಿಯೆನುತ ತಲೆದೂಗಿದಳು ಪಾಂಚಾಲಿ ॥48॥

೦೪೯ ಮಸಗಿದವು ನಿಸ್ಸಾಳ ...{Loading}...

ಮಸಗಿದವು ನಿಸ್ಸಾಳ ತತಿ ಗ
ರ್ಜಿಸಿದವರ್ಜುನ ಬಂದನಿದೆಯೆಂ
ದೊಸಗೆವಾತಿನೊಳೂರ ಸುಳಿದರು ದೂತರಲ್ಲಲ್ಲಿ
ಶಶಿಮುಖಿಯರುಪ್ಪಾರತಿಯ ಮಿಗಿ
ಲೆಸೆವ ರತುನಾವಳಿಯ ಕಾಂತಾ
ವಿಸರ ನೂಕಿತು ಪಾರ್ಥ ಹೊಕ್ಕನು ರಾಜಮಂದಿರವ ॥49॥

೦೫೦ ಅರಸ ಭೀಮರಿಗೆರಗಿ ...{Loading}...

ಅರಸ ಭೀಮರಿಗೆರಗಿ ನಕುಲಾ
ದ್ಯರನು ಕಾಣಿಸಿಕೊಂಡು ದೇಶಾಂ
ತರದ ತೀರ್ಥೋನ್ನತಿಯನಾ ವೃತ್ತಾಂತ ಸಂಗತಿಯ
ಮುರಹರನ ಸೌಹೃದವನಾತನ
ಕರುಣ ಕನ್ಯಾಲಾಭವನು ವಿ
ಸ್ತರಿಸಿ ಹರುಷಾಂಬುಧಿಯೊಳದ್ದಿದನಗ್ರಜಾನುಜರ ॥50॥

೦೫೧ ಅರಸ ಕೇಳೈ ...{Loading}...

ಅರಸ ಕೇಳೈ ದ್ರೌಪದಿಯ ಮನ
ಬರಿಸಿ ಬೇರರಮನೆಯೊಳೀಕೆಯ
ನಿರಿಸಿದನು ಹರುಷದಲಿ ಕಳೆದರು ಕಾಲ ವಿಭ್ರಮವ
ಇರಲಿರಲು ಪಾರ್ಥಗೆ ಸುಭದ್ರೆಗೆ
ವರಕುಮಾರಕನುದಿಸಿದನು ವಿ
ಸ್ತರಣವಾಯ್ತಭಿಮನ್ಯುವಿನ ಜನನೋತ್ಸವಾಭ್ಯುದಯ ॥51॥

+೧೯ ...{Loading}...